Actor Darshan : ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು; ಸೆರೆವಾಸದಲ್ಲಿರುವ ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ಗೆ ಸಿಗುತ್ತಾ ಬೇಲ್‌! - Vistara News

ಸಿನಿಮಾ

Actor Darshan : ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು; ಸೆರೆವಾಸದಲ್ಲಿರುವ ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ಗೆ ಸಿಗುತ್ತಾ ಬೇಲ್‌!

Actor Darshan : ಕೊಲೆ ಕೇಸ್‌ನಲ್ಲಿ ಸೆರೆವಾಸದಲ್ಲಿರುವ ನಟ ದರ್ಶನ್‌ನ ನ್ಯಾಯಾಂಗ ಬಂಧನ ಅವಧಿ ನಾಳೆ ಸೋಮವಾರ ಮುಕ್ತಾಯವಾಗಲಿದೆ. ಈ ನಡುವೆ ರೇಣುಕಾಸ್ವಾಮಿ ಕೊಲೆಯಾಗಿ ಮೂರು ತಿಂಗಳು ಕಳೆದಿದ್ದು, ಕೊಲೆಯಾದ ದಿನದಿಂದ ಇಂದಿನವರೆಗೆ ಪಿನ್‌ ಟು ಪಿನ್‌ ಮಾಹಿತಿ ಇಲ್ಲಿದೆ.

VISTARANEWS.COM


on

actor darshan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Actor Darshan) ಜೈಲುಪಾಲಾಗಿರುವ ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ನ ನ್ಯಾಯಾಂಗ ಬಂಧನ ಅವಧಿ ಸೆ.9ಕ್ಕೆ ಮುಕ್ತಾಯವಾಗಲಿದೆ. ಸೋಮವಾರ 24ನೇ ಎಸಿಎಂಎ ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಜೈಲಿನಿಂದ ಎಲ್ಲ ಆರೋಪಿಗಳು ಹಾಜರಾಗಲಿದ್ದಾರೆ.

ಸೋಮವಾರ ಎಲ್ಲ 16 ಆರೋಪಿಗಳ ಕೈಗೆ ಚಾರ್ಜ್ ಶೀಟ್ ಸೇರಲಿದ್ದು, ಚಾರ್ಜ್ ಶೀಟ್ ಸಿಗುತ್ತಿದ್ದಂತೆ ಕೆಲವು ಆರೋಪಿಗಳಿಂದ ಜಾಮೀನಿಗೆ ಅರ್ಜಿ ಸಾಧ್ಯತೆ ಇದೆ. ಮುಖ್ಯವಾಗಿ ಎ2 ಆರೋಪಿ ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಚಾರ್ಜ್ ಶೀಟ್ ಸಿಕ್ಕ ನಂತರ ಸೆಷನ್ಸ್ ಕೋರ್ಟ್‌ನಲ್ಲಿ ಬಹುತೇಕ ನಾಳೆಯೇ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.

ಜೈಲುಪಾಲಾಗಿ ಇಂದಿಗೆ ಮೂರು ತಿಂಗಳು

ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನ್ಯಾಪ್‌ ಮತ್ತು ಕೊಲೆ ಆಗಿ ಇಂದಿಗೆ ಬರೋಬ್ಬರಿ ಮೂರು ತಿಂಗಳಾಗಿದೆ. ರಾಜನಂತೆ ಬಂಗಲೆಯಲ್ಲಿದ್ದ ನಟ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಏನೆಲ್ಲ ಆಯಿತು ಎಂಬ ಮಾಹಿತಿ ಇಲ್ಲಿದೆ.

-ಜೂನ್ 8ರ ಬೆಳಗ್ಗೆ 11 ಗಂಟೆ ಸುಮಾರಿಗೆ ಡಿ ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದ್ದರು.

-ಆ ದಿನ ಮಧ್ಯಾಹ್ನ ಪಟ್ಟಣಗೇರೆ ಶೆಡ್‌ನಲ್ಲಿ ರೇಣಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಕರೆಂಟ್ ಶಾಕ್ ನೀಡಿ ಬರ್ಬರವಾಗಿ ಕೊಲೆ ಮಾಡಿದ್ದರು.

-ಜೂ.8ರ ಸಂಜೆ 6 ಗಂಟೆಗೆ ರೇಣುಕಾಸ್ವಾಮಿ ಮೃತಪಟ್ಟ ವಿಚಾರ ಕೇಳಿ ಶಾಕ್ ಆಗಿದ್ದ ದರ್ಶನ್

-ಶವವನ್ನು ಸಾಗಿಸಲು ಪ್ಲಾನ್ ಮಾಡಿದ್ದ ಗ್ಯಾಂಗ್‌ಗೆ ನಟನ ಆಪ್ತರಾದ ವಿನಯ್ ಮತ್ತು ಪ್ರದೂಷ್‌ಗೆ 30 ಲಕ್ಷ ಹಣ ಸುಪಾರಿ ನೀಡಿದ್ದ.

-ಕೊಲೆ ನಾವೇ ಮಾಡಿರುವುದಾಗಿ ಹೇಳಿ ಸರೆಂಡರ್ ಆಗಲು ನಾಲ್ಕು ಜನರನ್ನು ದರ್ಶನ್ ಆಪ್ತರು ನೇಮಿಸಿದ್ದರು.

-ನಿಖಿಲ್ ನಾಯ್ಕ ,ರಾಘವೇಂದ್ರ, ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ಈ ನಾಲ್ವರಿಂದ ಶವ ಸಾಗಿಸಿ, ಸುಮನಹಳ್ಳಿ ರಾಜಕಾಲುವೆ ಬಳಿ ಶವ ಎಸೆದಿದ್ದರು.

-ಜೂನ್ 9 ರಂದು ಬೆಳಗ್ಗೆ 8 ಗಂಟೆಗೆ ಅಪರಿಚಿತ ಶವ ಎಂಬಂತೆ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು.

-ಅಪರಿಚಿತ ಶವವೆಂದು ಪ್ರಕರಣ ದಾಖಲಿಸಿ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ಶುರು ಮಾಡಿದ್ದರು.

-ಜೂನ್ 10 ರಂದು ಪ್ಲ್ಯಾನ್ ಪ್ರಕಾರ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ಹಾಜರಾಗಿ ನಾಲ್ವರು ಶರಣಾಗಿದ್ದರು. ವಿಚಾರಣೆ ವೇಳೆ ಆರೋಪಿಗಳು ಪೊಲೀಸರ ಮುಂದೆ ಸುಳ್ಳು ಹೇಳಿಕೆ ನೀಡಿದ್ದರು.

-ಬಳಿಕ ಪೊಲೀಸರು ತಮ್ಮದೆ ಸ್ಟೈಲ್‌ನಲ್ಲಿ ವಿಚಾರಣೆ ನಡೆಸಿದಾಗ ಪವಿತ್ರಗೌಡ ಹಾಗೂ ದರ್ಶನ್ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದರು. ಸತ್ಯ ತಿಳಿದು ಪೊಲೀಸರಿಗೆ ಶಾಕ್ ಆಗಿತ್ತು.

