ಸಂತೋಷ್‌ ಆತ್ಮಹತ್ಯೆ: ಎಲೆಕ್ಷನ್‌ ವರ್ಷದಲ್ಲಿ BJPಗೆ ಟೆನ್ಷನ್‌, "ಕೈ"ಗೆ ಅಸ್ತ್ರ - Vistara News

ರಾಜಕೀಯ

ಸಂತೋಷ್‌ ಆತ್ಮಹತ್ಯೆ: ಎಲೆಕ್ಷನ್‌ ವರ್ಷದಲ್ಲಿ BJPಗೆ ಟೆನ್ಷನ್‌, “ಕೈ”ಗೆ ಅಸ್ತ್ರ

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಹಿರಿಯ ಸಚಿವರ ಮೇಲೆ ಆರೋಪ ಮಾಡಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವುದು ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಿದೆ. ಈಶ್ವರಪ್ಪ ರಾಜೀನಾಮೆ ಕುರಿತು ಸದ್ಯದಲ್ಲೆ ತೀರ್ಮಾನವಾಗಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ 150+ ಸ್ಥಾನಗಳನ್ನು ಗೆಲ್ಲಲೇ ಬೇಕು ಎಂದು ಬಿಜೆಪಿ (BJP) ಅಭಿಯಾನ ಆರಂಭಿಸುವ ಹೊಸ್ತಿಲಲ್ಲಿ ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ( Santosh Suicide) ಪ್ರಕರಣ ಎದುರಾಗಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅನೇಕ ರ‍್ಯಾಲಿಗಳಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರದ ಕುರಿತು ಪ್ರಸ್ತಾಪಿಸಿದ್ದರು. ಸಿದ್ದರಾಮಯ್ಯ ಸರ್ಕಾರವನ್ನು ಸೀಧಾರುಪಯ್ಯ ಸರ್ಕಾರ ಎಂದಿದ್ದ ಪ್ರಧಾನಿ, ಇಲ್ಲಿ ಎಲ್ಲ ಯೋಜನೆಗಳಿಗೂ 10% ಕಮಿಷನ್‌ ಲಂಚ ನಡೆಯುತ್ತಿದೆ ಎಂದು ಹೇಳಿದ್ದರು. ಇದು ಚುನಾವಣೆಯಲ್ಲಿ ಭಾರೀ ಸದ್ದು ಮಾಡಿತ್ತು.

ಆದರೆ ಇತ್ತೀಚೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಪಡೆಯುವ ಗುತ್ತಿಗೆದಾರರರ ಸಂಘ ಮಾಡಿದ ಸುದ್ದಿಗೋಷ್ಠಿಯಿಂದ ಬಿಜೆಪಿಗೆ ಮುಖಭಂಗ ಆಗಿತ್ತು. ಈ ಸರ್ಕಾರದಲ್ಲಿ ಎಲ್ಲ ಕಾಮಗಾರಿಗಳಿಗೂ 40% ಕಮಿಷನ್‌ ಪಡೆಯಲಾಗುತ್ತಿದೆ. ಇಷ್ಟು ಲಂಚ ನೀಡಿ ತಾವು ಕಾಮಗಾರಿ ಮಾಡುವುದು ಹೇಗೆ, ಜೀವನ ನಡೆಸುವುದು ಹೇಗೆ ಎಂದು ಅಲವೊತ್ತುಕೊಂಡಿದ್ದರು.

ಕಾಂಗ್ರೆಸ್‌ ಅವಧಿಯಲ್ಲಿ 10% ಲಂಚಕ್ಕೇ ಅಬ್ಬರಿಸಿದ್ದ ಬಿಜೆಪಿ ಇದೀಗ 40% ಲಂಚ ಪಡೆಯುತ್ತಿದೆ ಎಂದು ಪ್ರತಿಪಕ್ಷಗಳು, ಮುಖ್ಯವಾಗಿ ಕಾಂಗ್ರೆಸ್‌ ಹರಿಹಾಯ್ದಿತ್ತು. ಈ ನಡುವೆ ರಾಜ್ಯದಲ್ಲಿ ಹಿಜಾಬ್‌, ಹಲಾಲ್‌ ಮುಂತಾದ ವಿಚಾರಗಳು ಪ್ರಸ್ತಾಪವಾಗಿ ಲಂಚ ವಿಚಾರ ಹಿನ್ನೆಲೆಗೆ ಸರಿದಿತ್ತು. ಇದೀಗ ನಳಿನ್‌ ಕುಮಾರ್‌ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಇದೇ ಭ್ರಷ್ಟಾಚಾರದ ಆರೋಪವನ್ನು ಎದುರಿಸಬೇಕಿದೆ.

ಮತ್ತೆ ಭುಗಿಲೆದ್ದ 40% ಲಂಚ

ಇನ್ನೇನು ಹಲಾಲ್‌, ಹಿಜಾಬ್‌ ವಿಚಾರದಿಂದ ಅಭಿವೃದ್ಧಿಯತ್ತ ಹೊರಳಬೇಕು ಎನ್ನುವಷ್ಟರಲ್ಲಿ ಕಳೆದ 15 ದಿನದ ಹಿಂದೆ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಸುದ್ದಿಗೋಷ್ಠಿ ಮಾಡಿದ್ದರು. ಈಶ್ವರಪ್ಪ ಸಚಿವರಾಗಿರುವ ಗ್ರಾಮೋಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗೆ ಸಂಬಂಧಿಸಿ ಬೆಳಗಾವಿ ಜಿಲ್ಲೆಯ ಗ್ರಾಮದಲ್ಲಿ ಸುಮಾರು ₹4 ಕೋಟಿ ಮೊತ್ತದ ಕಾಮಗಾರಿ ನಡೆಸಿದ್ದೇನೆ. ಆದರೆ ಈವರೆಗೆ ಹಣ ಪಾವತಿ ಆಗಿಲ್ಲ. ಈಶ್ವರಪ್ಪ ಅವರು 40% ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಸಂತೋಷ್‌ ಆರೋಪಿಸಿದ್ದರು.

ಹಿಂದೂ ವಾಹಿನಿ ನ್ಯಾಷನಲ್‌ ಎಂಬ ಸಂಘಟನೆಯ ಕಾರ್ಯದರ್ಶಿ ಎಂದೂ ಹೇಳಿಕೊಂಡಿದ್ದ ಸಂತೋಷ್‌, ಇದೇ ದೂರನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೂ ಕಳಿಸಿದ್ದರು. ಅದಾಗಲೇ 40% ಲಂಚದ ಆರೋಪ ಹೊತ್ತಿದ್ದ ಸರ್ಕಾರಕ್ಕೆ ಇದು ಮತ್ತಷ್ಟು ಮುಜುಗರಕ್ಕೆ ಕಾರಣವಾಗಿತ್ತು.

ಇಷ್ಟೆಲ್ಲ ಆರೋಪ ಮಾಡಿದ ಸಂತೋಷ್‌ ಇದೀಗ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಬರೆದಿದ್ದಾರೆ ಎನ್ನಲಾದ ಆತ್ಮಹತ್ಯಾ ಪತ್ರದಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಹೆಸರನ್ನು ನೇರವಾಗಿ ನಮೂದಿಸಲಾಗಿದೆ. ಇದೇ ಪತ್ರದ ಆಧಾರದಲ್ಲಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಸಹ ದಾಖಲಾಗಿದೆ.

