Sindhuri Vs Roopa: ರೋಹಿಣಿ ಸಿಂಧೂರಿ- ಸಾ.ರಾ. ಮಹೇಶ್‌ ಕದನದಲ್ಲಿ ಪೋಲಾಯಿತು ಕೋಟ್ಯಂತರ ರೂ.! - Vistara News

Latest

Sindhuri Vs Roopa: ರೋಹಿಣಿ ಸಿಂಧೂರಿ- ಸಾ.ರಾ. ಮಹೇಶ್‌ ಕದನದಲ್ಲಿ ಪೋಲಾಯಿತು ಕೋಟ್ಯಂತರ ರೂ.!

ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ ಮಹೇಶ್‌ ನಡುವಿನ ಕದನದಿಂದಾಗಿ ಉಂಟಾಗಿರುವ ʼಬಟ್ಟೆ ಬ್ಯಾಗ್​ ಹಗರಣʼ ಕುರಿತು ವಿಸ್ತಾರ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ಕೋಟ್ಯಂತರ ಹಣ ಪೋಲಾಗಿರುವುದು ಕಂಡುಬಂದಿದೆ.

VISTARANEWS.COM


on

rohini-sindhuri
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಇಬ್ಬರು ಪ್ರತಿಷ್ಠಿತರ ನಡುವಿನ ಕದನದಿಂದಾಗಿ ಬರೋಬ್ಬರಿ 6.18 ಕೋಟಿ ರೂ.ಗಳಷ್ಟು ಸಾರ್ವಜನಿಕ ಹಣ ಪೋಲಾಗಿದೆ. ರೋಹಿಣಿ ಸಿಂಧೂರಿ- ರೂಪಾ ಕದನದಲ್ಲಿ ಇದು ಕೂಡ ಪ್ರಸ್ತಾಪವಾಗಿತ್ತು.

ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ ಮಹೇಶ್‌ ನಡುವಿನ ಕದನದಿಂದಾಗಿ ಉಂಟಾಗಿರುವ ʼಬಟ್ಟೆ ಬ್ಯಾಗ್​ ಹಗರಣʼ ಕುರಿತು ವಿಸ್ತಾರ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ.

ರೋಹಿಣಿ ಸಿಂಧೂರಿ ಮೈಸೂರು ಡಿಸಿ ಆಗಿದ್ದಾಗ 14.71 ಲಕ್ಷ ಬಟ್ಟೆ ಬ್ಯಾಗ್​ಗಳನ್ನು ಖರೀದಿಸಿದ್ದರು. ಇದಕ್ಕಾಗಿ 6.18 ಕೋಟಿ ರೂ. ಪಾವತಿಸಿದ್ದರು. ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದರು. ಒಂದು ಬ್ಯಾಗ್​ಗೆ 8-10 ರೂ. ಆಗುತ್ತದೆ. ಆದರೆ ರೋಹಿಣಿ ಸಿಂಧೂರಿ 52 ರೂ. ನೀಡಿದ್ದಾರೆ. ಇದಕ್ಕೆ 5 ಕೋಟಿ ರೂ. ಕಿಕ್​ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದರು.

ಇದರಿಂದಾಗಿ ಒಂದೂವರೆ ವರ್ಷದಿಂದಲೂ ಬಟ್ಟೆ ಬ್ಯಾಗ್​ಗಳು ಇಟ್ಟಲ್ಲೇ ಕೊಳೆಯುತ್ತಿವೆ. ಚಿನ್ನಗಿರಿ ಕೊಪ್ಪಲು ಸಮುದಾಯ ಭವನದಲ್ಲಿ ಬ್ಯಾಗ್​ಗಳ ರಾಶಿ ಬಿದ್ದಿದ್ದು, ಬಂಡಲ್ ಕೂಡ ಓಪನ್ ಮಾಡದೆ ಜಿಲ್ಲಾಡಳಿತ ಅದನ್ನು ಹಾಗೇ ಬಿಟ್ಟಿದೆ. ಅಮೂಲ್ಯವಾದ ಸಾರ್ವಜನಿಕರ ಹಣ ಕಣ್ಣೆದುರೇ ಕಸವಾಗುತ್ತಿದೆ. ಈ ಪ್ರಕರಣದ ತನಿಖೆಗೆ ಸರ್ಕಾರ ಅನುಮತಿ ತಿರಸ್ಕರಿಸಿದೆ ಎಂದು ಈಗ ಐಪಿಎಸ್​ ಅಧಿಕಾರಿ ಡಿ. ರೂಪ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: Sindhuri Vs Roopa : ರೂಪಾ ಹೇಳಿದ, ರೋಹಿಣಿ ಸಿಂಧೂರಿ ಕಟ್ಟಿಸುತ್ತಿರುವ ಮನೆ ಹೇಗಿದೆ? ನೀವೇ ನೋಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Haryana Government : ಹರಿಯಾಣದ ಬಿಜೆಪಿ ಸರ್ಕಾರ ಪತನ ಸಾಧ್ಯತೆ; 3 ಪಕ್ಷೇತರರು ಕಾಂಗ್ರೆಸ್ ಕಡೆಗೆ

Nayab Saini: ಸರ್ಕಾರ ರಚಿಸಲು ಅವರಿಗೆ ನಮ್ಮ ಬೆಂಬಲ ಅಗತ್ಯವಿರುವ ಸಮಯದಲ್ಲಿ ನಮ್ಮನ್ನು ಕರೆದಿದ್ದರು. ಮನೋಹರ್ ಲಾಲ್ ಖಟ್ಟರ್ ಅಧಿಕಾರದಲ್ಲಿ ಇರುವವರೆಗೂ ನಾವು ಬೆಂಬಲಿಸುತ್ತೇವೆ ಎಂದು ನಾವು ನಿರ್ಧರಿಸಿದ್ದೆವು. ಅವರು ಇನ್ನು ಮುಂದೆ ಅಧಿಕಾರದಲ್ಲಿಲ್ಲ . ರೈತರ ಹಿತದೃಷ್ಟಿಯಿಂದ ನಾವು ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

