ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ - Vistara News

ಪ್ರಮುಖ ಸುದ್ದಿ

ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ

ಧವಳ ಧಾರಿಣಿ ಅಂಕಣ: ಮಹಾಪುರುಷನಾದ ಶ್ರೀರಾಮನಿಗೆ ಜನ್ಮವನ್ನು ಕೊಟ್ಟ ದಶರಥನೂ ಸಹ ಸಾಕಷ್ಟು ಘನತೆವೆತ್ತ ವ್ಯಕ್ತಿತ್ವದವನೇ ಆಗಿದ್ದ. ಇದನ್ನು ರಾಮಾಯಣದ ಪ್ರಾರಂಭದಲ್ಲಿಯೇ ವಾಲ್ಮೀಕಿ ವಿವರಿಸುತ್ತಾರೆ.

VISTARANEWS.COM


on

king dasharatha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಹಾಕಾವ್ಯದ ಮರೆಯಲ್ಲಿರುವ ಬಹುರೂಪಿ

dhavala dharini by Narayana yaji

ತಸ್ಯಾಂ ಪುರ್ಯಾಮಯೋಧ್ಯಾಯಾಂ ವೇದವಿತ್ಸರ್ವಸಙ್ಗ್ರಹಃ
ದೀರ್ಘದರ್ಶೀ ಮಹಾತೇಜಾಃ ಪೌರಜಾನಪದಪ್ರಿಯಃ ৷৷ಬಾ.ಕಾಂ.1৷৷

ಸಮಸ್ತ ವೇದವನ್ನು ಸಾಂಗವಾಗಿ ತಿಳಿದ ಧಶರಥನು (King Dasharatha) ಆ ಅಯೋಧ್ಯಾಪುರವನ್ನು (Ayodhya) ಆಳುತ್ತಿದ್ದನು. ಆತನು ಸರ್ವಜ್ಞನು. ಮುಂದೇನಾಗಬಹುದೆನ್ನುವುದನ್ನು ಇಂದೇ ಗ್ರಹಿಸಬಲ್ಲ ದೀರ್ಘದರ್ಶಿಯಾಗಿದ್ದನು. ಮಹಾತೇಜಸ್ವಿಯೂ ಪ್ರತಾಪಿಯೂ ಆಗಿದ್ದನು. ನಗರ ಮತ್ತು ಗ್ರಾಮಗಳ ಜನಪದರಿಗೆ ಅತಿಪ್ರಿಯನಾದ ರಾಜನಾಗಿದ್ದನು.

ಅಯೋಧ್ಯೆಯನ್ನು ಅರವತ್ತು ಸಾವಿರ ವರ್ಷಗಳ ಕಾಲ ಆಳಿದ ದಶರಥ ಮಹಾರಾಜನ ಕುರಿತು “ಓರ್ವ ತಿಕ್ಕಲು ದೊರೆಯಾಗಿದ್ದ, ತನ್ನ ಹೆಂಡತಿಯರಿಗೆ ಹೆದರಿದ್ದ, ಶತ್ರುಗಳಿಗೆ ಹೆದರುವ ಪುಕ್ಕಲನಾಗಿದ್ದ, ವಿಪರೀತ ಪುತ್ರಮೋಹಕ್ಕೊಳಗಾಗಿದ್ದ” ಎನ್ನುವ ಭಾವವೇ ಜನಜನಿತವಾಗಿವೆ. ರಾಮಾಯಣವೆಂದರೆ ಕೇವಲ ರಾಮನ ಕಥೆಯೆಂದು ಗ್ರಹಿಸಿದಾಗ ಇಂತಹ ವಿಪರೀತ ಅಭಿಪ್ರಾಯಕ್ಕೆ ಬರುವುದು ಸಹಜವೂ ಹೌದು. ಸ್ವಂತ ಅಸ್ತಿತ್ವವೇ ಇಲ್ಲದವನಂತೆ ಮತ್ತು ದುಃಖದಿಂದ ಕೊರಗಿ ಅಸುನೀಗುವ ದಶರಥನ ಮೇಲೆ ಅನುಕಂಪಕ್ಕಿಂತ ಇಂಥವನ ಕಾರಣದಿಂದಲೇ ರಾಮ ವನವಾಸಕ್ಕೆ ಹೋಗುವಂತಾಯಿತು ಎಂದು ತಿರಸ್ಕಾರಗೊಳ್ಳುವ ರೀತಿಯಲ್ಲಿ ಆತನ ಪಾತ್ರ ಚಿತ್ರಿತವಾಗಿದೆ. ಆತನ ಪಾತ್ರವೂ ಸಹ ಬಾಲಕಾಂಡ ಮತ್ತು ಅಯೋಧ್ಯಾ ಕಾಂಡಗಳಲ್ಲಿ ಮುಗಿದು ಹೋಗಿಬಿಡುತ್ತದೆ.

ಮುಂದೆ ಯುದ್ಧಕಾಂಡದಲ್ಲಿ ದೇವತೆಗಳ ಮತ್ತು ಬ್ರಹ್ಮನ ಸಂಗಡ ಆತ ಸಶರೀರನಾಗಿ ಬರುವಾಗ ಆತ ಇಂದ್ರನಿಗೆ ಸಮನಾದ ಪದವಿ ಮತ್ತು ಗೌರವದೊಂದಿಗೆ ದೇವರಥದಲ್ಲಿ ಗಮನಿಸಬಹುದು. ಅದು ಆತ ಕೇವಲ ರಾಮನ ತಂದೆಯಾಗಿರುವುದಕ್ಕೆ ಮಾತ್ರವೋ ಹೇಗೆ ಎನ್ನುವ ಸಂಶಯವೂ ಕಾಡಿದರೆ ಅದು ಸಹಜ. ಸುಮಾರು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳ ಏಳು ಕಾಂಡಗಳ ಮಹಾಕಾವ್ಯವು ಇಡಿಯಾಗಿ ಜನಸಾಮಾನ್ಯರಿಗೆ ಸಿಗುವುದು ಅಷ್ಟು ಸುಲಭವಲ್ಲ. ಹೆಚ್ಚಿನವರಿಗೆ ಅದನ್ನು ಕೇಳುವ ವ್ಯವಧಾನ ಮತ್ತು ಸಮಯವೂ ಇಲ್ಲ. ಮಹಾಕಾವ್ಯದ ವಸ್ತುಗಳನ್ನು ನಾಟಕವನ್ನಾಗಿಸಿ ಅದರಲ್ಲಿ ಬರುವ ವಿಷಯವನ್ನು ಖಂಡ ಖಂಡವನ್ನಾಗಿಸಿ (ವಿಭಾಗಿಸಿ) ಮೊದಲು ಕೊಟ್ಟಿರುವುದು ಪ್ರಾಚೀನ ಸಂಸ್ಕೃತ ನಾಟಕಗಳು ಹಾಗೂ ಯಕ್ಷಗಾನ, ಕೂಚಿಪುಡಿ ಮತ್ತು ಚಾರಣರು ಆಡಿ ತೋರಿಸಿದ ಪ್ರದರ್ಶನಕಲೆಗಳು. ಯಕ್ಷಗಾನದಲ್ಲಿ ಒಂದೊಂದು ಸನ್ನಿವೇಶವನಾಗಿ ಕೊಟ್ಟಿರುವ ಕಥಾಭಾಗವನ್ನು ಪ್ರಸಂಗವೆಂದು ನಿರೂಪಿಸಲ್ಪಟ್ಟಿದೆ.

ಮಹಾಕಾವ್ಯವೊಂದು ರೂಪುಗೊಳ್ಳಬೇಕಾದರೆ ಅದರಲ್ಲಿ ಅನೇಕ ಲಕ್ಷಣಗಳಿರಬೇಕಾಗುತ್ತದೆ. ಕಾವ್ಯಗಳೆಲ್ಲವೂ ರೂಪುಗೊಂಡಿರುವುದರ ಹಿಂದೆ ಶಾಸ್ತ್ರ ಅಂದರೆ ವಿಧಿ, ನಿಷೇಧದ ರಿವಾಜಿದೆ. ಶಾಸ್ತ್ರವೆಂದರೆ ಧರ್ಮ, ಅರ್ಥ ಕಾಮ ಮೋಕ್ಷಗಳೆನ್ನುವ ಪುರುಷಾರ್ಥವನ್ನು ಮುಖ್ಯವಾಗಿ ಬೋಧಿಸುವ ಗ್ರಂಥ. ಇದು ಉಪದೇಶ ರೂಪದಲ್ಲಿ ಇರುತ್ತದೆ. ʼವಿಷ್ಣು ಧರ್ಮೋತ್ತರ ಪುರಾಣʼ ಶಾಸ್ತ್ರ ಮತ್ತು ಕಾವ್ಯದ ಕುರಿತು ವಿವರಿಸುವುದು ಹೀಗೆ –

ಮೋಕ್ಷಸ್ಯ ಯತ್ರೋಪನ್ಯಾಸಃ ಇತಿಹಾಸ ಸ ಉಚ್ಯತೇ
ತದೇವ ಕಾವ್ಯಮಿತ್ಯುಕ್ತಂ ಚೋಪದೇಶಂ ವಿನಾ ಕೃತಂ

ಮೋಕ್ಷವೆಂಬ ಪುರುಷಾರ್ಥವನ್ನೇ ಮುಖ್ಯವಾಗಿ ಬೋಧಿಸುವ ಗ್ರಂಥಕ್ಕೆ ಇತಿಹಾಸವೆಂದು ಹೆಸರು. ಅಂತಹ ಗ್ರಂಥವೇ ಉಪದೇಶರೂಪದಲ್ಲಿರದೇ ಒಬ್ಬಾನೊಬ್ಬ ಮಹಾಪುರುಷನ ಚರಿತ್ರೆಯಾಗಿದ್ದಲ್ಲಿ ಅದು ಕಾವ್ಯವೆಂದು ಹೇಳಲ್ಪಡುತ್ತಾರೆ.