ಹೆಚ್ಚಿನ ಓದಿಗಾಗಿ: ಸಂತೋಷ್‌ ಅತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ A1: ಉಡುಪಿ ಠಾಣೆಯಲ್ಲಿ FIR
ಗಣಪತಿ ಆತ್ಮಹತ್ಯೆ ಪರಕರಣ ನೆನಪು

2016ರಲ್ಲಿ ಡಿವೈಎಸ್‌ಪಿ ಎಂ.ಕೆ. ಗಣಪತಿ (DYSP Ganapathi) ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಡಿಕೇರಿಯ ವಿನಾಯಕ ಲಾಡ್ಜ್‌ನ ರೂಂ ನಂಬರ್‌315ರಲ್ಲಿ ಜುಲೈ 7ರಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸ್ಥಳೀಯ ಸುದ್ದಿವಾಹಿನಿ ಕಚೇರಿಗೆ ತೆರಳಿದ್ದರು. ಸಚಿವರಾಗಿದ್ದ ಕೆ.ಜೆ. ಜಾರ್ಜ್‌ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳಾದ ಪ್ರಣಬ್‌ ಮೊಹಂತಿ ಹಾಗೂ ಎ.ಎಂ. ಪ್ರಸಾದ್‌ ಅವರುಗಳು ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋ ಮುದ್ರಣ ಮಾಡಿಸಿದ್ದರು.

ಪ್ರತಿಪಕ್ಷ ಬಿಜೆಪಿ ಕೈಗೆ ಸಿಕ್ಕ ಈ ಪ್ರಬಲ ಅಸ್ತ್ರದಿಂದ ಹೊರಬರಲು ಆಡಳಿತಾರೂಢ ಕಾಂಗ್ರೆಸ್‌ ಹೆಣಗಾಡಿತು. ಜಾರ್ಜ್‌ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಡ ಹೇರಿದರೂ, ರಾಜೀನಾಮೆ ನೀಡುವುದಿಲ್ಲ ಎಂದು ಅನೇಕ ದಿನ ಹೇಳಲಾಯಿತು. ಕೊನೆಗೆ, ಚನಾವಣೆಯಲ್ಲಿ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ರಾಜೀನಾಮೆ ಪಡೆಯಲಾಯಿತು.

ಇದೀಗ ಚುನಾವಣೆ ಹೊಸ್ತಿಲಲ್ಲಿರುವಂತೆ ಈಶ್ವರಪ್ಪ ವಿರುದ್ಧ ಆರೋಪಿಸಿ ಗುತ್ತಿಗೆದಾರ ಆರೋಪ ಮಾಡಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಜೀನಾಮೆ ಪಡೆದರೂ ಪ್ರತಿಪಕ್ಷ ಈ ವಿಚಾರವನ್ನು ಚುನಾವಣೆಗಾಗಿ ಬಳಸಿಕೊಳ್ಳುತ್ತದೆ. ಈಗಾಗಲೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆಗಳನ್ನು ನಡೆಸುತ್ತಿದೆ. ರಾಜೀನಾಮೆ ಪಡೆಯದಿದ್ದರೆ ಇದರ ಪರಿಣಾಮ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ಲೆಕ್ಕಾಚಾರವಿದೆ. ಈಗಾಗಲೆ ಬಿಜೆಪಿ ವರಿಷ್ಠರು ಈ ಕುರಿತು ಆಲೋಚನೆ ಮಾಡುತ್ತಿದ್ದು, ಕೆಲವೇ ಸಮಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Bheemanna Naik: ಶಿರಸಿ ಶಾಸಕ ಭೀಮಣ್ಣ ನಾಯ್ಕ್‌ ಮೇಲೆ ಜೇನು ದಾಳಿ; ಆಸ್ಪತ್ರೆಗೆ ದಾಖಲು

Bheemanna Naik: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಣೆಗೆ ತೆರಳಿದ್ದಾಗ ಶಾಸಕ ಭೀಮಣ್ಣ ನಾಯ್ಕ್‌ ಸೇರಿ ಹಲವರ ಮೇಲೆ ಜೇನು ನೊಣಗಳು ದಾಳಿ ಮಾಡಿವೆ.

VISTARANEWS.COM


on

Koo

ಕಾರವಾರ: ಗೂಡಿನ ಜೇನು ನೊಣಗಳು ದಾಳಿ ನಡೆಸಿದ್ದರಿಂದ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್‌ ಅವರು (Bheemanna Naik) ಸೇರಿ ಹಲವರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ನಗರದ ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಣೆಗೆ ತೆರಳಿದ್ದ ವೇಳೆ ಜೇನು ನೋಣಗಳು ದಾಳಿ ನಡೆಸಿವೆ.

ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಣೆಗೆ ನಗರಸಭೆ ಪೌರಾಯುಕ್ತ ಕಾಂತರಾಜ ಜತೆ ಶಾಸಕ ಬುಧವಾರ ತೆರಳಿದ್ದರು. ಈ ವೇಳೆ ಸಮೀಪದಲ್ಲಿದ್ದ ಗೂಡಿನ ಜೇನು ನೊಣಗಳು ದಾಳಿ ನಡೆಸಿದ್ದರಿಂದ ಶಾಸಕ ಭೀಮಣ್ಣ ನಾಯ್ಕ್‌, ಪೌರಾಯುಕ್ತ ಕಾಂತರಾಜ, ಸದಸ್ಯ ಖಾದರ್ ಆನವಟ್ಟಿ ಮತ್ತಿತರರು ಗಾಯಗೊಂಡಿದ್ದಾರೆ. ಟಿಎಸ್‌ಎಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Prajwal Revanna Case: ಎಚ್‌ಡಿಕೆ ಕಿಂಗ್‌ ಆಫ್‌ ಬ್ಲ್ಯಾಕ್‌ಮೇಲ್‌; ತಿರುಗಿಬಿದ್ದ ಡಿ.ಕೆ. ಶಿವಕುಮಾರ್!

ಜೇನುದಾಳಿಯಿಂದ ಶಾಸಕ ಭೀಮಣ್ಣ ನಾಯ್ಕ್‌ ಅವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಮಾಹಿತಿ ನೀಡಿದ್ದಾರೆ.

Continue Reading

ಕರ್ನಾಟಕ

ವಿಸ್ತಾರ ಗ್ರಾಮ ದನಿ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮತದಾನ, SSLC ಫಲಿತಾಂಶದಂತೆ!