VISTARANEWS.COM


on

Haryana Government
Koo

ನವದೆಹಲಿ: ಹರಿಯಾಣದಲ್ಲಿ ರಾಜಕೀಯ ಬಿಕ್ಕಟ್ಟಲು ತಲೆತೋರಿದೆ. ಅಲ್ಲಿನ ನಯಾಬ್​ ಸೈನಿ (Nayab Saini) ನೇತೃತ್ವದ ಬಿಜೆಪಿ ಸರ್ಕಾರಕ್ಕೆ (Haryana Government) ನೀಡಿದ್ದ ಬೆಂಬಲವನ್ನು ಮೂವರು ಪಕ್ಷೇತರ ಶಾಸಕರು (independent MLA) ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ ಸರ್ಕಾರ ಅತಂತ್ರವಾಗಿದೆ. ಅವರೆಲ್ಲರೂ ಪ್ರತಿಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಪುಂಡ್ರಿ ಕ್ಷೇತ್ರದ ರಣಧೀರ್ ಗೋಲನ್, ನಿಲೋಖೇರಿಯ ಧರಂಪಾಲ್ ಗೊಂಡರ್ ಮತ್ತು ದಾದ್ರಿಯ ಸೋಮ್ಬೀರ್ ಸಿಂಗ್ ಸಾಂಗ್ವಾನ್ ಬೆಂಬಲ ವಾಪಸ್ ಪಡೆದ ಶಾಸಕರು. ರೋಹ್ಟಕ್​ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರೆಲ್ಲರೂ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಬಾದ್​ಶಾಪುರ ಕ್ಷೇತ್ರದ ರಾಕೇಶ್ ದೌಲ್ತಾಬಾದ್ ಕೂಡ ಅವರೊಂದಿಗೆ ಸೇರುವ ನಿರೀಕ್ಷೆಯಿದೆ ಆದರೆ ಸಮಯಕ್ಕೆ ಸರಿಯಾಗಿ ಸ್ಥಳವನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಸಂಗ್ವಾನ್ ಹೇಳಿದ್ದಾರೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಧರಂ ಪಾಲ್ ಗೊಂಡರ್​, ಬಿಜೆಪಿ ಸರ್ಕಾರವು ರಾಜ್ಯದ ನಾನಾ ಸಮಸ್ಯೆಗಳನ್ನು ನಿಭಾಯಿಸಿದ ರೀತಿ ಸರಿಯಲ್ಲ ಎಂದು ಹೇಳಿದ್ದಾರೆ.

ಸರ್ಕಾರ ರಚಿಸಲು ಅವರಿಗೆ ನಮ್ಮ ಬೆಂಬಲ ಅಗತ್ಯವಿರುವ ಸಮಯದಲ್ಲಿ ನಮ್ಮನ್ನು ಕರೆದಿದ್ದರು. ಮನೋಹರ್ ಲಾಲ್ ಖಟ್ಟರ್ ಅಧಿಕಾರದಲ್ಲಿ ಇರುವವರೆಗೂ ನಾವು ಬೆಂಬಲಿಸುತ್ತೇವೆ ಎಂದು ನಾವು ನಿರ್ಧರಿಸಿದ್ದೆವು. ಅವರು ಇನ್ನು ಮುಂದೆ ಅಧಿಕಾರದಲ್ಲಿಲ್ಲ . ರೈತರ ಹಿತದೃಷ್ಟಿಯಿಂದ ನಾವು ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಇದೇ ರೀತಿಯ ಮಾತುಗಳನ್ನಾಡಿದಿ ಗೋಲನ್, ಹರಿಯಾಣದಲ್ಲಿ ಬಿಜೆಪಿಯ ಅಧಿಕಾರಾವಧಿಯಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರವು ಬೆಂಬಲವನ್ನು ಹಿಂತೆಗೆದುಕೊಳ್ಳುವ ನಿರ್ಧಾರದಲ್ಲಿ ಪ್ರಮುಖ ಅಂಶ ಎಂದು ಹೇಳಿದರು.

ಕಳೆದ ನಾಲ್ಕೂವರೆ ವರ್ಷಗಳಿಂದ ನಾವು ಬಿಜೆಪಿಗೆ ಬೆಂಬಲ ನೀಡಿದ್ದೇವೆ. ಇಂದು ನಿರುದ್ಯೋಗ ಮತ್ತು ಹಣದುಬ್ಬರವು ಗರಿಷ್ಠ ಮಟ್ಟದಲ್ಲಿದೆ. ಇದನ್ನು ನೋಡಿ, ನಾವು ನಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸರ್ಕಾರದ ಮೇಲಿನ ಜನರ ವಿಶ್ವಾಸದ ಕೊರತೆ ಮತ್ತು ಕಾಂಗ್ರೆಸ್​​ಗೆ ಹೆಚ್ಚುತ್ತಿರುವ ಬೆಂಬಲದ ಪ್ರತೀಕ ಎಂದು ಹೇಳಿದ್ದಾರೆ.

