Puneeth Rajkumar : ಅವತ್ತು ವಿಧಿ ನಮ್ಮ ನಾಡಿಗೆ ನೋವಿನ ಪೆಟ್ಟು ನೀಡಿತ್ತು - Vistara News

ಸಿನಿಮಾ

Puneeth Rajkumar : ಅವತ್ತು ವಿಧಿ ನಮ್ಮ ನಾಡಿಗೆ ನೋವಿನ ಪೆಟ್ಟು ನೀಡಿತ್ತು

ವೀರ ಕನ್ನಡಿಗನ ದೇಹದಿಂದ ಉಸಿರು ತೊರೆದು ಗಾಳಿಯಲ್ಲಿ ಲೀನವಾಗಿ ಜೀವಾತ್ಮವು ಪರಮಾತ್ಮನ ಸಾನಿಧ್ಯದಲ್ಲಿ ಅಮರವಾಗಿದೆ.

VISTARANEWS.COM


on

That fate gave a painful blow to our pulse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಾಂಗತ್ಯ. ಬೆಂಗಳೂರು

ಅಪ್ಪು ನೀನು ನಮ್ಮ ಕಣ್ಣೆದುರಿಗೆ ಇಲ್ಲ ಅನ್ನೋದನ್ನ ಬಿಟ್ಟರೆ ಮಿಕ್ಕಿದ್ದೆಲ್ಲವೂ ಹಾಗೇ ಇದೆ. ನಿನ್ನ ಮಾನವ ಪ್ರೇಮದ ನಗುವಿನೊಂದಿಗೆ. ಅಕ್ಟೋಬರ್ 29 2021 ಅವತ್ತು ವಿಧಿ ದೊಡ್ಮನೆ ಹುಡುಗನನ್ನ ಮೆಚ್ಚಿ ಪ್ರೀತಿಸುವ ಗೌರವಿಸುವ ಅಸಂಖ್ಯಾತ ಅಭಿಮಾನಿಗಳಿಗೆ ನೋವಿನ ಪೆಟ್ಟು ನೀಡಿತು. ಅವತ್ತು ಒಂದು ದಿನ ಸಾವು ತಡ ಮಾಡಿ ಸುಮ್ಮನೆ ವಾಪಸ್ ಹೋಗಿದ್ರೆ ಅದೆಷ್ಟು ವಾತ್ಸಲ್ಯ ಹೃದಯದ ಕನ್ನಡಿಗರು ದೇವರಿಗೆ ತುಪ್ಪದ ದೀಪ ಬೆಳಗುತ್ತಿದ್ದರು ಇನ್ನೊಂದಿಷ್ಟು ನೊಂದ ಅಸಹಾಯಕ ಜೀವಗಳಿಗೆ ನಿನ್ನ ಸಹಾಯ ಪ್ರೀತಿ ವಾತ್ಸಲ್ಯ ಚಂದದ ಬದುಕು ಕಟ್ಟಿಕೊಳ್ಳಲಿಕ್ಕೆ ಇನ್ನೊಂದಿಷ್ಟು ನಿನ್ನಿಂದ
ನೆರವು ಸಿಗುತ್ತಿತ್ತು. ಈವಾಗ ನಿನ್ನನ್ನು ನೆನಪಿಸಿಕೊಳ್ಳುತ್ತ ಮನದೊಳಗೆ ದುಃಖಿಸುವವರು ಇದ್ದಾರೆ.

ನೀನಿಲ್ಲದ ಜಗತ್ತಲ್ಲಿ ನಿನ್ನ ಸ್ಮರಿಸುತ್ತಾ ಈಗಲೂ ಎಷ್ಟು ಊರು ಬೀದಿ ಮನೆಯ ದೇವರ ಕೋಣೆಯಲ್ಲಿ ನಿನಗೆ ದೀಪ ಬೆಳಗಿಸುತ್ತಾರೆ. ಭೇದ ಭಾವವಿಲ್ಲದೆ ಸಾರ್ಥಕವಾಗಿ ಬದುಕಿದ ನಿನ್ನ ವ್ಯಕ್ತಿತ್ವ ನಿಜಕ್ಕೂ ಭವ್ಯವಾದದ್ದು. ಅಷ್ಟೇ ಅಲ್ಲ ನಮಗೂ ಸಹ ಬದುಕಿದರೆ ಹೀಗೆ ಬದುಕಿ ಎನ್ನುವುದನ್ನು ತೋರಿಸಿಕೊಟ್ಟ ಪುಣ್ಯಾತ್ಮ ನೀನು.

ನಿನ್ನ ನಟನೆ ಪ್ರೀತಿ ನಗು ಪರೋಪಕಾರದ ಗುಣ ಇವುಗಳನ್ನೆಲ್ಲ ಕಂಡು ಅನುಸರಿಸುವ ನಾವುಗಳು ಧನ್ಯರು. ದೊಡ್ಮನೆ ಹುಡುಗ ನೀನು. ನಿಜಕ್ಕೂ ನಮ್ಮೆಲ್ಲರಿಗೂ ಅನುಕರಣೀಯ. ನಮ್ಮೆಲ್ಲರ ಎದೆಯಲ್ಲಿನ ಸಮೃದ್ಧವಾದ ಫಸಲಿಗೆ ವಿಧಿಯು ಇದ್ದಕ್ಕಿದ್ದಂತೆ ಬೆಂಕಿ ಇಟ್ಟಿತು. ನಲವತ್ತಾರು ವರ್ಷ ಬದುಕಿದ ಯುವರತ್ನ ಅದೆಷ್ಟೋ ತಾಯಂದಿರಿಗೆ, ಯುವಕರಿಗೆ ಪ್ರೇರಣೆ. ಹುಡುಗಿಯರಿಗಂತೂ ತುಂಬಾ ಆತ್ಮೀಯ. ಪ್ರೇಮಿಗಳಿಗೆ ಆತ್ಮ ಬಂಧು.

