ವಿಸ್ತಾರ ಅಂಕಣ: ತುರ್ತು ಪರಿಸ್ಥಿತಿ ಕಡೆಗೆ ಹೊರಳುತ್ತಿದೆ ಡಿಜಿಟಲ್ ನೈತಿಕ ಪೊಲೀಸ್ ಗಿರಿ Vistara News

ಅಂಕಣ

ವಿಸ್ತಾರ ಅಂಕಣ: ತುರ್ತು ಪರಿಸ್ಥಿತಿ ಕಡೆಗೆ ಹೊರಳುತ್ತಿದೆ ಡಿಜಿಟಲ್ ನೈತಿಕ ಪೊಲೀಸ್ ಗಿರಿ

ಈಗ ಡಿಜಿಟಲ್ ವೇದಿಕೆಗಳಲ್ಲೂ ಹಿಂದುಗಳ ಮೇಲೆಯೇ ನೈತಿಕ ಪೊಲೀಸ್ ಗಿರಿಯ ಆರೋಪ ಹೊರಿಸಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲೇ ಉದಾಹರಣೆಯಾಗಿ ಅನೇಕ ಘಟನೆಗಳು ಸಿಗುತ್ತವೆ.

VISTARANEWS.COM


on

INDIA Bloc Bans 14 Journalists
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara Column @ Hariprakash Konemane

ನೈತಿಕ ಪೊಲೀಸ್ ಗಿರಿಯ (moral policing) ಹೆಸರಿನಲ್ಲಿ ಕೇವಲ ಹಿಂದುತ್ವದ ಅಂದರೆ ಸನಾತನ ಧರ್ಮದ (Sanatana Dharma) ಕುರಿತ ವಿಚಾರಗಳಿಗಷ್ಟೆ ಮೂಲಭೂತವಾದ ಎಂದು ಬ್ರ್ಯಾಂಡ್ ಮಾಡುತ್ತಿರುವುದರ ಕುರಿತು ಕಳೆದ ಎರಡು ವಾರದ ಹಿಂದಿನ ಲೇಖನದಲ್ಲಿ ಚರ್ಚಿಸಿದ್ದೆವು. ಹಿಂದು ಗುಂಪು ಮಾಡುವುದು ಮಾತ್ರ ನೈತಿಕ ಪೊಲೀಸ್ ಗಿರಿ ಎಂದು ಬ್ರ್ಯಾಂಡ್ ಆಗುತ್ತದೆ. ಅದೇ ಮುಸ್ಲಿಂ ಯುವತಿಯೊಬ್ಬಳು ಹಿಂದು ಹುಡುಗನ ಜತೆಗೆ ಬೈಕ್‌ನಲ್ಲಿ ಹೋಗುತ್ತಿರುವಾಗ ಮುಸ್ಲಿಂ ಯುವಕರ ಗುಂಪು ದಾಳಿ ಮಾಡಿದರೆ ಅದು ಸ್ಥಳೀಯ, ಕೆಲ ಪುಂಡರು ಮಾಡಿದ ಕೃತ್ಯ ಎಂದು ಹೇಳಿ ಸುಮ್ಮನಾಗಲಾಗುತ್ತದೆ. ಸಂವಿಧಾನಬದ್ಧವಾಗಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅದರ ಚೌಕಟ್ಟಿನ ಒಳಗೇ ವ್ಯಕ್ತಪಡಿಸಲು ಯಾವುದೇ ಅಡೆತಡೆ ಇರಬಾರದು.

ಅದು ಇನ್ನೊಂದು ಸಂಸ್ಕೃತಿಗೆ ದೂರಗಾಮಿಯಾಗಿ ತೊಂದರೆಯಾಗುತ್ತಿದೆ ಎಂದರೆ ಆಯಾ ಸಮುದಾಯಗಳ ಮುಖಂಡರು, ಸ್ವಾಮೀಜಿಗಳು, ಮಠ ಮಾನ್ಯಗಳು ಆಲೋಚಿಸಬೇಕಾದ ವಿಚಾರ. ತಮ್ಮ ಆಚಾರ ವಿಚಾರಗಳಲ್ಲಿ ಯುವಜನರನ್ನು ತೊಡಗಿಸಿಕೊಳ್ಳುವುದು, ಕುರುಡು ಕಟ್ಟುಪಾಡುಗಳಲ್ಲದೆ ಈಗಿನ ಯುವಜನತೆಗೆ ಮನವರಿಕೆ ಮಾಡಿಕೊಡುವ ಕಾರ್ಯ ಮಾಡಬೇಕು. ಅದು ಹಿಂದುಗಳಲ್ಲಿರಲಿ, ಮುಸ್ಲಿಮರಲ್ಲೇ ಇರಲಿ, ಕ್ರೈಸ್ತರಲ್ಲೇ ಇರಲಿ. ಯುವಜನರು ತಮ್ಮ ಕೈಮೀರಿ ಹೋಗುತ್ತಿದ್ದಾರೆ ಎಂಬ ಆತಂಕ ಎಲ್ಲ ಮತ ಧರ್ಮಗಳಲ್ಲೂ, ಜಾತಿಗಳಲ್ಲೂ ಇದ್ದೇ ಇದೆ. ಇದು ಈಗಷ್ಟೆ ಅಲ್ಲ, ನಮ್ಮ ತಾತ ಮುತ್ತಾತರ ಕಾಲದಿಂದಲೂ ಇದೆ. ಅದಕ್ಕೆ ಪರಿಹಾರ ಎಂದರೆ ಯುವಜನರ ಮನವೊಲಿಕೆಯೇ ವಿನಃ ರಸ್ತೆಯಲ್ಲಿ ತಡೆದು ಹೊಡೆಯುವುದಲ್ಲ. ನೈತಿಕ ಪೊಲೀಸ್ ಗಿರಿ ಎನ್ನುವುದು ಡಿಜಿಟಲ್ ಯುಗದಲ್ಲಿ ಮತ್ತೊಂದು ರೂಪ ಪಡೆಯುತ್ತಿದೆ.

ಸಾಮಾಜಿಕ ಜಾಲತಾಣಗಳು ನಮ್ಮ ಸಂವಹನ ವಿಧಾನವನ್ನೇ ಬದಲಿಸಿಬಿಟ್ಟಿವೆ. ಡಿಜಿಟಲ್ ಮಾಧ್ಯಮವು ವಿಕಸನವಾಗುತ್ತಲೂ, ಹಿಂದಿನ ಅನೇಕ ಮಾಧ್ಯಮಗಳಲ್ಲಿ ಅವಕಾಶ ದೊರಕದಿದ್ದವರಿಗೆ ಧ್ವನಿಯಾಗುತ್ತಿವೆ. ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ, ತಮ್ಮ ಪಕ್ಷವನ್ನು, ಸಿದ್ಧಾಂತವನ್ನು ಬಲವಾಗಿ ಸಮರ್ಥನೆ ಮಾಡಿಕೊಳ್ಳುವ, ರಾಜಕೀಯ ಚರ್ಚೆಗಳನ್ನು ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ನಡೆಸಲು ಅವಕಾಶ ಸಿಕ್ಕಂತಾಗಿದೆ. ಡಿಜಿಟಲ್ ಮಾಧ್ಯಮದ ಯುಗವನ್ನು ಇಂಗ್ಲಿಷ್ನಲ್ಲಿ Democratization of Media ಎಂಬ ಸುಂದರ ಪದಪುಂಜದಿಂದ ಕರೆಯಲಾಗುತ್ತದೆ.

ಅಂದರೆ ಇಲ್ಲಿವರೆಗೆ ಇದ್ದ ಮಾಧ್ಯಮಗಳು ಪ್ರಜಾತಾಂತ್ರಿಕವಾಗಿ ಅಲ್ಲದೆ, ಪೂರ್ವಾಗ್ರಹಪೀಡಿವಾಗಿ, ಸರ್ವಾಧಿಕಾರ ಧೋರಣೆಯಿಂದ ನಡೆಯುತ್ತಿದ್ದವು ಎನ್ನುವುದನ್ನೂ ಪರೋಕ್ಷವಾಗಿ ಹೇಳಲಾಗುತ್ತದೆ. ಇದು ಅರ್ಧ ಸತ್ಯ. ಕೆಲವೊಂದು ಮಾಧ್ಯಮಗಳು ನಿಜವಾದ ಸಮಾಜದ ಭಾವನೆಗೆ ಒತ್ತು ನೀಡದೆ ಇದ್ದಿರಬಹುದು. ಆದರೆ ಆಗಿನ ತಂತ್ರಜ್ಞಾನ, ಮುದ್ರಣ ಸಮಯ, ಸ್ಥಳಾವಕಾಶದ ಕೊರತೆಯೇ ಎಲ್ಲಕ್ಕಿಂತ ಮುಖ್ಯ ಕಾರಣವಾಗಿರುತ್ತಿತ್ತು. ಆದರೆ ಸುಂದರ ಪದಪುಂಜದಷ್ಟು ಸಾಮಾಜಿಕ ಜಾಲತಾಣ ಅಥವಾ ಡಿಜಿಟಲ್ ಮಾಧ್ಯಮ ಪ್ರಜಾತಾಂತ್ರಿಕವಾಗಿ ಇಲ್ಲ ಎನ್ನುವುದು ಈಗೀಗ ಬಲವಾಗಿ ತಿಳಿಯುತ್ತಿದೆ.

ರಸ್ತೆಯಲ್ಲಿ, ಪ್ರದೇಶಗಳಲ್ಲಿ ಹಿಂದುಗಳ ಮೇಲೆ ನೈತಿಕ ಪೊಲೀಸ್ ಗಿರಿಯ ಆರೋಪ ಹೊರಿಸಲಾಗುತ್ತಿದೆ. ಈಗ ಡಿಜಿಟಲ್ ವೇದಿಕೆಗಳಲ್ಲೂ ಹಿಂದುಗಳ ಮೇಲೆಯೇ ನೈತಿಕ ಪೊಲೀಸ್ ಗಿರಿಯ ಆರೋಪ ಹೊರಿಸಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲೇ ಉದಾಹರಣೆಯಾಗಿ ಅನೇಕ ಘಟನೆಗಳು ಸಿಗುತ್ತವೆ.

Attack on student

ಸರ್ಕಾರವನ್ನು ಪ್ರಶ್ನೆ ಮಾಡಿದ್ದಕ್ಕೆ ಅನೇಕರನ್ನು ರಾತ್ರೋರಾತ್ರಿ ಬಂಧಿಸಿ ಕರೆದೊಯ್ಯಲಾಗುತ್ತದೆ. ಇಷ್ಟೆ ಅಲ್ಲದೆ, ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಮಾಸ್ ರಿಪೋರ್ಟಿಂಗ್ ಮಾಡಿ ಎದುರಾಳಿಗಳ ಅಕೌಂಟ್ ಗಳನ್ನು ಬ್ಲಾಕ್ ಮಾಡಿಸುವ ಹೊಸ ಯುದ್ಧ ಆರಂಭವಾಗಿದೆ. ಇದು ಹೇಗೆ ಕೆಲಸ ಮಾಡುತ್ತದೆ? ಯಾರದ್ದಾದರೂ ಒಂದು ಸಾಮಾಜಿಕ ಜಾಲತಾಣ ಪೋಸ್ಟ್ ತಮಗೆ ಇಷ್ಟವಿಲ್ಲ ಎಂದರೆ ಅದಕ್ಕೆ ಆಕ್ರೋಶ ವ್ಯಕ್ತಪಡಿಸಲು ಅವಕಾಶ ಇದ್ದೇ ಇರುತ್ತದೆ. ಆದರೆ ಇತ್ತೀಚೆಗೆ ಕರ್ನಾಟಕದಲ್ಲಿ ಹೀಗೆ ಆಗುತ್ತಿಲ್ಲ. ಒಂದು ಸಾಮಾಜಿಕ ಜಾಲತಾಣ ಖಾತೆ ಅಥವಾ ಒಂದು ಪೋಸ್ಟ್ ಕುರಿತು ಸಾವಿರಾರು ಸಂಖ್ಯೆಯಲ್ಲಿ ಡಿಜಿಟಲ್ ಕಂಪನಿಗೆ (ಅಂದರೆ ಫೇಸ್ಬುಕ್, ಟ್ವಿಟರ್) ದೂರು ನೀಡಲಾಗುತ್ತದೆ. ಇದನ್ನು ಡಿಜಿಟಲ್ ಭಾಷೆಯಲ್ಲಿ ರಿಪೋರ್ಟ್ ಎನ್ನಲಾಗುತ್ತದೆ. ಒಂದು ಪೋಸ್ಟ್ ಕುರಿತು ಒಂದೇ ಊರಿನ ಅಥವಾ ಒಂದೇ ಕಂಪ್ಯೂಟರಿನಿಂದ ನೂರು ಜನರು ರಿಪೋರ್ಟ್ ಮಾಡಿದರೆ ಫೇಸ್ಬುಕ್ ಆಗಲಿ ಟ್ವಿಟರ್ ಆಗಲಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಅದನ್ನೇ, ರಾಜ್ಯ ಹಾಗೂ ದೇಶದ ನೂರು ಸ್ಥಳಗಳಿಂದ, ಬೇರೆ ಬೇರೆ ಕಂಪ್ಯೂಟರ್ ಗಳಿಂದ ರಿಪೋರ್ಟ್ ಮಾಡಿಸಿದರೆ ಅದನ್ನು ಸಾಫ್ಟ್ವೇರ್ (ಅಲ್ಗಾರಿದಂ) ಗಂಭೀರವಾಗಿ ಪರಿಗಣಿಸುತ್ತದೆ. ನಿಮ್ಮ ಬರಹವು ಫೇಸ್ಬುಕ್ ಅಥವಾ ಎಕ್ಸ್(ಹಿಂದಿನ ಟ್ವೀಟ್) ಕಮ್ಯುನಿಟಿ ಗೈಡ್ಲೈನ್ಸ್ ಉಲ್ಲಂಘನೆ ಮಾಡಿದೆ ಎಂದು ತಿಳಿಸಲಾಗುತ್ತದೆ. ನಂತರದ 15-20 ದಿನದವರೆಗೆ ಖಾತೆಯನ್ನು ಬ್ಲಾಕ್ ಮಾಡಬಹುದು, ಮತ್ತೆ ಮತ್ತೆ ಇದೇ ಪುನರಾವೃತ್ತಿಯಾದರೆ ಖಾತೆಯನ್ನು ಶಾಶ್ವತವಾಗಿ ಮುಚ್ಚಲೂ ಅವಕಾಶವಿದೆ.

