Women's Day 2023 : ಮನುಕುಲದ ಸೃಷ್ಟಿ ನಿಂತಿರುವುದೇ ಮುಟ್ಟಿನ ಮೇಲೆ! - Vistara News

ಮಹಿಳೆ

Women’s Day 2023 : ಮನುಕುಲದ ಸೃಷ್ಟಿ ನಿಂತಿರುವುದೇ ಮುಟ್ಟಿನ ಮೇಲೆ!

ಹೆಣ್ಣುಮಕ್ಕಳು ವಿಶ್ರಾಂತಿ ಪಡೆದು ಕೆಲಸಕ್ಕೆ ಮತ್ತೆ ಅದೇ ಉತ್ಸುಕತೆಯಿಂದ ಹೋಗುವುದರಿಂದ ಸರಕಾರದ ಬೊಕ್ಕಸಕ್ಕೆ ಏನೂ ತೊಂದರೆ ಆಗಲಿಕ್ಕಿಲ್ಲ.

VISTARANEWS.COM


on

The creation of mankind is based on menstruation!
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಲ್ಲಮ್ಮ ಗಾಣಿಗಿ, ಮಿಸೆಸ್ ಇಂಡಿಯಾ ಕಾರ್ಪೋರೆಟ್

ಎಷ್ಟೋ ಶತಮಾನಗಳ ಹಿಂದೆ ವೈಜ್ಞಾನಿಕವಾಗಿ ಇರುವಂತಹ ಮನೆಯಲ್ಲಿ ಆಚರಿಸುವ ಮುಟ್ಟಿನ ರಜೆ ಈಗ ಒಂದು ಕೇವಲ ಪದ್ಧತಿ ಆಗಿ ಅವರವರ ಅನುಕೂಲಕ್ಕೆ ತಕ್ಕಂತೆ ಮಾರ್ಪಡಾಗಿರುವದು ಬಹಳ ವಿಷಾದದ ಸಂಗತಿ ( ಕೆಲವು ಮನೆಯಲ್ಲಿ ಅಡುಗೆ ಮನೆವರೆಗೂ ಇರೋ ಎಲ್ಲ ಕೆಲಸ ಮಾಡಬಹುದು. ಅಡುಗೆ ಬಿಟ್ಟು, ಕೆಲ ಮನೆಯಲ್ಲಿ ದೇವರ ಪೂಜೆ ಬಿಟ್ಟು ಎಲ್ಲ ಮಾಡಬಹುದು. ಹೊರಗಿನ ರೂಮ್ ನಲ್ಲೇ ಕೂತುಕೊಂಡು ಎಲ್ಲ ಕೆಲಸ ಮಾಡಬಹುದು, ಹೀಗೆ ಹಲವು, ನಮ್ಮ ಅನುಕೂಲಕ್ಕೆ ತಕ್ಕಂತೆ) ಹೆಣ್ಣುಮಕ್ಕಳಿಗೆ ಸಿಗಬೇಕಾದಂತ ಮುಟ್ಟಿನ ವಿಶ್ರಾಂತಿಯ ಬಗ್ಗೆ ವೈಜ್ಞಾನಿಕವಾಗಿ ಯೋಚನೆ ಮಾಡದೇ ಇರೋದ್ರಿಂದ ಇದು ಪದ್ಧತಿ ಆಗಿ, ಎಲ್ಲ ಹೆಂಗಸರಿಗೆ ಯಾಕಾದರು ಈ ಮುಟ್ಟು ಬರುತ್ತೋ ಅನ್ನೋ ರೀತಿ ಅಸಹ್ಯ ಆಗುತ್ತಿದೆ.

ಮುಟ್ಟು ಎಲ್ಲ ಹೆಣ್ಣುಮಕ್ಕಳಿಗೂ ನೈಸರ್ಗಿಕವಾಗಿ ಬರುವಂತಹ ಒಂದು ಕ್ರಿಯೆ. ಆದರೆ ಮುಟ್ಟಿಗೆ ಎಲ್ಲ ಹೆಂಗಳೆಯರ ದೇಹ ಒಂದೇ ತರ ಪ್ರತಿಕ್ರಿಯಸುವುದಿಲ್ಲ. ಒಬ್ಬಬ್ಬೊರು ಒಂದೊಂದು ತರಹ ಯಾತನೆ ಅನುಭವಿಸುತ್ತಾರೆ. ಸುಮಾರು ಶೇ. 70-80 ಮಹಿಳೆಯರು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು, ಮೈ ಕೈ ನೋವಿಂದ, ಮೂಡ್ ಚೇಂಜ್ ಮತ್ತು ಅತಿಯಾದ ರಕ್ತ ಸ್ರಾವದಿಂದ ಬಳಲುತ್ತಾರೆ .ಎಷ್ಟೋ ಚಿಕ್ಕ ಚಿಕ್ಕ ಆಫೀಸ್ ಗಳಲ್ಲಿ ಹೆಣ್ಣುಮಕ್ಕಳಿಗೆ ಸಪರೇಟ್ ಆದ ಶೌಚಾಲಯ ಇರುದಿಲ್ಲ. ಇದ್ದರೂ ಬಟ್ಟೆ ಚೇಂಜ್ ಮಾಡೋದಕ್ಕೆ ಆಗುವದಿಲ್ಲ. ಈ ಎಲ್ಲ ಸಮಸ್ಯೆಯಿಂದ ಮುಟ್ಟಿನ ರಜೆ ಹೆಣ್ಣುಮಕ್ಕಳಿಗೆ ಒಂದು ದೊಡ್ಡ ವರವಾಗಿ ಕಾಣುತ್ತದೆ. ಈ ಸಮಯದಲ್ಲಿ ಏನೂ ತೊಂದರೆ ಇರದವರು ತಮ್ಮ ಸ್ವ ಇಚ್ಛೆಯಿಂದ ಕೆಲಸಕ್ಕೆ ಹೋಗೋದರಿಂದ ಇನ್ನೂ ಒಳ್ಳೆಯದು.

ಹೆಣ್ಣುಮಕ್ಕಳು ವಿಶ್ರಾಂತಿ ಪಡೆದು ಕೆಲಸಕ್ಕೆ ಮತ್ತೆ ಅದೇ ಉತ್ಸುಕತೆಯಿಂದ ಬಂದು ಕೆಲಸ ಮುಗಿಸುವದರಿಂದ ಸರಕಾರದ ಬೊಕ್ಕಸಕ್ಕೆ ಏನೂ ತೊಂದರೆ ಆಗಲಿಕ್ಕಿಲ್ಲ ಅನ್ನುವುದು ನನ್ನ ಅನಿಸಿಕೆ. ನಮ್ಮ ಸ್ತ್ರೀ ಶಕ್ತಿಗೆ ಇಷ್ಟು ಮಾಡಲಿಲ್ಲ ಅಂದರೆ ಹೇಗೆ?

