Myths About Asthma: ಇವು ಅಸ್ತಮಾ ಕುರಿತು ಇರುವ 9 ಸುಳ್ಳುಗಳು! - Vistara News

ಆರೋಗ್ಯ

Myths About Asthma: ಇವು ಅಸ್ತಮಾ ಕುರಿತು ಇರುವ 9 ಸುಳ್ಳುಗಳು!

Myths About Asthma: ಉಸಿರಾಟದ ಸಮಸ್ಯೆಯ ಸುತ್ತ ಹಲವಾರು ತಪ್ಪು ತಿಳಿವಳಿಕೆಗಳಿವೆ. ಹಲವು ಸುಳ್ಳು ನಂಬಿಕೆಗಳು ಇದರ ಸುತ್ತ ಸುತ್ತಿಕೊಂಡು ಇದನ್ನೊಂದು ಪಿಡುಗನ್ನಾಗಿ ಪರಿವರ್ತಿಸಿರುವುದೂ ಹೌದು. ಅಸ್ತಮಾದ ಲಕ್ಷಣಗಳನ್ನು ಮೊದಲೇ ಅರಿತುಕೊಂಡರೆ ಇದನ್ನು ತೀವ್ರಸ್ವರೂಪಕ್ಕೆ ಬದಲಾಗುವುದನ್ನು ತಡೆಯಬಹುದು. ಬನ್ನಿ, ಅಸ್ತಮಾ ಎಂಬ ಕಾಯಿಲೆಯ ಸುತ್ತ ಹಬ್ಬಿ ನಿಂತಿರುವ ತಪ್ಪು ತಿಳಿವಳಿಕೆಗಳೇನು, ಸತ್ಯ ಏನು ಎಂಬ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Woman Using an Asthma Inhaler
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಸ್ತಮಾ ಎಂಬುದು ಸಾಮಾನ್ಯವಾದ ಕಾಯಿಲೆ ಎಂದುಕೊಂಡರೂ, ಗಂಭೀರ ಸ್ವರೂಪದಲ್ಲಿ ಜೀವನವಿಡೀ ಬಾಧಿಸುವ ಸಮಸ್ಯೆಯೂ ಹೌದು. ಈ ಉಸಿರಾಟದ ಸಮಸ್ಯೆಯ ಸುತ್ತ ಹಲವಾರು ತಪ್ಪು ತಿಳಿವಳಿಕೆಗಳಿವೆ. ಹಲವು ಸುಳ್ಳು ನಂಬಿಕೆಗಳು ಇದರ ಸುತ್ತ ಸುತ್ತಿಕೊಂಡು ಇದನ್ನೊಂದು ಪಿಡುಗನ್ನಾಗಿ ಪರಿವರ್ತಿಸಿರುವುದೂ ಹೌದು. ಅಸ್ತಮಾದ ಲಕ್ಷಣಗಳನ್ನು ಮೊದಲೇ ಅರಿತುಕೊಂಡರೆ ಇದನ್ನು ತೀವ್ರಸ್ವರೂಪಕ್ಕೆ ಬದಲಾಗುವುದನ್ನು ತಡೆಯಬಹುದು. ಬನ್ನಿ, ಅಸ್ತಮಾ ಎಂಬ ಕಾಯಿಲೆಯ ಸುತ್ತ ಹಬ್ಬಿ ನಿಂತಿರುವ ತಪ್ಪು ತಿಳಿವಳಿಕೆಗಳೇನು ಹಾಗೂ ಸತ್ಯ ಏನು (Myths About Asthma) ಎಂಬುದನ್ನು ಅರಿಯೋಣ.

Young Woman Having Asthma Attack at Home
Asthma Treatment

ಅಸ್ತಮಾ ಕೇವಲ ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಎಂಬ ನಂಬಿಕೆಯಿದೆ. ಆದರೆ ಅದು ಹಾಗಲ್ಲ. ಬಾಲ್ಯದಲ್ಲೇ ಶುರುವಾಗುವ ಸಮಸ್ಯೆ ಇದಾದರೂ, ಯಾವುದೇ ವಯಸ್ಸಿನಲ್ಲೂ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆ. ಹಾಗಾಗಿ, ಯಾವುದೇ ವಯಸ್ಸಿನಲ್ಲಾದರೂ ಬರಬಹುದಾದ ಅಸ್ತಮಾದ ಆರಂಭಿಕ ಲಕ್ಷಣಗಳು ಏನು ಎಂಬ ಬಗ್ಗೆ ಅರಿವು ಅತ್ಯಂತ ಅಗತ್ಯ.

ಅಸ್ತಮಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂಬ ನಂಬಿಕೆಯಿದೆ. ಆದರೆ ಇದು ಹರಡುವ ರೋಗವಲ್ಲ. ಇದು ಪರಿಸರ ಹಾಗೂ ವಂಶವಾಹಿನಿಯಿಂದ ಬರುವ ಸಮಸ್ಯೆ.

Outdoor Exercise
Asthma Treatment

ಅಸ್ತಮಾ ಇರುವ ಮಂದಿ ವ್ಯಾಯಾಮ ಮಾಡಬಾರದು ಎಂಬ ನಂಬಿಕೆಯಿದೆ. ಆದರೆ ಇದು ಸುಳ್ಳು. ಕೆಲವು ಅಸ್ತಮಾ ರೋಗಿಗಳಿಗೆ ಕೆಲವು ವ್ಯಾಯಾಮದಿಂದ ಸಮಸ್ಯೆಗಳಾಗಬಹುದು. ಹಾಗಾಗಿ ಅಸ್ತಮಾ ಇದೆ ಅಂದಾಕ್ಷಣ ವ್ಯಾಯಾಮ ಬಿಡುವುದಲ್ಲ. ಕೆಲವು ವ್ಯಾಯಾಮಗಳಿಂದ ಅಸ್ತಮಾ ರೋಗಿಗಳ ಒಟ್ಟು ಆರೋಗ್ಯ ವೃದ್ಧಿಸಿ, ಶ್ವಾಸಕೋಶದ ಕಾರ್ಯವೈಖರಿಯೂ ವೃದ್ಧಿಸುತ್ತದೆ.