ಇದನ್ನೂ ಓದಿ: Lok Sabha Election : ರಾಜಕೀಯಕ್ಕಾಗಿ ದ್ವೇಷ ಸೃಷ್ಟಿ; ಬಿಜೆಪಿ ವಿರುದ್ಧ ವಿಡಿಯೊ ಮೂಲಕ ಟೀಕೆ ಮಾಡಿದ ಸೋನಿಯಾ ಗಾಂಧಿ

“ಪಕ್ಷೇತರರ ನಿರ್ಧಾರ ಸರಿಯಾಗಿದೆ. ಸರಿಯಾದ ಸಮಯದಲ್ಲಿ ತೆಗೆದುಕೊಂಡ ಸೂಕ್ತ ನಿರ್ಧಾರ ಇದಾಗಿದೆ. ಇದು ಜನರ ಹಿತದೃಷ್ಟಿಯಿಂದ ಉತ್ತಮ. ರಾಜ್ಯದ ಕಾಂಗ್ರೆಸ್ ನ ಅಲೆ ಇದೆ. ನಾನು ಅವರನ್ನು ಸ್ವಾಗತಿಸುತ್ತೇನೆ” ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಉದಯ್ ಭಾನ್, “ಮೂವರು ಸ್ವತಂತ್ರ ಶಾಸಕರಾದ ಸೋಮ್​ಬಿರ್ ಸಾಂಗ್ವಾನ್, ರಣಧೀರ್ ಸಿಂಗ್ ಗೊಲ್ಲನ್ ಮತ್ತು ಧರಂಪಾಲ್ ಗೊಂಡರ್ ಅವರು ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ ಮತ್ತು ಕಾಂಗ್ರೆಸ್​​ಗೆ ಬೆಂಬಲ ನೀಡಿದ್ದಾರೆ” ಎಂದು ಹೇಳಿದರು.

90 ಸದಸ್ಯರ ಹರಿಯಾಣ ವಿಧಾನಸಭೆಯ ಪ್ರಸ್ತುತ ಬಲ 88. ಅದರಲ್ಲಿ ಬಿಜೆಪಿ 40 ಸದಸ್ಯರನ್ನು ಹೊಂದಿದೆ ಬಿಜೆಪಿ ಸರ್ಕಾರಕ್ಕೆ ಸ್ವತಂತ್ರರ ಬೆಂಬಲವಿತ್ತು. ಇದರಿಂದಾಗಿ ನಯಾಬ್ ಸಿಂಗ್ ಸೈನಿ ಸರ್ಕಾರ ಈಗ ಸಂಖ್ಯಾ ಬಲವಿಲ್ಲದ ಸರ್ಕಾರವಾಗಿದೆ

Continue Reading

Lok Sabha Election 2024

Lok Sabha Election 2024: ಕೈಗಳಿಲ್ಲದಿದ್ದರೂ ಮತದಾನ ಮಾಡಿ ಮಾದರಿಯಾದ ಅಂಕಿತ್ ಸೋನಿ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಗುಜರಾತ್ ನ ನಾಡಿಯಾಡ್ ಮತಗಟ್ಟೆಯಲ್ಲಿ 20 ವರ್ಷಗಳ ಹಿಂದೆ ಎರಡೂ ಕೈಗಳನ್ನು ಕಳೆದುಕೊಂಡ ಅಂಕಿತ್ ಸೋನಿ ಎಂಬವರು ಮತಗಟ್ಟೆಗೆ ಬಂದು ಕಾಲಿನ ಬೆರಳುಗಳ ಸಹಾಯದಿಂದ ಮತದಾನ (Lok Sabha Election 2024) ಮಾಡಿ ಮಾದರಿಯಾದರು.

VISTARANEWS.COM


on

By

Lok Sabha Election 2024
Koo

ಲೋಕಸಭಾ ಚುನಾವಣೆಯ (Lok Sabha Election 2024) ಮೂರನೇ ಹಂತದ (phase 3) ಮತದಾನದ (voting) ವೇಳೆ ಗುಜರಾತ್ ನ (gujarat) ನಾಡಿಯಾಡ್ (Nadiad) ಮತಗಟ್ಟೆ ಒಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು. 20 ವರ್ಷಗಳ ಹಿಂದೆ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡ ಅಂಕಿತ್ ಸೋನಿ ( Ankit Soni) ಎಂಬವರು ಮತಗಟ್ಟೆಗೆ ಬಂದು ಕಾಲಿನ ಬೆರಳುಗಳ ಸಹಾಯದಿಂದ ಮತದಾನ ಮಾಡಿ ಮಾದರಿಯಾದರು.

ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಮತದಾನವು ಮಂಗಳವಾರ ಬೆಳಗ್ಗೆ 7 ಗಂಟೆಗೆ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 93 ಕ್ಷೇತ್ರಗಳಲ್ಲಿ ಪ್ರಾರಂಭವಾಯಿತು. ಈ ವೇಳೆ ನಾಡಿಯಾಡ್‌ನ ಮತಗಟ್ಟೆಯಲ್ಲಿ ಅಂಕಿತ್ ಸೋನಿ ಮತದಾನ ಮಾಡಿ ಇತರರು ತಮ್ಮ ಮನೆಗಳಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ವಿದ್ಯುತ್ ಶಾಕ್ ಅಪಘಾತದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರೂ, ನಾನು ಎಂದಿಗೂ ಎದೆಗುಂದಲಿಲ್ಲ. ಶಿಕ್ಷಕರು ಮತ್ತು ಗುರುಗಳಿಂದ ಪ್ರೇರಿತರಾಗಿ ಕಲಿಕೆಯ ಪ್ರಯಾಣವನ್ನು ಪ್ರಾರಂಭಿಸಿದೆ. ಮೊದಲು ಚಿತ್ರಕಲೆ ಮತ್ತು ಬರವಣಿಗೆಯೊಂದಿಗೆ, ಅನಂತರ ಶಿಕ್ಷಣವನ್ನು ಮುಂದುವರಿಸಿದೆ. ಕಠಿಣ ಪರಿಶ್ರಮದಿಂದ ನಾನು ಪದವಿ ಮತ್ತು ಸಿಎಸ್ ಪದವಿ ಪಡೆದು ಎಂಬಿಎ ಗಳಿಸಿದೆ. ಮತದಾನ ನಮ್ಮ ಹಕ್ಕು. ಹಲವಾರು ವರ್ಷಗಳಿಂದ ನನ್ನ ಮತವನ್ನು ಚಲಾಯಿಸಲು ನಾನು ಒಂದು ಮಾರ್ಗವನ್ನು ಕಂಡುಕೊಂಡಿದ್ದೇನೆ. ನಾವೆಲ್ಲರೂ ಇದನ್ನು ಅನುಸರಿಸೋಣ ಮತ್ತು ಈ ಅಮೂಲ್ಯ ಹಕ್ಕನ್ನು ಚಲಾಯಿಸೋಣ ಎಂದು ಹೇಳಿದರು.


