ನನ್ನ ದೇಶ ನನ್ನ ದನಿ ಅಂಕಣ | ವಿಷಸರ್ಪಗಳನ್ನು ಓಲೈಸುವ ರಾಜಕಾರಣ ಇನ್ನು ಬೇಕಿಲ್ಲ - Vistara News

ಅಂಕಣ

ನನ್ನ ದೇಶ ನನ್ನ ದನಿ ಅಂಕಣ | ವಿಷಸರ್ಪಗಳನ್ನು ಓಲೈಸುವ ರಾಜಕಾರಣ ಇನ್ನು ಬೇಕಿಲ್ಲ

ಪಾಕಿಸ್ತಾನದಲ್ಲಿ ಅತಿವೃಷ್ಟಿಯಿಂದ ಅನಾಹುತವಾಗಿದೆ. ಆದರೆ ಕೃತಘ್ನವಾದ ಆ ದೇಶವನ್ನು ಓಲೈಸುವ ರಾಜಕಾರಣವನ್ನು ನಾವು ಇನ್ನು ಮುಂದುವರಿಸಬೇಕೆ? ಅಜ್ಜಂಪುರ ಮಂಜುನಾಥ್‌ ಬರೆಯುತ್ತಾರೆ…

VISTARANEWS.COM


on

vistara column
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ajjampura manjunath

ಪ್ರಕೃತಿಯು ಮುನಿಸಿಕೊಂಡಿದ್ದು ಭಾರತವು ಅತಿವೃಷ್ಟಿಯಿಂದ ತತ್ತರಿಸುತ್ತಿದೆ. ಕುಡಿಯುವ ನೀರಿಗೇ ತತ್ವಾರ ಎನ್ನುವಂತಹ ಕಡೆಯೂ ವಿನಾಶಕಾರಿ ಪ್ರವಾಹದಿಂದ ಹಾನಿಯುಂಟಾಗಿದೆ. ಚೀನಾ ದೇಶವು ವಿದ್ಯುತ್ ಕೊರತೆ, ಅತಿ ಶಾಖದ ಬಿರುಗಾಳಿ, ಅನಾವೃಷ್ಟಿ ಮತ್ತು ಜಲಕ್ಷಾಮಗಳಿಂದ ಕಂಗೆಟ್ಟುಹೋಗಿದೆ. ಪ್ರಜಾಪ್ರಭುತ್ವವಿಲ್ಲದ ಅಂತಹ ರಕ್ಕಸ ದೇಶಗಳಲ್ಲಿ ಜನರು ಹೇಗಿದ್ದಾರೆ, ವಾಸ್ತವದಲ್ಲಿ ಎಂತಹ ಪರಿಸ್ಥಿತಿಯಿದೆ ಎಂಬುದು ಸಹ ಸರಿಯಾಗಿ ತಿಳಿಯುವುದಿಲ್ಲ. ಪಾಕಿಸ್ತಾನದ್ದು ಇನ್ನೊಂದು ಅತಿರೇಕ. ಕಂಡು ಕೇಳರಿಯದ ಅತಿವೃಷ್ಟಿ, ಪ್ರವಾಹಗಳಿಂದ ಪಾಕಿಸ್ತಾನವು ಹೈರಾಣಾಗಿದೆ. ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ವಿನಾಶದ ದೃಶ್ಯ-ಚಿತ್ರಗಳು ಮನ ಕಲಕುವಂತಿವೆ. ಪಾಕಿಸ್ತಾನದ ಬಹುಕಾಲದ ಮಿತ್ರರಾಷ್ಟ್ರವಾದ ಅಮೆರಿಕಾ ಮೂರು ಕೋಟಿ ಡಾಲರ್ ನೆರವು ಘೋಷಿಸಿದೆ. ಪ್ರವಾಹದಿಂದ ತನಗೆ ಸಹಸ್ರ ಕೋಟಿ ಡಾಲರ್ ಪ್ರಮಾಣದ ನಷ್ಟವಾಗಿದೆಯೆಂದು ಪಾಕಿಸ್ತಾನ ಹಲುಬುತ್ತಿದೆ. ಪಾಕಿಸ್ತಾನಕ್ಕೆ ಈಗಾಗಲೇ ಐಎಂಎಫ್ ೧೧೦ ಕೋಟಿ ಡಾಲರ್ ಸಾಲ ಘೋಷಿಸಿದೆ.

ದೇಶದೊಳಗೇ ಇರುವ ಭಾರತ-ವಿರೋಧೀ ಶಕ್ತಿಗಳ ಆಕ್ರಂದನವು ಸದ್ಯಕ್ಕೆ ಒಂದಿಷ್ಟು ದುರ್ಬಲವಾಗಿದೆ. ಇಲ್ಲವಾಗಿದ್ದರೆ, ಮಾನವೀಯ ದೃಷ್ಟಿಯಿಂದ ಪಾಕಿಸ್ತಾನಕ್ಕೆ ನೆರವು ನೀಡಬೇಕೆಂದು, ಅವು ಇಷ್ಟರಲ್ಲಿ ಮುಗಿಲು ಮುಟ್ಟುವಂತೆ ಹುಯಿಲಿಡುತ್ತಿದ್ದವು. ಭಾರತ- ಪಾಕ್ ನಡುವಿನ ಸಮರ ಸಂಘರ್ಷಗಳ ಇತಿಹಾಸವನ್ನು ಅವಲೋಕಿಸದೆ, ವಿಶ್ಲೇಷಿಸದೆ ಭಾರತ ಸರ್ಕಾರವು ಮಾಡುವ ಯಾವುದೇ ಉಪಕ್ರಮವು ಆತ್ಮಹತ್ಯಾತ್ಮಕವಾಗುತ್ತದೆ.

೧೯೪೮, ೧೯೬೫, ೧೯೭೧ ಮತ್ತು ೧೯೯೯ಗಳಲ್ಲಿ ಪಾಕಿಸ್ತಾನವು ನಮ್ಮ ಮೇಲೆ ಬೃಹತ್ ಪ್ರಮಾಣದ ಆಕ್ರಮಣಗಳನ್ನೇ ಮಾಡಿದೆ. ಈ ಯುದ್ಧಗಳ ಫಲಿತಾಂಶವೇನೇ ಇರಲಿ, ಅದರ ವಿನಾಶಕಾರಿ ಆಕ್ರಮಣಶೀಲತೆಯ ಮಾನಸಿಕತೆಯಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಆಗುವುದೂ ಇಲ್ಲ. ಭಾರತೀಯ ಸೇನೆಯ ಅಧಿಕಾರಿಗಳೇ ಹೇಳುವ ಹಾಗೆ, ಈ ನಾಲ್ಕು ಸಂಘರ್ಷಗಳು ಯುದ್ಧಗಳೆಂದು ಅಧಿಕೃತವಾಗಿ ವರ್ಗೀಕೃತವಾಗಿದ್ದರೂ, ಕಳೆದ ೭೫ ವರ್ಷಗಳಿಂದ ಪಾಕಿಸ್ತಾನದ ಘೋಷಿತ-ಅಘೋಷಿತ ಯುದ್ಧ ನಿಂತೇ ಇಲ್ಲ. ಇಂದಿಗೂ ಪ್ರತಿನಿತ್ಯ ನಮ್ಮ ಗಡಿಗಳಲ್ಲಿ ಪಾಕಿಸ್ತಾನದ ದಾಳಿಗಳು ಆಗುತ್ತಲೇ ಇವೆ.

ಒಂದೆಡೆ ಭಾರತ ಪಾಕಿಸ್ತಾನಗಳ ನಡುವೆ ಕ್ರಿಕೆಟ್ ಆಟ ನಡೆಯುತ್ತಿದ್ದರೆ, ಗಡಿಗಳಲ್ಲಿ ನಮ್ಮ ಸೈನಿಕರು ಪಾಕ್ ಆಕ್ರಮಣಗಳಿಗೆ ಜೀವ ತೆರುತ್ತಿದ್ದರು. ಗಡಿಯ ಒಳಗೆ ಸಹಾ ಕಾಶ್ಮೀರದ ದೇಶದ್ರೋಹಿ ಜಿಹಾದಿಗಳು ಕಲ್ಲುಗಳನ್ನು ಎಸೆದು ಹಾನಿಯುಂಟುಮಾಡುತ್ತಿದ್ದರು. ಕೆಲ ಸಮಯದ ಹಿಂದೆ ಕಾಶ್ಮೀರದಲ್ಲಿ ಪ್ರವಾಹಕ್ಕೆ ಸಿಲುಕಿದ ಜಿಹಾದಿಗಳನ್ನು ಭಾರತೀಯ ಸೇನೆಯು ರಕ್ಷಿಸಿ ಕಾಪಾಡಿತ್ತು. ತದನಂತರ ಅದೇ ಜಿಹಾದಿಗಳು ಸೈನಿಕರ ಮೇಲೆ ಕಲ್ಲುಗಳನ್ನು ಎಸೆದು ಅಪಾರ ಹಾನಿಯುಂಟುಮಾಡುತ್ತಿದ್ದ ವಿಡಿಯೋಗಳು ದೇಶದಲ್ಲಿ ಕ್ರೋಧ- ವಿಷಾದಗಳ ದೊಡ್ಡ ಅಲೆಯನ್ನೇ ಉಂಟುಮಾಡಿದವು. ಬಹಳ ಜನ ಹೀಗೂ ಉಂಟೆ ಎಂದು ದಿಗ್ಭ್ರಮೆಗೆ ಒಳಗಾದರು. ಜಿಹಾದಿಗಳು ಇರುವುದೇ ಹಾಗೆ.

ಪಾಕಿಸ್ತಾನವು ನಿರ್ಮಾಣವಾಗಿದ್ದೇ ಇಸ್ಲಾಮೀ ಪ್ರತ್ಯೇಕತಾವಾದದ ಅಂಗವಾದ ಜಿಹಾದಿನ ಭಾಗವಾಗಿ. ಸ್ವಾತಂತ್ರ್ಯ ಹೋರಾಟದ ಮಹಾಪರ್ವದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಮೊದಲುಗೊಂಡು, ಮುಸ್ಲಿಂ ಲೀಗಿನ ಯಾವ ನಾಯಕರೂ ಸೆರೆಮನೆಯನ್ನೇ ನೋಡದಿದ್ದರೂ ಅವಿಭಜಿತ ಭಾರತದ ಮೂರನೆಯ ಒಂದು ಭಾಗ ಬಹಳ ಸುಲಭವಾಗಿ ಪಾಕಿಸ್ತಾನಕ್ಕೆ ಸೇರಿಹೋಗಿತ್ತು. ಅದಕ್ಕೇ ಆ ಕಾಲದಲ್ಲಿಯೇ ಅವರು “ಹಸಕೇ ಲಿಯಾ ಪಾಕಿಸ್ತಾನ್, ಲಡಕೇ ಲೇಂಗೇ ಹಿಂದೂಸ್ತಾನ್” ಎಂಬ ಘೋಷಣೆಗಳನ್ನು ರಸ್ತೆ ರಸ್ತೆಯಲ್ಲಿ ಕೂಗುತ್ತಿದ್ದರು.

ಸ್ವಾತಂತ್ರ್ಯೋತ್ತರ ಭಾರತವನ್ನು ಈವರೆಗೆ ಆಳಿದ ಬಹುಪಾಲು ರಾಜಕಾರಣಿಗಳು ದುರ್ಬಲ ಮನಸ್ಸಿನವರು. ಯುದ್ಧ, ಆಕ್ರಮಣಗಳ ಪರಾಕಾಷ್ಠೆಯ ಕಾಲಘಟ್ಟದಲ್ಲಿಯೂ ಭಾಕ್ರಾನಂಗಲ್ ಅಣೆಕಟ್ಟಿನಿಂದ ಹೊರಹರಿಯುವ ನೀರು ನಿಲ್ಲಿಸಿ, ಪಾಕಿಸ್ತಾನವನ್ನು ಶಿಕ್ಷಿಸುವ ಉಪಕ್ರಮಕ್ಕೆ ಯಾರೂ ಕೈಹಾಕಲಿಲ್ಲ.

ಪಾಕಿಸ್ತಾನದ ಅಘೋಷಿತ ಸಮರವು ಇತ್ತೀಚಿನ ದಶಕಗಳಲ್ಲಿ ಅನೇಕ ಆಯಾಮಗಳನ್ನು ಪಡೆದಿದೆ. ಪಾಕಿಸ್ತಾನವು ಅವ್ಯಾಹತವಾಗಿ ಶಸ್ತ್ರಾಸ್ತ್ರಗಳನ್ನು, ಮಾದಕ ದ್ರವ್ಯಗಳನ್ನು, ಭಯೋತ್ಪಾದಕರನ್ನು ಭಾರತಕ್ಕೆ ಕಳ್ಳಸಾಗಾಣಿಕೆ ಮಾಡುತ್ತಲೇ ಇದೆ. ಪ್ರತ್ಯೇಕತಾವಾದಕ್ಕೆ, ಖಲಿಸ್ತಾನ್ ಉಗ್ರರಿಗೆ ಅನೂಚಾನವಾಗಿ ಬೆಂಬಲ ನೀಡುತ್ತಲೇ ಬಂದಿದೆ.

ಪಾಕಿಸ್ತಾನದ್ದು, ಅಲ್ಲಿನ ಸೇನೆಯದ್ದು, ರಾಜಕಾರಣಿಗಳದ್ದು, ಅಲ್ಲಿನ ಎಲ್ಲ ಜಿಹಾದಿಗಳದ್ದು ವಿಕೃತ ಮನಸ್ಥಿತಿ. ೧೯೯೯ರಲ್ಲಿ ಕಾರ್ಗಿಲ್ ಸಂಘರ್ಷದ ವೇಳೆ ಸೆರೆಸಿಕ್ಕ ನಮ್ಮ ಸೇನೆಯ ಸೌರಭ್ ಕಾಲಿಯಾ ಮತ್ತು ಇತರ ಸೈನಿಕರನ್ನು ಪಾಕಿಸ್ತಾನವು ನಡೆಸಿಕೊಂಡಿದ್ದು ಅದರ ಮಾನಸಿಕತೆಯ ಪ್ರತೀಕವಾಗಿದೆ. ಈ ನತದೃಷ್ಟರು ಬದುಕಿದ್ದಾಗಲೇ ಅವರ ಕಣ್ಣು, ಕಿವಿ, ತುಟಿ, ಶಿಶ್ನಗಳನ್ನು ಕತ್ತರಿಸಲಾಯಿತು, ಛೇದಿಸಲಾಯಿತು. ಹಲ್ಲು, ಮೂಳೆಗಳನ್ನು ಮುರಿದುದು ಸಾಲದೆಂದು ತಲೆಬುರುಡೆಗಳನ್ನು ಜಜ್ಜಿಹಾಕಲಾಯಿತು. ಸಿಗರೇಟುಗಳಿಂದ ದೇಹಗಳನ್ನು ಚುಚ್ಚಿ ಸುಡಲಾಗಿತ್ತು. ಆದರೂ ನಮ್ಮ ರಾಜಕಾರಣಿಗಳು ಎಲ್ಲವನ್ನೂ “ಮರೆತು” ತಮ್ಮ ವಿನಾಶಕಾರಿ ಓಲೈಕೆಯನ್ನು ಮುಂದುವರಿಸಿದರು.