Vistara Gramadani: ಹಾಗೆ ನೋಡಿದರೆ, ಹೆಚ್ಚು ಓದಿದದವರು ನಾಗರಿಕತೆಯಲ್ಲಿ ಮುಂದಿದ್ದೇವೆ ಅಂತ ಭ್ರಮಿಸುವ ನಗರವಾಸಿಗಳು ಮತದಾನದಂತಹ ಕರ್ತವ್ಯದಲ್ಲಿ ಗ್ರಾಮೀಣ ಪ್ರದೇಶದವರಿಗಿಂತ ಪರ್ಸಂಟೇಜಿನಲ್ಲಿ ಮುಂದಿರಬೇಕಿತ್ತು. ಆದರೆ, ವಾಸ್ತವವಾಗಿ ಮತದಾನ ಇರಲಿ, PUC ಪಲಿತಾಂಶ ಇರಲಿ, ಒಟ್ಟಾರೆ ಆರೋಗ್ಯ ನೆಮ್ಮದಿಗಳ ವಿಚಾರವೇ ಇರಲಿ… ಗ್ರಾಮೀಣ ಪ್ರದೇಶದಲ್ಲೇ ಪರ್ಸಂಟೇಜ್ ಜಾಸ್ತಿ.

VISTARANEWS.COM


on

ವಿಸ್ತಾರ ಗ್ರಾಮದನಿ Vistara Gramadaani
ವಿಜಯಪುರ ಲೋಕಸಭಾ ಕ್ಷೇತ್ರದ ನಿಡಗುಂದಿ ತಾಲೂಕಿನ ಹೆಬ್ಬಾಳ, ಯಲಗೂರ, ಬೀರಲದಿನ್ನಿ ಹಾಗೂ ಬಳಬಟ್ಟಿ ಗ್ರಾಮದಲ್ಲಿ ಮಂಗಳವಾರ ನರೇಗಾ ಯೋಜನೆಯಡಿ ನೋಂದಾಯಿತ 256 ಕೂಲಿಕಾರರು ತಮ್ಮ ಹಕ್ಕು ಚಲಾಯಿಸಿ, ನರೇಗಾ ಕೆಲಸಕ್ಕೆ ಹಾಜರಾಗಿ ಇತರರಿಗೆ ಮಾದರಿ ಆಗಿದ್ದಾರೆ.
Koo
Aravind Sigadal

| ಅರವಿಂದ ಸಿಗದಾಳ್, ಮೇಲುಕೊಪ್ಪ
ಪ್ರತೀ ವರ್ಷ ಬಹುತೇಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ ಮರುದಿನ ಪತ್ರಿಕೆಗಳಲ್ಲಿ ಕಾಣುವ ಸಾಮಾನ್ಯ ಹೆಡ್ಡಿಂಗ್‌: ‘ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ’ ಅಥವಾ ‘ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಮುಂದೆ’ ಅಥವಾ ‘ಹೆಣ್ಮಕ್ಳೇ ಸ್ಟ್ರಾಂಗು ಗುರು’ ಇತ್ಯಾದಿ. ಅದರಲ್ಲೂ ‘ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ’ ಎಂಬುದು ಒಂದು ವಿಶೇಷವಾದ ವಿಚಾರ. ಹಾಗೆಯೇ ಮತದಾನ ಸಂದರ್ಭಗಳಲ್ಲೂ ಇದೇ ವಿಶೇಷ ಕಾಣುತ್ತೇವೆ. ಗ್ರಾಮೀಣ ಪ್ರದೇಶಗಳಲ್ಲಿ ಯಾವಾಗಲೂ ಅತಿ ಹೆಚ್ಚು ಮತದಾನ ನಡೆಯುತ್ತದೆ. ಸ್ವೀಪ್ (SVEEP Systematic Voters’ Education and Electoral Participation) ಜಾಗೃತಿ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದವರನ್ನು (Vistara Gramadani) ತಲುಪದೇ ಇದ್ದರೂ ಮತದಾನ ಮಾತ್ರ ನಗರ ಪ್ರದೇಶಗಳಿಗಿಂತ ಹಳ್ಳಿಗಳಲ್ಲಿ ಹೆಚ್ಚು.

ನಗರಗಳಿಗಿಂತ ಹಳ್ಳಿ, ಪಟ್ಟಣಗಳಲ್ಲಿ ಶೇಕಡಾವಾರು ಓಟ್ ಜಾಸ್ತಿ ಕಾರಣವೇನು?

ಹೌದು, ಹಳ್ಳಿ ಪಟ್ಟಣಗಳಲ್ಲಿ ಮತದಾನ ಹೆಚ್ಚು. ಹಳ್ಳಿ ಪಟ್ಟಣಗಳ ಕೆಲವು ಬೂತ್‌ಗಳಲ್ಲಿ 100% ಮತದಾನ ಆಗಿದ್ದೂ ಇದೆ. ಸಾಮಾನ್ಯವಾಗಿ ಹಳ್ಳಿಗಳ ಬೂತ್‌ಗಳಲ್ಲಿ 80-90% ಮತದಾನ ‘ಗ್ಯಾರಂಟಿ’. ಗ್ರಾಮೀಣ ಪ್ರದೇಶಗಳಲ್ಲಿ ಮತದಾನ ಹೆಚ್ಚಾಗಲು ಹಲವರು ಕಾರಣಗಳಿವೆ.