ವಿಶೇಷ ಮತಗಟ್ಟೆ

ಸ್ವಾತಂತ್ರ್ಯದ 75 ವರ್ಷಗಳ ಅನಂತರ ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದ ಬುರುದ್ಮಲ್ ಗ್ರಾಮದಲ್ಲಿ ವಿಶೇಷ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಬುರುದ್ಮಾಲ್ ಕೇವಲ 41 ಮತದಾರರನ್ನು ಹೊಂದಿರುವ ಅತ್ಯಂತ ಚಿಕ್ಕ ಕ್ಷೇತ್ರವಾಗಿದೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ನಾಯಕರು ಮತ ಚಲಾಯಿಸಿದರು.

ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿ, ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದರು.

ಮೂರನೇ ಹಂತದಲ್ಲಿ ಅಸ್ಸಾಂನ 4, ಬಿಹಾರದ 5, ಛತ್ತೀಸ್‌ಗಢದ 7, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು 2, ಗೋವಾ 2, ಗುಜರಾತ್ ನ 25, ಕರ್ನಾಟಕದ 14 , ಮಹಾರಾಷ್ಟ್ರದ 11, ಮಧ್ಯಪ್ರದೇಶದ 8, ಉತ್ತರ ಪ್ರದೇಶದ 10 ಮತ್ತು ಪಶ್ಚಿಮ ಬಂಗಾಳದ 4 ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಿತು. ಸೂರತ್‌ ಕ್ಷೇತ್ರವನ್ನು ಈಗಾಗಲೇ ಬಿಜೆಪಿ ಅವಿರೋಧವಾಗಿ ಗೆದ್ದುಕೊಂಡಿದೆ.

ಇದನ್ನೂ ಓದಿ: Lok Sabha Election 2024: ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನ

120 ಮಹಿಳಾ ಅಭ್ಯರ್ಥಿಗಳು

ಮೂರನೇ ಹಂತದ ಚುನಾವಣಾ ಕಣದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1300ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದಲ್ಲಿ 1.85 ಲಕ್ಷ ಮತಗಟ್ಟೆಗಳಲ್ಲಿ ಒಟ್ಟು 17.24 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದು ನಡೆದ 93 ಸ್ಥಾನಗಳಲ್ಲಿ ಬಿಜೆಪಿ 72 ಸ್ಥಾನಗಳನ್ನು ಗೆದ್ದು ಕೊಂಡಿತ್ತು.

Continue Reading

ಫ್ಯಾಷನ್

Met Gala 2024: ಮೆಟ್ ಗಾಲಾದಲ್ಲಿ 200 ಕ್ಯಾರಟ್ ವಜ್ರ ಧರಿಸಿ ಗಮನ ಸೆಳೆದ ಸುಧಾ ರೆಡ್ಡಿ! ಯಾರಿವರು?

ಎಂಇಐಎಲ್ ಗ್ರೂಪ್‌ನ ನಿರ್ದೇಶಕಿ ಸುಧಾ ರೆಡ್ಡಿ ಅವರು ಮೆಟ್ ಗಾಲಾ 2024 ರಲ್ಲಿ (Met Gala 2024) ರೆಡ್ ಕಾರ್ಪೆಟ್ ನಲ್ಲಿ ನಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಅಮೋರ್ ಎಟರ್ನೊ ಎಂಬ 180 ಕ್ಯಾರೆಟ್ ನ ವಜ್ರದ ನೆಕ್ಲೇಸ್ ಧರಿಸಿದ್ದ ಅವರು ತಮ್ಮ ಉಡುಗೆಯ ಮೂಲಕ ಎಲ್ಲರ ಗಮನ ಸೆಳೆದರು.

VISTARANEWS.COM


on

By

Met Gala 2024
Koo

ಮೆಟ್ ಗಾಲಾ 2024ರಲ್ಲಿ (Met Gala 2024) 180 ಕ್ಯಾರಟ್ ಡೈಮಂಡ್ ನೆಕ್ಲೇಸ್‌ನೊಂದಿಗೆ (diamond necklace) 200 ಕ್ಯಾರಟ್ ವಜ್ರಗಳನ್ನು ಧರಿಸಿದ ಭಾರತೀಯ ಉದ್ಯಮಿ ಮತ್ತು ಬಿಲಿಯನೇರ್ (billionaire) ಸುಧಾ ರೆಡ್ಡಿ ( Sudha Reddy) ಎಲ್ಲರ ಗಮನ ಸೆಳೆದಿದ್ದಾರೆ. ಅವರ ಅತ್ಯಾಕರ್ಷಕ ಉಡುಗೆಗಳು ಮೆಟ್ ಗಾಲಾದಲ್ಲಿ ನೆರೆದಿದ್ದ ಎಲ್ಲರ ದೃಷ್ಟಿ ಅವರತ್ತ ನೋಡುವಂತೆ ಮಾಡಿತ್ತು.