೨೦೦೫ರಲ್ಲಿ ಪಾಕಿಸ್ತಾನದಲ್ಲಿ ಭೂಕಂಪವಾದಾಗ, ನಮ್ಮ ದೇಶದ ಒಳಗೇ ಇರುವ ಭಾರತ-ವಿರೋಧೀ ಶಕ್ತಿಗಳ ಅರಚಾಟಕ್ಕೆ ಸ್ಪಂದಿಸಿ ಅಂದಿನ ಯುಪಿಎ ಸರ್ಕಾರವು ನಾಚಿಕೆಯಿಲ್ಲದೆ ನೆರವು ಘೋಷಿಸಿತು. ೨೦೧೦ರಲ್ಲಿ ಪಾಕಿಸ್ತಾನವು ಅತಿವೃಷ್ಟಿ, ಪ್ರವಾಹಗಳಿಗೆ ತುತ್ತಾದಾಗ ಇನ್ನೊಮ್ಮೆ ನೆರವಿನ ಪ್ರವಾಹವೇ ಹರಿಯಿತು. ಪಾಪ, ಯಾರಿಗೂ ದೇಶವಿಭಜನೆಯ ದುರಂತ ಅಧ್ಯಾಯಗಳಿರಲಿ, ಸೌರಭ್ ಕಾಲಿಯಾ ಮತ್ತು ಇತರ ಸೈನಿಕರ ಮೇಲಿನ ಹಿಂಸಾಕಾಂಡದ ನೆನಪೂ ಆಗಲಿಲ್ಲ!

ಮಾನವೀಯ ದೃಷ್ಟಿ, ಸ್ನೇಹಹಸ್ತ ಇವುಗಳಿಗೆ ಪಾಕಿಸ್ತಾನವು ಅಪಾತ್ರ ಎಂಬುದು ರುಜುವಾತಾಗಿದ್ದರೂ, ಸ್ವಾಭಿಮಾನ-ಶೂನ್ಯ ಭಾರತವು ಸದಾ ತನ್ನ ಕೈಗಳನ್ನು ಚಾಚಿಯೇ ಇರುವುದು ವಿಚಿತ್ರವೇ!

ಆಗಸ್ಟ್ ೨೦೧೯ರಲ್ಲಿ ಸಂವಿಧಾನದ ಅನುಚ್ಛೇದ ೩೭೦ ರದ್ದಾದಾಗ ಪಾಕಿಸ್ತಾನವು ಭಾರತದೊಂದಿಗಿನ ವ್ಯಾಪಾರ-ವ್ಯವಹಾರಗಳನ್ನು ನಿಲ್ಲಿಸಿತು. ಮತ್ತೆ ಈ ಅನುಚ್ಛೇದ ೩೭೦ ಜಾರಿ ಆಗುವವರೆಗೆ ಭಾರತದೊಂದಿಗಿನ ವಾಣಿಜ್ಯವೇ ಬೇಡ ಎಂದು ಕಿರುಚಾಡಿತು. ಇಷ್ಟು ಸಾಲದೆಂದು ಕಳೆದ ವರ್ಷ ಅಂದರೆ ೨೦೨೧ರ ನವೆಂಬರಿನಲ್ಲಿ “ಮಾನವೀಯ ದೃಷ್ಟಿಯಿಂದ” (ತಾಲಿಬಾನಿಗಳಿಗೆ!) ಭಾರತವು ಆಹಾರ ಧಾನ್ಯಗಳನ್ನು, ಔಷಧಿಗಳನ್ನು ಕಳುಹಿಸಲು ಉದ್ದೇಶಿಸಿದಾಗ ಪಾಕಿಸ್ತಾನದ ಮೂಲಕ ಸರಬರಾಜು ಆಗುವ ಪ್ರಸ್ತಾವಕ್ಕೆ ನೂರೆಂಟು ನಿರ್ಬಂಧಗಳನ್ನು ಒಡ್ಡಿದ್ದು ಅದರ ದುಷ್ಟ ಸ್ವಭಾವಕ್ಕೆ ಅನುಗುಣವಾಗಿಯೇ ಇತ್ತು. ತಾಲಿಬಾನಿಗಳಿಗೆ ಅನೇಕ ದಶಕಗಳಿಂದ ನೆರವು ನೀಡಿ, ತರಬೇತಿ ನೀಡಿ, ಎಲ್ಲ ದುಷ್ಕೃತ್ಯಗಳಲ್ಲಿ ಸಹಯೋಗ ನೀಡಿದ ಪಾಕಿಸ್ತಾನವು, ನಾವು ಆಹಾರ ಕಳುಹಿಸುತ್ತೇವೆ ಎಂದಾಗ ನಮ್ಮೊಂದಿಗೆ ವರ್ತಿಸಿದ್ದು ಹೀಗೆ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಪ್ರಸ್ತುತ ದುಃಸ್ಥಿತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಗತ ಇತಿಹಾಸದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಮಾನವೀಯ ದೃಷ್ಟಿಯಿಂದ ನೆರವು ನೀಡಬೇಕೆಂಬ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ. ದುರಭಿಮಾನಿ ಪಾಕಿಸ್ತಾನವು ತಾನಾಗಿ ಭಾರತವನ್ನೇನೂ ಬೇಡುತ್ತಿಲ್ಲ. ಏಕೆಂದರೆ, ಪಾಕಿಸ್ತಾನದ ಸಾಮಾನ್ಯ ಜನರ ಹಿತ, ಕ್ಷೇಮಗಳು ಅಲ್ಲಿನ ಆಡಳಿತದ ಆದ್ಯತೆಯನ್ನು ಎಂದಿಗೂ ಪಡೆದಿಲ್ಲ. ಜನ ಸಾಯಲಿ, ತನಗೇನು ಎಂಬುದೇ ಅದರ ಮನೋಭಾವ.

ನಮ್ಮ ಪರಂಪರೆಯಲ್ಲಿ ಅನುಭವಜನ್ಯವಾದ ಮತ್ತು ಅದ್ಭುತವಾದ ನುಡಿಮುತ್ತುಗಳಿವೆ. ಅದರಲ್ಲೊಂದು ಹೀಗೆ ಹೇಳುತ್ತದೆ:

ಉಪಕಾರೋಪಿ ನೀಚಾನಾಂ
ಅಪಕಾರಾಯ ಕಲ್ಪತೇ
ಪಯಃಪಾನಂ ಭುಜಂಗಾನಾಂ
ಕೇವಲಂ ವಿಷವರ್ಧನಂ

ನೀಚರಿಗೆ ಉಪಕಾರವನ್ನು ಮಾಡಿದರೂ ಅವರು ಅಪಕಾರವನ್ನೇ ಮಾಡುತ್ತಾರೆ. ವಿಷಸರ್ಪಕ್ಕೆ ಹಾಲು ಉಣಿಸಿದರೆ, ಅದರ ವಿಷ ಮಾತ್ರ ಹೆಚ್ಚಾಗುತ್ತದೆ (ವಿಷ ಕಕ್ಕುವ ಅದರ ಸ್ವಭಾವದಲ್ಲಿ ಬದಲಾವಣೆಯಿರುವುದಿಲ್ಲ).

ನಿಜ. ಪಾಕಿಸ್ತಾನ ಜಿಹಾದ್ ವಿಷ ತುಂಬಿಕೊಂಡ ವಿಷಸರ್ಪ. ಅವರಿಗೆ ಮಾಡುವಂತಹ ಸಹಾಯ ಭಾರತಕ್ಕೆ ಆತ್ಮಹತ್ಯಾತ್ಮಕ. ಮಾನವೀಯ ದೃಷ್ಟಿಯ ಪರಿಕಲ್ಪನೆಗಳಿಗೆ ಪಾಕಿಸ್ತಾನ ಎಂದೆಂದಿಗೂ ಅಪಾತ್ರ. ನಮ್ಮ ಪ್ರಧಾನ ಮಂತ್ರಿಯವರ ಸಂತಾಪ, ಸಹಾನುಭೂತಿಗಳು ಬರಿಯ ಸಂದೇಶದ ಮಟ್ಟಕ್ಕೆ ಮಾತ್ರ ಸೀಮಿತವಾದರೆ ಬಹಳ ಒಳ್ಳೆಯದು. ಪ್ರವಾಹವನ್ನೇ ಕಂಡರಿಯದ ಅನೇಕ ಕಡೆ ಭಾರತದ ಜನ ಪರಿತಪಿಸುತ್ತಿದ್ದಾರೆ, ಸಂಕಟಕ್ಕೆ ತುತ್ತಾಗಿದ್ದಾರೆ. ಭಾರತ ಸರ್ಕಾರದ ಸಹಾನುಭೂತಿ ಈ ದೇಶಕ್ಕೆ ಮಾತ್ರ ಸೀಮಿತವಾದರೆ ಒಳ್ಳೆಯದು. ವಿಷಸರ್ಪಗಳನ್ನು ಓಲೈಸುವ ಶತಮಾನದಷ್ಟು ಹಳೆಯ ಅಪಾಯಕಾರಿ ರಾಜಕಾರಣ ಈಗಲಾದರೂ ಕೊನೆಗೊಳ್ಳಲಿ.

(ಲೇಖಕರು ಹಿರಿಯ ಅಂಕಣಕಾರರು ಹಾಗೂ ನವದೆಹಲಿ ಮೂಲದ ಪ್ರಕಾಶನ ಸಂಸ್ಥೆ ʼವಾಯ್ಸ್‌ ಆಫ್‌ ಇಂಡಿಯಾʼ ಸರಣಿಯ ಗೌರವ ಸಂಪಾದಕರು. ರಾಷ್ಟ್ರೀಯತೆ, ಇತಿಹಾಸಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅಪಾರ ಅಧ್ಯಯನ ನಡೆಸಿದ್ದಾರೆ. ಈ ಲೇಖನದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ವೈಯಕ್ತಿಕ.)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ದಶಮುಖ ಅಂಕಣ: ಮಳೆಯ ನಡುವೆ ಮರಳಿ ಶಾಲೆಗೆ!

ದಶಮುಖ ಅಂಕಣ: ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ.

VISTARANEWS.COM


on

ದಶಮುಖ back to school
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಶಾಲೆಗಳು (School) ಪ್ರಾರಂಭವಾಗಿ ಕೆಲದಿನಗಳಾಗಿವೆ. ಬಣ್ಣದ ಚಿಟ್ಟೆಗಳಂತೆ ಹಾರಾಡುತ್ತಾ ಶಾಲೆಯ ದಾರಿ ಹಿಡಿದಿರುವ (Back to School) ಮಕ್ಕಳನ್ನು (Children) ಕಾಣುತ್ತಿದ್ದಂತೆ ಮನಸ್ಸು ತುಂಬಿ ಬರುತ್ತದೆ. ಬೇಸಿಗೆ (Summer holidays) ರಜೆಯಲ್ಲಿ ಅವರೇನೇ ಮಾಡಿದರೂ, ಮಾಡದಿದ್ದರೂ… ರಜೆ ಕಳೆದಿದ್ದಂತೂ ಹೌದು. ಈಗ ಮರಳಿ ಶಾಲೆಗೆ. ಬಹುಪಾಲು ಮಕ್ಕಳು ಶಾಲೆಗೆ ಮರಳಿ ಹೋಗುತ್ತಿದ್ದರೆ, ಒಂದಿಷ್ಟು ಪುಟಾಣಿಗಳು ಮೊದಲ ಬಾರಿಗೆ ಶಾಲೆಗೆ ಹೋಗುವವರು. ಶಾಲೆಯ ಹಾದಿ ಹಿಡಿದಿರುವ ತಂತಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ತುಂಬಿಸಿಟ್ಟಿದ್ದಾರೆ. ಸಮವಸ್ತ್ರ (Uniform) ಹಾಕಿ ಹೊರಟವರು, ಅದಿನ್ನೂ ದೊರೆಯದೆ ಬಣ್ಣದ ಬಟ್ಟೆಗಳಲ್ಲೇ ಹೊರಟವರು, ಅಕ್ಕ-ಅಣ್ಣನ ಕೈ ಹಿಡಿದು ನಿಂತವರು, ಹೋಗಲು ಮನಸ್ಸಿಲ್ಲದ ಪೆಚ್ಚ ಮೋರೆಯವರು, ಫೋಟೊ ಇಷ್ಟವಿಲ್ಲದ ಗಂಭೀರ ಭಾವದವರು, ರಜೆಯ ಬೋರು ಕಳೆದ ಬಿಡುಗಡೆಯ ಭಾವದವರು, ಮೊದಲ ಬಾರಿಗೆ ಹೊರಟ ಅಳು ಮೋರೆಯವರು… ಅಂತೂ ಸಂಭ್ರಮ, ನಗು, ದುಗುಡ, ಆತಂಕ, ಅಳು ಮುಂತಾದ ಹಲವಾರು ಭಾವಗಳನ್ನು ಹೊತ್ತ ಪುಟ್ಟ ಬೊಂಬೆಗಳಂತೆ ಅವರೆಲ್ಲ ಕಂಡುಬರುತ್ತಾರೆ.

ಇದೇನು ಹೊಸದಲ್ಲ, ಪ್ರತಿವರ್ಷವೂ ಕಾಣುವಂಥದ್ದು. ಇವೆಲ್ಲ ಎಷ್ಟು ಹಳೆಯದ್ದೆಂದರೆ, ಬಾಲ್ಯದಲ್ಲಿ ನಾವೂ ಇದನ್ನೇ ಮಾಡಿದ್ದೆವಲ್ಲ ಎನಿಸಬಹುದು. ಶಾಲೆಗೆ ಹೋಗುವಾಗ ನಮಗೆಲ್ಲ ಈಗಿನಂತೆ ಪ್ರೀಸ್ಕೂಲ್‌ಗಳೆಲ್ಲ ಇರಲಿಲ್ಲ. ನೇರವಾಗಿ ಕಿಂಡರ್‌ಗಾರ್ಟ್‌ನ್‌ಗೆ ಹೋಗುವುದಾಗಿತ್ತು. ಅದಕ್ಕೆ ಬರುವವರೂ ಕಡಿಮೆಯೇ. ಒಂದನೇ ತರಗತಿಗೆ ಹೋದರೆ ಸಾಲದೇ ಎಂಬ ಮನಸ್ಥಿತಿ ಹಲವರಿಗಿತ್ತು ಆಗ. ಮನೆಯೊಂದನ್ನು ಶಾಲೆಯಾಗಿ ಮಾಡಿ, ನಮ್ಮ ಬಾಲವಾಡಿಯನ್ನು ನಡೆಸಲಾಗುತ್ತಿತ್ತು. ಬಾಲವಾಡಿಗೆ ಹೋದ ಮೊದಲ ದಿನ ನಾವೊಂದಿಷ್ಟು ಜನ ನಗುನಗುತ್ತಲೇ ಇದ್ದೆವು. ಆದರೆ ಇನ್ನೊಂದಿಷ್ಟು ಮಕ್ಕಳು ಚೀರಾಡಿ, ಭೋರಾಡಿ, ಉರುಳಾಡಿ, ಘಟ್ಟಿಸಿಕೊಂಡು ಅತ್ತಿದ್ದರು. ಸಮಾಧಾನ ಮಾಡುವ ಸಲುವಾಗಿ ಅವರಿಗೆಲ್ಲ ಒಂದೊಂದು ನಿಂಬೆಹುಳಿ ಪೆಪ್ಪರಮಿಂಟ್‌ ಸಿಕ್ಕಿದ್ದವು. ಮಾರನೇ ದಿನ ಅತ್ತವರ ಸಂಖ್ಯೆ ಹೆಚ್ಚಾಗಿತ್ತು, ನನ್ನನ್ನೂ ಸೇರಿ!

