Viral photo | ಅಜ್ಜಿಯ ಶವಪೆಟ್ಟಿಗೆಯೊಂದಿಗೆ ನಗುತ್ತಾ ಕುಳಿತ ಕುಟುಂಬಸ್ಥರು! - Vistara News

ಪ್ರಮುಖ ಸುದ್ದಿ

Viral photo | ಅಜ್ಜಿಯ ಶವಪೆಟ್ಟಿಗೆಯೊಂದಿಗೆ ನಗುತ್ತಾ ಕುಳಿತ ಕುಟುಂಬಸ್ಥರು!

ಕೇರಳದಲ್ಲಿ ಒಂದು ಅಪರೂಪದ ಘಟನೆ. ಮನೆಯವರಿಗೆಲ್ಲಾ ಪ್ರೀತಿಯ ಅಜ್ಜಿ ತೀರಿಕೊಂಡಿದ್ದಾಳೆ. ಆಕೆಯ ಶವದ ಜತೆ ತೆಗೆಸಿಕೊಂಡ ಫೋಟೊದಲ್ಲಿ ಕುಟುಂಬಸ್ಥರೆಲ್ಲ ನಗುನಗುತ್ತಿದ್ದಾರೆ. ಅದೇಕೆ?

VISTARANEWS.COM


on

granny
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರತಿದಿನವೂ ಸಾಮಾಜಿಕ ಜಾಲತಾಣದ ಜಗತ್ತಿನಲ್ಲಿ ಒಂದಲ್ಲ ಒಂದು ಸುದ್ದಿಗಳು, ಚಿತ್ರಗಳು, ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಆದರೆ, ಈ ಚಿತ್ರ ವೈರಲ್‌ ಆಗಲು ಕಾರಣವಿದೆ. ಈ ಚಿತ್ರದಲ್ಲೊಂದು ಬೇಸರವಿದೆ. ಆದರೂ ಅಲ್ಲಿ ನಗುಮೊಗಗಳಿವೆ. ಕೇರಳದ ಕುಟುಂಬವೊಂದರ ಇಂಥ ಚಿತ್ರ ವೈರಲ್‌ ಆಗಿದ್ದು, ಇದರಲ್ಲಿ ಶವಪೆಟ್ಟಿಗೆಯ ಸುತ್ತ ನೆರೆದ ಕುಟುಂಬಸ್ಥರ ನಗುಮೊಗದ ಚಿತ್ರವಿದೆ!

ಸಾವಿನ ಮನೆಯಲ್ಲಿ ನಗುವಿನ ಚಿತ್ರಗಳು ಎಂದಿಗಾದರೂ ಸಿಕ್ಕೀತೇ? ಸಂತೋಷದ ಸಂದರ್ಭದಲ್ಲಿ ಅದೆಷ್ಟು ಫೋಟೋಗಳನ್ನು ತೆಗೆದು ನೆನಪಿಸಿಕೊಳ್ಳುತ್ತೇವಾದರೂ, ಸಾವಿನ ಮನೆಯಲ್ಲಿ ಫೋಟೋ ತೆಗೆದು ಯಾರೂ ನೆನಪಿಸಿಕೊಳ್ಳಲು, ಆ ನೆನಪುಗಳನ್ನು ಮೆಲುಕು ಹಾಕಲು ಬಯಸುವುದಿಲ್ಲ. ಆಪ್ತರ ಸಾವು ಎಂಬುದು ಜೀವನದ ಅತ್ಯಂತ ದುಃಖದ ಘಟನೆಯಾಗಿ ನೆನಪಿನಲ್ಲಿ ಚಿತ್ರಗಳಾಗಿ ಉಳಿದುಬಿಡುತ್ತವೆಯೇ ಹೊರತು, ಎಂದಿಗೂ ಅವುಗಳ ಚಿತ್ರ ತೆಗೆದು ಇಟ್ಟುಕೊಂಡಿರಲು ಯಾರೂ ಬಯಸುವುದಿಲ್ಲ. ಆದರೆ ಇಲ್ಲೊಂದು ಇವೆಲ್ಲದಕ್ಕೂ ವೈರುಧ್ಯದ ವಿಚಿತ್ರ ಘಟನೆ ನಡೆದಿದ್ದು, ಈ ಚಿತ್ರದಲ್ಲಿ ಶವಪೆಟ್ಟಿಗೆಯನ್ನು ಮಧ್ಯದಲ್ಲಿರಿಸಿ ಸುತ್ತ ನೆರೆದ ಕುಟುಂಬಸ್ಥರೆಲ್ಲರ ಮೊಗದಲ್ಲಿ ನಗುವಿನ ಕಳೆಯಿದೆ! ಸೂತಕದ ಮನೆಯಲ್ಲಿ ಹೀಗೆ ಯಾರಾದರೂ ನಗುತ್ತಾ ಫೋಟೋ ತೆಗೆಯುತ್ತಾರಾ ಎಂಬುದೇ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿ ವೈರಲ್‌ ಆಗಿದೆ.

ಅಷ್ಟಕ್ಕೂ ಈ ಫೋಟೋ ಹಿಂದಿರುವ ರಹಸ್ಯವಾದರೂ ಏನು? ಎಲ್ಲರೂ ಹೀಗೆ ನಗುತ್ತಾ ಶವಪೆಟ್ಟಿಗೆಯ ಹಿಂದೆ ನಿಂತಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಕುಟುಂಬಸ್ಥರಲ್ಲಿ ಒಬ್ಬರು, “ಮನೆಯ ಹಿರಿಯರಾದ ನಮ್ಮೆಲ್ಲರ ಅಜ್ಜಿಯ ಸಾವಿನ ದಿನ ಫೋಟೋ ಇದು. ಅಜ್ಜಿಗೆ ೯೦ ಮಂದಿಯಿರುವ ದೊಡ್ಡ ಕುಟುಂಬವಿದೆ. ನಲುವತ್ತು ಮಂದಿಯಷ್ಟೆ ಆಕೆಯ ಈ ಸಾವಿನ ಸಂದರ್ಭ ಒಟ್ಟು ಸೇರಿ ಈ ಫೋಟೋ ತೆಗೆಯಲು ಸಾಧ್ಯವಾಯಿತು. ನಮಗೆ ಈ ಫೋಟೋ ವೈರಲ್‌ ಆಗುವುದು ಇಷ್ಟವಿಲ್ಲದಿದ್ದರೂ, ಈ ಚಿತ್ರ ಇದೀಗ ಎಲ್ಲೆಡೆ ಹರಿದಾಡುತ್ತಿದೆ” ಎಂದಿದ್ದಾರೆ.

