Viral Video: ವಿಶ್ವದಲ್ಲೇ ಉದ್ದದ ನಾಲಗೆ ಈತನದ್ದು; ಗಿನ್ನಿಸ್‌ ದಾಖಲೆಗೆ ಭಾಜನ Vistara News
Connect with us

ವೈರಲ್ ನ್ಯೂಸ್

Viral Video: ವಿಶ್ವದಲ್ಲೇ ಉದ್ದದ ನಾಲಗೆ ಈತನದ್ದು; ಗಿನ್ನಿಸ್‌ ದಾಖಲೆಗೆ ಭಾಜನ

ಉದ್ದದ ನಾಲಿಗೆ ಹೊಂದಿರುವ ವ್ಯಕ್ತಿಯು ಜೆಂಗಾ ಬ್ಲಾಕ್‌ ಬೀಳಿಸುವ ಮೂಲಕ ಮತ್ತೊಂದು ಗಿನ್ನಿಸ್ ವರ್ಲ್‌ ರೆಕಾರ್ಡ್‌ ಬರೆದಿದ್ದಾನೆ. ಆತನ ಈ ಸಾಧನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

VISTARANEWS.COM


on

Koo

ಬೆಂಗಳೂರು: ನಾಲಗೆ ಎಷ್ಟು ಉದ್ದ ಇರುತ್ತದೆ. ಹೆಚ್ಚೆಂದರೆ ಮೂಗಿನ ತುದಿಗೆ ತಾಕಿಸುವಷ್ಟು. ಆದರೆ ಅಮೆರಿಕದ ಈ ವ್ಯಕ್ತಿಯ ನಾಲಗೆ ಕೇವಲ ಮೂಗನ್ನಷ್ಟೇ ಅಲ್ಲ ಗಲ್ಲದ ತುದಿಯನ್ನೂ ಮುಟ್ಟುತ್ತದೆ. ವಿಶ್ವದಲ್ಲಿಯೇ ಅತ್ಯಂತ ಉದ್ದದ ನಾಲಗೆ ಹೊಂದಿರುವಾತ ಎನ್ನುವ ದಾಖಲೆ ಬರೆದಿದ್ದ ಅದೇ ವ್ಯಕ್ತಿ ಇದೀಗ ನಾಲಗೆ ಮೂಲಕವೇ ಮತ್ತೊಂದು ಗಿನ್ನಿಸ್ ವರ್ಲ್ಡ್‌ ರೆಕಾರ್ಡ್‌ ಬರೆದಿದ್ದಾನೆ.

ಇದನ್ನೂ ಓದಿ: Viral News: ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ತಂದೆ; ತಮ್ಮ ಜೀಪ್‌ನಲ್ಲೇ ವಿದ್ಯಾರ್ಥಿನಿಯನ್ನು ಕೇಂದ್ರಕ್ಕೆ ಕರೆದೊಯ್ದ ಪೊಲೀಸ್
ನಿಕ್‌ ಸ್ಟೋಬರ್ಲ್‌ ಈ ರೀತಿ ದಾಖಲೆಗಳನ್ನು ಬರೆಯುತ್ತಿರುವ ವ್ಯಕ್ತಿ. ಜೆಂಗಾ ಬ್ಲಾಕ್ಸ್‌ ಆಟವನ್ನು ನೀವು ಆಡಿರಬಹುದು. ಒಂದರ ಮೇಲೆ ಒಂದರಂತೆ ಸಣ್ಣ ಸಣ್ಣ ಮರದ ತುಂಡುಗಳನ್ನು ಜೋಡಿಸಲಾಗಿರುತ್ತದೆ. ಅದರಲ್ಲಿ ಮೇಲಿನ ತುಂಡು ಬೀಳದಂತೆಯೇ ಕೆಳಗಿನ ತುಂಡನ್ನು ತಗೆಯುವ ಆಟವದು. ಅದನ್ನು ಕೈಗಳಲ್ಲಿ ಆಡುವುದು ಸಾಮಾನ್ಯ. ಆದರೆ ಈ ನಿಕ್‌ ಮಾತ್ರ ತನ್ನ ನಾಲಗೆಯ ಮೂಲಕವೇ ಈ ಆಟವನ್ನು ಆಡಿದ್ದಾರೆ. 55.526 ಸೆಕೆಂಡುಗಳಲ್ಲಿ ಐದು ಜೆಂಗಾ ಬ್ಲಾಕ್‌ ಅನ್ನು ಯಶಸ್ವಿಯಾಗಿ ಬೀಳಿಸಿದ್ದಾರೆ. ನಾಲಗೆಯ ಮೂಲಕವೇ ಐದು ಜೆಂಗಾ ಬ್ಲಾಕ್‌ ಅನ್ನು ಅತಿ ವೇಗದಲ್ಲಿ ಬೀಳಿಸಿರುವ ಸಲುವಾಗಿ ಗಿನ್ನಿಸ್ ವರ್ಲ್‌ ರೆಕಾರ್ಡ್‌ ದಾಖಲಾಗಿದೆ. ಅದರ ವಿಡಿಯೊ ಅನ್ನು ಕೂಡ ಗಿನ್ನಿಸ್ ರೆಕಾರ್ಡ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೊ ವೈರಲ್‌ ಆಗಿದೆ.


