Sunday Read: ಜೋಗಿ ಹೊಸ ಪುಸ್ತಕ: ಚಿಯರ್ಸ್: ಅಮರ್ ಅಂತೋಣಿ - Vistara News

ಕಲೆ/ಸಾಹಿತ್ಯ

Sunday Read: ಜೋಗಿ ಹೊಸ ಪುಸ್ತಕ: ಚಿಯರ್ಸ್: ಅಮರ್ ಅಂತೋಣಿ

ಕತೆಗಾರ ಜೋಗಿ ಅವರ ಹೊಸ ಕೃತಿ ʼಚಿಯರ್ಸ್‌‌ʼ ಹಾಗೂ ಇನ್ನಿತರ ಮೂರು ಕೃತಿಗಳು ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿವೆ. ಈ ಕೃತಿಯಿಂದ ಆಯ್ದ ಭಾಗ ಇಲ್ಲಿದೆ.

VISTARANEWS.COM


on

jogi book cheers
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಂತೋಣಿ ನೀರಿನಲ್ಲಿ ಮುಳುಗಿ ಸಾಯುವುದಕ್ಕೆ ಮೊದಲು ಏನು ಹೇಳಿದ ಅನ್ನುವುದು ಮಹದೇವನಿಗೆ ಒಗಟಾಗಿಯೇ ಉಳಿದಿದೆ. ಮೂರನೇ ಸಲ ನೀರಿನಿಂದ ಮೇಲೇಳುವ ಹೊತ್ತಿಗೆ ಅಂತೋಣಿಯ ಶ್ವಾಸಕೋಶದೊಳಗೆ ನೀರು ಹೊಕ್ಕಿತ್ತು. ಅವನು ಕೈ ಮೇಲಕ್ಕೆತ್ತಿ ಮಹದೇವನ ಕಡೆ ಕಣ್ಣು ತಿರುಗಿಸಿ ಏನೋ ಹೇಳಿದ. ಅದು ನೀರೊಳಗೆ ಉಸಿರುಬಿಟ್ಟಂತೆ ಗುಳುಗುಳಗುಳುಗುಳ ಸದ್ದು ಮಾಡಿತೇ ಹೊರತು, ಮಹದೇವನಿಗೆ ಒಂಚೂರೂ ಅರ್ಥವಾಗಿರಲಿಲ್ಲ. ಅದಾದ ಕೂಡಲೇ ಮತ್ತೊಂದು ಸಲ ನೀರಲ್ಲಿ ಮುಳುಗಿದ ಅಂತೋಣಿ ಮೇಲೆ ಬರಲಿಲ್ಲ.

ಈ ಘಟನೆ ನಡೆದಾಗ ಮಹದೇವನಿಗೆ ಹತ್ತೊಂಬತ್ತು, ಅಂತೋಣಿಗೆ ಇಪ್ಪತ್ತೇಳು. ಮಹದೇವ ಹದಿನಾಲ್ಕು ವರ್ಷದವನಿದ್ದಾಗ ಅವನಿಗೆ ಅಂತೋಣಿ ಸಿಕ್ಕಿದ್ದ. ಮಹದೇವನಿಗೆ ಅಂತೋಣಿ ಇಷ್ಟವಾಗಲಿಕ್ಕೆ ಕಾರಣ ಅವನು ಹೇಳುತ್ತಿದ್ದ ಪೋಲಿ ಕತೆಗಳು. ಅವನು ಹೊಟ್ಟೆಯೊಳಗೆ ಅಡಗಿಸಿಟ್ಟುಕೊಂಡು ತೋರಿಸುತ್ತಿದ್ದ ಬೆತ್ತಲೆ ಪುಸ್ತಕ. ಅದನ್ನು ಮಹದೇವನ ಕಣ್ಣೆದುರು ಹಿಡಿದು ಅಂತೋಣಿ ಮಹದೇವನಿಗೆ ಹೊಟ್ಟೆ ತೊಳಸುವಂತೆ ಮಾಡುತ್ತಿದ್ದ. ಆದರೂ ಮತ್ತೆ ಮತ್ತೆ ಅದನ್ನು ನೋಡಬೇಕು ಅಂತ ಮಹದೇವನಿಗೆ ಅನ್ನಿಸುತ್ತಿತ್ತು.

ಮಹದೇವ ಶಾಲೆ ಮುಗಿಸಿ ಬರುವಾಗೆಲ್ಲ ಅಂತೋಣಿ ಸಿಗುತ್ತಿದ್ದ. ಶಾನುಭೋಗರ ಮನೆಯ ಗೇಟಿನ ಪಕ್ಕದಲ್ಲಿರುವ ಕಲ್ಲುಬೆಂಚಿನಲ್ಲಿ ಬೀಡಿ ಸೇದುತ್ತಾ ಕೂತಿರುತ್ತಿದ್ದ. ಆ ದಾರಿಯಲ್ಲಿ ಮಹದೇವನನ್ನು ಬಿಟ್ಟರೆ ಮತ್ಯಾರೂ ಬರುತ್ತಿರಲಿಲ್ಲ. ಅಂತೋಣಿಗೂ ಮಾತಾಡಿಸಲು ಯಾರೂ ಸಿಗುತ್ತಿರಲಿಲ್ಲ. ಅದಕ್ಕಾಗಿಯೇ ಅಂತೋಣಿ ದಾರಿಯಲ್ಲಿಯೇ ಕಾಯುತ್ತಾ ಇರುತ್ತಿದ್ದ. ಮಹದೇವ ಬರುತ್ತಿದ್ದಂತೆ ಅವನ ಜತೆಗೇ ಹೆಜ್ಜೆ ಹಾಕುತ್ತಿದ್ದ. ಇಬ್ಬರೂ ಮಾತಾಡುತ್ತಾ ಮಹದೇವನ ಮನೆಯ ಕಡೆ ನಡೆಯುತ್ತಿದ್ದರು.

ಮಹದೇವನ ಮನೆ ಶಾಲೆಯಿಂದ ಮೂರು ಮೈಲು ದೂರವಿತ್ತು. ಅಂತೋಣಿಯ ಮನೆ ಮಹದೇವನ ಮನೆಗಿಂತ ಒಂದು ಮೈಲು ಮೊದಲೇ ಬರುತ್ತಿತ್ತು. ಆದರೂ ಅಂತೋಣಿ ಅವನ ಜತೆಗೇ ಹೋಗಿ, ಮಹದೇವನನ್ನು ಮನೆ ಸೇರಿಸಿಯೇ ವಾಪಸ್ಸು ಬರುತ್ತಿದ್ದ. ಹಾಗಂತ ಮಹದೇವನ ಮನೆಗಾಗಲೀ, ಮನೆಯ ಹತ್ತಿರವಾಗಲೀ ಸುಳಿಯುತ್ತಿರಲಿಲ್ಲ. ಇನ್ನೇನು ಮನೆ ಕಣ್ಣಿಗೆ ಬೀಳುತ್ತದೆ ಅನ್ನುವಷ್ಟರಲ್ಲಿ ವಾಪಸ್ಸು ಹೊರಟು ಹೋಗುತ್ತಿದ್ದ.

ಮೊದಲ ದಿನ ಅಂತೋಣಿಯನ್ನು ನೋಡಿದಾಗ ಮಹದೇವನಿಗೆ ಹೆದರಿಕೆಯಾಗಿತ್ತು. ಶಾನುಭೋಗರ ಮನೆಯ ಕಲ್ಲುಬೆಂಚಿನಲ್ಲಿ ಕೂತು ಬೀಡಿ ಸೇದುತ್ತಿದ್ದ ಅಂತೋಣಿಯನ್ನು ದೂರದಿಂದಲೇ ನೋಡಿ, ತಲೆತಗ್ಗಿಸಿಕೊಂಡು ಹೊರಟ ಮಹದೇವನನ್ನು ಅಂತೋಣಿ ಚಪ್ಪಾಳೆ ತಟ್ಟಿ ಕರೆದಿದ್ದ. ಮಹದೇವ ಭಯದಿಂದ ಹಿಂತಿರುಗಿ ನೋಡಿರಲಿಲ್ಲ. ಅವನು ಮತ್ತೊಮ್ಮೆ ಚಪ್ಪಾಳೆ ತಟ್ಟುತ್ತಿದ್ದಂತೆ ಕೊಂಚ ವೇಗವಾಗಿ ನಡೆದು, ಅವನಿಗೆ ಕಾಣುವುದಿಲ್ಲ ಅಂತ ಅಂದಾಜಾಗುತ್ತಿದ್ದಂತೆ ಓಡಲು ಶುರುಮಾಡಿದ್ದ. ಮನೆಯ ತನಕವೂ ಓಡುತ್ತಾ ಹೋಗಿದ್ದ.

ಮಾರನೇ ದಿನ ಶಾಲೆಯಿಂದ ಬರುವಾಗ ಅವನು ಸಿಗುತ್ತಾನೇನೋ ಅನ್ನುವ ಭಯದಲ್ಲಿಯೇ ಇದ್ದ ಮಹದೇವನಿಗೆ ಕಲ್ಲು ಬೆಂಚಿನ ಮೇಲೆ ಕೂತಿದ್ದ ಅಂತೋಣಿ ಕಣ್ಣಿಗೆ ಬಿದ್ದಿರಲಿಲ್ಲ. ಆದರೂ ಯಾವುದಕ್ಕೂ ಅಲ್ಲಿಂದ ಬೇಗ ಕಣ್ಮರೆಯಾಗಬೇಕು ಅಂತ ಓಡುವುದಕ್ಕೆ ಶುರುಮಾಡಿದ್ದ. ಅಂತೋಣಿ ಅವನಿಗೋಸ್ಕರ ಮುಂದಿನ ತಿರುವಿನಲ್ಲಿ ಕಾಯುತ್ತಿದ್ದ. ಓಡುತ್ತಿದ್ದ ಮಹದೇವನ ಕೈ ಹಿಡಿದು ನಿಲ್ಲಿಸಿದ್ದ. ಓಡುತ್ತಿದ್ದವನನ್ನು ಥಟ್ಟನೆ ಹಿಡಿದು ನಿಲ್ಲಿಸಿದ ರಭಸಕ್ಕೆ ಮೊಳಕೈಯ ಕೀಲು ತಪ್ಪಿದಷ್ಟು ನೋವಾಗಿತ್ತು. ಭಯದಿಂದ ಅಂತೋಣಿಯನ್ನು ನೋಡುತ್ತಾ ಇನ್ನೇನು ಅತ್ತುಬಿಡಬೇಕು ಅನ್ನುವಷ್ಟರಲ್ಲಿ ಅಂತೋಣಿ ಅವನನ್ನು ಮಾತಾಡಿಸಿದ್ದ.

ಅಂತೋಣಿ ಅರ್ಧತೆಂಗಿನಮರದಷ್ಟು ಎತ್ತರ ಇದ್ದ. ಕಪ್ಪು ಬೆಲ್ ಬಾಟಮ್ ಪ್ಯಾಂಟು ಹಾಕಿದ್ದ, ಅಲ್ಲಲ್ಲಿ ಬಣ್ಣಗೆಟ್ಟ ಕೆಂಪು ಬಣ್ಣದ ಶೂ ಹಾಕಿಕೊಂಡಿದ್ದ. ಎಡಗೈಯಲ್ಲಿ ಹೊಳೆಯುವ ವಾಚು, ಅರ್ಧಹೊಟ್ಟೆ ಕಾಣುವಂತೆ ಹಾಕಿಕೊಂಡ ಶರಟು. ಅದರೊಳಗಿನಿಂದ ಇಣುಕುತ್ತಿದ್ದ ಬೆಳ್ಳಿ ಸರವನ್ನೆಲ್ಲ ನೋಡುತ್ತದ್ದಂತೆ ಅವನ ಹತ್ತಿರ ಚೂರಿಯೂ ಇರಬಹುದು ಅಂತ ಮಹದೇವನಿಗೆ ಅನುಮಾನ ಬಂದಿತ್ತು. ಚಂದಮಾಮದಲ್ಲಿ ಓದಿದ ಕಣಿವೆಯ ದರೋಡೆಕೋರರ ನಾಯಕನಂತೆ ಕಾಣುತ್ತಿದ್ದ ಅಂತೋಣಿಯ ಹಿಡಿತದಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದಂತೆ ಅಂತೋಣಿ `ಎಂಥದಾ.. ನೀನು ಹೆದರುವುದು ಎಂಥಕಾ’ ಅಂತ ಥೇಟ್ ಕೊಂಕಣಿ ಮಾತಾಡುವ ಶೈಲಿಯಲ್ಲಿ ಕೇಳಿದ್ದ. ಅಂತೋಣಿಯ ಭೀಮಕಾಯಕ್ಕೆ ತಕ್ಕ ಸ್ವರ ಅವನಿಗೆ ಇರಲಿಲ್ಲ. ಮಾತು ಮೃದುವಾಗಿಯೂ ರಾಗವಾಗಿಯೂ ಇತ್ತು. ಅದನ್ನು ಕೇಳುತ್ತಿದ್ದಂತೆ ಮಹದೇವನ ಭಯ ಅರ್ಧ ಹೊರಟುಹೋಗಿತ್ತು.

ಆವತ್ತಿನಿಂದ ಮಹದೇವನ ಸಂಜೆಯ ಸಂಗಾತಿಯಾಗಿ ಅಂತೋಣಿ ಜತೆಯಾಗುತ್ತಿದ್ದ. ಮಹದೇವನ ಜಗತ್ತನ್ನು ವಿಸ್ತರಿಸಿದ್ದೇ ಅಂತೋಣಿ. ಬೆಂಗಳೂರಿನಲ್ಲಿರುವ ಡಬಲ್ ಡೆಕರ್ ಬಸ್ಸು, ಮಂಗಳೂರಿನ ಬಂದರಿಗೆ ಬಂದು ಹಡಗನ್ನೇ ಮಗುಚಿಹಾಕಿದ ತಿಮಿಂಗಿಲ, ವೆಂಕಟರಮಣ ಸ್ವಾಮಿ ದೇವಸ್ಥಾನದ ರಥೋತ್ಸವದಲ್ಲಿ ಇನ್ನೇನು ರಥ ನೆಲಕ್ಕೆ ಬೀಳಬೇಕು ಅನ್ನುವಷ್ಟರಲ್ಲಿ ಓಡಿ ಬಂದು ಬೆನ್ನುಕೊಟ್ಟು ಎತ್ತಿದ ಉಜಿರೆಯ ಆನೆಯ ಕತೆ, ಹಡಗು ಬಂದಾಗ ಎದ್ದು ದಾರಿಕೊಡುವ ಇಂಗ್ಲೆಂಡಿನ ಸೇತುವೆ -ಹೀಗೆ ನೂರೆಂಟು ಸಂಗತಿಗಳು ಅಂತೋಣಿಗೆ ಗೊತ್ತಿದ್ದವು.

ಇವೆಲ್ಲದರ ಜತೆಗೆ ಅಂತೋಣಿ ವಿಚಿತ್ರವಾದ ಕತೆಗಳನ್ನೂ ಹೇಳುತ್ತಿದ್ದ. ಮಡಿಕೇರಿಯಲ್ಲಿರುವ ಕಾಲು ಕಳೆದುಕೊಂಡ ಸೈನಿಕನ ಹೆಂಡತಿ, ಮತ್ತೊಬ್ಬ ಗೆಳೆಯನ ಜತೆ ಓಡಾಡುತ್ತಿದ್ದದ್ದು. ಅದು ಗಂಡನಿಗೆ ಗೊತ್ತಾಗುತ್ತಿದ್ದಂತೆ ಅವಳು ಗುಡ್ಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದು, ತಾನು ಸಾಯುವಾಗ ಅವನನ್ನೂ ಜತೆಗೇ ಎಳೆದುಕೊಂಡು ಬೆಟ್ಟದಿಂದ ಹಾರಿದ್ದು- ಇದನ್ನೆಲ್ಲ ಕಣ್ಮುಂದೆ ನಡೆದಂತೆ ಹೇಳುತ್ತಿದ್ದ. ಅದನ್ನೆಲ್ಲ ಮಹದೇವ ನಿಜ ಎಂದೇ ನಂಬುತ್ತಿದ್ದ. ಎಷ್ಟೋ ವರ್ಷಗಳ ನಂತರವಷ್ಚೇ ಮಹದೇವನಿಗೆ ಅಂತೋಣಿ ಹೇಳಿದ್ದು ಎಡಕಲ್ಲು ಗುಡ್ಡದ ಮೇಲೆ ಸಿನಿಮಾದ ಕತೆ ಅಂತ ಗೊತ್ತಾಗಿತ್ತು.

