Viral Video : ಮೊಸಳೆಯನ್ನೇ ಅಪ್ಪಿಕೊಳ್ಳಲು ಹೋದ ಅಜ್ಜ, ಮುಂದೇನಾಯ್ತು ನೋಡಿ Vistara News
Connect with us

ವೈರಲ್ ನ್ಯೂಸ್

Viral Video : ಮೊಸಳೆಯನ್ನೇ ಅಪ್ಪಿಕೊಳ್ಳಲು ಹೋದ ಅಜ್ಜ, ಮುಂದೇನಾಯ್ತು ನೋಡಿ

Viral Video: ಮೊಸಳೆಯೊಂದರ ಜತೆ ಆಟವಾಡಲು ಅಜ್ಜನೊಬ್ಬ ಹೋಗುತ್ತಾನೆ. ಅಪಾಯಕಾರಿ ಪ್ರಾಣಿ ಜತೆ ಸರಸವಾಡಲು ಹೋದ ಅಜ್ಜನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಖತ್ ವೈರಲ್‌ ಆಗಿದೆ.

VISTARANEWS.COM


on

Koo

ಬೆಂಗಳೂರು: ಮೊಸಳೆ ನಿಜಕ್ಕೂ ಅಪಾಯಕಾರಿ ಪ್ರಾಣಿ. ಅದು ಕಚ್ಚಿದರೆ ಅದರ ಬಾಯಿಯಿಂದ ಬಿಡಿಸಿಕೊಳ್ಳುವುದು ತುಂಬಾನೇ ಕಷ್ಟ. ಹಾಗಾಗಿಯೇ ಮೊಸಳೆಯೊಂದಿಗೆ ಆಟವಾಡಲು ಹೋಗಬೇಡಿ ಎಂದು ಎಚ್ಚರಿಕೆ ನೀಡಲಾಗುತ್ತಿರುತ್ತದೆ. ಆದರೆ ಇಲ್ಲಿ ಅಜ್ಜನೊಬ್ಬ ಮೊಸಳೆಯೊಂದಿಗೇ ಸರಸ ಆಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ. ಮೊಸಳೆಯನ್ನು ತಬ್ಬಿಕೊಳ್ಳಲು ಹೋದ ಅಜ್ಜನ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Viral Video: ಲೋಹದ ಬೇಲಿಯನ್ನೇ ಮುರಿದು, ನುಗ್ಗಿತು ಬೃಹತ್ ಮೊಸಳೆ; ಇಷ್ಟೊಂದು ಶಕ್ತಿಶಾಲಿಯಾ ಈ ಸರೀಸೃಪ?!
ಮೊಸಳೆಯೊಂದು ನೀರಿನಲ್ಲಿ ಸುಮ್ಮನೆ ಮಲಗಿರುತ್ತದೆ. ಅಲ್ಲಿಗೆ ಬರುವ ಅಜ್ಜ ಹಾಗೂ ಆತನ ಸ್ನೇಹಿತರು ಆ ಮೊಸಳೆಗೆ ಏನಾದರೂ ಮಾಡಬೇಕೆಂದು ನಿರ್ಧರಿಸುತ್ತಾರೆ. ಒಂದು ಬಿಳಿ ಬಟ್ಟೆ ತೆಗೆದುಕೊಂಡು ಅದನ್ನು ದೂರದಿಂದಲೇ ಮೊಸಳೆಯ ಮುಖದ ಮೇಲೆ ಹಾಕುತ್ತಾರೆ. ಮೊಸಳೆಯ ಕಣ್ಣುಗಳೂ ಕೂಡ ಬಟ್ಟೆಯಲ್ಲಿ ಮುಚ್ಚಿಕೊಳ್ಳುತ್ತದೆ. ಆಗ ನಿಧಾನವಾಗಿ ಮೊಸಳೆಯ ಹಿಂದೆ ಬರುವ ಅಜ್ಜ, ಅದನ್ನು ಹಿಂದಿನಿಂದ ತಬ್ಬಿಕೊಳ್ಳಲು ಯತ್ನಿಸುತ್ತಾನೆ. ತಕ್ಷಣಕ್ಕೆ ಎಚ್ಚೆತ್ತುಕೊಳ್ಳುವ ಮೊಸಳೆ ಹಿಂದೆ ತಿರುಗಿ ಅಜ್ಜನ ಕೈಯನ್ನು ಕಚ್ಚಿಬಿಡುತ್ತದೆ. ಅಲ್ಲೇ ಕೆಳಗೆ ಬೀಳುವ ಅಜ್ಜ ಕಾಲಿನಿಂದ ಜೋರಾಗಿ ಮೊಸಳೆಗೆ ಒದೆಯುತ್ತಾನೆ. ಆ ಹೊಡೆತದಿಂದಾಗಿ ಮೊಸಳೆ ಅಜ್ಜನ ಕೈಯನ್ನು ಬಿಟ್ಟು ಸುಮ್ಮನಾಗುತ್ತದೆ. ಆಗ ಅಜ್ಜ ಅಲ್ಲಿಂದ ಕಾಲ್ಕೀಳುತ್ತಾನೆ.


