Prerane : ಸರ್ಪಗಳಿಗೂ ಆಧ್ಯಾತ್ಮಿಕತೆಗೂ ಏನು ಸಂಬಂಧ? - Vistara News

ಧಾರ್ಮಿಕ

Prerane : ಸರ್ಪಗಳಿಗೂ ಆಧ್ಯಾತ್ಮಿಕತೆಗೂ ಏನು ಸಂಬಂಧ?

ಸರ್ಪಭೀತಿ ಒಂದು ಪೂರ್ವಾಗ್ರಹ ಪೀಡಿತ ಮನೋಭಾವ ಅಷ್ಟೇ. ಹಾವುಗಳ ಬಗ್ಗೆ ನಿಮ್ಮ ತಿಳುವಳಿಕೆ ಎಷ್ಟು ಕಡಿಮೆಯೋ, ಅಷ್ಟೇ ಹೆಚ್ಚು ಭಯ ಇರುವುದು. ಅವುಗಳ ಬಗ್ಗೆ ಅರಿತುಕೊಂಡಷ್ಟೂ ಭಯ ಕಡಿಮೆಯಾಗುವುದು ಎನ್ನುತ್ತಾರೆ ಸದ್ಗುರು. ಅವರ ವಿಶೇಷ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿದೆ.

VISTARANEWS.COM


on

Sadhguru's Column
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸದ್ಗುರು ಜಗ್ಗಿ ವಾಸುದೇವ್‌
ಸರ್ಪಗಳು ಕೆಲವು ವಿಶಿಷ್ಟ ಶಕ್ತಿವಲಯಕ್ಕೆ ಬಹಳ ಸಂವೇದನಾಶೀಲ ಜೀವಿಗಳು. ವಿಶುದ್ಧ ಚಕ್ರಕ್ಕೂ ಸರ್ಪಕ್ಕೂ ನಿಕಟ ಸಂಬಂಧವಿದೆ. ಇಂತಹ ವಿಶೇಷ ಶಕ್ತಿಗಳು ಇದ್ದೆಡೆ ಮೊದಲು ಆಕರ್ಷಿತವಾಗುವ ಜೀವಿಗಳೇ ಸರ್ಪಗಳು. ಪತಂಜಲಿ ಅರ್ಧ ಮಾನವ ಅರ್ಧ ಸರ್ಪವೇ? ಇಂತಹ ವದಂತಿಗಳನ್ನು ನಂಬಬೇಡಿ. ಅರ್ಧ ಸರ್ಪ ಅರ್ಧ ಮಾನವ ಎನ್ನುವುದು ಒಂದು ಸಂಕೇತ ಅಷ್ಟೇ. ಕುಂಡಲಿನೀ ಶಕ್ತಿಯ ಸಂಕೇತವೇ ಸರ್ಪ. ಸರ್ಪದ ಮೇಲೆ ಪತಂಜಲಿಯ ತಲೆ ಮತ್ತು ದೇಹವನ್ನು ಇಟ್ಟಿರುವುದು ಏಕೆಂದು ಗೊತ್ತೇ? ಕುಂಡಲಿನೀ ಶಕ್ತಿ ಮತ್ತು ಪತಂಜಲಿ ಒಂದೇ ಎಂಬುದರ ಸಂಕೇತ ಇದು.

ಪತಂಜಲಿಯ ಬಗ್ಗೆ ಅತೀವ ಪ್ರೇಮ-ಭಕ್ತಿ ಇರುವವರು ಅರ್ಧ ಸರ್ಪ ಅರ್ಧ ಮಾನವನ ಆಕೃತಿಯನ್ನು ಪತಂಜಲಿ ಎಂದರು. ಪತಂಜಲಿಯನ್ನು ಯೋಗಿ, ಮುನಿ, ಅಥವಾ ಋಷಿ ಎಂದು ಕರೆಯುವುದು ಪತಂಜಲಿಯ ಬಗ್ಗೆ ಪೂರ್ಣ ವಿವರ ಕೊಟ್ಟಂತೆ ಆಗುವುದಿಲ್ಲ. ಆದ್ದರಿಂದ ನಮ್ಮೊಳಗಿನ ಜೀವಶಕ್ತಿ ಚೈತನ್ಯ – ಕುಂಡಲಿನಿಯೇ ಪತಂಜಲಿ ಎಂದರು. ಆಗಮಾತ್ರ ಪತಂಜಲಿಯ ನಿಜಸತ್ವ ತಿಳಿಯುವುದೆಂದು ಅವರೆಲ್ಲರ ಅಭಿಮತ.