ಅಂತೋಣಿಗೆ ಕತೆಗೂ ಬದುಕಿಗೂ ವ್ಯತ್ಯಾಸವೇ ಇರಲಿಲ್ಲ. ತಾನು ನೋಡಿದ, ಓದಿದ, ಕೇಳಿದ ಕತೆಯನ್ನೆಲ್ಲ ನಡೆದಿದೆ ಎಂಬಂತೆ ಅವನು ಹೇಳುತ್ತಿದ್ದುದನ್ನು ಬೆರಗಿನಿಂದ ಕೇಳಿಸಿಕೊಳ್ಳುತ್ತಾ ಮಹದೇವನ ಒಳಗೊಂದು ಹೊಸದೇ ಲೋಕ ಸೃಷ್ಟಿಯಾಗುತ್ತಾ ಹೋಯಿತು.

ಮಹದೇವನ ಮನೆ ಇದ್ದದ್ದು ಊರಿನಿಂದ ಹೊರಗೆ. ಅವನ ಅಪ್ಪ ಶಾನುಭೋಗರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಶಾನುಭೋಗರ ಮುಂದೆ ಕೈ ಮುಗಿದು ನಿಲ್ಲುತ್ತಿದ್ದ ಅಪ್ಪನನ್ನು ಮಹದೇವ ನೋಡಿದ್ದ. ಶಾನುಭೋಗರ ಬಗ್ಗೆ ಮಹದೇವನಿಗೂ ಆಗ ಆರಾಧನಾ ಭಾವ ಇತ್ತು. ಅವರು ದೇವರ ಪ್ರತಿರೂಪ ಎಂದೇ ಅವನೂ ನಂಬಿದ್ದ.

ಅಂಥ ಭಾವನೆಯನ್ನು ಕಿತ್ತು ಎಸೆದಿದ್ದ ಅಂತೋಣಿ.  

ದೇವರ ಕಣ್ಣಲ್ಲಿ ಎಲ್ಲರೂ ಸಮಾನರು. ಎಲ್ಲಾ ಮನುಷ್ಯರೂ ಒಂದೇ. ಇಲ್ಲಿ ದೊಡ್ಡವರು ಸಣ್ಣವರು ಅಂತ ಆಗುವುದು ದುಡ್ಡಿನಿಂದ. ಜಾಸ್ತಿ ದುಡ್ಡಿದ್ದವನು ದೊಡ್ಡ ಮನುಷ್ಯ. ಅವನಿಗೆ ಎಲ್ಲರೂ ನಮಸ್ಕಾರ ಮಾಡುತ್ತಾರೆ. ನೀನೇ ದೇವರು ಅನ್ನುತ್ತಾರೆ. ಆದರೆ ಇದು ನಮ್ಮ ಧರ್ಮದಲ್ಲಿ ಮಾತ್ರ. ನಿಮ್ಮ ಧರ್ಮದಲ್ಲಿ ಎಷ್ಟು ದುಡ್ಡು ಸಂಪಾದನೆ ಮಾಡಿದರೂ ಜಾತಿಯನ್ನು ಕಳೆದುಕೊಳ್ಳಲಿಕ್ಕೆ ಆಗುವುದಿಲ್ಲ. ನಿನ್ನ ಜಾತಿ ಯಾವುದು ಅಂತ ಕೇಳುತ್ತಾರೆ. ನಿನ್ನನ್ನು ಗರ್ಭಗುಡಿಯ ಒಳಗೆ ಬಿಡುವುದಿಲ್ಲ. ಸ್ವಂತ ಸಾಧನೆಯಿಂದ ಸಮಾನತೆ ಸಾಧಿಸುವುದಕ್ಕೆ ನಿಮ್ಮ ಧರ್ಮದಲ್ಲಿ ಅವಕಾಶ ಇಲ್ಲ. ನಮ್ಮಲ್ಲಿ ಅದು ಸಾಧ್ಯ ಉಂಟು. ನಾನು ಮನಸ್ಸು ಮಾಡಿದರೆ ನಮ್ಮ ಚರ್ಚಿನ ಫಾದರ್ ಆಗಬಹುದು. ನೀನು ದೇವಸ್ಥಾನದ ಪೂಜಾರಿ ಆಗಲಿಕ್ಕೆ ಸಾಧ್ಯ ಇಲ್ಲ. ಹಾಗೇನಾದರೂ ಆಗಬೇಕಾದರೆ ನೀನು ಮತ್ತೊಂದು ಸಲ ಹುಟ್ಟಿ ಬರಬೇಕು. ಅದೂ ಅವರ ಜಾತಿಯಲ್ಲಿ ಹುಟ್ಟಬೇಕು.

ಹೀಗೆ ಮಾತಾಡುತ್ತಿದ್ದ ಅಂತೋಣಿಯನ್ನು ಕ್ರಮೇಣ ಮಹದೇವ ಆರಾಧಿಸಲು ಆರಂಭಿಸಿದ್ದ. ತನಗೆ ಬೇಕಾಗಿದ್ದ ಬಿಡುಗಡೆ ಅವನಿಂದ ಸಿಕ್ಕಿದೆ ಅಂತ ಮಹದೇವನಿಗೆ ಅನ್ನಿಸತೊಡಗಿತ್ತು. ಶಾಲೆಯಲ್ಲಿ ಕಲಿಯುತ್ತಿದ್ದ ಪಾಠ ಅರ್ಥವಾಗಲು ಬೇಕಾದ ಬದುಕಿನ ಜ್ಞಾನವನ್ನು ಅಂತೋಣಿ ಹೇಳಿಕೊಡುತ್ತಿದ್ದ. ಅಂತೋಣಿ ಇಲ್ಲದೇ ಹೋಗಿದ್ದರೆ ತಾನು ಹೇಗಿರುತ್ತಿದ್ದೆ ಅನ್ನುವುದನ್ನು ಮಹದೇವನಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ.

-2-

ಮಹದೇವ ಮುಂಬಯಿಗೆ ಬಂದು ಮೂವತ್ತು ವರ್ಷಗಳಾದ ನಂತರವೂ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಅವನಿಗೆ ಅಂತೋಣಿ ನೆನಪಾಗುತ್ತಾನೆ. ಮನಸ್ಸಿನಲ್ಲಿ ಅಂತೋಣಿಯನ್ನು ನೆನೆದೇ ಅವನು ಇಕ್ಕಟ್ಟಿನ ಸಂದರ್ಭಗಳಲ್ಲಿ ಒಂದು ತೀರ್ಮಾನಕ್ಕೆ ಬರುವುದು. ಹಾಗೆ ಮಾಡಿದಾಗೆಲ್ಲ ಅವನು ಗೆದ್ದಿದ್ದಾನೆ

ಮಹದೇವ ಟ್ರಾನ್ಸ್‌ಪೋರ್ಟ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್. ದಕ್ಷಿಣ ವಲಯದ ಮುಖ್ಯಸ್ಥನಾಗಿದ್ದ ಅವನು ಮೂರು ಸಾವಿರ ಡ್ರೈವರುಗಳನ್ನು ನಿಭಾಯಿಸಬೇಕಾಗಿತ್ತು. ಒಮ್ಮೆ ಒಬ್ಬ ಡ್ರೈವರ್ ಕುಡಿದು ಲಾರಿ ಓಡಿಸಿದನೆಂದು ಅವನನ್ನು ಅವನ ಮೇಲಧಿಕಾರಿ ಕೆಲಸದಿಂದ ತೆಗೆದಿದ್ದ. ದುರದೃಷ್ಟವಶಾತ್ ಅವನು ಲಾರಿ ಡ್ರೈವರುಗಳ ಸಂಘದ ಅಧ್ಯಕ್ಷನಾಗಿದ್ದ.ಡ್ರೈವರುಗಳನ್ನೆಲ್ಲ ಸೇರಿಸಿ ಅವನು ಧರಣಿ ಕೂತ. ಲಾರಿಗಳು ಎಲ್ಲಿದ್ದವೋ ಅಲ್ಲೇ ಹೇಗಿದ್ದವೋ ಹಾಗೆ ರಸ್ತೆ ಬದಿಯಲ್ಲಿ ನಿಂತುಬಿಟ್ಟವು. ಕನ್‌ಸೈನುಮೆಂಟುಗಳು ತಲುಪಬೇಕಾದ ಜಾಗವನ್ನು ಸರಿಯಾದ ಹೊತ್ತಲ್ಲಿ ತಲುಪದೇ ಹೋದರೆ ಸಂಸ್ಥೆಯ ಹೆಸರು, ಹಣ ಎರಡೂ ನಷ್ಟವಾಗುತ್ತಿತ್ತು.

ಈ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆಯಲು ಚೇರ್‌ಮನ್ ಮಹದೇವನ ತಲೆಗೆ ಕಟ್ಟಿದರು. ಮಹದೇವ ತನ್ನ ಅಧಿಕಾರಿಗಳನ್ನು ಕರೆಸಿ ಮೀಟಿಂಗ್ ನಡೆಸಿದಾಗ, ಡ್ರೈವರುಗಳೆಲ್ಲ ಯಾವುದಕ್ಕೂ ಬಗ್ಗುವುದಿಲ್ಲ ಅನ್ನುವ ಸೂಚನೆ ಸಿಕ್ಕಿತು. ಎಲ್ಲರೂ ಕಂಗಾಲಾಗಿ ಹೋಗಿದ್ದರು. ಬೇರೆ ಬೇರೆ ಕಂಪೆನಿಗಳಿಂದ ಕರೆ ಬರುವುದಕ್ಕೆ ಶುರುವಾಗಿತ್ತು. ಲಾರಿಗಳು ರಸ್ತೆ ಬದಿಯಲ್ಲಿ ನಿಂತಿವೆ ಅನ್ನುವ ಕಾರಣಕ್ಕೆ ಪೊಲೀಸರು ಕೇಸು ಜಡಿಯುತ್ತಿದ್ದರು. ಎಷ್ಟೋ ಕಡೆ ಪುಂಡರು ಲಾರಿಯಲ್ಲಿರುವ ವಸ್ತುಗಳನ್ನೆಲ್ಲ ದೋಚಲು ಆರಂಭಿಸಿದ್ದರು.

ಮಹದೇವ ಮೀಟಿಂಗಿನಿಂದ ಎದ್ದು ಹೋಗಿ ಹತ್ತು ನಿಮಿಷ ಮೌನವಾಗಿ ನಿಂತು ಅಂತೋಣಿಯನ್ನು ನೆನೆದಿದ್ದ. ನಂತರ ಒಳಗೆ ಬಂದು ಸಸ್ಪೆಂಡ್ ಆಗಿದ್ದ ಡ್ರೈವರ್ ಜತೆಗೆ ಮುಷ್ಕರ ಹೂಡಿದ್ದ ಅಷ್ಟೂ ಮಂದಿಯನ್ನು ಸಸ್ಪೆಂಡ್ ಮಾಡುವ ನಿರ್ಧಾರ ಕೈಗೊಂಡಿದ್ದ. ಆ ಲಾರಿಗಳನ್ನು ಓಡಿಸಲು ಆಯಾ ಊರಿನಲ್ಲಿರುವ ನಿವೃತ್ತ ಡ್ರೈವರುಗಳಿಗೆ ಹೇಳುವುದೆಂದು ತೀರ್ಮಾನಿಸಿದ್ದ. ನೂರು ವರ್ಷ ಕಳೆಯ ಕಂಪೆನಿ ಆಗಿದ್ದರಿಂದ ಪ್ರತಿ ಊರಲ್ಲೂ ಒಬ್ಬರೋ ಇಬ್ಬರೋ ನಿವೃತ್ತ ಡ್ರೈವರುಗಳು ಇದ್ದೇ ಇದ್ದರು. ಕಂಪೆನಿಯ ಡಾಟಾಬೇಸ್ ತರಿಸಿ, ಡ್ರೈವರುಗಳ ನಂಬರ್ ಹುಡುಕಿ, ಅವರನ್ನು ತಕ್ಷಣವೇ ಹಂಗಾಮಿಯಾಗಿ ಕೆಲಸಕ್ಕೆ ತೆಗೆದುಕೊಂಡು ಲಾರಿಗಳು ಚಾಲೂ ಆಗುವಂತೆ ಮಾಡಿದ್ದ. ನಾಲ್ಕೈದು ಮಂದಿ ಹಲ್ಲೆ ಮಾಡಲು ಮುಂದಾದಾಗ ಪೊಲೀಸರ ಮೂಲಕ ಅವರನ್ನು ಹತ್ತಿಕ್ಕಿದ್ದ.

ಒಂದೆರಡು ಕಡೆ ನಿವೃತ್ತ ಡ್ರೈವರುಗಳು ಲಾರಿ ಹೊರಡಿಸುತ್ತಿದ್ದಂತೆ, ಮಿಕ್ಕ ಡ್ರೈವರುಗಳೆಲ್ಲ ತಾವಾಗಿಯೇ ಮುಷ್ಕರ ನಿಲ್ಲಿಸಿದರು. ಅರ್ಧದಿನದೊಳಗೆ ಸಮಸ್ಯೆ ಕರಗಿಹೋಗಿತ್ತು. ಎಲ್ಲರೂ ಅವನ ನಿರ್ಧಾರವನ್ನು ಕೊಂಡಾಡಿದ್ದರು. ಚೇರ್ಮನ್ ಮಾತ್ರ ಅಸಮಾಧಾನಗೊಂಡಿದ್ದರು.

`ಅಲ್ರೀ, ಎಲ್ಲರೂ ರಾಜೀನಾಮೆ ಕೊಟ್ಟಿದ್ರೆ ಏನು ಮಾಡ್ತಿದ್ರಿ. ಇಂಥ ರಿಸ್ಕ್ ತಗೋಬಾರದು. ನಾನಾಗಿದ್ರೆ ಸಸ್ಪೆಂಡ್ ಮಾಡಿದ್ದ ಡ್ರೈವರನ್ನು ವಾಪಸ್ ತಗೋತಿದ್ದೆ. ಎಲ್ಲಾ ಸರಿಹೋಗಿರೋದು’ ಅಂದಿದ್ದರು. ಅದಕ್ಕೆ ಮಹದೇವ ಅಷ್ಟೇ ಸ್ಪಷ್ಟವಾಗಿ `ಅವನು ಸಸ್ಪೆಂಡ್ ಆಗಿರೋದು ಕುಡಿದು ಡ್ರೈವ್ ಮಾಡಿದ್ದಕ್ಕೆ. ಅವನನ್ನು ಸಸ್ಪೆಂಡ್ ಮಾಡಿರೋದು ನಮ್ಮ ವಿಜಿಲೆನ್ಸ್ ಟೀಮ್. ಈಗ ಅವನನ್ನು ವಾಪಸ್ ತೆಗೆದುಕೊಂಡರೆ ಎಲ್ಲರಿಗೂ ಯಾವ ಮೆಸೇಜ್ ಹೋಗುತ್ತೆ ಯೋಚನೆ ಮಾಡಿ. ನಾಳೆ ಎಲ್ಲರೂ ಕುಡಿದು ಡ್ರೈವ್ ಮಾಡೋಕೆ ಶುರು ಮಾಡ್ತಾರೆ. ಎಲ್ಲರ ಮೊರೇಲೂ ಹಾಳಾಗುತ್ತೆ. ಅದು ಆಗಬಾರದು ಅಂದ್ರೆ ನಾವು ಗಟ್ಟಿಯಾಗಿ ನಿಲ್ಲಬೇಕು’ ಅಂದಿದ್ದ.

ಆ ಪ್ರಕರಣದಿಂದಾಗಿ ಚೇರ್ಮನ್ನಿಗೂ ಅವನಿಗೂ ಅಂತರ ಬೆಳೆಯಿತು. ಆದರೆ ಕಂಪೆನಿಯಲ್ಲಿ ಅವನ ಬಗ್ಗೆ ಗೌರವ ಹೆಚ್ಚಾಯಿತು. ಬೇರೆ ಸಂಸ್ಥೆಗಳ ಮೀಟಿಂಗಿನಲ್ಲಿ ಈ ಕುರಿತು ಚರ್ಚೆಯಾಯಿತು. ಮಿಕ್ಕ ಟ್ರಾನ್ಸ್ ಪೋರ್ಟ್ ಕಂಪೆನಿಗಳು ಕೂಡ ಕಟ್ಟುಪಾಡುಗಳನ್ನು ಬಿಗಿಗೊಳಿಸಿದವು. ಎಲ್ಲಕ್ಕಿಂತ ಹೆಚ್ಚಾಗಿ ಫ್ಯಾಮಿಲಿ ಮೀಟ್ ದಿನದಂದು ಡ್ರೈವರುಗಳ ಹೆಂಡತಿ ಮಕ್ಕಳೆಲ್ಲ ಮಹದೇವನ ನಿರ್ಧಾರವನ್ನು ಮೆಚ್ಚಿಕೊಂಡು ನಾಲ್ಕು ಮಾತಾಡಿದ್ದರು.