ಮಹಾಕಾವ್ಯವಾಗಬೇಕಾದರೆ ಅಲ್ಲಿ ನಾಯಕ ಮತ್ತು ಪ್ರತಿನಾಯಕನ ಗುಣಗಳ ವಿಸ್ತ್ರತ ವಿವರಗಳಿರಬೇಕು. ಪ್ರಯಾಣ ಸನ್ನದ್ಧನಾದ ಪುರುಷನ ಮತ್ತು ದೂತಪ್ರೇಷಣಾದಿಗಳ ಹಾಗೂ ಯುದ್ಧವೃತ್ತಾಂತದ ವರ್ಣನೆಗಳೆಲ್ಲವನ್ನು ಒಳಗೊಂಡಿರಬೇಕು. ನಾಯಕನ ಅಭ್ಯುದಯದಿಂದ ಕೂಡಿರಬೇಕು. ನಾಯಕ ಸನ್ಮಾರ್ಗಗಾಮಿಯಾಗಿಯೂ ಧರ್ಮವಿಜಯಿಯಾಗಿಯೂ ಇರಬೇಕು. ಹಾಗೇ ಪ್ರತಿನಾಯಕನೂ ಸಹ ಜಗದ್ವಿಜಯಿಯೇ ಆಗಿರಬೇಕು. ದೇಶ, ಪಟ್ಟಣ, ರಾಜರು, ಋತುಗಳು, ಅಗ್ನಿ, ನದಿಗಳು, ಸ್ತ್ರೀಯರು ಇವೆಲ್ಲವೂ ವಿವರಿಸಲ್ಪಟ್ಟಿರಬೇಕು. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭೀಭತ್ಸ, ಅದ್ಭುತ ಮತ್ತು ಶಾಂತವೆನ್ನುವ ನವರಸಗಳಿಂದ ಶೋಭಿಸಬೇಕು. ಭರತನ ನಾಟ್ಯ ಶಾಸ್ತ್ರಕ್ಕಿಂತಲೂ ಮೊದಲೇ ರಚಿತವಾಗಿದೆಯೆಂದು ನಂಬಲಾಗಿರುವ “ವಿಷ್ಣು ಧರ್ಮೋತ್ತರ ಪುರಾಣದಲ್ಲಿ” ಶಾಸ್ತ್ರ, ಮಹಾಕಾವ್ಯ ಮತ್ತು ನಾಟಕಗಳ ಲಕ್ಷಣಗಳನ್ನು ಹೀಗೆ ಸ್ಪಷ್ಟವಾಗಿ ವಿಭಾಗಿಸಿ ಹೇಳಿದೆ.

ಮಹಾಕಾವ್ಯ ಲಕ್ಷಣಕ್ಕೆ ಅನುಗುಣವಾಗಿ ವಾಲ್ಮೀಕಿ ರಾಮಾಯಣವನ್ನು ರಚಿಸಿರುವುದನ್ನು ಗಮನಿಸಿದರೆ ಆತನ ಕಾಲದಲ್ಲಿಯೇ ಕಾವ್ಯಲಕ್ಷಣಗಳು ಪ್ರಚಲಿತದಲ್ಲಿ ಇತ್ತು ಎನ್ನಬಹುದಾಗಿದೆ. ಅಥವಾ ಅದನ್ನು ಆಧಾರವನ್ನಾಗಿರಿಸಿಕೊಂಡು ನಾಟ್ಯಶಾಸ್ತ್ರವನ್ನು ರಚಿಸಿದ್ದಾರೆನ್ನುವ ದುರ್ಬಲವಾದ ವಾದವನ್ನೂ ಕೆಲ ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಅದೇನೆ ಇರಲಿ, ನಾಯಕನ ಚರಿತ್ರೆಯನ್ನು ಹೇಳುವ ಮಹಾಕಾವ್ಯದಲ್ಲಿ ಎಲ್ಲಾ ಪಾತ್ರಗಳೂ ನಾಯಕನ ಗುಣಗಳ ನೆರಳಿನಲ್ಲಿ ಬೆಳೆಯುತ್ತವೆ. ಪೋಷಕ ಪಾತ್ರಗಳ ಗುಣಗಳು ನಾಯಕನನ್ನು ಮೀರಿ ಹೋಗದಂತೆ ಎಚ್ಚರದಿಂದ ಪಾತ್ರವನ್ನು ಹೆಣೆಯಲಾಗುತ್ತದೆ. ಇದಕ್ಕೆ ರಾಜಾ ದಶರಥನ ಪಾತ್ರವೂ ಹೊರತಲ್ಲ. ಮಹಾವಿಷ್ಣು ಸಹಿತವಾಗಿ ದೇವತೆಗಳು ತಮ್ಮ ಅವತಾರಕ್ಕೆ ಕೇಂದ್ರವನ್ನಾಗಿ ಅಯೋಧ್ಯೆಯನ್ನು ಆರಿಸಿಕೊಂಡಾಗ ಅಲ್ಲಿನ ಚಕ್ರವರ್ತಿಯೂ ಘನತೆಯಿಂದಲೇ ಕೂಡಿರಬೇಕಾಗುತ್ತದೆ. ಕೇವಲ ಅಶ್ವಮೇಧ ಯಾಗ ಮತ್ತು ಪುತ್ರಕಾಮೇಷ್ಟಿ ಯಾಗದ ಮೂಲಕ ಅವತಾರಿ ಪುರುಷನಿಗೆ ಕ್ಷೇತ್ರವಾಗಲು ಸಾಧ್ಯವಿಲ್ಲ.

ayodhya

ರಾಮಾಯಣದ ಮೂಲತಃ ಮಾನವ ಸಂಬಂಧಗಳ ಗುಣಗಳನ್ನು ಮೈಗೂಡಿಸಿಕೊಂಡ ಕಾವ್ಯ. ಪ್ರತೀ ಪಾತ್ರದಲ್ಲಿಯೂ ಗುಣ, ದೋಷ ಎರಡೂ ಇವೆ. ರಾಮ ಆದರ್ಶ ಪುರುಷ ಹೇಗೋ ಅದೇ ರೀತಿ ತನ್ನ ನಿಷ್ಠುರ ನಡವಳಿಕೆಯ ಮೂಲಕ ತನ್ನನ್ನು ನೆಚ್ಚಿಕೊಂಡ ಪಾತ್ರಗಳಿಗೆ ನೋವನ್ನು ಅದೇ ಪ್ರಮಾಣದಲ್ಲಿ ಕೊಟ್ಟಂತವನೂ ಹೌದು. ಇದನ್ನು ದಶರಥನಿಂದ ಪ್ರಾರಂಭಿಸಿ ಕೊನೆಗೆ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವವವರೆಗೆ ನಿರಂತರವಾಗಿ ಗಮನಿಸಬಹುದಾಗಿದೆ. ಅದಕ್ಕೆ ಕಾರಣಗಳನ್ನು ಹುಡುಕಿ ರಾಮನ ಆದರ್ಶವನ್ನು ಲೋಕಕ್ಕೆ ವಿಮರ್ಶಕರು ಕೊಟ್ಟಿದ್ದಾರೆ ಎನ್ನುವುದೂ ಸಹ ಅಷ್ಟೇ ಗಮನಾರ್ಹ. ಮನುಷ್ಯರಲ್ಲಿ ಪರಿಪೂರ್ಣನಾದ ವ್ಯಕ್ತಿಗಳು ಇದ್ದಾರೆಯೋ ಎನ್ನುವ ವಾಲ್ಮೀಕಿಯ ಸಂಶಯಕ್ಕೆ (ಕೋ ನ್ವಸ್ಮಿನ್ಸಾಂಪ್ರತಂ ಲೋಕೇ ಗುಣವಾನ್ಕಶ್ಚ ವೀರ್ಯವಾನ್) ನಾರದರು ಆತನ ಹದಿನಾರು ಗುಣಗಳನ್ನು ವರ್ಣಿಸಿ ರಾಮಾಯಣ ಕಥೆಯನ್ನು ಹೇಳಿರುವ ವಿಷಯವನ್ನು ಈ ಹಿಂದೆಯೇ ಪ್ರಸ್ತಾಪಿಸಿಯಾಗಿದೆ. ಇಂತಹ ಮಹಾಪುರುಷನಿಗೆ ಜನ್ಮವನ್ನು ಕೊಟ್ಟ ದಶರಥನೂ ಸಹ ಸಾಮಾನ್ಯರ ತಿಳುವಳಿಕೆಯಂತೆ ಅಳುಮುಂಜಿಯಾಗಿರದೇ, ಸಾಕಷ್ಟು ಘನವೆತ್ತ ವ್ಯಕ್ತಿತ್ವದವನೇ ಆಗಿದ್ದ ಎನ್ನುವುದನ್ನು ರಾಮಾಯಣದ ಪ್ರಾರಂಭದಲ್ಲಿಯೇ ವಾಲ್ಮೀಕಿ ವಿವರಿಸುತ್ತಾರೆ.