ಪತಂಜಲಿಯ ಪ್ರತಿಮೆ ಯಾವಾಗಲೂ ಸುತ್ತಿಕೊಂಡ ಸರ್ಪದೊಡನೆ ಇರುತ್ತದೆ. ನೋಡಲಿಕ್ಕೆ ಈ ಪ್ರತಿಮೆ ಸುಂದರವಾಗಿ ಇರುವುದೇನೋ ಸರಿ. ಆದರೆ ನಿಜವಾಗಿಯೂ ಪತಂಜಲಿ ಹಾಗೆ ಇದ್ದಿದ್ದರೆ ಪರಿಸ್ಥಿತಿ ಹೇಗಿದ್ದೀತು? ನಡೆದಾಡಲಿಕ್ಕೇ ಆಗದೆ ತೆವಳುತ್ತಾ ಹೋದಂತೆಲ್ಲ ಮೂಗು ಹರಿದುಕೊಳ್ಳಬೇಕಿತ್ತು. ಹಾಗಿರಲಿಲ್ಲ. ಪತಂಜಲಿಗೆ ಕೈಕಾಲುಗಳು ಸರಿಯಾಗೇ ಇದ್ದವು. ಅವರು ದೈಹಿಕ ಪರಿಮಿತಿಯನ್ನು ದಾಟಿಸಿ ಆತ್ಮಸಾಕ್ಷಾತ್ಕಾರ ಮಾಡಿಸಬಲ್ಲ ಕುಂಡಲಿನೀ ಶಕ್ತಿಯೊಂದಿಗೆ ಎಷ್ಟು ಸಮರಸವಾಗಿದ್ದರೆಂದರೆ ಅವರಿಗೆ ಅರ್ಧಕುಂಡಲಿನಿ [ಸರ್ಪ] ಅರ್ಧಮಾನವನಂತೆ ರೂಪ ಕೊಟ್ಟರು. ಆಗಮಾತ್ರ ಅವರ ಸಾಧನೆಗೆ ಸೂಕ್ತ ಅಭಿವ್ಯಕ್ತಿ ಸಿಗುತ್ತಿತ್ತು. 

ನಾನು ಎಲ್ಲಿ ಹೋದರೂ ಅಲ್ಲಿ ಸರ್ಪ ಕಂಡುಬರುವುದು ಖಚಿತ. ನಾನಿರುವ ಶಕ್ತಿವಲಯಕ್ಕೆ ಹಾವುಗಳು ಬರುತ್ತವೆ. ಎಲ್ಲರಿಗೂ ಇದನ್ನು ಅರ್ಥ ಮಾಡಿಸುವುದು ಕಷ್ಟ. ಸರ್ಪಭೀತಿ ಒಂದು ಪೂರ್ವಾಗ್ರಹ ಪೀಡಿತ ಮನೋಭಾವ ಅಷ್ಟೇ. ನಿಮ್ಮ ಬಂಧು  ಮಿತ್ರರಲ್ಲಿ ಹಾವು ಕಚ್ಚಿ ಸತ್ತವರು ಎಷ್ಟು ಮಂದಿ? ವಾಹನಗಳ ದುರ್ಘಟನೆಯಲ್ಲಿ ಸತ್ತವರು ಎಷ್ಟು ಜನ? ಹಾವು ಕಚ್ಚಿ ಸತ್ತವರು ಇಲ್ಲವೆಂದೇ ಹೇಳಬೇಕು. ಮತ್ತೇಕೆ ಹಾವು ಎಂದರೆ ಅಷ್ಟೊಂದು ಭಯ? ಅನೇಕ ಜನ ವಾಹನಗಳಿಂದಾಗಿ ಸತ್ತಿದ್ದರೂ ವಾಹನವನ್ನು ಮತ್ತೆ ಮತ್ತೆ ಏಕೆ ಏರುವಿರಿ? ಹಾವಿನ ಬಗೆಗಿನ ಭಯ ಕಾರಣವಿಲ್ಲದುದು. ಹಾವುಗಳ ಬಗ್ಗೆ ನಿಮ್ಮ ತಿಳುವಳಿಕೆ ಎಷ್ಟು ಕಡಿಮೆಯೋ, ಅಷ್ಟೇ ಹೆಚ್ಚು ಭಯ ಇರುವುದು. ಅವುಗಳ ಬಗ್ಗೆ ಅರಿತುಕೊಂಡಷ್ಟೂ ಭಯ ಕಡಿಮೆಯಾಗುವುದು. 

ನಾನು ತೋಟದಲ್ಲಿ ಇರುತ್ತಿದ್ದಾಗ ನಾನು ಮಲಗುತ್ತಿದ್ದ ಕೊಠಡಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸರ್ಪಗಳು ನನ್ನೊಡನೆ ಇದ್ದವು. ರಸ್ಸೆಲ್ ವೈಪರ್ ಮತ್ತು ಕಾಳಿಂಗಗಳು. ರಾತ್ರಿ ಮಲಗಿದಾಗ ನನ್ನ ಕಂಬಳಿಯೊಳಗೇ ಸಿಂಬಿಸುತ್ತಿ ಮಲಗುತ್ತಿದ್ದವು. ನಾನು ಚಕ್ಕನೆ ಅಲುಗಾಡಿದರೆ ಅವೂ ಅಲುಗಾಡುತ್ತಿದ್ದವು. ಹೀಗಾಗಿ, ನಾನು ನಿದ್ದೆಯಲ್ಲಿ ಹೊರಳಾಡುವಾಗಲೂ ನನ್ನ ಬಳಿಯಲ್ಲಿ ಏನಿರುವುದೆಂಬ ಅರಿವು ನನಗೆ ಇರುತ್ತಿತ್ತು. ನಿಧಾನವಾಗಿ ಹೊರಳಿಕೊಳ್ಳುತ್ತಿದ್ದೆ. ಸರ್ಪವಿರುವಲ್ಲಿ ಥಟ್ಟನೆ ಚಲಿಸುವುದು ಅಪಾಯಕಾರಿ ನಿಜ. ನಮ್ಮ ಚಲನೆ ಸರಿಯಿದ್ದರೆ ನಿರಾಯಾಸವಾಗಿ ಕೈಗೇ ಎತ್ತಿಕೊಳ್ಳಬಹುದಾದ ಏಕೈಕ ಕಾಡುಪ್ರಾಣಿ ಸರ್ಪ. ಕಚ್ಚದೆ ನಿಮ್ಮ ಹಿಡಿತಕ್ಕೆ ಸಲೀಸಾಗಿ ಬರುವುದು. ಧ್ಯಾನಸ್ಥ ಮನಸಿನ ವ್ಯಕ್ತಿಯ ಮಗ್ಗುಲಿಗೇ ಬಂದು ಕೂಡುವ ಸರ್ಪ ಹಾನಿ ಮಾಡುವುದಿಲ್ಲ. ಗಲಿಬಿಲಿಯ ಉದ್ವೇಗದ ಮನಸ್ಸಿನ ವ್ಯಕ್ತಿ ಸರ್ಪಕ್ಕೆ ಸರಿಬರುವುದಿಲ್ಲ. ಹತ್ತಿರ ಬಂದರೆ ನಿಮ್ಮ ಗಲಿಬಿಲಿಗೆ ನಿಮಗೂ ಅಂತಿಮ ವಿರಾಮ! 