ರಾಷ್ಟ್ರೀಯವಾದಿಗಳು ಅಂದರೆ ಬಲಪಂಥೀಯರು ಎಂದು ಕರೆಸಿಕೊಳ್ಳುವವರು ಅಲ್ಪಸಂಖ್ಯಾತರ ಧ್ವನಿಯನ್ನು ಅಡಗಿಸುತ್ತಿದ್ದಾರೆ ಎಂದು ಆಗಾಗ್ಗೆ ಬೊಬ್ಬೆ ಹೊಡೆಯಲಾಗುತ್ತದೆ. ಆದರೆ ನಿಜವಾಗಿ ಹಿಂದುಗಳ, ಸನಾತನ ಧರ್ಮದ ಕುರಿತು ಮಾಡಿದ ಸಂದೇಶ ಹಾಗೂ ಖಾತೆಗಳೇ ಹೆಚ್ಚು ಬ್ಲಾಕ್ ಆಗಿವೆ. ಯಾವ ವಿಚಾರದಲ್ಲಿ ಹೇಗೆ ಮಾತನಾಡಬೇಕು, ಯಾವ ಫೋಟೊ ಹಾಕಬೇಕು ಎನ್ನುವುದನ್ನು ಎದುರಾಳಿಗಳು ನಿರ್ಧಾರ ಮಾಡುವ ಸ್ಥಿತಿ ಬಂದಿದೆ.

dark web user

ಇದನ್ನೂ ಓದಿ: ವಿಸ್ತಾರ ಅಂಕಣ: ತುರ್ತು ಪರಿಸ್ಥಿತಿ ಕಡೆಗೆ ಹೊರಳುತ್ತಿದೆ ಡಿಜಿಟಲ್ ನೈತಿಕ ಪೊಲೀಸ್ ಗಿರಿ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾಧ್ಯಮವನ್ನು ಕೈಗೊಂಬೆ ಮಾಡಿಕೊಂಡಿದೆ, ಖರೀದಿಸಿದೆ ಎಂದು ಬೊಬ್ಬೆ ಹಾಕಲಾಗುತ್ತದೆ. ಮೋದಿಯನ್ನು ಓಲೈಸುತ್ತವೆ ಎಂಬುದನ್ನು ಸೂಚಿಸಲು ಗೋದಿ (ಮಡಿಲು) ಮೀಡಿಯಾ ಎಂಬ ಪದಪುಂಜವನ್ನೇ ಹುಟ್ಟುಹಾಕಲಾಗಿದೆ. ಆದರೆ ಇದೀಗ ಅದೇ ಹುಯಿಲೆಬ್ಬಿಸುವ I.N.D.I.A ರಾಜಕೀಯ ಗುಂಪು ಪತ್ರಕರ್ತರನ್ನು ನಿರ್ಬಂಧಿಸಿದೆ. 14 ಪತ್ರಕರ್ತರ ಟಿವಿ ಶೋಗಳಿಗೆ ಹೋಗುವುದಿಲ್ಲ ಎಂದು ಬಾಯ್ಕಾಟ್ ಮಾಡಿದೆ. ಕರ್ನಾಟಕದಲ್ಲೂ ಅಷ್ಟೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಅನೇಕರ ಅಕೌಂಟ್ ಬಂದ್ ಮಾಡಲಾಗುತ್ತಿದೆ. ಎಫ್ಐಆರ್ ದಾಖಲು ಮಾಡಲಾಗುತ್ತಿದೆ. ಆದರೆ ಹಿಂದುತ್ವ, ಮೋದಿ, ಭಾರತೀಯ ಸೇನೆ, ಒಂದು ಜಾತಿ, ಸಮುದಾಯದ ವಿರುದ್ಧ ಯದ್ವಾತದ್ವಾ ಮಾತನಾಡುವವರ ವಿರುದ್ಧ ಯಾವುದೇ ಕ್ರಮ ಆಗುವುದಿಲ್ಲ. ರಾಜ್ಯ ಸರ್ಕಾರವು, ಡಿಜಿಟಲ್ ವೇದಿಕೆಯಲ್ಲಿ ಸುಳ್ಳು ಸುದ್ದಿ ತಡೆಗಟ್ಟಲು ತಂಡವನ್ನೇ ರಚಿಸಿದೆ. ಇದು ಅತ್ಯಂತ ಸ್ವಾಗತಾರ್ಹ ಕ್ರಮ ಎಂದು ತೋರುತ್ತದೆ. ಆದರೆ ನಿಜವಾಗಿಯೂ ಆಗುತ್ತಿರುವುದು ಬೇರೆಯ ರೀತಿಯೇ ಕಾಣುತ್ತಿದೆ. ತಮ್ಮ ವಿರೋಧಿಗಳನ್ನು ಕಟ್ಟಿಹಾಕಲು ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ.

ರಸ್ತೆಯಲ್ಲಿ, ಪ್ರದೇಶದಲ್ಲಿ ನಡೆಯುತ್ತಿದ್ದ ನೈತಿಕ ಪೊಲೀಸ್ ಗಿರಿಯು ಡಿಜಿಟಲ್ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟು, ಅಲ್ಲಿಯೂ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿ ಮಾಡುತ್ತಿದೆ. ಇಂತಹ ಟ್ರೋಲ್ ಗುಂಪುಗಳ ಜತೆಗೆ, ಮಾಸ್ ರಿಪೋರ್ಟ್ ಮಾಡಿಸುವ ಸಂಸ್ಥೆಗಳೊಂದಿಗೆ ಸರ್ಕಾರಗಳೂ ಸೇರಿಕೊಂಡಿರುವುದು ಅಪಾಯದ ಮುನ್ಸೂಚನೆ. ಜನರ ಕೈಗೆ ಸಿಕ್ಕಿರುವ ಅತ್ಯುತ್ತಮ ವಾಕ್ ಸ್ವಾತಂತ್ರ್ಯದ ಉಪಕರಣವನ್ನು ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ. ದೇಶದಲ್ಲಿ ಮತ್ತೊಮ್ಮೆ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿ, ತುರ್ತು ಪರಿಸ್ಥಿತಿ ಬಾರದಂತೆ ತಡೆಯುವ ಹೊಣೆ ನಮ್ಮೆಲ್ಲರ ಮೇಲಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ನೈತಿಕ ಪೊಲೀಸ್‌ಗಿರಿಯ ಕುರಿತು ಅನೈತಿಕ ದೃಷ್ಟಿಕೋನ ಯಾಕಪ್ಪ??!!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ವಿಸ್ತಾರ ಅಂಕಣ: ಕನ್ನಡ ಶಾಲೆ ಉಳಿವಿಗೆ ಎಸ್ಇಪಿ ಜಾರಿಯೇ ಅಡ್ಡಿ!

ಎನ್‌ಇಪಿ (NEP) ಹಾಗೂ ರಾಜಕೀಯ ಪ್ರತಿಷ್ಠೆಗಾಗಿ ತರಲಾಗುತ್ತಿರುವ ಎಸ್‌ಇಪಿಗಳ (SEP) ನಡುವಿನ ಸಮರದಲ್ಲಿ ಬಡವಾಗುವವರು ರಾಜ್ಯದ ಬಡ, ಸರ್ಕಾರಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು. ಇದು ಕನ್ನಡ ಶಾಲೆಗಳನ್ನು ಉಳಿಸುವ ದಾರಿಯೂ ಅಲ್ಲ.

VISTARANEWS.COM


on

kannada school
Koo
Vistara Column @ Hariprakash Konemane

ನಮ್ಮ ಶಿಕ್ಷಣ ವ್ಯವಸ್ಥೆ (Education system) ಸರಿ ಇಲ್ಲ. ಇದರಲ್ಲಿ ಎಳ್ಳಷ್ಟು ನೈತಿಕ ಶಿಕ್ಷಣ ಇಲ್ಲ. ಪ್ರಾಯೋಗಿಕ ಶಿಕ್ಷಣದ ಸೋಂಕಿಲ್ಲ. ಇಂಥಾ ಶಿಕ್ಷಣ ಹೆಚ್ಚಾದಂತೆ ನಿರುದ್ಯೋಗ ಪ್ರಮಾಣವೂ ಹೆಚ್ಚಾಗುತ್ತದೆ. ಇಂಥಾ ಶಿಕ್ಷಣ ಸುಧಾರಣೆಯಾಗಲೇಬೇಕು…!

ನಮ್ಮ ನಾಡಿನ ಶಿಕ್ಷಣ ತಜ್ಞರು, ಚಿಂತಕರು ಇಂಥಾ ಮಾತನ್ನು ಹೇಳುತ್ತಲೇ ಇರುತ್ತಾರೆ. ಅವರ ಬರಹ, ಭಾಷಣ- ಎಲ್ಲೆಲ್ಲೂ ಈ ಕೊರಗನ್ನು ಕಾಣಬಹುದು. ಹಾಗೆ ನೋಡಿದರೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿ ವೇತನ ಯೋಜನೆಗಳಿವೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲೆಂದೇ ಈ ಯೋಜನೆಗಳು ವಿನ್ಯಾಸಗೊಂಡಿವೆ. ಶಿಕ್ಷಣ ಹಕ್ಕೂ (Education right) ಕೂಡ ಜಾರಿಯಾಗಿ ದಶಕಗಳೇ ಸಂದಿವೆ. ಆದರೂ ಉನ್ನತ ಶಿಕ್ಷಣದ ದಾಖಲಾತಿಯ ಸರಾಸರಿ ಪ್ರಮಾಣ ನಿರೀಕ್ಷಿಸಿದಷ್ಟು ಹೆಚ್ಚುತ್ತಿ,ಲ್ಲ. ಹಾಗಾಗಿ ಶಿಕ್ಷಣದ ವ್ಯವಸ್ಥೆ ತಳ ಸಮುದಾಯದ ಮಕ್ಕಳ ಅಭಿವೃದ್ಧಿಗೆ ಸಹಕಾರಿಯಾಗಿಲ್ಲ ಎಂಬುದು ಇನ್ನೂ ಕೆಲವರು ಮುಂದಿಡುವ ಕೊರಗು. ಒಂದಿಷ್ಟು ಮಂದಿಯಂತೂ, ನಮ್ಮ ರ್ಯಾಂಕ್‌ಗಳನ್ನೇ ಗೇಲಿ ಮಾಡುವುದುಂಟು. “ರ್ಯಾಂಕ್ ಬಂದ ಮಕ್ಕಳು ಅಗ್ರ ಶ್ರೇಯಾಂಕಿತರೇ ಹೊರತು ಬುದ್ಧಿವಂತರಲ್ಲ, ಕೌಶಲಿಗಳೂ ಅಲ್ಲ!” ಎಂದು ಮೂಗು ಮುರಿಯುತ್ತಾರೆ.

ಅಂದರೆ ಏನು? ಈಗಿನ ನಮ್ಮ ಶಿಕ್ಷಣದಲ್ಲಿ ಏನೋ ಸಮಸ್ಯೆ ಇದೆ ಎನ್ನುವುದು ಎಲ್ಲರೂ ಒಪ್ಪುವ ಮಾತು. ಮೊದಲನೆಯದಾಗಿ ಶಿಕ್ಷಣದ ಗುಣಮಟ್ಟ ಸರಿಯಿಲ್ಲ. ಎರಡನೆಯದಾಗಿ, ಗುಣಮಟ್ಟದ ಶಿಕ್ಷಣವು ಬಡವರ ಕೈಗೆ ಸಿಗುತ್ತಿಲ್ಲ. ಮೂರನೆಯದಾಗಿ, ಈ ಶಿಕ್ಷಣವು ವಿದ್ಯಾರ್ಥಿಗಳನ್ನು ಮಕ್ಕಿ ಕಾ ಮಕ್ಕಿ ಗಿರಾಕಿಗಳನ್ನಾಗಿ ಮಾಡಿದೆಯೇ ಹೊರತು ಜ್ಞಾನವಂತರನ್ನಾಗಿ ಅಲ್ಲ. ಇದೆಲ್ಲವೂ ಅನೇಕರು ಒಪ್ಪುವ ಮಾತು. ಇದೇ ಕಾರಣಕ್ಕೆ, ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ.

ಭಾರತದಲ್ಲಿ 34 ವರ್ಷಗಳ ನಂತರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National education policy) ಜಾರಿಗೆ ತರಲಾಗಿದೆ. ನೆನಪಿರಲಿ, ಈ ಮೂರೂವರೆ ದಶಕದಲ್ಲಿ ಶರವೇಗದಲ್ಲಿ ಬದಲಾಗಿದೆ (2000ರ ಹಿಂದಿನ ಸಾವಿರಾರು ವರ್ಗಗಳಲ್ಲಿ ಘಟಿಸದ ಬದಲಾವಣೆಯ ವೇಗದ ಪ್ರಮಾಣ, ಆ ನಂತರದ ಎರಡೂವರೆ ದಶಕದ ಅವಧಿಯಲ್ಲಿ ಸಾವಿರ ಪಟ್ಟು ಹೆಚ್ಚಿದೆ ಎಂಬ ಮಾತಿದೆ). ಬದಲಾಗದೇ ಉಳಿದಿದ್ದು ನಮ್ಮ ಅಧಿಕೃತ ಶಿಕ್ಷಣ ನೀತಿ. ಇದೇ ಇರಲಿ, ಈ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಏಕಾಏಕಿ ಜಾರಿ ಮಾಡಿದೆಯೇ? ಹಾಗೇನೂ ಇಲ್ಲ. 2015 ಫೆಬ್ರವರಿಯಲ್ಲಿ ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಪತ್ರಿಕಾಗೋಷ್ಠಿ ನಡೆಸಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಬಗ್ಗೆ ಘೋಷಿಸಿದ್ದರು. ಭಾರತದ ಶಿಕ್ಷಣಕ್ಕೆ ಸಂಬಂಧಿಸಿದ 39 ಅಂಶಗಳನ್ನು ಜನರ ಮುಂದೆ ಇಡುತ್ತಿದ್ದೇವೆ, ದೇಶದ ಎಲ್ಲ ಜನರೂ ಇದಕ್ಕೆ ಸಲಹೆ ಕೊಡಬೇಕು, ಅದೆಲ್ಲದರ ಆಧಾರದಲ್ಲಿ ಶಿಕ್ಷಣ ನೀತಿ ರೂಪಿಸುತ್ತೇನೆ ಎಂದು ಸಾರ್ವಜನಿಕವಾಗಿ ಪ್ರಕಟಿಸಿದ್ದರು. ನಂತರ ಐದು ವರ್ಷ ವಿಚಾರ ಮಂಥನ ನಡೆಸಲಾಗಿದೆ.