-ರೇಣುಕಾಸ್ವಾಮಿ ಕೊಲೆ ಹಿಂದೆ ನಟ ದರ್ಶನ್ ಕೈವಾಡ ಇದೆ ಎಂಬ ಸತ್ಯ ಹೊರಬಂದಿತ್ತು. ನಟ ದರ್ಶನ್ ಜೂನ್ 11ರಂದು ಮೈಸೂರಲ್ಲಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ದರ್ಶನ್ ಹಾಗೂ ಪವಿತ್ರ ಮಾತಾಡಿದ್ದು ಜಸ್ಟ್‌ 16 ಸೆಕೆಂಡ್!

-ಪ್ರಕರಣದಲ್ಲಿ ದರ್ಶನ್ ಭಾಗಿ ಬಗ್ಗೆ ತಿಳಿದ ಪೊಲೀಸರು ಮೈಸೂರಿಗೆ ಪ್ರಯಾಣ ಬೆಳೆಸಿದ್ದರು. ಎಸಿಪಿ ಚಂದನ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆದಿತ್ತು. ನಟ ದರ್ಶನ್‌ನನ್ನು ಜೂನ್ 11ರಂದು ಬಂಧಿಸಿ ಎಸಿಪಿ ಚಂದನ್ ಮತ್ತು ತಂಡ ಬೆಂಗಳೂರಿಗೆ ಕರೆತಂದಿತ್ತು.

-ದರ್ಶನ್ ಬಂಧಿಸಿ ಬೆಳಗ್ಗೆ 11 ಗಂಟೆ ಸುಮಾರಿಗೆ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಗೆ ಕರೆತರಲಾಗಿತ್ತು. ಒಂದೇ ದಿನದಲ್ಲಿ‌ 17 ಜನ ಆರೋಪಿಗಳನ್ನು ಬಂಧಿಸಿ ಕರೆತರಲಾಗಿತ್ತು. ಜೂನ್ 11ರಂದು ಕೋರ್ಟ್‌ಗೆ ಹಾಜರು ಪಡೆಸಿದ ಪೊಲೀಸರು 4 ದಿನ‌ ಕಸ್ಟಡಿಗೆ ಪಡೆದಿದ್ದರು.

-ಜೂನ್ 15ಕ್ಕೆ ಮತ್ತೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಪುನಃ 5 ದಿನ ಕಸ್ಟಡಿಗೆ ಪಡೆದಿದ್ದ ತಂಡ ತೀವ್ರ ವಿಚಾರಣೆ ನಡೆಸಿತ್ತು. ಜೂನ್ 20ಕ್ಕೆ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿತ್ತು. ಈ ವೇಳೆ ದರ್ಶನ್, ವಿನಯ್‌, ಪ್ರದೂಷ್, ರಾಘವೇಂದ್ರ ಇವರನ್ನು ಹೆಚ್ಚುವರಿ ತನಿಖೆಗಾಗಿ ಎರಡು ದಿನ ಕಸ್ಟಡಿಗೆ ಪಡೆಯಲಾಗಿತ್ತು.

-ಮತ್ತೆ ಎರಡು ದಿನ ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು ಜೂನ್ 22ರಂದು ಕೋರ್ಟ್‌ಗೆ ಹಾಜರು ಪಡಿಸಿದ್ದರು. ರೇಣುಕಾಸ್ವಾಮಿ ಕೇಸ್‌ನಲ್ಲಿ 14 ದಿನಗಳ‌ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿತ್ತು.

-ಈ ಮಧ್ಯೆ ನಟ ದರ್ಶನ್‌ ಮನೆ ಊಟಕ್ಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆಯೆ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಬಯಲಾಗಿತ್ತು. ರಾಜಾತಿಥ್ಯ ಪಡೆಯುತ್ತಿದ್ದ ಆರೋಪದ ಮೇಲೆ ರೇಣುಕಾಸ್ವಾಮಿ ಕೊಲೆ ಆರೋಪಿಗಳು ದಿಕ್ಕಾಪಾಲಾಗಿದ್ದರು.

-ಎಲ್ಲ ಆರೋಪಿಗಳನ್ನು ರಾಜ್ಯದ ವಿವಿಧ ಜೈಲಿಗಳಿಗೆ ಕಾರಗೃಹ ಅಧಿಕಾರಿಗಳು ರವಾನಿಸಿದ್ದರು. ದರ್ಶನ್ ಬಿಸಿಲು ನಾಡು ಬಳ್ಳಾರಿ ಜೈಲಿಗೆ ಶಿಫ್ಟ್ಆದರು. ಇದಾದ ಬಳಿಕ ಸೆಪ್ಟೆಂಬರ್ 3 ರಂದು 24 ಎಸಿಎಂಎಂ ಕೋರ್ಟ್‌ಗೆ ತನಿಖಾಧಿಕಾರಿ ಎಸಿಪಿ ಚಂದನ್ ನೇತೃತ್ವದ ತಂಡ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Actor Darshan : ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ದರ್ಶನ್ ಹಾಗೂ ಪವಿತ್ರ ಮಾತಾಡಿದ್ದು ಜಸ್ಟ್‌ 16 ಸೆಕೆಂಡ್!

Actor Darshan : ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ದರ್ಶನ್ ಹಾಗೂ ಪವಿತ್ರ ಮಾತಾಡಿದ್ದು ಜಸ್ಟ್‌ 16 ಸೆಕೆಂಡ್ ಅಂತೆ. ಡೆವಿಲ್ ಗ್ಯಾಂಗ್ ರೇಣುಕಾಸ್ವಾಮಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ್ದರಂತೆ.

VISTARANEWS.COM


on

By

Darshan and Pavitra spoke for just 16 seconds before and after Renukaswamys murder
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder) ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೆ ಮತ್ತಷ್ಟು ರಹಸ್ಯಗಳ ಬೆಳಕಿಗೆ ಬರುತ್ತಿವೆ. ಇದರಲ್ಲಿ ಪವಿತ್ರಗೌಡ ಹಾಗೂ ದರ್ಶನ್ (Actor Darshan) ಇಡೀ ಪ್ರಕರಣದಲ್ಲಿ ಮಾತನಾಡಿರುವುದು ಕೇವಲ 16 ಸೆಕೆಂಡ್ ಮಾತ್ರವಂತೆ! ಇಷ್ಟಕ್ಕೂ ಅವರಿಬ್ಬ ನಡುವೆ ನಡೆದ ಸಂಭಾಷಣೆ ಏನು ಎನ್ನುವ ಮಾಹಿಯಿ ಇಲ್ಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನೆದಿನೇ ಡೆವಿಲ್ ಗ್ಯಾಂಗ್ ಪ್ರದರ್ಶಿಸಿರುವ ಮೃಗೀಯ ವರ್ತನೆ ಒಂದು ಕಡೆ ಬಹಿರಂಗವಾಗುತ್ತಿದೆ. ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ಏನೆಲ್ಲಾ‌ ಪಿತೂರಿ, ಸಂಭಾಷಣೆ ನಡಿತು ಎನ್ನುವುದು ಆರೋಪಿಗಳ ಮೊಬೈಲ್ ರಿಟ್ರೀವ್ ವೇಳೆ ಬಯಲಿಗೆ ಬಂದಿದೆ. ಅದರಲ್ಲಿ ರೇಣುಕಾಸ್ವಾಮಿ ಕೊಲೆಗೂ ಮೊದಲು- ಕೊಲೆ ನಂತರ ಪವಿತ್ರಗೌಡ ಹಾಗೂ ದರ್ಶನ್ ವಾಟ್ಸಾಪ್ ಕಾಲ್‌ನಲ್ಲಿ 16 ಸೆಕೆಂಡ್ ಮಾತನಾಡಿರುವುದು ಬೆಳಕಿಗೆ ಬಂದಿದೆ.

