Shivaraj kumar: ಚಿತ್ರರಂಗಕ್ಕೆ ಬಂದು 37 ವರ್ಷ: ಅಭಿಮಾನಿಗಳಿಗೆ ಪತ್ರ ಬರೆದ ಶಿವಣ್ಣ - Vistara News

Latest

Shivaraj kumar: ಚಿತ್ರರಂಗಕ್ಕೆ ಬಂದು 37 ವರ್ಷ: ಅಭಿಮಾನಿಗಳಿಗೆ ಪತ್ರ ಬರೆದ ಶಿವಣ್ಣ

ಕನ್ನಡ ಚಿತ್ರೋದ್ಯಮಕ್ಕೆ ಬಂದು 37 ವರ್ಷಗಳು ಆಗಿರುವ ಹಿನ್ನೆಲೆಯಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಅಭಿಮಾನಿಗಳಿಗೆ ಧನ್ಯವಾದದ ಪತ್ರ ಬರೆದಿದ್ದಾರೆ.

VISTARANEWS.COM


on

Shivaraj Kumar Birthday
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ 37 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ನಟ ಶಿವರಾಜ್‌ ಕುಮಾರ್‌ ಅವರು ಅಭಿಮಾನಿಗಳಿಗೂ ಕನ್ನಡ ಚಿತ್ರರಸಿಕರಿಗೂ ಧನ್ಯವಾದ ತಿಳಿಸಿದ್ದಾರೆ.

ತಮ್ಮ ಮೊದಲ ಚಿತ್ರ “ಆನಂದ್‌ ನೆನಪಿಸಿಕೊಂಡು ಅಭಿಮಾನಿಗಳಿಗೆ ಶಿವಣ್ಣ ಪತ್ರ ಬರೆದಿದ್ದಾರೆ. ʼʼನಮ್ಮ ಕನ್ನಡ ಚಿತ್ರರಂಗಕ್ಕೆ ನಾನು ಪಾದಾರ್ಪಣೆ ಮಾಡಿ ಇಂದಿಗೆ (19-02-2023) 37 ವರ್ಷ ಆಗಿದೆ. ಆನಂದ್‌ ಚಿತ್ರದ ಮೊದಲ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ! ಆನಂದ್‌ ಇಂದ ವೇದವರೆಗೂ ನೀವು ಕೊಟ್ಟ ಪ್ರೀತಿ ಬೆಲೆ ಕಟ್ಟಲಾಗದ್ದು. ನನ್ನನ್ನು ನೀವು ಕೇವಲ ಒಬ್ಬ ನಟನಾಗಿ, ಸ್ಟಾರ್‌ ಆಗಿ ಮಾತ್ರವಲ್ಲದೆ ನಿಮ್ಮ ಮನೆಮಗನಾಗಿ ಬೆಳೆಸಿದ್ದೀರಿ. ದೇವರ ಸ್ವರೂಪವಾಗಿರುವ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ, ಹಿರಿಯರಿಗೆ, ಕಿರಿಯರಿಗೆ, ಸಹೋದ್ಯೋಗಿಗಳಿಗೆ ಹಾಗೂ ನನ್ನ ಇಡೀ ಕುಟುಂಬಕ್ಕೆ ಅನಂತ ವಂದನೆಗಳುʼʼ ಎಂದು ಶಿವಣ್ಣ ಟ್ವೀಟ್‌ ಮಾಡಿದ್ದಾರೆ.

1962ರಲ್ಲಿ ಜನಿಸಿದ ಶಿವರಾಜ್‌ ಕುಮಾರ್‌ 1986ರಲ್ಲಿ ಅನಂದ್‌ ಚಿತ್ರದ ಮೂಲಕ ಸಿನಿಮಾ ನಟನೆಗೆ ಕಾಲಿಟ್ಟಿದ್ದರು. ಆನಂದ್‌ ಸೇರಿದಂತೆ ಅವರ ಮೂರೂ ಆರಂಭಿಕ ಚಿತ್ರಗಳು (ಆನಂದ್‌, ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಶತದಿನ ಪ್ರದರ್ಶನ ಕಂಡಿದ್ದವು. ಹೀಗಾಗಿ ಅವರು ಹ್ಯಾಟ್ರಿಕ್‌ ಸ್ಟಾರ್‌ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ʼವೇದʼ ಶಿವಣ್ಣನ 125ನೇ ಚಿತ್ರವಾಗಿದೆ.

ಇದನ್ನೂ ಓದಿ: Shivarajkumar: ಶಿವಣ್ಣ ಅಭಿನಯದ ‘ವೇದ’ ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಗ್ಯಾಜೆಟ್ಸ್

Phone Storage Issue: ನಿಮ್ಮ ಮೊಬೈಲ್ ಸ್ಟೋರೇಜ್ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ!

ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆ ಎದುರಾಗುವುದು ಸಾಮಾನ್ಯ. ವಿಶೇಷವಾಗಿ ಅನೇಕ ಅಪ್ಲಿಕೇಶನ್‌, ಫೋಟೋ, ವಿಡಿಯೋಗಳು ಮತ್ತು ಇತರ ಫೈಲ್‌ಗಳನ್ನು ಹೆಚ್ಚಾಗುತ್ತಾ ಹೋದಂತೆ ಫೋನ್ ನಲ್ಲಿ ಜಾಗದ ಸಮಸ್ಯೆ (Phone Storage Issue) ಎದುರಾಗುತ್ತದೆ. ಹೊಸ ಫೋನ್ ಖರೀದಿಸದೆಯೇ ಫೋನ್‌ನಲ್ಲಿ ಜಾಗವನ್ನು ಮುಕ್ತಗೊಳಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ.