ಬಹುಶಃ ಜಗತ್ತಿನಲ್ಲಿ ಯಾವುದೇ ಶಿಕ್ಷಣ ನೀತಿ ರೂಪಿಸುವಾಗ ಇಷ್ಟು ಪ್ರಮಾಣದ ಚರ್ಚೆ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ನಡೆದಿಲ್ಲ. ದೇಶದ 30 ಕೋಟಿ ಜನರ ಬಳಿಗೆ ಇದನ್ನು ಕೊಂಡೊಯ್ಯಲಾಗಿದೆ. ಹರಿದು ಬಂದ 2 ಲಕ್ಷಕ್ಕಿಂತ ಅಧಿಕ ಸಲಹೆಗಳನ್ನು ಸೇರಿಸಿದ್ದರೆ, ಅದರ ಒಟ್ಟು ಪುಟಗಳ ಸಂಖ್ಯೆ 50 ಸಾವಿರ ದಾಟುತ್ತಿತ್ತು. ನಿವೃತ್ತ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಅವರ ನೇತೃತ್ವದ ಸಮಿತಿ ಇದೆಲ್ಲವನ್ನೂ ದತ್ತಾಂಶ ರೂಪಕ್ಕೆ ಇಳಿಸಿಕೊಂಡು ಎಲ್ಲವನ್ನೂ ಅಧ್ಯಯನ ಮಾಡಿ ಕರಡು ನೀತಿಯೊಂದನ್ನು ರೂಪಿಸಿತು. ಬಳಿಕ ಮತ್ತೆ ಸಾರ್ವಜನಿಕರ ಚರ್ಚೆಗೆ ಬಿಡಲಾಯಿತು. ಅಲ್ಲಿಂದ ಬಂದ ಸಲಹೆಗಳನ್ನೂ ಅಳವಡಿಸಿ ಕೊನೆಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಘೋಷಣೆ ಮಾಡಲಾಯಿತು.

ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ಇರುವ ಪ್ರಮುಖ ದೂರು ಯಾವುದು? ಅವರು ಮುಖ್ಯವಾಗಿ ಇರುವುದೇ ನೀತಿ ನಿರೂಪಣೆ ಮಾಡಲು. ಆದರೆ ಸಂಸತ್ತಿನಲ್ಲಿ ಕಾನೂನು ರಚನೆ, ತಿದ್ದುಪಡಿಯಂತಹ ಶಾಸನ ರಚನಾ ಕೆಲಸಕ್ಕೆ ಅವರ ಬಳಿ ಸಮಯವೇ ಇರುವುದಿಲ್ಲ. ಸಂಸತ್ತು ಹಾಗೂ ವಿಧಾನಮಂಡಲಗಳಲ್ಲಿ ಗದ್ದಲ, ಆರೋಪ-ಪ್ರತ್ಯಾರೋಪ ಮಾಡಿಕೊಂಡಿರುತ್ತಾರೆ ಎನ್ನುವುದು. ಆದರೆ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಅತ್ಯಂತ ವಿಸ್ತೃತವಾದ ಚರ್ಚೆ, ಸಾರ್ವಜನಿಕ ಸಹಭಾಗಿತ್ವ ನಡೆಸಲಾಗಿದೆ. ಆದರೂ ಕೇಂದ್ರದಲ್ಲಿ ಪ್ರತಿಪಕ್ಷಗಳು ಹಾಗೂ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಮಾತನಾಡುತ್ತಿದೆ.

kids study

ಕರ್ನಾಟಕದಲ್ಲಂತೂ ಒಂದು ಹೆಜ್ಜೆ ಮುಂದೆ ಹೋಗಿ, ರಾಜ್ಯ ಶಿಕ್ಷಣ ನೀತಿ ಜಾರಿ (state education policy) ಮಾಡುವುದಾಗಿಯೂ ಘೊಷಣೆ ಮಾಡಲಾಗಿದೆ. ಇದಕ್ಕಾಗಿ ಸಮಿತಿಯನ್ನೂ ರಚಿಸಿ ಮೊದಲ ಸಭೆಯೂ ನಡೆದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತದೆ ಎನ್ನುವುದು ಸಚಿವರ ಹಾಗೂ ಸ್ವತಃ ಮುಖ್ಯಮಂತ್ರಿಗಳ ವಾದ. ಎಲ್ಲಿ ಅನ್ಯಾಯವಾಗುತ್ತದೆ ಎಂದು ಕೇಳಿದರೆ, ಇದರಲ್ಲಿ ಹಿಂದುತ್ವ ಹೇರುವ ಪಠ್ಯವಿದೆ, ನಾವು ಸಮಾನತೆಯನ್ನು ಸಾರುವ ಪಠ್ಯ ರೂಪಿಸುತ್ತೇವೆ ಎನ್ನುತ್ತಾರೆ. ಅಸಲಿಗೆ ಇವರಿಗೆಲ್ಲ, ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಏನು ಎನ್ನುವುದೇ ಅರ್ಥವಾಗಿಲ್ಲ ಅಥವಾ ಅರ್ಥವಾಗಿದ್ದರೂ ಈ ರೀತಿ ನಟಿಸುತ್ತಿದ್ದಾರೆ. ಏಕೆಂದರೆ ʼನೀತಿʼಗೂ ʼಪಠ್ಯʼಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನೀತಿ ಎನ್ನುವುದು ಒಟ್ಟಾರೆ ಶಿಕ್ಷಣದ ವ್ಯವಸ್ಥೆ, ಅದಕ್ಕೆ ಬೇಕಾದ ಮಾನವ ಸಂಪನ್ಮೂಲ, ಭಾಷಾ ದೃಷ್ಟಿಕೋನ, ವಿಜ್ಞಾನದ ಕುರಿತು ದೃಷ್ಟಿಕೋನ, ಸಂಶೋಧನೆಗೆ ನೀಡುವ ಒತ್ತು, ಮೂಲಸೌಕರ್ಯ ಸೇರಿ ಅನೇಕ ವಿಚಾರಗಳಲ್ಲಿ ಇರುತ್ತದೆ. ಹೆಚ್ಚೆಂದರೆ ದೇಶದ ಘನತೆ, ಸಾರ್ವಭೌಮತೆ, ಗಣತಂತ್ರದ ಮಹತ್ವ ಸಾರುವ ಪಠ್ಯ ಸೇರಿಸಬೇಕು ಎಂದಿರಬಹುದೇ ಹೊರತು, ಇಂಥದ್ದೇ ಪಠ್ಯವನ್ನು ಸೇರಿಸಿ ಎಂದಿರುವುದಿಲ್ಲ. ಇದನ್ನೇ ಹಿಂದುತ್ವ, ಕೇಸರೀಕರಣ ಎನ್ನುವುದು ಸರಿಯಲ್ಲ. ವಾಸ್ತವವಾಗಿ ಶಿಕ್ಷಣ ನೀತಿ, ಪಠ್ಯ ಹೇಗಿರಬೇಕು ಎಂಬುದನ್ನು ಹೇಳಿದಿಯೇ ಹೊರತು, ಯಾವುದಿರಬೇಕು ಎಂಬುದನ್ನು ಹೇಳುವುದಿಲ್ಲ. ಇದನ್ನು ನಿರ್ಧಾರ ಮಾಡುವುದು ಆಯಾ ರಾಜ್ಯಗಳ ಪಠ್ಯಪುಸ್ತಕ ರಚನಾ ಸಮಿತಿಗಳು. ಹಾಗಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯು ಕೇಸರೀಕರಣದ ಪ್ರಯತ್ನ ಎನ್ನುವುದು ಒಪ್ಪುವ ಮಾತಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಸಾಮಾನ್ಯವಾಗಿ ಪೋಷಕರ ಮನೋಭಾವವನ್ನು ನೋಡೋಣ. ಕರ್ನಾಟಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಿಸಬೇಕು ಎಂಬ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಗಿತ್ತು. ಈ ಪ್ರಕರಣದಲ್ಲಿ ಸರ್ಕಾರಕ್ಕೆ ಸೋಲಾಗಿ, ಶಿಕ್ಷಣ ಮಾಧ್ಯಮ ಯಾವುದು ಎನ್ನುವುದನ್ನು ಪೋಷಕರು ನಿರ್ಧರಿಸಬೇಕೆ ವಿನಃ ಸರ್ಕಾರವಲ್ಲ ಎಂದು ತೀರ್ಪು ಬಂದಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸುತ್ತಿರುವ ಪೋಷಕರಿಗೆ ಕನ್ನಡ ಅಭಿಮಾನ ಇಲ್ಲ ಎಂದು ಅರ್ಥವೇ? ತಮ್ಮ ಮಕ್ಕಳು ದೇಶದ ಮಟ್ಟದಲ್ಲಿ, ವಿಶ್ವದ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಲು ಸಿದ್ಧವಾಗಬೇಕು ಎನ್ನುವುದು ಎಲ್ಲ ಪೋಷಕರ ಆಸೆ, ಅದು ಸಹಜವೂ ಹೌದು. ಕನ್ನಡದಲ್ಲಿ ಓದಿದರೆ ಅವಕಾಶಗಳು ಕಡಿಮೆ ಎನ್ನುವುದು ಅವರ ಅನಿಸಿಕೆ. ಅವರ ಅನಿಸಿಕೆ ಸರಿಯೋ ತಪ್ಪೋ ಎನ್ನುವುದು ಬೇರೆ ಚರ್ಚೆಯ ವಿಷಯ. ಆದರೆ ತಮ್ಮ ಮಕ್ಕಳು ಉನ್ನತ ಮಟ್ಟದ ಸ್ಪರ್ಧೆಗೆ ಸಿದ್ಧರಾಗಬೇಕು ಎನ್ನುವುದು ಪೋಷಕರ ಆಸೆ.

kids playing in school

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿವಿಧ ರಾಜ್ಯಗಳು ಅನುಷ್ಠಾನ ಮಾಡುತ್ತವೆ. ಹಾಗೂ ವಿಶ್ವವಿದ್ಯಾಲಯಗಳಲ್ಲೂ ಜಾರಿ ಮಾಡಲಾಗುತ್ತದೆ. ಅಲ್ಲಿನ ಬೋಧನಾ ಪದ್ಧತಿ, ಪರೀಕ್ಷೆ, ಮೌಲ್ಯಮಾಪನ, ಅಂಕನೀಡಿಕೆಗಳು ಇದೀಗ ವಿಶ್ವದ ಮಟ್ಟದಲ್ಲಿ ಇರುವ ವ್ಯವಸ್ಥೆಗೆ ಅನುಗುಣವಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ನಾಲ್ಕು ವರ್ಷದ ಪದವಿ ಇದೆ. ಆದರೆ ಭಾರತದಲ್ಲಿ ಮಾತ್ರ ಮೂರು ವರ್ಷದ ಪದವಿ ಕೋರ್ಸ್‌ಗಳಿವೆ. ವಿದೇಶಿ ವ್ಯಾಸಂಗಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಈಗಾಗಲೆ ಅದು ಸಮಸ್ಯೆಯಾಗುತ್ತಿದೆ. ಮೂರು ವರ್ಷ ಪದವಿಯನ್ನು ಪದವಿ ಎಂದೇ ಅನೇಕ ದೇಶಗಳು ಪರಿಗಣಿಸದೇ ಇರುವುದರಿಂದ, ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾಗಲು ಅಡ್ಡಿಯಾಗುತ್ತಿದೆ. ಹಾಗಾಗಿ ಎನ್ಇಪಿಯಲ್ಲಿ ನಾಲ್ಕು ವರ್ಷದ ಪದವಿಯನ್ನು ಪ್ರಸ್ತಾಪಿಸಲಾಗಿದೆ. ಇದೇನೂ ಕಡ್ಡಾಯವಲ್ಲ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಅನುಕೂಲಕ್ಕೆ ತಕ್ಕಂತೆ ಕೋರ್ಸ್‌ನ ಯಾವುದೇ ವರ್ಷ ಹೊರನಡೆಯಬಹುದು. ಆಯಾ ವರ್ಷಕ್ಕೆ ಅನುಗುಣವಾಗಿ ಪ್ರಮಾಣಪತ್ರ, ಡಿಪ್ಲೊಮಾ ಮುಂತಾದ ಮಾನ್ಯತೆಯನ್ನು ನೀಡಲಾಗುತ್ತದೆ. ಉನ್ನತ ವ್ಯಾಸಂಗ ಮಾಡಬೇಕು, ವಿದೇಶಕ್ಕೆ ತೆರಳಬೇಕು ಎನ್ನುವುವವರು ನಾಲ್ಕು ವರ್ಷ ಪೂರೈಸುತ್ತಾರೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಉಪರಾಷ್ಟ್ರೀಯತೆಯನ್ನು ಬೆಂಬಲಿಸುವ ರಾಷ್ಟ್ರೀಯ ಕಾಂಗ್ರೆಸ್‌!