ನಮ್ಮ ಬಾಲವಾಡಿಯಲ್ಲಿ ಸಹಾಯಕ್ಕಿದ್ದವರನ್ನೂ ಸೇರಿಸಿದರೆ ಒಟ್ಟೂ ನಾಲ್ವರು ಸಿಬ್ಬಂದಿ ಇದ್ದರು. ಪಂಕಜಾ ಮಿಸ್‌, ಫಿರ್ದೂಸ್‌ ಮಿಸ್‌, ಸುಶೀಲಮ್ಮ ಆಂಟಿ ಮತ್ತು ಆಯಮ್ಮ ಆಂಟಿ- ಇವರಿಷ್ಟು ಮಂದಿ ಸೇರಿ, ಸುಮಾರು ೩೦ ಮಕ್ಕಳನ್ನು ಸುಧಾರಿಸುತ್ತಿದ್ದರು. ಕುಳಿತುಕೊಳ್ಳುವುದಕ್ಕೆಂದು ಬೆಂಚು- ಕುರ್ಚಿಗಳಲ್ಲ, ಮಕ್ಕಳಿಗೆಲ್ಲ ಪುಟ್ಟ ಕಾಲುಮಣೆಗಳು ಇರುತ್ತಿದ್ದವು. ಆ ಕಾಲುಮಣೆಗಳ ಅಡಿಗಿನ ಖಾಲಿ ಜಾಗವಂತೂ, ನಮ್ಮ ಬೆಣ್ಣೆ ಬಳಪಗಳು ಮತ್ತು ಸೀಮೆಸುಣ್ಣಗಳನ್ನು ಆಗಾಗ ತಿಂದು ಹಾಕುತ್ತಿತ್ತು. ಕೆಲವೊಮ್ಮೆ ಪಾಟಿಗಳೂ ಅದರಡಿಗೆ ಮರೆಯಾಗಿ, ಅದನ್ನು ಹುಡುಕುವುದಕ್ಕೆಂದು ಕಾಲುಮಣೆಗಳನ್ನು ಸರಿಸಿದಾಗ ಎಂದೋ ಕಣ್ಮರೆಯಾಗಿದ್ದ ಯಾರಾರದ್ದೋ ಬಣ್ಣಬಣ್ಣದ ಸೀಮೆ ಸುಣ್ಣಗಳೆಲ್ಲ- ಇಡಿಯಾಗಿ, ಪುಡಿಯಾಗಿ ದೊರೆಯುತ್ತಿದ್ದವು.

ನಮಗೆಲ್ಲ ಬಾಲವಾಡಿಯಲ್ಲಿ ಪುಸ್ತಕ-ಪೆನ್ಸಿಲ್ಲು ಇರಲಿಲ್ಲ. ಪೆನ್ಸಿಲ್ಲು, ರಬ್ಬರು, ಮೆಂಡರ್‌ಗಳನ್ನೆಲ್ಲ ನಾವು ಕಂಡಿದ್ದು ಪ್ರಾಥಮಿಕ ಶಾಲೆ ಆರಂಭವಾದ ಮೇಲೆಯೆ. ಅಲ್ಲಿಯವರೆಗೆ ಸ್ಲೇಟು-ಬಳಪದಲ್ಲೇ ಗೀಚುತ್ತಿದ್ದೆವು. ʻನನ್ನ ಪಾಟಿ ಕರಿಯದು, ಸುತ್ತುಕಟ್ಟು ಬಿಳಿಯದುʼ ಎಂಬ ಶಿಶುಗೀತೆ ಹೇಳಿದವರಿಗೆ, ಅದನ್ನು ಬಳಸಿಯೂ ಗೊತ್ತಿದ್ದೀತು. ಹಾಗಂತ ಪ್ಲಾಸ್ಟಿಕ್‌ ಮಣಿಗಳ ಪಾಟಿ ಇರುತ್ತಿತ್ತು ಕೆಲವರ ಬಳಿ. ಯಾರದ್ದೋ ಸ್ಲೇಟಿನಲ್ಲಿ ಬರೆದಿದ್ದನ್ನು ಇನ್ಯಾರೊ ಅಳಿಸುವುದು, ಯಾರದ್ದೋ ಬಟ್ಟೆ ತಾಗಿ, ಬರೆದಿದ್ದೆಲ್ಲ ತನ್ನಷ್ಟಕ್ಕೆ ಒರೆಸಿ ಹೋಗುವುದು, ಅದಕ್ಕಾಗಿ ʻಹೋʼ ಎಂದು ಅತ್ತು ರಂಪ ಮಾಡುವುದು, ಹಾಗೆ ಅಳಿಸಿಹೋಗಬಾರದೆಂದು ಸೀಮೆ ಸುಣ್ಣವನ್ನು ನೀರಲ್ಲಿ ಅದ್ದಿಕೊಂಡು ಬರೆಯುವುದು, ಹಾಗೆ ಬರೆದಿದ್ದನ್ನು ಅಳಿಸಲೇ ಆಗದೆ ʻಥೂʼ ಎಂದು ಎಂಜಲು ಉಗಿದು ಅಳಿಸುವುದು… ಇಂಥವೆಲ್ಲ ಬಾಲವಾಡಿಯ ದಿನಗಳ ಮಾಮೂಲಿ ಪ್ರಕ್ರಿಯೆ.

ಅಂದಿನ ಬಾಲವಾಡಿಯ ಜಗಳಗಳೂ ಇಂದಿನ ಹಾಗೆಯೇ, ಯಾವ ಕಾರಣಕ್ಕೆ ಬೇಕಿದ್ದರೂ ಹುಟ್ಟುತ್ತಿದ್ದವು. ತೊಟ್ಟ ಅಂಗಿಯ ಚುಂಗನ್ನು ಪಕ್ಕದವರು ಜಗ್ಗಿದರು ಎನ್ನುವುದರಿಂದ ಹಿಡಿದು, ಬಳಪ ಮುರಿದರು, ಮೊಣಕೈಯಲ್ಲಿ ತಿವಿದರು, ಜುಟ್ಟೆಳೆದರು, ಸ್ಲೇಟು ಮುಟ್ಟಿದರು ಎನ್ನುವವರೆಗೆ ಯಾವುದೇ ಕಾರಣಕ್ಕೂ ಹೊಡೆದಾಟ ಶುರುವಾಗುತ್ತಿತ್ತು. ಮನೆಯಲ್ಲಿ ಅತಿ ಮುದ್ದಿನಿಂದ ಬೆಳೆದವರು, ಬಾಲವಾಡಿಯಲ್ಲೂ ಹಠ ಮಾಡಿ, ಪೆಟ್ಟು ತಿಂದು, ಅತ್ತು ವಾಂತಿ ಮಾಡಿದ ಉದಾಹರಣೆಗಳಿದ್ದವು. ಮಕ್ಕಳ ಉಳಿದೆಲ್ಲ ಚಾಕರಿಯ ಜೊತೆಗೆ ಬಾಲವಾಡಿಯ ಆಯಮ್ಮ ಆಂಟಿಗೆ ಇಂಥ ಸ್ವಚ್ಛತೆಗೆ ಕೆಲಸಗಳೂ ಗಂಟು ಬೀಳುತ್ತಿದ್ದವು.

ಒಮ್ಮೆ ಬಾಲವಾಡಿ ಮುಗಿದ ಮೇಲೆ ಮುಂದಿನ ತರಗತಿಗಳಲ್ಲಿ, ಶಾಲೆಯ ಮೊದಲ ದಿನ ಅಷ್ಟೊಂದು ಕಷ್ಟ ಎನಿಸಿರಲಿಲ್ಲ. ಆದರೂ ಕೆಲವು ಮಕ್ಕಳಿಗೆ ಎರಡೇಟು ಬಿಗಿದು ಪಾಲಕರು ಬಿಟ್ಟು ಹೋಗುವ ದೃಶ್ಯಗಳು ಅಲ್ಲಲ್ಲಿ ಕಾಣುತ್ತಲೇ ಇರುತ್ತಿದ್ದವು. ಶಾಲೆಯ ಮುಖ ಕಾಣುತ್ತಿದ್ದಂತೆ, ʻಹೋಗಲೊಲ್ಲೆʼ ಎಂದು ರಸ್ತೆಯಲ್ಲೇ ಬಿದ್ದು ಉರುಳಾಡುವ ಮಕ್ಕಳ ಚಿತ್ರಗಳು ಈಗಲೂ ನೆನಪಿಗೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಮೊದಲ ದಿನವೆಂದರೆ ಹಬ್ಬದ ವಾತಾವರಣವನ್ನೇ ನಿರ್ಮಿಸಲಾಗುತ್ತಿದೆ. ಶಾಲೆಯ ಆವರಣವನ್ನು ತಳಿರು-ತೋರಣ, ಬಾಳೆ ಕಂಬಗಳಿಂದ ಅಲಂಕರಿಸಿ, ಮಕ್ಕಳಿಗೆಲ್ಲ ಆರತಿ ಎತ್ತಿ ಬರಮಾಡಿಕೊಂಡು, ಮಿಠಾಯಿ ಹಂಚುವುದೋ ಅಥವಾ ಸಿಹಿಯೂಟ ಉಣಿಸುವುದನ್ನು ಕಾಣಬಹುದು. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಯ ಮೇಲೆ, ಟ್ರಾಕ್ಟರ್‌ಗಳ ಮೇಲೆ ಮೆರವಣಿಗೆಯ ಮೂಲಕ ಶಾಲೆಗೆ ಕರೆದೊಯ್ದ ಸುದ್ದಿಗಳಿವೆ. ಹಿಂದೆ ಶಾಲೆಗಳನ್ನು ಕರೆಯುತ್ತಿದ್ದುದೇ ʻಶಾಲೆಮನೆʼಗಳೆಂದು. ಹಿಂದಲ್ಲ, ಇಂದಿಗೂ ಮಕ್ಕಳು ಮನೆಗೆ ಹೋದಷ್ಟೇ ನಿರುಮ್ಮಳವಾಗಿ ಶಾಲೆಗೆ ಹೋಗಬೇಕೆಂಬ ಕಳಕಳಿ ನಿಜಕ್ಕೂ ಶ್ಲಾಘನೆಗೆ ಅರ್ಹ.

Maharashtra proposed to change School timings to ensure children get enough sleep

ನಮ್ಮಲ್ಲಿ ಮಾತ್ರವಲ್ಲ, ಹಲವಾರು ದೇಶಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ಎಂಬುದು ಸಂಭ್ರಮದ ಸಮಯ. ಇದಕ್ಕಾಗಿ ಬಹುತೇಕ ಅಂಗಡಿ-ಮಳಿಗೆಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ರಿಯಾಯ್ತಿಗಳು ರಾರಾಜಿಸುತ್ತವೆ. ಪೆನ್ನು, ಪೆನ್ಸಿಲ್ಲು, ಇರೇಸರ್‌ಗಳಿಂದ ಹಿಡಿದು ಬಣ್ಣದ ಪೆನ್ಸಿಲ್ಲುಗಳು, ಕ್ರೇಯಾನ್‌, ಚಿತ್ರಕಲೆಯ ತರಹೇವಾರಿ ಉಪಕರಣಗಳು, ನೋಟ್ ಪುಸ್ತಕಗಳು, ಶಾಲೆಯ ಬ್ಯಾಗು, ಊಟದ ಡಬ್ಬಿ, ನೀರಿನ ಬಾಟಲಿಗಳು, ಶೂಗಳು, ವಸ್ತ್ರಗಳು, ಕ್ಯಾಲ್ಕುಲೇಟರ್‌, ಲ್ಯಾಪ್‌ಟಾಪ್‌… ಹೀಗೆ, ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಬೇಕಾಗುವ ಲೆಕ್ಕವಿಲ್ಲದಷ್ಟು ಸಾಮಗ್ರಿಗಳು ʻಸೇಲ್‌ʼ ಎಂಬ ಹಣೆಪಟ್ಟಿ ಹೊತ್ತು ಕುಳಿತಿರುತ್ತವೆ. ಇದೇ ಸಮಯದಲ್ಲಿ, ಉಪಯೋಗಿಸಲು ಯೋಗ್ಯ ಸ್ಥಿತಿಯಲ್ಲೇ ಇರುವ ಶಾಲೆಯ ಸಾಮಗ್ರಿಗಳ ‌ʻಗರಾಜ್‌ ಸೇಲ್ʼ ಸಹ ಕಂಡುಬರುತ್ತದೆ. ಆ ವಸ್ತುಗಳ ಮಾಲೀಕರಿಗೆ ಮನೆಯಲ್ಲಿ ಜಾಗ ಖಾಲಿಯಾಯಿತು, ಜೊತೆಗೆ ನಾಲ್ಕು ಕಾಸೂ ಕೈಗೆ ಬಂತು; ಹೊಸದನ್ನು ಖರೀದಿಸಲು ಅನುಕೂಲ ಇಲ್ಲದವರಿಗೆ ಕಡಿಮೆ ಖರ್ಚಿನಲ್ಲಿ ಅಗತ್ಯ ವಸ್ತುಗಳೂ ದೊರೆತವು- ಉಪಾಯ ಒಳ್ಳೆಯದಲ್ಲವೇ? ನಮ್ಮಲ್ಲಿ… ಇವನ್ನೆಲ್ಲ ಯೋಚಿಸುವುದೂ ಕಷ್ಟ.

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ಇನ್ನೂ ಒಂದು ಕುತೂಹಲ ಬಹುದಿನಗಳವರೆಗೆ ಬಾಲ್ಯದಲ್ಲಿ ಕಾಡಿದ್ದಿತ್ತು. ಜೂನ್‌ 1ರಂದು ಅಷ್ಟೆಲ್ಲಾ ಜನರ ಬರ್ತ್‌ಡೇ ಇರುವುದಕ್ಕೆ ಹೇಗೆ ಸಾಧ್ಯ ಎಂಬುದು! ಪ್ರತಿ ಕ್ಲಾಸಿನಲ್ಲಿ ಇರುತ್ತಿದ್ದ 60-70 ಮಕ್ಕಳಲ್ಲಿ, ನಾಲ್ಕಾರು ಜನರಾದರೂ ಜೂನ್‌ 1ಕ್ಕೆ ಹುಟ್ಟಿದವರು ಇರುತ್ತಿದ್ದರು. ನಮ್ಮ ಕೆಲವು ಟೀಚರ್‌ಗಳು ತಾವೂ ಜೂನ್‌ 1ಕ್ಕೇ ಹುಟ್ಟಿದವರೆಂದು ಹೇಳಿ ನಕ್ಕಾಗ, ಅದೊಂದೇ ದಿನ ಯಾಕಾಗಿ ಅಷ್ಟೊಂದು ಜನ ಹುಟ್ಟುತ್ತಾರೆ ಎಂಬ ಕುತೂಹಲ ಮೂಡಿತ್ತು. ಹುಟ್ಟಿದ ದಿನಾಂಕ ಸ್ಪಷ್ಟವಾಗಿ ಗೊತ್ತಿಲ್ಲದವರೆಲ್ಲ, ಶಾಲೆಗೆ ಹೆಸರು ಕೊಡುವಾಗ ಅನಿವಾರ್ಯವಾಗಿ ಜೂನ್‌ 1ಕ್ಕೇ ಹುಟ್ಟುತ್ತಿದ್ದರು ಎಂಬುದು ತಿಳಿದಾಗ, ಟೀಚರ್‌ಗಳ ನಗೆಯೊಂದಿಗೆ ನಮ್ಮದೂ ಸೇರಿತ್ತು.

