karnataka-election-results-2023-full details of all 224 winners in Karnataka assembly election  Karnataka Election results 2023: ‌ ಎಲ್ಲ 224 ನೂತನ ಶಾಸಕರ ಫುಲ್‌ ಡಿಟೇಲ್‌; ಯಾವ ಜಿಲ್ಲೆಯಲ್ಲಿ ಯಾರ ಮೇಲುಗೈ? - Vistara News

ಪ್ರಮುಖ ಸುದ್ದಿ

Karnataka Election results 2023: ‌ ಎಲ್ಲ 224 ನೂತನ ಶಾಸಕರ ಫುಲ್‌ ಡಿಟೇಲ್‌; ಯಾವ ಜಿಲ್ಲೆಯಲ್ಲಿ ಯಾರ ಮೇಲುಗೈ?

Election results: ರಾಜ್ಯ ವಿಧಾನಸಭೆ ಚುನಾವಣೆಯ 224 ಕ್ಷೇತ್ರಗಳಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳ ಪೂರ್ಣ ಮಾಹಿತಿ ಇಲ್ಲಿದೆ. ಜಿಲ್ಲಾವಾರು ಬಲಾಬಲವೂ ಇದೆ. ಕಾಂಗ್ರೆಸ್‌ 135 ಕ್ಷೇತ್ರಗಳಲ್ಲಿ, ಬಿಜೆಪಿ 66ರಲ್ಲಿ, ಜೆಡಿಎಸ್‌ 19 ಮತ್ತು ಇತರರು ನಾಲ್ಕು ಕಡೆ ಗೆದ್ದಿದ್ದಾರೆ.

VISTARANEWS.COM


on

Karnataka Election results: winners list
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ ಜಿಲ್ಲೆ : 18 ಕ್ಷೇತ್ರಗಳು: 11 ಕಾಂಗ್ರೆಸ್‌- 7 ಬಿಜೆಪಿ

1.ನಿಪ್ಪಾಣಿ: ಶಶಿಕಲಾ ಜೊಲ್ಲೆ- ಬಿಜೆಪಿ
2. ಚಿಕ್ಕೋಡಿ ಸದಲಗ: ಗಣೇಶ್‌ ಹುಕ್ಕೇರಿ- ಕಾಂಗ್ರೆಸ್‌
3. ಅಥಣಿ: ಲಕ್ಷ್ಮಣ ಸವದಿ- ಕಾಂಗ್ರೆಸ್‌
4. ಕಾಗವಾಡ: ಭರಮಗೌಡ ಆಲಗೌಡ ಕಾಗೆ- ಕಾಂಗ್ರೆಸ್‌
5. ಕುಡಚಿ: ಮಹೇಂದ್ರ ಕೆ. ತಮ್ಮಣ್ಣನವರ್‌- ಕಾಂಗ್ರೆಸ್‌
6. ರಾಯಭಾಗ: ದುರ್ಯೋಧನ ಐಹೊಳೆ-ಬಿಜೆಪಿ
7. ಹುಕ್ಕೇರಿ: ನಿಖಿಲ್‌ ಕತ್ತಿ-ಬಿಜೆಪಿ
8. ಅರಭಾವಿ: ಬಾಲಚಂದ್ರ ಜಾರಕಿಹೊಳಿ-ಬಿಜೆಪಿ
9. ಗೋಕಾಕ: ರಮೇಶ್‌ ಜಾರಕಿಹೊಳಿ- ಬಿಜೆಪಿ
10. ಯಮಕನಮರಡಿ: ಸತೀಶ್‌ ಜಾರಕಿಹೊಳಿ- ಕಾಂಗ್ರೆಸ್‌
11. ಬೆಳಗಾವಿ ಉತ್ತರ: ಆಸಿಫ್‌ ಸೇಠ್‌- ಕಾಂಗ್ರೆಸ್‌
12. ಬೆಳಗಾವಿ ದಕ್ಷಿಣ: ಅಭಯ್‌ ಪಾಟೀಲ್‌- ಬಿಜೆಪಿ
13. ಬೆಳಗಾವಿ ಗ್ರಾ.: ಲಕ್ಷ್ಮೀ ಹೆಬ್ಬಾಳ್ಕರ್‌- ಕಾಂಗ್ರೆಸ್‌
14. ಖಾನಾಪುರ: ವಿಠಲ್‌ ಹಲಗೇಕರ್‌- ಬಿಜೆಪಿ
15. ಕಿತ್ತೂರು: ಬಾಬಾಸಾಹೇಬ್‌ ಡಿ. ಪಾಟೀಲ್‌- ಕಾಂಗ್ರೆಸ್‌
16. ಬೈಲಹೊಂಗಲ: ಮಹಾಂತೇಶ್‌ ಶಿವಾನಂದ ಕೌಜಲಗಿ- ಕಾಂಗ್ರೆಸ್‌
17. ಸವದತ್ತಿ: ವಿಶ್ವಾಸ್‌ ವಸಂತ್‌ ವೈದ್ಯ-ಕಾಂಗ್ರೆಸ್‌
18. ರಾಮದುರ್ಗ: ಅಶೋಕ್‌ ಎಂ. ಪಟ್ಟಣ್‌- ಕಾಂಗ್ರೆಸ್‌

ಬಾಗಲಕೋಟೆ ಜಿಲ್ಲೆ: ಏಳು ಕ್ಷೇತ್ರಗಳು: ಕಾಂಗ್ರೆಸ್‌-5, ಬಿಜೆಪಿ-2

19. ಮುಧೋಳ: ಆರ್‌.ಬಿ. ತಿಮ್ಮಾಪುರ-ಕಾಂಗ್ರೆಸ್‌
20. ತೇರದಾಳ: ಸಿದ್ದು ಸವದಿ- ಬಿಜೆಪಿ
21. ಜಮಖಂಡಿ: ಜಗದೀಶ್‌ ಗುಡಗಂಟಿ- ಬಿಜೆಪಿ
22. ಬೀಳಗಿ: ಜೆ.ಟಿ. ಪಾಟೀಲ್‌- ಕಾಂಗ್ರೆಸ್‌
23. ಬಾದಾಮಿ: ಬಿ.ಬಿ. ಚಿಮ್ಮನಕಟ್ಟಿ-ಕಾಂಗ್ರೆಸ್‌
24. ಬಾಗಲಕೋಟೆ: ಎಚ್‌.ವೈ. ಮೇಟಿ- ಕಾಂಗ್ರೆಸ್‌
25. ಹುನಗುಂದ- ವಿಜಯಾನಂದ ಕಾಶಪ್ಪನವರ್‌- ಕಾಂಗ್ರೆಸ್‌

ವಿಜಯಪುರ ಜಿಲ್ಲೆ: 8 ಕ್ಷೇತ್ರಗಳು: ಕಾಂಗ್ರೆಸ್‌-6, ಬಿಜೆಪಿ-1, ಜೆಡಿಎಸ್‌-1

26. ಮುದ್ದೇಬಿಹಾಳ- ಅಪ್ಪಾಜಿ ನಾಡಗೌಡ- ಕಾಂಗ್ರೆಸ್‌
27. ದೇವರಹಿಪ್ಪರಗಿ- ರಾಜುಗೌಡ ಪಾಟೀಲ್‌- ಜೆಡಿಎಸ್‌
28. ಬಸವನ ಬಾಗೇವಾಡಿ- ಶಿವಾನಂದ ಪಾಟೀಲ್‌- ಕಾಂಗ್ರೆಸ್‌
29. ಬಬಲೇಶ್ವರ- ಎಂ.ಬಿ. ಪಾಟೀಲ್‌- ಕಾಂಗ್ರೆಸ್‌
30. ವಿಜಯಪುರ ನಗರ: ಬಸನಗೌಡ ಪಾಟೀಲ್‌ ಯತ್ನಾಳ್‌-ಬಿಜೆಪಿ
31. ನಾಗಠಾಣ- ವಿಠಲ್‌ ಕಾಕಟಧೋಂದ್‌- ಕಾಂಗ್ರೆಸ್‌
32. ಇಂಡಿ- ಯಶ್ವಂತ್‌ ಗೌಡ ಪಾಟೀಲ್‌-ಕಾಂಗ್ರೆಸ್‌
33. ಸಿಂದಗಿ- ಅಶೋಕ್‌ ಎಂ. ಮನಗೂಳಿ- ಕಾಂಗ್ರೆಸ್‌

ಯಾದಗಿರಿ ಜಿಲ್ಲೆ: 4 ಕ್ಷೇತ್ರಗಳು: ಕಾಂಗ್ರೆಸ್‌-3, ಜೆಡಿಎಸ್‌-1

34. ಶೋರಾಪುರ- ರಾಜಾ ವೆಂಕಟಪ್ಪ ನಾಯಕ್‌-ಕಾಂಗ್ರೆಸ್‌
35. ಶಹಾಪುರ- ಶರಣಬಸಪ್ಪ ಗೌಡ- ಕಾಂಗ್ರೆಸ್‌
36. ಯಾದಗಿರಿ- ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು- ಕಾಂಗ್ರೆಸ್‌
37. ಗುರುಮಿಠಕಲ್‌ – ಶರಣ್‌ಗೌಡ- ಜೆಡಿಎಸ್‌

ಕಲಬುರಗಿ ಜಿಲ್ಲೆ: 9 ಕ್ಷೇತ್ರಗಳು: 7 ಕಾಂಗ್ರೆಸ್‌, 2 ಬಿಜೆಪಿ

38. ಅಫ್ಜಲ್‌ಪುರ- ಎಂ.ವೈ ಪಾಟೀಲ್‌- ಕಾಂಗ್ರೆಸ್‌
39. ಜೇವರ್ಗಿ: ಡಾ. ಅಜಯ್‌ ಧರ್ಮ ಸಿಂಗ್‌- ಕಾಂಗ್ರೆಸ್‌
40. ಚಿತ್ತಾಪುರ- ಪ್ರಿಯಾಂಕ್‌ ಖರ್ಗೆ- ಕಾಂಗ್ರೆಸ್‌
41. ಸೇಡಂ- ಡಾ. ಶರಣ್‌ ಪ್ರಕಾಶ್‌ ಪಾಟೀಲ್‌- ಕಾಂಗ್ರೆಸ್‌
42. ಚಿಂಚೋಳಿ: ಡಾ. ಅವಿನಾಶ್‌ ಜಾಧವ್‌- ಬಿಜೆಪಿ
43. ಕಲಬುರಗಿ ಗ್ರಾ. – ಬಸವರಾಜ ಮತ್ತಿಮೋಡ- ಬಿಜೆಪಿ
44. ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ್‌- ಕಾಂಗ್ರೆಸ್‌
45. ಕಲಬುರಗಿ ಉತ್ತರ- ಖನೀಜಾ ಫಾತಿಮಾ- ಕಾಂಗ್ರೆಸ್‌
46. ಆಳಂದ; ಬಿಆರ್‌ ಪಾಟೀಲ್‌-ಕಾಂಗ್ರೆಸ್‌

