ವಿಸ್ತಾರ ಅಂಕಣ: ಭಾರತದ ಬಹುತ್ವ ಕಾಪಾಡಲು ಹಿಂದು ರಾಷ್ಟ್ರವಲ್ಲದೆ ಮತ್ಯಾವ ಹಾದಿ?! - Vistara News

ಅಂಕಣ

ವಿಸ್ತಾರ ಅಂಕಣ: ಭಾರತದ ಬಹುತ್ವ ಕಾಪಾಡಲು ಹಿಂದು ರಾಷ್ಟ್ರವಲ್ಲದೆ ಮತ್ಯಾವ ಹಾದಿ?!

ಇಲ್ಲಿ ವೈವಿಧ್ಯತೆ ಇದೆ. ವಿಗ್ರಹಾರಾಧನೆ, ಪುರಾಣ, ನಾಸ್ತಿಕತೆ, ಆಜ್ಞೇಯವಾದ, ಆಧುನಿಕ ವಿಜ್ಞಾನ- ಹೀಗೆ ಎಲ್ಲದಕ್ಕೂ ಹಿಂದೂ ಧರ್ಮದಲ್ಲಿ ಸ್ಥಾನವಿದೆ. ಅದಕ್ಕೇ ಹೇಳುವುದು: ಭಾರತ ಹಿಂದೂ ರಾಷ್ಟ್ರವಾಗಿ ಉಳಿದರಷ್ಟೆ ಬಹುತ್ವ ಉಳಿಯುತ್ತದೆ. ಸ್ವಾಮಿ ವಿವೇಕಾನಂದರ ಈ ಮಾತು ಇಂದು ಅರ್ಥಪೂರ್ಣ.

VISTARANEWS.COM


on

hinduthva
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara Column @ Hariprakash Konemane

ಪ್ರಾಚೀನವಾದ ವಿಚಾರವೊಂದನ್ನು ಈಗ ಚರ್ಚೆ ಮಾಡಲಾಗುತ್ತಿದೆ. ಈ ಪ್ರಾಚೀನ ಎಷ್ಟು ಪ್ರಾಚೀನ ಎಂದರೆ ಅದು ಯಾವಾಗಿನಿಂದ ಆರಂಭವಾಯಿತು ಎನ್ನುವುದೇ ತಿಳಿಯದಷ್ಟು. ಅದೇ ಹಿಂದೂ ಧರ್ಮ. ಹಿಂದೂ ಎಂಬ ಹೆಸರು ಇತ್ತೀಚೆಗೆ, ಆಕ್ರಮಣಕಾರರ ಕಾಲದಲ್ಲಿ ಬಂದಿರಬಹುದು. ಆದರೆ ಅದು ಸನಾತನ ಧರ್ಮದ ಹೆಸರಿನಲ್ಲಿ ಸಾವಿರಾರು ವರ್ಷಗಳಿಂದಲೇ ಅಸ್ತಿತ್ವದಲ್ಲಿದೆ. ಒಟ್ಟಾರೆ ಸನಾತನ ಹಾಗೂ ಹಿಂದೂ ಧರ್ಮ-ಈ ಎರಡರ ಕುರಿತೂ ಚರ್ಚೆಗಳು ನಡೆದಿವೆ.