VISTARANEWS.COM


on

By

Phone Storage Issue
Koo

ಎಲ್ಲರ ಫೋನ್ ನಲ್ಲಿ (phone) ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ಸ್ಟೋರೇಜ್ (Phone Storage Issue). ಎಷ್ಟೇ ಒಳ್ಳೆಯ ಫೋನ್ ಆಗಿದ್ದರೂ ವರ್ಷ ಕಳೆಯುವಷ್ಟರಲ್ಲಿ ಸ್ಟೋರೇಜ್ ಫುಲ್ (storage full) ಎಂಬುದಾಗಿ ತೋರಿಸಲು ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ನಾವು ಜೋಪಾನ ಮಾಡಿ ಇಡಬೇಕು ಎಂದುಕೊಂಡಿರುವ ಫೈಲ್, ಫೋಟೋ, ವಿಡಿಯೋಗಳನ್ನು ಇಷ್ಟವಿಲ್ಲದೇ ಇದ್ದರೂ ಡಿಲೀಟ್ ಮಾಡಲೇಬೇಕಾದ ಸಂದರ್ಭ ಎದುರಾಗುತ್ತದೆ.

ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆ ಎದುರಾಗುವುದು ಸಾಮಾನ್ಯ. ವಿಶೇಷವಾಗಿ ಅನೇಕ ಅಪ್ಲಿಕೇಶನ್‌, ಫೋಟೋ, ವಿಡಿಯೋಗಳು ಮತ್ತು ಇತರ ಫೈಲ್‌ಗಳನ್ನು ಹೆಚ್ಚಾಗುತ್ತಾ ಹೋದಂತೆ ಫೋನ್ ನಲ್ಲಿ ಜಾಗದ ಸಮಸ್ಯೆ ಎದುರಾಗುತ್ತದೆ.
ಹೊಸ ಫೋನ್ ಖರೀದಿಸದೆಯೇ ಫೋನ್‌ನಲ್ಲಿ ಜಾಗವನ್ನು ಮುಕ್ತಗೊಳಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ.

Phone Storage Issue
Phone Storage Issue


ಅನಗತ್ಯ ಅಪ್ಲಿಕೇಶನ್‌ಗಳನ್ನು ಅಳಿಸಿ

ಸಾಮಾನ್ಯವಾಗಿ ನಮಗೆ ಬೇಡವಾದ ಸಾಕಷ್ಟು ಆಪ್ ಗಳು ಮೊಬೈಲ್ ನಲ್ಲಿ ತುಂಬಿಕೊಂಡಿರುತ್ತವೆ. ಎಷ್ಟೋ ಸಂದರ್ಭದಲ್ಲಿ ಕೆಲವೊಂದು ಆಪ್ ಗಳನ್ನು ನಾವು ಬಳಸುವುದೇ ಇಲ್ಲ. ಇಂತಹ ಆಪ್ ಗಳನ್ನೂ ಅಳಿಸಿ. ಇದರಿಂದ ನೋಟಿಫಿಕೇಶನ್ ಗಳನ್ನು ತಪ್ಪಿಸಬಹುದು. ಜೊತೆಗೆ ಮೊಬೈಲ್ ನಲ್ಲಿ ಹೆಚ್ಚು ಸ್ಪೇಸ್ ಸೃಷ್ಟಿಸಬಹುದು.

ಕ್ಲೌಡ್‌ ಸೇವೆಗಳನ್ನು ಬಳಸಿ

ಫೋಟೋ, ವಿಡಿಯೋಗಳನ್ನು ಸಂಗ್ರಹಿಸಲು ಗೂಗಲ್ ಫೋಟೋಗಳು, ಒನ್ ಡ್ರೈವ್ ಅಥವಾ ಯಾವುದೇ ಇತರ ಕ್ಲೌಡ್ ಸಂಗ್ರಹಣೆಯಂತಹ ಕ್ಲೌಡ್ ಸಂಗ್ರಹಣೆ ಸೇವೆಗಳನ್ನು ಬಳಸಿ. ಇದು ಫೋನ್‌ನಲ್ಲಿ ಸಾಕಷ್ಟು ಜಾಗವನ್ನು ಮುಕ್ತಗೊಳಿಸುತ್ತದೆ. ಇದು ಅನೇಕ ಸಂಗ್ರಹಣೆ ಸಮಸ್ಯೆಗಳನ್ನು ನಿವಾರಿಸುತ್ತದೆ.

Phone Storage Issue
Phone Storage Issue


ಚಾಟಿಂಗ್ ಆಪ್ ಡೇಟಾಗಳನ್ನು ಅಳಿಸಿ

ವಾಟ್ಸಾಪ್, ಟೆಲಿಗ್ರಾಮ್ ನಂತಹ ಅಪ್ಲಿಕೇಶನ್‌ಗಳಿಂದ ಹಳೆಯ ಸಂದೇಶ, ವಿಡಿಯೋ ಮತ್ತು ಫೋಟೋಗಳನ್ನು ಅಳಿಸುವುದು ಉತ್ತಮ ಆಯ್ಕೆಯಾಗಿದೆ. ವಾಟ್ಸಾಪ್ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಅನಗತ್ಯ ಡೇಟಾವನ್ನು ತೆಗೆದುಹಾಕಲು ಸಂಗ್ರಹ ನಿರ್ವಹಣೆ ಆಯ್ಕೆಯನ್ನು ಆರಿಸಿ. ಹೆಚ್ಚುವರಿಯಾಗಿ ದೀರ್ಘ ಅಥವಾ ಅನಗತ್ಯ ಆಡಿಯೋ ಮತ್ತು ವಿಡಿಯೋ ಫೈಲ್ ಗಳನ್ನು ಅಳಿಸಿ. ಈ ಫೈಲ್‌ಗಳನ್ನು ಕಂಪ್ಯೂಟರ್ ಅಥವಾ ಬಾಹ್ಯ ಹಾರ್ಡ್ ಡ್ರೈವ್‌ಗೆ ವರ್ಗಾಯಿಸಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

