LIC New Plan For Youths: ಎಲ್‌ಐಸಿಯಿಂದ ಯುವ ಜನರಿಗಾಗಿ ಹೊಸ ವಿಮಾ ಯೋಜನೆ; ಏನಿದರ ವಿಶೇಷತೆ? - Vistara News

ಮನಿ-ಗೈಡ್

LIC New Plan For Youths: ಎಲ್‌ಐಸಿಯಿಂದ ಯುವ ಜನರಿಗಾಗಿ ಹೊಸ ವಿಮಾ ಯೋಜನೆ; ಏನಿದರ ವಿಶೇಷತೆ?

ಭಾರತೀಯ ಜೀವ ವಿಮಾ ನಿಗಮವು ಯುವಕರಿಗಾಗಿ ಎರಡು ಹೊಸ ಅವಧಿಯ ವಿಮಾ (LIC New Plan For Youths) ಉತ್ಪನ್ನಗಳನ್ನು ಪರಿಚಯಿಸಿದೆ. ಇದನ್ನು ಸಾಲ ಮರುಪಾವತಿಯ ಅಪಾಯಗಳ ವಿರುದ್ಧ ರಕ್ಷಣೆ ನೀಡಲು ವಿನ್ಯಾಸಗೊಳಿಸಲಾಗಿದೆ. ಸಾಕಷ್ಟು ಪ್ರಯೋಜನವನ್ನು ನೀಡುವ ಈ ಎರಡು ಯೋಜನೆಗಳ ವಿಶೇಷಗಳು ಏನೇನು? ಇದರ ಪ್ರಯೋಜನಗಳೇನು? ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

LIC New Plan For Youths
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತೀಯ ಜೀವ ವಿಮಾ ನಿಗಮವು (Life Insurance Corporation of India) ಯುವಕರಿಗಾಗಿ (LIC New Plan For Youths) ಎರಡು ಹೊಸ ಅವಧಿಯ ವಿಮಾ ಉತ್ಪನ್ನಗಳನ್ನು (Insurance product) ಪರಿಚಯಿಸಿದೆ. ಇದರಲ್ಲಿ ಯುವ ಟರ್ಮ್‌ ಅಥವಾ ಡಿಜಿ ಟರ್ಮ್‌ ( LIC’s Yuva Term/Digi Term) ಮತ್ತು ಯುವ ಕ್ರೆಡಿಟ್ ಲೈಫ್ ಅಥವಾ ಡಿಜಿ ಕ್ರೆಡಿಟ್ ಲೈಫ್ (LIC’s Yuva Credit Life/Digi Credit Life) ಸೇರಿದೆ. ಇದು ಸಾಲ ಮರುಪಾವತಿಯ ಅಪಾಯಗಳ ವಿರುದ್ಧ ರಕ್ಷಣೆ ನೀಡಲು ಪರಿಚಯಿಸಲಾದ ವಿಮಾ ಯೋಜನೆಯಾಗಿದೆ.

ಯುವ ಟರ್ಮ್‌ ಅಥವಾ ಡಿಜಿ ಟರ್ಮ್‌

ಇದರಲ್ಲಿ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನ ಮರಣ ಸಂಭವಿಸಿದರೆ ಪಾಲಿಸಿದಾರನ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ನೀಡಲಾಗುತ್ತದೆ. ಸಾವಿನ ಬಳಿಕ ನೀಡುವ ಪ್ರಯೋಜನಗಳನ್ನು ಖಾತರಿಪಡಿಸುತ್ತದೆ. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಇದನ್ನು ಪಡೆಯಬಹುದಾಗಿದೆ.

ಎಲ್‌ಐಸಿಯ ಯುವ ಟರ್ಮ್‌ ಏಜೆಂಟರ ಮೂಲಕ ಲಭ್ಯವಿದ್ದು, ಎಲ್ಐಸಿ ಡಿಜಿ ಟರ್ಮ್‌ ಎಲ್ಐಸಿಯ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.


ಇದು ನಿರ್ದಿಷ್ಟವಾಗಿ ಯುವ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಆಫ್‌ಲೈನ್ ಮತ್ತು ಆನ್‌ಲೈನ್ ಖರೀದಿ ಆಯ್ಕೆ ಮಾಡುವ ವೈಶಿಷ್ಟ್ಯವನ್ನು ಇದು ಒದಗಿಸುತ್ತದೆ.

18ರಿಂದ 45 ವರ್ಷಗಳ ಒಳಗಿನವರು ಇದನ್ನು ಪಡೆಯಬಹುದು. ಯೋಜನೆಯ ಮೆಚುರಿಟಿ ಅವಧಿ 33ರಿಂದ 75 ವರ್ಷಗಳು. ವಿಮಾ ಮೊತ್ತ 50 ಲಕ್ಷ ರೂ.ನಿಂದ 5 ಕೋಟಿ ರೂ.ವರೆಗಿದೆ.

ಆಕರ್ಷಕವಾದ ಹೆಚ್ಚಿನ ಮೊತ್ತದ ವಿಮಾ ರಿಯಾಯಿತಿ, ಮಹಿಳೆಯರಿಗೆ ಕಡಿಮೆ ಪ್ರೀಮಿಯಂ ದರಗಳು ಇದರಲ್ಲಿ ಲಭ್ಯವಿದೆ.

ಪ್ರಯೋಜನ ಏನು?

ವಾರ್ಷಿಕ ಪ್ರೀಮಿಯಂನ ಏಳು ಪಟ್ಟು ಅಥವಾ ಸಾವಿನ ದಿನಾಂಕದವರೆಗೆ ಪಾವತಿಸಿದ ಒಟ್ಟು ಪ್ರೀಮಿಯಂಗಳ ಶೇ. 1೦5ರಷ್ಟು ಸಂಪೂರ್ಣ ಮೊತ್ತದ ಭರವಸೆ ನೀಡುತ್ತದೆ. ಏಕ ಪ್ರೀಮಿಯಂನ ಶೇ. 125ರಷ್ಟು ಖಚಿತವಾದ ಸಂಪೂರ್ಣ ಮೊತ್ತದ ಭರವಸೆಯನ್ನು ನೀಡುತ್ತದೆ.

ಯುವ ಕ್ರೆಡಿಟ್ ಲೈಫ್ ಅಥವಾ ಡಿಜಿ ಕ್ರೆಡಿಟ್

ಯುವ ಕ್ರೆಡಿಟ್ ಲೈಫ್ ಅಥವಾ ಡಿಜಿ ಕ್ರೆಡಿಟ್ ಲೈಫ್ ಯೋಜನೆಗಳು ಸಾಲದ ಹೊಣೆಗಾರಿಕೆಗಳಿಗೆ ಕವರೇಜ್ ನೀಡುತ್ತವೆ. ವಸತಿ, ಶಿಕ್ಷಣ ಅಥವಾ ವಾಹನಗಳಂತಹ ಅಗತ್ಯಗಳಿಗಾಗಿ ಮರುಪಾವತಿಯ ವಿರುದ್ಧ ಸುರಕ್ಷತೆ ಒದಗಿಸುತ್ತವೆ.

ಯುವ ಅವಧಿಯ ಯೋಜನೆಗಳಂತೆಯೇ ಇವುಗಳು ಆಫ್‌ಲೈನ್ ಮತ್ತು ಆನ್‌ಲೈನ್ ಸ್ವರೂಪಗಳಲ್ಲಿ ಲಭ್ಯ ಇವೆ. 18ರಿಂದ 45 ವರ್ಷಗಳ ಒಳಗಿನವರು ಇದರ ಪ್ರಯೋಜನ ಪಡೆಯಬಹುದು. ಇದರ ಮೆಚ್ಯುರಿಟಿ ವಯಸ್ಸು 23ರಿಂದ 75 ವರ್ಷ.


ಪ್ರಯೋಜನ ಏನು?

ವಿಮಾ ಮೊತ್ತವು 50 ಲಕ್ಷ ರೂ.ನಿಂದ 5 ಕೋಟಿ ರೂ.ಗಳವರೆಗೆ ಇರುತ್ತದೆ. ಬಾಕಿ ಇರುವ ಸಾಲದ ಮೊತ್ತಕ್ಕೆ ಅನುಗುಣವಾಗಿ ಪಾಲಿಸಿ ಅವಧಿಯಲ್ಲಿ ಮರಣದ ಪ್ರಯೋಜನವು ಕಡಿಮೆಯಾಗುತ್ತದೆ.