ನಮ್ಮ ಮನಸ್ಸಿನ ವಿರುದ್ಧ ಹೋಗಬಾರದು. ಆದರೆ ಅದಕ್ಕಿಂತ ಮುಖ್ಯವಾಗಿ ತತ್ವದ ವಿರುದ್ಧ ಹೋಗಬಾರದು. ಮನಸ್ಸಿನ ಮಾತು ಕೇಳದೇ ಹೋದರೆ ನಮಗೆ ಮಾತ್ರ ಸಮಸ್ಯೆಯಾಗುತ್ತದೆ. ತತ್ವದ ಮಾತಿಗೆ ಕಿವಿಗೊಡದೇ ಇದ್ದರೆ ಒಂದು ಸಮುದಾಯವೇ ತೊಂದರೆಗೆ ಒಳಗಾಗುತ್ತದೆ. ಅದಾಗಲಿಕ್ಕೆ ಯಾವತ್ತೂ ಅವಕಾಶ ಕೊಡಬಾರದು. ಅದು ನಿಜವಾದ ನಾಯಕನ ಲಕ್ಷಣ.

ಹಾಗಂತ ಅಂತೋಣಿ ಹೇಳಿದ್ದು ಮಹದೇವನಿಗೆ ಅಸ್ಪಷ್ಟವಾಗಿ ನೆನಪಿದೆ. ಹತ್ತೊಂಬತ್ತನೆಯ ವಯಸ್ಸಿನಲ್ಲಿ ಅಂತೋಣಿ ತುಂಬಿದ ಆತ್ಮವಿಶ್ವಾಸ, ಧೈರ್ಯ ಎರಡನ್ನೂ ಮಹದೇವ ಧಾರಾಳವಾಗಿ ಖರ್ಚು ಮಾಡುತ್ತಾ ಬಂದಿದ್ದಾನೆ. ಕಷ್ಟ ಎದುರಾದಾಗ ಅಂತೋಣಿಯನ್ನು ನೆನೆಯುತ್ತಾನೆ. ಸಂದಿಗ್ಧ ಬಂದಾಗ ಅಂತೋಣಿಯ ನೆನಪು ಮಾಡಿಕೊಳ್ಳುತ್ತಾನೆ. ಯಾರಾದರೂ ಗೊತ್ತಿಲ್ಲದ ಪ್ರಶ್ನೆ ಕೇಳಿದಾಗ, ಅಂತೋಣಿ ಸರ್ ಹತ್ರ ಕೇಳಿ ಹೇಳುತ್ತೇನೆ ಅನ್ನುತ್ತಾನೆ. ಅವನ ಗೆಳೆಯರು, ಹೆಂಡತಿ, ಮಕ್ಕಳು, ಸಹೋದ್ಯೋಗಿಗಳೆಲ್ಲ ಅಂತೋಣಿ ಎಂಬ ಮಹಾಮಹಿಮ ಎಲ್ಲೋ ಇದ್ದಾನೆ. ಅವನು ಮಹಾ ಪ್ರತಿಭಾವಂತ, ಮಹದೇವನ ಮ್ಯಾನೇಜ್‌ಮೆಂಟ್ ಗುರು ಎಂದು ನಂಬಿದ್ದಾರೆ.

-3-

ಅಂತೋಣಿ ಹೊಳೆಯಲ್ಲಿ ಮುಳುಗಿ ಸಾಯುವ ಮೊದಲು ಆಡಿದ ಮಾತನ್ನು ಮಾತ್ರ ಮಹದೇವನಿಗೆ ಡೀಕೋಡ್ ಮಾಡಲು ಸಾಧ್ಯವಾಗಿಲ್ಲ. ಎರಡು ಮೂರು ದಿನಗಳಿಂದ ಅಂತೋಣಿ ಸಪ್ಪಗಿದ್ದದ್ದು ಮಹದೇವನ ಗಮನಕ್ಕೂ ಬಂದಿತ್ತು. ದಿನಕ್ಕೊಂದು ಪೋಲಿ ಕತೆ ಹೇಳುತ್ತಿದ್ದ ಅಂತೋಣಿ, ಆ ಎರಡು ದಿನ ಮಾತ್ರ ಒಂಚೂರು ನಕ್ಕಿರಲಿಲ್ಲ. ಎಂದಿನಂತೆ ಅವನ ಬೆರಳುಗಳ ನಡುವೆ ಸಿಗರೇಟು ಉರಿಯುತ್ತಿರಲಿಲ್ಲ. ಅವನು ಶಾನುಭೋಗರ ಮನೆಯ ಗೇಟಿನ ಸಮೀಪದ ಕಲ್ಲುಬೆಂಚಿನ ಮೇಲೆ ಕುಳಿತಿರಲಿಲ್ಲ.

ಅವನಿಗೇನೋ ಆಗಿದೆ ಅಂತ ಮಹದೇವನಿಗೆ ಅನ್ನಿಸಿದ್ದರೂ ಮೊದಲ ದಿನ ಕೇಳುವುದಕ್ಕೆ ಧೈರ್ಯವಾಗಿರಲಿಲ್ಲ. ಅಂತೋಣಿ ಯಾವತ್ತೂ ಖಾಸಗಿ ವಿಷಯಗಳ ಕುರಿತು ಮಾತಾಡುತ್ತಲೇ ಇರಲಿಲ್ಲ. ಮಹದೇವ ಪಿಯು ಕಾಲೇಜಿನಿಂದ ಬರುತ್ತಿದ್ದ ಹಾಗೇ, ಸಿಗರೇಟು ಹೊಸಕಿ, ಅವನತ್ತ ನಡೆದುಬರುತ್ತಿದ್ದ ಅಂತೋಣಿ ಮುಗುಳ್ನಕ್ಕರೆ ಅದೇ ನಮಸ್ಕಾರ. ನಂತರ ಇದ್ದಕ್ಕಿದ್ದಂತೆ ಮಾತು ಶುರುಮಾಡುತ್ತಿದ್ದ `ಸೂರ್ಯಗ್ರಹಣದ ದಿನ ಸೂರ್ಯನನ್ನು ರಾಹು ನುಂಗುತ್ತದೆ, ಕೇತು ನುಂಗುತ್ತದೆ ಅಂತ ನಂಬಿದ್ದರಲ್ಲ. ಅದು ಸುಳ್ಳು ಅಂತ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಕೇತು ನುಂಗುತ್ತದೆ ಅಂತ ಹೇಳಿಲ್ಲ. ಆವರಿಸಿಕೊಳ್ಳುತ್ತದೆ ಅಂತ ಬರೆದಿದ್ದಾರೆ. ಅದು ಸುಲಭವಾಗಿ ಅರ್ಥವಾಗಲಿ ಅಂತ ನುಂಗುತ್ತದೆ ಅಂತ ಮಕ್ಕಳಿಗೆ ಹೇಳಿಕೊಟ್ಟಿರ್ತಾರೆ. ಮುಟ್ಟಾದಾಗ ಕಾಗೆ ಮುಟ್ಟಿತು ಅಂತ ಹೇಳೋದಿಲ್ಲವ? ಅದು ಕಾಗೆ ಮುಟ್ಟುವುದಲ್ಲ ಅಂತ ಗೊತ್ತಿದ್ದರೂ ಹಾಗೆ ಹೇಳ್ತಾರಲ್ಲ, ಇದೂ ಹಾಗೆಯೇ. ಇದನ್ನು ಜನಪದದ ನುಡಿಗಟ್ಟು ಅಂತಾರೆ’ ಅಂತ ಹಿಂದುಮುಂದಿಲ್ಲದೇ ಮಾತು ಶುರುಮಾಡುತ್ತಿದ್ದ ಅಂತೋಣಿ, ಅದನ್ನೆಲ್ಲ ಹೇಳಲೆಂದೇ ಕಂಠಪಾಠ ಮಾಡಿಕೊಂಡು ಕಾಯುತ್ತಿದ್ದನೇನೋ ಅಂತ ಯಾರಿಗೇ ಆದರೂ ಅನ್ನಿಸುತ್ತಿತ್ತು.

ಆ ಎರಡು ದಿನ ಅಂತೋಣಿ ಯಾಕೆ ಏನೂ ಮಾತಾಡದೇ ಸುಮ್ಮನಿದ್ದ ಅನ್ನುವುದು ಮಹದೇವನಿಗೆ ಗೊತ್ತಾಗದೇ ಹೋದರೂ, ಮೌನವಾಗಿರುವ ಅಂತೋಣಿಯನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುವುದು ಮಾತ್ರ ಅರಿವಾಯಿತು. ಒಳ್ಳೆಯವರ ಮೌನವನ್ನೂ ಕೆಟ್ಟವರ ಮಾತನ್ನೂ ತಡಕೊಳ್ಳುವುದು ಕಷ್ಟ ಅಂತ ಹಿಂದೊಮ್ಮೆ ಅಂತೋಣಿಯೇ ಹೇಳಿದ್ದು ನೆನಪಾಗಿತ್ತು. ಅಂತೋಣಿಯ ಹತ್ತಿರ ನಿನಗೇನಾಗಿದೆ ಅಂತ ಕೇಳುವುದೋ ಬೇಡವೋ ಅನ್ನುವ ಗೊಂದಲದಲ್ಲೇ ಎರಡು ದಿನ ಕಳೆದಿತ್ತು.

ಮೂರನೆಯ ದಿನ ಶಾನುಭೋಗರ ಮನೆಯ ಗೇಟಿನ ಮುಂದೆ  ಮೂರೋ ನಾಲ್ಕೋ ಮಂದಿ ಅಪರಿಚಿತರು ನಿಂತಿದ್ದರು. ಅವರನ್ನು ಮಹದೇವ ಆ ಮೊದಲು ಎಲ್ಲೂ ನೋಡಿರಲಿಲ್ಲ. ಆವತ್ತು ಮಹದೇವ ಮನೆಗೆ ಹೋಗುತ್ತಲೇ ಅಪ್ಪ ಆತಂಕದ ಸ್ವರದಲ್ಲಿ ನಿನಗೆ ಅಂತೋಣಿ ಗೊತ್ತಿದ್ದಾನಾ ಕೇಳಿದ್ದರು. ಮಹದೇವ ಕಣ್ಣೋಜಿಯಂತೆ ಅಂಟೋಣಿಯಾ, ಯಾರದು ಅಂತ ಕೇಳಿದ್ದ. ಗೊತ್ತಿಲ್ಲ ಅಲ್ವಾ.. ಅಷ್ಟು ಸಾಕು ಅಂದಿದ್ದರು ಅಪ್ಪ. ಅಂತೋಣಿಯ ಮೇಲೆ ಯಾವುದೋ ಅಪರಾಧದ ನೆರಳು ಬಿದ್ದಿದೆ ಅಂತ ಮಹದೇವನಿಗೆ ಅಸ್ಪಷ್ಟವಾಗಿ ಅನ್ನಿಸತೊಡಗಿತ್ತು.

ಅದಾದ ನಂತರ ಅಂತೋಣಿ ಇದ್ದಕ್ಕಿದ್ದಂತೆ ಊರು ತುಂಬ ಹಬ್ಬಿದ. ಎಲ್ಲರೂ ಅವನ ಕುರಿತೇ ಮಾತಾಡುತ್ತಿದ್ದರು. ಅಂತೋಣಿ ಹುಡುಗರನ್ನೂ ಹುಡುಗಿಯರನ್ನೂ ಮತಾಂತರ ಮಾಡಿಸುತ್ತಾನೆ ಅಂತ ಒಂದು ಗುಂಪು ಹೇಳುತ್ತಿತ್ತು. ಅವನು ಗಾಂಜಾ ಮಾರುತ್ತಾನೆ. ಅದಕ್ಕಾಗಿಯೇ ಅವನು ಈ ಊರಿಗೆ ಬಂದಿದ್ದಾನೆ ಅಂತ ಮತ್ತೊಂದಷ್ಟು ಜನ ಹೇಳುತ್ತಿದ್ದರು. ಅವನು ಶಾನುಭೋಗರ ಮಗಳು ಗೀತಾಳಿಗೆ ಲವ್ ಲೆಟರ್ ಬರೆದುಕೊಟ್ಟಿದ್ದಾನೆ ಅನ್ನುವ ಸುದ್ದಿಯೂ ಹಬ್ಬಿತು. ಇವೆಲ್ಲಕ್ಕೂ ಮೀರಿದ ಒಂದು ಸುದ್ದಿ ಅಂತೋಣಿಯ ಅಸ್ತಿತ್ವಕ್ಕೇ ಮುಳುವಾಗುವಂತೆ ಊರನ್ನು ಸುತ್ತತೊಡಗಿತು.

ಅಂತೋಣಿಯ ಅಪ್ಪ ಆಲ್ಬರ್ಟ್  ಅದೇ ಊರಿನವನು. ಆ ಊರಲ್ಲಿರುವುದೆಲ್ಲ ಆಲ್ಬರ್ಟ್ ಆಸ್ತಿಯೇ. ಬ್ರಿಟಿಷರ ಕಾಲಕ್ಕೆ ಆ ಊರು ಬ್ರಿಟಿಷರು ಕುದುರೆಗಳನ್ನು ಮೇಯಿಸುವ ಜಾಗವಾಗಿತ್ತು. ಕುದುರೆ ಮೇಯಿಸುತ್ತಿದ್ದ ಫ್ರಾನ್ಸಿಸ್ ಅನ್ನುವವನಿಗೆ ಇಡೀ ಜಾಗವನ್ನು ಬ್ರಿಟಿಷರು ಬರೆದು ಕೊಟ್ಟಿದ್ದರು. ಫ್ರಾನ್ಸಿಸ್ ನಂತರ ಆ ಜಾಗ ಅವನ ಮಗ ಜಾನ್ಸನ್‌ಗೆ ಬಂತು. ನಂತರ ಅವನ ಮಗ ಅಲ್ಬರ್ಟ್‌ಗೆ ಬಂತು. ಕುಡುಕನೂ ಸ್ತ್ರೀವ್ಯಾಮೋಹಿಯೂ ಆಗಿದ್ದ ಆಲ್ಬರ್ಟ್ ಆ ಜಾಗವನ್ನು ಕಂಡಕಂಡವರಿಗೆ ಹಂಚಿದ್ದ. ಆಲ್ಬರ್ಟ್ ಹೆಂಡತಿ ಅವನ ಅವತಾರ ತಾಳಲಾರದೆ, ಒಂದು ದಿನ ಪುಟ್ಟ ಮಗುವನ್ನು ಕರಕೊಂಡು ತವರು ಮನೆಗೆ ಹೋದ ನಂತರ, ಆಲ್ಬರ್ಟ್ ಕಾಟ ಮತ್ತೂ ಹೆಚ್ಚಾಯಿತು.

ಆಲ್ಬರ್ಟ್ ಆರೂವರೆ ಅಡಿ ಎತ್ತರವಿದ್ದ. ಅವನ ತೋಳುಗಳು ಒನಕೆಯಂತಿದ್ದವು. ಕುಳಿತರೆ ಎರಡು ಕೇಜಿ ಹಂದಿಯನ್ನು ಲೀಲಾಜಾಲವಾಗಿ ತಿನ್ನುತ್ತಿದ್ದ. ಲೀಟರ್‌ಗಟ್ಟಲೆ ಹೆಂಡ ಕುಡಿಯುತ್ತಿದ್ದ. ನಂತರ ಅವನ ಬೇಟೆ ಶುರುವಾಗುತ್ತಿತ್ತು. ಹೆಣ್ಣುಗಳನ್ನು ಹುಡುಕಿಕೊಂಡು ಹೊರಡುತ್ತಿದ್ದ. ಅವನ ಮೇಲೆ ಊರಿನ ಮಂದಿಗೆ ಅಪಾರ ಸಿಟ್ಟಿತ್ತು. ಆದರೆ ಅವನು ಹಂಚುತ್ತಿದ್ದ ಭೂಮಿಯ ಮೇಲಿನ ಮೋಹವೂ ಇತ್ತು. ಹೀಗಾಗಿ ಮನಸ್ಸಿಲ್ಲದ ಮನಸ್ಸಿನಿಂದ, ಮನಸ್ಸಿದ್ದರೂ ಮನಸ್ಸಿಲ್ಲದಂತೆ ನಟಿಸುತ್ತಾ ಅವನನ್ನು ಸಹಿಸಿಕೊಳ್ಳುತ್ತಿದ್ದರು. ಕೂಲಿನಾಲಿ ಮಾಡುತ್ತಿದ್ದವರೆಲ್ಲ ಆಲ್ಬರ್ಟ್ ದೆಸೆಯಿಂದ ಗದ್ದೆ, ತೋಟ, ಮನೆ ಮಾಡಿಕೊಂಡರು.