ಎಂಇಐಎಲ್ ಗ್ರೂಪ್‌ನ ನಿರ್ದೇಶಕಿ ಸುಧಾ ರೆಡ್ಡಿ ಅವರು ಮೆಟ್ ಗಾಲಾ 2024ರಲ್ಲಿ ರೆಡ್ ಕಾರ್ಪೆಟ್ ನಲ್ಲಿ ನಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಅಮೋರ್ ಎಟರ್ನೊ ಎಂಬ 180 ಕ್ಯಾರೆಟ್‌ನ ವಜ್ರದ ನೆಕ್ಲೇಸ್ ಧರಿಸಿದ್ದ ಅವರು ತಮ್ಮ ಉಡುಗೆಯ ಮೂಲಕ ಎಲ್ಲರ ಗಮನ ಸೆಳೆದರು.


ಅವರು ಧರಿಸಿದ್ದ ನೆಕ್‌ಪೀಸ್ ನಲ್ಲಿ 25 ಕ್ಯಾರಟ್ ಹೃದಯದ ಆಕಾರದ ವಜ್ರ ಮತ್ತು ಮೂರು 20 ಕ್ಯಾರಟ್‌ನ ಹೃದಯ ಆಕಾರದ ವಜ್ರಗಳಿದ್ದವು. ಇದು ಅವರ ಪತಿ ಮತ್ತು ಇಬ್ಬರು ಮಕ್ಕಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದ್ದಾರೆ.
ಈ ನೆಕ್ಲೇಸ್ ಅನ್ನು 23 ಕ್ಯಾರಟ್ ಡೈಮಂಡ್ ಸಾಲಿಟೇರ್ ರಿಂಗ್ ಮತ್ತು ಮತ್ತೊಂದು 20 ಕ್ಯಾರಟ್ ಡೈಮಂಡ್ ಸಾಲಿಟೇರ್ ಉಂಗುರದೊಂದಿಗೆ ಜೋಡಿಸಿದ್ದು, ಇದು 20 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ.

ಸುಧಾ ರೆಡ್ಡಿ ಯಾರು?

ಕೃಷ್ಣಾ ರೆಡ್ಡಿಯವರ ಪತ್ನಿ ಸುಧಾ ರೆಡ್ಡಿ MEIL ನಲ್ಲಿ ನಿರ್ದೇಶಕರಾಗಿದ್ದಾರೆ. ಇವರಿಗೆ ಮಾನಸ್ ಮತ್ತು ಪ್ರಣವ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಧಾ ರೆಡ್ಡಿ ಫೌಂಡೇಶನ್‌ನ ಮುಖ್ಯಸ್ಥರಾಗಿರುವ ಅವರು ಕಂಪೆನಿಯ ದತ್ತಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ಮೂಲತಃ ವಿಜಯವಾಡದವರಾದ ಅವರು 19 ವರ್ಷದವರಾಗಿದ್ದಾಗ ಕೃಷ್ಣಾ ರೆಡ್ಡಿ ಅವರನ್ನು ವಿವಾಹವಾದರು. ಅವರಿಬ್ಬರೂ ಒಟ್ಟಿಗೆ ಬೆಳೆದಿರುವ ಕಾರಣ ಸಾಧನೆ ಮಾಡುವುದು ಸಾಧ್ಯವಾಯಿತು ಎಂಬುದು ಅವರ ನಂಬಿಕೆ.
ಹೈದರಾಬಾದ್ ರಾಣಿ ಜೇನುನೊಣ ಎಂದೇ ಪ್ರಶಂಸಿಸಲ್ಪಡುವ ಸುಧಾ ರೆಡ್ಡಿ 2021ರಲ್ಲಿ ಮೆಟ್ ಗಾಲಾದಲ್ಲಿ ಭಾಗವಹಿಸಿದ್ದರು.


ತರುಣ್ ತಹಿಲಿಯಾನಿ ಸಿದ್ಧಪಡಿಸಿದ ಉಡುಗೆ

ಎರಡನೇ ಬಾರಿಗೆ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಸುಧಾ ರೆಡ್ಡಿ ಅವರು ತರುಣ್ ತಹಿಲಿಯಾನಿ ಅವರ ಆಫ್-ಶೋಲ್ಡರ್ ಗೌನ್ ಮತ್ತು ತಮ್ಮ ಸಂಗ್ರಹದ ಕೋಟಿಗಟ್ಟಲೆ ಮೌಲ್ಯದ ನೆಕ್ಲೇಸ್‌ ಧರಿಸಿ ಭಾಗವಹಿಸಿದ್ದರು.

ರೀವೇಕನಿಂಗ್ ಫ್ಯಾಶನ್ ಎಂಬ ಶೀರ್ಷಿಕೆಯ ಕಾಸ್ಟ್ಯೂಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ ಐವರಿ ಸಿಲ್ಕ್ ಗೌನ್ ಅನ್ನು 4,500 ಗಂಟೆಗಳ ಅವಧಿಯಲ್ಲಿ 80 ಕುಶಲಕರ್ಮಿಗಳ ತಂಡ ಸಿದ್ಧಪಡಿಸಿದೆ. ವಿನ್ಯಾಸಕಾರರ ಪ್ರಕಾರ ಈ ಧಿರಿಸು ಹಳೆಯ ಮೊಘಲ್ ಉದ್ಯಾನಗಳಿಂದ ಪ್ರೇರಿತವಾಗಿದೆ. ಕಾರ್ಸೆಟ್ ಅನ್ನು ತಹಿಲಿಯಾನಿಯ ಸಿಗ್ನೇಚರ್ ಮ್ಯೂಟ್, ಬೀಜ್-ಗೋಲ್ಡ್ ಬಣ್ಣದ ಪ್ಯಾಲೆಟ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವರ್ಷದ ಮೆಟ್ ಗಾಲಾ ಥೀಮ್‌ಗೆ ಅನುಗುಣವಾಗಿ ರಚಿಸಲಾಗಿದೆ. ಗೌತಮ್ ಕಲ್ರಾ ಅವರ ಶೈಲಿಯಲ್ಲಿ ರೆಡ್ಡಿ ಅವರು ಮಿಯೋಡ್ರಾಗ್ ಗುಬೆರಿನಿಕ್ ವಿನ್ಯಾಸಗೊಳಿಸಿದ ಸ್ಫಟಿಕ ಪರಿಕರವನ್ನು ಇದರೊಂದಿಗೆ ಸೇರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