ದಶರಥನಲ್ಲಿರುವ ಮೊದಲ ಗುಣವೇ ಆತ ವೇದವಿತ್ ಎನ್ನುವುದರ ಮೂಲಕವಾಗಿ. ವೇದ್ ಎನ್ನುವುದು ಜ್ಞಾನಿ ಎನ್ನುವ ಅರ್ಥದಲ್ಲಿಯೂ ಬಳಸಲಾಗುತ್ತಿದೆ. 2. ಸರ್ವಜ್ಞನಾಗಿದ್ದನು, 3. ಮುಂದೆ ಬರಬಹುದಾದ ವಿಪ್ಪತ್ತನ್ನು ಗ್ರಹಿಸಿ ಅದಕ್ಕೆ ತಕ್ಕ ಪರಿಹಾರವನ್ನು ಮೊದಲೇ ಕೈಗೊಳ್ಳುತ್ತಿದ್ದನು. (Pro Active), 4, ಮಹಾತೇಜಸ್ವಿಯು, 5, ಪೌರಜಾನಪದಪ್ರಿಯ – ಆತ ನಗರವಾಸಿ ಮತ್ತು ಗ್ರಾಮವಾಸಿಗಳಿಗೂ ಪ್ರೀತಿಪಾತ್ರ ದೊರೆಯಾಗಿದ್ದನು. ಆತನ ಮಿತ್ರರಲ್ಲಿ ಕೇವಲ ಕ್ಷತ್ರಿಯರು ಮಾತ್ರ ಇರದೇ ಗುಹನಂತಹ ಬೇಡರು, ಜಟಾಯು, ಸಂಪಾತಿಯಂತಹ ಪಕ್ಷಿಗಳೂ ಸಹ ಸೇರಿದ್ದರು. ಎಲ್ಲರನ್ನೂ ಸಮಭಾವ ಸಮಚಿತ್ತದಿಂದ ಆದರಿಸುವ ದೊರೆ ಆತ ಆಗಿದ್ದನು. 6. ಇಕ್ಷ್ವಾಕುವಂಶವೆಂದರೆ ಆ ಕಾಲದ ಶ್ರೇಷ್ಠ ವಂಶವಾಗಿತ್ತು. ಮನುವಿನಿಂದ ದಶರಥನ ವರೆಗೆ ಸುಮಾರು ಎಪ್ಪತ್ತು ರಾಜರುಗಳು ಈ ವಂಶವನ್ನು ಆಳಿಹೋಗಿದ್ದರು. ಈ ಸಂಖ್ಯೆ ನಿಖರವಲ್ಲ, ವಿವಿಧ ರಾಮಾಯಣದಲ್ಲಿ ಅನೇಕ ವಿಧಗಳಲ್ಲಿ ವಿವರಿಸಲಾಗಿದೆ. ಆದರೂ ಬಲು ದೀರ್ಘವಾದ ಶೂರರ ಪರಂಪರೆಯನ್ನು ಈ ವಂಶ ಹೊಂದಿತ್ತು. ಅಂತಹ ಇಕ್ಷಾಕುಗಳಲ್ಲಿಯೇ ಅತಿರಥನೆನ್ನುವ ಖ್ಯಾತಿಯನ್ನು ಧಶರಥ ಹೊಂದಿದ್ದನು. ಹತ್ತುಸಾವಿರ ಮಹಾರಥಿಗಳನ್ನು ಏಕಾಂಗಿಯಾಗಿ ಎದುರಿಸುವ ಸಾಮರ್ಥ್ಯ ಆತನಿಗಿತ್ತು. 7. ಲೋಕದಲ್ಲಿ ಶ್ರೇಷ್ಠವೆನಿಸಿದ ಯಾಗಗಳನ್ನೆಲ್ಲವನ್ನೂ ದಶರಥ ನೆರವೇರಿಸಿದ್ದನು. ರಾಜಸೂಯ ಯಾಗವನ್ನೂ ಮಾಡಿದ್ದ ಎನ್ನುವುದನ್ನು ಸೀತೆ ಚಿತ್ರಕೂಟದಲ್ಲಿ ದಶರಥನ ಗುಣಗಳನ್ನು ನೆನೆದು ದುಃಖಿಸುವಾಗ ಹೇಳುತ್ತಾಳೆ. 8. ಆತ ಧರ್ಮರಥ ಅಂದರೆ ಸದಾ ಕಾಲ ಧರ್ಮದಲ್ಲಿ ತನ್ನ ಬುದ್ಧಿಯನ್ನು ಸ್ಥಿರವಾಗಿ ಇಟ್ಟವನಾಗಿದ್ದನು, 9. ದಕ್ಷ ಆಡಳಿತದ ಮೂಲಕ ಪ್ರಜೆಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದನು. ಪ್ರಜೆಗಳಿಗೆ ಅನುಕೂಲವಾಗುವಂತೆ ಕೆರೆ, ಬಾವಿಗಳನ್ನು ತೋಡಿಸಿದ ಪ್ರಜಾನುರಾಗಿ ದೊರೆಯಾಗಿದ್ದನು. 10. ಕ್ಷತ್ರಿಯ ಧರ್ಮಗಳನ್ನು ನುರಿತವನಾದರೂ ಧರ್ಮದ ವಿಷಯದಲ್ಲಿ ಮಹರ್ಷಿಗಳಿಗೆ ಸಮನಾಗಿದ್ದನು. ಮಹರ್ಷಿಕಲ್ಪನೆನ್ನುವ ಗೌರವಕ್ಕೆ ಪಾತ್ರನಾಗಿದ್ದನು. 11. ಆತ್ಮಬಲ, ತೇಜೋ ಬಲ ಮತ್ತು ಜ್ಞಾನಬಲವುಳ್ಳವನಾಗಿದ್ದನು. ಈ ಕಾರಣಕ್ಕೆ ಮೂರು ಲೋಕದಲ್ಲಿಯೂ ಕೀರ್ತಿಯನ್ನು ಗಳಿಸಿಕೊಂಡಿದ್ದನು. ಶತ್ರುಗಳನ್ನು ನಿಗ್ರಹಮಾಡುವ ಆತನ ಸಾಮರ್ಥ್ಯದ ಕಾರಣದಿಂದ ಆತನನ್ನು ನಿಹತಾಮಿತ್ರನೆಂದು ಕರೆಯುತ್ತಾರೆ. ಸದ್ವಂಶದಲ್ಲಿ ಜನಿಸಿದವರನ್ನು ಮತ್ತು ಸುಗುಣ ಸಂಪನ್ನರನ್ನು ತನ್ನ ಸ್ನೇಹಿತರನಾಗಿಸಿಕೊಳ್ಳುವುದರಲ್ಲಿ ಹಿಂದೆ ಮುಂದೆ ನೋಡುತ್ತಿರಲಿಲ್ಲ. 12. ಮನುಷ್ಯರು ಪಾಲಿಸಬೇಕಾದ ದೇವಋಣ, ಪಿತೃ ಋಣ, ಋಷಿ ಋಣಗಳೆನ್ನುವ ಮೂರು ಋಣಗಳ ಜೊತೆಗೆ ಕ್ಷತ್ರಿಯರು ಪಾಲಿಸಬೇಕಾದ ವಿಪ್ರಋಣ ಮತ್ತು (ಬ್ರಾಹ್ಮಣರಿಗೆ ದಾನಧರ್ಮಮಾಡುವ ಮೂಲಕ) ಅತ್ಮಋಣ – ವಿಹತವಾದ ಸುಖಭೋಗಗಳನ್ನು ಅನುಭವಿಸುವುದು ಇವುಗಳನ್ನು ಆತ ಸದಾಕಾಲದಲ್ಲಿಯೂ ಪಾಲಿಸುತ್ತಿದ್ದನು. 13. ಧನ ಮತ್ತು ಅನರ್ಘ್ಯವಾದ ವಸ್ತುಗಳ ಸಂಗ್ರಹಣೆಯಲ್ಲಿ ಆತ ಕುಬೇರ ಮತ್ತು ಇಂದ್ರನಿಗೆ ಸಮನಾದ ದೊರೆಯೆನಿಸಿದ್ದನು. 14. ಹಿಂದೆ ವೈವಸ್ವತ ಮನುವು ಮಹಾ ತೇಜಸ್ಸಿನಿಂದ ಕೂಡಿದವನಾಗಿ ಲೋಕವನ್ನು ಹೇಗೆ ರಕ್ಷಣೆಯನ್ನು ಮಾಡುತ್ತಿದ್ದನೋ ಅದೇ ರೀತಿಯಲ್ಲಿ ಮಾನವಕುಲಾವತಂಸನಾದ ದಶರಥನೂ ಅಯೋಧ್ಯೆಯಲ್ಲಿ ಸತ್ಯವ್ರತನಾಗಿ ಧರ್ಮಾರ್ಥಕಾಮಗಳೆಂಬ ಪುರುಷಾರ್ಥವನ್ನು ಅನುಸರಿಸುತ್ತಾ ಅಮರಾವತಿಯನ್ನು ಪಾಲನೆ ಮಾಡುತ್ತಿದ್ದ ಇಂದ್ರನಂತೆಯೆ ಶೋಭಿಸುತ್ತಿದ್ದನು.

ಭಗವಂತ ತನ್ನ ಅವತಾರಕ್ಕಾಗಿ ಒಂದು ಕ್ಷೇತ್ರವನ್ನು ಆಯ್ದುಕೊಳ್ಳುವಾಗ ದುರ್ಬಲರಾದವರನ್ನು ಆಯ್ಕೆ ಮಾಡಿಕೊಂಡರೆ ಕಾವ್ಯ ವೈಕಲತೆಯಿಂದ ಸೊರಗುತ್ತದೆ. ವಾಲ್ಮೀಕಿಯಲ್ಲಿ ಈ ಪ್ರಜ್ಞೆ ಸದಾ ಜಾಗ್ರತವಾಗಿದೆ. ರಾಮಾಯಣ ಮಹಾ ಕಾವ್ಯವಾಗುವ ಜೊತೆಗೆ ಸನಾತನ ಪರಂಪರೆಯ ಇತಿಹಾಸವೂ ಆಗಿದೆ. ಶಾಸ್ತ್ರಗಳಲ್ಲಿ ಧರ್ಮವನ್ನು ಮಂತ್ರಗಳ ಮೂಲಕ ಹೇಳುತ್ತಾರೆ. ಈ ಮಂತ್ರಗಳ ಅರ್ಥವನ್ನು, ಸೃಷ್ಟಿ, ಸಂಹಾರ, ಅವುಗಳನ್ನು ವಿನಿಯೋಗಿಸುವ ವಿಧಾನವನ್ನು ವಿವರಿಸುವುದೇ ಬ್ರಾಹ್ಮಣಗಳು. ಇದು ಕಾವ್ಯಕ್ಕೆ ಬಂದಾಗ ಪ್ರಕ್ರಿಯಾ, ಉಪೋದ್ಘಾತ, ಅನುಸಂಗ ಮತ್ತು ಉಪಸಂಹಾರ ಹೀಗೆ ನಾಲ್ಕು ಬಗೆಗಳಿವೆ. ಈ ಎಲ್ಲ ಸಂಗತಿಗಳನ್ನು ಅರ್ಥ ಮಾಡಿಕೊಂಡಾಗ ದಶರಥನ ಶ್ರೇಷ್ಠತೆಯನ್ನು ಮನಗಾಣ ಬಹುದಾಗಿದೆ.