ಭೀಕರ ಹಲ್ಲೆ, ಕೊಲೆ ಬಗ್ಗೆ ವೈದ್ಯಕೀಯ ವರದಿ ಕೇಳಿದ ಪೊಲೀಸರು!

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಇದುವರೆಗೂ ಆರು ಪ್ರಮುಖ ವೈದ್ಯಕೀಯ ರಿಪೋರ್ಟ್‌ಗಳು ಪೊಲೀಸರ ಕೈ ಸೇರಿವೆ.  ಆರು ರಿಪೋರ್ಟ್‌ಗಳು ಆರೋಪಿಗಳಿಗೆ ವಿರುದ್ಧವಾಗಿಯೇ ಇದ್ದು, ಆತಂಕ ಉಂಟು ಮಾಡಿದೆ. ಹಾಗಾದರೆ ಪೊಲೀಸರು ಕೇಳಿದ್ದ ಆರು ವರದಿ ಯಾವ್ಯಾವುದು..

1.ಮರಣೋತ್ತರ ಪರೀಕ್ಷೆಯ ಅಭಿಪ್ರಾಯ ವರದಿ
2.ಮೃತದೇಹದ ಮೇಲೆ ಉಂಟಾದ ಗಾಯಗಳ ವಿವರ
3.ಎಫ್ಎಸ್ಎಲ್ ಹಾಗೂ ಡಿಎನ್ಎ ಮ್ಯಾಚಿಂಗ್ ರಿಪೋರ್ಟ್
4.ತಲೆ ಮೇಲಿನ ಗಾಯದ ರೀತಿ ಬಗ್ಗೆ ವರದಿ
5.ಶೂ ಅಥವಾ ಚಪ್ಪಲಿಯಿಂದ ಎದೆಭಾಗಕ್ಕೆ ತುಳಿದ ಬಗ್ಗೆ ವರದಿ
6.ಶೂ ಅಥವಾ ಚಪ್ಪಲಿಯಿಂದ ಮಾರ್ಮಾಂಗಕ್ಕೆ ಒದ್ದ ಬಗ್ಗೆ ವರದಿ

ಈ ಆರು ವಿಚಾರಗಳ ಬಗ್ಗೆ ವೈದ್ಯರಿಂದ ಅಭಿಪ್ರಾಯ ವರದಿ ಪಡೆದ ಪೊಲೀಸರು, ಅವುಗಳ ವರಿದಿಗಳನ್ನು ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ರೇಣುಕಾಸ್ವಾಮಿ ದೇಹದ ಮೇಲಿನ 39 ಗಾಯಗಳ ಬಗ್ಗೆ ಉಲ್ಲೇಖ ಆಗಿದೆ.  ತಲೆ, ಕಿವಿ, ಕಣ್ಣು, ಎದೆ, ಬೆನ್ನು, ಕೈ ಮೇಲಿನ ಗಾಯಗಳ ಬಗ್ಗೆ ವರದಿಯಲ್ಲಿ ಇದೆ. ಎಫ್ಎಸ್ಎಲ್ ಹಾಗೂ ಡಿಎನ್ಎ ಮ್ಯಾಚಿಂಗ್ ವರದಿ ಕೂಡ ಬಂದಿದ್ದು, ಆರೋಪಿಗಳ ಬಟ್ಟೆ, ಶೂ, ಚಪ್ಪಲಿಗಳ ಮೇಲೆ ಡಿಎನ್ಎ ಮ್ಯಾಚ್ ಆಗಿದೆ‌. ತಲೆ ಮೇಲಿನ ಗಾಯದ ಬಗ್ಗೆ ಪ್ರತ್ಯೇಕ ವರದಿ ನೀಡಿದ್ದಾರೆ. ಇದರ ಜತೆಗೆ ಶೂನಿಂದ ಮಾರ್ಮಾಂಗಕ್ಕೆ ಒದ್ದಿದ್ದ ಬಗ್ಗೆಯೂ ವರದಿ ನೀಡಿದ್ದು ಇದೆಲ್ಲ ಆರೋಪಿಗಳಿಗೆ ಮುಂದೆ ಸಂಕಷ್ಟ ತರುವುದು ಪಕ್ಕ.

ಇದನ್ನೂ ಓದಿ: DK Shivakumar :ಮುಡಾ ಕೇಸ್‌ ಡೈವರ್ಟ್‌ಗೆ ದರ್ಶನ್‌ ಫೋಟೊ ರಿಲೀಸ್‌; ಪ್ರಲ್ಹಾದ್ ಜೋಶಿ ಆರೋಪಕ್ಕೆ ಡಿಸಿಎಂ ಡಿಕೆಶಿ ಟಾಂಗ್

ಬಲವಂತವಾಗಿ ಬಿರಿಯಾನಿ ತಿನ್ನಿಸಿದ ಡೆವಿಲ್ ಗ್ಯಾಂಗ್

ಇನ್ನು ಚಾರ್ಜ್ ಶೀಟ್‌ನಲ್ಲಿ ಡೆವಿಲ್ ಗ್ಯಾಂಗ್ ಅಮಾನವೀಯ ಹಲ್ಲೆ ನಡೆಸುವ ಜತೆಗೆ ವಿಕೃತಿ ಮೆರೆದಿದ್ದಾರೆ. ಕಿಡ್ನ್ಯಾಪ್ ಮಾಡಿಕೊಂಡ ಬಳಿಕ ರೇಣುಕಾಸ್ವಾಮಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ್ದಾರೆ. ನಾನು ಜಂಗಮ ನಾನ್ ವೆಜ್ ತಿನ್ನಲ್ಲ ಅಂತ ಹೇಳಿದರೂ ಊಟಕ್ಕೆ ಬೆಲೆ ಕೊಡೋ ಎಂದು ಭಯ ಪಡಿಸಿ, ಬೇಡ ಬೇಡ ಅಂದರು ಚಿಕನ್ ಬಿರಿಯಾನಿ ತಿನ್ನಿಸಿ ಕ್ರೌರ್ಯ ಮೆರೆದಿರುವುದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಕೊಲೆಗೂ ಮುನ್ನ ರಾಬ್ರಿ ಮಾಡಿದ ಡಿ ಗ್ಯಾಂಗ್‌