ಈಶ ಕೇಂದ್ರವನ್ನು ಸ್ಥಾಪಿಸಿದ ಸಮಯದಲ್ಲಿ ಸರ್ಪಗಳು ಎಲ್ಲೆಡೆ ಹರಿದಾಡುತ್ತಿದ್ದವು. ನಾವು ಕಾರ್ಯಕ್ರಮ ನಡೆಸುತ್ತಿದ್ದ ಹಜಾರದಲ್ಲೆಲ್ಲ ಓಡಾಡುತ್ತಿದ್ದವು. ಸಾಧಕರು ಇದಕ್ಕೆ ಒಗ್ಗಿಕೊಳ್ಳಲು ಸಮಯ ಹಿಡಿಯಿತು. ಅವರದೊಂದೇ ಪ್ರಶ್ನೆ. ಸರ್ಪಗಳೊಂದಿಗೆ ನಾವೇನು ಮಾಡಬೇಕು? ಏನೂ ಮಾಡಬೇಕಾಗಿಲ್ಲ. ಅವುಗಳ ವಾಸಸ್ಥಾನವನ್ನು ನಾವು ಆಕ್ರಮಿಸಿಕೊಂಡಿದ್ದೇವೆ. ಅವುಗಳ ಜೊತೆಗೇ ವಾಸ ಮಾಡಬೇಕು ಅಷ್ಟೇ. ಜಾಗ ಅವುಗಳದ್ದು. ಸರ್ಪಗಳಿಗೆ ನಾವು ಹಿಡಿಸಲಿಲ್ಲವೆಂದರೆ ಅವು ಜಾಗ ಬಿಟ್ಟು ಹೋಗುವವು. ಅವಕ್ಕೆ ನಿಮ್ಮೊಡನಿರಲು ಅಭ್ಯಂತರವಿಲ್ಲದಿದ್ದರೆ ನಿಮಗೂ ಅವುಗಳೊಂದಿಗೆ ಇರಲು ಅಭ್ಯಂತರವಿರಬಾರದು. ನೀವು ಬಂದು ಅವುಗಳ ಜಾಗವನ್ನು ನಾಶ ಮಾಡಿದ್ದೀರಿ. ಈಗ ಆ ಜಾಗದಿಂದಲೇ ಓಡಿಸಬೇಕೇನು? ಈ ರೀತಿಯ ಜೀವನ ಸರಿಯಲ್ಲ. ಇದಕ್ಕೆ ಆಗಲೇ ಬೆಲೆ ತೆರುತ್ತಿದ್ದೇವೆ. 

Sadhguru's Column

ಭಾರತದಲ್ಲಿನ ಸರ್ಪಗಳಲ್ಲಿ 90% ವಿಷವಿಲ್ಲದವು. ಇವು ನೋಡಲು ಬಲು ಸುಂದರವಾದುವು. ಬಹಳ ಸರ್ಪಗಳಿಗೆ ವಿಷದ ಹಲ್ಲುಗಳು ಸಹ ಇರುವುದಿಲ್ಲ. ಗರಗಸದಂತಹ, ಕಡಿಯಲೂ ಆಗದ ಮೆದು ಎಲುಬುಗಳಿವೆ ಅಷ್ಟೇ. ಸರ್ಪದ ಬಗ್ಗೆ ನಿಮ್ಮದು ಅರ್ಥವಿಲ್ಲದ ಭಯ. ನಿಮ್ಮನ್ನು ನೋಡಿದ ಕೂಡಲೇ ಅವೇ ಓಡಿಹೋಗುತ್ತವೆ. ನಿಮ್ಮದು ಆಧಾರವಿಲ್ಲದ ಅತಿರೇಕದ ಭೀತಿಯಷ್ಟೇ. ನಿಮಗಿದು ಗೊತ್ತೇ? ಅನೇಕ ವೈದ್ಯಕೀಯ ಸಂಸ್ಥೆಗಳು ಕೋಲೊಂದನ್ನು ಸುತ್ತಿಕೊಂಡಿರುವ ಎರಡು ಸರ್ಪಗಳನ್ನು ಸಂಕೇತವಾಗಿ ಮಾಡಿಕೊಂಡಿವೆ. ಇದು ಯೋಗದಲ್ಲಿನ ಸಂಕೇತವೂ ಕೂಡ.

