Green Chilli Farming | ಎಕರೆಗೆ 1.5 ಲಕ್ಷ ರೂ. ಲಾಭ - Vistara News

ಕೃಷಿ

Green Chilli Farming | ಎಕರೆಗೆ 1.5 ಲಕ್ಷ ರೂ. ಲಾಭ

VISTARANEWS.COM


on

Green Chilli farming
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೃಷಿ

Plastic Mulching: ವಿಸ್ತಾರ ಗ್ರಾಮ ದನಿ: ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್‌ ಬಳಕೆಯ ಸೈಡ್‌ ಎಫೆಕ್ಟ್‌ ಎಷ್ಟೊಂದು!

ಕೃಷಿ ಭೂಮಿಯಲ್ಲಿ ಇತ್ತೀಚೆಗೆ (plastic mulching) ಪ್ಲಾಸ್ಟಿಕ್ ಮಲ್ಚಿಂಗ್ (ಪ್ಲಾಸ್ಟಿಕ್‌ ಹೊದಿಕೆ) ಬಳಕೆ ಹೆಚ್ಚುತ್ತಿದೆ. ಇದರ ಸಾಧಕ ಬಾಧಕಗಳೇನು ಎಂಬ ಬಗ್ಗೆ ಪ್ರಗತಿಪರ ಕೃಷಿಕ, ಲೇಖಕ ಅರವಿಂದ ಸಿಗದಾಳ್ ಅವರು ಇಲ್ಲಿ ಅವಲೋಕನ ನಡೆಸಿದ್ದಾರೆ.

VISTARANEWS.COM


on

Plastic Mulching
Koo
-ಅರವಿಂದ ಸಿಗದಾಳ್, ಮೇಲುಕೊಪ್ಪ

ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್ (ಪ್ಲಾಸ್ಟಿಕ್ ಹೊದಿಕೆ) ಬಗ್ಗೆ ಚರ್ಚೆ (plastic mulching) ನಡೆಯುತ್ತಿದೆ. ಪ್ಲಾಸ್ಟಿಕ್ ಮಲ್ಚಿಂಗ್ ಬಳಕೆಯೂ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಮಲ್ಚಿಂಗ್‌ನಿಂದ ಅನುಕೂಲ ಮತ್ತು ತೊಂದರೆ ಎರಡೂ ಇವೆ. ಈ ಹಿನ್ನೆಲೆಯಲ್ಲಿ ಚರ್ಚೆಗೆ ಪೂರಕವಾಗಿ ಒಂದಿಷ್ಟು ಸಂಗ್ರಹಿತ ವಿಷಯಗಳು ಇಲ್ಲಿ ಕೊಟ್ಟಿದ್ದೇನೆ.

ಪ್ಲಾಸ್ಟಿಕ್ ಮಲ್ಚಿಂಗ್ ಅನುಕೂಲಗಳು

  1. ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ ಮತ್ತು ಅದನ್ನು ಹೆಚ್ಚು ಕಾಲ ಕಾಯ್ದುಕೊಳ್ಳುತ್ತದೆ.
  2. ತೇವಾಂಶ ಮತ್ತು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ.
  3. ಸಸ್ಯ ಪೋಷಕಾಂಶಗಳ ನಷ್ಟವನ್ನು ಮಿತಿಗೊಳಿಸುತ್ತದೆ, ಇಳುವರಿ ಹೆಚ್ಚಾಗುತ್ತದೆ.
  4. ಮಣ್ಣಿನ ಸವೆತವನ್ನು ಕಡಿಮೆ ಮಾಡಲು ಅನುಕೂಲ.
  5. ಕಳೆಗಳ ಪರಿಣಾಮಕಾರಿ ನಿಯಂತ್ರಣ ಸಾಧ್ಯ. ಕಳೆಗಳು ದ್ಯುತಿಸಂಶ್ಲೇಷಣೆಗೆ ಅಗತ್ಯವಾದ ಸೂರ್ಯನ ಬೆಳಕನ್ನು ಪಡೆಯುವುದನ್ನು ಪ್ಲಾಸ್ಟಿಕ್ ಮಲ್ಚಿಂಗ್ ತಡೆಯುತ್ತದೆ.

ತೊಂದರೆಗಳು ಸಾಕಷ್ಟಿವೆ

ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯಿಂದ ಎಷ್ಟು ಅನುಕೂಲಗಳಿವೆಯೋ ಅದಕ್ಕಿಂತ ಹತ್ತು ಪಟ್ಟು, ನೂರು ಪಟ್ಟು ತೊಂದರೆಗಳಿವೆ. ಅನುಕೂಲಗಳು ತಕ್ಷಣಕ್ಕೆ ಸಿಗುವಂತವುಗಳಾದರೆ, ತೊಂದರೆಗಳು ದೀರ್ಘಕಾಲಿಕ.
ಪ್ಲಾಸ್ಟಿಕ್ ಸವಕಳಿಯಾಗುವುದಕ್ಕೆ, ನಾಶವಾಗುವುದಕ್ಕೆ ಶತಮಾನಗಳೇಬೇಕು. ಆದರೆ, ಭೂಮಿಗೆ ತಾಗಿಸಿದ ದಿನದಿಂದಲೇ ನಿಧಾನವಾಗಿ ಸವಕಳಿಯ ಕ್ರಿಯೆ ಆರಂಭವಾಗುತ್ತದೆ. ವಿಭಜನೆಗೊಂಡ ಪ್ಲಾಸ್ಟಿಕ್‌ನ ಕಣಗಳು ಮಣ್ಣಿನ ಫಲವತ್ತತೆಗೆ ಭಯಾನಕ ವಿಷವೇ ಸರಿ. ಸ್ನಾನದ ಮನೆಯಲ್ಲಿ ಸೋಪಿನ ಒಂದು ಸಣ್ಣ ಹನಿ ತೇವವಿದ್ದ ಜಾಗದಲ್ಲಿ ಬಿದ್ದಾಗ ಹೇಗೆ ವಿಸ್ತರಿಸುತ್ತದೋ, ಅದೇ ರೀತಿ ಪ್ಲಾಸ್ಟಿಕ್‌ನ ಕಣಗಳು ಭೂಮಿಯಲ್ಲಿ ಬಿದ್ದಾಗ ಮಣ್ಣಿನಲ್ಲಿ ಅದು ವಿಸ್ತರಿಸುತ್ತಾ… ಮಣ್ಣು ವಿಷವಾಗುತ್ತಾ ಹೋಗುತ್ತದೆ. ಹೌದು, ಈ ಕ್ರಿಯೆ ತುಂಬ ನಿಧಾನವಾದ ಗತಿಯಲ್ಲಿ ನೆಡೆಯುವುದು. ಒಂದು ರೀತಿಯಲ್ಲಿ ಸ್ಲೋ ಪಾಯಿಸನ್. ಕೆಲವು ಸಮಯದವರೆಗೆ ಇರುವೆ, ಏಡಿ, ಎರೆಹುಳುಗಳು ಮತ್ತು ಅನೇಕ ಸೂಕ್ಷ್ಮ ಜೀವಿಗಳು ಈ ಪ್ಲಾಸ್ಟಿಕ್‌ನ್ನು ಆಶ್ರಯವಾಗಿಸಿಕೊಂಡು ಬದುಕಬಹುದು. ಆದರೆ ಯಾವಾಗ ಪ್ಲಾಸ್ಟಿಕ್‌ನ ಸವಕಳಿ ನಿಧಾನವಾಗಿ ಹೆಚ್ಚಾಗುತ್ತದೋ… ಆಗ ಯಾವ ಜೀವ ಜಂತುಗಳೂ, ಸೂಕ್ಷ್ಮ ಜೀವಿಗಳೂ ಅಲ್ಲಿ ಬದುಕಲಾರವು. ಪೆಟ್ರೋಲಿಯಂ ಪ್ರಾಡಕ್ಟ್‌ನ ಉತ್ಪನ್ನವಾದ ಪ್ಲಾಸ್ಟಿಕ್ ರಾಸಾಯನಿಕ ಕಣಗಳು ಮಣ್ಣಿನ ಫಲವತ್ತತೆಯನ್ನು ಶಾಶ್ವತವಾಗಿ ನಾಶಮಾಡುತ್ತದೆ. ಮಣ್ಣನ್ನು ಬರಡಾಗಿಸುತ್ತದೆ. ಇದಲ್ಲದೆ, ಪ್ಲಾಸ್ಟಿಕ್ ಮಲ್ಚಿಂಗ್ ತೊಂದರೆಗಳು ಹಲವಾರಿವೆ.