ಮತ್ತೊಂದೆಡೆ ರೇಣುಕಾಸ್ವಾಮಿ ಕಿಡ್ನಾಪ್ ಹೊತ್ತಲ್ಲಿ ಸುಲಿಗೆ ಮಾಡಿದ್ದಾರೆ. ಮಾರ್ಗ ಮಧ್ಯೆ ರೇಣುಕಾಸ್ವಾಮಿಯ ರಾಬರಿ ಮಾಡಿದ್ದ ಎ4 ಆರೋಪಿ ರಾಘವೇಂದ್ರ ರೇಣುಕಾಸ್ವಾಮಿಯ ಚೈನ್, ರಿಂಗ್, ವಾಚ್ ಮತ್ತು ಲಿಂಗದ ಕರಡಿಕೆ ಸುಲಿಗೆ ಮಾಡಿರೋದು ಸಹ ಉಲ್ಲೇಖಿಸಲಾಗಿದೆ.

ಪತಿಗೆ ಜಾಮೀನು ಕೊಡಿಸಲು ಪರದಾಡುತ್ತಿರು ವಿಜಯಲಕ್ಷ್ಮೀ

ಇವೆಲ್ಲ ಒಂದು ಕಡೆಯಾದರೆ ಮತ್ತೊಂದೆಡೆ ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತಿದ್ದಂತೆ ವಕೀಲರ ಜತೆ ಚರ್ಚೆ ಮಾಡಿರುವ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸೋಮವಾರ ಜಾಮೀನು ಅರ್ಜಿ ಸಲ್ಲಿಕೆಗೆ ನಿರ್ಧಾರ ಮಾಡಿದ್ದಾರೆ. ಅದಂತೆ ಬಳ್ಳಾರಿ ಜೈಲಿಗೆ ಹೋದ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ಜಾಮೀನು ವಕಾಲತ್ತಿಗೆ ಸಹಿ ಪಡೆದಿದ್ದಾರೆ. ಸದ್ಯ ಕೋರ್ಟ್ ನಲ್ಲಿ ಸಿಸಿ ನಂಬರ್ ಆಗಿದ್ದು, ಆರೋಪಿಗಳ ಪರ ವಕೀಲರಿಗೆ ಸೋಮವಾರ ಚಾರ್ಜ್ ಶೀಟ್ ಪ್ರತಿ ಸಿಗಲಿದೆ. ಬಳಿಕ ಅದನ್ನು ಪರಿಶೀಲನೆ ನಡೆಸಿ ಸೋಮವಾರ ಅಥವಾ ಮಂಗಳವಾರ ನಟ ದರ್ಶನ್ ಜಾಮೀನು ಕೋರಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಹಾಕುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Actor Darshan: ನಟ ದರ್ಶನ್‌ನನ್ನು ಬಂಧಿಸುವಾಗ ಪೊಲೀಸರಿಗೆ ದಾರಿ ತಪ್ಪಿಸಿದ್ದ ಹೋಟೆಲ್‌ ಸಿಬ್ಬಂದಿ!

Actor Darshan: ಪೊಲೀಸರು ಬಂಧಿಸಲು ಹೋದಾಗ ದರ್ಶನ್ ಇದ್ದ ರೂಮ್ ನಂಬರ್ ಹೇಳದೇ ಹೋಟೆಲ್‌ ಸಿಬ್ಬಂದಿ ಸತಾಯಿಸಿದ್ದರು ಎನ್ನಲಾಗಿದೆ. ಪೊಲೀಸರಿಗೆ ದಾರಿ ತಪ್ಪಿಸಿದ್ದರು.

VISTARANEWS.COM


on

By

Hotel staff misleads police while arresting actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ದರ್ಶನ್ ಬಂಧಿಸುವಾಗ (Actor Darshan) ನಾನಾ ಸಮಸ್ಯೆಯನ್ನು ಎದುರಿಸಬೇಕಾಯಿತು. ಪೊಲೀಸರು ಬಂಧಿಸಲು ಹೋದಾಗ ದರ್ಶನ್ ಇದ್ದ ರೂಮ್ ನಂಬರ್ ಹೇಳದೇ ಹೋಟೆಲ್‌ ಸಿಬ್ಬಂದಿ ಸತಾಯಿಸಿದ್ದರು ಎನ್ನಲಾಗಿದೆ. ಹೋಟೆಲ್‌ನಲ್ಲಿ ಕೆಲಕಾಲ ಕಾದಿದ್ದ ಪೊಲೀಸರಿಗೆ, ದಿಢೀರನೆ ಮೂವರು ಬಾಡಿ ಗಾರ್ಡ್ಸ್ ಬಂದಿದ್ದರು. ಪೊಲೀಸರನ್ನು ಕಂಡು ತುರಾತುರಿಯಲ್ಲಿ ದರ್ಶನ್ ಕಾರಿನಲ್ಲಿ ಹೋಗುತ್ತಿದ್ದ ಬಾಡಿ ಗಾರ್ಡ್ಸ್‌ ಅಡ್ಡ ಹಾಕಿ ಮೊಬೈಲ್ ಪಡೆದಿದ್ದರು. ದರ್ಶನ್ ರೂಂ ತೋರಿಸುವಂತೆ ಬಾಡಿ ಗಾರ್ಡ್ಸ್‌ಗೆ ಪೊಲೀಸರು ಗದರಿಸಿದ್ದರು.

ಬಳಿಕ ರೂಮ್ ತೋರಿಸಲು ಕರೆದುಕೊಂಡು ಹೋಗಿದ್ದರು. ಮತ್ತೊಂದು ಕೀ ಬಳಸಿ ದರ್ಶನ್ ಇದ್ದ ರೂಮ್ ಓಪನ್ ಮಾಡಿದ್ದರು. ಈ ವೇಳೆ ರೂಮಿನಲ್ಲಿ ಸ್ನಾನ ಮಾಡುತ್ತಿದ್ದ ನಟ ದರ್ಶನ್ ಎರಡೇ ನಿಮಿಷದಲ್ಲಿ ಬಾತ್ ರೂಮ್‌ನಿಂದ ಹೊರ ಬಂದಿದ್ದರು. ಪೊಲೀಸರು ನಮ್ಮ ಜತೆಗೆ ಬರಬೇಕು ಎಂದಾಗ ಬಟ್ಟೆ ಹಾಕಿಕೊಂಡು ಬರುತ್ತೇನೆ ಸಾರ್ ಎಂದಿದ್ದರು. ಬಳಿಕ ದರ್ಶನ್‌ನನ್ನು ಎಸಿಪಿ ಚಂದನ್ ಹಾಗೂ ಇನ್‌ಸ್ಪೆಕ್ಟರ್‌ ಗಿರೀಶ್ ನಾಯ್ಕ್ ಪೊಲೀಸ್ ಜೀಪ್ ಹತ್ತಿಸಿಕೊಂಡು ಬೆಂಗಳೂರಿಗೆ ಕರೆತಂದಿದ್ದರು.

