Krishi Khajane chrysanthemum farming Yield Profit and read more in kannadaKrishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ! - Vistara News

ಕೃಷಿ

Krishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!

Krishi Khajane : ನೋಡಲು ತುಂಬಾ ಸುಂದರವಾಗಿರುವ, ಲಕ್ಷ್ಮೀ ಪೂಜೆಗೆ ಶ್ರೇಷ್ಠವಾದ ಸೇವಂತಿಗೆ ಹೂವಿನ ಬೇಸಾಯ ಸುಲಭ ಮತ್ತು ಹೆಚ್ಚಿನ ಆದಾಯ ನಿರೀಕ್ಷಿಸಬಹುದು. ಈ ಹೂವಿನ ಕೃಷಿ ಕುರಿತು ಮಾಹಿತಿ ನೀಡುವ ವಿಡಿಯೋ ಇಲ್ಲಿದೆ.

VISTARANEWS.COM


on

Sevanthige Flower Farming
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಸೇವಂತಿಗೆ ಹೂವು ನೋಡಲು ಬಹಳ ಸುಂದರ. ಹೀಗಾಗಿಯೇ ಈ ಹೂವನ್ನು ದೇವರ ಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬಿಳಿ ಸೇವಂತಿಗೆ ಹೂವು ಲಕ್ಷ್ಮೀ ದೇವಿಯ ಪೂಜೆಗೆ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಇದನ್ನು ಔಷಧವಾಗಿಯೂ ಬಳಸುವುದು ಉಂಟು. ಒಂದು 1 ಎಕರೆಯಲ್ಲಿ ಬಿಳಿ ಸೇವಂತಿಗೆ ಬೆಳೆದು 5 ಲಕ್ಷ ರೂ. ಲಾಭ ಗಳಿಸಬಹುದು ಎನ್ನುತ್ತಾರೆ ರೈತರು. ಈ ಸೇವಂತಿಗೆಯ ಕೃಷಿ ಕುರಿತು ಮಾಹಿತಿ ನೀಡುವ ವಿಡೀಯೋ ಇಲ್ಲಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ಸೇವಂತಿಗೆ ಬೆಳೆಯುತ್ತಿರುವ ಕೋಲಾರ ಜಿಲ್ಲೆಯ ಕೃಷ್ಣಾಪುರದ ರೈತ ಕೆ.ಎಂ. ರಾಜಣ್ಣ ಅವರಿಂದಲೂ ಪಡೆಯಬಹುದು. ಅವರ ಮೊಬೈಲ್‌ ನಂ. 94484 482
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

ವಿಸ್ತಾರ ಗ್ರಾಮ ದನಿ: ಅಡಿಕೆ ವಿಚಾರ ಬಂದಾಗ ಜನಪ್ರತಿನಿಧಿಗಳು ಕೈಕಟ್ಟಿಕೊಂಡು ಮೌನವಾಗುವುದೇಕೆ?

ಅನೇಕ ಕಳ್ಳ ಮಾರ್ಗದಲ್ಲಿ ಅಡಿಕೆ ದೇಶದೊಳಗೆ ನುಗ್ಗಿ ಇಲ್ಲಿ ಬೆಳೆದ ರೈತರಿಗೆ ಸಮಸ್ಯೆ ಆಗುತ್ತಿದ್ದರೂ, ಅಡಿಕೆ ಸಹಕಾರಿ ಸಂಘಗಳು ನೇರ ಸಂಬಂಧಿತ ಮಂತ್ರಿಗಳಿಗೆ ಅಡಿಕೆ ಕಳ್ಳ ಆಮದನ್ನು ತಡೆಯುವಂತೆ ಮನವಿ ಕೊಡುತ್ತಿದ್ದರೂ… ಅಡಿಕೆ ಬೆಳೆಯುವ 17 ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ತುಟಿ ಪಿಟಿಕ್ ಅನ್ನುವುದಿಲ್ಲ ಏಕೆ?

VISTARANEWS.COM


on

Areca Nut
Koo

| ಅರವಿಂದ ಸಿಗದಾಳ್, ಮೇಲುಕೊಪ್ಪ
ಕಳಪೆ ಅಡಿಕೆಯ ಕಳ್ಳ ಆಮದು ವಿರುದ್ಧ ಇತ್ತೀಚೆಗೆ ಕ್ಯಾಂಪ್ಕೋ, ಮ್ಯಾಮ್‌ಕೋಸ್ ಸಹಾಕಾರಿ ಸಂಸ್ಥೆಗಳವರೆಲ್ಲ ಒಟ್ಟಿಗೆ ದಿಲ್ಲಿಗೆ ಹೋಗಿ ಮನವಿ ಸಲ್ಲಿಸಿ ಭರವಸೆ ಪಡೆದು ಬಂದರು.
“ಇರಿ, ನಾವು ಬರ್ತೀವಿ. ಒಟ್ಟಿಗೆ ಹೋಗೋಣ” ಅಂತ ಎಲ್ಲ 17 ಅಡಿಕೆ ಜಿಲ್ಲೆಗಳ ಸಂಸದರು ಜೊತೆಗೂಡಬಹುದಿತ್ತು. “ತಡಿರಿ, ನಾವೂ ಬರ್ತೀವಿ ‘ನಮ್ಮ ಅಡಿಕೆ ನಮ್ಮ ಹಕ್ಕು'” ಅಂತ ಹೇಳಿ ಅದೇ 17 ಅಡಿಕೆ ಬೆಳೆಯುವ ಜಿಲ್ಲೆಯ ಎಲ್ಲ ಶಾಸಕರೂ ಕೈ ಸೇರಿಸಬಹುದಿತ್ತು.
ಉಹೂಂ, ಅದ್ಯಾವದನ್ನೂ ಮಾಡುವ ಮನಸ್ಸನ್ನು ಶಾಸಕರು, ಸಂಸದರು, ಮಂತ್ರಿಗಳು ಮಾಡುತ್ತಿಲ್ಲ. ಅನೇಕ ತಿಂಗಳುಗಳಿಂದ ಈ ಅಡಿಕೆ ಕಳ್ಳ ಆಮದು (Areca Nuts Smuggling) ಆಗುತ್ತಿರುವ ಸುದ್ದಿ ಪ್ರಕಟವಾಗುತ್ತಿದೆ. ಯಾಕೆ ಅಡಿಕೆ ಸಮಸ್ಯೆಗಳ ವಿಚಾರದಲ್ಲಿ ಎಲ್ಲಾ ಜನಪ್ರತಿನಿಧಿಗಳು ನಿಷ್ಕ್ರಿಯರಾಗುತ್ತಿದ್ದಾರೆ? ನಿರ್ಲಕ್ಷ್ಯ ತೋರಿಸುತ್ತಿದ್ದಾರೆ? ಬೇರೆ ವಿಚಾರಗಳಲ್ಲಿ ಗಂಟಲು ಹರಿಯುವಷ್ಟು ಕೂಗಾಡುವ, ಕಿರುಚಾಡುವ ಅನೇಕ ಜನ ಪ್ರತಿನಿಧಿಗಳು ಅಡಿಕೆ ಸಮಸ್ಯೆ ವಿಚಾರ ಬಂದಾಗ ಸತ್ತವರ ಮನೆಯಲ್ಲಿ ಕೈಕಟ್ಟಿಕೊಂಡು ನಿಂತವರ ರೀತಿ ಮೌನವಾಗುವುದೇಕೆ!!?