ಇಂಥದ್ದೊಂದು ವಿಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಮಾರ್ಚ್‌ 15ರಂದು ಪೋಸ್ಟ್‌ ಮಾಡಲಾದ ಈ 36 ಸೆಕೆಂಡುಗಳ ವಿಡಿಯೊವನ್ನು ಈಗಾಗಲೇ 5 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಜ್ಜನ ದುಸ್ಸಾಹಸದ ಬಗ್ಗೆ ನೆಟ್ಟಿಗರು ಹಲವು ರೀತಿಯಲ್ಲಿ ಚರ್ಚೆ ನಡೆಸಲಾರಂಭಿಸಿದ್ದಾರೆ. “ಅಜ್ಜ ಮೊಸಳೆಗೆ ಜಾಕೆಟ್‌ ಹಾಕೋದಕ್ಕೆ ಹೋದರು, ಆದರೆ ಪಾಪ ಆ ಮೊಸಳೆಗೆ ಜಾಕೆಟ್‌ ಇಷ್ಟವಿರಲಿಲ್ಲ”, “ಮೊಸಳೆ ಮುಖದ ಮೇಲೆ ಬಟ್ಟೆ ಇದ್ದಿದ್ದಕ್ಕೆ ಅಜ್ಜ ಬಚಾವ್‌. ಇಲ್ಲದಿದ್ದರೆ ಅಜ್ಜನ ಕಥೆ ಕಷ್ಟವಿತ್ತು” ಎನ್ನುವ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.

ದೇಶ

Shama Sikander: ಪಡ್ಡೆ ಹುಡುಗರ ನಿದ್ದೆ ಕದ್ದ ಶಮಾ, ಬಿಕಿನಿ ಹಾಟ್ ಫೋಟೊ ಫುಲ್ ಹವಾ

Shama Sikander: ನಟಿ ಶಮಾ ಸಿಕಂದರ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಅದರಲ್ಲೂ ಇನ್‌ಸ್ಟಾದಲ್ಲಿ ಅವರು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ ಫಾಲೋವಿಂಗ್ ಹೊಂದಿದ್ದಾರೆ. ಬಿಕಿನಿಯಲ್ಲಿರುವ ಎರಡು ಫೋಟೋಗಳು ಈಗ ಸಖತ್ ವೈರಲ್ ಆಗಿವೆ.

VISTARANEWS.COM


on

Edited by

Shama Sikander hot bikini photo heats up cyberspace
Koo

ನವದೆಹಲಿ: ನಟಿ ಶಮಾ ಸಿಕಂದರ್ (Shama Sikander) ಇಂಟರ್ನೆಟ್ ಹಾಟ್ ಫೇವರಿಟ್. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್ ಹೊಂದಿರುವ ಶಮಾ, ಅವರ ಒಂದೊಂದು ಫೋಟೋ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿವೆ. ಈಗ ಸದ್ಯ ತನ್ನ ಸ್ನೇಹಿತರೊಂದಿಗೆ ಬೇಸಿಗೆ ರಜೆಯನ್ನು ಬೀಚ್‌ನಲ್ಲಿ ಕಳೆಯುತ್ತಿದ್ದು, ಬಿಕಿನಿ ಉಡುಪಿನಲ್ಲಿರುವ ಫೋಟೋ‌ಗಳನ್ನು ಇನ್‌ಸ್ಟಾದಲ್ಲಿ ಅಪ್‌ಲೋಡ್ ಮಾಡಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿವೆ(Viral Photo).

ಸೋಷಿಯಲ್ ಮೀಡಿಯಾಗಳಲ್ಲಿ ಶಮಾ ಅವರು ಬಿಕಿನಿ ಲುಕ್ ಪ್ರದರ್ಶಿಸುವ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶಮಾ ಅವರು ಕಿತ್ತಳೆ ಬಣ್ಣದ ಬಿಕಿನಿಯಲ್ಲಿ, ಬೀಚಿನ ಮರಳಿನಲ್ಲಿ ಪೋಸ್ ನೀಡುತ್ತಿರುವ ಫೋಟೋ ಅದ್ಭುತವಾಗಿದೆ.

