Ramya Production House | ದೊಡ್ಡ ಗ್ಯಾಪ್‌‌ ಬಳಿಕ ‘ಚಂದನವನ’ಕ್ಕೆ ರಮ್ಯಾ ಗ್ರ್ಯಾಂಡ್‌ ಕಮ್​ ಬ್ಯಾಕ್​ ! - Vistara News

ಸಿನಿಮಾ

Ramya Production House | ದೊಡ್ಡ ಗ್ಯಾಪ್‌‌ ಬಳಿಕ ‘ಚಂದನವನ’ಕ್ಕೆ ರಮ್ಯಾ ಗ್ರ್ಯಾಂಡ್‌ ಕಮ್​ ಬ್ಯಾಕ್​ !

ನಟಿ ರಮ್ಯಾ ಪ್ರೊಡಕ್ಷನ್‌ ಹೌಸ್‌ ಲಾಂಚ್‌ ಮಾಡಿದ್ದು, ‘ಆ್ಯಪಲ್ ಬಾಕ್ಸ್‌’ ಪ್ರೊಡಕ್ಷನ್‌ ಹೌಸ್‌ ಅಡಿಯಲ್ಲಿ 2 ಸಿನಿಮಾಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ.

VISTARANEWS.COM


on

Karnataka election Ramya wont contest from Channapatna says local Congress and Nikhil Kumaraswamy
ನಟಿ ರಮ್ಯಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಮ್ಯಾ ಎಲ್ಲಿ ಹೋದರು..? ಅಂತಾ ಕೇಳುತ್ತಿದ್ದವರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆದರೆ ಈ ಬಾರಿ ಪಾಲಿಟಿಕ್ಸ್‌ಗೆ ಗುಡ್‌ ಬೈ ಹೇಳಿ ಮತ್ತೊಮ್ಮೆ ಚಿತ್ರರಂಗಕ್ಕೆ ಹಾಯ್‌ ಎಂದಿದ್ದಾರೆ ರಮ್ಯಾ. ‘ಆ್ಯಪಲ್ ಬಾಕ್ಸ್‌’ (Ramya Production House) ಹೆಸರಲ್ಲಿ ಪ್ರೊಡಕ್ಷನ್‌ ಹೌಸ್‌ ಲಾಂಚ್‌ ಮಾಡಿರುವ ರಮ್ಯಾ ‘ಚಂದನವನ’ಕ್ಕೆ ಗ್ರ್ಯಾಂಡ್‌ ಕಮ್​​ಬ್ಯಾಕ್ ಮಾಡಿದ್ದಾರೆ. ನಿನ್ನೆಯೇ ಹಿಂಟ್‌ ಕೊಟ್ಟಿದ್ದ ನಟಿ ರಮ್ಯಾ, ನಾಳೆ ಸಿಹಿಸುದ್ದಿ ಕೊಡುತ್ತೇನೆ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಹಬ್ಬದ ಸಂಭ್ರಮದ ಜೊತೆಗೆ ಇಂದು ಆ ಸಿಹಿಸುದ್ದಿ ಏನು ಅನ್ನೋದು ರಿವೀಲ್‌ ಆಗಿದೆ.

ರಮ್ಯಾ ಚಿತ್ರರಂಗಕ್ಕೆ ಮರಳುವ ಮಾತುಗಳು ಗಾಂಧಿನಗರದ ಅಂಗಳದಲ್ಲಿ ಹಲವು ದಿನಗಳಿಂದ ಹರಿದಾಡುತ್ತಿದ್ದವು. ಆದರೆ ಗಣೇಶ ಚತುರ್ಥಿಯ ಶುಭದಿನವೇ ಈ ಮಾತು ನಿಜವಾಗಿದೆ. ಮತ್ತೊಂದು ಕಡೆ ಪ್ರೊಡಕ್ಷನ್‌ ಹೌಸ್‌ಗೆ ರಮ್ಯಾ ‘ಆ್ಯಪಲ್ ಬಾಕ್ಸ್‌’ ಟೈಟಲ್‌ ಇಟ್ಟಿರೋದು ಏಕೆ..? ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಈ ಕುರಿತು ತಮ್ಮ ಟ್ವೀಟ್‌ನಲ್ಲೇ ವಿವರಣೆಯನ್ನೂ ನೀಡಿದ್ದಾರೆ ನಟಿ ರಮ್ಯಾ.