ಒಂದೋ ಎರಡೋ ಪ್ರಕರಣ ಅಲ್ಲ

ಕಳ್ಳ ದಾರಿಯಲ್ಲಿ ಅಡಿಕೆ ಆಮದು ಆಗಿದ್ದು ಒಂದೋ ಎರಡೋ ಪ್ರಕರಣ ಅಲ್ಲ. ಕೆಲವು ತಿಂಗಳುಗಳಿಂದ ಅನೇಕ ಪ್ರಕರಣಗಳು ಸುದ್ದಿ ಆಗುತ್ತಲೇ ಇದೆ. ಡ್ರೈ ಫ್ರೂಟ್ಸ್ ಹೆಸರಲ್ಲಿ ಕಡಿಮೆ ದರ, ಕಡಿಮೆ ಕಸ್ಟಮ್ಸ್ ಡ್ಯೂಟಿಯಲ್ಲಿ ಅಡಿಕೆ ಭಾರತದ ಒಳಗೆ ಬರ್ತಾ ಇದೆ ಎಂದು ಸುದ್ದಿಗಳು ಆಗುತ್ತಿವೆ. ನೇರ ಬಂದರಿಗೆ ಕಳ್ಳ ದಾಖಲಾತಿಗಳೊಂದಿಗೆ ಅಡಿಕೆ ಆಮದಾಗುತ್ತಿದೆ ಅಂತಲೂ ವರ್ತಮಾನ ಪ್ರಕಟವಾಗುತ್ತ ಇದೆ. ಆಮದು ಆದ ಅಡಿಕೆ ಸೀಜ್ ಆಗುತ್ತೆ. ಅದನ್ನು ಕಡಿಮೆ ಬೆಲೆಯಲ್ಲಿ ಹರಾಜು ಹಾಕಲಾಗುತ್ತಂತೆ!! ಇಲ್ಲಿಯ ವರ್ತಕರು ಅದನ್ನು ಕಡಿಮೆ ಬೆಲೆಗೆ ಹರಾಜು ಹಿಡಿಯುತ್ತಾರಂತೆ. ಇದಲ್ಲದೆ ಈಶಾನ್ಯ ರಾಜ್ಯಗಳ ಗಡಿಯಿಂದಲೂ ರಾಜಾರೋಷವಾಗಿ ಅಡಿಕೆ ಕಳ್ಳಸಾಗಾಣಿಯಾಗಿ ಬರುತ್ತಿದೆ ಅಂತ ಅಲ್ಲಿನ ಮುಖ್ಯ ಮಂತ್ರಿಗಳೇ ಕೇಂದ್ರಕ್ಕೆ ಮಾಹಿತಿ ಕೊಡುತ್ತಿದ್ದಾರೆ.

ಇದನ್ನೂ ಓದಿ | Women’s Day 2024: ಮನೆಯ ಕಸದಿಂದ ಗೊಬ್ಬರ ತಯಾರಿಸುವ ಯಂತ್ರ; ಇದು ಮಹಿಳೆಯೊಬ್ಬರ ಆವಿಷ್ಕಾರ!

ಜನಪ್ರತಿನಿಧಿಗಳ ಮೌನ ಏಕೆ?

ಇಷ್ಟೆಲ್ಲ ಆಗುತ್ತಿದ್ದರೂ ಅಡಿಕೆ ಬೆಳೆಯುವ ಕರ್ನಾಟಕದ 17 ಜಿಲ್ಲೆಗಳ ಶಾಸಕರು, ಸಂಸದರು ಘನ ಮೌನವಹಿಸುವುದೇಕೆ!!? ಸ್ಪರ್ಧಾತ್ಮಕವಾಗಿ ಅಥವಾ ಎಲೆಕ್ಷನ್ ಸಮಯವಾದ ದಿನ ಮನದಲ್ಲಿ ರಾಜಕೀಯವಾಗಿ ಪಕ್ಷಗಳ ಗೆಲುವಿನ ಹಿತಾಸಕ್ತಿ ಇಟ್ಕೊಂಡಾದರೂ ಸರಿ, ಎಲ್ಲ 17 ಅಡಿಕೆ ಜಿಲ್ಲೆಗಳ ಕೇಂದ್ರ ಸಂಸದರು, ರಾಜ್ಯ ಶಾಸಕರು ಒಟ್ಟಾಗಿ ಧ್ವನಿ ಎತ್ತಬಾರದಾ?

ಮಾಧ್ಯಮಗಳೇ ದನಿ ಎತ್ತಬೇಕಾ?

ಹೋಟೆಲ್‌ನಲ್ಲಿ ಬಾಂಬ್‌ ಚೀಲ ಇಟ್ಟು ಹೋಗುವ ರೀತಿಯಲ್ಲಿ ದೇಶದ ಪೋರ್ಟ್‌ಗೆ ಅಕ್ರಮ ಅಡಿಕೆ ಮೂಟೆಗಳು ಬಂದು ಬೀಳುತ್ತಿವೆ ಅಂತಾದರೆ, ಅದಕ್ಕೂ ಮೀಡಿಯಾದವರೇ ಡಿಬೇಟ್ ಮಾಡಬೇಕಾ? ಪತ್ರಿಕೆಗಳೇ ದಪ್ಪಕ್ಷರದ ಸುದ್ದಿ ಮಾಡಿ ಸರಕಾರಗಳ ಗಮನ ಸೆಳೆಯಬೇಕಾ? ಇಂಪೋರ್ಟ್ ವ್ಯವಸ್ಥೆಯಲ್ಲಿ ಸಿಸಿ ಕ್ಯಾಮೆರಾ, ಫುಟೇಜು, FSL, ಎಕ್ಸಿಮ್ ಪಾಲಿಸಿ, ಕಾನೂನುಗಳು ಇರೋದಿಲ್ವಾ? ಜನಪ್ರತಿನಿಧಿಗಳಿಗೆ, ಶಾಸಕ ಸಚಿವರುಗಳಿಗೆ ಅವುಗಳ ಬಗ್ಗೆ ಗಮನವಿರುವುದಿಲ್ವಾ? ಅರಿವಿರುವುದಿಲ್ಲವಾ? ಇರಬೇಕಾಗಿಲ್ವಾ!!?

ಕ್ರಿಯಾ ಯೋಜನೆಯನ್ನು ರೂಪಿಸಬಾರದಾ?