ದೇವರಾಣೆ ಅಪ್ಪು ನಿನ್ನ ಅಗಲಿಕೆಯು ನಮಗೆಲ್ಲ ಅತ್ಯಂತ ಯಾತನೆ. ಹಾಗೆಯೇ ನೋಡಿದಾಗ ಎಲ್ಲವೂ ಸರಿಯಾಗಿತ್ತು, ಚಂದವಾಗಿತ್ತು. ಥೇಟ್ ನಿನ್ನ ನಗು ಸರಳತೆಯಂತೆ. ಆದರೆ ವಿಧಿಯ ಲೆಕ್ಕಾಚಾರ ಬೇರೆ ಏನು ಇತ್ತು. ತೆರೆಮರೆಯಲ್ಲಿ ಹೊಂಚು ಹಾಕುತ್ತಿದ್ದ ಸಾವು ಮುಲಾಜಿಲ್ಲದೆ ನಿನ್ನನ್ನ ಎತ್ತಿಕೊಂಡು ಹೋಯಿತು. ಆಕಾಶಕ್ಕೆ. ಇದ್ದಕ್ಕಿದ್ದಂತೆ ನದಿಯೊಂದು ಬತ್ತಿ ಹೋದ ಅನುಭವವಾಗುತ್ತಿದೆ. ನಮಗೆಲ್ಲ. ಕತ್ತು ಮೇಲೆತ್ತಿ ಆಕಾಶ ನೋಡಿದರೆ ಚಂದಿರನ ಪಕ್ಕದಲ್ಲಿನ ದೊಡ್ಡ ನಕ್ಷತ್ರವಾಗಿ ಕಾಣುವ ದೇವತಾ ಮನುಷ್ಯನ ಮಗನನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿವೆ.

ಅವತ್ತು ಅಕ್ಟೋಬರ್ 29 2021 ಸಂಜೆ ನಾಲ್ಕು ಗಂಟೆ. ಐದು ವರ್ಷಗಳ ನಂತರ ಸೈನ್ಯದಿಂದ ಹಿಂದಿರುಗಿ ಬಂದು ನನ್ನ ಪ್ರೀತಿ ಹುಡುಗಿ ಜೊತೆ ಖುಷಿಯಿಂದ ಮಾತಾಡುವಾಗ ಅವಳ ವಾಟ್ಸಪ್ ಮೆಸೇಜ್ ಬಂತು ತಕ್ಷಣವೇ ಅವಳ ಮುಖ ಸಪ್ಪೆ ಆಯ್ತು ಕಂಗಳ ನೀರು ಕೆನ್ನೆ ಮೇಲೆ ಜಾರಿದವು. ಮೆಸೇಜ್ ನೋಡಿ ನಾನು ಅವಳು ಆಕಾಶದಿಟ್ಟಿಸಿದವು ರೋಧಿಸುತ್ತಾ ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ನಮ್ಮಿಬ್ಬರಲ್ಲಿ ದುಃಖ ಹೆಪ್ಪುಗಟ್ಟಿ ಪ್ರೇಮವೇ ಸಂಕಟ ಪಡುತ್ತಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Star Suvarna Kannada: ಪ್ರೀತಿಯ ಸ್ವಾದವನ್ನು ಹೊತ್ತು ಬರುತ್ತಿದೆ ಈ ಹೊಸ ಕಥೆ! ʻಜಾನಕಿ ಸಂಸಾರʼ ಯಾವಾಗ?

Star Suvarna Kannada: ʻಸ್ಟಾರ್ ಸುವರ್ಣ ವಾಹಿನಿʼ ಹೊಸ ಕಥೆ ಪ್ರೇಕ್ಷಕರಿಗೆ ಪರಿಚಯಿಸುತ್ತಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಧಾರಾವಾಹಿ ‘ಜಾನಕಿ ಸಂಸಾರ’.ಅಂಜನಾ ಶ್ರೀನಿವಾಸ್ 13 ವರ್ಷಗಳ ಬಳಿಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ‘ಜಾನಕಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಧಾರಾವಾಹಿ “ಜಾನಕಿ ಸಂಸಾರ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

VISTARANEWS.COM


on

Star Suvarna Kannada Janaki Samsara
Koo

ಬೆಂಗಳೂರು: ಕನ್ನಡ ಕಿರುತೆರೆಯ ಕಡಲಲ್ಲಿ ʻಸ್ಟಾರ್ ಸುವರ್ಣ ವಾಹಿನಿʼಯು (Star Suvarna Kannada) ಹೊಸ ಯೋಜನೆಗಳ ಜತೆ ವಿನೂತನ ಪರಿಕಲ್ಪನೆಗಳೊಂದಿಗೆ ಮನರಂಜನೆಯ ಕ್ರಾಂತಿಯನ್ನೇ ಹುಟ್ಟು ಹಾಕಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಧಾರಾವಾಹಿ ‘ಜಾನಕಿ ಸಂಸಾರ'(Janaki Samsara Serial).

