Bera movie: ಬೇರ: ಕೋಮು ದ್ವೇಷದ ಮೂಲ ಚಿತ್ರಿಸುವ ಕನ್ನಡ ಸಿನಿಮಾ ಜೂನ್‌ 16ರಂದು ರಿಲೀಸ್ - Vistara News

ಸಿನಿಮಾ

Bera movie: ಬೇರ: ಕೋಮು ದ್ವೇಷದ ಮೂಲ ಚಿತ್ರಿಸುವ ಕನ್ನಡ ಸಿನಿಮಾ ಜೂನ್‌ 16ರಂದು ರಿಲೀಸ್

ಸಮಾಜದಲ್ಲಿ ಕೋಮು ದ್ವೇಷವನ್ನು ಹೇಗೆ ಸೃಷ್ಟಿಸಲಾಗುತ್ತದೆ, ಹಿಂಸಾಚಾರವನ್ನು ಹೇಗೆ ಕೆರಳಿಸಲಾಗುತ್ತದೆ ಎಂಬುದು ʼಬೇರʼ ಚಿತ್ರದ ಕಥೆಯಂತೆ. ಈ ಚಿತ್ರವು ಜೂನ್ 16ರಂದು ಬಿಡುಗಡೆಯಾಗಲಿದೆ.

VISTARANEWS.COM


on

bera kannada film
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಮಾಜದಲ್ಲಿ ಕೋಮು ಸೌಹಾರ್ದವನ್ನು ಪ್ರತಿಪಾದಿಸುವ ಇನ್ನೊಂದು ಕನ್ನಡ ಚಲನಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ʼಬೇರ- ಮರ್ಚೆಂಟ್‌ ಆಫ್‌ ಡೆತ್‌ʼ ಎಂಬ ಹೆಸರಿನ ಈ ಚಿತ್ರವನ್ನು ವಿನು ಬಳಂಜ ನಿರ್ದೇಶಿಸಿದ್ದಾರೆ.

ಕೋಮುಗಳ ನಡುವಿನ ಸಂಘರ್ಷವನ್ನು ಹೇಳುವ ʼದಿ ಕಾಶ್ಮೀರ್ ಫೈಲ್ಸ್ʼ ಮತ್ತು ʼದಿ ಕೇರಳ ಸ್ಟೋರಿʼಗಳು ದೊಡ್ಡ ವಿವಾದಗಳನ್ನು ಹುಟ್ಟುಹಾಕಿದ್ದವು. ಈ ಹಿನ್ನೆಲೆಯಲ್ಲಿ, ಸಮಾಜದಲ್ಲಿ ಕೋಮು ದ್ವೇಷವನ್ನು ಹೇಗೆ ಸೃಷ್ಟಿಸಲಾಗುತ್ತದೆ, ಹಿಂಸಾಚಾರವನ್ನು ಹೇಗೆ ಕೆರಳಿಸಲಾಗುತ್ತದೆ ಎಂಬುದು ʼಬೇರʼ ಚಿತ್ರದ ಕಥೆಯಂತೆ. ಈ ಚಿತ್ರವು ಜೂನ್ 16ರಂದು ಬಿಡುಗಡೆಯಾಗಲಿದೆ. ʼಬೇರʼ ಎಂದರೆ ತುಳು ಭಾಷೆಯಲ್ಲಿ ವ್ಯಾಪಾರ ಎಂದರ್ಥ.