‘ಆ್ಯಪಲ್ ಬಾಕ್ಸ್‌’ ಯಾಕೆ..?
ಟ್ವಿಟ್ಟರ್‌ ಪೋಸ್ಟ್‌ನಲ್ಲಿ ರಮ್ಯಾ ಬರೆದುಕೊಂಡಂತೆ ‘ಆ್ಯಪಲ್ ಬಾಕ್ಸ್‌’ ಎಂಬ ಟೈಟಲ್‌ ಏಕೆಂದರೆ, ‘ಅದೊಂದು ಸಾಧಾರಣವಾದ, ಆದರೆ ಅಷ್ಟೇ ಉಪಯುಕ್ತವಾದ, ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆಪಲ್ ಬಾಕ್ಸ್ ಜೊತೆಗಿದೆ. ಸೆಟ್ನಲ್ಲಿ ಕೂರಲು ಕುರ್ಚಿಗಳಿಲ್ಲದೇ ಇದ್ದಾಗ ಅಥವಾ ಕ್ಯಾಮರಾದ, ಇಲ್ಲವೇ ನಟರ ಎತ್ತರ ಹೆಚ್ಚಿಸಬೇಕಾದಾಗ ಆಪಲ್ ಬಾಕ್ಸ್ ನೆರವಿಗೆ ಬಂದಿದೆ. ಈ ಪೆಟ್ಟಿಗೆಯ ಸರಳತೆ ನನಗೆ ಸದಾ ಸ್ಫೂರ್ತಿಯಾಗಿ ಪ್ರೇರೇಪಿಸಿದೆ.’ ಎಂದಿದ್ದಾರೆ ಅಭಿಮಾನಿಗಳ ಪಾಲಿನ ‘ಡಿಂಪಲ್‌ ಕ್ವೀನ್’ ನಟಿ ರಮ್ಯಾ.

2 ಸಿನಿಮಾ ರೆಡಿ..!
ಮತ್ತೊಂದು ಕಡೆ ಪ್ರೊಡಕ್ಷನ್‌ ಹೌಸ್‌ ಲಾಂಚ್‌ ಮಾಡುವ ಜೊತೆಗೆ 2 ಚಿತ್ರಗಳನ್ನು ನಿರ್ಮಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಜಿಎಫ್‌ ಖದರ್‌ನ ಕೆ.ಆರ್‌.ಜಿ ಸಂಸ್ಥೆ ಜೊತೆಗೆ ರಮ್ಯಾ ಪ್ರೊಡಕ್ಷನ್‌ ಹೌಸ್‌ ಕೈಜೋಡಿಸಿದೆ. ನಟಿ ರಮ್ಯಾ ನಿರ್ಮಿಸಲಿರುವ ಎರಡೂ ಸಿನಿಮಾಗಳನ್ನ ಕೆ.ಆರ್‌.ಜಿ ಸಂಸ್ಥೆ ವಿತರಣೆ ಮಾಡಲಿದೆ. ಇಷ್ಟು ಮಾತ್ರವಲ್ಲದೆ ಒಟಿಟಿ ಪ್ಲಾಟ್‌ ಫಾರಂನಲ್ಲೂ ಸಿನಿಮಾ ಮತ್ತು ವೆಬ್‌ ಸೀರಿಸ್‌ ನಿರ್ಮಿಸಲು ರಮ್ಯಾ ನಿರ್ಧರಿಸಿದ್ದಾರೆ.

ತಮ್ಮ ಹೊಸ ಪ್ರಯತ್ನಕ್ಕೆ ಕೈಜೋಡಿಸಿದವರಿಗೂ ರಮ್ಯಾ ಧನ್ಯವಾದ ಅರ್ಪಿಸಿದ್ದಾರೆ. ನಿರ್ಮಾಪಕ ವಿಜಯ ಕಿರಗಂದೂರ್, ಜಯಣ್ಣ, ಯೋಗಿ ಜಿ ರಾಜ್ ಮತ್ತು ಕಾರ್ತಿಕ್ ಗೌಡ ಅವರಿಗೂ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ ರಮ್ಯಾ. ಒಟ್ಟಾರೆ ಹಬ್ಬದ ದಿನವೇ ಅಭಿಮಾನಿಗಳಿಗೆ ರಮ್ಯಾ ಶುಭಸುದ್ದಿ ಕೊಟ್ಟಿದ್ದು, ಅಭಿಮಾನಿಗಳು ನೆಚ್ಚಿನ ನಟಿಯ ಪ್ರಯೋಗಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಆದರೆ ರಮ್ಯಾ ನಟನೆಯನ್ನೂ ಮಾಡ್ತಾರಾ? ಕೇವಲ ಸಿನಿಮಾಗಳ ನಿರ್ಮಾಣ ಮಾಡ್ತಾರಾ? ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ನಟಿ ರಮ್ಯಾ ಸಂಪೂರ್ಣ ಮಾಹಿತಿ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ರಮ್ಯಾ ‘ಪ್ರೊಡಕ್ಷನ್‌ ಹೌಸ್‌’ ಲಾಂಚ್‌; ನಿನ್ನೆಯೇ ಸುದ್ದಿ ಪ್ರಕಟಿಸಿದ್ದ ‘ವಿಸ್ತಾರ ನ್ಯೂಸ್’!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Duniya Vijay: ಕೊಲ್ಲೂರಿನಲ್ಲಿ ʼಸ್ಯಾಂಡಲ್‌ವುಡ್‌ ಸಲಗʼವನ್ನು ಮುತ್ತಿಕೊಂಡ ಅಭಿಮಾನಿಗಳು!