ಬೀದರ್‌ ಜಿಲ್ಲೆ: 6 ಕ್ಷೇತ್ರಗಳು: 3 ಬಿಜೆಪಿ, 3 ಕಾಂಗ್ರೆಸ್‌

47. ಬಸವಕಲ್ಯಾಣ: ಶರಣು ಸಲಗರ- ಬಿಜೆಪಿ
48. ಹುಮನಾಬಾದ್‌: ಸಿದ್ದುಪಾಟೀಲ್‌- ಬಿಜೆಪಿ
49. ಬೀದರ್‌ ದಕ್ಷಿಣ: ಅಶೋಕ್‌ ಖೇಣಿ- ಕಾಂಗ್ರೆಸ್‌
50. ಬೀದರ್‌- ರಹೀಂ ಖಾನ್‌- ಕಾಂಗ್ರೆಸ್‌
51. ಭಾಲ್ಕಿ- ಈಶ್ವರ್‌ ಖಂಡ್ರೆ- ಕಾಂಗ್ರೆಸ್‌
52. ಔರಾದ್‌- ಪ್ರಭು ಚೌಹಾಣ್‌- ಬಿಜೆಪಿ

ರಾಯಚೂರು ಜಿಲ್ಲೆ: 7 ಕ್ಷೇತ್ರಗಳು: 4 ಕಾಂಗ್ರೆಸ್‌, 3 ಬಿಜೆಪಿ

53. ರಾಯಚೂರು ಗ್ರಾ.: ಬಸನಗೌಡ ದದ್ದಲ್‌-ಕಾಂಗ್ರೆಸ್‌
54. ರಾಯಚೂರು ನಗರ: ಡಾ. ಶಿವರಾಜ್‌ ಪಾಟೀಲ್‌- ಬಿಜೆಪಿ
55. ಮಾನ್ವಿ- ಹಂಪಯ್ಯ ನಾಯ್ಕ್‌- ಕಾಂಗ್ರೆಸ್‌
56. ದೇವದುರ್ಗ: ಕರೆಮ್ಮ ಜಿ. ನಾಯಕ್‌-ಬಿಜೆಪಿ
57. ಲಿಂಗಸುಗೂರು: ಮಾನಪ್ಪ ಡಿ. ವಜ್ಜಲ್‌- ಬಿಜೆಪಿ
58. ಸಿಂಧನೂರು: ಹಂಪನ ಗೌಡ ಬಾದ್ರಾಲಿ- ಕಾಂಗ್ರೆಸ್‌
59. ಮಸ್ಕಿ: ಬಸವಗೌಡ ತುರುವೀಹಾಳ_ ಕಾಂಗ್ರೆಸ್‌

ಕೊಪ್ಪಳ ಜಿಲ್ಲೆ: 5 ಕ್ಷೇತ್ರ, 3 ಕಾಂಗ್ರೆಸ್‌, 1 ಬಿಜೆಪಿ, 1 ಕೆ.ಆರ್‌ಪಿಪಿ

60. ಕುಷ್ಟಗಿ: ದೊಡ್ಡನಗೌಡ ಪಾಟೀಲ್‌- ಬಿಜೆಪಿ
61. ಕನಕಗಿರಿ: ಶಿವರಾಜ ತಂಗಡಗಿ- ಕಾಂಗ್ರೆಸ್‌
62. ಗಂಗಾವತಿ: ಜನಾರ್ದನ ರೆಡ್ಡಿ- ಕೆಆರ್‌ಪಿಪಿ
63. ಯಲಬುರ್ಗಾ: ಬಸವರಾಜ ರಾಯರೆಡ್ಡಿ-ಕಾಂಗ್ರೆಸ್‌
64. ಕೊಪ್ಪಳ: ಕೆ. ರಾಘವೇಂದ್ರ- ಕಾಂಗ್ರೆಸ್‌

ಗದಗ ಜಿಲ್ಲೆ: 4 ಕ್ಷೇತ್ರ; ಬಿಜೆಪಿ -2, ಕಾಂಗ್ರೆಸ್‌-2

65. ಶಿರಹಟ್ಟಿ: ಡಾ. ಚಂದ್ರ ಲಮಾಣಿ- ಬಿಜೆಪಿ
66. ಗದಗ: ಎಚ್‌.ಕೆ. ಪಾಟೀಲ್‌-ಕಾಂಗ್ರೆಸ್‌
67. ರೋಣ: ಜಿಎಸ್‌. ಪಾಟೀಲ್‌- ಕಾಂಗ್ರೆಸ್‌
68. ನರಗುಂದ- ಸಿ.ಸಿ. ಪಾಟೀಲ್‌- ಬಿಜೆಪಿ

ಧಾರವಾಡ ಜಿಲ್ಲೆ: 7 ಕ್ಷೇತ್ರ; 4 ಕಾಂಗ್ರೆಸ್‌, 3 ಬಿಜೆಪಿ

69. ನವಲಗುಂದ- ಕೋನ ರೆಡ್ಡಿ-ಕಾಂಗ್ರೆಸ್‌
70. ಕುಂದಗೋಳ:ಎಂ.ಆರ್‌. ಪಾಟೀಲ್‌- ಬಿಜೆಪಿ
71. ಧಾರವಾಡ- ವಿನಯ ಕುಲಕರ್ಣಿ- ಕಾಂಗ್ರೆಸ್‌
72. ಹುಬ್ಬಳ್ಳಿ- ಧಾರವಾಡ ಪೂರ್ವ: ಪ್ರಸಾದ್‌ ಅಬ್ಬಯ್ಯ- ಕಾಂಗ್ರೆಸ್‌
73. ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌- ಮಹೇಶ್‌ ಟೆಂಗಿನಕಾಯಿ- ಬಿಜೆಪಿ
74. ಹುಬ್ಬಳ್ಳಿ- ಧಾರವಾಡ ಪಶ್ಚಿಮ- ಅರವಿಂದ ಬೆಲ್ಲದ್‌- ಬಿಜೆಪಿ
75. ಕಲಘಟಗಿ- ಸಂತೋಷ್‌ ಲಾಡ್‌- ಕಾಂಗ್ರೆಸ್‌

ಉತ್ತರ ಕನ್ನಡ ಜಿಲ್ಲೆ: 6 ಕ್ಷೇತ್ರಗಳು; 4 ಕಾಂಗ್ರೆಸ್‌, 2 ಬಿಜೆಪಿ

76. ಹಳಿಯಾಳ: ಆರ್‌.ವಿ. ದೇಶಪಾಂಡೆ- ಕಾಂಗ್ರೆಸ್‌
77. ಕಾರವಾರ- ಸತೀಶ್‌ ಸೈಲ್‌- ಕಾಂಗ್ರೆಸ್‌
78, ಕುಮಟಾ: ದಿನಕರ ಶೆಟ್ಟಿ- ಬಿಜೆಪಿ
79. ಭಟ್ಕಳ: ಮಾಂಕಾಳ್‌ ವೈದ್ಯ- ಕಾಂಗ್ರೆಸ್‌
80. ಶಿರಸಿ: ಭೀಮಣ್ಣ ನಾಯಕ್‌- ಕಾಂಗ್ರೆಸ್‌
81. ಯಲ್ಲಾಪುರ: ಶಿವರಾಮ ಹೆಬ್ಬಾರ್‌- ಬಿಜೆಪಿ

ಹಾವೇರಿ ಜಿಲ್ಲೆ: 6 ಕ್ಷೇತ್ರಗಳು; 5 ಕಾಂಗ್ರೆಸ್‌, ಬಿಜೆಪಿ 1

82. ಹಾನಗಲ್‌: ಶ್ರೀನಿವಾಸ್‌ ವಿ. ಮಾನೆ- ಕಾಂಗ್ರೆಸ್‌
83. ಶಿಗ್ಗಾಂವಿ: ಬಸವರಾಜ ಬೊಮ್ಮಾಯಿ- ಬಿಜೆಪಿ
84. ಹಾವೇರಿ: ರುದ್ರಪ್ಪ ಲಮಾಣಿ-ಕಾಂಗ್ರೆಸ್‌
85. ಬ್ಯಾಡಗಿ: ಬಸವರಾಜ ಎನ್‌. ಶಿವಣ್ಣನರ್‌- ಕಾಂಗ್ರೆಸ್‌
86. ಹಿರೇಕೆರೂರ್‌- ಯು.ಬಿ. ಬಣಕಾರ್‌- ಕಾಂಗ್ರೆಸ್‌
87. ರಾಣೆಬೆನ್ನೂರು: ಪ್ರಕಾಶ್‌ ಕೆ. ಕೋಳಿವಾಡ: ಕಾಂಗ್ರೆಸ್‌

ವಿಜಯ ನಗರ ಜಿಲ್ಲೆ: 5 ಕ್ಷೇತ್ರ; 2 ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್‌, 1 ಪಕ್ಷೇತರ

88. ಹಡಗಲಿ: ಕೃಷ್ಣ ನಾಯಕ- ಬಿಜೆಪಿ
89. ಹಗರಿ ಬೊಮ್ಮನಹಳ್ಳಿ: ನೇಮಿರಾಜ ನಾಯಕ್‌- ಜೆಡಿಎಸ್‌
90. ವಿಜಯನಗರ: ಎಚ್‌.ಆರ್‌. ಗವಿಯಪ್ಪ-ಕಾಂಗ್ರೆಸ್‌
96. ಕೂಡ್ಲಿಗಿ: ಡಾ. ಶ್ರೀನಿವಾಸ್‌ ಎನ್‌.ಟಿ- ಕಾಂಗ್ರೆಸ್‌
104. ಹರಪನಹಳ್ಳಿ: ಲತಾ ಮಲ್ಲಿಕಾರ್ಜುನ – ಪಕ್ಷೇತರ