ಇದ್ದಕ್ಕಿದ್ದಂತೆ ಒಂದು ದಿನ ಆಲ್ಬರ್ಟ್ ಕಾಣೆಯಾದ. ಅವನು ಎಲ್ಲಿಗೆ ಹೋದ ಎಂಬುದು ಯಾರಿಗೂ ಗೊತ್ತಾಗಲೇ ಇಲ್ಲ. ಅವನನ್ನು ಹುಡುಕುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ. ಆಲ್ಬರ್ಟ್ ಮನೆ ಮತ್ತು ಮನೆಯ ಸುತ್ತಮುತ್ತ ಇದ್ದ ಹತ್ತಾರು ಎಕರೆಯನ್ನು ಶಾನುಭೋಗರು ತಮ್ಮದನ್ನಾಗಿ ಮಾಡಿಕೊಂಡರು.

ಇದೆಲ್ಲ ಆಗಿ ಹದಿನೈದು ವರ್ಷಗಳ ನಂತರ, ಆ ಊರಲ್ಲಿ ಅಂತೋಣಿ ಕಾಣಿಸಿಕೊಂಡಿದ್ದ. ಅವನ ಮೇಲೆ ಊರ ಮಂದಿ ನೂರಾರು ಆರೋಪಗಳನ್ನು ಮಾಡಲು ಮುಖ್ಯ ಕಾರಣ ಅವನು ಆಲ್ಬರ್ಟ್ ಮಗ ಅನ್ನುವುದೇ ಆಗಿತ್ತು. ಅಂತೋಣಿ ಊರಿಗೆ ಬಂದಿರುವುದೇ ಅಪ್ಪನ ಆಸ್ತಿಗೋಸ್ಕರ. ಆಸ್ತಿ ಪತ್ರ ಅವನ ಹತ್ತಿರ ಇದೆ. ಅದನ್ನಿಟ್ಟುಕೊಂಡು ಅವನು ಕೋರ್ಟಿಗೆ ಹೋದರೆ ಊರಿಗೆ ಊರೇ ತಾವಿರುವ ಜಾಗ ಮನೆ ಬಿಡಬೇಕಾಗುತ್ತದೆ ಎಂಬ ಸುದ್ದಿ ಹಬ್ಬಿದ್ದೇ ತಡ, ಅಂತೋಣಿಯನ್ನು ಯಾವುದಾದರೂ ಒಂದು ಪ್ರಕರಣದಲ್ಲಿ ಸಿಲುಕಿಸಲಿಕ್ಕೆ ಜನ ಕಾಯತೊಡಗಿದರು.

ಇದೆಲ್ಲ ಎಷ್ಟು ಸೂಕ್ಷ್ಮವಾಗಿ ನಡೆಯಿತು ಅಂತ ಮಹದೇವನಿಗೆ ಆಶ್ಚರ್ಯವಾಗುತ್ತದೆ. ಈ ಪ್ರಸಂಗವೆಲ್ಲ ಮಹದೇವನಿಗೆ ಗೊತ್ತಾದದ್ದು ಅಂತೋಣಿ ಸತ್ತ ನಂತರವೇ. ಆದರೆ ಅಂತೋಣಿ ಇದ್ದಾಗಲೇ ಜನ ಒಳಗೊಳಗೇ ಅವನನ್ನು ಹಿಂಬಾಲಿಸುತ್ತಿದ್ದರು. ಅವನ ಚಲನವಲನಗಳನ್ನು ಗುಟ್ಟಾಗಿ ಗಮನಿಸುತ್ತಿದ್ದರು ಅಂತ ಮಹದೇವನಿಗೆ ಆಮೇಲಾಮೇಲೆ ಅರಿವಾಯಿತು.

ಇದನ್ನೂ ಓದಿ: Sunday Read: ಚಿಂತಾಮಣಿ ಕೊಡ್ಲೆಕೆರೆ ಕಥಾ ಸಂಕಲನ ʼಭರತದ ಮಧ್ಯಾಹ್ನʼ

ಅಂತೋಣಿ ಸಾಯುವ ಹಿಂದಿನ ದಿನ ಮಹದೇವನಿಗೆ ಒಂದು ಚೀಟಿ ಸಿಕ್ಕಿತ್ತು. ಮಹದೇವ ನಡೆದುಹೋಗುವ ದಾರಿಯಲ್ಲಿ ಆ ಚೀಟಿಯನ್ನು ಒಂದು ಕಲ್ಲಿಗೆ ಸುತ್ತಿ ಅವರಿಬ್ಬರೂ ಕುಳಿತುಕೊಳ್ಳುತ್ತಿದ್ದ ಮರದ ಕೊಂಬೆಗೆ ಸಿಕ್ಕಿಸಿದ್ದ. ಉದಾಸೀನದಿಂದ ನಡೆದುಕೊಂಡು ಬರುತ್ತಿದ್ದ ಮಹದೇವನಿಗೆ ಆ ಕಲ್ಲೂ ಚೀಟಿಯೂ ಕಣ್ಣಿಗೆ ಬಿದ್ದು, ಓದಿ ನೋಡಿದರೆ `ನಾಳೆ ಸಂಜೆ ಐದು ಗಂಟೆಗೆ ಹೊಳೆಯ ಹತ್ತಿರ ಬಾ. ಮಾತಾಡುವುದಿದೆ’ ಅಂತ ಅಂತೋಣಿ ಬರೆದಿಟ್ಟಿದ್ದ.

-4-

ಮಹಾದೇವನನ್ನು ಮುಂದೆ ಕೂರಿಸಿಕೊಂಡು ಅವರೆಲ್ಲ ಕೊತಕೊತ ಕುದಿಯುತ್ತಾ ಕೂತಿದ್ದರು. `ಗೊತ್ತಿದ್ದರೆ ಹೇಳಪ್ಪಿ. ನಿಂಗೆ ಯಾವ ಸೀಮೆ ಫ್ರೆಂಡು ಅಂವ. ಫಟಿಂಗ. ನಮ್ಮನ್ನೆಲ್ಲ ಹಾಳು ಮಾಡಲಿಕ್ಕೇ ಬಂದವನು’.

`ಹೇಳ್ತಾನೆ ಬಿಡ್ರೀ. ಮಹದೇವ ನಮ್ಮೂರಿನ ಹುಡುಗ. ನಮ್ಮೂರಿನ ಮೇಲೆ ಅವನಿಗೆ ಪ್ರೀತಿ ಇರಬೇಕು.ಇದೆ. ಯಾರೋ ಬಂದು ನಮ್ಮನ್ನೆಲ್ಲ ಊರು ಬಿಡಿಸ್ತಾರೆ ಅಂದ್ರೆ ನಮ್ಮ ಮಹದೇವ ಸುಮ್ನಿರೋದಿಲ್ಲ’

‘ಹೇಳ್ಲಿಲ್ಲ ಅಂದ್ರೆ ಅವನಿಗೆ ಏನು ಮಾಡಬೇಕೂಂತ ಇದ್ವೋ ಅದನ್ನೇ ನಿಂಗೂ ಮಾಡ್ತೀವಿ’

‘ಹಾಗೆಲ್ಲ ಮಾತಾಡಬಾರದು. ಸುಮ್ನಿರೋ. ಮಹದೇವ ನಮ್ಮವನು..’

ಹೊಳೆಬದಿಗೆ ಅವರೆಲ್ಲ ಹೋದರು. ಮಹದೇವ ಹೋಗಲಿಲ್ಲ

-5-

ಆ ರಾತ್ರಿ ಕನಸಲ್ಲಿ ಅಂತೋಣಿ ಬಂದಿದ್ದ.

ಅವನನು ನೀರಲ್ಲಿ ಎರಡು ಸಲ ಮುಳುಗಿ, ಮೂರನೇ ಸಲ ಮೇಲೆ ಬಂದು ಮಹದೇವನ ಕಡೆ ಕೊಂಚವೇ ತಿರುಗಿ ಏನೋ ಹೇಳಲು ಯತ್ನಿಸಿದ. ಅವನ ಶ್ವಾಸಕೋಶದಲ್ಲಿ ನೀರು ತುಂಬಿತ್ತು. ಮಾತುಗಳು ಕೇಳಿಸುತ್ತಿರಲಿಲ್ಲ. ಅಸ್ಪಷ್ಟವಾಗಿ ಗುಳುಗುಳಗುಳುಗುಳ ಅಂತೇನೋ ಕೇಳಿಸಿತು. ಮತ್ತೊಮ್ಮೆ ಅದನ್ನು ಕೇಳಿಸಿಕೊಂಡರೆ ಅರ್ಥವಾದೀತೇನೋ ಅಂತ ಮಹದೇವ ಆ ಕನಸಿಗಾಗಿ ಕಾಯುತ್ತಲೇ ಇದ್ದಾನೆ. ಅವನಿಗೆ ಇದುವರೆಗೂ ಅಂತೋಣಿಯ ಕನಸು ಬಿದ್ದಿಲ್ಲ.

ಅಂತೋಣಿಯ ಮಾತುಗಳನ್ನು ಡೀಕೋಡ್ ಮಾಡಲು ಮಹದೇವ ಪ್ರಯತ್ನಪಡುತ್ತಲೇ ಇದ್ದಾನೆ. ಆದರೆ ಪ್ರತಿಸಲವೂ ಸೋಲುತ್ತಾನೆ. ಮೀಟಿಂಗು ನಡೆಯುತ್ತಿದ್ದಾಗ, ಊಟ ಮಾಡುವಾಗ, ಪ್ರೇಮಿಸುವಾಗ ಅಂತೋಣಿಯ ಕೊನೆಯ ಮಾತು ಕಿವಿಗೆ ಬೀಳುತ್ತದೆ.

ಅಂತೋಣಿಯ ಕೊನೆಯ ಮಾತು ಏನಿರಬಹುದು ಎಂದು ತಿಳಿಯಲು ಮಹದೇವ ಸಾಕಷ್ಟು ಪ್ರಯತ್ನಪಟ್ಟು ಸೋತಿದ್ದಾನೆ. ಮನೋವೈದ್ಯರನ್ನು ಭೇಟಿಯಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡವರು ಬರೆದಿಟ್ಟ ಡೆತ್ ನೋಟ್, ಸಾಯುವವರ ಕೊನೆಯಾಸೆಗಳು, ನೇಣಿಗೆ ಹಾಕುವಾಗ ಎದುರಲ್ಲಿದ್ದ ಪೊಲೀಸ್ ಅಧಿಕಾರಿಗಳ ನೆನಪುಗಳನ್ನೆಲ್ಲ ಜಾಲಾಡಿಸಿದರೂ ಅವನಿಗೆ ಉತ್ತರ ಸಿಕ್ಕಿಲ್ಲ. ಮಹದೇವ ಮತ್ತೆ ಮತ್ತೆ ಕೇಳಿದಾಗ ಅವನ ಹೆಂಡತಿ ಉಮಾಳಿಗೆ ಸಿಟ್ಟು ನೆತ್ತಿಗೆ ಹತ್ತಿ, ‘ನೀವೊಂದು ಸಲ ಹೊಳೆಗೆ ಹಾರಿ. ಮೂರನೇ ಸಲ ಮೇಲೆ ಬರುವಾಗ ಏನು ಹೇಳ್ತೀರಿ ಅಂತ ನಿಮಗೇ ಗೊತ್ತಾಗ್ತದೆ’ ಅಂದ ನಂತರ, ಮಹದೇವ ಆ ಬಗ್ಗೆ ಮನೆಯಲ್ಲಿ ಮಾತಾಡುವುದನ್ನು ನಿಲ್ಲಿಸಿದ್ದಾನೆ.

ಮಹದೇವ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಂತ ಯಾವತ್ತೋ ಪತ್ರಿಕೆಯಲ್ಲಿ ಬಂದರೆ, ಈ ಕತೆ ಓದಿದ ನೀವೂ ನಾನೂ ಅವನು ಹೊಳೆಗೆ ಹಾರಿದ್ದು ಬೇರೆ ಯಾವ ಕಾರಣಕ್ಕೂ ಅಲ್ಲ, ನೀರಿನಲ್ಲಿ ಮುಳುಗಿ ಸಾಯುವವನು ಮೂರನೇ ಸಲ ಮೇಲೆ ಬಂದಾಗ ಏನು ಹೇಳುತ್ತಾನೆ ಅನ್ನುವುದನ್ನು ತಿಳಿದುಕೊಳ್ಳುವ ಅದಮ್ಯ ಆಸೆಯಿಂದ ಎಂದು ತೀರ್ಮಾನಿಸಬಹುದು.

ಪುಸ್ತಕ: ಚಿಯರ್ಸ್‌, drink life like a fish
ಲೇಖಕ: ಜೋಗಿ
ಪ್ರಕಾಶನ: ಸಾವಣ್ಣ ಪ್ರಕಾಶನ
ಬೆಲೆ: 150 ರೂ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಎಚ್‌.ಎಸ್‌ ವೆಂಕಟೇಶಮೂರ್ತಿ ಹೊಸ ಕವನ ಸಂಕಲನದ ಕವಿತೆ: ಕಾಂಚನಜುಂಗ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಮೇ 19ರಂದು ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ

Bengaluru News: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ.ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

VISTARANEWS.COM


on

7 books release programme on May 19 in Bengaluru
Koo

ಬೆಂಗಳೂರು: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ (Bengaluru News) ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ.

ಇದನ್ನೂ ಓದಿ: SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ. ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

ವೀರಕಪುತ್ರ ಆಶಯನುಡಿಗಳನ್ನಾಡಲಿದ್ದಾರೆ. ಶೋಭಾ ರಾವ್‌ ಮತ್ತು ಅನಂತ ಕುಣಿಗಲ್‌ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.

ಇದನ್ನೂ ಓದಿ: Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

ಲೋಕಾರ್ಪಣೆಗೊಳ್ಳಲಿರುವ ಕೃತಿಗಳು ಹಾಗೂ ಕೃತಿಕಾರರ ವಿವರ

ಡಾ. ಲಕ್ಷ್ಮಣಕೌಂಟೆ ಅವರ ಮಹಾವಿನಾಶ (ಕಾದಂಬರಿ), ಕೌಂಡಿನ್ಯ ಅವರ ಬೆಳವಡಿ ಮಲ್ಲಮ್ಮ (ಕಾದಂಬರಿ), ರಾಘವೇಂದ್ರ ಪ್ರಭು ಎಂ. ಅವರ ಬಹುತ್ವ ಭಾರತ ಕಟ್ಟಿದವರು (ಬದುಕು ಬರಹಗಳು), ವಿ. ಗೋಪಕುಮಾರ್‌ ಅವರ ಕಗ್ಗಕ್ಕೊಂದು ನ್ಯಾನೋ ಕಥೆ (ನ್ಯಾನೋ ಕತೆಗಳು), ಗೀತಾ ದೊಡ್ಮನೆ ಅವರ ನೀಲಿ ಶಾಯಿಯ ಕಡಲು (ಕವಿತೆಗಳು), ಮೇದಿನಿ ಕೆಸವಿನಮನೆ ಅವರ ಮಿಸ್ಸಿನ ಡೈರಿ (ಅನುಭವ ಕಥನ), ಪಾರ್ವತಿ ಪಿಟಗಿ ಅವರ ಪುನರುತ್ಥಾನ (ಕಾದಂಬರಿ) ಲೋಕಾರ್ಪಣೆಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ಕಲೆ/ಸಾಹಿತ್ಯ

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್- ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಕೃತಿಯನ್ನು ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Konkani Book Release ) ಬಿಡುಗಡೆಗೊಳಿಸಿದರು. ಕರಾವಳಿಯಲ್ಲಿ ಕೊಂಕಣಿ ಮಾತನಾಡುವ ಜಿಎಸ್‌ಬಿ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇದೊಂದು ಅಪೂರ್ವ ಕೃತಿಯಾಗಿದೆ.