ಇನ್‌ಸ್ಟಾದಲ್ಲಿ ಈ ಬಿಕಿನಿ ಫೋಟೋಗಳು ಅಪ್‌ಲೋಡ್ ಆಗುತ್ತಿದ್ದಂತೆ ಸಾವಿರಾರು ಜನರು ಲೈಕ್ಸ್ ಮಾಡಿದ್ದು, ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಹೃತ್ಪೂರ್ವಕ ಕಾಮೆಂಟ್‌ಗಳು ಮತ್ತು ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ಫುಲ್ ಮಾಡಿದ್ದಾರೆ. ಈ ಪೈಕಿ ಒಬ್ಬರು Beautyyyyy ಎಂದು ಬರೆದಿದ್ದಾರೆ. ನೀವು ತುಂಬಾ ಸುಂದರವಾಗಿ ಕಾಣುತ್ತೀರಿ ಎಂದು ಮತ್ತೊಬ್ಬ ಬಳೆಕದಾರರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಅಭಿಮಾನಿ ಅದ್ಭುತ ಎಂದು ಕಮೆಂಟ್ ಮಾಡಿದ್ದಾನೆ. ಮತ್ತೊಬ್ಬರು, ಬೀಚ್‌ನಲ್ಲಿ ತುಂಬಾ ಚೆನ್ನಾಗಿ ಕಾಣುತ್ತೀದ್ದಿರಿ ಎಂದು ಬರೆದುಕೊಂಡಿದ್ದಾನೆ.

ಇದನ್ನೂ ಓದಿ: Shama Sikander | ಶಮಾ ಸಿಕಂದರ್‌ಳ ಗ್ಲಾಮರ್ ಲೋಕ!

ನಟಿ ಶಮಾ ಸಿಕಂದರ್ ಈ ರೀತಿಯ ಹಾಟ್‌ ಫೋಟೋ ಪೋಸ್ಟ್ ಮಾಡುತ್ತಿರುವುದು ಇದೇ ಮೊದಲ್ಲ. ಈ ಹಿಂದೆಯೂ ಅನೇಕ ಬಾರಿ, ಈ ರೀತಿಯ ಫೋಟೋಗಳನ್ನು ಹಾಕಿ ಇಂಟರ್ನೆಟ್‌ಗೆ ಕಿಚ್ಚು ಹತ್ತಿಸಿದ್ದಾರೆ. ಶಮಾ ಕೊನೆಯದಾಗಿ 2019ರ ಬೈಪಾಸ್ ರೋಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದು ನಾಮ ನಿತಿನ್ ಮುಖೇಶ್ ನಿರ್ದೇಶನದ ಥ್ರಿಲ್ಲರ್-ಡ್ರಾಮಾ ಚಿತ್ರವಾಗಿದೆ. ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್ ಮತ್ತು ಅದಾ ಶರ್ಮಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಕ್ ತಿಜೋರಿ ಅವರ ಟಿಪ್ಪಪ್ಸಿಯಲ್ಲಿ ರಾಯ್ ಲಕ್ಷ್ಮಿ, ಇಶಾ ಗುಪ್ತಾ, ಡೈಸಿ ಶಾ ಮತ್ತು ಕೈನಾತ್ ಅರೋರಾ ಅವರೊಂದಿಗೆ ಶಮಾ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Continue Reading

ದೇಶ

Nowruz 2023: ಪರ್ಷಿಯನ್ ಹೊಸ ವರ್ಷವನ್ನು ವಿಶಿಷ್ಟ ಡೂಡಲ್ ಮೂಲಕ ಸಂಭ್ರಮಿಸಿದ ಗೂಗಲ್

Nowruz 2023: ಮಾರ್ಚ್ 21ರಂದು ನೌರುಜ್ ದಿನವನ್ನಾಗಿ ಆಚರಿಸಲಾಗುತ್ತದೆ. ನೌರುಜ್ ಎಂದರೆ ಇರಾನಿಯನ್ ಅಥವಾ ಪರ್ಷಿಯನ್ ಹೊಸ ವರ್ಷ ಎಂದರ್ಥ. ವಿಶ್ವಾದ್ಯಂತ ಕೋಟ್ಯಂತರ ಜನರು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ(Persian New Year).

VISTARANEWS.COM


on

Edited by

Nowruz 2023 Google celebrates Persian New Year with a doodle
Koo

ನವದೆಹಲಿ: ಮಾರ್ಚ್ 21, ಮಂಗಳವಾರ ಇರಾನಿಯನ್ ಅಥವಾ ಪರ್ಷಿಯನ್ ಹೊಸ ವರ್ಷ(Persian New Year) ಎಂದು ಆಚರಿಸಲಾಗುತ್ತದೆ. ಇದನ್ನು ನೌರುಜ್(Nowruz 2023) ಎಂದೂ ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗೂಗಲ್(Google), ವಿಶಿಷ್ಟ ಡೂಡಲ್(Doodle) ಮೂಲಕ ಪರ್ಷಿಯನ್ ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಂಡಿದೆ. ನೌರುಜ್ ಪರಿಕಲ್ಪನೆಯನ್ನು ಪ್ರತಿನಿಧಿಸುವ ಡೂಡಲ್ ಟುಲಿಪ್ಸ್, ಹೈಸಿಂತ್ಸ್, ಡ್ಯಾಫಡಿಲ್‌ಗಳು ಮತ್ತು ಬೀ ಆರ್ಕಿಡ್‌ಗಳಂಥ ವಸಂತ ಋತು ಕಾಲದ ಹೂವುಗಳನ್ನು ಒಳಗೊಂಡಿದೆ(Viral News).