ಇದನ್ನೂ ಓದಿ:

ಏಳು ಸಂಪುಟಗಳಾಗಿ ವಿಂಗಡಿಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ
ಸಂಪುಟ -1
ಚಾರ್ಜ್ ಶೀಟ್ ಮತ್ತು ಪೂರಕವಾದ ದಾಖಲೆಗಳು
ಸಂಪುಟ-2
ತನಿಖಾ ಕಾಲದಲ್ಲಿ ಸಂಗ್ರಹಿಸಲಾದ ಸಿಡಿಆರ್ ಡೇಟಾ
ಸಂಪುಟ 3
ತನಿಖಾ ಕಾಲದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ಮಾಲು ಪಟ್ಟಿ ಮತ್ತು ಮಹಜರು ದಾಖಲೆ
ಸಂಪುಟ 3ಎ
ಮಾಲುಪಟ್ಟಿ ಮತ್ತು ಪಂಚನಾಮೆ ರಿಟ್ರೀವ್ ಪಂಚನಾಮೆಗಳು
ಸಂಪುಟ 4
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಹೇಳಿಕೆ ಸಿಆರ್ ಪಿಸಿ 161 ಹಾಗೂ 164 ಹೇಳಿಕೆಗಳು
ಸಂಪುಟ 5
ತನಿಖಾ ಕಾಲದಲ್ಲಿ ಸಂಗ್ರಹಿಸಿದ ದಾಖಲೆಗಳು
ಸಂಪುಟ 5ಎ
ತನಿಖಾ ಕಾಲದಲ್ಲಿ ಸಂಗ್ರಹಿಸಿದ ಡಿಜಿಟಲ್ ಮತ್ತು ಟೆಕ್ನಿಕಲ್ ದಾಖಲೆಗಳು
ಸಂಪುಟ 6
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ, ವೈದ್ಯರ ಅಭಿಪ್ರಾಯ ಮತ್ತು ತಜ್ಞರ ವರದಿ
ಸಂಪುಟ 7
ಆರೋಪಿಗಳು ಬಳಸುತ್ತಿದ್ದ ಮೊಬೈಲ್ ರಿಟ್ರೀವ್ ವರದಿ, ಡೇಟಾ ವರದಿ, ಡೇಟಾ ಅನಾಲಿಸಿಸ್ ವರದಿ ಹಾಗೂ ಸ್ವಇಚ್ಚೆ ಹೇಳಿಕೆಗಳು

ವಿಚಾರಣೆ ವೇಳೆ ಕಣ್ಣೀರು ಹಾಕುತ್ತಿದ್ದ ಪವಿತ್ರಾಗೌಡ

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸಿಲುಕಿದ ಪವಿತ್ರ ಗೌಡ ಪೊಲೀಸ್ ಕಸ್ಟಡಿಯಲ್ಲಿದ್ದಾಗ ದಿನನಿತ್ಯ ಕಣ್ಣೀರು ಹಾಕುತ್ತಿದ್ದರು ಎನ್ನಲಾಗಿದೆ. ಪೊಲೀಸರ ಮುಂದೆ ಕೈ ಕಟ್ಟಿ ನಿಲುತ್ತಿದ್ದ ಪವಿತ್ರಾಗೌಡ ಅಳುತ್ತಲೇ ಘಟನೆ ಬಗ್ಗೆ ಹೇಳುತ್ತಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Actor Darshan : ರೇಣುಕಾಸ್ವಾಮಿಯ ಪ್ಯಾಂಟ್‌ ಬಿಚ್ಚಿಸಿ ಮರ್ಮಾಂಗಕ್ಕೆ ‌ಒದ್ದಿದ್ದರಾ ದರ್ಶನ್! ಚಾರ್ಜ್‌ಶೀಟ್‌ನಲ್ಲಿ ಕ್ರೌರ್ಯದ ಅನಾವರಣ

Actor Darshan : ಚಾರ್ಜ್‌ಶೀಟ್‌ನಲ್ಲಿ ದರ್ಶನ್‌ ಕ್ರೌರ್ಯದ ಅನಾವರಣವಾಗಿದೆ. ರೇಣುಕಾಸ್ವಾಮಿಯ ಪ್ಯಾಂಟ್‌ ಬಿಚ್ಚಿಸಿ ಮರ್ಮಾಂಗಕ್ಕೆ ‌ಒದ್ದಿದ್ದರಿಂದಲೇ ಪ್ರಾಣಹಾರಿ ಹೋಯ್ತಾ? ಇಷ್ಟಕ್ಕೂ ದರ್ಶನ್‌ ಸಿಟ್ಟು ಏನೆಲ್ಲ ಮಾಡಿಬಿಡುತ್ತಾ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Darshan Brutality revealed in chargesheet
Koo

ಬೆಂಗಳೂರು: ಡಿ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ಮೇಲೆ ದರ್ಶನ್ (Actor darshan) ಕೆಂಡಾಮಂಡಲ ಆಗಲು ಕಾರಣವೇನು ಗೊತ್ತಾ? ಅಷ್ಟಕ್ಕೂ ರೇಣುಕಾಸ್ವಾಮಿ ಪವಿತ್ರಗೌಡಗೆ ಏನೇನ್ ಸಂದೇಶಗಳನ್ನು ಕಳುಹಿಸಿದ್ದ. ಆ ಚಾಟಿಂಗ್‌ ಡಿಟೈಲ್ಸ್‌ ಇಲ್ಲಿದೆ.

ದರ್ಶನ್ ಕೋಪಕ್ಕೆ ಕಾರಣವಾಗಿದ್ದು ಎರಡು ಅಶ್ಲೀಲ ವಿಡಿಯೊ, ಒಂದು ಫೋಟೊ. ರೇಣುಕಾಸ್ವಾಮಿ ಪವಿತ್ರಗೌಡ ಫೋಟೊ ಕಂಡು ನಾನು ನಿನ್ನನ್ನ ಅನುಭವಿಸಬೇಕೆಂದು ಮೆಸೇಜ್ ಮಾಡಿದ್ದ. ಮೆಸೇಜ್ ಹಿಂದೆಯೆ ಎರಡು ಅಶ್ಲೀಲ ವಿಡಿಯೊ ಕಳಿಸಿ, ಅಶ್ಲೀಲವಾದ ಸಂದೇಶಗಳ ರವಾನಿಸಿದ್ದ. ಇದಾದ ಬಳಿಕ ರೇಣುಕಾಸ್ವಾಮಿ ತನ್ನ ಮರ್ಮಾಂಗದ ಫೋಟೊವನ್ನು ಪವಿತ್ರಾಗೌಡಗೆ ಕಳಿಸಿದ್ದ.