Duniya Vijay: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಾಗ ಸೆಲೆಬ್ರಿಟಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ದುನಿಯಾ ವಿಜಯ್ (Duniya Vijay) ಅವರು ಕೊಲ್ಲೂರು ಮೊಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.ದುನಿಯಾ ವಿಜಯ್ ಅವರು ‘ಭೀಮ’ ಸಿನಿಮಾದಲ್ಲಿ ನಟಿಸುವುದ ಜತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ನಿಖಿಲ್ ಕುಮಾರ್ ಸಿನಿಮಾದಲ್ಲೂ ದುನಿಯಾ ವಿಜಯ್ ನಟಿಸುತ್ತಿದ್ದಾರೆ.

VISTARANEWS.COM


on

Duniya Vijay Visited Kolluru Shri Mookambika Devi Temple
Koo

ದುನಿಯಾ ವಿಜಯ್ (Duniya Vijay) ಅವರು ಕೊಲ್ಲೂರು ಮೊಕಾಂಬಿಕಾ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ದುನಿಯಾ ವಿಜಯ್ ಅವರನ್ನು ನೋಡಲು ಫ್ಯಾನ್ಸ್ ಮುತ್ತಿಕೊಂಡಿದ್ದಾರೆ. ಎಲ್ಲರೂ ಬಂದು ದುನಿಯಾ ವಿಜಯ್ ಬಳಿ ಸೆಲ್ಫಿ ಕೇಳಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಾಗ ಸೆಲೆಬ್ರಿಟಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ನಟಿ ಹರ್ಷಿಕಾ ಪೂಣಚ್ಚ ವಿಶೇಷ ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ: Duniya Vijay: ಪುತ್ರಿಗಾಗಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌

ಇದಾದ ಬಳಿಕ ಚಿತ್ರರಂಗದ ಸ್ಟಾರ್ ನಟ ಮೋಹನ್‌ಲಾಲ್ ಭೇಟಿ ನೀಡಿ, ಮುಂಜಾನೆ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡಿದ್ದರು.

ದುನಿಯಾ ವಿಜಯ್ ಅವರು ‘ಭೀಮ’ ಸಿನಿಮಾದಲ್ಲಿ ನಟಿಸುವುದ ಜತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ನಿಖಿಲ್ ಕುಮಾರ್ ಸಿನಿಮಾದಲ್ಲೂ ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ (Duniya Vijay) ಕೆಲವು ದಿನಗಳ ಹಿಂದೆಯಷ್ಟೇ ಹೊಸ ಸಿನಿಮಾ ಘೋಷಣೆ ಮಾಡಿದ್ದರು. ವಿಶೇಷ ಅಂದರೆ ಈ ಸಿನಿಮಾ ಮೂಲಕ ದುನಿಯಾ ವಿಜಯ್‌ ಅವರ ಮಗಳು ಮೋನಿಕಾ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ.

Continue Reading

ಕಾಲಿವುಡ್

Vettaiyan Movie: ರಜನಿಕಾಂತ್ ಸಿನಿಮಾದಲ್ಲಿ ಅನಿರುದ್ಧ್ ರವಿಚಂದರ್; ಲೀಕ್‌ ಆಯ್ತು ಫೋಟೊ!

Vettaiyan Movie: ಅನಿರುದ್ಧ್ ರವಿಚಂದರ್ ಅವರು 2015 ರ ಚಿತ್ರ ʻಮಾರಿʼ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಧನುಷ್ ನಾಯಕನಾಗಿ ನಟಿಸಿರುವ ಸಿನಿಮಾ ಇದು. ಅದಲ್ಲದೇ . ಅನಿರುದ್ಧ್ ರವಿಚಂದರ್ ಅವರ ಹಾಡುಗಳ ಪ್ರಚಾರದ ಲಿರಿಕಲ್ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಜನಿಕಾಂತ್ ಅವರ ಮುಂಬರುವ ಚಿತ್ರ ʻವೆಟ್ಟೈಯಾನ್‌ʼನಲ್ಲಿ ಕಂಡಿದ್ದಾರೆ ಅನಿರುದ್ಧ್‌.

VISTARANEWS.COM


on

Vettaiyan Movie Anirudh Ravichander to make a special appearance in Rajinikanth
Koo

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ 170ನೇ ಸಿನಿಮಾ ʼವೆಟ್ಟೈಯಾನ್ʼ (Vettaiyan Movie) ಟೈಟಲ್ ಟೀಸರ್ ಮೂಲಕವೇ ಕುತೂಹಲ ಹೆಚ್ಚಿಸಿತ್ತು. ತಮಿಳು ನಟ ಸೂರ್ಯ ಅಭಿನಯದ ‘ಜೈ ಭೀಮ್’ ಚಿತ್ರದ ನಿರ್ದೇಶಕ ಟಿ.ಎಸ್. ಜ್ಞಾನವೇಲ್ ‘ವೆಟ್ಟೈಯಾನ್’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ʻತಲೈವಾʼ ಹಾಗೂ ʻಬಿಗ್ ಬಿʼ ಸಂಗಮ. ಇದೀಗ ಅನಿರುದ್ಧ್ ರವಿಚಂದರ್ (Anirudh Ravichander) ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಅನಿರುದ್ಧ್ ರವಿಚಂದರ್ ನಟನೆ ಮಾಡಿರುವ ಪೋಟೊವೊಂದು ಲೀಕ್‌ ಆಗಿದೆ. ಹೀಗಾಗಿ ಅನಿರುದ್ಧ್ ರವಿಚಂದರ್ ನಟಿಸಿರೋದು ಪಕ್ಕಾ ಎನ್ನುತ್ತಿದೆ ಮೂಲ.