ಮಿತ್ರರ ಹುಟ್ಟಿದ ದಿನಗಳಂದು, ನಮ್ಮ ರಫ್‌ ಪುಸ್ತಕದ ಹಾಳೆಗಳನ್ನು ಹಿಂದಿನಿಂದ ಹರಿದು ಅವರಿಗಾಗಿ ತಯಾರಿಸುತ್ತಿದ್ದ ಗ್ರೀಟಿಂಗ್‌ ಕಾರ್ಡ್‌ಗಳು, ಪುಸ್ತಕದ ನಡುವೆ ಮರಿ ಹಾಕಲೆಂದು ಇರಿಸಿಕೊಳ್ಳುತ್ತಿದ್ದ ಹಕ್ಕಿಪುಕ್ಕಗಳು, ಸಾಮಾನ್ಯ ಇಂಕ್‌ ಪೆನ್ನುಗಳ ನಡುವೆ ರಾರಾಜಿಸುತ್ತಿದ್ದ ಹೀರೊ ಪೆನ್ನುಗಳು, ಆರೆಂಟು ಹನಿ ಇಂಕಿನ ಕಡ ಹಿಂತಿರುಗಿಸದ್ದಕ್ಕೆ ಹುಟ್ಟುತ್ತಿದ್ದ ಮುನಿಸು, ಫೌಂಟೆನ್‌ ಪೆನ್ನುಗಳಿಂದ ಚಿಮ್ಮುವ ಇಂಕಿಗೆ ಮುಂದಿನ ಬೆಂಚಿನವರ ವಸ್ತ್ರ ಕಲೆಯಾಗಿ ಏಳುತ್ತಿದ್ದ ಜಗಳ, ಮಧ್ಯಾಹ್ನ ಊಟದ ಡಬ್ಬಿಯ ಹಂಚಿಕೆಯಲ್ಲಿ ಆಗುತ್ತಿದ್ದ ರಾಜಿ ಪಂಚಾಯ್ತಿ, ಪ್ರತಿದಿನವೂ ಇರುತ್ತಿದ್ದ ಆಟದ ಪಿರಿಯೆಡ್‌, ಬೆತ್ತ ಹಿಡಿದೇ ಹುಟ್ಟಿದವರಂತೆ ಕಾಣುತ್ತಿದ್ದ ಪಿ.ಟಿ. ಮೇಷ್ಟ್ರು … ಹೆಕ್ಕುತ್ತಾ ಹೋದರೆ ಶಾಲೆಯ ಜೀವನದ ನೆನಪುಗಳು ಅಡಿಗಡಿಗೆ ಸಿಗುತ್ತವೆ.

ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ… ಎಂದೋ ದಾಟಿ ಬಂದ ನಮ್ಮದೇ ಶಾಲೆಯ ಅಂಗಳಕ್ಕೆ. ಈಗ ನಿಮ್ಮ ಶಾಲೆಯ ದಿನಗಳು ನಿಮಗೂ ನೆನಪಾಗದಿದ್ದರೆ ಕೇಳಿ!

ಇದನ್ನೂ ಓದಿ: ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?” ಎಮರ್ಜೆನ್ಸಿಯ ಕರಾಳ ನೆನಪು

ನನ್ನ ದೇಶ ನನ್ನ ದನಿ ಅಂಕಣ: ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ!

VISTARANEWS.COM


on

indira gandhi ನನ್ನ ದೇಶ ನನ್ನ ದನಿ
Koo

ಇಂದು ತುರ್ತುಪರಿಸ್ಥಿತಿ ಹೇರಿಕೆಯ ʼಚಿನ್ನದ “ಹಬ್ಬʼ !

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ಅವು ತುರ್ತುಪರಿಸ್ಥಿತಿಯ (internal Emergency) ದಿನಗಳು. ತಮ್ಮ ಅಧಿಕಾರ ಉಳಿಸಿಕೊಳ್ಳುವ ಏಕೈಕ ದುರುದ್ದೇಶದಿಂದ ಇಂದಿರಾ ಗಾಂಧಿಯವರು (Indira Gandhi) ದೇಶದಾದ್ಯಂತ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಎಲ್ಲ ಮಾಧ್ಯಮದವರು, ಓರಾಟಗಾರರು, ಬುದ್ಧಿಜೀವಿಗಳು, ಬಹುತೇಕ ವಿರೋಧ ಪಕ್ಷಗಳವರು ಶರಣಾಗತರಾಗಿಬಿಟ್ಟಿದ್ದರು, ಅಷ್ಟೇ ಅಲ್ಲ, ಮನೆಯಲ್ಲಿ ಮಂಚದ ಅಡಿಯಲ್ಲಿ ಅಡಗಿಕೊಂಡುಬಿಟ್ಟಿದ್ದರು. ತುರ್ತುಪರಿಸ್ಥಿತಿಯನ್ನು ರಾಷ್ಟೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಪರಿವಾರ ಸಂಘಟನೆಗಳು ಮಾತ್ರವೇ ವಿರೋಧಿಸುತ್ತಿದ್ದುದರಿಂದ ಇಂದಿರಾ ಗಾಂಧಿಯವರು ಆರೆಸ್ಸೆಸ್ ಎಂದರೆ ಸಿಡಿಮಿಡಿಗೊಳ್ಳುತ್ತಿದ್ದರು.

1975ರ ಆ ವರ್ಷದ ಗಾಂಧೀ ಜಯಂತಿ (Gandhi Jayanthi) ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶ, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧೀಜಯಂತಿ ಆಚರಿಸಿದವರು ಸಂಘದ ಭೂಗತ ಕಾರ್ಯಕರ್ತರು. ಎದೆಯ ಮೇಲೆ ಧರಿಸಲು ಗಾಂಧೀ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧೀ ಭಿತ್ತಿಚಿತ್ರಗಳು. ಎರಡರಲ್ಲೂ ಗಾಂಧೀ ಚಿತ್ರದ ಕೆಳಗೆ “ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆಬಾಗುವುದು ಹೇಡಿತನ” ಎನ್ನುವ ಗಾಂಧೀ ಉಕ್ತಿ. ಆದರೆ ಅಂದಿನ ಇಂದಿರಾ – ದೇವರಾಜ ಅರಸು ಅವರ ಕಾಂಗ್ರೆಸ್ ಸರ್ಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.

ಗಾಂಧೀ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದವರ ಚಿತ್ರ ಹಿಡಿದಿದ್ದಕ್ಕೆ ಹೊಡೆದು ಬಡಿದು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ, ನ್ಯಾಯಾಧೀಶರು ತಮ್ಮ ಕಣ್ಣು – ಕಿವಿಗಳನ್ನು ನಂಬದಾದರು. “ಏನು, ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸಿನವರು ಏನು ಹೇಳಿಯಾರು! “ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು” ಎಂಬ ನೆಪ ಹೇಳಿದರು. “ಇರಬಹುದು, ಆದರೆ ಇವರು ಮಾಡಿದ ಅಪರಾಧವೇನು?” ಎಂದ ನ್ಯಾಯಾಧೀಶರ ಪ್ರಶ್ನೆಗಳಿಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು (ಕೆಲವೆಡೆ) ಪೊಲೀಸರಿಗೆ ಛೀಮಾರಿ ಹಾಕಿ ಬಂಧಿತರನ್ನು ಬಿಡುಗಡೆ ಮಾಡಿದರು.

ಹಿಂದೆ ಉಪ್ಪಿನ ಸತ್ಯಾಗ್ರಹದಲ್ಲಿ, ಭಾರತ್ ಛೋಡೋ ಚಳವಳಿಯಲ್ಲಿ ಭಾಗವಹಿಸಿ ‘ವಂದೇ ಮಾತರಂ’, ‘ಮಹಾತ್ಮಾ ಗಾಂಧೀ ಕೀ ಜೈ’, ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಿಸುತ್ತಿದ್ದವರ ಮೇಲೆ ಬ್ರಿಟಿಷ್ ಪೊಲೀಸರ ಲಾಠಿಯೇಟು, ಬೂಟಿನೇಟು ಬೀಳುತ್ತಿತ್ತು. ‘ಸ್ವಾತಂತ್ರ್ಯ’ ಬಂದ ಮೇಲೂ ಹಾಗೆ ಘೋಷಣೆ ಕೂಗಿದವರ ಮೇಲೆ, ಕಾಂಗ್ರೆಸ್ ಸರಕಾರದ ಪೊಲೀಸರ ಲಾಠಿಯೇಟು ಬಿದ್ದುದು, ಬರಿಯ ವಿಸ್ಮಯದ – ವಿಷಾದಭಾವದ ಮಾತಲ್ಲ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದೆಯೇ, ಕಾಂಗ್ರೆಸ್ಸಿನಂತಹ ಪಕ್ಷಗಳನ್ನು ಬೆಂಬಲಿಸಿ ಮತ ಹಾಕುವುದರ ದುಷ್ಪರಿಣಾಮಗಳ ಅಂತಿಮ ಹಂತವಿದು.

1975ರ ನವೆಂಬರ್ 14ರಿಂದ ದೇಶಾದ್ಯಂತ ಪ್ರತಿಭಟನೆಯನ್ನು ಆರೆಸ್ಸೆಸ್ ಪರಿವಾರ ಸಂಘಟನೆಗಳು ಹಮ್ಮಿಕೊಂಡಿದ್ದವು. ಬಹುಪಾಲು ರಾಜಕಾರಣಿಗಳು, ನಾಯಕರು ಸೆರೆಮನೆಯಲ್ಲಿದ್ದರು. ಪ್ರತಿಭಟನೆಯನ್ನು ವಿಫಲಗೊಳಿಸಲು ಅಂದಿನ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಬಂಧನಗಳಿಗೆ (Preventive Arrests) ಆಜ್ಞೆ ಮಾಡಿತ್ತು. ಆ ಕಾರಣಕ್ಕೆ ನಾವೆಲ್ಲಾ ಬಂಧನಕ್ಕೆ ಒಳಗಾದುದು ನವೆಂಬರ್ 13ರಂದು. ಪೊಲೀಸರು “ನೀವು ಭಾರತೀಯರೋ ರಾಷ್ಟ್ರೀಯರೋ?” ಎಂದು ಪ್ರಶ್ನೆ ಹಾಕಿದಾಗ ನಾನೂ ನನ್ನ ಉಳಿದ ಸ್ವಯಂಸೇವಕ ಬಂಧುಗಳೂ ಕಕ್ಕಾಬಿಕ್ಕಿಯಾದೆವು. ನಮ್ಮ ಮುಂದೆ PSR (Prisoners’ Search Register) ಹರಡಿಕೊಂಡಿತ್ತು. ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಮುಗ್ಧತೆಯಿಂದ “ನಾವೆಲ್ಲಾ ಭಾರತೀಯರೂ ಹೌದು, ರಾಷ್ಟ್ರೀಯರೂ ಹೌದು” ಎಂದೆವು. “ಎರಡರಲ್ಲಿ ಒಂದು ಹೇಳ್ರೀ” ಎಂದು ಅವರು ಅಬ್ಬರಿಸಿದಾಗ ಇನ್ನಷ್ಟು ಗೊಂದಲ. ಕೊನೆಗೆ ಆ ಪ್ರಶ್ನೆ ನಾವು ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದವರೋ, ಭಾರತೀಯ ಜನಸಂಘಕ್ಕೆ ಸಂಬಂಧಿಸಿದವರೋ ಎಂಬುದಾಗಿತ್ತು ಎಂದು ತಿಳಿದಾಗ, ಗೊಂದಲದಿಂದ ಪರಿಹಾರ. ನಾವೆಲ್ಲಾ ಒಕ್ಕೊರಲಿನಿಂದ “ನಾವು ರಾಷ್ಟೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು” ಎಂದೆವು. ಅಂದಿನ ದಿನಮಾನಗಳಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಹೆಸರನ್ನು ಸರಿಯಾಗಿ ಉಚ್ಚರಿಸಲು, ಉಲ್ಲೇಖಿಸಲು ಬಹಳ ಜನರಿಗೆ ಬರುತ್ತಿರಲಿಲ್ಲ (ಕೆಲವರಿಗೆ ಈಗಲೂ ಗೊಂದಲ!).

ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ ಎಂಬುದು ಇಂದಿಗೂ ಪ್ರಶ್ನೆಯಾಗಿ ಕಾಡುತ್ತದೆ. ಎಂತಹ ಪಕ್ಷವಿದು. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ! ಕಾಂಗ್ರೆಸ್ಸಿನ ಒಬ್ಬನೇ ಒಬ್ಬ MP ,MLA, MLC ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಇಲ್ಲ. ಕಾಸು ಮಾಡಿಕೊಳ್ಳುವ ಧಂಧೆಯನ್ನು ಎಲ್ಲ ಕಾಂಗ್ರೆಸ್ಸಿಗರೂ ಇನ್ನಷ್ಟು ನಿರಾಳವಾಗಿ ಮುಂದುವರಿಸಿಕೊಂಡುಹೋದರು. ಕಳೆದ ಏಳೆಂಟು ದಶಕಗಳ ಭಾರತೀಯ ಇತಿಹಾಸವನ್ನು ಅವಲೋಕಿಸಿದರೆ ಈ ಕಾಂಗ್ರೆಸ್ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಾಗಿರದೆ, ದೇಶಕ್ಕೆ ಅಂಟಿದ ಒಂದು ಶಾಪ, ಒಂದು ರೋಗ ಎಂಬುದು ಖಚಿತವಾಗುತ್ತದೆ.

ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಪ್ಯಾರೇಲಾಲರು, ‘Mahatma Gandhi : The Last Phase’ ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನು ಗಾಂಧೀವಾದಿ ಕೆ.ವಿ.ಶಂಕರಗೌಡರು ‘ಮಹಾತ್ಮಾಗಾಂಧಿ: ಅಂತಿಮ ಹಂತ’ ಎಂದು ಅನುವಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯವು ಹೊರತಂದಿರುವ ಈ ಸಂಪುಟಗಳು ಓದಲೇಬೇಕಾದ ಅಪೂರ್ವ ಮಾಹಿತಿಗಳನ್ನು ದಾಖಲೆಗಳನ್ನು ಸಂಗತಿಗಳನ್ನು ಒಳಗೊಂಡಿದೆ.

“ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರನೇಕರು, ಗಾಳಿ ಬಂದಾಗ ತೂರಿಕೋ ಎನ್ನುವ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‍ನಲ್ಲಿ ತಲೆದೋರಿರುವ ಗುಂಪುಗಾರಿಕೆ ಮತ್ತು ಮಂತ್ರಿಗಳ ದೌರ್ಬಲ್ಯವನ್ನು ಕಂಡ ಜನರಲ್ಲಿ ಒಂದು ಬಗೆಯ ದಂಗೆಯ ಮನೋಭಾವ ಮೂಡುತ್ತಿದೆ. ಜನರು ಬ್ರಿಟಿಷ್ ಸರ್ಕಾರವೇ ವಾಸಿಯಾಗಿತ್ತು ಎನ್ನುತ್ತಿದ್ದಾರಲ್ಲದೆ, ಕಾಂಗ್ರೆಸ್ಸನ್ನು ಹಳಿಯುತ್ತಿದ್ದಾರೆ” ಎಂದರು. ಗಾಂಧೀಜಿ. ಸರಿಯಾಗಿ ಗಮನಿಸಿ. ಇದು ಸ್ವಾತಂತ್ರ್ಯ ಬಂದ ಕೆಲವೇ ದಿನಗಳ ಅನಂತರ ಗಾಂಧೀಜಿಯವರು ಹೇಳಿದ ಮಾತುಗಳು. ಡಿಸೆಂಬರ್ 1947ರಲ್ಲಿ ಮತ್ತೆ ಗಾಂಧೀಜಿ ಹೇಳಿದರು “ಕಾಂಗ್ರೆಸ್‍ನಂತಹ ಬೃಹತ್ ಸಂಸ್ಥೆಗಳಿಂದ ಭ್ರಷ್ಟಾಚಾರ, ಅಸತ್ಯ ಮುಂತಾದ ಪೀಡೆಗಳನ್ನು ಉಚ್ಚಾಟಿಸದೇ ಹೋದರೆ, ನಾಲ್ಕೂ ಕಡೆಗಳಿಂದ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ಮುತ್ತಿ, ಈ ಸಂಸ್ಥೆಯು ಧೂಳೀಪಟವಾಗುತ್ತದೆ ಮತ್ತು ಹಾಗಾದಾಗ ನಾನು ಒಂದು ತೊಟ್ಟು ಕಣ್ಣೀರನ್ನೂ ಸುರಿಸುವುದಿಲ್ಲ. ದೊಡ್ಡ ರೋಗದಿಂದ ಬಳಲುತ್ತಿರುವ ರೋಗಿಯನ್ನು ಗುಣಮಾಡಲು ಸಾಧ್ಯವಿಲ್ಲದೆ ಹೋದರೆ, ರೋಗಿ ಸಾಯುವುದು ಮೇಲು” (ಪುಟ 721).