VISTARANEWS.COM


on

By

Konkani Book Release
Koo

ಮಂಗಳೂರು: ಇಟಾಲಿಯನ್- ಬ್ರಿಟಿಷ್ ಲೇಖಕ (Italian-born British citizen) ಗಿನೋ ಡಿ’ಕ್ಲೆಮೆಂಟೆ ಅವರು ಸಂಪಾದಿಸಿದ ಕೃತಿ ”ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ’ ಕೃತಿಯನ್ನು (Konkani Book Release) ಕೇರಳದ (kerala) ಎರ್ನಾಕುಲಂನಲ್ಲಿರುವ (Ernakulam) ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Samyameendra Thirtha Swamiji ) ಬಿಡುಗಡೆಗೊಳಿಸಿದರು.

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್-ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಸಂವಾದಾತ್ಮಕ ಜಿಎಸ್‌ಬಿ (ಗೌಡ ಸಾರಸ್ವತ ಬ್ರಾಹ್ಮಣ) ಕೊಂಕಣಿ ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ರಚಿಸಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಪ್ರತಿಷ್ಠಿತ ದಿಗ್ವಿಜಯ್ ಮಹೋತ್ಸವದಲ್ಲಿ ಅನಾವರಣಗೊಂಡ ಈ ಮಾರ್ಗದರ್ಶಿ ಕೃತಿ ಶ್ರೀಮಂತ ಭಾರತೀಯ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ಮಹತ್ವದ ಮೈಲುಗಲ್ಲನ್ನು ಗುರುತಿಸುತ್ತದೆ.


Gino’s Guide for Conversational GSB Konkani ಕೃತಿಯು ಜಿ ಎಸ್ ಬಿ ಸಮುದಾಯದ ಪರಂಪರೆಯನ್ನು ಪೋಷಿಸುವ ಸಮರ್ಪಿತ ಸಂಸ್ಥೆಯಾದ ಜಿಎಸ್ ಬಿ ವರ್ಲ್ಡ್‌ವೈಡ್‌ನ ಯುವಜನರಿಂದ ಸುಗಮಗೊಳಿಸಲ್ಪಟ್ಟ ಅಡ್ಡ-ಸಾಂಸ್ಕೃತಿಕ ತಿಳುವಳಿಕೆ ಮತ್ತು ಭಾಷಾ ಸಂರಕ್ಷಣೆಗೆ ಅಸಾಧಾರಣ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಕೃತಿಯ ಕುರಿತು ಮಾತನಾಡಿದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಇದು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳ ಮೇಲೆ ಬೀರುವ ಮಹತ್ವದ ಪರಿಣಾಮವನ್ನು ಒತ್ತಿ ಹೇಳುತ್ತದೆ ಎಂದರು.

ಗಿನೋ ಡಿ ಕ್ಲೆಮೆಂಟೆ ಅವರ ಕೆಲಸವು ಸಮರ್ಪಣಾ ಶಕ್ತಿ ಮತ್ತು ಸಾಂಸ್ಕೃತಿಕ ಮೆಚ್ಚುಗೆಗೆ ಸಾಕ್ಷಿಯಾಗಿದೆ. ನಮ್ಮ ಸಮುದಾಯದ ಹೊರಗಿನವರಿಂದ ಅಂತಹ ಆಳವಾದ ತೊಡಗಿಸಿಕೊಳ್ಳುವಿಕೆಯನ್ನು ನೋಡುವುದು ಅಪರೂಪ. ಈ ಮಾರ್ಗದರ್ಶಿ ನಮ್ಮ ಭಾಷಾ ಸಂರಕ್ಷಣೆಯ ಪ್ರಯತ್ನಗಳಲ್ಲಿ ಒಂದು ಸ್ಮಾರಕ ಸಾಧನೆಯಾಗಿದೆ ಎಂದು ಹೇಳಿದರು.

ಮಾರ್ಗದರ್ಶಿಯು ದೈನಂದಿನ ಸಂಭಾಷಣೆಗಳಿಗೆ ಪ್ರಾಯೋಗಿಕ ನುಡಿಗಟ್ಟುಗಳು ಮತ್ತು ಉದಾಹರಣೆಗಳೊಂದಿಗೆ ಉಚ್ಚಾರಣೆ, ವ್ಯಾಕರಣ ಮತ್ತು ಶಬ್ದಕೋಶದ ವಿವರವಾದ ಅವಲೋಕನವನ್ನು ನೀಡುತ್ತದೆ. ಇದು ಆರಂಭಿಕ ಮತ್ತು ಮುಂದುವರಿದ ಕಲಿಯುವವರಿಬ್ಬರನ್ನೂ ಪೂರೈಸುತ್ತದೆ, ಜಿಎಸ್ ಬಿ ಕೊಂಕಣಿಯನ್ನು ಕರಗತ ಮಾಡಿಕೊಳ್ಳಲು ಉತ್ಸುಕರಾಗಿರುವ ಯಾರಿಗಾದರೂ ಇದೊಂದು ಬಹುಮುಖ್ಯ ಸಂಪನ್ಮೂಲವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Narayana Murthy: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಕತ್ತರಿ? ನಾರಾಯಣ ಮೂರ್ತಿ ಶಾಕಿಂಗ್‌ ಹೇಳಿಕೆ

ಲೇಖಕರ ಹಿನ್ನೆಲೆ ಏನು?

ಜಿನೋ ಡಿ ಕ್ಲೆಮೆಂಟೆ ಮೂಲತಃ ಇಟಲಿಯವರಾಗಿದ್ದು, ಈಗ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಮದುವೆಯ ಮೂಲಕ ಜಿ ಎಸ್ ಬಿ ಸಂಸ್ಕೃತಿಗೆ ಆಳವಾದ ವೈಯಕ್ತಿಕ ಸಂಪರ್ಕವನ್ನು ಹೊಂದಿದ್ದಾರೆ. ಅವರ ಸಂಗಾತಿಯು ಕರ್ನಾಟಕದ ಕಾರ್ಕಳ ತಾಲೂಕಿನ ಮೂಲದವರಾಗಿದ್ದಾರೆ. ಈ ಕೌಟುಂಬಿಕ ಬಂಧವು ಜಿನೋ ಅವರ ಜಿಎಸ್‌ಬಿ ಕೊಂಕಣಿಯ ತಲ್ಲೀನಗೊಳಿಸುವ ಅಧ್ಯಯನಕ್ಕೆ ಪ್ರೇರೇಪಿಸಿತು. ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಉತ್ಸಾಹವು ಈ ಸಮಗ್ರ ಮಾರ್ಗದರ್ಶಿಯಲ್ಲಿ ಉತ್ತುಂಗಕ್ಕೇರಿತು. ಭಾರತೀಯ ಭಾಷೆಗಳ ದಾಖಲೀಕರಣ ಮತ್ತು ಪ್ರಚಾರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ.

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

ಧವಳ ಧಾರಿಣಿ ಅಂಕಣ: ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು.

VISTARANEWS.COM


on

king dasharatha dhavala dharini
Koo

ಕರ್ಮಫಲವನ್ನು ತಾನೇ ಅರಿತು ಅನುಭವಿಸಿದ ಸೂರ್ಯವಂಶದ ಮಹಾನ್ ಚಕ್ರವರ್ತಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕವೆನ್ನುವುದು ದಶರಥನಿಗೆ ಮಹಾನ್ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ಆತ ಏನೆಲ್ಲ ಕಸರತ್ತನ್ನು ಮಾಡಿದ್ದ ಎನ್ನುವುದನ್ನು ನೋಡಿದ್ದೇವೆ.

ಕೈಕೇಯಿ ಮಂಥರೆಯ ದುರ್ಬೋಧನೆಯಿಂದ ಎಷ್ಟರಮಟ್ಟಿಗೆ ಪ್ರಭಾವಿತಳಾಗಿದ್ದಳೆಂದರೆ ಅರಸನ ಯಾವ ಒದ್ದಾಟವೂ ಅವಳನ್ನು ಕರಗಿಸಲಿಲ್ಲ. ರಾಮನನ್ನು ಬಿಟ್ಟರೆ ತಾನು ಬದುಕಿರಲಾರೆ ಎನ್ನುವ ಮಾತುಗಳು ಕಾದ ಮರಳಲ್ಲಿ ಬಿದ್ದ ನೀರಿನಂತೆಯೇ ಇಂಗಿಹೋಯಿತು. ಕೈಕೇಯಿ ತಿರುಗಿ ರಾಜನಿಗೆ ಧರ್ಮೋಪದೇಶ ಮಾಡುತ್ತಾಳೆ. ಶೈಭ್ಯ, ಅಲರ್ಕ ಮೊದಲಾದ ರಾಜರ್ಷಿಗಳು ಪ್ರತಿಜ್ಞಾಬದ್ಧರಾಗಿ ತಮ್ಮ ತಮ್ಮ ಜೀವವನ್ನೇ ಒತ್ತೆಯಾಗಿರಿಸಿದ ಸಂಗತಿಯನ್ನು ಹೇಳುತ್ತಾ ಪರೋಕ್ಷವಾಗಿ ದೊರೆಯ ಸಾವಿನ ಕುರಿತು ತಾನು ಅಂಜುವವಳಲ್ಲ ಎನ್ನುತ್ತಾಳೆ. ಅವಳಿಗೆ ತನ್ನ ಮಗ ಭರತ ಪಟ್ಟಕ್ಕೇರಲೇ ಬೇಕಾಗಿದೆ. ಆಕೆ ಕೌಸಲ್ಯೆಯನ್ನು ಎಷ್ಟರಮಟ್ಟಿಗೆ ದ್ವೇಷಿಸುತ್ತಿದಳೆಂದರೆ “ರಾಮ ಪಟ್ಟಾಭಿಷೇಕವಾದೊಡನೆಯೇ ರಾಜಮಾತೆಯಾಗಿ ಸಕಲಪ್ರಜೆಗಳಿಂದ ಗೌರವವನ್ನು ಸ್ವೀಕರಿಸುವ ಕೌಸಲ್ಯೆಯನ್ನು ತಾನು ಒಂದು ದಿನವೂ ನೋಡಿಸಹಿಸಲಾರೆ ಎನ್ನುತ್ತಾಳೆ. ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿ ಕೌಸಲ್ಯೆಯೊಂದಿಗೆ ನಿತ್ಯವೂ ರಮಿಸಲು ಇಚ್ಛಿಸುವ ನಿನ್ನ ಹುನ್ನಾರ ತನಗೆ ಗೊತ್ತು ಎಂದು ಜರಿಯುತ್ತಾಳೆ.

ದಶರಥನಿಗೆ ಮಾತು ಬಾರದಾಗಿದೆ. ಆತ ರಾಮನನ್ನು ಕಾಡಿಗೆ ಕಳುಹಿಸುವುದು ಬೇಡವೆಂದು ಬಗೆಬಗೆಯಲ್ಲಿ ಗೋಳಾಡುತ್ತಾನೆ. ಸ್ತ್ರೀಸುಖಕ್ಕೊಸ್ಕರವಾಗಿ ತನ್ನ ಪ್ರಿಯಸುತನನ್ನೇ ಅರಣ್ಯಕ್ಕೆ ಕಳುಹಿಸಿದ ತನ್ನನ್ನು ಅತಿಕಾಮಿಯೆಂದು ಪುರಜನರು ಆಡಿಕೊಳ್ಳುವರು, ಆ ಅಪವಾದ ಬರುತ್ತದೆಯೆಂದು ಗೋಗೆರೆಯುತ್ತಾನೆ. “ಹೆಂಗಸರೆಲ್ಲ ಮೋಸಗಾರರು, ಸ್ವಾರ್ಥಪರಾಯಣರು ಎಂದು ಉದ್ವೇಗದಿಂದ ಕೂಗಾಡುತ್ತಾನೆ. ಬಹುಶಃ ಆಗ ಆತನಿಗೆ ತನ್ನ ಹಿರಿಯ ಹೆಂಡತಿಯರಾದ ಕೌಸಲ್ಯೆ ಮತ್ತು ಸುಮಿತ್ರೆಯರ ನೆನಪಾಗಿರಬೇಕು. ಇಲ್ಲ, ಪ್ರಪಂಚದಲ್ಲಿ ಎಲ್ಲಾ ಹೆಂಗಸರೂ ಹಾಗಿಲ್ಲ’ ಕೇವಲ ಭರತನ ತಾಯಿಗೆ ಮಾತ್ರ ತನ್ನ ಮಾತು ಅನ್ವಯಿಸುತ್ತದೆ ಎಂದು ಕೂಗಾಡುತ್ತಾನೆ. ರಾಮನನ್ನು ಅರಣ್ಯಕ್ಕೆ ಕಳುಹಿಸುವ ಒಂದು ಮಾತನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು ಎನ್ನುವ ಮಾತುಗಳು ಕೈಕೇಯಿಯ ಮೇಲೆ ಪರಿಣಾಮ ಬೀರದಿದ್ದಾಗ ಕೊನೆಯ ಅಸ್ತ್ರವೆನ್ನುವಂತೆ ದಶರಥ ಲೋಕಮರ್ಯಾದೆಯನ್ನು ಮೀರಿ ಅನಾಥನಂತೆ ಗೋಳಾಡುತ್ತಾ ಆಕೆಯ ಕಾಲಿಗೆ ನಮಸ್ಕರಿಸಲು ಹೋಗುತ್ತಾನೆ. ಆಗ ಕೈಕೇಯಿ ತಿರಸ್ಕಾರದಿಂದ ತನ್ನ ಕಾಲನ್ನು ದೂರಕ್ಕೆ ಚಾಚಿದುದರಿಂದ ಅವೂ ಆತನಿಗೆ ಸಿಕ್ಕದೇ ರೋಗಿಯೊಬ್ಬ ತತ್ತರಿಸಿ ಬೀಳುವಂತೆ ನೆಲದಮೇಲೆ ಬೀಳುತ್ತಾನೆ. ಅವನ ಈ ಸ್ಥಿತಿಯನ್ನು ನೋಡಿದ ರಾಮಾಯಣದ ಕವಿ ವಾಲ್ಮೀಕಿಗೂ ದಶರಥನ ಮೇಲೆ ಹೇಸಿಗೆಯುಂತಾಗುತ್ತದೆ. ಚಕ್ರವರ್ತಿ ತನ್ನ ಘನತೆಯನ್ನು ಮರೆತು ಹೀಗೆ ಮಾಡಬಾರದಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ.

