Sudha Murthy Thoughts: ಜಗಳವಾಡಿಲ್ಲ ಎಂದರೆ ನೀವು ಗಂಡ-ಹೆಂಡತಿಯೇ ಅಲ್ಲ!; ಸುಖ ದಾಂಪತ್ಯಕ್ಕೆ ಇಲ್ಲಿದೆ ಸುಧಾಮೂರ್ತಿ ಪಂಚ ಸೂತ್ರ! - Vistara News

ಲೈಫ್‌ಸ್ಟೈಲ್

Sudha Murthy Thoughts: ಜಗಳವಾಡಿಲ್ಲ ಎಂದರೆ ನೀವು ಗಂಡ-ಹೆಂಡತಿಯೇ ಅಲ್ಲ!; ಸುಖ ದಾಂಪತ್ಯಕ್ಕೆ ಇಲ್ಲಿದೆ ಸುಧಾಮೂರ್ತಿ ಪಂಚ ಸೂತ್ರ!

Sudha Murthy Thoughts: ಸುಧಾಮೂರ್ತಿ ಮಾತುಗಳು ಸದಾ ಅನುಭವದ ಮೂಸೆಯಿಂದ ಹೊಳೆದು ಬರುವಂಥವುಗಳು. ತಮ್ಮ ಅನುಭವವನ್ನು ಸಾಮಾನ್ಯರ ಜೀವನಕ್ಕೆ ಅನ್ವಯಿಸಿ, ಸದಾ ಸ್ಫೂರ್ತಿಯಿಂದ ಮಾತನ್ನಾಡುವವರು. ಮದುವೆ, ಕಲಹ, ಕುಟುಂಬ ನಿರ್ವಹಣೆ, ಮಕ್ಕಳ ಪೋಷಣೆ, ಹೆಣ್ಣುಮಕ್ಕಳ ಶಿಕ್ಷಣ, ಜೀವನ ಚಿಂತನೆ, ಸಂಸ್ಕೃತಿ ಹೀಗೆ ಜನಸಾಮಾನ್ಯರಿಗೆ ಅಗತ್ಯವಾದ ವಿಚಾರಗಳನ್ನೇ ಇವರು ಸರಳವಾಗಿ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ನಿಂತು ಮಾತನಾಡುತ್ತಾರೆ. ಇಲ್ಲಿ ನೀಡಲಾಗಿರುವ ಅವರ ಮಾತುಗಳು ಸ್ಫೂರ್ತಿದಾಯಕ.

VISTARANEWS.COM


on

Sudha Murthy Thoughts
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುಧಾಮೂರ್ತಿ ಅವರ ಬಗ್ಗೆ ಪ್ರತ್ಯೇಕ (Sudha Murthy Thoughts) ಪರಿಚಯದ ಅಗತ್ಯವಿಲ್ಲ. ಮನುಷ್ಯ ಎಷ್ಟೇ ಎತ್ತರಕ್ಕೇರಿದರೂ, ಯಶಸ್ಸು ಸಾಧಿಸಿದರೂ ಸರಳವಾಗಿರುವುದು ಹೇಗೆ ಎನ್ನುವುದಕ್ಕೆ ಅವರೇ ಸಾಕ್ಷಿ. ತಮ್ಮ ಜೀವನವನ್ನು ತೆರೆದಿಟ್ಟ ಪುಸ್ತಕದ ಹಾಗೆ, ಇತರರಿಗೂ ಮಾದರಿಯಾಗಿ, ಸ್ಫೂರ್ತಿಯಾಗಿ ಬದುಕುತ್ತಿರುವವರು. ಮಕ್ಕಳ ಸಾಹಿತ್ಯದಲ್ಲೂ ಸಾಕಷ್ಟು ಕೃಷಿಯನ್ನು ಮಾಡಿ ಮುಂದಿನ ತಲೆಮಾರಿಗೆ ಓದುವ ರುಚಿಯನ್ನು ಹಚ್ಚಿ, ನಮ್ಮ ಭಾರತೀಯ ಸಂಸ್ಕೃತಿಯ ಪರಿಚಯವನ್ನೂ ಮಾಡುತ್ತಿರುವವರು. ಇಂತಹ ಸುಧಾಮೂರ್ತಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ.

Sweet Couple During Sunset

ಅನುಭವದ ಮಾತು

ಸುಧಾಮೂರ್ತಿ ಅವರ ಮಾತುಗಳು ಸದಾ ಅನುಭವದ ಮೂಸೆಯಿಂದ ಹೊಳೆದು ಬರುವಂಥವುಗಳು. ತಮ್ಮ ಅನುಭವವನ್ನು ಸಾಮಾನ್ಯರ ಜೀವನಕ್ಕೆ ಅನ್ವಯಿಸಿ, ಸದಾ ಸ್ಫೂರ್ತಿಯ ತಿಳಿವಳಿಕೆ ಮಾತನ್ನಾಡುವವರು. ಮದುವೆ, ಕಲಹ, ಕುಟುಂಬ ನಿರ್ವಹಣೆ, ಮಕ್ಕಳ ಪೋಷಣೆ, ಹೆಣ್ಣುಮಕ್ಕಳ ಶಿಕ್ಷಣ, ಜೀವನ ಚಿಂತನೆ, ಸಂಸ್ಕೃತಿ ಹೀಗೆ ಜನಸಾಮಾನ್ಯರಿಗೆ ಅಗತ್ಯವಾದ ವಿಚಾರಗಳನ್ನೇ ಇವರು ಸರಳವಾಗಿ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ನಿಂತು ಮಾತನಾಡುತ್ತಾರೆ. ಬನ್ನಿ, ಈ ಬಾರಿ ಅವರು ದಾಂಪತ್ಯದ ಕಲಹಗಳ ಬಗೆಗೆ ಹೇಳಿದ ಕಿವಿಮಾತಿಗಳಿಗೆ ಕಿವಿಯಾಗೋಣ.

ಜಗಳವಾಡಿಲ್ಲ ಎಂದರೆ ನೀವು ಗಂಡ ಹೆಂಡತಿಯೇ ಅಲ್ಲ!