ಅನಿರುದ್ಧ್ ರವಿಚಂದರ್ ಅವರು 2015ರ ಚಿತ್ರ ʻಮಾರಿʼ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಧನುಷ್ ನಾಯಕನಾಗಿ ನಟಿಸಿರುವ ಸಿನಿಮಾ ಇದು. ಅದಲ್ಲದೇ . ಅನಿರುದ್ಧ್ ರವಿಚಂದರ್ ಅವರ ಹಾಡುಗಳ ಪ್ರಚಾರದ ಲಿರಿಕಲ್ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಜನಿಕಾಂತ್ ಅವರ ಮುಂಬರುವ ಚಿತ್ರ ʻವೆಟ್ಟೈಯಾನ್‌ʼನಲ್ಲಿ ಕಂಡಿದ್ದಾರೆ ಅನಿರುದ್ಧ್‌.

ಇದನ್ನೂ ಓದಿ: Vettaiyan Movie: ಬಾಕ್ಸಾಫೀಸ್ ಬೇಟೆಗೆ ತಲೈವಾ ರೆಡಿ; ರಜನಿಯ ‘ವೆಟ್ಟೈಯಾನ್’ ಬಿಡುಗಡೆಗೆ ಮುಹೂರ್ತ ಫಿಕ್ಸ್!

ರಜನಿ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಫಹದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ದುಷಾರ ವಿಜಯನ್, ರಿತಿಕಾ ಸಿಂಗ್ ಮತ್ತು ಇನ್ನೂ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ‌ ನಡೆಸಲಾಗಿದೆ.

ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ʼವೆಟ್ಟೈಯಾನ್ʼ ಸಿನಿಮಾ ನಿರ್ಮಿಸುತ್ತಿದೆ.

Continue Reading

ಕಿರುತೆರೆ

Mokshitha Pai: ವಿಶೇಷ ಚೇತನ ತಮ್ಮನನ್ನು ಅಮ್ಮನಂತೆ ಆರೈಕೆ ಮಾಡುತ್ತಿರುವ ʻಪಾರುʼ

Mokshitha Pai: ʻಮೋಕ್ಷಿತಾ ಪೈʼ (Mokshitha Pai) ಅವರ ರಿಯಲ್​ ಲೈಫ್​ ಕೂಡ ಸೀರಿಯಲ್‌ ಪಾತ್ರದ ತರಹವೇ ತ್ಯಾಗಮಯವೇ ಆಗಿದೆ.ಮೋಕ್ಷಿತಾ ಪೈ ಅವರಿಗೆ ಚಿಕ್ಕ ತಮ್ಮನೊಬ್ಬನಿದ್ದಾನೆ. ಸದ್ಯ ಈ ತಮ್ಮನಿಗೆ ಮೋಕ್ಷಿತಾ ಅವರೇ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಅವನು ವಿಶೇಷ ಚೇತನ. ಅವನ ಆರೈಕೆಯನ್ನು ನಟಿ ಮಾಡುತ್ತಾರೆ. ಈ ಬಗ್ಗೆ ನಟಿ ಅದೆಷ್ಟೋ ಬಾರಿ ಹೇಳಿಕೊಂಡಿದ್ದರು. ಇದೀಗ ನಟಿ ತಮ್ಮ ಯುಟ್ಯೂಬ್‌ನಲ್ಲಿ ದಿನವಿಡಿ ತಮ್ಮನನ್ನು ಹೇಗೆ ನೋಡಿಕೊಳ್ಳುತ್ತೇನೆ ಎಂದು ವಿಡಿಯೊ ಶೇರ್‌ ಮಾಡಿಕೊಂಡಿದ್ದಾರೆ.