ಕೆಲ ತಿಂಗಳ ಹಿಂದೆ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು, ಹಿಂದೂ ಎನ್ನುವ ಶಬ್ದಕ್ಕೆ ಅತ್ಯಂತ ತುಚ್ಛ ಅರ್ಥವಿದೆ ಎಂದು ಹೇಳಿದ್ದು ವಿವಾದವಾಗಿತ್ತು. ಇದಕ್ಕೆ ಅನೇಕರು ಸಮರ್ಥನೆಯನ್ನೂ ನೀಡಿದ್ದರು. ಬಹುತೇಕರು ಅದನ್ನು ನಿರ್ಲಕ್ಷಿಸಿದರು. ಚುನಾವಣೆ ಸಂದರ್ಭದಲ್ಲಿ ಇದನ್ನು ಲಂಬಿಸಿದರೆ ನಷ್ಟವೇ ಹೆಚ್ಚು ಎಂದು ಚರ್ಚೆಯನ್ನು ಅಲ್ಲಿಗೆ ನಿಲ್ಲಿಸಲಾಯಿತು. ಹೀಗೆ ಪದೇಪದೆ ಹಿಂದೂ ಧರ್ಮದ ಕುರಿತು ಅಪದ್ಧದ ಮಾತುಗಳು, ಅದನ್ನು ವಿರೋಧಿಸುವುದು, ಬೌದ್ಧಿಕ ದಾಳಿಯಿಡುವುದು, ನಡೆಯುತ್ತಲೇ ಇದೆ. ಹಿಂದೂ ಧರ್ಮ ಆಕ್ರಮಣಕ್ಕೆ ಒಳಗಾಗುತ್ತಲೇ ಇದೆ. ಬಹಳಷ್ಟು ಬಾರಿ ವಿರೋಧ ಹಾಗೂ ಆಕ್ರಮಣಗಳಿಂದ ಅದಕ್ಕೆ ಒಳಿತೂ ಆಗಿದೆ. ಸಮಾಜವಾಗಿ ಒಂದು ಸಂಘಟಿತ ಜೀವನ ನಡೆಸದಿದ್ದರೆ ಉಳಿಗಾಲ ಇಲ್ಲ ಎನ್ನುವುದು ಭಾರತೀಯರಿಗೆ ಅರಿವಿಗೆ ಬರುತ್ತಿರುವುದೇ ಅನೇಕ ಆಕ್ರಮಣಗಳ ನಂತರ ಅಲ್ಲವೇ?

ಮೂರ್ನಾಲ್ಕು ದಿನದ ಹಿಂದೆ ಪಾಣಿಪತ್‌ನಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭಾ ವಾರ್ಷಿಕ ಸಭೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ ಮಾತು ತುಸು ಚರ್ಚೆಯಾಯಿತು. “ಭಾರತ ಹಿಂದೂ ರಾಷ್ಟ್ರವೇ(ನೇಷನ್) ಆಗಿದ್ದು, ಅದನ್ನು ಮತ್ತೆ ಹಿಂದೂ ರಾಷ್ಟ್ರ ಮಾಡುವ ಅಗತ್ಯವಿಲ್ಲ. ರಾಷ್ಟ್ರ ಎನ್ನುವುದು ಸಾಂಸ್ಕೃತಿಕ ಪರಿಕಲ್ಪನೆಯಾಗಿದ್ದು, ಸ್ಟೇಟ್(ಪ್ರಭುತ್ವ) ಎಂಬ ಆಡಳಿತಾತ್ಮಕ ಪರಿಕಲ್ಪನೆಗಿಂತ ಭಿನ್ನʼʼ ಎಂದರು. ಅವರ ಮಾತಿನ ಅರ್ಥ, ಸಂಘಕ್ಕೆ ಬೇಕಿರುವುದು ಹಿಂದೂ ರಾಷ್ಟ್ರವೇ ಹೊರತು, ಹಿಂದೂ ಪ್ರಭುತ್ವವಲ್ಲ. ಇದೇನು ಮೊದಲನೆ ಬಾರಿಗೆ ಆರ್‌ಎಸ್ಎಸ್ ಹೇಳಿದ ಮಾತಲ್ಲ. ಈ ಹಿಂದಿನ ಅನೇಕ ಸರಸಂಘಚಾಲಕರು, ಈಗಿನ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರೂ ಹೇಳಿದ್ದಾರೆ.

RSS savistara column

ಇದೇ ವೇಳೆ ಮೂರು ದಿನದ ಹಿಂದೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೂ ಇಂಥದ್ದೇ ಮಾತನ್ನಾಡಿದರು. ತಿಗಳ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ಇದು ಹಿಂದೂ ರಾಷ್ಟ್ರ ಎಂದರು. ಇಲ್ಲಿ ಹಿಂದೂ ಮುಸ್ಲಿಂ, ಕ್ರೈಸ್ತ ಸೇರಿ ಎಲ್ಲ ಜಾತಿ ಮತದವರೂ ತಂತಮ್ಮ ಆಚರಣೆಗೆ ಅನುಗುಣವಾಗಿ ಜೀವಿಸಲು ಅವಕಾಶವಿದೆ. ಧರ್ಮದ ಮಾರ್ಗದಲ್ಲಿ ಜೀವಿಸಲು ಈ ದೇಶದಲ್ಲಿ ಆದ್ಯತೆ ನೀಡಿಕೊಂಡು ಬಂದಿದ್ದೇವೆ ಎಂದರು.

