Areca Nut Illegal Import: ಭಾರತದೊಳಗೆ 3 ತಿಂಗಳಲ್ಲಿ 3009 ಟನ್‌ ವಿದೇಶಿ ಅಡಿಕೆ ಅಕ್ರಮ ಆಮದು; ಬೆಳೆಗಾರರಿಗೆ ಕಾದಿದೆ ಆಪತ್ತು! - Vistara News

ಕೃಷಿ

Areca Nut Illegal Import: ಭಾರತದೊಳಗೆ 3 ತಿಂಗಳಲ್ಲಿ 3009 ಟನ್‌ ವಿದೇಶಿ ಅಡಿಕೆ ಅಕ್ರಮ ಆಮದು; ಬೆಳೆಗಾರರಿಗೆ ಕಾದಿದೆ ಆಪತ್ತು!

Areca Nut Illegal Import: ವರ್ಷದಿಂದ ವರ್ಷಕ್ಕೆ ವಿದೇಶಿ ಅಕ್ರಮ ಅಡಿಕೆ ಆಮದಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಸಚಿವ ಜಿತಿನ್‌ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ. ಕೇವಲ ಮೂರು ತಿಂಗಳಲ್ಲಿ 84 ವಿದೇಶಿ ಅಡಿಕೆ ಅಕ್ರಮ ಆಮದು ಪ್ರಕರಣಗಳನ್ನು ಪತ್ತೆ ಆಗಿವೆ ಅಂದರೆ, ಸರಾಸರಿ, ಪ್ರತೀ ಒಂದು ದಿನ ಒಂದು ಅಕ್ರಮ ವಿದೇಶ ಅಡಿಕೆ ಕಳ್ಳಸಾಗಣಿಕೆ ಆಗುತ್ತಿದೆ ಎಂದಾಯ್ತು! ಇದು ಅಡಿಕೆ ಬೆಳೆಗಾರರ ಪಾಲಿಗೆ ಆತಂಕಕಾರಿಯಾಗಿದೆ.

VISTARANEWS.COM


on

Areca Nut Illegal Import
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅರವಿಂದ ಸಿಗದಾಳ್, ಮೇಲುಕೊಪ್ಪ
ಪ್ರಸಕ್ತ ಹಣಕಾಸು ವರ್ಷದ (Areca Nut Illegal Import) ಜೂನ್‌ ಅಂತ್ಯದವರೆಗೆ ಒಟ್ಟು 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಹಚ್ಚಿ 3,009 ಟನ್‌ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ವಿದೇಶಿ ಅಕ್ರಮ ಅಡಿಕೆ ಆಮದಿನ ‍ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಸಚಿವ ಜಿತಿನ್‌ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.

ಸರಾಸರಿ ಪ್ರತೀ ದಿನ ಒಂದು ಅಕ್ರಮ ಪ್ರಕರಣ!

ಮೂರು ತಿಂಗಳಲ್ಲಿ 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಆಗಿವೆ ಅಂದರೆ, ಸರಾಸರಿ, ಪ್ರತೀ ಒಂದು ದಿನ ಒಂದು ಅಕ್ರಮ ವಿದೇಶ ಅಡಿಕೆ ಕಳ್ಳಸಾಗಣಿಕೆ ಆಗುತ್ತಿದೆ ಎಂದಾಯ್ತು! ಇದು ಬಯಲಿಗೆ ಬಂದು, ವಶಪಡಿಸಿಕೊಂಡ ಅಕ್ರಮ ಪ್ರಕರಣಗಳು. ಬಯಲಿಗೆ ಬಾರದೆ ಡೀಲ್ ಆದ ಪ್ರಕರಣಗಳು ಎಷ್ಟಿರಬಹುದು? ಡ್ರೈ ಫ್ರೂಟ್ ಹೆಸರಲ್ಲಿ, ಇನ್ಯಾವುದೋ ಕಡಿಮೆ ಬೆಲೆಯ ವಸ್ತುವಿನ ಹೆಸರಲ್ಲಿ ಬಂದ ಅಕ್ರಮ ವಿದೇಶಿ ಅಡಿಕೆ ಪ್ರಕರಣಗಳು ಎಷ್ಟಿರಬಹುದು? ಈಶಾನ್ಯ ರಾಜ್ಯಗಳ ಚೆಕ್‌ಪೋಸ್ಟ್‌ಗಳಲ್ಲಿ, ನಮ್ಮಲ್ಲಿ ಅಕ್ರಮ ಮರಳು ಸಾಗಾಣಿಕೆ ರೀತಿಯಲ್ಲಿ ಆದಂತೆ, ದೇಶದ ಒಳಗೆ ಬಂದು ಉದುರುತ್ತಿರುವ ಅಕ್ರಮ ವಿದೇಶಿ ಅಡಿಕೆ ಪ್ರಕರಣಗಳು ಎಷ್ಟಿರಬಹುದು? ಅವುಗಳ ಒಟ್ಟು ತೂಕ ಎಷ್ಟು ಲಕ್ಷ ಟನ್ ಇರಬಹುದು? ಅವುಗಳ ಮೌಲ್ಯದ ಕತೆ ಏನು?

ಈಗ ಬಹಿರಂಗಗೊಂಡ 84 ಪ್ರಕರಣಗಳಲ್ಲಿನ ಒಟ್ಟು ಅಡಿಕೆ 3009 ಟನ್‌ಗಳು

ಅಂದರೆ, 30,09,000 ಕೆ.ಜಿ! ಸರಾಸರಿ ಪ್ರತೀ ಕೆಜಿ ಅಡಿಕೆಗೆ ₹ 400 ಎಂದು ಪರಿಗಣಿಸಿದರೆ, ₹ 120 ಕೋಟಿ ಮೌಲ್ಯದ ಅಕ್ರಮ ವಿದೇಶಿ ಅಡಿಕೆ ಭಾರತಕ್ಕೆ ಸಾಗಾಣಿಕೆ ಆಗಿದೆ. ಇದು ಲೆಕ್ಕ ಸಿಕ್ಕಿದ ಅಕ್ರಮ ಅಡಿಕೆ! ಲೆಕ್ಕ ಸಿಗದೇ ಇರುವ ಅಕ್ರಮ ಅಡಿಕೆಯ ಮೌಲ್ಯ ಎಷ್ಟಿರಬಹುದು? ಖಂಡಿತವಾಗಿ ಅದು ಭಯಾನಕವಾದ ಮೊತ್ತವೇ ಆಗಿರುತ್ತದೆ. ಇಷ್ಟಕ್ಕೂ ಇದು ಮೂರು ತಿಂಗಳ ವ್ಯವಹಾರದ್ದು! ವರ್ಷ ಪೂರ್ತಿಗೆ ಎಷ್ಟಾಗಬಹುದು?