Disadvantages of plastic mulching

ಪ್ಲಾಸ್ಟಿಕ್ ಮಲ್ಚಿಂಗ್ ಅನಾನುಕೂಲಗಳು

ಪ್ಲಾಸ್ಟಿಕ್ ಮಲ್ಚ್ ಮಣ್ಣನ್ನು ಪರಿಣಾಮಕಾರಿಯಾಗಿ ಬೆಚ್ಚಗಾಗಿಸುತ್ತದೆ, ಮಣ್ಣಿನ ತಾಪಮಾನವನ್ನು ಬದಲಾಯಿಸುವುದು ಎಲ್ಲಾ ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಬೆಳೆಗಳು ಮಣ್ಣಿನ ತಾಪಮಾನಕ್ಕೆ ಸಾಕಷ್ಟು ಸಂವೇದನಾಶೀಲವಾಗಿರುತ್ತವೆ ಆದ್ದರಿಂದ ಮಣ್ಣಿನ ಬೆಚ್ಚಗಾಗುವಿಕೆಯೂ ಅನೈಸರ್ಗಿಕವಾದಾಗ ಅದೂ ಅಪಾಯಕಾರಿಯೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಪೆಟ್ರೋಲಿಯಂ-ಆಧಾರಿತ ವಸ್ತುಗಳಿಂದ ಪಡೆಯಲಾಗಿದೆ, ಇದು ಉತ್ಪಾದನೆಗೆ ದುಬಾರಿ ಮಾತ್ರವಲ್ಲದೆ ಪರಿಸರಕ್ಕೆ ಹಾನಿಕಾರಕವಾಗಿದೆ.

ಸೂರ್ಯನ ಬೆಳಕು-ಶಾಖ, ಗಾಳಿ, ನೀರು ಅಥವಾ ಇನ್ಯಾವುದೋ ಕಾಸ್ಮಿಕ್ ಎನರ್ಜಿಗಳಿಂದ ಮಣ್ಣಿನಲ್ಲಿ ಸಹಜವಾಗಿ ನೆಡೆಯುವ “ವಿಧಿ’ವತ್ತಾದ ರಾಸಾಯನಿಕ ಕ್ರಿಯೆಗಳು ಪ್ಲಾಸ್ಟಿಕ್ ಮಲ್ಚಿನಿಂದ ಕಡಿಮೆ ಆಗಬಹುದು ಅಥವಾ ತಟಸ್ಥವಾಗಬಹುದು ಮತ್ತು ಪರಿಣಾಮವಾಗಿ ಮಣ್ಣಿನ ಮೇಲೆ ದೀರ್ಘಕಾಲದ ಅಪಾಯ ಉಂಟಾಗಬಹುದು. ಮಣ್ಣಿನ ಸಹಜ ಸಂವೇದನಾಶೀಲತೆ ಅಥವಾ ನೈಸರ್ಗಿಕವಾಗಿ ಮಣ್ಣಿನಲ್ಲಿ ನೆಡೆಯುವ ಸಹಜವಾದ ರಾಸಾಯನಿಕ ಪ್ರಕ್ರಿಯೆಗಳು ಪ್ಲಾಸ್ಟಿಕ್ ಮಲ್ಚಿನಿಂದಾಗಿ ಅತಿ ವೇಗವನ್ನು ಪಡೆದು ವಿಪರೀತವಾಗಿ ಋಣಾತ್ಮಕ ಪರಿಣಾಮ ಉಂಟಾಗಬಹುದು.

Crops with Plastic Mulch

ಮಲ್ಷಿಂಗ್ ಮಾಡುವ ಪ್ಲಾಸ್ಟಿಕ್ ವೇಸ್ಟ್‌ಗಳು ಮರು ಬಳಕೆ ಮಾಡಲು ಸೂಕ್ತವಲ್ಲದ ಗುಣಮಟ್ಟದ್ದಾಗಿರುತ್ತದೆ. ಹಾಗಾಗಿ 3-4 ವರ್ಷಗಳ ನಂತರ ಮರುಬಳಕೆಯಾಗದ ಒಂದು ಬೃಹತ್ ತ್ಯಾಜ್ಯವಾಗುವ ಈ ಪ್ಲಾಸ್ಟಿಕ್ ಭೂಮಿಗೆ ಒಂದು ಶಾಶ್ವತ ಅಪಾಯಕಾರಿ ವಸ್ತು. ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌ನ್ನು ಕೃಷಿಯಲ್ಲಿ ಬಳಸುವುದು ಪ್ರಪಂಚದ-ಪರಿಸರದ ದೃಷ್ಟಿಯಿಂದ ಒಳ್ಳೆಯದಲ್ಲ. ಬಳಸಿ, ತ್ಯಾಜ್ಯವಾದ ಪ್ಲಾಸ್ಟಿಕ್‌ನ್ನು ವಿಲೇವಾರಿ ಮಾಡುವುದು ಕಷ್ಟ.

ಮಣ್ಣಿಗೆ ಹೆಚ್ಚಿನ ಆರ್ದ್ರತೆಯು ಯಾವಾಗಲೂ ಉತ್ತಮವಲ್ಲ, ಮತ್ತು ಅತಿಯಾದ ಆರ್ದ್ರತೆಯು ಭಯಾನಕ ಪರಿಣಾಮಗಳನ್ನು ಬೀರುತ್ತದೆ. ಅತಿಯಾದ ತೇವಾಂಶವು ನೀರು ಮತ್ತು ಬೆಳೆಗಳನ್ನು ಮುಳುಗಿಸಬಹುದು.
ಆರ್ದ್ರ ಬೆಳವಣಿಗೆಯ ಪರಿಸ್ಥಿತಿಗಳು ಮಾಲಿನ್ಯ ಮತ್ತು ರೋಗಕ್ಕೆ ಕಾರಣವಾಗಬಹುದು. ಅಡಿಕೆ ತೋಟದಲ್ಲಿನ ಕೊಳೆ, ಎಲೆಚುಕ್ಕಿ ಇತ್ಯಾದಿಗಳ ಫಂಗಸ್‌ಗಳ ಉತ್ಪತ್ತಿಗೂ ಪ್ಲಾಸ್ಟಿಕ್ ಮಲ್ಚಿಂಗ್ ಕಾರಣವಾಗಬಹುದು.

Plastic mulching cropland

ಮಲ್ಚಿಂಗ್ ಪ್ಲಾಸ್ಟಿಕ್ ತಯಾರಿಕೆಯಲ್ಲಿ ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಬಣ್ಣ, ದೀರ್ಘಬಾಳಿಕೆಗಳಿಗಾಗಿ ಬಳಸುವ ಕೆಮಿಕಲ್‌ಗಳು ಮಣ್ಣಿಗೆ ವಿಷಕಾರಿಗಳಾಗಿರಬಹುದು. ಜತೆಗೆ ಗೊಬ್ಬರವಾಗಿ ಬಳಸುತ್ತಿರುವ, ಪೆಸ್ಟಿಸೈಡ್, ಇನ್ಸೆಕ್ಟಿಸೈಡ್, ಫಂಗಿಸೈಡ್ ಕೆಮಿಕಲ್‌ಗಳೊಂದಿಗೆ ಮಲ್ಚಿಂಗ್ ಪ್ಲಾಸ್ಟಿಕ್ ಕೆಮಿಕಲ್‌ಗಳು ಸೇರಿ ಗದ್ದೆ ತೋಟಗಳು ಮತ್ತಷ್ಟು ಮಾಲಿನ್ಯವಾಗಬಹುದು. ಪರೋಕ್ಷವಾಗಿ ತಿನ್ನುವ ಆಹಾರ ಪದಾರ್ಥಗಳು ಮತ್ತಷ್ಟು ವಿಷವಾಗಬಹುದು.