ಅನೇಕ ಕಳ್ಳ ಮಾರ್ಗದಲ್ಲಿ ಅಡಿಕೆ ದೇಶದೊಳಗೆ ನುಗ್ಗಿ ಇಲ್ಲಿ ಬೆಳೆದ ರೈತರಿಗೆ ಸಮಸ್ಯೆ ಆಗುತ್ತಿದ್ದರೂ, ಆ ವಿಚಾರಗಳು ಮೀಡಿಯಾದಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತಿದ್ದರೂ, ಅಡಿಕೆ ಸಹಕಾರಿ ಸಂಘಗಳು ನೇರ ಸಂಬಂಧಿತ ಮಂತ್ರಿಗಳಿಗೆ ಅಡಿಕೆ ಕಳ್ಳ ಆಮದನ್ನು ತಡೆಯುವಂತೆ ಮನವಿ ಕೊಡುತ್ತಿದ್ದರೂ… ಅದೇ ಅಡಿಕೆ ಬೆಳೆಯುವ 17 ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ತುಟಿ ಪಿಟಿಕ್ ಅನ್ನುವುದಿಲ್ಲ ಏಕೆ? ಕಳ್ಳ ದಾರಿಯಲ್ಲಿನ ಅಡಿಕೆ ಆಮದನ್ನು ತಡೆಯುವ ಒಂದು ಕ್ರಿಯಾ ಯೋಜನೆಯನ್ನು ರೂಪಿಸಬಾರದಾ? ಪಕ್ಷಾತೀತವಾಗಿ ಅಡಿಕೆ ಬೆಳೆಯುವ 17 ಜಿಲ್ಲೆಗಳ ಸಂಸದರು, ಶಾಸಕರು, ಮಂತ್ರಿಗಳು ಒಟ್ಟಾಗಿ ಅಕ್ರಮ ಅಡಿಕೆ ಆಮದನ್ನು ತಡೆಯುವುದಕ್ಕೆ ಏನಾದರು ಮಾಡಬಾರದಾ?

ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇಲ್ವಾ? ಆಸಕ್ತಿ ಇಲ್ವಾ? ತಡೆಯುವ ಅಧಿಕಾರ ಇಲ್ವಾ? ರೈತರ ಸಮಸ್ಯೆ ಅರ್ಥವೇ ಆಗ್ತಾ ಇಲ್ವಾ? ಅಥವಾ ಮೀಡಿಯಾಗಳು, ಜಾಲತಾಣಗಳು, ಅಡಿಕೆ ಸಹಕಾರಿ ಸಂಘಗಳು ಸುಳ್ಳು ಹೇಳುತ್ತಿವೆ ಅಂತ ಜನ ಪ್ರತಿನಿಧಿಗಳು ಭಾವಿಸಿದ್ದಾರಾ? ಇಲ್ಲಾ, “ಮೀಡಿಯಾಗಳು, ಜಾಲತಾಣಗಳು, ಅಡಿಕೆ ಸಹಕಾರಿ ಸಂಘಗಳು ಮತ್ತು ಅಡಿಕೆ ಬೆಳೆಗಾರರೇ ಹೋರಾಟ ಮಾಡಿ ಸರಿ ಮಾಡಿಕೊಳ್ಳುತ್ತಾರೆ, ನಮಗ್ಯಾಕೆ?” ಅಂತ ಅಡಿಕೆ ನಾಡಿನ ಜನಪ್ರತಿನಿಧಿಗಳ ಅಂತರಂಗದ ಭಾವನೆಯಾ? ಇದು ಅಡಿಕೆ ಕಳ್ಳ ಆಮದಿನ ವಿಷಯದಲ್ಲಿ ಮಾತ್ರ ಅಲ್ಲ, ಅಡಿಕೆಯ ಎಲ್ಲ ಸಮಸ್ಯೆಗಳ ವಿಚಾರದಲ್ಲೂ ರಾಜಕಾರಣಿಗಳ ಮನಸ್ಥಿತಿ ಹೀಗೆ ಇದೆ ಎಂಬಂತೆ ಕಾಣಿಸುತ್ತಿದೆ!

ಜನಪ್ರತಿನಿಧಿಗಳೇ ಕೇಳಿ

ಆತ್ಮೀಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳೇ, ಅಡಿಕೆ ಬೆಳೆಗಾರರು ಹೆದರುತ್ತಲೇ (ಅಡಿಕೆ ಸಮಸ್ಯೆಗಳಿಂದ ಜರ್ಜರಿತರಾಗಿ ಹೆದರಿ) ಕೇಳುವ ಇದೊಂದು ಧೈರ್ಯದ ಪ್ರಶ್ನೆಗೆ ನಾಡಿದ್ದು ಪ್ರಿಂಟೆಡ್ ಪ್ರಣಾಳಿಕೆ ಹಿಡ್ಕೊಂಡು, ಕೈ ಮುಗಿದು, ಗುಂಪುಗೂಡಿಕೊಂಡು ಬರುವಾಗ ಈ ಅಡಿಕೆ ಸಮಸ್ಯೆಗಳಿಗೆ ಪರಿಹಾರದ ಉತ್ತರಗಳನ್ನು ಅದೇ ಪ್ರಣಾಳಿಕೆಯ ಜೊತೆ ಸೇರಿಸಿ ತನ್ನಿ. ಅದನ್ನು ಮನೆಯಲ್ಲಿ ಕೊಟ್ಟಿರಿ. ಮನೆಯಲ್ಲಿ ಯಾರೂ ಇಲ್ಲದಿದ್ದರೆ… ಬಾಗಿಲು ಚಿಲಕದಲ್ಲಿ ಸಿಕ್ಕಿಸಿಡಿ!
ಬಹುತೇಕ ರೈತರು ಆ ಸಮಯದಲ್ಲಿ ಮನೆಯಲ್ಲಿ ಇಲ್ಲದಿರಬಹುದು! ಗುಮ್ಮೆಯ ತಳದಲ್ಲಿರುವ ಚೊಂಬು ನೀರನ್ನು ನಾಲ್ಕು ಅಡಿಕೆ ಮರಕ್ಕೆ ಹಂಚಿ ಹಾಕಲು ತೋಟಕ್ಕೆ ಹೋಗಿರಬಹುದು! ಅಥವಾ ಫ್ರೂಟ್ ಐಡಿ, ಬೆಳೆಸರ್ವೆ, ಆಧಾರ್-ಪಹಣಿ ಸೀಡಿಂಗ್, NPCI, KYC ಅಪ್‌ಡೇಷನ್, HSRP, ಪದೇಪದೆ ತಿರುಗಬೇಕಾದ ಪೋಡಿ, ಕಾಂಪ್ಲಿಕೇಟೆಡ್ ವಂಶವೃಕ್ಷ, ಇದ್ದಕ್ಕಿದ್ದಂತೆ ಪಹಣಿಯಲ್ಲಿ ಬೆಳೆ ಕಾಲಮ್‌‌ನಲ್ಲಿದ್ದ ಮಾಯವಾದ ಅಡಿಕೆ, ಸಿಗದ ಇಂಟರ್‌ನೆಟ್, ಸತಾಯಿಸುವ ನೆಟ್ವರ್ಕ್….. ನಂತಹ ನಿತ್ಯ ಜಂಜಾಟ ಹಿಡ್ಕೊಂಡು ಪ್ಯಾಟಿಗೆ ಹೋಗಿರಬಹುದು!