ಇಬ್ಬರು ಹೇಳಿದ್ದರಲ್ಲೂ ವ್ಯತ್ಯಾಸವಿಲ್ಲ. ಡಿ.ಕೆ. ಶಿವಕುಮಾರ್ ಅವರು, ಇದು ಹಿಂದೂ ರಾಷ್ಟ್ರ ಎನ್ನುತ್ತಲೇ ಇಲ್ಲಿ ಎಲ್ಲರಿಗೂ ಅವರವರ ಸಂಪ್ರದಾಯದಂತೆ ಬದುಕಲು ಅವಕಾಶವಿದೆ ಎಂದರು. ಅಸಲಿಗೆ ಇದೇ ಹಿಂದೂ ಧರ್ಮ. ಹಾಗೂ ಹಿಂದೂ ಧರ್ಮದಲ್ಲಿ ಮಾತ್ರವೇ ಇದು ಸಾಧ್ಯ. ಹಿಂದುವಾಗಿದ್ದುಕೊಂಡೂ ನಾವು ದೇವರನ್ನು ಪೂಜಿಸದೇ ಇರಬಹುದು. ಹಿಂದುವಾಗಿದ್ದುಕೊಂಡೂ ತಿಲಕ ಇಡದೇ, ಹಬ್ಬವನ್ನು ಆಚರಿಸದೇ ಇರಬಹುದು. ಮನೆಯಲ್ಲಿ ಎಲ್ಲರೂ ಗಣೇಶನನ್ನು ಪೂಜಿಸಿದರೆ ಒಬ್ಬ ಮಾತ್ರ ವಿಷ್ಣುವನ್ನೋ, ಶಿವನನ್ನೋ, ದೇವಿಯನ್ನೋ ಪೂಜಿಸಬಹುದು. ಅಷ್ಟೇ ಏಕೆ? ದೇವರೇ ಇಲ್ಲ ಎಂದುಕೊಂಡೂ ತಿರುಗಾಡಬಹುದು. ಹೀಗೆಲ್ಲ ಮಾಡುವುದು ಶ್ರೇಷ್ಠವಲ್ಲ, ಆದರ್ಶವಲ್ಲ ಎಂದು ಹೇಳಲಾಗುತ್ತದೆಯೇ ವಿನಃ, ಹೀಗೆ ಮಾಡಿದ ಕೂಡಲೆ ಅಪರಾಧ ಎಂದು ಜೈಲಿಗೆ ಅಟ್ಟುವುದೋ, ಕೊಂದುಹಾಕುವುದೋ ಇಲ್ಲ. ಹೆಚ್ಚಿಗೆ ವಿವರಣೆ ನೀಡದೆ, ಇಂತಹ ಸ್ವಾತಂತ್ರ್ಯ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ ಎನ್ನುವುದನ್ನು ಹೇಳಬಹುದು.

ವಿಶ್ವದಲ್ಲಿ ಜೀವಂತವಾಗಿ ಉಳಿದಿರುವ ಅತ್ಯಂತ ಪ್ರಾಚೀನವಾದ ಆಚರಣೆ, ನಂಬಿಕೆ ಎಂದರೆ ಹಿಂದೂ ಧರ್ಮ. ನಂತರದಲ್ಲಿ ಚೀನಾದ ತಾವೋಯಿಸಂ ಮಾತ್ರ. ಈಜಿಪ್ಟ್ ಸಂಸ್ಕೃತಿ ಎಂದು ನಾವು ಕೇಳುತ್ತೇವೆ, ಆದರೆ ಇಂದು ಅಲ್ಲಿ ಸಂಸ್ಕೃತಿಯನ್ನು ಆಚರಣೆ ಮಾಡುವವರು ಯಾರೂ ಇಲ್ಲ. ಆಕ್ರಮಣಕಾರರು, ಮತಾಂತರಿಗಳ ದಾಳಿಗೆ ಸಿಕ್ಕಿ ಅವು ನಶಿಸಿಹೋಗಿವೆ. ಆದರೆ ಹಿಂದೂ ಧರ್ಮ ಜೀವಂತವಾಗಿ ಉಳಿದುಕೊಳ್ಳಲು ಇಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ಆಯ್ಕೆಯ ಸ್ವಾತಂತ್ರ್ಯ, ಪ್ರಶ್ನಿಸುವ ವಾತಾವರಣ, ಕಾಲಾನುಕೂಲ ಸ್ಥಿತಿಗಳಿಗೆ ಬದಲಾಗುವ ಗುಣವೆ. ಬದಲಾವಣೆಯೇ ಶಾಶ್ವತ ಎಂಬ ಮಾತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಭಗವದ್ಗೀತೆಯ ಶ್ಲೋಕವೊಂದಿದೆ.