ಅಂದ ಹಾಗೆ ಸಾಮಾನ್ಯ ಮನುಷ್ಯನ ನಾಲಗೆ ಮೂರು ಇಂಚಿನಷ್ಟು ಉದ್ದವಿರುತ್ತದೆ. ಹೆಣ್ಣು ಮಕ್ಕಳಿಗೆ 3.11 ಇಂಚು ಹಾಗೂ ಗಂಡು ಮಕ್ಕಳಿಗೆ 3.34 ಇಂಚಿನ ನಾಲಗೆ ಇರುವುದು ಸಾಮಾನ್ಯ. ಆದರೆ ಈ ನಿಕ್‌ ಬಾಯಿಯಲ್ಲಿರುವುದು ನಾಲ್ಕು ಇಂಚಿನ ನಾಲಗೆ.

ಇದನ್ನೂ ಓದಿ: Viral Video: ಗಾಯಕ ಸ್ನೇಹದೀಪ್​​ರ ಕೇಸರಿಯಾ ಹಾಡಿಗೆ ಪ್ರಧಾನಿ ಮೋದಿ ಫಿದಾ; ವಿವಿಧತೆಯಲ್ಲಿ ಏಕತೆಯ ಪ್ರತಿಬಿಂಬ ಎಂದು ಟ್ವೀಟ್​
ಜೆಂಗಾ ಬ್ಲಾಕ್ಸ್‌ ಮೂಲಕ ದಾಖಲೆ ಬರೆಯುವುದಕ್ಕೂ ಮೊದಲು ಅಮೆರಿಕದ ಟಾಕ್‌ ಶೋ ಒಂದರಲ್ಲಿ ಭಾಗವಹಿಸಿದ್ದ ನಿಕ್‌ ಅಲ್ಲಿ ನಾಲಗೆ ಮೂಲಕವೇ ಚಿತ್ರ ಬಿಡಿಸಿದ್ದರು. ನಾಲಗೆಗೆ ಪ್ಲಾಸ್ಟಿಕ್‌ ಸುತ್ತಿ, ಅದಕ್ಕೆ ಬಣ್ಣ ಹಚ್ಚಿಕೊಂಡು ಪೇಪರ್‌ ಮೇಲೆ ಚಿತ್ರಕಲೆ ಬರೆದ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗಿತ್ತು. ಈ ರೀತಿ ನಾಲಗೆಯಿಂದ ಚಿತ್ರ ಬಿಡಿಸುವುದಕ್ಕೆ ಭಾರತೀಯ ವ್ಯಕ್ತಿಯೊಬ್ಬರಿಂದ ಸ್ಫೂರ್ತಿ ಪಡೆದಿದ್ದಾಗಿ ತೈ ಅವರು ಹೇಳಿಕೊಂಡಿದ್ದರು.


ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತನ್ನ ಜೀವನವನ್ನು ಬದಲಾಯಿಸಿದೆ ಎಂದು ನಿಕ್‌ ಹೇಳಿಕೊಂಡಿದ್ದಾರೆ. ಈ ದಾಖಲೆಯಿಂದಾಗಿ ಪ್ರಪಂಚ ಸುತ್ತಲು ಸಾಧ್ಯವಾಗಿದೆ, ವೈವಿಧ್ಯಮಯ ಸಂಸ್ಕೃತಿಗಳನ್ನು ನೋಡಲು ಮತ್ತು ರುಚಿಕರವಾದ ತಿನಿಸುಗಳನ್ನು ತಿನ್ನಲು ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ

Viral video: ಪ್ರವಾಸಿಗರ ವಾಹನ ಅಡ್ಡಗಟ್ಟಿ ನಿಂತ ಆನೆ; ಗಣಪತಿ ಮಂತ್ರ ಜಪಿಸಿದ ಕೂಡಲೇ ಒಲಿದು ದಾರಿಬಿಟ್ಟನಾ ಗಜರಾಜ!