ಪರ್ಷಿಯನ್ ಹೊಸ ವರ್ಷವನ್ನು ದಿನಗಳು ದೀರ್ಘವಾಗಲು ಪ್ರಾರಂಭವಾಗುವ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ವಿದ್ಯಮಾನವನ್ನು ವಸಂತ ವಿಷುವತ್ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಭೌಗೋಳಿಕವಾಗಿ, ಹಬ್ಬವು ಉತ್ತರ ಗೋಳಾರ್ಧದಲ್ಲಿ ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಮಾರ್ಚ್ 21ರ ಸುಮಾರಿಗೆ ಸಂಭವಿಸುತ್ತದೆ.

ಚಳಿಗಾಲವು ಅಳಿಯುತ್ತಿದ್ದಂತೆ, ಉತ್ತರ ಗೋಳಾರ್ಧವು ಕರಗಲು ಪ್ರಾರಂಭಿಸಿದಾಗ, ನೌರುಜ್ ಆಚರಿಸುವ ಸಮಯ ಸನ್ನಿಹಿತವಾಗುತ್ತದೆ. ಇಂದಿನ ಡೂಡಲ್ ವಸಂತಕಾಲದ ಆರಂಭವನ್ನು ಗುರುತಿಸುವ ಈ ಪುರಾತನ ರಜಾದಿನದ ಮಹತ್ವವನ್ನು ಸಾರುತ್ತದೆ. ಪುನರ್ಜನ್ಮದ ಋತುವನ್ನು ಆಚರಿಸಲು ಪ್ರತಿ ವರ್ಷ ಈ ದಿನದಂದು ಪ್ರಪಂಚದಾದ್ಯಂತ 300 ದಶಲಕ್ಷಕ್ಕೂ ಹೆಚ್ಚು ಜನರು ಸಂಭ್ರಮಿಸುತ್ತಾರೆಂದು ಗೂಗಲ್ ಬರೆದುಕೊಂಡಿದೆ. ಇದೇ ವೇಳೆ, ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ರಜಾದಿನಗಳ ಪಟ್ಟಿಯಲ್ಲಿ ನೌರುಜ್ ಕೂಡ ಸೇರ್ಪಡೆಯಾಗಿದೆ ಎಂಬ ಮಾಹಿತಿಯನ್ನು ಗೂಗಲ್ ಒದಗಿಸಿದೆ.

ಇದನ್ನೂ ಓದಿ: Ugadi 2023 : ಜಗದ ಆದಿ ಈ ಯುಗಾದಿ!

ಭಾರತದ ಪಾರ್ಸಿ ಸಮುದಾಯದಲ್ಲಿಯೂ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಸಂತೋಷದಾಯಕ ಮತ್ತು ಪವಿತ್ರ ಸಂದರ್ಭವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಜನರು ಸಾಮಾನ್ಯ ಸಂಪ್ರದಾಯಗಳ ರೀತಿಯಲ್ಲಿ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಸ್ನೇಹಿತರು ಮತ್ತು ನೆರೆಹೊರೆಯವರನ್ನು ಭೇಟಿ ಮಾಡುತ್ತಾರೆ. ವಿಶೇಷ ಸಿಹಿತಿಂಡಿಗಳು, ಮೂಲಿಕೆ ಅಕ್ಕಿ ಮತ್ತು ಹುರಿದ ಮೀನುಗಳಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸಿ, ಸೇವಿಸುತ್ತಾರೆ

Continue Reading

ದೇಶ

Serial kisser: ಪೊಲೀಸ್​ ಬಲೆಗೆ ಬಿದ್ದ ಸರಣಿ ಕಿಸ್ಸರ್ ಮೊಹಮ್ಮದ್ ಅಕ್ರಮ್​​; ಮಹಿಳೆಗೆ ಲಿಪ್​ಲಾಕ್​ ಮಾಡಿದವ ಈಗ ಜೈಲಲ್ಲಿ ಲಾಕ್​!