ಎರಡೂ ಯೋಜನೆಯಲ್ಲಿ ಕನಿಷ್ಠ 18 ರಿಂದ ಗರಿಷ್ಠ 45 ವರ್ಷಗಳ ಒಳಗಿನವರು ಇದನ್ನು ಪಡೆಯಬಹುದು. ಮೆಚುರಿಟಿ ಅವಧಿ 33 ರಿಂದ 75 ವರ್ಷ ಮತ್ತು 33 ರಿಂದ 75 ವರ್ಷಗಳು.

ಇದನ್ನೂ ಓದಿ: Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

ಕನಿಷ್ಠ ವಿಮಾ ಮೊತ್ತ 50 ಲಕ್ಷ ರೂ. ಮತ್ತು ಗರಿಷ್ಠ ವಿಮಾ ಮೊತ್ತ 5 ಕೋಟಿ ರೂ. ವರೆಗೆ ಆಯ್ಕೆ ಮಾಡಬಹುದು. ಮಹಿಳೆಯರಿಗೆ ವಿಶೇಷ ಕಡಿಮೆ ಪ್ರೀಮಿಯಂ ದರಗಳು ಲಭ್ಯವಿದೆ.

ಪಾಲಿಸಿಯ ಪ್ರಾರಂಭದಲ್ಲಿ ಪಾಲಿಸಿದಾರರಿಗೆ ಸೂಕ್ತ ಸಾಲದ ಬಡ್ಡಿ ದರದ ಆಯ್ಕೆ, ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಪಾಲಿಸಿ ಜಾರಿಯಲ್ಲಿದ್ದರೆ ಮತ್ತು ಕ್ಲೈಮ್ ಸ್ವೀಕಾರಾರ್ಹವಾಗಿದ್ದರೆ ಸಾವಿನ ಮೇಲೆ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

EPF New Rule: ವೈದ್ಯಕೀಯ ಚಿಕಿತ್ಸೆಗಾಗಿ 1 ಲಕ್ಷ ರೂ.ವರೆಗೆ ಇಪಿಎಫ್‌ನಿಂದ ಹಣ ಪಡೆಯಲು ಅವಕಾಶ

ಕಳೆದ ಏಪ್ರಿಲ್‌ನಿಂದ ಇಪಿಎಫ್ ಹಣ ಭಾಗಶಃ ಹಿಂಪಡೆಯುವಿಕೆ ಮಿತಿಯನ್ನು ಹೆಚ್ಚಿಸಲಾಗಿದೆ. ಈಗ ವೈದ್ಯಕೀಯ ಚಿಕಿತ್ಸೆಗಾಗಿ 1 ಲಕ್ಷ ರೂ.ವರೆಗೆ ಇಪಿಎಫ್ ನಿಂದ ಕ್ಲೈಮ್ ಮಾಡಲು ಅವಕಾಶವಿದೆ. ಇದಕ್ಕಾಗಿ ಅಪ್ಲಿಕೇಶನ್ ಸಾಫ್ಟ್ ವೇರ್, ಅರ್ಜಿ ನಮೂನೆಗಳಲ್ಲಿ ಹಲವು ಬದಲಾವಣೆಗಳನ್ನು(EPF New Rule) ಮಾಡಲಾಗಿದೆ. ಅದು ಯಾವುದು, ಹೇಗಿದೆ ಎನ್ನುವುದರ ಕುರಿತು ಇಲ್ಲಿದೆ ಸಂಪೂರ್ಣ ವಿವರ.

VISTARANEWS.COM


on

By

EPF New Rule
Koo

ವೈದ್ಯಕೀಯ ಚಿಕಿತ್ಸೆಗಾಗಿ (medical treatment) ಇನ್ನು ಮುಂದೆ ಉದ್ಯೋಗಿಗಳು ಪಿಂಚಣಿ ನಿಧಿಯಿಂದ (Pension Fund ) 1 ಲಕ್ಷ ರೂ.ವರೆಗೆ ಭಾಗಶಃ ಹಿಂಪಡೆಯಲು ಅವಕಾಶವಿದೆ. ಈ ಕುರಿತು ಏಪ್ರಿಲ್‌ನಿಂದಲೇ ಉದ್ಯೋಗಿಗಳ ಪಿಂಚಣಿ ನಿಧಿ ಸಂಸ್ಥೆಯ (EPF New Rule) ಅಪ್ಲಿಕೇಶನ್ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಯನ್ನು ಮಾಡಲಾಗಿದ್ದು, ಇದಕ್ಕೆ ಕೇಂದ್ರ ಭವಿಷ್ಯ ನಿಧಿ ಆಯುಕ್ತರ ಒಪ್ಪಿಗೆಯೂ ದೊರೆತಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ 68ಜೆ ಕ್ಲೈಮ್‌ಗಳ ಅರ್ಹತೆ ಮಿತಿಯನ್ನು 50,000 ರೂ. ನಿಂದ 1 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಹಲವಾರು ಉದ್ದೇಶಗಳಿಗಾಗಿ ಇಪಿಎಫ್ ಭಾಗಶಃ ಹಿಂಪಡೆಯುವಿಕೆಗೆ ಫಾರ್ಮ್ 31ರ ಮೂಲಕ ಅನುಮತಿಸಲಾಗಿದೆ. ಮದುವೆ, ಸಾಲ ಮರುಪಾವತಿ, ಮನೆ ನಿರ್ಮಾಣ ಮತ್ತು ಫ್ಲಾಟ್ ಖರೀದಿಗಾಗಿ ಇಪಿಎಫ್ ನಿಂದ ಭಾಗಶಃ ಹಣ ಹಿಂಪಡೆಯಲು ಅವಕಾಶವಿದೆ.

ಪ್ಯಾರಾ 68ಜೆ ಅಡಿಯಲ್ಲಿ ಭಾಗಶಃ ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸಲಾಗಿದೆ. ಪಿಂಚಣಿ ನಿಧಿ ಹೊಂದಿರುವವರು ಅಥವಾ ಅವರ ಕುಟುಂಬದ ಸದಸ್ಯರ ಅನಾರೋಗ್ಯದ ಚಿಕಿತ್ಸೆಗಾಗಿ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯಿಂದ ಮುಂಗಡವನ್ನು ಪಡೆಯಬಹುದು.

ಒಂದು ಲಕ್ಷ ರೂ.ವರೆಗೆ ಮುಂಗಡ ಪಡೆಯಲು ಅವಕಾಶವಿದ್ದು, ಪಿಂಚಣಿದಾರರ 6 ತಿಂಗಳ ಮೂಲ ವೇತನ ಮತ್ತು ಡಿಎ ಅಥವಾ ಬಡ್ಡಿಯೊಂದಿಗೆ ಉದ್ಯೋಗಿ ಪಾಲು ಯಾವುದು ಕಡಿಮೆಯೋ ಅದನ್ನು ಹಿಂಪಡೆಯಲು ಅವಕಾಶವಿದೆ.
ಇದಕ್ಕಾಗಿ ಪಿಂಚಣಿದಾರರು ಫಾರ್ಮ್ 31 ಜೊತೆಗೆ ಉದ್ಯೋಗಿ ಮತ್ತು ವೈದ್ಯರಿಂದ ಸಹಿ ಮಾಡಿದ ಪ್ರಮಾಣಪತ್ರವನ್ನು ಸಹ ಸಲ್ಲಿಸಬೇಕಾಗುತ್ತದೆ.


ಫಾರ್ಮ್ 31 ಎಂದರೇನು?

ಇಪಿಎಫ್ ಫಾರ್ಮ್ 31 ನೌಕರರ ಭವಿಷ್ಯ ನಿಧಿ ಖಾತೆಯಿಂದ ಹಣವನ್ನು ಭಾಗಶಃ ಹಿಂಪಡೆಯಲು ಬಳಸುವ ಅರ್ಜಿ ನಮೂನೆಯಾಗಿದೆ.