Viral video: ಪ್ರವಾಸಕ್ಕೆಂದು ಹೊರಟಿದ್ದ ಅವರಿಗೆ ಮಾರ್ಗ ಮಧ್ಯೆ ಕಾಡಾನೆಯೊಂದು ಎದುರಾಯಿತು. ಕೂಗಳತೆ ದೂರದಲ್ಲಿದ್ದ ಆನೆಯು ಕಾರಿನತ್ತ ಓಡೋಡಿ ಬಂದಿತ್ತು. ಕಾರಿನಲ್ಲಿದ್ದವರೆಲ್ಲರೂ ಇನ್ನೇನು ಸಾವೇ ಹತ್ತಿರ ಬರುತ್ತಿದೆ ಎಂದು ನಡುಗಿದ್ದರು. ಆದರೆ, ಮುಂದೆ ಆಗಿದ್ದೇ ಬೇರೆ!

VISTARANEWS.COM


on

Edited by

Koo

ಚಿಕ್ಕಮಗಳೂರು: ಪ್ರವಾಸಿಗರ ವಾಹನಕ್ಕೆ ಅಡ್ಡಗಟ್ಟಿನಿಂತ ಕಾಡಾನೆಯೊಂದು ಗಣಪತಿ ಸೇರಿದಂತೆ ನಾನಾ ದೇವರ ಮಂತ್ರ ಜಪಿಸಿದ ಕೂಡಲೇ ಒಲಿದು ದಾರಿಬಿಟ್ಟು ಕೊಟ್ಟ ಘಟನೆ ನಡೆದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗುತ್ತಿದೆ.

ಪ್ರವಾಸಕ್ಕೆಂದು ಕಾರಿನಲ್ಲಿ ಐದಾರು ಮಂದಿ ಹೊರಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಕಾಡಾನೆಯೊಂದು ಅಡ್ಡಗಟ್ಟಿ ನಿಂತಿತ್ತು. ಕೂಗಳತೆ ದೂರದಲ್ಲಿದ್ದ ಕಾಡಾನೆಯನ್ನು ಕಂಡೊಂಡನೆ ವಾಹನವನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ಆದರೂ ಬಿಡದ ಕಾಡಾನೆಯು ಕಾರಿನತ್ತ ಓಡೋಡಿ ಬಂದಿತ್ತು. ಕಾರಿನಲ್ಲಿದ್ದವರೆಲ್ಲರೂ ಇನ್ನೇನು ನಾವೆಲ್ಲ ಆನೆ ತುಳಿತಕ್ಕೆ ಸತ್ತು ಹೋಗುತ್ತೇವೆ ಎಂದು ನಡುಗಿದ್ದರು.

ದಾರಿ ಬಿಟ್ಟು ಕೊಟ್ಟ ಕಾಡಾನೆ

ಕಾರಿನಲ್ಲಿದ್ದ ಮಹಿಳೆಯರೆಲ್ಲ ಗಾಬರಿಯಾಗಿ ಆನೆ ಬಂದೇ ಬಿಡ್ತು.. ಕೃಷ್ಣಾ ವಾಸುದೇವಾ.. ಎನ್ನುತ್ತಾ ಜೀವ ಕೈಲಿ ಹಿಡಿದು ಕುಳಿತಿದ್ದರು. ಕಾಡಾನೆ ಸಮೀಪ ಬಂದೊಡನೆ ಆತಂಕಕ್ಕೆ ಒಳಗಾಗಿ ಸಾಮೂಹಿಕವಾಗಿ ಗಣಪತಿ ಮಂತ್ರ ಹೇಳಲು ಶುರು ಮಾಡಿದರು. ಕಾರು ಹಿಂದೆ ಹೋದಂತೆಲ್ಲ ಆನೆ ಕೂಡಾ ಮುಂದೆ ಮುಂದೆ ಬರುತ್ತಿತ್ತು.

ಇದನ್ನೂ ಓದಿ: Child theft in Bengaluru: ಮನೆಯೊಳಗೆ ತಾಯಿ ಜತೆ ಬೆಚ್ಚಗೆ ಮಲಗಿದ್ದ ಮಗುವನ್ನು ಕದ್ದೊಯ್ದ ಕಳ್ಳಿ; ಮತ್ತೆ ಹೆತ್ತವರ ಮಡಿಲು ಸೇರಿದ್ದೇ ರೋಚಕ!

ಈ ವೇಳೆ ವಿಘ್ನ ವಿನಾಶಕನ ಮಂತ್ರವನ್ನು ಜಪಿಸುತ್ತಿದ್ದಂತೆಯೇ ಸಮಾಧಾನಗೊಂಡಂತೆ ಕಂಡ ಕಾಡಾನೆ, ಕಾರಿನಿಂದ ಪಕ್ಕಕ್ಕೆ ಸರಿದಿದೆ. ಮಾತ್ರವಲ್ಲದೆ ಮುಂದೆ ಹೋಗುತ್ತಿದ್ದಂತೆ ಸೊಂಡಿಲು ಎತ್ತಿ ಆಶೀರ್ವಾದ ಮಾಡಿದೆ! ಇದರಿಂದ ಗಜರಾಜನ ಆಶೀರ್ವಾದ ಸಿಕ್ತು ಎಂದು ಪ್ರವಾಸಿಗರು ಖುಷಿ ಆಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಆರೋಗ್ಯ