“ಕೋಮು ದ್ವೇಷವನ್ನು ಹೇಗೆ ಹುಟ್ಟುಹಾಕಲಾಗುತ್ತದೆ, ಪೋಷಿಸಲಾಗುತ್ತದೆ ಮತ್ತು ಘೋರ ಹಿಂಸಾಚಾರವನ್ನು ಸೃಷ್ಟಿಸಲಾಗುತ್ತದೆ ಎಂಬುದನ್ನು ವಾಸ್ತವಕ್ಕೆ ಹತ್ತಿರವಾದ ಸ್ಕ್ರಿಪ್ಟ್ ಮೂಲಕ ತೆರೆಗೆ ತರಲು ಯತ್ನಿಸಿದ್ದೇನೆ. ಕೆಲವು ಬಲಪಂಥೀಯ ಗುಂಪುಗಳ ನಾಯಕತ್ವದಲ್ಲಿರುವವರು ಇಂತಹ ಕೃತ್ಯಗಳಿಂದ ಬದುಕುತ್ತಿದ್ದಾರೆʼʼ ಎಂದು ಚಿತ್ರದ ಬರಹಗಾರ- ನಿರ್ದೇಶಕ ವಿನು ಬಳಂಜ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಿನು ಬಳಂಜ ಅವರು ಕಿರುತೆರೆಯಲ್ಲಿ ಹಲವಾರು ಹಿಟ್ ಧಾರಾವಾಹಿಗಳನ್ನು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. “ಎರಡೂ ಕಡೆಯ, ಹಿಂದೂ ಮತ್ತು ಮುಸ್ಲಿಂ- ಎರಡೂ ಧರ್ಮಗಳ ಕೆಲವು ಮೂಲಭೂತವಾದಿ ಶಕ್ತಿಗಳು ಹಣ ಗಳಿಕೆಗಾಗಿ ಹೇಗೆ ಕೋಮು ಸಮಸ್ಯೆಗಳನ್ನು ಸೃಷ್ಟಿಸುತ್ತವೆ, ಮತ್ತು ನಾಯಕತ್ವದ ಸ್ಥಾನಕ್ಕೆ ಏರಲು ಯತ್ನಿಸುತ್ತವೆ ಎಂಬುದು ನನ್ನ ಚಲನಚಿತ್ರದ ಕಥೆ. ಇವರು ಎರಡೂ ಧರ್ಮಗಳ ಮುಗ್ಧ ಜನರ ಧಾರ್ಮಿಕ ಭಾವನೆಗಳನ್ನು ಬಂಡವಾಳ ಮಾಡಿಕೊಳ್ಳುತ್ತಾರೆ ಎಂಬುದನ್ನು ತೋರಿಸುತ್ತದೆ” ಎಂದು ಬಳಂಜ ತಿಳಿಸಿದರು.

ದಿ ಕೇರಳ ಸ್ಟೋರಿ ಚಿತ್ರ ವಿವಾದದಲ್ಲಿರುವ ಹೊತ್ತಿನಲ್ಲಿ ಬರುತ್ತಿರುವ ಈ ಚಿತ್ರ ಅದಕ್ಕೆ ಪ್ರತ್ಯುತ್ತರ ಅಲ್ಲವಂತೆ. ʼʼಬೇರ ಆ ಚಿತ್ರಗಳಿಗೆ ಉತ್ತರವಲ್ಲ. ಮೂಲಭೂತವಾದಿ ಶಕ್ತಿಗಳು ರಾಜ್ಯದಲ್ಲಿ ಹೇಗೆ ಕೋಮು ಶಾಂತಿಯನ್ನು ಕದಡುತ್ತಿವೆ ಎಂಬುದಕ್ಕೆ ಈ ಚಿತ್ರ ಉತ್ತರ ನೀಡಲಿದೆʼʼ ಎಂದಿದ್ದಾರೆ.

ಬೇರ ಚಿತ್ರದ ಟೀಸರ್‌ ಮತ್ತು ಟ್ರೇಲರ್‌ ಅನ್ನು ಯೂಟ್ಯೂಬ್‌ನಲ್ಲಿ 10 ಲಕ್ಷ ಹಾಗೂ 5 ಲಕ್ಷ ಜನ ವೀಕ್ಷಿಸಿದ್ದಾರೆ. ʼʼಯಾರೂ ನನಗೆ ಇದುವರೆಗೆ ಬೆದರಿಕೆ ಹಾಕಿಲ್ಲ; ಯಾರೂ ದೂರು ಸಲ್ಲಿಸಿಲ್ಲ. ಪ್ರದರ್ಶನಕ್ಕೆ ಯಾರ ಆಕ್ಷೇಪವೂ ಇಲ್ಲವೆಂದು ಭಾವಿಸುತ್ತೇನೆʼʼ ಎಂದಿದ್ದಾರೆ ಬಳಂಜ. ಯಶ್‌ ಶೆಟ್ಟಿ, ಹರ್ಷಿಕಾ ಪೂಣಚ್ಚ, ದತ್ತಣ್ಣ, ಸುಮನ್‌ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ: 72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Actress Priyamani: ಕೇರಳದ ದೇವಾಲಯವೊಂದಕ್ಕೆ `ಯಾಂತ್ರಿಕ ಆನೆ’ ಉಡುಗೊರೆ ಕೊಟ್ಟ ಪ್ರಿಯಾಮಣಿ!

Actress Priyamani: ಇದು ಜೀವಂತ ಆನೆಯಲ್ಲ. ಯಾಂತ್ರಿಕ ಆನೆ. ಈ ಯಾಂತ್ರಿಕ ಆನೆಯ ಹೆಸರು ಮಹದೇವನ್‌. ಭಾನುವಾರ (ಮಾ.18) ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಹದೇವನ್ ಆನೆಯನ್ನು ಅಧಿಕೃತವಾಗಿ ದೇವಾಲಯಕ್ಕೆ ಸೇರ್ಪಡೆಗೊಳಿಸಲಾಯಿತು.