ಎರಡು ಸರ್ಪಗಳು ಆರು ಕಡೆ ಕೂಡಿ, ತುದಿಯಲ್ಲಿ ಮತ್ತೆ ತಾಗಿಕೊಂಡಿರುವುದು ಇಡಾ – ಪಿಂಗಳಾ ನಾಡಿಗಳು ಸುಷುಮ್ನಾ ಮೂಲಕ ಹಾದುಹೋಗುವುದರ ಸಂಕೇತ. ಭಾರತದಲ್ಲಿ ಆಧ್ಯಾತ್ಮಿಕ ಸಾಧನೆಗೂ ಸರ್ಪಕ್ಕೂ ಇರುವ ಸಂಬಂಧ ಬಹಳ ಆಳವಾದುದು. ನಿಜವಾಗಿ, ಈ ಸಂಬಂಧವನ್ನು ವಿಶ್ವದ ಎಲ್ಲೆಡೆ ಗುರುತಿಸಬಹುದು. ಏಕೆಂದರೆ, ಜನ ಅರಿವು ಪಡೆದಂತೆ ನಿರ್ದಿಷ್ಟ ಶಕ್ತಿಗಳಿಗೆ ಸರ್ಪಗಳು ಸೂಕ್ಷ್ಮಗ್ರಾಹಿ ಆಗಿರುವುದನ್ನು ಮನಗಾಣುವರು. 

ಕೇವಲ ಪಂಡಿತರು ಮತ್ತು ಪೂಜಾರಿಗಳು ಸರ್ಪಗಳ ಬಗ್ಗೆ ಅಸಂಬದ್ಧ ಊಹಾಪೋಹಗಳನ್ನು ಸೃಷ್ಟಿಸಿದ್ದಾರೆ. ಕ್ರೈಸ್ತ ಧರ್ಮದಲ್ಲಿಯೂ ಇಂತಹ ಕಲ್ಪನೆಗಳನ್ನು ಕಾಣಬಹುದು. ಕ್ರೈಸ್ತ ಪಾದ್ರಿಗಳ ಪ್ರಕಾರ ಸರ್ಪವು ಈವ್‌ಳನ್ನು ಮರುಳು ಮಾಡಿ ಜ್ಞಾನದ ಹಣ್ಣು ತಿನ್ನುವಂತೆ ಪ್ರಚೋದಿಸಿತು. ಇದೇ ಕಾರಣವಾಗಿ ಈಡನ್ ವನದಲ್ಲಿ ಆಗಬಾರದ ಸಂಗತಿಗಳು ನಡೆದುಹೋದವು. ಇದೇ ಘಟನೆಗೆ ನಾವು ಬೇರೊಂದು ರೀತಿಯಲ್ಲಿ ಅರ್ಥ ಕೊಡಬಹುದು. ಸರ್ಪವು ಈವ್‌ಳಿಗೆ ಮರುಳು ಮಾಡಿ ತಿನ್ನಿಸಿದ ಹಣ್ಣನ್ನೇ ನೀವೂ ನಿಮ್ಮ ಮಕ್ಕಳಿಗೆ ತಿನಿಸುತ್ತಿದ್ದೀರಿ. ಅಲ್ಲವೇ? ಅತೀವ ಆಸಕ್ತಿಯಿಂದ ನಿಮ್ಮ ಮಕ್ಕಳನ್ನು ಶಾಲೆಗೆ ದೂಡುತ್ತಿದ್ದೀರಿ. ಜ್ಞಾನದ ಹಣ್ಣನ್ನು ತಿನ್ನಿರೆಂದು ಒತ್ತಾಯಿಸುತ್ತಿದ್ದೀರಿ. ಸರ್ಪವೂ ಈವ್‌ಳಿಗೆ ಇದನ್ನೇ ತಾನೆ ಮಾಡಿದುದು. 