  1. ಹಳ್ಳಿಗಳಲ್ಲಿ ಹೆಚ್ಚಿನ ಮತದಾರರು ಕೇವಲ ಮತದಾರರಾಗಿ ಇರುವುದಿಲ್ಲ. ಯಾವುದೋ ಪಕ್ಷಗಳ ವ್ಯಕ್ತಿಗಳ ಬೆಂಬಲಿತ ವ್ಯಕ್ತಿಗಳಾಗಿರುತ್ತಾರೆ.
  2. ಪಕ್ಷಗಳ ಬೂತ್ ಕಾರ್ಯಕರ್ತರೊಂದಿಗೆ ಎಲ್ಲಾ ಮತದಾರರ ಸಂಪರ್ಕ ಇರುತ್ತದೆ. ಮತ ಹಾಕಿಲ್ಲ ಅಂದರೆ, ಮತ ಹಾಕದಿರುವ ವಿಚಾರ ಇಡೀ ಹಳ್ಳಿಗೆ ಗೊತ್ತಾಗುತ್ತದೆ. ‘ಮತ ಹಾಕದೆ ಸುದ್ದಿ ಆಗುವುದು ಬೇಡ’ ಎಂಬ ಕಾರಣಕ್ಕೆ ಹಳ್ಳಿಗಳಲ್ಲಿ ಮತದಾನ ಮಾಡುವವರೂ ಇದ್ದಾರೆ.
  3. ಹಳ್ಳಿ ಪಟ್ಟಣಗಳಲ್ಲಿ ಮತದಾರರಿಗೆ ರಾಜಕೀಯದಾಟದಲ್ಲಿ ಆಸಕ್ತಿ ಜಾಸ್ತಿ. ದೊಡ್ಡ ನಗರಗಳಲ್ಲಿ ಹೆಚ್ಚಿನ ಜನರಿಗೆ, ಅದರಲ್ಲೂ ದೊಡ್ಡ ಸಂಬಳದ ದೊಡ್ಡ ಹುದ್ದೆಯಲ್ಲಿ ಇರುವವರಿಗೆ ರಾಜಕೀಯ ಆಸಕ್ತಿ ವಿಷಯ ಆಗಿರುವುದಿಲ್ಲ. ಒಂದು ರೀತಿಯಲ್ಲಿ ನಗರವಾಸಿಗಳಿಗೆ ರಾಜಕೀಯ ಒಂದು ಜಿಗುಪ್ಸೆ.
  4. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಜನರು ಸರ್ಕಾರಿ ಇಲಾಖೆಗಳಿಂದ ಫಲಾನುಭವಿ ಆಗಿರುತ್ತಾರೆ ಅಥವಾ ಯಾವುದಾದರೂ ಕೆಲಸಗಳು ಇಲಾಖೆಗಳಿಂದ ಬಾಕಿ ಉಳಿದಿರುತ್ತವೆ. ಆಗಿರುವ ಕೆಲಸ ಅಥವಾ ಆಗಬೇಕಿರುವ ಕೆಲಸದ ಹಿಂದೆ ಓಡಾಡುವವರು ಪಕ್ಷ ಪ್ರತಿನಿಧಿಗಳಾಗಿರುತ್ತಾರೆ ಮತ್ತು ಆ ಪ್ರತಿನಿಧಿಗಳು ಮತದಾನ ಸಂದರ್ಭದಲ್ಲಿ ಮತದಾರರನ್ನು ಮತದಾರ ಪ್ರಕ್ರಿಯೆಗೆ ತೊಡಗುವಂತೆ ಪ್ರಭಾವ ಬೀರಿರುತ್ತಾರೆ.
  5. ಜಾತ್ರೆ, ಊರಿನ ಹಬ್ಬಗಳಂತೆ ಎಲೆಕ್ಷನ್ ಕೂಡ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಒಂದು ಉತ್ಸವ ಇದ್ದಂತೆ, ಹೆಚ್ಚಿನವರು ಉತ್ಸಾಹದಿಂದಲೇ ಭಾಗವಹಿಸುತ್ತಾರೆ. ಹಳ್ಳಿಯ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆಯುವಾಗ, ಭೇಟಿಯಾದ ಸಂದರ್ಭಗಳಲ್ಲಿ ರಾಜಕೀಯ ವಿಚಾರಗಳು ಚರ್ಚೆಯ ಒಂದು ಸಬ್ಜೆಕ್ಟ್ ಆಗಿರುತ್ತದೆ. ಇದರ ಪ್ರಭಾವ, ಮತದಾನ ಹೆಚ್ಚಲು ಪರೋಕ್ವ ಕಾರಣಗಳಲ್ಲಿ ಒಂದಾಗಿರುತ್ತದೆ.
  6. ದೊಡ್ಡ ನಗರಗಳಲ್ಲಿ ವೃತ್ತಿಯಲ್ಲಿ ಇರುವವರು, ಚುನಾವಣೆಯ ರಜೆಯಲ್ಲಿ ಊರಿಗೆ ಬಂದಿರುವುದರಿಂದ ಮತ್ತು ಕುಟುಂಬದವರು ಮತದಾನ ಮಾಡುವಾಗ ಸಹಜವಾಗಿ ಪ್ರೇರಿತಗೊಂಡು ಮತದಾನಕ್ಕೆ ಮುಂದಾಗುತ್ತಾರೆ. ನಗರದಲ್ಲೇ ಹುಟ್ಟಿ ಬೆಳೆದವರು ರಜೆ ಸಿಕ್ಕಿದರೆ ಗಿರಿಧಾಮದ ತುದಿಗೆ ಜಾಲಿ ಪಿಕ್‌ನಿಕ್ ಹೋಗುವವರೇ ಹೆಚ್ಚು!
  7. ದೊಡ್ಡ ನಗರದ ಜನರು ಹಣ, ವೃತ್ತಿ, ಐಷಾರಾಮಿ ಜೀವನಕ್ಕೆ ಕೊಟ್ಟ ಪ್ರಾಧಾನ್ಯತೆಯನ್ನು ಜೀವನದ ಅಗತ್ಯದ ಪ್ರಮುಖ ವಿಚಾರಗಳಲ್ಲಿ ಕೊಡುವುದಿಲ್ಲ. ಅದು ಅಡುಗೆ ಮನೆಯ ಕೆಲಸವಿರಬಹುದು, ಸಾಮಾಜಿಕ ಚಟುವಟಿಕೆಗಳಿರಬಹುದು, ರಾಜಕೀಯವಿರಬಹುದು. ಹಳ್ಳಿಗಳಲ್ಲಿ ಆ ರೀತಿ ವಾತಾವರಣ ಇರುವುದಿಲ್ಲ.
  8. ಹಳ್ಳಿಗಳ ಜನಗಳ ಮಧ್ಯೆ ಒಂದು ಸ್ನೇಹ ಸಂಬಂಧ ಅಥವಾ ಬಾಂಧವ್ಯದ ಸಂಬಂಧ ಗಟ್ಟಿ ಇರುತ್ತದೆ. ಅದರ ಪರಿಣಾಮ, ಎಲ್ಲಾ ವಿಚಾರಗಳಂತೆ ರಾಜಕೀಯ ಸಂವಹನವೂ ನಡೆಯುತ್ತಿರುತ್ತದೆ. ಮತದಾನಕ್ಕೆ ಆ ಸಂವಹನ ಪ್ರೇರಣೆಯೂ ಆಗಿರುತ್ತದೆ.
  9. ಹಳ್ಳಿಗಳ ಜನರಲ್ಲಿ ರಾಜಕೀಯದ ಆಗುಹೋಗುಗಳ ಅರಿವು, ತಿಳಿವಳಿಕೆ ಹೆಚ್ಚು. ರಾಜಕಾರಣಿಗಳು/ಪಕ್ಷಗಳು ಮಾಡಿದ ಸಾಧನೆಗಳು ಅಥವಾ ನಿಷ್ಕ್ರಿಯತೆ ಬಗ್ಗೆ ಹಳ್ಳಿಯ ಸಾಮಾನ್ಯ ಪ್ರಜೆಗೆ ಇರುವ ಜ್ಞಾನ, ಪರಿಚಯ ದೊಡ್ಡ ನಗರವಾಸಿಗಳಿಗೆ ಇರುವುದಿಲ್ಲ. ನಗರ ನಿವಾಸಿಗಳಲ್ಲಿ ಅನೇಕರಿಗೆ ತಮ್ಮ MLA ಯಾರು? ಕಾರ್ಪೋರೇಟರ್ ಯಾರು ಅಂತಾನೇ ಗೊತ್ತಿರುವುದಿಲ್ಲ. ಹಳ್ಳಿಯ ಸಾಮಾನ್ಯರಿಗೂ MLA ಯಾರು ಅಂತ ಕೇಳಿದರೆ, ಕಳೆದ ಮೂರು ಬಾರಿಯ MLA ಗಳ ಪೂರ್ಣ ವಿವರ ಕೊಡುವಷ್ಟು ಮಾಹಿತಿ ಅವರ ಬಳಿ ಇರುತ್ತದೆ. ಇಂತಹ ಅರಿವು ಹಳ್ಳಿಗಳಲ್ಲಿ ಜನರನ್ನು ಮತಗಟ್ಟೆಗೆ ಬರುವಂತೆ ಮಾಡುತ್ತವೆ.
  10. ಹಳ್ಳಿಯ ಮತದಾರರು ನಗರದ ನಿವಾಸಿಗಳಷ್ಟು ಸೋಮಾರಿಗಳಲ್ಲ! ನಿರಾಶಾವಾದಿಗಳಲ್ಲ! ಸಾಮಾನ್ಯವಾಗಿ, ನಗರದವರಿಗಿಂತ ಹಳ್ಳಿಗರು ಹೆಚ್ಚು ಶ್ರಮಿಕರಾಗಿರುವುದರಿಂದ, ಮಾನಸಿಕ ಮತ್ತು ದೈಹಿಕ ಆರೋಗ್ಯದ ವಿಚಾರದಲ್ಲಿ, ಗಟ್ಟಿತನದಲ್ಲಿ ಹಳ್ಳಿಗರು ಒಂದು ಹೆಜ್ಜೆ ಮುಂದೆ ಇರ್ತಾರೆ. ಸರದಿಯಲ್ಲಿ ಅರ್ಧ ಗಂಟೆ ಮತದಾನಕ್ಕೆ ನಿಲ್ಲಬೇಕಾದರೆ, ಅದನ್ನೂ ಕೂಡ ಸಂಭ್ರಮಿಸುತ್ತಾರೆ. ನಗರದವರಂತೆ ಅಸಹನೆ, ಚಡಪಡಿಕೆ ಹಳ್ಳಿಗರಲ್ಲಿ ಕಡಿಮೆ.