14 ತಿಂಗಳು ಮೂತ್ರ ವಿಸರ್ಜನೆ ಸಾಧ್ಯವಾಗದೆ ಪರಿತಪಿಸಿದ ಮಹಿಳೆ; ವರ್ಷದ ಬಳಿಕ ಗೊತ್ತಾಯ್ತು ಈ ಅಪರೂಪದ ಕಾಯಿಲೆ ಹೆಸರು

ಯುವತಿಯ ವಿಚಾರದಲ್ಲಿ ಸಮಸ್ಯೆಯೇ ಆಯಿತು. 2020ರಲ್ಲಿ ಮೊದಲ ಬಾರಿಗೆ ಮೂತ್ರ ವಿಸರ್ಜನೆ ಆಗದೆ ಇದ್ದಾಗ ಆಕೆ ಮೊದಲು ಲಂಡನ್​​ನಲ್ಲಿರುವ ಸೇಂಟ್ ಥಾಮಸ್​ ಆಸ್ಪತ್ರೆಗೆ ಹೋದರು. ಸ್ಕ್ಯಾನ್​ ಮಾಡಿದ ವೈದ್ಯರು, ನಿಮ್ಮ ಮೂತ್ರಕೋಶದಲ್ಲಿ ಸುಮಾರು 1 ಲೀಟರ್​ ಮೂತ್ರ ತುಂಬಿದೆ ಎಂದು ಹೇಳಿದರು.

VISTARANEWS.COM


on

Edited by

UK Woman Unable To Urinate for over 1 Year
Koo

ಯುನೈಟೆಡ್​ ಕಿಂಗ್​​ಡಮ್​​ನ, 30ವರ್ಷದ ಎಲ್ಲೆ ಆಡಮ್ಸ್ ಎಂಬ ಮಹಿಳೆಗೆ 14 ತಿಂಗಳುಗಳ ಕಾಲ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗಿಯೇ ಇಲ್ಲವಂತೆ..! ಅಂದರೆ ಆಕೆ ಒಂದೂವರೆ ವರ್ಷಗಳ ಕಾಲ ಮೂತ್ರವನ್ನು ವಿಸರ್ಜಿಸಲೇ ಇಲ್ಲ. ಅದೆಷ್ಟೇ ನೀರು, ಜ್ಯೂಸ್​ ಏನೇ ಕುಡಿಯಲಿ, ಆಕೆಗೆ ಮೂತ್ರ ಹೊರಹೋಗುತ್ತಿರಲಿಲ್ಲ. ಮೂತ್ರಕ್ಕೆ ಹೋಗಬೇಕು ಎಂದು ಆಕೆಗೆ ಅನ್ನಿಸಿದರೂ, ಮಾಡಲು ಸಾಧ್ಯವಾಗುತ್ತಿರಲಿಲ್ಲವಂತೆ. ಈ ಬಗ್ಗೆ ಆಕೆಯೇ ತನ್ನ ಇನ್​ಸ್ಟಾಗ್ರಾಂ ಪೋಸ್ಟ್​​ನಲ್ಲಿ ಹೇಳಿಕೊಂಡಿದ್ದಾರೆ.

ಜೀವನದಲ್ಲಿ ಎಲ್ಲವೂ ಚೆನ್ನಾಗಿತ್ತು. ಆರೋಗ್ಯವಾಗಿಯೇ ಇದ್ದೆ. 2020ರ ಅಕ್ಟೋಬರ್​​ನಲ್ಲಿ ಒಂದು ದಿನ ಬೆಳಗ್ಗೆ ಎದ್ದೆ. ಅಂದು ಮೂತ್ರ ಮಾಡಲು ಆಗಲಿಲ್ಲ. ದಿನವೆಲ್ಲ ಹಾಗೇ ಕಳೆದೆ. ನನಗೆ ವಿಚಿತ್ರ ಎನ್ನಿಸಿತು. ಆತಂಕವಾಯಿತು. ವೈದ್ಯರ ಬಳಿ ಹೋದಾಗಲೇ ಗೊತ್ತಾಯಿತು ನನಗೆ ‘ಫೌಲರ್ ಸಿಂಡ್ರೋಮ್’ ಎಂಬ ಅಪರೂಪದ ಕಾಯಿಲೆ ಬಂದಿದ್ದು. ಈ ಕಾಯಿಲೆ ನನ್ನ ಜೀವನವನ್ನು ಸಂಪೂರ್ಣವಾಗಿಯೇ ಬದಲಿಸಿಬಿಟ್ಟಿತು. ಹಾಸಿಗೆಯೇ ಮೇಲೆ ಜೀವನ ಕಳೆವಂತಾಯ್ತು. ಎದ್ದು ಟಾಯ್ಲೆಟ್​ಗೂ ಹೋಗದ ಸ್ಥಿತಿ ತಲುಪಿದೆ’ ಎಂದು ಎಲ್ಲೆ ಬರೆದುಕೊಂಡಿದ್ದಾರೆ.