ನೀವು ಮದುವೆಯಾದಿರಿ ಎಂದರೆ, ನೀವು ಜಗಳ ಮಾಡಲೇಬೇಕು. ಅದರಲ್ಲಿ ಯಾವ ಸಂದೇಹವೂ ಇಲ್ಲ. ಅದನ್ನು ಅರ್ಥ ಮಾಡಿಕೊಳ್ಳಿ. ಒಪ್ಪಿಕೊಳ್ಳಿ. ಪರಿಸ್ಥಿತಿಯೇ ಹಾಗೆ. ನಾನು ಯಾವತ್ತೂ ಜಗಳವಾಡಲಾರೆ ಎಂದು ಮೊದಲೇ ನಿಶ್ಚಯಿಸಿಕೊಂಡು ಹಾಗೆಯೇ ಇರಲು ಶತಾಯಗತಾಯ ಪ್ರಯತ್ನಿಸಬೇಡಿ. ಯಾಕೆಂದರೆ ನೀವು ಜಗಳವಾಡಿಲ್ಲ ಎಂದರೆ ನೀವು ಗಂಡ ಹೆಂಡತಿಯೇ ಅಲ್ಲ!

ಬದುಕು ಎಂದರೆ ಹೊಂದಾಣಿಕೆ

ಬದುಕು ಎಂದರೆ ಹೊಂದಾಣಿಕೆ. ಅಲ್ಲಿ ಕೊಡುಕೊಳ್ಳುವಿಕೆಗಳು ಸಾಕಷ್ಟು ನಡೆಯುತ್ತವೆ. ಪರ್ಫೆಕ್ಟ್‌ ಜೀವನ ಎಂಬುದೇ ಈ ಜಗತ್ತಿನಲ್ಲಿ ಇಲ್ಲ. ಪರ್ಫೆಕ್ಟ್‌ ಕಪಲ್‌ಗಳೂ ಜಗತ್ತಿನಲ್ಲಿಲ್ಲ. ನಿಮ್ಮ ಆತ ಆತನದೇ ಆದ ಪಾಸಿಟಿವ್‌ ಹಾಗೂ ನೆಗೆಟುವ್‌ಗಳೊಂದಿಗೆ ನಿಮ್ಮ ಜೀವನಕ್ಕೆ ಬಂದಿರುತ್ತಾನೆ. ಅಥವಾ ನಿಮ್ಮಾಕೆಗೂ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಇರುತ್ತವೆ. ಇದನ್ನು ಮೊದಲು ಒಪ್ಪಿಕೊಳ್ಳಿ. ನನಗೆ ನನ್ನದೇ ಆದ ಪ್ಲಸ್‌ ಹಾಗೂ ಮೈನಸ್‌ಗಳಿದ್ದಂತೆಯೇ ಆತ/ಆಕೆಯೂ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ.

couple
couple

ಒಬ್ಬರು ಸಮಾಧಾನದಿಂದಿರುವುದನ್ನು ಕಲಿಯಿರಿ

ಮದುವೆಯಾದ ಮೇಲೆ ನಿಮ್ಮ ನಡುವೆ ಯಾವುದೇ ಸಮಸ್ಯೆಗಳು ಬಂದರೆ ಏನು ಮಾಡಬೇಕು ಎಂದೂ ಸುಧಾಮೂರ್ತಿ ಹೇಳುತ್ತಾರೆ. ಅವರ ಪ್ರಕಾರ, ಮದುವೆಯಾದ ಮೇಲೆ ನಿಮ್ಮಿಬ್ಬರ ನಡುವೆ ಜಗಳವಾಯಿತು ಎಂದರೆ, ಒಬ್ಬರು ಸಮಾಧಾನದಿಂದಿರುವುದನ್ನು ಕಲಿಯಿರಿ. ಒಬ್ಬರಿಗೆ ಅಪ್‌ಸೆಟ್‌ ಆದರೆ, ಇನ್ನೊಬ್ಬರು ಶಾಂತವಾಗಬೇಕು. ಜೊತೆಗೆ ಬಾಯಿ ಮುಚ್ಚಿ ಕುಳಿತುಕೊಳ್ಳಬೇಕು. ಇದಷ್ಟೇ ಜಗಳಕ್ಕೆ ಮದ್ದು ಎನ್ನುತ್ತಾರೆ ಅವರು.

ಒಬ್ಬರಿಗೊಬ್ಬರು ಸಹಾಯ ಮಾಡುವುದನ್ನು ಕಲಿಯಿರಿ

ಇಬ್ಬರೂ ಮೊದಲು ಒಬ್ಬರಿಗೊಬ್ಬರು ಸಹಾಯ ಮಾಡುವುದನ್ನು ಕಲಿತುಕೊಳ್ಳಿ. ಈಗ ಇಬ್ಬರೂ ಹೊರಗೆ ದುಡಿಯುವವರೇ. ಹೀಗಾಗಿ ಮಹಿಳೆಯೂ ತನ್ನ ಗಂಡನ ಸಹಾಯವನ್ನು ಪಡೆಯಬೇಕು. ಎಲ್ಲ ಕೆಲಸವನ್ನೂ ಆಕೆಯೇ ಮಾಡಬೇಕು ಎಂಬ ಮನಸ್ಥಿತಿ ಗಂಡಸರಲ್ಲಿದ್ದರೆ ಅದನ್ನು ಮೊದಲು ಬಿಡಿ ಎನ್ನುತ್ತಾರೆ ಅವರು.

ಇದನ್ನೂ ಓದಿ: Choosing The Right Pillow: ಸರಿಯಾದ ದಿಂಬನ್ನು ಆಯ್ಕೆ ಮಾಡುವುದು ಹೇಗೆ?

ಹೆಂಡತಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಬೇಕು

ಪೀಳಿಗೆಯ ಎಲ್ಲ ಗಂಡಸರೂ, ತಮ್ಮ ಹೆಂಡತಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಬೇಕು. ಇದು ಬಹಳ ಮುಖ್ಯ. ಇದು ಕೇವಲ ಸಹಾಯವಷ್ಟೇ ಅಲ್ಲ, ಇಬ್ಬರ ನಡುವಿನ ಸಂಬಂಧಕ್ಕೂ ಬಹಳ ಮುಖ್ಯ. ಪುರುಷರು ಹೆಂಗಸರ ಹೆಗಲ ಮೇಲೆ ಬೀಳುವ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದನ್ನು ಕಲಿತರೆ ಎಷ್ಟೋ ಸಮಸ್ಯೆಗಳು ತಾನೇ ತಾನಾಗಿ ಪರಿಹಾರವಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Brain Eating Amoeba: ಕೇರಳದಲ್ಲಿ ಮತ್ತೆ ಮೆದುಳು ತಿನ್ನುವ ಅಮೀಬಾ ಹಾವಳಿ; ಮೂವರಲ್ಲಿ ಸೋಂಕು ಪತ್ತೆ

Brain Eating Amoeba: ಕೇರಳದಲ್ಲಿ ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಇದೀಗ ಮತ್ತೆ 3 ಪ್ರಕರಣ ತಿರುವನಂತಪುರಂನಲ್ಲಿ ಪತ್ತೆಯಾಗಿದೆ. ಸೋಂಕಿಗೆ ಒಳಗಾದ ಮೂವರು ರೋಗಿಗಳು ಪ್ರಸ್ತುತ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲ ರೋಗಿಗಳಿಗೆ ಅವರು ಸ್ನಾನ ಮಾಡಿದ ಕೊಳದಿಂದಲೇ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ.

VISTARANEWS.COM


on

Brain Eating Amoeba
Koo

ತಿರುವನಂತಪುರಂ: ಕೇರಳದಲ್ಲಿ ಅಪರೂಪದ ಮೆದುಳು ತಿನ್ನುವ ಅಮೀಬಾ (Brain Eating Amoeba) ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಇದೀಗ ಮತ್ತೆ 3 ಪ್ರಕರಣ ತಿರುವನಂತಪುರಂನಲ್ಲಿ ಪತ್ತೆಯಾಗಿದೆ. ಕೊಳದಲ್ಲಿ ಸ್ನಾನ ಮಾಡಿದ ಮೂವರರಲ್ಲಿ ಈ ಸೋಂಕು ಕಂಡು ಬಂದಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ (Veena George) ತಿಳಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ತಿರುವನಂತರಪುರಂನಲ್ಲಿ ಮೃತಮಟ್ಟ ವ್ಯಕ್ತಿಗೂ ಈ ಸೋಂಕು ತಗುಲಿತ್ತು ಎಂದು ಅವರು ತಿಳಿಸಿದ್ದಾರೆ.

ಸೋಂಕಿಗೆ ಒಳಗಾದ ಮೂವರು ರೋಗಿಗಳು ಪ್ರಸ್ತುತ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲ ರೋಗಿಗಳಿಗೆ ಅವರು ಸ್ನಾನ ಮಾಡಿದ ಕೊಳದಿಂದಲೇ ಸೋಂಕು ತಗುಲಿದೆ ಎಂದು ಸಚಿವೆ ತಿಳಿಸಿದ್ದಾರೆ.

ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಎಂದೂ ಕರೆಯಲ್ಪಡುವ ಈ ಪ್ರಕರಣಗಳು ತಿರುವನಂತಪುರಂನಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಜತೆಗೆ ಸಾರ್ವಜನಿಕರಿಗೆ ಕೆಲವೊಂದು ಸಲಹೆ ನೀಡಿದೆ. ಪ್ರಾಣಿಗಳು ಸ್ನಾನ ಮಾಡುವ ಕೊಳ, ನೀರಿನ ಹೊಂಡಗಳಲ್ಲಿ ಈಜಾಡದಂತೆ ಸೂಚಿಸಿದೆ. ಜತೆಗೆ ಕಲುಷಿತ ನೀರಿನಲ್ಲಿ ಸ್ನಾನ ಮಾಡದಿರಲು ಮತ್ತು ಮುಖ ತೊಳೆಯದಿರಲು ತಿಳಿಸಿದೆ.

ಜುಲೈಯಲ್ಲಿ ಸೋಂಕು ಭಾದಿತ 14 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದ. ಆ ಮೂಲಕ ಮೇ ತಿಂಗಳಿಂದ ಈ ಅಪರೂಪದ ಸೋಂಕಿಗೆ ಬಲಿಯಾಗುವವರ ಸಂಖ್ಯೆ ನಾಲ್ಕಕ್ಕೇರಿದೆ. ಈ ಹಿಂದೆ ಜೂನ್ 25ರಂದು ಕಣ್ಣೂರು ಜಿಲ್ಲೆಯ 13 ವರ್ಷದ ಬಾಲಕಿ, ಮೇ 21ರಂದು ಮಲಪ್ಪುರಂನ 5 ವರ್ಷದ ಬಾಲಕಿ ಮತ್ತು ಜೂನ್‌ ಮೊದಲ ವಾರದಲ್ಲಿ ಕೋಝಿಕ್ಕೋಡ್‌ ಜಿಲ್ಲೆಯ 12ವರ್ಷದ ಬಾಲಕ ಈ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದರು. ಇತ್ತೀಚೆಗೆ ತಿರುವನಂತಪುರಂನಲ್ಲಿ ಸೋಂಕು ಬಾಧಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಸೋಂಕು ಮಾರಣಾಂತಿಕವಾಗಿರುವುದರಿಂದಲೇ ಆತಂಕ ಸೃಷ್ಟಿಸಿದೆ.

ಹೇಗೆ ಹರಡುತ್ತದೆ?

ಈ ರೋಗಾಣು ಇರುವ ನೀರಿನಲ್ಲಿ ಈಜುವುದು ಅಥವಾ ಇನ್ನಾವುದಾದರೂ ರೀತಿಯಿಂದ ಈ ನೀರು ಮೂಗಿನೊಳಗೆ ಹೋದರೆ, ಆ ವ್ಯಕ್ತಿಗೆ ಈ ಅಮೀಬಾ ಸೋಂಕು ತಗುಲುತ್ತದೆ. ತುಂಬ ದಿನದಿಂದ ಈಜುಕೊಳದ ನೀರು ಬದಲಿಸದೆ ಇದ್ದರೆ ಅಲ್ಲಿಯೂ ಈ ಅಮೀಬಾ ಇರಬಹುದು. ಅದರಲ್ಲೂ ಕಲುಷಿತ ನೀರಿನಲ್ಲಿ ಈ ಅಮೀಬಾ ಉತ್ಪತ್ತಿ ಪ್ರಮಾಣ ಹೆಚ್ಚು. ನೀರೊಳಗೆ ಮುಖ ಒಳಗೆ ಹಾಕಿ ಈಜಿದಾಗ, ಸರೋವರ, ಕೊಳ, ನದಿ ನೀರಿನಲ್ಲಿ ಮುಖ ಮುಳುಗಿಸಿದಾಗ, ಕಲುಷಿತ ನೀರಿನಲ್ಲಿ ತಲೆ ಸ್ನಾನ ಮಾಡಿದಾಗ ಈ ಅಮೀಬಾ ಮೂಗಿನ ಮೂಲಕ ಮೆದುಳು ಸೇರುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: Brain Eating Amoeba: ಮೆದುಳು ತಿನ್ನುವ ಅಮೀಬಾದಿಂದ ನಮಗೂ ಅಪಾಯ ಇದೆಯೆ?