ಬಳ್ಳಾರಿ ಜಿಲ್ಲೆ: 5 ಕ್ಷೇತ್ರ; ಎಲ್ಲವೂ ಕಾಂಗ್ರೆಸ್‌

91. ಕಂಪ್ಲಿ: ಜೆ.ಎನ್‌. ಗಣೇಶ್‌- ಕಾಂಗ್ರೆಸ್‌
92. ಸಿರಗುಪ್ಪ: ಎಂ.ಬಿ. ನಾಗರಾಜ್‌-ಕಾಂಗ್ರೆಸ್‌
93. ಬಳ್ಳಾರಿ: ಬಿ. ನಾಗೇಂದ್ರ- ಕಾಂಗ್ರೆಸ್‌
94. ಬಳ್ಳಾರಿ ನಗರ: ನಾರಾ ಭರತ್‌ ರೆಡ್ಡಿ- ಕಾಂಗ್ರೆಸ್‌
95. ಸಂಡೂರು: ವಿ. ತುಕಾರಾಮ್‌-ಕಾಂಗ್ರೆಸ್‌

ದಾವಣಗೆರೆ ಜಿಲ್ಲೆ: 6 ಕ್ಷೇತ್ರ; 5 ಕಾಂಗ್ರೆಸ್‌, 1 ಬಿಜೆಪಿ

97. ಮೊಳಕಾಲ್ಮುರು: ಎನ್‌.ವೈ. ಗೋಪಾಲಕೃಷ್ಣ- ಕಾಂಗ್ರೆಸ್‌
98.ಚಳ್ಳಕೆರೆ: ಟಿ.ರಘುಮೂರ್ತಿ- ಕಾಂಗ್ರೆಸ್‌
99. ಚಿತ್ರದುರ್ಗ: ಕೆ.ಸಿ. ವೀರೇಂದ್ರ- ಕಾಂಗ್ರೆಸ್‌
100. ಹಿರಿಯೂರು: ಡಿ. ಸುಧಾಕರ್‌- ಕಾಂಗ್ರೆಸ್‌
101. ಹೊಸದುರ್ಗ: ಗೋವಿಂದಪ್ಪ ಬಿ.ಜಿ- ಕಾಂಗ್ರೆಸ್‌
102. ಹೊಳಲ್ಕೆರೆ: ಎಂ.ಚಂದ್ರಪ್ಪ- ಬಿಜೆಪಿ

ದಾವಣಗೆರೆ ಜಿಲ್ಲೆ: 7 ಕ್ಷೇತ್ರ; 6 ಕಾಂಗ್ರೆಸ್‌, 1 ಬಿಜೆಪಿ

103. ಜಗಳೂರು: ದೇವೇಂದ್ರಪ್ಪ-ಕಾಂಗ್ರೆಸ್‌
105. ಹರಿಹರ: ಬಿ.ಪಿ. ಹರೀಶ್‌- ಬಿಜೆಪಿ
106. ದಾವಣಗೆರೆ ಉತ್ತರ: ಎಸ್‌.ಎಸ್‌. ಮಲ್ಲಿಕಾರ್ಜುನ್‌-ಕಾಂಗ್ರೆಸ್‌
10.7: ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ- ಕಾಂಗ್ರೆಸ್‌
108: ಮಾಯಗೊಂಡ: ಕೆ.ಎಸ್‌. ಬಸವರಾಜು- ಕಾಂಗ್ರೆಸ್‌
109. ಚನ್ನಗಿರಿ: ಬಸವರಾಜ್‌ ವಿ.ವಿ. ಶಿವಗಂಗಾ- ಕಾಂಗ್ರೆಸ್‌
110. ಹೊನ್ನಾಳಿ: ಡಿ.ಜಿ ಶಾಂತನಗೌಡರ್‌- ಕಾಂಗ್ರೆಸ್‌

ಶಿವಮೊಗ್ಗ ಜಿಲ್ಲೆ: 7 ಕ್ಷೇತ್ರಗಳು; 3 ಬಿಜೆಪಿ, 3 ಕಾಂಗ್ರೆಸ್‌, 1 ಜೆಡಿಎಸ್‌

111. ಶಿವಮೊಗ್ಗ ಗ್ರಾಮಾಂತರ: ಶಾರದಾ ಪೂರ್ಯ ನಾಯ್ಕ್‌- ಜೆಡಿಎಸ್‌
112. ಭದ್ರಾವತಿ: ಸಂಗಮೇಶ್ವರ್‌ ಬಿ.ಕೆ. -ಕಾಂಗ್ರೆಸ್‌
113: ಶಿವಮೊಗ್ಗ: ಚನ್ನಬಸಪ್ಪ- ಬಿಜೆಪಿ
114. ತೀರ್ಥಹಳ್ಳಿ- ಆರಗ ಜ್ಞಾನೇಂದ್ರ- ಬಿಜೆಪಿ
115. ಶಿಕಾರಿಪುರ: ಬಿವೈ ವಿಜಯೇಂದ್ರ- ಬಿಜೆಪಿ
116. ಸೊರಬ: ಮಧು ಬಂಗಾರಪ್ಪ- ಕಾಂಗ್ರೆಸ್‌
117. ಸಾಗರ: ಗೋಪಾಲಕೃಷ್ಣ ಬೇಳೂರು- ಕಾಂಗ್ರೆಸ್‌

ಉಡುಪಿ ಜಿಲ್ಲೆ: 5 ಕ್ಷೇತ್ರಗಳು; ಎಲ್ಲ ಕಡೆ ಬಿಜೆಪಿ ಗೆಲುವು

118. ಬೈಂದೂರು: ಗುರುರಾಜ್‌ ಗಂಟಿಹೊಳೆ- ಬಿಜೆಪಿ
119. ಕುಂದಾಪುರ: ಕಿರಣ್‌ ಕೊಡ್ಗಿ- ಬಿಜೆಪಿ
120. ಉಡುಪಿ: ಯಶ್‌ಪಾಲ್‌ ಸುವರ್ಣ-ಬಿಜೆಪಿ
121. ಕಾಪು: ಗುರ್ಮೆ ಸುರೇಶ್‌ ಶೆಟ್ಟಿ- ಬಿಜೆಪಿ
122. ಕಾರ್ಕಳ: ವಿ. ಸುನಿಲ್‌ ಕುಮಾರ್‌- ಬಿಜೆಪಿ

ಚಿಕ್ಕಮಗಳೂರು: 5 ಕ್ಷೇತ್ರ: ಎಲ್ಲವೂ ಕಾಂಗ್ರೆಸ್

123. ಶೃಂಗೇರಿ: ರಾಜೇಗೌಡ- ಕಾಂಗ್ರೆಸ್‌
124. ಮೂಡಿಗೆರೆ: ನಯನಾ ಮೋಟಮ್ಮ- ಕಾಂಗ್ರೆಸ್‌
125. ಚಿಕ್ಕಮಗಳೂರು: ಎಚ್‌.ಡಿ. ತಮ್ಮಯ್ಯ- ಕಾಂಗ್ರೆಸ್‌
126. ತರೀಕೆರೆ: ಜಿ.ಎಚ್‌. ಶ್ರೀನಿವಾಸ್‌- ಕಾಂಗ್ರೆಸ್‌
127. ಕಡೂರು: ಆನಂದ್‌ ಕೆ.ಎಸ್‌.- ಕಾಂಗ್ರೆಸ್‌

ತುಮಕೂರು ಜಿಲ್ಲೆ: 11 ಕ್ಷೇತ್ರ, ಕಾಂಗ್ರೆಸ್‌-7, ಜೆಡಿಎಸ್‌-2, ಬಿಜೆಪಿ-2

128. ಚಿಕ್ಕನಾಯಕನಹಳ್ಳಿ: ಸಿ.ವಿ. ಸುರೇಶ್‌ ಬಾಬು- ಜೆಡಿಎಸ್‌
129. ತಿಪಟೂರು: ಕೆ. ಷಡಕ್ಷರಿ- ಕಾಂಗ್ರೆಸ್‌
130. ತುರುವೇಕೆರೆ: ಎಂ.ಟಿ. ಕೃಷ್ಣಪ್ಪ- ಜೆಡಿಎಸ್‌
131. ಕುಣಿಗಲ್‌: ಡಾ. ಎಚ್‌.ಡಿ. ರಂಗನಾಥ್‌- ಕಾಂಗ್ರೆಸ್‌
132. ತುಮಕೂರು: ಜ್ಯೋತಿ ಗಣೇಶ್‌- ಬಿಜೆಪಿ
133. ತುಮಕೂರು ಗ್ರಾಮೀಣ: ಸುರೇಶ್‌ ಗೌಡ ಬಿ- ಬಿಜೆಪಿ
134. ಕೊರಟಗೆರೆ: ಡಾ. ಜಿ. ಪರಮೇಶ್ವರ್‌- ಕಾಂಗ್ರೆಸ್‌
135. ಗುಬ್ಬಿ: ಎಸ್‌.ಆರ್‌. ಶ್ರೀನಿವಾಸ್‌- ಕಾಂಗ್ರೆಸ್‌
136. ಸಿರಾ: ಟಿ.ಬಿ. ಜಯಚಂದ್ರ- ಕಾಂಗ್ರೆಸ್‌
137. ಪಾವಗಡ: ಎಚ್‌.ವಿ. ವೆಂಕಟೇಶ್‌ -ಕಾಂಗ್ರೆಸ್‌
138. ಮಧುಗಿರಿ- ಕೆ.ಎನ್‌. ರಾಜಣ್ಣ- ಕಾಂಗ್ರೆಸ್‌