ನಮೂನೆ 31ರ ಮೂಲಕ ಪ್ಯಾರಾ 68ಬಿ ಅಡಿಯಲ್ಲಿ ನಿವೇಶನವನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ ಮನೆ, ಫ್ಲಾಟ್ ಖರೀದಿ, ಮನೆ ನಿರ್ಮಾಣಕ್ಕಾಗಿ ಪಿಂಚಣಿ ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

ಪ್ಯಾರಾ 68ಬಿಬಿ ಅಡಿಯಲ್ಲಿ ವಿಶೇಷ ಸಂದರ್ಭಗಳಲ್ಲಿ ಸಾಲದ ಮರುಪಾವತಿಗಾಗಿ, ಪ್ಯಾರಾ 68ಹೆಚ್ ಅಡಿಯಲ್ಲಿ ವಿಶೇಷ ಪ್ರಕರಣಗಳಲ್ಲಿ ಮುಂಗಡಗಳ ಅನುದಾನ, ಪ್ಯಾರಾ 68ಜೆ ಅಡಿಯಲ್ಲಿ ಅನಾರೋಗ್ಯಕ್ಕಾಗಿ ಮುಂಗಡ, ಪ್ಯಾರಾ 68ಕೆ ಅಡಿಯಲ್ಲಿ ಮಕ್ಕಳ ಮದುವೆ ಅಥವಾ ಮೆಟ್ರಿಕ್ಯುಲೇಷನ್ ಅನಂತರದ ಶಿಕ್ಷಣಕ್ಕಾಗಿ ಮತ್ತು ಪ್ಯಾರಾ 68ಎನ್ ಅಡಿಯಲ್ಲಿ ದೈಹಿಕವಾಗಿ ಅಶಕ್ತರಾಗಿರುವ ಸದಸ್ಯರಿಗೆ ಮುಂಗಡ ಅನುದಾನ ಮತ್ತು ಪ್ಯಾರಾ 68ಎನ್ ಎನ್ ಅಡಿಯಲ್ಲಿ ನಿವೃತ್ತಿಯ ಮೊದಲು ಒಂದು ವರ್ಷದೊಳಗೆ ಹಿಂಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಮಿತಿಯನ್ನು ಹೆಚ್ಚಿಸಿದ ಪ್ಯಾರಾ 68ಜೆ

ಪ್ಯಾರಾ 68ಜೆ ಪಿಂಚಣಿದಾರರು ಅಥವಾ ಕುಟುಂಬದ ಸದಸ್ಯರ ಅನಾರೋಗ್ಯದ ಚಿಕಿತ್ಸೆಗಾಗಿ ಇಪಿಎಫ್ ಖಾತೆಯಿಂದ ಭಾಗಶಃ ಹಿಂಪಡೆಯಲು ಅವಕಾಶ ನೀಡಲಾಗಿದೆ.

Continue Reading

ಮನಿ-ಗೈಡ್

Money Guide: ಕಾರು ಚಲಾಯಿಸಿದಷ್ಟೇ ವಿಮೆ ಪ್ರೀಮಿಯಂ ಪಾವತಿಸಿ; ಏನಿದು ಹೊಸ ಯೋಜನೆ? ಅನುಕೂಲಗಳೇನು?

Money Guide: ಈಗ ಕಾರು ʼಚಲಾಯಿಸಿದಷ್ಟೇ ಪಾವತಿʼ ವಿಮಾ ಮಾದರಿ ಜನಪ್ರಿಯವಾಗುತ್ತಿದೆ. ಅಂದರೆ ವಾರ್ಷಿಕ ಪ್ರೀಮಿಯಂ ಬದಲಾಗಿ ನೀವು ಕಾರನ್ನು ಎಷ್ಟು ದೂರ ಚಲಾಯಿಸಿದ್ದೀರೋ ಅದರ ಆಧಾರದಲ್ಲಿ ಪ್ರೀಮಿಯಂ ಅನ್ನು ಪಾವತಿಸಿದರೆ ಸಾಕು. ಅಂದರೆ ನೀವು ಕಾರನ್ನು ಕಡಿಮೆ ಬಳಸಿದರೆ ಕಡಿಮೆ ಪ್ರೀಮಿಯಂ ಪಾವತಿಸಿದರೆ ಸಾಕು. ಈ ಯೋಜನೆಯ ಅನುಕೂಲ, ಅನಾನುಕೂಲಗಳೇನು? ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಭಾರತದಲ್ಲಿ ಪ್ರತಿಯೊಂದು ವಾಹನ ವಿಮೆಯನ್ನು (Vehicle insurance) ಹೊಂದಿರುವುದು ಕಡ್ಡಾಯ. ಇದು ವಾಹನಗಳಿಗೆ ಗರಿಷ್ಠ ಸುರಕ್ಷತೆ ಒದಗಿಸುತ್ತದೆ. ಒಂದು ವೇಳೆ ವಾಹನ ಕಳ್ಳತನವಾದರೆ ಅಥವಾ ಅಪಘಾತದಂತಹ ಅನಿರೀಕ್ಷಿತ ಸಮಸ್ಯೆ ಎದುರಾದರೆ ವಾಹನ ವಿಮಾ ಪಾಲಿಸಿ ಆರ್ಥಿಕವಾಗಿ ಸಹಾಯ ಮಾಡುತ್ತದೆ. ವಾಹನ ಮಾದರಿಗಳನ್ನು ಆಧರಿಸಿ ವಿಮೆಯ ಪ್ರೀಮಿಯಂ ಪಾವತಿ ನಿರ್ಧಾರವಾಗುತ್ತದೆ. ಇದರ ಜತೆಗೆ ಈಗ ಕಾರಿಗೆ ʼಚಲಾಯಿಸಿದಷ್ಟೇ ಪಾವತಿʼ (Pay as You Drive-PAYD) ವಿಧಾನ ಜನಪ್ರಿಯವಾಗುತ್ತಿದೆ. ಅಂದರೆ ವಾರ್ಷಿಕ ಪ್ರೀಮಿಯಂ ಬದಲಾಗಿ ನೀವು ಕಾರನ್ನು ಎಷ್ಟು ದೂರ ಚಲಾಯಿಸಿದ್ದೀರೋ ಅದರ ಆಧಾರದಲ್ಲಿ ಪ್ರೀಮಿಯಂ ಅನ್ನು ಪಾವತಿಸಿದರೆ ಸಾಕು. ಅಂದರೆ ನೀವು ಕಾರನ್ನು ಕಡಿಮೆ ಬಳಸಿದರೆ ಕಡಿಮೆ ಪ್ರೀಮಿಯಂ ಪಾವತಿಸಿದರೆ ಸಾಕು. ಈ ಯೋಜನೆಯ ಅನುಕೂಲ, ಅನಾನುಕೂಲಗಳೇನು? ಎನ್ನುವ ವಿವರ ಇಲ್ಲಿದೆ (Money Guide).

ವಾಹನ ವಿಮೆಯಲ್ಲಿನ ವಿಧಗಳು

ಸಾಮಾನ್ಯ ವಾಹನ ವಿಮೆಯಲ್ಲಿ 2 ವಿಧಗಳಿವೆ. ಮೊದಲನೆಯದ್ದು ಮೂರನೇ ವ್ಯಕ್ತಿಯಿಂದ ಪಡೆದುಕೊಳ್ಳುವಂತದ್ದು. ಇದು ಭಾರತದಲ್ಲಿ ಕಡ್ಡಾಯ. ಮತ್ತೊಂದು ಸಮಗ್ರ ವಿಮಾ ಪಾಲಿಸಿ. ಮೂರನೇ ವ್ಯಕ್ತಿಯ ವಿಮೆಯನ್ನು ಬಹುತೇಕ ಡೀಲರ್‌ಗಳೇ ಒದಗಿಸುತ್ತಾರೆ ಹಾಗೂ ಪ್ರೀಮಿಯಂ ವಾಹನದ ಬೆಲೆಯನ್ನು ಅವಲಂಬಿಸಿರುತ್ತದೆ. ಸಮಗ್ರ ವಿಮೆಯು ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳು, ವೈಯಕ್ತಿಕ ಅಪಘಾತಗಳು ಮತ್ತು ಕಳ್ಳತನಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ ಸಮಗ್ರ ವಿಮೆಯು ಮೂರನೇ ವ್ಯಕ್ತಿಯ ವಿಮೆಗೆ ಹೋಲಿಸಿದರೆ ದುಬಾರಿ. ಇನ್ನು ಚಲಾಯಿಸಿದಷ್ಟೇ ಪಾವತಿ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಹೇಗೆ ಲೆಕ್ಕ ಹಾಕಲಾಗುತ್ತದೆ?

ಕಿ.ಮೀ. ಲೆಕ್ಕಾಚಾರ: ನೀವು ಕಾರು ಓಡಿಸಲು ನಿರೀಕ್ಷಿಸುವ ಒಟ್ಟು ಕಿಲೋ ಮೀಟರ್‌ಗಳನ್ನು ಪಾಲಿಸಿ ಅವಧಿಯಲ್ಲಿ ನೀವು ಅಂದಾಜು ಮಾಡಿ ಸೂಕ್ತವಾದ ಸ್ಲ್ಯಾಬ್ ಅನ್ನು ಆಯ್ಕೆ ಮಾಡಿ.