ಲಕ್ಷಣಗಳು

ತೀವ್ರ ಜ್ವರ, ಅತೀವ ತಲೆನೋವು, ವಾಂತಿ ಅಥವಾ ಹೊಟ್ಟೆ ತೊಳೆಸುವುದು, ನಡುಕ, ಕುತ್ತಿಗೆ ಗಡುಸಾಗುವುದು, ಬೆಳಕು ನೋಡಲು ಕಷ್ಟ, ಗೊಂದಲ, ಕೋಮ ಇದು ಈ ಸೋಂಕಿನ ಲಕ್ಷಣ. ಒಮ್ಮೆ ಈ ಅಮೀಬಾ ಮೂಗು ಪ್ರವೇಶಿಸಿದ ಮೇಲೆ, ಲಕ್ಷಣಗಳು ಕಾಣುವುದಕ್ಕೆ 2-15 ದಿನಗಳವರೆಗೆ ತೆಗೆದುಕೊಳ್ಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿದ ದಾಖಲೆಯೂ ಇಲ್ಲ. ಇದು ಮೂಗಿನ ಮೂಲಕವೇ ಪ್ರವೇಶಿಸಬೇಕು. ಒಮ್ಮೆ ಲಕ್ಷಣಗಳು ಕಾಣಿಸಿದ ಮೇಲೆ 7-10 ದಿನಗಳ ಒಳಗೆ ಸೋಂಕಿತರು ಮರಣಿಸಿದ ಪ್ರಕರಣಗಳೇ ಹೆಚ್ಚು. ಇದರಿಂದ ಚೇತರಿಸಿಕೊಂಡವರು ಅತಿ ವಿರಳ.

Continue Reading

ಅಂಕಣ

ರಾಜಮಾರ್ಗ ಅಂಕಣ: ನಾವು ನಾಶ ಆಗೋದು ಯಾವಾಗ?

ರಾಜಮಾರ್ಗ ಅಂಕಣ: ಕೆಲವೊಮ್ಮೆ ನಮ್ಮ ಸಾವು ನಮಗೆ ತಿಳಿಯುವುದೇ ಇಲ್ಲ. ಆದರೆ ವ್ಯಕ್ತಿಗಳ ಬದುಕಿನ ಚೈತನ್ಯಮಯಿ ಕ್ಷಣಗಳ ನಾಶ ನಾನಾ ಬಗೆಯಲ್ಲಿ ಸಾಧ್ಯ. ಅವು ಹೇಗೆ ಅಂತ ಇಲ್ಲಿ ನೋಡೋಣ.

VISTARANEWS.COM


on

change ರಾಜಮಾರ್ಗ ಅಂಕಣ
Koo

ಬನ್ನಿ ಬದಲಾಗೋಣ. ಆಗದಿದ್ದರೆ ಅದಕ್ಕೆ ನಾವೇ ಹೊಣೆ!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: 1) ನಾನು ಏನು ಬರೆದರೂ ಜನರು ಓದುತ್ತಾರೆ ಎಂದು ನಂಬಲು ತೊಡಗಿದ ಕ್ಷಣಕ್ಕೆ ಒಬ್ಬ ಬರಹಗಾರ ಸಾಯುತ್ತಾನೆ.

2) ತಾನು ಏನು ಮಾಡಿದರೂ ಜನರು ಓಟು ಹಾಕ್ತಾರೆ ಎಂದು ನಂಬಿದ ಕ್ಷಣಕ್ಕೆ ಓರ್ವ ರಾಜಕಾರಣಿ ನಾಶವಾಗುತ್ತಾನೆ.

3) ತಾನು ಎಲ್ಲವೂ ಕಲಿತಾಗಿದೆ, ಹೊಸದಾಗಿ ಕಲಿಯುವುದು ಏನಿಲ್ಲ ಎಂದು ನಂಬಿದ ಕ್ಷಣಕ್ಕೆ ಒಬ್ಬ ಗುರುವು ಸಾವನ್ನು ಕಾಣುತ್ತಾನೆ.

4) ತಾನು ಉಪದೇಶ ಮಾಡುವುದರಿಂದ ಜಗತ್ತು ಬದಲಾಗುತ್ತದೆ ಎಂದು ನಂಬಿದ ಕ್ಷಣಕ್ಕೆ ಓರ್ವ ಧರ್ಮಗುರುವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ.

5) ಬೇರೆಯವರ ಖಾಸಗಿ ಜೀವನದಲ್ಲಿ ಇಣುಕಿ ನೋಡುವುದೇ ಸುದ್ದಿ ಎಂದು ನಿರ್ಧಾರ ಮಾಡಿದ ಕ್ಷಣಕ್ಕೆ ಓರ್ವ ಪತ್ರಕರ್ತನು ನಾಶವಾಗುತ್ತಾನೆ.

6) ನಾನು ಪ್ರಯತ್ನ ಮಾಡದೆ ಎಲ್ಲರನ್ನೂ ದೇವರೇ ಗುಣಪಡಿಸುತ್ತಾನೆ ಎಂದು ನಂಬಿ ಕೂತ ಕ್ಷಣಕ್ಕೆ ಓರ್ವ ವೈದ್ಯನು ತನ್ನ ಮೌಲ್ಯ ಕಳೆದುಕೊಳ್ಳುತ್ತಾನೆ.