ಇದೊಂದು ತುಂಬು ಕುಟುಂಬದ ಕಥೆ. ಈ ಮನೆಯ ಹಿರಿ ಸೊಸೆ ಜಾನಕಿ, ಇಡೀ ಸಂಸಾರದ ಹೊಣೆ ಹೊತ್ತವಳು. ಎಷ್ಟೇ ಕಷ್ಟ ಬಂದರು ಎದುರಿಸುವ ಛಲಗಾರ್ತಿ. ವಿದ್ಯಾವಂತೆಯಾಗಿರುವ ಜಾನಕಿ ತನ್ನ ಸಂಸಾರದ ಜತೆ ಉದ್ಯೋಗವನ್ನು ಸರಿ ಸಮಾನಾಗಿ ನಿಭಾಯಿಸುತ್ತಿರುತ್ತಾಳೆ. ಸದಾಕಾಲ ಮನೆ ಮಂದಿಯನ್ನು ಒಗ್ಗಟ್ಟಾಗಿಡಲು ಬಯಸುವ ಜಾನಕಿಯ ಸಂಸಾರಕ್ಕೆ ಮನೆಯೊಡೆಯುವ ವ್ಯಕ್ತಿಯ ಆಗಮನವಾದರೆ, ಮುಂದೆ ಜಾನಕಿ ತನ್ನ ಸಂಸಾರವನ್ನು ಹೇಗೆ ಕಾಪಾಡ್ತಾಳೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ʻಜಾನಕಿ ಸಂಸಾರ’ ಧಾರಾವಾಹಿಯು ಸುಂದರ ತಾರಾಗಣವನ್ನು ಹೊಂದಿದ್ದು, ಕನ್ನಡಿಗರ ಮನಸು ಕದ್ದ ಕಣ್ಮಣಿ, ‘ಕೃಷ್ಣರುಕ್ಮಿಣಿ’ ಧಾರಾವಾಹಿ ಖ್ಯಾತಿಯ ರುಕ್ಮಿಣಿ ಅಲಿಯಾಸ್ ಅಂಜನಾ ಶ್ರೀನಿವಾಸ್ ಇದ್ದಾರೆ. ಅಂಜನಾ ಶ್ರೀನಿವಾಸ್ ಅವರು 13 ವರ್ಷಗಳ ಬಳಿಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ‘ಜಾನಕಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಸೂರಜ್ ಹೊಳಲು, ಕಾವ್ಯ ಶಾಸ್ತ್ರೀ, ಬಾಲ ನಟಿ ಶ್ರೀ ದಿಶಾ, ಮರೀನ ತಾರಾ, ರವಿ ಭಟ್, ಚಂದನ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಹೊಸ ಧಾರಾವಾಹಿ “ಜಾನಕಿ ಸಂಸಾರ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

ಸ್ಟಾರ್ ಸುವರ್ಣವಾಹಿನಿಯಲ್ಲಿ (Star Suvarna) ಪ್ರಸಾರವಾಗುತ್ತಿದ್ದ ʻನಮ್ಮ ಲಚ್ಚಿ’ (Namma Lacchi) ಧಾರಾವಾಹಿ ಅಂತ್ಯ ಕಂಡ ಬೆನ್ನಲ್ಲೇ ಹೊಸ ಧಾರಾವಾಹಿಗಳು ಬರುತ್ತಿವೆ. 2023ರ ಫೆಬ್ರವರಿ 6ಕ್ಕೆ ಧಾರಾವಾಹಿ ಶುರು ಆಗಿತ್ತು. ಬಂಗಾಳಿ ಭಾಷೆಯ ʻಪೋಟಲ್ ಕುಮಾರ್ ಗಾನಾವಾಲʼ (Potol Kumar Gaanwala) ಧಾರಾವಾಹಿಯ ಅಧಿಕೃತ ರೀಮೆಕ್ ಈ ʻನಮ್ಮ ಲಚ್ಚಿʼ. 

ʼನಮ್ಮ ಲಚ್ಚಿ’ ಧಾರಾವಾಹಿಯಲ್ಲಿ ಮೂವರು ಮಕ್ಕಳು ಸಾಕಷ್ಟು ಗಮನ ಸೆಳೆಯುತ್ತಾರೆ. ಅದರಲ್ಲಿ ಲಚ್ಚಿ ಮುಖ್ಯ ಪಾತ್ರಧಾರಿಯಾದರೆ, ರಿಯಾ ಕೂಡ ಪ್ರಾಮುಖ್ಯತೆ ಪಡೆದಿದ್ದಾರೆ. ಇನ್ನು ಸುಗ್ಗಿ, ಲಚ್ಚಿಗೆ ತಂಗಿಯಾಗಿ ಗಮನ ಸೆಳೆದಿದ್ದಳು.

Continue Reading

ಕಾಲಿವುಡ್

Ilaiyaraaja Issues Legal Notice: ರಜನಿಕಾಂತ್‌ ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ!