ಮಾರ್ಚ್​ 13ರಂದು ಮಹಿಳೆಗೆ ಈತ ಸಾರ್ವಜನಿಕ ಪ್ರದೇಶದಲ್ಲಿ ಮುತ್ತಿಟ್ಟಿದ್ದ ವಿಡಿಯೊ ವೈರಲ್ ಆಗಿತ್ತು. ಆ ಮಹಿಳೆ ಬಿಹಾರದ ಸಾದರ್​ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿದ್ದವರು, ಅಲ್ಲೇ ಆಸ್ಪತ್ರೆ ಆವರಣದಲ್ಲಿ ನಿಂತು ಫೋನ್​​ನಲ್ಲಿ ಮಾತನಾಡುತ್ತಿದ್ದರು. ಹಿಂಬದಿಯಿಂದ ಬಂದ ಈತ ಏಕಾಏಕಿ ಆಕೆಯನ್ನು ತಬ್ಬಿಕೊಂಡು ಬಲವಂತದಿಂದ ಅವರ ಬಾಯಿಗೆ ಮುತ್ತುಕೊಟ್ಟಿದ್ದ.

VISTARANEWS.COM


on

Edited by

Serial kisser Mohammed Akram Arrested By Police In Bihar
Koo

ಪಾಟ್ನಾ: ಇತ್ತೀಚೆಗೆ ಬಿಹಾರದ ಸಾದರ್ ಆಸ್ಪತ್ರೆ ಆವರಣದಲ್ಲಿ ಫೋನ್​​ನಲ್ಲಿ ಮಾತನಾಡುತ್ತ ನಿಂತಿದ್ದ ಮಹಿಳೆಗೆ, ಯುವಕನೊಬ್ಬ ಬಲವಂತದಿಂದ ಚುಂಬಿಸಿ, ಓಡಿಹೋಗಿದ್ದ ಘಟನೆ ನಡೆದಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಿಳೆ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅವನ ಹೆಸರು ಮೊಹಮ್ಮದ್​ ಅಕ್ರಮ್​ ಎಂದು ಗೊತ್ತಾಗಿದೆ. ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಕಳ್ಳತನ ಮಾಡುವ ಗ್ಯಾಂಗ್​​ನ ಮುಖ್ಯಸ್ಥ ಈತ ಎಂದು ಪೊಲೀಸರು ಹೇಳಿದ್ದಾರೆ. ಮೊಹಮ್ಮದ್​ ಅಕ್ರಮ್​​ನೊಂದಿಗೆ, ಅವನ ಗ್ಯಾಂಗ್​​ನ ಇನ್ನೂ ನಾಲ್ವರನ್ನು ಬಂಧಿಸಿದ್ದಾರೆ.

ಅಕ್ರಮ್​ ಮತ್ತು ಅವನ ಗ್ಯಾಂಗ್​ ಹಲವು ತಿಂಗಳುಗಳಿಂದಲೂ ಬಿಹಾರದ ಜಮುಯಿ ಜಿಲ್ಲೆ ಮತ್ತು ಇತರ ಹಲವು ಪ್ರದೇಶಗಳಲ್ಲಿ ಸಕ್ರಿಯವಾಗಿದೆ. ಈಗಾಗಲೇ ಅನೇಕ ಮಹಿಳೆಯರಿಗೆ ಈತ ಹೀಗೆ ಮುತ್ತಿಟ್ಟಿದ್ದಾನೆ. ಅಷ್ಟೇ ಅಲ್ಲ, ಸರಗಳ್ಳತನವನ್ನೂ ಇವರು ಮಾಡುತ್ತಿದ್ದರು. ರಸ್ತೆಯಲ್ಲಿ ಒಂಟಿಯಾಗಿ ಹೋಗುವ ಹೆಣ್ಮಕ್ಕಳು/ಮಹಿಳೆಯರನ್ನೇ ಈತ ಟಾರ್ಗೆಟ್​ ಮಾಡುತ್ತಿದ್ದ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾರ್ಚ್​ 13ರಂದು ಮಹಿಳೆಗೆ ಈತ ಸಾರ್ವಜನಿಕ ಪ್ರದೇಶದಲ್ಲಿ ಮುತ್ತಿಟ್ಟಿದ್ದ ವಿಡಿಯೊ ವೈರಲ್ ಆಗಿತ್ತು. ಆ ಮಹಿಳೆ ಬಿಹಾರದ ಸಾದರ್​ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿದ್ದವರು, ಅಲ್ಲೇ ಆಸ್ಪತ್ರೆ ಆವರಣದಲ್ಲಿ ನಿಂತು ಫೋನ್​​ನಲ್ಲಿ ಮಾತನಾಡುತ್ತಿದ್ದರು. ಹಿಂಬದಿಯಿಂದ ಬಂದ ಈತ ಏಕಾಏಕಿ ಆಕೆಯನ್ನು ತಬ್ಬಿಕೊಂಡು ಬಲವಂತದಿಂದ ಅವರ ಬಾಯಿಗೆ ಮುತ್ತುಕೊಟ್ಟಿದ್ದ. ಮಹಿಳೆ 2015ರಿಂದಲೂ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಈ ವ್ಯಕ್ತಿ ಯಾರೆಂದು ತನಗೆ ಗೊತ್ತಿಲ್ಲ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಕೆಲವು ಪ್ರಮುಖ ಮಾಧ್ಯಮಗಳಲ್ಲಿ ಕೂಡ ಸುದ್ದಿ ವರದಿಯಾಗಿತ್ತು. ಮೊಹಮ್ಮದ್​ ಅಕ್ರಮ್​ ಮಾರ್ಚ್​ 10ಕ್ಕೂ ಪೂರ್ವ ಹಲವು ಮಹಿಳೆಯರಿಗೆ ಹೀಗೆ ಕಿಸ್​ ಕೊಟ್ಟಿದ್ದಾನೆ ಎಂದೂ ಹೇಳಲಾಗಿತ್ತು. ಆರೋಗ್ಯ ಕಾರ್ಯಕರ್ತೆಯ ದೂರು ಮತ್ತು ಮಾಧ್ಯಮಗಳ ವರದಿ ಆಧರಿಸಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು.