ಈ ಪರಿಪ್ರೇಕ್ಷ್ಯದಲ್ಲಿ, ತುರ್ತುಪರಿಸ್ಥಿತಿಯ ಹೇರಿಕೆಯ (25/6/1975) ವಾರ್ಷಿಕೋತ್ಸವದ ಕಹಿನೆನಪುಗಳ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ.

ಇತಿಹಾಸ, ಸ್ವಾತಂತ್ರ್ಯ ಹೋರಾಟಗಳ ಸರಿಯಾದ ವಿಮರ್ಶಾತ್ಮಕ ವಿಶ್ಲೇಷಣೆಗಳು ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ಮತ್ತೊಮ್ಮೆ ನೀಗಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಸೂರ್ಯವಂಶದ ಮುಂಗಾಣ್ಕೆಯನು ಅರಿತ ಸಾಧಕ- ಸುಮಂತ್ರ

ಸುಮಂತ್ರನ ಕುರಿತು ಅಭ್ಯಾಸ ಮಾಡುತಾ ಹೋದಂತೆ ಆತನ ಕಾರ್ಯದಕ್ಷತೆ ಮತ್ತು ಕುಶಲಿತನದ ಕುರಿತು ಅಚ್ಚರಿ ಮೂಡಿಸುವ ವಿಷಯಗಳಿವೆ. ದಶರಥನಿಂದ ತೊಡಗಿ ಸೀತಾವಿಯೋಗದ ವರೆಗೆ ಆತ ಮಹತ್ವದ ಪಾತ್ರ ವಹಿಸಿಯೂ ಮರೆಯಲ್ಲಿ ಇದ್ದಾನೆ.

VISTARANEWS.COM


on

ಧವಳ ಧಾರಿಣಿ dhavala dharini sumantra
Koo

ಅಬ್ಬರಿಸಿದರೂ ಅತಿಕ್ರಮಿಸದ ಸಂಯಮಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸುಮಂತ್ರ (Sumantra) ಅಯೋಧ್ಯೆಯ (Ayodhya) ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ ಮತ್ತು ದಶರಥನ (Dasharatha) ಆಪ್ತನೂ ಆಗಿದ್ದನೆನ್ನುವ ವಿಷಯವನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಈಗ ಮುಂದಿನ ಭಾಗ.

ನೇರ ನಿಷ್ಠುರ ರಾಜನೀತಿಜ್ಞ

ಸುಮಂತ್ರನ ರಾಜ ನಿಷ್ಠೆ ಮತ್ತು ನಿಷ್ಠುರ ಸ್ವಭಾವ ಎದ್ದು ಕಾಣುವುದು ಕೈಕೇಯಿಯ ಅರಮನೆಯಲ್ಲಿ. ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕದ ಸಂಭ್ರಮವೆಂದು ತಿಳಿದ ಪ್ರಜೆಗಳ ಸಂತೋಷ ಮೇರೆ ಮೀರಿತ್ತು. ಅದೇ ಕಾಲಕ್ಕೆ ಕೈಕೇಯಿಯ ಅರಮನೆಯಲ್ಲಿ ದೊರೆ ದಶರಥ ಧರ್ಮವೆನ್ನುವ ಹಗ್ಗದಿಂದ ಬಿಗಿಯಲ್ಪಟ್ಟಿದ್ದ. ರಾಮನನ್ನು ಒಮ್ಮೆ ನೋಡಬೇಕೆಂದು ಚಡಪಡಿಸುತ್ತಿದ್ದ. ವಶಿಷ್ಠರು ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ಸುವಸ್ತುಗಳನ್ನು ಸಿದ್ಧಮಾಡಿಕೊಂಡಿದ್ದರು. ಮುಹೂರ್ತ ಮೀರಿ ಹೋಗದಂತೆ ರಾಜನನ್ನು ಕೈಕೇಯಿಯ ಅರಮನೆಯಿಂದ ಗೌರವದ ಬಿನ್ನವತ್ತಳೆಯ ಮೂಲಕ ಕರೆತರುವ ಹೊಣೆ ಮಂತ್ರಿಯದಾಗಿತ್ತು. ಆತ ಕೈಕೇಯಿಯ ಅರಮನೆಗೆ ಹೋಗಿ ದಶರಥನನ್ನು ಸ್ತುತಿಮಾಡುತ್ತಾ “ಇಂದ್ರನ ಸಾರಥಿಯಾದ ಮಾತಲಿಯು ದೇವರಾಜನನ್ನು ಎಚ್ಚರಗೊಳಿಸುವಂತೆ ನಾನು ನಿನ್ನನ್ನು ಪಟ್ಟಾಭಿಷೇಕದ ಸುಮೂಹರ್ತಕ್ಕಾಗಿ ಆಗಮಿಸಲು ವಿನಂತಿಸುವುತ್ತಿದ್ದೇನೆ, ಈ ಕೂಡಲೇ ಸಿದ್ಧನಾಗು” ಎಂದು ಹೊರಗಡೆಯಿಂದಲೇ ಬಗೆಬಗೆಯಾಗಿ ಹೊಗಳುತ್ತಾನೆ. ಅವೆಲ್ಲವೂ ರಾಜನಿಗೆ ತನ್ನ ಮರ್ಮಸ್ಥಳವನ್ನು ಕತ್ತರಿಸುವ ಆಯುಧಗಳಾಗಿ ಇರಿಯುತ್ತಿದ್ದವು. ಆತನಲ್ಲಿ ಮಾತು ಹೊರಡುತ್ತಿರಲಿಲ್ಲ. ಆಗ ಕೈಕೇಯಿ “ನಿಮ್ಮ ಮಹಾರಾಜ ರಾಮನ ಪಟ್ಟಾಭಿಷೇಕಮಾಡಬೇಕೆನ್ನುವ ಉತ್ಸಾಹದಲ್ಲಿ ರಾತ್ರಿಯೆಲ್ಲಾ ಎಚ್ಚರಗೊಂಡಿದ್ದನು. ಯಶೋವಂತನಾದ ರಾಜನಿಗೆ ಇದೀಗ ಆಯಾಸದಿಂದ ನಿದ್ರೆ ಹತ್ತುತ್ತಿದೆ. ರಾಮನನ್ನು ಒಮ್ಮೆ ಇಲ್ಲಿಗೆ ಬರುವಂತೆ ಹೇಳು” ಎನ್ನುತ್ತಾಳೆ.

ಆಕೆಗೆ ದೊರೆ ತನ್ನ ಕೈಯಿಂದ ಜಾರಿಹೋದರೆ ಕೆಲಸ ಕೆಡುತ್ತದೆ, ಪ್ರಜೆಗಳೆಲ್ಲ ರಾಮನ ಪರವಾಗಿ ನಿಂತು ತನ್ನನ್ನೇ ತಿರಸ್ಕರಿಸಬಹುದು ಎನ್ನುವ ಭಯಕಾಡುತ್ತಿತ್ತು. ಸುಮಂತ್ರನಿಗೆ ಅಲ್ಲಿನ ನಡತೆಯನ್ನು ನೋಡಿ ಸಂಶಯವುಂಟಾಯಿತು. ರಾಜನ ಅಭಿಪ್ರಾಯ ತಿಳಿಯದೇ ತಾನು ಹೇಗೆ ಹೋಗಲಿ ಎನ್ನುತ್ತಾನೆ. ಆಗ ದಶರಥ ವಿವಶನಾಗಿ “ಸುಂದರನಾದ ರಾಮನನ್ನು ತಾನು ನೋಡಬೇಕೆಂದಿದ್ದೇನೆ. ಅವನನ್ನು ಕರೆದುಕೊಂಡು ಬಾ” ಎನ್ನುತ್ತಾನೆ. ಕೈಕೇಯಿ “ಯಶೋವಂತನಾದ ರಾಮನನ್ನು ಶೀಘ್ರವಾಗಿ ಕರೆತಾ” ಎನ್ನುವ ಮಾತುಗಳು ಆತನನ್ನು ಯೋಚಿಸುವಂತೆ ಮಾಡಿದವು. ರಾಮನನ್ನು ಕರೆತರಲು ಸಭೆಗೆ ಹೊರಟವನಿಗೆ ಸಮಾಧಾನವಾಗಲಿಲ್ಲ. ರಾಮನಲ್ಲಿಗೆ ಬರದೇ ನೇರವಾಗಿ ಸಭಗೆ ಬರುತ್ತಾನೆ. ವಿಷಯ ಎಲ್ಲಿಯೋ ಹದತಪ್ಪುತ್ತಿದೆಯೆಂದು ಆತನಿಗೆ ಎನಿಸುತ್ತಿತ್ತು. ಅಲ್ಲಿ ನೆರೆದ ರಾಜರು ರಾಜ ಮತ್ತು ರಾಮ ಇಬ್ಬರು ಇನ್ನೂ ಬರಲಿಲ್ಲವಲ್ಲವೆಂದು ತಮ್ಮತಮ್ಮಲ್ಲೇ ಮಾತಾಡಿಕೊಳ್ಳುತ್ತಿರುವಾಗ ಸುಮಂತ್ರ ಅವರೆಲ್ಲರೂ ರಾಜನನ್ನು ಕಾಯುತ್ತಿದ್ದಾರೆ ಎನ್ನುವುದನ್ನು ತಿಳಿಸುವ ನೆವದಿಂದ ಮತ್ತೊಮ್ಮೆ ಕೈಕೇಯಿಯ ಅರಮನೆಗೆ ಬಂದ. ರಾಜನನ್ನು ಇಂದ್ರ-ವರುಣ-ಕುಬೇರರಿಗೆ ಹೋಲಿಸಿ ಆತನ್ನು ಕಾಣುವ ಉದ್ಧೇಶದಿಂದ ಅರಮನೆಯ ದ್ವಾರದಲ್ಲಿ ಋಷಿಪ್ರಮುಖರು, ರಾಜರುಗಳೂ, ಪೌರಜಪದರೂ ಕಾಯುತ್ತಿದ್ದಾರೆ, ಬೇಗ ಸಿದ್ಧನಾಗುವಂತೆ ಸ್ತೋತ್ರಮಾಡತೊಡಗಿದ. ಒಳಗಡೆ ಇರುವ ರಾಜನ ಮುಖದರ್ಶನವಾಗಲಿಲ್ಲ. ಕೈಕೇಯಿಯ ಪ್ರೇರಣೆಗೆ ಒಳಗಾದ ರಾಜನಿಗೆ ರಾಮ ಬರಲಿ ಎಂದು ಅನಿಸಿತ್ತು. ಅದನ್ನು ತಪ್ಪಿದ ಸುಮಂತ್ರನಿಗೆ “ತನ್ನ ಆಜ್ಞಾನುಸಾರವಾಗಿ ರಾಮನನ್ನು ಶೀಘ್ರವಾಗಿ ಇಲ್ಲಿಗೆ ಕರೆದು ತಾ” ಎಂದು ಸಿಡುಕಿದ.

ಈಗ ಮಾತ್ರ ಸುಮಂತ್ರನಿಗೆ ಬೇರೆ ವಿಕಲ್ಪಗಳಿರಲಿಲ್ಲ. ಅನಿವಾರ್ಯವಾಗಿ ರಾಮನ ಅರಮನೆಗೆ ಹೋಗಿ “ರಾಜ ನಿನ್ನನ್ನು ಶೀಘ್ರವಾಗಿ ಒಮ್ಮೆ ಅಲ್ಲಿಗೆ ಬರಹೇಳಿದ್ದಾನೆ” ಎನ್ನುತ್ತಾನೆ. ಕೈಕೇಯಿಯಲ್ಲಿಗೆ ಹೋದ ರಾಮನಿಗೆ ನಡೆದ ವಿಷಯ ಮನದಟ್ಟಾಗುತ್ತದೆ. ರಾಜ ಮಾತನ್ನೇ ಆಡಲಿಲ್ಲ. ಯಾವ ಕೈಕೇಯಿ ರಾಮನನ್ನು ಮಾತೆಯೆನ್ನುವ ಭಾವದಿಂದ ಇದುತನಕ ನೋಡುತ್ತಿಳೋ ಅವಳ ಮಾತು ಅರಣ್ಯವಾಸದೆಡೆಗೆ ತನ್ನನ್ನು ಕಳುಹಿಸುತ್ತಿದೆ ಎನ್ನುವದನ್ನು ತಿಳಿದಾಗ ರಾಮ ಕೊಂಚವೂ ಯೋಚಿಸುವುದಿಲ್ಲ. ತನ್ನ ತಾಯಿಯನ್ನು, ಇತರ ಪರಿವಾರದವರನ್ನೂ ಸಮಾಧಾನಿಸಿ ಅರಣ್ಯಕ್ಕೆ ಹೋಗಲು ತಂದೆಯ ಅಪ್ಪಣೆಯನ್ನು ಪಡೆಯಲು ಬರುತ್ತಾನೆ. ಆದರೆ ಈ ವೇಳೆಗೆ ಸುಮಂತ್ರ ಕೈಕೇಯಿಯ ಅರಮನೆಯ ಹೊರಗೆ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ರಾಜನನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಸಿದ್ಢತೆಯನ್ನು ಮಾಡಿಕೊಂಡು ರಾಜನ ಅನುಮತಿ ಸಿಕ್ಕಿತೋ ಎಂದು ಕಾಯುತ್ತಿರುತ್ತಾನೆ. ಆತನ ಎಲ್ಲ ನಿರೀಕ್ಷೆಗೆ ವಿರುದ್ದವಾಗಿ ರಾಮ ತನ್ನ ತಂದೆಯ ಹತ್ತಿರ,

ನೈವಾಹಂ ರಾಜ್ಯಮಿಚ್ಛಾಮಿ ನ ಸುಖಂ ನ ಚ ಮೈಥಿಲೀಮ್.
ನೈವ ಸರ್ವಾನಿಮಾನ್ ಕಾಮಾ ನ್ನಸ್ವರ್ಗಂ ನೈವ ಜೀವಿತಮ್৷৷ಅಯೋ.34.47৷৷

ನನಗೆ ಸತ್ಯದ ಹೊರತಾಗಿ ರಾಜ್ಯ, ಸುಖ, ಜೀವನ ಹೆಚ್ಚೇನು ಸೀತೆಯೂ ಸಹ ಬೇಕಾಗಿಲ್ಲವೆನ್ನುವ ಮಾತನ್ನು ಹೇಳಿದನೋ, ಅದನ್ನು ಕೇಳಿದ ಸುಮಂತ್ರನ ಕೈ ಕಟ್ಟಿಹೋಯಿತು. ಆದರೆ ತನ್ನ ಪ್ರಾಣಕ್ಕಿಂತ ಪ್ರಿಯನಾದ ರಾಮ ನಾರುಮಡಿಯನ್ನು ಧರಿಸಿ ಅರಣ್ಯಕ್ಕೆ ಹೋಗುವುದನ್ನು ಕಲ್ಪಿಸಿಕೊಳ್ಳಲಾಗದ ದಶರಥ ಅಸಹಾಯಕತೆಯಿಂದ ಮೂರ್ಛೆಹೋದಾಗ ಸುಮಂತ್ರನೂ ಒಮ್ಮೆ ಮೂರ್ಛಿತನಾದ. ಸಾವರಿಸಿಕೊಂಡು ಎದ್ದವನಿಗೆ ತಡೆಯಲಾಗಲಿಲ್ಲ. ಪರೋಕ್ಷವಾಗಿ ಕೈಕೇಯಿಯ ದಾಸನಾಗಿ ಇತರ ರಾಣಿಯರನ್ನು ಕಡೆಗಣಿಸಿದ ದಶರರಥ ಮಾವಿನ ಮರವನ್ನು ಕಡಿದು ಬೇವಿನಮರವನ್ನು ಬೆಳೆಸಿದುದರ ಫಲವಿದು ಎಂದು ಕೈಕೇಯಿಯನ್ನು ದೂಷಿಸುತ್ತಾನೆ. ನಿನ್ನ ಮಗನೇ ರಾಜನಾಗಲಿ, ನಾವೆಲ್ಲರೂ ಶ್ರೀರಾಮನನ್ನು ಅನುಸರಿಸಿ ಆತ ಹೋಗುವಲ್ಲಿಗೇ ಹೋಗುತ್ತೇವೆ, ಮರ್ಯಾದೆಗೆಟ್ಟವಳು ನೀನು ಎನ್ನುವ ಮಾತುಗಳನ್ನು ದಿಟ್ಟತನದಿಂದ ರಾಜನ ಎದುರೇ ಆಡುತ್ತಾನೆ. ಹೀಗೆ ಹೇಳುವಾಗ ಕೈಕೇಯಿಯ ತಾಯಿಗೂ ಇಂತಹುದೇ ಕೆಟ್ಟಗುಣವಿತ್ತು ಎನ್ನುತ್ತಾ ಒಂದು ಕಥೆಯನ್ನು ಹೇಳುತ್ತಾನೆ.