ಚಿಕ್ಕಬಳ್ಳಾಪುರ: 5 ಕ್ಷೇತ್ರ; ಕಾಂಗ್ರೆಸ್‌-3, ಜೆಡಿಎಸ್‌-1, ಪಕ್ಷೇತರ-1

139. ಗೌರಿಬಿದನೂರು- ಪುಟ್ವಸ್ವಾಮಿ ಗೌಡ- ಪಕ್ಷೇತರ
140. ಬಾಗೇಪಲ್ಲಿ: ಎಸ್‌.ಎನ್‌. ಸುಬ್ಬಾರೆಡ್ಡಿ- ಕಾಂಗ್ರೆಸ್‌
141. ಚಿಕ್ಕಬಳ್ಳಾಪುರ: ಪ್ರದೀಪ್‌ ಈಶ್ವರ್‌ ಅಯ್ಯರ್‌- ಕಾಂಗ್ರೆಸ್‌
142. ಶಿಡ್ಲಘಟ್ಟ- ರವಿಕುಮಾರ್‌-ಜೆಡಿಎಸ್‌
143. ಚಿಂತಾಮಣಿ: ಡಾ.ಎಂ.ಸಿ. ಸುಧಾಕರ್‌- ಕಾಂಗ್ರೆಸ್‌

ಕೋಲಾರ ಜಿಲ್ಲೆ: 6 ಕ್ಷೇತ್ರಗಳು; ಕಾಂಗ್ರೆಸ್‌-4, ಜೆಡಿಎಸ್‌-2

144. ಶ್ರೀನಿವಾಸಪುರ- ವೆಂಕಟಶಿವಾ ರೆಡ್ಡಿ- ಜೆಡಿಎಸ್‌
145. ಮುಳಬಾಗಿಲು- ಸಮೃದ್ಧಿ ಮಂಜುನಾಥ್‌-ಜೆಡಿಎಸ್‌
146. ಕೆಜಿಎಫ್‌- ರೂಪಕಲಾ ಎಂ- ಕಾಂಗ್ರೆಸ್‌
147. ಬಂಗಾರಪೇಟೆ: ಎಸ್‌.ಎನ್‌. ನಾರಾಯಣ ಸ್ವಾಮಿ- ಕಾಂಗ್ರೆಸ್‌
148. ಕೋಲಾರ: ಕೊತ್ತೂರು ಮಂಜುನಾಥ್‌- ಕಾಂಗ್ರೆಸ್‌
149. ಮಾಲೂರು: ಕೆ.ವೈ. ನಂಜೇಗೌಡ- ಕಾಂಗ್ರೆಸ್‌

ಗ್ರೇಟರ್‌ ಬೆಂಗಳೂರು: 32 ಕ್ಷೇತ್ರ: ಬಿಜೆಪಿ-17, ಕಾಂಗ್ರೆಸ್-‌ 15

150. ಯಲಹಂಕ: ಎಸ್‌.ಆರ್‌. ವಿಶ್ವನಾಥ್‌- ಬಿಜೆಪಿ
151. ಕೆ.ಆರ್‌. ಪುರ: ಬೈರತಿ ಬಸವರಾಜ್‌- ಬಿಜೆಪಿ
152. ಬ್ಯಾಟರಾಯನಪುರ: ಕೃಷ್ಣ ಭೈರೇಗೌಡ- ಕಾಂಗ್ರೆಸ್‌
153. ಯಶ್ವಂತಪುರ: ಎಸ್‌.ಟಿ. ಸೋಮಶೇಖರ್‌- ಬಿಜೆಪಿ
154. ರಾಜರಾಜೇಶ್ವರಿ ನಗರ: ಮುನಿರತ್ನ- ಬಿಜೆಪಿ
155. ದಾಸರಹಳ್ಳಿ: ಎಸ್‌. ಮುನಿರಾಜು- ಬಿಜೆಪಿ
156. ಮಹಾಲಕ್ಷ್ಮಿ ಲೇಔಟ್‌- ಎಚ್‌. ಗೋಪಾಲಯ್ಯ- ಬಿಜೆಪಿ
157.. ಮಲ್ಲೇಶ್ವರಂ: ಡಾ.ಸಿ.ಎನ್‌ ಅಶ್ವಥ್‌ ನಾರಾಯಣ- ಬಿಜೆಪಿ
158. ಹೆಬ್ಬಾಳ: ಸುರೇಶ್‌ ಬಿ.ಎಸ್‌.- ಕಾಂಗ್ರೆಸ್‌
159. ಪುಲಿಕೇಶಿ ನಗರ: ಎ.ಸಿ. ಶ್ರೀನಿವಾಸ್‌- ಕಾಂಗ್ರೆಸ್‌
160. ಸರ್ವಜ್ಞ ನಗರ: ಕೆ.ಜೆ. ಜಾರ್ಜ್-ಕಾಂಗ್ರೆಸ್‌
161. ಸಿ.ವಿ. ರಾಮನ್‌ ನಗರ: ಆರ್‌. ರಘು- ಬಿಜೆಪಿ
162. ಶಿವಾಜಿ ನಗರ: ರಿಜ್ವಾನ್ ಅರ್ಷದ್‌- ಕಾಂಗ್ರೆಸ್‌
163. ಶಾಂತಿನಗರ: ಎನ್‌.ಎ ಹ್ಯಾರಿಸ್‌- ಕಾಂಗ್ರೆಸ್‌
164. ಗಾಂಧಿ ನಗರ: ದಿನೇಶ್‌ ಗುಂಡೂರಾವ್‌-ಕಾಂಗ್ರೆಸ್‌
165. ರಾಜಾಜಿ ನಗರ: ಸುರೇಶ್‌ ಕುಮಾರ್‌- ಬಿಜೆಪಿ
166. ಗೋವಿಂದರಾಜ ನಗರ: ಪ್ರಿಯಾಕೃಷ್ಣ- ಕಾಂಗ್ರೆಸ್‌
167. ವಿಜಯನಗರ: ಎಂ. ಕೃಷ್ಣಪ್ಪ- ಕಾಂಗ್ರೆಸ್‌
168. ಚಾಮರಾಜಪೇಟೆ: ಜಮೀರ್‌ ಅಹ್ಮದ್‌ ಖಾನ್- ಕಾಂಗ್ರೆಸ್‌
169. ಚಿಕ್ಕಪೇಟೆ: ಉದಯ ಗರುಡಾಚಾರ್‌- ಬಿಜೆಪಿ
170. ಬಸವನಗುಡಿ: ರವಿ ಸುಬ್ರಹ್ಮಣ್ಯ೦- ಬಿಜೆಪಿ
171. ಪದ್ಮನಾಭ ನಗರ: ಆರ್‌. ಅಶೋಕ್‌- ಬಿಜೆಪಿ
172. ಬಿಟಿಎಂ ಲೇಔಟ್‌: ರಾಮಲಿಂಗಾರೆಡ್ಡಿ- ಕಾಂಗ್ರೆಸ್‌
173. ಜಯನಗರ: ‌ ಎಂ.ಕೆ. ರಾಮಮೂರ್ತಿ-ಬಿಜೆಪಿ
174. ಮಹದೇವಪುರ: ಮಂಜುಳಾ ಅರವಿಂದ ಲಿಂಬಾವಳಿ- ಬಿಜೆಪಿ
175. ಬೊಮ್ನಳ್ಳಿ: ಸತೀಶ್‌ ರೆಡ್ಡಿ- ಬಿಜೆಪಿ
176. ಬೆಂಗಳೂರು ದಕ್ಷಿಣ: ಎಂ.ಕೃಷ್ಣಪ್ಪ- ಬಿಜೆಪಿ
177. ಆನೇಕಲ್‌: ಬಿ. ಶಿವಣ್ಣ- ಕಾಂಗ್ರೆಸ್‌
178. ಹೊಸಕೋಟೆ: ಶರತ್‌ ಬಚ್ಚೇಗೌಡ- ಕಾಂಗ್ರೆಸ್‌
179. ದೇವನಹಳ್ಳಿ: ಕೆ.ಎಚ್‌. ಮುನಿಯಪ್ಪ- ಕಾಂಗ್ರೆಸ್‌
180. ದೊಡ್ಡಬಳ್ಳಾಪುರ: ಧೀರಜ್‌ ಮುನಿರಾಜು- ಬಿಜೆಪಿ
181. ನೆಲಮಂಗಲ: ಶ್ರೀನಿವಾಸಯ್ಯ- ಕಾಂಗ್ರೆಸ್‌

ರಾಮ ನಗರ ಜಿಲ್ಲೆ: 4 ಕ್ಷೇತ್ರಗಳು; ಕಾಂಗ್ರೆಸ್‌ 3, ಜೆಡಿಎಸ್‌ 1

182. ಮಾಗಡಿ: ಎಚ್‌.ಸಿ. ಬಾಲಕೃಷ್ಣ- ಕಾಂಗ್ರೆಸ್‌
183. ರಾಮನಗರ: ಇಕ್ಬಾಲ್‌ ಹುಸೇನ್‌ ಎಚ್‌.ಎ- ಕಾಂಗ್ರೆಸ್‌
184. ಕನಕಪುರ: ಡಿ.ಕೆ. ಶಿವಕುಮಾರ್‌- ಕಾಂಗ್ರೆಸ್‌
185. ಚನ್ನಪಟ್ಟಣ ಎಚ್.ಡಿ. ಕುಮಾರಸ್ವಾಮಿ- ಜೆಡಿಎಸ್‌

ಮಂಡ್ಯ ಜಿಲ್ಲೆ: 7 ಕ್ಷೇತ್ರಗಳು; 5 ಕಾಂಗ್ರೆಸ್‌, 1 ಜೆಡಿಎಸ್‌, 1 ಪಕ್ಷೇತರ

186. ಮಳವಳ್ಳಿ: ಪಿ.ಎಂ. ನರೇಂದ್ರ ಸ್ವಾಮಿ- ಕಾಂಗ್ರೆಸ್‌
187. ಮದ್ದೂರು: ಕೆ.ಎಂ ಉದಯ್‌- ಕಾಂಗ್ರೆಸ್‌
188. ಮೇಲುಕೋಟೆ: ದರ್ಶನ್‌ ಪುಟ್ಟಣಯ್ಯ- ಸರ್ವೋದಯ-ಪಕ್ಷೇತರ
189. ಮಂಡ್ಯ: ಪಿ. ರವಿ ಕುಮಾರ್‌- ಕಾಂಗ್ರೆಸ್‌
190. ಶ್ರೀರಂಗಪಟ್ಟಣ: ರಮೇಶ್‌ ಬಂಡಿಸಿದ್ದೇಗೌಡ- ಕಾಂಗ್ರೆಸ್‌
191. ನಾಗಮಂಗಲ: ಚೆಲುವರಾಯಸ್ವಾಮಿ- ಕಾಂಗ್ರೆಸ್‌
192. ಕೆ.ಆರ್‌. ಪೇಟೆ: ಎಚ್‌.ಡಿ. ಮಂಜುನಾಥ್‌- ಜೆಡಿಎಸ್‌