“ಈ ಫೋಟೋ ತೆಗೆಯಲು ಕಾರಣ ಇಷ್ಟೆ. ಈ ಅಜ್ಜಿಯೆಂದರೆ ಎಲ್ಲರಿಗೂ ಬಹಳ ಪ್ರಿಯ. ತನ್ನ ಮೊಮ್ಮಕ್ಕಳು, ಮಕ್ಕಳು, ಮರಿಮೊಮ್ಮಕ್ಕಳು ಹೀಗೆ ಅಜ್ಜಿಯದ್ದು ತುಂಬಿದ ಸಂಸಾರ. ಅಜ್ಜಿಯ ಜೊತೆ ಕಳೆದ ಎಲ್ಲರ ನೆನಪುಗಳು ಚಿರಸ್ಮರಣೀಯ. ಹಾಗಾಗಿ ಈ ನೆನಪನ್ನು ಶಾಶ್ವತವಾಗಿರಿಸಲು, ಆಕೆಯ ಜೊತೆಗೆ ಕೊನೆಯ ಬಾರಿ ಗ್ರೂಪ್‌ ಫೋಟೋ ತೆಗೆದುಕೊಂಡೆವು” ಎಂದಿದ್ದಾರೆ.

ಇದನ್ನೂ ಓದಿ | Life story | ಕಳ್ಳತನ ಮಾಡಿದಾತನೇ ಪೊಲೀಸ್‌ ಪ್ರಶಸ್ತಿ ಪಡೆದು ಹಲವರಿಗೆ ಸ್ಫೂರ್ತಿಯಾದ ಕಥೆ!

”ಸಾವಿನ ಮನೆ ಎಂದರೆ ಎಲ್ಲರೂ ಅಳುವುದಷ್ಟೆ ಕಣ್ಣಿಗೆ ಕಾಣುತ್ತದೆ ನಿಜ. ಮನೆಯ ಸದಸ್ಯರ ಅಗಲಿಕೆ ದುಃಖ ತರುತ್ತದೆ ಎಂಬುದೂ ನಿಜ. ಆದರೆ, ಸಾವು ಎಂಬುದು ವಿದಾಯ ಎಂಬುದಾಗಿಯೂ ನಾವು ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ಬನನ್ನೂ ನಗುಮೊಗದಿಂದಲೇ ಕಳಿಸಿಕೊಡಬೇಖು. ಬಹುಶಃ ಇದನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ, ನಾವು ಹೀಗೆ ಭಾವಿಸಿ, ಎಲ್ಲರೂ ಬೇಸರವಾದರೂ, ಆಕೆಯ ಮುಂದಿನ ಪಯಣವನ್ನು ನಗುಮೊಗದಿಂದ ಆಕೆಯೊಂದಿಗೆ ಕಳೆದ ದಿನಗಳನ್ನು, ಖುಷಿಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ಸಂತೋಷದಿಂದ ಕಳುಹಿಸಿಕೊಡಲು ತೀರ್ಮಾನಿಸಿದೆವು. ಹಾಗಾಗಿ ಕುಟುಂಬಸ್ಥರೆಲ್ಲ ಆಕೆಯ ಕೊನೆಯ ಪಯಣಕ್ಕೆ ವಿದಾಯ ಹೇಳಲು ಜೊತೆಯಾಗಿ ಕೂತು ತೆಗೆದ ಕ್ಷಣಗಳಿವು” ಎಂದು ವಿವರಿಸಿದ್ದಾರೆ.

ಕುಟುಂಬದ ಇನ್ನೊಬ್ಬರು, ವ್ಯಕ್ತಿಯ ವಿದಾಯವನ್ನು ನಾವು ದುಃಖದಾಯಕವಾಗಿ ಏಕೆ ಮಾಡಬೇಕು? ಕಳೆದ ಅಮೂಲ್ಯ ದಿನಗಳ ಬಗೆಗೆ ಖುಷಿಯಿರಬೇಕು ಎಂದಿದ್ದಾರೆ. ಕೇರಳದ ಶಿಕ್ಷಣ ಮಂತ್ರಿ ಶಿವನ್‌ಕುಟ್ಟಿ ಕೂಡಾ ಈ ಚಿತ್ರದ ಬಗ್ಗೆ ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಚಿತ್ರದ ಬಗ್ಗೆ ನೆಗೆಟಿವ್‌ ಕಮೆಂಟ್‌ ಬೇಡ. ವಿದಾಯವನ್ನು ಕಣ್ಣೀರಿನಿಂದ ತೊಳೆಯಬೇಕಾಗಿಲ್ಲ. ಅವರ ಜೊತೆಗಿನ ಒಳ್ಳೆಯ ದಿನಗಳನ್ನು ನೆನೆಸಿಕೊಂಡು, ಆ ಖುಷಿ ದಕ್ಕಿದ್ದಕ್ಕೆ ಸಂತಸ ಪಡಬೇಕು ಎಂದಿದ್ದಾರೆ.