ದಶರಥನ ರಾಜ್ಯಭಾರ –

ಆಡಳಿತದ ವಿಷಯದಲ್ಲಿ ದಶರಥ ಸಮರ್ಥ ಆಡಳಿತಗಾರನಾಗಿದ್ದ. ಆತನ ಕಾಲದಲ್ಲಿ ಪ್ರಜೆಗಳು ನಿತ್ಯಸಂತುಷ್ಟರಾಗಿದ್ದರು. ಎಲ್ಲರೂ ಎಲ್ಲಾ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದರು. ತಮಗೆ ಸಿಕ್ಕಿದುದರಲ್ಲಿಯೇ ನಿತ್ಯತೃಪ್ತಿಯನ್ನು ಹೊಂದಿದ್ದರು. ಅಯೋಧ್ಯೆಯಲ್ಲಿ ವಿಶೇಷ ಕಾಮಾಸಕ್ತರಾಗಲಿ, ಕ್ರೂರಕರ್ಮಿಗಳಾಗಲಿ, ಅಜ್ಞರಾಗಲಿ, ನಾಸ್ತಿಕರಾಗಲಿ, ದರಿದ್ರರಾಗಲಿ ಇರಲಿಲ್ಲ. ಅಯೋಧ್ಯೆಯ ವರ್ಣನೆಯನ್ನು ಮಾಡುವಾಗ ದಶರಥನ ಸೇನೆ ಮತ್ತು ಅಯೋಧ್ಯೆಯ ಜನರ ಗುಣಸ್ವಭಾವವನ್ನು ವಿವರಿಸಿದ್ದೇನೆ. ಯಾವುದೇ ರಾಜನ ಆಡಳಿತ ಬಿಗಿಯಾಗಬೇಕಾದರೆ ಅದಕ್ಕೆ ಸಂಬಂಧಿಸಿದ ಅಧಿಕಾರ ವರ್ಗ ದಕ್ಷತೆಯಿಂದ ಕೂಡಿರಬೇಕು, ಯೋಗ್ಯರಾದ ಸಚಿವರು ಮತ್ತು ಧರ್ಮಮಾರ್ಗದಲ್ಲಿ ರಾಜ ಸದಾ ಇರುವಂತೆ ನೋಡಿಕೊಳ್ಳುವ ಪುರೋಹಿತರು ಬಹು ಮುಖ್ಯ. ರಾಜನಿಗೆ ಕೆಟ್ಟ ಹೆಸರಾಗಲಿ, ಒಳ್ಳೆಯ ಹೆಸರಾಗಲಿ ಬರುವುದರಲ್ಲಿ ಅಮಾತ್ಯ ಮತ್ತು ಪುರೋಹಿತರ ಪಾತ್ರ ದೊಡ್ಡದು. ದಶರಥನಿಗೆ ಸಹಾಯಮಾಡಲು ಮಂತ್ರಾಲೋಚನೆಯಲ್ಲಿ ಸಮರ್ಥರಾದ, ಸದಾ ಕಾರ್ಯತತ್ಪರರಾದ ಮತ್ತು ಪರರ ಮನಸ್ಸಿನಲ್ಲಿರುವ ವಿಷಯಗಳನ್ನು ಅವರ ಮುಖಭಾವದಿಂದಲೇ ತಿಳಿಯಬಲ್ಲ ಇಂಗಿತಜ್ಞರಾದ ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರ ಎನ್ನುವ ಎಂಟು ಮಂತ್ರಿಗಳು ಆತನ ಆಸ್ಥಾನದಲ್ಲಿ ಇದ್ದರು. ಅವರು ವಂಶಪರಂಪರೆಯಿಂದ ಬಂದವರು ಎನ್ನುವ ಕಾರಣಕ್ಕಾಗಿ ತಮ್ಮ ಹುದ್ದೆಯಲ್ಲಿ ಇದ್ದವರಲ್ಲ. ಹಾಗಂತ ರಾಜಕಾರಣಕ್ಕೆ ಹೊಸಬರೂ ಆಗಿರಲಿಲ್ಲ.

king dasharatha

ಯಾರನ್ನಾದರೂ ಹುದ್ದೆಗೆ ನಿಯಕ್ತಿಗೊಳಿಸುವ ಮುನ್ನ ಅವರನ್ನು ಚನ್ನಾಗಿ ಪರೀಕ್ಷಿಸಲಾಗುತ್ತಿತ್ತು. ಅರ್ಥಶಾಸ್ತ್ರದಲ್ಲಿ ರಾಜನ ಆಸ್ಥಾನದಲ್ಲಿರುವವರನ್ನು ಪರೀಕ್ಷಿಸುವ ವಿಧಾನವನ್ನು ಹೇಳುವಾಗ ಧರ್ಮಾದಿ ಉಪಧಾ, ಅರ್ಥೋಪಧಾ, ಕಾಮೋಪಧಾ, ಭಯೋಪಧಾಗಳ ಮೂಲಕ ಪರೀಕ್ಷಿಸಬೇಕು ಎಂದು ಹೇಳುತ್ತದೆ. ಅಂದರೆ ರಾಜನಲ್ಲಿ ಅಧರ್ಮವನ್ನು ಕಲ್ಪಿಸಿ ಅವನನ್ನು ಪಟ್ಟದಿಂದ ಇಳಿಸೋಣವೇ ಎನ್ನುವ ಆಮಿಷಕ್ಕೆ ಒಡ್ಡಿದಾಗಲೂ ಅದನ್ನು ಯಾವಾತ ತಿರಸ್ಕರಿಸುತ್ತಾನೋ, ಹಣದ ಆಮಿಷದ ಮೂಲಕ ರಾಜನಿಂದ ಬೇರ್ಪಡಿಸಲು ಸಾಧ್ಯವೋ ಎನ್ನುವುದನ್ನು ಪರೀಕ್ಷಿಸುವುದು, ರಾಣಿ ನಿನ್ನನ್ನು ಬಯಸಿದ್ದಾಳೆ, ಅವಳನ್ನು ಸೇರಿದರೆ ನಿನಗೆ ಕೈತುಂಬಾ ಹಣ ಸಿಗುವುದು ಎನ್ನುವ ಆಮಿಷವನ್ನು ಒಡ್ಡಿದಾಗಲೂ ಅದನ್ನು ತಿರಸ್ಕರಿಸುವಂಥವರು, ರಾಜನಿಂದ ಅವಮಾನಿತರಾದ (ಹಾಗೇ ನಟಿಸಿ) ಅಮಾತ್ಯನಾದವ ಇತರರನ್ನು ನಾವೆಯಲ್ಲಿ ಕರೆದುಕೊಂಡು ಹೋಗಿ ರಾಜನ ವಿರುದ್ಧ ಅವರನ್ನು ಎತ್ತಿಕಟ್ಟಿದಾಗ ಯಾರು ತಿರಸ್ಕರಿಸಿ ರಾಜನಿಗೆ ನಿಷ್ಠೆಯುಳ್ಳವರಾಗಿರುತ್ತಾರೆಯೋ ಅಂಥವರು ಮಾತ್ರ ಅಮಾತ್ಯರಾಗಲು ಯೋಗ್ಯರು ಎನ್ನುತ್ತದೆ. ದಶರಥನ ಈ ಅಷ್ಟ ಮಂತ್ರಿಗಳು ರಾಜದ್ರೋಹ-ಪ್ರಜಾದ್ರೋಹ-ಸ್ವಾರ್ಥಗಳಿಂದ ಮುಕ್ತರಾಗಿದ್ದರು. ರಾಮನನ್ನು ಅರಣ್ಯಕ್ಕೆ ಕಳಿಸು ಎನ್ನುವ ಸಂದರ್ಭದಲ್ಲಿ ಸುಮಂತ್ರ ರಾಜನ ಎದುರಿಗೇ ಕೈಕೇಯನ್ನು ದೂಷಿಸುವಾಗ ಮತ್ತು ವಶಿಷ್ಠರು ಆಕೆಯನ್ನು ಕಟುವಾಗಿ ನಿಂದಿಸುವಾಗ ಅವರ ರಾಜನಿಷ್ಟೆ, ನಿಸ್ವಾರ್ಥಪರತೆ ಎದ್ದು ಕಾಣುತ್ತದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗಂಧವತಿಗೆ ಸಿರಿಗಂಧಲೇಪನನ ಆಗಮನ