ಹಾಸನ ಜಿಲ್ಲೆ: 7 ಕ್ಷೇತ್ರಗಳು; ಜೆಡಿಎಸ್‌-5, ಬಿಜೆಪಿ-2, ಕಾಂಗ್ರೆಸ್‌-1

193. ಶ್ರವಣಬೆಳಗೊಳ: ಸಿ.ಎನ್‌. ಬಾಲಕೃಷ್ಣ- ಜೆಡಿಎಸ್‌
194. ಅರಸೀಕೆರೆ: ಕೆ.ಎಂ. ಶಿವಲಿಂಗೇಗೌಡ- ಕಾಂಗ್ರೆಸ್‌
195. ಬೇಲೂರು: ಹುಲ್ಲಳ್ಳಿ ಕೆ. ಸುರೇಶ್‌- ಬಿಜೆಪಿ
196. ಹಾಸನ: ಸ್ವರೂಪ್‌ ಪ್ರಕಾಶ್‌- ಜೆಡಿಎಸ್‌
197. ಹೊಳೆನರಸೀಪುರ: ಎಚ್.ಡಿ. ರೇವಣ್ಣ- ಜೆಡಿಎಸ್‌
198. ಅರಕಲಗೂಡು: ಎ. ಮಂಜು- ಜೆಡಿಎಸ್‌
199. ಸಕಲೇಶಪುರ- ಸಿಮೆಂಟ್‌ ಮಂಜು- ಬಿಜೆಪಿ

ದಕ್ಷಿಣ ಕನ್ನಡ ಜಿಲ್ಲೆ: 8 ಕ್ಷೇತ್ರಗಳು; ಬಿಜೆಪಿ-6, ಕಾಂಗ್ರೆಸ್‌ 2

200. ಬೆಳ್ತಂಗಡಿ: ಹರೀಶ್‌ ಪೂಂಜಾ- ಬಿಜೆಪಿ
201. ಮೂಡುಬಿದಿರೆ: ಉಮಾನಾಥ ಕೋಟ್ಯಾನ್‌- ಬಿಜೆಪಿ
202. ಮಂಗಳೂರು ನಗರ ಉತ್ತರ- ವೈ ಭರತ್‌ ಶೆಟ್ಟಿ- ಬಿಜೆಪಿ
203. ಮಂಗಳೂರು ನಗರ ದಕ್ಷಿಣ- ವೇದವ್ಯಾಸ ಕಾಮತ್‌- ಬಿಜೆಪಿ
204. ಮಂಗಳೂರು: ಯು.ಟಿ. ಖಾದರ್‌- ಕಾಂಗ್ರೆಸ್‌
205. ಬಂಟ್ವಾಳ: ರಾಜೇಶ್‌ ನಾಯ್ಕ್‌- ಬಿಜೆಪಿ
206. ಪುತ್ತೂರು: ಅಶೋಕ್‌ ಕುಮಾರ್‌ ರೈ- ಕಾಂಗ್ರೆಸ್‌
207. ಸುಳ್ಯ: ಭಾಗೀರಥಿ ಮುರುಳ್ಯ- ಬಿಜೆಪಿ

ಮಡಿಕೇರಿ ಜಿಲ್ಲೆ: 2 ಕ್ಷೇತ್ರಗಳು: ಎರಡೂ ಕಾಂಗ್ರೆಸ್

208. ಮಡಿಕೇರಿ: ಡಾ. ಮಂಥರ್‌ ಗೌಡ- ಕಾಂಗ್ರೆಸ್‌
209. ವಿರಾಜಪೇಟೆ: ಎ.ಎಸ್‌. ಪೊನ್ನಣ್ಣ- ಕಾಂಗ್ರೆಸ್

‌‌ಮೈಸೂರು ಜಿಲ್ಲೆ: 11 ಕ್ಷೇತ್ರಗಳು: 8 ಕಾಂಗ್ರೆಸ್‌, 2 ಜೆಡಿಎಸ್‌, 1 ಬಿಜೆಪಿ

210. ಪಿರಿಯಾಪಟ್ಟಣ: ಕೆ.ವೆಂಕಟೇಶ್‌ -ಕಾಂಗ್ರೆಸ್‌
211. ಕೆ.ಆರ್‌. ನಗರ: ಡಿ. ರವಿಶಂಕರ್‌- ಕಾಂಗ್ರೆಸ್‌
212. ಹುಣಸೂರು: ಹರೀಶ್‌ ಗೌಡ- ಜೆಡಿಎಸ್‌
213. ಎಚ್‌.ಡಿ. ಕೋಟೆ: ಅನಿಲ್‌ ಕುಮಾರ್‌- ಕಾಂಗ್ರೆಸ್‌
214. ನಂಜನಗೂಡು: ದರ್ಶನ್‌ ಧ್ರುವನಾರಾಯಣ – ಕಾಂಗ್ರೆಸ್‌
215. ಚಾಮುಂಡೇಶ್ವರಿ: ಜಿ.ಟಿ. ದೇವೇಗೌಡ- ಜೆಡಿಎಸ್‌
216. ಕೃಷ್ಣರಾಜ: ಟಿ.ಎಸ್‌. ಶ್ರೀವತ್ಸ- ಬಿಜೆಪಿ
217. ಚಾಮರಾಜ: ಕೆ. ಹರೀಶ್‌ ಗೌಡ- ಕಾಂಗ್ರೆಸ್‌
218. ನರಸಿಂಹ ರಾಜ: ತನ್ವೀರ್‌ ಸೇಠ್‌- ಕಾಂಗ್ರೆಸ್‌
219. ವರುಣ: ಸಿದ್ದರಾಮಯ್ಯ- ಕಾಂಗ್ರೆಸ್
220. ಟಿ. ನರಸೀಪುರ: ಎಚ್.ಸಿ. ಮಹದೇವಪ್ಪ- ಕಾಂಗ್ರೆಸ್‌

‌ಚಾಮರಾಜನಗರ ಜಿಲ್ಲೆ: 5 ಸ್ಥಾನ: ಕಾಂಗ್ರೆಸ್‌-3, ಜೆಡಿಎಸ್‌-1

221. ಹನೂರು: ಮಂಜುನಾಥ್‌- ಜೆಡಿಎಸ್‌
222. ಕೊಳ್ಳೇಗಾಲ: ಎ.ಆರ್‌. ಕೃಷ್ಣಮೂರ್ತಿ- ಕಾಂಗ್ರೆಸ್‌
223. ಚಾಮರಾಜನಗರ: ಸಿ. ಪುಟ್ಟರಂಗ ಶೆಟ್ಟಿ-ಕಾಂಗ್ರೆಸ್‌
224. ಗುಂಡ್ಲುಪೇಟೆ: ಎಚ್‌.ಎಂ. ಗಣೇಶ್‌ ಪ್ರಸಾದ್‌- ಕಾಂಗ್ರೆಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಭವಿಷ್ಯ

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ ಏಕಾದಶಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಭಾನುವಾರವು ಮೇಷ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಹಾಗೂ ಮೀನ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರು ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ ಸುದ್ದಿ ಸಿಗಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಮಿಥುನ ರಾಶಿಯವರು ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುವುದು ಬೇಡ. ಆರ್ಥಿಕವಾಗಿ ಸಹಾಯ ಮಾಡಿ ನೀವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕುವುದು ಬೇಡ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮ. ಉದ್ಯೋಗಿಗಳಿಗೆ ಶುಭಫಲ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (05-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ.
ತಿಥಿ: ದ್ವಾದಶಿ 17:41 ವಾರ: ಭಾನುವಾರ
ನಕ್ಷತ್ರ: ಉತ್ತರ ಭಾದ್ರಪದ 19:56 ಯೋಗ: ವೈಧೃತಿ 07:35
ಕರಣ: ಕೌಲವ 07:10 ಅಮೃತಕಾಲ: ಮಧ್ಯಾಹ್ನ 02:47 ರಿಂದ 04:15

ಸೂರ್ಯೋದಯ : 05:58   ಸೂರ್ಯಾಸ್ತ : 06:35

ರಾಹುಕಾಲ : ಸಾಯಂಕಾಲ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ:ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ ಸುದ್ದಿ ಸಿಗಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಸಂಗಾತಿಯ ಮಧುರ ಮಾತುಗಳು ಹಿತವೇನಿಸುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಷಭ:ಕುಟುಂಬದ ಆಪ್ತರಿಂದ ಆರ್ಥಿಕ ಸಹಾಯದ ಬೇಡಿಕೆ ಇರಲಿದೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಮನೋಬಲ ಹೆಚ್ಚಿಸಿಕೊಳ್ಳುವುದು ಅವಶ್ಯಕ. ಧೈರ್ಯ ಕಾಡಬಹುದು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುವುದು ಬೇಡ. ಆರ್ಥಿಕವಾಗಿ ಸಹಾಯ ಮಾಡಿ ನೀವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕುವುದು ಬೇಡ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕುಟುಂಬದ ಸದಸ್ಯರಿಂದ ಆರ್ಥಿಕ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಶುಭಫಲ. ಹಣದ ಹರಿವು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆಪ್ತ ವ್ಯಕ್ತಿಗಳೊಂದಿಗೆ ಮಾತುಕತೆ ಇರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಸಿಂಹ:ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಕ್ಷೇತ್ರ ದರ್ಶನ ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ದೀರ್ಘಕಾಲದ ಕೆಲಸ ಕಾರ್ಯಗಳು ಇಂದು ಯಶಸ್ಸನ್ನು ತಂದು ಕೊಡಲಿದೆ. ಆದಾಯದ ಮೂಲ ಹೆಚ್ಚಾಗಲಿದೆ. ಆಪ್ತರೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ, ಕುಟುಂಬದ ವಾತಾವರಣ ಹದಗೆಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆತ್ಮವಿಶ್ವಾಸದಿಂದ ಕೆಲಸಕಾರ್ಯಗಳಲ್ಲಿ ಪ್ರಗತಿ ಇರಲಿದೆ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಹಣಕಾಸು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಕಾಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆರೋಗ್ಯದ ಕುರಿತು ಕಾಳಜಿ ಇರಲಿ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ವಿಜಯವನ್ನು ತಂದುಕೊಡುವ ಸಾಧ್ಯತೆ ಇದೆ. ಹಣಕಾಸು, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಯಶಸ್ಸು. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಹಾದಿ ಅತ್ಯವಶ್ಯಕವಿದೆ. ಹಣಕಾಸು ವಿಷಯದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಮಿಶ್ರಫಲ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಕರ: ಬುದ್ಧಿವಂತಿಕೆಯಿಂದ ಕೆಲಸಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗುವುದು. ಕೋಪವು ಅಪಾಯ ತರುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕ ಲಾಭ ಇರಲಿದೆ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ದುಂದುವೆಚ್ಚವನ್ನು ತಪ್ಪಿಸಿ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ ವ್ಯರ್ಥ ಪ್ರಯತ್ನ ಮಾಡುವುದು ಬೇಡ. ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 9