ಇದನ್ನೂ ಓದಿ | Dosa maker | ಇನ್ಮೇಲೆ ದೋಸೆ ಹುಯ್ಯೋದಲ್ಲ, ಎ-4 ಸೈಜ್‌ ಗರಿಗರಿ ದೋಸೆ ಪ್ರಿಂಟ್‌ ಮಾಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Menstrual Leave: ಋತುಸ್ರಾವದ ರಜೆ ಬಗ್ಗೆ ಮಾದರಿ ನೀತಿ ರೂಪಿಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್​​​ ನಿರ್ದೇಶನ

Menstrual Leave: ವೇತನ ಸಹಿ ಋತುಸ್ರಾವದ ರಜೆ ನೀಡಲು ನಿರ್ದೇಶಿಸುವಂತೆ ಕೋರ್ಟ್​ಗೆ ಮನವಿ ಸಲ್ಲಿಸಿದ ಅರ್ಜಿದಾರರು ಮತ್ತು ವಕೀಲ ಶೈಲೇಂದ್ರ ತ್ರಿಪಾಠಿ ಅವರ ಪರವಾಗಿ ಹಾಜರಾದ ವಕೀಲ ರಾಕೇಶ್ ಖನ್ನಾ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಸಂಪರ್ಕಿಸಲು ನ್ಯಾಯಪೀಠ ಸಲಹೆ ನೀಡಿತು.

VISTARANEWS.COM


on

Koo

ನವದೆಹಲಿ: ರಾಜ್ಯ ಸರ್ಕಾರ ಮತ್ತು ಇತರ ಪಾಲುದಾರರ ಜತೆ ಮಾಲೋಚನೆ ನಡೆಸಿ ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ (Menstrual Leave) ಕುರಿತು ಮಾದರಿ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ಈ ನಿರ್ದೇಶನ ಕೊಟ್ಟಿದೆ. ಇದು ಸರ್ಕಾರದ ನೀತಿಗೆ ಸಂಬಂಧಿಸಿದ್ದು ಹಾಗೂ ನ್ಯಾಯಾಲಯಗಳು ಪರಿಶೀಲಿಸಬೇಕಾದ ವಿಷಯವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವೇತನ ಸಹಿ ಋತುಸ್ರಾವದ ರಜೆ ನೀಡಲು ನಿರ್ದೇಶಿಸುವಂತೆ ಕೋರ್ಟ್​ಗೆ ಮನವಿ ಸಲ್ಲಿಸಿದ ಅರ್ಜಿದಾರರು ಮತ್ತು ವಕೀಲ ಶೈಲೇಂದ್ರ ತ್ರಿಪಾಠಿ ಅವರ ಪರವಾಗಿ ಹಾಜರಾದ ವಕೀಲ ರಾಕೇಶ್ ಖನ್ನಾ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಸಂಪರ್ಕಿಸಲು ನ್ಯಾಯಪೀಠ ಸಲಹೆ ನೀಡಿತು.

ಇದನ್ನೂ ಓದಿ: Rain Affected areas: ಮಳೆ ಸಂತ್ರಸ್ತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಿ: ಡಿಸಿಗಳಿಗೆ ಸಿಎಂ ಸೂಚನೆ

ನೀತಿ ನಿರೂಪಣೆ ಮಟ್ಟದಲ್ಲಿ ಈ ವಿಷಯವನ್ನು ಪರಿಶೀಲಿಸಬೇಕಾಗಿದೆ. ಸಂಬಂಧಪಟ್ಟ ಎಲ್ಲರ ಜತೆ ಸಮಾಲೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಮಾದರಿ ನೀತಿಯನ್ನು ರೂಪಿಸಬಹುದೇ ಎಂದು ಪರಿಶೀಲಿಸಲು ಕೇಂದ್ರ ಸರ್ಕಾರದ ಕಾರ್ಯದರ್ಶಿಯನ್ನು ವಿನಂತಿಸುತ್ತೇವೆ ಎಂದು ಕೋರ್ಟ್​ ಹೇಳಿದೆ. ಇದೇ ವೇಳೆ ಕೋರ್ಟ್​​ ಈ ನಿಟ್ಟಿನಲ್ಲಿ ರಾಜ್ಯಗಳು ಯಾವುದೇ ಕ್ರಮಗಳನ್ನು ತೆಗೆದುಕೊಂಡರೆ ಕೇಂದ್ರದ ಸಮಾಲೋಚನಾ ಪ್ರಕ್ರಿಯೆಯು ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈಗಾಗಲೇ ಮುಟ್ಟಿನ ರಜೆ ನೀಡುವ ಕಂಪನಿಗಳ ಪಟ್ಟಿ ಇಲ್ಲಿದೆ

ಭಾರತದಲ್ಲಿ ಹಲವಾರು ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳನ್ನು ಬೆಂಬಲಿಸಲು ಮುಟ್ಟಿನ ರಜೆ ನೀತಿಗಳನ್ನು ಜಾರಿಗೆ ತಂದಿವೆ. ಕೆಲವು ಜನಪ್ರಿಯ ಕಂಪನಿಗಳ ಹೆಸರನ್ನು ಇಲ್ಲಿ ನೀಡಲಾಗಿದೆ.

ಜೊಮ್ಯಾಟೊ: ಋತುಚಕ್ರದ ಸಮಸ್ಯೆಯನ್ನು ಕಡಿಮೆ ಮಹಿಳಾ ಮತ್ತು ತೃತೀಯ ಲಿಂಗಿ ಉದ್ಯೋಗಿಗಳಿಗೆ ವಾರ್ಷಿಕವಾಗಿ 10 ದಿನಗಳವರೆಗೆ ವೇತನ ಸಹಿತ ಅವಧಿಯ ರಜೆಯನ್ನು ನೀಡುತ್ತದೆ.

ಬೈಜೂಸ್: ಮಹಿಳಾ ಉದ್ಯೋಗಿಗಳನ್ನು ಬೆಂಬಲಿಸಲು ಮುಟ್ಟಿನ ರಜೆಯನ್ನು ಒದಗಿಸುತ್ತದೆ.