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಇದೇ ರೀತಿ ಅಕ್ರಮವಾಗಿ ವಿದೇಶಿ ಅಡಿಕೆ ಭಾರತಕ್ಕೆ ಬರುತ್ತಿರುವ ಅಂಕಿ ಅಂಶಗಳು ಕೇಂದ್ರ ಸರಕಾರ ನಿರ್ಮಿಸಿರುವ ವ್ಯವಸ್ಥೆಯ ಒಳಗಿನ ಬಿಗಿ ಹಿಡಿತವನ್ನು ಅನುಮಾನಿಸುವಂತಿವೆ.
2020–21ರಲ್ಲಿ 278 ಪ್ರಕರಣಗಳನ್ನು ಪತ್ತೆ ಹಚ್ಚಿ 3,449 ಟನ್ ವಶಪಡಿಸಿಕೊಂಡಿದ್ದರೆ, 2021–22ರಲ್ಲಿ 260 ಪ್ರಕರಣಗಳಲ್ಲಿ 3,388 ಟನ್‌ ವಶಪಡಿಸಿಕೊಳ್ಳಲಾಗಿದೆ. 2022–23ರಲ್ಲಿ 454 ಪ್ರಕರಣಗಳಲ್ಲಿ 3,400 ಟನ್ ಅಕ್ರಮ ವಿದೇಶಿ ಅಡಿಕೆ ದೇಶದ ಒಳಗೆ ಬಂದಿದೆ. 2023–24ರಲ್ಲಿ 643 ಪ್ರಕರಣಗಳಲ್ಲಿ 12,881 ಟನ್‌ ಅಡಿಕೆ ವಶಪಡಿಸಿಕೊಂಡಿತ್ತು ಎಂದು ಕೇಂದ್ರ ಸಚಿವ ಜಿತಿನ್‌ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇಷ್ಟೊಂದು ಅಕ್ರಮ ವಿದೇಶಿ ಅಡಿಕೆ ದೇಶದ ಒಳಗೆ ರಾಜಾರೋಷವಾಗಿ ಪ್ರತೀ ವರ್ಷವೂ ನುಗ್ಗಿ ಬರುತ್ತಿದೆ ಎಂದಾದರೆ, ದೇಶದ ಆರ್ಥಿಕ ಮತ್ತು ಭದ್ರತೆಯ ವಿಷಯದಲ್ಲೂ ಸಂಶಯ ಮತ್ತು ಭಯ ಹುಟ್ಟಿಸುತ್ತಿದೆ. ಅಡಿಕೆಯೇ ಅಕ್ರಮವಾಗಿ ಈ ಪರಿ ಬರುತ್ತಿರುವಾಗ, ಬೇರೆ ವಸ್ತುಗಳೂ ಕೂಡ ಹೀಗೇ ಬರುತ್ತಿರಬಹುದಲ್ಲವೆ? ಅವುಗಳ ಕತೆ ಏನು?
ಈ ಬಾರಿ ಕಾಫಿ, ಮೆಣಸು, ಕೋಕೊ ಬೆಲೆಗಳು ಏರಿದಂತೆ, ದೇಶೀಯ ಅಡಿಕೆಗೂ ಕ್ವಿಂಟಾಲ್‌ಗೆ ‘ಅಬ್ ಕಿ ಬಾರ್ 60,000 ಪಾರ್’ ಎಂದು ನಿರೀಕ್ಷಿಸಿದ್ದ ಅಡಿಕೆಗೆ, ಈಗ ವಿದೇಶಿ ಅಕ್ರಮ ಆಮದಿನಿಂದಾಗಿ ಅಡಿಕೆ ದರ ಇಳಿ ಮುಖವಾಗಿದೆ.

ಇದನ್ನೂ ಓದಿ: Train services: ಎಡಕುಮೇರಿಯಲ್ಲಿ ಭೂಕುಸಿತ; ಆಗಸ್ಟ್‌ 4ರವರೆಗೆ 14 ರೈಲುಗಳ ಸಂಚಾರ ರದ್ದು

ಸಂಸದರ ಮೌನವೇಕೆ?

ಇಷ್ಟೆಲ್ಲ ಅಕ್ರಮಗಳು ನೆಡೆಯುತ್ತಿದ್ದರೂ ಬಹಿರಂಗವಾಗಿ ಸುದ್ದಿಯಾಗುತ್ತಿದ್ದರೂ, ಅಡಿಕೆ ಬೆಳೆಯುವ ಜಿಲ್ಲೆಗಳ (ಎಲ್ಲಾ ರಾಜ್ಯಗಳ) ಸಂಸದರು ಯಾಕೆ ಗಟ್ಟಿ ಧ್ವನಿ ಎತ್ತುತ್ತಿಲ್ಲ? ಅಕ್ರಮ ಅಡಿಕೆ ಆಮದಿಗೆ ಮೌನ ಸಮ್ಮತಿಯ ಬೆಂಬಲ ಕೊಡುತ್ತಿದ್ದಾರಾ? ಅಕ್ರಮವನ್ನು ತಡೆಯಲು ಸಂಸದರಿಗೆ ಸಾಧ್ಯವಾಗುತ್ತಿಲ್ಲವಾ? ಅಥವಾ ಪರೋಕ್ಷವಾಗಿ ಅಕ್ರಮ ಅಡಿಕೆ ಆಮದಿನಲ್ಲಿ ಕೆಲವು ಸಂಸದರು ಫಲಾನುಭವಿಗಳಾಗಿದ್ದಾರಾ? ಹಾಗಾಗಿಯೇ ಅಕ್ರಮ ಅಡಿಕೆ ಸಾಗಾಣಿಕೆಯಲ್ಲಿ ಮೌನವಾಗಿದ್ದಾರಾ? ವರ್ಷದಲ್ಲಿ ಒಂದೋ ಎರಡೋ ಪ್ರಕರಣಗಳಾದರೆ ಅದು ಅಷ್ಟು ಗಂಭೀರವಲ್ಲದ್ದಿರಬಹುದು.

ಇದು ಕಳೆದ ಮೂರು ತಿಂಗಳಲ್ಲಿ ಬಯಲಿಗೆ ಬಂದ ಪ್ರಕರಣಗಳೇ 84 ಅಂದರೆ? ಯಾವ ಸಂಸದರಿಗೂ ಇದು ಸೀರಿಯಸ್ ವಿಷಯ ಅಂತ ಅನಿಸುತ್ತಿಲ್ಲವಾ? ವಿರೋಧ ಪಕ್ಷಗಳ ಸಂಸದರಿಗೂ ಇದು ಮಹತ್ವದ ವಿಚಾರ ಅಂತ ಅನಿಸುತ್ತಿಲ್ಲವಾ? ಸೂಕ್ತ ಕಡಿವಾಣದ ಚಿಂತನೆಗೆ ಯಾರೂ ಮುಂದಾಗುತ್ತಿಲ್ಲವಾ? ಆಡಳಿತ ಮತ್ತು ವಿರೋಧ ಪಕ್ಷಗಳ ಸಂಸದರು, ದೇಶದ ಬಹುದೊಡ್ಡ ಹಗರಣದಂತೆ ಕಂಡು ಬರುವ ಈ ವಿದೇಶಿ ಅಕ್ರಮ ಅಡಿಕೆ ಆಮದನ್ನು ನಿಯಂತ್ರಣ ಮಾಡಲು ಸಮರೋಪಾದಿಯಲ್ಲಿ ಮುನ್ನುಗ್ಗಬೇಕಲ್ವಾ? ಯಾಕೆ ಮೌನ? ಕಳೆದ ವಾರ ಇದೇ ರೀತಿ ಅಕ್ರಮ ವಿದೇಶಿ ಅಡಿಕೆ ಒಳ ಬಂದ ಪ್ರಕರಣವನ್ನು ತನಿಖೆಗಾಗಿ ಸಿಬಿಐ(CBI) ಗೆ ವಹಿಸಿದ ಸುದ್ದಿ ಪ್ರಕಟವಾಗಿತ್ತು.