ಅಸ್ತಮಾ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂಬ ನಂಬಿಕೆ ಇದೆ. ಆದರೆ ಇದು ಸುಳ್ಳು. ಅಸ್ತಮಾ ಒಂದು ದೈಹಿಕವಾದ ಸಮಸ್ಯೆ. ಇದು ಉಸಿರಾಟದ ಸಮಸ್ಯೆ. ಆದರೆ, ಒತ್ತಡ, ಉದ್ವೇಗದಂತಹ ಸಮಸ್ಯೆಗಳು ಅಸ್ತಮಾವನ್ನು ಇನ್ನಷ್ಟು ಹೆಚ್ಚಿಸಬಹುದು.

Helps control asthma problem Jackfruit Benefits

ಅಸ್ತಮಾದ ಔಷಧಿಗೂ ಚಟವಾಗುತ್ತದೆ ಎಂಬ ಮಾತಿದೆ. ಆದರೆ ಇದೂ ಕೂಡಾ ಸುಳ್ಳೇ. ಅಸ್ತಮಾಕ್ಕೆ ಬಹಳಷ್ಟು ಮಂದಿ ಬಳಸುವ ಇನ್‌ಹೇಲ್‌ ಮಾಡುವ ಔಷಧಿಗಳು ಚಟವಾಗುವುದಿಲ್ಲ. ಬದಲಾಗಿ ಇದು ಅಸ್ತಮಾದಿಂದ ಹೊರಗೆ ಬರಲು, ಆರಾಮ ನೀಡಲು ಸಾಕಷ್ಟು ಸಹಾಯ ಮಾಡುತ್ತದೆ.

ಅಸ್ತಮಾ ಗಂಭೀರವಾದ ಸಮಸ್ಯೆಯಲ್ಲ ಎಂಬ ನಂಬಿಕೆಯಿದೆ. ಆದರೆ ಕೆಲವೊಮ್ಮೆ ಅಸ್ತಮಾ ಗಂಭೀರವಾಗಿ ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಹಾಗಾಗಿ ಅಸ್ತಮಾಕ್ಕೆ ಸರಿಯಾದ ಚಿಕಿತ್ಸೆ ಬೇಕೇ ಬೇಕು.

Asthma Treatment

ಅಸ್ತಮಾ ಅಟ್ಯಾಕ್‌ ಆದಾಗ ಮಾತ್ರ ಇನ್‌ಹೇಲರ್‌ ಬೇಕಾಗುತ್ತದೆ ಎಂಬ ತಪ್ಪುತಿಳುವಳಿಕೆ ಇದೆ. ಅಸ್ತಮಾ ಸಮಸ್ಯೆ ಇರುವ ಮಂದಿಗೆ ಇದನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಲು ನಿತ್ಯವೂ ಇನ್‌ಹೇಲರ್‌ನ ಉಪಯೋಗವಿರುತ್ತದೆ. ಅಟ್ಯಾಕ್‌ ಆದಾಗ ಒಡನೆಯೇ ಸಮಾಧಾನ ಸಿಗಲು ಇನ್‌ಹೇಲರ್‌ ಅವಶ್ಯವಾಗಿ ಬೇಕಾಗುತ್ತದೆ.

ಬೇರೆ ವಾತಾವರಣ/ಹವಾಮಾನ ಪರಿಸ್ಥಿತಿ ಇರುವ ಜಾಗಕ್ಕೆ ಹೋಗುವದರಿಂದ ಅಸ್ತಮಾ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಇದೆ. ಸ್ಥಳ ಬದಲಾವಣೆಯಿಂದ ಅಸ್ತಮಾ ಗುಣವಾಗದು. ಕೆಲವು ಮಂದಿಗೆ ಇದರ ಲಕ್ಷಣಗಳು ಕಡಿಮೆಯಾಗಬಹುದು. ಆದರೆ, ಅಸ್ತಮಾ ಸಮಸ್ಯೆ ಸ್ಥಳಕ್ಕೆ ಹೊಂದಿಕೊಂಡ ಸಮಸ್ಯೆಯಲ್ಲ.

ಇದನ್ನೂ ಓದಿ: 5 Seeds for Weight Loss: ಈ 5 ಕಿರು ಬೀಜಗಳು ತೂಕ ಇಳಿಕೆಗೆ ಸಹಕಾರಿ

ಅಸ್ತಮಾದಿಂದ ಶಾಶ್ವತ ಮುಕ್ತಿ ಎಂಬುದಿಲ್ಲ. ಆದರೆ, ಕೆಲವು ಪರ್ಯಾಯ ಚಿಕಿತ್ಸೆಗಳಿಂದ ಇದರ ಲಕ್ಷಣಗಳು ಹತೋಟಿಗೆ ಬರಬಹುದೇ ಹೊರತು, ಪರ್ಯಾಯ ಚಿಕಿತ್ಸೆಗಳಿಂದ ಸಂಪೂರ್ಣವಾಗಿ ಅಸ್ತಮಾದಿಂದ ಹೊರಬರಬಹುದು ಎಂದು ಹೇಳಲಾಗುವುದಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ಮಾನಸಿಕ ಒತ್ತಡ ನಿವಾರಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸುಲಭೋಪಾಯ!

ದೈಹಿಕ, ಮಾನಸಿಕ ಒತ್ತಡವನ್ನು ಉತ್ತಮವಾಗಿ ನಿರ್ವಹಿಸುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯವಾಗಿ (Health Tips) ಇರಬಹುದು. ಪ್ರತಿಯೊಬ್ಬರೂ ಒತ್ತಡವನ್ನು ವಿಭಿನ್ನವಾಗಿ ಅನುಭವಿಸುತ್ತಾರೆ. ಈ ಬಗ್ಗೆ ಮುಕ್ತವಾಗಿ ನಮ್ಮ ಪ್ರೀತಿ ಪಾತ್ರರೊಂದಿಗೆ ಹೇಳಿಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಅಗತ್ಯ ಬಿದ್ದಾಗ ಮಾನಸಿಕ ಆರೋಗ್ಯ ವೃತ್ತಿಪರರಿಂದ ಹೆಚ್ಚುವರಿ ಬೆಂಬಲ ಪಡೆಯಲು ಹಿಂಜರಿಯಬಾರದು. ಒತ್ತಡವನ್ನು ನಿಯಂತ್ರಣದಲ್ಲಿಡಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಕೆಲವು ಸುಲಭ ತಂತ್ರಗಳಿವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Health Tips
Koo

ಪ್ರಸ್ತುತ ಎಲ್ಲರ ಜೀವನಶೈಲಿಯು (Life style) ಒತ್ತಡದಿಂದಲೇ (Stress Anxiety) ಕೂಡಿದೆ. ಹೀಗಾಗಿ ಅನೇಕರು ಸಣ್ಣ ವಯಸ್ಸಿಗೆ ಹೃದಯಾಘಾತಕ್ಕೊಳಗಾಗುತ್ತಿದ್ದಾರೆ (heart attack), ಅನೇಕ ರೀತಿಯ ಮಾನಸಿಕ ಸಮಸ್ಯೆಗಳನ್ನು (mental problem) ಅನುಭವಿಸುತ್ತಿದ್ದಾರೆ. ಒತ್ತಡ (stress) ಎನ್ನುವುದು ಜೀವನದ ಒಂದು ನೈಸರ್ಗಿಕ ಭಾಗ. ಆದರೆ ಅದು ಹೆಚ್ಚಾದಾಗ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತದೆ.

ಮಾನಸಿಕ ಆರೋಗ್ಯದ ಬಗ್ಗೆ ನಾವು ಸಂಭಾಷಣೆಗಳನ್ನು ನಡೆಸುವುದು ಬಹುಮುಖ್ಯ. ಇಲ್ಲವಾದರೆ ಇದು ಗಂಭೀರ ಸ್ವರೂಪ ತೋರಬಹುದು. ಒತ್ತಡವನ್ನು ನಿರ್ವಹಿಸಲು ಮತ್ತು ಅದನ್ನು ನಿಯಂತ್ರಣದಿಂದ ಹೊರಗಿಡಲು ಅನೇಕ ದಾರಿಗಳಿವೆ. ಅವುಗಳಲ್ಲಿ ಕೆಲವು ಬಹುತೇಕ ಎಲ್ಲರಿಗೂ ಮಾಡಲು ಅನುಕೂಲಕರವಾಗಿದೆ.


ಧ್ಯಾನ ಅಭ್ಯಾಸ

ಒತ್ತಡವನ್ನು ನಿರ್ವಹಿಸಲು ಧ್ಯಾನ ಅತ್ಯಂತ ಸುಲಭವಾದ ದಾರಿಯಾಗಿದೆ. ಇದರ ಅಭ್ಯಾಸಕ್ಕೆ ಕೆಲವು ದಿನಗಳು ಬೇಕಾದರೂ ಕ್ರಮೇಣ ಇದು ನಮ್ಮ ಮನಸ್ಸಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡಿ ಉಲ್ಲಾಸದ ಅನುಭವವನ್ನು ಕೊಡುತ್ತದೆ. ಧ್ಯಾನದ ಮೂಲಕ ನಾವು ಮನಸ್ಸನ್ನು ಕೇಂದ್ರೀಕರಿಸಲು ಕೊಂಚ ಸಮಯ ತಗೆದುಕೊಳ್ಳಬೇಕಾಗಬಹುದು. ಇದು ಮನಸ್ಸನ್ನು ಶಾಂತಗೊಳಿಸಲು, ನಕಾರಾತ್ಮಕ ಚಿಂತನೆಯನ್ನು ಕಡಿಮೆ ಮಾಡಲು ಮತ್ತು ಆಂತರಿಕ ಶಾಂತಿಯ ಉತ್ತೇಜಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಕೇವಲ 5- 10 ನಿಮಿಷಗಳಿಂದ ಪ್ರಾರಂಭಿಸಿ.

Health Tips
Health Tips


ವ್ಯಾಯಾಮ

ದೈಹಿಕ ಚಟುವಟಿಕೆಯು ಶಕ್ತಿಯುತವಾದ ಒತ್ತಡ ನಿವಾರಣೆಯ ದಾರಿಯಾಗಿದೆ. ವ್ಯಾಯಾಮವು ಎಂಡಾರ್ಫಿನ್‌ ಹಾರ್ಮೋನ್ ಗಳನ್ನು ಬಿಡುಗಡೆ ಮಾಡುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ದಿನದಲ್ಲಿ ಕನಿಷ್ಠ 30- 60 ನಿಮಿಷಗಳ ವ್ಯಾಯಾಮ ಮಾಡುವುದು ಗುರಿಯಾಗಿರಲಿ. ಅದು ಚುರುಕಾದ ನಡಿಗೆ, ಯೋಗ ಅಥವಾ ನೃತ್ಯ ತರಗತಿ ಹೀಗೆ ಯಾವುದೇ ಆಗಿರಲಿ.


ಉತ್ತಮ ನಿದ್ರೆ

ನಿದ್ರೆಯ ಕೊರತೆಯು ಒತ್ತಡವನ್ನು ಹೆಚ್ಚಿಸುತ್ತದೆ. ಅದನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಪ್ರತಿ ರಾತ್ರಿ 7- 9 ಗಂಟೆಗಳ ಗುಣಮಟ್ಟದ ನಿದ್ರೆ ಎಲ್ಲರಿಗೂ ಅಗತ್ಯ. ಹೀಗಾಗಿ ಮನಸ್ಸನ್ನು ಶಾಂತಗೊಳಿಸುವ ದಿನಚರಿ ನಿಮ್ಮದಾಗಿರಲಿ. ಮಲಗುವ ಕೋಣೆಯನ್ನು ತಂಪಾಗಿ ಮತ್ತು ಗಾಢವಾಗಿ ಇರಿಸಿ. ಮಲಗುವ ಮುನ್ನ ಕಂಪ್ಯೂಟರ್, ಟಿವಿ, ಮೊಬೈಲ್ ನೋಡುವುದನ್ನು ತಪ್ಪಿಸಿ. ನಿದ್ರಿಸಲು ತೊಂದರೆ ಹೆಚ್ಚಾಗಿದ್ದರೆ ವೈದ್ಯರೊಂದಿಗೆ ಮಾತನಾಡಿ.