ಅಂದಹಾಗೇ ಈ ಫೌಲರ್​ ಸಿಂಡ್ರೋಮ್​ ಯಾಕೆ ಉಂಟಾಗುತ್ತದೆ ಎಂಬುದಕ್ಕೆ ನಿರ್ದಿಷ್ಟ ಕಾರಣ ಗೊತ್ತಿಲ್ಲ. ಮೂತ್ರಕೋಶದ ತುದಿಯಲ್ಲಿರುವ ಸ್ನಾಯುಗಳು ತೆರೆಯುವುದು ಮತ್ತು ಬಂದ್​ ಆಗುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಹೀಗಾದಾಗ ಮೂತ್ರ ಅದರಷ್ಟಕ್ಕೇ ಹೊರಹೋಗುವುದಿಲ್ಲ. ಇದು ಸಾಮಾನ್ಯವಾಗಿ ಯುವತಿಯರಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಹೆಚ್ಚಾಗಿ ಹೆರಿಗೆಯಾದ ಬಳಿಕ, ಕೆಲವು ಸರ್ಜರಿ ನಂತರ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಎನ್ನಲಾಗಿದ್ದರೂ, ಅದರ ಹೊರತಾಗಿ ಯಾಕೆ ತೊಂದರೆಯಾಗುತ್ತದೆ ಎಂದು ಗೊತ್ತಿಲ್ಲ.

ಈ ಯುವತಿಯ ವಿಚಾರದಲ್ಲಿ ಸಮಸ್ಯೆಯೇ ಆಯಿತು. 2020ರಲ್ಲಿ ಮೊದಲ ಬಾರಿಗೆ ಮೂತ್ರ ವಿಸರ್ಜನೆ ಆಗದೆ ಇದ್ದಾಗ ಆಕೆ ಮೊದಲು ಲಂಡನ್​​ನಲ್ಲಿರುವ ಸೇಂಟ್ ಥಾಮಸ್​ ಆಸ್ಪತ್ರೆಗೆ ಹೋದರು. ಸ್ಕ್ಯಾನ್​ ಮಾಡಿದ ವೈದ್ಯರು, ನಿಮ್ಮ ಮೂತ್ರಕೋಶದಲ್ಲಿ ಸುಮಾರು 1 ಲೀಟರ್​ ಮೂತ್ರ ತುಂಬಿದೆ ಎಂದು ಹೇಳಿ, ಅದನ್ನು ಟ್ಯೂಬ್ ಹಾಕಿ ಹೊರತೆಗೆದು, ಕಳಿಸಿದರು. ಆದರೆ ಮರುದಿನವೂ ಅದೇ ಸಮಸ್ಯೆಯಾಯಿತು. ಈ ಸಮಸ್ಯೆಗೆ ಕಾರಣ ಗೊತ್ತಾಗಲಿಲ್ಲ. ಹಲವು ತಪಾಸಣೆಗಳು, ಔಷಧಗಳು, ಚಿಕಿತ್ಸೆಯ ಬಳಿಕವೂ ಅದೇನು ರೋಗ ಗೊತ್ತಾಗಲಿಲ್ಲ. ನಂತರ ಎಲ್ಲೆ, ಮನೆಯಲ್ಲೇ ಮೂತ್ರವನ್ನೂ ಸ್ವಯಂ ಆಗಿ ತೆಗೆಯುವುದನ್ನು ಕಲಿತರು.

ಇದನ್ನೂ ಓದಿ: Harrassment : ಕಾಫಿ ತೋಟದೊಳಗೆ ಎಳೆದೊಯ್ದು ಯುವತಿಯ ಅತ್ಯಾಚಾರ ಯತ್ನ; ಒಬ್ಬ ಆರೋಪಿ ಸೆರೆ, ಇನ್ನಿಬ್ಬರು ಪರಾರಿ