Ilaiyaraaja Issues Legal Notice: ಕೂಲಿ ಸಿನಿಮಾಗೆ ಅನಿರುದ್ಧ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಇಳಯರಾಜ ಅವರ ʻವಾ ವಾ ಪಕಂ ವಾʼ ಹಾಡನ್ನು ಚಿತ್ರಕ್ಕಾಗಿ ಮರುಸೃಷ್ಟಿಸಲಾಗಿದೆ. ಇದಕ್ಕೆ ಇಳಯರಾಜ ಅನುಮತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇಳಯರಾಜಾ ಕಂಪೋಸ್ ಮಾಡಿದ್ದ ಹಾಡಿನ ತುಣುಕನ್ನು ಬಳಸಿಕೊಂಡಿದ್ದಾರೆಂದು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಹೀಗಾಗಿ ಚಿತ್ರತಂಡ ಕಾನೂನು ಸಮಸ್ಯೆ ಎದುರಿಸುತ್ತಿದೆ.

VISTARANEWS.COM


on

Ilaiyaraaja Issues Legal Notice to Rajinikanth Coolie
Koo

ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ 171ನೇ ಸಿನಿಮಾ ‘ಕೂಲಿ’ (Coolie Movie) ಟೈಟಲ್ ಟೀಸರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಇದೀಗ ʻಕೂಲಿʼ ತಂಡಕ್ಕೆ ಸಂಗೀತ ನಿರ್ದೇಶಕ ಇಳಯರಾಜ ನೋಟಿಸ್ (Ilaiyaraaja Issues Legal Notice) ಕಳುಹಿಸಿದ್ದಾರೆ. ಇಳಯರಾಜ ಕಂಪೋಸ್ ಮಾಡಿದ್ದ ಹಾಡಿನ ತುಣುಕನ್ನು ಬಳಸಿಕೊಂಡಿದ್ದಾರೆಂದು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಹೀಗಾಗಿ ಚಿತ್ರತಂಡ ಕಾನೂನು ಸಮಸ್ಯೆ ಎದುರಿಸುತ್ತಿದೆ.

ವರದಿಯ ಪ್ರಕಾರ, ʻಕೂಲಿʼ ಸಿನಿಮಾ ತಂಡ 1983ರ ʻತಂಗ ಮಗನ್ʼ ಚಿತ್ರದ ʻವಾ ವಾ ಪಕ್ಕಂ ವಾʼ (‘Wa Wa Pabha Wa’)ಹಾಡನ್ನು ಅನುಮತಿ ಪಡೆಯದೆ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ ಇಳಯರಾಜ. ಈ ಸಿನಿಮಾ ಟೈಟಲ್ ಟೀಸರ್‌ ಇತ್ತೀಚೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇಂತಹ ಸಂದರ್ಭದಲ್ಲಿ ಇಳಯರಾಜ ಟ್ಯೂನ್ ಹಾಕಿದ ಹಾಡನ್ನು ನೆಟ್ಟಿಗರೇ ಗುರುತಿಸಿದ್ದರು.

ಕೂಲಿ ಸಿನಿಮಾಗೆ ಅನಿರುದ್ಧ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಇಳಯರಾಜ ಅವರ ʻವಾ ವಾ ಪಕಂ ವಾʼ ಹಾಡನ್ನು ಚಿತ್ರಕ್ಕಾಗಿ ಮರುಸೃಷ್ಟಿಸಿದ್ದರು. ಇದಕ್ಕೆ ಇಳಯರಾಜ ಅನುಮತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ನಿರ್ಮಾಣ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಅಲ್ಲದೇ ‘ಕೂಲಿ’ ಟೀಸರ್ ನಿಂದ ಮ್ಯೂಸಿಕ್‌ ತೆಗೆಯದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದೀಗ ಸನ್ ಪಿಕ್ಚರ್ಸ್ ಸಂಸ್ಥೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಈ ಘಟನೆ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: Pushpa 2: ‘ಪುಷ್ಪ 2’ ಟೈಟಲ್​ ಸಾಂಗ್ ಔಟ್‌: ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್!

ಕೂಲಿ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಾರೆ ಎನ್ನುವ ಆರೋಪ ಕೂಡ ಇದೆ. ಈ ಹಿಂದೆ ವಿಕ್ರಮ್ ಸಿನಿಮಾದಲ್ಲೂ ಅವರು ಇಳಯರಾಜ ಅವರು ಹಾಡನ್ನು ಬಳಸಿಕೊಂಡಿದ್ದರು. ಆಗಲೂ ಇಳಯರಾಜ ಗರಂ ಆಗಿದ್ದರು. ಈಗ ಮತ್ತೆ ಲೋಕೇಶ್ ತಪ್ಪು ಮಾಡಿದ್ದಾರೆ.