ಇಡೀ ಜಗತ್ತಿನ ಮನುಕುಲದ ಸೃಷ್ಟಿ ನಿಂತಿರುವುದು ಮುಟ್ಟಿನ ಮೇಲೆ. ಆದ್ದರಿಂದ ಮುಟ್ಟಿಗೆ ಅದರದೇ ಆದ ಮಹತ್ವ ಕೊಟ್ಟು ಮುಟ್ಟನ್ನು ಗುಟ್ಟಾಗಿ ಇಡದೆ ಅದನ್ನು ಸರಿಯಾಗಿ ತಿಳಿದುಕೊಂಡು ಹೆಣ್ಣು ಮಕ್ಕಳಿಗೆ ನೈತಿಕವಾಗಿ ಬೆಂಬಲಿಸೋಣ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಹಿಳೆ

Mother’s Day: ಆಕೆಗಾಗಿ ಕೊಂಚ ಸಮಯ ನೀಡೋಣ; ತಾಯಂದಿರ ದಿನ ಅರ್ಥಪೂರ್ಣವಾಗಿ ಆಚರಿಸೋಣ

ಎಲ್ಲರ ಬದುಕಿನಲ್ಲಿ ತಾಯಿಯಾಗಿ ಒಬ್ಬಳು ಇದ್ದೇ ಇರುತ್ತಾಳೆ. ಅದು ಹೆಂಡತಿಯಾಗಿರಬಹುದು, ಸಹೋದರಿಯಾಗಿರಬಹುದು ಅಥವಾ ಜನ್ಮವಿತ್ತ, ಸಾಕಿ ಸಲಹಿದ ತಾಯಿಯಾಗಿರಬಹುದು. ಇಲ್ಲಿ ಅವರ ಸ್ಥಾನಕ್ಕಿಂತ ಅವರು ಮಾಡುವ ಕರ್ತವ್ಯಕ್ಕೆ ಗೌರವ ಕೊಡಲೇಬೇಕು. ಇದಕ್ಕಾಗಿ ವರ್ಷದಲ್ಲೊಮ್ಮೆ ತಾಯಂದಿರ ದಿನವನ್ನು (Mother’s Day) ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ಇಂದು ಈ ದಿನ ವಿಶೇಷವಾಗಿದೆ.

VISTARANEWS.COM


on

By

Mother's Day
Koo

ತಾಳ್ಮೆ, ಸಹನೆ, ಶಾಂತಿ, ಪರಸ್ಪರ ಹೊಂದಾಣಿಕೆ ಇವನ್ನೆಲ್ಲ ಹೆಣ್ಣು (girl) ಮಕ್ಕಳಿಗೆ (child) ಯಾರೂ ಕಲಿಸಬೇಕಾಗಿಲ್ಲ. ಅದು ಅವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಎಂತಹ ಕಠಿಣ ಪರಿಸ್ಥಿತಿಯಾಗಿರಲಿ ತಾಯಿ (Mother’s Day) ಅದನ್ನು ಎದುರಿಸಲು ಕ್ಷಣ ಮಾತ್ರದಲ್ಲಿ ಸಜ್ಜಾಗುತ್ತಾಳೆ. ತಮ್ಮ ಮಕ್ಕಳ ವಿಚಾರಕ್ಕೆ ಬಂದರೆ ಆಕೆ ಯಾವುದೇ ತ್ಯಾಗಕ್ಕೂ ಸಜ್ಜಾಗುತ್ತಾಳೆ, ತನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ಸರಿ ಮಕ್ಕಳನ್ನು ಎಲ್ಲ ರೀತಿಯ ಸಂಕಷ್ಟದಿಂದ ಪಾರು ಮಾಡುತ್ತಾಳೆ.

ಎಲ್ಲರಿಗೂ ತಮ್ಮ ತಾಯಿಯ ಬಗ್ಗೆ ಹೇಳಬೇಕಾದ ಸಾವಿರಾರು ವಿಷಯಗಳಿರುತ್ತವೆ. ಇದಕ್ಕೆ ತಾಯಂದಿರ ದಿನಕ್ಕಿಂತ ಉತ್ತಮ ದಿನ ಬೇರೆ ಯಾವುದಿದೆ. ಹೆಣ್ಣು ತಾಯಿಯಾಗಿ, ಅಕ್ಕನಾಗಿ, ಅಜ್ಜಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ ತನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸುತ್ತಾಳೆ. ಹೀಗಾಗಿಯೇ ತಾಯಂದಿರ ದಿನದ ಈ ಶುಭ ಸಂದರ್ಭದಲ್ಲಿ ಆಕೆಗೊಂದು ಶುಭ ಸಂದೇಶ ಕಳುಹಿಸಲು ಮರೆಯದಿರಿ.

ಸಿಹಿ ಶುಭಾಶಯಗಳೊಂದಿಗೆ ಆಕೆಯನ್ನು ಗೌರವಿಸುವ ಜೊತೆಗೆ ಸುಂದರವಾದ ಹೂಗೊಂಚಲು, ಅರ್ಥಪೂರ್ಣವಾದ ಉಡುಗೊರೆ ಅಥವಾ ಅವಳೊಂದಿಗೆ ಸಮಯ ಕಳೆಯುವ ಮೂಲಕ ಮೆಚ್ಚುಗೆಯನ್ನು ತೋರಿಸಿ. ಇದು ಯಾವಾಗಲೂ ಆಕೆಯನ್ನು ಸಂತೋಷದಲ್ಲಿ ಇರುವಂತೆ ಮಾಡುತ್ತದೆ ಮತ್ತು ಸದಾ ಆಕೆಯ ನೆನಪಿನಲ್ಲಿ ಇರುವಂತೆ ಮಾಡುತ್ತದೆ.

ತಾಯಂದಿರ ದಿನದ ವಿಶೇಷವಾಗಿ ತಾಯಿಗೆ ವಿಶೇಷ ಅಡುಗೆ ಮಾಡಿ ಬಡಿಸಿ, ಇಲ್ಲವಾದರೆ ಅವರ ನೆಚ್ಚಿನ ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡಿಸಿ. ಇದರಿಂದ ಸಾಕಷ್ಟು ಸಮಯವನ್ನು ಆಕೆಗೆ ನೀವು ಕೊಟ್ಟಂತಾಗುತ್ತದೆ.


ತಾಯಂದಿರ ದಿನ ಯಾವಾಗ?

ತಾಯಂದಿರ ದಿನವನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ಆಚರಿಸಲಾಗುತ್ತದೆ. ರಜಾ ದಿನದಲ್ಲಿ ಇದು ಬರುವುದರಿಂದ ಈ ದಿನವನ್ನು ಹೆಚ್ಚು ವಿಶೇಷವಾಗಿ ಆಚರಿಸಬಹುದಾಗಿದೆ.

ತಾಯಿಯಂದಿರ ದಿನವು ಈ ಬಾರಿ ಮೇ 12ರಂದು ಭಾನುವಾರ ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಈ ದಿನವನ್ನು ಬೇರೆಬೇರೆ ದಿನಗಳಂದು ಆಚರಿಸಲಾಗುತ್ತಿದೆ.

ಆಸ್ಟ್ರೇಲಿಯಾ, ಕೆನಡಾ, ಡೆನ್ಮಾರ್ಕ್, ಇಟಲಿ, ಫಿನ್‌ಲ್ಯಾಂಡ್, ಸ್ವಿಟ್ಜರ್ಲೆಂಡ್ ಮತ್ತು ಟರ್ಕಿ ಯಲ್ಲಿ ಈ ಬಾರಿ ಮೇ 12ರಂದು ಅಮ್ಮಂದಿರನ್ನು ಗೌರವಿಸಲಾಗುತ್ತಿದೆ. ಯುಕೆಯಲ್ಲಿ ಮಾರ್ಚ್‌ನಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಮೆಕ್ಸಿಕೋ ಈ ವರ್ಷ ಮೇ 10 ರಂದು ತಾಯಂದಿರ ದಿನವನ್ನು ಆಚರಿಸಲಾಗಿದೆ. ಥೈಲ್ಯಾಂಡ್ ಆಗಸ್ಟ್ 12 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಯಾಕೆಂದರೆ ಈ ದಿನ ಇಲ್ಲಿ ರಾಣಿ ಸಿರಿಕಿಟ್ ಅವರ ಜನ್ಮದಿನವಾಗಿದೆ.