ಆರೋಗ್ಯಕರ ಆಹಾರ ಪದ್ಧತಿ

ಏನು ತಿನ್ನುತ್ತೀರೋ ಅದು ಮನಸ್ಸಿನ ಒತ್ತಡದ ಮಟ್ಟಗಳ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಹಣ್ಣು, ತರಕಾರಿ, ನೇರ ಪ್ರೋಟೀನ್‌ಗಳು ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಂತಹ ಸಾಕಷ್ಟು ಸಂಪೂರ್ಣ ಆಹಾರಗಳೊಂದಿಗೆ ಸಮತೋಲಿತ, ಪೋಷಕಾಂಶವಿರುವ ಆಹಾರದ ಮೇಲೆ ಗಮನ ಕೇಂದ್ರೀಕರಿಸಿ. ಸಂಸ್ಕರಿಸಿದ ಆಹಾರ, ಸಕ್ಕರೆ ಮತ್ತು ಕೆಫೀನ್ ಅನ್ನು ಮಿತಿಗೊಳಿಸಿ. ಇದು ದೇಹದ ಒತ್ತಡದ ಪ್ರತಿಕ್ರಿಯೆಯನ್ನು ಅಡ್ಡಿಪಡಿಸುತ್ತದೆ.


ಪ್ರೀತಿಪಾತ್ರರೊಂದಿಗೆ ಸಂವಹನ

ಒತ್ತಡವನ್ನು ನಿರ್ವಹಿಸಲು ಬಲವಾದ ಸಾಮಾಜಿಕ ಸಂಪರ್ಕಗಳು ಅತ್ಯಗತ್ಯ. ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿಯಮಿತವಾಗಿ ಸಂಪರ್ಕ ಸಾಧಿಸಲು ಸಮಯ ಮಾಡಿಕೊಳ್ಳಿ. ಭಾವನೆಗಳನ್ನು ಹಂಚಿಕೊಳ್ಳುವುದು ಮತ್ತು ಪ್ರೀತಿಪಾತ್ರರಿಂದ ಬೆಂಬಲವನ್ನು ಪಡೆಯುವುದು ಸಾಕಷ್ಟು ಹಿತಕರವಾದ ಅನುಭವ ಕೊಡುತ್ತದೆ.


ಇದನ್ನೂ ಓದಿ: Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ

ವಿಶ್ರಾಂತಿ ಅಭ್ಯಾಸ

ಆಳವಾದ ಉಸಿರಾಟದಂತಹ ಅಭ್ಯಾಸಗಳು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸಲು ಬಳಸಬಹುದಾದ ವಿಶೇಷ ತಂತ್ರವಾಗಿದೆ. ದಿನಕ್ಕೆ ಕೇವಲ 10- 15 ನಿಮಿಷಗಳ ಕಾಲ ಇದನ್ನು ನಿಯಮಿತ ಅಭ್ಯಾಸವಾಗಿಸಿ.ಕ್ರಮೇಣ ಒತ್ತಡ ಹೆಚ್ಚಾದಾಗ ನೀವು ಈ ರೀತಿಯ ತಂತ್ರವನ್ನು ಸುಲಭವಾಗಿ ಅನುಸರಿಸುತ್ತೀರಿ. ಇದು ದೇಹ ಮತ್ತು ಮನಸ್ಸಿಗೆ ಸಾಕಷ್ಟು ಪ್ರಯೋಜನವನ್ನೂ ಕೊಡುತ್ತದೆ.

Continue Reading

ಬೆಂಗಳೂರು ಗ್ರಾಮಾಂತರ

Zika Virus : ಆನೇಕಲ್‌ನಲ್ಲಿ ಆರು ಮಂದಿಗೆ ಝಿಕಾ ವೈರಸ್ ಪತ್ತೆ; 3 ಕಿ.ಮೀ ರೇಡಿಯಸ್ ಕಂಟೋನ್ಮೆಂಟ್ ಜೋನ್‌

Zika Virus : ಡೆಂಗ್ಯೂ (Dengue Virus) ಬಳಿಕ ಇದೀಗ ರಾಜ್ಯದಲ್ಲಿ ಝಿಕಾ ವೈರಸ್‌ ಭೀತಿ ಶುರುವಾಗಿದೆ. ಆನೇಕಲ್‌ನಲ್ಲಿ ಡೆಂಗ್ಯೂ ರ‍್ಯಾಂಡಮ್‌ ಟೆಸ್ಟ್‌ ವೇಳೆ ಆರು ಮಂದಿಗೆ ಝಿಕಾ ಸೋಂಕು ಕಾಣಿಸಿಕೊಂಡಿದೆ.

VISTARANEWS.COM


on

By

zika Virus
ಸಾಂದರ್ಭಿಕ ಚಿತ್ರ
Koo

ಆನೇಕಲ್‌: ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಆರು ಮಂದಿ ರೋಗಿಗಳಲ್ಲಿ ಝಿಕಾ ವೈರಸ್ (Zika Virus) ಪತ್ತೆಯಾಗಿದೆ. ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಆರು‌ ಮಂದಿಗೆ ಚಳಿ, ಜ್ವರ ಮತ್ತು ಮೈಕೈ ನೋವಿನಿಂದ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಡೆಂಗ್ಯೂ ರ‍್ಯಾಂಡಮ್‌ ಟೆಸ್ಟ್ ವೇಳೆ ಝಿಕಾ ವೈರಸ್ ಪತ್ತೆಯಾಗಿದೆ. ಸದ್ಯ ಮನೆಯಲ್ಲಿ ಎಲ್ಲರೂ ವಿಶ್ರಾಂತಿ ಪಡೆಯುತ್ತಿದ್ದಾರೆ. ಝಿಕಾ ವೈರಸ್ ಪತ್ತೆ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ.

ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ 3 ಕಿ.ಮೀ ರೇಡಿಯಸ್ ಕಂಟೋನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ಆಗದಂತೆ ಕ್ರಮವಹಿಸಲಾಗಿದ್ದು, ಫಾಗಿಂಗ್, ಲಾರ್ವ ನಾಶ ಸೇರಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ ರವಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Karnataka Weather : ಭಾರಿ ಮಳೆ ಎಫೆಕ್ಟ್‌; ಹಳ್ಳ ದಾಟಲು ಹೋಗಿ ಕೊಚ್ಚಿ ಹೋದ 20ಕ್ಕೂ ಹೆಚ್ಚು ಕುರಿಗಳು

ರೋಗದ ಲಕ್ಷಣಗಳೇನು?

ಕಣ್ಣು ಕೆಂಪಾಗುವಿಕೆ, ತಲೆ ನೋವು, ವಿಪರೀತ ಜ್ವರ, ಕೀಲುಗಳಲ್ಲಿ ನೋವು, ಗಂಧೆಗಳು, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳಲಿದೆ.

ಝಿಕಾ ವೈರಸ್ ತಡೆಗಟ್ಟಲು ಏನು ಮಾಡಬೇಕು?

1) ನೀರು ಶೇಖರಣಾ ಪರಿಕರಗಳನ್ನು (ಟ್ಯಾಂಕ್‌, ಟಬ್‌ ಇತ್ಯಾದಿ) ಮುಚ್ಚಿಡಬೇಕು. ಅಲ್ಲದೆ, ವಾರಕ್ಕೊಮ್ಮೆ ಅವುಗಳನ್ನು ಸ್ವಚ್ಛಗೊಳಿಸಬೇಕು.
2) ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಜತೆಗೆ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
3) ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ಧರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು.
4) ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು.
5) ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ.

ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Use of ORS: ಡಿಹೈಡ್ರೇಶನ್‌ ಆದಾಗ ಬಳಸುವ ಒಆರ್‌ಎಸ್‌ ಮನೆಯಲ್ಲೇ ಸಿದ್ಧಪಡಿಸಿಕೊಳ್ಳಬಹುದಾ?

ವಾಂತಿ, ಭೇದಿಯಾದಾಗ (Use of ORS) ನಿರ್ಜಲೀಕರಣ ಸ್ಥಿತಿಯುಂಟಾಗಿ ದೇಹ ವಿಪರೀತ ಬಳಲುತ್ತದೆ. ಆಯಾಸವಾಗುತ್ತದೆ. ವಾಂತಿ, ಭೇದಿಯಾಗಿ ಕೆಲಸಗಳನ್ನು ಮಾಡಲು ಸಾಧ್ಯವಾಗದೆ, ನಿತ್ರಾಣವಾಗಿ ಮಲಗಿಬಿಡುತ್ತೇವೆ. ದೇಹದಲ್ಲಿ ಮತ್ತೆ ಚೈತನ್ಯ ತರಲು, ನೀರಿನಂಶವನ್ನು, ಎಲೆಕ್ಟ್ರೋಲೈಟ್‌ ಅನ್ನು ಮರಳಿಸಲು ನಾವು ಬಹುತೇಕರು ಒಆರ್‌ಎಸ್‌ ಸೇವಿಸುತ್ತೇವೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬ ವಿವರ ಇಲ್ಲಿದೆ.

VISTARANEWS.COM


on

Use of ORS be prepared at home for dehydration
Koo

ಬೆಂಗಳೂರು: ನಮ್ಮ ದೇಹಕ್ಕೆ (Use of ORS) ಸದಾ ಸೋಡಿಯಂ, ಪೊಟಾಶಿಯಂ, ಕ್ಯಾಲ್ಶಿಯಂ ಸೇರಿದಂತೆ ಹಲವು ಬಗೆಯ ಎಲೆಕ್ಟರೋಲೈಟ್‌ಗಳು ನಿತ್ಯದ ಆರೋಗ್ಯಕ್ಕೆ ಬೇಕೇಬೇಕು. ಅವು ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಸದಾ ಸಮತೋಲನದಲ್ಲಿಟ್ಟಿರುವ ಕೆಲಸವನ್ನು ಮಾಡುತ್ತವೆ. ಜೊತೆಗೆ ಹಲವು ಕೆಲಸಗಳನ್ನೂ ನಿರ್ವಹಿಸುತ್ತವೆ. ಆದರೂ ಕೆಲವೊಮ್ಮೆ ಈ ಸಮತೋಲನದಲ್ಲಿ ವ್ಯತ್ಯಾಸವಾಗುತ್ತದೆ. ದೇಹ ನೀರಿನಂಶವನ್ನು ಕಳೆದುಕೊಳ್ಳುತ್ತದೆ. ನಿರ್ಜಲೀಕರಣದ ಸ್ಥಿತಿಯುಂಟಾಗಿ ದೇಹ ವಿಪರೀತ ಬಳಲುತ್ತದೆ. ಆಯಾಸವಾಗುತ್ತದೆ. ವಾಂತಿ, ಬೇದಿಯಾಗಿ ಕೆಲಸಗಳನ್ನು ಮಾಡಲು ಸಾಧ್ಯವಾಗದೆ, ನಿತ್ರಾಣವಾಗಿ ಮಲಗಿಬಿಡುತ್ತೇವೆ. ದೇಹದಲ್ಲಿ ಮತ್ತೆ ಚೈತನ್ಯ ತರಲು, ನೀರಿನಂಶವನ್ನು, ಎಲೆಕ್ಟ್ರೋಲೈಟ್‌ ಅನ್ನು ಮರಳಿಸಲು ನಾವು ಬಹುತೇಕರು ಒಆರ್‌ಎಸ್‌ ಸೇವಿಸುತ್ತೇವೆ.