180 ಕ್ಯಾರಟ್‌ ನ ನೆಕ್ಲೆಸ್

ಸುಧಾ ರೆಡ್ಡಿ ಅವರು ಕೇವಲ ಧಿರಸಿನಿಂದ ಮಾತ್ರವಲ್ಲ ಪ್ರತಿಷ್ಠಿತ ಆಭರಣದಿಂದ ಗಮನ ಸೆಳೆದರು. ‘ಅಮೋರ್ ಎಟರ್ನೊ’ ನೆಕ್ಲೇಸ್ 25 ಸಾಲಿಟೇರ್‌ಗಳನ್ನು ಒಳಗೊಂಡಿದ್ದು ಇದು ಒಟ್ಟು 180 ಕ್ಯಾರೆಟ್‌ಗಳು. ಇದನ್ನು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸಲು ರೆಡ್ಡಿ ಕುಟುಂಬದ ಪರಂಪರೆಯ ಗುರುತಾಗಿ ರಚಿಸಲಾಗಿದೆ.

ಇದನ್ನೂ ಓದಿ: Met Gala Fashion: ಮೆಟ್‌ ಗಾಲಾದಲ್ಲಿ ಹೈಲೈಟಾದ ಭಾರತೀಯ ಫ್ಯಾಷೆನಬಲ್‌ ತಾರೆಯರಿವರು!

ಹಾರದ ಮಧ್ಯಭಾಗದಲ್ಲಿ ನಾಲ್ಕು ದೊಡ್ಡ ಹೃದಯದ ಆಕಾರದ ವಜ್ರಗಳಿಂದ ರಚಿಸಲಾದ ಸಾಂಕೇತಿಕವಾಗಿ ಕುಟುಂಬದ ಮರವನ್ನು ಇಡಲಾಗಿದೆ. ಅತಿದೊಡ್ಡ ವಜ್ರ, 25 ಕ್ಯಾರೆಟ್ ಕಿಂಗ್ ಆಫ್ ಹಾರ್ಟ್ಸ್, ರೆಡ್ಡಿಯ ಪತಿ ಕೃಷ್ಣನನ್ನು ಗೌರವಿಸುತ್ತದೆ. ಆದರೆ ಹೃದಯದ ರಾಣಿ 20 ಕ್ಯಾರೆಟ್ ಹೃದಯದ ವಜ್ರವು ಸುಧಾ ರೆಡ್ಡಿಯನ್ನು ಸಂಕೇತಿಸುತ್ತದೆ. ಜ್ಞಾನದ ರಾಜಕುಮಾರ ಮತ್ತು ಸಂಪತ್ತಿನ ರಾಜಕುಮಾರ ಎಂದು ಕರೆಯಲ್ಪಡುವ ಎರಡು ಹೆಚ್ಚುವರಿ 20 ಕ್ಯಾರಟ್ ಹೃದಯಗಳು ಅವರ ಪುತ್ರರಾದ ಪ್ರಣವ್ ಮತ್ತು ಮಾನಸ್ ಅವರನ್ನು ಪ್ರತಿನಿಧಿಸುತ್ತವೆ.

ಈ ನೆಕ್ಲೇಸ್ ಅನ್ನು ಪೂರ್ಣಗೊಳಿಸುವುದು 21 ಹೊಳೆಯುವ ಸುತ್ತಿನ ವಜ್ರಗಳು. ಇದು ಸುಧಾ ಮತ್ತು ಕೃಷ್ಣರ ಪ್ರೇಮಕಥೆಯ ಹಂಚಿಕೊಂಡ ಅನುಭವಗಳು ಮತ್ತು ಪಾಲಿಸಬೇಕಾದ ಕ್ಷಣಗಳನ್ನು ಸಂಕೇತಿಸುತ್ತದೆ. 20 ಕ್ಯಾರೆಟ್ ಹೃದಯದ ಆಕಾರದ ವಜ್ರದ ಉಂಗುರ ಮತ್ತು 23 ಕ್ಯಾರೆಟ್ ಹಳದಿ ಡೈಮಂಡ್ ರಿಂಗ್ ಇದನ್ನು ಪೂರ್ಣಗೊಳಿಸುತ್ತದೆ. ಇದನ್ನು ರಚಿಸಲು 100 ಗಂಟೆಗಳು ಬೇಕಾಗಿತ್ತು.

Continue Reading

ಪ್ರಮುಖ ಸುದ್ದಿ

IPL 2024 : ಗುರಿ ಬಿಟ್ಟು ಬೇರೆ ಕಡೆಗೆ ಪ್ರಯಾಣಿಸಿದ ಕೆಕೆಆರ್​ ಆಟಗಾರರಿದ್ದ ವಿಮಾನ!