VISTARANEWS.COM


on

Mokshita Pai realistic morning routine With special Child brother
Koo

ಬೆಂಗಳೂರು : ಜೀ ಕನ್ನಡದಲ್ಲಿ ಪ್ರಮುಖ ಧಾರಾವಾಹಿಗಳಲ್ಲಿ ʻಪಾರುʼ ಕೂಡ ಒಂದಾಗಿತ್ತು. ಇದೀಗ ಈ ಸೀರಿಯಲ್‌ ಅಂತ್ಯ ಕಂಡಿದೆ. ಪಾರು ಧಾರಾವಾಹಿ ಮುಖ್ಯ ನಾಯಕಿ ʻಮೋಕ್ಷಿತಾ ಪೈʼ (Mokshitha Pai) ಅವರ ರಿಯಲ್​ ಲೈಫ್​ ಕೂಡ ಸೀರಿಯಲ್‌ ಪಾತ್ರದ ತರಹವೇ ತ್ಯಾಗಮಯವೇ ಆಗಿದೆ. ಐದು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ಪಾರು (Paaru) ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಅರಸನ ಕೋಟೆಯ ಮನೆ ಕೆಲಸದಾಳುವಾಗಿರುವ ಪಾರು ಅದೇ ಮನೆಗೆ ಸೊಸೆಯಾಗಿ ಬಂದ ನಂತರ ನಡೆದಿರುವ ಘಟನೆಗಳ ಸುತ್ತಲೂ ಈ ಧಾರಾವಾಹಿಯ ಕಥೆ ಹೆಣೆಯಲ್ಪಟ್ಟಿತ್ತು. ಇದೀಗ ನಾಯಕಿ ಮೋಕ್ಷಿತಾ ಪೈ ಅವರ ರಿಯಲ್‌ ಲೈಫ್‌ ಬಗ್ಗೆ ಕೇಳಿ ಪ್ರೇಕ್ಷಕರು ಬೇಸರ ಹೊರಹಾಕಿದ್ದಾರೆ.

ಧಾರಾವಾಹಿಯಲ್ಲಿ ಪಾರು ಪಾತ್ರಧಾರಿ ಹೇಗೆ ಇತ್ತು ಎಂದರೆ, ಪಾರು ಮೈದುನನ ಪತ್ನಿಗಾಗಿ ತನ್ನ ಮಗುವನ್ನೇ ತ್ಯಾಗ ಮಾಡಿದ್ದಳು. ಮೈದುನನ ಪತ್ನಿ ಜನನಿ ತನ್ನ ಮಗುವನ್ನು ಕಳೆದುಕೊಂಡಾಗ ಅದು ಆಕೆಗೆ ಗೊತ್ತಾಗಬಾರದು ಎಂದು ಪಾರು ತನ್ನ ಮಗುವನ್ನೇ ಆಕೆಗೆ ಕೊಟ್ಟಿದ್ದಳು. ಆದರೆ ಜನನಿಗೆ ಮಾತ್ರ ತಿಳಿದಿರಲಿಲ್ಲ. ಕೊನೆಗೂ ಅಂತ್ಯದಲ್ಲಿ ಎಲ್ಲವೂ ತಿಳಿದು ಸೀರಿಯಲ್​ ಅಂತ್ಯ ಕಂಡಿತ್ತು. ಈ ರೀತಿ ತ್ಯಾಗಮಯ ವ್ಯಕ್ತಿತ್ವ ಪಾರುದು. ಆದರೆ ರಿಯಲ್‌ ಲೈಫ್‌ನಲ್ಲಿಯೂ ಮೋಕ್ಷತಾ ಬಾಳಿನಲ್ಲಿ ನೋವು ತುಂಬಿದೆ.

ಇದನ್ನೂ ಓದಿ: Paaru TV Serial: ಬೋಲ್ಡ್ ಅವತಾರದಲ್ಲಿ ಪಾರು ಧಾರಾವಾಹಿಯ ದಾಮಿನಿ!

ಮೋಕ್ಷಿತಾ ಪೈ ಅವರಿಗೆ ಚಿಕ್ಕ ತಮ್ಮನೊಬ್ಬನಿದ್ದಾನೆ. ಸದ್ಯ ಈ ತಮ್ಮನಿಗೆ ಮೋಕ್ಷಿತಾ ಅವರೇ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಅವನು ವಿಶೇಷ ಚೇತನ. ಅವನ ಆರೈಕೆಯನ್ನು ನಟಿ ಮಾಡುತ್ತಾರೆ. ಈ ಬಗ್ಗೆ ನಟಿ ಹೇಳಿಕೊಂಡಿದ್ದರು. ಒಮ್ಮೆ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮೋಕ್ಷಿತಾ ಅವರು ತನ್ನ ತಮ್ಮನನ್ನು ನಾನೇ ತಂದೆ ಹಾಗೂ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದೇನೆ. ಅವನಿಗೂ ನಾನೆಂದರೆ ತುಂಬಾ ಇಷ್ಟ ಎಂದು ಭಾವುಕರಾಗಿದ್ದರು. ಮಾತ್ರವಲ್ಲ, ಒಂದು ದಿನವೂ ಬಿಡದೇ ನನ್ನ ಧಾರಾವಾಹಿ ನೋಡುತ್ತಿದ್ದ ಎಂದು ಹೇಳಿಕೊಂಡಿದ್ದರು.