ಸ್ವಿಗ್ಗಿ: ಉತ್ತಮ ಕೆಲಸದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಇತ್ತೀಚೆಗೆ ಇದೇ ರೀತಿಯ ನೀತಿಯನ್ನು ಪರಿಚಯಿಸಿತ್ತು.

ಮ್ಯಾ್ಗ್​ಸ್ಟರ್​:ಈ ಡಿಜಿಟಲ್ ನಿಯತಕಾಲಿಕ ವೇದಿಕೆ ವೇತನ ಸಹಿತ ರಜೆ ನೀಡುತ್ತದೆ.

ಓರಿಯಂಟ್ ಎಲೆಕ್ಟ್ರಿಕ್: ಈ ಕಂಪನಿಯೂ ಇತ್ತೀಚೆಗೆ ಸಂಬಳ ಸಮೇತ ಮುಟ್ಟಿನ ರಜೆ ಕೊಟ್ಟಿದೆ.

ಕಲ್ಚರ್ ಮೆಷಿನ್: ಮಹಿಳಾ ಉದ್ಯೋಗಿಗಳಿಗೆ ತಮ್ಮ ಋತುಚಕ್ರದ ಮೊದಲ ದಿನದಂದು ಒಂದು ದಿನ ರಜೆ ತೆಗೆದುಕೊಳ್ಳಲು ಅನುವು ಮಾಡಿದೆ.

ಗೋಜೂಪ್ ಆನ್ಲೈನ್ ಪ್ರೈವೇಟ್ ಲಿಮಿಟೆಡ್: ಮುಟ್ಟಿನ ಮೊದಲ ದಿನದಂದು ವೇತನ ಸಹಿತ ರಜೆ ಮತ್ತು ಮನೆಯಿಂದ ಕೆಲಸ ಮಾಡುವ ಆಯ್ಕೆ ಡಿಜಿಟಲ್ ಮಾಧ್ಯಮ ಕಂಪನಿ ನೀಡಿದೆ.

ಐವಿಪನನ್: ವರ್ಷಕ್ಕೆ 12 ದಿನಗಳ ಅವಧಿಯ ಮುಟ್ಟಿನ ರಜೆಯನ್ನು ಒದಗಿಸುವ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಇದಾಗಿದೆ.

ಇಂಡಸ್ಟ್ರಿಎಆರ್ ಸಿ: ಮಹಿಳೆಯರಿಗೆ ಒಂದು ಅಥವಾ ಎರಡು ದಿನ ರಜೆ ತೆಗೆದುಕೊಳ್ಳಲು ಅನುಮತಿ ನೀಡುತ್ತದೆ. ಆದರೆ ನಂತರ ರಜೆಯನ್ನು ಸರಿದೂಗಿಸಬೇಕು.

Continue Reading

ಪ್ರಮುಖ ಸುದ್ದಿ

CM Siddaramaiah: ರಾಜ್ಯದಲ್ಲಿ ಶೇ.80 ಬಿಪಿಎಲ್‌ ಕಾರ್ಡ್‌! ಕಡಿತ ಮಾಡಲು ಸಿಎಂ ಸೂಚನೆ

CM Siddaramaiah: ರಾಜ್ಯದಲ್ಲಿ ಶೇ. 80ರಷ್ಟು ಬಿಪಿಎಲ್‌ ಕಾರ್ಡುಗಳನ್ನು ಹೊಂದಿದ್ದಾರೆ. ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ನೀಡಿದ್ದೇವೆ. ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್‌ ಕಾರ್ಡು ಒದಗಿಸಬೇಕು ಎಂದು ಸಿಎಂ ಸೂಚಿಸಿದರು.

VISTARANEWS.COM


on

cm Siddaramaiah
Koo

ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್‌ ಕಾರ್ಡುದಾರರ (BPL Card holders) ಸಂಖ್ಯೆ ಮಿತಿ ಮೀರಿದೆ. ಅನರ್ಹರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಿ ಅರ್ಹರಿಗೆ ನೀಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿ ಈ ಸೂಚನೆ ನೀಡಿದರು.

ರಾಜ್ಯದಲ್ಲಿ ಶೇ. 80ರಷ್ಟು ಬಿಪಿಎಲ್‌ ಕಾರ್ಡುಗಳನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಶೇ.40 ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ಆದರೆ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ನೀಡಿದ್ದೇವೆ. ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್‌ ಕಾರ್ಡು ಒದಗಿಸಬೇಕು ಎಂದು ಸಿಎಂ ಸೂಚಿಸಿದರು.