IPL 2024: ಕೋಲ್ಕತಾ ನೈಟ್ ರೈಡರ್ಸ್ ವಿಮಾನವು ರಾತ್ರಿ 8:50ಕ್ಕೆ ಕೋಲ್ಕೊತಾದ ಬದಲಿಗೆ ಗುವಾಹಟಿಯಲ್ಲಿ ಇಳಿಯುತ್ತಿದ್ದಂತೆ, ತಂಡದ ಮೂಲದಿಂದ ಮಾಹಿತಿ ಹೊರಗೆ ಬಂತು. ಲಕ್ನೋದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಕೆಕೆಆರ್​​ನ ಚಾರ್ಟರ್ ವಿಮಾನವನ್ನು ಪ್ರತಿಕೂಲ ಹವಾಮಾನದಿಂದಾಗಿ ಗುವಾಹಟಿಗೆ ತಿರುಗಿಸಲಾಗಿದೆ. ವಿಮಾನವು ಪ್ರಸ್ತುತ ಗುವಾಹಟಿ ವಿಮಾನ ನಿಲ್ದಾಣದಲ್ಲಿ ನಿಂತಿದೆ” ಎಂದು ಫ್ರ್ಯಾಂಚೈಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

VISTARANEWS.COM


on

IPL 2024: KKR's Flight to Kolkata Unexpectedly Diverted Mid-Air
Koo

ಬೆಂಗಳೂರು: ಲಕ್ನೊ ಸೂಪರ್​ ಜೈಂಟ್ಸ್​ ತಂಡದ ವಿರುದ್ಧದ ಐಪಿಎಲ್​ ಪಂದ್ಯದ (IPL 2024) ಬಳಿಕ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ಆಟಗಾರರು ಲಕ್ನೋದಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಪ್ರಯಾಣವು ಅನಿರೀಕ್ಷಿತವಾಗಿ ಬೇರೆ ಕಡೆಗೆ ಸಾಗಿದ ಪ್ರಸಂಗ ನಡೆದಿದೆ. ಪ್ರತಿಕೂಲ ಹವಾಮಾನದಿಂದಾಗಿ ಅವರು ಸಾಗುತ್ತಿದ್ದ ಚಾರ್ಟರ್ ವಿಮಾನವನ್ನು ಕೋಲ್ಕೊತಾದಲ್ಲಿ ಇಳಿಸಲು ಸಾಧ್ಯವಾಗದ ಕಾರಣ ಗುವಾಹಟಿಗೆ ತಿರುಗಿಸಲಾಗಿತ್ತು. ಈ ವಿಷಯವನ್ನು ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಹೇಳಿಕೊಂಡಿದೆ

ಯೋಜನೆಗಳ ಹಠಾತ್ ಬದಲಾವಣೆಯನ್ನು ತಂಡವು ಸೋಮವಾರ ಸಂಜೆ ಇನ್ಸ್ಟಾಗ್ರಾಮ್​ನಲ್ಲಿ ವಿವರಿಸಿತು. ಇದು ಅವರ ಮುಂದಿನ ಪಂದ್ಯಕ್ಕಾಗಿ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಲ್ಲಿ ಹಲವಾರು ಕೌತುಕಗಳನ್ನು ಹುಟ್ಟಿಕೊಳ್ಳುವಂತೆ ಮಾಡಿತು.

ಗುವಾಹಟಿಗೆ ತೆರಳಿದ ಕೆಕೆಆರ್ ಚಾರ್ಟರ್ ವಿಮಾನ

ಕೋಲ್ಕತಾ ನೈಟ್ ರೈಡರ್ಸ್ ವಿಮಾನವು ರಾತ್ರಿ 8:50ಕ್ಕೆ ಕೋಲ್ಕೊತಾದ ಬದಲಿಗೆ ಗುವಾಹಟಿಯಲ್ಲಿ ಇಳಿಯುತ್ತಿದ್ದಂತೆ, ತಂಡದ ಮೂಲದಿಂದ ಮಾಹಿತಿ ಹೊರಗೆ ಬಂತು. ಲಕ್ನೋದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಕೆಕೆಆರ್​​ನ ಚಾರ್ಟರ್ ವಿಮಾನವನ್ನು ಪ್ರತಿಕೂಲ ಹವಾಮಾನದಿಂದಾಗಿ ಗುವಾಹಟಿಗೆ ತಿರುಗಿಸಲಾಗಿದೆ. ವಿಮಾನವು ಪ್ರಸ್ತುತ ಗುವಾಹಟಿ ವಿಮಾನ ನಿಲ್ದಾಣದಲ್ಲಿ ನಿಂತಿದೆ” ಎಂದು ಫ್ರ್ಯಾಂಚೈಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ವಲ್ಪ ಸಮಯದ ನಂತರ, ಕೋಲ್ಕತ್ತಾಗೆ ಮರಳಲು ಎಲ್ಲ ಅವಕಾಶಗಳು ಸಿಕ್ಕಿತು. ಬಳಿಕ ಅವರ ವಿಮಾನ ರಾತ್ರಿ 11:00 ಕ್ಕೆ ಕೋಲ್ಕೊತಾಗೆ ಮರಳಿತಿಉ.

ಎಲ್​ಎಸ್​ಜಿ ವಿರುದ್ಧ ಭರ್ಜರಿ ವಿಜಯ

ಲಕ್ನೋದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡವನ್ನು 98 ರನ್ಗಳಿಂದ ಸೋಲಿಸಿತ್ತು. ಈ ಗೆಲುವಿನೊಂದಿಗೆ ಕೆಕೆಆರ್ 11 ಪಂದ್ಯಗಳಿಂದ 16 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು ಮತ್ತು ಪ್ಲೇಆಪ್​​ನಲ್ಲಿ ಬಹುತೇಕ ಖಚಿತ ಸ್ಥಾನ ಭದ್ರಪಡಿಸಿತು.

ಗೌತಮ್ ಗಂಭೀರ್ ನಾಯಕತ್ವದಲ್ಲಿ 2014ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕೆಕೆಆರ್, ಈ ಋತುವಿನಲ್ಲಿ ಎಂಟು ಗೆಲುವುಗಳನ್ನು ಪಡೆದಿದೆ. ಲೀಗ್ ಹಂತದ ಅಗ್ರ ಎರಡು ಸ್ಥಾನಗಳನ್ನು ತಲುಪಲು ಕೇವಲ ಮೂರು ಪಂದ್ಯಗಳು ಬಾಕಿ ಉಳಿದಿವೆ.