ಯಾಕೆ ಆಚರಣೆ ?

ತಾಯಂದಿರ ದಿನದ ಆಚರಣೆಯು 1800 ರ ದಶಕದ ಅಂತ್ಯದಲ್ಲಿ ಪ್ರಾರಂಭಿಸಲಾಯಿತು. ಹಲವಾರು ವಿಭಿನ್ನ ಘಟನೆಗಳ ಸಂಯೋಜನೆಯಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಕಾರ್ಯಕರ್ತೆ ಮತ್ತು ಸಮುದಾಯ ಸಂಘಟಕಿ ಅನ್ನಾ ಮಾರಿಯಾ ರೀವ್ಸ್ ಜಾರ್ವಿಸ್ ಅವರು ಮೊದಲ ಬಾರಿಗೆ ತಾಯಂದಿರ ದಿನದ ಪ್ರಸ್ತಾಪವನ್ನು ಮುಂದಿಟ್ಟರು.

ತಾಯಂದಿರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಹಾಯ ಮಾಡುವ ಮಹಿಳಾ ಕ್ಲಬ್‌ಗಳ ಸ್ಥಾಪಕರಾದ ಜಾರ್ವಿಸ್ ಅವರು 1868 ರಲ್ಲಿ ತಾಯಂದಿರ ಸ್ನೇಹ ದಿನವನ್ನು ಆಯೋಜಿಸಿದರು, ಇದು ಅಂತರ್ಯುದ್ಧದ ಅನಂತರ ಒಕ್ಕೂಟ ಮತ್ತು ಒಕ್ಕೂಟದ ಸೈನಿಕರ ತಾಯಂದಿರನ್ನು ಸಾಮರಸ್ಯದಿಂದ ಒಟ್ಟುಗೂಡಿಸುವ ಉದ್ದೇಶವನ್ನು ಹೊಂದಿತ್ತು.

ಬಳಿಕ ಎರಡು ವರ್ಷಗಳ ಅನಂತರ 1870 ರಲ್ಲಿ ಜೂಲಿಯಾ ವಾರ್ಡ್ ಹೋವ್ ಅವರು ವಿಶ್ವ ಶಾಂತಿಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ತಾಯಿಯ ದಿನದ ಘೋಷಣೆಯನ್ನು ಮಾಡಿ ಜೂನ್‌ನಲ್ಲಿ ತಾಯಿಯ ದಿನವನ್ನು ಆಚರಿಸಲು ಒತ್ತಾಯಿಸಿದರು. ಆ ಸಮಯದಲ್ಲಿಯೇ ತಾಯಂದಿರನ್ನು ಗೌರವಿಸಲು ಕೆಲವು ರೀತಿಯ ಕಲ್ಪನೆಯನ್ನು ಅವರು ಮಂಡಿಸಿದ್ದರು. ಆದರೆ ಅದು ಸುಮಾರು 35 ವರ್ಷಗಳವರೆಗೆ ಸಾಧ್ಯವಾಗಲಿಲ್ಲ.

1905 ರಲ್ಲಿ ಜಾರ್ವಿಸ್ ಅವರ ಮರಣದ ಅನಂತರ ಅವರ ಮಗಳು ಅನ್ನಾ ಪತ್ರ ಬರೆಯುವ ಅಭಿಯಾನವನ್ನು ಪ್ರಾರಂಭಿಸಿದರು. ತನ್ನ ತಾಯಿಯ ಕೆಲಸವನ್ನು ಮಾತ್ರವಲ್ಲದೆ ಎಲ್ಲಾ ತಾಯಂದಿರಿಗೆ ಮತ್ತು ಅವರ ಮಕ್ಕಳ ಪರವಾಗಿ ಅವರು ಮಾಡುವ ತ್ಯಾಗವನ್ನು ಗೌರವಿಸಲು ತಾಯಂದಿರ ದಿನಾಚರಣೆಗೆ ಕರೆ ನೀಡಿದರು.

ತಾಯಂದಿರ ದಣಿವರಿಯದ ಕೆಲಸವನ್ನು ಗೌರವಿಸುವ ಸಲುವಾಗಿ ಅಧ್ಯಕ್ಷ ವುಡ್ರೊ ವಿಲ್ಸನ್ ಅವರು 1914 ರಲ್ಲಿ ಘೋಷಣೆಗೆ ಸಹಿ ಹಾಕಿ ಅಧಿಕೃತವಾಗಿ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವೆಂದು ಘೋಷಿಸಿದರು.

ಇದನ್ನೂ ಓದಿ: Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

ಪ್ರಾರಂಭದಲ್ಲಿ ತಾಯಂದಿರ ದಿನಚರಣೆಯ ಉದ್ದೇಶವೇ ಬೇರೆಯಾಗಿತ್ತು. ಆದರೆ ಇವತ್ತು ವ್ಯಾಪಾರೀಕರಣವಾಗಿದೆ. ಹೀಗಾಗಿ ರಜಾ ದಿನದಂದೇ ಎಲ್ಲರೂ ತಮ್ಮ ತಾಯೊಂದಿಗೆ ಸ್ವಲ್ಪ ಸಮಯ ಕಳೆಯಲಿ ಎನ್ನುವ ಉದ್ದೇಶದಿಂದ ಎಲ್ಲರೂ ಮೇ ತಿಂಗಳ ಎರಡನೇ ಭಾನುವಾರ ಈ ದಿನಾಚರಣೆಗೆ ಇಷ್ಟಪಡುತ್ತಾರೆ. ಹೀಗಾಗಿ ಇಂದು ವಿಶ್ವದಾದ್ಯಂತ ತಾಯಂದಿರ ದಿನ ಆಚರಿಸಲಾಗುತ್ತಿದೆ.

ನಿತ್ಯದ ಕೆಲಸದ ಜಂಜಾಟದಲ್ಲಿರುವ ಎಲ್ಲರಿಗೂ ಇವತ್ತು ತಾಯಂದಿರ ದಿನ ಆಚರಿಸುವುದು ಅನಿವಾರ್ಯವಾಗಿರುವುದರಿಂದ ಈ ದಿನ ಅಮೂಲ್ಯವಾದ ದಿನವಾಗಿ ಉಳಿದಿದೆ. ಹೀಗಾಗಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಎಲ್ಲ ತಾಯಂದಿರಿಗೂ ಶುಭ ಹಾರೈಸೋಣ.

Continue Reading

ಆರೋಗ್ಯ

National Safe Motherhood Day: 35 ವರ್ಷ ನಂತರದ ತಾಯ್ತನದಲ್ಲಿ ಯಾವೆಲ್ಲ ಎಚ್ಚರಿಕೆ ಅಗತ್ಯ?

ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಅಗತ್ಯವಾಗಿ ಬೇಕಾದ ಆರೈಕೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸುರಕ್ಷಿತ ತಾಯ್ತನದ ದಿನವನ್ನು ಏಪ್ರಿಲ್‌ ತಿಂಗಳ 11ನೇ ತಾರೀಕು (National Safe Motherhood Day) ಆಚರಿಸಲಾಗುತ್ತದೆ. ಈ‌ ಹಿನ್ನೆಲೆಯಲ್ಲಿ ಸುರಕ್ಷಿತ ತಾಯ್ತನ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

National Safe Motherhood Day
Koo

ತಾಯ್ತನವೆಂಬುದು ಬದುಕಿನ ಆಹ್ಲಾದಕರ ಅನುಭವಗಳಲ್ಲಿ ಒಂದು. ಬರಲಿರುವ ಪುಟ್ಟ ಜೀವವನ್ನೇ ನೆನಸುತ್ತಾ ನವಮಾಸಗಳನ್ನು ಕಳೆಯುವುದು ಎಷ್ಟು ಆನಂದದಾಯಕವೋ ಕೆಲವೊಮ್ಮೆ ಅಷ್ಟೇ ತ್ರಾಸದಾಯಕವೂ ಆಗಬಹುದು. ಈ ದಿನಗಳಲ್ಲಿ ಮತ್ತು ಹೆರಿಗೆಯ ನಂತರ ಅಗತ್ಯವಾದ ಆರೈಕೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸುರಕ್ಷಿತ ತಾಯ್ತನದ ದಿನವನ್ನು ಏಪ್ರಿಲ್‌ ತಿಂಗಳ 11ನೇ ತಾರೀಕು (National Safe Motherhood Day)ಆಚರಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ 30 ಅಥವಾ 35 ವರ್ಷಗಳ ನಂತರ ತಾಯ್ತನಕ್ಕೆ ಸಿದ್ಧವಾಗುವ ಮಹಿಳೆಯರ ಸಂಖ್ಯೆ ತೀವ್ರವಾಗಿ ಹೆಚ್ಚಿದೆ. ಕುಟುಂಬವನ್ನು ಬೆಳೆಸುವ ಯೋಜನೆಗಳು ಆಯಾ ದಂಪತಿಗಳ ವೈಯಕ್ತಿಕ ವಿಚಾರ ಹೌದಾದರೂ, ವಯಸ್ಸು ಹೆಚ್ಚಿದಂತೆ ಭಾವೀ ತಾಯಿಯ ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚುವುದನ್ನು ವೈದ್ಯರೂ ಒಪ್ಪುತ್ತಾರೆ. ಕೆಲವೊಮ್ಮೆ ಫಲವಂತಿಕೆಯೂ ಕುಸಿದಿರುತ್ತದೆ. ಹಾಗಾಗಿ ಇಪ್ಪತ್ತರ ಹರೆಯದಲ್ಲೇ ʻಎಗ್‌ ಫ್ರೀಜಿಂಗ್ʼ ತಂತ್ರಜ್ಞಾನದ ಮೊರೆ ಹೋಗುವವರೂ ಇದ್ದಾರೆ. ಈ ಎಲ್ಲವುಗಳ ಹಿನ್ನೆಲೆಯಲ್ಲಿ, 35ರ ನಂತರ ಮಾತೃತ್ವಕ್ಕೆ ಅಣಿಯಾಗುವ ತಾಯಂದಿರು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು?

Indication of pregnancy

ಮೊದಲೇ ಮಾತಾಡಿ

ತಾಯ್ತನವನ್ನು ತಡವಾಗಿ ಒಪ್ಪಿಕೊಳ್ಳುವ ಬಗ್ಗೆ ಗರ್ಭ ಧರಿಸುವ ಮೊದಲೇ ವೈದ್ಯರಲ್ಲಿ ಮಾತಾಡಿ. ಇದಕ್ಕೆ ಬೇಕಾದ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಿ. ಮಾತ್ರವಲ್ಲ, ನಿಮಗಿರುವ ಆರೋಗ್ಯ ಸಮಸ್ಯೆಗಳು, ಅದಕ್ಕಾಗಿ ಯಾವುದಾದರೂ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇಂಥ ಎಲ್ಲವನ್ನೂ ವೈದ್ಯರಲ್ಲಿ ತಿಳಿಸಿ. ಸಣ್ಣ ಪ್ರಾಯದವರಿಗೂ ಮಧುಮೇಹ, ಥೈರಾಯ್ಡ್‌ ಸಮಸ್ಯೆಗಳು ವಕ್ಕರಿಸುತ್ತಿರುವುದರಿಂದ ಇದನ್ನೆಲ್ಲ ಮೊದಲೇ ವೈದ್ಯರಲ್ಲಿ ಮಾತಾಡಿಕೊಳ್ಳಿ.
ಒತ್ತಡ ನಿರ್ವಹಣೆ: ೩೫ರ ನಂತರ ವೃತ್ತಿಯಲ್ಲಿ ಮತ್ತು ಬಾಂಧವ್ಯಗಳಲ್ಲಿ ಹೆಚ್ಚಿನ ಸ್ಥಿರತೆ ಇರುತ್ತದೆ. ಆಗಲೇ ತಾಯ್ತನ ಒಪ್ಪಿಕೊಳ್ಳುವುದು ಸೂಕ್ತ ಎಂಬುದು ಒಂದು ವಾದ. ಆದರೆ ವಯಸ್ಸು ಏರುತ್ತಿದ್ದಂತೆ ಒತ್ತಡ ಧಾರಣಾ ಸಾಮರ್ಥ್ಯವೂ ತೀಕ್ಷ್ಣವಾಗಿ ಕುಸಿಯುತ್ತದೆ. ಜೊತೆಗೆ ವೃತ್ತಿಯಲ್ಲಿ ಮೇಲೇರುತ್ತಿದ್ದಂತೆ ಹೊಣೆಗಾರಿಕೆಯೂ ಹೆಚ್ಚಿರುತ್ತದೆ. ಹಾಗಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಪರಿಣತರಲ್ಲಿ ಮಾತಾಡಿ, ಅವರ ಸಲಹೆಗಳನ್ನು ಅಳವಡಿಸಿಕೊಳ್ಳಿ. ಪ್ರಿನೇಟಲ್‌ ಯೋಗ, ಧ್ಯಾನ ಮುಂತಾದವು ಖಂಡಿತವಾಗಿ ಸಹಾಯ ಮಾಡುತ್ತವೆ. ಈ ಬಗ್ಗೆ ಗಮನ ಕೊಡದಿದ್ದರೆ ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ, ಮಧುಮೇಹಗಳು ಕಾಡುವ ಸಾಧ್ಯತೆ ಹೆಚ್ಚುತ್ತದೆ.

pregnancy exercise

ವ್ಯಾಯಾಮ

ನಿಯಮಿತವಾದ ವ್ಯಾಯಾಮಗಳು ಗರ್ಭಿಣಿಯರಿಗೆ ಅಗತ್ಯವಾಗಿ ಬೇಕಾದವು. ಯಾವುದನ್ನೆಲ್ಲ ಮಾಡಬಹುದು ಎಂಬ ಬಗ್ಗೆ ವೈದ್ಯರಲ್ಲೆ ಚರ್ಚಿಸುವುದು ಒಳಿತು. ಆದರೆ ನಡಿಗೆ, ಈಜು, ಪ್ರಿನೇಟಲ್‌ ಯೋಗ, ಕಡಿಮೆ ತೀವ್ರತೆಯ ಏರೋಬಿಕ್‌ ವ್ಯಾಯಾಮಗಳು ಗರ್ಭಿಣಿಯರಿಗೆ ಹಿತವಾಗುವಂಥವು. ಇದರಿಂದ ಶರೀರ ಹಗುರವಾಗಿದ್ದು, ಹೆರಿಗೆಗೆ ಬೇಕಾದ ಸಿದ್ಧತೆಗಳನ್ನು ದೇಹ ತಂತಾನೇ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