ಪ್ಲಾಸ್ಟಿಕ್ ಮಲ್ಚಿಂಗ್ ಸಾವಯವ ಪದ್ದತಿಗೆ ವಿರುದ್ದವಾದ ಕ್ರಮ. ಪ್ಲಾಸ್ಟಿಕ್ ಮಲ್ಚಿಂಗ್‌ನಿಂದ ಇರುವೆ, ಚಿಕ್ಳಿಯಿರುವೆ, ಏಡಿ, ಎರೆಹುಳುಗಳಿಗೆ ದೀರ್ಘಾವದಿಯಲ್ಲಿ ಅಪಾಯಕಾರಿ ಆಗಬಹುದು. ಮಣ್ಣಿನ ಅಗತ್ಯ ಸೂಕ್ಷ್ಮ ಜೀವಿಗಳೂ ನಾಶವಾಗಬಹುದು.

ಸಾವಯವ ತ್ಯಾಜ್ಯಗಳು ಮಣ್ಣಿನ ಜೊತೆ ಬೆರೆಯುವುದಕ್ಕೆ, ಗೊಬ್ಬರವಾಗಿ ಮಣ್ಣಿನ ಜೊತೆ ಸಂಯೋಜನೆಗೊಳ್ಳುವುದಕ್ಕೆ, ಸಾವಯವ ತ್ಯಾಜ್ಯಗಳಲ್ಲಿನ ಕಾರ್ಬನ್, ಪೋಶಕಾಂಶಗಳು ಮಣ್ಣಿನಲ್ಲಿ ಮಿಳಿತವಾಗುವುದಕ್ಕೆ ಪ್ಲಾಸ್ಟಿಕ್ ಮಲ್ಚಿಂಗ್‌ನಲ್ಲಿರುವ ಕೆಮಿಕಲ್ ಮತ್ತು ನೀರು, ಗಾಳಿ ಮತ್ತು ಉಷ್ಣತೆಗಳನ್ನು ವ್ಯತ್ಯಾಸಗೊಳಿಸುವ ಶಕ್ತಿ ತಡೆ ಒಡ್ಡಬಹುದು.

Plastic Mulching - Using Plastic Mulches and Drip Irrigation for Vegetable Production

ಪ್ಲಾಸ್ಟಿಕ್‌ ಕಡಿಮೆ ಮಾಡಲೇಬೇಕಿದೆ

ಹಾಗಾಗಿ ಪ್ಲಾಸ್ಟಿಕ್ ಬಗ್ಗೆ ನಾವು ಅಂತರ ಕಾಪಾಡಿಕೊಳ್ಳಬೇಕಾದ, ಜಾಗೃತಿಗೊಳ್ಳಬೇಕಾದ ಒಂದು ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪರಿಸರ, ಹವಾಮಾನ ವೈಪರೀತ್ಯ, ಪ್ರತೀ ಮನೆಯಲ್ಲೂ ಷೋಕೇಸ್‌ನ ಒಂದು ಭಾಗ ಪುಟ್ಟ ಮೆಡಿಕಲ್ ಶಾಪ್ ಆಗುತ್ತಿರುವ ಅನಿವಾರ್ಯತೆಯ ನಮ್ಮ ಅನಾರೋಗ್ಯಗಳನ್ನು ಗಮನಿಸುತ್ತ ಪ್ಲಾಸ್ಟಿಕ್ ಬಗ್ಗೆ, ಅದನ್ನು ನಮ್ಮ ಜೀವನದಲ್ಲಿ ಗ್ರಾಮ್ ಗಳಷ್ಟಾದರೂ ಕಮ್ಮಿ ಮಾಡುವ ಬಗ್ಗೆ ಯೋಚಿಸಬೇಕಾಗಿದೆ.:
ಪ್ಲಾಸ್ಟಿಕ್ ಅತಿ ಬಳಕೆಯಿಂದಾಗಿ ಹವಾಮಾನ ಬಿಕ್ಕಟ್ಟನ್ನು ಹೆಚ್ಚು ತೀವ್ರಗೊಳಿಸುತ್ತಿದ್ದೇವೆ. ಅಲ್ಲದೆ, ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಮತ್ತು ಅವುಗಳ ತ್ಯಾಜ್ಯದಿಂದ ನಮ್ಮ ವಾತಾವರಣದಲ್ಲಿ ವಿಷದ ಸಾಂದ್ರತೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ. ಪರಿಣಾಮ ನಿತ್ಯ ಅನಾರೋಗ್ಯರಾಗುತ್ತಿದ್ದೇವೆ, ಬೇಗನೆ ಸಾವಿನ ಕಡೆಗೆ ವಾಲುತ್ತಿದ್ದೇವೆ.
ಪ್ಲಾಸ್ಟಿಕ್ ಎಂಬ ‘ಭಸ್ಮಾಸುರ”ನ ಸುಡುವ ಕರವನ್ನು ನಮ್ಮ ತಲೆ ಮೇಲೆ ನಾವೇ ಇಟ್ಟುಕೊಳ್ಳುತ್ತಿದ್ದೇವೆ. ಆ ಭಸ್ಮಾಸುರ ಕರಗಳು ಪರಿಸರವನ್ನು, ನಮ್ಮನ್ನೂ ಸೇರಿದಂತೆ ಜೀವ ಸಂಕುಲಗಳ ಆರೋಗ್ಯವನ್ನು, ಆಯಸ್ಸನ್ನು ಸುಡುತ್ತಿವೆ. ಸುಡುವುದನ್ನು ತಡೆಯುವ ಯಾವ ಮಲ್ಚಿಂಗ್ ಹೊದಿಕೆಗಳೂ ನಮ್ಮ ತಲೆ ಮೇಲೆ ಇಲ್ಲ!

Continue Reading

ಕರ್ನಾಟಕ

ವಿಸ್ತಾರ ಗ್ರಾಮ ದನಿ: ಅಡಿಕೆ ವಿಚಾರ ಬಂದಾಗ ಜನಪ್ರತಿನಿಧಿಗಳು ಕೈಕಟ್ಟಿಕೊಂಡು ಮೌನವಾಗುವುದೇಕೆ?

ಅನೇಕ ಕಳ್ಳ ಮಾರ್ಗದಲ್ಲಿ ಅಡಿಕೆ ದೇಶದೊಳಗೆ ನುಗ್ಗಿ ಇಲ್ಲಿ ಬೆಳೆದ ರೈತರಿಗೆ ಸಮಸ್ಯೆ ಆಗುತ್ತಿದ್ದರೂ, ಅಡಿಕೆ ಸಹಕಾರಿ ಸಂಘಗಳು ನೇರ ಸಂಬಂಧಿತ ಮಂತ್ರಿಗಳಿಗೆ ಅಡಿಕೆ ಕಳ್ಳ ಆಮದನ್ನು ತಡೆಯುವಂತೆ ಮನವಿ ಕೊಡುತ್ತಿದ್ದರೂ… ಅಡಿಕೆ ಬೆಳೆಯುವ 17 ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ತುಟಿ ಪಿಟಿಕ್ ಅನ್ನುವುದಿಲ್ಲ ಏಕೆ?