ಟೆಲಿಮ್ಯಾಟಿಕ್ಸ್‌ ಆಧಾರಿತ ವಾಹನ ವಿಮೆ: ಈ ಪಾಲಿಸಿಯಲ್ಲಿ ನಿಮ್ಮ ವಾಹನವನ್ನು ಚಲಾಯಿಸುವ ಕ್ರಮ, ಸಂಚಾರ ನಿಯಮಗಳನ್ನು ಪಾಲಿಸುವ ಶಿಸ್ತು ಮತ್ತು ಗುಣಮಟ್ಟವನ್ನು ಆಧರಿಸಿ ವಿಮೆಯ ಪ್ರೀಮಿಯಂ ದರ ನಿಗದಿಯಾಗುತ್ತದೆ. ವೇಗ, ದೂರ, ದಿನದ ಸಮಯ ಮತ್ತು ಚಾಲನಾ ಮಾದರಿಗಳು ಸೇರಿದಂತೆ ಚಾಲನೆಯ ವಿವಿಧ ಅಂಶಗಳ ಬಗ್ಗೆ ಡೇಟಾವನ್ನು ಸಂಗ್ರಹಿಸಿ ಪ್ರೀಮಿಯಂ ನಿರ್ಧರಿಸಲಾಗುತ್ತದೆ.

ಪ್ರೀಮಿಯಂ ಮೊತ್ತ ನಿರ್ಧಾರ: ನೀವು ಆಯ್ಕೆ ಮಾಡಿದ ಕಿ.ಮೀ. ಸ್ಲ್ಯಾಬ್‌ನ ಆಧಾರದ ಮೇಲೆ ಕಂಪನಿ ಪ್ರೀಮಿಯಂ ನಿರ್ಧರಿಸುತ್ತದೆ.

ಟ್ರ್ಯಾಕಿಂಗ್: ಟೆಲಿಮ್ಯಾಟಿಕ್ಸ್ ಉಪಕರಣವನ್ನು ಬಳಸಿಕೊಂಡು ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಮೂಲಕ ವಾಹನದ ಮೈಲೇಜ್ ಅನ್ನು ಟ್ರ್ಯಾಕ್ ಮಾಡಲಾಗುತ್ತದೆ.

ಪ್ರೀಮಿಯಂ ಹೊಂದಾಣಿಕೆ: ಪಾಲಿಸಿ ಅವಧಿಯ ಕೊನೆಯಲ್ಲಿ ನಿಮ್ಮ ನಿಜವಾದ ಮೈಲೇಜ್ ಅನ್ನು ಘೋಷಿತ ಮೈಲೇಜ್‌ಗೆ ಹೋಲಿಸಲಾಗುತ್ತದೆ. ನೀವು ಕಡಿಮೆ ಚಾಲನೆ ಮಾಡಿದ್ದರೆ ನೀವು ಮರುಪಾವತಿ ಪಡೆಯುತ್ತೀರಿ. ನೀವು ಹೆಚ್ಚು ಚಾಲನೆ ಮಾಡಿದ್ದರೆ ನೀವು ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಅನುಕೂಲಗಳೇನು?

  • ವೆಚ್ಚ ಉಳಿತಾಯ: ನೀವು ಕಾರನ್ನು ಕಡಿಮೆ ಕಿ.ಮೀ. ಚಲಾಯಿಸಿದ್ದರೆ ಅಲ್ಪ ಮೊತ್ತದ ಪ್ರೀಮಿಯಂ ಪಾವತಿಸಿದರೆ ಸಾಕು.
  • ನ್ಯಾಯೋಚಿತ ಬೆಲೆ: ನೀವು ಬಳಸುವ ಕವರೇಜ್‌ಗೆ ಮಾತ್ರ ಪಾವತಿ.
  • ಸುರಕ್ಷಿತವಾಗಿ ವಾಹನ ಚಲಾಯಿಸಲು ಪ್ರೋತ್ಸಾಹ: ಕೆಲವು ವಿಮಾ ಕಂಪನಿಗಳು ಟೆಲಿಮ್ಯಾಟಿಕ್ಸ್ ಉಪಕರಣದ ಮೂಲಕ ಟ್ರ್ಯಾಕ್ ಮಾಡಿ ಸುರಕ್ಷಿತ ಚಾಲನೆಗೆ ರಿಯಾಯಿತಿಗಳನ್ನು ನೀಡುತ್ತವೆ.
  • ಬಳಕೆ ಆಧಾರಿತ ಪ್ರೀಮಿಯಂಗಳು: ವಾಹನವನ್ನು ಓಡಿಸುವ ದೂರವನ್ನು ಆಧರಿಸಿ ವಿಮಾ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ. ಮೈಲೇಜ್ ಮತ್ತು ಚಾಲನಾ ನಡವಳಿಕೆಯನ್ನು ದಾಖಲಿಸುವ ಟೆಲಿಮ್ಯಾಟಿಕ್ಸ್ ಉಪಕರಣ ಅಥವಾ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಇದನ್ನು ಸಾಮಾನ್ಯವಾಗಿ ಟ್ರ್ಯಾಕ್ ಮಾಡಲಾಗುತ್ತದೆ.
  • ವೆಚ್ಚದ ದಕ್ಷತೆ: ಕಾರನ್ನು ವಿರಳವಾಗಿ ಬಳಸುವ ಅಥವಾ ಕಡಿಮೆ ದೂರ ಸಂಚರಿಸುವವರಿಗೆ ಪಿಇಡಿ ಹೆಚ್ಚು ಸೂಕ್ತ. ಪ್ರೀಮಿಯಂಗಳು ಬಳಕೆಯೊಂದಿಗೆ ನೇರ ಸಂಬಂಧ ಹೊಂದಿವೆ.
  • ಕಸ್ಟಮೈಸ್ ಮಾಡಬಹುದಾದ ಕವರೇಜ್: ಪಾಲಿಸಿದಾರರು ತಮ್ಮ ಚಾಲನಾ ಅಭ್ಯಾಸ ಮತ್ತು ಅಗತ್ಯಗಳ ಆಧಾರದ ಮೇಲೆ ವಿವಿಧ ಹಂತದ ಕವರೇಜ್ ಅನ್ನು ಆಯ್ಕೆ ಮಾಡಬಹುದು.
  • ಚಾಲನಾ ಅಭ್ಯಾಸವನ್ನು ಸುಧಾರಣೆ: ನಿಮ್ಮ ಚಾಲನಾ ಅಭ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಅನಾನುಕೂಲ

  • ಗೌಪ್ಯತೆ ಬಗ್ಗೆ ಪ್ರಶ್ನೆ: ಚಾಲನಾ ಅಭ್ಯಾಸದ ನಿರಂತರ ಟ್ರ್ಯಾಕಿಂಗ್ ಗೌಪ್ಯತೆಗೆ ಧಕ್ಕೆ ತರುತ್ತದೆ.
  • ಆಗಾಗ್ಗೆ ಚಾಲನೆ ಮಾಡುವವರಿಗೆ ಅಧಿಕ ವೆಚ್ಚ: ಸಾಂಪ್ರದಾಯಿಕ ವಿಮಾ ಪಾಲಿಸಿಗೆ ಹೋಲಿಸಿದರೆ ಆಗಾಗ್ಗೆ ಚಾಲನೆ ಮಾಡುವವರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
  • ಕ್ಲೈಮ್‌ಗಳಲ್ಲಿನ ಸಂಕೀರ್ಣತೆ: ಕ್ಲೈಮ್ ಸಂದರ್ಭದಲ್ಲಿ, ದೂರ ಚಾಲಿತ ಮತ್ತು ಇತರ ಟೆಲಿಮ್ಯಾಟಿಕ್ಸ್ ಡೇಟಾವನ್ನು ಪರಿಶೀಲಿಸಲು ತೊಡಕು ಎದುರಾಗುವ ಸಾಧ್ಯತೆ ಇದೆ.
  • ಟೆಲಿಮ್ಯಾಟಿಕ್ಸ್‌ನ ವಿಶ್ವಾಸಾರ್ಹತೆ: ಟೆಲಿಮ್ಯಾಟಿಕ್ಸ್ ಉಪಕರಣ ಅಥವಾ ಅಪ್ಲಿಕೇಶನ್‌ನಲ್ಲಿನ ಯಾವುದೇ ಅಸಮರ್ಪಕ ಕಾರ್ಯ ವಿಧಾನ ಪ್ರೀಮಿಯಂ ಲೆಕ್ಕಾಚಾರದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Money Guide: ನೆರೆ, ಭೂಕುಸಿತದಿಂದ ನಿಮ್ಮ ಮನೆಯನ್ನು ರಕ್ಷಿಸಲು ಜಸ್ಟ್‌ ಹೀಗೆ ಮಾಡಿ ಸಾಕು