ಈಗ ಎಲ್ಲಾ 84 ಪ್ರಕರಣಗಳನ್ನೂ, ಮತ್ತು ಬಹಿರಂಗವಾಗದ, ವಶಪಡಿಸಿಕೊಳ್ಳದ ಅಕ್ರಮ ಅಡಿಕೆ ಸಾಗಾಣಿಕೆಗಳ ಪ್ರಕರಣಗಳನ್ನು ಸಿಬಿಐ(CBI) ತನಿಖೆಗೆ ವಹಿಸಬೇಕೆಂದು ಕೇಂದ್ರ ಸಂಸದರೆಲ್ಲ ಕೇಂದ್ರ ಸರಕಾರವನ್ನು ಗಂಭೀರವಾಗಿ ಒತ್ತಾಯಿಸುತ್ತಿಲ್ಲ ಏಕೆ? ಅಕ್ರಮ ವಿದೇಶಿ ಅಡಿಕೆಯ ಸಾಗಾಣಿಕೆಯ ಒಂದೇ ಒಂದು ಪ್ರಕರಣವೂ ಮುಂದೆ ನಡೆಯದಂತೆ ದೇಶದ ಎಲ್ಲಾ ಮಾರ್ಗಗಳನ್ನು (ಭೂ, ಜಲ, ವಾಯು) ಬಿಗಿಗೊಳಿಸಬೇಕಾದ ಅನಿವಾರ್ಯತೆ ಇಲ್ಲವಾ?
ದೇಶದೊಳಕ್ಕೆ ಬರುತ್ತಿರುವ ಅಕ್ರಮ ವಿದೇಶಿ ಅಡಿಕೆ ಸಮಸ್ಯೆ ಕೇವಲ ದೇಶೀಯ ಅಡಿಕೆ ಬೆಲೆಯ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ. ಸಮಸ್ಯೆಯ ಗಂಭೀರತೆ ನೋಡಿದರೆ, ಇದು ಸಮಗ್ರ ದೇಶದ ಅರ್ಥ ವ್ಯವಸ್ಥೆ ಮತ್ತು ಭದ್ರತಾವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದಾದ ಪ್ರಕರಣಗಳಾಗಿ ಕಾಣುತ್ತಿವೆ.
ದಯವಿಟ್ಟು ರಾಜ್ಯದ ಎಲ್ಲ ಸಂಸದರು, ಶಾಸಕರು, ಸಚಿವರು ಈ ಅಕ್ರಮ ವಿದೇಶಿ ಅಡಿಕೆ ಸಾಗಾಣಿಕೆ ಬಗ್ಗೆ ಪರಿಣಾಮಕಾರಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಲಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Tomato Price: ದಿಢೀರ್‌ ಕುಸಿದ ಟೊಮೆಟೊ ಬೆಲೆ, ಕೋಲಾರ ಎಪಿಎಂಸಿಯಲ್ಲಿ ತಳಮಳ

Tomato Price: ಒಂದು ವಾರದಿಂದ ಟೊಮೆಟೋ ಬಾಕ್ಸ್ ಬೆಲೆ ಸಾವಿರ ರೂಪಾಯಿ ಗಡಿ ದಾಟಿ ಟೊಮೆಟೊ ಬೆಳೆಗಾರನ (Tomato farmer) ಮುಖದಲ್ಲಿ ಮದಹಾಸ ಮೂಡಿಸಿತ್ತು. ಎರಡು ದಿನಗಳಿಂದ ದಿಢೀರನೇ ಕುಸಿತ ಕಂಡಿದ್ದು ಟೊಮೊಟೊ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

VISTARANEWS.COM


on

tomato price
Koo

ಕೋಲಾರ : ನಿಲ್ಲದ ಮಳೆಯ ಆರ್ಭಟದ (Karnataka Rain news) ಪರಿಣಾಮ ಕೋಲಾರದ ಕೆಂಪು ಸುಂದರಿ ಟೊಮೊಟೊ ಬೆಲೆ (Tomato Price) ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದೆ.

ಒಂದು ವಾರದಿಂದ ಟೊಮೆಟೋ ಬಾಕ್ಸ್ ಬೆಲೆ ಸಾವಿರ ರೂಪಾಯಿ ಗಡಿ ದಾಟಿ ಟೊಮೆಟೊ ಬೆಳೆಗಾರನ (Tomato farmer) ಮುಖದಲ್ಲಿ ಮದಹಾಸ ಮೂಡಿಸಿತ್ತು. ಎರಡು ದಿನಗಳಿಂದ ದಿಢೀರನೇ ಕುಸಿತ ಕಂಡಿದ್ದು ಟೊಮೊಟೊ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಹದಿನೈದು ಕೆಜಿ ಬಾಕ್ಸ್ ಬೆಲೆ ಒಂದು ಸಾವಿರದ ನೂರ ಐವತ್ತರಿಂದ ಇನ್ನೂರರ ವರೆಗೆ ಮಾರಾಟವಾಗುತ್ತಿತ್ತು. ಆದರೆ ಎರಡು ದಿನಗಳಿಂದ ಟೊಮೊಟೊ ದಿಢೀರ್ ಎಂದು ಕುಸಿದಿದ್ದು 330ರಿಂದ 650 ರೂ.ಗೆ ಇಳಿದಿದೆ.

ಕೋಲಾರ ಎಪಿಎಂಸಿ (Kolar APMC) ಮಾರುಕಟ್ಟೆಗೆ ಪ್ರತಿ ದಿನ ಎರಡು ಲಕ್ಷಕ್ಕೂ ಹೆಚ್ಚು ಟೊಮೊಟೊ ಬಾಕ್ಸ್ (Tomato Box) ಬರುತ್ತಿವೆ. ಹೊರಗಿನ ಬೇಡಿಕೆಯಷ್ಟೇ ಟೊಮೊಟೊ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಧಾರಣೆ ಮಾತ್ರ ಕುಸಿತ ಕಂಡಿದೆ.