VISTARANEWS.COM


on

Areca Nut
Koo

| ಅರವಿಂದ ಸಿಗದಾಳ್, ಮೇಲುಕೊಪ್ಪ
ಕಳಪೆ ಅಡಿಕೆಯ ಕಳ್ಳ ಆಮದು ವಿರುದ್ಧ ಇತ್ತೀಚೆಗೆ ಕ್ಯಾಂಪ್ಕೋ, ಮ್ಯಾಮ್‌ಕೋಸ್ ಸಹಾಕಾರಿ ಸಂಸ್ಥೆಗಳವರೆಲ್ಲ ಒಟ್ಟಿಗೆ ದಿಲ್ಲಿಗೆ ಹೋಗಿ ಮನವಿ ಸಲ್ಲಿಸಿ ಭರವಸೆ ಪಡೆದು ಬಂದರು.
“ಇರಿ, ನಾವು ಬರ್ತೀವಿ. ಒಟ್ಟಿಗೆ ಹೋಗೋಣ” ಅಂತ ಎಲ್ಲ 17 ಅಡಿಕೆ ಜಿಲ್ಲೆಗಳ ಸಂಸದರು ಜೊತೆಗೂಡಬಹುದಿತ್ತು. “ತಡಿರಿ, ನಾವೂ ಬರ್ತೀವಿ ‘ನಮ್ಮ ಅಡಿಕೆ ನಮ್ಮ ಹಕ್ಕು'” ಅಂತ ಹೇಳಿ ಅದೇ 17 ಅಡಿಕೆ ಬೆಳೆಯುವ ಜಿಲ್ಲೆಯ ಎಲ್ಲ ಶಾಸಕರೂ ಕೈ ಸೇರಿಸಬಹುದಿತ್ತು.
ಉಹೂಂ, ಅದ್ಯಾವದನ್ನೂ ಮಾಡುವ ಮನಸ್ಸನ್ನು ಶಾಸಕರು, ಸಂಸದರು, ಮಂತ್ರಿಗಳು ಮಾಡುತ್ತಿಲ್ಲ. ಅನೇಕ ತಿಂಗಳುಗಳಿಂದ ಈ ಅಡಿಕೆ ಕಳ್ಳ ಆಮದು (Areca Nuts Smuggling) ಆಗುತ್ತಿರುವ ಸುದ್ದಿ ಪ್ರಕಟವಾಗುತ್ತಿದೆ. ಯಾಕೆ ಅಡಿಕೆ ಸಮಸ್ಯೆಗಳ ವಿಚಾರದಲ್ಲಿ ಎಲ್ಲಾ ಜನಪ್ರತಿನಿಧಿಗಳು ನಿಷ್ಕ್ರಿಯರಾಗುತ್ತಿದ್ದಾರೆ? ನಿರ್ಲಕ್ಷ್ಯ ತೋರಿಸುತ್ತಿದ್ದಾರೆ? ಬೇರೆ ವಿಚಾರಗಳಲ್ಲಿ ಗಂಟಲು ಹರಿಯುವಷ್ಟು ಕೂಗಾಡುವ, ಕಿರುಚಾಡುವ ಅನೇಕ ಜನ ಪ್ರತಿನಿಧಿಗಳು ಅಡಿಕೆ ಸಮಸ್ಯೆ ವಿಚಾರ ಬಂದಾಗ ಸತ್ತವರ ಮನೆಯಲ್ಲಿ ಕೈಕಟ್ಟಿಕೊಂಡು ನಿಂತವರ ರೀತಿ ಮೌನವಾಗುವುದೇಕೆ!!?

ಒಂದೋ ಎರಡೋ ಪ್ರಕರಣ ಅಲ್ಲ

ಕಳ್ಳ ದಾರಿಯಲ್ಲಿ ಅಡಿಕೆ ಆಮದು ಆಗಿದ್ದು ಒಂದೋ ಎರಡೋ ಪ್ರಕರಣ ಅಲ್ಲ. ಕೆಲವು ತಿಂಗಳುಗಳಿಂದ ಅನೇಕ ಪ್ರಕರಣಗಳು ಸುದ್ದಿ ಆಗುತ್ತಲೇ ಇದೆ. ಡ್ರೈ ಫ್ರೂಟ್ಸ್ ಹೆಸರಲ್ಲಿ ಕಡಿಮೆ ದರ, ಕಡಿಮೆ ಕಸ್ಟಮ್ಸ್ ಡ್ಯೂಟಿಯಲ್ಲಿ ಅಡಿಕೆ ಭಾರತದ ಒಳಗೆ ಬರ್ತಾ ಇದೆ ಎಂದು ಸುದ್ದಿಗಳು ಆಗುತ್ತಿವೆ. ನೇರ ಬಂದರಿಗೆ ಕಳ್ಳ ದಾಖಲಾತಿಗಳೊಂದಿಗೆ ಅಡಿಕೆ ಆಮದಾಗುತ್ತಿದೆ ಅಂತಲೂ ವರ್ತಮಾನ ಪ್ರಕಟವಾಗುತ್ತ ಇದೆ. ಆಮದು ಆದ ಅಡಿಕೆ ಸೀಜ್ ಆಗುತ್ತೆ. ಅದನ್ನು ಕಡಿಮೆ ಬೆಲೆಯಲ್ಲಿ ಹರಾಜು ಹಾಕಲಾಗುತ್ತಂತೆ!! ಇಲ್ಲಿಯ ವರ್ತಕರು ಅದನ್ನು ಕಡಿಮೆ ಬೆಲೆಗೆ ಹರಾಜು ಹಿಡಿಯುತ್ತಾರಂತೆ. ಇದಲ್ಲದೆ ಈಶಾನ್ಯ ರಾಜ್ಯಗಳ ಗಡಿಯಿಂದಲೂ ರಾಜಾರೋಷವಾಗಿ ಅಡಿಕೆ ಕಳ್ಳಸಾಗಾಣಿಯಾಗಿ ಬರುತ್ತಿದೆ ಅಂತ ಅಲ್ಲಿನ ಮುಖ್ಯ ಮಂತ್ರಿಗಳೇ ಕೇಂದ್ರಕ್ಕೆ ಮಾಹಿತಿ ಕೊಡುತ್ತಿದ್ದಾರೆ.

ಇದನ್ನೂ ಓದಿ | Women’s Day 2024: ಮನೆಯ ಕಸದಿಂದ ಗೊಬ್ಬರ ತಯಾರಿಸುವ ಯಂತ್ರ; ಇದು ಮಹಿಳೆಯೊಬ್ಬರ ಆವಿಷ್ಕಾರ!

ಜನಪ್ರತಿನಿಧಿಗಳ ಮೌನ ಏಕೆ?

ಇಷ್ಟೆಲ್ಲ ಆಗುತ್ತಿದ್ದರೂ ಅಡಿಕೆ ಬೆಳೆಯುವ ಕರ್ನಾಟಕದ 17 ಜಿಲ್ಲೆಗಳ ಶಾಸಕರು, ಸಂಸದರು ಘನ ಮೌನವಹಿಸುವುದೇಕೆ!!? ಸ್ಪರ್ಧಾತ್ಮಕವಾಗಿ ಅಥವಾ ಎಲೆಕ್ಷನ್ ಸಮಯವಾದ ದಿನ ಮನದಲ್ಲಿ ರಾಜಕೀಯವಾಗಿ ಪಕ್ಷಗಳ ಗೆಲುವಿನ ಹಿತಾಸಕ್ತಿ ಇಟ್ಕೊಂಡಾದರೂ ಸರಿ, ಎಲ್ಲ 17 ಅಡಿಕೆ ಜಿಲ್ಲೆಗಳ ಕೇಂದ್ರ ಸಂಸದರು, ರಾಜ್ಯ ಶಾಸಕರು ಒಟ್ಟಾಗಿ ಧ್ವನಿ ಎತ್ತಬಾರದಾ?

ಮಾಧ್ಯಮಗಳೇ ದನಿ ಎತ್ತಬೇಕಾ?