ಜನರನ್ನು ಅನಗತ್ಯವಾಗಿ ಅಲೆದಾಡಿಸಬೇಡಿ, ಅವರ ದೂರುಗಳನ್ನು ಆಲಿಸಿ, ಅಗತ್ಯ ಪರಿಹಾರ ಒದಗಿಸಬೇಕು. ರಾಜ್ಯದಲ್ಲಿ ಈ ಬಾರಿ ಬರ ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದೇವೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಮಸ್ಯಾತ್ಮಕ ಗ್ರಾಮಗಳನ್ನು ಮೊದಲೇ ಗುರುತಿಸಿ. ಪರ್ಯಾಯ ವ್ಯವಸ್ಥೆ ಮಾಡಿದ ಕಾರಣ ಎಲ್ಲೂ ಹೆಚ್ಚು ತೊಂದರೆಯಾಗಿಲ್ಲ. ಬರ ನಿರ್ವಹಣೆಗೆ 85 ಕೋಟಿ ವೆಚ್ಚವಾಗಿದ್ದು ಪಾರದರ್ಶಕವಾಗಿ ಮಾಡಲಾಗಿದೆ. 783 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಸ್ತುತ ಮುಂಗಾರು ಅವಧಿಯಲ್ಲಿ ಇದುವರೆಗೆ ಶೇ.7ರಷ್ಟು ಹೆಚ್ಚು ಮಳೆಯಾಗಿದೆ. ಈ ವರ್ಷ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅತಿವೃಷ್ಟಿಯಿಂದ ಸಮಸ್ಯೆಯಾಗುವ ಗ್ರಾಮಗಳನ್ನು ಗುರುತಿಸಲಾಗಿದೆ. 225 ಅಂತಹ ಜಲಾಗ್ರಾಮಗಳನ್ನು 1247ಗ್ರಾಮ ಪಂಚಾಯತ್‌ ಗುರುತಿಸಲಾಗಿದೆ. ಪ್ರತಿಯೊಂದು ಗ್ರಾಂ ಪಂಚಾಯತ್‌ನಲ್ಲಿ ಟಾಸ್ಕ್‌ ಪೋಸ್ಟ್‌ ರಚನೆ ಮಾಡಿ ಕಂದಾಯ ಇಲಾಖೆ, ಪಂಚಾಯತ್‌, ಪೋಲಿಸ್‌, ಅಗ್ನಿಶಾಮಕ, ಆರೋಗ್ಯ ಸೇರಿದಂತೆ ತಾಲೂಕು ಒಬ್ಬರಂತೆ ನೋಡಲ್‌ ಅಧಿಕಾರಿ ನೇಮಕಕ್ಕೆ ಸೂಚನೆ ನೀಡಲಾಗಿದೆ. ಎಲ್ಲಾ ಕಡೆ ಅಣಕುಪ್ರದರ್ಶನ ಮಾಡಲಾಗುತ್ತಿದೆ. ಬೆಳೆ ಹಾನಿ, ಮನೆ ಹಾನಿ ಎಸ್‌ಡಿಆರ್‌ಎಫ್‌ ಪ್ರಕಾರ ನೀಡಲು, ಜಿಲ್ಲಾಡಳಿತ ಮುಂಜಾಗರೂಕತೆ ವಹಿಸಲು ಸೂಚನೆ ನೀಡಲಾಗಿದೆ ಎಂದರು.

ಪ್ರಾಣ ಹಾನಿ ತಪ್ಪಿಸುವುದು ಆದ್ಯತೆಯಾಗಬೇಕು. 27 ಜಿಲ್ಲೆ 177 ತಾಲೂಕುಗಳು, 1247 ಗ್ರಾಮ ಪಂಚಾಯತ್‌ಗಳಲ್ಲಿ ಅತಿವೃಷ್ಟಿಗೆ ತುತ್ತಾಗುವುದನ್ನು ಗುರುತಿಸಲಾಗಿದ್ದು, ಪ್ರತಿ ಕಡೆ ಟಾಸ್ಕ್‌ಪೋರ್ಸ್‌ ರಚಿಸಬೇಕು. 20,38,334 ಜನರು ಪದೇ ಪದೇ ಪ್ರವಾಹಕ್ಕೆ ತುತ್ತಾಗುವುದನ್ನು ಗುರುತಿಸಲಾಗಿದೆ. ಅಂತಹ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಮನೆ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. 2225 ಗ್ರಾಮಗಳಲ್ಲಿ 2242 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಉತ್ತಮವಾಗಿ ಮಳೆಯಾಗಿದೆ. ಜಲಾಶಯಗಳಲ್ಲಿ ಒಟ್ಟು 293 ಟಿಎಂಸಿ ನೀರು ಸಂಗ್ರಹವಿದೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ 3714 ಮನೆಗಳಿಗೆ ಹಾನಿ ಉಂಟಾಗಿದ್ದು, ಎಸ್‌ಡಿಆರ್‌ಎಫ್‌ ಮಾನದಂಡ ಪ್ರಕಾರ ಪರಿಹಾರವನ್ನು ತಕ್ಷಣ ಒದಗಿಸಬೇಕು. ಹವಾಮಾನ ಇಲಾಖೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಸೂಚಿಸಲಾಯಿತು.

ಇದನ್ನೂ ಓದಿ: CM Siddaramaiah: ಡಿಸಿಗಳು ಮಹಾರಾಜರಲ್ಲ; ಬೀದಿಗಿಳಿದು ಡೆಂಗ್ಯು ನಿಯಂತ್ರಿಸದಿದ್ದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

Continue Reading

Latest

Murder Case: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!

Murder Case: ಅನೈತಿಕ ಸಂಬಂಧದಲ್ಲಿ ತೊಡಗಿ ಬದುಕಿನ ನೆಮ್ಮದಿಯನ್ನು ಕಳೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಕ್ಷಣದ ಖುಷಿಗಾಗಿ ಬದುಕಿಡೀ ಕಂಬಿ ಎಣಿಸುವ ಸ್ಥಿತಿಗೆ ತಲುಪುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.ಪ್ರಿಯಕರನಿಗಾಗಿ ಪತಿಯನ್ನೇ ಕತ್ತರಿಯಿಂದ ಪತ್ನಿಯೊಬ್ಬಳು ಕ್ರೂರವಾಗಿ ಕೊಲೆ ಮಾಡಿದ್ದಾಳೆ. ಶವವನ್ನು ಶೌಚಾಲಯದ ಚಾವಣಿಯ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾಳೆ. ಆದರೆ ಈಗ ಆಕೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Murder Case
Koo

ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧದ ಪ್ರಕರಣಗಳು ಮತ್ತು ಇದಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳು ಹೆಚ್ಚು ಸಂಭವಿಸುತ್ತಿವೆ. ಪರ ಪುರುಷರ ಸಂಗಕ್ಕೆ ಬೀಳುವ ಕೆಲವು ಮಹಿಳೆಯರು ತಮ್ಮ ಪತಿ ಹಾಗೂ ಹೆತ್ತ ಮಕ್ಕಳನ್ನು ಕೊಲ್ಲಲೂ ಹಿಂಜರಿಯುವುದಿಲ್ಲ. ಇದೀಗ ಅಂತಹದೊಂದು ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾದ ಎಟಿಎಸ್ ವೃತ್ತದ ಬಳಿ ಒಂದು ವಾರದ ಹಿಂದೆ ಕತ್ತರಿಯಿಂದ ಪತಿಯನ್ನು ಕ್ರೂರವಾಗಿ ಕೊಲೆ(Murder Case) ಮಾಡಿದ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಪೂಜಾ ಮತ್ತು ಪ್ರಹ್ಲಾದ್ ಕೊಲೆ ಮಾಡಿದ ಆರೋಪಿಗಳು. ಮಹೇಶ್ ಕೊಲೆಯಾದ ಬಲಿಪಶು. ಪೂಜಾ ಮತ್ತು ಪ್ರಹ್ಲಾದ್ ಒಂದೇ ಗ್ರಾಮದವರಾಗಿದ್ದು, ಇವರ ನಡುವೆ ಪ್ರೀತಿ ಮೂಡಿತ್ತು. ಆದರೆ ಮಹೇಶ್‍ನನ್ನು ಮದುವೆಯಾದ ಪೂಜಾ ಪತಿಯ ಜೊತೆ ಗ್ರೇಟರ್ ನೋಯ್ಡಾದ ಬಿರೋಂಡಾಕ್ಕೆ ಬಂದಿದ್ದಳು. ಅಲ್ಲಿ ಮಹೇಶ್ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ಸಮಯದಲ್ಲಿ, ಪೂಜಾ ತನ್ನ ಪ್ರಿಯಕರ ಪ್ರಹ್ಲಾದ್‍ಗೆ ಕೆಲಸ ಹುಡುಕಲು ಸಹಾಯ ಮಾಡುವ ನೆಪದಲ್ಲಿ ಗ್ರೇಟರ್ ನೋಯ್ಡಾಕ್ಕೆ ಕರೆದಳು. ಅಲ್ಲಿ ಪ್ರಹ್ಲಾದ್‍ಗೆ ಎನ್ಎಫ್ಎಲ್ ಸೊಸೈಟಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಏನೋ ಸಿಕ್ಕಿದೆ. ಆದರೆ ಆತ ಆಗಾಗ ಪೂಜಾಳನ್ನು ಭೇಟಿ ಮಾಡಲು ಪ್ರಾರಂಭಿಸಿದ. ಅಲ್ಲದೇ ಇವರ ನಡುವೆ ಅಕ್ರಮ ಸಂಬಂಧ ಮುಂದುವರಿಯಿತು ಎನ್ನಲಾಗಿದೆ.

ಆದರೆ ಜುಲೈ 1ರ ರಾತ್ರಿ ಮಹೇಶ್ ಇಲ್ಲದಿದ್ದಾಗ ಪ್ರಹ್ಲಾದ್ ಪೂಜಾಳ ಮನೆಗೆ ಭೇಟಿ ನೀಡಿದ್ದಾನೆ. ಆದರೆ, ಮಹೇಶ್ ಅನಿರೀಕ್ಷಿತವಾಗಿ ಮನೆಗೆ ಹಿಂದಿರುಗಿದಾಗ ಪ್ರಹ್ಲಾದ್ ಜೊತೆ ಪತ್ನಿ ಇರುವುದನ್ನು ಕಂಡು ಸಿಟ್ಟಾಗಿದ್ದಾನೆ. ಈ ವೇಳೆ ಪೂಜಾ ಮತ್ತು ಪ್ರಹ್ಲಾದ್ ಮಹೇಶ್ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ ಅವರು ಶವವನ್ನು ಶೌಚಾಲಯದ ಚಾವಣಿಯ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕೊಲೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಇದನ್ನೂ ಓದಿ: 1.92 ಲಕ್ಷ ರೂ. ಬೆಲೆಯ ʼಹುಕುಮ್‌ ಕಿ ರಾಣಿʼ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!

ಈಗ ಆರೋಪಿಗಳಾದ ಪೂಜಾ ಮತ್ತು ಪ್ರಹ್ಲಾದ್ ಅವರನ್ನು ಗ್ರೇಟರ್ ನೋಯ್ಡಾದ ಎಟಿಎಸ್ ವೃತ್ತದ ಬಳಿ ಪೊಲೀಸರು ಬಂಧಿಸಿದ್ದಾರೆ ಮತ್ತು ಕೊಲೆಗೆ ಬಳಸಿದ ಕತ್ತರಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನಿಬಂಧನೆಗಳ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಗ್ರೇಟರ್ ನೋಯ್ಡಾದ ಸ್ಥಳೀಯ ಬೀಟಾ 2 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Abhishek Sharma : ಅಭಿಷೇಕ್​ ಶತಕಕ್ಕೆ ಸಹೋದರಿಯ ಚಪ್ಪಾಳೆ, ವಿಡಿಯೊ ಶೇರ್ ಮಾಡಿದ ಕೋಮಲ್​ ಶರ್ಮಾ

Abhishek Sharma : ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ ಟಿ 20 ಐ ನಲ್ಲಿ ಡಕ್ ಔಟ್ ಆಗಿದ್ದರು. ತಮ್ಮ ಎರಡನೇ ಟಿ 20 ಪಂದ್ಯದಲ್ಲಿ ಅವರು ಗರಿಷ್ಠ ಲಾಭ ಪಡೆದರು. ಅವರು 47 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಜಿಂಬಾಬ್ವೆ ಬೌಲರ್ ಗಳನ್ನು ಮೈದಾನದ ಎಲ್ಲಾ ಭಾಗಗಳಿಗೆ ಅಟ್ಟಿದರು. ಅವರು ತಮ್ಮ ಇನ್ನಿಂಗ್ಸ್ ಉದ್ದಕ್ಕೂ 200 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಆಡಿದ್ದಾರೆ.