VISTARANEWS.COM


on

Priyamani donate mechanical elephant
Koo

ಕೇರಳದ ಕೊಚ್ಚಿಯಲ್ಲಿನ ತ್ರಿಕಾಯಿಲ್ ಮಹದೇವನ್ ದೇವಾಲಯಕ್ಕೆ ( Thrikkayil Mahadeva Temple ) ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಬಹುಭಾಷಾ ನಟಿ ಪ್ರಿಯಾಮಣಿ. ಆದರೆ ಇದು ಜೀವಂತ ಆನೆಯಲ್ಲ. ಯಾಂತ್ರಿಕ ಆನೆ. ಈ ಯಾಂತ್ರಿಕ ಆನೆಯ ಹೆಸರು ಮಹದೇವನ್‌. ಈ ಯಾಂತ್ರಿಕ ಆನೆಯನ್ನು ದೇವಸ್ಥಾನದಲ್ಲಿ ಸುರಕ್ಷಿತ ರೀತಿಯಲ್ಲಿ ಬಳಸಲಾಗುವುದು ಎಂದು ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ ಇಂಡಿಯಾ (People for Ethical Treatment of Animals India) ಎಂಬ ಸಂಸ್ಥೆ ಮಾಧ್ಯಮಕ್ಕೆ ತಿಳಿಸಿದೆ. ಕೇರಳದಲ್ಲಿ ಪರಿಚಯಿಸಲಾಗುತ್ತಿರುವ ಎರಡನೇ ಯಾಂತ್ರಿಕ ಆನೆ ಇದಾಗಿದೆ.

ಭಾನುವಾರ (ಮಾ.18) ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಹದೇವನ್ ಆನೆಯನ್ನು ಅಧಿಕೃತವಾಗಿ ದೇವಾಲಯಕ್ಕೆ ಸೇರ್ಪಡೆಗೊಳಿಸಲಾಯಿತು. ಕೇರಳದಲ್ಲಿ ಪರಿಚಯಿಸಲಾಗುತ್ತಿರುವ ಎರಡನೇ ಯಾಂತ್ರಿಕ ಆನೆ ಇದಾಗಿದೆ ಎಂದು ವರದಿಯಾಗಿದೆ. ಉದ್ಘಾಟನಾ ಸಮಾರಂಭದ ನಂತರ ಮಾಸ್ಟರ್ ವೇದಾರ್ಥ್ ರಾಮನ್ ಮತ್ತು ಅವರ ತಂಡದಿಂದ ಚೆಂಡೆ ಮೇಳದ ಪ್ರದರ್ಶನ, ವೇಣು ಮಾರಾರ್ ಮತ್ತು ಅವರ ತಂಡದಿಂದ ಪಂಚವಾದ್ಯ ಪ್ರದರ್ಶನ ನಡೆಯಿತು.

“ತಂತ್ರಜ್ಞಾನದ ಬೆಳವಣಿಗೆಯಿಂದ ನಾವು ನಮ್ಮ ಶ್ರೀಮಂತ ಸಾಂಸ್ಕೃತಿಕ ಆಚರಣೆಗಳನ್ನು ಉಳಿಸಿಕೊಳ್ಳಬಹುದು. ಮತ್ತು ಪ್ರಾಣಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವ ಪರಂಪರೆ ಇದಾಗಲಿದೆ” ಎಂದು ಪ್ರಿಯಾಮಣಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Actress Priyamani:  ಐಷಾರಾಮಿ ಕಾರು ಖರೀದಿಸಿದ ನಟಿ ಪ್ರಿಯಾಮಣಿ; ಬೆಲೆ ಎಷ್ಟು?