ಅಶ್ವಪತಿ ರಾಜನಿಗೆ ಸಾಧುವೊಬ್ಬ ಪ್ರಾಣಿಗಳ ಭಾಷೆಯನ್ನು ಅರ್ಥಮಾಡಿಕೊಳ್ಳುವ ವರವನ್ನು ಕೊಟ್ಟಿದ್ದ. ಅದನ್ನು ಯಾವ ಕಾರಣಕ್ಕೂ ಇನ್ನೊಬ್ಬರಿಗೆ ಹೇಳಬಾರದೆನ್ನುವ ನಿಬಂಧನೆಯನ್ನು ಹಾಕಿದ್ದ. ಒಮ್ಮೆ ತನ್ನ ಪಲ್ಲಂಗದ ಕೆಳಗೆ ಹರಿದಾಡುತ್ತಿದ್ದ ಇರುವೆಗಳ ಮಾತನ್ನು ಕೇಳಿ ಆತನಿಗೆ ನಗು ಬಂತು. ಕೈಕೇಯಿಯ ತಾಯಿಗೆ ಆತ ತನ್ನ ಕುರಿತು ನಗುತ್ತಿದ್ದಾನೆನ್ನುವ ಸಂಶಯ! ರಾಜನಲ್ಲಿ ನಕ್ಕಿದ್ದು ಯಾಕೆ ಎಂದು ಕೇಳಿದಳು. ರಾಜ “ಇದು ಗುಟ್ಟು, ಹೇಳಲಾಗದು. ಹೇಳಿದರೆ ನನಗೆ ಒಡನೆಯೇ ಮರಣ ಸಂಭವಿಸುತ್ತದೆ” ಎಂದು ಹೇಳಿದ. ಆದರೆ ಸಂಶಯ ಸ್ವಭಾವದವಳಾಗಿದ್ದ ರಾಣಿ “ಶಂಸ ಮೇ ಜೀವ ವಾ ಮಾ ವಾ ನ ಮಾಮಪಹಸಿಷ್ಯಸಿ” ನೀನು ಬದುಕು ಇಲ್ಲವೇ ಸಾಯಿ, ಈ ಗುಟ್ಟು ತನಗೆ ಹೇಳಲೇಬೇಕು ಎಂದು ಹಟಹಿಡಿದ ಗಯ್ಯಾಳಿಯಾಗಿದ್ದಳು. ರಾಜ ಮತ್ತೊಮ್ಮೆ ತನಗೆ ಕಲಿಸಿದ ಸಾಧುವನ್ನು ಈ ವಿಷಯದಲ್ಲಿ ಕೇಳಿದಾಗ ಆತ ನಿನ್ನ ಪತ್ನಿ ಸತ್ತುಹೋದರೂ, ಹಾಳಾಗಿ ಹೋದರೂ ಈ ವಿಷಯವನ್ನು ಹೇಳಕೂಡದು ಎಂದು ಎಚ್ಚರಿಸಿದ. ಆಗ ಅಶ್ವಪತಿ ಕೈಕೇಯಿಯ ತಾಯಿಯನ್ನು ಪರಿತ್ಯಜಿಸಿ ನೆಮ್ಮದಿಯಿಂದ ಬದುಕಿದ. ಈ ಕಥೆ ಕೈಕೇಯಿಯನ್ನು ದೂಷಿಸಿದಂತೆ ಕಂಡುಬಂದರೂ ಅದರ ಗುರಿ ದಶರಥನಾಗಿದ್ದ. ಈಗಲಾದರೂ ಧೈರ್ಯತೆಗೆದುಕೊಂಡು ಕೈಕೇಯಿಯನ್ನು ತ್ಯಜಿಸಿ ರಾಜ್ಯವನ್ನು ಉಳಿಸು ಎನ್ನುವ ಸೂಚನೆ ಅದರಲ್ಲಿ ಇತ್ತು.

ಈ ವಿವರಗಳು ಕೈಕೇಯಿಯಲ್ಲಿ ಯಾವ ಪರಿಣಾಮವನ್ನೂ ಬೀರದೇ ಇರುವುದನ್ನು ನೋಡಿ ಕೊನೆಯ ಅಸ್ತ್ರವಾಗಿ ದೀನನಾಗಿ “ಸನ್ಮಾರ್ಗಪ್ರವರ್ತಕನಾದ ರಾಮನನ್ನು ದುಷ್ಟೆಯಾದ ಕೈಕೇಯಿಯು ಅರಣ್ಯಕ್ಕೆ ಕಳುಹಿಸಿದಳು ಎನ್ನುವ ದೊಡ್ಡ ಅಪವಾದಕ್ಕೆ ಗುರಿಯಾಗಬೇಡ” ಎಂದು ಬೇಧನೀತಿಯನ್ನು ಬೋಧಿಸುತ್ತಾನೆ. ಒಮ್ಮೆ ಸಾಮದಿಂದ ಇನ್ನೊಮ್ಮೆ ಬೇಧದಿಂದ ಮಗದೊಮ್ಮೆ ದಯೆತೋರು ಎಂದು ಕೊನೆಗೆ ದಂಡಪ್ರಯೋಗದವರೆಗೂ ಸುಮಂತ್ರ ಪರಿಸ್ಥಿತಿಯನ್ನು ಸಂಭಾಳಿಸಲು ಪ್ರಯತ್ನಿಸುತ್ತಾನೆ. ಆದರೆ ಯಾವಾಗ ರಾಮ ಅರಣ್ಯಕ್ಕೆ ಹೋಗಲು ಸಿದ್ಧನಾಗುತ್ತಾನೋ ಆಗ ಆತ ಹತಾಶೆಯಿಂದ ಮೌನವಾಗಬೇಕಾಗುತ್ತದೆ. ದಶರಥನ ಆಜ್ಞೆಯಂತೆ ರಥದ ಸೂತನಾಗಿ ರಾಮನನ್ನು ಅರಣ್ಯಕ್ಕೆ ಬಿಡಲು ಹೊರಡುತ್ತಾನೆ. ಸುಮಂತ್ರ ರಾಜ್ಯಕ್ಕಾಗಿ ಕರ್ತವ್ಯನಿಷ್ಟನೇ ಹೊರತೂ ವಯಕ್ತಿಕವಾಗಿ ರಾಜನಿಗೆ ಅಲ್ಲ. ರಾಮನನ್ನು ರಥದಲ್ಲಿ ಕುಳ್ಳಿರಿಸಿ ಹೊರಡುವಾಗ ದಶರಥ ತನ್ನ ಪತ್ನಿಯಾದ ಕೌಸಲ್ಯೆ ಮತ್ತು ಸುಮಿತ್ರೆಯರ ಸಂಗಡ ರಥದ ಹಿಂದೆ ಓಡೋಡಿ ಬರುತ್ತಿದ್ದರೆ ಸುಮಂತ್ರ ರಾಮನ ಆಜ್ಞೆಯಂತೆ ಶೀಘ್ರವಾಗಿ ರಥವನ್ನು ಓಡಿಸಿಕೊಂಡು ಹೋಗುತ್ತಾನೆ.

ರಾಮಭಾವದಲ್ಲಿ ತನ್ನತನ ಮರೆತ

ಸಚಿವ, ಆಪ್ತ, ಸೂತ ಹೀಗೆ ಹಲವು ವಿಧಗಳಲ್ಲಿ ಅಯೋಧ್ಯೆಯ ರಾಜಮನೆತನವನ್ನು ಸೇವಿಸಿದ ಸುಮಂತ್ರ ರಾಮನನ್ನು ಶೃಂಗಬೇರಪುರದಿಂದ ಅರಣ್ಯಕ್ಕೆ ಕಳಿಸುವಾಗ ಮಾತ್ರ ಚಿಕ್ಕಮಗುವಿನಂತೆ ಅಳುತ್ತಾನೆ. ರಾಮನ ಗುಣ ಸುಮಂತ್ರನನ್ನು ಆತನ ಬಾಲ್ಯದ ನಡವಳಿಕೆಯಿಂದಲೇ ಸೆಳೆದಿತ್ತು. ರಾಮರಾಜ್ಯವನ್ನು ನೋಡಬೇಕೆಂದು ಆತ ದಶರಥನಿಗೆ ಎಲ್ಲಾಬಗೆಯ ಸಹಕಾರವನ್ನು ನೀಡಿದ್ದ. ಅರಣ್ಯದಲ್ಲಿ ಸುಮಂತ್ರ ರಾಮನ ಸಂಗದಲ್ಲಿ ತನ್ನನ್ನೇ ಮರೆಯುತ್ತಾನೆ. ರಾಮನ ಬಾಯಲ್ಲಿ ತನ್ನ ಕುರಿತಾಗಿ “ಸುಮಂತ್ರ! ಭವ ಮೇ ಪ್ರತ್ಯನನ್ತರಃ- ಸುಮಂತ! ನೀನು ನನ್ನ ಸಮೀಪದಲ್ಲಿಯೇ ಇರು” ಎನ್ನುವ ಮಾತುಗಳನ್ನು ಕೇಳಲು ಬಯಸಿದ್ದ. ಆತನಿಗೆ ಅಯೋಧ್ಯೆಯ ಯಾವ ಅಧಿಕಾರವೂ ಬೇಡವಾಗಿತ್ತು. ನೀನೇನಾದರೂ ತನ್ನನ್ನು ತ್ಯಜಿಸಿದರೆ ಅಯೋಧ್ಯೆಯ ಪ್ರಜಾವರ್ಗ ತನ್ನನ್ನು ರಾಮನನ್ನು ಅರಣ್ಯಕ್ಕೆ ಕಳುಹಿಸಿಬಂದವನೆಂದು ದೂಷಿಸುತ್ತಾರೆ. ಅದರ ಬದಲು ತಾನು ಕುದೆರಗಳ ಸಮೇತ ಬೆಂಕಿಯಲ್ಲಿ ಬಿದ್ದು ಸಾಯುತ್ತೇನೆ ಎಂದು ಅಲವತ್ತುಕೊಳ್ಳುತ್ತಾನೆ. ರಾಮ ಸ್ತಿತಪ್ರಜ್ಞ; ಯಾವಾಗ ಆತ ಗಂಗಾನದಿಯನ್ನು ದಾಟಲು ಹೊರಟನೋ ಆಗ ಸುಮಂತ್ರನಿಗೆ ದುಃಖ ತಡೆದುಕೊಳ್ಳಲಾಗಲಿಲ್ಲ. ತನ್ನತನವನ್ನೇ ಮರೆಯುತ್ತಾನೆ. ರಾಮ ಆತನಿಗೆ ಅಯೋಧ್ಯೆಯಲ್ಲಿ ರಾಜನನ್ನು ಮತ್ತು ತಾಯಂದಿರನ್ನು ಜಾಗರೂಕನಾಗಿ ರಕ್ಷಿಕೊಂಡಿರು ಎನ್ನುವ ಆದೇಶವನ್ನು ನೀಡುತ್ತಾನೆ. ಎಲ್ಲಿಯಾದರೂ ಭರತ ಮತ್ತು ಕೈಕೇಯಿಯಿಂದ ಅವರಿಗೆ ತೊಂದರೆಯುಂಟಾದೀತೋ ಎನ್ನುವ ಸಂಶಯ ರಾಮನಿಗೆ ಇದ್ದೇ ಇತ್ತು. ರಾಜನಿಷ್ಟೆಯುಳ್ಳ ಸುಮಂತ್ರ ಅವರನ್ನು ರಕ್ಷಿಸಬಲ್ಲನೆನ್ನುವ ನಂಬಿಕೆಯಿತ್ತು. ಅದನ್ನು ವಿವರವಾಗಿ ತಿಳಿಸುತ್ತಾನೆ. ಜೊತೆಗೆ ಸುಮಂತ್ರ ಓರ್ವನೇ ಹಿಂದಿರುಗಿರುವುದನ್ನು ಗಮನಿಸಿದ ಕೈಕೇಯಿಗೆ ರಾಮ ಬೇರೆಲ್ಲಿಯೂ ಹೋಗದೇ ಅರಣ್ಯಕ್ಕೆ ಹೋಗಿದ್ದಾನೆ ಎನ್ನುವ ನಂಬಿಕೆ ಬರುತ್ತದೆ.

ಬರಿದಾದ ರಥವನ್ನು ತೆಗೆದುಕೊಂಡು ಅರಮನೆಗೆ ಬಂದು ದಶರಥನನ್ನು ನೋಡಿದಾಗ ಸುಮಂತ್ರನಿಗೆ ರಾಮನ ಅಗಲುವಿಕೆಯ ನೋವು ತಡೆದುಕೊಳ್ಳಲಾಗುವುದಿಲ್ಲ. ದಶರಥ ರಾಮ, ಸೀತೆ ಲಕ್ಷ್ಮಣರ ಸಂದೇಶ ಏನಿತ್ತು ಎಂದು ಕೇಳಿದಾಗ ಭರತನಿಗೆ ಕೈಕೇಯಿಯನ್ನು ನೋಡುವಂತೆ ಕೌಸಲ್ಯೆ ಮತ್ತು ಸುಮಿತ್ರೆಯರನ್ನೂ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿರುವುದನ್ನು ಮತ್ತು ಲಕ್ಷ್ಮಣನ ಕ್ರೋಧದ ಮಾತುಗಳನ್ನು ಯಥಾವತ್ತಾಗಿ ಹೇಳಿದರೂ ಸೀತೆ ಕೈಕೇಯಿಯ ವಿಷಯದಲ್ಲಿ ಹೇಳಿರುವ ದೂರನ್ನು ಮಾತ್ರ ಬಹಿರಂಗಪಡಿಸುವುದಿಲ್ಲ. ಮುಂದೆ ಕೈಕೇಯಿಯ ಅಧೀನದಲ್ಲಿ ಇರಬೇಕಾದ ಕಾರಣ, ಸೀತೆ ಹೇಳಿದ ಕೈಕೇಯಿಯ ಸಂಬಂಧಿತ ದೂರನ್ನು ಕೇಳಿದ ಅವಳು ತೊಂದರೆಕೊಟ್ಟಾಳು ಎನ್ನುವ ಪ್ರಜ್ಞೆ ಸುಮಂತ್ರನಿಗಿತ್ತು. ವಾಲ್ಮೀಕಿಯೂ ಕೈಕೇಯಿಯ ವಿಷಯದಲ್ಲಿ ಸೀತೆಯ ಅಭಿಪ್ರಾಯವನ್ನು ತಿಳಿಸದೇ ಗೂಢವಾಗಿಟ್ಟಿದ್ದಾನೆ. ನಂದೀಗ್ರಾಮದಲ್ಲಿ ಭರತ ಆಳುವಾಗ ಆತನಿಗೆ ಕೋಶ ಮತ್ತು ರಾಜ್ಯದ ಆಡಳಿತದ ವಿಷಯದಲ್ಲಿ ನೆರವನ್ನು ಸಮರ್ಥವಾಗಿಯೇ ಸುಮಂತ್ರ ನೀಡುತ್ತಾನೆ.