ದೇಹಿನೋ ಅಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ |
ತಥಾ ದೇಹಾಂತರಪ್ರಾಪ್ತಿಃ ಧೀರಃ ತತ್ರ ನಮುಹ್ಯತಿ ||2.13||

ಅಂದರೆ ದೇಹಸ್ಥ ಆತ್ಮವು ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ, ಮುಪ್ಪಿಗೆ ಒಂದೇ ರೀತಿಯಲ್ಲಿ ಸಾಗುವ ರೀತಿಯಲ್ಲೇ ಆತ್ಮವು ಸಾವಿನ ನಂತರ ಮತ್ತೊಂದು ದೇಹಕ್ಕೆ ಸಾಗುತ್ತದೆ. ಧೀರನಾದವನು ಇದರಿಂದ ಗೊಂದಲಕ್ಕೆ ಒಳಗಾಗುವುದಿಲ್ಲ ಎಂದರ್ಥ.

ಇನ್ನು ಈಗಿನ ವಾದಸರಣಿಗೆ ಬರೋಣ. ಹಿಂದೂ ಧರ್ಮ ಎಂಬ ಹೆಸರು ಮೊದಲು ಇರಲಿಲ್ಲ, ನಂತರ ಬಂದಿತು ಹಾಗಾಗಿ ಅದು ಸರಿಯಲ್ಲ ಎನ್ನುವುದು ಕೆಲವರ ವಾದ. ಹುಟ್ಟಿದ ಮಗುವಿಗೆ ಹೆಸರು ಇರುತ್ತದ? ಹುಟ್ಟುವ ಮೊದಲು ಭ್ರೂಣದಲ್ಲಿ ಹೆಸರು ಇರುತ್ತದ? ಹುಟ್ಟಿ ಕೆಲವು ದಿನ, ತಿಂಗಳು, ವರ್ಷದವರೆಗೆ ಹೆಸರು ಇರುತ್ತದ? ನಾಮಕರಣ ಶಾಸ್ತ್ರ ಎನ್ನುವುದೊಂದು ಸಂಸ್ಕಾರದಲ್ಲಿ ಮಗುವಿಗೆ ಹೆಸರನ್ನು ಇಡಲಾಗುತ್ತದೆ. ಅಂದರೆ ಈ ಹೆಸರನ್ನು ಇಡುವುದಕ್ಕೂ ಮೊದಲು ಆ ಮಗು ಬದುಕೇ ಇರಲಿಲ್ಲ ಎಂದರ್ಥವೇ? ಅಲ್ಲಿವರೆಗೆ ಮಗು ಎಂತಲೋ ಎನ್ನಾವುದೋ ಮುದ್ದಾದ ಹೆಸರಿನಿಂದಲೋ ಕರೆಯುತ್ತಿರುತ್ತಾರೆ, ನಾಮಕರಣದ ನಂತರ ಹೊಸ ಹೆಸರಿನಿಂದ ಕರೆಯುತ್ತಾರೆ. ಅಂದ ಮಾತ್ರಕ್ಕೆ ನಾಮಕರಣಕ್ಕೂ ಮುಂಚಿನ ಅಸ್ತಿತ್ವವನ್ನೇ ಪ್ರಶ್ನಿಸಲು ಆಗುವುದಿಲ್ಲ. ಹಾಗೆಯೇ ಹಿಂದೂ ಧರ್ಮವು ಅದಕ್ಕೆ ಹೆಸರು ಪ್ರಾಪ್ತವಾಗುವುದಕ್ಕೆ ಮುಂಚಿನಿಂದಲೂ ಇದೆ.