ಇಲ್ಲ ಇಲ್ಲ ಹಣ್ಣಿನಿಂದಾಗಿ ಏನೆಲ್ಲ ನಡೆದುಹೋಯಿತು… ಎನ್ನುವಿರಾ? ಒಳ್ಳೆಯದೇ ಆಯಿತಲ್ಲ. ಭೂಮಿಯ ಮೇಲೆ ಜೀವನ ಆರಂಭವಾಯಿತು. ಈವ್ ಹಣ್ಣು ತಿಂದುದರ ಫಲವಾಗಿಯೇ ಭೂಮಿಯ ಮೇಲೆ ಜೀವನ  ಜೀವರಾಶಿ ಹುಟ್ಟಿಬಂದಿತು ಎನ್ನುವುದು ಈ ಕಥೆ. ಜೀವನ ಆರಂಭವಾದುದರಲ್ಲಿ ತಪ್ಪೇನು? ಆಡಮ್ ಮತ್ತು ಈವ್ ಒಬ್ಬರಿಗೊಬ್ಬರು ಏನು ಮಾಡಬೇಕೆಂದು ತಿಳಿಯದ ಮೂರ್ಖರು. ಅವರ ತಲೆಯಲ್ಲಿ ಸ್ವಲ್ಪ ವಿವೇಕ ತುಂಬಿದುದು ಸರ್ಪ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಒಂದು ವೇಳೆ ಈ ಕಥೆಯನ್ನು ನಂಬುವುದಾದರೆ, ನಾನು, ನೀವು ಈ ಭೂಮಿಗೆ ಬಂದುದಕ್ಕೆ ಕಾರಣ, ಆ ಸರ್ಪವು ಸೃಷ್ಟಿಯ ಮೊದಲ ದಂಪತಿಗೆ ತಿಳುವಳಿಕೆ ನೀಡಿದುದೇ ಅಲ್ಲವೇ? ನೀವು ಜೀವನಕ್ಕೆ ವಿರುದ್ಧವಾದರೆ ಸರ್ಪವು ಸೈತಾನನ ದೂತ ಎನ್ನುವಿರಿ. ಜೀವನ ಬೇಕೆನ್ನುವವರು ಸರ್ಪವು ನಿಜವಾಗಿ ದೈವಿಕವಾದುದರ ಪ್ರತಿನಿಧಿ ಎಂದು ಮಾನ್ಯತೆ ನೀಡುವರು. ಸ್ವಲ್ಪವಾದರೂ ಪರಿಜ್ಞಾನ ಇರುವವರು, ಜೀವನದ ಬಗ್ಗೆ ಉತ್ಸಾಹ ಇರುವವರು ಸರ್ಪವನ್ನು ದೈವೀರೂಪ ಎಂದು ತಿಳಿಯುವರು. ಜೀವನದ ರೀತಿಯನ್ನೇ  ಜೀವನವನ್ನೇ ಸೈತಾನನ ಆಟ ಎಂದು ತೀರ್ಮಾನಿಸುವ ಜನರು ಮಾತ್ರ ಸರ್ಪವನ್ನು ಸೈತಾನನ ಪ್ರತಿನಿಧಿ ಎಂದು ದೂರ ಸರಿಸುವರು.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಇದನ್ನೂ ಓದಿ : Prerane : ಹನುಮಂತನ ಆದರ್ಶ ಮತ್ತು ಅದರ ಫಲ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

Tumkur News: ಜೂ. 9ಕ್ಕೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವಾರ್ಷಿಕೋತ್ಸವ

Tumkur News: ಕೊರಟಗೆರೆ ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವಾರ್ಷಿಕೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವ, ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾವೇಶವನ್ನು ಜೂ.9 ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

VISTARANEWS.COM


on

Shrikhshetra Siddrabetta Balehonnur Khasa Shakha Math 18th year Anniversary on June 9 says sri veerabhadra shivacharya swamiji
Koo

ಕೊರಟಗೆರೆ: ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವಾರ್ಷಿಕೋತ್ಸವವನ್ನು ಜೂ.9ರಂದು ಆಯೋಜನೆ ಮಾಡಲಾಗಿದೆ ಎಂದು ಸಿದ್ದರಬೆಟ್ಟದ ಶ್ರೀಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ (Tumkur News) ತಿಳಿಸಿದರು.

ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ 18ನೇ ವಾರ್ಷಿಕೋತ್ಸವದ ಪೂರ್ವಭಾವಿ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಠದ ಸದ್ಭಕ್ತರ ಸಹಕಾರದಿಂದ ಶ್ರೀ ಮಠದ 18ನೇ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶ್ರೀ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

ಇನ್ಪೋಸಿಸ್ ಫೌಂಡೇಶನ್‌ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರ ಸಲಹೆಯಂತೆ ಕಳೆದ 17 ವರ್ಷಗಳಿಂದಲೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು, ಸುಮಾರು 800ಕ್ಕೂ ಹೆಚ್ಚು ವಿವಾಹಗಳು ನಡೆದಿದೆ. ಇದರಿಂದ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಮತ್ತು ಸಿದ್ದರಬೆಟ್ಟದ ಶ್ರೀಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ 18ನೇ ವಾರ್ಷಿಕೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವ, ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

ಈ ಸಂದರ್ಭದಲ್ಲಿ ತುಮಕೂರು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನ್‌ ಕುಮಾರ್, ತಾಲೂಕು ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ನಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಾಗರಾಜು, ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ದರ್ಶನ್, ಪರ್ವತಯ್ಯ ಸೇರಿದಂತೆ ಮಠದ ಭಕ್ತರು ಹಾಜರಿದ್ದರು.

Continue Reading

ಧಾರ್ಮಿಕ

Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?