Continue Reading

ಮನಿ-ಗೈಡ್

Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

Money Guide: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಜನಪ್ರಿಯವಾಗುತ್ತಿದೆ. ಆದರೆ ಕೆಲವೊಮ್ಮೆ ಈ ಹೆಸರಿನಲ್ಲಿ ವಂಚನೆಯೂ ನಡೆಯುತ್ತದೆ. ಆರ್ಡರ್‌ ಮಾಡಿದ ಬೆಲೆ ಬಾಳುವ ವಸ್ತುವಿನ ಬದಲು ಕಲ್ಲು, ಮರದ ತುಂಡು, ಸೋಪು ಅಷ್ಟೇ ಏಕೆ ಹಾವು ಕೂಡ ಪಾರ್ಸೆಲ್‌ ಮೂಲಕ ಬರುತ್ತದೆ! ಕೆಲವೊಂದು ಫೇಕ್‌ ವೆಬ್‌ಸೈಟ್‌ಗಳು ಆರ್ಡರ್‌ ಮಾಡಿದ ಬಳಿಕ ಉತ್ಪನ್ನಗಳನ್ನು ಕಳುಹಿಸದೆ ಮೋಸ ಎಸಗುತ್ತದೆ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ ಯಾಮಾರುವುದು ಖಂಡಿತ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ (Online shopping) ಜನಪ್ರಿಯವಾಗುತ್ತಿದೆ. ಒಂದೇ ಕಡೆ ಹಲವು ಆಯ್ಕೆ, ಕಡಿಮೆ ಬೆಲೆ ಮತ್ತು ಸಮಯದ ಉಳಿತಾಯ ಹೀಗೆ ನಾನಾ ಕಾರಣಗಳಿಂದ ಇದು ಗ್ರಾಹಕರ ಮನ ಗೆದ್ದಿದೆ. ಇದಕ್ಕಾಗಿಯೇ ಇರುವ ನಾನಾ ಆ್ಯಪ್‌ಗಳು ವಿಶೇಷ ಸಂದರ್ಭಗಳಲ್ಲಿ ಕೊಡುಗೆ ಪ್ರಕಟಿಸಿ ಇನ್ನಷ್ಟು ಆಕರ್ಷಿಸುತ್ತದೆ. ಇದರ ಜತೆಗೆ ಕೆಲವೊಮ್ಮೆ ವಂಚನೆಯೂ ನಡೆಯುತ್ತದೆ. ಆರ್ಡರ್‌ ಮಾಡಿದ ಬೆಲೆ ಬಾಳುವ ವಸ್ತುವಿನ ಬದಲು ಕಲ್ಲು, ಮರದ ತುಂಡು, ಸೋಪು ಅಷ್ಟೇ ಏಕೆ ಹಾವು ಕೂಡ ಪಾರ್ಸೆಲ್‌ ಮೂಲಕ ಬರುತ್ತದೆ! ಕೆಲವೊಂದು ಫೇಕ್‌ ವೆಬ್‌ಸೈಟ್‌ಗಳು ಆರ್ಡರ್‌ ಮಾಡಿದ ಬಳಿಕ ಉತ್ಪನ್ನಗಳನ್ನು ಕಳುಹಿಸದೆ ಮೋಸ ಎಸಗುತ್ತವೆ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ ಯಾಮಾರುವುದು ಖಂಡಿತ. ಇಂದಿನ ಮನಿಗೈಡ್‌ (Money Guide)ನಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವುದನ್ನು ನೋಡೋಣ.

ಮಾರಾಟಗಾರರ ಹಿನ್ನಲೆ

ಆನ್‌ಲೈನ್‌ನಲ್ಲಿ ಯಾವುದೇ ವಸ್ತು ಖರೀದಿಸುವ ಮುನ್ನ ಮಾರಾಟಗಾರರ ಹಿನ್ನಲೆ ಪರಿಶೀಲಿಸಿ. ಕೆಲವೊಮ್ಮೆ ಸೋಷಿಯಲ್‌ ಮೀಡಿಯಾಗಳಲ್ಲಿ ಆಕರ್ಷಕ ಕೊಡುಗೆ ಪ್ರಕಟಿಸಿ ಫೇಕ್‌ ವೆಬ್‌ಸೈಟ್‌ಗಳು ನಿಮ್ಮ ಗಮನ ಸೆಳೆಯುತ್ತವೆ. ಇವರು ಕ್ಯಾಷ್‌ ಆನ್‌ ಡೆಲಿವರಿ ಆಯ್ಕೆಯನ್ನು ಹೊಂದಿರುವುದಿಲ್ಲ. ನೀವು ಆರ್ಡರ್‌ ಮಾಡುವಾಗಲೇ ಹಣ ಪಾವತಿಸಬೇಕಾಗುತ್ತದೆ. ಒಮ್ಮೆ ನೀವು ಹಣ ಪಾವತಿಸಿದರೆ ಬಳಿಕ ಸಂಪರ್ಕಕ್ಕೇ ಸಿಗುವುದಿಲ್ಲ. ಜತೆಗೆ ನೀವು ಆರ್ಡರ್‌ ಮಾಡಿದ ಉತ್ಪನ್ನವೂ ನಿಮ್ಮನ್ನು ತಲುಪುವುದಿಲ್ಲ. ಇನ್ನು ಕೆಲವೊಮ್ಮೆ ಇಂತಹ ಅನಧಿಕೃತ ವೆಬ್‌ಸೈಟ್‌ಗಳು ಕಳಪೆ ಉತ್ಪನ್ನಗಳನ್ನು ಕಳುಹಿಸುತ್ತವೆ. ಆಕರ್ಷಕ ಫೋಟೊ ತೋರಿಸಿ ಹಾಳಾದ ಉತ್ಪನ್ನ ಅಥವಾ ಬೇರೆಯದೇ ಪ್ರಾಡಕ್ಟ್‌ ಕಳುಹಿಸುತ್ತವೆ. ಹೀಗಾಗಿ ವೆಬ್‌ಸೈಟ್‌ ಅಧಿಕೃತವೇ ಎನ್ನುವುದನ್ನು ಮೊದಲೇ ದೃಢಪಡಿಸಿಕೊಳ್ಳಿ. ವೆಬ್‌ಸೈಟ್‌ ಸುರಕ್ಷಿತ ಪಾವತಿ ವಿಧಾನ, ಸೂಕ್ತ ರಿಟರ್ನ್ ಪಾಲಿಸಿಗಳು ಹೊಂದಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಜತೆಗೆ ಗ್ರಾಹಕ ರಿವ್ಯೂ ಕೂಡ ಗಮನಿಸಿ.

ಉತ್ಪನ್ನದ ರಿವ್ಯೂ ಗಮನಿಸಿ

ರಿಯಾಯಿತಿ ಇದೆ ಎನ್ನುವ ಕಾರಣಕ್ಕೆ ಕಣ್ಣು ಮುಚ್ಚಿ ಯಾವುದೇ ಉತ್ಪನ್ನಗಳನ್ನು ಕೊಂಡುಕೊಳ್ಳಬೇಡಿ. ಖರೀದಿಸುವ ಮುನ್ನ ಆ ಉತ್ಪನ್ನಕ್ಕೆ ಗ್ರಾಹಕರು ಕೊಟ್ಟಿರುವ ರಿವ್ಯೂ ಪರಿಶೀಲಿಸಿ. ಜಾಹೀರಾತು, ಮಾರಾಟಗಾರರ ಮಾತನ್ನು ಪೂರ್ಣವಾಗಿ ನಂಬಬೇಡಿ. ಗ್ರಾಹಕ ರಿವ್ಯೂ ಗಮನಿಸಿ ಅಲ್ಲಿ ಸಕಾರಾತ್ಮಕ ಪ್ರಕ್ರಿಯೆಗಿಂತ ನಕಾರಾತ್ಮಕ ಅಭಿಮತವೇ ಹೆಚ್ಚಿದ್ದರೆ ಖರೀದಿಸಬೇಡಿ.