ಓರಲ್‌ ರಿಹೈಡ್ರೇಶನ್‌ ಸಾಲ್ಟ್ಸ್‌ (ಒಆರ್‌ಎಸ್‌) ಹಲವು ಖನಿಜಾಂಶಗಳನ್ನು ಸೇರಿಸಿ ಮಾಡಿದ ಒಂದು ಫಾರ್ಮುಲಾ. ಮೆಡಿಕಲ್‌ ಶಾಪ್‌ಗಳಲ್ಲಿ ಸಿಗುವ ಇದನ್ನು ನಾವು ನೀರಿನ ಜೊತೆ ಸೇರಿಸಿ ಕುಡಿದರೆ, ಡಿಹೈಡ್ರೇಶನ್‌ ಸಮಯದಲ್ಲಿ ಸಮಾಧಾನ ಸಿಗುತ್ತದೆ. ದೇಹಕ್ಕೆ ಮತ್ತೆ ಖನಿಜಾಂಶಗಳು ದೊರೆತು, ಸಮತೋಲನ ಸಾಧ್ಯವಾಗಿ ದೇಹದಲ್ಲಿ ಮತ್ತೆ ಶಕ್ತಿ ಚಿಗಿತುಕೊಳ್ಳುತ್ತದೆ. ಹಾಗಾಗಿಯೇ ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಅತ್ಯಂತ ಅವಶ್ಯಕ ಔಷಧಿಗಳ ಪಟ್ಟಿಯಲ್ಲಿ ಸೇರಿಸಿದೆ.
ಆದರೆ ಈ ಒಆರ್‌ಎಸ್‌ ಬಗೆಗೆ ಇಂದಿಗೂ ಸಾಕಷ್ಟು ತಪ್ಪು ತಿಳುವಳಿಕೆಗಳಿವೆ. ಬನ್ನಿ, ತಪ್ಪು ತಿಳಿವಳಿಕೆಗಳನ್ನು ಅರಿತುಕೊಂಡು ಸತ್ಯವನ್ನು ತಿಳಿಯೋಣ.

ಇದನ್ನೂ ಓದಿ: Healthcare Workers : ಆರೋಗ್ಯ ಸೇವಕರ ಮೇಲೆ ದಾಳಿಯಾದರೆ 6 ಗಂಟೆಯೊಳಗೆ ಎಫ್​ಐಆರ್​ ದಾಖಲಿಸಿ; ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದ ನಿರ್ದೇಶನ

ಯಾವ ಬ್ರಾಂಡ್‌ ಸೂಕ್ತ?

ಯಾವ ಬ್ರ್ಯಾಂಡ್‌ನ ಒಆರ್‌ಎಸ್‌ ಕುಡಿದರೂ ಸಮಸ್ಯೆ ಪರಿಹಾರವಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಹಲವರಲ್ಲಿದೆ. ಆದರೆ ಸತ್ಯ ಬೇರೆಯೇ ಇದೆ. ಎಲ್ಲ ಬಗೆಯ ಓಆರ್‌ಎಸ್‌ನಿಂದಲೂ ಡಿಹೈಡ್ರೇಶನ್‌ ಸಮಸ್ಯೆ ಪರಿಹಾರವಾಗದು. ಕೆಲವು ಬ್ರ್ಯಾಂಡ್‌ಗಳಲ್ಲಿರುವ ಸೊಲ್ಯೂಷನ್‌ಗಳಲ್ಲಿ ಎಲ್ಲ ಬಗೆಯ ಖನಿಜಾಂಶಗಳೂ ಇಲ್ಲ. ಹಾಗಾಗಿ, ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಒಆರ್‌ಎಸ್‌ ಸೇವನೆ ಒಳ್ಳೆಯದು. ಇದರಲ್ಲಿ, ಗ್ಲುಕೋಸ್‌, ಕಾರ್ಬೋಹೈಡ್ರೇಟ್‌, ಸೋಡಿಯಂ, ಪೊಟಾಶಿಯಂ, ಕ್ಲೋರೈಡ್‌ಗಳನ್ನು ಒಂದು ಪರಿಮಾಣದಲ್ಲಿ ಮಿಶ್ರಗೊಳಿಸಲಾಗಿದೆ.

ಮನೆಯಲ್ಲೇ ಮಾಡಬಹುದಾ?

ಎಲೆಕ್ಟ್ರೋಲೈಟ್‌ ಅನ್ನು ಮನೆಯಲ್ಲೇ ನಾವು ಮಾಡಿಕೊಳ್ಳಬಹುದಾದ್ದರಿಂದ ಮೆಡಿಕಲ್‌ ಶಾಪ್‌ನಲ್ಲಿ ಖರೀದಿಸುವ ಅಗತ್ಯವಿಲ್ಲ ಎಂಬ ನಂಬಿಕೆಯಿದೆ. ಆದರೆ ಇದು ತಪ್ಪು ತಿಳುವಳಿಕೆ. ಸಕ್ಕರೆ ಹಾಗೂ ಉಪ್ಪನ್ನು ಸೇರಿಸಿ ಎಲೆಕ್ಟ್ರೋಲೈಟ್‌ ಮಾಡುವುದು ಬಹಳ ಪ್ರಸಿದ್ಧವಾದ ಮನೆಮದ್ದು. ಆದರೆ, ಇದು ಮೆಟಿಕಲ್‌ ಶಾಪ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಒಆರ್‌ಎಸ್‌ನಷ್ಟು ಪರಿಣಾಮಕಾರಿಯಾಗಿ ವರ್ತಿಸದು. ಒಆರ್‌ಎಸ್‌ನಲ್ಲಿ ವೈಜ್ಞಾನಿಕವಾಗಿ ದೇಹಕ್ಕೆ ಅಗತ್ಯವಾಗುವ ಖನಿಜ ಲವಣಗಳನ್ನು ಬೆರೆಸಿ, ನಿರ್ಜಲೀಕರಣ ಸ್ಥಿತಿಗೆ ಅಗತ್ಯವಿರುವಂತೆ ಮಾಡಲಾದ್ದರಿಂದ ಮನೆಯಲ್ಲೇ ತಯಾರು ಮಾಡಿದ ಉಪ್ಪು-ಸಕ್ಕರೆಯ ಎಲೆಕ್ಟ್ರೋಲೈಟ್‌ಗಿಂತ ಖಂಡಿತವಾಗಿಯೂ ಹೆಚ್ಚು ಪರಿಣಾಮಕಾರಿ.