ದೇವಸ್ಥಾನದ ಮುಖ್ಯಸ್ಥ ತೆಕ್ಕಿಣಿಯೇದತ್ ವಲ್ಲಭನ್ ನಂಬೂತಿರಿ ಮಾತನಾಡಿ, “ತಮ್ಮ ಕುಟುಂಬಗಳೊಂದಿಗೆ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಬದುಕಲು ಬಯಸುವ ದೇವರು ಸೃಷ್ಟಿಸಿದ ಎಲ್ಲಾ ಪ್ರಾಣಿಗಳಿಗೆ ಗೌರವಾರ್ಥವಾಗಿ ನಾವು ಪ್ರಿಯಾಮಣಿ ನೀಡಿರುವ ಕೃತಕ ಆನೆಯನ್ನು ಸ್ವೀಕರಿಸಿದ್ದೇವೆ. ಇನ್ನು ಮುಂದೆ ನಾವು ಜೀವಂತ ಆನೆಯನ್ನು ದೇವಾಲಯದ ಯಾವುದೇ ಧಾರ್ಮಿಕ ಅಥವಾ ಇನ್ಯಾವುದೇ ಕಾರ್ಯಗಳಿಗೆ ಬಳಸುವುದಿಲ್ಲʼʼ ಎಂದು ಹೇಳಿದರು. ಕಳೆದ ವರ್ಷ ಕೇರಳದ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನದಲ್ಲಿ ರೋಬೋಟಿಕ್ ಆನೆಯನ್ನು ಪರಿಚಯಿಸಲಾಗಿತ್ತು.

ಕರ್ನಾಟಕ ಮೂಲದ ನಟಿ ಪ್ರಿಯಾಮಣಿ ಪ್ರಾಣಿ ಪ್ರೇಮಿ. ಕೆಲವು ಪ್ರಾಣಿ ದಯಾ ಸಂಘದ ಕಾರ್ಯಗಳಲ್ಲಿ ಪ್ರಿಯಾಮಣಿ ತೊಡಗಿಕೊಂಡಿದ್ದಾರೆ. 2023ರ ಜನಗಣತಿಯ ಪ್ರಕಾರ, ಕೇರಳದಲ್ಲಿ 2,386 ಕಾಡಾನೆಗಳಿವೆ. ದೇವಾಲಯಗಳು, ಅರಣ್ಯ ಇಲಾಖೆ ಮತ್ತು ಖಾಸಗಿ ಮಾಲೀಕರ ಮಾಲೀಕತ್ವದ ಸುಮಾರು 412 ಸೇರಿದಂತೆ 700ಕ್ಕೂ ಹೆಚ್ಚು ಆನೆಗಳು ಜನರ ಸೆರೆಯಲ್ಲಿ ಉಳಿದಿವೆ.

Continue Reading

ಬಾಲಿವುಡ್

Vedaa teaser out: ಜಾನ್ ಅಬ್ರಹಾಂ ನಟನೆಯ ಆ್ಯಕ್ಷನ್-ಪ್ಯಾಕ್ಡ್ ‘ವೇದಾ’ ಟೀಸರ್ ಔಟ್‌

Vedaa teaser out: ಶಾರ್ವರಿ ಅವರು ಜಾನ್ ಅಬ್ರಹಾಂ ಜತೆ ಮೊದಲ ಬಾರಿಗೆ ನಟಿಸಿದ್ದಾರೆ. ಈ ಮೊದಲು ಅವರು ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಅವರು ‘ಮಹಾರಾಜ’ ಸಿನಿಮಾದಲ್ಲಿ ನಟಿಸಿದ್ದಾರೆ. ವೇದಾ ಸಿನಿಮಾ “ಹೈ-ಎನರ್ಜಿ ಆ್ಯಕ್ಷನ್-ಡ್ರಾಮಾ” ಎಂದು ಚಿತ್ರತಂಡ ಹೇಳಿಕೊಂಡಿದೆ.

VISTARANEWS.COM


on

John Abraham Vedaa teaser out
Koo

ಬೆಂಗಳೂರು: ಜಾನ್ ಅಬ್ರಹಾಂ (John Abraham) ನಟನೆಯ ಬಹು ನಿರೀಕ್ಷಿತ ಆಕ್ಷನ್-ಪ್ಯಾಕ್ಡ್ ಚಿತ್ರ ‘ವೇದಾ’ ಟೀಸರ್ (Vedaa teaser out) ಔಟ್‌ ಆಗಿದೆ. ಜಾನ್ ಅಬ್ರಹಾಂ ಮತ್ತು ಅಭಿಷೇಕ್ ಬ್ಯಾನರ್ಜಿ ನಡುವಿನ ಮುಖಾಮುಖಿಯ ಒಂದು ಝಲಕ್‌ ಅನಾವರಣಗೊಂಡಿದೆ. ಶಾರ್ವರಿ ವಾಘ್ ಕೂಡ ರಗಡ್‌ ಆಗಿಯೇ ಕಂಡಿದ್ದಾರೆ.