ಶಿಪ್ಪಿಂಗ್‌ ಚಾರ್ಜ್‌ ಮತ್ತು ಸಮಯ

ನೀವು ಖರೀದಿಸಲು ಬಯಸುವ ಉತ್ಪನ್ನಕ್ಕೆ ವಿಧಿಸುವ ಶಿಪ್ಪಿಂಗ್‌ ಜಾರ್ಜ್‌ ಅನ್ನು ಗಮನಿಸಿ. ಜತೆಗೆ ಅದು ಯಾವಾಗ ತಲುಪುತ್ತದೆ ಎನ್ನುವುದನ್ನೂ ಪರಿಶೀಲಿಸಿ. ಕೆಲವೊಂದು ಆನ್‌ಲೈನ್‌ ಅಪ್ಲಿಕೇಷನ್‌ಗಳು ಶಿಪ್ಪಿಂಗ್‌ ಜಾರ್ಜ್‌ ಇಲ್ಲದೆ ಡೆಲಿವರಿ ಮಾಡುತ್ತವೆ. ಆದರೆ ಉತ್ಪನ್ನ ತಲುಪಲು ಹೆಚ್ಚಿನ ಸಮಯ ತಗಲುತ್ತದೆ. ಹೀಗಾಗಿ ಈ ಅಂಶದ ಬಗ್ಗೆ ಗಮನ ಹರಿಸಿ. ಜತೆಗೆ ಶಿಪ್ಪಿಂಗ್‌ ಜಾರ್ಜ್‌ ಮತ್ತು ಪ್ರಾಡಕ್ಟ್‌ ನಿಮ್ಮ ಕೈ ಸೇರಲಿರುವ ದಿನಗಳನ್ನು ಬೇರೆ ಆ್ಯಪ್‌ಗಳೊಂದಿಗೆ ಹೋಲಿಸಿ ನೋಡಿ. ವಿದೇಶಗಳಿಂದ ನೀವು ಉತ್ಪನ್ನ ಖರೀದಿಸುತ್ತಿದ್ದರೆ ಇದರ ಮೇಲೆ ವಿಧಿಸುವ ತೆರಿಗೆಯೂ ನಿಮ್ಮ ಗಮನದಲ್ಲಿರಲಿ.

ರಿಟರ್ನ್‌ ಪಾಲಿಸಿ ಅರ್ಥ ಮಾಡಿಕೊಳ್ಳಿ

ಆನ್‌ಲೈನ್‌ ಮೂಲಕ ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಮೊದಲು ಅರ್ಥ ಮಾಡಿಕೊಳ್ಳಬೇಕಾದುದು ಅದರ ರಿಟರ್ನ್‌ ಪಾಲಿಸಿಯನ್ನು. ಹೆಚ್ಚಿನ ಅಪ್ಲಿಕೇಷನ್‌ಗಳು ಉತ್ಪನ್ನಗಳನ್ನು ಹಿಂದಿರುಗಿಸಲು 20-30 ದಿನಗಳ ಕಾಲಾವಕಾಶ ನೀಡುತ್ತವೆ. ಕೆಲವೊಮ್ಮೆ ಉತ್ಪನ್ನ, ಮಾರಾಟಗಾರರನ್ನು ಹೊಂದಿಕೊಂಡು ಈ ನಿಯಮದಲ್ಲಿ ವ್ಯತ್ಯಾಸಗಳಿರುತ್ತವೆ. ಜತೆಗೆ ರಿಟರ್ನ್‌ ಮಾಡುವಾಗ ಶಿಪ್ಪಿಂಗ್‌ ಚಾರ್ಜ್‌ ಇದೆಯೇ ಎನ್ನುವುದನ್ನು ಪರಿಶೀಲಿಸುವುದನ್ನು ಮರೆಯಬೇಡಿ. ಸಮರ್ಪಕ ರಿಟರ್ನ್‌ ಪಾಲಿಸಿಯಿಂದ ನಿಮ್ಮ ಹಣ ವ್ಯರ್ಥವಾಗುವುದನ್ನು ತಡೆಯಬಹುದು.

ಬೆಲೆ ಹೋಲಿಕೆ ಮಾಡಿ

ನಾವು ಅಂಗಡಿಗೆ ತೆರಳಿ ಶಾಪಿಂಗ್‌ ಮಾಡುವಾಗ ವಿವಿಧ ಕಡೆಗಳ ಬೆಲೆ ಹೋಲಿಸಿ ನೋಡುವಂತೆ ವಿವಿಧ ಅಪ್ಲಿಕೇಷನ್‌, ವೆಬ್‌ಸೈಟ್‌ಗಳಲ್ಲಿನ ಬೆಲೆಯನ್ನು ಪರಿಶೀಲಿಸಿ. ಇದರಿಂದ ಸಾಕಷ್ಟು ಹಣವನ್ನು ಉಳಿಸಬಹುದು. ಜತೆಗೆ ಹಲವು ಆ್ಯಪ್‌ಗಳು ವಿಶೇಷ ಸಂದರ್ಭಗಳಲ್ಲಿ ಪ್ರಕಟಿಸುವ ವಿಶೇಷ ಕೊಡುಗೆ, ರಿಯಾಯಿತಿಗಳ ಪ್ರಯೋಜನ ಪಡೆದುಕೊಳ್ಳಿ. ಕೆಲವೊಮ್ಮೆ ಕೂಪನ್‌ಗಳೂ ಲಭ್ಯ. ಇದರ ಲಾಭ ಪಡೆಯಿರಿ.

ಪಾವತಿ ವಿಧಾನ ಚೆಕ್‌ ಮಾಡಿ

ಹಲವು ಆನ್‌ಲೈನ್‌ ಸ್ಟೋರ್‌ಗಳು ಪಾವತಿಗಾಗಿ ವಿವಿಧ ಆಯ್ಕೆಗಳನ್ನು ನೀಡುತ್ತವೆ. ಕೆಲವೊಮ್ಮೆ ಎಲ್ಲ ರೀತಿಯ ಪಾವತಿಗಳನ್ನು ಸ್ವೀಕರಿಸುವುದಿಲ್ಲ. ಹೀಗಾಗಿ ಆರ್ಡರ್‌ ಮಾಡುವ ಮುನ್ನ ನಿಮಗೆ ಅನುಕೂಲವಾಗುವ ಪಾವತಿ ವಿಧಾನ ಇದೆಯೇ ಎನ್ನುವುದನ್ನು ಚೆಕ್‌ ಮಾಡಿ. ನಿಮ್ಮ ಪಾವತಿಯ ಸುರಕ್ಷತೆಯನ್ನು ಗಮನಿಸಲು ಮರೆಯಬೇಡಿ. ಜತೆಗೆ ನಿಮ್ಮ ವೈಯಕ್ತಿಕ ಮಾಹಿತಿ ಎಲ್ಲಿಯೂ ಸೋರಿಕೆಯಾಗುತ್ತಿಲ್ಲ ಎನ್ನುವುದನ್ನೂ ಖಚಿತಪಡಿಸಿ.

ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಮುನ್ನ

ಲ್ಯಾಪ್‌ಟಾಪ್‌, ಟಿವಿ, ಮೊಬೈಲ್‌ ಫೋನ್‌ ಮೊದಲಾದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವಾಗ ಆದಷ್ಟು ಕ್ಯಾಷ್‌ ಆನ್‌ ಡೆಲಿವರಿ (Cash on delivery)ಯನ್ನೇ ಆಯ್ಕೆ ಮಾಡಿ. ಜತೆಗೆ ಉತ್ಪನ್ನ ಬಂದಾಗ ಡೆಲಿವರಿ ಬಾಯ್‌ ಎದುರಿನಲ್ಲೇ ಓಪನ್‌ ಮಾಡಿ. ಒಂದು ವೇಳೆ ಇದೂ ಆಗಿಲ್ಲ ಎಂದಾದರೆ ಪಾರ್ಸೆಲ್‌ ತೆರೆಯುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೊ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: National Pension System: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಎನ್‌ಪಿಎಸ್ ಯೋಜನೆ ಸೂಕ್ತ