ಇದೆಲ್ಲವನ್ನೂ ನೋಡಿದ ದರ್ಶನ್‌ಗೆ ತನ್ನೊಳಗೆ ಇದ್ದ ಮೃಗತ್ವ ಹೊರಬಂದಿತ್ತು. ಕೊಳಕು ಭಾಷೆಯಿಂದ ನಿಂದಿಸಿ ರೇಣುಕಾಸ್ವಾಮಿಗೆ ಹಲ್ಲೆ ಮಾಡಿ ಏನೋ ಸೂ.. ಮಗನೇ, ನನ್ನ ಹೆಂಡತಿಗೆ ಕೆಟ್ಟ ಮೆಸೇಜ್ ಮಾಡುತ್ತೀಯಾ? ಎಷ್ಟೋ ಧೈರ್ಯ ನಿಂಗೆ ಎಂದು ಕಾಲಿಂದ ಎದೆ ಭಾಗಕ್ಕೆ ಒದ್ದಿದ್ದ. ಬಳಿಕ ಏಯ್ ಪವನ್ ಇವನ ಪ್ಯಾಂಟ್ ಬಿಚ್ಚೋ ಎಂದ ದರ್ಶನ್‌, ಮರ್ಮಾಂಗಕ್ಕೆ ಒದ್ದಿದ್ದ. ಜಾರ್ಜ್‌ಶೀಟ್‌ನಲ್ಲಿ ದರ್ಶನ್ ಮಿತಿ ಮೀರಿದ ಕ್ರೌರ್ಯದ ಅನಾವರಣವಾಗಿದೆ.

ಪವಿತ್ರಾ ಮೊಬೈಲ್‌ನಲ್ಲಿ ಏನೆಲ್ಲ ಇತ್ತು?

ಐಫೋನ್‌ 15 ಪ್ರೋ ಮ್ಯಾಕ್ಸ್‌ ಬಳಸುತ್ತಿದ್ದ ಪವಿತ್ರಾ ಮನೋಜ್‌ ಹೆಸರಿನಲ್ಲಿ ಸಿಮ್‌ ಇತ್ತು. ದರ್ಶನ್ ಹೆಸರನ್ನು “D” ಎಂದು ಸೇವ್ ಮಾಡಿದ್ದರೆ, ಎ3 ಪವನ್ ಹೆಸರನ್ನು ಪವನ್ ನ್ಯೂ ಎಂದು ಸೇವ್ ಮಾಡಿದ್ದರು. ನಂದೀಶ್‌ ಹೆಸರನ್ನು ನಂದಿ ಪವನ್‌, ಧನರಾಜ್ ಹೆಸರನ್ನು ರಾಜು, ವಿನಯ್‌ ಹೆಸರನ್ನ ವಿನಯ್‌ ಹಾಗೂ ನಾಗರಾಜ್ ಹೆಸರನ್ನು ನಾಗು ಮೈಸೂರು, ಲಕ್ಷ್ಮಣ್‌ ಹೆಸರನ್ನು ಲಕ್ಷ್ಮಣ್‌ ಡಿ ಹಾಗೂ ಆಪ್ತ ಗೆಳತಿ ಸಮತಾಳನ್ನು ಸ್ಯಾಮ್‌ ಹೆಸರಲ್ಲಿ ಸೇವ್ ಮಾಡಿದ್ದಾರೆ. ಪವಿತ್ರಾ ಮೊಬೈಲ್‌ನಲ್ಲಿ ಪ್ರಕರಣ ಸಂಬಂಧ 65 ಫೋಟೊಗಳು ಪತ್ತೆಯಾಗಿವೆ. 17 ಸ್ಕೀನ್‌‌ ಶಾಟ್‌ಗಳು, ರೇಣುಕಾ ಕಳಿಸಿದ್ದ 20 ಅಶ್ಲೀಲ ಸಂದೇಶಗಳ ಸ್ಕ್ರೀನ್‌ಶಾಟ್‌ ಇವೆ.

ನಟ ದರ್ಶನ್‌ ಬಳಸುತ್ತಿದ್ದ ಐಫೋನ್‌ 15 ಪ್ರೋನಲ್ಲಿ ಗೆಳತಿ ಹೆಸರನ್ನು 3 ಹೆಸರಲ್ಲಿ ಸೇವ್ ಮಾಡಿದ್ದರು. PAVI, PAVIIII, PVITRA GOWDA ಹೆಸರಲ್ಲಿ ಸೇವ್‌ ಮಾಡಿ ಪವಿತ್ರ ಜತೆ ಚಾಟಿಂಗ್‌ ನಡೆಸಿದ್ದಾರೆ. ಡಿಲೀಟ್‌ ಆಗಿದ್ದ ವಾಟ್ಟಾಪ್‌ ಕಾಲ್ ರಿಟ್ರೀವ್‌ ವೇಳೆ ಪತ್ತೆಯಾಗಿದೆ. ವಿನಯ್ ಜತೆ ಚಾಟಿಂಗ್‌, ಮ್ಯಾನೇಜರ್‌ ನಾಗರಾಜ್ ಜತೆ ವಾಟ್ಸಾಪ್‌ ಕಾಲ್ ಸಂಭಾಷಣೆ ಇದೆ. ಜೂನ್‌ 8ರಿಂದ 11ರವೆರಗೂ 32 ಬಾರಿ ವಾಟ್ಸಾಪ್ ಕಾಲ್ ಮಾಡಲಾಗಿದ್ದು, ಪ್ರದೋಶ್‌ ಜತೆ 10 ಬಾರಿ ವಾಟ್ಸಾಪ್‌‌‌ ಕಾಲ್‌ನಲ್ಲಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: Actor Darshan:ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್‌ ಆಗು ಎಂದಾಗ ದರ್ಶನ್‌ ಅಭಿಮಾನಿ ರಾಘವೇಂದ್ರ ನಿರಾಕರಿಸಿದ್ದೇಕೆ?

ವಿನಯ್‌ ಮೊಬೈಲ್‌ನಲ್ಲಿ ಪವಿತ್ರಾಳ ಹೆಸರು ಡಿ ಬಾಸ್‌ ವೈಫ್‌ ಎಂದು ಸೇವ್‌

ಇನ್ನು ವಿನಯ್‌ ಮೊಬೈಲ್‌ನಲ್ಲಿ ಪವಿತ್ರಾ ಗೌಡ ಫೋನ್‌ ನಂಬರ್‌ ಅನ್ನು ಡಿ-ಬಾಸ್‌ ವೈಫ್‌ ಎಂದು ಸೇವ್‌ ಆಗಿದೆ. ಪ್ರದೂಷ್‌, ಪವನ್‌ ಜತೆ 42 ಬಾರಿ ವಾಟ್ಸಾಪ್‌ ಕಾಲ್‌ ಸಂಭಾಷಣೆ ನಡೆದಿದೆ. ಪ್ರಕರಣ ಸಂಬಂಧ 10 ಫೋಟೊಗಳು ರಿಟ್ರೀವ್‌ನಲ್ಲಿ ಪತ್ತೆಯಾಗಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಹಿಂಬಾಲಿಸಿ ತೆಗೆದ ಫೋಟೊ, ಪಟ್ಟಣಗೆರೆ ಶೆಡ್‌‌ಗೆ ಕರೆತಂದಾಗ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಫೋಟೊ ಸಿಕ್ಕಿದೆ. ಜತೆಗೆ ರೇಣುಕಾಸ್ವಾಮಿ ಶವವನ್ನು ಸುಮನಹಳ್ಳಿ ರಾಜಕಾಲುವೆ ಬಳಿ ಬಿಸಾಡಿರುವ ಫೋಟೊ ಲಭ್ಯವಾಗಿದೆ.