VISTARANEWS.COM


on

Abhishek Sharma
Koo

ಬೆಂಗಳೂರು: ಅಭಿಷೇಕ್ ಶರ್ಮಾ (Abhishek Sharma) ತಮ್ಮ ವೃತ್ತಿ ಜೀವನದ ಎರಡನೇ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ಚೊಚ್ಚಲ ಟಿ 20 ಶತಕ ಗಳಿಸಿದ್ದರು. ಇದರೊಂದಿಗೆ ಭಾರತಕ್ಕೆ ಜಿಂಬಾಬ್ವೆ ವಿರುದ್ಧ 100 ರನ್ ಗಳ ಗೆಲುವು ಸಿಕ್ಕಿದ್ದು, ಐದು ಪಂದ್ಯಗಳ ಸರಣಿಯಲ್ಲಿ ಸಮಬಲದ ಸಾಧನೆ ಮಾಡಿದೆ.

ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ ಟಿ 20 ಐ ನಲ್ಲಿ ಡಕ್ ಔಟ್ ಆಗಿದ್ದರು. ತಮ್ಮ ಎರಡನೇ ಟಿ 20 ಪಂದ್ಯದಲ್ಲಿ ಅವರು ಗರಿಷ್ಠ ಲಾಭ ಪಡೆದರು. ಅವರು 47 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಜಿಂಬಾಬ್ವೆ ಬೌಲರ್ ಗಳನ್ನು ಮೈದಾನದ ಎಲ್ಲಾ ಭಾಗಗಳಿಗೆ ಅಟ್ಟಿದರು. ಅವರು ತಮ್ಮ ಇನ್ನಿಂಗ್ಸ್ ಉದ್ದಕ್ಕೂ 200 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಆಡಿದ್ದಾರೆ. ಅವರು 34 ಎಸೆತಗಳಲ್ಲಿ ತಮ್ಮ ಅರ್ಧಶತಕ ಗಳಿಸಿದ್ದರು ಹಾಗೂ ಮುಂದಿನ 13 ಎಸೆತಗಳಲ್ಲಿ ತಮ್ಮ ಮುಂದಿನ 50 ರನ್ ಗಳಿಸಿದರು.

ಟಿ 20 ಪಂದ್ಯಗಳಲ್ಲಿ ಸಿಕ್ಸರ್​ನೊಂದಿಗೆ ಇನಿಂಗ್ಸ್ ಆರಂಭಿಸಿದ್ದರು ಮತ್ತು ಸತತ ಮೂರು ಸಿಕ್ಸರ್​ಗಳೊಂದಿಗೆ 100 ರನ್ ಗಳಿಸಿದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಸಿಕ್ಸರ್​ ಮೂಲಕ ಶತಕ ಗಳಿಸಿದ ಆರನೇ ಭಾರತೀಯ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತಮ್ಮ ಚೊಚ್ಚಲ ಟಿ 20 ಐ ಶತಕವನ್ನು ಗಳಿಸಲು ಕಡಿಮೆ ಇನ್ನಿಂಗ್ಸ್ (2) ತೆಗೆದುಕೊಂಡ ದಾಖಲೆಯೂ ಅವರ ಹೆಸರಿನಲ್ಲಿದೆ.

ಋತುರಾಜ್ ಗಾಯಕ್ವಾಡ್ ಅವರೊಂದಿಗೆ 37 ರನ್ ಸೇರಿಸಿದರು ಮತ್ತು 14 ನೇ ಓವರ್ ನ ಕೊನೆಯ ಎಸೆತದಲ್ಲಿ 100 ರನ್ ಗಳಿಸಿ ಔಟಾದರು. ಗಾಯಕ್ವಾಡ್ ಮತ್ತು ರಿಂಕು ಸಿಂಗ್ (22 ಎಸೆತಗಳಲ್ಲಿ 48* ರನ್) ಕೊನೆಯ ಐದು ಓವರ್​ಗಳಲ್ಲಿ 87 ರನ್​ ಸೇರಿಸಿ ಬೃಹತ್ ಮೊತ್ತವನ್ನು ಗಳಿಸಲು ಸಹಾಯ ಮಾಡಿದರು. ನಂತರ ಭಾರತೀಯ ಬೌಲರ್​ಗಳು ಜಿಂಬಾಬ್ವೆಯನ್ನು ಕೇವಲ 134 ರನ್​ಗಳಿಗೆ ಆಲೌಟ್ ಮಾಡಿದರು.

ಕುಟುಂಬದ ಸಂಭ್ರಮ

ಅಭಿಷೇಕ್​ ಶರ್ಮಾ ಸಿಕ್ಸರ್​ ಬಾರಿಸಿ ಶತಕ ದಾಖಲಿಸುತ್ತಿದ್ದಂತ ಅವರ ಕುಟುಂಬದ ಸದಸ್ಯರು ಸಂಭ್ರಸಿದ್ದಾರೆ. ಇದರ ವಿಡಿಯೊವನ್ನು ಸಹೋದರಿ ಕೋಮಲ್​ ಶರ್ಮಾ ಇಂಟರ್ನೆಟ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಮ್ಮ ಮಗ ವಿಶೇಷ ಹೆಗ್ಗುರುತನ್ನು ತಲುಪಿದ ನಂತರ ಅವರೆಲ್ಲರೂ ನಗುವುದು ಕಂಡು ಬಂತು. ಐಪಿಎಲ್​​ನ ಅವರ ಅದ್ಭುತ ಪ್ರದರ್ಶನದ ಬಳಿಕ ಶರ್ಮಾ ಅವರನ್ನು ಸರಣಿಗಾಗಿ ಈ ಭಾರತೀಯ ತಂಡಕ್ಕೆ ಸೇರಿಸಲಾಯಿತು. ಅವರು ಎಸ್​​ಆರ್​ಎಚ್​ ಪರ 16 ಇನಿಂಗ್ಸ್​ಗಳಲ್ಲಿ 204.02 ಸ್ಟ್ರೈಕ್ ರೇಟ್​​ನಲ್ಲಿ 484 ರನ್ ಗಳಿಸಿದ್ದರು.