Horoscope Today

ಮೀನ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಸಂಗಾತಿ ಇಂದು ನಿಮ್ಮೊಂದಿಗೆ ಮುಖ್ಯ ವಿಷಯದ ಕುರಿತು ಚರ್ಚಿಸಬಹುದು. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಕರ್ನಾಟಕ

HD Revanna: ಛೇ, ಎಂಥ ಸ್ಥಿತಿ ಬಂತಪ್ಪ; ಎಸ್‌ಐಟಿ ಸೆಲ್‌ನಲ್ಲಿ ಗಳಗಳನೆ ಅತ್ತ ಎಚ್‌.ಡಿ.ರೇವಣ್ಣ

HD Revanna: ಎಚ್‌.ಡಿ.ರೇವಣ್ಣ ಸಂಬಂಧಿಯಾದ ಸತೀಶ್‌ ಬಾಬು ಎಂಬಾತನು ಲೈಂಗಿಕ ದೌರ್ಜನ್ಯಕೀಡಾದ ಸಂತ್ರಸ್ತೆಯನ್ನು ಅಪಹರಿಸಿ, ಹುಣಸೂರಿನ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಇರಿಸಿದ್ದು, ಮಹಿಳೆಯನ್ನು ಎಸ್‌ಐಟಿ ಅಧಿಕಾರಿಗಳು ರಕ್ಷಿಸಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಎಸ್‌ಐಟಿ ಅಧಿಕಾರಿಗಳು ಎಚ್‌.ಡಿ.ರೇವಣ್ಣ ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಮನೆಯಿಂದಲೇ ವಶಪಡಿಸಿಕೊಂಡಿಸಿಕೊಂಡಿದ್ದಾರೆ. ರೇವಣ್ಣ ಅವರನ್ನು ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

HD Revanna
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ (A 1) ಆಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಅವರನ್ನು ವಶಕ್ಕೆ ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ (Bowring Hospital) ವೈದ್ಯಕೀಯ ಪರೀಕ್ಷೆ (Medical Test) ಮಾಡಿಸಿದ್ದಾರೆ. ಇದಾದ ಬಳಿಕ ಎಚ್‌.ಡಿ.ರೇವಣ್ಣ ಅವರನ್ನು ಅಧಿಕಾರಿಗಳು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದು, ಇಡೀ ರಾತ್ರಿ ಎಸ್‌ಐಟಿ ಸೆಲ್‌ನಲ್ಲಿಯೇ ಮಾಜಿ ಸಚಿವ ಕಳೆಯಲಿದ್ದಾರೆ. ಇನ್ನು, ಎಸ್‌ಐಟಿ ಸೆಲ್‌ನಲ್ಲಿ ಎಚ್‌.ಡಿ.ರೇವಣ್ಣ ಅವರು ಗಳಗಳನೆ ಅತ್ತಿದ್ದಾರೆ ಎಂದು ತಿಳಿದುಬಂದಿದೆ.

ಎಚ್‌.ಡಿ.ದೇವೇಗೌಡರ ಮನೆಯಲ್ಲಿ ಎಚ್‌.ಡಿ. ರೇವಣ್ಣ ಅವರನ್ನು ವಶಪಡಿಸಿಕೊಂಡ ಎಸ್‌ಐಟಿ ಅಧಿಕಾರಿಗಳು ಮೊದಲು ಅವರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಹೋದರು. ಇದಾದ ಬಳಿಕ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಮತ್ತೆ ಸಿಐಡಿ ಕಚೇರಿಗೆ ಕರೆತಂದು, ಎಸ್‌ಐಟಿ ಸೆಲ್‌ನಲ್ಲಿ ಇರಿಸಿದರು. ಎಚ್‌.ಡಿ.ರೇವಣ್ಣ ಅವರು ಮಲಗಲು ಹಾಸಿಗೆ ಹಾಗೂ ಬೆಡ್‌ಶೀಟ್‌ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಎಚ್‌.ಡಿ.ರೇವಣ್ಣ ಅವರನ್ನು ವಿಚಾರಣೆ ಮಾಡಲಿರುವ ಅಧಿಕಾರಿಗಳು, ಬಳಿಕ ವಿಶ್ರಾಂತಿಗೆ ಅವಕಾಶ ನೀಡಲಿದ್ದಾರೆ. ಸೆಲ್‌ನಲ್ಲಿ ರೇವಣ್ಣ ಅವರಿಗೆ ಒಂದು ಸಾಮಾನ್ಯ ಬೆಡ್‌ ಹಾಗೂ ಕುರ್ಚಿ ನೀಡಲಾಗಿದೆ. ಇದೆಲ್ಲವನ್ನೂ ಕಂಡ ರೇವಣ್ಣ ಅವರು ಕಣ್ಣೀರು ಹಾಕಿದ್ದಾರೆ. ಮಗ ವಿದೇಶಕ್ಕೆ ಪರಾರಿಯಾಗಿದ್ದಾನೆ. ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದೆ. ಈಗ ನಾನು ಸೆಲ್‌ನಲ್ಲಿ ಇರಬೇಕಾಯಿತಲ್ಲ ಎಂಬುದನ್ನು ನೆನೆದು ರೇವಣ್ಣ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಬೆಳಗ್ಗೆ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ. ಕೋರಮಂಗಲದಲ್ಲಿರುವ ನ್ಯಾಯಾಧೀಶರ ಎದುರು ಹಾಜರುಪಡಿಸಲಿರುವ ಅಧಿಕಾರಿಗಳು, ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ನ್ಯಾಯಾಧೀಶರು ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ರೇವಣ್ಣ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಎಸ್‌ಐಟಿ ಅಧಿಕಾರಿಗಳಿಗೆ ಭಾನುವಾರ ಸಂಜೆವರೆಗೆ ಸಮಯವಿದೆ.

ನಮ್ಮನ್ನೆಲ್ಲ ಸಾಯಿಸ್ತಾರೆ ಎಂದ ಮಹಿಳೆ

ಮೈಸೂರಿನ ತೋಟದ ಮನೆಯಿಂದ ರಕ್ಷಿಸಲ್ಪಟ್ಟ ಸಂತ್ರಸ್ತ ಮಹಿಳೆಯು ಎಸ್‌ಐಟಿ ಅಧಿಕಾರಿಗಳ ಕಸ್ಟಡಿಯಲ್ಲಿದ್ದರೂ ರೇವಣ್ಣ ಕುಟುಂಬದ ಭಯದಲ್ಲಿದ್ದಾರೆ. “ನಮ್ಮನ್ನೆಲ್ಲ ಅವರು ಸಾಯಿಸಿಬಿಡ್ತಾರೆ. ನನಗೆ ಭಯವಾಗುತ್ತಿದೆ” ಎಂದಷ್ಟೇ ಮಹಿಳೆಯು ಹೇಳುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಭದ್ರತೆ ಕುರಿತು ಎಷ್ಟು ಹೇಳಿದರೂ ಮಹಿಳೆಯು ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ಎಚ್‌.ಡಿ.ರೇವಣ್ಣ ಕುಟುಂಬಸ್ಥರು ಏನಾದರೂ ಮಾಡಿಬಿಡುತ್ತಾರೆ ಎಂಬ ಭಯ ಕಾಡುತ್ತಿದೆ. ಇದರ ಬೆನ್ನಲ್ಲೇ, ಕೆ.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ ಅಪಹರಣದ ಕುರಿತು ಕೇಸ್‌ ದಾಖಲಿಸಿದ ಪುತ್ರನಿಗೂ ಜೀವ ಭಯ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಮಹತ್ತರ ಮುನ್ನಡೆ ಸಾಧಿಸಲು ಎಸ್‌ಐಟಿ ಅಧಿಕಾರಿಗಳು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಸೂಕ್ತ ಭದ್ರತೆ ಒದಗಿಸುವ ಕುರಿತು ಭರವಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!

Continue Reading

ಪ್ರಮುಖ ಸುದ್ದಿ

IPL 2024 : ಟೀಕೆಗಳಿಗೆ ಪ್ರತಿಕ್ರಿಯಿಸುವುದು ಯಾಕೆ? ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗವಾಸ್ಕರ್​

IPL 2024: ಪಂದ್ಯದ ನಂತರ ಟೀಕಾಕಾರರ ವಿರುದ್ಧ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಂತೆಯೇ ಶನಿವಾರ ನಡೆದ ಆರ್​ಸಿಬಿ ಮತ್ತು ಜಿಟಿ ಪಂದ್ಯಕ್ಕೆ ಮುಂಚಿತವಾಗಿ ಕೊಹ್ಲಿಯ ಪ್ರತಿಕ್ರಿಯೆಗಳ ಬಗ್ಗೆ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದರು. ಕೊಹ್ಲಿ 118 ಸ್ಟ್ರೈಕ್ ರೇಟ್ ನಲ್ಲಿ ಆಡಿ ನಂತರ 14 ಅಥವಾ 15 ನೇ ಓವರ್​ಗಳಲ್ಲಿ ನಿಧಾನಗೊಳಿಸುವುದನ್ನು ವೀಕ್ಷಕ ವಿವರಣೆಗಾರರು ಪ್ರಶ್ನಿಸಿದ್ದಾರೆ ಅಷ್ಟೆ. ಅದರಲ್ಲಿ ಏನು ತಪ್ಪು ಎಂದು ಎಂದು ಭಾರತೀಯ ದಂತಕಥೆ ಪ್ರಶ್ನಸಿದ್ದಾರೆ.