pregnancy sleep

ನಿದ್ದೆ, ವಿಶ್ರಾಂತಿ

ಎಷ್ಟೋ ಗರ್ಭಿಣಿಯರಿಗೆ ರಾತ್ರಿಯ ನಿದ್ದೆ ಕಷ್ಟವಾಗುತ್ತದೆ. ಕಡೆಯ ಮೂರು ತಿಂಗಳಲ್ಲಂತೂ ಹೇಗೆ ಮಲಗಿದರೂ ಸರಿಯಾಗುವುದಿಲ್ಲ ಎನ್ನುವಂಥ ಸಮಸ್ಯೆ ಅವರದ್ದು. ಅಂಥ ದಿನಗಳಲ್ಲಿ ರೆಕ್ಲೈನರ್‌ ಮಾದರಿಯ ಹಾಸಿಗೆಗಳು ವಿಶ್ರಾಂತಿಗೆ ನೆರವಾಗುತ್ತವೆ. ದಿನದಲ್ಲೂ ಕೆಲಕಾಲ ನಿದ್ದೆಯಲ್ಲದಿದ್ದರೆ, ವಿಶ್ರಾಂತಿಯನ್ನಂತೂ ತೆಗೆದುಕೊಳ್ಳಬೇಕು. ದಿನಕ್ಕೆ ಹತ್ತು ತಾಸುಗಳ ನಿದ್ದೆಯಿಂದ ಮಗುವಿನ ಬೆಳವಣಿಗೆಗೂ ಸಹಾಯ ದೊರೆಯುತ್ತದೆ. ಈ ಬಗ್ಗೆ ಪ್ರತಿಯೊಬ್ಬರ ದೇಹವೂ ತನ್ನ ಅಗತ್ಯಗಳನ್ನು ತಾನೇ ಸೂಚಿಸುತ್ತದೆ, ಅದನ್ನು ಕೇಳಿ.

pregnancy food

ಆಹಾರ

ಮೊದಲನೆಯದಾಗಿ, ಗರ್ಭಾವಸ್ಥೆಯಲ್ಲಿ ಇಬ್ಬರಿಗಾಗಿ ತಿನ್ನುವ ಅಗತ್ಯವಿಲ್ಲ. ನಿತ್ಯದ ಆಹಾರಕ್ಕಿಂತ ೩೦೦ ಕ್ಯಾಲರಿಯಷ್ಟು ಮಾತ್ರವೇ ಹೆಚ್ಚಿಗೆ ಆಹಾರ ತೆಗೆದುಕೊಂಡರೆ ಸಾಕಾಗುತ್ತದೆ. ಅತಿಯಾಗಿ ತಿನ್ನುವುದು, ಸಿಹಿ, ಖಾರ, ಕರಿದಿದ್ದು, ಐಸ್‌ಕ್ರೀಂನಂಥವು, ಚಿಪ್ಸ್‌, ಸೋಡಾ ಮುಂತಾದ ಯಾವುದೇ ಗುಜರಿ ಆಹಾರಗಳು ಭ್ರೂಣದ ಬೆಳವಣಿಗೆಗೆ ಪೂರಕವಲ್ಲ. ಆಹಾರದಲ್ಲಿ ಋತುಮಾನದ ಹಣ್ಣು-ತರಕಾರಿಗಳು, ಧಾರಾಳವಾಗಿ ನೀರು, ಡೇರಿ ಉತ್ಪನ್ನಗಳು, ಹಸಿರು ಸೊಪ್ಪುಗಳು, ಇಡೀ ಧಾನ್ಯಗಳು, ಕಾಯಿ-ಬೀಜಗಳು, ಮೊಟ್ಟೆ-ಮೀನಿನಂಥವು ಇರಬೇಕು. ಕೆಫೇನ್‌ ಸೇವನೆಯನ್ನು ಕಡಿಮೆ ಮಾಡಿ. ಇದರಿಂದ ಇಬ್ಬರ ಸ್ವಾಸ್ಥ್ಯಕ್ಕೂ ಹಿತ.

pregnancy doctor test

ತಪಾಸಣೆ

35ರ ನಂತರದ ಗರ್ಭಧಾರಣೆಯಲ್ಲಿ ಮಧುಮೇಹ, ಬಿಪಿ, ಅವಧಿಪೂರ್ವ ಪ್ರಸವ, ಕಡಿಮೆ ತೂಕ ಶಿಶು ಜನಿಸುವುದು, ಶಿಶುವಿಗೆ ಡೌನ್ಸ್‌ ಸಿಂಡ್ರೋಮ್‌ನಂಥ ಆನುವಂಶಿನ ಕಾಯಿಲೆಗಳು ಬರುವಂಥ ಎಷ್ಟೋ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ತಜ್ಞ ವೈದ್ಯರಿಂದ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಅವಶ್ಯವಾದಂಥ ರಕ್ತಪರೀಕ್ಷೆಗಳು ಸಹ ಈ ತಪಾಸಣೆಯ ಭಾಗವೇ ಆಗಿದೆ. ಭ್ರೂಣದ ಬೆಳವಣಿಗೆ ಮತ್ತು ಗರ್ಭಿಣಿಯ ಆರೋಗ್ಯ ಒಂದಕ್ಕೊಂದು ತೀರಾ ಭಿನ್ನವಲ್ಲ; ಯಾವುದು ಸರಿಯಿಲ್ಲದಿದ್ದರೂ ಇಬ್ಬರಿಗೂ ಅಪಾಯ.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Continue Reading

ಆರೋಗ್ಯ

Women’s Health: 40 ವರ್ಷ ದಾಟಿದ ಮಹಿಳೆಯರು ಈ ವಿಷಯದಲ್ಲಿ ಎಚ್ಚರ ವಹಿಸಲೇಬೇಕು

40 ವರ್ಷ ದಾಟಿದ ತಕ್ಷಣ ಮಹಿಳೆ (Women’s Health) ತನ್ನ ಆರೋಗ್ಯದ ಕಾಳಜಿಯನ್ನು ತುಸು ಹೆಚ್ಚೇ ಮಾಡಬೇಕು. ಮುಖ್ಯವಾಗಿ ಮಹಿಳೆಯ ಹಾರ್ಮೋನಿನಲ್ಲಿ ಈ ಸಂದರ್ಭ ಬದಲಾವಣೆಗಳಾಗುವುದರಿಂದ, ಮೆನೋಪಾಸ್‌ ಅಥವಾ ಋತುಬಂಧದ ಆರಂಭವಾಗುವ ಸನಿಹಕ್ಕೆ ಬರುವುದರಿಂದ ದೇಹದ ಶಕ್ತಿ ಕುಗ್ಗುತ್ತದೆ. ಹಾಗಾಗಿ ಮಹಿಳೆ ತನ್ನ ಆರೋಗ್ಯದತ್ತ ಈ ಸಂದರ್ಭ ಗಮನ ಹರಿಸುವುದು ಒಳಿತು.