ವಾಲ್‌ಪೇಪರ್‌, ರಿಂಗ್‌ಟೋನ್‌ಗಳನ್ನು ಆಪ್ಟಿಮೈಜ್ ಮಾಡಿ

ಹೆಚ್ಚಿನ ರೆಸಲ್ಯೂಶನ್ ಇರುವ ವಾಲ್‌ಪೇಪರ್‌ ಮತ್ತು ರಿಂಗ್‌ಟೋನ್‌ಗಳನ್ನು ಬಳಸುವುದನ್ನು ತಪ್ಪಿಸಿ. ಯಾಕೆಂದರೆ ಅವುಗಳು ಸಾಕಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ. ಮೊಬೈಲ್ ನಲ್ಲಿ ಹೆಚ್ಚು ಸ್ಟೋರೇಜ್ ಆಗುವುದನ್ನು ತಪ್ಪಿಸಲು ಎಸ್ ಡಿ ಕಾರ್ಡ್ ಬಳಸಿ. ಕೆಲವನ್ನು ಆಪ್ಟಿಮೈಜ್ ಮಾಡುವುದರಿಂದ ಫೋನ್ ಅನ್ನು ಅಪ್‌ಡೇಟ್ ಮಾಡಿ. ಇದು ಫೋನ್ ನಲ್ಲಿರುವ ಸಂಗ್ರಹಣೆ ಸಮಸ್ಯೆಗಳನ್ನು ಪರಿಹರಿಸುತ್ತದೆ.

Continue Reading

ಮನಿ-ಗೈಡ್

National Pension System: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಎನ್‌ಪಿಎಸ್ ಯೋಜನೆ ಸೂಕ್ತ

ನಿವೃತ್ತಿ ಬಳಿಕ ಆರ್ಥಿಕ ಭದ್ರತೆ ಮತ್ತು ಸ್ಥಿರವಾದ ಬದುಕನ್ನು ಖಚಿತಪಡಿಸುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (National Pension System) 18 ವರ್ಷ ಮೇಲ್ಪಟ್ಟ ಎಲ್ಲರೂ ಹೂಡಿಕೆ ಮಾಡಬಹುದಾಗಿದೆ. ಹಣಕಾಸಿನ ವಿಚಾರದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಯೋಜನೆ ರೂಪಿಸಿಕೊಳ್ಳುವುದು ಸುಭದ್ರ ಭವಿಷ್ಯದ ದೃಷ್ಟಿಯಿಂದ ಅತ್ಯತ್ತಮ ಮಾರ್ಗವಾಗಿದೆ. ಎನ್‌ಪಿಎಸ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

India's National Pension System
Koo

ನಿವೃತ್ತಿ ಬಳಿಕ ಆರ್ಥಿಕ ಭದ್ರತೆ ಮತ್ತು ಸ್ಥಿರವಾದ ಬದುಕನ್ನು ಖಚಿತಪಡಿಸುವ ಉದ್ದೇಶದಿಂದ ಭಾರತದಲ್ಲಿ ಸರ್ಕಾರಿ ಪ್ರಾಯೋಜಿತ ಪಿಂಚಣಿ ಯೋಜನೆಯಾದ (pension scheme) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (National Pension System) ಅನ್ನು ಜಾರಿಗೆ ತರಲಾಗಿದೆ. ಇದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (Pension Fund Regulatory and Development Authority) ಅಡಿಯಲ್ಲಿ ಸ್ವಯಂಪ್ರೇರಿತ, ದೀರ್ಘಾವಧಿಯ ನಿವೃತ್ತಿ ಹೂಡಿಕೆ ಯೋಜನೆಯಾಗಿದೆ. ನಿವೃತ್ತಿ ಯೋಜನೆಗಾಗಿ ಉದ್ಯೋಗದ ಅವಧಿಯಲ್ಲಿ ವ್ಯವಸ್ಥಿತ ಉಳಿತಾಯಕ್ಕೆ ಆದ್ಯತೆ ನೀಡಲು ಎನ್ ಪಿಎಸ್ ಒಂದು ಅತ್ಯತ್ತಮ ಆಯ್ಕೆಯಾಗಿದೆ.

ದಾಖಲಾತಿ ಸುಲಭ

18ರಿಂದ 65 ವರ್ಷ ವಯಸ್ಸಿನ ಭಾರತೀಯ ನಾಗರಿಕರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಆನ್‌ಲೈನ್‌ನಲ್ಲಿ eNPS ಪೋರ್ಟಲ್ ಮೂಲಕ ಅಥವಾ ಆಫ್‌ಲೈನ್‌ನಲ್ಲಿ ಯಾವುದೇ ಪಾಯಿಂಟ್ ಆಫ್ ಪ್ರೆಸೆನ್ಸ್-ಸರ್ವಿಸ್ ಪ್ರೊವೈಡರ್‌ನಲ್ಲಿ ಮಾಡಿಸಬಹುದು. ಇದಕ್ಕಾಗಿ ಗ್ರಾಹಕರ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ಚಂದಾದಾರರ ಫಾರ್ಮ್ ಅನ್ನು ಭರ್ತಿ ಮಾಡಬೇಕು.

ಖಾತೆಗಳಿಗೆ ಆರಂಭಿಕ 500 ರೂ. ಅಗತ್ಯವಿದ್ದು, ಕೆಲವು ವಿನಾಯಿತಿಗಳೊಂದಿಗೆ ನಿವೃತ್ತಿ ಅಥವಾ 60 ವರ್ಷವನ್ನು ತಲುಪುವವರೆಗೆ ಇವುಗಳನ್ನು ಹಿಂಪಡೆಯಲಾಗುವುದಿಲ್ಲ.