ಎಸ್ಇಪಿ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ, ಒಂದು ಸಮಿತಿಯನ್ನು ನೇಮಿಸಿದೆ. ಈ ಸಮಿತಿಯ ಶಿಫಾರಸಿನಂತೆ ಎನ್ಇಪಿ ಜಾರಿಯನ್ನು ಮಾಡುವುದರಿಂದ ರಾಜ್ಯ ಸರ್ಕಾರ ಹಿಂತೆಗೆಯಿತು ಎಂದೇ ಭಾವಿಸಿಕೊಳ್ಳೋಣ. ಇದು ಯಾರಿಗೆ ಅನ್ವಯವಾಗುತ್ತದೆ? ಸರ್ಕಾರದ ನಿಯಂತ್ರಣದಲ್ಲಿರುವ ಕೆಲವು ವಿಶ್ವವಿದ್ಯಾಲಯಗಳು, ರಾಜ್ಯ ಸರ್ಕಾರದ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ಅಷ್ಟೆ. ಈಗಂತೂ ರಾಜ್ಯದಲ್ಲಿ ಸರ್ಕಾರದಷ್ಟೇ, ಉನ್ನತ ಶಿಕ್ಷಣದಲ್ಲಿ ಸರ್ಕಾರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಖಾಸಗಿ ಸಂಸ್ಥೆಗಳು ಸೆಳೆಯುತ್ತಿವೆ. ರಾಜ್ಯದ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಎಂದು ಪರಿಗಣಿಸಲ್ಪಡುವ ಖಾಸಗಿ ವಿವಿಗಳು, ಡೀಮ್ಡ್ ವಿವಿಗಳಿಗೆ ಎಸ್ಇಪಿ ಅನ್ವಯವೇ ಆಗುವುದಿಲ್ಲ. ಜಿಲ್ಲೆ, ತಾಲೂಕು ಮಟ್ಟದಲ್ಲೂ ಇರುವ ಖಾಸಗಿ ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮಗಳಿಗೆ ಎಸ್ಇಪಿ ಅನ್ವಯ ಆಗುವುದಿಲ್ಲ. ಜಿಲ್ಲೆಗೊಂದರಂತಿರುವ ಜವಾಹರ ನವೋದಯ ವಿದ್ಯಾರ್ಥಿಗಳು, ಕೇಂದ್ರೀಯ ಶಾಲೆಗಳು, ಸೈನಿಕ ಶಾಲೆಗಳಲ್ಲಿ ಎನ್ಇಪಿಯೇ ಜಾರಿಯಾಗುತ್ತದೆ, ಅಲ್ಲಿಗೂ ಎಸ್ಇಪಿ ಅನ್ವಯ ಆಗುವುದಿಲ್ಲ. ರಾಜ್ಯ ಸರ್ಕಾರದಿಂದಲೇ ನಡೆಸುವ ಕೆಲವು ವಸತಿ ಶಾಲೆಗಳಲ್ಲೂ ಸಿಬಿಎಸ್ಸಿ ಪಠ್ಯವಿದ್ದು, ಅಲ್ಲಿಂದಲೂ ಎಸ್ಇಪಿ ಹೊರಗೇ ಇರಲಿದೆ. ಇಡೀ ದೇಶ ಎನ್ಇಪಿ ರೀತಿಯಲ್ಲಿ ನಡೆಯುತ್ತಿರುವುದರಿಂದ, ಎಸ್ಇಪಿಯಲ್ಲಿ ಓದಿದ ಕರ್ನಾಟಕ ವಿದ್ಯಾರ್ಥಿಗಳಿಗೆ ಹೊರರಾಜ್ಯಗಳಲ್ಲಿ ಉನ್ನತ ಶಿಕ್ಷಣಕ್ಕೆ, ಕೆಲಸಕ್ಕೆ ತೊಂದರೆಯಾಗಬಹುದು. ಇದೇ ಕಾರಣಕ್ಕೆ ವಿದೇಶದಲ್ಲಿ ಶಿಕ್ಷಣ ಪಡೆಯಲೂ ಅಡಚಣೆ ಆಗಬಹುದು. ಆಗ ನಷ್ಟ ಆಗುವುದು ಯಾರಿಗೆ? ಇದೇ ಸರ್ಕಾರಿ ಶಾಲೆಯಲ್ಲಿ, ಸರ್ಕಾರಿ ವಿವಿಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ.

ಈಗಾಗಲೆ ಹೇಳಿದಂತೆ, ಪೋಷಕರ ಮೊದಲ ಆದ್ಯತೆ ತಮ್ಮ ಮಕ್ಕಳ ಏಳಿಗೆ. ತಮ್ಮ ಮಕ್ಕಳು ಎಸ್ಇಪಿಯಲ್ಲಿ ಓದಿದರೆ ಭವಿದ್ಯ ಇಲ್ಲ ಎಂದು ತಿಳಿದರೆ ಅವರೂ ನಿಧಾನವಾಗಿ ಸಿಬಿಎಸ್ಇ ಶಾಲೆಗಳತ್ತ ಹೊರಳುತ್ತಾರೆ. ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಿರುವ ಕಾರಣ, ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳೂ ನಿಧಾನವಾಗಿ ಸಿಬಿಎಸ್ಇ (CBSE) ಮಾನ್ಯತೆಯತ್ತ ಹೆಜ್ಜೆ ಹಾಕುತ್ತವೆ. ಅಲ್ಲಿಗೆ, ಅನುದಾನಿತ ಶಾಲೆಗಳನ್ನು ಹೊರತುಪಡಿಸಿ ಖಾಸಗಿ ವಲಯದಲ್ಲಿ ರಾಜ್ಯ ಪಠ್ಯಕ್ರಮ ದಿನೇದಿನೇ ಕಡಿಮೆಯಾಗುತ್ತದೆ. ಕೊನೆಗೆ ಉಳಿಯುವುದು ಸರ್ಕಾರಿ ಶಾಲೆ, ಕಾಲೇಜುಗಳು, ಅನುದಾನಿತ ಶಾಲೆ ಕಾಲೇಜುಗಳು. ಇವೆಲ್ಲದರಲ್ಲಿ ಓದುವ ಬಡ ಮಕ್ಕಳಿಗೆ ಇದು ಅನ್ಯಾಯ ಆಗುತ್ತದೆ. ತಾನು ಬಡವರ ಪರ, ಬಡವರಿಗಾಗಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ ಇತ್ತ ರಾಜಕೀಯ ಕಾರಣಗಳಿಗೋಸ್ಕರ ಎನ್ಇಪಿಯನ್ನು ವಿರೋಧಿಸುತ್ತಿರುವುದು ಮೇಲ್ನೋಟಕ್ಕೇ ಕಾಣುತ್ತದೆ. ರಾಜಕೀಯ ಉದ್ದೇಶದಿಂದ, ಬಡ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕಲ್ಲು ಹಾಕುವುದು ಸರ್ವಥಾ ಸಮರ್ಥನೀಯವಲ್ಲ. ರಾಜ್ಯ ಸರ್ಕಾರ ಕೂಡಲೆ ಈ ಎನ್ಇಪಿ ವರ್ಸಸ್ ಎಸ್ಇಪಿ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಪೋಷಕರೆಲ್ಲ ಒತ್ತಾಯ ಮಾಡುವುದೊಂದೇ ಕನ್ನಡ ಶಾಲೆಗಳನ್ನು ಉಳಿಸಲು ಇರುವ ದಾರಿ.

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತಾಂಬೆಯ ವಿರುದ್ಧ ಆಕೆಯ ತನುಜಾತೆಯನ್ನು ಎತ್ತಿಕಟ್ಟುವುದು ಏಕೆ?

Continue Reading

ಅಂಕಣ

Raja Marga : ಜಗತ್ತು ನೆನಪಿಡುವುದು ಮೊದಲಿಗರನ್ನು ಮಾತ್ರ! ನಿಮಗೂ ಹಲವು ಕ್ಷೇತ್ರಗಳು ಕಾದಿವೆ

Raja Marga Column : ಜಗತ್ತು ಯಾವತ್ತಿದ್ದರೂ ನೆನಪಿಸಿಕೊಳ್ಳುವುದು ಮೊದಲ ಬಾರಿ ತನ್ನ ಹೆಜ್ಜೆ ಗುರುತು ಮೂಡಿಸಿದವನನ್ನು. ನಿಮಗೆ ನಿಮ್ಮ ಹೆಜ್ಜೆ ಗುರುತು ಮೂಡಿಸಲು ಲಕ್ಷಾಂತರ ಅವಕಾಶಗಳಿವೆ.

VISTARANEWS.COM


on

Sachin tendulkar first timer to 200 ODI
Koo
RAJAMARGA Rajendra Bhat

ಜಗತ್ತಿನಲ್ಲಿ ಯಾವುದೇ ಸಾಧನೆಯನ್ನು ಮೊದಲು ಮಾಡಿದವರನ್ನು (First time Achievers) ಪಯೋನೀರ್ (pioneer achievers) ಎಂದು ಕರೆಯುತ್ತಾರೆ. ಜಗತ್ತು ಅವರನ್ನು ಮಾತ್ರ ನೆನಪಿಟ್ಟು ಕೊಳ್ಳುತ್ತದೆ (Raja Marga Column).

1. ಭಾರತದ ಮೊಟ್ಟಮೊದಲ ಮಹಿಳಾ ವೈದ್ಯೆ ಡಾಕ್ಟರ್ ಆನಂದಿ ಬಾಯಿ ಜೋಶಿ. ಮುಂದೆ ಸಾವಿರಾರು ಮಹಿಳೆಯರು ವೈದ್ಯರಾದರು. ಜಗತ್ತು ಅವರನ್ನೆಲ್ಲ ನೆನಪಿಟ್ಟುಕೊಂಡದ್ದು ಕಡಿಮೆ.

2. ಜುಲೈ 20, 1969ರಂದು ಚಂದ್ರನ ಮೇಲೆ ಮೊದಲ ಹೆಜ್ಜೆ ಇರಿಸಬೇಕಾದದ್ದು ಎಡ್ವಿನ್ ಆಲ್ಡ್ರಿನ್. ಆದರೆ ಆತ ಸ್ವಲ್ಪ ಅಳುಕಿದ ಕಾರಣ ನೀಲ್ ಆರ್ಮ್ ಸ್ಟ್ರಾಂಗ್ ಮೊದಲು ಇಳಿದ. ಅರ್ಧ ಕ್ಷಣ ನಂತರ ಆಲ್ಡ್ರಿನ್ ಕೂಡ ಇಳಿದನು. ಆದರೆ ಜಗತ್ತು ಇಂದು ನೀಲ್ ಆರ್ಮ್ ಸ್ಟ್ರಾಂಗ್‌ನನ್ನು ನೆನಪಿಟ್ಟುಕೊಂಡುಕೊಂಡಿದೆ! ಆಲ್ಡ್ರಿನ್ ಜಗತ್ತಿಗೆ ಮರೆತೇ ಹೋಗಿದ್ದಾನೆ.

Neil Armstrong
ಚಂದ್ರನ ಮೇಲೆ ಮೊದಲು ಕಾಲಿಟ್ಟ ನೀಲ್‌ ಆರ್ಮ್‌ ಸ್ಟ್ರಾಂಗ್

3. ಮೌಂಟ್ ಎವರೆಸ್ಟ್ ಮೇಲೆ ಮೊದಲ ಹೆಜ್ಜೆ ಜೊತೆಯಾಗಿ ಇಟ್ಟವರು ಇಬ್ಬರು. ತೆನ್ಸಿಂಗ್ ನೋರ್ಕೆ ಮತ್ತು ಎಡ್ಮಂಡ್ ಹಿಲರಿ (ಅಥವಾ ಅವರು ಹಾಗೆ ಹೇಳುತ್ತಾರೆ. ನೋಡಿದವರು ಅಲ್ಲಿ ಯಾರೂ ಇರಲಿಲ್ಲ). ಅವರು ಜೊತೆಯಾಗಿ ಆ ಸಾಧನೆ ಮಾಡಿದ ಕಾರಣ ಇಬ್ಬರೂ ನೆನಪಲ್ಲಿ ಇದ್ದಾರೆ.

Tensing Norge Edmund hilary

4. ಒಲಿಂಪಿಕ್ಸ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಹತ್ತಕ್ಕೆ ಹತ್ತು ಅಂಕ ಮೊದಲು ಪಡೆದವರು ನಾಡಿಯಾ ಕೊಮೇನೆಸಿ(1976). ಆಗ ಆಕೆಗೆ 14 ವರ್ಷ ಪ್ರಾಯ! ನಂತರ ತುಂಬಾ ಜನ ಈ ಸಾಧನೆಯನ್ನು ರಿಪೀಟ್ ಮಾಡಿದರು. ಅವರ್ಯಾರನ್ನೂ ಇತಿಹಾಸ ನೆನಪಿಟ್ಟುಕೊಂಡಿಲ್ಲ.

Gymnastics

5. ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಬಾರಿ 625/625 ಅಂಕಗಳನ್ನು ಪಡೆದವನು ಭದ್ರಾವತಿಯ ಹುಡುಗ ರಂಜನ್. ಮುಂದಿನ ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳು ಆ ಸಾಧನೆ ಮಾಡಿದರು. ಆದರೆ ರಂಜನ್ ಹೆಸರು ಎಸೆಸೆಲ್ಸಿ ಪರೀಕ್ಷೆ ಇರುವತನಕ ಶಾಶ್ವತ!

SSLC Ranjan Bhadravati

6. ಮಹಿಳಾ ಕಬಡ್ಡಿ ವಿಶ್ವಕಪ್ ಆರಂಭವಾದಾಗ ಮೊದಲ ಟ್ರೋಫಿ ಗೆದ್ದದ್ದು ಭಾರತ (2004). T20 ವಿಶ್ವಕಪ್ ಆರಂಭ ಆದಾಗಲೂ ಮೊದಲು ಟ್ರೋಫಿ ಎತ್ತಿದ್ದು ಭಾರತ! ಅಷ್ಟರಮಟ್ಟಿಗೆ ಅದು ಇತಿಹಾಸ. ನಂತರ ಗೆದ್ದವರು ಕೂಡ ಸಾಧಕರು ಹೌದು. ಆದರೆ ಮೊದಲು ಗೆದ್ದವರು ಮಾತ್ರ ಇತಿಹಾಸದಲ್ಲಿ ನೆನಪಲ್ಲಿ ಉಳಿಯುತ್ತಾರೆ.

7. ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯರು ಖ್ಯಾತ ವಸ್ತ್ರ ವಿನ್ಯಾಸಕಿ ಭಾನೂ ಅಥೈಯ್ಯ. ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗ ಕುವೆಂಪು. ಮೊದಲ ಭಾರತರತ್ನ ಕರ್ನಾಟಕವು ಪಡೆದದ್ದು ವಿಶ್ವೇಶ್ವರಯ್ಯನವರ ಮೂಲಕ. ಅದರಿಂದಾಗಿ ಅವರೆಲ್ಲರೂ ಪಯೋನೀರ್ ಆದರು. ಲೆಜೆಂಡ್ ಆದರು.

Kuvempu kannada sahitya

8. ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ ಹತ್ತಕ್ಕೆ ಹತ್ತು ವಿಕೆಟ್ ಮೊದಲು ಪಡೆದವನು ಇಂಗ್ಲೆಂಡ್ ಬೌಲರ್ ಜಿಮ್ ಲೇಕರ್ (1956). ಮುಂದೆ ಅನಿಲ್ ಕುಂಬ್ಳೆ (1999) ಮತ್ತು ಎಜಾಜ್ ಪಟೇಲ್ ( 2021) ಈ ಸಾಧನೆಯನ್ನು ಲೆವೆಲ್ ಮಾಡಿದರು (ಮುರಿಯುವುದು ಸಾಧ್ಯ ಇಲ್ಲ ಅಲ್ವಾ?). ಕುಂಬ್ಳೆ ಭಾರತೀಯ ಅನ್ನುವ ಕಾರಣಕ್ಕೆ ನಮಗೆ ಅದು ಸ್ಪೆಷಲ್ ಅನ್ನಿಸಬಹುದು. ಆದರೆ ಜಿಮ್ ಲೇಕರ್ ಸಾಧನೆಯೇ ಎಲ್ಲರಿಗಿಂತ ಪ್ರಖರ ಎಂದು ನನ್ನ ಭಾವನೆ.

Jim laker

9. ಏಕದಿನದ ಪಂದ್ಯಗಳಲ್ಲಿ ಮೊದಲ ದ್ವಿಶತಕ ಹೊಡೆದ ಕೀರ್ತಿ ದೊರೆತದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ. ಮುಂದೆ ಹತ್ತಾರು ಜನರು ಈ ಸಾಧನೆಯನ್ನು ರಿಪೀಟ್ ಮಾಡಿದರು. ರೋಹಿತ್ ಶರ್ಮ ಮೂರು ಬಾರಿ ಈ ಸಾಧನೆ ಮಾಡಿದರು. ಆದರೆ ಸಚಿನ್ ದ್ವಿಶತಕ ಅದು ಜಗತ್ತಿಗೇ ಸ್ಪೆಷಲ್. ಏಕೆಂದರೆ ಅದು ಜಗತ್ತಿಗೇ ಮೊದಲ ಸಾಧನೆ. ಏಕದಿನದ ಒಂದು ಪಂದ್ಯದಲ್ಲಿ ದ್ವಿಶತಕ ಹೊಡೆಯಲು ಸಾಧ್ಯ ಎಂದು ಮೊದಲು ತೋರಿಸಿಕೊಟ್ಟದ್ದು ಸಚಿನ್ ಅಲ್ವಾ?

10. ಜಗತ್ತಿನ ಮೊದಲ ಬಲ್ಬ್ ಸಂಶೋಧನೆ ಮಾಡಿದ್ದು ಎಡಿಸನ್. ನಂತರ ನೂರಾರು ವಿಜ್ಞಾನಿಗಳು ಆ ಬಲ್ಬನ್ನು ಇಂಪ್ರೂವ್ ಮಾಡಿದರು. ಹೊಸ ಫಿಲಮೆಂಟ್, ಹೊಸ ವಿನ್ಯಾಸ ಪರಿಚಯ ಮಾಡಿದರು. ಆದರೆ ಎಲೆಕ್ಟ್ರಿಕ್ ಬಲ್ಬ್ ಸಂಶೋಧನೆಯ ಶ್ರೇಯಸ್ಸು ಎಡಿಸನ್ ಮತ್ತು ಎಡಿಸನ್ ಅವರಿಗೆ ಮಾತ್ರ ಸಲ್ಲುತ್ತದೆ.

Thomas Alva Edison

11. ಹಾಗೆಯೇ ಜಗತ್ತಿನ ಮೊದಲ ಎಣಿಕೆ ಯಂತ್ರ ಸಂಶೋಧನೆ ಮಾಡಿದ್ದು ಚಾರ್ಲ್ಸ್ ಬ್ಯಾಬೇಜ್. ಮುಂದೆ ಹಲವಾರು ವಿಜ್ಞಾನಿಗಳು ಸೂಪರ್ ಸಾನಿಕ್ ಕಂಪ್ಯೂಟರ್ ಕಂಡುಹಿಡಿದರು. ಆದರೆ ಚಾರ್ಲ್ಸ್ ಬ್ಯಾಬೇಜ್ ಆ ಕ್ಷೇತ್ರದ ಪಯೊನೀರ್ ಎಂದು ಖಚಿತವಾಗಿ ಹೇಳಬಹುದು.

Charles Babbage

ಇದನ್ನೂ ಓದಿ : Raja Marga Column: ಇವರು ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ; 511 ಪುಸ್ತಕ, 19 ಮಹಾಕಾವ್ಯ!

ಭರತವಾಕ್ಯ

ಹೀಗೆ ಜಗತ್ತಿನ ಸಾವಿರಾರು ಮೊದಲಿಗರ ಪಟ್ಟಿ ಮಾಡಬಹುದು. ಹಾಗೆಯೇ ಅವರ ಸಾಧನಾ ಕ್ಷೇತ್ರಗಳು ವಿಸ್ತಾರ ಆಗಿರುವುದನ್ನು ಕೂಡ ಗಮನಿಸಿ. ಯಾವುದೇ ಕ್ಷೇತ್ರದಲ್ಲಿ ಅದೇ ಸಾಧನೆ ರಿಪೀಟ್ ಮಾಡಿದವರನ್ನು ಜಗತ್ತು ಬೇಗ ಮರೆಯುತ್ತದೆ. ಆದ್ದರಿಂದ ಮಾನವನ ಕ್ರಿಯಾಶಾಲಿ ಮೆದುಳು ಹೊಸ ಹೊಸ ಸಾಧನಾ ಕ್ಷೇತ್ರಗಳನ್ನು ಹುಡುಕಿಕೊಂಡು ಮುಂದೆ ಹೋಗುತ್ತಿದೆ ಅನ್ನಬಹುದು. ಹಾಗೆಯೇ ಮೊದಲಿಗರನ್ನು ಕೂಡ ಸೃಷ್ಟಿ ಮಾಡುತ್ತ ಜಗತ್ತು ಮುಂದೆ ಹೋಗುತ್ತದೆ. ಇದುವರೆಗೂ ಪಯೋನೀರ್ ಇಲ್ಲದ ಸಾವಿರಾರು ಕ್ಷೇತ್ರಗಳು ಇನ್ನೂ ಬಾಕಿ ಇವೆ. ಅಂತಹ ಕ್ಷೇತ್ರ ಆರಿಸಿ ಅದರಲ್ಲಿ ಸಾಧನೆ ಮಾಡಿದರೆ ನಾವು ನಮ್ಮ ಬದುಕಿನ ನಂತರವೂ ನೆನಪಲ್ಲಿ ಉಳಿಯುತ್ತೇವೆ. ಏನಂತೀರಿ?

Continue Reading

ಅಂಕಣ

ಮೊಗಸಾಲೆ ಅಂಕಣ: ಲೋಕಸಭೆ ಚುನಾವಣೆಗೆ ತಯಾರಿ ಮತ್ತು ರಾಜ್ಯ ಬಿಜೆಪಿಯ ತಳಮಳ

ಮುಂದಿನ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಇದೀಗ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಯಾರು ಎಂಬ ಬಗ್ಗೆಯೂ ತೀವ್ರವಾಗಿ ತಲೆ ಕೆಡಿಸಿಕೊಳ್ಳುತ್ತಿದೆ. ಆಯ್ಕೆ ಅಷ್ಟೇನೂ ಸುಲಭವಿಲ್ಲ.

VISTARANEWS.COM


on

bjp council opposition leader
Koo
mogasale logo

ಪಂಚರಾಜ್ಯ ಚುನಾವಣೆ ಮುಕ್ತಾಯವಾಗಿದೆ. ಮತದಾನೋತ್ತರ ಸಮೀಕ್ಷಾ ವರದಿಗಳ ರೀತ್ಯ ಭಾರತೀಯ ಜನತಾ ಪಾರ್ಟಿ ತನ್ನ ಕೈಯಲ್ಲಿರುವ ಒಂದು ರಾಜ್ಯ ಉಳಿಸಿಕೊಂಡು ಮತ್ತೊಂದನ್ನು ಗೆಲ್ಲಲಿದೆ. ಕಾಂಗ್ರೆಸ್ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕೈಯಲ್ಲಿರುವ ಎರಡರಲ್ಲಿ ಒಂದು ರಾಜ್ಯ ಉಳಿಸಿಕೊಂಡು ಇನ್ನೊಂದನ್ನು ವಶಕ್ಕೆ ಪಡೆಯಲಿದೆ. ಸಮೀಕ್ಷಾ ವರದಿಗಳು ಹೇಳುವಂತೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಪ್ರಬಲ ಸೆಣೆಸಾಟ ಪೈಪೋಟಿ ನಡೆದಿದೆ. ವರದಿಗಳು ನುಡಿದಿರುವ ಭವಿಷ್ಯದ ಚಿಪ್ಪು ಬರುವ ಭಾನುವಾರ ಬೆಳಗ್ಗೆ ಒಡೆಯಲಿದೆ. ಅಲ್ಲೀವರೆಗೂ “ಆದರೆ ಹೋದರೆ” ಎಂಬ ರೆ ಸಾಮ್ರಾಜ್ಯದಲ್ಲಿ ನಾವಿರುವುದು ಅನಿವಾರ್ಯವಾಗಿದೆ.

ರಾಜಕೀಯ ಪಕ್ಷಗಳ ವಿಚಾರದಲ್ಲಿ ಮತದಾರರು ತೆಗೆದುಕೊಂಡ ನಿರ್ಣಯ ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎನ್ನುವುದು ಸುಳ್ಳಲ್ಲ. ವಿಧಾನ ಸಭಾ ಚುನಾವಣೆಗಳಲ್ಲಿ ಜನ ಯೋಚಿಸುವ ಕ್ರಮವೇ ಬೇರೆ, ಲೋಕಸಭಾ ಚುನಾವಣೆಯಲ್ಲಿ ಚರ್ಚಿಸುವ ವಿಚಾರಗಳೇ ಬೇರೆ ಎಂಬ ಮಾತು ನಿಜವೇ ಹೌದಾದರೂ ಮತದಾರರ ಮನಸ್ಸು ಯಾವತ್ತ ತುಡಿಯುತ್ತಿದೆ ಎನ್ನುವುದರ ಸೂಕ್ಷ್ಮ ಅವಲೋಕನಕ್ಕೆ ಈ ಫಲಿತಾಂಶ ಒಂದು ಬಗೆಯ ಆಕರ ಸಾಮಗ್ರಿಯನ್ನು ಒದಗಿಸಲಿದೆ. ಎಂದೇ ಈ ಪಂಚರಾಜ್ಯ ಚುನಾವಣೆಯನ್ನು ಸೆಮಿಫೈನಲ್ಸ್ ಎಂದು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಣ್ಣಿಸಿದ್ದು. ಕಾಂಗ್ರೆಸ್ ಇಲ್ಲವೇ ಬಿಜಪಿಯಲ್ಲಿ ಯಾವ ಪಕ್ಷ ಸೆಮಿ ಫೈನಲ್ಸ್‍ಗೆ ಹೋಗುತ್ತಾರೆ ಎನ್ನುವುದರ ಒಂದು ನೋಟ ಡಿಸೆಂಬರ್ ಮೂರರಂದು ರಾಜಕೀಯ ಪಕ್ಷಗಳು ಗಳಿಸುವ ವಿಧಾನ ಸಭಾ ಸೀಟುಗಳ ಸಂಖ್ಯೆಯನ್ನು ಆಧರಿಸಿ ನಿರ್ಧಾರವಾಗಲಿದೆ.

ಈ ಚುನಾವಣಾ ಫಲಿತಾಂಶ ಯಾವ ಪಕ್ಷವನ್ನು ಆಶೀರ್ವದಿಸಲಿದೆ, ಇಲ್ಲವೇ ತಿರಸ್ಕರಿಸಲಿದೆ ಎನ್ನುವುದರ ಯೋಚನೆಯನ್ನು ಪಕ್ಕಕ್ಕಿಟ್ಟಿರುವ ರಾಜಕೀಯ ಪಕ್ಷಗಳು ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ನರೇಂದ್ರ ಮೋದಿಯವರು ಮತ್ತೊಮ್ಮೆ ತಾವೇ ಪ್ರಧಾನಿಯಾಗುವ ಮಾತನ್ನು ಬಹಿರಂಗದಲ್ಲೇ ಆಡಿದ್ದಾರೆ. ಅದಕ್ಕೆ ಪೂರಕವಾಗಿ ಎನ್‍ಡಿಎ/ಬಿಜೆಪಿಯನ್ನು ನಿಚ್ಚಳ ಬಹುಮತದಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯೂ ಅವರದೇ ಆಗಿದೆ. ಮೋದಿ ಬರುತ್ತಾರೆ, ರ್ಯಾಲಿಯ ನಂತರ ರ್ಯಾಲಿ ನಡೆಸಿ ಓಟಿನ ಚೀಲವನ್ನು ತುಂಬಿಸಿ ಕೊಡುತ್ತಾರೆ, ಗೆಲ್ಲಿಸಿ ಆಶೀರ್ವದಿಸುತ್ತಾರೆಂದು ನಂಬುವ ಸ್ಥಿತಿ ಈಗ ಇಲ್ಲ. ಈ ಮಾತಿಗೆ ಕಳೆದ ಮೇ ಮಾಹೆಯಲ್ಲಿ ಕರ್ನಾಟಕ ವಿಧಾನ ಸಭೆಗೆ ನಡೆದ ಚುನಾವಣೆಯೇ ಸಾಕ್ಷಿ. ಪಕ್ಷದೊಳಗೆ ಇದ್ದವರೇ ಅಭ್ಯರ್ಥಿಗಳ ಸೋಲಿಗೆ ಶರಾ ಬರೆದ ರೀತಿ ಮೋದಿ, ನಡ್ಡಾ, ಅಮಿತ್ ಶಾರನ್ನು ಕಂಗಾಲು ಮಾಡಿರುವ ಬೆಳವಣಿಗೆ. ಇಂಥದೇ ಒಳಸುಳಿ ರಾಜಕೀಯ ಇದೀಗ ನಡೆದ ಪಂಚರಾಜ್ಯ ಚುನಾವಣೆಯಲ್ಲೂ ಪುನರಾವರ್ತನೆಯಾಗಿಲ್ಲ ಎಂದು ಹೇಳುವುದಕ್ಕೆ ಸದ್ಯಕ್ಕಂತೂ ಭರವಸೆ ಇಲ್ಲ. ಫಲಿತಾಂಶ ಬರಬೇಕು; ಗೊತ್ತಾಗಬೇಕು.