ದೀಪಕ್‌ ಮೊಬೈಲ್‌ನಲ್ಲಿ ಅಡಗಿದ್ದ ರಹಸ್ಯ

ದೀಪಕ್‌ ಮೊಬೈಲ್‌ನಲ್ಲಿ 30 ನಿಮಿಷದ ಆಡಿಯೊ ಸಂಭಾಷಣೆ ಪತ್ತೆಯಾಗಿದೆ. ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ನಡೆಸಿರುವ ಮಾತುಕತೆ ಇದಾಗಿದೆ. ಸ್ವಾಮಿ ಕೊಲೆಗೆ ಸಂಬಂಧಿಸಿದಂತೆ 5 ಆಡಿಯೋ ಸಂಭಾಷಣೆ ಪತ್ತೆಯಾಗಿದೆ. ಜತೆಗೆ ಮತ್ತೊಬ್ಬ ಆರೋಪಿ ಅನುಕುಮಾರ್‌ ಮೊಬೈಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವಿಡಿಯೊ ಸಿಕ್ಕಿದೆ. ಆರೋಪಿ ಪ್ರದೂಷ್‌ ಜತೆ ನಡೆಸಿರುವ ಚಾಟಿಂಗ್‌ ಸಿಕ್ಕಿದೆ. ಅನುಕುಮಾರ್‌ ಹಾಗೂ ರಾಘವೇಂದ್ರ ಪತ್ನಿ ಸಹನಾ ಜತೆ ನಡೆಸಿರುವ ಸಂಭಾಷಣೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Actor Darshan:ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್‌ ಆಗು ಎಂದಾಗ ದರ್ಶನ್‌ ಅಭಿಮಾನಿ ರಾಘವೇಂದ್ರ ನಿರಾಕರಿಸಿದ್ದೇಕೆ?

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್‌ ಆಗು ಎಂದಾಗ ದರ್ಶನ್‌ ಅಭಿಮಾನಿ ರಾಘವೇಂದ್ರ ನಿರಾಕರಿಸಿದ್ದೇಕೆ? 10 ದಿನಗಳ ಬಳಿಕ ದರ್ಶನ್‌ ಹೇಳಿದ್ದು ಅದೊಂದು ಮಾತು ಏನ್‌ ಆಗಿತ್ತು?

VISTARANEWS.COM


on

By

Why did Darshans fan Raghavendra refuse to surrender
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಬಳಿಕ ಸರೆಂಡರ್ ಆಗು ಎಂದಿದ್ದಕ್ಕೆ ದರ್ಶನ್ (Actor darshan) ಅಭಿಮಾನಿ ಸಂಘದ ಅಧ್ಯಕ್ಷನಾಗಿದ್ದ ರಾಘವೇಂದ್ರ ಅಲಿಯಾಸ್ ರಾಘು ನಿರಾಕರಿಸಿದ್ದ. ನಾನು ಯಾಕೆ ಜೈಲಿಗೆ ಹೋಗಲಿ? ನಾನು ಸರೆಂಡರ್ ಆಗಲ್ಲ ಎಂದು ಚಿತ್ರದುರ್ಗ ಕಡೆ ಹೊರಟಿದ್ದ. ಆದಾದ ಮೇಲೆ ವಿನಯ್, ಪ್ರದೂಶ್ ಮತ್ತು ದರ್ಶನ್ ಸೇರಿ ರಾಘವೇಂದ್ರನನ್ನು ಒಪ್ಪಿಸಿದ್ದರು. ರಾಘವೇಂದ್ರ ಸರೆಂಡರ್ ಆಗಿಲ್ಲ ಅಂದರೆ ಚಿತ್ರದುರ್ಗದ ಲಿಂಕ್ ಕೊಡಲು ಕಷ್ಟವಾಗುತ್ತೆ. ಹೀಗಾಗಿ ರಾಘವೇಂದ್ರ ಸರೆಂಡರ್ ಆಗಲೇ ಬೇಕು ಎಂದು ಡಿ ಗ್ಯಾಂಗ್‌ ಮಾಸ್ಟರ್‌ ಪ್ಲ್ಯಾನ್ ಮಾಡಿದ್ದರು.

ರಾಘವೇಂದ್ರ ಇಲ್ಲದೇ, ಕೇವಲ ಬೆಂಗಳೂರು ಹುಡುಗರು ಕಿ‌ಡ್ನ್ಯಾಪ್ ಮತ್ತು ಮರ್ಡರ್ ಕಥೆ ಹೇಳಿದರೆ ಸತ್ಯ ಕಥೆ ಅನ್ನಿಸುವುದಿಲ್ಲ. ಹೀಗಾಗಿ ರಾಘವೇಂದ್ರ ಬೇಕೆ ಬೇಕು ಎಂದು ಹಣದ ಆಮಿಷ ತೋರಿಸಿ ಮಾತುಕತೆ ನಡೆಸಿ ಒಪ್ಪಿಸಿದ್ದರು. ಆದಾದ ಬಳಿಕ ರಾಘವೇಂದ್ರ, ನಿಕಿಲ್, ಕೇಶವಮೂರ್ತಿ, ಕಾರ್ತಿಕ್ ಅಲಿಯಾಸ್ ಕಪ್ಪೆ ಪೊಲೀಸರ ಮುಂದೆ ಸರೆಂಡರ್‌ ಆಗಿದ್ದರು. ರೇಣುಕಾಸ್ವಾಮಿ ರಾಘವೇಂದ್ರಗೆ ಹಣ ಕೊಡಬೇಕಿತ್ತು. ಅದಕ್ಕೆ ಕರೆತಂದು ಹೊಡೆದು ಬಿಟ್ಟಿವಿ ಎಂದು ಪೊಲೀಸರ ಮುಂದೆ ಮೊದಲ ಸ್ಟೋರಿ ಹೇಳಿದ್ದರು.

ಇದ್ಯಾವುದನ್ನು ನಂಬಲು ತಯಾರು ಇಲ್ಲದ ಪೊಲೀಸರು ವಿಚಾರಣೆ ಮುಂದುವರಿಸಿದ್ದರು. ಬಳಿಕ ಪೊಲೀಸರ ಮುಂದೆ ದರ್ಶನ್ ಹೆಸರು ಬಾಯಿ ಬಿಟ್ಟಿದೇ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ. ಆದರೆ ರೇಣುಕಾಸ್ವಾಮಿ ಅಶ್ಲೀಲ ಮೆಜೇಸ್ ಮಾಡಿದ್ದು ದರ್ಶನ್‌ ಪತ್ನಿ ವಿಜಯಲಕ್ಷ್ಮಿಗೆ ಎಂದು ಹೇಳಿದ್ದ. ತಡರಾತ್ರಿ ಎರಡು ಗಂಟೆಗೆ ಕೇಶವಮೂರ್ತಿಯನ್ನು ಮತ್ತಷ್ಟು ವಿಚಾರಣೆಯನ್ನು ನಡೆಸಿದಾಗ, ದರ್ಶನ್ ಪತ್ನಿಗೆ ಅಲ್ಲಾ ಸಾರ್ ಅದು ಪವಿತ್ರ ಗೌಡ ಎಂದು ಪೊಲೀಸರ ಮುಂದೆ ಹೇಳಿದ್ದ.