ಒಆರ್‌ಎಸ್‌ ಮಕ್ಕಳಿಗೆ, ಎನರ್ಜಿ/ಸ್ಪೋರ್ಟ್ಸ್‌ ಡ್ರಿಂಕ್‌ಗಳು ದೊಡ್ಡವರಿಗೆ ಎಂಬ ತಪ್ಪು ಅಭಿಪ್ರಾಯವೂ ಬಹಳ ಮಂದಿಯಲ್ಲಿದೆ. ಆದರೆ ಇದು ಸಂಪೂರ್ಣ ತಪ್ಪು ಅಭಿಪ್ರಾಯ. ಎನರ್ಜಿ ಪೇಯಗಳಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಸಕ್ಕರೆಯಿದ್ದು, ಇದು ಅನಾರೋಗ್ಯಕರ. ಇದು ಯಾವುದೇ ಬಗೆಯಲ್ಲಿ ನಿರ್ಜಲೀಕರಣ ಅಂದರೆ ಡಿಹೈಡ್ರೇಶನ್‌ಗೆ ಪರಿಣಾಮಕಾರಿಯಾಗಿ ವರ್ತಿಸದು. ಬೇದಿಗೂ ಇದು ಸೂಕ್ತವಲ್ಲ. ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಒಆರ್‌ಎಸ್‌ಗಿಂದ ಸೂಕ್ತವಾದ ಪೇಯ ಬೇರೆ ಯಾವುದೂ ಇಲ್ಲ. ಮಕ್ಕಳಿಂದ ಹಿಡಿದು ಮುದುಕರವರೆಗೆ ನಿರ್ಜಲೀಕರಣ ಸಮಸ್ಯೆ ಬಂದಾಗ ಒಆರ್‌ಎಸ್‌ ಕುಡಿಯುವುದು ಅತ್ಯಂತ ಒಳ್ಳೆಯದು.

ಪ್ರವಾಸದ ಸಂದರ್ಭವೂ ಸೇರಿದಂತೆ, ಎಲ್ಲ ಸಮಯದಲ್ಲೂ ಇದನ್ನು ನಿಮ್ಮ ಜೊತೆ ತುರ್ತು ಚಿಕಿತ್ಸೆಯ ಔಷಧಿಯ ಡಬ್ಬದಲ್ಲಿ ನೀವು ಸದಾ ಇಟ್ಟುಕೊಳ್ಳುವುದು ಅತ್ಯಂತ ಒಳ್ಳೆಯದು. ಪ್ರವಾಸದ ಸಂದರ್ಭ ಇದು ಅತ್ಯಂತ ಅಗತ್ಯವಾಗಿ ಬೇಕಾಗುವ ಔಷಧಿಗಳಲ್ಲಿ ಒಂದು ಎಂಬುದನ್ನು ಸದಾ ನೆನಪಿಡಿ.

Continue Reading

ಬೆಳಗಾವಿ

Heart Attack : ಬೈಕ್‌ನಲ್ಲಿ ತೆರಳುತ್ತಿದ್ದಾಗಲೇ ಬಡಿತ ನಿಲ್ಲಿಸಿದ ಹೃದಯ; ಯೋಧನ ಸಾವಿನ ಕೊನೆ ಕ್ಷಣ ಸೆರೆ

ಯೋಧರೊಬ್ಬರಿಗೆ ಅವರ ಹೃದಯವೇ (Heart Attack) ಯಮಪಾಶವಾಗಿತ್ತು. ಬೆಳಗಾವಿಯಲ್ಲಿ ಚಲಿಸುತ್ತಿದ್ದ ಬೈಕ್‌ನಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸಾವಿನ ಕೊನೆ ಕ್ಷಣವು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

VISTARANEWS.COM


on

By

Heart attack
Koo

ಬೆಳಗಾವಿ: ಯಾವುದೇ ಸೂಚನೆಯನ್ನು ನೀಡದೆ ಬರುವ ಜವರಾಯನ ಅಟ್ಟಹಾಸಕ್ಕೆ ಮಧ್ಯಮ ವಯಸ್ಸಿನವರ ಪ್ರಾಣಪಕ್ಷಿ ಹಾರಿಹೋಗುತ್ತಿದೆ. ಬದುಕು ಹೇಗೆಲ್ಲ ಅಂತ್ಯವಾಗುತ್ತೆ ಎಂಬುದನ್ನು ಅಂದಾಜಿಸಲೂ ಸಾಧ್ಯವಿಲ್ಲ. ಹೃದಯವು ಯಾವ ಕ್ಷಣದಲ್ಲಿ ಕೈಕೊಡುತ್ತೆ ಎಂಬುದು ಊಹಿಸಲು ಆಗುತ್ತಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ (Heart Attack) ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ ಬೆಳಗಾವಿಯಲ್ಲಿ ಯೋಧರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಯೋಧ ಬೈಕ್‌ನಲ್ಲಿ ಹೋಗುತ್ತಿದ್ದಾಗ ಸಹಿಸಲು ಆಗದ ಎದೆನೋವು ಕಾಣಿಸಿಕೊಂಡಿದೆ. ಬೈಕ್‌ ನಿಧಾನಿಸಿ ಎದೆ ಸವಾರಿಕೊಂಡು ನಿಲ್ಲಲ್ಲು ಯತ್ನಿಸಿದ್ದಾರೆ. ಆದರೆ ಕರುಣೆಯೇ ಇಲ್ಲದ ಹೃದಯ ತನ್ನ ಬಡಿತವನ್ನು ನಿಲ್ಲಿಸಿತ್ತು. ನೋಡನೋಡುತ್ತಲೇ ಆ ಯೋಧ ರಸ್ತೆ ಬದಿಗೆ ಕುಸಿದು ಬಿದ್ದಿದ್ದರು. ಸಾವಿನ ಕ್ಷಣವು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಬೆಳಗಾವಿಯ ಎಂಎಲ್ಐಆರ್‌ಸಿ ಕ್ಯಾಂಪ್‌ನಲ್ಲಿ ಈ ಘಟನೆ ನಡೆದಿದೆ. ಹೃದಯಾಘಾತದಿಂದ ಸುನೀಲ್ ಸಲಾಂ (37) ಎಂಬುವವರು ಮೃತಪಟ್ಟಿದ್ದಾರೆ. ಸುನೀಲ್‌ ಮರಾಠ ಲಘು ಪದಾತಿದಳಲ್ಲಿ ಹವಾಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ದಿಢೀರ್‌ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Heart attack
Heart attack