ಬೆಲೆ ಕುಸಿತಕ್ಕೆ ಕಾರಣವೇನು?

ದೇಶದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿರುವುದರಿಂದ ಟೊಮೊಟೊ ಸಾಗಾಣಿಕೆಗೆ ತೊಂದರೆಯಾಗಿದೆ. ಭಾರಿ ಮಳೆಯ ಹೊಡೆತದಿಂದ ರಸ್ತೆ ಸಂಪರ್ಕವಿಲ್ಲದೆ ಸಾಗಾಣಿಕೆಯಾದ ಟೊಮೆಟೊ ಲಾರಿಗಳು ಎಲ್ಲೆಂದರೆ ಅಲ್ಲಿ ನಿಂತಿವೆ. ಮಳೆ ಅಡ್ಡಿಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಕೊಳ್ಳುವವರು ಇಲ್ಲದೆ ಟೊಮೊಟೊ ಧಾರಣೆ ಕುಸಿತವಾಗಿದೆ. ರೈತರು ಆತಂಕ ಪಡಬೇಕಿಲ್ಲ; ಮಳೆ ನಿಂತರೆ ಮತ್ತೆ ಟೊಮೆಟೊ ಧಾರಣೆ ಚೇತರಿಕೆಯಾಗಲಿದೆ ಎಂದು ಕೋಲಾರ ಎಪಿಎಂಸಿ ಮಾರುಕಟ್ಟೆಯ ಸಹಾಯಕ ಕಾರ್ಯದರ್ಶಿ ಕಿರಣ್ ಸ್ಪಷ್ಟಪಡಿಸಿದ್ದಾರೆ.

ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂಬ‌ ಹೆಗ್ಗಳಿಕೆ ಪಡೆದಿರುವ ಕೋಲಾರ ಎಪಿಎಂಸಿ (Kolar APMC) ಮಾರುಕಟ್ಟೆಯಲ್ಲಿ ಕಳೆದ ವಾರ ಟೊಮೆಟೊಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿತ್ತು. 15 ಕೆ.ಜಿಯ ಬಾಕ್ಸ್​​ಗೆ 900ರಿಂದ 1200 ರೂ.ಗಳಿಗೆ ಹರಾಜಾಗಿತ್ತು. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.

ಕಳೆದ ವರ್ಷ ಇದೇ ಸಮಯದಲ್ಲಿ ಟೊಮೆಟೊಗೆ ಚಿನ್ನದ ಬೆಲೆ ಬಂದು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿತ್ತು. ಬಾಕ್ಸ್‌ಗೆ ಸುಮಾರು 2000ರಿಂದ 2700 ರೂ.ವರೆಗೂ ಮಾರಾಟವಾಗಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.

ಕೋಲಾರ ಮತ್ತು‌ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಈ ಸೀಸನ್‌ನಲ್ಲಿ ಅತಿ‌ ಹೆಚ್ಚು ಟೊಮೆಟೊವನ್ನು ಬೆಳೆಯುತ್ತಾರೆ. ಆದರೆ ಇತ್ತೀಚಿನ ತಾಪಮಾನ, ಮಳೆ ಮತ್ತು ವೈರಸ್ ಹಾವಳಿಯಿಂದ ಟೊಮೆಟೊ ಬೆಳೆಯಿಲ್ಲದೆ ಆವಕ ಕಡಿಮೆಯಾಗಿದೆ. ಜೊತೆಗೆ ಟೊಮೆಟೊ ಬೆಳೆ ಬೆಳೆಯವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಕಷ್ಟಪಟ್ಟು ಬೆಳೆದರೂ ಸಹ ಟೊಮೆಟೊಗೆ ಬೆಲೆ ಸಿಗುತ್ತೆ ಎಂಬ ವಿಶ್ವಾಸವಿಲ್ಲದ ಕಾರಣ ರೈತ ಇತ್ತೀಚಿಗೆ ಟೊಮೆಟೊ ಬಿಟ್ಟು ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾನೆ.

ಮೊದಲು ಆಂಧ್ರ, ತಮಿಳುನಾಡು, ಮಂಡ್ಯ, ಚಾಮರಾಜನಗರ, ‌ಮೈಸೂರು, ನೆಲಮಂಗಲ ಕಡೆಯಿಂದ ಟೊಮೆಟೊ ಬರುತ್ತಿತ್ತು.‌ ಆದರೆ ಈಗ ಬರುತ್ತಿಲ್ಲ. ಆಗಸ್ಟ್ ತಿಂಗಳವರೆಗೂ ಟೊಮೆಟೊ ಸೀಜನ್‌ ಇರುವುದರಿಂದ ಟೊಮೆಟೊ ಬೆಲೆ ಇನ್ನೂ ಏರಿಕೆಯಾಗುವ ಸಂಭವವಿದೆ. ಕೋಲಾರದ ಟೊಮೆಟೊಗೆ ದೆಹಲಿ, ಒರಿಸ್ಸಾ, ಗುಜರಾಜ್​, ಪಶ್ಚಿಮ ಬಂಗಾಳ, ರಾಜಸ್ಥಾನ ಮುಂತಾದ ಕಡೆ ಹೆಚ್ಚಿನ ಬೇಡಿಕೆ ಇದೆ.

ಇದನ್ನೂ ಓದಿ: Superfood Tomato: ಬಲ್ಲಿರಾ ಟೊಮೆಟೊ ಎಂಬ ಹಣ್ಣಿನ ಸದ್ಗುಣಗಳನ್ನು?

Continue Reading

ಯಾದಗಿರಿ

Yadgiri News: ಬೆಳೆ ಸಮೀಕ್ಷೆ ಗುರಿ ಸಾಧನೆಗೆ ಅಧಿಕಾರಿಗಳು ಒತ್ತುಕೊಡಿ: ಡಿಸಿ ಡಾ. ಸುಶೀಲ

Yadgiri News: ರೈತರು ಮಾಡಿದ ಬೆಳೆ ಸಮೀಕ್ಷೆ ದತ್ತಾಂಶವು ಮುಂಬರುವ ದಿನಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ, ಬೆಂಬಲ ಬೆಲೆ, ಬೆಳೆವಿಮೆ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಿಂದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ತಿಳಿಸಿದ್ದಾರೆ.

VISTARANEWS.COM


on

Officers should emphasize on achieving crop survey targets says yadgiri DC Dr Sushila b
Koo

ಯಾದಗಿರಿ: ಬೆಳೆ ಸಮೀಕ್ಷೆಯಲ್ಲಿ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಅಧಿಕಾರಿಗಳು ಕಾರ್ಯ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ನಿರ್ದೇಶನ (Yadgiri News) ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಾತನಾಡಿದ ಅವರು, ರೈತರು ನಡೆಸುವ ಬೆಳೆ ಸಮೀಕ್ಷೆಯನ್ನು ಇಲಾಖೆಯ ಮೇಲ್ವಿಚಾರಕರು ಸರಿಯಾಗಿ ಪರಿಶೀಲಿಸಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪ್ರಸ್ತಕ ಸಾಲಿನಲ್ಲಿ ಕೂಡ ಬೆಳೆ ಸಮೀಕ್ಷೆ ಗುರಿ ಸಾಧನೆಗೆ ಒತ್ತುಕೊಡಬೇಕು. ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವರಿಂದ ಸ್ವೀಕರಿಸಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿ ಪ್ರಗತಿ ಸಾಧಿಸಿ ಎಂದರು.