ಹೂಡಿಕೆಯ ಆಯ್ಕೆ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಶ್ರೇಣಿ I ಮತ್ತು ಶ್ರೇಣಿ II ಖಾತೆಗಳನ್ನು ನೀಡುತ್ತದೆ. ಶ್ರೇಣಿ Iರಲ್ಲಿ ನಿವೃತ್ತಿಯ ಉಳಿತಾಯಕ್ಕಾಗಿ ಆದರೆ ಶ್ರೇಣಿ II ಸಕ್ರಿಯ ಸ್ವಯಂಪ್ರೇರಿತ ಪೂರಕ ಆಯ್ಕೆಯಾಗಿದೆ.

ಈಕ್ವಿಟಿ, ಕಾರ್ಪೊರೇಟ್ ಬಾಂಡ್‌ಗಳು, ಸರ್ಕಾರಿ ಭದ್ರತೆಗಳು ಮತ್ತು ಪರ್ಯಾಯ ಹೂಡಿಕೆಗಳ ನಡುವೆ ಸ್ವತ್ತುಗಳನ್ನು ನಿಯೋಜಿಸಲು ಚಂದಾದಾರರು ಸಕ್ರಿಯ ಆಯ್ಕೆಯನ್ನು ಮಾಡಬಹುದು ಅಥವಾ ಸ್ವಯಂ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದು ಸ್ವಯಂಚಾಲಿತವಾಗಿ ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ.


ತೆರಿಗೆ ಉಳಿತಾಯ

ಎನ್‌ಪಿಎಸ್‌ನಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡಲಾಗಿದೆ. ಎನ್‌ಪಿಎಸ್‌ನಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿಸಿಇ ಅಡಿಯಲ್ಲಿ ವಾರ್ಷಿಕ 1.5 ಲಕ್ಷ ರೂ.ವರೆಗಿನ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಚಂದಾದಾರರಿಗೆ ಅನ್ವಯವಾಗುತ್ತದೆ. ಸೆಕ್ಷನ್ 80ಸಿಸಿಡಿ(1ಬಿ) ಅಡಿಯಲ್ಲಿ 50,000 ರೂ. ವರೆಗಿನ ವಿಶೇಷ ಕಡಿತ ಲಭ್ಯವಿದೆ.

ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ದಿನಾಂಕ 1 ತಿಂಗಳು ವಿಸ್ತರಣೆಗೆ ಮನವಿ

ಹಿಂತೆಗೆದುಕೊಳ್ಳಲು ಸರಳ ನಿಯಮ

ವಯಸ್ಸು 60 ತಲುಪಿದ ಅನಂತರ ಅಥವಾ ನಿವೃತ್ತಿಯಾದ ಬಳಿಕ ಚಂದಾದಾರರು ತಮ್ಮ ಕಾರ್ಪಸ್ ತೆರಿಗೆ- ಮುಕ್ತ ಶೇ. 60ರಷ್ಟನ್ನು ಮರಳಿ ಪಡೆಯಬಹುದು. ಉಳಿದ ಶೇ.40ರಷ್ಟನ್ನು ಸಾಮಾನ್ಯ ನಿವೃತ್ತಿ ಆದಾಯಕ್ಕಾಗಿ ವರ್ಷಾಶನವನ್ನು ಪಡೆಯಬಹುದಾಗಿದೆ.

60 ವರ್ಷಕ್ಕಿಂತ ಮೊದಲು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ ನಿರ್ಗಮಿಸಲು ಸಾಧ್ಯ. ಆದರೆ ಇದು ಗಂಭೀರ ಅನಾರೋಗ್ಯದಂತಹ ಕಾರಣಗಳಿಗಾಗಿ ಮಾತ್ರ ಸಾಧ್ಯ.

Continue Reading

ಮನಿ-ಗೈಡ್

LIC New Jeevan Shanti Plan: ಒಮ್ಮೆ ಪಾವತಿಸಿದರೆ ಸಾಕು; ಜೀವನ ಪರ್ಯಂತ ಪಿಂಚಣಿ!

ಉದ್ಯೋಗದಲ್ಲಿದ್ದಾಗ ನಾವು ಮಾಡಬಹುದಾದ ಒಂದು ದೊಡ್ಡ ಮೊತ್ತದ ಉಳಿತಾಯವೂ ವೃದ್ಧಾಪ್ಯದಲ್ಲಿ ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ದೈನಂದಿನ ಕೆಲಸಕ್ಕೆ ನಿಯಮಿತ ಆದಾಯದ ಅಗತ್ಯವಿರುತ್ತದೆ. ಇದಕ್ಕಾಗಿ ವ್ಯವಸ್ಥೆ ಇಲ್ಲದಿದ್ದರೆ, ವೃದ್ಧಾಪ್ಯದಲ್ಲಿ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಅಗತ್ಯಕ್ಕೂ ಇತರರನ್ನು ಅವಲಂಬಿಸಬೇಕಾಗುತ್ತದೆ. ಎಲ್ ಇಸಿಯ ಹೊಸ ಜೀವನ ಶಾಂತಿ ಯೋಜನೆಯು (LIC New Jeevan Shanti Plan) ಈ ಸಮಸ್ಯೆಯನ್ನು ದೂರಮಾಡಬಲ್ಲದು. ಈ ಯೋಜನೆಯ ವಿವರ ಇಲ್ಲಿದೆ.

VISTARANEWS.COM


on

By

LIC New Jeevan Shanti Plan
Koo

ವೃದ್ಧಾಪ್ಯದಲ್ಲಿ ಆರ್ಥಿಕ ತೊಂದರೆಯನ್ನು ದೂರ ಮಾಡಲು ಪಿಂಚಣಿ ಯೋಜನೆಯು (lifetime pension) ನಿಮಗೆ ಸಹಾಯ ಮಾಡುತ್ತದೆ. ಎಲ್‌ಐಸಿಯು (LIC) ಪರಿಚಯಿಸಿರುವ ಹೊಸ ಜೀವನ ಶಾಂತಿ ಯೋಜನೆಯು (LIC New Jeevan Shanti Plan) ವೃದ್ಧಾಪ್ಯದಲ್ಲಿ ಎದುರಾಗಬಹುದಾದ ಹಣಕಾಸಿನ ಸಮಸ್ಯೆಯನ್ನು ಪರಿಹರಿಸುತ್ತದೆ. ಇದಕ್ಕಾಗಿ ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಬಳಿಕ ಜೀವಮಾನ ಪೂರ್ತಿ ಪಿಂಚಣಿ ಸೌಲಭ್ಯ ಪಡೆಯಬಹುದು.