ಹೋಟೆಲ್‌ನಲ್ಲಿ ಬಾಂಬ್‌ ಚೀಲ ಇಟ್ಟು ಹೋಗುವ ರೀತಿಯಲ್ಲಿ ದೇಶದ ಪೋರ್ಟ್‌ಗೆ ಅಕ್ರಮ ಅಡಿಕೆ ಮೂಟೆಗಳು ಬಂದು ಬೀಳುತ್ತಿವೆ ಅಂತಾದರೆ, ಅದಕ್ಕೂ ಮೀಡಿಯಾದವರೇ ಡಿಬೇಟ್ ಮಾಡಬೇಕಾ? ಪತ್ರಿಕೆಗಳೇ ದಪ್ಪಕ್ಷರದ ಸುದ್ದಿ ಮಾಡಿ ಸರಕಾರಗಳ ಗಮನ ಸೆಳೆಯಬೇಕಾ? ಇಂಪೋರ್ಟ್ ವ್ಯವಸ್ಥೆಯಲ್ಲಿ ಸಿಸಿ ಕ್ಯಾಮೆರಾ, ಫುಟೇಜು, FSL, ಎಕ್ಸಿಮ್ ಪಾಲಿಸಿ, ಕಾನೂನುಗಳು ಇರೋದಿಲ್ವಾ? ಜನಪ್ರತಿನಿಧಿಗಳಿಗೆ, ಶಾಸಕ ಸಚಿವರುಗಳಿಗೆ ಅವುಗಳ ಬಗ್ಗೆ ಗಮನವಿರುವುದಿಲ್ವಾ? ಅರಿವಿರುವುದಿಲ್ಲವಾ? ಇರಬೇಕಾಗಿಲ್ವಾ!!?

ಕ್ರಿಯಾ ಯೋಜನೆಯನ್ನು ರೂಪಿಸಬಾರದಾ?

ಅನೇಕ ಕಳ್ಳ ಮಾರ್ಗದಲ್ಲಿ ಅಡಿಕೆ ದೇಶದೊಳಗೆ ನುಗ್ಗಿ ಇಲ್ಲಿ ಬೆಳೆದ ರೈತರಿಗೆ ಸಮಸ್ಯೆ ಆಗುತ್ತಿದ್ದರೂ, ಆ ವಿಚಾರಗಳು ಮೀಡಿಯಾದಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತಿದ್ದರೂ, ಅಡಿಕೆ ಸಹಕಾರಿ ಸಂಘಗಳು ನೇರ ಸಂಬಂಧಿತ ಮಂತ್ರಿಗಳಿಗೆ ಅಡಿಕೆ ಕಳ್ಳ ಆಮದನ್ನು ತಡೆಯುವಂತೆ ಮನವಿ ಕೊಡುತ್ತಿದ್ದರೂ… ಅದೇ ಅಡಿಕೆ ಬೆಳೆಯುವ 17 ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ತುಟಿ ಪಿಟಿಕ್ ಅನ್ನುವುದಿಲ್ಲ ಏಕೆ? ಕಳ್ಳ ದಾರಿಯಲ್ಲಿನ ಅಡಿಕೆ ಆಮದನ್ನು ತಡೆಯುವ ಒಂದು ಕ್ರಿಯಾ ಯೋಜನೆಯನ್ನು ರೂಪಿಸಬಾರದಾ? ಪಕ್ಷಾತೀತವಾಗಿ ಅಡಿಕೆ ಬೆಳೆಯುವ 17 ಜಿಲ್ಲೆಗಳ ಸಂಸದರು, ಶಾಸಕರು, ಮಂತ್ರಿಗಳು ಒಟ್ಟಾಗಿ ಅಕ್ರಮ ಅಡಿಕೆ ಆಮದನ್ನು ತಡೆಯುವುದಕ್ಕೆ ಏನಾದರು ಮಾಡಬಾರದಾ?

ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇಲ್ವಾ? ಆಸಕ್ತಿ ಇಲ್ವಾ? ತಡೆಯುವ ಅಧಿಕಾರ ಇಲ್ವಾ? ರೈತರ ಸಮಸ್ಯೆ ಅರ್ಥವೇ ಆಗ್ತಾ ಇಲ್ವಾ? ಅಥವಾ ಮೀಡಿಯಾಗಳು, ಜಾಲತಾಣಗಳು, ಅಡಿಕೆ ಸಹಕಾರಿ ಸಂಘಗಳು ಸುಳ್ಳು ಹೇಳುತ್ತಿವೆ ಅಂತ ಜನ ಪ್ರತಿನಿಧಿಗಳು ಭಾವಿಸಿದ್ದಾರಾ? ಇಲ್ಲಾ, “ಮೀಡಿಯಾಗಳು, ಜಾಲತಾಣಗಳು, ಅಡಿಕೆ ಸಹಕಾರಿ ಸಂಘಗಳು ಮತ್ತು ಅಡಿಕೆ ಬೆಳೆಗಾರರೇ ಹೋರಾಟ ಮಾಡಿ ಸರಿ ಮಾಡಿಕೊಳ್ಳುತ್ತಾರೆ, ನಮಗ್ಯಾಕೆ?” ಅಂತ ಅಡಿಕೆ ನಾಡಿನ ಜನಪ್ರತಿನಿಧಿಗಳ ಅಂತರಂಗದ ಭಾವನೆಯಾ? ಇದು ಅಡಿಕೆ ಕಳ್ಳ ಆಮದಿನ ವಿಷಯದಲ್ಲಿ ಮಾತ್ರ ಅಲ್ಲ, ಅಡಿಕೆಯ ಎಲ್ಲ ಸಮಸ್ಯೆಗಳ ವಿಚಾರದಲ್ಲೂ ರಾಜಕಾರಣಿಗಳ ಮನಸ್ಥಿತಿ ಹೀಗೆ ಇದೆ ಎಂಬಂತೆ ಕಾಣಿಸುತ್ತಿದೆ!

ಜನಪ್ರತಿನಿಧಿಗಳೇ ಕೇಳಿ

ಆತ್ಮೀಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳೇ, ಅಡಿಕೆ ಬೆಳೆಗಾರರು ಹೆದರುತ್ತಲೇ (ಅಡಿಕೆ ಸಮಸ್ಯೆಗಳಿಂದ ಜರ್ಜರಿತರಾಗಿ ಹೆದರಿ) ಕೇಳುವ ಇದೊಂದು ಧೈರ್ಯದ ಪ್ರಶ್ನೆಗೆ ನಾಡಿದ್ದು ಪ್ರಿಂಟೆಡ್ ಪ್ರಣಾಳಿಕೆ ಹಿಡ್ಕೊಂಡು, ಕೈ ಮುಗಿದು, ಗುಂಪುಗೂಡಿಕೊಂಡು ಬರುವಾಗ ಈ ಅಡಿಕೆ ಸಮಸ್ಯೆಗಳಿಗೆ ಪರಿಹಾರದ ಉತ್ತರಗಳನ್ನು ಅದೇ ಪ್ರಣಾಳಿಕೆಯ ಜೊತೆ ಸೇರಿಸಿ ತನ್ನಿ. ಅದನ್ನು ಮನೆಯಲ್ಲಿ ಕೊಟ್ಟಿರಿ. ಮನೆಯಲ್ಲಿ ಯಾರೂ ಇಲ್ಲದಿದ್ದರೆ… ಬಾಗಿಲು ಚಿಲಕದಲ್ಲಿ ಸಿಕ್ಕಿಸಿಡಿ!
ಬಹುತೇಕ ರೈತರು ಆ ಸಮಯದಲ್ಲಿ ಮನೆಯಲ್ಲಿ ಇಲ್ಲದಿರಬಹುದು! ಗುಮ್ಮೆಯ ತಳದಲ್ಲಿರುವ ಚೊಂಬು ನೀರನ್ನು ನಾಲ್ಕು ಅಡಿಕೆ ಮರಕ್ಕೆ ಹಂಚಿ ಹಾಕಲು ತೋಟಕ್ಕೆ ಹೋಗಿರಬಹುದು! ಅಥವಾ ಫ್ರೂಟ್ ಐಡಿ, ಬೆಳೆಸರ್ವೆ, ಆಧಾರ್-ಪಹಣಿ ಸೀಡಿಂಗ್, NPCI, KYC ಅಪ್‌ಡೇಷನ್, HSRP, ಪದೇಪದೆ ತಿರುಗಬೇಕಾದ ಪೋಡಿ, ಕಾಂಪ್ಲಿಕೇಟೆಡ್ ವಂಶವೃಕ್ಷ, ಇದ್ದಕ್ಕಿದ್ದಂತೆ ಪಹಣಿಯಲ್ಲಿ ಬೆಳೆ ಕಾಲಮ್‌‌ನಲ್ಲಿದ್ದ ಮಾಯವಾದ ಅಡಿಕೆ, ಸಿಗದ ಇಂಟರ್‌ನೆಟ್, ಸತಾಯಿಸುವ ನೆಟ್ವರ್ಕ್….. ನಂತಹ ನಿತ್ಯ ಜಂಜಾಟ ಹಿಡ್ಕೊಂಡು ಪ್ಯಾಟಿಗೆ ಹೋಗಿರಬಹುದು!