ರೈತರು ಮಾಡಿದ ಬೆಳೆ ಸಮೀಕ್ಷೆ ದತ್ತಾಂಶವು ಮುಂಬರುವ ದಿನಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ, ಬೆಂಬಲ ಬೆಲೆ, ಬೆಳೆವಿಮೆ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಿಂದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ ಎಂದು ಡಿಸಿ ತಿಳಿಸಿದರು.

ಇದನ್ನೂ ಓದಿ: Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

ಜಿಲ್ಲೆಯಲ್ಲಿ ಜಮೀನು ಸರ್ವೇ ಕಾರ್ಯಗಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ, ಇಲಾಖೆಯ ಹಾಗೂ ನೋಂದಾಯಿತ ಸರ್ವೇಯರ್‌ಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡಿದ ನಂತರ, ಸಂಬಂಧಪಟ್ಟ ಸ್ಥಳಕ್ಕೆ ಭೇಟಿ ನೀಡಿ, ಶೀಘ್ರದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸರ್ವೇಯರ್‌ಗಳ ಪ್ರಗತಿಯನ್ನು ನಿರಂತರವಾಗಿ ಗಮನಿಸಲು ತಿಳಿಸಿದ ಅವರು, ಎಲ್ಲಾ ತಹಸೀಲ್ದಾರರು ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಲ್ಯಾಂಡ್ ಬೀಟ್ ಆ್ಯಪ್‌ನಲ್ಲಿ ಕಾಲೋಚಿತ ಗೊಳಿಸಲು ಸೂಚಿಸಿದರು.

ಜಿಲ್ಲೆಯಲ್ಲಿ ವ್ಯಾಪಕ ಮಳೆಯಾದ ಸಂದರ್ಭದಲ್ಲಿ ಪ್ರವಾಹ, ಜನ, ಜಾನುವಾರು ಪ್ರಾಣಹಾನಿ, ವಾಸದ ಮನೆ ಹಾನಿ ಹಾಗೂ ಸಾರ್ವಜನಿಕ ಆಸ್ತಿಹಾನಿಯಾಗುವ ಸಾಧ್ಯತೆಗಳಿದ್ದು, ಅಂತಹ ಸಂದರ್ಭದಲ್ಲಿ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮಕೈಗೊಳ್ಳಬೇಕು ಎಂದರು.

ಮಳೆಯಿಂದ ಜಾನುವಾರು ಪ್ರಾಣ ಹಾನಿ, ವಾಸದ ಮನೆ ಹಾನಿಯಾಗಿದ್ದಲ್ಲಿ ತಕ್ಷಣ ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಸೂಚನೆ ನೀಡಿದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ; ಇಂದಿನ ದರ ಇಷ್ಟಿದೆ

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಕೃಷಿ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಸೇರಿದಂತೆ ಎಲ್ಲಾ ತಾಲೂಕಿನ ತಹಶೀಲ್ದಾರರು, ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Continue Reading

ಕರ್ನಾಟಕ

Arecanut Insurance Karnataka: ಅಡಿಕೆ ಬೆಳೆ ವಿಮೆ ನೋಂದಣಿ ಮುಗಿಯದ ಗೋಳು; ಸಮಸ್ಯೆಗಳು ಸಾಲುಸಾಲು!

Arecanut Insurance Karnataka: ಕೃಷಿ ಸಂಬಂಧಿಸಿದ ತಂತ್ರಜ್ಞಾನವನ್ನು ಅಳವಡಿಸುವಾಗ ವಾಸ್ತವದ ಮತ್ತು ಎದುರಾಗಬಹುದಾದ ಸಮಸ್ಯೆಗಳನ್ನು ಒಂದು ಟ್ರಯಲ್ ಮಾಡಿ ನೋಡುವುದು ಬೇಡವಾ? ಯಾರು ಇಂತಹ ಅಸಂಬದ್ಧ ಅವ್ಯವಸ್ಥೆಯ ತಂತ್ರಜ್ಞಾನಗಳನ್ನು ಪ್ರತೀವರ್ಷ ಅನುಷ್ಠಾನಕ್ಕೆ ತಂದು ಎಲ್ಲರನ್ನೂ ಗೋಳಿನ ಕೂಪಕ್ಕೆ ತಳ್ಳುವುದು? ಆ್ಯಪ್/ವೆಬ್ಸೈಟ್ ಮಾಡುವವರು ಯಾರು? ಯಾವ ಅತಿ ಬುದ್ದಿವಂತರು ಇದನ್ನು ಅನುಮೋದನೆ ಮಾಡುವವರು? ಸರ್ಕಾರ ಈ ಸಮಸ್ಯೆಯನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ?

VISTARANEWS.COM


on

Arecanut Insurance Karnataka
Koo

| ಅರವಿಂದ ಸಿಗದಾಳ್, ಮೇಲುಕೊಪ್ಪ

ಸಹಜವಾಗಿ ಯಾವುದೇ ಹೊಸ (Arecanut insurance Karnataka) ತಂತ್ರಜ್ಞಾನವನ್ನು ಅಳವಡಿಸುವಾಗ, ‘ಗೋ ಲೈವ್’ ಎಂದು ಅನುಷ್ಠಾನಕ್ಕೆ ತರುವಾಗ, ಒಂದು ಮಾಕ್ ಟೆಸ್ಟ್ ಅಥವಾ ಪ್ರಾಯೋಗಿಕ ಪರೀಕ್ಷೆ ಮಾಡುತ್ತಾರೆ. ಆದರೆ, ಇತ್ತೀಚಿಗಿನ ಕೃಷಿ ಕ್ಷೇತ್ರದಲ್ಲಿ ಅಳವಡಿಸುತ್ತಿರುವ ಆ್ಯಪ್ ಮತ್ತು ವೆಬ್‌ಸೈಟ್ ತಂತ್ರಜ್ಞಾನಗಳಿಗೆ ಈ ಪ್ರಾಯೋಗಿಕ ಪರೀಕ್ಷೆ ಮಾಡದೆ, ಎದುರಾಗಬಹುದಾದ ಪ್ರಾಕ್ಟಿಕಲ್ ಸಮಸ್ಯೆಗಳನ್ನು ಬಗೆಹರಿಸದೆ, ನೇರವಾಗಿ ತಂತ್ರಜ್ಞಾನಗಳನ್ನು ತೋಟಗಾರಿಕೆ, ಕೃಷಿ ಇಲಾಖೆಗಳ ಮೂಲಕ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರ ಪರಿಣಾಮ ರೈತರು, ಕೃಷಿ/ತೋಟಗಾರಿಕಾ ಅಧಿಕಾರಿಗಳು, VAಗಳು, ತಾಲೂಕು ಕಚೇರಿ ಅಧಿಕಾರಿಗಳು, ಬ್ಯಾಂಕ್ ಮತ್ತು ಕೊ-ಆಪರೇಟಿವ್ ಸೊಸೈಟಿ ಅಧಿಕಾರಿಗಳು ತಮ್ಮ ಸಮಯ ವ್ಯವದಾನಗಳನ್ನು ಕಳೆದುಕೊಳ್ಳುವಂತಾಗುತ್ತಿದೆ. ಜನಸಾಮಾನ್ಯರ ಗೋಳಾಟ ಹೆಚ್ಚಾಗುತ್ತಿದೆ!