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸದ ಸಮಯದಲ್ಲಿ ಸಾಕಷ್ಟು ಹಣವನ್ನು ಗಳಿಸಬಹುದು ಮತ್ತು ವೃದ್ಧಾಪ್ಯಕ್ಕಾಗಿ ಅದನ್ನು ಉಳಿಸಬಹುದು.

ಒಂದು ದೊಡ್ಡ ಮೊತ್ತದ ಉಳಿತಾಯವೂ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ದೈನಂದಿನ ಕೆಲಸಕ್ಕೆ ನಿಯಮಿತ ಆದಾಯದ ಅಗತ್ಯವಿರುತ್ತದೆ. ನಿಮ್ಮಲ್ಲಿ ಈ ವ್ಯವಸ್ಥೆ ಇಲ್ಲದಿದ್ದರೆ, ವೃದ್ಧಾಪ್ಯದಲ್ಲಿ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಅಗತ್ಯಕ್ಕೂ ಇತರರನ್ನು ಅವಲಂಬಿಸಬೇಕಾಗುತ್ತದೆ. ಎಲ್ ಇಸಿಯ ಹೊಸ ಜೀವನ ಶಾಂತಿ ಯೋಜನೆಯು ಈ ಸಮಸ್ಯೆಯನ್ನು ಪರಿಹರಿಸುತ್ತದೆ.

ಹೊಸ ಜೀವನ್ ಶಾಂತಿ ಯೋಜನೆ

ಈ ಯೋಜನೆಯ ಅಡಿಯಲ್ಲಿ ಎರಡು ಹೂಡಿಕೆ ಆಯ್ಕೆಗಳನ್ನು ನೀಡಲಾಗಿದೆ. ಮೊದಲ ಏಕ ಜೀವನ ಮತ್ತು ಎರಡನೇ ಜಂಟಿ ಜೀವನ. ನೀವು ‘ಡಿಫರ್ಡ್ ಆನ್ಯುಟಿ ಫಾರ್ ಸಿಂಗಲ್ ಲೈಫ್’ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮುಂದೂಡಲ್ಪಟ್ಟ ಅವಧಿ ಮುಗಿದ ಅನಂತರ ನಿಗದಿತ ಮೊತ್ತವನ್ನು ಪಿಂಚಣಿಯಾಗಿ ಪಡೆಯುತ್ತೀರಿ ಮತ್ತು ಮರಣದ ಅನಂತರ ಹೂಡಿಕೆ ಮಾಡಿದ ಹಣವನ್ನು ನಿಮ್ಮ ನಾಮಿನಿಗೆ ಹಿಂತಿರುಗಿಸಲಾಗುತ್ತದೆ.

ಜಂಟಿ ಜೀವನಕ್ಕಾಗಿ ಮುಂದೂಡಲ್ಪಟ್ಟ ವರ್ಷಾಶನದಲ್ಲಿ ಹೂಡಿಕೆ ಮಾಡುವುದರಿಂದ ಮುಂದೂಡಲ್ಪಟ್ಟ ಅವಧಿ ಮುಗಿದ ಅನಂತರ ನೀವು ಪಿಂಚಣಿ ಪಡೆಯಲು ಪ್ರಾರಂಭಿಸುತ್ತೀರಿ ಮತ್ತು ನಿಮ್ಮ ಮರಣದ ಅನಂತರ, ಯಾರ ಹೆಸರನ್ನು ಸೇರಿಸಲಾಗಿದೆಯೋ ಆ ವ್ಯಕ್ತಿಗೆ ಆಜೀವ ಪಿಂಚಣಿ ಸಿಗುತ್ತದೆ.

ಹೂಡಿಕೆ ಮಾಡಿದ ಮೊತ್ತವನ್ನು ಇಬ್ಬರ ಮರಣದ ಅನಂತರವೇ ನಾಮಿನಿಗೆ ನೀಡಲಾಗುತ್ತದೆ. ಅಜ್ಜ, ಪೋಷಕರು, ಮಕ್ಕಳು, ಮೊಮ್ಮಕ್ಕಳು, ಗಂಡ- ಹೆಂಡತಿ ಅಥವಾ ಒಡಹುಟ್ಟಿದವರಂತಹ ಹತ್ತಿರದ ಸಂಬಂಧಿಗಳೊಂದಿಗೆ ಜಂಟಿ ಜೀವನ ಯೋಜನೆಯನ್ನು ತೆಗೆದುಕೊಳ್ಳಬಹುದು. ಪಿಂಚಣಿಗಾಗಿ ನೀವು ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಆಯ್ಕೆಯನ್ನು ಪಡೆಯುತ್ತೀರಿ.

LIC New Jeevan Shanti Plan
LIC New Jeevan Shanti Plan


ಕನಿಷ್ಠ 1.5 ಲಕ್ಷ ರೂ. ಹೂಡಿಕೆ ಅಗತ್ಯ

ಈ ಯೋಜನೆಯಲ್ಲಿ ಕನಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡುವುದು ಅವಶ್ಯಕ. ಗರಿಷ್ಠ ಖರೀದಿ ಬೆಲೆಗೆ ಯಾವುದೇ ಮಿತಿಯಿಲ್ಲ. 1.5 ಲಕ್ಷ ರೂ. ಹೂಡಿಕೆ ಮಾಡಿದರೆ ವಾರ್ಷಿಕವಾಗಿ 12 ಸಾವಿರ ರೂಪಾಯಿ ಪಿಂಚಣಿ ಮತ್ತು ಮಾಸಿಕ 1000 ರೂಪಾಯಿಗಳನ್ನು ಪಡೆಯಬಹುದು.