ಅವರೆಲ್ಲ ವಿದ್ಯಾವಿನೀತಾ- ಎಲ್ಲ ವಿಷಯಗಳಲ್ಲಿಯೂ ಪಾರಂಗತರಾಗಿದ್ದರು. ಹಿಮನ್ತಃ-ಅಕಾರ್ಯವನ್ನು ಮಾಡಲು ಲಜ್ಜೆಪಡುತ್ತಿದ್ದರು, ಕುಶಲಾ-ನೀತಿಶಾಸ್ತ್ರ ಕೋವಿದರು, ನಿಯತೇಂದ್ರಿಯಾ-ಇಂದ್ರಿಯ ನಿಗ್ರಹವನ್ನು ಸ್ಥಾಪಿಸಿದವರು, ಶ್ರೀಮನ್ತಃ – ಭಾಗ್ಯಸಂಪನ್ನರು, ನೀತಿ ಶಾಸ್ತ್ರ ಬಲ್ಲವರು, ದೃಢವಿಕ್ರಮಿಗಳು, ಕೀರ್ತಿವಂತರು, ಪ್ರಣಿಹೀತಾ-ಕೊಟ್ಟಮಾತಿನಂತೆ ನಡೆಯುವವರು, ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆಯುಳ್ಳವರು, ಸದಾ ನಗುಮುಖದಿಂದಲೇ ಮಾತನಾಡುತ್ತಾ ಎದುರಿನಲ್ಲಿರುವವರ ಅಂತರಂಗವನ್ನು ಶೋಧಿಸುವಂತವರು, ಆಡಿದ ಮಾತಿನಂತೆ ನಡೆಯುವವರು-ಯಥಾವಚನಕಾರಿಣಃ ಹೀಗೆ ರಾಜಕಾರಣದ ಸಮಗ್ರವನ್ನು ಅರ್ಥಮಾಡಿಕೊಂಡವರಾಗಿದ್ದರು. ತಮ್ಮ ಮಕ್ಕಳೇ ತಪ್ಪು ಮಾಡಿದರೂ ಅವರನ್ನು ಶಿಕ್ಷಿಸುವಂತಹ ದಂಡಕೋವಿದರಾಗಿದ್ದರು.. ಹಾಗಂತ ಇವರನ್ನು ನೇಮಿಸಿಕೊಳ್ಳುವಾಗ ಸುಖಾಸುಮ್ಮನೆ ನೇಮಿಸಿಕೂಳ್ಳಲಿಲ್ಲ. ಅವರ ರಾಜನಿಷ್ಠೆಯನ್ನು ಚನ್ನಾಗಿ ಪರೀಕ್ಷಿಸಿದ–ಸೌಹ್ಯದೇಷು ಪರೀಕ್ಷಿತಾಃ, ನಂತರವೇ ಅವರನ್ನು ಆಯಾ ಹುದ್ಧೆಗಳಿಗೆ ನಿಯುಕ್ತಿಗೊಳಿಸಲಾಗುತ್ತಿತ್ತು. ದಶರಥ ನಿಧನನಾದಾಗ ಭರತನನ್ನು ಕರೆತರಲು ಹೋದವರಲ್ಲಿ ಅಶೋಕ ಮತ್ತು ವಿಜಯ ಪ್ರಮುಖರಾದವರು. ಆಗ ಅವರು ಭರತ ಎಷ್ಟೇ ಒತ್ತಾಯಿಸಿದರೂ ಅಯೋಧ್ಯೆಯಲ್ಲಿ ಏನಾಗಿದೆ ಎನ್ನುವುದನ್ನು ಹೇಳದೇ ಆತನನ್ನು ಅಯೋಧ್ಯೆಗೆ ಕರೆತರುವಲ್ಲಿ ನಡೆಸಿದ ಕಾರ್ಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಪ್ರಾಚೀನ ಕಾಲದಲ್ಲಿ ಧಾರ್ಮಿಕ ವಿಚಾರದಲ್ಲಿಯೂ ರಾಜನ ಆಸ್ಥಾನದಲ್ಲಿ ತುಂಬಾ ಮಹತ್ವವಿತ್ತು. ಈ ಪುರೋಹಿತ ವರ್ಗ ತಮಗಾಗಿ ಏನನ್ನೂ ಬಯಸುತ್ತಿರಲಿಲ್ಲ. ರಾಜ ತಪ್ಪಿ ನಡೆದಾಗ ಆತನನ್ನು ಎಚ್ಚರಿಸಿ ಅಗತ್ಯಬಿದ್ದರೆ ಆತನನ್ನು ಅಧಿಕಾರದಿಂದ ಇಳಿಸುವ “ಧರ್ಮದಂಡ್ಯೋಸಿ” ಧರ್ಮದಂಡವನ್ನು ಹೊಂದಿದ್ದರು. ವಶಿಷ್ಠ ಮತ್ತು ವಾಮದೇವರೆನ್ನುವ ಇಬ್ಬರು ಪುರೋಹಿತರಾಗಿ ಅಯೋಧ್ಯೆಯ ಹಿತವನ್ನು ಸದಾಕಾಲವೂ ಬಯಸಿದ್ದರು. ವಸಿಷ್ಠರೂ ಸಹ ನಿಷ್ಟುರವಾದಿಗಳು. ತ್ರಿಶಂಕು ತನಗಾಗಿ ಇಂದ್ರಪದವಿಯ ಯಜ್ಞವನ್ನು ಮಾಡಿ ಎಂದಾಗ ನಿಷ್ಟುರವಾಗಿ ತಿರಸ್ಕರಿಸಿದ್ದರು. ಶಶಾದನೆನ್ನುವವ ಇಕ್ಷ್ವಾಕುವಿನ ಮಗ. ಆತ ನಡತೆ ತಪ್ಪಿದಾಗ ಆತನಿಗೆ ಶಿಕ್ಷೆ ವಿಧಸಲೇಬೇಕು ಎಂದು ಇಕ್ಷ್ವಾಕುವಿಗೆ ಹೇಳಿದವರು. ಇಲ್ಲಿ ನೆನಪಿಡಬೇಕಾದದ್ದು ವಸಿಷ್ಠನೆನ್ನುವುದು ಒಂದು ಪರಂಪರೆ. ವಂಶವಾಹಿನಿ. ಶಂಕರಪೀಠವನ್ನೇರುವ ಎಲ್ಲರೂ ಶಂಕರಾಚಾರ್ಯರು ಎಂದು ಕರೆಯಿಸಿಕೊಳ್ಳುವ ಹಾಗೆ, ಆಗಿನ ಕಾಲದಲ್ಲಿ ಬ್ರಹ್ಮರ್ಷಿಗಳನ್ನು ಅದೇ ಹೆಸರಿನಿಂದ ಕರೆಯಲಾಗುತ್ತಿತ್ತು ಎನ್ನಬಹುದು. ನಂತರ ಇದೇ ಗೋತ್ರವಾಗಿ ಬದಲಾಗಿರಬೇಕು. ಹೀಗೆ ಒಂದು ಪ್ರಬಲ ರಾಜ್ಯವೊಂದರ ಅಧಿಕಾರಿಯಾಗಿ ದಶರಥ ಆಳುತ್ತಿದ್ದ. ರಾಮನಂತವ ಅವತರಿಸಬೇಕಾದ ಕ್ಷೇತ್ರಕ್ಕೆ ಆ ಕಾಲದಲ್ಲಿ ಭೂಮಂಡಲದಲ್ಲಿ ಇದಕ್ಕಿಂತ ಮತ್ತೊಂದು ಯುಕ್ತವಾದ ಮನೆತನವಿರಲಿಲ್ಲವೆನ್ನುವುದನ್ನು ವಾಲ್ಮೀಕಿ ಇಲ್ಲಿ ತಿಳಿಸುತ್ತಾನೆ.

ಮುಂದಿನ ಸಂಚಿಕೆಯಲ್ಲಿ ಆತನ ವ್ಯಕ್ತಿತ್ವದ ವಿಶೇಷಗಳ ಕುರಿತು ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾವತಾರಕ್ಕೊಂದು ಪೀಠಿಕಾ ಪ್ರಕರಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Veerabhadreswara Fair: ವೀರಭದ್ರೇಶ್ವರ ಜಾತ್ರೆಯಲ್ಲಿ ಉತ್ತತ್ತಿ ಆಯುವಾಗ ರಥದ ಚಕ್ರದಡಿ‌ ಸಿಲುಕಿ ಇಬ್ಬರ ಸಾವು

Veerabhadreswara Fair: ಪ್ರತಿವರ್ಷ ಜರುಗುವ ಅದ್ಧೂರಿಯಾಗಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತಾ ಬರುತ್ತಿದೆ. ಈ ವೇಳೆ ಹತ್ತಾರು‌ ಸಾವಿರ ಭಕ್ತರ ಸಮ್ಮುಖದಲ್ಲಿ ಜಯಘೋಷಗಳೊಂದಿಗೆ ರಥೋತ್ಸವ ನಡೆಯುತ್ತದೆ. ಶನಿವಾರ ರಥೋತ್ಸವದ ವೇಳೆ ಭಕ್ತರೆಲ್ಲರೂ ಸೇರಿ ರಥ ಎಳೆಯುವಾಗ ರಥದ ಚಕ್ರದಡಿ ಇಬ್ಬರು ಬಿದ್ದಿದ್ದಾರೆ. ಇದು ಗೊತ್ತಾಗದೇ ಎಳೆದಿದ್ದರಿಂದ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

VISTARANEWS.COM


on

Two killed after being hit by the wheel of a chariot while performing at Veerabhadreswara fair
Koo

ಗದಗ: ಗದಗ ಜಿಲ್ಲೆ ರೋಣ ಪಟ್ಟಣದ ವೀರಭದ್ರೇಶ್ವರ ಜಾತ್ರೆಯಲ್ಲಿ (Veerabhadreswara Fair) ರಥದ ಚಕ್ರದಡಿ‌ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ರಥ ಎಳೆಯುವ ವೇಳೆ ಈ ಅವಘಡ ನಡೆದಿದೆ.

ಪ್ರತಿವರ್ಷ ಜರುಗುವ ಅದ್ಧೂರಿಯಾಗಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತಾ ಬರುತ್ತಿದೆ. ಈ ವೇಳೆ ಹತ್ತಾರು‌ ಸಾವಿರ ಭಕ್ತರ ಸಮ್ಮುಖದಲ್ಲಿ ಜಯಘೋಷಗಳೊಂದಿಗೆ ರಥೋತ್ಸವ ನಡೆಯುತ್ತದೆ. ಶನಿವಾರ ರಥೋತ್ಸವದ ವೇಳೆ ಭಕ್ತರೆಲ್ಲರೂ ಸೇರಿ ರಥ ಎಳೆಯುವಾಗ ರಥದ ಚಕ್ರದಡಿ ಇಬ್ಬರು ಬಿದ್ದಿದ್ದಾರೆ. ಇದು ಗೊತ್ತಾಗದೇ ಎಳೆದಿದ್ದರಿಂದ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಬ್ಬ ಭಕ್ತನ ತಲೆ‌ ಮೇಲೆ ರಥದ ಚಕ್ರ ಹತ್ತಿಳಿದಿದ್ದರಿಂದ ತಲೆಬುರುಡೆ ಅಪ್ಪಚ್ಚಿಯಾಗಿದೆ. ಮತ್ತೊಬ್ಬನ ಬೆನ್ನಿನ ಮೇಲೆ ಹಾದು ಹೋಗಿದೆ. ಹೀಗಾಗಿ ಆತನೂ ಅಲ್ಲಿಯೇ ಉಸಿರು ಚೆಲ್ಲಿದ್ದಾನೆ. ರಥೋತ್ಸವಕ್ಕೆ‌ ಎಸೆಯುವ ಉತ್ತುತ್ತೆಯನ್ನು ಆರಿಸುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮಲ್ಲಪ್ಪ ಲಿಂಗನಗೌಡರ (55) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮತ್ತೊಬ್ಬನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ರೋಣ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

ಪತ್ನಿಯ ಶೀಲ ಶಂಕಿಸಿ, ಆಕೆಯ ಗುಪ್ತಾಂಗಕ್ಕೆ ಮೊಳೆ ಜಡಿದು, ಬೀಗ ಹಾಕಿದ ದುಷ್ಟ; ಏನು ಮಾಡಬೇಕು ಇಂಥವರಿಗೆ?