7) ಪರಿಶ್ರಮವಿಲ್ಲದೆ ಕೀರ್ತಿ ಬರಲಿ ಎಂದು ಹಾರೈಸಿದ ಕ್ಷಣಕ್ಕೆ ಒಂದು ಪ್ರತಿಭೆಯು ಸಾಯುತ್ತದೆ.

8) ತಾನಿರುವುದೇ ಆದೇಶ ನೀಡಲು, ಉಳಿದವರೆಲ್ಲರೂ ನನ್ನನ್ನು ಫಾಲೋ ಮಾಡಬೇಕು ಎಂದು ನಂಬಿದ ಕ್ಷಣಕ್ಕೆ ಒಬ್ಬ ಲೀಡರ್ ಸಾಯುತ್ತಾನೆ.

9) ತಾನು ಕಂಫರ್ಟ್ ವಲಯದಲ್ಲಿ ಇರ್ತೇನೆ, ರಿಸ್ಕ್ ಯಾರಿಗೆ ಬೇಕು? ಎಂದು ನಂಬಿ ಕೂತ ಕ್ಷಣಕ್ಕೆ ಓರ್ವ ಉದ್ಯಮಿಯು ನಾಶವಾಗುತ್ತಾನೆ.

10) ಸೃಜನಶೀಲವಾಗಿ ಯೋಚನೆ ಮಾಡುವುದನ್ನು ಬಿಟ್ಟ ಕ್ಷಣದಲ್ಲಿ ಓರ್ವ ಕಲಾವಿದನು ಸಾಯುತ್ತಾನೆ.

11) ತನ್ನ ಸಾಮರ್ಥ್ಯವನ್ನು ನಂಬದೆ ಬೇರೆಯವರನ್ನು ಅನುಕರಣೆ ಮಾಡುತ್ತಾ ಹೋದಾಗ ಓರ್ವ ಸಾಧಕನು ನಿಧಾನವಾಗಿ ನಾಶವಾಗುತ್ತಾನೆ.

12) ತನ್ನ ಉತ್ಪನ್ನಗಳಲ್ಲಿ ನಂಬಿಕೆ ಇಡದೆ ಜಾಹೀರಾತುಗಳನ್ನು ನಂಬಿ ಕೂತಾಗ ಓರ್ವ ವ್ಯಾಪಾರಿಯು ಖಾಲಿ ಆಗುತ್ತಾನೆ.

13) ಕ್ಷಣ ಕ್ಷಣಕ್ಕೆ ಅಪ್ಡೇಟ್ ಆಗದೇ ಅದೇ ಸವಕಲು ಮಾದರಿಗಳನ್ನು ನಂಬಿ ಕೂತಿರುವ ಸಂಶೋಧಕನು ಔಟ್ ಡೇಟ್ ಆಗುವುದು ಖಂಡಿತ.

14) ತನಗೆ ಬಂದ ಸೋಲುಗಳಿಗೆ ಆತ್ಮಾವಲೋಕನ ಮಾಡಿಕೊಳ್ಳದೆ ಬೇರೆಯವರನ್ನು ದೂರುತ್ತಾ ಕೂತಾಗ ಒಬ್ಬ ಮ್ಯಾನೇಜರ್ ಸಾಯುತ್ತಾನೆ.

15) ಗುರುಗಳ ಮೇಲೆ ನಂಬಿಕೆ ಇಲ್ಲದೆ ಎಲ್ಲವನ್ನೂ ನಾನೇ ಕಲಿಯುತ್ತೇನೆ ಎಂದು ಹೊರಡುವ ಶಿಷ್ಯ ಸೋಲುವುದು ಖಂಡಿತ.

16) ಗೆಲುವಿನ ದಾರಿಯನ್ನು ಹೇಳಿಕೊಡದೆ ಕೇವಲ ಮೋಟಿವೇಶನ್ ಮಾತ್ರ ಮಾಡುತ್ತಾ ಹೋಗುವ ತರಬೇತುದಾರನು ನಿಧಾನಕ್ಕೆ ಖಾಲಿ ಆಗುತ್ತಾನೆ.

17) ತನಗೆ ದೊರೆತ ಪ್ರತೀಯೊಂದು ಅವಕಾಶವನ್ನು ವ್ಯರ್ಥ ಮಾಡುತ್ತಾ ಇನ್ನೊಂದು ಅವಕಾಶ ಬೇಕಿತ್ತು ಎಂದು ಕಾಯುತ್ತಾ ಕುಳಿತ ಕ್ರೀಡಾಪಟುವು ನಿಧಾನವಾಗಿ ಮೌಲ್ಯ ಕಳೆದುಕೊಳ್ಳುತ್ತಾನೆ.

Morning sun light and get up early
Morning sun light and get up early

18) ತನ್ನ ಮತದಾನದ ಹಕ್ಕನ್ನು ಸರಿಯಾಗಿ ಚಲಾವಣೆ ಮಾಡದೆ ಸರಕಾರ ಸರಿಯಿಲ್ಲ ಎಂದು ಟೀಕೆ ಮಾಡುವ ಮತದಾರನು ತಾನು ನಾಶವಾಗುವುದು ಮಾತ್ರವಲ್ಲ, ಪ್ರಜಾಪ್ರಭುತ್ವದ ನಾಶಕ್ಕೆ ಕೂಡ ಕಾರಣ ಆಗುತ್ತಾನೆ.

19) ಬೇರೆಯವರ ಮಾತುಗಳನ್ನು ಆಲಿಸದೇ ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ನಿರ್ಧಾರ ಮಾಡುವ ಅರಸನು ನಿಧಾನವಾಗಿ ನಾಶವಾಗುತ್ತಾನೆ.

20) ತನ್ನ ಸಾಮರ್ಥ್ಯಗಳ ಮೇಲೆ ನಂಬಿಕೆ ಇಡದೆ ಯಾರ್ಯಾರನ್ನೋ ಅವಲಂಬನೆ ಮಾಡುವ ಬಾಸ್ ನಿಧಾನವಾಗಿ ನಾಶವಾಗಿ ಬಿಡುತ್ತಾನೆ.

21) ಬೇರೆ ಯಾರನ್ನೂ ಬೆಳೆಸದೆ ತಾನು ಮಾತ್ರ ಬೆಳೆದರೆ ಸಾಕು ಎಂದು ಯೋಚಿಸುವ ವ್ಯಕ್ತಿಯು ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ.