ಒಂದಿಷ್ಟು ಪರಿಹಾರಗಳನ್ನು ತನ್ನಿ

ಮತಭಿಕ್ಷೆಗೆ ಬರುವಾಗ, ರೈತರ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರಗಳನ್ನು ತನ್ನಿ. ತೀರ ಬಿಸಿಲು ಹೊತ್ತಲ್ಲಿ ಬರಬೇಡಿ!! ಅನೇಕ ರೈತರ ಮನೆಗಳಲ್ಲಿ ತೋಟಕ್ಕೆ ಬಿಡಿ, ಕುಡಿಯೋದಕ್ಕೂ ನೀರಿನ ಅಭಾವ ಅನ್ನುವ ಪರಿಸ್ಥಿತಿ ನಿರ್ಮಾಣ ಆಗ್ತಾ ಇದೆ. ನೀವು ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಹೊತ್ತು ತುಂಬ ಜನ ಒಟ್ಟಿಗೆ ಬಂದಾಗ ಬಾಯಾರಿದ ನಿಮಗೆ ನೀರು ಕೊಡೋದಕ್ಕೂ ಆಗ್ತಾ ಇಲ್ವಲ್ಲ ಅನ್ನುವ ಭಾವ ರೈತರಿಗೆ ಬರೋದು ಬೇಡ! ಇನ್ಮುಂದೆ ಭರವಸೆ, ಗ್ಯಾರಂಟಿ, ಆಶ್ವಾಸನೆ, ಕುಕ್ಕರ್, ನೋಟು, ಪ್ಯಾಕೇಟು ಯಾವುದೂ ಬೇಡ.

ಇದನ್ನೂ ಓದಿ | Raja Marga Column : ಈ ಹೆಣ್ಮಕ್ಕಳು ಜಗತ್ತಿನ ಮಹಾನ್ ಪವರ್‌ ಹೌಸ್‌ಗಳು

ಅಡಿಕೆ ಎಲೆ ಚುಕ್ಕಿ ರೋಗ, ಅಡಿಕೆ YLD, ಅಡಿಕೆ ಕಳ್ಳ ಆಮದು, ಅಡಿಕೆ ಹಾನಿಕಾರಕ, ಅಡಿಕೆ ದರ ಇಳಿತ, ಅಡಿಕೆಗೆ ಮಂಗನ ಕಾಟ, ಅಡಿಕೆ ಮರ ಕಡಿಯುವ ಕಾಡುಕೋಣ, ಅಡಿಕೆ ಮೋಟರ್‌ಗೆ ಕರೆಂಟು, ಸಬ್ಸಿಡಿ ಮೋಸ, ಅಡಿಕೆ ತೋಟಕ್ಕೆ ಬಂದ ಬರ… ಇತ್ಯಾದಿಗಳ ಭೀಕರತೆಯ ಸಮಸ್ಯೆಗಳಿಗೆ ನೀವು ಅಧಿಕೃತ ಪರಿಹಾರದ ಉತ್ತರದೊಂದಿಗೆ ಬರ್ತೀರಿ ಎಂಬ ನಂಬಿಕೆಯ ಮನಸ್ಥಿತಿ ಈಗಲೂ ರೈತರಲ್ಲಿ ಸಾಸಿವೆ ಕಾಳಷ್ಟಾದರೂ ಇದೆ!!

ಅಡಿಕೆ ಅಕ್ರಮ ಆಮದು ತಡೆಯಲು ಕೇಂದ್ರ ಸಚಿವರಿಗೆ ಮನವಿ

ಭಾರತಕ್ಕೆ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದರಿಂದ ಅಡಿಕೆ ಬೆಲೆ ಮತ್ತು ಬೆಳಗಾರರ ಮೇಲೆ ಆಗುತ್ತಿರುವ ದುಷ್ಪರಿಣಾಮದ ಕುರಿತು ನವದೆಹಲಿಯಲ್ಲಿ ಇತ್ತೀಚೆಗೆ ಕೇಂದ್ರ ಗೃಹಖಾತೆ ರಾಜ್ಯ ಸಚಿವರಾದ ನಿತ್ಯಾನಂದ ರೈ ಅವರನ್ನು ಅಡಿಕೆ ಸಹಕಾರ ಸಂಘಗಳ ಮಹಾಮಂಡಲದ ನೇತೃತ್ವದಲ್ಲಿ ಭೇಟಿ ಮಾಡಿ ಅಕ್ರಮ ಆಮದನ್ನು ತಡೆಗಟ್ಟಲು ವಿನಂತಿಸಲಾಯಿತು. ನಿಯೋಗದಲ್ಲಿ ಎಚ್.ಎಸ್.ಮಂಜಪ್ಪ, ಹೊಸಬಾಳೆ, ಅಧ್ಯಕ್ಷರು ಕ್ರ್ಯಾಮ್, ಸುಬ್ರಹ್ಮಣ್ಯ ಯಡಗೆರೆ, ನಿರ್ದೇಶಕರು, ಮಾಮ್ ಕೋಸ್/ಅಧ್ಯಕ್ಷರು, ಮಹಾಮಂಡಲ, ಇಂಧೂದರಗೌಡ, ಅಧ್ಯಕ್ಷರು, ಆಪ್ಕೋಸ್, ಸಾಗರ, ಶ್ರೀಕಾಂತ್ ಬರುವೆ, ವ್ಯವಸ್ಥಾಪಕ ನಿರ್ದೇಶಕರು, ಮಾಮ್ ಕೋಸ್, ವಿಜಯಾನಂದ ಭಟ್, ಪ್ರಧಾನ ವ್ಯವಸ್ಥಾಪಕರು , ಟಿಎಸ್ಎಸ್, ಶಿರಸಿ ಇವರು ಉಪಸ್ಥಿತರಿದ್ದರು.