ಇದನ್ನೂ ಓದಿ: T20 World Cup : ಕೊಹ್ಲಿಯನ್ನು ಎದುರಿಸಲು ಪ್ಲ್ಯಾನ್​ ರೆಡಿ ಇದೆ ಎಂದ ಬಾಬರ್ ಅಜಮ್​

ಮೇ 11 ರಂದು ಈಡನ್ ಗಾರ್ಡನ್ಸ್​ನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಮುಂದಿನ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದು ಋತುವಿನ ಕೊನೆಯ ತವರು ಪಂದ್ಯವಾಗಿದೆ. ಅಲ್ಲಿ ಅವರು ತಮ್ಮ ಏಳು ತವರು ಪಂದ್ಯಗಳಲ್ಲಿ ಐದರಲ್ಲಿ ಗೆದ್ದ ನಂತರ ತಮ್ಮ ಪ್ರಾಬಲ್ಯ ಗಟ್ಟಿಗೊಳಿಸುವ ಗುರಿಯನ್ನು ಹೊಂದಿದ್ದಾರೆ.

ಕಳೆದ ತಿಂಗಳು ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುಗಳು ಈಡನ್ ಗಾರ್ಡನ್ಸ್ನಲ್ಲಿ ಅವರ ದಾಖಲೆಯಲ್ಲಿ ಏಕೈಕ ಕಳಂಕವಾಗಿದೆ.

ಮುಂಬೈ ನಂತರ, ನೈಟ್ ರೈಡರ್ಸ್ ಅಹಮದಾಬಾದ್ಗೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ, ನಂತರ ಗುವಾಹಟಿಯ ಬರ್ಸಪಾರಾ ಕ್ರೀಡಾಂಗಣದಲ್ಲಿ ರಾಜಸ್ಥಾನ ವಿರುದ್ಧ ಲೀಗ್ ಹಂತದ ಫೈನಲ್ ಪಂದ್ಯ ನಡೆಯಲಿದೆ.

Continue Reading
Advertisement
Ujjivan Small Finance Bank
ವಾಣಿಜ್ಯ6 mins ago

Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಿಇಒ ಆಗಿ ಸಂಜೀವ್ ನೌಟಿಯಾಲ್ ನೇಮಕ

Lok Sabha Election 2024
ಕರ್ನಾಟಕ7 mins ago

Lok Sabha Election 2024: ಜಿ.ಎಂ.ಸಿದ್ದೇಶ್ವರ್‌ ಮಹಾ ಎಡವಟ್ಟು, ಪತ್ನಿ ಮತವನ್ನೂ ತಾವೇ ಹಾಕಿದ ಸಂಸದ

Nirav modi
ದೇಶ25 mins ago

Nirav Modi: ನೀರವ್‌ ಮೋದಿಗೆ ಲಂಡನ್‌ ಜೈಲೇ ಗತಿ; 5ನೇ ಬಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

Yallapura MLA Shivaram Hebbar voting in Arabail village
ರಾಜಕೀಯ36 mins ago

Lok Sabha Election 2024: ಅಭಿವೃದ್ಧಿ ಕಾರ್ಯಕ್ಕಾಗಿ ನೀತಿ ಸಂಹಿತೆ ಸಡಿಲಿಸಲು ಶಿವರಾಮ ಹೆಬ್ಬಾರ್ ಮನವಿ

Haryana Government
ಪ್ರಮುಖ ಸುದ್ದಿ41 mins ago

Haryana Government : ಹರಿಯಾಣದ ಬಿಜೆಪಿ ಸರ್ಕಾರ ಪತನ ಸಾಧ್ಯತೆ; 3 ಪಕ್ಷೇತರರು ಕಾಂಗ್ರೆಸ್ ಕಡೆಗೆ

Prajwal Revanna Case HD Revanna refuses to face to face with 2nd accused in kidnapping case
ಕ್ರೈಂ43 mins ago

Prajwal Revanna Case: ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ ಜತೆ ಮುಖಾಮುಖಿ ವಿಚಾರಣೆಗೆ ಒಪ್ಪದ ರೇವಣ್ಣ!

Shrikhshetra Siddrabetta Balehonnur Khasa Shakha Math 18th year Anniversary on June 9 says sri veerabhadra shivacharya swamiji
ತುಮಕೂರು46 mins ago

Tumkur News: ಜೂ. 9ಕ್ಕೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವಾರ್ಷಿಕೋತ್ಸವ

Bidar Lok Sabha constituency BJP candidate Bhagwanth Khooba voting in Aurad
ಬೀದರ್‌50 mins ago

Lok Sabha Election 2024: ಔರಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಮತದಾನ

Lok Sabha Election
ದೇಶ52 mins ago

Lok Sabha Election: 3ನೇ ಹಂತದಲ್ಲಿ ಶೇ.60ರಷ್ಟು ಮತದಾನ, ಕಳೆದ ಬಾರಿಗಿಂತಲೂ ಕಡಿಮೆ

Prajwal Revanna Case HD Revanna suffers heartburn and gastric problems Shift to hospital
ರಾಜಕೀಯ1 hour ago

Prajwal Revanna Case: ಎಚ್.ಡಿ. ರೇವಣ್ಣಗೆ ಎದೆ ಉರಿ, ಗ್ಯಾಸ್ಟ್ರಿಕ್‌ ತೊಂದರೆ; ಆಸ್ಪತ್ರೆಗೆ ಶಿಫ್ಟ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ3 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ4 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

ಟ್ರೆಂಡಿಂಗ್‌