ಒಂದಿಷ್ಟು ಪರಿಹಾರಗಳನ್ನು ತನ್ನಿ

ಮತಭಿಕ್ಷೆಗೆ ಬರುವಾಗ, ರೈತರ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರಗಳನ್ನು ತನ್ನಿ. ತೀರ ಬಿಸಿಲು ಹೊತ್ತಲ್ಲಿ ಬರಬೇಡಿ!! ಅನೇಕ ರೈತರ ಮನೆಗಳಲ್ಲಿ ತೋಟಕ್ಕೆ ಬಿಡಿ, ಕುಡಿಯೋದಕ್ಕೂ ನೀರಿನ ಅಭಾವ ಅನ್ನುವ ಪರಿಸ್ಥಿತಿ ನಿರ್ಮಾಣ ಆಗ್ತಾ ಇದೆ. ನೀವು ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಹೊತ್ತು ತುಂಬ ಜನ ಒಟ್ಟಿಗೆ ಬಂದಾಗ ಬಾಯಾರಿದ ನಿಮಗೆ ನೀರು ಕೊಡೋದಕ್ಕೂ ಆಗ್ತಾ ಇಲ್ವಲ್ಲ ಅನ್ನುವ ಭಾವ ರೈತರಿಗೆ ಬರೋದು ಬೇಡ! ಇನ್ಮುಂದೆ ಭರವಸೆ, ಗ್ಯಾರಂಟಿ, ಆಶ್ವಾಸನೆ, ಕುಕ್ಕರ್, ನೋಟು, ಪ್ಯಾಕೇಟು ಯಾವುದೂ ಬೇಡ.

ಇದನ್ನೂ ಓದಿ | Raja Marga Column : ಈ ಹೆಣ್ಮಕ್ಕಳು ಜಗತ್ತಿನ ಮಹಾನ್ ಪವರ್‌ ಹೌಸ್‌ಗಳು

ಅಡಿಕೆ ಎಲೆ ಚುಕ್ಕಿ ರೋಗ, ಅಡಿಕೆ YLD, ಅಡಿಕೆ ಕಳ್ಳ ಆಮದು, ಅಡಿಕೆ ಹಾನಿಕಾರಕ, ಅಡಿಕೆ ದರ ಇಳಿತ, ಅಡಿಕೆಗೆ ಮಂಗನ ಕಾಟ, ಅಡಿಕೆ ಮರ ಕಡಿಯುವ ಕಾಡುಕೋಣ, ಅಡಿಕೆ ಮೋಟರ್‌ಗೆ ಕರೆಂಟು, ಸಬ್ಸಿಡಿ ಮೋಸ, ಅಡಿಕೆ ತೋಟಕ್ಕೆ ಬಂದ ಬರ… ಇತ್ಯಾದಿಗಳ ಭೀಕರತೆಯ ಸಮಸ್ಯೆಗಳಿಗೆ ನೀವು ಅಧಿಕೃತ ಪರಿಹಾರದ ಉತ್ತರದೊಂದಿಗೆ ಬರ್ತೀರಿ ಎಂಬ ನಂಬಿಕೆಯ ಮನಸ್ಥಿತಿ ಈಗಲೂ ರೈತರಲ್ಲಿ ಸಾಸಿವೆ ಕಾಳಷ್ಟಾದರೂ ಇದೆ!!

ಅಡಿಕೆ ಅಕ್ರಮ ಆಮದು ತಡೆಯಲು ಕೇಂದ್ರ ಸಚಿವರಿಗೆ ಮನವಿ

ಭಾರತಕ್ಕೆ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದರಿಂದ ಅಡಿಕೆ ಬೆಲೆ ಮತ್ತು ಬೆಳಗಾರರ ಮೇಲೆ ಆಗುತ್ತಿರುವ ದುಷ್ಪರಿಣಾಮದ ಕುರಿತು ನವದೆಹಲಿಯಲ್ಲಿ ಇತ್ತೀಚೆಗೆ ಕೇಂದ್ರ ಗೃಹಖಾತೆ ರಾಜ್ಯ ಸಚಿವರಾದ ನಿತ್ಯಾನಂದ ರೈ ಅವರನ್ನು ಅಡಿಕೆ ಸಹಕಾರ ಸಂಘಗಳ ಮಹಾಮಂಡಲದ ನೇತೃತ್ವದಲ್ಲಿ ಭೇಟಿ ಮಾಡಿ ಅಕ್ರಮ ಆಮದನ್ನು ತಡೆಗಟ್ಟಲು ವಿನಂತಿಸಲಾಯಿತು. ನಿಯೋಗದಲ್ಲಿ ಎಚ್.ಎಸ್.ಮಂಜಪ್ಪ, ಹೊಸಬಾಳೆ, ಅಧ್ಯಕ್ಷರು ಕ್ರ್ಯಾಮ್, ಸುಬ್ರಹ್ಮಣ್ಯ ಯಡಗೆರೆ, ನಿರ್ದೇಶಕರು, ಮಾಮ್ ಕೋಸ್/ಅಧ್ಯಕ್ಷರು, ಮಹಾಮಂಡಲ, ಇಂಧೂದರಗೌಡ, ಅಧ್ಯಕ್ಷರು, ಆಪ್ಕೋಸ್, ಸಾಗರ, ಶ್ರೀಕಾಂತ್ ಬರುವೆ, ವ್ಯವಸ್ಥಾಪಕ ನಿರ್ದೇಶಕರು, ಮಾಮ್ ಕೋಸ್, ವಿಜಯಾನಂದ ಭಟ್, ಪ್ರಧಾನ ವ್ಯವಸ್ಥಾಪಕರು , ಟಿಎಸ್ಎಸ್, ಶಿರಸಿ ಇವರು ಉಪಸ್ಥಿತರಿದ್ದರು.

Continue Reading

ಬೆಂಗಳೂರು

CM Siddaramaiah : ರೈತ ವಿರೋಧಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ; ಸಿದ್ದರಾಮಯ್ಯ ಭರವಸೆ

CM Siddaramaiah : ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಅವರು ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

VISTARANEWS.COM


on

CM Siddaramaiah Pro Nanjundaswamy
Koo

ಬೆಂಗಳೂರು: ರೈತರು ನೀಡಿದ ಹಕ್ಕೊತ್ತಾಯಗಳನ್ನು (Demands of Farmers) ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ “ಭೂ ಸುಧಾರಣಾ ಕಾಯ್ದೆ 2020″ಕ್ಕೆ (Land Reform Act 2020) ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಫ್ರೀಡಂ ಪಾರ್ಕ್ ನಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರೈತ ಸಮಾವೇಶವನ್ನು ಉದ್ಘಾಟಿಸಿದ ಬಳಿಕ ರೈತ ಪರ ಬಜೆಟ್ ರೂಪಿಸಲು ರೈತ ಸಂಘ ನೀಡಿದ ಹಕ್ಕೊತ್ತಾಯಗಳನ್ನು ಸ್ವೀಕರಿಸಿ ಮಾತನಾಡಿದರು.