ʻತಲೈವರ್ 171ʼ ಸಿನಿಮಾ ಇದೀಗ ಕೂಲಿ ಎಂದು ಟೈಟಲ್‌ ಇಡಲಾಗಿದೆ. ಲೋಕೇಶ್ ಜತೆ ರಜನಿಕಾಂತ್ ಅಭಿನಯದ ಮೊದಲ ಚಿತ್ರ ಇದಾಗಿದೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದ್ದು, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಘೋಷಿಸಲಾಗಿತ್ತು. ಚಿತ್ರದಲ್ಲಿ ಶಿವಕಾರ್ತಿಕೇಯನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳಿವೆ. ಆದರೆ ಉಳಿದ ಪಾತ್ರವರ್ಗ ಇನ್ನೂ ಘೋಷಿಸಿಲ್ಲ. ಟೈಟಲ್ ಅನೌನ್ಸ್ ಆದ ದಿನವೇ ಚಿತ್ರದ ಫುಲ್ ಟೀಮ್ ರಿವೀಲ್ ಆಗುವ ನಿರೀಕ್ಷೆ ಇದೆ. ಅನಿರುದ್ಧ್ ರವಿಚಂದರ್ ಸಂಗೀತ ಇದ್ದರೆ, ಜೋಡಿ ಅನ್ಬರಿವ್ ಸಾಹಸ ನಿರ್ದೇಶನ ಇದೆ.
ಇನ್ನು ಲೋಕೇಶ್‌ ಕನಕರಾಜ್‌ ಅವರು ಇತ್ತೀಚೆಗೆ ಶ್ರುತಿ ಹಾಸನ್ ಅವರ ʻಇನಿಮೆಲ್ʼ ಹಾಡಿನ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ರಜನಿಕಾಂತ್ ಜತೆಗಿನ ಚಿತ್ರದ ಹೊರತಾಗಿ, ಲೋಕೇಶ್ ಅವರು ಕಾರ್ತಿ ಜತೆಗಿನ ʻಕೈದಿ 2ʼ ಸಿನಿಮಾ ಸಹ ಹೊಂದಿದ್ದಾರೆ.

Continue Reading

ಕಿರುತೆರೆ

Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

Puttakkana Makkalu Serial: ಮುರಳಿ-ಸಹನಾ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದೆ. ಸಹನಾಗೆ ವಿಚ್ಛೇದನ ಬೇಕು, ಮುರಳಿಗೆ ತನ್ನ ತಪ್ಪಿನ ಅರಿವಾಗಿದೆ. ಮುರಳಿ ಜತೆ ಬಾಳಲು ರೆಡಿ ಇಲ್ಲ ಸಹನಾ. ಸಹನಾ ಈಗ ಮನೆ ಬಿಟ್ಟು ಹೋಗಿದ್ದಾಳೆ.ತಾಯಿಗೆ ಎಲ್ಲಿ ತಾನು ಭಾರವಾಗುತ್ತೇನೋ ಎಂದು ಸಹನಾ ಮನೆಯಿಂದ ಆಚೆ ನಡೆದಿದ್ದಾಳೆ. ಕಂಠಿ, ಕಾಳಿಯಿಂದ ಹೇಗೋ ಪಾರಾಗಿ ಬಸ್‌ ಹತ್ತಿ ಹೊರಟು ಬಿಟ್ಟಳು ಸಹನಾ.

VISTARANEWS.COM


on

Puttakkana Makkalu Serial puttakka daughter Sahana left home
Koo

ಬೆಂಗಳೂರು:  ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದೀಗ ಪುಟ್ಟಕ್ಕನ ದೊಡ್ಡ ಮಗಳು ಸಹನಾ ದೇವಿಪುರ ಬಿಟ್ಟು ಹೊರನಡೆದಿದ್ದಾಳೆ. ಪುಟ್ಟಕ್ಕನಿಗೆ ಮಗಳು ಸಹನಾ ಗಂಡನ ಮನೆಯಲ್ಲಿ ಹಾಯಾಗಿ ಸಂಸಾರ ಮಾಡಬೇಕು ಎಂದು ಆಸೆಯಾದರೆ, ಮುರಳಿಯ ಜತೆ ಸಂಸಾರ ಮಾಡಲು ಒಲ್ಲೆ ಎನ್ನುತ್ತಿದ್ದಾಳೆ ಸಹನಾ. ಇದೀಗ ತಾಯಿಗೆ ಎಲ್ಲಿ ತಾನು ಭಾರವಾಗುತ್ತೇನೋ ಎಂದು ಸಹನಾ ಮನೆಯಿಂದ ಆಚೆ ನಡೆದಿದ್ದಾಳೆ.

ಮುರಳಿ-ಸಹನಾ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದೆ. ಸಹನಾಗೆ ವಿಚ್ಛೇದನ ಬೇಕು, ಮುರಳಿಗೆ ತನ್ನ ತಪ್ಪಿನ ಅರಿವಾಗಿದೆ. ಎಷ್ಟೇ ಕ್ಷಮೆ ಕೇಳಿದರೂ ಕೂಡ ಸಹನಾ ಮುರಳಿಯನ್ನು ಕ್ಷಮಿಸಿ, ಅವನ ಜತೆ ಬಾಳಲು ರೆಡಿ ಇಲ್ಲ. ತವರು ಮನೆಗೆ ಭಾರ ಆಗದೆ ಬದುಕುವ ನಿರ್ಧಾರ ಮಾಡಿರುವ ಸಹನಾ, ಈಗ ಮನೆ ಬಿಟ್ಟು ಹೋಗಿದ್ದಾಳೆ.

ಸಹನಾ ಮನಸ್ಸಲ್ಲಿ ಏನಿದೆ?