ಕೃಷಿ ಸಂಬಂಧಿಸಿದ ತಂತ್ರಜ್ಞಾನವನ್ನು ಅಳವಡಿಸುವಾಗ ವಾಸ್ತವದ ಮತ್ತು ಎದುರಾಗಬಹುದಾದ ಸಮಸ್ಯೆಗಳನ್ನು ಒಂದು ಟ್ರಯಲ್ ಮಾಡಿ ನೋಡುವುದು ಬೇಡವಾ? ಯಾರು ಇಂತಹ ಅಸಂಬದ್ಧ ಅವ್ಯವಸ್ಥೆಯ ತಂತ್ರಜ್ಞಾನಗಳನ್ನು ಪ್ರತೀವರ್ಷ ಅನುಷ್ಠಾನಕ್ಕೆ ತಂದು ಎಲ್ಲರನ್ನೂ ಗೋಳಿನ ಕೂಪಕ್ಕೆ ತಳ್ಳುವುದು? ಆ್ಯಪ್/ವೆಬ್ಸೈಟ್ ಮಾಡುವವರು ಯಾರು? ಯಾವ ಅತಿ ಬುದ್ದಿವಂತರು ಇದನ್ನು ಅನುಮೋದನೆ ಮಾಡುವವರು?
ಕಳೆದ ವರ್ಷ ಅಸ್ತಿತ್ವಕ್ಕೆ ತಂದ ಬೆಳೆ ಸರ್ವೆ ಆ್ಯಪ್‌ನ ದೋಷದಿಂದ ಬರಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 8876 ಬೆಳೆ ಸರ್ವೆಗಳು ತಪ್ಪಾಗಿ ದಾಖಲಾದವು. ಮತ್ತೆ ಅದನ್ನು ಸರಿ ಪಡಿಸಲು ತಿಂಗಳುಗಳೇ ಬೇಕಾದವು. ಕೆಲವಷ್ಟು ಇನ್ನೂ ಸರಿಯಾಗಿಲ್ಲ. ಇದು ಒಂದು ಜಿಲ್ಲೆಯದು. ಇಡೀ ರಾಜ್ಯದಲ್ಲಿ ಆದ ಪ್ರಕರಣಗಳು ಇನ್ನೆಷ್ಟೋ!

ಪ್ರಾಯೋಗಿಕ ಪರೀಕ್ಷೆ ಏಕಿಲ್ಲ?

ಈ ತಂತ್ರಜ್ಞಾನ ಅನುಷ್ಠಾನದ ಮೊದಲು ಒಂದು ಗ್ರಾಮವನ್ನೋ, ಒಂದು ಹೋಬಳಿಯನ್ನೋ ಆಯ್ಕೆ ಮಾಡಿಕೊಂಡು, ಪ್ರಾಯೋಗಿಕ ಪರೀಕ್ಷೆ ಮಾಡಿ, ಎದುರಾಗುವ ಪ್ರಾಕ್ಟಿಕಲ್ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ಅಪ್‌ಡೇಟ್‌ನೊಂದಿಗೆ ಇಡೀ ರಾಜ್ಯಕ್ಕೆ ತಂತ್ರಜ್ಞಾನವನ್ನು ಅಳವಡಿಸಬಹುದಲ್ಲವಾ? ಇಷ್ಟಕ್ಕೂ ಹೊಸ ತಂತ್ರಜ್ಞಾನವನ್ನು ಅಳವಡಿಸುವ ಮೊದಲು ಒಂದು ಆಡಿಟ್ ವ್ಯವಸ್ಥೆ ಇರೋದಿಲ್ವಾ?

ರೈತರ ಜಮೀನಿನ ಫ್ರೂಟ್ ಐಡಿ (Farmer Registration and a Unified beneficiary Information System (FRUITS) ಮಾಡುವಾಗಲೂ ಇದೇ ಸಮಸ್ಯೆ, ಆಧಾರ್-ಪಹಣಿ ಸೀಡಿಂಗ್ ಮಾಡುವಾಗಲೂ ಇದೇ ಸಮಸ್ಯೆ, ಈಗ ಬೆಳೆ ವಿಮೆ ನೊಂದಣಿ ಮಾಡಿಸುವಾಗಲೂ ಇದೇ ಗೋಳು. ಅಡಿಕೆ, ಮೆಣಸು ಬೆಳೆಗಳಿಗೆ ವಿಮೆ ನೊಂದಣಿ ಮಾಡಿಸಲು ಹತ್ತು ಜನ ರೈತರು ಬ್ಯಾಂಕ್, ಕೋ ಆಪರೇಟಿವ್ ಸಂಸ್ಥೆಗಳಿಗೆ ಹೋದರೆ, ಸುಸೂತ್ರವಾಗಿ ಇಬ್ಬರು ರೈತರಿಗೂ ಬೆಳೆ ವಿಮೆ ನೊಂದಣಿ ಆಗ್ತಾ ಇಲ್ಲ ಅಂತ ಅಧಿಕಾರಿಗಳು ಹೇಳ್ತಾ ಇದಾರೆ. ತಂತ್ರಜ್ಞಾನದಲ್ಲಿ ಒಬ್ಬೊಬ್ಬ ರೈತರ ನೋಂದಣಿಗೆ ಒಂದೊಂದು ಸಮಸ್ಯೆ.