CM Siddaramaiah Pro Nanjundaswamy

ನಂಜುಂಡಸ್ವಾಮಿಯವರು ಸಂಘಟಿಸಿದ ಸ್ಟಡಿ ಸರ್ಕಲ್ ಮೂಲಕ ಹಲವು ವಿಚಾರಗಳ ಒಳನೋಟ ದೊರೆಯಿತು. ಸಮಾಜವಾದಿ ಆರ್ಥಿಕತೆ, ಸಮಾಜವಾದಿ ರಾಜಕಾರಣದ ಬಗ್ಗೆ ಸ್ಪಷ್ಟತೆ ಸಿಕ್ಕಿತು. ಈ ಸ್ಟಡಿ ಸರ್ಕಲ್ ಗೆ ಬಹಳ ಮಂದಿ ಉಪನ್ಯಾಸಕರು, ಪ್ರೊಫೆಸರ್ ಗಳು, ಸಾಹಿತಿಗಳು ಬರುತ್ತಿದ್ದರು. ಇವರೆಲ್ಲರ ಮಾರ್ಗದರ್ಶನ ನನಗೆ ಅನುಕೂಲವಾಯಿತು ಎಂದರು.

ನಂಜುಂಡಸ್ವಾಮಿಯವರು ಕಡೆಯವರೆಗೂ ರೈತರ ಪರವಾಗಿ ಕ್ರಿಯಾಶೀಲವಾಗಿದ್ದರು. ಸಮಾಜವಾದಿ ಆಶಯಗಳ ಪರವಾಗಿದ್ದ ಇವರು ಬೆಳೆಸಿದ ರೈತ ಚಳವಳಿ ರೈತರ ಸಮಸ್ಯೆ ಪರಿಹಾರಕ್ಕೆ ಆಸರೆ ಆಯಿತು. ರೈತ ಹೋರಾಟ ಮತ್ತು ರೈತ ಸಮಾವೇಶಗಳಲ್ಲಿ ಭಾಗವಹಿಸುವುದು ನನಗೂ ಬಹಳ ಸಂತಸ ಮತ್ತು ಹೆಮ್ಮೆಯ ವಿಷಯ. ನಂಜುಂಡಸ್ವಾಮಿ ಮತ್ತು ರೈತ ಹೋರಾಟ ಸಮಾಜ ಮತ್ತು ಸರ್ಕಾರಗಳ ಮೇಲೆ ಪರಿಣಾಮ ಬೀರಿದೆ ಎಂದರು. ನಂಜುಂಡ ಸ್ವಾಮಿಯವರ ರೈತ ಹೋರಾಟ ನನಗೆ ರಾಜಕೀಯ ಪ್ರೇರಣೆ ಎಂದು ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.

CM Siddaramaiah Pro Nanjundaswamy

ಇದನ್ನೂ ಓದಿ : CM Janaspandana: ಒಂದು ತಿಂಗಳೊಳಗೆ ಜನ ಸ್ಪಂದನೆ ಅರ್ಜಿ ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಬಡಗಲಾಪುರ ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದ ರೈತ ಸಮಾವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಆಳಂದ ಶಾಸಕ ಬಿ.ಆರ್. ಪಾಟೀಲ್, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ದಲಿತ ಮುಖಂಡ ಮಾವಳ್ಳಿ ಶಂಕರ್, ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕರಾದ ಕುಮಾರ್ ಸಮತಳ ಸೇರಿ ಹಲವು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

Continue Reading

ದೇಶ

Bharat Ratna: ದೇಶದ ಹಸಿವು ನೀಗಿಸಿದ `ಹಸಿರು ಕ್ರಾಂತಿ’ಯ ಪಿತಾಮಹನಿಗೆ ಭಾರತ ರತ್ನ ಗೌರವ

Bharat Ratna: ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ವಿಜ್ಞಾನಿ ಡಾ.ಎಂ.ಎಸ್‌. ಸ್ವಾಮಿನಾಥನ್‌ ಅವರಿಗೆ ಕೇಂದ್ರ ಸರ್ಕಾರ ಇಂದು ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ.

VISTARANEWS.COM


on

swaminathan
Koo

ನವದೆಹಲಿ: ಭಾರತದ ಹಸಿರು ಕ್ರಾಂತಿಯ (Green revolution) ಪಿತಾಮಹ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ವಿಜ್ಞಾನಿ ಡಾ.ಎಂ.ಎಸ್‌.ಸ್ವಾಮಿನಾಥನ್‌ (M.S.Swaminathan) ಅವರಿಗೆ ಕೇಂದ್ರ ಸರ್ಕಾರ ಇಂದು ಭಾರತ ರತ್ನ (Bharat Ratna)ಪ್ರಶಸ್ತಿಯನ್ನು ಘೋಷಿಸಿದೆ. ಆಗಸ್ಟ್ 7, 1925ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ್ದ ಅವರ ಪೂರ್ತಿ ಹೆಸರು ಮನ್ಕೊಂ‌ಬು ಸಾಂಬಶಿವನ್‌ ಸ್ವಾಮಿನಾಥನ್‌. ಕಳೆದ ವರ್ಷ ಸೆಪ್ಟೆಂಬರ್‌ 28ರಂದು ತಮ್ಮ 98ನೇ ವಯಸ್ಸಿನಲ್ಲಿ ನಿಧನ ಹೊಂದಿದ ಅವರಿಗೆ ಮರಣೋತ್ತರವಾಗಿ ಭಾರತ ಈ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಎಂ.ಎಸ್.ಸ್ವಾಮಿನಾಥನ್ ಅವರು ಹೆಚ್ಚು ಇಳುವರಿ ನೀಡುವ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಭಾರತದ ಕಡಿಮೆ ಆದಾಯದ ರೈತರು ಹೆಚ್ಚಿನ ಇಳುವರಿಯನ್ನು ಉತ್ಪಾದಿಸಲು ಸಹಾಯ ಮಾಡಿದ್ದಲ್ಲದೆ, ಆ ದಿನಗಳ ಭಾರತದ ಜನಸಂಖ್ಯೆಯ ಬೆಳವಣಿಗೆಗೆ ತಕ್ಕಂತೆ ಸಾಕಷ್ಟು ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಸ್ವಾಮಿನಾಥನ್ ಅವರು ವಿವಿಧ ಇಲಾಖೆಗಳಲ್ಲಿ ಹಲವು ಕಾಲ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ (1961-72), ICARನ ಡೈರೆಕ್ಟರ್ ಜನರಲ್, ಭಾರತ ಸರ್ಕಾರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ (1972-79), ವಿಜ್ಞಾನ ಮತ್ತು ಕೃಷಿ ಇಲಾಖೆ ಆಕ್ಟಿಂಗ್ ಡೆಪ್ಯುಟಿ ಚೇರ್ಮನ್ ಮತ್ತು ನಂತರ ಸದಸ್ಯ, ಯೋಜನಾ ಆಯೋಗ (1980-82), ಫಿಲಿಪೈನ್ಸ್‌ನ ಇಂಟರ್‌ನ್ಯಾಷನಲ್‌ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಡೈರೆಕ್ಟರ್ ಜನರಲ್ (1982-88) ಆಗಿ ಸೇವೆ ಸಲ್ಲಿಸಿದ್ದರು.

2004ರಲ್ಲಿ, ಸ್ವಾಮಿನಾಥನ್ ಅವರನ್ನು ರೈತರ ಕುರಿತ ರಾಷ್ಟ್ರೀಯ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ರೈತರ ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಅವರ ಸಂಕಷ್ಟಗಳನ್ನು ಪರಿಶೀಲಿಸಲು ಆಯೋಗವನ್ನು ಸ್ಥಾಪಿಸಲಾಗಿತ್ತು. ಆಯೋಗವು 2006ರಲ್ಲಿ ವರದಿಯನ್ನು ಸಲ್ಲಿಸಿತು. ಕನಿಷ್ಠ ಬೆಂಬಲ ಬೆಲೆ (MSP) ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಹೆಚ್ಚಿರಬೇಕು ಎಂದು ವರದಿ ಸೂಚಿಸಿತ್ತು.

ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ

ಸ್ವಾಮಿನಾಥನ್ ಅವರು 1979 ಮತ್ತು 1980ರಲ್ಲಿ ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1980ರಿಂದ 1982ರವರೆಗೆ ಭಾರತದ ಯೋಜನಾ ಆಯೋಗದಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ಉಸ್ತುವಾರಿ ವಹಿಸಿದ್ದರು.

ಗೋಧಿ ತಳಿಯ ಬಗ್ಗೆ ಸಂಶೋಧನೆ

1950ರ ದಶಕದಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಯುವ ವಿಜ್ಞಾನಿಯಾಗಿದ್ದ ಸ್ವಾಮಿನಾಥನ್ ಅವರು ಡಾ. ನಾರ್ಮನ್ ಬೋರ್ಲಾಗ್ ಅವರ ಹೊಸದಾಗಿ ಅಭಿವೃದ್ಧಿಪಡಿಸಿದ ಮೆಕ್ಸಿಕನ್ ಕುಬ್ಜ ಗೋಧಿ ತಳಿಯ ಬಗ್ಗೆ ತಿಳಿದುಕೊಂಡಿದ್ದರು. ಈ ಬಗ್ಗೆ ಆಸಕ್ತರಾದ ಅವರು ಹೆಚ್ಚಿನ ಸಂಶೋಧನೆಗಾಗಿ ಡಾ. ನಾರ್ಮನ್ ಬೋರ್ಲಾಗ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು. ಬಳಿಕ ಇಬ್ಬರು ವಿಜ್ಞಾನಿಗಳು ಗೋಧಿ ಪ್ರಭೇದಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದ್ದರು. ಈ ತಳಿ ಹೆಚ್ಚಿನ ಇಳುವರಿ ನೀಡುತ್ತದೆ ಮತ್ತು ಸಾಕಷ್ಟು ಬಲವಾದ ಕಾಂಡದ ರಚನೆಗಳನ್ನು ಹೊಂದಿದೆ. ಇದು ಭಾರತದ ಕೃಷಿ ಲೋಕದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತು. ನಾಲ್ಕು ಋತುಗಳಲ್ಲಿ ಗೋಧಿಯ ಒಟ್ಟು ಬೆಳೆ ಇಳುವರಿಯನ್ನು 12 ಮಿಲಿಯನ್ ಟನ್‌ಗಳಿಂದ 23 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸುವ ಮೂಲಕ ಧಾನ್ಯ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕೊನೆಗೊಳಿಸಿತು.

ವಿವಿಧ ಪ್ರಶಸ್ತಿ

ಸ್ವಾಮಿನಾಥನ್ ಅವರ ಕೊಡುಗೆಯನ್ನು ಪರಿಗಣಿಸಿ ಹಲವು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಭಾರತದಲ್ಲಿ ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಅಕ್ಕಿ ತಳಿಗಳ ಪರಿಚಯವನ್ನು ಅಭಿವೃದ್ಧಿಪಡಿಸಲು ಮತ್ತು ಮುನ್ನಡೆಸಿದ್ದಕ್ಕಾಗಿ ಅವರು 1987ರಲ್ಲಿ ಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ಪಡೆದರು. 1971ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1986ರಲ್ಲಿ ಆಲ್ಬರ್ಟ್ ಐನ್‌ಸ್ಟೈನ್ ವರ್ಲ್ಡ್ ಸೈನ್ಸ್ ಪ್ರಶಸ್ತಿಯನ್ನು ಸ್ವಾಮಿನಾಥನ್‌ ಅವರಿಗೆ ನೀಡಲಾಗಿತ್ತು. 1967ರಲ್ಲಿ ಪದ್ಮಶ್ರೀ, 1972ರಲ್ಲಿ ಪದ್ಮಭೂಷಣ ಮತ್ತು 1989ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿತ್ತು. ಇದೀಗ ಭಾರತ ರತ್ನ ಪ್ರಶಸ್ತಿ ಅವರಿಗೆ ಸಂದಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಲೇಖನ: ಭಾರತದ ಆಧುನಿಕ, ಪ್ರಗತಿಪರ ಕೃಷಿಗೆ ಎಂ ಎಸ್ ಸ್ವಾಮಿನಾಥನ್ ಅಡಿಪಾಯ

Continue Reading
Advertisement
Suryakumar Yadav
ಕ್ರೀಡೆ2 mins ago

SuryaKumar Yadav : ಮುಂಬೈ ತಂಡಕ್ಕೆ ಮತ್ತಷ್ಟು ಸಂಕಷ್ಟ; ಸೂರ್ಯಕುಮಾರ್​ ಸೇರ್ಪಡೆ ಅನುಮಾನ

modi
ದೇಶ11 mins ago

ಇತರರನ್ನು ಬೆದರಿಸುವುದು ಕಾಂಗ್ರೆಸ್‌ನ ಸಂಸ್ಕೃತಿ; ಮುಖ್ಯ ನ್ಯಾಯಮೂರ್ತಿಗೆ ಬರೆದ ವಕೀಲರ ಪತ್ರಕ್ಕೆ ಮೋದಿ ಪ್ರತಿಕ್ರಿಯೆ

Lok Sabha Election 202426 mins ago

Lok Sabha Election 2024: ಕೋಲಾರ ಕಾಂಗ್ರೆಸ್‌ ಗಲಾಟೆಗೆ ಸಿಎಂ, ಡಿಸಿಎಂ ಟ್ರೀಟ್ಮೆಂಟ್‌! ತಣ್ಣಗಾದ ರಮೇಶ್‌ ಕುಮಾರ್‌, ಮುನಿಯಪ್ಪ ಬಣ

Health Tips
ಬೆಂಗಳೂರು30 mins ago

Health Tips : ಬೇಸಿಗೆಯಲ್ಲಿ ಲೈಫ್‌ಸ್ಟೈಲ್‌ ಹೇಗಿರಬೇಕು? ಆರೋಗ್ಯ ಇಲಾಖೆಯಿಂದ ಸರಳ ಸೂತ್ರ

Anurag Thakur
ಕ್ರೀಡೆ34 mins ago

Anurag Thakur : 2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್​​; ಅನುರಾಗ್ ಠಾಕೂರ್​

Side Effects Of Pillow
ಆರೋಗ್ಯ46 mins ago

Side Effects Of Pillow: ಎತ್ತರದ ದಿಂಬು ಬಳಸುತ್ತೀರಾ? ಸಮಸ್ಯೆ ತಪ್ಪಿದ್ದಲ್ಲ!

Naveen Polishetty
ಸಿನಿಮಾ51 mins ago

Naveen Polishetty: ಅಮೆರಿಕದಲ್ಲಿ ಬೈಕ್‌ ಅಪಘಾತ; ಅನುಷ್ಕಾ ಶೆಟ್ಟಿ ಜತೆ ತೆರೆ ಹಂಚಿಕೊಂಡಿದ್ದ ನಟನಿಗೆ ಗಾಯ

Hardik Pandya
ಕ್ರೀಡೆ1 hour ago

Hardik Pandya : ಹೈದರಾಬಾದ್​ನಲ್ಲೂ ಪಾಂಡ್ಯಗೆ ಕಾಟ ಕೊಟ್ಟ ಕ್ರಿಕೆಟ್​ ಪ್ರೇಕ್ಷಕರು

money guide
ಮನಿ-ಗೈಡ್1 hour ago

Money Guide: ಗಮನಿಸಿ; ಏ. 1ರಿಂದ ಬದಲಾಗುತ್ತವೆ ಈ ಎಲ್ಲ ಹಣಕಾಸು ನಿಯಮಗಳು

IPL 2024-CSKRCB
ಕ್ರೀಡೆ1 hour ago

IPL 2024 : ವೀಕ್ಷಣೆಯಲ್ಲಿ ದಾಖಲೆ ಬರೆದ ಚೆನ್ನೈ- ಆರ್​ಸಿಬಿ ಮ್ಯಾಚ್​!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20245 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20246 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ14 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