ಇತ್ತ ಪುಟ್ಟಕ್ಕ ಕೂಡ ಸಹನಾಳ ಮನಸ್ಸನ್ನು ಆರ್ಥ ಮಾಡಿಕೊಳ್ಳಲು ರೆಡಿ ಇಲ್ಲ. ಸಹನಾ ಮನಸ್ಸಲ್ಲಿ ಏನಿದೆ? ಎಂದು ಪುಟ್ಟಕ್ಕ ಅರ್ಥ ಮಾಡಿಕೊಳ್ಳುತ್ತಿಲ್ಲ. ಇತ್ತ ಸಹನಾ ಕೂಡ ಏಕಾಏಕಿ ಬ್ಯಾಗ್‌ ಹಿಡಿದು ಮನೆಯಿಂದ ಹೊರ ಹೋಗಲು ಸಜ್ಜಾಗುತ್ತಾಳೆ. ತಂದೆ ತಾಯಿಗೆ ನಮಸ್ಕರಿಸಿ ಅಳುತ್ತಾಳೆ. ʻʻಏನೇ ಆಗಲಿ ತವರು ಮನೆಗೆ ಭಾರವಾಗಿ ನಾನು ಬದುಕಲಾರೆ. ನಾನು ಏನಾದರೂ ಸಾಧಿಸಿ ತೋರಿಸುತ್ತೇನೆ. ದಯವಿಟ್ಟು ಕ್ಷಮಿಸು ಅವ್ವ. ಅಮ್ಮ ನೀನು ನಮ್ಮೆರನ್ನು ಭದ್ರವಾಗಿ ಸಾಕು ಬಿಟ್ಟೆ. ಈಗ ನಾನು ಏನಾದರೂ ಸಾಧನೆ ಮಾಡಿಯೇ ಬರುತ್ತೇನೆʼʼಎಂದು ಸಹನಾ ಮನಸ್ಸಿನಲ್ಲಿ ಮರಗುಳತ್ತಾಳೆ. ಪುಟ್ಟಕ್ಕನಿಗೆ ಸಹನಾ ಮನೆ ಬಿಟ್ಟು ಹೋಗುತ್ತಾಳೆ ಎನ್ನುವ ಪರಿವೇ ಇಲ್ಲದೆ ಗಾಢವಾದ ನಿದ್ದೆಗೆ ಜಾರಿರುತ್ತಾರೆ.

ಇದನ್ನೂ ಓದಿ: Viral News: ಕೊಲೆಯಾಗಿದ್ದಾರೆ ಎನ್ನಲಾದ ಸಹೋದರಿಯರು ವರ್ಷದ ಬಳಿಕ ಪತ್ತೆ; ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಈ ಘಟನೆ

ಇಷ್ಟೂ ದಿನವೂ ಸಹನಾ ಮನವೊಲಿಸಿ,ಮುರುಳಿ ಜತೆ ಮಗಳು ಚೆನ್ನಾಗಿ ಬದುಕಬೇಕು ಎಂದು ಪುಟ್ಟಕ್ಕ ಹರಸಾಹಸ ಪಡುತ್ತಿರುತ್ತಾಳೆ. ಆದರೆ ಆ ಪ್ರಯತ್ನ ಈಗ ವ್ಯರ್ಥವಾಗಿದೆ. ಸಹನಾ ಎಲ್ಲರೂ ಮನೆಯಲ್ಲಿ ಮಲಗಿರುವಾಗ ಬಸ್ ಸ್ಟ್ಯಾಂಡಿಗೆ ಹೋಗುತ್ತಾಳೆ. ಬಸ್‌ಗೆಂದು ಕಾಯುತ್ತಿರುವಾಗ, ತಂಗಿಯ ಗಂಡ ಅಂದರೆ ಕಂಠಿ ರಸ್ತೆಯಲ್ಲಿಯೇ ಪಾಸ್ ಆಗುತ್ತಾರೆ. ಕಂಠಿಯನ್ನು ನೋಡಿದ ಸಹನಾ ಒಂದು ಮರದ ಬದಿಗೆ ಬಂದು ಅವಿತು ಕುಳಿತುಕೊಳ್ಳುತ್ತಾಳೆ. ಮಾತ್ರವಲ್ಲ ಅದೇ ಸಮಯಕ್ಕೆ ಕಾಳಿ ಕೂಡ ಅಲ್ಲಿ ಇರುತ್ತಾನೆ. ಕಾಳಿ ಕೂಡ ನಶೆಯಲ್ಲಿ ಇದ್ದ ಕಾರಣ ಅವನೂ ಸಹನಾಳನ್ನು ಪತ್ತೆ ಹಚ್ಚಲು ಆಗುವುದಿಲ್ಲ. ಆ ಬಳಿಕ ಸಹನಾ ಹೇಗೋ ಇಬ್ಬರಿಂದ ತಪ್ಪಿಸಿಕೊಂಡು ಒಬ್ಬಳೇ ನನ್ನನ್ನು ಕ್ಷಮಿಸಿಬಿಡಿ ಎಂದು ಜೋರಾಗಿ ಅಳುತ್ತಾಳೆ.