holi 2023

ಮೇಲೆ ಉಲ್ಲೇಖಿಸಿದ ಭಗವದ್ಗೀತೆಯ ಶ್ಲೋಕದಲ್ಲಿ ಹೇಳಿದಂತೆ, ಬದಲಾವಣೆಗೆ ಹೆದರುವ ಧರ್ಮ ಅಲ್ಲ. ತನ್ನ ಧಾರ್ಮಿಕ ಗ್ರಂಥವೊಂದರಲ್ಲಿ ಹೀಗೆ ಹೇಳಿಬಿಟ್ಟಿದ್ದಾರೆ ಹಾಗಾಗಿ ಅದನ್ನೇ ಮಾಡಬೇಕು ಎಂಬ ಕಡ್ಡಾಯ ಇಲ್ಲವೇ ಇಲ್ಲ. ಎಲ್ಲ ಗ್ರಂಥಗಳನ್ನೂ, ಅದನ್ನು ವ್ಯಾಖ್ಯಾನಿಸಿರುವ ಗ್ರಂಥಗಳನ್ನೂ ನಮ್ಮ ಜ್ಞಾನಕ್ಕಾಗಿ ಬಳಸಿಕೊಳ್ಳಬಹುದು. ಅಂತಿಮವಾಗಿ ಈಗಿನ ಕಾಲಕ್ಕೆ ಯಾವುದು ಸೂಕ್ತವೋ ಅದನ್ನು ಆಚರಿಸುವುದು. ಹಾಗೆಂದು ಈಗಿನ ಕಾಲಕ್ಕೆ ಅನವಶ್ಯಕ ಎನ್ನಿಸಿದ್ದನ್ನು ಬಿಸಾಡುವುದಲ್ಲ, ಅದನ್ನೂ ಜ್ಞಾನ ರೂಪದಲ್ಲಿ ಮುಂದುವರಿಸುವುದು. ಆದರೆ ಆಚರಣೆ ಮಾತ್ರ ಕಾಲಾನುಕೂಲ, ಯುಗಾನುಕೂಲದ್ದು.

ಹಾಗಾದರೆ ಹಿಂದೂ ಧರ್ಮವನ್ನು ಶ್ರೇಷ್ಠ ಹೌದೋ ಅಲ್ಲವೋ ಎಂದು ನಿರ್ಧರಿಸುವ ಅಂಶ ಯಾವುದು? ಅದು ಎಲ್ಲಕ್ಕಿಂತ ಪ್ರಾಚೀನವಾದದ್ದು ಎನ್ನುವುದೆ? ಮೊದಲಿಗೆ ಹುಟ್ಟಿದ ಮಾತ್ರಕ್ಕೆ ಶ್ರೇಷ್ಠ ಎನ್ನಲು ಬರುವುದಿಲ್ಲ. ಇನ್ನೂ ಜೀವಂತವಾಗಿದೆ ಎನ್ನುವುದೇ ಶ್ರೇಷ್ಠೆತೆಗೆ ಮಾನದಂಡವೇ? ಅರ್ಧ ಸತ್ಯ. ಏಕೆಂದರೆ ಅದು ಇಲ್ಲಿವರೆಗೆ ಉಳಿದುಕೊಂಡು ಬಂದಿರುವುದು ಯಾವುದೇ ಆಕ್ರಮಣ, ಮತಾಂತರದಿಂದಲ್ಲ, ಬದಲಿಗೆ ಶುದ್ಧ ಸಾವಯವ ವಿಕಾಸದ ಮೂಲಕ.