ಮುಂಬೈ: ಗಂಡ-ಹೆಂಡತಿ, ಪ್ರಿಯತಮ-ಪ್ರಿಯತಮೆ ಸೇರಿ ಯಾವುದೇ ಸಂಬಂಧದಲ್ಲಿ ಅನುಮಾನ ಎಂಬ ಪೀಡೆ ಹೊಕ್ಕರೆ ಅಲ್ಲಿಗೆ ಮುಗಿಯಿತು ಕತೆ. ಒಂದೋ ಆ ಸಂಬಂಧದಲ್ಲಿ ಬಿರುಕು ಮೂಡುತ್ತದೆ, ಇಲ್ಲವೇ ಪರಸ್ಪರ ಹಿಂಸೆಗೆ ದಾರಿ ಮಾಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune) ವ್ಯಕ್ತಿಯೊಬ್ಬ ತನ್ನ ಪತಿಯ ಶೀಲ ಶಂಕಿಸಿ, ಆಕೆ ಗುಪ್ತಾಂಗಕ್ಕೆ ಮೊಳೆ ಜಡಿದು, ಬೀಗ ಹಾಕುವ ಮೂಲಕ ರಕ್ಕಸ ಕೃತ್ಯ ಎಸಗಿದ್ದಾನೆ.

ಪುಣೆಯ ವಾಕಡ್‌ ಪ್ರದೇಶದಲ್ಲಿ ಮೇ 11ರಂದು ಪತಿಯು ಮೃಗದಂತೆ ವರ್ತಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯು ದೂರು ದಾಖಲಿಸಿದ ಬಳಿಕ ಪೊಲೀಸರು ದುಷ್ಟನನ್ನು ಬಂಧಿಸಿದ್ದಾರೆ. ಗುಪ್ತಾಂಗಕ್ಕೆ ಮೊಳೆ ಹೊಡೆದು, ಬೀಗ ಜಡಿದ ಪರಿಣಾಮ ಮಹಿಳೆಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮಾರಣಾಂತಿಕವಾಗಿ ಹಲ್ಲೆ ನಡೆಸಿದವನನ್ನು ನೇಪಾಳದ ಮೂಲದ, ಸದ್ಯ ಪಿಂಪ್ರಿ-ಚಿಂಚ್ವಾಡ್‌ನ ವಾಕಡ್‌ನಲ್ಲಿ ನೆಲೆಸಿದ ಉಪೇಂದ್ರ ಹುಡಕೆ (30) ಎಂಬುದಾಗಿ ಗುರುತಿಸಲಾಗಿದೆ.

Physical Abuse

ಪ್ರಕರಣದ ಕುರಿತು ತನಿಖಾಧಿಕಾರಿ ಬಾಲಾಜಿ ಮೆತೆ ಅವರು ಮಾಹಿತಿ ನೀಡಿದ್ದಾರೆ. “ಗಂಡ ಹಾಗೂ ಹೆಂಡತಿ ನೇಪಾಳದವರು. ಉದ್ಯೋಗ ಅರಸಿ ಅವರು ಮೇ ತಿಂಗಳ ಮೊದಲ ವಾರದಲ್ಲಿ ವಾಕಡ್‌ಗೆ ಬಂದು ನೆಲೆಸಿದ್ದರು. ಮೇ 11ರಂದು ಪಾನಮತ್ತನಾಗಿ ಬಂದ ವ್ಯಕ್ತಿಯು ಪತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಶೀಲ ಶಂಕಿಸಿದ ಆತನು ಒದ್ದು, ಆಕೆಯ ಕೈಕಾಲು ಕಟ್ಟಿ, ಗುಪ್ತಾಂಗಕ್ಕೆ ಮೊಳೆ ಜಡಿದು, ಚಾಕುವಿನಿಂದ ಹಲ್ಲೆ ನಡೆಸಿ, ಬೀಗ ಹಾಕಿದ್ದಾನೆ. ಮಹಿಳೆಯು ಅಂಗಲಾಚಿದರೂ ಆತನು ಬಿಟ್ಟಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Murder Case : ಶೀಲ ಶಂಕಿಸಿ ಪತ್ನಿಯ ಕುತ್ತಿಗೆ ಹಿಸುಕಿ ಕೊಂದ ಸಂಶಯ ಪಿಶಾಚಿ ಗಂಡ

ಮಹಿಳೆ ಅರಚುವ ಧ್ವನಿ ಕೇಳಿ ಪಕ್ಕದ ಮನೆಯ ಲಲಿತ್‌ ಪರಿಹಾರ್‌ ಎಂಬುವರು ಮನೆಗೆ ತೆರಳಿ ನೋಡಿದಾಗ, ಮಹಿಳೆಯು ರಕ್ತದ ಮಧ್ಯೆ ಬಿದ್ದಿರುವುದು ಕಂಡಿದೆ. ಕೂಡಲೇ ಅವರು ಸುತ್ತಮುತ್ತಲಿವರನ್ನು ಕರೆದ ಅವರು ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಜ್ಞೆ ಕಳೆದುಕೊಂಡಿದ್ದ ಮಹಿಳೆಗೆ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಾದ ಬಳಿಕ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Continue Reading

ದೇಶ

Voter Turnout: 4ನೇ ಹಂತದಲ್ಲಿ ಹೆಚ್ಚಿದ ಮತದಾನ; ಪುರುಷರಿಗಿಂತ ಸ್ತ್ರೀಯರಿಂದಲೇ ಹೆಚ್ಚು ಮತ ಚಲಾವಣೆ; ಹೀಗಿದೆ ಆಯೋಗದ ಮಾಹಿತಿ

Voter Turnout: ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು. ಮೂರೂ ಹಂತಗಳಲ್ಲಿ 2019ಕ್ಕಿಂತ ಕಡಿಮೆ ಮತದಾನ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈಗ ನಾಲ್ಕನೇ ಹಂತದಲ್ಲಿ ಮತದಾನ ಪ್ರಮಾಣವು ಹೆಚ್ಚಾಗಿರುವುದು ಸಕಾರಾತ್ಮಕ ಬೆಳವಣಿಗೆ ಎಂದೇ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

VISTARANEWS.COM


on

Voter Turnout
Koo

ನವದೆಹಲಿ: ಕಳೆದ ಸೋಮವಾರ (ಮೇ 13) ನಡೆದ ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕನೇ ಹಂತದ ಮತದಾನದ ಕುರಿತು ಚುನಾವಣೆ ಆಯೋಗವು (Election Commission) ಶುಕ್ರವಾರ ತಡರಾತ್ರಿ (ಮೇ 17) ಮಾಹಿತಿ ನೀಡಿದೆ. ನಾಲ್ಕನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಮೂರು ಹಂತಗಳಿಗಿಂತ ಗರಿಷ್ಠ ಮತದಾನ (Voter Turnout) ದಾಖಲಾಗಿರುವುದು ಸಕಾರಾತ್ಮಕ ಸಂಗತಿಯಾಗಿದೆ. ಅಷ್ಟೇ ಅಲ್ಲ, ಬಿಹಾರದಲ್ಲಿ 2, 3, ಹಾಗೂ 4ನೇ ಹಂತದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂಬುದಾಗಿ ಆಯೋಗವು ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು. ಮೂರೂ ಹಂತಗಳಲ್ಲಿ 2019ಕ್ಕಿಂತ ಕಡಿಮೆ ಮತದಾನ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆದರೀಗ, 4ನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಬಾರಿಗಿಂತ ಕೇವಲ 0.40ರಷ್ಟು ಕಡಿಮೆಯಾಗಿದೆ. ಹಾಗಾಗಿ, ನಾಲ್ಕನೇ ಹಂತದ ಮತದಾನವು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ಬಿಹಾರ, ಜಾರ್ಖಂಡ್‌ನಲ್ಲಿ ಹೆಣ್ಮಕ್ಳೇ ಸ್ಟ್ರಾಂಗು!

ಸಾಮಾನ್ಯವಾಗಿ ಬಹುತೇಕ ಕ್ಷೇತ್ರಗಳಲ್ಲಿ ಮತದಾನ ಮಾಡುವವರು ಮಹಿಳೆಯರಿಗಿಂತ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ, ಎರಡು, ಮೂರು ಹಾಗೂ ನಾಲ್ಕನೇ ಹಂತದಲ್ಲಿ ಬಹಾರದ 15 ಹಾಗೂ ಜಾರ್ಖಂಡ್‌ನ 13 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ ಎಂಬುದಾಗಿ ಚುನಾವಣೆ ಆಯೋಗ ತಿಳಿಸಿದೆ. ಹಾಗೆಯೇ, ಪಶ್ಚಿಮ ಬಂಗಾಳದ 6, ಬಿಹಾರ, ಆಂಧ್ರದಲ್ಲಿ ತಲಾ 5, ಒಡಿಶಾ 2, ತೆಲಂಗಾಣ ಹಾಗೂ ಮಧ್ಯಪ್ರದೇಶದಲ್ಲಿ ತಲಾ 1 ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ವೋಟ್‌ ಹಾಕಿದ್ದಾರೆ.

ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು ಐದನೇ ಹಂತದ ಮತದಾನವು ಮೇ 20ರಂದು ನಡೆಯಲಿದೆ. ಜೂನ್‌ 1ರಂದು ಕೊನೆಯ ಅಥವಾ ಏಳನೇ ಹಂತದ ಮತದಾನ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಇದುವರೆಗೆ 379 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಂಡಂತಾಗಿದೆ.

ಇದನ್ನೂ ಓದಿ: Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Continue Reading

ಕ್ರೀಡೆ

RCB vs CSK: ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಚೆನ್ನೈ ಸೂಪರ್​ ಕಿಂಗ್ಸ್​

RCB vs CSK: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಆರ್​ಸಿಬಿ ಇದುವರೆಗೆ 10 ಪಂದ್ಯಗಳನ್ನು ಆಡಿವೆ. ಈ ಪೈಕಿ ಚೆನ್ನೈ ಐದರಲ್ಲಿ ಗೆದ್ದರೆ, ಆರ್​ಸಿಬಿ ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಈ ಲೆಕ್ಕಾಚಾರದಲ್ಲಿ ಚೆನ್ನೈ ಬಲಿಷ್ಠ ಎನ್ನಲಡ್ಡಿಯಿಲ್ಲ.

VISTARANEWS.COM


on

RCB vs CSK
Koo

ಬೆಂಗಳೂರು: ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿದೆ. ಆರ್​ಸಿಬಿ ಬ್ಯಾಟಿಂಗ್​ ಆಹ್ವಾನ ಪಡೆದಿದೆ. ಮಳೆ ಭೀತಿಯ ನಡುವೆಯೂ ಈ ಪಂದ್ಯವನ್ನು ರಣರೋಚಕ ಪೈಪೋಟಿ ಎಂದೇ ನಿರೀಕ್ಷೆ ಮಾಡಲಾಗಿದೆ. ಉಭಯ ತಂಡಗಳ ಅಭಿಮಾನಿಗಳು ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಹೌಸ್​ ಫುಲ್​ ಆಗಿದೆ.

ಪಿಚ್​ ರಿಪೋರ್ಟ್​


ಬೆಂಗಳೂರಿನ(Bengaluru) ಎಂ ಚಿನ್ನಸ್ವಾಮಿ(M.Chinnaswamy Stadium) ಕ್ರೀಡಾಂಗಣ ಯಾವಾಗಲೂ ಬ್ಯಾಟಿಂಗ್ ಸ್ನೇಹಿ ಸ್ಥಳವಾಗಿದೆ. ಇದುವರೆಗೆ ಇಲ್ಲಿ ನಡೆದ ಬಹುತೇಕ ಪಂದ್ಯಗಳು ಕೂಡ ಚೇಸಿಂಗ್​ ನಡೆಸಿದ ತಂಡವೇ ಹೆಚ್ಚು ಬಾರಿ ಗೆದ್ದಿದೆ. 50ಕ್ಕೂ ಅಧಿಕ ಬಾರಿ ಚೇಸಿಂಗ್​ ನಡೆಸಿದ ತಂಡವೇ ಜಯಶಾಲಿಯಾಗಿದೆ. 40 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದೆ.

ವಿರಾಟ್​ ಕೊಹ್ಲಿ ಈ ಮೈದಾನದಲ್ಲಿ ಇದುವರೆಗೆ 2993 ರನ್​ ಬಾರಿಸಿದ್ದಾರೆ. ಜತೆಗೆ ಈ ಬಾರಿಯ ಐಪಿಎಲ್​ನಲ್ಲಿಯೂ ಕೊಹ್ಲಿ ಉತ್ತಮವಾಗಿ ರನ್​ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಈ ಬಾರಿ ಕೊಹ್ಲಿ 13 ಪಂದ್ಯ ಆಡಿ 661 ರನ್​ ಗಳಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿಯೂ ಇವರ ಬ್ಯಾಟಿಂಗ್​ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ.

ಆರ್​ಸಿಬಿಗೆ ಬೇಕು ಲೆಕ್ಕಾಚಾರದ ಗೆಲುವು


ನೆಟ್‌ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ (0.528). ಆರ್‌ಸಿಬಿ 0.387 ರನ್‌ರೇಟ್‌ ಹೊಂದಿದೆ. ಹೀಗಾಗಿ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಬೇಕಾದರೆ, ಆರ್‌ಸಿಬಿ ಕನಿಷ್ಠ 18 ರನ್‌ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು ಆಗ ಮಾತ್ರ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಲಿದೆ. ಈ ಎರಡು ಲೆಕ್ಕಾಚಾರದ ಗೆಲುವು ಒಲಿಯದೇ ಹೋದರೆ ಆರ್​ಸಿಬಿ ನಿರಾಸೆಗೆ ಒಳಗಾಗಲಿದೆ. 5ನೇ ಸ್ಥಾನಿಯಾಗಿ ಟೂರ್ನಿಯಿಂದ ನಿರ್ಗಮಿಸಲಿದೆ. ಚೆನ್ನೈ ಮುನ್ನಡೆಗೆ ಸಾಮಾನ್ಯ ಗೆಲುವು ಸಾಕು. 16 ಅಂಕ ಗಳಿಸಿ 4ನೇ ತಂಡವಾಗಿ ಪ್ಲೇ ಆಫ್​ಗೆ ಲಗ್ಗೆ ಇಡಲಿದೆ.

ಇದನ್ನೂ ಓದಿ RCB vs CSK: ಗೆದ್ದರೂ ಆರ್​ಸಿಬಿಗೆ ಪ್ಲೇ ಆಫ್​ ಖಚಿತವಲ್ಲ; ಹೀಗಿದೆ ರನ್​ರೇಟ್​ ಲೆಕ್ಕಾಚಾರ!

ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಚೆನ್ನೈ ದಾಖಲೆ


ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಆರ್​ಸಿಬಿ ಇದುವರೆಗೆ 10 ಪಂದ್ಯಗಳನ್ನು ಆಡಿವೆ. ಈ ಪೈಕಿ ಚೆನ್ನೈ ಐದರಲ್ಲಿ ಗೆದ್ದರೆ, ಆರ್​ಸಿಬಿ ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಈ ಲೆಕ್ಕಾಚಾರದಲ್ಲಿ ಚೆನ್ನೈ ಬಲಿಷ್ಠ ಎನ್ನಲಡ್ಡಿಯಿಲ್ಲ. ಇಲ್ಲಿ ನಡೆದ ಕಳೆದ 10 ಪಂದ್ಯಗಳ ಫಲಿತಾಂಶ ನೋಡುವುದಾದರೆ 6 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆಲುವು ಸಾಧಿಸಿದೆ. ಈ ಆವೃತ್ತಿಯ 6 ಪಂದ್ಯಗಳ ಪೈಕಿ ಸಮಾನಾಗಿ 3 ಬಾರಿ ಚೇಸಿಂಗ್​ ಮತ್ತು ಮೊದಲು ಬ್ಯಾಟಿಂಗ್​ ನಡೆಸಿದ ತಂಡಗಳು ಜಯಿಸಿದೆ.

ಐಪಿಎಲ್​ ಮುಖಾಮುಖಿ


ಆರ್​ಸಿಬಿ ಮತ್ತು ಚೆನ್ನೈ ತಂಡ ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 32 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 10 ಪಂದ್ಯ ಗೆದ್ದರೆ, ಚೆನ್ನೈ 21 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಕಳೆದ ಮೂರು ಪಂದ್ಯಗಳ ಮುಖಾಮುಖಿಯಲ್ಲೂ ಚೆನ್ನೈ ತಂಡವೇ ಗೆದ್ದಿದೆ. ಹೀಗಾಗಿ ನಾಳಿನ ಪಂದ್ಯದಲ್ಲಿಯೂ ಚೆನ್ನೈ ಗೆಲುವಿನ ಫೇವರಿಟ್​ ಆಗಿದೆ. ಈ ಬಾರಿಯ ಉದ್ಘಾಟನ ಪಂದ್ಯದಲ್ಲಿಯೂ ಚೆನ್ನೈ ಆರ್​ಸಿಬಿಗೆ ಸೋಲುಣಿಸಿತ್ತು.

ವಿಶೇಷವೆಂದರೆ ಆರ್​ಸಿಬಿಗೆ ಮೇ 18 ಎನ್ನುವುದು ಬಹಳ ಅದೃಷ್ಟದ ದಿನವಾಗಿದೆ. ಹೌದು, ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ಈ ದಿನದಂದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಸ್ವಾರಸ್ಯವೆಂದರೆ ಚೆನ್ನೈ ವಿರುದ್ಧವೇ 2 ಗೆಲುವು ಸಾಧಿಸಿದೆ. ಹೀಗಾಗಿ ಇಂದು ಆರ್​ಸಿಬಿ ಗೆಲುವು ಸಾಧಿಸಬಹುದು ಎನ್ನುವುದು ಅಭಿಮಾನಿಗಳ ಬಲವಾದ ನಂಬಿಕೆ.

Continue Reading

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್ ರೇವಣ್ಣಗೆ ಸಂಕಷ್ಟ; ಅರೆಸ್ಟ್ ವಾರಂಟ್ ನೀಡಿದ ಕೋರ್ಟ್‌

ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌, ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ. ಜತೆಗೆ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಲು ಅನುಮತಿ ನೀಡಲಾಗಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್ ರೇವಣ್ಣಗೆ ಅಸಲಿ ಸಂಕಷ್ಟ ಶುರುವಾಗಿದೆ. ವಿದೇಶದಲ್ಲಿರುವ ಪ್ರಜ್ವಲ್‌ ಸೆರೆಗೆ ಎಸ್‌ಐಟಿ ಸರ್ಜಿಕಲ್ ಸ್ಟ್ರೈಕ್‌ ಆರಂಭಿಸಿದ್ದು, ಇದೀಗ ಹೊಳೆನರಸೀಪುರ ಕೇಸ್‌ನಲ್ಲಿ (Prajwal Revanna Case) ಪ್ರಜ್ವಲ್‌ ಬಂಧನಕ್ಕೆ ಅರೆಸ್ಟ್ ವಾರಂಟ್ ಪಡೆದಿದೆ. ಜತೆಗೆ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಲು ಕೂಡ ಕೋರ್ಟ್ ಅನುಮತಿ ನೀಡಿದೆ.