ನಿಖಿಲ್ ಅಡ್ವಾಣಿ ನಿರ್ದೇಶನದ ‘ವೇದಾ’ ಜುಲೈ 12ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಮೊದಲು ರಿಲೀಸ್‌ ಆಗಿದ್ದ ʻಬಾಟ್ಲಾ ಹೌಸ್ʼ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ನಿಖಿಲ್ ಅಡ್ವಾಣಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʻʻಬಾಟ್ಲಾ ಹೌಸ್ʼ ನೈಜ ಘಟನೆ ಆಧರಿಸಿ ಸಿದ್ಧವಾದ ಸಿನಿಮಾವಾಗಿತ್ತು. ‘ವೇದಾ ಇದು ಕೇವಲ ಸಿನಿಮಾ ಅಲ್ಲ. ನೈಜ ಘಟನೆ ಆಧರಿಸಿದ ನಮ್ಮ ಸಮಾಜದ ಪ್ರತಿಬಿಂಬ. ಅಬ್ರಾಹಂ ಹಾಗೂ ಶಾರ್ವರಿ ಈ ಚಿತ್ರದ ನಾಯಕ, ನಾಯಕಿ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾನ್ ಕಾಶ್ಮೀರದಲ್ಲಿ ವೇದಾ ಚಿತ್ರೀಕರಣದ ಸ್ಕೆಡ್ಯೂಲ್‌ ಮುಗಿಸಿದ್ದರು. ದಕ್ಷಿಣ ಕಾಶ್ಮೀರದ ಶ್ರೀನಗರ ಮತ್ತು ಅನಂತನಾಗ್ ಜಿಲ್ಲೆಯಲ್ಲಿ ಚಿತ್ರೀಕರಣ ಮಾಡಲಾಗಿದೆ ʼʼಎಂದು ಹೇಳಿಕೊಂಡಿದ್ದರು ನಿಖಿಲ್‌.

ಶಾರ್ವರಿ ಅವರು ಜಾನ್ ಅಬ್ರಹಾಂ ಜತೆ ಮೊದಲ ಬಾರಿಗೆ ನಟಿಸಿದ್ದಾರೆ. ಈ ಮೊದಲು ಅವರು ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಅವರು ‘ಮಹರಾಜ’ ಸಿನಿಮಾದಲ್ಲಿ ನಟಿಸಿದ್ದಾರೆ. ವೇದಾ ಸಿನಿಮಾ “ಹೈ-ಎನರ್ಜಿ ಆ್ಯಕ್ಷನ್-ಡ್ರಾಮಾ” ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರವನ್ನು ಜೀ ಸ್ಟುಡಿಯೋಸ್, ಜಾನ್ಸ್ ಜೆಎ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.

ಇದನ್ನೂ ಓದಿ: John Abraham: ಜಾನ್ ಅಬ್ರಹಾಂ ಇದೀಗ ವಿಲನ್‌ ಅಲ್ಲ ಹೀರೊ; ಹೊಸ ಸಿನಿಮಾ ಅನೌನ್ಸ್‌!

ಜಾನ್ ಅಬ್ರಹಾಂ ಅವರು ಸಿದ್ಧಾರ್ಥ್ ಆನಂದ್ ಅವರು ನಿರ್ದೇಶಿಸಿದ ʻಪಠಾಣ್ʼ ಚಿತ್ರದಲ್ಲಿ ಜಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Continue Reading

ಬಾಲಿವುಡ್

Mukesh Khanna: ʻಶಕ್ತಿಮಾನ್ʼ ಆಗುವ ಯೋಗ್ಯತೆ ರಣವೀರ್‌ಗೆ ಇಲ್ಲ ಎಂದ ಮಹಾಭಾರತದ ʻಭೀಷ್ಮʼ!

Mukesh Khanna: ರಣವೀರ್‌ ಸಿಂಗ್‌ (Ranveer Singh) ಈ ಪಾತ್ರಕ್ಕೆ ಸೂಕ್ತ ಎಂದು ಹೇಳಲಾಗಿತ್ತು. ಆದರೆ ಮುಖೇಶ್ ಖನ್ನಾ ಶಕ್ತಿಮಾನ್ ಆಗುವ ಅರ್ಹತೆ-ಯೋಗ್ಯತೆ ಎರಡೂ ರಣವೀರ್ ಸಿಂಗ್‌ಗೆ ಇಲ್ಲ ಅಂದಿದ್ದಾರೆ.