ಡಾ. ಅಂಬೇಡ್ಕರರು ಸಂವಿಧಾನದ ಕುರಿತು ಹೇಳುವ ಮಾತು ಹಿಂದೂ ಧರ್ಮಕ್ಕೂ ಅನ್ವಯಿಸಬಹುದು. ಒಂದು ಸಂವಿಧಾನ ತಾನೇತಾನಾಗಿ ಒಳ್ಳೆಯದೋ ಅಥವಾ ಕೆಟ್ಟದೋ ಎಂದು ಹೇಳಲಾಗದು. ಅದು ಒಳ್ಳೆಯದೋ ಅಥವಾ ಕೆಟ್ಟದೋ ಎಂದು ತೀರ್ಮಾನಿಸುವುದು ಅದನ್ನು ಅನುಸರಿಸುವ ಜನರ ಆಧಾರದಲ್ಲಿ. ಆಚರಿಸುವ ಜನರು ಸದಾಚಾರ ಸಂಪನ್ನರಾಗಿದ್ದರೆ ಸಂವಿಧಾನದಿಂದ ಒಳ್ಳೆಯದೇ ಆಗುತ್ತದೆ. ಆಚರಿಸುವವರು ಕೆಡುಕರಾಗಿದ್ದರೆ ಸಂವಿಧಾನದಿಂದ ಕೆಡುಕೇ ಆಗುತ್ತದೆ ಎಂದಿದ್ದರು. ಇದೇ ಮಾತನ್ನು ಧರ್ಮಕ್ಕೆ ಹೋಲಿಸಬಹುದು. “ಒಂದು ಧರ್ಮದ ಶ್ರೇಷ್ಠತೆ, ಕೊರತೆ ಹಾಗೂ ದೌರ್ಬಲ್ಯಗಳನ್ನು ಕುರಿತು ವಿವೇಚನೆ ಮಾಡುವಾಗ ಆ ಧರ್ಮದ ಮೂಲ ಗ್ರಂಥ(ಗಳು) ಮುಖ್ಯವಾಗುತ್ತವೆಯೇ ವಿನಃ ಅದರ ಅನುಯಾಯಿಗಳು ಅಲ್ಲ. ಆ ಧರ್ಮದ ಶ್ರೇಷ್ಠ ತತ್ವಗಳನ್ನು ಅದರ ಅನುಯಾಯಿಗಳು ಪರಿಪಾಲಿಸದಿದ್ದರೆ ಅದು ಸ್ಪಷ್ಟವಾಗಿ ಖಂಡನೀಯ. ಆದರೆ ಅನುಯಾಯಿಗಳ ಅನಾಚಾರವನ್ನು ಆಧಾರಗ್ರಂಥಗಳ ಮೇಲೆ ಹೊರಿಸಬಾರದು. ಹಾಗೊಂದು ವೇಳೆ ಮೂಲ ಧರ್ಮಗ್ರಂಥಗಳಲ್ಲೇ ಅನಾಚಾರದ ಬೋಧನೆ ಇದ್ದರೆ ಅದು ಖಂಡನೀಯ” ಎಂದು ಕನ್ನಡದ ಖ್ಯಾತ ಸಂಶೋಧಕರಾಗಿದ್ದ ಡಾ. ಚಿದಾನಂದ ಮೂರ್ತಿ ಅವರು ಹೇಳಿದ್ದಾರೆ.

ambedkar

ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆ. ಇಲ್ಲಿನ ಶಾಸ್ತ್ರಗ್ರಂಥಗಳಲ್ಲಿ ಅಸ್ಪೃಶ್ಯತೆ ಆಚರಣೆಗೆ ಅವಕಾಶವೇ ಇಲ್ಲ. ಹೀಗೆ ಯಾರಾದರೂ ಹೇಳಿದರೆ ಥಟ್ಟನೆ ಪ್ರಶ್ನೆ ಎದುರಾಗುತ್ತದೆ. ಹಾಗಾದರೆ ಈಗ ಸ್ತ್ರೀ ಶೋಷಣೆ ನಡೆಯುತ್ತಿಲ್ಲವೇ? ಈಗ ದಲಿತರ ಮೇಲೆ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿಲ್ಲವೇ? ಹಿಂದೂ ಧರ್ಮ ಎಂದರೆ ಶೋಷಣೆಯ ಧರ್ಮ ಎನ್ನುತ್ತಾರೆ. ಇಲ್ಲೇ ಆಗುತ್ತಿರುವುದು ಸಮಸ್ಯೆ. ಹಿಂದೂ ಧರ್ಮದ ಕೆಲವು ಅಥವಾ ಹಲವು ಅನುಯಾಯಿಗಳು ಮಾಡುತ್ತಿರುವ ತಪ್ಪುಗಳು ಈ ಸ್ತ್ರೀ ಶೋಷಣೆ, ಅಸ್ಪೃಶ್ಯತೆ ಆಚರಣೆ. ಅದು ಆಚರಣೆ ಮಾಡುತ್ತಿರುವವರ ತಪ್ಪೇ ವಿನಃ ಹಿಂದೂ ಧರ್ಮದ್ದಲ್ಲ. ಮನುಸ್ಮೃತಿಯಲ್ಲೊ ಇನ್ನೊಂದು ಗ್ರಂಥದಲ್ಲೊ ಅಸ್ಪೃಶ್ಯತೆ ಆಚರಣೆ ಹೇಳಿಲ್ಲವೇ? ಎಂಬ ಪ್ರಶ್ನೆ ಬರುತ್ತದೆ. ಇದರ ಬಗ್ಗೆ ಈಗಾಗಲೆ ಚರ್ಚಿಸಿದ್ದೇವೆ. ಧರ್ಮ ಗ್ರಂಥದಲ್ಲಿ ಏನೇ ಇರಲಿ, ಈಗಿನ ಕಾಲಕ್ಕೆ ಅದು ಸಮ್ಮತವಾಗಿದ್ದರೆ ಮಾತ್ರ ಅನುಸರಣೆ. ಇಲ್ಲದಿದ್ದರೆ ಅದು ಯಾವುದೇ ಗ್ರಂಥದಲ್ಲಿರಲಿ, ಯಾರೇ ಮಹಾತ್ಮ ಹೇಳಿರಲಿ ಆಚರಣೆ ಮಾಡದೇ ಇರಲು ಹಿಂದೂ ಧರ್ಮದಲ್ಲಿ ಅವಕಾಶವಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ನರೇಂದ್ರ ಮೋದಿಯವರತ್ತ ಬೆರಳು ತೋರಿಸಿ ಎಷ್ಟು ವಿಚಾರ ಮುಚ್ಚಿಡಲು ಸಾಧ್ಯ?