ಇದೀಗ ನಟಿ ತಮ್ಮ ಯುಟ್ಯೂಬ್‌ನಲ್ಲಿ ದಿನವಿಡಿ ತಮ್ಮನನ್ನು ಹೇಗೆ ನೋಡಿಕೊಳ್ಳುತ್ತೇನೆ ಎಂದು ವಿಡಿಯೊ ಶೇರ್‌ ಮಾಡಿಕೊಂಡಿದ್ದಾರೆ. ದಿನಪೂರ್ತಿ ಶೂಟಿಂಗ್​ ಇರುವ ಸಮಯದಲ್ಲಿ ಇಂಥ ಮಕ್ಕಳಿಗೆ ಗಮನ ಕೊಡುವುದು ಬಹಳ ಕಷ್ಟ ಆದರೂ ಅದನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಮೋಕ್ಷಿತಾ. ಇನ್ನು ತಮ್ಮನಿಗಾಗಿ ಮೋಕ್ಷಿತಾ ಅವರು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಅರ್ಧಕ್ಕೆ ನಿಲ್ಲಿಸಿದ್ದರಂತೆ. ಏನೇ ಆಗಲಿ ಈಗ ತಮ್ಮನ ಆರೈಕೆ ಕಂಡು ಫ್ಯಾನ್ಸ್‌ ಕೂಡ ನಟಿಯನ್ನು ಹಾಡಿ ಹೊಗಳುತ್ತಿದ್ದಾರೆ.

ಪಾರು ಧಾರಾವಾಹಿ

ಈ ಧಾರಾವಾಹಿಯಲ್ಲಿ ವಿನಯ್ ಪ್ರಸಾದ್ ಪಾತ್ರ ಅಖಿಲಾಂಡೇಶ್ವರಿ ಪ್ರಮುಖ ಹೈಲೈಟ್‌. ಅರಸನ ಕೋಟೆಯನ್ನು ಬೆಳೆಸುತ್ತ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುವ ಹೆಣ್ಣು ಮಗಳು ಅಖಿಲಾಂಡೇಶ್ವರಿ. ವಿನಯಾಪ್ರಸಾದ್ ಅವರು ಅಖಿಲಾಂಡೇಶ್ವರಿ ಪಾತ್ರದಲ್ಲಿ ಕಿರುತೆರೆಗೆ ಕಾಲಿಟ್ಟು ನಟನೆಯ ಮೂಲಕ ಧಾರಾವಾಹಿಯ ಘನತೆ ಹೆಚ್ಚಿಸಿದ್ದರು. ಆದಿ ಪಾತ್ರದ ಶರತ್, ಪಾರು ಪಾತ್ರದ ಮೋಕ್ಷಿತಾ ಪೈ ವೀಕ್ಷಕರ ಹೃದಯಕ್ಕೆ ಹತ್ತಿರವಾಗಿದ್ದರು. ಎಸ್. ನಾರಾಯಣ್ ಅವರು ವೀರಯ್ಯದೇವ, ನಾಗೇಂದ್ರ ಶಾ ಅವರು ಹನುಮಂತು ಮತ್ತು ನಾಗೇಶ್ ಯಾದವ್ ಅವರು ರಘು ರಾಮ್ ಕೂಡ ನಟಿಸಿದ್ದರು.

Continue Reading

ಕಿರುತೆರೆ

Bhavyashree Poojary: ರಮೇಶ್‌ ಅರವಿಂದ್‌ ನಿರ್ಮಾಣದ ಧಾರಾವಾಹಿಗೆ ಗುಡ್‌ಬೈ ಹೇಳಿದ ಭವ್ಯಶ್ರೀ ಪೂಜಾರಿ! ಕಾರಣವೇನು?

Bhavyashree Poojary: ಕನ್ನಡ ಕಿರುತೆರೆಯಲ್ಲಿ ಸುಮಾರು ಒಂದು ವರ್ಷದ ಹಿಂದೆ ಸ್ಟಾರ್‌ ಸುವರ್ಣದಲ್ಲಿ ʻನೀನಾದೆ ನಾʼ ಎಂಬ ಸೀರಿಯಲ್‌ ಆರಂಭವಾಗಿತ್ತು. ಈ ಕತೆಯಲ್ಲಿ ಅಪರಿಚಿತ ಹೃದಯಗಳ ಅನಿರೀಕ್ಷಿತ ಪ್ರೇಮಯಾನವೇ ‘ನೀನಾದೆ ನಾ’. ನೀನಾದೆ ನಾ ಸೀರಿಯಲ್‌ನಲ್ಲಿ ಭವ್ಯಶ್ರೀ ಅವರ ಶೈಲೂ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಕನ್ನಡ ಕಿರುತೆರೆಯಲ್ಲಿ ʻಕಮಲಿʼ, ʻನಾಗಿಣಿ 2ʼ, ʻಮಂಗಳಗೌರಿ ಮದುವೆʼ, ʻಅರಮನೆ ಗಿಳಿʼ, ʻಸುಂದರಿʼ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದ, ನಟಿ ಭವ್ಯಶ್ರೀ ಇದೀಗ ʻನೀನಾದೆ ಸೀರಿಯಲ್‌ʼಗೆ ಗುಡ್‌ಬೈ ಹೇಳಿದ್ದಾರೆ.