ಇದನ್ನೂ ಓದಿ: Actor Darshan : ನಾವಿಬ್ಬರು ಮದುವೆ ಆಗಿಲ್ಲ.. ಜಸ್ಟ್‌ ಲಿವಿಂಗ್‌ ಟುಗೆದರ್‌ನಲ್ಲಿ ಇದ್ದೀವಿ- ವಿಚಾರಣೆಯಲ್ಲಿ ನಟ ದರ್ಶನ್‌ ಹೇಳಿಕೆ

10 ದಿನಗಳ ಬಳಿಕ ದರ್ಶನ್‌ ಹೇಳಿದ್ದು ಇದೊಂದೇ ಮಾತು

ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್‌ನಲ್ಲಿ ಬಂಧಿತನಾಗಿದ್ದ ನಟ ದರ್ಶನ್‌, ಹತ್ತು ದಿನಗಳ ವಿಚಾರಣೆ ನಂತರ ಹೇಳಿದ್ದು ಒಂದೇ ಮಾತೆಂದರೆ ನನ್ನಿಂದ ತಪ್ಪಾಗೋಗಿದೆ ಸಾರ್ ಎಂದಿದ್ದರಂತೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಂಧಿಸಿ ವಿಚಾರಣೆ ನಡೆಸಿದಾಗ ಸುಮಾರು 20 ಪುಟಗಳ ಹೇಳಿಕೆ ದಾಖಲಿಸಿದ್ದರು. ಚಾರ್ಜ್ ಶೀಟ್‌ನಲ್ಲಿ ದರ್ಶನ್ ಸ್ಟೇಟ್ಮೆಂಟ್‌ನ 20 ಪುಟಕ್ಕೂ ಅಧಿಕವಾಗಿದೆ.

ಕೊಲೆ ಕುರಿತು ಇಂಚಿಂಚೂ ಮಾಹಿತಿ ಪಡೆದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಏನೊ ಮಾಡಲು ಹೋಗಿ ಹೀಗೆ ಆಯ್ತು, ತಪ್ಪಾಗೋಗಿದೆ ಸಾರ್ ಎಂದು ನಟ ದರ್ಶನ್‌ ಹೇಳಿದ್ದರಂತೆ. ಆದರೆ ಹೇಳಿಕೆ ದಾಖಲು ಮಾಡುವಾಗ ಮಾತ್ರ ತನಗೂ ಕೊಲೆಗೂ ಸಂಬಂಧ ಇಲ್ಲ ಸಾರ್ ಎಂದು ಹೇಳಿಕೆ ನೀಡುತ್ತಿದ್ದರು. ಕೊನೆಗೆ ತಾನು ಮಾಡಿದ್ದು ತಪ್ಪು ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Murder Case A scuffle between brothers during Ganesh festival ends in murder
ಉತ್ತರ ಕನ್ನಡ35 seconds ago

Murder Case : ಗಣೇಶ ಹಬ್ಬದಲ್ಲಿ ಸಹೋದರರ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ

actor darshan
ಸಿನಿಮಾ36 mins ago

Actor Darshan : ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು; ಸೆರೆವಾಸದಲ್ಲಿರುವ ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ಗೆ ಸಿಗುತ್ತಾ ಬೇಲ್‌!

physical abuse
ಬೆಂಗಳೂರು ಗ್ರಾಮಾಂತರ1 hour ago

Physical Abuse : ಹಾಲು ತರಲು ಹೋದ ಮಹಿಳೆಯನ್ನು ಎಳೆದೊಯ್ಯಲು ಯತ್ನಿಸಿದ ದುಷ್ಟ; ಬೆತ್ತಲೆಗೊಳಿಸಿ ಥಳಿಸಿದ ಯುವಕರು

Karnataka Weather Forecast
ಮಳೆ7 hours ago

Karnataka Weather : ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಕರಾವಳಿ, ಮಲೆನಾಡಿಗೆ ಯೆಲ್ಲೋ ಅಲರ್ಟ್‌

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯವರಿಗೆ ಹಣ ಗಳಿಸುವ ವಿವಿಧ ಮಾರ್ಗಗಳು ಪುಷ್ಟಿ ನೀಡಲಿವೆ

Darshan and Pavitra spoke for just 16 seconds before and after Renukaswamys murder
ಬೆಂಗಳೂರು17 hours ago

Actor Darshan : ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ದರ್ಶನ್ ಹಾಗೂ ಪವಿತ್ರ ಮಾತಾಡಿದ್ದು ಜಸ್ಟ್‌ 16 ಸೆಕೆಂಡ್!

Pralhad Joshi and Dk Shivakumar
ಕರ್ನಾಟಕ18 hours ago

DK Shivakumar :ಮುಡಾ ಕೇಸ್‌ ಡೈವರ್ಟ್‌ಗೆ ದರ್ಶನ್‌ ಫೋಟೊ ರಿಲೀಸ್‌; ಪ್ರಲ್ಹಾದ್ ಜೋಶಿ ಆರೋಪಕ್ಕೆ ಡಿಸಿಎಂ ಡಿಕೆಶಿ ಟಾಂಗ್

Auto driver found dead under mysterious circumstances
ಕೊಡಗು18 hours ago

Suspicious Death : ಬಾಣಂತಿ ಅಕ್ಕನನ್ನು ಮನೆಗೆ ಬಿಟ್ಟು ಹೊರಹೋದ ಆಟೋ ಡ್ರೈವರ್‌ ಶೆಡ್‌ನಲ್ಲಿ ಹೆಣವಾಗಿ ಪತ್ತೆ

Road Accident
ದಕ್ಷಿಣ ಕನ್ನಡ19 hours ago

Road Accident : 2 ದಿನಗಳ ಹಿಂದಷ್ಟೇ ಮದುವೆ ಆಗಿದ್ದ ನವ ವಿವಾಹಿತೆ ಕಾರು ಅಪಘಾತದಲ್ಲಿ ಸಾವು; ಪತಿ ಗಂಭೀರ

Nude video found on Morarji Desai school teachers mobile phone
ಕೋಲಾರ20 hours ago

Morarji Desai School : ವಸತಿ ಶಾಲಾ ಶಿಕ್ಷಕನ‌ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ 5 ಸಾವಿರ ನಗ್ನ ವಿಡಿಯೊ, ಫೋಟೊಗಳು ಪತ್ತೆ!

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 week ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