Continue Reading

ಬೆಂಗಳೂರು

CM Siddaramaiah : ರೈತ ವಿರೋಧಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ; ಸಿದ್ದರಾಮಯ್ಯ ಭರವಸೆ

CM Siddaramaiah : ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಅವರು ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

VISTARANEWS.COM


on

CM Siddaramaiah Pro Nanjundaswamy
Koo

ಬೆಂಗಳೂರು: ರೈತರು ನೀಡಿದ ಹಕ್ಕೊತ್ತಾಯಗಳನ್ನು (Demands of Farmers) ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ “ಭೂ ಸುಧಾರಣಾ ಕಾಯ್ದೆ 2020″ಕ್ಕೆ (Land Reform Act 2020) ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಫ್ರೀಡಂ ಪಾರ್ಕ್ ನಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರೈತ ಸಮಾವೇಶವನ್ನು ಉದ್ಘಾಟಿಸಿದ ಬಳಿಕ ರೈತ ಪರ ಬಜೆಟ್ ರೂಪಿಸಲು ರೈತ ಸಂಘ ನೀಡಿದ ಹಕ್ಕೊತ್ತಾಯಗಳನ್ನು ಸ್ವೀಕರಿಸಿ ಮಾತನಾಡಿದರು.

CM Siddaramaiah Pro Nanjundaswamy

ನಂಜುಂಡಸ್ವಾಮಿಯವರು ಸಂಘಟಿಸಿದ ಸ್ಟಡಿ ಸರ್ಕಲ್ ಮೂಲಕ ಹಲವು ವಿಚಾರಗಳ ಒಳನೋಟ ದೊರೆಯಿತು. ಸಮಾಜವಾದಿ ಆರ್ಥಿಕತೆ, ಸಮಾಜವಾದಿ ರಾಜಕಾರಣದ ಬಗ್ಗೆ ಸ್ಪಷ್ಟತೆ ಸಿಕ್ಕಿತು. ಈ ಸ್ಟಡಿ ಸರ್ಕಲ್ ಗೆ ಬಹಳ ಮಂದಿ ಉಪನ್ಯಾಸಕರು, ಪ್ರೊಫೆಸರ್ ಗಳು, ಸಾಹಿತಿಗಳು ಬರುತ್ತಿದ್ದರು. ಇವರೆಲ್ಲರ ಮಾರ್ಗದರ್ಶನ ನನಗೆ ಅನುಕೂಲವಾಯಿತು ಎಂದರು.

ನಂಜುಂಡಸ್ವಾಮಿಯವರು ಕಡೆಯವರೆಗೂ ರೈತರ ಪರವಾಗಿ ಕ್ರಿಯಾಶೀಲವಾಗಿದ್ದರು. ಸಮಾಜವಾದಿ ಆಶಯಗಳ ಪರವಾಗಿದ್ದ ಇವರು ಬೆಳೆಸಿದ ರೈತ ಚಳವಳಿ ರೈತರ ಸಮಸ್ಯೆ ಪರಿಹಾರಕ್ಕೆ ಆಸರೆ ಆಯಿತು. ರೈತ ಹೋರಾಟ ಮತ್ತು ರೈತ ಸಮಾವೇಶಗಳಲ್ಲಿ ಭಾಗವಹಿಸುವುದು ನನಗೂ ಬಹಳ ಸಂತಸ ಮತ್ತು ಹೆಮ್ಮೆಯ ವಿಷಯ. ನಂಜುಂಡಸ್ವಾಮಿ ಮತ್ತು ರೈತ ಹೋರಾಟ ಸಮಾಜ ಮತ್ತು ಸರ್ಕಾರಗಳ ಮೇಲೆ ಪರಿಣಾಮ ಬೀರಿದೆ ಎಂದರು. ನಂಜುಂಡ ಸ್ವಾಮಿಯವರ ರೈತ ಹೋರಾಟ ನನಗೆ ರಾಜಕೀಯ ಪ್ರೇರಣೆ ಎಂದು ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.

CM Siddaramaiah Pro Nanjundaswamy

ಇದನ್ನೂ ಓದಿ : CM Janaspandana: ಒಂದು ತಿಂಗಳೊಳಗೆ ಜನ ಸ್ಪಂದನೆ ಅರ್ಜಿ ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಬಡಗಲಾಪುರ ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದ ರೈತ ಸಮಾವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಆಳಂದ ಶಾಸಕ ಬಿ.ಆರ್. ಪಾಟೀಲ್, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ದಲಿತ ಮುಖಂಡ ಮಾವಳ್ಳಿ ಶಂಕರ್, ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕರಾದ ಕುಮಾರ್ ಸಮತಳ ಸೇರಿ ಹಲವು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

Continue Reading

ದೇಶ

Bharat Ratna: ದೇಶದ ಹಸಿವು ನೀಗಿಸಿದ `ಹಸಿರು ಕ್ರಾಂತಿ’ಯ ಪಿತಾಮಹನಿಗೆ ಭಾರತ ರತ್ನ ಗೌರವ

Bharat Ratna: ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ವಿಜ್ಞಾನಿ ಡಾ.ಎಂ.ಎಸ್‌. ಸ್ವಾಮಿನಾಥನ್‌ ಅವರಿಗೆ ಕೇಂದ್ರ ಸರ್ಕಾರ ಇಂದು ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ.

VISTARANEWS.COM


on

swaminathan
Koo

ನವದೆಹಲಿ: ಭಾರತದ ಹಸಿರು ಕ್ರಾಂತಿಯ (Green revolution) ಪಿತಾಮಹ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ವಿಜ್ಞಾನಿ ಡಾ.ಎಂ.ಎಸ್‌.ಸ್ವಾಮಿನಾಥನ್‌ (M.S.Swaminathan) ಅವರಿಗೆ ಕೇಂದ್ರ ಸರ್ಕಾರ ಇಂದು ಭಾರತ ರತ್ನ (Bharat Ratna)ಪ್ರಶಸ್ತಿಯನ್ನು ಘೋಷಿಸಿದೆ. ಆಗಸ್ಟ್ 7, 1925ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ್ದ ಅವರ ಪೂರ್ತಿ ಹೆಸರು ಮನ್ಕೊಂ‌ಬು ಸಾಂಬಶಿವನ್‌ ಸ್ವಾಮಿನಾಥನ್‌. ಕಳೆದ ವರ್ಷ ಸೆಪ್ಟೆಂಬರ್‌ 28ರಂದು ತಮ್ಮ 98ನೇ ವಯಸ್ಸಿನಲ್ಲಿ ನಿಧನ ಹೊಂದಿದ ಅವರಿಗೆ ಮರಣೋತ್ತರವಾಗಿ ಭಾರತ ಈ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಎಂ.ಎಸ್.ಸ್ವಾಮಿನಾಥನ್ ಅವರು ಹೆಚ್ಚು ಇಳುವರಿ ನೀಡುವ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಭಾರತದ ಕಡಿಮೆ ಆದಾಯದ ರೈತರು ಹೆಚ್ಚಿನ ಇಳುವರಿಯನ್ನು ಉತ್ಪಾದಿಸಲು ಸಹಾಯ ಮಾಡಿದ್ದಲ್ಲದೆ, ಆ ದಿನಗಳ ಭಾರತದ ಜನಸಂಖ್ಯೆಯ ಬೆಳವಣಿಗೆಗೆ ತಕ್ಕಂತೆ ಸಾಕಷ್ಟು ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಸ್ವಾಮಿನಾಥನ್ ಅವರು ವಿವಿಧ ಇಲಾಖೆಗಳಲ್ಲಿ ಹಲವು ಕಾಲ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ (1961-72), ICARನ ಡೈರೆಕ್ಟರ್ ಜನರಲ್, ಭಾರತ ಸರ್ಕಾರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ (1972-79), ವಿಜ್ಞಾನ ಮತ್ತು ಕೃಷಿ ಇಲಾಖೆ ಆಕ್ಟಿಂಗ್ ಡೆಪ್ಯುಟಿ ಚೇರ್ಮನ್ ಮತ್ತು ನಂತರ ಸದಸ್ಯ, ಯೋಜನಾ ಆಯೋಗ (1980-82), ಫಿಲಿಪೈನ್ಸ್‌ನ ಇಂಟರ್‌ನ್ಯಾಷನಲ್‌ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಡೈರೆಕ್ಟರ್ ಜನರಲ್ (1982-88) ಆಗಿ ಸೇವೆ ಸಲ್ಲಿಸಿದ್ದರು.