ಇದನ್ನೂ ಓದಿ: Viral Video: ಆಸ್ಪತ್ರೆ ಆವರಣದಲ್ಲಿ ಮಾತಾಡ್ತಾ ನಿಂತಿದ್ದ ಮಹಿಳೆಗೆ ಬಲವಂತದಿಂದ ಲಿಪ್​ಲಾಕ್​ ಮಾಡಿ ಓಡಿದ ಯುವಕ; ಈತ ಸರಣಿ ಕಿಸ್ಸರ್​​!

ಘಟನೆ ಬೆನ್ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ್ದ ಆರೋಗ್ಯ ಕಾರ್ಯಕರ್ತೆ, ’ಆತ ನನಗೆ ಅಪರಿಚಿತ. ಒಮ್ಮೆಲೇ ಹಿಂದಿನಿಂದ ಬಂದು ನನ್ನನ್ನು ಅಪ್ಪಿದ ಮತ್ತು ಬಾಯಿಗೆ ಮುತ್ತುಕೊಟ್ಟ. ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ, ಆದರೆ ಆಗಲಿಲ್ಲ. ಮುತ್ತು ಕೊಟ್ಟು ಅವನು ಓಡಿಯೇ ಹೋದ. ಅವನ್ಯಾಕೆ ಬಂದ? ಯಾಕೆ ಚುಂಬಿಸಿದ? ನನಗೇನೂ ಗೊತ್ತಿಲ್ಲ’ ಎಂದಿದ್ದಾರೆ. ಅಷ್ಟೇ ಅಲ್ಲ, ‘ನಾನು ಜೋರಾಗಿ ಕೂಗಿಕೊಂಡೆ. ಸಹಾಯಕ್ಕಾಗಿ ಆಸ್ಪತ್ರೆ ಸಿಬ್ಬಂದಿಯನ್ನು ಕರೆದೆ. ಆದರೆ ಕಾಂಪೌಂಡ್​ ಸಣ್ಣ ಇರುವುದರಿಂದ ಅವನಿಗೆ ತಪ್ಪಿಸಿಕೊಳ್ಳಲು ಸುಲಭವಾಯಿತು’ ಎಂದೂ ತಿಳಿಸಿದ್ದಾರೆ.

ವೈರಲ್ ಆಗಿದ್ದ ವಿಡಿಯೊ:

Continue Reading

ಆಟೋಮೊಬೈಲ್

Oscar 2023 : ನಾಟು ನಾಟು ಹಾಡಿಗೆ ಡಾನ್ಸ್​ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ

ಮ್ಯೂಸಿಕ್​ಗೆ ತಕ್ಕ ಹಾಗೆ ಕಾರಿನ ಎಲ್ಲ ಲೈಟ್​ಗಳನ್ನು ಫ್ಲ್ಯಾಶ್​ ಮಾಡುವ ಪ್ರೋಗ್ರಾಮ್​ ಮೂಲಕ ಟೆಸ್ಲಾ ಕಾರುಗಳ ಲೈಟ್ ಶೋ ನೀಡಿದೆ.