ಹಾಗೆ ನೋಡಿದರೆ, ಹೆಚ್ಚು ಓದಿದದವರು ನಾಗರಿಕತೆಯಲ್ಲಿ ಮುಂದಿದ್ದೇವೆ ಅಂತ ಭ್ರಮಿಸುವ ನಗರವಾಸಿಗಳು ಮತದಾನದಂತಹ ಕರ್ತವ್ಯದಲ್ಲಿ ಗ್ರಾಮೀಣ ಪ್ರದೇಶದವರಿಗಿಂತ ಪರ್ಸಂಟೇಜಿನಲ್ಲಿ ಮುಂದಿರಬೇಕಿತ್ತು. ಆದರೆ, ವಾಸ್ತವವಾಗಿ ಮತದಾನ ಇರಲಿ, ಪಿಯುಸಿ ಪರೀಕ್ಷೆ ಫಲಿತಾಂಶ ಇರಲಿ, ಒಟ್ಟಾರೆ ಆರೋಗ್ಯ ನೆಮ್ಮದಿಗಳ ವಿಚಾರವೇ ಇರಲಿ… ಗ್ರಾಮೀಣ ಪ್ರದೇಶದಲ್ಲೇ ಪರ್ಸಂಟೇಜ್ ಜಾಸ್ತಿ.

ಇದನ್ನೂ ಓದಿ | Lok Sabha Election 2024: 2ನೇ ಹಂತದಲ್ಲಿ ಶೇ.70.41 ಮತದಾನ; ಕಳೆದ ಬಾರಿಗಿಂತ ಹೆಚ್ಚು, ಚಿಕ್ಕೋಡಿಯಲ್ಲಿ ಗರಿಷ್ಠ

ನಗರದಲ್ಲಿ ಯಾವುದೇ ಕಾರಣವಿಲ್ಲದೆ ಮತದಾನದಿಂದ ತಪ್ಪಿಸಿಕೊಳ್ಳುವ, ವಿವೇಕ ರಹಿತರಾಗಿ ಮತದಾನ ಕರ್ತವ್ಯ ಮಾಡದ ನಾಗರಿಕರಿಗೆ ಧಿಕ್ಕಾರ ಹೇಳುವಾಗಲೇ, ಮತದಾನ ಪೂಜೆಯನ್ನು ಶ್ರದ್ಧೆಯಿಂದ ಮಾಡಿದ ಗ್ರಾಮೀಣವಾಸಿ ದೇಶ ಪ್ರೇಮಿಗಳಿಗೆ ಒಂದು ಜೈಕಾರ ಹೇಳೋಣ.

Continue Reading

ಕರ್ನಾಟಕ

Prajwal Revanna Case: ಎಸ್‌ಐಟಿ ಮೇಲೆ ಕೇಸ್‌ ಹಾಕ್ತೇನೆ, ಶೀಘ್ರವೇ ಪೆನ್‌ಡ್ರೈವ್‌ ಪ್ರೊಡ್ಯುಸರ್‌ ಹೆಸರು ಹೇಳ್ತೇನೆ ಎಂದ ದೇವರಾಜೇಗೌಡ

Prajwal Revanna Case: ರಾಜ್ಯಾದ್ಯಂತ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಬಹಳ ಚರ್ಚೆ ನಡೆಯುತ್ತಿದೆ. ಅಶ್ಲೀಲ ವಿಡಿಯೊ ಸೋರಿಕೆ ಮಾಡಿದವರ ರಕ್ಷಣೆಗೆ ನಾಲ್ವರು ಸಚಿವರು ಇದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂದು ಶೀಘ್ರದಲ್ಲೇ ಬಹಿರಂಗಪಡಿಸುವೆ ಎಂದು ವಕೀಲ ದೇವರಾಜೇಗೌಡ ಹೇಳಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ (Prajwal Revanna Case) ಎಚ್‌.ಡಿ.ರೇವಣ್ಣ ಅವರನ್ನು ಮಾತ್ರ ಬಂಧಿಸಿದ್ದಾರೆ. ಆದರೆ. ಪೆನ್‌ಡ್ರೈವ್‌ ಕೊಟ್ಟಿರುವ ಕಾರ್ತಿಕ್‌ ಗೌಡ ವಿರುದ್ಧ ಯಾವುದೇ ಕ್ರಮ ವಹಿಸಿಲ್ಲ. ಒಬ್ಬ ಆರೋಪಿ ತಮ್ಮ‌ ಮುಂದೆ ಇದ್ದಾಗಲೇ ಬಂಧಿಸದ ಎಸ್‌ಐಟಿ ವಿರುದ್ಧ ನಾಳೆ ಕೋರ್ಟ್‌ನಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ. ಎಸ್‌ಐಟಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಖಾಸಗಿ ದೂರು ನೀಡುತ್ತೇವೆ ಎಂದು ವಕೀಲ ದೇವರಾಜೇಗೌಡ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಜ್ಯಾದ್ಯಂತ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಬಹಳ ಚರ್ಚೆ ನಡೆಯುತ್ತಿದೆ. ಯಾವಾಗ ಹೆಸರುಗಳು ಹೊರಗೆ ಬಂತೋ ರಕ್ಷಣೆ ಮಾಡಿಕೊಳ್ಳುವ ಕೆಲಸ ಆಗುತ್ತಿದೆ. ನನ್ನ ವಿರುದ್ಧವೂ ದೂರು ನೀಡಲು ಆರಂಭಿಸದ್ದಾರೆ‌. ನಾನು ಸರ್ಕಾರಕ್ಕೆ ಸವಾಲು ಹಾಕುತ್ತೇನೆ, ನನ್ನ ಹಿಂದೆ ಸತ್ಯ, ನ್ಯಾಯ, ಧರ್ಮ ಇದೆ. ನಾನು ಯಾರಿಗೂ ಹೆದರಲ್ಲ ಎಂದು ತಿಳಿಸಿದರು.