2004ರಲ್ಲಿ, ಸ್ವಾಮಿನಾಥನ್ ಅವರನ್ನು ರೈತರ ಕುರಿತ ರಾಷ್ಟ್ರೀಯ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ರೈತರ ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಅವರ ಸಂಕಷ್ಟಗಳನ್ನು ಪರಿಶೀಲಿಸಲು ಆಯೋಗವನ್ನು ಸ್ಥಾಪಿಸಲಾಗಿತ್ತು. ಆಯೋಗವು 2006ರಲ್ಲಿ ವರದಿಯನ್ನು ಸಲ್ಲಿಸಿತು. ಕನಿಷ್ಠ ಬೆಂಬಲ ಬೆಲೆ (MSP) ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಹೆಚ್ಚಿರಬೇಕು ಎಂದು ವರದಿ ಸೂಚಿಸಿತ್ತು.

ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ

ಸ್ವಾಮಿನಾಥನ್ ಅವರು 1979 ಮತ್ತು 1980ರಲ್ಲಿ ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1980ರಿಂದ 1982ರವರೆಗೆ ಭಾರತದ ಯೋಜನಾ ಆಯೋಗದಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ಉಸ್ತುವಾರಿ ವಹಿಸಿದ್ದರು.

ಗೋಧಿ ತಳಿಯ ಬಗ್ಗೆ ಸಂಶೋಧನೆ

1950ರ ದಶಕದಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಯುವ ವಿಜ್ಞಾನಿಯಾಗಿದ್ದ ಸ್ವಾಮಿನಾಥನ್ ಅವರು ಡಾ. ನಾರ್ಮನ್ ಬೋರ್ಲಾಗ್ ಅವರ ಹೊಸದಾಗಿ ಅಭಿವೃದ್ಧಿಪಡಿಸಿದ ಮೆಕ್ಸಿಕನ್ ಕುಬ್ಜ ಗೋಧಿ ತಳಿಯ ಬಗ್ಗೆ ತಿಳಿದುಕೊಂಡಿದ್ದರು. ಈ ಬಗ್ಗೆ ಆಸಕ್ತರಾದ ಅವರು ಹೆಚ್ಚಿನ ಸಂಶೋಧನೆಗಾಗಿ ಡಾ. ನಾರ್ಮನ್ ಬೋರ್ಲಾಗ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು. ಬಳಿಕ ಇಬ್ಬರು ವಿಜ್ಞಾನಿಗಳು ಗೋಧಿ ಪ್ರಭೇದಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದ್ದರು. ಈ ತಳಿ ಹೆಚ್ಚಿನ ಇಳುವರಿ ನೀಡುತ್ತದೆ ಮತ್ತು ಸಾಕಷ್ಟು ಬಲವಾದ ಕಾಂಡದ ರಚನೆಗಳನ್ನು ಹೊಂದಿದೆ. ಇದು ಭಾರತದ ಕೃಷಿ ಲೋಕದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತು. ನಾಲ್ಕು ಋತುಗಳಲ್ಲಿ ಗೋಧಿಯ ಒಟ್ಟು ಬೆಳೆ ಇಳುವರಿಯನ್ನು 12 ಮಿಲಿಯನ್ ಟನ್‌ಗಳಿಂದ 23 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸುವ ಮೂಲಕ ಧಾನ್ಯ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕೊನೆಗೊಳಿಸಿತು.

ವಿವಿಧ ಪ್ರಶಸ್ತಿ

ಸ್ವಾಮಿನಾಥನ್ ಅವರ ಕೊಡುಗೆಯನ್ನು ಪರಿಗಣಿಸಿ ಹಲವು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಭಾರತದಲ್ಲಿ ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಅಕ್ಕಿ ತಳಿಗಳ ಪರಿಚಯವನ್ನು ಅಭಿವೃದ್ಧಿಪಡಿಸಲು ಮತ್ತು ಮುನ್ನಡೆಸಿದ್ದಕ್ಕಾಗಿ ಅವರು 1987ರಲ್ಲಿ ಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ಪಡೆದರು. 1971ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1986ರಲ್ಲಿ ಆಲ್ಬರ್ಟ್ ಐನ್‌ಸ್ಟೈನ್ ವರ್ಲ್ಡ್ ಸೈನ್ಸ್ ಪ್ರಶಸ್ತಿಯನ್ನು ಸ್ವಾಮಿನಾಥನ್‌ ಅವರಿಗೆ ನೀಡಲಾಗಿತ್ತು. 1967ರಲ್ಲಿ ಪದ್ಮಶ್ರೀ, 1972ರಲ್ಲಿ ಪದ್ಮಭೂಷಣ ಮತ್ತು 1989ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿತ್ತು. ಇದೀಗ ಭಾರತ ರತ್ನ ಪ್ರಶಸ್ತಿ ಅವರಿಗೆ ಸಂದಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಲೇಖನ: ಭಾರತದ ಆಧುನಿಕ, ಪ್ರಗತಿಪರ ಕೃಷಿಗೆ ಎಂ ಎಸ್ ಸ್ವಾಮಿನಾಥನ್ ಅಡಿಪಾಯ

Continue Reading

ಕೃಷಿ

Horticultrure Fair 2024 : ಐಐಎಚ್‌ಆರ್‌ನಲ್ಲಿ ಮಾ. 5ರಿಂದ 7ರವರೆಗೆ ತೋಟಗಾರಿಕಾ ಮೇಳ

Horticulture fair 2024 :‌ ತೋಟಗಾರಿಕಾ ಬೆಳೆಗಳನ್ನು ಇನ್ನಷ್ಟು ಸಮೃದ್ಧವಾಗಿ ಹೇಗೆ ಬೆಳೆಸಬಹುದು ಎಂಬ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡುವ, ಸುಧಾರಿತ ತಂತ್ರಜ್ಞಾನಗಳನ್ನು ತೆರೆದಿಡುವ ರಾಷ್ಟ್ರೀಯ ತೋಟಗಾರಿಕಾ ಮೇಳ ಬೆಂಗಳೂರಿನಲ್ಲಿ ನಡೆಯಲಿದೆ. ಅದಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