30ರಿಂದ 79 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಖರೀದಿಸಬಹುದು. ಪಾಲಿಸಿಯನ್ನು ಖರೀದಿಸಿದ ಅನಂತರ ನಿಮಗೆ ಇಷ್ಟವಾಗದಿದ್ದರೆ ನೀವು ಅದನ್ನು ಯಾವಾಗ ಬೇಕಾದರೂ ಸರೆಂಡರ್ ಮಾಡಬಹುದು. ಈ ಪಾಲಿಸಿಯಲ್ಲಿ ಸಾಲ ಪಡೆಯುವ ಸೌಲಭ್ಯವನ್ನೂ ನೀಡಲಾಗಿದೆ.

10 ಲಕ್ಷ ರೂ. ಹೂಡಿಕೆಗೆ ಎಷ್ಟು ಪಿಂಚಣಿ?

ಈ ಪಾಲಿಸಿಯನ್ನು ಖರೀದಿಸುವಾಗ ಮುಂದೂಡುವ ಅವಧಿ ಅಂದರೆ ಹೂಡಿಕೆ ಮತ್ತು ಪಿಂಚಣಿ ಆರಂಭದ ನಡುವಿನ ಅವಧಿ ಅಥವಾ ಹೆಚ್ಚಿನ ವಯಸ್ಸು ಹೂಡಿಕೆ ಮಾಡಿದರೆ ಹೆಚ್ಚಿನ ಪಿಂಚಣಿ ಪಡೆಯುತ್ತೀರಿ ಎಂಬುದನ್ನು ನೆನಪಿನಲ್ಲಿಡಿ.

45ನೇ ವಯಸ್ಸಿನಲ್ಲಿ ಹೊಸ ಜೀವನ ಶಾಂತಿ ಯೋಜನೆಯ ಏಕ ಜೀವನಕ್ಕಾಗಿ ಮುಂದೂಡಲ್ಪಟ್ಟ ವರ್ಷಾಶನವನ್ನು 10 ಲಕ್ಷ ರೂಪಾಯಿಗೆ ಖರೀದಿಸಿದರೆ ಮತ್ತು 12 ವರ್ಷಗಳ ಮುಂದೂಡುವ ಅವಧಿಯನ್ನು ಇಟ್ಟುಕೊಂಡರೆ 12 ವರ್ಷಗಳ ಅನಂತರ ವಾರ್ಷಿಕವಾಗಿ 1,42,500 ರೂಪಾಯಿಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ.

ಇದನ್ನೂ ಓದಿ: LPG Price Hike: ತಿಂಗಳ ಆರಂಭದಲ್ಲೇ ಎಲ್‌ಪಿಜಿ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌; ಬೆಂಗಳೂರಿನಲ್ಲಿ ಇಷ್ಟಾಗಿದೆ ದರ

ಅರ್ಧ ವಾರ್ಷಿಕ ಪಿಂಚಣಿ ಆಯ್ಕೆ ಮಾಡಿದರೆ ಪ್ರತಿ ಆರು ತಿಂಗಳಿಗೊಮ್ಮೆ 69,825 ರೂ.ಗಳನ್ನು, ತ್ರೈಮಾಸಿಕ ಪಿಂಚಣಿ ಆಯ್ಕೆಯನ್ನು ಮಾಡಿದರೆ 34,556 ಮತ್ತು ಮಾಸಿಕ ಪಿಂಚಣಿ ಆಯ್ಕೆ ಮಾಡಿದರೆ ಪ್ರತಿ ತಿಂಗಳು 11,400 ರೂ. ಪಡೆಯಬಹುದು.

45ನೇ ವಯಸ್ಸಿನಲ್ಲಿ ಜಂಟಿ ಜೀವನ ಯೋಜನೆಗಾಗಿ ಮುಂದೂಡಲ್ಪಟ್ಟ ವರ್ಷಾಶನವನ್ನು 12 ವರ್ಷಗಳ ಮುಂದೂಡಿಕೆ ಅವಧಿಯೊಂದಿಗೆ 10 ಲಕ್ಷಕ್ಕೆ ಖರೀದಿಸಿದರೆ ವಾರ್ಷಿಕವಾಗಿ 1,33,400 ರೂ., ಪ್ರತಿ ಆರು ತಿಂಗಳಿಗೊಮ್ಮೆ 65,366 ರೂ., ಮೂರು ತಿಂಗಳಿಗೊಮ್ಮೆ 32,350 ರೂ., ಮಾಸಿಕ 10,672 ರೂ. ಪಡೆಯಬಹುದು.

Continue Reading

ಧಾರ್ಮಿಕ

Vastu Tips: ಗಲ್ಲಾ ಪೆಟ್ಟಿಗೆಯಲ್ಲಿ ಇಂಥ ವಸ್ತುಗಳನ್ನು ಇಟ್ಟರೆ ಲಾಸ್‌!

ವಾಸ್ತು ಶಾಸ್ತ್ರವು ಪ್ರಾಚೀನ ಭಾರತೀಯ ವಾಸ್ತುಶಿಲ್ಪ ವಿಜ್ಞಾನವಾಗಿದೆ. ಇದರಲ್ಲಿ ಮನೆ ಮತ್ತು ಜೀವನದ ವಿವಿಧ ಅಂಶಗಳಿಗೆ ನಿರ್ದಿಷ್ಟ ನಿಯಮಗಳನ್ನು ಹೇಳಲಾಗಿದೆ. ಇವುಗಳಲ್ಲಿ ಮನೆಯಲ್ಲಿ ನಗದು ಪೆಟ್ಟಿಗೆ ಎಲ್ಲಿರಬೇಕು ಎಂಬುದು ಮುಖ್ಯ ವಿಷಯವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುವುದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಅಸಮಾಧಾನಗೊಳಿಸಬಹುದು. ಇದು ಹಲವು ತೊಂದರೆಗಳಿಗೆ ಕಾರಣವಾಗಬಹುದು. ನಗದು ಪೆಟ್ಟಿಗೆಗೆ ಸಂಬಂಧಿಸಿ ವಾಸ್ತು ನಿಯಮದಲ್ಲಿ (Vastu Tips) ಏನು ಹೇಳಲಾಗಿದೆ ಗೊತ್ತೇ? ಈ ಲೇಖನ ಓದಿ.