ರಾಜಕೀಯ ಎನ್ನುವುದು ನಿತ್ಯವೂ ನಿರಂತರವೂ ಆದ ಕ್ರಿಯೆಗಳಲ್ಲಿ ಒಂದು. ಒಂದು ಚುನಾವಣೆ ಮುಗಿಯಿತೆಂದ ಮಾತ್ರಕ್ಕೆ ವಿರಾಮಕ್ಕೆ ವಿಶ್ರಾಂತಿಗೆ ಅವಕಾಶವೇ ಇಲ್ಲದ ಚಟುವಟಿಕೆ ಅದು. ಹಾಗೆಂದೇ ಬರಲಿರುವ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ಹುಮ್ಮಸ್ಸು ಬಿಜೆಪಿ/ಎನ್‍ಡಿಎಯಲ್ಲಿ ಇರುವಂತೆ ಡಾಟೆಡ್ ಇಂಡಿಯಾ ಒಕ್ಕೂಟದಲ್ಲೂ ಇದೆ. ವಿಧಾನ ಸಭಾ ಚುನಾವಣೆಯಲ್ಲಿ ಡಾಟೆಡ್ ಇಂಡಿಯಾ ಅಂಥ ಮಹತ್ವದ ಪಾತ್ರ ವಹಿಸಿಲ್ಲ. ಆದರೆ ಲೋಕಸಭಾ ಚುನಾವಣೆ ಹೊತ್ತಿಗೆ ಡಾಟೆಡ್ ಇಂಡಿಯಾ ಒಕ್ಕೂಟದ ರಾಜಕೀಯ ಹರಳುಗಟ್ಟುವುದು ಬಹುತೇಕ ಖಚಿತ. ಪ್ರತಿಯೊಂದು ರಾಜ್ಯದಲ್ಲೂ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಚಾಣಾಕ್ಷ ನಡೆ ಎಲ್ಲ ಪಕ್ಷಗಳಲ್ಲೂ ಇದೆ. ಬಿಜೆಪಿಯನ್ನು ಬಗ್ಗು ಬಡಿಯುವ, ಮೂರನೇ ಬಾರಿಗೂ ಪ್ರಧಾನಿ ಸ್ಥಾನದಲ್ಲಿ ಮುಂದುವರಿಯುವ ಮೋದಿಯವರ ಆಸೆಗೆ ಕೊಳ್ಳಿ ಇಡುವ ಕಾರ್ಯತಂತ್ರದ ವಿಚಾರದಲ್ಲಿ ಡಾಟೆಡ್ ಇಂಡಿಯಾ ಒಕ್ಕೂಟ ಸತತ ಸಮಾಲೋಚನೆಯಲ್ಲಿದೆ. ಇದು ಕೆಲವೊಮ್ಮೆ ಬಹಿರಂಗವಾಗುತ್ತದೆ, ಹಲವು ಸಲ ಸಮಾಲೋಚನೆ ನಡೆದಿದ್ದೇ ಗೊತ್ತಾಗದಂತಿರುತ್ತದೆ. ಬಾಣ ಪ್ರತಿಬಾಣಗಳ ಮುಖಾಮುಖಿ ನಡೆಯುವುದು ಮುಂದಿನ ನಾಲ್ಕೈದು ತಿಂಗಳ ಕಾಲ ಸತತ ಎನಿಸಲಿದೆ.

ಇತ್ತ ಕರ್ನಾಟಕದತ್ತ ಹೊರಳು ನೋಟ ಹರಿಸಿದರೆ ಕಾಂಗ್ರೆಸ್ ಕೈಯಲ್ಲಿ ಅಧಿಕಾರವಿದೆ ಎಂದಷ್ಟೇ ಹೇಳಬಹುದು. ಆ ಪಕ್ಷದ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಒಳಗೆ ನಡೆದಿರುವ ಮಾರಾಮಾರಿ ಪಕ್ಷದ ವರ್ಚಸ್ಸನ್ನು ಗಣನೀಯ ಮಟ್ಟದಲ್ಲಿ ಕುಗ್ಗಿಸಿದೆ. ಹರಿದ ಪಂಚೆಗೆ ಒಂದು ಕಡೆ ತೇಪೆ ಹಾಕಿದರೆ ಮತ್ತೊಂದು ಕಡೆ ಅದೇ ಪಂಚೆ ಹರಿಯುವಂತೆ ಕಾಂಗ್ರೆಸ್ ವಿದ್ಯಮಾನ ಸಾಗಿದೆ. ಏತನ್ಮಧ್ಯೆ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ವಿಚಾರದಲ್ಲಿ ರಾಮಾ ರಾದ್ಧಾಂತ ನಡೆದಿರುವುದು ಆಡಳಿತ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.

ಸೋತು ಅಡ್ಡಡ್ಡ ಮಲಗಿರುವ ಬಿಜೆಪಿಗೆ ಪುಟಿದೇಳುವ ಅವಕಾಶವನ್ನು ಆಡಳಿತ ಪಕ್ಷವೇ ಕರುಣಿಸಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸುವ ಮನೋಬಲ ಮುಖ್ಯ ವಿರೋಧ ಪಕ್ಷವಾಗಿರುವ ಬಿಜೆಪಿಯಲ್ಲಿ ಇನ್ನೂ ಕಾಣಿಸಿಲ್ಲ. ಪಕ್ಷದ ಅಧ್ಯಕ್ಷ ಹುದ್ದೆ ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ತೀರಾ ತೀರಾ ವಿಳಂಬವಾಗಿ ಭರ್ತಿ ಮಾಡಲಾಗಿದೆ. ಆದರೆ ಅದೂ ಕೂಡಾ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದ್ದು ಅದನ್ನು ಹೈಕಮಾಂಡ್ ಹೇಗೆ ಬಗೆಹರಿಸಲಿದೆಯೋ ಗೊತ್ತಿಲ್ಲ. ಈ ನಡುವೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಯಾರನ್ನು ಹೆಸರಿಸಬೇಕೆಂಬ ಸಂದಿಗ್ಧದಲ್ಲಿ ಬಿಜೆಪಿ ವರಿಷ್ಟ ಮಂಡಳಿ ತಲೆ ಬಿಸಿ ಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

R Ashok and BY vijayendra

ಪಕ್ಷದ ಅಧ್ಯಕ್ಷ ಮತ್ತು ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಕ್ರಮವಾಗಿ ಲಿಂಗಾಯತ, ಒಕ್ಕಲಿಗರನ್ನು ನೇಮಿಸುವ ಮೂಲಕ ಎರಡು ಪ್ರಬಲ ಜಾತಿಗಳನ್ನು ಒಲಿಸಿಕೊಳ್ಳುವ ಯತ್ನದಲ್ಲಿ ತಾನು ಯಶಸ್ವಿಯಾಗಿದ್ದೇನೆಂಬ ಭ್ರಮಾಲೋಕದಲ್ಲಿ ಬಿಜೆಪಿ ವರಿಷ್ಟ ಮಂಡಳಿ ಇರುವಂತಿದೆ. ಅದೇ ಭ್ರಮೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಆಯ್ಕೆಯನ್ನು ಕಗ್ಗಂಟು ಮಾಡಿದೆ. 75 ಸ್ಥಾನ ಬಲದ ವಿಧಾನ ಪರಿಷತ್‍ನಲ್ಲಿ ಪ್ರಸ್ತುತ ಬಿಜೆಪಿ-34; ಕಾಂಗ್ರೆಸ್ಸು-29; ಜೆಡಿಎಸ್-8; ಪಕ್ಷೇತರ-1 ಸ್ಥಾನದಲ್ಲಿವೆ. ಎರಡು ಸ್ಥಾನ ತೆರವಾಗಿದ್ದು ಸಭಾಪತಿಯ ಒಂದು ಸ್ಥಾನ ಈ ಲೆಕ್ಕದಲ್ಲಿದೆ. ವಿಧಾನ ಸಭೆಯಲ್ಲಿ 135ಕ್ಕಿಂತ ಹೆಚ್ಚಿನ ಬಲ ಹೊಂದಿರುವ ಸರ್ಕಾರದ ಮಸೂದೆಗಳ ಮಂಜೂರಾತಿಗೆ ಪ್ರಬಲ ಸವಾಲು ಪರಿಷತ್‍ನಲ್ಲಿ ಎದುರಾಗಲಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕಾರಣವಾಗಿ ವಿರೋಧ ಪಕ್ಷದ ಬಲ 42ಕ್ಕೆ ಏರಿದೆ. ಅಂದರೆ ಸದನ ಸಾಮರ್ಥ್ಯದ ಶೇಕಡಾ ಐವತ್ತಕ್ಕಿಂತ ಹೆಚ್ಚಿನ ಶಾಸಕರು ವಿರೋಧ ಪಕ್ಷದಲ್ಲಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪಾಲಿಗೆ ಬಿಸಿತುಪ್ಪವಾಗಿದೆ. ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯತು, ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ಇತ್ಯಾದಿಯನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಬಹುಮತ ಪಡೆಯುವರೆಗೂ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ವಿರೋಧ ಪಕ್ಷವಾಗಿ ಬಿಜೆಪಿ-ಜೆಡಿಎಸ್ ಕೆಲಸ ಮಾಡಬೇಕಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂತರಾಜು ವರದಿ ಹೆಸರಿನಲ್ಲಿ ಜನತೆಯ ಕಣ್ಣಿಗೆ ಮಣ್ಣು

ಈ ಸವಾಲನ್ನು ಮೈಮೇಲೆ ಎಳೆದುಕೊಂಡು ಸರ್ಕಾರಕ್ಕೆ ಛಳಿ ಬಿಡಿಸುವ ಕೆಲಸ ಮಾಡಬೇಕಿರುವ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಈ ಕ್ಷಣದವರೆಗೂ ಬಿಜೆಪಿ ಹೈಕಮಾಂಡ್ ಭರ್ತಿ ಮಾಡಿಲ್ಲ. ಸೋಮವಾರ ಶಾಸನ ಸಭೆ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಲಿದೆ. ಪ್ರತಿಷ್ಟಿತ ಹುದ್ದೆ ಯಾರದಾಗಬಹುದು ಎಂಬ ಚರ್ಚೆ ಜೋರಾಗಿದೆ. 2018ರ ಚುನಾವಣೆ ಬಳಿಕ ಕೋಟ ಶ್ರೀನಿವಾಸ ಪೂಜಾರಿಯವರು ವಿರೋಧ ಪಕ್ಷದ ನಾಯಕರಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿ ಬಿಜೆಪಿ ಅದಿಕಾರಕ್ಕೆ ಬಂದಾಗ ಪೂಜಾರಿ ಸಚಿವರಾಗಿ ಸಭಾ ನಾಯಕರೂ ಆದರು. ಅವರ ಕಾರ್ಯತತ್ಪರತೆಯಲ್ಲಿ ಯಾವುದೇ ಊನ ಕಂಡಿಲ್ಲ. ಆದರೆ ಅವರೂ ಕೂಡಾ ದಕ್ಷಿಣ ಕರ್ನಾಟಕದವರೇ ಆಗಿರುವ ಕಾರಣ ಕಗ್ಗಂಟು ಉದ್ಭವಿಸಿದೆ. ಚಲವಾದಿ ನಾರಾಯಣ ಸ್ವಾಮಿ ಪ್ರಸ್ತುತದ ಬಿಜೆಪಿಯಲ್ಲಿ ಎದ್ದು ಕಾಣಿಸುತ್ತಿರುವ ದಲಿತ ಮುಖ. ಆದರೆ ಅವರು ಶಾಸಕರಾಗಿ ಒಂದೆರಡು ವರ್ಷವೂ ಕಳೆದಿಲ್ಲ ಎನ್ನುವುದರ ಜೊತೆಗೆ ಅವರೂ ಕೂಡಾ ದಕ್ಷಿಣ ಕರ್ನಾಟಕದವರೇ ಆಗಿದ್ದಾರೆ. ಇದು ಮತ್ತೊಂದು ಕಗ್ಗಂಟು. ರವಿಕುಮಾರ್ ಸಂಘ ಪರಿವಾರಕ್ಕೆ ಬಹಳ ಹತ್ತಿರವಾಗಿರುವವರು. ಅವರ ಅರ್ಹತೆಯನ್ನು ಕುಗ್ಗಿಸಿರುವುದು ಅವರು ಕೂಡಾ ದಕ್ಷಿಣ ಕರ್ನಾಟಕ ಭಾಗದವರೆಂಬುದು. ಇದು ಮತ್ತೊಂದು ಕಗ್ಗಂಟು. ಪೂರ್ವಾಶ್ರಮದ ಪಕ್ಷ ಕಾಂಗ್ರೆಸ್‍ನಲ್ಲಿದ್ದು ಎಚ್.ಡಿ. ದೇವೇಗೌಡರನ್ನು ಸೋಲಿಸಿ ಲೋಕಸಭೆಗೂ ಆಯ್ಕೆಯಾಗಿದ್ದ ತೇಜಸ್ವಿನಿ ಗೌಡರಿಗೆ ಅನುಭವದ ಕೊರತೆ ಇಲ್ಲ. ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ನಿಂತು ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡುವ ಛಾತಿ ಛಲ ಸಾಮರ್ಥ್ಯ ಅವರಲ್ಲಿದೆ. ಆದರೆ ದಕ್ಷಿಣ ಕರ್ನಾಟಕದವರಾಗುತ್ತಾರೆ. ವಿಧಾನ ಸಭೆಯಲ್ಲಿ ಒಕ್ಕಲಿಗ ಅಶೋಕರನ್ನು ವಿರೋಧ ಪಕ್ಷದ ನಾಯಕರನ್ನಾಗಿಸಿರುವ ಪಕ್ಷ ಪರಿಷತ್‍ನಲ್ಲಿ ಅದೇ ಸ್ಥಾನವನ್ನು ಮತ್ತೊಬ್ಬ ಒಕ್ಕಲಿಗ ನಾಯಕಿಗೆ ಕೊಡುವುದು ಕಷ್ಟದ ಬಾಬತು. ಇದು ಮತ್ತೊಂದು ಕಗ್ಗಂಟು. ವಿಧಾನ ಪರಿಷತ್ ಇತಿಹಾಸದಲ್ಲಿ ಮಹಿಳಾ ಶಾಸಕರೊಬ್ಬರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಏರಿದ್ದಿಲ್ಲ. ಆ ಗೌರವದ ಅಗ್ಗಳಿಕೆಯನ್ನು ಅವಕಾಶವಿದ್ದರೂ ಬಳಸಿಕೊಳ್ಳಲಾಗದ ಅಸಹಾಯಕತೆ ಪಕ್ಷದ ವರಿಷ್ಟರದು.