ನಗರದ 42ನೇ ಎಸಿಎಂಎಂ ಕೋರ್ಟ್‌, ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಹೊರಡಿಸಿದ್ದ ನೋಟಿಸ್‌ಗಳ ಬಗ್ಗೆ ಕೋರ್ಟ್‌ ಮಾಹಿತಿ ಕೇಳಿತ್ತು. ಈ ವೇಳೆ ಲುಕ್‌ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದ ಎಸ್‌ಐಟಿ, ಬಂಧನಕ್ಕೆ ಚಾರ್ಜ್ ಶೀಟ್ ಅವಶ್ಯಕತೆ ಇಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಿತ್ತು. ಹೀಗಾಗಿ ಕೋರ್ಟ್‌ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ.

ಸಿಬಿಐ ಮೂಲಕ ರೆಡ್ ಕಾರ್ನರ್ ನೋಟಿಸ್

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣಗೆ ವಿಚಾರಣೆಗೆ ಹಾಜರಾಗಲು ಈಗಾಗಲೇ ಎಸ್‌ಐಟಿ ಲುಕ್‌ ಔಟ್‌ ನೋಟಿಸ್‌ ಹಾಗೂ ಬ್ಲೂ ಕಾರ್ನರ್‌ ನೋಟಿಸ್‌ ನೀಡಿತ್ತು. ಇದೀಗ ಅರೆಸ್ಟ್‌ ವಾರಂಟ್‌ ಲಭಿಸಿರುವುದರಿಂದ ಸಿಬಿಐ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದೆ. ರೆಡ್‌ ಕಾರ್ನರ್‌ ನೋಟಿಸ್‌ ಬಳಿಕ ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದು ಆಗಲಿದ್ದು, ಇದರಿಂದ ಬಂಧನಕ್ಕೆ ಸಹಕಾರಿಯಾಗಲಿದೆ.

ರೆಡ್ ಕಾರ್ನರ್ ನೋಟಿಸ್ ಎನ್ನುವುದು ಹಸ್ತಾಂತರ, ಶರಣಾಗತಿ ಅಥವಾ ಅಂತಹುದ್ದೇ ಕಾನೂನು ಕ್ರಮಕ್ಕೆ ಬಾಕಿ ಇರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸುವುದಕ್ಕೆ ವಿಶ್ವಾದ್ಯಂತ ಕಾನೂನು ಜಾರಿಗೊಳಿಸಲು ಮಾಡುವ ವಿನಂತಿಯಾಗಿದೆ.

ಅಶ್ಲೀಲ ವಿಡಿಯೊ ವೈರಲ್ ಕೇಸ್‌; ವಕೀಲ ದೇವರಾಜೇಗೌಡ ಎಸ್‌ಐಟಿ ಕಸ್ಟಡಿ ಅವಧಿ 2 ವಿಸ್ತರಣೆ

Prajwal Revanna Case obscene video goes viral Advocate Devarajegowda SIT custody extended by 2 days

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ವೈರಲ್ ಪ್ರಕರಣದಲ್ಲಿ (Prajwal Revanna Case) ಎಂಟನೇ ಆರೋಪಿಯಾಗಿರುವ ವಕೀಲ ದೇವರಾಜೇಗೌಡ (Devarajegowda) ಅವರನ್ನೂ ಮತ್ತೂ ಎರಡು ದಿನ ಪೊಲೀಸ್‌ ಕಸ್ಟಡಿಗೆ ನೀಡಿ 5ನೇ ಅಧಿಕ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಆದೇಶಿಸಿದೆ.

ಏಪ್ರಿಲ್ 23 ರಂದು ಹಾಸನ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ 8ನೇ ಆರೋಪಿಯಾಗಿ ದೇವರಾಜೇಗೌಡ ಅವರ ಹೆಸರು ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದೇವರಾಜೇಗೌಡ ಅವರನ್ನು ವಿಚಾರಣೆಗಾಗಿ ಶುಕ್ರವಾರ ಒಂದು ದಿನದ ಮಟ್ಟಿಗೆ ಎಸ್‌ಐಟಿ ವಶಕ್ಕೆ ಪಡೆಯಲಾಗಿತ್ತು.

ದೇವರಾಜೇಗೌಡ ಅವರ ಕಸ್ಟಡಿ ಅವಧಿ ಮುಕ್ತಾಯವಾಗಿದ್ದರಿಂದ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಮತ್ತೆ ಎರಡು ದಿನ ಕಸ್ಟಡಿಗೆ ಕೇಳಿದ್ದರು. ಹೀಗಾಗಿ ಮೇ 20ರ ಸಂಜೆ ಐದು ಗಂಟೆಗೆ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ನ್ಯಾಯಾಲಯ ಸೂಚಿಸಿ, ಎರಡು ದಿನ ಕಸ್ಟಡಿಯನ್ನು ಮುಂದುವರಿಸಿ ಆದೇಶಿಸಿದೆ.
ಎರಡೆರಡು ಕೇಸ್‌

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ (physical Abuse) ಕೇಸ್‌ ಆರೋಪಿ ವಕೀಲ ದೇವರಾಜೇಗೌಡ (Devarajegowda) ಅವರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದರಿಂದ ಅವರನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಗುರುವಾರವೂ ಒಂದು ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಶುಕ್ರವಾರ ಕೋರ್ಟ್‌ ಮುಂದೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಂಗ ಬಂಧನವಿರಿಸಿ ಆದೇಶಿಸಲಾಗಿತ್ತು. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದ ವಕೀಲರನ್ನು ಪೆನ್‌ಡ್ರೈವ್‌ ಪ್ರಕರಣದಲ್ಲಿ ಶುಕ್ರವಾರ ಎಸ್‌ಐಟಿ ಕಸ್ಟಡಿಗೆ ಪಡೆದುಕೊಂಡಿತ್ತು. ಈಗ ಮತ್ತೆ ಎರಡು ದಿನ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸಾಕ್ಷ್ಯ ಬಿಡುಗಡೆಗೆ ಮುಂದಾಗಿದ್ದ ದೇವರಾಜೇಗೌಡ ಅವರು ಬೇರೆ ಕೇಸ್‌ನಲ್ಲಿ ಬಂಧನವಾಗಿದ್ದಾರೆ. ಒಟ್ಟು ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ದೇವರಾಜೇಗೌಡ ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.

ದೇವರಾಜೇಗೌಡ ಮೇ 11ರಂದು ಬಂಧನಕ್ಕೆ ಒಳಗಾಗಿದ್ದರು. ಇವರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪಗಳನ್ನು ಹೊರಿಸಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಹೊಳೆನರಸೀಪುರ, ಹಾಸನ ಸೇರಿ ಇತರ ಅಗತ್ಯ ಸ್ಥಳಗಳಿಗೆ ಕರೆದೊಯ್ದು ವಿಚಾರಣೆಯನ್ನು ಕೈಗೊಂಡಿದ್ದರು.
ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ದೇವರಾಜೇಗೌಡ

ವಕೀಲ ದೇವರಾಜೇಗೌಡ ಬಂಧನವಾಗಿರುವುದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿದೆ.

Continue Reading
Advertisement
Two killed after being hit by the wheel of a chariot while performing at Veerabhadreswara fair
ಕರ್ನಾಟಕ8 mins ago

Veerabhadreswara Fair: ವೀರಭದ್ರೇಶ್ವರ ಜಾತ್ರೆಯಲ್ಲಿ ಉತ್ತತ್ತಿ ಆಯುವಾಗ ರಥದ ಚಕ್ರದಡಿ‌ ಸಿಲುಕಿ ಇಬ್ಬರ ಸಾವು

Voter Turnout
ದೇಶ23 mins ago

Voter Turnout: 4ನೇ ಹಂತದಲ್ಲಿ ಹೆಚ್ಚಿದ ಮತದಾನ; ಪುರುಷರಿಗಿಂತ ಸ್ತ್ರೀಯರಿಂದಲೇ ಹೆಚ್ಚು ಮತ ಚಲಾವಣೆ; ಹೀಗಿದೆ ಆಯೋಗದ ಮಾಹಿತಿ

Uttara Kannada News Take precautionary measures to prevent the spread of infectious diseases in the district says DC Gangubai manakar
ಉತ್ತರ ಕನ್ನಡ26 mins ago

Uttara Kannada News: ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಿ: ಡಿಸಿ ಮಾನಕರ್‌

BJP State President B Y Vijayendra latest statement in bengaluru
ಕರ್ನಾಟಕ28 mins ago

BY Vijayendra: ವಿಧಾನಪರಿಷತ್ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ; ಬಿ.ವೈ.ವಿಜಯೇಂದ್ರ

Shed houses electric poles damaged due to heavy rain and wind in Karatagi
ಕೊಪ್ಪಳ31 mins ago

Heavy Rain: ಕಾರಟಗಿಯಲ್ಲಿ ಭಾರೀ ಮಳೆ ಗಾಳಿಗೆ ಅಪಾರ ಹಾನಿ; ಸಚಿವ ಶಿವರಾಜ ತಂಗಡಗಿ ಪರಿಶೀಲನೆ

cylinder explosion in Kunigal 6 people seriously injured, Kunigal MLA Dr Ranganath visit victoria Hospital in bengaluru
ತುಮಕೂರು33 mins ago

Cylinder Blast: ಗ್ಯಾಸ್‌ ಸಿಲಿಂಡರ್ ಸ್ಫೋಟ; ಮನೆಯ ಮೂವರಲ್ಲದೆ, ಪಕ್ಕದ ಮನೆಯ ಮೂವರಿಗೂ ಗಂಭೀರ ಗಾಯ

RCB vs CSK
ಕ್ರೀಡೆ44 mins ago

RCB vs CSK: ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಚೆನ್ನೈ ಸೂಪರ್​ ಕಿಂಗ್ಸ್​

Prajwal Revanna Case
ಪ್ರಮುಖ ಸುದ್ದಿ57 mins ago

Prajwal Revanna Case: ಪ್ರಜ್ವಲ್ ರೇವಣ್ಣಗೆ ಸಂಕಷ್ಟ; ಅರೆಸ್ಟ್ ವಾರಂಟ್ ನೀಡಿದ ಕೋರ್ಟ್‌

Virat Kohli
ಕ್ರೀಡೆ1 hour ago

Virat Kohli: ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ ಐಪಿಎಲ್​ ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ ಕೊಹ್ಲಿ

Girish's mother
ಕರ್ನಾಟಕ2 hours ago

Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ23 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