VISTARANEWS.COM


on

Women's Health
Koo

ಮಹಿಳೆಯ ದೇಹ (Women’s Health) ಮಾಗುತ್ತಾ ಮಾಗುತ್ತಾ ಬಹಳಷ್ಟು ಬದಲಾವಣೆಗಳಿಗೆ ಒಳಗಾಗುವುದರಿಂದ 40 ದಾಟುತ್ತಿದ್ದ ಹಾಗೆಯೇ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನೂ ಆಕೆ ಅನುಭವಿಸಬೇಕಾಗುತ್ತದೆ. ವಯಸ್ಸಾಗುವಿಕೆಯಿಂದ ಆರಂಭವಾಗುವ ಈ ಸಮಸ್ಯೆಗಳಿಗೆ ಬೇರೆ ವಿಚಾರಗಳ ಪ್ರಭಾವವೂ ಇರುತ್ತದೆ. ಉದಾಹರಣೆಗೆ ಆಕೆಯ ಜೀವನಶೈಲಿ, ಆಹಾರಕ್ರಮ, ಆಕೆಯ ಅಭ್ಯಾಸಗಳು ಇತ್ಯಾದಿ ಇತ್ಯಾದಿಗಳು ಆರೋಗ್ಯದ ಮೇಲೆ ನಲವತ್ತರ ನಂತರ ಪರಿಣಾಮ ಬೀರಲಾರಂಭಿಸುತ್ತದೆ. 40 ವರ್ಷ ದಾಟಿದ ತಕ್ಷಣ ಮಹಿಳೆ ತನ್ನ ಆರೋಗ್ಯದ ಕಾಳಜಿಯನ್ನು ತುಸು ಹೆಚ್ಚೇ ಮಾಡಬೇಕು. ಮುಖ್ಯವಾಗಿ ಮಹಿಳೆಯ ಹಾರ್ಮೋನಿನಲ್ಲಿ ಈ ಸಂದರ್ಭ ಬದಲಾವಣೆಗಳಾಗುವುದರಿಂದ, ಮೆನೋಪಾಸ್‌ ಅಥವಾ ಋತುಬಂಧದ ಆರಂಭವಾಗುವ ಸನಿಹಕ್ಕೆ ಬರುವುದರಿಂದ ದೇಹದ ಶಕ್ತಿ ಕುಗ್ಗುತ್ತದೆ. ಹಾಗಾಗಿ ಮಹಿಳೆ ತನ್ನ ಆರೋಗ್ಯದತ್ತ ಈ ಸಂದರ್ಭ ಗಮನ ಹರಿಸುವುದು ಒಳಿತು. ಬನ್ನಿ, ಪ್ರತಿ 40 ದಾಟಿದ ಮಹಿಳೆ ತನ್ನ ಆರೋಗ್ಯದ ಯಾವ ವಿಚಾರಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಿಕೊಳ್ಳಬೇಕು ಎಂಬುದನ್ನು ನೋಡೋಣ.

Kidney Stones Signs

ಕಿಡ್ನಿಯಲ್ಲಿ ಕಲ್ಲು

ಮೂತ್ರನಾಳ ಅಥವಾ ಕೋಶದಲ್ಲಿ ಖನಿಜಲವಣಗಳು ಕಲ್ಲಿನ ರೂಪದಲ್ಲಿ ಸಂಗ್ರಹವಾಗುವ ಸಮಸ್ಯೆ. ಇದು ಅತ್ಯಂತ ನೋವನ್ನು ನೀಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಸಾಮಾನ್ಯವಾಗಿ ಕಿಡ್ನಿಯಲ್ಲಿ ಕಲ್ಲು ಅಥವಾ ಸ್ಟೋನ್‌ ಪುರುಷರಲ್ಲಿ ಹೆಚ್ಚೆಂದು ಹೇಳಿದರೂ, ಮಹಿಳೆಯರಲ್ಲೂ ಇದು ಕಾಣಿಸಿಕೊಳ್ಳುತ್ತದೆ. ಸೊಂಟದ ಸಮೀಪ ತೀವ್ರ ನೋವು, ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು, ಮೂತ್ರದಲ್ಲಿ ರಕ್ತ, ವಾಂತಿ, ಕೆಟ್ಟ ವಾಸನೆಯ ಮೂತ್ರ ಇತ್ಯಾದಿ ಕಿಡ್ನಿಸ್ಟೋನ್‌ನ ಸಾಮಾನ್ಯ ಲಕ್ಷಣಗಳು. ಹೆಚ್ಚು ನೀರು ಕುಡಿಯುವುದು ಇಲ್ಲಿ ಬಹಳ ಮುಖ್ಯ.

ಸಂಧಿವಾತ

ಮಹಿಳೆಯರಲ್ಲಿ ನಲುವತ್ತು ದಾಟಿದ ಮೇಲೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಗಳಲ್ಲಿ ಇದೂ ಒಂದು. ಮೂಳೆಯ ಸಾಂದ್ರತೆ ಕುಸಿಯುವುದರಿಂದ ಆಗುವ ನಿಃಶಕ್ತಿ, ಮೂಳೆಗಳಲ್ಲಿ ನೋವು, ಗಂಟುಗಳ ಬಿಗಿತ, ಸಂದಿಗಳಲ್ಲಿ ನೋವು ಇತ್ಯಾದಿ ಇತ್ಯಾದಿ ಸಮಸ್ಯೆಗಳು ಇದರಲ್ಲಿ ಕಾಣಿಸಿಕೊಳ್ಳುತ್ತವೆ.

Diabetes control

ಮಧುಮೇಹ

ಮಹಿಳೆಗೆ ನಲುವತ್ತು ದಾಟಿದ ಕೂಡಲೇ ಮಧುಮೇಹದ ಅಪಾಯವೂ ಇರುತ್ತದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಏರಿಕೆ, ಇದರೆಂದಾಗಿ ತಲೆಸುತ್ತು, ಕೈಕಾಲು ನಡುಕ, ನಿಃಶಕ್ತಿ, ಕಣ್ಣು ಮಂಜಾಗುವುದು, ತೂಕ ಇಳಿಕೆ, ಒಸಡುಗಳು ಮೆದುವಾಗುವುದು ಇತ್ಯಾದಿ ಸಮಸ್ಯೆಗಳು ಆರಂಭವಾಗುತ್ತದೆ.

ಮೂಳೆ ಸವೆತ

40ರ ನಂತರ ಮೂಳೆಗಳ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗುತ್ತದೆ. ಮೂಳೆಯ ಸಾಂದ್ರತೆ ಕಡಿಮೆಯಾಗುವುದಲ್ಲದೆ, ಸವೆತವೂ ಕೆಲವರಲ್ಲಿ ಆರಂಭವಾಗುತ್ತದೆ. ಸಂದಿಗಳಲ್ಲಿ ವಿಪರೀತ ನೋವು ಹಾಗೂ ಸೆಳೆತ, ಸೊಂಟ ನೋವು, ಬೆನ್ನು ನೋವು, ಕಾಲು ನೋವುಗಳು ಹೆಚ್ಚಾಗುತ್ತವೆ. ಮೂಳೆ ಮುರಿತದಂತಹ ಸಮಸ್ಯೆಯೂ ಕೆಲವರಿಗೆ ಬರಬಹುದು. ಹಾಗಾಗಿ 40 ದಾಟಿದ ಮಹಿಳೆ ವೈದ್ಯರನ್ನು ಸಂಪರ್ಕಿಸಿ, ಸಲಹೆ ಸ್ವೀಕರಿಸಿ, ಕ್ಯಾಲ್ಶಿಯಂ ಹಾಗೂ ವಿಟಮಿನ್‌ ಡಿ ಸಪ್ಲಿಮೆಂಟ್‌ ಸೇವಿಸಬೇಕು.