VISTARANEWS.COM


on

Mukesh Khanna rejects Ranveer Singh as Shaktimaan
Koo

ಬೆಂಗಳೂರು: ಮುಖೇಶ್ ಖನ್ನಾ (Mukesh Khanna) ಅವರು ಭಾರತದ ಮೊದಲ ಸೂಪರ್‌ಹೀರೊ. ʻಶಕ್ತಿಮಾನ್ʼ ಹಾಗೂ ಮಹಾಭಾರತದ ಭೀಷ್ಮ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದಾರೆ. 90ರ ದಶಕದ ಭಾರತದ ಸೂಪರ್ ಹೀರೊ ʻಶಕ್ತಿಮಾನ್ʼಗೆ ಮರುಜೀವ ನೀಡುವ ಚರ್ಚೆ ನಡೆಯುತ್ತಿದೆ. ರಣವೀರ್‌ ಸಿಂಗ್‌ (Ranveer Singh) ಈ ಪಾತ್ರಕ್ಕೆ ಸೂಕ್ತ ಎಂದು ಹೇಳಲಾಗಿತ್ತು. ಆದರೆ ಮುಖೇಶ್ ಖನ್ನಾ ಶಕ್ತಿಮಾನ್ ಆಗುವ ಅರ್ಹತೆ-ಯೋಗ್ಯತೆ ಎರಡೂ ರಣವೀರ್ ಸಿಂಗ್‌ಗೆ ಇಲ್ಲ ಅಂದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಣವೀರ್ ಸಿಂಗ್ ಅವರ ಕೊಲಾಜ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಟ ತನ್ನ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದು, “ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ಶಕ್ತಿಮಾನ್ ಪಾತ್ರದಲ್ಲಿ ನಟಿಸುತ್ತಾರೆ ಎಂಬ ವದಂತಿಗಳಿವೆ. ಆದರೆ ಆಗ ನಾನು ಮೌನವಾಗಿದ್ದೆ. ಆದರೆ ರಣವೀರ್ ಈ ಸಿನಿಮಾಗೆ ಸಹಿ ಹಾಕಿದ್ದಾರೆ ಎಂದು ಮಾಧ್ಯಮಗಳು ಘೋಷಿಸುತ್ತಿದ್ದಂತೆ ಈ ಬಗ್ಗೆ ಮಾತನಾಡಬೇಕು ಎಂದೆನಿಸಿತು. ರಣವೀರ್‌ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ, ಕೆಟ್ಟ ಇಮೇಜ್ ಹೊಂದಿರುವ ವ್ಯಕ್ತಿ. ಅವರು ಎಂದಿಗೂ ಶಕ್ತಿಮಾನ್ ಆಗಲು ಸಾಧ್ಯವಿಲ್ಲʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: RCB Unbox Event: ಇಂದಿನ ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ವಿರಾಟ್​ ಕೊಹ್ಲಿಯೂ ಹಾಜರ್​!

ರಣವೀರ್ ಸಿಂಗ್ ನಗ್ನ ಫೋಟೋಶೂಟ್!

ಈ ಹಿಂದೆ ಮ್ಯಾಗಜೀನ್‌ಗಾಗಿ ರಣವೀರ್ ನಗ್ನ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದಕ್ಕೆ ಮುಖೇಶ್ ಅವರು ಟೀಕಿಸಿದ್ದರು.

ʻʻಬೆತ್ತಲೆಯಾಗಿ ನಟಿಸುವುದು ಭಾರತದ ಸಂಸ್ಕೃತಿ ಅಲ್ಲ ಹಾಗೊಂದು ವೇಳೆ ಬೆತ್ತಲೆಯಾಗಿ ಕಾಣಿಸಿಕೊಳ್ಳುವುದು ಅವರಿಗೆ ಸರಿ ಎನಿಸಿದರೆ ಫಿನ್ ಲ್ಯಾಂಡ್ ಅಥವಾ ಸ್ಪೇನ್‌ಗೆ ಹೋಗಲಿʼʼ ಎಂದು ಮುಖೇಶ್ ಖನ್ನಾ ಹೇಳಿದ್ದರು.