ಯಾವುದೇ ಸಂದರ್ಭ ಇರಲಿ ದಿನದಲ್ಲಿ ಶುಭ ಸಮಯ ನೋಡಿ ಕೊಂಡು ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು (Akshaya Tritiya 2024) ಚಿನ್ನವನ್ನು ಖರೀದಿಸಲು ಶುಭ ಸಮಯಗಳು ಹೇಗಿವೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Akshaya Tritiya 2024
Koo

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಆಚರಿಸಲ್ಪಡುವ ಹಬ್ಬ ಅಕ್ಷಯ ತೃತೀಯ (Akshaya Tritiya 2024) ಅಥವಾ ಅಕ್ಷಯ ತದಿಗೆ. ಈ ದಿನ ಕೃತ ಯುಗದ ಆರಂಭದ ದಿನ. ವಿಷ್ಣುವಿನ (vishnu) ದಶಾವತಾರಗಳಲ್ಲಿ ಆರನೇ ಅವತಾರವಾದ ಪರಶುರಾಮನ (parasuram) ಹಾಗೂ ಕಲ್ಯಾಣಕ್ರಾಂತಿಯ ರೂವಾರಿ ಬಸವೇಶ್ವರರ (basaweshwara) ಜನ್ಮ ದಿನ. ಭಗೀರಥನ (bhagiratha) ಪ್ರಯತ್ನದಿಂದ ಗಂಗೆ (ganga) ಭೂಮಿಗೆ ಬಂದ ದಿನವೂ ಹೌದು. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ದಿನವೆಂದು ನಂಬಲಾಗುತ್ತದೆ.

ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯ ವರ್ಷದ ಮೂರೂವರೆ ಶುಭದಿನಗಳಾದ ವಿಜಯದಶಮಿ (vijayadashami), ದೀಪಾವಳಿ (deepavali) ಹಾಗೂ ಬಲಿಪಾಡ್ಯದ ಅರ್ಧದಿನಗಳಲ್ಲಿ ಒಂದಾಗಿದೆ. ಹೀಗಾಗಿ ಈ ದಿನ ಯಾವುದೇ ಶುಭ ಕಾರ್ಯಗಳನ್ನು ನಡೆಸಬಹುದಾಗಿದೆ. ಅಲ್ಲದೆ ಅಕ್ಷಯ ತೃತೀಯವು ಚಿನ್ನ ಖರೀದಿಗೆ ಒಳ್ಳೆಯ ದಿನ ಎಂದೇ ನಂಬಲಾಗುತ್ತದೆ. ಈ ದಿನ ಯಾವುದೇ ವಸ್ತು ಖರೀದಿ ಮಾಡಿದರೂ ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚಿನವರು ಈ ದಿನ ಚಿನ್ನವನ್ನು ಖರೀದಿ ಮಾಡಲು ಆಸಕ್ತಿ ತೋರುತ್ತಾರೆ.

ಯಾವುದೇ ಸಂದರ್ಭ ಇರಲಿ. ದಿನದಲ್ಲಿ ಶುಭ ಸಮಯ ನೋಡಿಕೊಂಡು ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಶುಭ ಸಮಯಗಳು ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.


ಶುಭ ಮುಹೂರ್ತ ಯಾವಾಗ?

ಅಖ ತೀಜ್ ಎಂದೂ ಕರೆಯಲ್ಪಡುವ ಅಕ್ಷಯ ತೃತೀಯದ ಹಬ್ಬವನ್ನು ಮೇ 10ರಂದು ಆಚರಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯದಲ್ಲಿ ಮಂಗಳಕರ ದಿನವನ್ನು ಆಚರಿಸಲಾಗುತ್ತದೆ ಮತ್ತು ಮಹತ್ವದ ಧಾರ್ಮಿಕ ಆಚರಣೆಗಳು ಮತ್ತು ಚಟುವಟಿಕೆಗಳಿಂದ ಗುರುತಿಸಲ್ಪಡುತ್ತದೆ. ಈ ದಿನ ಚಿನ್ನದ ಖರೀದಿಯು ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯ 2024ರ ಪೂಜೆ ಮುಹೂರ್ತವು ಮೇ 10ರಂದು ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ ಇರುತ್ತದೆ. ತೃತೀಯ ತಿಥಿಯು ಮೇ 10ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ 2.50ಕ್ಕೆ ಮುಕ್ತಾಯಗೊಳ್ಳುತ್ತದೆ.

ಚಿನ್ನ ಖರೀದಿಗೆ ಶುಭ ಸಮಯ

ಚಿನ್ನವನ್ನು ಖರೀದಿಸಲು ಮೇ 9ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗಿ ಮೇ 11ರಂದು ತೃತೀಯ ತಿಥಿ ಮುಗಿಯುವವರೆಗೆ ಇರುತ್ತದೆ. ನವದೆಹಲಿ, ಮುಂಬಯಿ ಮತ್ತು ಬೆಂಗಳೂರಿನಲ್ಲಿ ಅಕ್ಷಯ ತೃತೀಯ 2024ರಂದು ಚಿನ್ನವನ್ನು ಖರೀದಿಸಲು ನಿರ್ದಿಷ್ಟ ಸಮಯದಲ್ಲಿ ಸ್ವಲ್ಪ ಬದಲಾಗುತ್ತದೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಹೊಸ ದೆಹಲಿಯಲ್ಲಿ ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ, ಮುಂಬಯಿಯಲ್ಲಿ ಬೆಳಗ್ಗೆ 6.6ರಿಂದ ಮಧ್ಯಾಹ್ನ 12.35ರವರೆಗೆ ಮತ್ತು ಬೆಂಗಳೂರಿನಲ್ಲಿ ಬೆಳಗ್ಗೆ 5.56ರಿಂದ ಮಧ್ಯಾಹ್ನ 12.16ರವರೆಗೆ ಚಿನ್ನ ಖರೀದಿ ಮಾಡಲು ಶುಭ ಸಮಯವಾಗಿದೆ.