ಅತದರ್ಹಂ ಮಹಾರಾಜಂ ಶಯಾನಮತಥೋಚಿತಮ್.
ಯಯಾತಿಮಿವ ಪುಣ್ಯಾನ್ತೇ ದೇವಲೋಕಾತ್ಪರಿಚ್ಯುತಮ್৷৷ಅಯೋ. .13.1৷৷

ರಾಜಾಧಿರಾಜನಾದಂತಹ ದಶರಥನು ಕೈಕೇಯಿಯ ಪಾದಗಳ ಮೇಲೆ ಬೀಳಲು ಹೋಗಬಾರದಿತ್ತು(ಅತದರ್ಹಂ) ಎಂದು ಬಹಿರಂಗವಾಗಿಯೇ ಸಿಡಿಮಿಡಿಗೊಳ್ಳುತ್ತಾನೆ. ರಾಮಾಯಣದ ಈ ಸನ್ನಿವೇಶ ವಾಲ್ಮೀಕಿಯ ಕಣ್ಣಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಕಾಣುತ್ತಿದೆ. ನಿರುಧ್ವಿಘ್ನವಾಗಿ ಕಥೆಯನ್ನು ಹೇಳುತ್ತಾಹೋಗಬೇಕಾದ ಕವಿ ಸೀತೆಗೆ ತೊಂದರೆಯಾದ ಉತ್ಕಟಕ್ಷಣಗಳಲ್ಲಿ ರಸಭಾವವನ್ನು ಹತ್ತಿಕ್ಕಲಾರದೇ ತಾನೇ ಕಥೆಯೊಳಗೆ ಪ್ರವೇಶಿಸುವುದುಂಟು. ಆದರೆ ಇಲ್ಲಿ ಮಾತ್ರ ಆತನಿಗೆ ದಶರಥನ ಒಟ್ಟಾರೆಯ ವ್ಯವಹಾರವೇ ರೇಜಿಗೆ ಹುಟ್ಟಿಸಿದೆ. ಕೈಕೇಯಿಯನ್ನು ಇಕ್ಷಾಕುವಂಶಕ್ಕೇ ಅನರ್ಥಕಾರಿಣಿಯೆಂದು ತಿರಸ್ಕಾರದಿಂದ ಕವಿಹೇಳುತ್ತಾನೆ. ಸೂರ್ಯವಂಶದ ಪುಣ್ಯದ ಕಾರಣದಿಂದ ದಶರಥನಿಗೆ ಕೈಕೇಯಿಯ ಪಾದಗಳು ಸಿಗಲಿಲ್ಲ. ಎನ್ನುತ್ತಾನೆ. ಈ ಭಾಗವನ್ನು ದಶರಥವಿಲಾಪವೆನ್ನುವ ಹೆಸರಿನಿಂದ ಕರೆದರೂ ಇಲ್ಲಿ ಕಾಳಿದಾಸನ ಪ್ರಸಿದ್ಧಕಾವ್ಯ ರಘುವಂಶದ ಅಜವಿಲಾಪ ನೆನಪಿಗೆ ಬರುತ್ತದೆ. ರಘುವಂಶದಲ್ಲಿ ಅಜ ಮತ್ತು ಇಂದುಮತಿ ದಂಪತಿಗಳ ಪ್ರೇಮದ ವಿಷಯ ಪ್ರಸಿದ್ಧ. ದಿವ್ಯಪುಷ್ಪಮಾಲೆಯೊಂದು ಅಜನ ಪತ್ನಿ ಇಂದುಮತಿಯಮೇಲೆ ಬಿದ್ದಾಗ ಅವಳು ಮೃತಳಾಗುತ್ತಾಳೆ. ಆಗ ಅಜ ತನ್ನ ಪತ್ನಿಗಾಗಿ ಮಾಡುವ ದುಃಖವು ಅಜವಿಲಾಪವೆಂದೇ ಪ್ರಸಿದ್ಧಿಯಾಗಿದೆ. ಪತ್ನಿಯ ವಿರಹವನ್ನು ತಾಳಲಾರದೇ ಕುಗ್ಗಿ ಕುಗ್ಗಿ ಸಾಯುವ ಅಜನೂ ಸ್ತ್ರೀ ಕಾರಣದಿಂದ ಸಾಯುತ್ತಾನಾದರೂ ಅದು ಪ್ರೇಮಕಾವ್ಯದ ಉತ್ತುಂಗಗಳಲ್ಲೊಂದೆಂದು ಪರಿಗಳಿಸಲ್ಪಟ್ಟಿದೆ. ಅದರ ವಿರುದ್ಧವಾಗಿ ಅಜನ ಮಗನಾದ ದಶರಥನ ಒದ್ದಾಟವಿದೆ. ಅವನ ವಿಲಾಪಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಯಾರೂ ಬರುವುದಿಲ್ಲ. ಅವನ ವಿಲಾಪಕ್ಕೆ ರಾತ್ರಿಯೇ ಹೆದರಿ ಓಡಿಹೋಯಿತು.

ಬೆಳಗಾದರೂ ದೊರೆ ಗೋಳಾಡುವುದನ್ನು ಬಿಟ್ಟು ರಾಮನನ್ನು ಪಟ್ಟಗಟ್ಟುವ ಯಾವ ಸೂಚನೆಯನ್ನೂ ನೀಡುವುದಿಲ್ಲ. ಎಲ್ಲಿಯಾದರೂ ಬೇರೆಯವರಿಗೆ ತಿಳಿದರೆ ತನ್ನ ಕೆಲಸ ಕೆಟ್ಟಿತೆನ್ನುವ ಚಿಂತೆ ಕೈಕೇಯಿಯಲ್ಲುಂಟಾಯಿತು. ರಾಜನನ್ನು ಧರ್ಮಪರಿಪಾಲನೆಯೆನ್ನುವ ಹಗ್ಗದಲ್ಲಿ ಕಟ್ಟಿಹಾಕಿದ್ದಳು.

ಸತ್ಯಮೇಕಪದಂ ಬ್ರಹ್ಮ ಸತೇ ಧರ್ಮಃ ಪ್ರತಿಷ್ಠಿತಃ
ಸತ್ಯಮೇವಾಕ್ಷಯಾ ವೇದಾಃ ಸತ್ಯೇನೈವಾಪ್ಯತೇ ಪರಮ್ II ಅಯೋ.14-7II

ಸತ್ಯವೆನ್ನುವುದೇ ಬ್ರಹ್ಮವಾಚಕವಾದ ಪ್ರಣವಸ್ವರೂಪವು. ಸತ್ಯದಲ್ಲಿಯೇ ಸಮಸ್ತ ಧರ್ಮಗಳೂ ಅಡಗಿರುವವು. ಕ್ಷಯವೃದ್ಧಿಗಳಿಲ್ಲದ ವೇದಗಳು ಸತ್ಯದ ಸ್ವರೂಪಗಳೇ ಆಗಿವೆ. ಪರಮೋತ್ಕ್ರಷ್ಟವಾದ ಲೋಕಗಳೂ ಸತ್ಯದ ಅವಲಂಬನೆಯಿಂದಲೇ ಲಭಿಸುತ್ತವೆ.

ಸಮಗ್ರವಾದ ಉಪನಿಷತ್ತಿನ ಸಾರವನ್ನು ಸಾರುವ ಈ ಮಾತು ಕೈಕೇಯಿಯಿಂದ ಬೇರೆ ಯಾವ ಸಂದರ್ಭದಲ್ಲಿಯಾದರೂ ಬಂದಿದ್ದರೆ ಆಕೆಯನ್ನು ಗಾರ್ಗಿ, ಲೋಪಾಮುದ್ರಾ ಮೊದಲಾದವರಸಾಲಿಗೆ ಸೇರಿಸಿಬಿಡುತ್ತಿದ್ದರೇನೋ. ಆಕೆಯ ತಂದೆ ಅಶ್ವಪತಿ ವೈಶ್ವಾನರ ವಿದ್ಯೆಯನ್ನು ಉದ್ಧಾಲಕನಿಗೆ ಕಲಿಸಿದ ಕುರಿತು “ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ”. ರಾವಣನೂ ಸಹ ಎಲ್ಲಾ ವೇದಗಳನ್ನು ಓದಿಕೊಂಡಿದ್ದ. ಮೂಲತಃ ಸ್ವಭಾವದಲ್ಲಿ ಸಾತ್ವಿಕ ಗುಣಗಳಿಲ್ಲದಿದ್ದರೆ ಅವೆಲ್ಲವೂ ವ್ಯರ್ಥವಾಗುತ್ತದೆ. ಕೈಕೇಯಿಗಾಗಿರುವುದೂ ಅದೇ. ತನಗೆ ತಿಳಿದಿರುವ ಧರ್ಮಸೂತ್ರಗಳನ್ನು ತನ್ನ ಸ್ವಾಥಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ. ಗಂಗಾನದಿಯೇ ಆದರೂ, ಬಚ್ಚಲುಮನೆಯಿಂದ ಹೊರಬಂದರೆ ಅದನ್ನು ಯಾರೂ ತೀರ್ಥವೆಂದು ಪರಿಗಣಿಸುವುದಿಲ್ಲ. ರಾಜನನ್ನು ಕರೆದೊಯ್ಯಲು ಸುಮಂತ್ರ ಕೈಕೇಯಿಯ ಅರಮನೆಗೆ ಬಂದಾಗ ಎಲ್ಲದರಲ್ಲಿಯೂ ಸೋತ ರಾಜನೇ “ರಾಮನನ್ನು ನೋಡಬೇಕೆಂದಿದ್ದೇನೆ, ಅವನನ್ನಿಲ್ಲಿಗೆ ಕರೆದುಕೊಂಡು ಬಾ” ಎನ್ನುತ್ತಾನೆ. ಆಗಲೆಂದು ಹೊರಟ ಸುಮಂತ್ರನಿಗೆ ಮನಸ್ಸಿನಲ್ಲಿ ಏನೋ ಒಂಡು ಸಂಶಯಕಾಡಿತು. ಸಭೆಗೆಬಂದವ ಅದಾಗಲೇ ಬಂದುಸೇರಿದ್ದ ಅರಸರ ವಿಷಯಗಳನ್ನು ತಿಳಿಸುವ ನೆವಮಾಡಿ ಮತ್ತೊಮ್ಮೆ ಕೈಕೇಯಿಯ ಅಂತಃಪುರಕ್ಕೆ ಬಂದ. ಕೈಕೇಯಿಗೆ ರಾಮನನ್ನು ಗುಪ್ತವಾಗಿ ಅರಣ್ಯಕ್ಕೆ ಕಳುಹಿಸಿ ಭರತನನ್ನು ಪಟ್ಟಾಭಿಷೇಕಕ್ಕೆ ಏರಿಸಬೇಕಿತ್ತು. ಚಾಣಾಕ್ಷಳಾಗಿದ್ದ ಆಕೆಗೆ ಈ ವಿಷಯ ಬಹಿರಂಗಕ್ಕೆ ಬಂದರೆ ಸಾಮಂತರೆಲ್ಲರೂ ತಿರುಗಿಬೀಳುವರು ಎನ್ನುವುದರ ಅರಿವಿತ್ತು. ಅದಕ್ಕಾಗಿಯೇ ಅವಳು ರಾಮ ತನ್ನ ಮನೆಗೇ ಬರಲಿ ಎಂದು ರಾಜನನ್ನು ಒತ್ತಾಯಿಸಿದಳು. ಎರಡನೆಯ ಸಾರಿ ಸುಮಂತ ಬಂದಾಗ ಸ್ವಲ್ಪ ಸಿಟ್ಟಿನಿಂದಲೇ ರಾಮನನ್ನು ಇಲ್ಲಿಗೆ ಕರೆತರಬೇಕು. ಇದು ತನ್ನ ಆಜ್ಞೆ ಎಂದು ಕಠೋರವಾಗಿಯೇ ಹೇಳುತ್ತಾನೆ. “ದಶರಥನ ಮಾತು ಸೋತ ಹೊತ್ತು ಅದು”. ದೊರೆ ಅಸಹಾಯಕನಾಗಿದ್ದ. ತನ್ನೆದುರೇ ತನ್ನ ಪರವಾಗಿ ಕೈಕೇಯಿ ರಾಮನಲ್ಲಿ ತನ್ನ ವರದ ಕುರಿತು ಒಡಂಬರಿಸುತ್ತಿರುವಾಗ ಮೌನವಾಗಿದ್ದ. ನಾಲಿಗೆ ಮಾತನ್ನು ಆಡುವುದು ಬುದ್ಧಿಯಬಲದಿಂದ. ದಶರಥನ ಬುದ್ಧಿಯನ್ನು ಸಂಪೂರ್ಣವಾಗಿ ಕೈಕೇಯಿ ಆಕ್ರಮಿಸಿಕೊಂಡಿದ್ದಳು. ರಾಮನ ಪ್ರಿಯಮಾತೆ ಕೈಕೇಯಿ ರಾಜನ ಪರವಾಗಿ ಆಡುವ ಮಾತಾಗಿದ್ದಳು. ಸಮಯ ಸರಿದಷ್ಟೂ ತನಗೇ ಅಪಾಯವೆಂದು ಅವಳಿಗೆ ಅರಿವಾಗತೊಡಗಿತು. ತಂದೆಯ ನೋಡಲು ಬಂದ ರಾಮ ಆತನ ಚಿಂತೆಗೆ ಕಾರಣವನ್ನು ಕೇಳೆದರೆ ಆತನಲ್ಲಿ ದೊರೆಯ ಮನಸ್ಸಿನಲ್ಲಿರುವುದು ಭರತನು ರಾಜನಾಗುವ ಮತ್ತು ರಾಮನ ಅರಣ್ಯಗಮನದ ವರಗಳನ್ನು ಹೇಳುತ್ತಾಳೆ. ಅಷ್ಟೇ ಅಲ್ಲ,’ “ಎಲ್ಲಿಯವರೆಗೆ ನೀನು ಈ ಅಯೋಧ್ಯೆಯನ್ನು ಬಿಟ್ಟು ಅರಣ್ಯಕ್ಕೆ ಹೋಗುವುದಿಲ್ಲವೋ ಅಲ್ಲಿಯವರೆಗೆ ರಾಜನು ಸ್ನಾನವನ್ನೂ ಮಾಡುವುದಿಲ್ಲ, ಊಟವನ್ನೂ ಮಾಡುವುದಿಲ್ಲ” ಎನ್ನುವ ಮಾತನ್ನು ಹೇಳಿದಾಗ ರಾಮ ಇನ್ನು ತಡಮಾಡುವುದು ಸರಿಯಲ್ಲವೆಂದು ಅರಣ್ಯಕ್ಕೆ ಹೊರಟಕಥೆ ಎಲ್ಲರಿಗೂ ಚಿರಪರಿಚಿತ.

dhavala dharini king dasharatha

ದಶರಥನಿಗೆ ರಾಮನ ಅಗಲುವಿಕೆಯ ದುಃಖಕ್ಕಿಂತ ಆತ ಸುಮಂತ್ರನ ಹತ್ತಿರ ತನ್ನ ತಂದೆ ಮತ್ತು ತಾಯಿಗೆ ಹೇಳುವ ಸಂದೇಶ ಇನ್ನಷ್ಟು ಶೋಕವನ್ನು ಕೊಡುತ್ತದೆ. ರಾಮ ತನ್ನ ತಾಯಿಗೆ ತಾಳ್ಮೆಯಿಂದ ಇರಲು ಹೇಳಿಕಳುಹಿಸುತ್ತಾನೆ. ಹದಿನಾಲ್ಕುವರ್ಷಗಳ ತನಕ ಹೇಗೋ ಭರತನ ಜೊತೆ ಹೊಂದಿಕೊಂಡು ಹೋಗು ಎಂದಿದ್ದ. ಭರತನಿಗೂ ಕೈಕೇಯಿಯಂತೇ ತನ್ನ ತಾಯಯಿಂದರನ್ನು ನೋಡಿಕೊಳ್ಳುವಂತೆ ಕಾಠಿಣ್ಯದಿಂದ ತುಂಬಿದ ಎಚ್ಚರಿಕೆಯ ಸಂದೇಶನ್ನು ಕಳಿಹಿಸುತ್ತಾನೆ. ಕೌಸಲ್ಯಯ ಕುರಿತು ಹೇಳುವಾಗ ರಾಮನ ಕಣ್ಣಲ್ಲಿ ನೀರು ಹರಿಯುತ್ತಿರುವುದನ್ನು ಕಂಡ ಲಕ್ಷ್ಮಣ ಕ್ರುದ್ಧನಾಗಿರುವ ವಿಷಯವನ್ನು ಹೇಳುವಾಗ ಅರಸನಿಗೆ ಕಾಮಮೋಹಿತನಾಗಿದ್ದ ತಾನೇ ಅವಸರದಿಂದ ಕೈಕೇಯಿಯನ್ನು ಓಲೈಸಲು ಹೋದೆ ಅನಿಸುತ್ತದೆ. ರಾಜ ಯಾವ ನಿರ್ಣಯಗಳನ್ನು ಕೈಗೊಳ್ಳುವಾಲೂ ಮೊದಲು ಅಮಾತ್ಯರೊಡನೆ ಸಮಾಲೋಚಿಸಿ ಅವರ ಸಲಹೆಪಡೆದು, ಅದು ಧರ್ಮಸಮ್ಮತವಾಗಿದ್ದರೆ ತನಗೆ ಯುಕ್ತವಾದ ನಿರ್ಣಯವನ್ನು ಕೈಗೊಳ್ಳಬೇಕು. ಇಲ್ಲಿ ಅದೇನನ್ನೂ ಮಾಡದೇ ಇರುವ ಅಪರಾಧೀ ಭಾವ ಕಾಡುತ್ತದೆ. ವನವಾಸಕ್ಕೆ ಹೊರಟ ರಾಮ, ಸೀತಾ ಲಕ್ಷ್ಮಣರು ನಗುತ್ತಲೇ ಹೊರಟರು, ಗುಹನಲ್ಲಿ ಆಲದ ಹಾಲನ್ನು ತರಿಸಿ ತಪಸ್ವಿಗಳಂತೆ ಜಟಾಧಾರಿಯಾದ ವಿಷಯವನ್ನು ಕೇಳಿದ ಕೌಸಲ್ಯೆಯ ಮಾತ್ರಭಾವಕ್ಕೆ ಬಲವಾದ ನೋವನ್ನು ಕೊಡುತ್ತದೆ. ಅನೇಕವರ್ಷಗಳಕಾಲ ಧಶರಥನಿಂದ ಅಲಕ್ಷಕ್ಕೆ ಒಳಗಾದರೂ ಆಕೆ ಅದನ್ನೆಲ್ಲ ಸಹಿಸಿಕೊಂಡು ಮೌನಿಯಾಗಿದ್ದವಳು ಬಲುತೀಕ್ಷ್ಣವಾದ ಮಾತುಗಳಿಂದ ಗಂಡನನ್ನು ನಿಂದಿಸುತ್ತಾಳೆ. ಕೊನೆಯದಾಗಿ “ಮಹರಾಜಾ! ನಿನ್ನ ಈ ದುಶ್ಚರ್ಯೆಯಿಂದಾಗಿ ನಾನು ಮತ್ತು ನನ್ನ ಮಗನು ಮಾತ್ರ ವಿನಾಶ ಹೊಂದಲಿಲ್ಲ. ರಾಮನನ್ನು ಕಾಡಿಗಟ್ಟಿ ರಾಷ್ಟ್ರಸಹಿತವಾದ ರಾಜ್ಯವನ್ನು ಹಾಳುಮಾಡಿದೆ. (ಹತಂ ತ್ವಯಾ ರಾಜ್ಯಮಿದಂ ಸರಾಷ್ಟ್ರಂ ಹತಸ್ತಥಾತ್ಮಾ ಸಹ ಮಂನ್ತ್ರಿಭಿಶ್ಚ) ಮಂತ್ರಿಗಳೊಡನೇ ನೀನೂ ಹಾಳಾದೆ” ಎನ್ನುವ ಕಠೋರಮಾತುಗಳನ್ನಾಡುತ್ತಾಳೆ.