VISTARANEWS.COM


on

Virat kohli
Koo

ನವದೆಹಲಿ: ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡಿರುವುದಕ್ಕೆ ತಿರುಗೇಟು ಕೊಟ್ಟಿರುವ ಕೊಹ್ಲಿಯ ಬಗ್ಗೆ ಕ್ರಿಕೆಟ್ ದಂತಕತೆ ಸುನಿಲ್​ ಗವಾಸ್ಕರ್​ ಮತ್ತೆ ಕೋಪ ವ್ಯಕ್ತಪಡಿಸಿದ್ದಾರೆ. ಐಪಿಎಲ್​ (IPL 2024) ಪಂದ್ಯಗಳ ಸಮಯದಲ್ಲಿ ವೀಕ್ಷಕ ವಿವರಣೆಗಾರರು ತಮ್ಮ ಮುಂದೆ ನಡೆಯುತ್ತಿರುವುದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ಹಾಗೆಂದು ಅವರಿಗೆ ಯಾವುದೇ ದುರುದ್ದೇಶ ಇರುವುದಿಲ್ಲ ಎಂಬುದಾಗಿ ಗವಾಸ್ಕರ್ ಹೇಳಿದ್ದಾರೆ. ಕೊಹ್ಲಿಯ ಸ್ಟ್ರೈಕ್ ರೇಟ್ ಇತ್ತೀಚೆಗೆ ಚರ್ಚೆಯ ವಿಷಯವಾಗಿತ್ತು. ಪವರ್​ಪ್ಲೇ ಓವರ್ಗಳ ನಂತರ ಅವರು ನಿಧಾನವಾಗಿ ಅಡುತ್ತಾರೆ ಎಂದು ಅನೇಕರು ಟೀಕಿಸಿದ್ದಾರೆ. ಏಪ್ರಿಲ್ 28 ರಂದು ಜಿಟಿ ವಿರುದ್ಧ ಕೊಹ್ಲಿ 44 ಎಸೆತಗಳಲ್ಲಿ 70 ರನ್ ಗಳಿಸಿದ್ದು ಅದರಲ್ಲೊಂದು .

ಪಂದ್ಯದ ನಂತರ ಟೀಕಾಕಾರರ ವಿರುದ್ಧ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಂತೆಯೇ ಶನಿವಾರ ನಡೆದ ಆರ್​ಸಿಬಿ ಮತ್ತು ಜಿಟಿ ಪಂದ್ಯಕ್ಕೆ ಮುಂಚಿತವಾಗಿ ಕೊಹ್ಲಿಯ ಪ್ರತಿಕ್ರಿಯೆಗಳ ಬಗ್ಗೆ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದರು. ಕೊಹ್ಲಿ 118 ಸ್ಟ್ರೈಕ್ ರೇಟ್ ನಲ್ಲಿ ಆಡಿ ನಂತರ 14 ಅಥವಾ 15 ನೇ ಓವರ್​ಗಳಲ್ಲಿ ನಿಧಾನಗೊಳಿಸುವುದನ್ನು ವೀಕ್ಷಕ ವಿವರಣೆಗಾರರು ಪ್ರಶ್ನಿಸಿದ್ದಾರೆ ಅಷ್ಟೆ. ಅದರಲ್ಲಿ ಏನು ತಪ್ಪು ಎಂದು ಎಂದು ಭಾರತೀಯ ದಂತಕಥೆ ಪ್ರಶ್ನಸಿದ್ದಾರೆ.

ಸ್ಟ್ರೈಕ್ ರೇಟ್ 118 ಇದ್ದಾಗ ಮಾತ್ರ ವೀಕ್ಷಕ ವಿವರಣೆಗಾರರು ಪ್ರಶ್ನಿಸಿದ್ದರು. ನನಗೆ ಹೆಚ್ಚು ಖಚಿತವಿಲ್ಲ. ನಾನು ಹೆಚ್ಚು ಪಂದ್ಯಗಳನ್ನು ನೋಡುವುದಿಲ್ಲ. ಆದ್ದರಿಂದ ಇತರ ವೀಕ್ಷಕ ವಿವರಣೆಗಾರರು ಬೇರೆ ರೀತಿಯಲ್ಲಿ ಏನು ಹೇಳಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ನೀವು 118 ಸ್ಟ್ರೈಕ್ ಹೊಂದಿದ್ದರೆ ಮತ್ತು ನಂತರ 118 ಸ್ಟ್ರೈಕ್ ರೇಟ್ನೊಂದಿಗೆ ಔಟ್ ಆಗಿದ್ದರೆ ಸರಿಯಲ್ಲ. ನನ್ನ ಪ್ರಕಾರ ನಿಮ್ಮದು ಚಪ್ಪಾಳೆಗಾಗಿ ಪ್ರಯತ್ನ ಎಂದು ಗವಾಸ್ಕರ್​ ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಅತಿ ವೇಗದ ಬೌಲರ್​ ಮಯಾಂಕ್ ಐಪಿಎಲ್​ನಿಂದ ಔಟ್​​

ಹೊರಗಿನ ಮಾತುಗಳಿಗೆ ನೀವು ಏಕೆ ಪ್ರತಿಕ್ರಿಯಿಸುತ್ತಿದ್ದೀರಿ?

ಗವಾಸ್ಕರ್ ಅವರು ಕೊಹ್ಲಿಯನ್ನು ಸತತವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೊರಗಿನ ಗದ್ದಲ ಹಾಗೂ ವಿಶ್ಲೇಷಣೆಗೆ ಗಮನ ಹರಿಸುವುದನ್ನೂ ಪ್ರಶ್ನಿಸಿದ್ದಾರೆ. ವೀಕ್ಷಕ ವಿವರಣೆಗಾರರಿಗೆ ಯಾರ ವಿರುದ್ಧವೂ ಯಾವುದೇ ಕಾರ್ಯಸೂಚಿಗಳಿಲ್ಲ ಮತ್ತು ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಭಾರತೀಯ ಕ್ರಿಕೆಟ್ ದಂತಕಥೆ ಹೇಳಿದರು.

“ನೀವು ಯಾವುದೇ ಹೊರಗಿನ ಮಾತುಗಳಿಗೆ ಏಕೆ ಉತ್ತರಿಸುತ್ತಿದ್ದೀರಿ. ನಾವೆಲ್ಲರೂ ಸ್ವಲ್ಪ ಕ್ರಿಕೆಟ್ ಆಡಿದ್ದೇವೆ. ಸಾಕಷ್ಟು ಕ್ರಿಕೆಟ್ ಅಲ್ಲ. ಆದರೆ ನಮಗೆ ಯಾವುದೇ ಕಾರ್ಯಸೂಚಿಗಳಿಲ್ಲ. ನಾವು ಏನನ್ನು ನೋಡುತ್ತೇವೆಯೋ ಅದರ ಬಗ್ಗೆ ಮಾತನಾಡುತ್ತೇವೆ. ನಮಗೆ ಯಾವುದೇ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು ಇರಬೇಕಾಗಿಲ್ಲ. ನಮಗೆ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು ಇದ್ದರೂ ಉಪಯೋಗವಿಲ್ಲ ಎಂದು ಗವಾಸ್ಕರ್ ಹೇಳಿದರು.

Continue Reading

ಕ್ರೀಡೆ

IPL 2024 : ಅತಿ ವೇಗದ ಬೌಲರ್​ ಮಯಾಂಕ್ ಐಪಿಎಲ್​ನಿಂದ ಔಟ್​​

IPL 2024: ಎಂಐ ವಿರುದ್ಧದ ಪಂದ್ಯದ ವೇಳೆ ಮಯಾಂಕ್ ತಂಡಕ್ಕೆ ಮರಳಿದ್ದರು. ಆದರೆ ಗಾಯ ಮತ್ತೆ ಉಲ್ಬಣಗೊಂಡ ಕಾರಣ 3.1 ಓವರ್​ಗಳ ಎಸೆದ ನಂತರ ಮೈದಾನದಿಂದ ಹೊರಗುಳಿಯಬೇಕಾಯಿತು. ಯುವ ಆಟಗಾರನ ಅಭಿಯಾನವು ಮುಗಿದಿದೆ ಎಂದು ಲ್ಯಾಂಗರ್ ಈಗ ಬಹಿರಂಗಪಡಿಸಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಲಕ್ನೊ ಸೂಪರ್​ ಜೈಂಟ್ಸ್​ ವೇಗದ ಬೌಲರ್​​ ಮಯಾಂಕ್ ಯಾದವ್ ಗಾಯದ ಸಮಸ್ಯೆ ಹೆಚ್ಚಾಗಿದ್ದು ಐಪಿಎಲ್​ನ (IPL 2024) ಉಳಿದ ಪಂದ್ಯಗಳಿಂದ ಹೊರಕ್ಕೆ ಉಳಿಯುವಂತಾಗಿದೆ. ಹಿಂದಿನ ಪಂದ್ಯದಲ್ಲಿ ಅರ್ಧದಲ್ಲೇ ಮೈದಾನದಿಂದ ಹೊರಕ್ಕೆ ಹೋಗಿದ್ದ ಅವರು ಐಪಿಎಲ್ 2024 ಋತುವಿನ ಉಳಿದ ಭಾಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ಎಲ್ಎಸ್​ಜಿ ಕೋಚ್ ಜಸ್ಟಿನ್ ಲ್ಯಾಂಗರ್ ಖಚಿತಪಡಿಸಿದ್ದಾರೆ. ಐಪಿಎಲ್ 2024 ರಲ್ಲಿ ಮಯಾಂಕ್ 2 ಪಂದ್ಯಗಳಲ್ಲಿ 6 ವಿಕೆಟ್ ಪಡೆಯುವ ಮೂಲಕ ತಮ್ಮ ಜೀವನಕ್ಕೆ ಅದ್ಭುತ ಆರಂಭ ನೀಡಿದ್ದರು. ನಂತರ ದೆಹಲಿ ವೇಗಿ ಗಾಯಗೊಂಡು 5 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಎಂಐ ವಿರುದ್ಧದ ಪಂದ್ಯದ ವೇಳೆ ಮಯಾಂಕ್ ತಂಡಕ್ಕೆ ಮರಳಿದ್ದರು. ಆದರೆ ಗಾಯ ಮತ್ತೆ ಉಲ್ಬಣಗೊಂಡ ಕಾರಣ 3.1 ಓವರ್​ಗಳ ಎಸೆದ ನಂತರ ಮೈದಾನದಿಂದ ಹೊರಗುಳಿಯಬೇಕಾಯಿತು. ಯುವ ಆಟಗಾರನ ಅಭಿಯಾನವು ಮುಗಿದಿದೆ ಎಂದು ಲ್ಯಾಂಗರ್ ಈಗ ಬಹಿರಂಗಪಡಿಸಿದ್ದಾರೆ. ಮಯಾಂಕ್ ಅವರಿಗೆ ಸ್ಕ್ಯಾನ್ ಮಾಡಲಾಯಿತು ಮತ್ತು ಅವರು ಮೊದಲ ಗಾಯ ಮಾಡಿಕೊಂಡ ಅದೇ ಪ್ರದೇಶದಲ್ಲಿ ಅವರಿಗೆ ಸಣ್ಣ ಗಾಯವಿದೆ ಎಂದು ಎಲ್ಎಸ್​ಜಿ ಕೋಚ್ ಹೇಳಿದರು.