Horticulture-fair-2024-1
Koo

ಬೆಂಗಳೂರು: ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳ ಮೂಲಕ ರೈತರಿಗೆ ನೆರವಾಗುತ್ತಿರುವ, ಮುಂದಿನ ಪೀಳಿಗೆಯಲ್ಲಿ ಕೃಷಿ ಪ್ರೀತಿಯನ್ನು ಹುಟ್ಟಿಸುತ್ತಿರುವ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (Indian Institute of Horticultural Research-IIHR) ನಡೆಸುವ ವಾರ್ಷಿಕ ರಾಷ್ಟ್ರೀಯ ತೋಟಗಾರಿಕಾ ಮೇಳ (National Horticulture Fair 2024) ಈ ಬಾರಿ ಮಾರ್ಚ್‌ 5ರಿಂದ 7ರವರೆಗೆ ಮೂರು ದಿನ ನಡೆಯಲಿದೆ (Horticultrure Fair 2024).

ತೋಟಗಾರಿಕೆಯಲ್ಲಿ ಮುಂದಿನ ಪೀಳಿಗೆಯ ತಂತ್ರಜ್ಞಾನಗಳನ್ನು ಬಳಸಿ ಸಹನೀಯ ಅಭಿವೃದ್ಧಿ ನಡೆಸುವುದು ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ತೋಟಗಾರಿಕಾ ಮೇಳ ನಡೆಯಲಿದೆ. ಸ್ಮಾರ್ಟ್‌ ಕೃಷಿ, ನಿಯಂತ್ರಿತ ವಾತಾವರಣದಲ್ಲಿ ಕೃಷಿ ಮಾಡುವುದು, ವಿಸ್ತಾರ ಭೂಮಿಯ ಬದಲು ಎತ್ತರೆತ್ತರಕ್ಕೆ ಕೃಷಿ ಬೆಳವಣಿಗೆ, ಸಂಪನ್ಮೂಲಗಳ ಗರಿಷ್ಠ ಬಳಕೆ, ಫಸಲು ಹೆಚ್ಚಿಸುವಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನವೀನ ವಿಧಾನಗಳನ್ನು ಇಲ್ಲಿ ಪರಿಚಯಿಸಲಾಗುತ್ತದೆ.

Horticulture-fair-2024

ಈ ಬಾರಿ ಪರಿಚಯಿಸುವ ಪ್ರಮುಖ ತಂತ್ರಜ್ಞಾನ ಆಧರಿತ ತಳಿಗಳು

  1. ಅರ್ಕ ನಿಹಿರ: ಇದೊಂದು ಬಗೆಯ ಮೆಣಸಿನ ಕಾಯಿ ಆಗಿದ್ದು, ಒಂದು ಹೆಕ್ಟೇರ್ ಪ್ರದೇಶದಲ್ಲಿ 30 ಟನ್‌ ಹಸಿರು/7.5 ಟನ್‌ ಒಣ ಮೆಣಸು ಬೆಳೆ ನೀಡುತ್ತದೆ.
  2. ಅರ್ಕ ಭೃಂಗರಾಜ್‌: ಒಂದು ಹೆಕ್ಟೇರ್‌ ಪ್ರದೇಶದಲ್ಲಿ 6ರಿಂದ 6.5 ಟನ್‌ ಉತ್ತಮ ಗುಣಮಟ್ಟದ ಭೃಂಗರಾಜವನ್ನು ಬೆಳೆಯಬಹುದು.
  3. ಅರ್ಕ ಎತ್ತರ ಬೆಳೆಯುವ ಬೆಳೆ: ಹನ್ನೊಂದು ಅಂತಸ್ತುಗಳಲ್ಲಿ ಎತ್ತರೆತ್ತರಕ್ಕೆ ಬೆಳೆಯುವ ತಂತ್ರಜ್ಞಾನ. ಇದು ಶೇಕಡಾ 80ರಷ್ಟು ನೀರಿನ ಉಳಿತಾಯ ಮಾಡುತ್ತದೆ. ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆ ಬೆಳೆಯಬಹುದು.
  4. ಅರ್ಕ ಈರುಳ್ಳಿ ಪ್ಲ್ಯಾಂಟರ್:‌ ಒಂದು ಗಂಟೆಯಲ್ಲಿ 0.12 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ಶೇ. 35ರಷ್ಟು ಶ್ರಮ ಶಕ್ತಿ ಕಡಿಮೆಯಾಗುತ್ತದೆ.
  5. ವಿಟಮಿನ್‌ ಡಿ ಸಂವರ್ಧನಾ ತಂತ್ರಜ್ಞಾನ: ಕೃತಕ ಅಣಬೆ ಬೇಸಾಯದಲ್ಲಿ ಎಲ್ಲರಿಗೂ ಅಗತ್ಯವಿರುವ ವಿಟಮಿನ್‌ ಡಿ ಪೋಷಕಾಂಶವನ್ನು ಹೆಚ್ಚಿಸುವ ತಂತ್ರಜ್ಞಾನ. ಇಲ್ಲಿ ಯುವಿ-ಬಿ ಕಿರಣಗಳ ಮೂಲಕ ಅಣಬೆಯಲ್ಲಿ ವಿಟಮಿನ್‌ ಡಿ ತುಂಬಲಾಗುತ್ತದೆ.

ಇನ್ನೂ ಏನೇನಿರುತ್ತದೆ?

ಬೀಜ ಮತ್ತು ಬಿತ್ತನೆ ಸಾಮಗ್ರಿಗಳು, ನೀರಾವರಿ ವ್ಯವಸ್ಥೆಗಳು, ಐಐಎಚ್‌ಆರ್‌ ಒದಗಿಸುವ ಸೇವೆಗಳು, ಹಸಿರು ಮನೆ ನಿರ್ಮಾಣ ಮಾಹಿತಿ ಮತ್ತು ಸಲಕರಣೆಗಳು, ಸಸ್ಯ ಪೋಷಕಾಂಶಗಳು, ಕೀಟನಾಶಕಗಳು, ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್‌ ತಂತ್ರಗಳು, ಕೃಷಿ ರಫ್ತು ಸೇವೆಗಳ ಮಾಹಿತಿ, ಹಣಕಾಸು ನೆರವು ಸಿಗುವ ಬಗ್ಗೆ ಸ್ಪಷ್ಟ ಜ್ಞಾನ, ಸಾವಯವ ಕೃಷಿ ಮತ್ತು ಮಾರುಕಟ್ಟೆ ಮಾಹಿತಿ ಸೇರಿ ಹಲವು ವಿಚಾರಗಳು ಇಲ್ಲಿ ತೆರೆದುಕೊಳ್ಳಲಿವೆ.