VISTARANEWS.COM


on

Tesla car gave a light show to the song
Koo

ನ್ಯೂಜೆರ್ಸಿ: ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾದ ಹಾಡು ನಾಟು ನಾಟು ಹಾಡು, 2023ನೇ ಅವೃತ್ತಿಯ ಆಸ್ಕರ್​ನ (Oscar 2023) ಬೆಸ್ಟ್​ ಒರಿಜಿನಲ್​ ಸಾಂಗ್ ವಿಭಾಗದ ಪ್ರಶಸ್ತಿ ಗೆದ್ದಿದೆ. ಇದರೊಂದಿಗೆ ಆರ್​ಆರ್​ಆರ್​ ಸಿನಿಮಾದ ಹಾಗೂ ನಾಟುನಾಟು ಹಾಡಿನ ಖ್ಯಾತಿ ಜಗದಗಲಕ್ಕೆ ಹರಡಿದೆ. ಆ ಹಾಡಿನ ಎನರ್ಜಿ ಹಾಗೂ ಟೆಂಪೊಗೆ ಮೆಚ್ಚಿದ ಮಂದಿ ಮ್ಯೂಸಿಕ್​ ಕೇಳಿದ ತಕ್ಷಣ ಹೆಜ್ಜೆ ಹಾಕುತ್ತಿದ್ದಾರೆ. ಅಭಿಮಾನಿಗಳು ಹೆಜ್ಜೆ ಹಾಕೊದೇನೋ ಸರಿ. ಈ ಹಾಡು ಕೇಳಿದ ತಕ್ಷಣ ಕಾರುಗಳು ಡಾನ್ಸ್ ಮಾಡಲು ಶುರು ಮಾಡಿದರೆ ಹೇಗಿರಬಹುದು. ಕಣ್ಣಿಗೆ ಹಬ್ಬ ಗ್ಯಾರಂಟಿ. ಈ ರೀತಿಯಾಗಿ ನಾಟು ನಾಟು ಹಾಡಿಗೆ ಡಾನ್ಸ್​ ಮಾಡಿದ್ದು ಸ್ವಯಂ ಚಾಲನೆ (ಸೆಲ್ಫ್​ ಡ್ರೈವ್​) ಮಾಡುವ ಸಾಮರ್ಥ್ಯ ಹೊಂದಿರುವ ಟೆಸ್ಲಾ ಕಾರು.

ಆರ್​ಆರ್​ಆರ್​ ಮೂವಿ ತಂಡ ವಿಡಿಯೊವನ್ನು ಶೇರ್​ ಮಾಡಿದೆ

ಹೌದು, ಅಮೆರಿಕದ ನ್ಯೂಜೆರ್ಸಿಯಲ್ಲಿ ಹಲವು ಕಾರುಗಳು ಒಟ್ಟಿಗೆ ನಾಡು ನಾಟು ಹಾಡಿಗೆ ಗೌರವ ಸಲ್ಲಿಸಿದೆ. ಆದರೆ, ಕಾರುಗಳು ಎದ್ದು ನಿಂತು ಡಾನ್ಸ್ ಮಾಡಿಲ್ಲ. ಬದಲಾಗಿ ಲೈಟುಗಳನ್ನು ಮಿಟುಕಿಸುವ ಮೂಲಕ ಹಾಡನ್ನು ಸಿಂಕ್ ಮಾಡಿದೆ. ಹಲವಾರು ಕಾರುಗಳು ಏಕಕಾಲಕ್ಕೆ ಹಾಡಿನ ಅಬ್ಬರಕ್ಕೆ ತಕ್ಕಂತೆ ಲೈಟ್​ ಬೆಳಗಿಸುವುದು ಆಕರ್ಷಕವಾಗಿ ಕಂಡಿದೆ.

ಇದನ್ನೂ ಓದಿ : Naatu Naatu: ನಾಟು ನಾಟು ಹಾಡಿಗೆ ದೆಹಲಿಯಲ್ಲಿ ಜರ್ಮನಿ ರಾಯಭಾರ ಕಚೇರಿ ಸಿಬ್ಬಂದಿ ಡಾನ್ಸ್, ಮೋದಿ ಶ್ಲಾಘನೆ

ಆರ್​ಆರ್​ಆರ್​ ಮೂವಿ ತಂಡ ವಿಡಿಯೊವನ್ನು ಶೇರ್​ ಮಾಡಿಕೊಂಡಿದ್ದು, ನಿಮ್ಮೆಲ್ಲರ ಪ್ರೀತಿಗೆ ಆಭಾರಿ ಎಂದು ಹೇಳಿದೆ. ಅಂದ ಹಾಗೆ ವಿಡಿಯೊಕ್ಕೆ ಸಿಕ್ಕಾಪಟ್ಟೆ ಲೈಕ್ಸ್​ಗಳು ಬಂದಿವೆ. ಕೆಲವರು ಇದಕ್ಕೆ ರೋಮಾಂಚನ ಎಂದು ಕಾಮೆಂಟ್​ ಬರೆದಿದ್ದಾರೆ.

ಟೆಸ್ಲಾ ಟಾಯ್​ಬಾಕ್ಸ್​ ಫೀಚರ್​ (Tesla Toybox)

ಟೆಸ್ಲಾ ಕಾರಿನಲ್ಲಿ ಟಾಯ್​ ಬಾಕ್ಸ್​ (Tesla Toybox) ಎಂಬ ಫೀಚರ್ ಇದೆ. ಇದರ ಮೂಲಕ ಲೈಟ್​ ಶೋ ಮೂಲಕ ಚಾಲಕರಿಗೆ ವಿಭಿನ್ನ ಅನುಭವ ಪಡೆಯುವ ಅವಕಾಶ ನೀಡಲಾಗಿದೆ. ಈ ಫೀಚರ್ ಆಕ್ಟಿವೇಟ್​ ಮಾಡಿದರೆ ಕಾರಿನ ಹೆಡ್​ಲೈಟ್​, ಟೈಲ್ ಲೈಟ್​, ಇಂಡಿಕೇಟರ್​ಗಳು ಹಾಗೂ ಇಂಟೀರಿಯರ್ ಲೈಟ್​ಗಳು ಮ್ಯೂಸಿಕ್​​ಗೆ ತಕ್ಕ ಹಾಗೆ ಫ್ಲ್ಯಾಶ್​ ಆಗುತ್ತವೆ. ಜತೆಗೆ ಬಣ್ಣವನ್ನೂ ಬದಲಿಸುತ್ತವೆ.