ಹೀಗೆ ಒಂದು ವರ್ಷಕ್ಕೂ ಅಧಿಕ ಕಾಲದ ಬಳಿಕ 2021ರ ಡಿಸೆಂಬರ್​ನಲ್ಲಿ ಅವರಿಗೆ ಫೌಲರ್​ ಸಿಂಡ್ರೋಮ್ ಇರುವುದು ಪತ್ತೆಯಾಯಿತು. ನೀವು ಜೀವನ ಪರ್ಯಂತ ಹೀಗೆ ತೂರುನಳಿಕೆಯ ಮೂಲಕವೇ ಮೂತ್ರವನ್ನು ಹೊರಗೆ ತೆಗೆಯಬೇಕು ಎಂದು ವೈದ್ಯರು ಹೇಳಿದರು. ಇದೇ ಜನವರಿಯಲ್ಲಿ ಎಲ್ಲೆ ಆಡಮ್ಸ್​ ಒಂದು ಸರ್ಜರಿಗೂ ಒಳಗಾಗಿದ್ದಾರೆ. ಅದಾದ ಮೇಲೆ ಆಕೆ ತೂರು ನಳಿಕೆ ಬಳಕೆ ಕಡಿಮೆ ಮಾಡಿದ್ದಾರೆ. ಶೇ.50ರಷ್ಟು ಸಮಸ್ಯೆ ಸರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

Continue Reading

ಕ್ರೈಂ

Viral News : ಪ್ರಿಯತಮನೊಂದಿಗೆ ಸೇರಿ ಇಬ್ಬರು ಮಕ್ಕಳನ್ನೇ ಕೊಂದ ತಾಯಿ!

ತಾಯಿಯೊಬ್ಬಳು ತನ್ನ ಪ್ರಿಯತಮನ ಜತೆ ಸೇರಿಕೊಂಡು ಮಕ್ಕಳನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

VISTARANEWS.COM


on

Edited by

Koo

ಲಖನೌ: ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಮಾತಿದೆ. ಆದರೆ ಎಷ್ಟೋ ಬಾರಿ ಅದೇ ತಾಯಿಯಂದಿರೇ ಕೆಟ್ಟವರಾಗಿ ಮಕ್ಕಳಿಗೆ ಹಿಂಸಿಸುವ ಘಟನೆಗಳು ವರದಿಯಾಗುತ್ತಿರುತ್ತವೆ. ಅದೇ ರೀತಿ ಇದೀಗ ಉತ್ತರ ಪ್ರದೇಶದ ಮೀರತ್‌ನಲ್ಲಿ ತಾಯಿಯೊಬ್ಬಳು ತನ್ನ ಪ್ರಿಯತಮನೊಂದಿಗೆ ಸೇರಿಕೊಂಡು ತನ್ನಿಬ್ಬರು ಮಕ್ಕಳನ್ನೇ ಕೊಂದ ಘೋರ ಘಟನೆ (Viral News) ವರದಿಯಾಗಿದೆ.

ಇದನ್ನೂ ಓದಿ: Viral Video: ಜಪಾನ್‌ನಲ್ಲಿ ಮಗನಿಗಾಗಿ ಆರ್‌ಆರ್‌ಆರ್‌ ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ತಾಯಿ
ಇದೇ ತಿಂಗಳ 22ನೇ ತಾರೀಕಿನಿಂದು ಈ ಘಟನೆ ನಡೆದಿದೆ. ಮೀರತ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯತಮನೊಂದಿಗೆ ಸೇರಿಕೊಂಡು ತನ್ನ 10 ವರ್ಷದ ಮಗ ಹಾಗೂ 6 ವರ್ಷದ ಮಗಳನ್ನೇ ಕೊಲೆ ಮಾಡಿದ್ದಾಳೆ. ನಂತರ ಅವರ ದೇಹವನ್ನು ನೀರಿನ ಕಾಲುವೆಗೆ ಎಸೆದಿದ್ದಾಳೆ. ಈ ಕೊಲೆಗೆ ಕೆಲವು ಸ್ಥಳೀಯರೂ ಸಹಾಯ ಮಾಡಿದ್ದಾಗಿ ಹೇಳಲಾಗಿದೆ.


ಮಕ್ಕಳು ಕಾಣೆಯಾದ ವಿಚಾರದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಈ ಕೊಲೆಯ ವಿಚಾರ ತಿಳಿದುಬಂದಿದೆ. ಮಹಿಳೆಗೆ ಸೌದ್‌ ಹೆಸರಿನ ಪ್ರಿಯತಮನಿದ್ದಾನೆ. ಆತ ಆ ಊರಿನ ಕೌನ್ಸಿಲರ್‌ ಆಗಿರುವುದರಿಂದಾಗಿ ಊರವರ ಬೆಂಬಲ ಆತನಿಗಿದೆ. ಹಾಗಾಗಿ ಊರಿನವರ ಸಹಾಯದಿಂದ ಮಹಿಳೆಯ ಮಗಳನ್ನು ಮನೆಯಲ್ಲೇ ಕೊಲೆ ಮಾಡಲಾಗಿದೆ. ಮಗನನ್ನು ಪಕ್ಕದ ಮನೆಯಲ್ಲಿ ಕೊಲೆ ಮಾಡಿ, ಅವರ ದೇಹವನ್ನು ಕಾಲುವೆಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ತನ್ನ ಶಿಕ್ಷಣಕ್ಕೆ ಕೂಡಿಟ್ಟಿದ್ದ ಹಣ ಅಣ್ಣನ ಮದುವೆಗೆ ಬಳಕೆ; ಅಪ್ಪ-ಅಮ್ಮನ ವಿರುದ್ಧವೇ ಕೇಸ್‌ ದಾಖಲಿಸಿದ ಪುತ್ರಿ!
ಈ ಸಂಬಂಧ ಪೊಲೀಸರು ಮೂರು ಮಹಿಳೆಯರು ಮತ್ತು ಮೂರು ಪುರುಷರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲ್ಲರನ್ನೂ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾಲುವೆಗೆ ಎಸೆಯಲಾದ ಮಕ್ಕಳ ದೇಹ ಇನ್ನೂ ಸಿಕ್ಕಿಲ್ಲ.