VISTARANEWS.COM


on

By

Vastu Tips
Koo

ಮನೆಯಲ್ಲಿ ಸಂಪತ್ತು (Wealth) ಸದಾ ಸ್ಥಿರವಾಗಿ ಹೆಚ್ಚುತ್ತಲೇ ಇರಬೇಕು ಎಂಬುದು ಎಲ್ಲರ ಬಯಕೆ. ಆದರೆ ಎಲ್ಲ ಸಂದರ್ಭದಲ್ಲೂ ಇದು ಸಾಧ್ಯವಾಗುವುದೇ ಇಲ್ಲ. ಅದಕ್ಕಾಗಿ ನಮ್ಮ ಕಠಿಣ ಪರಿಶ್ರಮದ ಜೊತೆಗೆ ಸರಿಯಾದ ಯೋಜನೆಯೂ ಇರಬೇಕಾಗಿರುತ್ತದೆ. ಜೊತೆಗೆ ಇದರೊಂದಿಗೆ ಮನೆಯಲ್ಲಿ ಸಂಪತ್ತು (Attract Wealth) ನಿರಂತರ ಹೆಚ್ಚಾಗಲು ವಾಸ್ತು ನಿಯಮಗಳನ್ನು (Vastu Tips) ಅನುಸರಿಸುವುದು ಬಹಳ ಮುಖ್ಯ.

ವಾಸ್ತು ಶಾಸ್ತ್ರವು ಪ್ರಾಚೀನ ಭಾರತೀಯ ವಾಸ್ತುಶಿಲ್ಪ ವಿಜ್ಞಾನವಾಗಿದೆ. ಇದರಲ್ಲಿ ಮನೆ ಮತ್ತು ಜೀವನದ ವಿವಿಧ ಅಂಶಗಳಿಗೆ ನಿರ್ದಿಷ್ಟ ನಿಯಮಗಳನ್ನು ಹೇಳಲಾಗಿದೆ. ಇವುಗಳಲ್ಲಿ ಮನೆಯಲ್ಲಿ ತಿಜೋರಿ ಅಥವಾ ನಗದು ಪೆಟ್ಟಿಗೆ ಎಲ್ಲಿರಬೇಕು ಎಂಬುದು ಮುಖ್ಯ ವಿಷಯವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುವುದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಅಸಮಾಧಾನಗೊಳಿಸಬಹುದು ಎನ್ನಲಾಗಿದೆ.

ಮನೆಯಲ್ಲಿ ನಗದು ಪೆಟ್ಟಿಗೆಯು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲವು ವಾಸ್ತು ಸಲಹೆಗಳನ್ನು ಪಾಲಿಸುವುದು ಸೂಕ್ತ.

Vastu Tips
Vastu Tips


ಕನ್ನಡಿ ತಪ್ಪಿಸಿ

ವಾಸ್ತು ಶಾಸ್ತ್ರದ ಪ್ರಕಾರ ನಗದು ಪೆಟ್ಟಿಗೆಯೊಳಗೆ ಕನ್ನಡಿಯನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಕನ್ನಡಿ ವಾಸ್ತು ದೋಷವನ್ನು ಆಹ್ವಾನಿಸಬಹುದು. ಹಠಾತ್ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ನಗದು ಪೆಟ್ಟಿಗೆಯಲ್ಲಿ ಕನ್ನಡಿಯನ್ನು ಹೊಂದಿದ್ದರೆ ಹಣಕಾಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ತಕ್ಷಣವೇ ಅದನ್ನು ತೆಗೆದುಹಾಕಿ.

ಕಪ್ಪು ಬಣ್ಣ ಬಳಸಬೇಡಿ

ಹಿಂದೂ ಸಂಪ್ರದಾಯದ ಪ್ರಕಾರ ಕಪ್ಪು ಬಣ್ಣವು ಸಾಮಾನ್ಯವಾಗಿ ನಕಾರಾತ್ಮಕತೆಯೊಂದಿಗೆ ಸಂಬಂಧಿಸಿದೆ. ಮಂಗಳಕರ ಚಟುವಟಿಕೆಗಳಲ್ಲಿ ದೂರವಿರುತ್ತದೆ. ಆದ್ದರಿಂದ ನಗದು ಪೆಟ್ಟಿಗೆಯಲ್ಲಿ ಯಾವುದೇ ವಸ್ತುಗಳನ್ನು ಕಟ್ಟಲು ಕಪ್ಪು ಬಟ್ಟೆಯನ್ನು ಬಳಸುವುದನ್ನು ಸರಿಯಲ್ಲ. ಬದಲಾಗಿ ಕೆಂಪು ಬಟ್ಟೆಯನ್ನು ಬಳಸಿ. ಇದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ಹಳೆಯ ವಸ್ತುಗಳನ್ನು ಸಂಗ್ರಹಿಸಬೇಡಿ

ಸ್ಕ್ರ್ಯಾಪ್ ಪೇಪರ್‌ಗಳಂತಹ ಹಳೆಯ ಅಥವಾ ತ್ಯಾಜ್ಯ ವಸ್ತುಗಳು ನಗದು ಪೆಟ್ಟಿಗೆಯಲ್ಲಿ ಸಂಗ್ರಹಿಸುವುದು ಸರಿಯಲ್ಲ ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗೆ ಮಾಡುವುದರಿಂದ ಆರ್ಥಿಕ ತೊಂದರೆಗಳು ಮತ್ತು ಬಡತನವೂ ಉಂಟಾಗಬಹುದು. ನಗದು ಬಾಕ್ಸ್ ಸ್ವಚ್ಛವಾಗಿಟ್ಟು ಮೌಲ್ಯಯುತವಾದ ವಸ್ತುಗಳು ಮತ್ತು ದಾಖಲೆಗಳನ್ನು ಮಾತ್ರ ಅದರಲ್ಲಿ ಇರಿಸಬೇಕು.