ಇದನ್ನೂ ಓದಿ : Budget 2024: ಕೃಷಿ, ಹೂಡಿಕೆ, ಉದ್ಯೋಗ ಸೃಷ್ಟಿಗೆ ಇದು ಬೆಸ್ಟ್‌ ಬಜೆಟ್‌: ಎಚ್.ಡಿ. ಕುಮಾರಸ್ವಾಮಿ

ಪ್ರದರ್ಶನ ಮಳಿಗೆಗಳು ಲಭ್ಯವಿವೆ

ತೋಟಗಾರಿಕಾ ಮೇಳ ನಡೆಯುವ ಸಂದರ್ಭದಲ್ಲಿ ಹಲವಾರು ಪ್ರದರ್ಶನ ಮಳಿಗೆಗಳು ಇರುತ್ತವೆ. ನೀವು ಯಾವುದಾದರೂ ವಿಭಾಗದಲ್ಲಿ ತಜ್ಞರಾಗಿದ್ದು, ರೈತರಿಗೆ ನಿಮ್ಮ ತಂತ್ರಜ್ಞಾನವನ್ನು ತೋರಿಸಬೇಕು ಎಂದು ಬಯಸಿದರೆ ಅದಕ್ಕೆ ಅವಕಾಶವಿದೆ. ಇಲ್ಲಿ ಕಡಿಮೆ ಬೆಲೆಯಲ್ಲಿ ಸ್ಟಾಲ್‌ಗಳು ಲಭ್ಯವಿವೆ. ಸ್ಟಾಲ್‌ಗಳ ಮಾಹಿತಿಯನ್ನು ಪಡೆಯಲು ಲಾಗ್‌ ಇನ್‌ ಮಾಡಿ :https://nhf2024.in ಅಥವಾ ರಾಷ್ಟ್ರೀಯ ತೋಟಗಾರಿಕಾ ಮೇಳದ ಹೆಲ್ಪ್‌ಲೈನ್‌ ನಂಬರ್‌ 9403891704ನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು ಇಲ್ಲಿದೆ ಸಂಪರ್ಕ ಸಂಖ್ಯೆ

ತೋಟಗಾರಿಕಾ ಮೇಳ, ಅಲ್ಲಿನ ಸ್ಟಾಲ್‌ಗಳು ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಐಐಎಚ್‌ಆರ್‌ನ ಪ್ರಿನ್ಸಿಪಾಲ್‌ ಸೈಂಟಿಸ್ಟ್‌ ಮತ್ತು ತೋಟಗಾರಿಕಾ ಮೇಳದ ಸಂಘಟನಾ ಕಾರ್ಯದರ್ಶಿ ಡಾ. ಎಂ.ವಿ. ಧನಂಜಯ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ ಸಂಖ್ಯೆ: 080-28446010, ಮೊಬೈಲ್‌ ಸಂಖ್ಯೆ: 93790 79274
Email : nhf.iihr@icar.gov.in
Website : https://nhf2024.in/and https://iihr.res.in

Continue Reading
Advertisement
Firing in JewelleryFiring in Jewellery
ಕ್ರೈಂ55 seconds ago

Firing in Jewellery : ಕೊಡಿಗೇಹಳ್ಳಿ ಜುವೆಲ್ಲರಿ ಫೈರಿಂಗ್‌ ಕೇಸಿಗೆ ಟ್ವಿಸ್ಟ್‌; ದರೋಡೆಕೋರನೇ ಗುಂಡಿಗೆ ಬಲಿ!

meghana foods it raid
ಬೆಂಗಳೂರು14 mins ago

IT Raid: ಬೆಂಗಳೂರಿನಲ್ಲಿ 10 ಕಡೆ ಐಟಿ ದಾಳಿ, ತೆರಿಗೆ ಪಾವತಿಸದ ರೆಸ್ಟೋರೆಂಟ್‌ಗಳ ಪರಿಶೀಲನೆ

Israeli Forces
ದೇಶ16 mins ago

Israel Palestine War: ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ; 20 ಸಾವು

RCB Unbox
ಕ್ರೀಡೆ40 mins ago

RCB Unbox Event: ಇಂದಿನ ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ವಿರಾಟ್​ ಕೊಹ್ಲಿಯೂ ಹಾಜರ್​!

Thalapathy Vijay
ಮಾಲಿವುಡ್42 mins ago

Thalapathy Vijay: 14 ವರ್ಷಗಳ ಬಳಿಕ ಕೇರಳಕ್ಕೆ ಬಂದ ದಳಪತಿ ವಿಜಯ್‌!

anekal self harm
ಕ್ರೈಂ1 hour ago

Self Harm: ಪ್ರೀತಿಸಿದ ಯುವತಿ ಸಿಗಲಿಲ್ಲ, ಕೈ ಕೊಯ್ದು ನೇಣು ಬಿಗಿದುಕೊಂಡ ಯುವಕ

Family Problem High Court
ಕೋರ್ಟ್1 hour ago

Family Problem : ಹೆಂಡತಿಗೆ ಮಂಡೆ ಸರಿ ಇಲ್ಲ, ಅವಳು ಬೇಡ ಎಂದವನಿಗೆ ಹೈಕೋರ್ಟ್‌ ವಿಧಿಸಿತು ದಂಡ!

Benefits of Kasoori Methi
ಆರೋಗ್ಯ1 hour ago

Benefits of Kasoori Methi: ಕಸೂರಿ ಮೇಥಿ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಸೂಕ್ತ

varanasi nandi
ಅಂಕಣ2 hours ago

ನನ್ನ ದೇಶ ನನ್ನ ದನಿ ಅಂಕಣ: ಸತ್ಯಂ ಶಿವಂ ಸುಂದರಂ

Raja Marga human robots
ಸ್ಫೂರ್ತಿ ಕತೆ2 hours ago

Raja Marga Column : ಭಾವನೆಗಳೇ ಇಲ್ಲದ ರೋಬೋಟ್‌ನಂಥ ಮನುಷ್ಯರ ಜತೆ ಬದುಕೋದಾದರೂ ಹೇಗೆ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು15 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

Different Danny Filed Case Against Ravi Varma
ಬೆಂಗಳೂರು5 days ago

Different Danny : ಫೈಟ್‌ ಮಾಸ್ಟರ್ಸ್‌ ಫೈರ್‌ ಫೈಟಿಂಗ್‌; ರವಿವರ್ಮ ವಿರುದ್ಧ ಡಿಫರೆಂಟ್‌ ಡ್ಯಾನಿ ಸಮರ

ಟ್ರೆಂಡಿಂಗ್‌