“ನಿಮ್ಮ ಸ್ಪರ್ಧೆ ಸ್ಪೈಡರ್ ಮ್ಯಾನ್, ಬ್ಯಾಟ್‌ಮ್ಯಾನ್, ಕ್ಯಾಪ್ಟನ್ ಪ್ಲಾನೆಟ್‌ನೊಂದಿಗೆ ಅಲ್ಲ ಎಂದು ನಾನು ನಿರ್ಮಾಪಕರಿಗೆ ಹೇಳಿದ್ದೇನೆ. ಶಕ್ತಿಮಾನ್ ಸೂಪರ್ ಹೀರೋ ಅಲ್ಲ, ಸೂಪರ್ ಟೀಚರ್ ಕೂಡ ಆಗಿದ್ದಾರೆ. ಆ ಪಾತ್ರವನ್ನು ಮಾಡುವ ನಟನಿಗೆ ಅಂಥ ಗುಣ ಇರಬೇಕು. ಅವನು ಹೇಳಿದರೆ ಜನರು ಕೇಳುವಂತಿರಬೇಕು ಎಂದು ಹೇಳಿರುವ ಮುಖೇಶ್ ಖನ್ನಾ, ರಣವೀರ್‌ ಸಿಂಗ್ ಹೊರತು ಪಡಿಸಿ ಶಕ್ತಿಮಾನ್ ಪಾತ್ರಕ್ಕೆ ಹೊಂದುವಂತ ಸ್ಟಾರ್ ನಟರು ಇದ್ದಾರೆ. ಆದರೆ ಅವರ ಇಮೇಜ್ ಅಡ್ಡ ಬರುತ್ತೆʼʼ ಎಂದಿದ್ದಾರೆ. ಮಲಯಾಳಂ ನಿರ್ದೇಶಕ ಬಾಸಿಲ್ ಜೋಸೆಫ್ ಶಕ್ತಿಮಾನ್ ಚಿತ್ರವನ್ನ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ.

Continue Reading

ಸ್ಯಾಂಡಲ್ ವುಡ್

Kannada New Movie: ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ

Kannada New Movie: ಡೊಳ್ಳು ಸಾರಥಿ ಸಾಗರ್ ಪುರಾಣಿಕ್ ಹಾಗೂ ಪವನ್ ಒಡೆಯರ್ ಮತ್ತೊಂದು ಸಂಗಮದ ಸಿನಿಮಾ ಸೆಟ್ಟೇರಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ.

VISTARANEWS.COM


on

Kannada New Movie Pavan Kumar Wadeyar New Movie
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ (Kannada New Movie) ಯಶ್, ಪುನೀತ್ ರಾಜ್ ಕುಮಾರ್ ಅವರಂತಹ ಸ್ಟಾರ್ ನಟರಿಗೆ ಸಿನಿಮಾ ಮಾಡಿ ಸೈ ಎನಿಸಿಕೊಂಡವರು ಪವನ್ ಒಡೆಯರ್. ನಿರ್ದೇಶನದಲ್ಲಿ ಗೆದ್ದಿರುವ ಪವನ್ ನಿರ್ಮಾಪಕರಾಗಿಯೂ ಮೊದಲ ಹೆಜ್ಜೆಯಲ್ಲಿ ಶಹಬಾಸ್ ಗಿರಿ ಪಡೆದುಕೊಂಡಿದ್ದಾರೆ. ʻಡೊಳ್ಳುʼ ಸಿನಿಮಾ ಮೂಲಕ ನಿರ್ಮಾಣಕ್ಕಿಳಿದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಪವನ್ ಒಡೆಯರ್ ಮತ್ತೊಮ್ಮೆ ಸಾಗರ್ ಪುರಾಣಿಕ್ ಜತೆ ಕೈ ಜೋಡಿಸಿರುವುದು ಗೊತ್ತೇ ಇದೆ.

ಡೊಳ್ಳು ಸಾರಥಿ ಸಾಗರ್ ಪುರಾಣಿಕ್ ಹಾಗೂ ಪವನ್ ಒಡೆಯರ್ ಮತ್ತೊಂದು ಸಂಗಮದ ಸಿನಿಮಾ ಸೆಟ್ಟೇರಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ʻವೆಂಕ್ಯಾʼ ಎಂಬ ಟೈಟಲ್ ಇಡಲಾಗಿದೆ. ವೆಂಕ್ಯಾನಿಗೆ ಸಾಗರ್ ಪುರಾಣಿಕ್ ಆಕ್ಷನ್ ಕಟ್ ಹೇಳುವುದರ ಜತೆಗೆ ನಾಯಕನಾಗಿಯೂ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ದೇಶನದ ಜೊತೆಗೆ ಸಾಗರ್ ನಟನೆ ಜವಾಬ್ದಾರಿನ್ನು ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ: Kannada New Movie: ’ಭುವನಂ ಗಗನಂ’ ಸಿನಿಮಾಗೆ ಧ್ರುವ ಸರ್ಜಾ ಸಾಥ್‌!