ಸುಗಂಧ ದ್ರವ್ಯಗಳನ್ನು ಇಡಬೇಡಿ

ಸುಗಂಧ ದ್ರವ್ಯಗಳನ್ನು ನಗದು ಪೆಟ್ಟಿಗೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಅಭ್ಯಾಸವು ವಾಸ್ತು ದೋಷವನ್ನು ಆಕರ್ಷಿಸುತ್ತದೆ. ಇದರಿಂದ ಮನೆಯ ಸದಸ್ಯರಿಗೆ ಆರ್ಥಿಕ ತೊಂದರೆ ಉಂಟು ಮಾಡಬಹುದು. ಸುಗಂಧ ದ್ರವ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಉತ್ತಮ.

Vastu Tips
Vastu Tips


ಯಾವ ದಿಕ್ಕು ಸೂಕ್ತ?

ಹಣದ ಪೆಟ್ಟಿಗೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಯಾಕೆಂದರೆ ಇದು ವಾಸ್ತು ಶಾಸ್ತ್ರದಲ್ಲಿ ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದೆ.

ಇದನ್ನೂ ಓದಿ: Vastu Tips: ಮನೆ ಖರೀದಿ ಮಾಡುವಾಗ ಈ ಸಂಗತಿಗಳನ್ನು ತಪ್ಪದೇ ಗಮನಿಸಿ

ಆಕಾರ ಮತ್ತು ವಸ್ತು

ಲೋಹ ಅಥವಾ ಮರದಿಂದ ಮಾಡಿದ ಆಯತಾಕಾರದ ಅಥವಾ ಚೌಕಾಕಾರದ ನಗದು ಪೆಟ್ಟಿಗೆಗೆ ಆದ್ಯತೆ ನೀಡಬೇಕು.

ಸ್ವಚ್ಛತೆಗೆ ಆದ್ಯತೆ ನೀಡಿ

ನಗದು ಪೆಟ್ಟಿಗೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಧನಾತ್ಮಕ ಶಕ್ತಿ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯವು ಧಾರ್ಮಿಕ ಆಚರಣೆಯಲ್ಲಿ ಇದಕ್ಕೆ ಪೂಜೆ ಸಲ್ಲಿಸಿ.

Continue Reading
Advertisement
Paris Olympics
ಕ್ರೀಡೆ6 mins ago

Paris Olympic: ಒಲಿಂಪಿಕ್ಸ್​ ಪದಕ ವಿಜೇತರಿಗೆ ಸಿಗಲಿದೆ ದುಬಾರಿ ಬೆಲೆಯ ಕಾರು

Wayanad Landslide
ದೇಶ7 mins ago

Wayanad Landslide: ವಯನಾಡಿನ ಭೀಕರ ದೃಶ್ಯ ಸೆರೆ ಹಿಡಿದ ಇಸ್ರೋ; ಭೂಕುಸಿತಕ್ಕೂ ಮುನ್ನ ಮತ್ತು ನಂತರ ಫೋಟೋ ರಿಲೀಸ್‌

14 hours work it jobs
ಪ್ರಮುಖ ಸುದ್ದಿ12 mins ago

14 Hours Work: ಒಂದೆಡೆ ಐಟಿ ಉದ್ಯೋಗಿಗಳಿಂದ ಬೃಹತ್ ಪ್ರತಿಭಟನೆ, ಇನ್ನೊಂದೆಡೆ ಐಟಿ ಕಂಪನಿಗಳ ಮುಂದೆ ಕೆಲಸಕ್ಕಾಗಿ ಮೈಲುಗಟ್ಟಲೆ ಕ್ಯೂ!

India vs Sri Lanka
ಕ್ರೀಡೆ35 mins ago

India vs Sri Lanka: ಲಂಕಾ ಸರಣಿಯಲ್ಲಿ ವಿಶೇಷ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ, ರೋಹಿತ್​

police firing hubli robber
ಕ್ರೈಂ55 mins ago

Police Firing: ದರೋಡೆ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು

Phone Storage Issue
ಗ್ಯಾಜೆಟ್ಸ್1 hour ago

Phone Storage Issue: ನಿಮ್ಮ ಮೊಬೈಲ್ ಸ್ಟೋರೇಜ್ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ!

IND vs SL: When and where to watch ODI, squads, predicted XI, venues
ಕ್ರೀಡೆ1 hour ago

IND vs SL: ಇಂದು ಭಾರತ-ಲಂಕಾ ಮೊದಲ ಏಕದಿನ ಹಣಾಹಣಿ; ಎಷ್ಟು ಗಂಟೆಗೆ ಪಂದ್ಯ ಆರಂಭ?

NEET-UG 2024
ದೇಶ1 hour ago

NEET UG 2024: ನೀಟ್ ಅಕ್ರಮ; ಇಂದು ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು-CBI ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ

KEA exams time table
ಪ್ರಮುಖ ಸುದ್ದಿ2 hours ago

KEA Exams Time Table: ಪಿಎಸ್‌ಐ ಸೇರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ವಿವಿಧ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

instagram love story
ಕ್ರೈಂ2 hours ago

Instagram Love Story: ಮೂವರು ಗಂಡರ ಮುದ್ದಿನ ಹೆಂಡತಿ ಮೇಲೆ 2ನೇ ಗಂಡನ ದೂರು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ20 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ21 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ21 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