ಸಹನಾಗೆ ಬಸ್ ಹತ್ತಿವಾಗ ಬಹಳ ಬೇಸರ ಆಗುತ್ತದೆ. ದೇವಿಪುರಕ್ಕೆ ಮತ್ತೆ ಬರುವುದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡು ಬಸ್ಸನ್ನು ಏರಿ, ಅಲ್ಲಿಂದ ಹೊರಟು ಹೋಗುತ್ತಾಳೆ. ಅತ್ತ ತಂಗಿ ಸ್ನೇಹಾಗೆ ತನ್ನ ಅಕ್ಕನದ್ದೇ ಚಿಂತೆ. ಆದರೀಗ ಸಹನಾ ಎಲ್ಲರನ್ನೂ ಬಿಟ್ಟು ದೂರದ ಊರಿಗೆ ಪ್ರಯಾಣ ಬೆಳೆಸಿದ್ದಾಳೆ. ಈ ಸಂಚಿಕೆ ಕಂಡು ವೀಕ್ಷಕರು ಸಹನಾ ನಿರ್ಧಾರಕ್ಕೆ ಸಾಥ್‌ ಕೊಟ್ಟಿದ್ದಾರೆ.

 ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

Continue Reading

ಕಾಲಿವುಡ್

Uma Ramanan: ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ಇನ್ನಿಲ್ಲ

Uma Ramanan: ಉಮಾ ರಮಣನ್ ತರಬೇತಿ ಪಡೆದ ಶಾಸ್ತ್ರೀಯ ಗಾಯಕಿಯಾಗಿದ್ದು. 35 ವರ್ಷಗಳಲ್ಲಿ 6,000 ಕ್ಕೂ ಹೆಚ್ಚು ಸಂಗೀತ ಕಛೇರಿಗಳಲ್ಲಿ ಕಾಣಿಸಿಕೊಂಡರು. ಉಮಾ ಅವರು ತಮ್ಮ ಪತಿಗಾಗಿ ಹಲವಾರು ಹಾಡುಗಳನ್ನು ಹಾಡಿದ್ದರೂ, ಇಳಯರಾಜ ಅವರೊಂದಿಗಿನ ಅವರ ಒಡನಾಟವೇ ಅವರನ್ನು ಖ್ಯಾತಿಗೆ ತಂದಿತ್ತು.

VISTARANEWS.COM


on

Uma Ramanan dies in Chennai
Koo

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ (Uma Ramanan) ಅವರು ಬುಧವಾರ (ಮೇ.1) ನಿಧನರಾದರು. ಉಮಾ ರಮಣನ್ ಅವರಿಗೆ 72 ವರ್ಷ ವಯಸ್ಸಾಗಿತ್ತು. ತಮಿಳು ಚಿತ್ರರಂಗದಲ್ಲಿ ಅನೇಕ ಹಿಟ್‌ ಹಾಡುಗಳನ್ನು ಹಾಡಿದ್ದರು. ಸಾವಿನ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಂತ್ಯಕ್ರಿಯೆಯ ಕುರಿತು ಕುಟುಂಬ ಮಾಹಿತಿ ಹಂಚಿಕೊಂಡಿಲ್ಲ.

ಉಮಾ ರಮಣನ್ ತರಬೇತಿ ಪಡೆದ ಶಾಸ್ತ್ರೀಯ ಗಾಯಕಿಯಾಗಿದ್ದು. 35 ವರ್ಷಗಳಲ್ಲಿ 6,000 ಕ್ಕೂ ಹೆಚ್ಚು ಸಂಗೀತ ಕಛೇರಿಗಳಲ್ಲಿ ಕಾಣಿಸಿಕೊಂಡರು. ಉಮಾ ಅವರು ತಮ್ಮ ಪತಿಗಾಗಿ ಹಲವಾರು ಹಾಡುಗಳನ್ನು ಹಾಡಿದ್ದರೂ, ಇಳಯರಾಜ ಅವರೊಂದಿಗಿನ ಅವರ ಒಡನಾಟವೇ ಅವರನ್ನು ಖ್ಯಾತಿಗೆ ತಂದಿತ್ತು.

ತಮಿಳು ಚಲನಚಿತ್ರ ‘ಪೂಂಗಾತವೆ ತಾಳ್ ತಿರವೈ’, ‘ನಿಜಲ್ಗಲ್’ನಲ್ಲಿ ಅವರ ಹಾಡಿಗೆ ಹೆಚ್ಚು ಜನಮನ್ನಣೆ ಸಿಕ್ಕಿತು. ಇಳಯರಾಜರೊಂದಿಗೆ 100ಕ್ಕೂ ಹೆಚ್ಚು ಹಾಡುಗಳಲ್ಲಿ ಕೆಲಸ ಮಾಡಿದರು. ಇಳಯರಾಜರಲ್ಲದೆ, ಅವರು ಸಂಗೀತ ಸಂಯೋಜಕರು, ವಿದ್ಯಾಸಾಗರ್, ಮಣಿ ಶರ್ಮಾ ಮತ್ತು ದೇವಾ ಜತೆಗೂ ಹಾಡುಗಳನ್ನು ಹಾಡಿದ್ದಾರೆ.

ಇದನ್ನೂ ಓದಿ: Lok Sabha Election : ತಮಿಳುನಾಡಿನಲ್ಲಿ ಕತ್ತೆಗಳ ಮೂಲಕ ಹಳ್ಳಿಗಳಿಗೆ ಇವಿಎಂ ತಲುಪಿಸಿದ ಅಧಿಕಾರಿಗಳು!