ವೆಂಕ್ಯಾ ಶೂಟಿಂಗ್ ಈಗಾಗಲೇ ಚಾಲುವಾಗಿದೆ. ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ. ಉತ್ತರ ಕರ್ನಾಟಕದ ಕಥೆಯಾದ್ರೂ ಅದು ದೇಶ ಎಲ್ಲಾ ಸುತ್ತಲಿದೆ. ಇದೊಂದು ಹೊಸ ಬಗೆಯ ಕಮರ್ಷಿಯಲ್ ಸಿನಿಮಾ ಅಂತಿದೆ ಚಿತ್ರತಂಡ. ಶೀಘ್ರದಲ್ಲೇ ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ಹಣ ಹಾಕುತ್ತಿರುವ ವೆಂಕ್ಯಾ ಚಿತ್ರಕ್ಕೆ ಸ್ನೇಹಿತರಾದ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಸಹ ನಿರ್ಮಾಣವಿರಲಿದೆ.

Continue Reading
Advertisement
Nagarthpet protest by BJP
ಬೆಂಗಳೂರು4 mins ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

viral video
ಕ್ರೀಡೆ35 mins ago

Imad Wasim: ಡ್ರೆಸ್ಸಿಂಗ್‌ ರೂಮ್​ನಲ್ಲೇ ರಾಜಾರೋಷವಾಗಿ ಸಿಗರೇಟ್‌ ಸೇದಿದ ಪಾಕ್​ ಆಟಗಾರ

Pashupati Kumar Paras
ಪ್ರಮುಖ ಸುದ್ದಿ35 mins ago

Lok Sabha Election: ಚಿರಾಗ್‌ಗೆ ಮಣೆ ಹಾಕಿದ ಎನ್‌ಡಿಎ, ಸಿಟ್ಟಿಗೆದ್ದ ಕೇಂದ್ರ ಸಚಿವ ಪಶುಪತಿ ಕುಮಾರ್‌ ಪರಾಸ್‌ ರಾಜೀನಾಮೆ

Water crisis Youth climbs mobile tower in Vijayapura
ವಿಜಯಪುರ54 mins ago

Water Crisis: ವಿಜಯಪುರದ ಗ್ರಾಮದಲ್ಲಿ ಕುಡಿಯುವ ನೀರಿಲ್ಲವೆಂದು ಮೊಬೈಲ್‌ ಟವರ್‌ ಏರಿದ ಯುವಕ!

Priyamani donate mechanical elephant
ಸಿನಿಮಾ55 mins ago

Actress Priyamani: ಕೇರಳದ ದೇವಾಲಯವೊಂದಕ್ಕೆ `ಯಾಂತ್ರಿಕ ಆನೆ’ ಉಡುಗೊರೆ ಕೊಟ್ಟ ಪ್ರಿಯಾಮಣಿ!

Murder Case Haveri newsMurder Case Haveri news
ಹಾವೇರಿ1 hour ago

Murder Case : ತನ್ನನ್ನು ಮದುವೆಯಾಗಲು ನಿರಾಕರಿಸಿದ ಸೊಸೆಯನ್ನೇ ಕೊಂದ ಮಾವ!

Illicit relationship Murder Case
ಕ್ರೈಂ1 hour ago

Illicit Relationship : ವಿಜಯಪುರದಲ್ಲಿ ಜೋಡಿ ಕೊಲೆ; ಅಕ್ರಮ ಸಂಬಂಧಕ್ಕಾಗಿ ನಡೆಯಿತಾ ಹತ್ಯೆ?

gold in hand
ಚಿನ್ನದ ದರ1 hour ago

Gold Rate Today: ಬಿಸಿಲಿನಂತೆ ಏರತೊಡಗಿದೆ ಚಿನ್ನದ ಬೆಲೆ ! ಇಂದು ಎಷ್ಟಿದೆ ನೋಡಿ

rohit sharma
ಕ್ರೀಡೆ1 hour ago

IPL 2024: ರೋಹಿತ್ ಬ್ಯಾಟಿಂಗ್​​ ಅಭ್ಯಾಸದ ವಿಡಿಯೊ ಹಂಚಿಕೊಂಡ ಮುಂಬೈ ಇಂಡಿಯನ್ಸ್

John Abraham Vedaa teaser out
ಬಾಲಿವುಡ್2 hours ago

Vedaa teaser out: ಜಾನ್ ಅಬ್ರಹಾಂ ನಟನೆಯ ಆ್ಯಕ್ಷನ್-ಪ್ಯಾಕ್ಡ್ ‘ವೇದಾ’ ಟೀಸರ್ ಔಟ್‌

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Nagarthpet protest by BJP
ಬೆಂಗಳೂರು4 mins ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು19 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

ಟ್ರೆಂಡಿಂಗ್‌