ಧವಳ ಧಾರಿಣಿ ಅಂಕಣ dasharatha sumantra

ಭೂತ ಭವಿಷ್ಯತ್ತನ್ನು ಬಲ್ಲ ಪ್ರಾಜ್ಞ

ಸುಮಂತ್ರ ರಾಮ ವನವಾಸದಿಂದ ಪುನಃ ಬಂದು ಅಯೋಧ್ಯೆಯ ಪಟ್ಟವನ್ನು ಏರಿದಮೇಲೂ ಅವನ ಅಮಾತ್ಯನಾಗಿಯೇ ಮುಂದುವರಿಯುತ್ತಾನೆ. ಹೇಗೆ ಕರ್ತವ್ಯ ನಿಷ್ಠನೋ, ಅದೇ ರೀತಿ ಮಹಾತ್ಮರ ಒಲವನ್ನೂ ಆತ ಗಳಿಸಿಕೊಂಡಿದ್ದ. ಅವರು ಹೇಳಿದ ವಿಷಯಗಳನ್ನು ಸಂದರ್ಭ ಬಂದಾಗ ಮಾತ್ರ ಹೇಳುತ್ತಿದ್ದ. ಈ ಹಿಂದೆ ಮಹಾತ್ಮರಾದ ಸನತ್ಕುಮಾರರು ದಶರಥನಿಗೆ ಋಷ್ಯಶೃಂಗರಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸಿದರೆ ಮಕ್ಕಳಾಗುವರು ಎನ್ನುವುದನ್ನು ತಿಳಿಸಿದಂತೆ ಆತನಿಗೆ ರಾಮನ ನಂತರದ ಅಯೋಧ್ಯೆ ಹೇಗಿರಬಹುದೆನ್ನುವ ವಿಷಯವೂ ತಿಳಿದಿತ್ತು. ಅದರ ವಿವರ ಹೀಗಿದೆ.

ರಾಮ ಜನಪಾವದಕ್ಕೆ ಅಂಜಿ ಸೀತೆಯನ್ನು ಅರಣ್ಯಕ್ಕೆ ಬಿಟ್ಟುಬರುವಂತೆ ಲಕ್ಷ್ಮಣನಿಗೆ ಆಜ್ಞೆಮಾಡುತ್ತಾನೆ. ಅಣ್ಣನ ಆಜ್ಞೆಯನ್ನು ಶಿರಸಾವಹಿಸಿ ಲಕ್ಷ್ಮಣ ಆಕೆಯನ್ನು ವಾಲ್ಮೀಕಿ ಋಷಿಗಳ ಆಶ್ರಮದ ಹತ್ತಿರ ಬಿಡಲು ಹೋಗುವಾಗ ಆ ರಥವನ್ನು ನಡೆಸುವ ಸೂತನಾದವ ಸುಮಂತ್ರನೇ. ಸೀತೆಯನ್ನು ಬಿಟ್ಟು ಬರುವಾಗ ಲಕ್ಷ್ಮಣನ ಸುಮಂತ್ರನ ಹತ್ತಿರ ಗೋಳಾಡುತ್ತಾನೆ. ಈ ಮೊದಲು ರಾಮ ಲಕ್ಷ್ಮಣ ಮತ್ತು ಸೀತೆಯರನ್ನು ಅರಣ್ಯಕ್ಕೆ ಬಿಟ್ಟುಬರುವಾಗ ದುಃಖಿಯಾಗಿದ್ದ ಸುಮಂತ್ರ ಇಲ್ಲಿ ಮಾತ್ರ ಶೋಕಪಡುವುದಿಲ್ಲ ಬದಲಾಗಿ ಲಕ್ಷ್ಮಣನಿಗೆ ಹೀಗೆ ಆಗಬೇಕಾದದ್ದು ಬಲು ಹಿಂದೆಯೇ ನಿರ್ಧಾರಿತವಾಗಿದೆ ಎನ್ನುತ್ತಾನೆ. ಒಂದು ಸಂದರ್ಭದಲ್ಲಿ ದಶರಥನನ್ನು ನೋಡಲು ದೂರ್ವಾಸರು ಬಂದಿದ್ದರು. ದಶರಥ ಕುತೂಹಲದಿಂದ ತನ್ನ ವಂಶ ಎಲ್ಲಿಯತನಕ ಮುಂದುವರೆಯುತ್ತದೆ ಎನ್ನುವ ಭವಿಷ್ಯವನ್ನು ದೂರ್ವಾಸರಲ್ಲಿ ಕೇಳಿದ್ದ. ಅದಕ್ಕೆ ದೂರ್ವಾಸರು ಮಕ್ಕಳಿಲ್ಲದ ದಶರಥನಿಗೆ ನಿನ್ನ ಉದರದಲ್ಲಿ ಮಹಾವಿಷ್ಣುವೇ ಜನಿಸುತ್ತಾನೆ ಎನ್ನುತ್ತಾರೆ. ಅಷ್ಟೇ ಅಲ್ಲ; ಭೃಗು ಮಹರ್ಷಿಯ ಹೆಂಡತಿಯಾದ ಖ್ಯಾತಿಯನ್ನು ಶ್ರೀಮನ್ನಾರಾಯಣ ಕೊಂದಿರುವ ಕಾರಣ ಭೂಮಿಯಲ್ಲಿ ಜನಿಸಿ ವಿರಹದುಃಖವನ್ನು ತನ್ನಂತೆಯೇ ಅನುಭವಿಸು ಎಂದು ಭೃಗು ಕೊಟ್ಟ ಶಾಪದ ವಿಷಯವನ್ನು ತಿಳಿಸುತ್ತಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಈ ಕಾರಣದಿಂದ ಆತ ಭೂಮಿಯಲ್ಲಿ ಅವತರಿಸಿದರೂ ತನ್ನ ಪತ್ನಿಯ ವಿರಹದ ನೋವನ್ನು ಅನುಭವಿಸಬೇಕಾಗುತ್ತದೆ. ಆತನ ಕಾಲದಲ್ಲಿ ಅಯೋಧ್ಯೆ ತುಂಬಾ ಪ್ರವರ್ಧಮಾನಕ್ಕೆ ಬರುತ್ತದೆ. ಹನ್ನೊಂದು ಸಾವಿರ ವರ್ಷಗಳಕಾಲ ಆತ ರಾಜ್ಯಭಾರವನ್ನು ಮಾಡಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ. ಆತನಿಗೆ ಇಬ್ಬರು ಗಂಡುಮಕ್ಕಳು ಜನಿಸುತ್ತಾರೆ ಎಂದು ದೂರ್ವಾಸರು ಸುಮ್ಮನಾದರು. ಆದರೆ ಸುಮಂತ್ರ ಅವರನ್ನು ಪ್ರತ್ಯೇಕವಾಗಿ ಭೇಟಿಮಾಡಿ ಪ್ರಾರ್ಥಿಸಿ ಇನ್ನೂ ಮುಂದಿನ ಗುಟ್ಟನ್ನು ಹೇಳಬೇಕೆಂದು ಕೇಳಿಕೊಂಡಾಗ “ರಾಮ ಇಬ್ಬರೂ ಗಂಡುಮಕ್ಕಳಿಗೂ ಅಯೋಧ್ಯೆಯಲ್ಲಿ ಪಟ್ಟಾಭಿಷೇಕಮಾಡುವುದಿಲ್ಲ, ಬೇರೆಯದೇ ಆದ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡುತ್ತಾನೆ ಎಂದಿದ್ದಾರೆ” ಎಂದು ನುಡಿದು ಇದೆಲ್ಲವೂ ದೈವಸಂಕಲ್ಪ, ಶೋಕಪಡಬೇಡ ಎಂದು ಸಮಾಧಾನ ಮಾಡುತ್ತಾನೆ. ದೇವಗೌಪ್ಯತೆಯನ್ನು ಮತ್ತು ಋಷಿ ಗೌಪ್ಯತೆಯನ್ನು ಕಾಪಾಡುವ ಮಹತ್ವದ ಹೊಣೆಗಾರಿಕೆಯನ್ನು ಬಲ್ಲ ಸುಮಂತ್ರನಂತವ ಅಯೋಧ್ಯೆಯ ಬಲಿಷ್ಟ ಸಾಮ್ರಾಜ್ಯದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ.

ಮಹಾಕಾವ್ಯದಲ್ಲಿ ನಾಯಕನ ಪಾತ್ರ ರೂಪುಗೊಳ್ಳಬೇಕಾದರೆ ಅದಕ್ಕೆ ಪೂರಕವಾದ ಪೋಷಕ ಪಾತ್ರಗಳಿರಬೇಕಾಗುತ್ತದೆ. ಅಮಾತ್ಯನ ಪಾತ್ರ ಅಂತಹದು. ಸಚಿವನಾಗಿರಬೇಕಾದವ ಉದಾರಚರಿತ, ಕುಲೀನತೆಯಲ್ಲಿ ಶ್ರೇಷ್ಠ, ಕಾರ್ಯದಕ್ಷತೆ, ಜಿತೇಂದ್ರಿಯತೆ, ಸತ್ಕುಲಪ್ರಸೂತರೊಡನೆ ಸಂಪರ್ಕ, ಶೌರ್ಯ, ಕೃತಜ್ಞತೆ ಮತ್ತು ಸತ್ಯನಿಷ್ಠೆ ಇವುಗಳಿಂದ ಕೂಡಿರಬೇಕಾಗಿರುತ್ತದೆ. ಸುಮಂತ್ರನಲ್ಲಿ ಇವೆಲ್ಲಗುಣಗಳಿದ್ದವು. ಅದರೆ ಆತನ ಜನ್ಮ ಮತ್ತು ತಂದೆತಾಯಿಗಳ ವಿವರ ಸಿಗುವುದಿಲ್ಲ. ಅವೆಲ್ಲವೂ ಮಹಾಕಾವ್ಯದ ನಾಯಕನ ನೆರಳಿನಲ್ಲಿ ಅಡಗಿ ಕುಳಿತಿವೆ. ರಾಮ ನಿರ್ಯಾಣಗೈಯುವ ಕಾಲಕ್ಕೆ ಈತನೂ ಸಹ ರಾಮನೊಂದಿಗೇ ಸರಯೂ ನದಿಯಲ್ಲಿ ಐಕ್ಯನಾಗಿ ಸಾಂತಾನಿಕವೆನ್ನುವ ಲೋಕವನ್ನು ಪಡೆಯುತ್ತಾನೆ.

ಎರಡು ತಲೆಮಾರಿನ ತನಕ ಅಯೋಧ್ಯೆಯನ್ನು ಎಲೆಯ ಮರೆಯಲ್ಲಿ ರಕ್ಷಿಸಿದವ ಸುಮಂತ್ರ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸಾಕೇತದ ಅಮಾತ್ಯ ಸುಮಂತ್ರ, ರಾಮಾಯಣದ ರಹಸ್ಯನಿಧಿ

Continue Reading

ಅಂಕಣ

ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

ರಾಜಮಾರ್ಗ ಅಂಕಣ: ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ……. ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ.

VISTARANEWS.COM


on

ರಾಜಮಾರ್ಗ ಅಂಕಣ she 1
Koo

ಈಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮನೆಯೊಳಗೆ ಆಕೆಯನ್ನು (she) ಎಲ್ಲರೂ ಅತ್ತಿಗೆ, ಮಾಮಿ, ಅಕ್ಕ ಎಂದೆಲ್ಲ ಕರೆಯುತ್ತಾರೆ. ಆಕೆಯ ಮಕ್ಕಳು (children) ಅಮ್ಮ (mother) ಎಂದು ಕರೆಯುತ್ತಾರೆ. ಮೊಮ್ಮಕ್ಕಳು ಅವರನ್ನು ಅಜ್ಜಿ ಎನ್ನುತ್ತಾರೆ. ಮೊಮ್ಮಕ್ಕಳ ಗೆಳೆಯರು ಮನೆಗೆ ಬಂದರೆ ಅವರೂ ಅಜ್ಜಿ ಎನ್ನುತ್ತಾರೆ. ಹೊರಗಿನವರು ಯಾರು ಬಂದರೂ ಆಕೆಯನ್ನು ಆಂಟಿ (Aunty) ಎಂದೇ ಕರೆಯುತ್ತಾರೆ. ಕೈ ಹಿಡಿದ ಗಂಡ (Husband) ಆಕೆಯನ್ನು ‘ಓ ಇವಳೇ’ ಎಂದು ಕರೆಯುತ್ತಾನೆ. ಮನೆಯ ಹೊರಗೆ ಬಂದರೆ ಅಲ್ಲಿ ಕೂಡ ಆಕೆಯು ಇಂತವನ ಹೆಂಡತಿ (wife) ಎಂದೇ ರಿಜಿಸ್ಟರ್ ಆಗಿದ್ದಾಳೆ. ಅವಳಿಗೆ ತನ್ನ ಸ್ವಂತ ಹೆಸರೇ ಮರೆತು ಹೋಗಿದೆ! ಅವಳಿಗೆ ಸ್ವಂತ ಐಡೆಂಟಿಟಿಯು (Identity) ಇಲ್ಲದೆ ಎಷ್ಟೋ ವರ್ಷಗಳೇ ಆಗಿ ಹೋಗಿವೆ.

ಆಕೆಯ ಬಾಲ್ಯವೂ ಹಾಗೇ ಇತ್ತು!

ಆಕೆ ಮೊದಲ ಬಾರಿಗೆ ಕಣ್ಣು ತೆರೆದು ಈ ಜಗತ್ತಿಗೆ ಬಂದಾಗ ಕೇಳಿದ ಮೊದಲ ಉದ್ಗಾರ – ಛೇ! ಈ ಬಾರಿಯೂ ಹೆಣ್ಣು! ಆಗ ಅದು ಅವಳಿಗೆ ಅರ್ಥ ಆಗದ ವಯಸ್ಸು.

ಅವಳನ್ನು ತೊಟ್ಟಿಲಲ್ಲಿ ಮಲಗಿಸಿ ಆಕೆಯ ಕಿವಿಯಲ್ಲಿ ಯಾವುದೋ ಒಂದು ಹೆಸರನ್ನು ಹೆತ್ತವರು ಉಸಿರಿದ್ದರು. ಅದೂ ಅವಳಿಗೆ ನೆನಪಿಲ್ಲ. ಮನೆಯವರು ಅಪ್ಪ, ಅಮ್ಮ ಎಲ್ಲರೂ ಆಕೆಯನ್ನು ಪೂರ್ತಿ ಹೆಸರಿನಿಂದ ಕರೆದದ್ದು ಇಲ್ಲವೇ ಇಲ್ಲ. ಅಮ್ಮಿ, ಅಮ್ಮು, ಪುಟ್ಟಿ, ಚಿನ್ನು…. ಹೀಗೆ ತರಹೇವಾರಿ ಹೆಸರುಗಳು. ಮನೆಯಲ್ಲಿ ತುಂಬಾ ಹೆಣ್ಣು ಮಕ್ಕಳಿದ್ದ ಕಾರಣ ಆಕೆಗೇ ಕೆಲವು ಬಾರಿ ಗೊಂದಲ ಆದದ್ದು ಇದೆ.

ಶಾಲೆಯಲ್ಲಿಯೂ ಆಕೆಗೆ ಐಡೆಂಟಿಟಿ ಇರಲಿಲ್ಲ!