sunil kumar karkala and ashwathnarayan

ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗದ ಶಾಸಕರೊಬ್ಬರನ್ನು ಆಯ್ಕೆ ಮಾಡದಿದ್ದರೆ ಆ ಭಾಗದ ಬಿಜೆಪಿ ಕಾರ್ಯಕರ್ತ ಮುಖಂಡರ ಕೋಪವನ್ನು ತಣಿಸುವುದು ಕಷ್ಟ. ಅರವಿಂದ ಬೆಲ್ಲದ್, ಬಸವನಗೌಡ ಯತ್ನಾಳ್ ಮುಂತಾದ ಉತ್ತರ ಕರ್ನಾಟಕದ ನಾಯಕರು ಬಂಡಾಯದ ಬಾವುಟ ಹಿಡಿದು ನಿಂತಿರುವಾಗ ಮತ್ತೊಂದು ಚಪ್ಪಡಿ ಎಳೆದುಕೊಳ್ಳುವ ಕೆಲಸವನ್ನು ವರಿಷ್ಟ ಮಂಡಳಿ ಮಾಡಲಿಕ್ಕಿಲ್ಲ ಎಂಬ ಆಸೆ ಆ ಪಕ್ಷದ ಒಳಗಿದೆ. ಕಲಬುರ್ಗಿಯ ಶಶೀಲ್ ನಮೋಶಿಯವರ ಹೆಸರು ಒಂದು ವಲಯದಲ್ಲಿ ಓಡುತ್ತಿದೆ. ಆದರೆ ಅವರು ಲಿಂಗಾಯತ ಸಮುದಾಯದ ನಾಯಕರು. ಪಕ್ಷ ಅಳೆದೂ ತೂಗಿ ಬೀದರ್‌ನ ರಘುನಾಥ ರಾವ್ ಮಲ್ಕಾಪುರೆಯವರಿಗೆ ಕಿರೀಟ ತೊಡಿಸಬಹುದೇ…? ಗೊತ್ತಿಲ್ಲ. ಮಲ್ಕಾಪುರೆಯವರು ಲಿಂಗಾಯತರೂ ಅಲ್ಲದ ಒಕ್ಕಲಿಗರೂ ಅಲ್ಲದ ಕುರುಬ ಸಮುದಾಯದ ಮುಖಂಡರು. ಅವರನ್ನು ಆಯ್ಕೆ ಮಾಡಿದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಎದುರು ಹಾಕಿಕೊಳ್ಳುವ ಸಂದರ್ಭ ಅವರಿಗೆ ಬರುತ್ತದೆ. ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವುದು ಅಷ್ಟೆಲ್ಲ ಸುಲಭವಲ್ಲ ಎನ್ನುವುದು ಬಿಜೆಪಿ ವರಿಷ್ಟರು ಅರ್ಥ ಮಾಡಿಕೊಂಡಿದ್ದಾರೆನ್ನಲು ಸಾಂದರ್ಭಿಕ ಸಾಕ್ಷ್ಯಗಳಿವೆ. ಏನೇ ಮಾಡಿದರೂ ಅದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಕಾಣಿಸಿಕೊಳ್ಳಲಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಸ್ಥಳೀಯ ಕಮಾಂಡ್‌ಗೆ ಬಾಗಿದ ಬಿಜೆಪಿ ಹೈಕಮಾಂಡ್‌

Continue Reading

ಅಂಕಣ

Raja Marga Column: ಇವರು ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ; 511 ಪುಸ್ತಕ, 19 ಮಹಾಕಾವ್ಯ!

Raja Marga Column: ಅವರೊಬ್ಬ ಆಯುರ್ವೇದಿಕ್‌ ಡಾಕ್ಟರ್‌. ಅವರು ಬರೆದಿದ್ದು 511 ಪುಸ್ತಕ, 19 ಮಹಾಕಾವ್ಯ ಬರೆದಿದ್ದಾರೆ. ಅವರು ಇಷ್ಟೊಂದು ಹೇಗೆ ಬರೆದರು ಎಂಬ ಕುತೂಹಲವೇ? ಇಲ್ಲಿದೆ ಪೂರ್ಣ ವಿವರ.

VISTARANEWS.COM


on

Dr Pradeep Kumar Hebri Raja Marga Column
Koo
RAJAMARGA Rajendra Bhat

ಕನ್ನಡದ ಒಬ್ಬ ಲೇಖಕ -511 ಪುಸ್ತಕಗಳು -19 ಮಹಾಕಾವ್ಯಗಳನ್ನು ಬರೆದಿದ್ದಾರೆ (He written 511 Books, 19 Mahakavyas!) ಎಂದರೆ ನಂಬತ್ತೀರಾ? ನಾನು ಖಂಡಿತವಾಗಿಯೂ ಹೇಳಬಲ್ಲೆ. ಇಷ್ಟೊಂದು ವಿಸ್ತಾರವಾಗಿ ಭಾರತದ ಯಾವ ಲೇಖಕನೂ ಬರೆದ ನಿದರ್ಶನ ಇಲ್ಲ! ಜಾಗತಿಕವಾಗಿ, ನನಗೆ ಗೊತ್ತಿಲ್ಲ. ಅವರೇ ಈಗ ಮಂಡ್ಯದಲ್ಲಿ ಇರುವ ಡಾ. ಪ್ರದೀಪ್ ಕುಮಾರ್ ಹೆಬ್ರಿ (Dr. Pradeep Kumar Hebri). ಹೌದು, ಮೂಲತಃ ಕಾರ್ಕಳದ ಹೆಬ್ರಿಯ (ಈಗ ಅದು ಪ್ರತ್ಯೇಕ ತಾಲೂಕು ಆಗಿದೆ) ಒಬ್ಬ ಆಯುರ್ವೇದ ವೈದ್ಯರು (Arurvedic Doctor) ಕಳೆದ 36 ವರ್ಷಗಳಲ್ಲಿ ಬರೆದು ಮುಗಿಸಿದ್ದು ಬರೋಬ್ಬರಿ 511 ಪುಸ್ತಕಗಳನ್ನು! ಅದರಲ್ಲಿಯೂ ಅವರ ಆಸಕ್ತಿಯ ಹರವು ತುಂಬಾ ವಿಸ್ತಾರ ಆದದ್ದು. ಕವನ ಸಂಕಲನ, ಶಿಶು ಸಾಹಿತ್ಯ, ಆರೋಗ್ಯ, ಲಲಿತ ಪ್ರಬಂಧ, ವಚನ ಸಾಹಿತ್ಯ, ವಿಜ್ಞಾನ, ಅಂಕಣ, ಸಣ್ಣ ಕತೆಗಳು, ಕಾದಂಬರಿಗಳು, ಧಾರ್ಮಿಕ, ಆಧ್ಯಾತ್ಮ, ಜೀವನ ಚರಿತ್ರೆ, ಪ್ರವಾಸ ಕಥನ, ವ್ಯಕ್ತಿತ್ವ ವಿಕಸನ ಹೀಗೆ ಈ ಪಟ್ಟಿ ಮುಗಿಯುವುದೇ ಇಲ್ಲ! ಅವರು ಬರೆದ ಎಲ್ಲ ಪುಸ್ತಕಗಳು ಕೂಡ ಪ್ರಿಂಟ್ ಆಗಿ ಪಬ್ಲಿಷ್ ಆಗಿವೆ ಮತ್ತು ಓದುಗರ ಮಡಿಲು ಸೇರಿವೆ ಎಂದರೆ ಅದು ಅದ್ಭುತ (Raja Marga Column)!

1989ರಿಂದಲೂ ನಿರಂತರ ಅವರು ಬರೆಯುತ್ತಲೇ ಇದ್ದಾರೆ!

ಕಾರ್ಕಳ ತಾಲೂಕಿನ ಹೆಬ್ರಿಯಲ್ಲಿ (ಈಗ ಪ್ರತ್ಯೇಕ ತಾಲೂಕು ಆಗಿದೆ) ಜನಿಸಿದ ಪ್ರದೀಪ್ ಕುಮಾರ್ ಅವರು ಹೆಚ್ಚು ಓದಿದ್ದು ಸರಕಾರಿ ಶಾಲೆಗಳಲ್ಲಿ. ಆಯುರ್ವೇದ ಪದವಿ ಪಡೆದದ್ದು ಉದ್ಯಾವರದ ಎಸ್‌ಡಿಎಂ ಆಯುರ್ವೇದಿಕ್ ಕಾಲೇಜಿನಲ್ಲಿ. ಮುಂದೆ ಅವರು ಮಂಡ್ಯ ಜಿಲ್ಲೆಯನ್ನು ತನ್ನ ಕರ್ಮಭೂಮಿ ಮಾಡಿಕೊಂಡರು. ಆಯುರ್ವೇದ ಪ್ರಾಕ್ಟೀಸ್ ಮಾಡುತ್ತ ಬಿಡುವಿನ ಸಮಯದಲ್ಲಿ ಸಾಹಿತ್ಯ ಅಧ್ಯಯನ ಮಾಡುತ್ತ ಬರೆಯಲು ಆರಂಭ ಮಾಡಿದರು.

1989ರಲ್ಲಿ ಪ್ರಕಟ ಆದ ‘ಈ ಬಾಳ ಪಯಣ’ ಅವರ ಮೊದಲ ಪುಸ್ತಕ. ಮುಂದೆ ಬರೆಯುವ ಆಸಕ್ತಿ ಹೆಚ್ಚಾಯಿತು. ಅದಕ್ಕಾಗಿ ತನ್ನ ವೈದ್ಯಕೀಯ ಪ್ರಾಕ್ಟೀಸ್ ಸೀಮಿತ ಮಾಡಿದರು. ಮುಂದೆ ಅವರು ನಿರಂತರವಾಗಿ ಓದಿದರು, ದಣಿವು ಅರಿಯದೇ ಬರೆದರು. ವರ್ಷಕ್ಕೆ ಸರಾಸರಿ 18-20 ಪುಸ್ತಕಗಳನ್ನು ಬರೆದರು! ಅದರ ಜೊತೆಗೆ ವರ್ಷಕ್ಕೆ ಸರಾಸರಿ 100 ಬೇರೆಯವರ ಪುಸ್ತಕಗಳನ್ನು ಪೂರ್ಣವಾಗಿ ಓದಿ ಮುನ್ನುಡಿ ಬರೆದುಕೊಟ್ಟಿದ್ದಾರೆ. ಪುಸ್ತಕಗಳ ಪರಿಚಯಗಳನ್ನು ಪತ್ರಿಕೆಗೆ ಬರೆದು ಎಳೆಯರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಕರ್ನಾಟಕದ ಯಾವ ಸ್ಟಾರ್ ಲೇಖಕನೂ ಕೂಡ ನೂರಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದ ಉದಾಹರಣೆ ದೊರೆಯುವುದಿಲ್ಲ! ಅಂತಹದ್ದರಲ್ಲಿ ನಮ್ಮ ಹೆಬ್ರಿಯ ಪ್ರದೀಪ್ ಕುಮಾರ್ ಅವರು 511 ಪುಸ್ತಕಗಳನ್ನು ಬರೆದು ಪಬ್ಲಿಷ್ ಮಾಡಿದರು ಅಂದರೆ ಅದು ಖಂಡಿತವಾಗಿ ವಿಸ್ಮಯ ಎಂದೇ ಹೇಳಬಹುದು. ಅದನ್ನು ಡಾಕ್ಟರ್ ಪ್ರದೀಪ್ ಕುಮಾರ್ ಹೆಬ್ರಿ ಸಾಧ್ಯ ಮಾಡಿ ತೋರಿಸಿದ್ದಾರೆ. ಇದು ಖಂಡಿತವಾಗಿ ಜಾಗತಿಕ ದಾಖಲೆ!

19 ಮಹಾಕಾವ್ಯಗಳನ್ನು ಅವರು ಬರೆದಿದ್ದಾರೆ!

ಅವರ ಇತರ 500 ಪುಸ್ತಕಗಳ ತೂಕ ಒಂದೆಡೆ ಆದರೆ ಅವರು ಬರೆದ 19 ಮಹಾಕಾವ್ಯಗಳದ್ದು ಇನ್ನೊಂದು ತೂಕ! ಇಷ್ಟೊಂದು ಕಾವ್ಯಗಳನ್ನು ಬರೆದವರು ಭಾರತದಲ್ಲಿ ಖಂಡಿತವಾಗಿ ಇಲ್ಲ! ಅದೊಂದು ತಪಸ್ಸು. ಅದರಲ್ಲಿಯೂ ಅವರು ಬರೆದ ‘ಯುಗಾವತಾರಿ’ ಮಹಾಕಾವ್ಯ ಆರು ಸಂಪುಟಗಳಲ್ಲಿ ಹೊರಬಂದಿದ್ದು 6000 ಪುಟಗಳನ್ನು ಹೊಂದಿದೆ! ಇದು ಜಗತ್ತಿನ ಅತೀ ದೊಡ್ಡದಾದ ಮಹಾ ಕಾವ್ಯ ಅನ್ನುವುದು ಕನ್ನಡದ ಹೆಮ್ಮೆ.