Continue Reading

ಮನಿ-ಗೈಡ್

Money Guide: ನೆರೆ, ಭೂಕುಸಿತದಿಂದ ನಿಮ್ಮ ಮನೆಯನ್ನು ರಕ್ಷಿಸಲು ಜಸ್ಟ್‌ ಹೀಗೆ ಮಾಡಿ ಸಾಕು

Money Guide: ನೆರೆ, ಭೂಕುಸಿತದಂತಹ ಪ್ರಕೃತಿ ದುರಂತ, ಬೆಂಕಿ ಆಕಸ್ಮಿಕ, ಕಳ್ಳತನದಂತಹ ಸಂದರ್ಭದಲ್ಲಿ ಪರಿಹಾರ ನೀಡುವ ಯೋಜನೆಯೇ ಗೃಹ ವಿಮೆ. ಮನೆ ಕಳೆದುಕೊಂಡರೂ ಬೀದಿಗೆ ಬೀಳದಂತೆ ಇದು ನೋಡಿಕೊಳ್ಳುತ್ತದೆ. ಅತ್ಯಂತ ಅಮೂಲ್ಯ ಮತ್ತು ಬೆಲೆ ಬಾಳುವ ಆಸ್ತಿಯಾದ ಮನೆಗೆ ವಿಮೆ ಮಾಡಿಸಲೇಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಹೀಗಾಗಿ ಗೃಹ ವಿಮೆಯ ವಿವರ ಇಂದಿನ ಮನಿಗೈಡ್‌ನಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಸ್ವಂತ ಮನೆ ಹೊಂದಬೇಕು ಎನ್ನುವುದು ಬಹುತೇಕ ಎಲ್ಲರ ಕನಸು. ಆದರೆ ಈ ದುಬಾರಿ ಜಗತ್ತಿನಲ್ಲಿ ಇದು ಸುಲಭ ಅಲ್ಲವೇ ಅಲ್ಲ. ಇದಕ್ಕಾಗಿಯೇ ʼಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡುʼ ಎನ್ನುವ ಮಾತು ಪ್ರಚಲಿತದಲ್ಲಿದೆ. ಅಂದರೆ ಈ ಎರಡು ಕೆಲಸ ಬಹಳ ಶ್ರಮದಾಯಕವಾದುದು. ಅದಾಗ್ಯೂ ಸಾಲ ಮಾಡಿ, ಇದ್ದ ಉಳಿತಾಯವನ್ನೆಲ್ಲ ಒಟ್ಟುಗೂಡಿಸಿ ಮನೆ ನಿರ್ಮಾಣ ಮಾಡಿ ನಿಟ್ಟುಸಿರು ಬಿಡುವಷ್ಟರಲ್ಲಿ ಅಗ್ನಿ ಆಕಸ್ಮಿಕ, ನೆರೆ ಅಥವಾ ಭೂಕುಸಿತದಂತಹ ಅವಘಡ ಎದುರಾದರೆ? ಇತ್ತೀಚಿನ ದಿನಗಳಲ್ಲಿ ಇಂತಹ ಅಪಾಯವನ್ನು ತಳ್ಳಿ ಹಾಕುವಂತಿಲ್ಲ. ಪ್ರಕೃತಿಯ ಅಸಮತೋಲನದಿಂದಾಗಿ ಯಾವಾಗ, ಎಲ್ಲಿ ದುರಂತ ಎದುರಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಗೃಹ ವಿಮೆ (Home Insurance) ರಕ್ಷಾ ಕವಚದಂತೆ ನಮ್ಮನ್ನು ಕಾಪಾಡುತ್ತದೆ. ಮನೆ ಕಳೆದುಕೊಂಡರೂ ಬೀದಿಗೆ ಬೀಳದಂತೆ ನೋಡಿಕೊಳ್ಳುತ್ತದೆ. ಹಾಗಾದರೆ ಗೃಹ ವಿಮೆಯನ್ನು ಯಾರೆಲ್ಲ ಮಾಡಿಸಬಹುದು? ಯಾವೆಲ್ಲ ಕಾರಣಗಳಿಗೆ ಪರಿಹಾರ ದೊರೆಯುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ವರದಿಗಳ ಪ್ರಕಾರ ಭಾರತವು ಯಾವಾಗ ಬೇಕಾದರೂ ಪ್ರಾಕೃತಿಕ ದುರಂತ ಸಂಭವಿಸಬಹುದಾದ ದೇಶಗಳ ಪೈಕಿ ಒಂದು ಎನಿಸಿಕೊಂಡಿದೆ. 27 ರಾಜ್ಯಗಳು ವಿಪತ್ತು ಪೀಡಿತವಾಗಿವೆ. ಶೇ. 58.6ರಷ್ಟು ಭೂಪ್ರದೇಶವು ಮಧ್ಯಮದಿಂದ ಹೆಚ್ಚಿನ ತೀವ್ರತೆಯ ಭೂಕಂಪಗಳಿಗೆ ಗುರಿಯಾಗುವ ಮತ್ತು ಶೇ. 12ರಷ್ಟು ಭೂಮಿ ಪ್ರವಾಹ ಮತ್ತು ನದಿ ಸವೆತಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

ಇನ್ನು 7,516 ಕಿ.ಮೀ. ವ್ಯಾಪ್ತಿಯ ಕರಾವಳಿಯಲ್ಲಿ ಪೈಕಿ 5,700 ಕಿ.ಮೀ.ಯಷ್ಟು ಚಂಡಮಾರುತ ಮತ್ತು ಸುನಾಮಿಗಳಿಗೆ ಗುರಿಯಾಗುತ್ತದೆ. ಕೃಷಿಯೋಗ್ಯ ಭೂಮಿಯ ಪೈಕಿ ಶೇ. 68ರಷ್ಟು ಬರಕ್ಕೆ ತುತ್ತಾಗಬಹುದು. ಶೇ. 15ರಷ್ಟು ಭೂ ಪ್ರದೇಶವು ಭೂ ಕುಸಿತಕ್ಕೆ ಗುರಿಯಾಗುವ ಅಪಾಯ ಎದುರಿಸುತ್ತಿದೆ. ವಿಶೇಷವಾಗಿ ಮಳೆಗಾಲದಲ್ಲಿ ಚಂಡಮಾರುತಗಳು, ಭೂಕುಸಿತಗಳು ಮತ್ತು ಮಿಂಚಿನಿಂದ ಉಂಟಾಗುವ ಅಪಾಯ ಹೆಚ್ಚು. ಇಷ್ಟೆಲ್ಲ ಅಪಾಯವಿದ್ದರೂ ನಾವು ಮನೆಗೆ ವಿಮೆ ಮಾಡಿಸಲು ಮುಂದಾಗುವುದಿಲ್ಲ ಎನ್ನುವುದು ವಿಪರ್ಯಾಸ. ಅತ್ಯಂತ ಅಮೂಲ್ಯ ಮತ್ತು ಬೆಲೆ ಬಾಳುವ ಆಸ್ತಿಯಾದ ಮನೆಗೆ ವಿಮೆ ಮಾಡಿಸಲೇಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಅಂಕಿ-ಅಂಶ ಏನು ಹೇಳುತ್ತದೆ?

ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಮನೆ, ಆಸ್ತಿ ಕಳೆದುಕೊಳ್ಳುವವರ ಪೈಕಿ ಕೇವಲ ಶೇ. 8ರಷ್ಟು ಜನ ವಿಮೆ ಮಾಡಿಸಿಕೊಂಡಿರುತ್ತಾರೆ ಎನ್ನುತ್ತದೆ ಅಂಕಿ-ಅಂಶ. ಗೃಹ ವಿಮೆ ಕೇವಲ ರಕ್ಷಣೆಯಲ್ಲ; ಇದು ಕಠಿಣ ಪರಿಶ್ರಮದ ಮೂಲಕ ಗಳಿಸಿದ ಸ್ವತ್ತುಗಳನ್ನು ರಕ್ಷಿಸುವ ನಿರ್ಣಾಯಕ ಹೂಡಿಕೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಯಾಕಾಗಿ ಗೃಹ ವಿಮೆ?

ನಿಮ್ಮ ಮನೆಗೆ ಆಗಬಹುದಾದ ಹಾನಿ ಮತ್ತು ಅದರಲ್ಲಿನ ಬೆಲೆಬಾಳುವ ವಸ್ತುಗಳ ನಷ್ಟಕ್ಕೆ ಪರಿಹಾರ ಒದಗಿಸಲು ಗೃಹ ವಿಮೆ ಅತ್ಯಗತ್ಯ. ಜತೆಗೆ ಬೆಂಕಿ ಆಕಸ್ಮಿಕ, ಕಳ್ಳತನ, ಗಲಭೆ ಆದಾಗಲೂ ಪರಿಹಾರ ನೀಡುತ್ತದೆ. ಒಟ್ಟಿನಲ್ಲಿ ಮನೆಗೆ ಅನಿರೀಕ್ಷಿತವಾಗಿ ಉಂಟಾಗಬಹುದಾದ ಯಾವುದೇ ನಷ್ಟಗಳ ವಿರುದ್ಧ ರಕ್ಷಣೆ ನೀಡುವ ರಕ್ಷಾ ಕವಚದಂತೆ ಗೃಹ ವಿಮೆ ಕೆಲಸ ಮಾಡುತ್ತದೆ. ಹೀಗಾಗಿ ವೈಯಕ್ತಿಕ, ಆರೋಗ್ಯ, ವಾಹನ ವಿಮೆ ಮಾಡಿಸುವಂತೆ ಇದನ್ನು ಕೂಡ ಅತ್ಯಗತ್ಯವಾಗಿ ಮಾಡಿಸಬೇಕು.

ಗೃಹ ವಿಮೆ ಯಾರೆಲ್ಲ ಮಾಡಿಸಬಹುದು?