ಆಕೆಯನ್ನು ಶಾಲೆಗೆ ಸೇರಿಸುವಾಗ ಯಾವುದೋ ಒಂದು ಹೆಸರು ಇಟ್ಟಿದ್ದರು. ಆದರೆ ಆ ಹೆಸರು ಶಾಲೆಯಲ್ಲಿ ಬಳಕೆ ಆದದ್ದು ಕಡಿಮೆ. ಹಾಜರಿಯನ್ನು ಕರೆಯುವಾಗ ಟೀಚರ್ ನಂಬರ್ ಕರೆಯುತ್ತಿದ್ದರು. ಪೇಪರ್ ಕೊಡುವಾಗಲೂ ನಂಬರ್. ಅಸೆಂಬ್ಲಿಯಲ್ಲಿಯೂ ನಂಬರ್. ಅಲ್ಲಿ ಕೂಡ ಟೀಚರ್ ಇಂತವರ ಮಗಳು, ಇಂತವರ ತಂಗಿ ಎಂದು ಪರಿಚಯ ಮಾಡುತ್ತಿದ್ದರು. ಸ್ಪರ್ಧೆಗೆ ಹೆಸರು ಕೊಟ್ಟಾಗಲೂ ನಂಬರ್ ಕರೆಯುತ್ತಿದ್ದರು. ಆಕೆಯು ಅವಳ ಅಣ್ಣನಷ್ಟು, ಅಕ್ಕನಷ್ಟು ಪ್ರತಿಭಾವಂತೆ ಆಗಿರಲಿಲ್ಲ. ಮಾರ್ಕ್ಸ್ ಕಡಿಮೆ ಬಂದಾಗ ಶಿಕ್ಷಕರು ‘ ನಿನಗೆ ಅಣ್ಣನಷ್ಟು ಯಾಕೆ ಮಾರ್ಕ್ ಬಂದಿಲ್ಲ? ಅಕ್ಕನ ಹಾಗೆ ಯಾಕೆ ಮಾರ್ಕ್ ಬರೋದಿಲ್ಲ?’ ಎಂದು ಕೇಳಿದಾಗ ಆಕೆಗೆ ಸಿಟ್ಟು ಬರುತ್ತಿತ್ತು.

‘ನಾನು ನಾನೇ ‘ಎಂದು ಕಿರುಚಿ ಹೇಳಬೇಕು ಎಂದು ಹಲವು ಬಾರಿ ಅನ್ನಿಸುತ್ತಿತ್ತು. ಆದರೆ ಆಗುತ್ತಲೇ ಇರಲಿಲ್ಲ. ಆಗಲೇ ಆಕೆಯು ಐಡೆಂಟಿಟಿ ಕಳೆದುಕೊಂಡಾಗಿತ್ತು.

ರಾಜಮಾರ್ಗ ಅಂಕಣ she 1

ಮುಂದೆ ಹೈಸ್ಕೂಲಿಗೆ ಬಂದಾಗಲೂ ಐಡೆಂಟಿಟಿ ಇರಲಿಲ್ಲ!

ಹೈಸ್ಕೂಲ್ ವಿದ್ಯಾಬ್ಯಾಸಕ್ಕೆ ಆಕೆ ಬಂದಾಗ ಇನ್ನೂ ಕೆಲವು ಕಿರುಕುಳಗಳು ಆರಂಭ ಆದವು. ಮೂರು ದಿನ ಹೊರಗೆ ಕೂರಲೇಬೇಕು ಎಂದು ಅಮ್ಮ ಅಪ್ಪಣೆ ಕೊಡಿಸಿದರು. ಆಗ ಶಾಲೆಗೆ ಬಂದಾಗಲೂ ಆಕೆಯು ಮೈಯನ್ನು ಮುದ್ದೆ ಮಾಡಿ ಕುಳಿತುಕೊಳ್ಳುತ್ತಿದ್ದಳು. ಆಗೆಲ್ಲ ಕೀಳರಿಮೆ ಹೆಚ್ಚಾಯಿತು. ಭಯ ಹೆಚ್ಚಾಯಿತು. ಮಾರ್ಕ್ ಮತ್ತೂ ಕಡಿಮೆ ಆಯಿತು.

ಒಮ್ಮೆ ಒಬ್ಬ ಓರಗೆಯ ಹುಡುಗ ಟಿಫಿನ್ ಬಾಕ್ಸನಲ್ಲಿ ಒಂದು ಲವ್ ಲೆಟರ್ ಇಟ್ಟು ನನ್ನನ್ನು ಪ್ರೀತಿ ಮಾಡುತ್ತಿಯಾ? ಎಂದು ಬರೆದಿದ್ದ. ಆಗ ಇನ್ನೂ ಭಯವು ಹೆಚ್ಚಾಯಿತು. ಮದುವೆ ಆಗ್ತೀಯಾ ಎಂದು ಕೇಳಿದಾಗ ಅವನು ʼಅದೆಲ್ಲ ಬೇಡ, ಪ್ರೀತಿ ಮಾತ್ರ ಮಾಡೋಣ’ ಅಂದನು. ಆಕೆಗೆ ಅದೆಲ್ಲ ಅರ್ಥವೇ ಆಗಲಿಲ್ಲ. ಮನೆಗೆ ಬಂದಾಗ ಅಮ್ಮ ಪ್ರತೀ ದಿನ ಆಕೆಯ ಶಾಲೆಯ ಬ್ಯಾಗ್ ಚೆಕ್ ಮಾಡುತ್ತಾ ಇದ್ದರು. ಜೋರಾಗಿ ಪ್ರತಿಭಟಿಸಬೇಕು ಅನ್ನಿಸಿದರೂ ಆಕೆಗೆ ಧ್ವನಿಯೇ ಬರಲಿಲ್ಲ.

ಎಲ್ಲರೂ ಡಾಮಿನೇಟ್ ಮಾಡುವವರು!

ಆಕೆಯ ತಿಂಗಳ ಆ ಡೇಟ್ ಆಕೆಗೆ ಮರೆತು ಹೋದರೂ ಅಮ್ಮನಿಗೆ ನೆನಪು ಇರುತ್ತಿತ್ತು. ಆಕೆಯ ತಂಗಿ, ತಮ್ಮ ಕೂಡ ಆಕೆಯ ಮೇಲೆ ಡಾಮಿನೇಟ್ ಮಾಡ್ತಾ ಇದ್ದರು. ಆಕೆಗೆ ಸ್ವಾಭಿಮಾನ ಎಂಬ ಶಬ್ದದ ಅರ್ಥವೇ ಮರೆತುಹೋಗಿತ್ತು.

ಕಡಿಮೆ ಮಾರ್ಕ್ ಬಂದ ಕಾರಣ ಆಕೆಯು ಕಾಲೇಜಿನ ಮೆಟ್ಟಲು ಹತ್ತಲಿಲ್ಲ. ‘ಗಂಡನ ಮನೆಗೆ ಹೋದ ನಂತರ ಅಡುಗೆ ಮಾಡಬೇಕಲ್ಲ’ ಎಂದು ಆಕೆಯ ಅಮ್ಮ ಅದನ್ನೇ ಚಂದ ಮಾಡಿ ಕಲಿಸಿದರು. ಮನೆಯ ನಾಲ್ಕು ಕೋಣೆಗಳ ನಡುವೆ ಆಕೆಯ ಧ್ವನಿ ಮತ್ತು ಐಡೆಂಟಿಟಿಗಳು ನಿರಂತರ ಉಸಿರುಗಟ್ಟುತ್ತಿದ್ದವು.

ಮದುವೆಯ ನಂತರ…

ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ……. ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ.

ಚಂದ ಅಡುಗೆ ಮಾಡ್ತೀ ಎಂಬ ಪ್ರಶಸ್ತಿ ಕೊಟ್ಟು ಆಕೆಯನ್ನು ಅಡುಗೆ ಮನೆಯ ಮಹಾರಾಣಿಯನ್ನಾಗಿ ಮಾಡಿಬಿಟ್ಟರು. ‘ಅನ್ನಪೂರ್ಣೆ ‘ ಎಂಬ ಬಿರುದು ಆಕೆಗೆ ಮುಳ್ಳಿನ ಕಿರೀಟ ಆಗಿ ಬಿಟ್ಟಿತು. ಇಡೀ ದಿನ ಊಟ, ತಿಂಡಿ, ಪಾತ್ರೆ, ಬಟ್ಟೆ, ಸ್ವಚ್ಛತೆ, ಒಂದಿಷ್ಟು ನೆಂಟರು, ಹಬ್ಬಗಳು, ಮದುವೆ, ಮುಂಜಿ, ಗೃಹ ಪ್ರವೇಶ, ಸೀಮಂತ ಇಷ್ಟರಲ್ಲಿ ಆಕೆಯ ದಿನಚರಿಯು ಮುಗಿದು ಹೋಗುತ್ತಿತ್ತು. ಒಂದೆರಡು ಧಾರಾವಾಹಿಗಳು ಸ್ವಲ್ಪ ರಿಲೀಫ್ ಕೊಡುತ್ತಿದ್ದವು. ಆಗೆಲ್ಲ ನನ್ನ ಬದುಕು ಆ ಧಾರಾವಾಹಿಗಳ ಕಥೆಯ ಹಾಗೆ ಇಲ್ಲವಲ್ಲ ಎಂಬ ದುಃಖವೂ ಆಕೆಯನ್ನು ಕಾಡುತ್ತಿತ್ತು.

ರಾಜಮಾರ್ಗ ಅಂಕಣ she 1

ಈಗಲೂ ಆಕೆಗೆ ಐಡೆಂಟಿಟಿ ಇಲ್ಲ!

ಮೊಮ್ಮಕ್ಕಳು ಅಜ್ಜಿ ಅಂತ ಕರೆದು ತಿಂಡಿಗಾಗಿ ಓಡಿ ಬರುತ್ತಾರೆ. ಈ ಪಾಠ ಹೇಳಿಕೊಡು, ಈ ಪಾಠ ಹೇಳಿಕೊಡು ಎಂದು ದುಂಬಾಲು ಬೀಳುತ್ತಾರೆ. ಆಗ ಆಕೆಗೆ ಅರ್ಥ ಆಗದೆ ಹೋದಾಗ ‘ ಏನಜ್ಜಿ? ನಿನಗೆ ಏನೂ ಗೊತ್ತಿಲ್ಲ. ಹೋಗಜ್ಜಿ’ ಎಂದು ಅಣಕಿಸಿದಾಗ ನೋವಾಗುತ್ತದೆ. ನೆರೆಹೊರೆಯವರ ಜೊತೆಗೆ ಮಾತಿಗೆ ನಿಂತರೆ ಸಿನೆಮಾ, ಗಾಸಿಪ್, ಫ್ಯಾಷನ್ ಎಂದೆಲ್ಲ ಮಾತಾಡುತ್ತಾರೆ. ಆಗೆಲ್ಲ ಆಕೆಯ ಅಜ್ಞಾನವು ಆಕೆಯನ್ನು ಅಣಕಿಸುತ್ತದೆ. ಆಕೆ ಈಗ ಮನೆಯಿಂದ ಹೊರಗೆ ಹೋಗೋದನ್ನು ಬಿಟ್ಟಿದ್ದಾರೆ. ತವರು ಮನೆಗೆ ಹೋಗದೆ ಎಷ್ಟೋ ವರ್ಷಗಳು ಕಳೆದಿವೆ.

ಆಕೆಯ ಗಂಡ ವಿ ಆರ್ ಎಸ್ ತೆಗೆದುಕೊಂಡು ಈಗ ಮನೆಯಲ್ಲಿಯೇ ಇದ್ದಾರೆ. ಪ್ರತೀ ಅರ್ಧ ಘಂಟೆಗೆ ಒಮ್ಮೆ ‘ ಓ ಇವಳೇ, ಒಂದು ಲೋಟ ಟೀ ಮಾಡಿ ಕೊಡು’ ಎಂದು ಕರೆಯುತ್ತಲೆ ಇರುತ್ತಾರೆ. ಮಗ, ಸೊಸೆ ಸಂಜೆ ಆಫೀಸ್ ಮುಗಿಸಿ ಬಂದು ಲ್ಯಾಪ್ ಟಾಪ್ ಕುಟ್ಟುತ್ತಾ ಕೂರುತ್ತಾರೆ. ಸೊಸೆ ಒಮ್ಮೆ ಕೂಡ ತಿಂಗಳಲ್ಲಿ ಮೂರು ದಿನ ಹೊರಗೆ ಕೂತದ್ದು ಅವಳು ನೋಡಲೇ ಇಲ್ಲ! ಆಗೆಲ್ಲ ನಾನೆಷ್ಟು ಕಳೆದುಕೊಂಡೆ ಎಂಬ ದುಃಖ ಆಕೆಯನ್ನು ಆವರಿಸುತ್ತದೆ. ಮೊಮ್ಮಕ್ಕಳು ಹೊಮ್ ವರ್ಕ್, ಪ್ರಾಜೆಕ್ಟ್, ವಿಡಿಯೋ ಗೇಮ್ ಎಂದು ಮುಳುಗಿರುತ್ತಾರೆ.

ಆಕೆ ʼಇವತ್ತಿನ ಊಟ, ತಿಂಡಿಯ ಮೆನು ಮುಗಿಯಿತು, ನಾಳೆ ಎಂತ ಅಡಿಗೆ ಮಾಡುವುದು?’ ಎಂದು ಲೆಕ್ಕ ಹಾಕುತ್ತ ತಡರಾತ್ರಿ ಹಾಸಿಗೆಗೆ ಒರಗುತ್ತಾರೆ.

ಆಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

ಇದನ್ನೂ ಓದಿ: ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

Continue Reading
Advertisement
T20 World Cup 2024
ಪ್ರಮುಖ ಸುದ್ದಿ5 hours ago

T20 World Cup 2024: ಟಿ-20 ಸ್ವಯಂವರದ ಮಂಟಪದಲ್ಲಿ ವಿಶ್ವಸುಂದರಿಗೆ ಮಾಲೆ ತೊಡಿಸಿದ ರೋಹಿತ್ ಬಳಗ

GST Collection
ಪ್ರಮುಖ ಸುದ್ದಿ5 hours ago

GST Collection : ಜೂನ್​ನಲ್ಲಿ 1.74 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ, ಶೇಕಡಾ 8 ಏರಿಕೆ

2nd National Pediatric Stroke Conclave 2024 inauguration in Bengaluru
ಕರ್ನಾಟಕ5 hours ago

Bengaluru News: ಬೆಂಗಳೂರಿನಲ್ಲಿ 2ನೇ ರಾಷ್ಟ್ರೀಯ ಮಕ್ಕಳ ಪಾರ್ಶ್ವವಾಯುವಿನ ಶೃಂಗ 2024ಕ್ಕೆ ಚಾಲನೆ

Maharashtra Politics
ಪ್ರಮುಖ ಸುದ್ದಿ6 hours ago

Maharashtra Politics : ವಿಧಾನ ಪರಿಷತ್​ನಲ್ಲಿ ಬಿಜೆಪಿಯನ್ನು ಸೋಲಿಸಿದ ಉದ್ಧವ್​ ಠಾಕ್ರೆಯ ಶಿವಸೇನೆ

Press Day and Pratibha Puraskara programme in Ballari
ಬಳ್ಳಾರಿ6 hours ago

Press Day: ಮಾಧ್ಯಮ ಕ್ಷೇತ್ರಕ್ಕೆ ಬಳ್ಳಾರಿಯ ಕೊಡುಗೆ ಅಪಾರ: ಡಾ.ಕರಿಯಪ್ಪ ಮಾಳಿಗಿ

Manufacturing of auto parts in the state Increased propensity for capital investment
ಕರ್ನಾಟಕ6 hours ago

Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

Kannada New Movie kagada film released on 5th July
ಕರ್ನಾಟಕ6 hours ago

Kannada New Movie: ಮೊಬೈಲ್ ಮುಂಚಿನ ಪ್ರೇಮಕಥೆ ‘ಕಾಗದ’ ಜುಲೈ 5ರಂದು ಬಿಡುಗಡೆ

Afghanistan cricket
ಪ್ರಮುಖ ಸುದ್ದಿ6 hours ago

Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

IND vs SA
ಪ್ರಮುಖ ಸುದ್ದಿ7 hours ago

IND vs SA : ಭಾರತ ವಿರುದ್ಧ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಪ್ರಕಟ

Mangalore Jail
ಕರ್ನಾಟಕ7 hours ago

Mangalore Jail: ಮಂಗಳೂರು ಜೈಲಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ; ಇಬ್ಬರಿಗೆ ಗಾಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ11 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