ಅದುತನಕ ಅದುಮಿಟ್ಟುಕೊಂಡ ಅವಮಾನ, ತಿರಸ್ಕಾರಗಳೆಲ್ಲವೂ ಸ್ಪೋಟಗೊಂಡಹೊತ್ತು ಅದು. ಆಕೆಯ ಮಾತುಗಳು ಎಷ್ಟು ತೀಕ್ಷ್ಣವಾಗಿತ್ತೆಂದರೆ ದಶರಥ ಅದನ್ನು ಕೇಳಿದವನೇ ಮೂರ್ಛಿತನಾದ. ಆತನನ್ನು ಉಪಚರಿಸಿದ ಕೌಸಲ್ಯೆ ತಾನು ಹಾಗೇ ಮಾತಾಡಬಾರದಾಗಿತ್ತೆಂದು ದುಃಖಪಡುತ್ತಾಳೆ. ದಶರಥನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಾಳೆ. ಕೌಸಲ್ಯಾ ಮತ್ತು ಸುಮಿತ್ರಾ ಇಬ್ಬರೂ ಸೇರಿ ಗಂಡನ ಶುಶ್ರೂಷೇ ಮಾಡುತ್ತಾ ತಾವೇ ದುಃಖಿಸುತ್ತಲೂ ಇರುತ್ತಾರೆ. ದಶರಥನಿಗೆ ತಾನು ಇಷ್ಟೆಲ್ಲಾ ಒಳ್ಳೆಯ ಕಾರ್ಯವನ್ನು ಮಾಡಿದರೂ ತನಗೆ ಏಕೆ ಹೀಗೆ ಆಯಿತು ಎಂದು ಚಿಂತಿಸುತ್ತಾ ಯಾವುದೋ ಒಂದು ವಿಷಯವನ್ನು ಹೇಳಲೋ ಬೇಡವೋ ಎನ್ನುವಂತೆ ಇದ್ದ. ಆರನೆಯದಿನದ ಅರ್ಧರಾತ್ರಿಯಲ್ಲಿ ಇದ್ದಕ್ಕಿದ್ದಂತೆ ತನ್ನ ಪುತ್ರವಿಯೋಗಕ್ಕೆ ಕಾರಣವಾದ ತನ್ನ ಕರ್ಮಫಲದ ಕುರಿತು ಹೇಳಲು ನಿಶ್ಚಯಿಸಿದ. ಅದು ಎಲ್ಲರಿಗೂ ತಿಳಿದ ಕಥೆಯಾದ ಶ್ರವಣಕುಮಾರನ ಕಥೆ, ರಾಮಾಯಣದಲ್ಲಿ ಶ್ರವಣಕುಮಾರ ಎನ್ನುವ ಹೆಸರಿಲ್ಲ. ಕರಣ ಎಂದು ಆತನ ಹೆಸರು. ಆತನ ತಂದೆ ಓರ್ವ ಋಷಿಯಾಗಿದ್ದ. ಈ ಕಥೆ ಒಂದೇ ರೀತಿಯದಾದರೂ ಕಾಲಾಂತರದಲ್ಲಿ ಬೇರೆ ಬೇರೆ ರಾಮಾಯಣಗಳಲ್ಲಿ ಶ್ರವಣಕುಮಾರ ಎನ್ನುವ ಹೆಸರು ಬಂತು.

ಈ ಘಟನೆ ನಡೆಯುವಾಗ ದಶರಥನಿಗೆ ಪ್ರಾಯದ ಕಾಲ. ಆತ ಶಬ್ದವೇಧಿ ವಿದ್ಯೆಯಲ್ಲಿ ಮಹಾಚತುರ ಎನ್ನುವ ಕೀರ್ತಿ ಹಬ್ಬಿತ್ತು. ಅದನ್ನು ಪ್ರಯೋಗಿಸುವ ಹವ್ಯಾಸ ದೊರೆಗೆ. ಹಾಗಾಗಿ ಕಾಡಿಗೆ ಹೋಗಿ ಬೇಟೆಯಾಡುವ ವ್ಯಸನವನ್ನು ಹಚ್ಚಿಕೊಂಡಿದ್ದ. ಯುವರಾಜನಾಗಿದ್ದ ಆತನಿಗೆ ಆಗಿನ್ನೂ ಮದುವೆಯಾಗಿರಲಿಲ್ಲ (ದೇವ್ಯನೂಢಾ ತ್ವಮಭವೋ ಯುವರಾಜೋ ಭವಾಮ್ಯಹಮ್). ಮಳೆಗಾಲದ ಒಂದು ದಿನ ಬೇಟೆಗೆ ಹೋದಾಗ ಅನೆ ನೀರು ಕುಡಿಯುತ್ತಿರುವ ಸದ್ದು ಕೇಳಿಬಂತು. ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು. ಆತನೇ ಕುರುಡರಾದ ತನ್ನ ತಂದೆಯ ವಿಷಯವನ್ನು ಹೇಳಿ ಅವರಿಗೆ ನೀರನ್ನು ತೆಗೆದುಕೊಂಡು ಹೋಗು ಎಂದು ಕೇಳಿದ. ದಶರಥ ಯೌವನ ಮದದಿಂದ ಅಪರಾಧವನ್ನು ಮಾಡಿದರೂ ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಕುರುಡ ದಂಪತಿಗಳ ಬಳಿಗೆ ಬಂದು ಪ್ರಾಮಾಣಿಕವಾಗಿ ನಡೆದ ಸಂಗತಿಯನ್ನು ಹೇಳಿದ. ಬಾಲಕನ ಶವ ಸಂಸ್ಕಾರವನ್ನು ಅವರ ಹತ್ತಿರವೇ ಮಾಡಿಸಿದ. ಉದ್ಧೇಶಪೂರ್ವಕವಾಗಿ ತನ್ನ ಮಗನನ್ನು ಕೊಲ್ಲದ ಕಾರಣ ದೊರೆಗೆ ಬ್ರಹ್ಮಹತ್ಯಾ ಶಾಪವು ತಟ್ಟದು ಎಂದು ಹೇಳಿದರು. ಸಾಯುವ ಕಾಲದಲ್ಲಿ ತಮಗೆ ಆದ ರೀತಿಯಲ್ಲಿಯೇ ನಿನಗೂ ಪುತ್ರವಿಯೋಗವುಂಟಾಗಲಿ ಎಂದು ಶಾಪವನ್ನಿತ್ತು ಮಗನ ಚಿತೆಯನ್ನು ಏರಿ ದಿವ್ಯ ಶರೀರವನ್ನು ಧರಿಸಿ ಸ್ವರ್ಗಕ್ಕೆ ಹೋದರು.

king dasharatha kaikeyi dhavala dharini column

ರಾಜ ಕಾಲಾಂತರದಲ್ಲಿ ಅದನ್ನೆಲ್ಲ ಮರೆತಿದ್ದ. ಈಗ ರಾಮನ ಅಗಲುವಿಕೆಯೆನ್ನುವದು ಆತನಲ್ಲಿ ಅಪರಾಧೀ ಭಾವವನ್ನು ಮೂಡಿಸಿದೆ. ತನ್ನ ಕೊನೆಯ ದಿನಗಳು ಹತ್ತಿರ ಬಂತು ಎಂದು ದೊರೆಗೆ ಅನಿಸಲು ಸುರುವಾಯಿತು. ಸತ್ಯವಂತನಾದ, ಧರ್ಮಮಾರ್ಗದಲ್ಲಿ ನಡೆದ ತನಗೆ ಈ ಗತಿ ಏಕೆ ಬಂತು ಎಂದು ಚಿಂತಾಮಗ್ನನಾಗಿರುವಾಗ ಅವನಿಗೆ ತಾನೆಸಗಿದ ಈ ದುಷೃತ್ಯ ನೆನಪಿಗೆ ಬಂತು. ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಮುನಿಯ ಶಾಪ ಫಲಿಸುವ ಕಾಲ ಬಂತು ಎಂದು ಕೌಸಲ್ಯೆಗೆ ಹೇಳಿ ಇದಕ್ಕೆ ಕಾರಣ ತನ್ನ ಕರ್ಮಫಲ ಎನ್ನುತ್ತಾನೆ. ಮಾಡಿದ್ದಕ್ಕೆ ತಕ್ಕ ಕರ್ಮಫಲವನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆ ಪುನರ್ಜನ್ಮದಷ್ಟೇ ಪ್ರಾಚೀನವಾದುದು. ತಾನು ಬದುಕಬೇಕೆಮ್ದರೆ ರಾಮ ಬಂದು ತನ್ನನ್ನು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ತಾನು ಬದುಕುವೆ ರಾಘವನ ವಿಷಯದಲ್ಲಿ ಘನತೆಯಿಂದ ತಾನು ನಡೆದುಕೊಳ್ಳಲಿಲ್ಲ ವೆಂದು ನಿರಂತರವಾಗಿ ಶೋಕಿಸುತ್ತಾನೆ. ಇಷ್ಟಾದರೂ ಪಾಯಸದ ಮಹಿಮೆಯಿಂದ ಜನಿಸಿದ ಮಕ್ಕಳು ಎನ್ನುವ ವಿಷಯವೇ ಮರೆತುಹೋಗಿದೆ. ಋಷಿಮುನಿಗಳಿಗೆ ಕಂಡ ರಾಮನ ನಿಜರೂಪದ ಅರಿವು ದಶರಥನಿಗೆ ಆಗಲೇ ಇಲ್ಲ. ಅತನನ್ನು ಸಮಾಧಾನ ಮಾಡುತ್ತಾ ಕೌಸಲ್ಯೆ ಮತ್ತು ಸುಮಿತ್ರೆಯರು ತಮ್ಮ ನಡುವೆ ಮಲಗಿಸಿಕೊಂಡಿದ್ದರು ಆರುದಿನಗಳಿಂದಲೂ ಬಾರದ ನಿದ್ರೆ ಇಬ್ಬರೂ ರಾಣಿಯರಿಗೂ ತಡರಾತ್ರಿ ಬಂತು. ರಾಘವನ ನೆನಪು ಮಾಡುತ್ತಲೇ ಇದ್ದ ರಾಜನನ್ನು ಚಿರನಿದ್ರೆ ಸೆಳೆದುಬಿಟ್ಟಿತು.

ರಘುವಂಶದ ಘನತೆಯ ಚಕ್ರವರ್ತಿಯೆಂದು ಹೆಸರು ಮಾಡಿದ ಯಶೋವಂತನಾದ ದೊರೆ ತನ್ನ ಕರ್ಮ ಫಲವನ್ನು ಅನುಭವಿಸಿ ಕೊನೆಗಾಲವನ್ನು ಕಂಡ. ಯಾವಾತ ತನ್ನ ಕರ್ಮಫಲವನ್ನು ಜೀವಿತಾವಧಿಯಲ್ಲಿ ಅನುಭವಿಸುತ್ತಾನೆಯೋ, ಆ ಕಾರಣದಿಂದ ಅವರು ಪಶ್ಚಾತ್ತಾಪ ಪಡುತ್ತಾರೆಯೋ ಅಂತವರು ಸತ್ತಮೇಲೆ ನರಕದಲ್ಲಿ ಆ ಶಿಕ್ಷೆ ಅನುಭವಿಸುವುದಿಲ್ಲ. ಈ ಎಲ್ಲಾ ಅವಸ್ಥೆಯನ್ನು ಅನುಭವಿಸಿದ ಸೂರ್ಯವಂಶದ ಯಶೋವಂತ ಅರಸನೂ ಸಹ ಸ್ವರ್ಗಕ್ಕೆ ನಡೆದ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Continue Reading

ಬೆಂಗಳೂರು

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Award Ceremony: 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ಡಾ. ಬಿ. ಎಸ್. ಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

VISTARANEWS.COM


on

Award Ceremony
Koo

ಬೆಂಗಳೂರು: ಅ. ನ. ಕೃ. ಪ್ರತಿಷ್ಠಾನ ವತಿಯಿಂದ ಕಾದಂಬರಿ ಸಾರ್ವಭೌಮ ಅ. ನ. ಕೃ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 19ರಂದು ಬೆಳಗ್ಗೆ 10ಗಂಟೆಗೆ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್. ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ಡಾ. ಬಿ. ಎಸ್. ಸ್ವಾಮಿ ಅವರಿಗೆ ಪ್ರದಾನ (Award Ceremony) ಮಾಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರು ರಾಷ್ಟೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾಗಿದ್ದು, ಡಾ. ಬಿ. ಎಸ್. ಸ್ವಾಮಿ ಅವರು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ.

ಪ್ರಜಾವಾಣಿ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, ಲೇಖಕ, ಉಪನ್ಯಾಸಕ ಡಾ. ಬಂಡ್ಲಹಳ್ಳಿ ವಿಜಯಕುಮಾ‌ರ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಇದನ್ನೂ ಓದಿ | ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ಡಾ. ಕೆ.ಆರ್. ಸಂಧ್ಯಾರೆಡ್ಡಿ, ಶಾ.ಮಂ. ಕೃಷ್ಣರಾವ್, ಎಂ. ವೆಂಕಟೇಶ್ ಅವರು ಉಪಸ್ಥಿತರಿರಲಿದ್ದು, ಮಾಜಿ ಅಡ್ವೊಕೇಟ್ ಜನರಲ್ ಹಾಗೂ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅ. ನ. ಕೃ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಗೌತಮ್ ಅ. ನ. ಕೃ, ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿರಲಿದ್ದಾರೆ.

2022ರ ಪ್ರಶಸ್ತಿ ಪುರಸ್ಕೃತರು: ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ

ಆರೂವರೆ ದಶಕಗಳ ಕಾಲ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಮಾಜಕಾರ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಎಸ್. ಆರ್. ರಾಮಸ್ವಾಮಿ ಅವರು (ಜನನ: 29-10-1937) ಕಳೆದ 45 ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆ ಮತ್ತು ‘ರಾಷ್ಟ್ರೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರಾಗಿದ್ದಾರೆ.

ಸುಭಾಷ್‌ಚಂದ್ರ ಬೋಸ್ ಅವರ ಸಮಗ್ರ ಜೀವನಚರಿತ್ರೆ ‘ಕೋಲ್ಮಿಂಚು’ ಜಯಪ್ರಕಾಶ್ ನಾರಾಯಣ್ ವಲ್ಲಭಭಾಯಿ ಪಟೇಲ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಭಗಿನಿ ನಿವೇದಿತಾ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಜೀವನಚರಿತ್ರೆಗಳೂ ಸೇರಿ ಸುಮಾರು 60 ಗ್ರಂಥಗಳನ್ನು ಬರೆದಿದ್ದಾರೆ. ‘ಭಾರತದಲ್ಲಿ ಸಮಾಜಕಾರ್ಯ’, ‘ಸ್ವಾತಂತ್ರ್ಯೋದಯದ ಮೈಲಿಗಲ್ಲುಗಳು’ ಮೊದಲಾದ ಹಲವಾರು ಪ್ರತಿಷ್ಠಿತ ಕೃತಿಗಳಿಗೆ ವಿಸ್ತತ ಸ್ವತಂತ್ರ ಅವಲೋಕನ ಪ್ರಬಂಧಗಳನ್ನು ಬರೆದು ಸಂಪಾದನ ಮಾಡಿದ್ದಾರೆ.

ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮ ಮಾಡಿರುವ ಇವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ ಅರ್ಥಶಾಸ್ತ್ರ ಕ್ಷೇತ್ರದ ಒಂದು ಉನ್ನತ ಕೃತಿಯೆಂದು ಪರಿಗಣಿತವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಅರ್ಥಿಕ ಯೋಜನೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿರುವ ರಾಮಸ್ವಾಮಿಯವರ ‘ಶತಮಾನದ ತಿರುವಿನಲ್ಲಿ ಭಾರತ’ ಸಮಾಜವಿಜ್ಞಾನ ಕ್ಷೇತ್ರದ ಆ ವರ್ಷದ ಶ್ರೇಷ್ಠ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಬ್ರಿಟಿಷ್-ಪೂರ್ವ ಭಾರತದ ಉನ್ನತ ಸ್ಥಿತಿ ಕುರಿತ ಖ್ಯಾತ ಸಂಶೋಧಕ ಧರ್ಮಪಾಲ್ ಅವರ ಕೃತಿಗಳನ್ನು ಇವರು ಕನ್ನಡಕ್ಕೆ ಪರಿಚಯಿಸಿದ್ದಾರೆ. ಸ್ವದೇಶೀ ಚಿಂತನೆಯ ಪ್ರತಿಪಾದಕಗಳಾದ ಇವರ ಹಲವಾರು ಕೃತಿಗಳು ಪಥದರ್ಶಕವೆನಿಸಿವೆ.

ಅನೇಕ ಹಿರಿಯ ಸಾಹಿತಿಗಳ ಒಡನಾಟದಲ್ಲಿದ್ದ ರಾಮಸ್ವಾಮಿಯವರು, ಡಿ.ವಿ.ಗುಂಡಪ್ಪ, ಸೀತಾರಾಮಯ್ಯ, ರಾಕ್ಲಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರಿ, ತಿ. ತಾ. ಶರ್ಮ, ಪಿ. ಕೋದಂಡರಾವ್, ತೋಟಗಾರಿಕೆ ಋಷಿ ಎಂ. ಎಚ್. ಮರಿಗೌಡ ಮೊದಲಾದ ಧೀಮಂತರನ್ನು ಕುರಿತು ಬರೆದ ‘ದೀವಟಿಗೆಗಳು’, ‘ದೀಪ್ತಿಮಂತರು’ ಮತ್ತು ‘ದೀಪ್ತಶೃಂಗಗಳು’ – ಇವು ಅನುಪಮ ವ್ಯಕ್ತಿಚಿತ್ರಮಾಲಿಕೆಗಳಾಗಿವೆ. ಈಗಿನ ಜಗದ್‌ವ್ಯಾಪಿ ತುಮುಲಗಳ ಬೇರುಗಳಿರುವುದು ಎರಡು ಭಿನ್ನ ಜೀವನದೃಷ್ಟಿಗಳಲ್ಲಿ – ಎಂದು ಅವರ ‘ನಾಗರಿಕತೆಗಳ ಸಂಘರ್ಷ’ ಕೃತಿ ಪ್ರತಿಪಾದಿಸಿದೆ. ಅವರ ‘ಕೆಲವು ಇತಿಹಾಸ-ಪರ್ವಗಳು’ ಮತ್ತು ‘ಮರೆಯಬಾರದ ಇತಿಹಾಸಾಧ್ಯಾಯಗಳು’ ಮೈಲಿಗಲ್ಲುಗಳೆಂದು ಅಂಕಿತಗೊಂಡಿರುವ ಕೆಲವು ಇತಿಹಾಸ ಘಟನಾಸರಣಿಗಳ ಪರಾಮರ್ಶನೆಯಾಗಿವೆ. ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ರಾಜಾ ರಾಮಮೋಹನರಾಯ್ ಅವರಿಂದ ಜಯಪ್ರಕಾಶ ನಾರಾಯಣ್ ವರೆಗಿನ ಹತ್ತಾರು ಮಹನೀಯರ ಜೀವಿತಕಥನಗಳು `ನವೋತ್ಥಾನದ ಅಧ್ವರ್ಯುಗಳು’ ಮತ್ತು ‘ಹಲವರು ರಾಷ್ಟ್ರಾರಾಧಕರು’. ರಾಮಸ್ವಾಮಿಯವರ ‘ಕವಳಿಗೆ’ ಮತ್ತು ‘ಸಾಹಿತ್ಯ ಸಾನ್ನಿಹಿತ್ಯ ಉನ್ನತಮಟ್ಟದ ಸಾಹಿತ್ಯ ಪರಾಮರ್ಶಕ ಕೃತಿಗಳಾಗಿವೆ. ರಾಮಸ್ವಾಮಿಯವರು ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ 2000ಕ್ಕೂ ಹೆಚ್ಚು ಅಧ್ಯಯನಪೂರ್ಣ ಲೇಖನಗಳನ್ನು ಬರೆದಿದ್ದಾರೆ.

ಪತ್ರಿಕೋದ್ಯಮ ಸೇವೆಗಾಗಿ 2006ರಲ್ಲಿ ಇವರಿಗೆ ‘ಆರ್ಯಭಟ ಪ್ರಶಸ್ತಿ’ ದೊರೆತಿದೆ. ಸಾಹಿತ್ಯಸೇವೆಗಾಗಿ 2008ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಇವರಿಗೆ ದೊರೆತಿದೆ. 2011ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇವರ ಸುದೀರ್ಘ ಸಾಹಿತ್ಯಸೇವೆಗಾಗಿ ಗೌರವಾರ್ಥ ಡಾಕ್ಟರೇಟ್ ನೀಡಿದೆ. ದೀರ್ಘ ಪತ್ರಿಕೋದ್ಯಮ ಸೇವೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ‘ವರ್ಷದ ಶ್ರೇಷ್ಠ ವ್ಯಕ್ತಿ’ ಸಮ್ಮಾನ ದೊರೆತಿದೆ (2012). ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳ ಜೀವಮಾನ ಸಾಧನೆಗಾಗಿ 2015ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪದವಿಯನ್ನು ಇವರಿಗೆ ನೀಡಲಾಗಿದೆ. ಕರ್ನಾಟಕ ಸರಕಾರವು 2022-23ರ ‘ಪಂಪಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

2023ರ ಪ್ರಶಸ್ತಿ ಪುರಸ್ಕೃತರು : ಡಾ. ಬಿ. ಎಸ್. ಸ್ವಾಮಿ

ಬಿ. ಸಿದ್ಧಲಿಂಗ ಸ್ವಾಮಿಯವರು ಮೂಲತಃ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯವರು. ವಿ. ಬಸವಲಿಂಗಪ್ಪ – ಶಿವನಾಗಮ್ಮ ದಂಪತಿಯ ಸುಪುತ್ರರಾದ ಇವರು ಎಂ. ಎ., ಪಿಎಚ್. ಡಿ. ಪದವೀಧರರು. ಐದು ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಇಪ್ಪತ್ತು ವರ್ಷ ಕಾರ್ಯನಿರ್ವಹಿಸಿ ಅನಂತರ ಗುಲ್ಬರ್ಗ, ಬೆಂಗಳೂರು, ಮಂಗಳೂರು ಬಾನುಲಿಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಹದಿನಾಲ್ಕು ವರ್ಷ ದುಡಿದು ನಿವೃತ್ತರಾದರು.

ಬಾನುಲಿಯ ಸುದೀರ್ಘ ಸೇವೆಯಲ್ಲಿ ಇವರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಪ್ರತಿಭಾವಂತರನ್ನು ಹುಡುಕಿ ಅವರನ್ನು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿ ಜನಾನುರಾಗಿಯಾದರು.
1967ರಲ್ಲಿ ಇವರ ಮೊದಲ ಕವನಸಂಗ್ರಹ ‘ಅಮೃತ’ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಆರು ದಶಕ ಲೇಖನಿಯನ್ನು ಕೆಳಗಿಡದೆ ಒಂದೇ ಸಮನೆ ಬರೆಯುತ್ತ ಸುಮಾರು ನಾಲ್ಕುನೂರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ‘ಕಲಿ ಭಾರತ’, ‘ಅಲ್ಲಮಪ್ರಭು’, ‘ಅಕ್ಕಮಹಾದೇವಿ’, ‘ಬಸವಣ್ಣ’ ಮಹಾಕಾವ್ಯಗಳೂ, ‘ಬೆಂಕಿಯಲ್ಲಿ ಅರಳಿದ ಹೂವು’ ನಂತಹ ಆತ್ಮಕಥನವೂ ಸೇರಿದೆ.

ಇವರ ಸಾಹಿತ್ಯಸೃಷ್ಟಿಗೆ ಯಾವ ಸರಹದ್ದುಗಳೂ ಇಲ್ಲ. ಕಥೆ, ಕಾದಂಬರಿ, ಕವನ, ನಾಟಕ, ರೂಪಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಸಂಪಾದನೆ, ವೈಚಾಲಕ, ಹಾಸ್ಯ, ಜಾನಪದ, ಪ್ರವಾಸಕಥನ, ಜೀವನ ಚರಿತ್ರೆ, ವಚನಸಾಹಿತ್ಯ, ದಾಸಸಾಹಿತ್ಯ, ಮಕ್ಕಳ ಸಾಹಿತ್ಯ, ಬಿಡಿ ಬರೆಹಗಳು – ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದಾರೆ. ಅನೇಕ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳನ್ನು ಬರೆದ ಕೈಗಳಿಂದಲೇ ಜಾನಪದ ಸಾಹಿತ್ಯಚರಿತ್ರೆಯ ಹದಿನೈದು ಸಂಪುಟಗಳು, ಮಲೆ ಮಾದೇಶ್ವರ ಕಾವ್ಯ ಸಂಪಾದನೆ ಮಾಡಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕ್ಷೇತ್ರಕಾರ್ಯ, ಸಂಪಾದನೆ, ವಿಶ್ಲೇಷಣ, ಸಂಗ್ರಹ ಮಾಡಿದ್ದಾರೆ. ಶಿಷ್ಟಸಾಹಿತ್ಯದಲ್ಲಿ ಡಾ. ಸ್ವಾಮಿಯವರ ಕೊಡುಗೆ ಸಣ್ಣದಲ್ಲ. ಕಾಳಿದಾಸನ ಸಾಹಿತ್ಯದ ಕುರಿತು ಬರೆಯಬಲ್ಲ ಡಾ. ಸ್ವಾಮಿಯವರು ಸೂರದಾಸನ ಸಾಹಿತ್ಯದ ಬಗೆಗೂ ಬರೆಯಬಲ್ಲರು. ಹರಿದಾಸ ಪರಂಪರೆಯ ಕುರಿತು ಹಲವು ವರ್ಷ ಸಂಶೋಧನೆ ಮಾಡಿ ಒಂದು ಬೃಹತ್ ಗ್ರಂಥ ಪ್ರಕಟಿಸಿದ್ದಾರೆ. ಅದಕ್ಕಾಗಿ ಅವರು ಊರೂರು ಅಲೆದು ಹಲಕಥಾಕಾರರನ್ನು ಸಂದರ್ಶಿಸಿ, ವಾಚನಾಲಯಗಳಲ್ಲಿ ತಿಂಗಳುಗಟ್ಟಲೆ ಕುಳಿತು ಸಂಶೋಧನೆ ಮಾಡಿದ್ದಾರೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ಇವರ ಸಾಹಿತ್ಯಸೇವೆಯನ್ನು ಗಮನಿಸಿ ಕನ್ನಡಿಗರು ಅವರಿಗೆ ‘ಮಧುವೃತ’ ಎಂಬ ಗೌರವಗ್ರಂಥ ಅರ್ಪಿಸಿದ್ದಾರೆ.
ಇವರ ‘ಕವಿಚಕ್ರೇಶ್ವರ’ ಕಾದಂಬರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ(1974), ‘ಜಾನಪದ ಕಥಾಸಂಗಮ’ಕ್ಕೆ ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯ ಬಹುಮಾನ(1987), ‘ಮಹಾಜ್ಯೋತಿ ಮಾದೇಶ್ವರ’ ಕೃತಿಗೆ ಮುದ್ದಣ- ರತ್ನಾಕರವರ್ಣಿ ಪ್ರಶಸ್ತಿ, ‘ಜಾನಪದ ಸೌರಭ’, ಅಕ್ಕಮ್ಮ ಗಿರಿಗೌಡ ರುದ್ರಪ್ಪ ಪ್ರಶಸ್ತಿ (1996), ‘ತುಳುನಾಡ ಐಸಿರಿ’ಗೆ ಗೊರೂರು ಪ್ರತಿಷ್ಠಾನದ ಪ್ರಶಸ್ತಿ (1997), ಕದಂಬೋತ್ಸವದಲ್ಲಿ ಅಭಿನಂದನೆ(1998), ‘ಸಮಗ್ರ ನಾಟಕಗಳು’ಗೆ ಆರ್ಯಭಟ ಪ್ರಶಸ್ತಿ, ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ(2002), ‘ನಾಟಕ ರೂಪಕ’ ಕೃತಿಗೆ ಅತ್ತಿಮಬ್ಬೆ ಸಾಹಿತ್ಯಪ್ರತಿಷ್ಠಾನದ ಪ್ರಶಸ್ತಿ, ‘ಜಾನಪದಶ್ರೀ’ಗೆ ಕರ್ನಾಟಕ ಜಾನಪದ ಅಕಾಡೆಮಿ ಬಹುಮಾನ, ಇಂಥ ಅನೇಕ ಸಂಘಸಂಸ್ಥೆಗಳ ಬಹುಮಾನಗಳು, ಪ್ರಶಸ್ತಿಗಳು ಇವರಿಗೆ ಸಂದಿವೆ.

Continue Reading
Advertisement
Thailand Open 2024
ಬ್ಯಾಡ್ಮಿಂಟನ್1 min ago

Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ

Prajwal Revanna Case
ಕರ್ನಾಟಕ5 mins ago

Prajwal Revanna Case: ಪೆನ್‌ಡ್ರೈವ್‌ ಕೇಸ್‌ಗೆ ಟ್ವಿಸ್ಟ್;‌ ದೇವರಾಜೇಗೌಡ, ಡಿಕೆಶಿ ಆಡಿಯೊ ಬಯಲು, ಇಲ್ಲಿದೆ ಸ್ಫೋಟಕ ಮಾಹಿತಿ

Money Guide
ಮನಿ-ಗೈಡ್14 mins ago

Money Guide: ಪ್ಯಾನ್‌ ಕಾರ್ಡ್‌ ಇಲ್ಲದೆಯೂ ಸಿಬಿಲ್‌ ಸ್ಕೋರ್‌ ಪರಿಶೀಲಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

Road Accident
ಕ್ರೈಂ18 mins ago

Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ

Janhvi Kapoor felt sexualised at the age of 12
ಬಾಲಿವುಡ್24 mins ago

Janhvi Kapoor: 12ನೇ ವಯಸ್ಸಿನಲ್ಲಿಯೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೊ ಅಪ್‌ಲೋಡ್‌ ಆಗಿತ್ತು ಎಂದ ಶ್ರೀದೇವಿ ಮಗಳು!

Kundapur News
ಕರ್ನಾಟಕ32 mins ago

Kundapur News: ಅನಾರೋಗ್ಯದಿಂದ ತಾಯಿ ಸಾವು, ಶವದ ಜತೆ 4 ದಿನ ಕಳೆದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು!

RCB vs CSK
ಕ್ರಿಕೆಟ್45 mins ago

RCB vs CSK: ಧೋನಿ ವರ್ತನೆಗೆ ‘ಇಟ್‌ ಹರ್ಟ್ಸ್‌​’ ಎಂದ ಆರ್​ಸಿಬಿ ಅಭಿಮಾನಿಗಳು; ಧೋನಿ ಮಾಡಿದ ತಪ್ಪೇನು?

Congress Manifesto
ದೇಶ46 mins ago

Congress Manifesto: ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಅಪಪ್ರಚಾರ; ವ್ಯಕ್ತಿ ಅರೆಸ್ಟ್‌-ಬಿಜೆಪಿ ಕಿಡಿ

Prajwal Revanna Case
ಕರ್ನಾಟಕ58 mins ago

Prajwal Revanna Case: ಡಿಕೆಶಿ 100 ಕೋಟಿ ರೂ. ಆಫರ್;‌ ಬೆಂಕಿ ಇಲ್ಲದೆ ಹೊಗೆಯಾಡಲ್ಲ ಎಂದ ಆರ್.‌ ಅಶೋಕ್

Karnataka Rain
ಮಳೆ1 hour ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