ಮೂತ್ರ ಸಮಸ್ಯೆ

ವಯಸ್ಸಾಗುತ್ತಾ ಆಗುತ್ತಾ, ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕೆಲವು ಮಹಿಳೆಯರಲ್ಲಿ ಕಡಿಮೆಯಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಆ ಭಾಗದ ಮಾಂಸಖಂಡಗಳ ಶಕ್ತಿಗುಂದುವುದೂ ಇದಕ್ಕೆ ಕಾರಣ. ಇಂಥ ಸಂದರ್ಭ ಹೆಚ್ಚು ಹೊತ್ತು ಮೂತ್ರ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಿರುವಂಥ ಸಮಸ್ಯೆಗಳೂ ಬರಬಹುದು. ಸಣ್ಣ ಕೆಮ್ಮು, ಸೀನು ಇತ್ಯಾದಿಗಳಿಗೆ ಮೂತ್ರ ಚಿಮ್ಮುವುದು ಇತ್ಯಾದಿಗಳಿಗೂ ಇದೇ ಕಾರಣ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಯಾದರೂ, ಇದು ಅತ್ಯಂತ ಅಪಾಯಕಾರಿ ಕೂಡಾ. ಈ ಸಮಸ್ಯೆ ಹೃದಯದ ತೊಂದರೆ, ಕಿಡ್ನಿ ತೊಂದರೆ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತದೆ.

Belly Fat Reduction

ಬೊಜ್ಜು

40 ದಾಟುವ ಮಹಿಳೆಯ ಪ್ರಮುಖ ಸಮಸ್ಯೆ ಎಂದರೆ ಬೊಜ್ಜು. ಬದಲಾದ ಜೀವನಕ್ರಮ, ಮೆನೋಪಾಸ್‌ನಿಂದಾಗಿ ಹಾರ್ಮೋನಿನ ಏರುಪೇರು, ಅನಾರೋಗ್ಯಕರ ಆಹಾರಕ್ರಮ ಇವೆಲ್ಲವೂ ಇಂದಿನ ಮಹಿಳೆಯರ ಬಹುದೊಡ್ಡ ಸಮಸ್ಯೆಯಾದ ಬೊಜ್ಜಿಗೆ ಕಾರಣ. ಉತ್ತಮ ಆಹಾರ ಸೇವನೆ, ವೈದ್ಯರನ್ನು ಸಂಪರ್ಕಿಸಿ ಹಾರ್ಮೋನಿನ ವೈಪರೀತ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು, ನಿಯಮಿತ ವ್ಯಾಯಾಮ, ಕ್ರಿಯಾಶೀಲರಾಗಿರುವುದು ಇತ್ಯಾದಿಗಳಿಂದ ಈ ಸಮಸ್ಯೆಯಿಂದ ಹೊರಬರಬಹುದು. ತಮ್ಮನ್ನು ತಾವು ಫಿಟ್‌ ಆಗಿಟ್ಟು ಕೊಳ್ಳಬಹುದು.

Continue Reading

ಬೆಂಗಳೂರು ಗ್ರಾಮಾಂತರ

Begging Case : ಕುಡುಕ ಗಂಡನ ಮಾತು ಕೇಳಿ ಮಗು ಜತೆಗೆ ಭಿಕ್ಷಾಟನೆಗಿಳಿದ ತಾಯಿ

Begging Case : ಮಗು ಹಿಡಿದು ಭಿಕ್ಷಾಟನೆ ಮಾಡುತ್ತಿದ್ದಾಗಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡ ದಾಳಿ ಮಾಡಿದೆ. ತಾಯಿ-ಮಗುವನ್ನು ಇಬ್ಬರನ್ನು ರಕ್ಷಿಸಿ ಕೌನ್ಸಿಲಿಂಗ್‌ ಒಳಪಡಿಸಿದಾಗ ಅಧಿಕಾರಿಗಳೇ ಶಾಕ್‌ ಆಗಿದ್ದಾರೆ. ಕುಡುಕ ಗಂಡ ಕೊಟ್ಟ ಕಿರುಕುಳಕ್ಕೆ ಬೇಸತ್ತು ಮಹಿಳೆ ಭಿಕ್ಷೆ ಬೇಡಲು ಬಂದಿರುವುದಾಗಿ ತಿಳಿಸಿದ್ದಾಳೆ.

VISTARANEWS.COM


on

By

Begging Case
Koo

ಆನೇಕಲ್: ರಣ ಬಿಸಿಲನ್ನು ಲೆಕ್ಕಿಸದೆ ಮಡಿಲಿನಲ್ಲಿ ಪುಟ್ಟ ಮಗುವನ್ನು ಕೂರಿಸಿಕೊಂಡು ಮಹಿಳೆಯೊಬ್ಬರು ಭಿಕ್ಷಾಟನೆ (Begging Case) ಮಾಡುತ್ತಿದ್ದರು. ದೇವಸ್ಥಾನದ ಮುಂದೆ ಭಿಕ್ಷಾಟನೆ ಮಾಡುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಅವರಿಬ್ಬರನ್ನು ವಶಕ್ಕೆ ಪಡೆದಿದ್ದರು. ನಂತರ ಕೌನ್ಸಿಲಿಂಗ್ ಮಾಡುವಾಗ ಮಹಿಳೆ ಹೇಳಿದ್ದನ್ನು ಕೇಳಿ ಅಧಿಕಾರಿಗಳೇ ಶಾಕ್‌ ಆಗಿದ್ದರು. ಮಹಿಳೆಯ ಅಸಹಾಯಕತೆಗೆ ಮರುಗಿದ್ದರು.

ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಮುಂಭಾಗ ಮಹಿಳೆಯೊಬ್ಬರು ಮಗು ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದಾರೆ ಎಂದು ದೂರು ಬಂದಿತ್ತು. ನಂತರ ನಾಲ್ಕೈದು ಬಾರಿ ಅಧಿಕಾರಿಗಳು ಭಿಕ್ಷೆ ಬೇಡದಂತೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಮತ್ತೆ ದೇವಸ್ಥಾನದ ಮುಂಭಾಗ ಭಿಕ್ಷೆ ಬೇಡುತ್ತಿರುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ನೇತೃತ್ವದ ತಂಡ ದಾಳಿ ಮಾಡಿ, ಇಬ್ಬರನ್ನು ರಕ್ಷಿಸಿದ್ದರು.

Begging Case
ತಾಯಿ-ಮಗುವನ್ನು ರಕ್ಷಿಸಿದ ಅಧಿಕಾರಿಗಳ ತಂಡ

ನಂತರ ಮಹಿಳೆಯನ್ನು ಕೌನ್ಸಿಲಿಂಗ್‌ಗೆ ಒಳಪಡಿಸಿದಾಗ, ಆಕೆ ಹೇಳಿದ್ದು ಕೇಳಿ ಅಧಿಕಾರಿಗಳೇ ಒಂದು ಕ್ಷಣ ಮೌನಕ್ಕೆ ಜಾರಿದ್ದರು. ಕುಡುಕ ಗಂಡನನ್ನು ಕಟ್ಟಿಕೊಂಡ ತಪ್ಪಿಗೆ ಭಿಕ್ಷೆ ಬೇಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕುಡಿತಕ್ಕೆ ದಾಸನಾಗಿದ್ದ ಪತಿ, ಭಿಕ್ಷೆ ಬೇಡಿ ಕುಡಿಯಲು ಹಣ ತರುವಂತೆ ತಿಳಿಸಿ, ಕಿರುಕುಳ ಕೊಟ್ಟಿದ್ದಾನೆ ಎನ್ನಲಾಗಿದೆ. ಈತನ ಕಾಟಕ್ಕೆ ಬೇಸತ್ತ ಮಹಿಳೆ ಮಗು ಹಿಡಿದುಕೊಂಡು ದೇವಸ್ಥಾನದ ಮುಂದೆ ಭಿಕ್ಷಾಟನೆ ಮಾಡುತ್ತಿದ್ದಳು.