ಅದೇ ರೀತಿ ಟೆಸ್ಲಾದ ಸೌಂಡ್ ಸಿಸ್ಟಮ್​ ಪ್ರೋಗ್ರಾಮ್​ನ ಮೂಲಕವೂ ಸಂಪೂರ್ಣ ಆಡಿಯೊ ವಿಷುವಲ್​ ಅನುಭವ ಪಡೆಯಲು ಸಾಧ್ಯವಿದೆ. ಮಾಡೆಲ್​ ಎಕ್ಸ್​, ಮಾಡೆಲ್​ ಎಸ್​ ಹಾಗೂ ಮಾಡೆಲ್​ 3ಯಲ್ಲಿ ಈ ಫಿಚರ್​ ಇದೆ.

Continue Reading
Advertisement
Azam peer Khadri
ಕರ್ನಾಟಕ2 mins ago

Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!

ಕಿರುತೆರೆ5 mins ago

Kannada Serial: 900 ಸಂಚಿಕೆ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ; ಸಂಭ್ರಮದಲ್ಲಿ ತಂಡ

ಕರ್ನಾಟಕ7 mins ago

Murder Case: ಅವಳದ್ದು ಮೋಹ, ಇವನಿಗೆ ಮಧುಮೇಹ; ಕೊಲೆಯಲ್ಲಿ ಅಂತ್ಯವಾಯ್ತು ಕಾಳಜಿ ಕಲಹ

Tejasvi Surya says Rahul Gandhi is dependent on pocket money given by mother
ಕರ್ನಾಟಕ12 mins ago

BJP Yuva Morcha: ಅಮ್ಮ ನೀಡುವ ಪಾಕೆಟ್ ಮನಿ ಮೇಲೆಯೇ ರಾಹುಲ್ ಗಾಂಧಿ ಜೀವನ: ತೇಜಸ್ವಿ ಸೂರ್ಯ

WPL 2023: RCB ends campaign with defeat
ಕ್ರಿಕೆಟ್13 mins ago

WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್​ಸಿಬಿ

Bike Rally yallapur ugadi
ಉತ್ತರ ಕನ್ನಡ16 mins ago

Bike Rally: ಯುಗಾದಿ ಪ್ರಯುಕ್ತ ಯಲ್ಲಾಪುರದಲ್ಲಿ ನಡೆದ ಬೈಕ್ ರ‍್ಯಾಲಿಗೆ ಅಭೂತಪೂರ್ವ ಬೆಂಬಲ

Shobha Karandlaje criticizes congress guarantee
ಕರ್ನಾಟಕ17 mins ago

Congress Guarantee:‌ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗೆ ಜಾರ್ಜ್‌ ಸೊರೊಸ್‌ ಹಣ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ

DC Prabhulinga Kavalikatti karwar
ಉತ್ತರ ಕನ್ನಡ17 mins ago

Karnataka Election 2023: ಗಡಿ ಪ್ರದೇಶಗಳಲ್ಲಿ ಡ್ರಗ್ ದಂಧೆಕೋರರ ಮೇಲೆ ತೀವ್ರ ನಿಗಾ: ಜಿಲ್ಲಾಧಿಕಾರಿ ಸೂಚನೆ

Gangavathi Pranesh nisarga mane sirsi
ಉತ್ತರ ಕನ್ನಡ22 mins ago

Sirsi News: ಕನ್ನಡ ಭಾಷೆಯು ವ್ಯಕ್ತಿಯ ಯೋಗ್ಯತೆಯನ್ನು ಕಟ್ಟಿ ಕೊಡುತ್ತದೆ: ಗಂಗಾವತಿ ಪ್ರಾಣೇಶ

fire accident honnavar Ranga Bhoomika
ಉತ್ತರ ಕನ್ನಡ29 mins ago

Fire Accident: ಕಡ್ಲೆ ಗ್ರಾಮದಲ್ಲಿರುವ ರಂಗ ಭೂಮಿಕಾ ಅಲಂಕಾರ ಸಾಮಗ್ರಿಗೆ ಬೆಂಕಿ; 15 ಲಕ್ಷ ರೂ. ಹಾನಿ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ14 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ1 hour ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ6 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ6 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!