ದೇಶದ ಖ್ಯಾತ ಪತ್ರಕರ್ತರು, ಕನ್ನಡಿಗರೇ ಆದ ಪದ್ಮಭೂಷಣ ಡಾ. ಎಂ.ವಿ. ಕಾಮತ್ ಅವರು 2004ರ ಜೂನ್ 12ರಂದು ಬೆಂಗಳೂರಿನಲ್ಲಿ ಮಾಸ್ತಿ ಸ್ಮಾರಕ ಉಪನ್ಯಾಸ ನೀಡಿದರು. ಅವರ ವಿಷಯ; “Hindutva Exploration of a Challenge”. ಅವರ ಪ್ರಾರಂಭದ ಮಾತುಗಳು ಹೀಗಿವೆ. “ಹಿಂದುತ್ವ ಎನ್ನುವುದು ಹಿಂದೂ ಧರ್ಮದ ಸಾರ ಸರ್ವಸ್ವ. ಅದು ಎಲ್ಲ ಮತೀಯ ತತ್ತ್ವಗಳನ್ನೂ ಮೀರಿದ ವಿಶ್ವ ಪರಿಕಲ್ಪನೆ. ಆದರೆ ನಮ್ಮ ಬುದ್ಧಿಜೀವಿಗಳು ಅದು ಮತೀಯ ಅಸಹನೆ ಮತ್ತು ಉಗ್ರ ಕೋಮುವಾದದ ಸಂಕೇತವೆಂದು ಭಾವಿಸಿದ್ದಾರೆ. ಭಾರತದ ಹಿಂದುಗಳ ಮೇಲೆ ನಡೆದಿರುವ ಇಸ್ಲಾಂ ದಾಳಿ ಮತ್ತು ಬ್ರಿಟಿಷ್ ಪ್ರಭುತ್ವದಿಂದಾಗಿ ಹಿಂದುಗಳು ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನು ಮತ್ತೆ ಪಡೆಯಲು ಹಿಂದುತ್ವದ ಪರಿಕಲ್ಪನೆ ಅಗತ್ಯ. ಹಿಂದೂ ಧರ್ಮದ ಅಪಾರ್ಥದಿಂದಾಗಿ ಹಿಂದುಗಳು ತಮ್ಮ ಬಗ್ಗೆ ತಾವೇ ಅಸಹ್ಯಪಟ್ಟುಕೊಳ್ಳುವಂತಹ ವಾತಾವರಣ ಸೃಷ್ಟಿಯಿಂದಾಗಿ ಹಿಂದುತ್ವದ ಪರಿಕಲ್ಪನೆ ಮೂಡಿಬಂದಿದೆ. ನಮ್ಮ ಜಾತ್ಯತೀತರಿಗೆ ಹಿಂದುತ್ವ ಎಂಬುದು ಇಸ್ಲಾಂ ಮೂಲಭೂತವಾದದ ಇನ್ನೊಂದು ರೂಪವಾಗಿ ಕಾಣುತ್ತಿದೆ. ಹಿಂದುಗಳನ್ನು ದೂಷಿಸುವುದೇ ಜಾತ್ಯತೀತರ ಕುಲಕಸುಬಾಗಿಬಿಟ್ಟಿದೆ” ಎಂದು ಹೇಳಿದ್ದರು.