ಪೆನ್‌ ಡ್ರೈವ್‌ ವಿಡಿಯೊ ಸೋರಿಕೆ ಮಾಡಿದವರ ರಕ್ಷಣೆಗೆ ನಾಲ್ವರು ಸಚಿವರು ಇದ್ದಾರೆ. ಪೆನ್ ಡ್ರೈವ್ ಪ್ರೊಡ್ಯುಸರ್ ಯಾರು? ಹಂಚಿಕೆದಾರರು ಯಾರು? ಎಂಬ ಮಾಹಿತಿ ಇದೆ. ಎಲ್ಲವನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ | Prajwal Revanna Case: ಎಚ್‌ಡಿಕೆ ಕಿಂಗ್‌ ಆಫ್‌ ಬ್ಲ್ಯಾಕ್‌ಮೇಲ್‌; ತಿರುಗಿಬಿದ್ದ ಡಿ.ಕೆ. ಶಿವಕುಮಾರ್!

ಮಹಿಳಾ ಆಯೋಗದ ಅಧ್ಯಕ್ಷರು ಸಿಎಂಗೆ ದೂರು ನೀಡಿದ್ದರು. 2,867 ವೀಡಿಯೊ ಇದ್ದು, ಇದು ಪ್ರಪಂಚದಲ್ಲಿ ಅತಿ ದೊಡ್ಡ ಲೈಂಗಿಕ ಹಗರಣ ಆಗಿದೆ. ವಿಡಿಯೊ ಮಾಡಿದವರನ್ನು ಬಂಧಿಸಿ ಎಂದು ಸರ್ಕಾರಕ್ಕೆ‌ ಮನವಿ ಮಾಡಿದ್ದಾರೆ. ವಿಡಿಯೊ ಮಾಡಿದವರು ಮತ್ತು ಹಂಚಿದವರ ವಿರುದ್ಧ ಕ್ರಮ‌ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದರು. ಆದರೆ, ಪ್ರಕರಣದಲ್ಲಿ ಪೆನ್ ಡ್ರೈವ್ ಹರಿಬಿಟ್ಟವರ ವಿರುದ್ಧ ಕ್ರಮವಾಗಿಲ್ಲ. ನಾನು ಕೂಡ ಸಂತ್ರಸ್ತ, ನನಗೆ ವಿಡಿಯೊಕಾಲ್‌ ಮಾಡಿ ಹನಿ ಟ್ರ್ಯಾಪ್‌ ಮಾಡಲು ಯತ್ನಿಸಿ, ನನ್ನ ವಿರುದ್ಧ ಸುಳ್ಳು ದಾಖಲೆ ಸೃಷ್ಟಿ ಮಾಡಲು ಮುಂದಾದರು. ಈ ರೀತಿ ನನ್ನ ಕಟ್ಟಿಹಾಕಬಹುದು ಎಂದು ನೋಡಿದರೆ, ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ ಎಂದರು.

ನಾನು ವಕೀಲನಾಗಿ ಹೋರಾಟ‌ ಮಾಡುತ್ತಿದ್ದೇನೆ. ನವೀನ್ ಗೌಡ, ಕಾರ್ತಿಕ್ ವಿರುದ್ಧ ಎಫ್‌ಐಆರ್‌ ಆಗಿದೆ. ಪೆನ್ ಡ್ರೈವ್ ಹಂಚಿಕೆ‌ ವಿಚಾರವಾಗಿ ಎಸ್‌ಐಟಿ ರಚನೆ ಮಾಡಿದ್ದಾರೆ. ಆದರೆ, ಹೊಳೆನರಸೀಪುರ ಪ್ರಕರಣ ಮಾತ್ರ ಎಸ್‌ಐಟಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಪೆನ್ ಡ್ರೈವ್ ಪ್ರಕರಣ ಮಾತ್ರ ವರ್ಗಾವಣೆ ಆಗಿಲ್ಲ. ಪೆನ್ ಡ್ರೈವ್ ವಿಚಾರವಾಗಿ ನನ್ನ ಸಾಕ್ಷಿಯಾಗಿ ಕರೆದಿದ್ದರು. ಆ ಕೇಸ್ ಪಡೆದಿಲ್ಲ ಅಂದ ಮೇಲೆ ನನ್ನನ್ನು ವಿಚಾರಣೆ ಮಾಡುವ ಅಗತ್ಯವಿರಲಿಲ್ಲ ಎಂದು ಹೇಳಿದರು.

ಈ ಹಿಂದೆ ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದೆ, ಬೇರೆ ಇನ್ಯಾರಿಗೂ ಕೊಟ್ಟಿರಲಿಲ್ಲ. ಅವರೇ ಹಂಚಿದ್ದಾರೆ ಅಂತ ಕಾರ್ತಿಕ್‌ ಹೇಳಿದ್ದಾನೆ. ಮತ್ತೊಂದೆಡೆ ನಾನು ಕೊಟ್ಟಿರುವುದು ಪೆನ್ ಡ್ರೈವ್ ಅಲ್ಲ. ಮೆಮೊರಿ ಕಾರ್ಡ್ ಅಂತ ಹೇಳಿದ್ದಾನೆ. ಮತ್ತೊಂದೆಡೆ ನನ್ನ ವಿರುದ್ಧ ಬಾರ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ದೂರು ನಿಡೀದ್ದಾರೆ. ಕಕ್ಷಿದಾರರು ಕೊಟ್ಟಿರುವ ಮಾಹಿತಿ ಗೌಪ್ಯವಾಗಿದೆ. ಅವರಿಂದಲೇ ಸಹಿ ಮಾಡಿಸಿ ಮುಚ್ಚಿಡಲಾಗಿದೆ. ಅದನ್ನು ನ್ಯಾಯಾಧೀಶರ ಮುಂದೆಯೇ ಓಪನ್ ಮಾಡಲಾಗುವುದು ಎಂದು ತಿಳಿಸಿದರು.

ಎಸ್‌ಐಟಿ ತನಿಖೆಗೆ ಹಾಜರಾಗಿದ್ದೆ ಅಂತ‌ ಕಾರ್ತಿಕ್ ಹೇಳಿಕೆ ನೀಡಿದ್ದಾನೆ. ಸರ್ಕಾರ ಒನ್ ಸೈಡ್ ತನಿಖೆ ಮಾಡುತ್ತಿದೆ. ನಾನೂ ಕಾಂಗ್ರೆಸ್‌ನಲ್ಲಿ ಇದ್ದವನು. ಅಲ್ಲಿ ಅವರ ಆಟ ನೋಡಿದ್ದೇನೆ. ಅಶ್ಲೀಲ ವಿಡಿಯೊ ಮಾಡಿದವರು ಮತ್ತು ವಿಡಿಯೊ ಹಂಚಿಕೆ ಮಾಡಿದವರ ವಿರುದ್ಧವೂ ಬಗ್ಗೆ ತನಿಖೆ ಮಾಡಬೇಕು. ಇಂದು ಕಾರ್ತಿಕ್ ಗೌಡನ ನಿರೀಕ್ಷಣಾ ಜಾಮೀನು ರಿಜೆಕ್ಟ್ ಆಗಿದೆ. ಈ ಪೆನ್ ಡ್ರೈವ್ ಹೊರಬರುತ್ತಿದ್ದಂತೆ ಸರ್ಕಾರ ತಲ್ಲಣ‌ ಆಗಿದೆ ಎಂದು ಹೇಳಿದರು.