ಅಡಿಕೆ ಮೆಣಸು ಬೆಳೆ ವಿಮೆ ಸಮಸ್ಯೆ

ಮಲೆನಾಡು-ಕರಾವಳಿಗಳಲ್ಲಿ ಅಡಿಕೆ ಮೆಣಸು ಬೆಳೆ ವಿಮೆ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಿ 12 ದಿನಗಳಾದವು. ಸಾಫ್ಟ್‌ವೇರ್ ಸಮಸ್ಯೆಗಳು ಇನ್ನೂ ಮುಂದುವರೆದಿವೆ. ಬೆಳೆ ವಿಮೆ ನೊಂದಣಿಯಲ್ಲಿ ಕಾಣಿಸುತ್ತಿರುವ ಸಾಮಾನ್ಯ ಸಮಸ್ಯೆಗಳು, ದೂರುಗಳು ಇಲ್ಲಿವೆ.
1) Aadhar not valided. You cannot generate this application
2) No FRUIT details available for this district, taluk and Gram panchayat ULB combinations
3) Error connecting to FRUIT server
4) FRUIT details not available for this Aadhar No. You can not enroll
5) ಕೆಲವು ರೈತರ ಬೆಳೆ ವಿಮೆ ಕಟ್ಟಿಯಾಗಿದೆ. ಆದರೆ, ಬೆಳೆ ವಿಸ್ತೀರ್ಣವೇ ವ್ಯತ್ಯಾಸ ಆಗಿದೆ. 17 ಗುಂಟೆ ಭಾಗಾಯ್ತು ಅಂತ ಪಹಣಿ ಇದೆ, ಸಿಸ್ಟಮ್‌ನಲ್ಲಿ ಎಂಟು ಗುಂಟೆಗೆ ಬೆಳೆ ವಿಮೆ ನೊಂದಣಿ ಆಗಿದೆ.
6) ಕಳೆದ ವರ್ಷ ಜಮೀನು ಜಾಯಿಂಟ್ ಅಕೌಂಟ್‌ನಲ್ಲಿದ್ದರೂ ಬೆಳೆ ವಿಮೆ ಮಾಡಿಸಬಹುದಿತ್ತು. ಈ ವರ್ಷ ಅದಕ್ಕೆ “ಎಲ್ಲಾ ಸದಸ್ಯರ FRUIT ID ಇಲ್ಲ, ಹಾಗಾಗಿ ನೊಂದಣಿ ಆಗ್ತಾ ಇಲ್ಲ” ಅನ್ನುವ ಕಂಪ್ಲೇಂಟ್‌.
7) ಕಳೆದ ವರ್ಷ ಬೆಳೆ ಸರ್ವೆಯಲ್ಲಾದ ಲೋಪಗಳನ್ನು ಸರಿಪಡಿಸಲಾಗಿಲ್ಲ, ಹಾಗಾಗಿ ನೊಂದಣಿ ಆಗ್ತಾ ಇಲ್ಲ.
ಹೀಗೆ ಬೇರೆ ಬೇರೆ ರೈತರ ಪಹಣಿಗೆ ಬೇರೆ ಬೇರೆ ಸಮಸ್ಯೆಗಳು. ಕೊ-ಆಪರೇಟಿವ್ ಸಂಸ್ಥೆಗಳಿಗೆ, ಬ್ಯಾಂಕುಗಳಿಗೆ ರೈತರಿಂದ ದಿನಾ ಕರೆಗಳು “ಸಾರ್, ನಮ್ದು ಇನ್ಷ್ಯೂರೆನ್ಸ್ ಕಟ್ಟಿ ಆಯ್ತಾ?” ಅಂತ.
ಮೊನ್ನೆ ದಕ್ಷಿಣ ಕೋರಿಯಾದಲ್ಲಿ ರೋಬೋಟ್ ಒಂದು ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆ ಮಾಡಿಕೊಂಡಿತ್ತಂತೆ!! ಈ ಕೃಷಿ ಸಾಫ್ಟ್‌ವೇರ್‌ಗಳು ಬೆಳೆ ನೊಂದಣಿಗೆ ಸಹಕರಿಸದೆ ರೈತರಿಗೆ ‘ಅಸಹಕಾರ’ ತೋರುತ್ತಿವೆಯಾ ಹೇಗೆ?
ಬೆಳೆ ವಿಮೆ ನೊಂದಣಿಗೆ ಇನ್ನು 18 ದಿನಗಳ ಸಮಯ ಮಾತ್ರ ಇರುವುದು. ಅಷ್ಟರಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯಬಹುದಾ? ಬೆಳೆ ವಿಮೆ ನೊಂದಣಿ ಆಗುತ್ತಾ? ಅಥವಾ ಬಹುತೇಕ ರೈತರಿಗೆ ಗೋಳಾಟವೇ ಗತಿಯಾ?

ಇದನ್ನೂ ಓದಿ: Arecanut Import: ಅಕ್ರಮ ಅಡಿಕೆ ಆಮದು ರೋಗಕ್ಕೆ ಔಷಧವೇ ಇಲ್ಲವೇ?

Continue Reading

ಕರ್ನಾಟಕ

Job News: 961 ಹುದ್ದೆಗಳ ಭರ್ತಿಗೆ ಕೃಷಿ ಇಲಾಖೆಯಿಂದ ಕೆಪಿಎಸ್‌ಸಿಗೆ ಪ್ರಸ್ತಾವನೆ; ಎಲ್ಲಿ ಎಷ್ಟು ಹುದ್ದೆ?

Job News: ಮೊದಲ ಹಂತದಲ್ಲಿ ಕೃಷಿ ಇಲಾಖೆಯಲ್ಲಿ ಖಾಲಿ ಇರುವ 961 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

VISTARANEWS.COM


on

Job News Proposal for filling 961 posts from Agriculture Department to KPSC
Koo

ಬೆಂಗಳೂರು: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಲಾಖೆಯಲ್ಲಿನ ಆಡಳಿತಾತ್ಮಕ ಸುಧಾರಣೆಗೆ ಹಲವು ರೀತಿಯ ಕ್ರಮ ಕೈಗೊಂಡಿದ್ದು, ಖಾಲಿ ಇರುವ ಹುದ್ದೆಗಳ ಹಂತಹಂತವಾಗಿ ಭರ್ತಿಗೆ (Job News) ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ಇಲಾಖೆಯಲ್ಲಿ ಖಾಲಿ ಇರುವ 961 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹುದ್ದೆಗಳ ವಿವರ

ಕಲ್ಯಾಣ ಕರ್ನಾಟಕ ಭಾಗದಲ್ಲಿ 34 ಕೃಷಿ ಅಧಿಕಾರಿ, 223 ಸಹಾಯಕ ಕೃಷಿ ಅಧಿಕಾರಿ, 17 ದ್ವಿತೀಯ ದರ್ಜೆ ಸಹಾಯಕರು, 17 ಬೆರಳಚ್ಚುಗಾರರು ಹಾಗೂ ಉಳಿಕೆ ವೃಂದದಲ್ಲಿ 84 ಕೃಷಿ ಅಧಿಕಾರಿ, 586 ಸಹಾಯಕ ಕೃಷಿ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 961 ಹುದ್ದೆಗಳ ನೇಮಕಾತಿಗೆ ಕೃಷಿ ಇಲಾಖೆಯಿಂದ ಕರ್ನಾಟಕ ಲೋಕಾಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬೆಳೆ ವಿಮೆ ಯೋಜನೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಿ

ರೈತರ ಹಿತಕಾಯಲು ಸರ್ಕಾರ ರೂಪಿಸಿರುವ ಬೆಳೆ ವಿಮೆ ಯೋಜನೆಯ ಸಂಪೂರ್ಣ ಫಲ ಕೃಷಿಕರಿಗೆ ಹೋಗುತ್ತಿದ್ದು, ಇದನ್ನು ಇನ್ನಷ್ಟು ಪಾರದರ್ಶಕಗೊಳಿಸಿ ಎಲ್ಲರ ಅನುಮಾನಗಳನ್ನು ಸಂಪೂರ್ಣವಾಗಿ ಬಗೆಹರಿಸಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಚಿತ; ಎಂ ಬಿ ಪಾಟೀಲ್‌

ವಿಕಾಸ ಸೌಧದ ತಮ್ಮ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ 313ನೇ ನಿರ್ದೇಶಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಯ ಯಾವುದೇ ಅಧಿಕಾರಿಗಳು ಏಜೆನ್ಸಿಗಳ ಪರ ಇಲ್ಲವೇ ಇಲ್ಲ, ನಾವೆಲ್ಲರೂ ರೈತರಿಗಾಗಿ ಕೆಲಸ ಮಾಡುತ್ತಿದ್ದೇವೆ. ಆದರೂ ಕೆಲವು ರೈತರು, ಜನ ಪ್ರತಿನಿಧಿಗಳಲ್ಲಿ ಇರುವ ಅನುಮಾನಗಳನ್ನು ವ್ಯವಸ್ಥಿತವಾಗಿ ಮನವರಿಕೆ ಮಾಡಿಕೊಟ್ಟು ಬಗೆಹರಿಸಬೇಕು ಇದಕ್ಕಾಗಿ ಒಂದು ಸಭೆ ಆಯೋಜಿಸುವಂತೆ ಸಚಿವರು ಸೂಚಿಸಿದರು.

ತಳ ಹಂತದಿಂದ ಮೇಲ್ಮಟ್ಟದವರೆಗೆ ಯಾವುದೇ ಅಧಿಕಾರಿ, ಸಿಬ್ಬಂದಿ ಬೆಳೆ ವಿಮೆ ಕಂಪನಿಗಳಿಂದ ಒಂದು ಸಣ್ಣ ಅನುಕೂಲವನ್ನೂ ಪಡೆಯುತ್ತಿಲ್ಲ. ಮುಂದೇಯೂ ಯಾವುದೇ ಸಂದರ್ಭದಲ್ಲಿಯೂ ನಡೆಯಬಾರದು ಎಂದು ಸೂಚನೆ ನೀಡಿದರು.

ಇದೇ ವೇಳೆ ಕೃಷಿ ಇಲಾಖೆ ಕಾರ್ಯದರ್ಶಿ ಅನ್ಭುಕುಮಾರ್ ಮತ್ತು ಆಯುಕ್ತ ವೈ.ಎಸ್. ಪಾಟೀಲ್ ಅವರು ಬೆಳೆ ಸಮೀಕ್ಷೆ ಕೇವಲ ಕೃಷಿ ಇಲಾಖೆಗಳಿಂದ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವ ವಿವಿಧ ಇಲಾಖೆ ಅಧಿಕಾರಿಗಳ ಸಮಿತಿಯಿಂದ ನಡೆಯುತ್ತಿದ್ದು, ಯಾವುದೇ ಲೋಪಗಳಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Kannada New Movie: ಮೋಷನ್ ಪೋಸ್ಟರ್‌ನಲ್ಲೇ ಕುತೂಹಲ ಮೂಡಿಸಿದ ವಿಭಿನ್ನ ಕಥಾಹಂದರ ಹೊಂದಿರುವ ‘ಹಗ್ಗ’

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ದೇವರಾಜ್, ತೋಟಗಾರಿಕೆ ನಿರ್ದೇಶಕ ರಮೇಶ್, ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿ ಹೊನ್ನಲಿಂಗಪ್ಪ ಹಾಗೂ ಇತರರು ಹಾಜರಿದ್ದರು.

Continue Reading
Advertisement
Mosquito Repellents
ಆರೋಗ್ಯ2 mins ago

Natural Mosquito Repellents: ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ನೈಸರ್ಗಿಕ ಉಪಾಯಗಳು!

DK Shivakumar
ಕರ್ನಾಟಕ8 mins ago

DK Shivakumar: ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ; ಮಳೆ ಬರಲ್ಲ ಎಂದವರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದ ಡಿಕೆಶಿ

ICW 2024
ಫ್ಯಾಷನ್40 mins ago

ICW 2024: ರ‍್ಯಾಂಪ್‌ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರ?!

Aditya Birla Group
ಚಿನ್ನದ ದರ40 mins ago

Aditya Birla Group: ಟಾಟಾ, ಅಂಬಾನಿಯೊಂದಿಗೆ ಸ್ಪರ್ಧೆ: ಆಭರಣ ವ್ಯಾಪಾರಕ್ಕೆ ಬಿರ್ಲಾ ಎಂಟ್ರಿ!

ಪ್ರಮುಖ ಸುದ್ದಿ44 mins ago

Rohit Sharma : ಏಕ ದಿನ ಸರಣಿಗಾಗಿ ಶ್ರೀಲಂಕಾ ತಲುಪಿದ ರೋಹಿತ್, ವಿರಾಟ್​ ಕೊಹ್ಲಿ

karnataka Rain
ಮಳೆ53 mins ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

New Toll System
ತಂತ್ರಜ್ಞಾನ1 hour ago

New Toll System: ಫಾಸ್ಟ್‌ ಟ್ಯಾಗ್‌ಗೂ ಉಪಗ್ರಹ ಆಧರಿತ ಟೋಲ್‌ ಸಂಗ್ರಹಕ್ಕೂ ಏನು ವ್ಯತ್ಯಾಸ? ಏನು ಪ್ರಯೋಜನ?

Manu Bhaker
ಪ್ರಮುಖ ಸುದ್ದಿ1 hour ago

Paris Olympics 2024 : ಮನು ಭಾಕರ್ ಸೇರಿದಂತೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದವರ ಎಕ್ಸ್​ ಖಾತೆಯಲ್ಲಿ ಐಫೆಲ್​ ಟವರ್ ಚಿತ್ರ

Viral Video
Latest1 hour ago

Viral Video: ಕಚೇರಿಯ ಟೇಬಲ್‌ನೊಳಗೆ ಅಡಗಿದ್ದ ಬೃಹತ್‌ ಹಾವನ್ನು ಹಿಡಿದ ಮಹಿಳಾ ಸಿಬ್ಬಂದಿ! ವಿಡಿಯೊ ನೋಡಿ

Kabini Dam
ಕರ್ನಾಟಕ1 hour ago

Kabini Dam: ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಿದ ಸಿಎಂ; ರಾಜ್ಯದ ಜಲಾಶಯಗಳು ತುಂಬಿದ್ದಕ್ಕೆ ಸಂತಸ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ53 mins ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ1 day ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ1 day ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