ಇದನ್ನೂ ಓದಿ: Mumbai Cricket Association : ಮುಂಬೈನಲ್ಲಿ ನಿರ್ಮಾಣವಾಗಲಿದೆ 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಕ್ರಿಕೆಟ್​ ಸ್ಟೇಡಿಯಮ್​

ಹರಾರೆಯಲ್ಲಿ ನಡೆದ 2 ನೇ ಟಿ 20 ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ನಂತರ ಅಭಿಷೇಕ್ ಶರ್ಮಾ ಹರಾರೆ ಸ್ಪೋರ್ಟ್ಸ್ ಕ್ಲಬ್​ನಿಂದ ತಮ್ಮ ಕುಟುಂಬದೊಂದಿಗೆ ವಿಡಿಯೊ ಕಾಲ್ ಮೂಲಕ ಮಾತನಾಡಿದರು. ದಾಖಲೆಯ ಶತಕದ ನಂತರ ಅಭಿಷೇಕ್ ತನ್ನ ಹೆತ್ತವರೊಂದಿಗೆ ಮಾತನಾಡುವ ವೀಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ.

ಅಭಿಷೇಕ್ ಶರ್ಮಾ ಅವರ ಸಹೋದರಿ ಪಂಜಾಬ್​​ ಯುವ ಕ್ರಿಕೆಟಿಗನಿಗೆ ಬೆಂಬಲವಾಗಿದ್ದಾರೆ. ವೈದ್ಯರಾಗಿರುವ ಕೋಮಲ್, ಐಪಿಎಲ್ 2024 ರ ಋತುವಿನಾದ್ಯಂತ ಅಭಿಷೇಕ್ ಅವರೊಂದಿಗೆ ಸಮಯ ಕಳೆಯುತ್ತಿದ್ದರು. ಹರಾರೆಯಲ್ಲಿ ಶತಕದ ನಂತರ ಅಭಿಷೇಕ್ ಶರ್ಮಾ ತಮ್ಮ ಮಾರ್ಗದರ್ಶಕ ಮತ್ತು ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರೊಂದಿಗೆ ಮಾತನಾಡಿದರು. ಭಾರತೀಯ ಕ್ರಿಕೆಟ್ ಮಂಡಳಿ ಹಂಚಿಕೊಂಡ ವೀಡಿಯೊದಲ್ಲಿ, ಯುವರಾಜ್ ಅಭಿಷೇಕ್ ಅವರನ್ನು ಅಭಿನಂದಿಸುವುದನ್ನು ಕಾಣಬಹುದು.

Continue Reading
Advertisement
ತುಮಕೂರು6 mins ago

Koratagere News: ವೀರಶೈವ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Home remedies for Dengue
ಆರೋಗ್ಯ10 mins ago

Home remedies for Dengue: ಸರಳ ಮನೆ ಮದ್ದು ಬಳಸಿ; ಡೆಂಗ್ಯೂ ಅಪಾಯದಿಂದ ಪಾರಾಗಿ!

ಪ್ರಮುಖ ಸುದ್ದಿ10 mins ago

Menstrual Leave: ಋತುಸ್ರಾವದ ರಜೆ ಬಗ್ಗೆ ಮಾದರಿ ನೀತಿ ರೂಪಿಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್​​​ ನಿರ್ದೇಶನ

cm Siddaramaiah
ಪ್ರಮುಖ ಸುದ್ದಿ11 mins ago

CM Siddaramaiah: ರಾಜ್ಯದಲ್ಲಿ ಶೇ.80 ಬಿಪಿಎಲ್‌ ಕಾರ್ಡ್‌! ಕಡಿತ ಮಾಡಲು ಸಿಎಂ ಸೂಚನೆ

Narendra modi Russia visit
ದೇಶ13 mins ago

Narendra Modi Russia Visit: ಪ್ರಧಾನಿ ಮೋದಿ ಮೂರು ದಿನಗಳ ವಿದೇಶ ಪ್ರವಾಸ; ರಷ್ಯಾ, ಆಸ್ಟ್ರೀಯಾಕ್ಕೆ ಭೇಟಿ

ಕರ್ನಾಟಕ18 mins ago

Rain Affected areas: ಮಳೆ ಸಂತ್ರಸ್ತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಿ: ಡಿಸಿಗಳಿಗೆ ಸಿಎಂ ಸೂಚನೆ

Murder Case
Latest40 mins ago

Murder Case: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!

road Accident
ಕೊಪ್ಪಳ42 mins ago

Road Accident : ಕೊಪ್ಪಳದಲ್ಲಿ ಟಿಪ್ಪರ್‌ ಹರಿದು ಬೈಕ್‌ ಸವಾರ ಸಾವು

Abhishek Sharma
ಪ್ರಮುಖ ಸುದ್ದಿ42 mins ago

Abhishek Sharma : ಅಭಿಷೇಕ್​ ಶತಕಕ್ಕೆ ಸಹೋದರಿಯ ಚಪ್ಪಾಳೆ, ವಿಡಿಯೊ ಶೇರ್ ಮಾಡಿದ ಕೋಮಲ್​ ಶರ್ಮಾ

MUDA site scandal
ಕರ್ನಾಟಕ60 mins ago

MUDA site scandal: ಸಿಎಂ ಆಪ್ತ ರಾಕೇಶ್‌ ಪಾಪಣ್ಣಗೆ ಹಂಚಿಕೆಯಾಗಿದ್ದ ಮುಡಾ ಸೈಟ್‌ಗೂ ತಡೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ2 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

karnataka weather Forecast
ಮಳೆ19 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ21 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ22 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಟ್ರೆಂಡಿಂಗ್‌