22) ತಾನು ಆಡುವ ಮಾತುಗಳು ಬೇರೆಯವರಿಗೆ, ತನ್ನ ಅನುಷ್ಠಾನಕ್ಕೆ ಅಲ್ಲ ಎಂದು ನಂಬುತ್ತ ಕೂತರೆ ಒಬ್ಬ ಭಾಷಣಕಾರ ನಾಶವಾಗಲು ಹೆಚ್ಚು ಸಮಯ ಬೇಕಾಗಿಲ್ಲ.

23) ರಾಷ್ಟ್ರಕ್ಕೆ ತನ್ನ ನಿಷ್ಠೆಯನ್ನು ಮರೆತು, ರಾಷ್ಟ್ರ ಮೊದಲು ಎಂದು ನಂಬಿಕೆ ಇಲ್ಲದ ಸೈನಿಕನು ಯುದ್ಧವನ್ನು ಮಾಡದೆ ಸಾಯುತ್ತಾನೆ.

ಯೋಚಿಸಿ ಮತ್ತು ಬದಲಾಗಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕೃತಜ್ಞತೆ ಎಂಬ ಮಹಾನ್ ಪ್ರವಾಹ

Continue Reading

ವಿಜಯನಗರ

Vijayanagara News: ಹಗರಿಬೊಮ್ಮನಹಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

Vijayanagara News: ಹಗರಿಬೊಮ್ಮನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಸಿ.ಆರ್. ಫೌಂಡೇಷನ್, ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ಸಂಬಂಧಿತ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

VISTARANEWS.COM


on

Free eye checkup and surgery camp at Hagaribommanahalli
Koo

ಹಗರಿಬೊಮ್ಮನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಸಿ.ಆರ್. ಫೌಂಡೇಷನ್, ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ಸಂಬಂಧಿತ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು (Vijayanagara News)ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್‌ನ ಗೌರವಾಧ್ಯಕ್ಷ ಎ.ವೀರಣ್ಣ ಮಾತನಾಡಿ, ಟ್ರಸ್ಟ್ ಮತ್ತು ಫೌಂಡೇಷನ್‌ಗಳ ಸಹಯೋಗದೊಂದಿಗೆ ತಾಲೂಕು ಸೇರಿದಂತೆ ಹರಪನಹಳ್ಳಿ, ಹೊಸಪೇಟೆ ಹಾಗೂ ಹಡಗಲಿ ತಾಲೂಕುಗಳಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದೇವೆ. ಮುಂದೆ ಕೂಡ ಇಂತಹ ಜನಪರ ಕೆಲಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಸತತ ಎರಡನೆ ದಿನವೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

ಈ ವೇಳೆ ಒಟ್ಟು 209 ಜನರು ತಪಾಸಣೆಗೊಳಗಾದರು. ಅದರಲ್ಲಿ 94 ಜನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಬಳಿಕ 15ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಟ್ರಸ್ಟ್‌ನ ಪದಾಧಿಕಾರಿಗಳು ಗೌರವಿಸಿ, ಸನ್ಮಾನಿಸಿದರು.

ಶಿಬಿರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ಮೇಲ್ವಿಚಾರಕ ಕೃಷ್ಣ, ವೈದ್ಯರಾದ ಡಾ. ವಿನಯ್, ಡಾ. ದೀಪ, ತ್ಯಾಗರಾಜ್‌ ನಾಯ್ಕ್, ಇಲ್ಲಿಯ ಸರ್ಕಾರಿ ವೈದ್ಯ ಡಾ. ಶರತ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್‌ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು

ಟ್ರಸ್ಟ್‌ನ ತಾಲೂಕು ಅಧ್ಯಕ್ಷ ಭದ್ರವಾಡಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುಧಾಕರ ಪಾಟೀಲ್, ಕೆ. ಪ್ರಭಾಕರ, ನರೆಗಲ್ ಮಲ್ಲಿಕಾರ್ಜುನ, ದಿವಾಕರಗೌಡ, ಕರಿಬಸವರಾಜ್, ನಾಗರಾಜ್, ಗಜಾಪುರ ಮಂಜುನಾಥ, ಕರಿಯಪ್ಪ ಗುಜನೂರು, ಪೂಜಾರ್ ಮಲ್ಲಿಕಾರ್ಜುನ, ಕುಂಟೂರು ನಿಂಗಣ್ಣ, ಇಟ್ಟಿಗಿ ಗುರುಬಸವರಾಜ್, ಮಲ್ಲಯ್ಯ, ಕಡಬಾಳು ಮಂಜಣ್ಣ, ಎಲಿಗಾರ್ ಮಂಜುನಾಥ, ಭದ್ರವಾಡಿ ಸುರೇಶ, ಹನಸಿ ವೀರೇಶ, ಆನಂದ, ವಿಜಯ್, ಕುಮಾರಸ್ವಾಮಿ, ನೆಲ್ಕುದ್ರಿ ಕುಮಾರ್, ಐನಳ್ಳಿ ಶೇಖರ್, ಬಾಬುವಲಿ, ಸಾಲ್ಮನಿ ನಾಗರಾಜ್ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಎಚ್.ಎಂ. ನಾಗರಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.

Continue Reading

ಫ್ಯಾಷನ್

Paris Olympics Saree Fashion: ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ವೈವಿಧ್ಯಮಯ ಇಂಡೋ-ವೆಸ್ಟರ್ನ್‌ ಸೀರೆಗಳಲ್ಲಿ ಕಾಣಿಸಿಕೊಂಡ ತಾಪ್ಸಿ ಪನ್ನು!