ಅವನ ಬಳಿ ಹಣ ಇಲ್ಲ, ಅದಕ್ಕೆ ನಮ್ಮ‌ ಬಳಿ ಬಂದ ಅಂತ ಆ ಮಹಾನುಭಾವ ಕಾರ್ತಿಕ್ ಹೇಳಿಕೆ ನೀಡಿದ್ದಾನೆ. ನಾನು ಅವನಿಗೆ ಕರೆ ಮಾಡಿದ್ನಾ? ಅಥವಾ ಅವರು ಮಾಡಿದ್ರಾ ನೋಡಿ? ನನಗೆ ಶಿವರಾಮೇಗೌಡ ಯಾರು ಅಂತಲೇ ಗೊತ್ತಿರಲಿಲ್ಲ. ಅವರನ್ನ ಟಿವಿಯಲ್ಲಿ ನೋಡಿದ್ದೆ‌. ನನ್ನನ್ನ ಅವರೇ ಕರೆಸಿಕೊಂಡು ರೇವಣ್ಣ ಕುಟುಂಬದ ಬಗ್ಗೆ ಚರ್ಚೆ ಮಾಡಿದರು. ಒಂದು ಕುಟುಂಬ ಅವನತಿಗೆ ತರುವ ವಿಚಾರ ಗೊತ್ತಾದಾಗ ನಾನು ಕಾಲ್ ರೆಕಾರ್ಡ್ ಮಾಡಬೇಕಾಯಿತು ಎಂದು ತಿಳಿಸಿದರು.

ಇನ್ನೂ ಯಾವ ವಿಡಿಯೋ ಇದೆ ಗೊತ್ತಿಲ್ಲ. ಆದರೆ ಅವರ ಮರ್ಯಾದೆ ಹಾಳಾಗಬಾರದು. ವಕೀಲರ ಸಂಘ, ಬಿಜೆಪಿಯು ಸಂತ್ರಸ್ತ ಮಹಿಳೆಯರ ಪರ ಇರಲಿದೆ. ವಾದ ಮಂಡಿಸಲು ನಾವು ಇದ್ದೇವೆ. ಯಾರೂ ಪ್ರಾಣ ಕಳೆದುಕೊಳ್ಳುವುದು ಬೇಡ. ಪೆನ್ ಡ್ರೈವ್ ಹಂಚಿಕೆ ಮಾಡಿರುವುದು ಕಾರ್ತಿಕ್. ಪೆನ್ ಡ್ರೈವ್ ಸಿಕ್ಕವರು, ವಿಡಿಯೊ ನೋಡಿ, ಸಂತ್ರಸ್ತ ಮಹಿಳೆಯರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮಕ್ಕೆ ಎಸ್ಪಿಗೆ ದೂರು ನೀಡಿದ್ದಾರೆ ಎಂದು ಹೇಳಿದರು.

ಕಾರ್ತಿಕ್ ಗೌಡ ಯಾವ ರೆಸಾರ್ಟ್‌ನಲ್ಲಿ ಇದ್ದಾನೆ ಎಂಬ ಮಾಹಿತಿ ಇದೆ. ಶೀಘ್ರದಲ್ಲೇ ಎಲ್ಲಾ ದಾಖಲೆ‌ ಬಿಡುಗಡೆ ಮಾಡುವೆ. ಇನ್ನು ಹಾಸನ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್ ಪಟೇಲ್, ನನಗೂ ಕಾರ್ತಿಕ್ ಗೌಡಗೂ ಸಂಬಂಧ ಇಲ್ಲ ಎನ್ನುತ್ತಾನೆ. ಆದರೆ ಒಂದು ಕಡೆ ಕಾರ್ತಿಕ್, ಮಧ್ಯದಲ್ಲಿ ಶ್ರೇಯಸ್ ಪಟೇಲ್, ಮತ್ತೊಂದು ಕಡೆ ಪುಟ್ಟರಾಜು ಇದ್ದಾರೆ ಎಂದು ಫೋಟೊ ತೋರಿಸಿದರು.

ಇದನ್ನೂ ಓದಿ | Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

ರಾಜಕೀಯದಲ್ಲಿ ನಾನಿಲ್ಲ ಎಂದು ಕಾರ್ತಿಕ್‌ ಹೇಳುತ್ತಾನೆ. ಆದರೆ, ಕಾರ್ತಿಕ್ ಮತ್ತು ಶ್ರೇಯಸ್ ಪಟೇಲ್ ರಾಜಕೀಯ ಸಭೆಯಲ್ಲಿ ವೇದಿಕೆ ಮೇಲೆ ಕುಳಿತಿದ್ದಾರೆ. ಊಟಕ್ಕೆ ಕುಳಿತಿರುವ ಫೋಟೊ ಇದೆ. ನಿಮ್ಮ ತಾತ ನಮ್ಮ ಗುರುಗಳು, ಅವರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡ, ಒಳ್ಳೆಯ ದಾರಿಯಲ್ಲಿ ಹೋಗು ಎಂದು ಶ್ರೇಯಸ್ ಪಟೇಲ್‌ಗೆ ಹೇಳಿದರು.

Continue Reading

ಹುಬ್ಬಳ್ಳಿ

Lok Sabha Election 2024: ಅಬ್ಬಾ! ಅಂತೂ ಮುಗೀತು ಪುಟ್ಟಾ ಮಹಾಯುದ್ಧ ಎಂದ ಪ್ರಲ್ಹಾದ್‌ ಜೋಶಿ!

Lok Sabha Election 2024: ಕಳೆದ ಮೂರ್ನಾಲ್ಕು ತಿಂಗಳಿಂದ ಬಿಡುವಿಲ್ಲದ ಚುನಾವಣೆ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಬುಧವಾರವಿಡೀ ಕುಟುಂಬದೊಂದಿಗೆ ಸಮಯ ಕಳೆದರು. ಹುಬ್ಬಳ್ಳಿಯ ಮನೆಯಲ್ಲಿ ಜೋಶಿ ದಂಪತಿ ಮಕ್ಕಳ ಜತೆ ಸೇರಿ ಮೊಮ್ಮಕ್ಕಳನ್ನು ಆಡಿಸುತ್ತ ಸಂತಸಪಟ್ಟರು.