ಇಲ್ಲ, ಅವರು ಪ್ಲೇ-ಆಫ್​ನಲ್ಲಿ ಆಡಬಹುದೆಂದು ನಮ್ಮ ಆಶಾವಾದ ಇಟ್ಟುಕೊಂಡಿದ್ದೆವು. ಆದರೆ ನಾನು ವಾಸ್ತವವಾದಿಯೂ ಹೌದು. ಪಂದ್ಯಾವಳಿಯ ಕೊನೆ ಹಂತಕ್ಕೆ ಬರುವುದು ಅವರಿಗೆ ಕಷ್ಟಕರವಾಗಿರುತ್ತದೆ ಎಂದು ಹೇಳಿದರು.

“ಅವರು (ಮಯಾಂಕ್) ಸ್ಕ್ಯಾನ್ ಮಾಡಿಸಿಕೊಂಡಿದ್ದಾರೆ. ಅವರ ಕೊನೆಯ ಗಾಯ (ಗಾಯ) ಇದ್ದ ಪ್ರದೇಶಕ್ಕೆ ಹೋಲುವ ಪ್ರದೇಶದಲ್ಲಿ ಅವರಿಗೆ ಸಣ್ಣ ಹರಿತ ಕಂಡು ಬಂದಿದೆ. ಇದು ತುಂಬಾ ದುರದೃಷ್ಟಕರ. ಅವರು ಆಟಕ್ಕೆ ಮರಳಿದಾಗ ಅವರು ಬೀರಿದ ಪರಿಣಾಮವನ್ನು ನಾವು ನೋಡಿದ್ದೇವೆ, “ಎಂದು ಲ್ಯಾಂಗರ್ ಹೇಳಿದರು.

ಪಂದ್ಯದ ನಂತರ ಮಯಾಂಕ್ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಮಾತನಾಡಿದ್ದಾರೆ. ಅವರು ವೇಗದ ಬೌಲರ್ ಆಗಲು ಹೊರಟರೆ ಅಂತಹ ಗಾಯಗಳನ್ನು ಎದುರಿಸಬೇಕಾಗುತ್ತದೆ ಹೇಳಿದರು ಎಂದು ಲ್ಯಾಂಗರ್ ಹೇಳಿದರು.

“ವೇಗದ ಬೌಲರ್ಗಳ ಬಗ್ಗೆ ಯಾವಾಗಲೂ ಸಾಕಷ್ಟು ಚರ್ಚೆ ಇರುತ್ತದೆ. ಪಂದ್ಯದ ನಂತರ ಅವರು [ಜಸ್ಪ್ರೀತ್] ಬುಮ್ರಾ ಅವರೊಂದಿಗೆ ಮಾತನಾಡಿದ್ದಾರೆ ಎಂದು ನನಗೆ ತಿಳಿದಿದೆ. ವೇಗದ ಬೌಲರ್ ಆಗಲು ಹೊರಟರೆ ಆಗುವ ಗಾಯವನ್ನು ವಿವರಿಸಿದ್ದಾರೆ. ನನ್ನ ಅನುಭವದಲ್ಲಿ, ಪ್ರತಿಯೊಬ್ಬ ಯುವ ವೇಗದ ಬೌಲರ್, ಬಹುಶಃ ಅವರು 25 ಅಥವಾ 26 ವರ್ಷ ವಯಸ್ಸಿನವರೆಗೆ ವಿಭಿನ್ನ ಗಾಯಗಳನ್ನು ಅನುಭವಿಸಲಿದ್ದಾರೆ. ಇದು ಅತ್ಯಂತ ದುರದೃಷ್ಟಕರ. ಆದಾಗ್ಯೂ ಅವರು ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ, “ಎಂದು ಲ್ಯಾಂಗರ್ ಹೇಳಿದರು.

ಮಯಾಂಕ್ ಅವರ ವಿಚಾರದಲ್ಲಿ ಎಲ್ಎಸ್ಜಿ ತಂಡದ ಗಾಯ ನಿರ್ವಹಣೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಲ್ಯಾಂಗರ್ ಇದಕ್ಕೆ ಪ್ರತಿಕ್ರಿಯಿಸಿದ್ದು, ಅವರ ಪುನಶ್ಚೇತನವು ಉತ್ತಮವಾಗಿ ಸಾಗಿದೆ ಮತ್ತು ವೇಗಿ ನೋವು ಮುಕ್ತರಾಗಿದ್ದಾರೆ ಎಂದು ಹೇಳಿದರು.

ಅವರ ಪುನಶ್ಚೇತನ ಅತ್ಯುತ್ತಮವಾಗಿತ್ತು. ಅವರು [ಎಂಐ ವಿರುದ್ಧ] ಆಟಕ್ಕೆ ಪ್ರವೇಶಿಸಿದರು. ಪಂದ್ಯಕ್ಕೆ ಮೊದಲು ಒಂದೆರಡು ಸಮಸ್ಯೆಗಳನ್ನು ಹೊಂದಿದ್ದರು. ಸಂಪೂರ್ಣವಾಗಿ ನೋವು ಮುಕ್ತರಾಗಿದ್ದರು. ಆದ್ದರಿಂದ, ಇದು ಅವರಿಗೆ ತುಂಬಾ ಬೇಸರದ ವಿಯ. ಅವರು (ಪಂದ್ಯಾವಳಿಯ ಉಳಿದ ಭಾಗ) ಆಡದಿರುವುದು ಎಲ್ಎಸ್ಜಿಗೆ ನಿರಾಶಾದಾಯಕ ಎಂದು ಹೇಳಿದ್ದಾರೆ.

Continue Reading
Advertisement
World Laughter Day
ಆರೋಗ್ಯ60 mins ago

World Laughter Day 2024: ಇಂದು ವಿಶ್ವ ನಗುವಿನ ದಿನ; ನಗುನಗುತ ಬಾಳೋಣ

Dina Bhavishya
ಭವಿಷ್ಯ60 mins ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

HD Revanna
ಕರ್ನಾಟಕ6 hours ago

HD Revanna: ಛೇ, ಎಂಥ ಸ್ಥಿತಿ ಬಂತಪ್ಪ; ಎಸ್‌ಐಟಿ ಸೆಲ್‌ನಲ್ಲಿ ಗಳಗಳನೆ ಅತ್ತ ಎಚ್‌.ಡಿ.ರೇವಣ್ಣ

Road Accident
ಕರ್ನಾಟಕ6 hours ago

Road Accident: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವು

Virat kohli
ಪ್ರಮುಖ ಸುದ್ದಿ6 hours ago

IPL 2024 : ಟೀಕೆಗಳಿಗೆ ಪ್ರತಿಕ್ರಿಯಿಸುವುದು ಯಾಕೆ? ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗವಾಸ್ಕರ್​

IPL 2024
ಕ್ರೀಡೆ7 hours ago

IPL 2024 : ಅತಿ ವೇಗದ ಬೌಲರ್​ ಮಯಾಂಕ್ ಐಪಿಎಲ್​ನಿಂದ ಔಟ್​​

HD Revanna
ಕರ್ನಾಟಕ7 hours ago

HD Revanna: ಎಸ್‌ಐಟಿ ಸೆಲ್‌ನಲ್ಲೇ ‘ಮೊದಲ ರಾತ್ರಿ’ ಕಳೆಯಲಿರುವ ರೇವಣ್ಣ; ಬೆಳಗ್ಗೆ ಜಡ್ಜ್‌ ಎದುರು ಹಾಜರ್!

IPL 2024
ಕ್ರೀಡೆ7 hours ago

IPL 2024 : ಅಭಿಮಾನಿಗಳಿಗೆ ಸತಾಯಿಸಿ ಖುಷಿ ಕೊಟ್ಟ ಆರ್​ಸಿಬಿ, ಗುಜರಾತ್​ ವಿರುದ್ಧ 4 ವಿಕೆಟ್​ ಜಯ

Dingaleshwar Swamiji
ಕರ್ನಾಟಕ7 hours ago

Dingaleshwar Swamiji: ದ್ವೇಷ ಭಾಷಣ; ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್

Virat kohli
ಕ್ರೀಡೆ7 hours ago

Virat kohli : ಸಿಕ್ಸರ್ ಹೊಡೆದು ಕಿಂಗ್​ ಥರ ಪೋಸ್​​ ಕೊಟ್ಟ ಕೊಹ್ಲಿ, ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ60 mins ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