Continue Reading

South Cinema

Viral Video: ಜಪಾನ್‌ನಲ್ಲಿ ಮಗನಿಗಾಗಿ ಆರ್‌ಆರ್‌ಆರ್‌ ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ತಾಯಿ

Viral Video: ಆರ್‌ಆರ್‌ಆರ್‌ ಸಿನಿಮಾದ ಕಥೆಯನ್ನು ಹೇಳುವಂತಹ ಪುಸ್ತಕವೊಂದನ್ನು ಜಪಾನ್‌ನಲ್ಲಿ ತಾಯಿಯೊಬ್ಬರು ತಮ್ಮ ಮಗನಿಗಾಗಿ ಸಿದ್ಧ ಮಾಡಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

VISTARANEWS.COM


on

Edited by

Koo

ಟೋಕಿಯೊ: ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ವಿಶ್ವಾದ್ಯಂತ ಭಾರಿ ಸದ್ದು ಮಾಡಿದೆ. ಅದರಲ್ಲೂ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ ಪ್ರಶಸ್ತಿ ಗೆದ್ದ ಮೇಲಂತೂ ಸಿನಿಮಾದ ಖ್ಯಾತಿ ಇನ್ನಷ್ಟು ಹೆಚ್ಚಿದೆ ಎಂದೇ ಹೇಳಬಹುದು. ವಿದೇಶಗಳಲ್ಲೂ ಆರ್‌ಆರ್‌ಆರ್‌ ಹವಾ ಭಾರಿ ಪ್ರಮಾಣದಲ್ಲಿದೆ. ವಿದೇಶದಲ್ಲಿನ ಆರ್‌ಆರ್‌ಆರ್‌ ಪ್ರೀತಿಯನ್ನು ಬಿಂಬಿಸುವಂತಹ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Viral News: ತನ್ನ ಶಿಕ್ಷಣಕ್ಕೆ ಕೂಡಿಟ್ಟಿದ್ದ ಹಣ ಅಣ್ಣನ ಮದುವೆಗೆ ಬಳಕೆ; ಅಪ್ಪ-ಅಮ್ಮನ ವಿರುದ್ಧವೇ ಕೇಸ್‌ ದಾಖಲಿಸಿದ ಪುತ್ರಿ!

ಜಪಾನ್‌ನಲ್ಲಿ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆಯಾಗಿ ಇಂದಿಗೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲಿನ ಅನೇಕರು ಅವರದ್ದೇ ಭಾಷೆಯಲ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಅಲ್ಲಿ ಏಳು ವರ್ಷದ ಮಗನ ತಾಯಿಯೊಬ್ಬರು ಕೂಡ ವಿಶೇಷ ರೀತಿಯಲ್ಲಿ ಮಗನಿಗೆ ಆರ್‌ಆರ್‌ಆರ್‌ ಕಥೆ ಹೇಳಿದ್ದಾರೆ. ಮಗನಿಗೆ ಮೂರು ತಾಸು ಕುಳಿತು ಸಿನಿಮಾ ನೋಡುವುದು ಕಷ್ಟವೆನ್ನುವ ಕಾರಣಕ್ಕೆ ಅವರು ಆರ್‌ಆರ್‌ಆರ್‌ ಸಿನಿಮಾ ಕಥೆಯ ಪುಸ್ತಕವನ್ನೇ ಸಿದ್ಧ ಮಾಡಿದ್ದಾರೆ. ಅದರಲ್ಲಿ ಸಿನಿಮಾದ ದೃಶ್ಯಗಳನ್ನೂ ಕೂಡ ಚಿತ್ರವಾಗಿ ಬಳಸಿಕೊಳ್ಳಲಾಗಿದೆ.