ಇಡೀ ಮಹಾಭಾರತವನ್ನು ‘ಜಯ ಭಾರತ’ ಎಂಬ ಶೀರ್ಷಿಕೆಯಲ್ಲಿ ಅವರು ಕಾವ್ಯಕ್ಕೆ ಇಳಿಸಿದ್ದು ಅದರ ಪುಟಗಳ ಸಂಖ್ಯೆಯೇ 1800! ಅದೂ ನಾಲ್ಕು ಸಂಪುಟಗಳನ್ನು ಹೊಂದಿದೆ. ಮಧ್ವಾಚಾರ್ಯರ ಬಗ್ಗೆ ಬರೆದ ಪೂರ್ಣಪ್ರಜ್ಞ, ಅಕ್ಕ ನಾಗಲಾಂಬಿಕೆ ಬಗ್ಗೆ ಬರೆದ ಶರಣ ಮಾತೆ, ಮಂತ್ರಾಲಯದ ರಾಘವೇಂದ್ರ ಸ್ವಾಮಿ ಬಗ್ಗೆ ಬರೆದ ಕಲ್ಪತರು, ಅಕ್ಕ ಮಹಾದೇವಿಯ ಬಗ್ಗೆ ಬರೆದ ಉಡುತಡಿಯ ಕಿಡಿ, ಪ್ರಭು ರಾಮಚಂದ್ರರ ಬಗ್ಗೆ ಬರೆದ ರಘು ಕುಲೋತ್ತಮ, ರಾಮಾನುಜರ ಬಗ್ಗೆ ಬರೆದ ದಿಗ್ವಿಚೇತ, ಡಾಕ್ಟರ್ ಬಾಲಗಂಗಾಧರನಾಥ ಸ್ವಾಮೀಜಿ ಬಗ್ಗೆ ಬರೆದ ದಿವ್ಯ ದಿನಕರ, ಕಾವೇರಿ ಹೋರಾಟಗಾರ ಮಾದೇಗೌಡ ಬಗ್ಗೆ ಬರೆದ ಕಾವೇರಿ ಪುತ್ರ ಇವೆಲ್ಲವೂ ಜನಪ್ರಿಯ ಆಗಿವೆ. ಅವರ ಇಪ್ಪತ್ತನೇ ಮಹಾಕಾವ್ಯ ಸುತ್ತೂರು ಸ್ವಾಮಿಗಳ ಬಗ್ಗೆ ಬರೆದ ‘ರಾಜಗುರು ತಿಲಕ’ ಮುಂದಿನ ತಿಂಗಳು ಲೋಕಾರ್ಪಣೆ ಆಗಲಿದೆ.

Dr Pradeep Kumar Hebri Raja Marga Column Raja Guru tilaka

ಕನ್ನಡದ ಆದಿಕವಿಗಳು ಬರೆದ ಭಾಮಿನಿ ಮೊದಲಾದ ಸಿದ್ಧ ಷಟ್ಪದಿಗಳ ಜೊತೆಗೆ ಮಹಾಭಾಮಿನಿ, ಶ್ರೀ ಗುರು, ಪದವರ್ಧಿನಿ ಮೊದಲಾದ ಷಟ್ಪದಿಗಳ ಆವಿಷ್ಕಾರ ಮಾಡಿ ಬೆಳೆಸಿದ ಕೀರ್ತಿಯೂ ಅವರಿಗೆ ಸಿಗಬೇಕು.

‘ಬರವಣಿಗೆಯ ವೈಭವ’ ಅವರು

ಇಷ್ಟೊಂದು ಹೇಗೆ ಬರೆಯಲು ಸಾಧ್ಯವಾಯಿತು? ಎಂದವರನ್ನು ಕೇಳಿದಾಗ ಅವರು ಹೇಳಿದ ಮಾತು ತುಂಬಾನೆ ಇಷ್ಟ ಆಯಿತು.

“ಬರವಣಿಗೆ ಒಂದು ತಪಸ್ಸು. ನಾನು ಕಳೆದ 36 ವರ್ಷಗಳಿಂದ ನಿರಂತರ ಬರೆಯುತ್ತಿದ್ದೇನೆ. ಹಗಲು ನನಗೆ ಉಪನ್ಯಾಸಗಳು, ಪ್ರಯಾಣ, ಹೊಟ್ಟೆಪಾಡು ಇರುತ್ತವೆ. ನಾನು ರಾತ್ರಿ ಏಳೂವರೆ ಘಂಟೆಗೆ ಬರೆಯಲು ಆರಂಭ ಮಾಡಿದರೆ ಮುಗಿಸುವುದು ರಾತ್ರಿ ಮೂರೂವರೆ ಘಂಟೆಗೆ! ನಾನು ಬರೇ ಪೆನ್ನು, ಪುಸ್ತಕ ಹಿಡಿದು ಬರೆಯುವವನು. ಆಧುನಿಕ ತಂತ್ರಜ್ಞಾನ ನನಗೆ ಒಗ್ಗುವುದಿಲ್ಲ. ಮುನ್ನುಡಿಗಳನ್ನು ಬರೆಯಲು ವರ್ಷಕ್ಕೆ ನೂರಾರು ಪುಸ್ತಕಗಳು ಬರುತ್ತವೆ. ಅವುಗಳನ್ನು ಪೂರ್ತಿಯಾಗಿ ಓದಬೇಕು. ನಿರಂತರ ಓದುವಿಕೆ, ಆಸಕ್ತಿ ಮತ್ತು ಅಧ್ಯಯನ ಇವುಗಳಿಂದ ನನಗೆ ಬರೆಯಲು ಸಾಧ್ಯವಾಗುತ್ತದೆ. ನನ್ನ ಪುಸ್ತಕಗಳ ಬಗ್ಗೆ ಎಂಟು ಜನ ಲೇಖಕರು ಬರೆದು ಪಿ.ಎಚ್.ಡಿ ಪೂರ್ತಿ ಮಾಡಿದ್ದಾರೆ! 22 ಮಂದಿ ನನ್ನ ಬಗ್ಗೆ, ನನ್ನ ಕೃತಿಗಳ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಮಂಡ್ಯದ ಜನತೆ ತುಂಬಾ ಪ್ರೀತಿಯಿಂದ ‘ರಾಜ ದೀಪ’ ಮತ್ತು ‘ಕಾವ್ಯ ತಪಸ್ವೀ ‘ಎಂಬ ಎರಡು ಬೃಹತ್ ಅಭಿನಂದನಾ ಗ್ರಂಥಗಳನ್ನು ಸಮರ್ಪಣೆ ಮಾಡಿ ನನ್ನನ್ನು ಸನ್ಮಾನ ಮಾಡಿದ್ದಾರೆ. ಜನರು ಪ್ರೀತಿಯಿಂದ ಉಪನ್ಯಾಸಕ್ಕೆ, ಗಮಕ ವಾಚನ, ವ್ಯಾಖ್ಯಾನಕ್ಕೆ ಕರೆಯುತ್ತಾರೆ. ಅದಕ್ಕೂ ಸಮಯ ಕೊಡಬೇಕು. ಆದರೆ ಬರವಣಿಗೆ, ಅದರಲ್ಲಿಯೂ ಕಾವ್ಯರಚನೆ ನನ್ನ ಆದ್ಯತೆ. ಅದು ನಿಲ್ಲಬಾರದು. ನನ್ನ ಕೊನೆಯ ಉಸಿರಿನತನಕವೂ ಬರೆಯುತ್ತ ಇರಬೇಕು ಎಂದು ನನ್ನ ಆಸೆ ಇದೆ” ಎನ್ನುತ್ತಾರೆ.

Dr Pradeep Kumar Hebri Raja Marga

ಅವರಿಗೆ ಸಿಕ್ಕಿದ ಸನ್ಮಾನ, ಪ್ರಶಸ್ತಿಗಳ ಬಗ್ಗೆ ಒಂದು ಬೃಹತ್ ಪುಸ್ತಕವನ್ನೇ ಬರೆಯಬಹುದು! ಅವರ ಕೃತಿಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಹತ್ತಾರು ಪ್ರಶಸ್ತಿಗಳು ಲಭಿಸಿವೆ. ಅವರ ಇಬ್ಬರು ಅಭಿಮಾನಿಗಳು ‘ಆರವತ್ತಾರಕ್ಕಾರತಿ’ ಮತ್ತು ‘ಹೆಬ್ರಿ ಸವಿನುಡಿ’ ಎಂಬ ಪುಸ್ತಕಗಳನ್ನು ಅವರ ಬಗ್ಗೆ ಬರೆದು ಗುರುವಂದನೆ ಮಾಡಿದ್ದಾರೆ. ಅವರ ಲೇಖನ ಮತ್ತು ಕವಿತೆಗಳು ಹಲವಾರು ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆದಿವೆ. ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಅವರ ಅಂಕಣಗಳು, ಲೇಖನಗಳು ಬಂದಿವೆ. ಏಳು ತಾಲೂಕು ಮತ್ತು ಒಂದು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆಯ ಪಟ್ಟವು ಅವರಿಗೆ ದೊರೆತಿವೆ. ಶರಣ ಸಾಹಿತ್ಯದ ಬಗ್ಗೆ ಅವರು ಬರೆದಷ್ಟು ಮತ್ತು ಭಾಷಣ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ ಅನ್ನುವುದು ಕನ್ನಡದ ಹೆಮ್ಮೆ. ಅದರ ಜೊತೆಗೆ ಅಧ್ಯಯನ ಮಾಡಿ ಕಾನೂನು ಪದವಿ, ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ ಫಿಲ್ ಪೂರ್ತಿ ಮಾಡಿದ್ದಾರೆ. ಕರ್ನಾಟಕ ಸಂಗೀತ, ತಬಲಾ, ನಾಟಕ, ಯಕ್ಷಗಾನ ಕೂಡ ಕಲಿತಿದ್ದಾರೆ. ಅವರ ಧರ್ಮಪತ್ನಿ ಶ್ರೀಮತಿ ಎಂ ಎನ್ ರಾಜಲಕ್ಷ್ಮಿ ಅವರ ಬೆಂಬಲವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಇದನ್ನೂ ಓದಿ: Raja Marga Column : ಯೋಧರ ಕುಟುಂಬದ ವೀರಗಾಥೆಗಳು; ‌ಬೇಕಿರುವುದು ಸಾಂತ್ವನ ಅಲ್ಲ, ಸೆಲ್ಯೂಟ್!

ಭರತವಾಕ್ಯ

ಡಾಕ್ಟರ್ ಪ್ರದೀಪ್ ಕುಮಾರ್ ಹೆಬ್ರಿ ಅವರು ಕನ್ನಡದ ಮುಕುಟಮಣಿ ಅನ್ನೋದೇ ಭರತವಾಕ್ಯ. ಅವರು ಈ ರವಿವಾರ ಕಾರ್ಕಳದ ಶ್ರೇಷ್ಟ ‘ಜ್ಞಾನ ಸುಧಾ’ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಕಾರ್ಕಳ ತಾ.ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಶಿಖರೋಪನ್ಯಾಸ ಮಾಡಲಿದ್ದಾರೆ ಅನ್ನುವುದು ನಮ್ಮೆಲ್ಲರ ಭಾಗ್ಯ. ಆರವತ್ತಾರರ ಅವರಿಗೆ ಶುಭವಾಗಲಿ.

Continue Reading
Advertisement
Dina Bhavihsya
ಪ್ರಮುಖ ಸುದ್ದಿ21 mins ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Sphoorti Salu
ಸುವಚನ51 mins ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Assembly Election Results 2023
Live News6 hours ago

Election Results 2023 Live: 4 ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ; ಇಲ್ಲಿದೆ ಕ್ಷಣಕ್ಷಣದ ಅಪ್‌ಡೇಟ್ಸ್

Kapil Sharma And Sunil Grover
ಕಿರುತೆರೆ/ಒಟಿಟಿ6 hours ago

Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ!

women seriously injured
ಕರ್ನಾಟಕ6 hours ago

Kalaburagi News: ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ಮೂವರು ಮಹಿಳೆಯರಿಗೆ ಗಂಭೀರ ಗಾಯ

Bangalore Bulls
ಕ್ರೀಡೆ6 hours ago

Pro Kabaddi : ಗುಜರಾತ್​ ತಂಡಕ್ಕೆ ಸೆಡ್ಡು ಹೊಡೆಯುವುದೇ ಬುಲ್ಸ್​

Heart Attack
ಆರೋಗ್ಯ6 hours ago

Heart Attack: ಹೃದಯಾಘಾತಕ್ಕೆ 6 ತಿಂಗಳಲ್ಲಿ 1,052 ಜನ ಬಲಿ; 80% ಮಂದಿ 11-25 ವರ್ಷದವರೇ!

Pro Kabaddi Day 1
ಕ್ರೀಡೆ6 hours ago

Pro Kabaddi: ಮೊದಲ ದಿನ ಗುಜರಾತ್​, ಮುಂಬಾ ತಂಡಕ್ಕೆ ಗೆಲುವು

States economy
ಕರ್ನಾಟಕ7 hours ago

ರಾಜ್ಯದ ಆರ್ಥಿಕತೆ ವೃದ್ಧಿಸಲು ವಾರ್ಷಿಕ 1.4 ಲಕ್ಷ ಕೋಟಿ ಹೂಡಿಕೆಯ ಗುರಿ ನಿಗದಿ

JP Nadda And BY Vijayendra
ಕರ್ನಾಟಕ7 hours ago

BY Vijayendra: ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ನಡ್ಡಾ ಭೇಟಿಯಾದ ವಿಜಯೇಂದ್ರ; ಏನೇನು ಚರ್ಚೆ?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Dina Bhavihsya
ಪ್ರಮುಖ ಸುದ್ದಿ21 mins ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ13 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ5 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

ಟ್ರೆಂಡಿಂಗ್‌