VISTARANEWS.COM


on

Bhavyashree Poojary exit Neenade Naa Serial
Koo

ʻನಂದಿನಿ 2ʼ, ʻಸುಂದರಿʼ ಸೀರಿಯಲ್‌ನ ನಿರ್ಮಾಣ ಮಾಡಿರುವ ರಮೇಶ್, ಇದೀಗ ‘ನೀನಾದೆ ನಾʼ (Neenadena Serial) ಎಂಬ ಸೀರಿಯಲ್‌ಗೆ ಕೈ ಜೋಡಿಸಿದ್ದರು. ಕನ್ನಡ ಕಿರುತೆರೆಯಲ್ಲಿ ʻಕಮಲಿʼ, ʻನಾಗಿಣಿ 2ʼ, ʻಮಂಗಳಗೌರಿ ಮದುವೆʼ, ʻಅರಮನೆ ಗಿಳಿʼ, ʻಸುಂದರಿʼ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದ, ನಟಿ ಭವ್ಯಶ್ರೀ ಇದೀಗ ʻನೀನಾದೆ ಸೀರಿಯಲ್‌ʼಗೆ ಗುಡ್‌ಬೈ ಹೇಳಿದ್ದಾರೆ.

ನೀನಾದೆ ನಾ ಸೀರಿಯಲ್‌ನಲ್ಲಿ ಭವ್ಯಶ್ರೀ ಅವರ ಶೈಲೂ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

ಧಾರಾವಾಹಿಯಿಂದ ಹೊರನಡೆದದ್ದು ಯಾಕೆ ಎಂದು ನಟಿ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ʻʻನಮಸ್ಕಾರ. ಕಳೆದ ಒಂದು ವರ್ಷದಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿಯಲ್ಲಿ ನನ್ನ ‘ಶೈಲೂ’ ಪಾತ್ರಕ್ಕೆ ಜೀವ ತುಂಬಿ, ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ… ಇದೀಗ ನನ್ನ ವೈಯುಕ್ತಿಕ ಕಾರಣಗಳಿಂದ, ಆ ಪಾತ್ರದಿಂದ ಹೊರ ಬಂದಿದ್ದೇನೆ. ಈ ಸಂದರ್ಭದಲ್ಲಿ ಇಂತಹ ಅದ್ಭುತವಾದ ಅವಕಾಶವನ್ನು ನೀಡಿದ ರಮೇಶ್‌ ಅರವಿಂದ್‌ ಸರ್‌ ಅವರಿಗೆ, ರವಿ ಜೋಶಿ ಸರ್ ಅವರಿಗೆ ಹಾಗೂ ಸ್ವಾರ್‌ ಸುವರ್ಣ ವಾಹಿನಿಗೆ ನನ್ನ ಹೃದಯಂತರಾಳದ ಧನ್ಯವಾದಗಳು. ನನ್ನ ಈ ಪಯಣದಲ್ಲಿ ಜತೆಯಾದ ಧಾರಾವಾಹಿಯ ಎಲ್ಲಾ ತಾಂತ್ರೀಕ ಕುಟುಂಬಕ್ಕೆ ಹಾಗೂ ಕಲಾವಿದ ಸ್ನೇಹಿತರಿಗೆ ನನ್ನ ನಮನ. ಇಷ್ಟು ದಿನ ನೀವೆಲ್ಲರೂ ನನ್ನ ‘ಶೈಲೂ’ ಪಾತ್ರವನ್ನು ಮನಸಾರೆ ಮೆಚ್ಚಿ, ಹರಸಿದಿರಿ. ನಿಮ್ಮ ಪ್ರೀತಿಗೆ ನಾನು ಋಣಿ. ನಿಮಗೆಲ್ಲ ನನ್ನ ಕೋಟಿ ನಮನ. ಭೂಮಿ ದುಂಡಗಿದೆ…ಮತ್ತೊಂದು ಪಾತ್ರದೊಂದಿಗೆ, ಮತ್ತೆ ನಿಮ್ಮ ಮುಂದೆ ಬರುತ್ತೆನೆ. ಆಗ ಮತ್ತೆ ಭೇಟಿಯಾಗೋಣ..ಸದಾ ನಿಮ್ಮ ಆಶೀರ್ವಾದ, ಪ್ರೀತಿ ಇರಲಿ. ಧನ್ಯವಾದಗಳುʼʼಎಂದು ಭವ್ಯಶ್ರೀ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Physical Abuse: ನಡುಬೀದಿಯಲ್ಲಿ ಲೈಂಗಿಕ ಕಿರುಕುಳ, ಹೆಂಡತಿಯನ್ನು ಕಳಿಸುವಂತೆ ಗಂಡನಿಗೆ ಬೆದರಿಕೆ