ಈ ಪುಸ್ತಕದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್‌ ಆಗುತ್ತಿದೆ. ಎರಡು ತಿಂಗಳ ಹಿಂದೆಯೇ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಲೈಕ್‌ ಮಾಡಿದ್ದಾರೆ. “ನಮ್ಮ ದಕ್ಷಿಣ ಭಾರತದ ಸಿನಿಮಾಗಳು ವಿದೇಶದಲ್ಲೂ ರಾರಾಜಿಸುತ್ತಿವೆ” ಎಂದು ಅನೇಕರು ಕಾಮೆಂಟ್‌ ಮೂಲಕ ಹೇಳಿಕೊಂಡಿದ್ದಾರೆ. ಮಗನಿಗೆ ಕಥೆ ಹೇಳಿಕೊಡಲು ತಾಯಿ ಮಾಡಿದ ಪ್ರಯತ್ನದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ.

Continue Reading
Advertisement
Uttara Kannada News
ಉತ್ತರ ಕನ್ನಡ5 hours ago

Uttara Kannada News: ವಾಕ್ಪ್ರತಿಯೋಗಿತಾ ಸ್ಪರ್ಧೆ; ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ಮಹಾಪಾಠ ಶಾಲೆ ಉತ್ತಮ ಸಾಧನೆ

Modi in Karnataka
ಕರ್ನಾಟಕ5 hours ago

Modi in Karnataka: ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ; ನಿಷೇಧಿತ ಪ್ರದೇಶಕ್ಕೆ ನುಗ್ಗಿದ ಇಬ್ಬರು ವಶಕ್ಕೆ

rahul-gandhi-will-act-like-a-martyr-with-an-eye-on-karnataka-elections-bjp
ದೇಶ5 hours ago

ಕರ್ನಾಟಕ ಚುನಾವಣೆ ಮೇಲೆ ಕಣ್ಣಿಟ್ಟು ಹುತಾತ್ಮನಂತೆ ನಟಿಸ್ತಾ ಇರೋ ರಾಹುಲ್ ಗಾಂಧಿ: ಬಿಜೆಪಿ

Your rules don't apply to the Gandhi family; Spark of Congress MP!
ದೇಶ6 hours ago

Rahul Gandhi Disqualified : ನಿಮ್ಮ ರೂಲ್ಸ್​ ಗಾಂಧಿ ಫ್ಯಾಮಿಲಿಗೆ ಅನ್ವಯವಾಗಲ್ಲ; ಕಾಂಗ್ರೆಸ್​ ಸಂಸದನ ಕಿಡಿ!

Zaheer Khan: Team India is still sailing in an old boat; Why did Zaheer Khan say this?
ಕ್ರಿಕೆಟ್6 hours ago

Zaheer Khan: ಟೀಮ್​ ಇಂಡಿಯಾ ಇನ್ನೂ ಹಳೆಯ ಬೋಟ್​ನಲ್ಲೇ ಪ್ರಯಾಣಿಸುತ್ತಿದೆ; ಜಹೀರ್​ ಖಾನ್​ ಹೀಗೆ ಹೇಳಿದ್ದು ಏಕೆ?

Amit Shah to visit karnataka on march 26 and Participate in various programmes
ಕರ್ನಾಟಕ6 hours ago

Amit Shah Visit: ಭಾನುವಾರ ಅಮಿತ್‌ ಶಾ ರಾಜ್ಯ ಪ್ರವಾಸ; ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

heavy rainfall likely to occur at isolated places in the karnataka on March 26 and 27
ಕರ್ನಾಟಕ6 hours ago

Karnataka Rain: ಮಾ.26, 27 ರಂದು ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ

Tricolor flag flown in America; Patriots strike back at Khalistanis
ದೇಶ6 hours ago

ವಿಸ್ತಾರ ಸಂಪಾದಕೀಯ: ಅಮೆರಿಕದಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ಖಲಿಸ್ತಾನಿಗಳಿಗೆ ದೇಶಪ್ರೇಮಿಗಳ ತಿರುಗೇಟು

WPL 2023: Nita Ambani dances with team players in Khasi in finals; The video is viral
ಕ್ರಿಕೆಟ್7 hours ago

WPL 2023: ಫೈನಲ್​ಗೆ ಲಗ್ಗೆಯಿಟ್ಟ ಖಷಿಯಲ್ಲಿ ತಂಡದ ಆಟಗಾರ್ತಿಯರೊಂದಿಗೆ ಕುಣಿದು ಕುಪ್ಪಳಿಸಿದ ನೀತಾ ಅಂಬಾನಿ; ವಿಡಿಯೊ ವೈರಲ್

Final race of Moto GP today in Portugal
ಕ್ರೀಡೆ7 hours ago

Moto GP : ಫೋರ್ಚುಗಲ್​ನಲ್ಲಿ ಭಾನುವಾರ ಮೋಟೊ ಜಿಪಿ ಮೊದಲ ಸುತ್ತಿನ ಫೈನಲ್​ ರೇಸ್​

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಕರ್ನಾಟಕ4 days ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ5 days ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ5 days ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ6 days ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ6 days ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ7 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ7 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ7 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ1 week ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ1 week ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!