Paris Olympics saree fashion: ಪತಿ ಬ್ಯಾಡ್ಮಿಟನ್‌ ಕೋಚ್‌ ಮಥಾಯಿಸ್‌ಗೆ ಬೆಂಬಲ ನೀಡುವ ಸಲುವಾಗಿ ಪ್ಯಾರಿಸ್‌ ಒಲಂಪಿಕ್ಸ್‌ಗೆ ಆಗಮಿಸಿದ್ದ ಬಾಲಿವುಡ್‌ ನಟಿ ತಾಪ್ಸಿ ಪನ್ನು ಬಗೆಬಗೆಯ ಸೀರೆಗಳಲ್ಲಿ, ಪ್ರಯೋಗಾತ್ಮಕ ಡ್ರೇಪಿಂಗ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಸೀರೆ ಪ್ರೇಮಿಗಳ ಗಮನ ಸೆಳೆದರು. ಅವರು ಹೇಗೆಲ್ಲ ಕಾಣಿಸಿಕೊಂಡರು? ಅವರ ಸೀರೆ ಲವ್‌ ಬಗ್ಗೆ ಫ್ಯಾಷನಿಸ್ಟ್‌ಗಳು ಹೇಳಿರುವುದೇನು? ಇಲ್ಲಿದೆ ವಿವರ.

VISTARANEWS.COM


on

Paris Olympics saree fashion
ಚಿತ್ರಗಳು: ತಾಪ್ಸಿ ಪನ್ನು, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ (Paris Olympics saree fashion) ಬಾಲಿವುಡ್‌ ನಟಿ ತಾಪ್ಸಿ ಪನ್ನು (Taapsee Pannu) ನಾನಾ ಬಗೆಯ ಸೀರೆಗಳಲ್ಲಿ, ಪ್ರಯೋಗಾತ್ಮಕ ಡ್ರೇಪಿಂಗ್‌ನಲ್ಲಿ ಕಾಣಿಸಿಕೊಂಡು ಸೀರೆ ಪ್ರಿಯರ ಗಮನ ಸೆಳೆದರು.
ಪತಿ ಬ್ಯಾಡ್ಮಿಟನ್‌ ಕೋಚ್‌ ಮಾಥಾಯಿಸ್‌ಗೆ ಬೆಂಬಲ ನೀಡುವ ಸಲುವಾಗಿ ಪ್ಯಾರಿಸ್‌ ಒಲಂಪಿಕ್ಸ್‌ಗೆ ಆಗಮಿಸಿರುವ ನಟಿ ತಾಪ್ಸಿ ಪನ್ನು ಒಂದಲ್ಲ, ಎರಡಲ್ಲ ನಾಲ್ಕೈದು ಬಗೆಯ ಸೀರೆಗಳಲ್ಲಿ ಪ್ರಯೋಗಾತ್ಮಕ ಡ್ರೇಪಿಂಗ್‌ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡು, ಅಲ್ಲಿನ ಬೀದಿ ಬೀದಿಗಳಲ್ಲಿ ಓಡಾಡಿ, ಎಲ್ಲರ ಗಮನಸೆಳೆದರು.

saree fashion

ಅಂದಹಾಗೆ, ತಾಪ್ಸಿ ಪನ್ನು (Taapsee Pannu) ಎಲ್ಲರಂತೆ ಸಾಮಾನ್ಯ ಉಡುಗೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಎಲ್ಲರೂ ಒಮ್ಮೆ ತಿರುಗಿ ನೋಡುವಂತಹ ಸೀರೆಗಳನ್ನು ಇಂಡೋ-ವೆಸ್ಟರ್ನ್‌ ಸ್ಟೈಲಿಂಗ್‌ನಲ್ಲಿ ಉಟ್ಟು ಹೈಲೈಟಾದರು. ಪ್ರತಿ ಸೀರೆಯಲ್ಲೂ ಡಿಫರೆಂಟಾಗಿ ಕಾಣಿಸಿಕೊಂಡರು. ತಾಪ್ಸಿಯ ಈ ಸೀರೆಗಳ ಸ್ಟೈಲಿಂಗ್‌, ಅವರಿಗಿರುವ ಸೀರೆ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಇತರೇ ಸಿನಿಮಾ ತಾರೆಯರು ಕೂಡ ಇವರಂತೆಯೇ ಸೀರೆಯನ್ನು ಉಡಲಾರಂಭಿಸಿದಲ್ಲಿ, ಜಾಗತೀಕ ಮಟ್ಟದಲ್ಲಿ ಭಾರತೀಯರ ಈ ಸೀರೆಗಳಿಗೆ ಪ್ರಾಮುಖ್ಯತೆ ಹೆಚ್ಚುತ್ತದೆ ಎಂದಿದ್ದಾರೆ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ. ಇನ್ನು, ಫ್ಯಾಷನಿಸ್ಟ್‌ ರಾಕಿ ಹಾಗೂ ಜಾನ್‌ ಕೂಡ ಇದನ್ನೇ ಸಮರ್ಥಿಸಿಕೊಳ್ಳುತ್ತಾರೆ.

ತಾಪ್ಸಿ ಪನ್ನು ಸೀರೆಗಳ ಡ್ರೇಪಿಂಗ್‌ ಸ್ಟೈಲಿಂಗ್‌ ಹೇಗಿತ್ತು?