ಸದ್ಯ ತಾಯಿ ಮತ್ತು ಮಗುವನ್ನು ರಕ್ಷಿಸಿ ಸ್ವಾಧಾರ್ ಗೃಹದಲ್ಲಿಟ್ಟು ಕೌನ್ಸಿಲಿಂಗ್ ಮಾಡಲಾಗುತ್ತಿದೆ. ಕೌನ್ಸಿಲಿಂಗ್ ಬಳಿಕ ಅಧಿಕಾರಿಗಳು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಿದ್ದಾರೆ. ಇನ್ನೂ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಕಂಡರೆ 1098 ಅಥವಾ 122 ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Drowned in water : ನೀರು ಕುಡಿಯಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ಮಹಿಳೆ ಸಾವು

ಮಕ್ಕಳಿಬ್ಬರಿಗೆ ವಿಷ ಕುಡಿಸಿ, ನೇಣಿಗೆ ಶರಣಾದ ತಂದೆ

ಕೋಲಾರ : ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಂದೆಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ (Kolar News) ಶ್ರೀನಿವಾಸಪುರ ತಾಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ನಾರಾಯಣಸ್ವಾಮಿ (40) ಹಾಗೂ ಮಕ್ಕಳಾದ ಪವನ್ (12), ನಿತಿನ್ (10) ಮೃತ ದುರ್ದೈವಿಗಳು. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

Kolar News
ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿದ ಜನರು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸುತ್ತಿರುವ ಪೊಲೀಸರು

ವಿಷಯ ತಿಳಿಯುತ್ತಿದ್ದಂತೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ:Assault Case : ರಾಯಚೂರಿನಲ್ಲಿ ಬಿಜೆಪಿ ಶಾಸಕನಿಗೆ ಚಾಕು ತೋರಿಸಿದ ಅಪರಿಚಿತ; ಹಲ್ಲೆಗೆ ಯತ್ನ, ಅಪಾಯದಿಂದ ಜಸ್ಟ್‌ ಮಿಸ್‌

ಕೌಟುಂಬಿಕ ಕಲಹ; ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಗದಗ: ಕೌಟುಂಬಿಕ ಕಲಹಕ್ಕೆ (Family Dispute) ಒಂದೇ ಕುಟುಂಬದ ಮೂವರು (Self Harming) ಬಲಿ‌ಯಾಗಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ (Gadag News) ಈ ಘಟನೆ ನಡೆದಿದೆ. ರೇಣುಕಾ ತೇಲಿ (49), ಮಂಜುನಾಥ್ (22), ಸಾವಕ್ಕ ತೇಲಿ (47) ಮೃತ ದುರ್ದೈವಿಗಳು.

ಸಾಲದ ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ರೇಣುಕಾ ತೇಲಿ ರೈಲು ಹಳಿಗೆ ಹಾರಿದ್ದರು. ತಾಯಿಯನ್ನು ಹಿಂಬಾಲಿಸಿ ಬಂದಿದ್ದ ಮಂಜುನಾಥ್‌ ತಾಯಿಯನ್ನು ಕಾಪಾಡಲು ಹೋಗಿ ಹಳಿಗೆ ಬಿದ್ದಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಇವರಿಬ್ಬರ ಪ್ರಾಣವನ್ನು ತೆಗೆದಿತ್ತು.

ಹಾವೇರಿ ಜಿಲ್ಲೆಯ ಎಲವಿಗಿ ರೈಲು ನಿಲ್ದಾಣದ ಬಳಿ ನಿನ್ನೆ ಭಾನುವಾರ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತ ಅಕ್ಕ ರೇಣುಕಾಳ ಸಾವಿನ ವಿಷಯ ತಿಳಿದು ಸಾವಕ್ಕ ತೇಲಿ (47) ಎಂಬುವವರು ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಒಂದೇ ಕುಟುಂಬದ ಮೂವರನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಲಾಗಿದ್ದಾರೆ.

ಸಾವಕ್ಕ, ರೇಣುಕಾ ಮಧ್ಯೆ ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಜಗಳವಾಡಿಕೊಂಡಿದ್ದರು. ಬ್ಯಾಂಕ್‌ನಿಂದ 4 ಲಕ್ಷ ರೂ. ಸಾಲ ಪಡೆದು ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಟ್ರ್ಯಾಕ್ಟರ್ ಕಂತು ವಿಚಾರವು ಕೂಡು ಕುಟುಂಬದಲ್ಲಿ ಗಲಾಟೆಗೆ ಕಾರಣವಾಗಿತ್ತು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Neha Murder Case
ಕರ್ನಾಟಕ4 mins ago

Neha Murder Case: ನೇಹಾ ಕೊಲೆ ಪ್ರಕರಣ; ಚಾರ್ಜ್‌ಶೀಟ್ ಸಲ್ಲಿಸಲು ಸಿಐಡಿ ತಯಾರಿ

Prajwal Revanna Case Will Not Be Handed Over To CBI Says Cm Siddaramaiah
Lok Sabha Election 202427 mins ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್;‌ ಸಿಬಿಐಗೆ ಏಕೆ ಕೊಡಲ್ಲ ಎಂದು ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

Drowned in water
ಚಿಕ್ಕಬಳ್ಳಾಪುರ28 mins ago

Drowned in water : ಕೆರೆಯಲ್ಲಿ ಈಜುವ ಸವಾಲು; ಜೋಶ್‌ನಲ್ಲಿ ನೀರಿಗೆ ಇಳಿದ ಟೆಕ್ಕಿ ಮೃತ್ಯು

PoK
ಪ್ರಮುಖ ಸುದ್ದಿ31 mins ago

PoK Crisis: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಂಗೆಯೆದ್ದ ಜನ, ಗಲಾಟೆ; ಭಾರತದ ಜತೆ ವಿಲೀನಕ್ಕೆ ಆಗ್ರಹ!

Pig Kidney
ವಿದೇಶ35 mins ago

Pig Kidney: ಹಂದಿಯ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು

Arvind Kejriwal
ದೇಶ2 hours ago

Arvind Kejriwal: ಚೀನಾದಿಂದ ಭಾರತದ ನೆಲ ವಾಪಸ್‌ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Road Accident
ಕ್ರೈಂ3 hours ago

Road Accident : ತಂದೆ ಜತೆಗೆ ಕಾರ್‌ ವಾಶ್‌ ಮಾಡುವಾಗ ಎಕ್ಸಿಲೇಟರ್‌ ತುಳಿದ ಬಾಲಕ; ಆಟವಾಡುತ್ತಿದ್ದ ಮಗು ಅಪ್ಪಚ್ಚಿ

Ram Charan get mobbed by fans during public appearances
ಸಿನಿಮಾ3 hours ago

Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

Mother's Day 2024 Duniya Vijay jaggesh Post Viral
ಸಿನಿಮಾ3 hours ago

Mother’s Day 2024: ಅಮ್ಮನ ನೆನೆದಾಗ ಮಗುವಾಗುವೆ ಎಂದ ಜಗ್ಗೇಶ್‌: ದುನಿಯಾ ವಿಜಯ್‌ ಭಾವುಕ ಪೋಸ್ಟ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ4 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ11 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ3 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

ಟ್ರೆಂಡಿಂಗ್‌