ಇದನ್ನೂ ಓದಿ: Physical Abuse : ಕೋರಮಂಗಲದ ಪಬ್‌ನಿಂದ ಮನೆಗೆ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಬೈಕ್‌ ಚಲಿಸುತ್ತಿದ್ದಾಗಲೇ ಎದೆ ನೋವು ಕಾಣಿಸಿಕೊಂಡಿದೆ. ಎದೆಯನ್ನು ಸವರಿಸಿಕೊಳ್ಳುತ್ತಲೇ ಬ್ರೇಕ್‌ ಹಿಡಿದು ಬೈಕ್‌ ನಿಧಾನ ಮಾಡಿದ್ದಾರೆ. ಆದರೆ ನಡುರಸ್ತೆಯಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸುನೀಲ್‌ ಅವರು ಬೈಕ್‌ನಿಂದ ರಸ್ತೆ ಬದಿಗೆ ಬೀಳುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಸುನೀಲ್‌ ಮೃತದೇಹವನ್ನು ಮಹಾರಾಷ್ಟ್ರದ ಚಂದಗಡ ತಾಲೂಕಿನ ಘುಳೇವಾಡಿಗೆ ರವಾನಿಸಿದ್ದು, ಸಕಲ ಸರ್ಕಾರಿ ಗೌರವಗೊಂದಿಗೆ ಯೋಧನ ಅಂತ್ಯಕ್ರಿಯೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Duniya Vijay 20 crore collection till today
ಸ್ಯಾಂಡಲ್ ವುಡ್17 mins ago

Duniya Vijay: 20 ಕೋಟಿ ರೂ. ಕಲೆಕ್ಷನ್‌ ಮಾಡಿ ʻಭೀಮʼ ದಾಖಲೆ ? ಇಲ್ಲಿಯವರೆಗಿನ ಕಲೆಕ್ಷನ್‌ ಎಷ್ಟು?

assault case
ಉಡುಪಿ17 mins ago

Assault Case : ಕುಂದಾಪುರದಲ್ಲಿ ಗಾಂಜಾ ನಶೆಯಲ್ಲಿ ಝಳಪಿಸಿದ ತಲ್ವಾರ್‌; ಇಬ್ಬರು ಗಂಭೀರ

cm siddaramaiah high court
ಪ್ರಮುಖ ಸುದ್ದಿ29 mins ago

CM Siddaramaiah: ತನಿಖೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿದ ಸಿಎಂ, ಇಂದು ಮಧ್ಯಾಹ್ನ ವಿಚಾರಣೆ

bharat bandh
ದೇಶ30 mins ago

Bharat Bandh: ಆ.21ರಂದು ಭಾರತ ಬಂದ್‌; ಯಾವೆಲ್ಲಾ ಸೇವೆ ಇರುತ್ತೆ? ಏನಿರೋದಿಲ್ಲ? ಇಲ್ಲಿದೆ ಡಿಟೇಲ್ಸ್‌

Ganesh Duniya Vijay bheema and krishnam pranaya sakhi films witnesses good response
ಸ್ಯಾಂಡಲ್ ವುಡ್57 mins ago

Ganesh-Duniya Vijay: ತಮಿಳುನಾಡಿನಲ್ಲಿ ‘ಭೀಮ’, ‘ಕೃಷ್ಣಂ ಪ್ರಣಯಸಖಿ’ ಹೌಸ್‌ಫುಲ್!

Land Dispute
ಚಿಕ್ಕಬಳ್ಳಾಪುರ59 mins ago

Land Dispute : ಜಮೀನು ವಿವಾದಕ್ಕೆ ದೊಣ್ಣೆಗಳಿಂದ ಬಡಿದಾಡಿಕೊಂಡ ಗುಂಪುಗಳು

police inspector abscond
ಕ್ರೈಂ1 hour ago

Inspector Abscond: ಕಳ್ಳರಿಂದ ಸೀಜ್‌ ಮಾಡಿದ ₹72 ಲಕ್ಷ ಗುಳುಂ ಮಾಡಿ ಇನ್‌ಸ್ಪೆಕ್ಟರ್‌ ನಾಪತ್ತೆ!

Stree 2 Box Office Day 4 Rajkummar Rao Shraddha Starrer Creates History
ಬಾಲಿವುಡ್2 hours ago

Stree 2 Box Office Day 4: 200 ಕೋಟಿ ರೂ. ಕಲೆಕ್ಷನ್‌ ಮಾಡಿ ಗೆದ್ದು ಬೀಗಿದ ‘ಸ್ತ್ರೀ 2’; ನಾಲ್ಕು ದಿನದಲ್ಲಿ ದಾಖಲೆ ಗಳಿಕೆ!

Modi Government
ದೇಶ2 hours ago

Modi Government: ಮೋದಿ ಸರ್ಕಾರ ಉರುಳಿಸೋಕೆ ಅಮೆರಿಕದ CIA ಕುತಂತ್ರ; ಬಾಪಿಸ್ಟ್‌ ಚರ್ಚ್‌, ಚಂದ್ರಬಾಬು ನಾಯ್ಡುವೇ ದಾಳ

physical abuse hsr layout
ಕ್ರೈಂ3 hours ago

Physical Abuse: ಪಾರ್ಟಿ ಮುಗಿಸಿ ಲಿಫ್ಟ್‌ ಕೇಳಿದ ಯುವತಿಯ ಮೇಲೆರಗಿದ ಕಾಮುಕನ ಬಂಧನ; ಸಂತ್ರಸ್ತೆಯ ಜೀವ ಉಳಿಸಿದ SOS ಬಟನ್!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