ಕನ್ನಡ ಕಿರುತೆರೆಯಲ್ಲಿ ಸುಮಾರು ಒಂದು ವರ್ಷದ ಹಿಂದೆ ಸ್ಟಾರ್‌ ಸುವರ್ಣದಲ್ಲಿ ʻನೀನಾದೆ ನಾʼ ಎಂಬ ಸೀರಿಯಲ್‌ ಆರಂಭವಾಗಿತ್ತು. ಈ ಕತೆಯಲ್ಲಿ ಅಪರಿಚಿತ ಹೃದಯಗಳ ಅನಿರೀಕ್ಷಿತ ಪ್ರೇಮಯಾನವೇ ‘ನೀನಾದೆ ನಾ’. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ರು ಕೂಡ ಸಂಸ್ಕಾರ-ಸಂಸ್ಕೃತಿ ಆಚಾರ-ವಿಚಾರಗಳನ್ನು ಪರಿಪಾಲಿಸುವಲ್ಲಿ ಸದಾ ಮುಂದೆ ಈ ಕತೆಯ ನಾಯಕಿ ‘ವೇದಾ’. ಇನ್ನು ನಾಯಕ ವಿಕ್ರಮ್. ಗುಂಡಾಗಿರಿ ಮಾಡಿಕೊಂಡು, ತನ್ನ ಬಾಸ್ ಹೇಳಿದನ್ನು ಚಾಚು ತಪ್ಪದೆ ಮಾಡೋ ಈತನಿಗೆ, ಆಚಾರ-ವಿಚಾರ ಸಂಸ್ಕಾರವಂತೂ ಇಲ್ವೇ ಇಲ್ಲ. ‘ನೀನಾದೆ ನಾ’ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ಅಭಿನಯಿಸುತ್ತಿದ್ದಾರೆ.

Continue Reading
Advertisement
Koppala ZP CEO Rahul Ratnam Pandeya Spoke in Progress review meeting at kanakagiri
ಕೊಪ್ಪಳ1 second ago

Koppala News: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಿಗುವಂತೆ ಕ್ರಮ ಕೈಗೊಳ್ಳಲು ಜಿ.ಪಂ ಸಿಇಒ ಸೂಚನೆ

LPG Price Cut
ದೇಶ10 mins ago

LPG Price Cut: ತಿಂಗಳ ಆರಂಭದಲ್ಲೇ ಗುಡ್‌ನ್ಯೂಸ್‌; ಎಲ್‌ಪಿಜಿ ಬೆಲೆ 19 ರೂ. ಇಳಿಕೆ

Ambedkar Statue in kalaburagi news
ಕಲಬುರಗಿ19 mins ago

Ambedkar Statue: ಅಂಬೇಡ್ಕರ್‌ ಪ್ರತಿಮೆ ಅಪಮಾನ ಕೇಸ್‌; ಜಾಮೀನು ಪಡೆದ ಆರೋಪಿ ಮನೆಗೆ ಕಲ್ಲು ತೂರಾಟ

gold rate today 18
ಚಿನ್ನದ ದರ37 mins ago

Gold Rate Today: ಬಂಗಾರ‌ ಇಂದೇ ತಗೊಳ್ಳಿ! ಚಿನ್ನದ ಬೆಲೆ ಭಾರೀ ಇಳಿಕೆ; ಇಂದು ಇಷ್ಟಿದೆ ನೋಡಿ

Delhi Congress
ರಾಜಕೀಯ40 mins ago

Delhi Congress: ದಿಲ್ಲಿ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು; ಪಕ್ಷಕ್ಕೆ ಗುಡ್‌ಬೈ ಹೇಳಿದ ಮಾಜಿ ಶಾಸಕರು

Duniya Vijay Visited Kolluru Shri Mookambika Devi Temple
ಸಿನಿಮಾ42 mins ago

Duniya Vijay: ಕೊಲ್ಲೂರಿನಲ್ಲಿ ʼಸ್ಯಾಂಡಲ್‌ವುಡ್‌ ಸಲಗʼವನ್ನು ಮುತ್ತಿಕೊಂಡ ಅಭಿಮಾನಿಗಳು!

Vettaiyan Movie Anirudh Ravichander to make a special appearance in Rajinikanth
ಕಾಲಿವುಡ್52 mins ago

Vettaiyan Movie: ರಜನಿಕಾಂತ್ ಸಿನಿಮಾದಲ್ಲಿ ಅನಿರುದ್ಧ್ ರವಿಚಂದರ್; ಲೀಕ್‌ ಆಯ್ತು ಫೋಟೊ!

Divorce Case
ಕ್ರೈಂ1 hour ago

Divorce Case: ಪತಿ, ಕುಟುಂಬದ ವಿರುದ್ಧದ ಸುಳ್ಳು ಕೇಸು ಕ್ರೌರ್ಯಕ್ಕೆ ಸಮಾನ; ಬಾಂಬೆ ಹೈಕೋರ್ಟ್

Hassan Pen Drive Case Prajwal Revanna
ಕ್ರೈಂ1 hour ago

Hassan Pen Drive Case: ಮೇ 3ರಂದು ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ, ಬಂದ ತಕ್ಷಣ ಎಸ್‌ಐಟಿ ವಶಕ್ಕೆ?

Mokshita Pai realistic morning routine With special Child brother
ಕಿರುತೆರೆ1 hour ago

Mokshitha Pai: ವಿಶೇಷ ಚೇತನ ತಮ್ಮನನ್ನು ಅಮ್ಮನಂತೆ ಆರೈಕೆ ಮಾಡುತ್ತಿರುವ ʻಪಾರುʼ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