  • ಪ್ಯಾರಿಸ್‌ ಒಲಂಪಿಕ್ಸ್‌ನ ಮೊದಲ ದಿನ ತಾಪ್ಸಿ ಚಿಕ್ಕ ಪಿಂಕ್‌ ಬಾರ್ಡರ್‌ನ ವೈಬ್ರೆಂಟ್‌ ಹಸಿರು ಕಾಟನ್‌ ಸೀರೆಯನ್ನು ಸ್ಕಾರ್ಫ್‌ನಂತೆ ಕುತ್ತಿಗೆ ಸುತ್ತಿ ಸ್ಲಿವ್‌ಲೆಸ್‌ ವೇಸ್ಟ್ಕೋಟ್‌ನೊಳಗೆ ತೂರಿ, ಪ್ರಿಂಟೆಡ್‌ ಸೆರಗನ್ನು ವೇಸ್ಟ್‌ಲೈನ್‌ನ ಮುಂಬರುವಂತೆ ಡ್ರೇಪ್‌ ಮಾಡಿದ್ದರು. ಇದರೊಂದಿಗೆ ಸ್ನೀಕರ್‌ ಧರಿಸಿದ್ದರು.
  • ಎರಡನೇ ದಿನ ಬ್ಲ್ಯಾಕ್‌ ಟ್ಯಾಂಕ್‌ ಟಾಪ್‌ ಜೊತೆಗೆ ಕಪ್ಪು ವರ್ಣದ ಚಿಕ್ಕ ಬಾರ್ಡರ್‌ನ ಪಿಂಕ್‌ ಕಾಟನ್‌ ಸೀರೆಯನ್ನು ಧೋತಿ ಸ್ಟೈಲ್‌ನಲ್ಲಿ ಉಟ್ಟಿದ್ದರು. ಸ್ಟ್ರಾಪ್‌ ಸ್ಯಾಂಡಲ್‌ ಧರಿಸಿದ್ದರು.
  • ಬರ್ತ್‌ಡೇ ದಿನ ತಾಪ್ಸಿ, ಡೆನಿಮ್‌ ಶರ್ಟ್ ಜೊತೆಗೆ ಪಿಂಕ್‌ ಚಿಕ್ಕ ಬಾರ್ಡರ್‌ ಇರುವ ಹಳದಿ ಬಣ್ಣದ, ಗರ್ಲ್ಸ್ ಮುಖಗಳಿರುವಂತಹ ಕ್ವಿರ್ಕಿ ಪ್ರಿಂಟ್ಸ್‌ನ ಸೀರೆಯನ್ನು ಉಟ್ಟಿದ್ದರು. ಅವರ ಎರಡು ಪುಟ್ಟ ಜುಟ್ಟು ಹಾಗೂ ಬ್ಲ್ಯಾಕ್‌ ಶೂ ಅವರಿಗೆ ಕ್ವಿರ್ಕಿ ಲುಕ್‌ ನೀಡಿತ್ತು.
  • ಮತ್ತೊಂದು ದಿನ ವೆಸ್ಟರ್ನ್‌ ಲುಕ್‌ ನೀಡುವ ಕಾಲರ್‌ ನೆಕ್‌ನ ಫುಲ್ ಸ್ಲೀವ್‌ನ ಕಾರ್ಸೆಟ್‌ ಟಾಪ್‌ ಜೊತೆಗೆ ಬ್ಲ್ಯೂ & ವೈಟ್‌ ಕಾಟನ್‌ ಸೀರೆಯನ್ನು ಉಟ್ಟಿದ್ದ ತಾಪ್ಸಿ, ಸೀರೆ ಸೆರಗನ್ನು ಬಲಕ್ಕೆ ತಿರುಗಿಸಿ, ಒಟ್ಟೊಟ್ಟಾಗಿ ಪಿನ್‌ ಮಾಡಿದ್ದರು. ಇದರೊಂದಿಗೆ ಸ್ಕೂಲ್‌ ಶೂನಂತೆ ಬಿಂಬಿಸುವ ಹಾಫ್‌ ಶೂ ಅವರಿಗೆ ಡಿಫರೆಂಟ್‌ ಲುಕ್‌ ನೀಡಿತ್ತು.

ಇದನ್ನೂ ಓದಿ: Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್‌; ಶುರುವಾಗಿದೆ ಶಾಪಿಂಗ್‌ ಭರಾಟೆ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
spandana vijay raghavendra
ಸಿನಿಮಾ11 seconds ago

Spandana Vijay Raghavendra: ಸ್ಪಂದನ ಅಗಲಿ ಒಂದು ವರ್ಷ, ಭಾವುಕ ಪೋಸ್ಟ್‌ ಮಾಡಿದ ವಿಜಯ್‌ ರಾಘವೇಂದ್ರ

Muhammad Yunus
ಪ್ರಮುಖ ಸುದ್ದಿ24 mins ago

Muhammad Yunus : ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್​ ಬಾಂಗ್ಲಾ ಮಧ್ಯಂತರ ಸರ್ಕಾರದ ಸಲಹೆಗಾರ

murder case
ರಾಮನಗರ29 mins ago

Murder case : ರಾಮನಗರದಲ್ಲಿ ಸಂಬಂಧಿಕರಿಂದಲೇ ಯುವಕನ ಬರ್ಬರ ಹತ್ಯೆ

Gold Rate Today
ಚಿನ್ನದ ದರ53 mins ago

Gold Rate Today: ಕೊನೆಗೂ ಇಳಿಯಿತು ಬಂಗಾರದ ದರ; ಇಂದು ಚಿನ್ನ ಇಷ್ಟು ಅಗ್ಗ

Sexual Abuse
Latest1 hour ago

Sexual Abuse : ಸಾಲ ತೀರಿಸಲಾಗದೆ ಅಪ್ರಾಪ್ತ ವಯಸ್ಸಿನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ತಾಯಿ!

Dinesh Karthik
ಪ್ರಮುಖ ಸುದ್ದಿ1 hour ago

Dinesh Karthik : ದಕ್ಷಿಣ ಆಫ್ರಿಕಾದ ಲೀಗ್​ನಲ್ಲಿ ಪಾರ್ಲ್​ ರಾಯಲ್ಸ್​ ತಂಡ ಸೇರಿದ ದಿನೇಶ್ ಕಾರ್ತಿಕ್​

actor yash 1
ಸಿನಿಮಾ1 hour ago

Actor Yash: ಧರ್ಮಸ್ಥಳದಲ್ಲಿ ರಾಕಿಂಗ್ ಸ್ಟಾರ್ ಯಶ್, ಟಾಕ್ಸಿಕ್‌ ಶೂಟಿಂಗ್‌ಗೂ ಮುನ್ನ ಟೆಂಪಲ್‌ ರನ್

Bengaluru News
ಬೆಂಗಳೂರು1 hour ago

Bengaluru News : ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಚಲಾಕಿ ಕಳ್ಳ ಅರೆಸ್ಟ್‌

Wayanad Landslide
ದೇಶ1 hour ago

Wayanad Landslide: ವಯನಾಡು ಭೂಕುಸಿತದಲ್ಲಿ ಮೃತರ ಸಂಖ್ಯೆ 402: ಸರ್ವಧರ್ಮ ಪ್ರಾರ್ಥನೆ ಮೂಲಕ ಸಾಮೂಹಿಕ ಶವ ಸಂಸ್ಕಾರ

NEET PG
ಪ್ರಮುಖ ಸುದ್ದಿ2 hours ago

NEET PG : ನೀಟ್​ ಪಿಜಿ ಪರೀಕ್ಷೆಯ ಗೌಪ್ಯ ಮಾಹಿತಿಗಳು ಸೋರಿಕೆ, ಅಭ್ಯರ್ಥಿಗಳಿಗೆ ಆತಂಕ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ7 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