VISTARANEWS.COM


on

Lok Sabha Election 2024 Pralhada Joshi who came out of the election frenzy
Koo

ಹುಬ್ಬಳ್ಳಿ: ಅಬ್ಬಾ ಅಂತೂ ಮುಗೀತಪ್ಪ ಮೋದಿ ಅವರ ಮೂರನೇ ಯುದ್ಧ! ನನ್ನ ಐದನೇ ಮಹಾಯುದ್ಧ!! ಎಂಬಂತೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಈಗ ರಿಲ್ಯಾಕ್ಸ್ ಮೂಡಿಗೆ (Lok Sabha Election 2024) ಜಾರಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ನಿನ್ನೆವರೆಗೂ ಬಿಡುವಿಲ್ಲದ ಚುನಾವಣೆ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಪ್ರಲ್ಹಾದ್‌ ಜೋಶಿ ಅವರು ಬುಧವಾರವಿಡೀ ಕುಟುಂಬದೊಂದಿಗೆ ಸಮಯ ಕಳೆದರು. ಹುಬ್ಬಳ್ಳಿಯ ಮನೆಯಲ್ಲಿ ಜೋಶಿ ದಂಪತಿ ಮಕ್ಕಳ ಜತೆ ಸೇರಿ ಮೊಮ್ಮಕ್ಕಳನ್ನು ಆಡಿಸುತ್ತ ಖುಷಿ ವ್ಯಕ್ತಪಡಿಸಿದರು.

ಇದನ್ನೂ ಓದಿ: T20 World Cup 2024: ಕ್ರಿಕೆಟ್​ ಪ್ರಿಯರಿಗೆ ಗುಡ್​ ನ್ಯೂಸ್​​; ಈ ಮೊಬೈಲ್‌ ಆ್ಯಪ್​ನಲ್ಲಿ ಟಿ20 ವಿಶ್ವಕಪ್ ಉಚಿತ ಪ್ರಸಾರ

ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಸಚಿವ ಪ್ರಲ್ಹಾದ್‌ ಜೋಶಿ ಅವರು ಕಳೆದ ಮೂರ್ನಾಲ್ಕು ತಿಂಗಳಿಂದಲೂ ಅತ್ತ ಕೇಂದ್ರದಲ್ಲಿ ಇಲಾಖೆ ಕೆಲಸ ಇತ್ತ ಸ್ವಕ್ಷೇತ್ರದಲ್ಲಿ ಚುನಾವಣಾ ಸಿದ್ಧತೆ ಎನ್ನುತ್ತ ಹಗಲಿರುಳು ಶ್ರಮಿಸಿದ್ದರು. ಕಳೆದೊಂದು ತಿಂಗಳಿಂದ ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ನಡೆಸಿದ್ದರು. ಚುನಾವಣೆ ಸಮೀಪಿಸಿದಂತೆ ವಿವಿಧ ಸಮುದಾಯಗಳ ಸಮಾವೇಶ, ಬಿಜೆಪಿ ಕಾರ್ಯಕರ್ತರ ಸಭೆ, ಪ್ರಚಾರ ಸಭೆ ಹೀಗೆ ಸದಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿದ್ದ ಸಚಿವ ಜೋಶಿ ಅವರಿಗೆ ಜಂಜಾಟದಿಂದ ಈಗ ತುಸು ರಿಲೀಫ್ ಸಿಕ್ಕಿದೆ.

ಇದನ್ನೂ ಓದಿ: Heavy Rain: ಕಳುವರಹಳ್ಳಿಯಲ್ಲಿ ಭಾರೀ ಗಾಳಿ ಮಳೆಗೆ ಶಾಲಾ ಚಾವಣಿ ಕುಸಿತ

ಪತಿ ಪ್ರಲ್ಹಾದ್‌ ಜೋಶಿ ಅವರ ಗೆಲುವಿಗಾಗಿ ಜ್ಯೋತಿ ಜೋಶಿ ಅವರೂ ಕ್ಷೇತ್ರದ ವಿವಿಧೆಡೆ ಮಹಿಳಾ ಕಾರ್ಯಕರ್ತರ ಜತೆ ಸೇರಿ ಪ್ರಚಾರ ನಡೆಸಿದ್ದರು. ಇದೀಗ ಚುನಾವಣೆ, ಪ್ರಚಾರ ಎಲ್ಲದರಿಂದ ಹೊರಬಂದು ಮೊಮ್ಮಕ್ಕಳನ್ನು ಎತ್ತಾಡಿಸಿ ಸಂತಸಪಟ್ಟರು.

Continue Reading
Advertisement
hd revanna jailed prajwal revanna case
ಕ್ರೈಂ12 mins ago

Prajwal Revanna Case: ಎಚ್‌.ಡಿ ರೇವಣ್ಣ ಈಗ ಕೈದಿ ನಂಬರ್‌ 4567, ನಿದ್ದೆ ಮಾಡದೆ ಮೌನಿಯಾಗಿ ಕುಳಿತ ಮಾಜಿ ಸಚಿವ

Nijjar Killling
ವಿದೇಶ12 mins ago

Nijjar Killing: ಒಂದೇ ದಿನದಲ್ಲಿ ಸ್ಟೂಡೆಂಟ್‌ ವೀಸಾ ಪಡೆದು ಕೆನಡಾಕ್ಕೆ ಬಂದಿದ್ನಂತೆ ನಿಜ್ಜರ್‌ ಹಂತಕ

Maldives
ದೇಶ17 mins ago

Maldives: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಆಗಮಿಸಿದ ಮಾಲ್ಡೀವ್ಸ್ ಸಚಿವ ಮೂಸಾ ಜಮೀರ್

SSLC Exam Result 2024 to be declared tomorrow Here are the details
ಶಿಕ್ಷಣ52 mins ago

SSLC Exam Result 2024: ಇಂದು ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಪ್ರಕಟ; ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು? ಇಲ್ಲಿದೆ ಡಿಟೇಲ್ಸ್‌

Cooking Oils
ಆಹಾರ/ಅಡುಗೆ53 mins ago

Cooking Oils: ಭಾರತೀಯ ಅಡುಗೆ ಶೈಲಿಗೆ ಯೋಗ್ಯವಾದ 7 ಅಡುಗೆ ಎಣ್ಣೆಗಳಿವು

Karnataka Weather
ಕರ್ನಾಟಕ2 hours ago

Karnataka Weather: ಇಂದು ಕೊಡಗು, ಹಾಸನ, ಚಿಕ್ಕಮಗಳೂರು ಸೇರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ!

Sam Pitroda
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು

dina bhavishya read your daily horoscope predictions for May 09 2024
ಪ್ರಮುಖ ಸುದ್ದಿ3 hours ago

Dina Bhavishya: 12 ರಾಶಿಗಳ ಇಂದಿನ ಭವಿಷ್ಯ ಏನು? ಯಾರಿಗೆ ಪ್ಲಸ್‌? ಯಾರಿಗೆ ಮೈನಸ್!?

Pune
ದೇಶ8 hours ago

ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ತೆಗೆದ ನೂರಾರು ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಉತ್ತರ ಕನ್ನಡ8 hours ago

Bheemanna Naik: ಶಿರಸಿ ಶಾಸಕ ಭೀಮಣ್ಣ ನಾಯ್ಕ್‌ ಮೇಲೆ ಜೇನು ದಾಳಿ; ಆಸ್ಪತ್ರೆಗೆ ದಾಖಲು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ1 day ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ3 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ3 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ4 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ4 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