Continue Reading

ಶಿವಮೊಗ್ಗ

Shivamogga News: ವಿಜೃಂಭಣೆಯ ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ರಥೋತ್ಸವ

Shivamogga News: ರಿಪ್ಪನ್‌ಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು.

VISTARANEWS.COM


on

Sri Siddhivinayaka Swami SrimanMaharathotsava in Ripponpet
Koo

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಆಭಿನವ ಚನ್ನಬಸವ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ, ಈ ವರ್ಷ ನಾಡಿಗೆ ಸಮೃದ್ಧ ಮಳೆ-ಬೆಳೆಯಾಗಿ ರೈತರ ಬದುಕು ಹಸನಾಗಲೆಂದು ಮತ್ತು ಜಗತ್ತಿನಲ್ಲೆಡೆ ಶಾಂತಿ, ನೆಮ್ಮದಿಯನ್ನು ಕರುಣಿಸುವಂತಾಗಲಿ ಎಂದು ಸಿದ್ಧಿವಿನಾಯಕ ದೇವರಲ್ಲಿ ಶ್ರೀಗಳು ಪ್ರಾರ್ಥಿಸಿದರು.

ಇದನ್ನೂ ಓದಿ: IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

ಮನ್ಮಹಾರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶಿವಮೊಗ್ಗದ ವಸಂತ ಭಟ್ ಮತ್ತು ಚಂದ್ರಶೇಖರ ಭಟ್ ಹಾಗೂ ಗುರುರಾಜ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಭಕ್ತರಿಗೆ ಉಚಿತವಾಗಿ ಕಬ್ಬಿನ ಹಾಲು ಮತ್ತು ಐಸ್‌ಕ್ರೀಮ್, ಕುಡಿಯುವ ನೀರಿನ ವ್ಯವಸ್ಥೆಯನ್ನು ವಿವಿಧ ಸಂಘಟನೆಗಳಿಂದ ಆಯೋಜಿಸಲಾಗಿತ್ತು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ; ಕೋಲಾರದಲ್ಲಿ ಮೊದಲ ಮಳೆಯ ಸಿಂಚನ

ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರಶಟ್ಟಿ, ಎನ್. ಸತೀಶ್, ಗಣೇಶ್ ಎನ್. ಕಾಮತ್, ಎಂ.ಡಿ. ಇಂದ್ರಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ತುಳೋಜಿರಾವ್, ಸ್ವಾಮಿ ದೊಡ್ಡಿನಕೊಪ್ಪ, ವೈ.ಜೆ. ಕೃಷ್ಣ, ಉಮೇಶ್ ಆರ್., ಮಂಜನಾಯ್ಕ್, ಎಂ.ಬಿ. ಮಂಜುನಾಥ, ಎಂ. ಸುರೇಶ್‌ ಸಿಂಗ್, ಸುಧೀರ್ ಪಿ., ರವೀಂದ್ರ ಕೆರೆಹಳ್ಳಿ, ನಾಗರತ್ನ ದೇವರಾಜ್, ಎಸ್.ಎನ್. ಬಾಲಚಂದ್ರ, ಕುಸುಮಾ ಬಾಲಚಂದ್ರ, ಪದ್ಮಾ ಸುರೇಶ್, ನಿವೃತ್ತ ಶಿಕ್ಷಕ ರಾಧಾಕೃಷ್ಣ, ಜಯಲಕ್ಷ್ಮಿ ಮೋಹನ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

Continue Reading

ಧಾರ್ಮಿಕ

Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

Ballari News: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ ಜರುಗಿತು. ಹರಕೆ ತೀರಿಸುವ ಭಕ್ತರ ಆಚರಣೆಗಳು ಗಮನ ಸೆಳೆದವು.

VISTARANEWS.COM


on

Kalamma Devi Pooja Mahotsava in Kampli
Koo

ಕಂಪ್ಲಿ: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ (Ballari News) ಜರುಗಿತು.

ಸೋಮವಾರ ಸಂಜೆ ಗಂಗೆಸ್ಥಳ ಮತ್ತು ಅಗ್ನಿ ಕುಂಭೋತ್ಸವ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಮೆರವಣಿಗೆಯಲ್ಲಿ ಮೂವರು ಭಕ್ತಾದಿಗಳು ಬಾಯಿಗೆ 12 ಅಡಿ ಉದ್ದದ ತ್ರಿಶೂಲ ಅಸ್ತ್ರವನ್ನು ಹಾಕಿಸಿಕೊಂಡು ಕಲ್ಲುಗುಂಡು, ಇಬ್ಬರು ಭಕ್ತಾದಿಗಳು ಆಟೋರಿಕ್ಷಾ, ಇಬ್ಬರು ಭಕ್ತರು ಕಾರುಗಳನ್ನು ತಮ್ಮ ಬೆನ್ನುಗಳಿಗೆ ಹಾಕಿದ್ದ ಕಬ್ಬಿಣದ ಕೊಕ್ಕೆಗಳಿಂದ ಎಳೆದು ತಮ್ಮ ಹರಕೆ ತೀರಿಸಿದರು. ಟ್ರ್ಯಾಕ್ಟರ್‌ಗೆ ಹಾಕಲಾಗಿದ್ದ ಬೊಂಬುಗಳಿಗೆ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ಜೋತು ಬೀಳುವ ಮೂಲಕ ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ

ಮೆರವಣಿಗೆಯು ಶ್ರೀ ಕಾಳಮ್ಮ ದೇವಸ್ಥಾನದಿಂದ ಶ್ರೀ ಸುಂಕಲಮ್ಮ ದೇವಸ್ಥಾನದ ವರೆಗೂ ಜರುಗಿತು. ಭಕ್ತಾದಿಗಳು ರಸ್ತೆಯುದ್ದಕ್ಕೂ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ತಮ್ಮ ಹರಕೆಯಂತೆ ಸುಡು ಬಿಸಿಲ ಮಧ್ಯೆಯು ಗುಂಡು, ಆಟೋ, ಕಾರುಗಳನ್ನು ಎಳೆದೊಯ್ದು ಭಕ್ತಿ ಸಮರ್ಪಿಸಿದರು.

ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದಂತಹ ಭಕ್ತರು ವಿಶೇಷ ಆಚರಣೆಯನ್ನು ನೋಡಿ ಕಣ್ ತುಂಬಿಕೊಳ್ಳುವ ಮೂಲಕ ಆಶ್ಚರ್ಯ ಚಕಿತರಾದರು. ಕಾರ್ಯಕ್ರಮದ ಪೌರೋಹಿತ್ಯವನ್ನು ಮಾರೆಪ್ಪ ಪೂಜಾರಿ ವಹಿಸಿದ್ದರು.

ಇದನ್ನೂ ಓದಿ: Koppala News: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಿಗುವಂತೆ ಕ್ರಮ ಕೈಗೊಳ್ಳಲು ಜಿ.ಪಂ ಸಿಇಒ ಸೂಚನೆ

ಈ ಸಂದರ್ಭದಲ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಚೆನ್ನರಾಜು, ಉಪಾಧ್ಯಕ್ಷ ಷಣ್ಮುಖಪ್ಪ, ಮುಖಂಡರಾದ ಮಾರೆಪ್ಪ ಪೂಜಾರಿ, ಸ್ವಾಮಿ ದೊರೆ, ಎ. ಗಣೇಶ್, ಎಸ್.ಜಿ.ಪೂಜಾರಿ, ಗುರುಮೂರ್ತಿ, ಪಣಿಯಪ್ಪ, ಆರ್. ಕೃಷ್ಣ ಪೂಜಾರಿ, ಎಸ್.ಆರ್. ಸುರೇಶ್ ಸೇರಿದಂತೆ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.

Continue Reading
Advertisement
IPL 2024
ಕ್ರೀಡೆ37 mins ago

IPL 2024 : ಅಭಿಮಾನಿಯ 80 ಸಾವಿರ ರೂಪಾಯಿ ಮೊಬೈಲ್​ ಒಡೆದು ಹಾಕಿದ ಚೆನ್ನೈ ಸ್ಟಾರ್​; ಇಲ್ಲಿದೆ ವಿಡಿಯೊ

Murder Case
ಕರ್ನಾಟಕ40 mins ago

Murder Case: ಬೆಂಗಳೂರಿನಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ; ನಡು ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ

Prajwal Revanna case Interpol issues messages against Prajwal to 196 countries
ಕ್ರೈಂ57 mins ago

Prajwal Revanna case: ಪ್ರಜ್ವಲ್‌ ರೇವಣ್ಣ ವಿರುದ್ಧ 196 ದೇಶಗಳಿಗೆ ಇಂಟರ್‌ಪೋಲ್‌ ಮೆಸೇಜ್‌; ಎಲ್ಲೇ ಕಂಡರೂ ಸಿಗುತ್ತೆ ಮಾಹಿತಿ!

PM Modi
ಪ್ರಮುಖ ಸುದ್ದಿ1 hour ago

PM Modi: ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ ಎಂದ ಮೋದಿ

Prajwal Revanna Case HD Revanna has severe chest pain Admission in Victoria
ರಾಜಕೀಯ1 hour ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Air Purifier
ಆಟೋಮೊಬೈಲ್1 hour ago

Air Purifier: ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ ಏಕೆ ಅಗತ್ಯ ಗೊತ್ತೆ?

Prajwal Revanna Case HD Revanna bail plea to be heard tomorrow Jail or Bela
ಕ್ರೈಂ2 hours ago

Prajwal Revanna Case: ನಾಳೆ ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಜೈಲಾ? ಬೇಲಾ?

Ujjivan Small Finance Bank
ವಾಣಿಜ್ಯ2 hours ago

Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಿಇಒ ಆಗಿ ಸಂಜೀವ್ ನೌಟಿಯಾಲ್ ನೇಮಕ

Lok Sabha Election 2024
ಕರ್ನಾಟಕ2 hours ago

Lok Sabha Election 2024: ಜಿ.ಎಂ.ಸಿದ್ದೇಶ್ವರ್‌ ಮಹಾ ಎಡವಟ್ಟು, ಪತ್ನಿ ಮತವನ್ನೂ ತಾವೇ ಹಾಕಿದ ಸಂಸದ

Nirav modi
ದೇಶ2 hours ago

Nirav Modi: ನೀರವ್‌ ಮೋದಿಗೆ ಲಂಡನ್‌ ಜೈಲೇ ಗತಿ; 5ನೇ ಬಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna has severe chest pain Admission in Victoria
ರಾಜಕೀಯ1 hour ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ4 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ6 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