ಇಳಯರಾಜ ಅವರ ಕೆಲವು ಪ್ರಸಿದ್ಧ ಹಾಡುಗಳಲ್ಲಿ ‘ತೂರಲ್ ನಿನ್ನ ಪೊಚ್ಚು’ ಚಿತ್ರದ ‘ಭೂಪಾಲಂ ಇಸೈಕ್ಕುಮ್’, ‘ಆನಂದ ರಾಗಂ’ ‘ಪನ್ನರ್ ಪುಷ್ಪಂಗಳ’ ‘ಕಣ್ಮಣಿ ನೀ ವರ’ ‘ತೆಂಡ್ರಾಲೆ ಎನ್ನೈ ತೋಡು’, ‘ಒರು ಕೈದಿಯಿನ್ ದೈರ್ ಕೈದಿ’ಯ ‘ಪೊನ್ ಮಾನೇ’. , ‘ಅರಂಗೇತ್ರ ವೇಲೈ’ ಚಿತ್ರದ ‘ಆಗಾಯ ವೆನ್ನಿಲವೆ’ ಮತ್ತು ‘ಮಹಾನದಿ’ಯಿಂದ ‘ಶ್ರೀ ರಂಗ ರಂಗನಾಥನಿನ್’ ಸೇರಿವೆ. 1977 ರಲ್ಲಿ ‘ಶ್ರೀ ಕೃಷ್ಣ ಲೀಲಾ’ ಚಿತ್ರದ ಹಾಡಿನ ಮೂಲಕ ಗಾಯಕಿಯಾಗಿ ಪದಾರ್ಪಣೆ ಮಾಡಿದರು. ಈ ಹಾಡನ್ನು ಪತಿ ಎವಿ ರಮಣನ್ ಅವರೊಂದಿಗೆ ಹಾಡಿದರು.

ಉಮಾ ರಮಣನ್ ಅವರ ಕೊನೆಯ ಹಾಡು ವಿಜಯ್ ಅವರ ‘ತಿರುಪಾಚಿ’ ಗಾಗಿ ‘ಕಣ್ಣುಂ ಕಣ್ಣುಮ್ತನ್ ಕಳಂದಾಚು’ ಹಾಡು. ಮಣಿ ಶರ್ಮಾ ಸಂಯೋಜಿಸಿದ ಈ ಹಾಡನ್ನು ಹರೀಶ್ ರಾಘವೇಂದ್ರ ಮತ್ತು ಪ್ರೇಮ್‌ಜಿ ಅಮರೇನ್ ಅವರೊಂದಿಗೆ ಹಾಡಿದ್ದಾರೆ.

Continue Reading
Advertisement
prajwal revanna case look out notice
ಪ್ರಮುಖ ಸುದ್ದಿ53 seconds ago

Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

Star Suvarna Kannada Janaki Samsara
ಕಿರುತೆರೆ12 mins ago

Star Suvarna Kannada: ಪ್ರೀತಿಯ ಸ್ವಾದವನ್ನು ಹೊತ್ತು ಬರುತ್ತಿದೆ ಈ ಹೊಸ ಕಥೆ! ʻಜಾನಕಿ ಸಂಸಾರʼ ಯಾವಾಗ?

T20 World Cup
ಕ್ರಿಕೆಟ್19 mins ago

T20 World Cup: ಟಿ20 ವಿಶ್ವಕಪ್​ ತಂಡ ಸೇರಲು ರಾಹುಲ್​ಗೆ ಇನ್ನೂ ಇದೆ ಅವಕಾಶ

Health Tips
ಆರೋಗ್ಯ24 mins ago

Health Tips: ಕಿಡ್ನಿಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡನ್ನು ಹೀಗೆ ಬಳಸಿ…

Gangster Goldy Brar
ವಿದೇಶ31 mins ago

Gangster Goldy Brar:”ಶೂಟೌಟ್‌ನಲ್ಲಿ ಸತ್ತಿದ್ದು ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಅಲ್ಲ”…ವದಂತಿಗೆ ತೆರೆ

prajawal revanna case driver karthik phone
ಕ್ರೈಂ34 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ವಿಡಿಯೋ ಡ್ರೈವರ್‌ ಮೊಬೈಲ್‌ಗೆ ಲೀಕ್‌ ಆಗಿದ್ದು ಹೀಗೆ!

Ilaiyaraaja Issues Legal Notice to Rajinikanth Coolie
ಕಾಲಿವುಡ್34 mins ago

Ilaiyaraaja Issues Legal Notice: ರಜನಿಕಾಂತ್‌ ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ!

Road Accident in anekal
ಬೆಂಗಳೂರು ಗ್ರಾಮಾಂತರ49 mins ago

Road Accident : ಚಲಿಸುತ್ತಿರುವಾಗಲೇ ಬಸ್‌ನಿಂದ ಕಳಚಿಕೊಂಡ ಚಕ್ರಗಳು; ಗಲಿಬಿಲಿಗೊಂಡ ಪ್ರಯಾಣಿಕರು

Puttakkana Makkalu Serial puttakka daughter Sahana left home
ಕಿರುತೆರೆ1 hour ago

Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

Mosquito controle
ಲೈಫ್‌ಸ್ಟೈಲ್1 hour ago

Mosquito control: ಸೊಳ್ಳೆ ಕಾಟಕ್ಕೆ ಬೇಸತ್ತಿದ್ದೀರಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