  • ಸ್ವಂತ ಮನೆ ಹೊಂದಿದವರು, ಭೂ ಮಾಲೀಕರು ಅಥವಾ ಬಾಡಿಗೆದಾರರು ಇನ್ಶೂರೆನ್ಸ್‌ ಖರೀದಿಸಬಹುದು. ಹೌದು, ಬಾಡಿಗೆದಾರರು ಸಹ ತಮ್ಮ ಮನೆಗಳಿಗೆ ವಿಮೆ ಮಾಡಬಹುದು.
  • ನಿವಾಸಕ್ಕಾಗಿ ಬಳಸುವ ಆಸ್ತಿಗಳಿಗೆ ಮಾತ್ರ ಗೃಹ ವಿಮೆಯನ್ನು ಖರೀದಿಸಬಹುದು. ವಸತಿಯನ್ನು ಯಾವುದೇ ವಾಣಿಜ್ಯ ಚಟುವಟಿಕೆಗೆ ಬಳಸಿದರೆ – ಗೃಹ ವಿಮೆ ಹೊರತುಪಡಿಸಿ ಸೂಕ್ತ ವಿಮಾ ಪಾಲಿಸಿ ಖರೀದಿಸಬೇಕು.

ಇದರಿಂದೆಲ್ಲ ರಕ್ಷಣೆ

ಗೃಹ ವಿಮೆ ಮಾಡಿಸಿದರೆ ವಿಶೇಷವಾಗಿ ಮಳೆಗಾಲದಲ್ಲಿ ಈ ಎಲ್ಲ ಕಾರಣಕ್ಕೆ ಮನೆಗೆ ಹಾನಿಯಾದರೆ ನಿಮಗೆ ಪರಿಹಾರ ಸಿಗಲಿದೆ.

  • ಚಂಡಮಾರುತ, ಸುಂಟರಗಾಳಿ, ಸುನಾಮಿ
  • ಪ್ರವಾಹ
  • ಮಿಂಚು, ಗುಡುಗು
  • ಭೂಕುಸಿತ
  • ಮರ ಬಿದ್ದು ಮನೆಗೆ ಹಾನಿ

ವಿಧಗಳು

ಮನೆಯ ರಚನೆ: ಇದು ನಿಮ್ಮ ಮನೆಗೆ ಉಂಟಾಗುವ ಹಾನಿಗೆ ಪರಿಹಾರ ನೀಡುತ್ತದೆ. ಗೃಹಬಳಕೆಯ ಔಟ್‌ಹೌಸ್‌, ಕಾಂಪೌಂಡ್ ಗೋಡೆಗಳು, ಪಾರ್ಕಿಂಗ್ ಸ್ಥಳ, ಸೌರ ಫಲಕಗಳು, ನೀರಿನ ಟ್ಯಾಂಕ್‌ ಮುಂತಾದವುಗಳನ್ನು ಇದು ಒಳಗೊಂಡಿರುತ್ತದೆ.

ಸಾಮಗ್ರಿ: ಈ ವಿಧದ ವಿಮೆ ನಿಮ್ಮ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳನ್ನು ಒಳಗೊಂಡಿದೆ. ಟಿವಿ, ರೆಫ್ರಿಜರೇಟರ್, ಪೀಠೋಪಕರಣಗಳು ಮತ್ತಿತರ ವಸ್ತುಗಳ ಹಾನಿಗೆ ಪರಿಹಾರ ನೀಡುತ್ತದೆ. ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಆಭರಣಗಳು, ಕಲಾಕೃತಿಗಳು, ಬೆಳ್ಳಿಯ ವಸ್ತುಗಳು, ವರ್ಣಚಿತ್ರಗಳು ಮುಂತಾದ ಅಮೂಲ್ಯವಾದ ವಸ್ತುಗಳನ್ನು ಸಹ ನೀವು ಕವರ್ ಮಾಡಬಹುದು.

ಆಕಸ್ಮಿಕ ಸಾವು: ಈ ಕವರೇಜ್ ವಿಮಾದಾರರ ಸಾವಿನ ಸಂದರ್ಭದಲ್ಲಿ ನೆರವಾಗುತ್ತದೆ.

ಈ ಕೆಳಗಿನ ಕಾರಣಗಳಿಂದ ಮನೆಗೆ ಹಾನಿಯಾದರೆ ಗೃಹ ವಿಮೆಯ ಪರಿಹಾರ ಲಭ್ಯ

ವಿಮಾನ ದುರಂತ, ಗಲಭೆ, ಪ್ರತಿಭಟನೆ, ಕ್ಷಿಪಣಿ ಪ್ರಯೋಗ, ನೆರೆ, ಚಂಡ ಮಾರುತ, ಮಿಂಚು, ಭೂಕಂಪ, ಕಳವು, ಬೆಂಕಿ ಆಕಸ್ಮಿಕ.

ಈ ಕೆಳಗಿನ ಕಾರಣಗಳಿಂದ ಮನೆಗೆ ಹಾನಿಯಾದರೆ ಗೃಹ ವಿಮೆಯ ಪರಿಹಾರ ಲಭಿಸುವುದಿಲ್ಲ

ನಗದು ಕಳವು, ಯುದ್ಧ, ವಿದ್ಯುತ್‌ ಉಪಕರಣಗಳ ಅತಿಯಾದ ಬಳಿಕೆಯಿಂದ ಆಗುವ ಹಾನಿ.

ಇದನ್ನೂ ಓದಿ: Money Guide: ಹೋಮ್‌ ಲೋನ್‌ಗೆ ಇನ್ಶೂರೆನ್ಸ್‌ ಮಾಡಿಸಿದ್ದೀರಾ? ಏನಿದರ ಮಹತ್ವ? ನಿಮ್ಮ ಸಂಶಯಗಳಿಗೆ ಇಲ್ಲಿದೆ ಉತ್ತರ

Continue Reading
Advertisement
Oats or Quinoa
ಆರೋಗ್ಯ29 mins ago

Oats or Quinoa: ಓಟ್ಸ್‌, ಕಿನೊವಾ- ಇವೆರೆಡರಲ್ಲಿ ಯಾವುದು ಬೆಸ್ಟ್?

Waqf Bill
ದೇಶ51 mins ago

Waqf Bill: ವಕ್ಫ್‌ ಕಾಯ್ದೆಗೆ ತಿದ್ದುಪಡಿ; 21 ಸದಸ್ಯರ ಸಮಿತಿ ರಚಿಸಿದ ಕೇಂದ್ರ, ಓವೈಸಿ, ತೇಜಸ್ವಿ ಸೂರ್ಯಗೆ ಸ್ಥಾನ

Neeraj Chopra
ಕ್ರೀಡೆ51 mins ago

Neeraj Chopra : ವಿನೇಶ್ ಪೋಗಟ್​​ಗೆ ಅನರ್ಹತೆ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ; ಏನಂದ್ರು ಅವರು?

LOve case
ಬಾಗಲಕೋಟೆ56 mins ago

Love Case : ಮದುವೆಗೆ ಪೋಷಕರ ವಿರೋಧ; ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ

Muda Scam
ಪ್ರಮುಖ ಸುದ್ದಿ1 hour ago

Muda Scam: ಸಿಎಂ ವಿರುದ್ಧದ ಖಾಸಗಿ ದೂರಿನ ಅರ್ಜಿ ವಿಚಾರಣೆ; ಆ.13ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್‌

Israel-Hamas War
ವಿದೇಶ1 hour ago

Israel-Hamas War: ಪುತ್ರರ ವೀರ್ಯವನ್ನು ಸಂಗ್ರಹಿಸಿಡುತ್ತಿರುವ ಇಸ್ರೇಲ್ ಪೋಷಕರು! ಯಾಕೆ ಹೀಗೆ?

Karnataka Nataka Akademi Award
ಉತ್ತರ ಕನ್ನಡ1 hour ago

Karnataka Nataka Akademi Award: ಉ.ಕ ಜಿಲ್ಲೆಯ ಮೂವರು ಕಲಾವಿದರಿಗೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ

Duniya Vijay bheema movie review
ಸ್ಯಾಂಡಲ್ ವುಡ್1 hour ago

Duniya Vijay: ಹೇಗಿದೆ ‘ಭೀಮ’ ಸಿನಿಮಾ? ಪ್ರೇಕ್ಷಕರು ಹೇಳೋದೇನು?

Bengaluru power cut
ಬೆಂಗಳೂರು2 hours ago

Bengaluru Power Cut: ಆ.11ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Kannada New Movie
ಬೆಂಗಳೂರು2 hours ago

Kannada New Movie: ‘ಕೇದಾರ್ ನಾಥ್ ಕುರಿಫಾರಂ’ ಚಿತ್ರದ ಟ್ರೇಲರ್, ಹಾಡುಗಳು ರಿಲೀಸ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 day ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 day ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 day ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