M V Kamath

ಸಮಾಧಾನಕರ ವಿಚಾರವೆಂದರೆ ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮನ್ನು ತಾವು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಅದು ರಾಜಕೀಯ ಕಾರಣಗಳಿಗೇ ಇರಲಿ, ಹಿಂದೂ ಶಬ್ದದ ಕುರಿತು ಹಿಂದೆ ಇದ್ದಷ್ಟು ವಿರೋಧ ಈಗ ಇಲ್ಲ. ಬಿಜೆಪಿ ಪಕ್ಷವು ಹಿಂದುತ್ವವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹೇಳುತ್ತಾರೆಯೇ ವಿನಃ ಹಿಂದುತ್ವವೇ ತಪ್ಪು ಎಂದು ಹೇಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.

ಅದೇ ರೀತಿ ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಯೂ ಜನರಿಗೆ ಈಗೀಗ ಮನವರಿಕೆ ಆಗುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಿಂದಾಗಿ, ಡಿಜಿಟಲ್ ಮಾಧ್ಯಮಗಳಿಂದಾಗಿ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ಜನರಿಗೆ ತಿಳಿಯುತ್ತಿದೆ. ಅನ್ಯ ಮತ, ಸಂಪ್ರದಾಯಗಳನ್ನು ಅಪ್ಪಿಕೊಂಡ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹೇಗಿದೆ? ಅಲ್ಲಿನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ, ಹೇಗೆ ಓಡಿಸಲಾಗುತ್ತಿದೆ ಎನ್ನುವುದು ಕಣ್ಣಿಗೆ ಕಾಣುತ್ತಿದೆ. ಭಾರತವು ಹಿಂದೂ ರಾಷ್ಟ್ರವಾಗಿರುವುದರಿಂದಲೇ ಇಲ್ಲಿ ಪರಧರ್ಮ ಸಹಿಷ್ಣುತೆ (Universal Tolerance) ಮಾತ್ರವಲ್ಲ, ಸ್ವಾಮಿ ವಿವೇಕಾನಂದರು ಹೇಳಿದಂತೆ ಪರಧರ್ಮ ಸ್ವೀಕಾರತೆ (Universal Acceptance) ಇದೆ. ಅದಕ್ಕೆ ಮುಖ್ಯ ಕಾರಣವೇ ಹಿಂದೂ ಧರ್ಮ.

ಇದನ್ನೂ ಓದಿ: ವಿಸ್ತಾರ ಅಂಕಣ: ಸರ್ಕಾರಿ ನೌಕರರ ಕುರಿತು ಸಮಾಜದಲ್ಲಿ ಇಷ್ಟೊಂದು ಆಕ್ರೋಶ ಮಡುಗಟ್ಟಿದೆ ಏಕೆ? ಇದಕ್ಕೆ ಪರಿಹಾರವೇನು?

ಹಿಂದೂ ಧರ್ಮ ಎಂದ ಕೂಡಲೆ ನಿಘಂಟನ್ನೋ, ಇತಿಹಾಸದ ಪುಟಗಳನ್ನೋ, ಅದರ ಉಗಮವನ್ನೋ ನೋಡುವುದನ್ನು ಬುದ್ಧಿಜೀವಿಗಳು ಎನ್ನಿಸಿಕೊಂಡವರು ಈಗಲಾದರೂ ಬಿಡಬೇಕು. ಆ ಹಿಂದೂ ಧರ್ಮದ ಗ್ರಂಥಗಳ ಬೋಧನೆ ಏನು? ಅದನ್ನು ಆಚರಿಸುತ್ತಿರುವವರ ಧೋರಣೆಗಳೇನು? ಎನ್ನುವುದರಲ್ಲೇ ಹಿಂದೂ ಧರ್ಮದ ಸಾರ ತಿಳಿಯುತ್ತದೆ. ಭಾರತವು ಹಿಂದೂ ರಾಷ್ಟ್ರವಾಗಿ ಉಳಿಯುವುದರಿಂದ ಮಾತ್ರವೇ ಇಲ್ಲಿರುವ ಬಹುತ್ವ, ವಿವಿಧತೆ, ಸ್ವಾತಂತ್ರ್ಯಗಳು ಉಳಿಯುತ್ತವೆ ಎನ್ನುವುದು ಅಷ್ಟೇ ವಾಸ್ತವ ಸಂಗತಿ.

swami-vivekanda-photo

ಚಿಕಾಗೋದಲ್ಲಿ 1893ರ ಸೆಪ್ಟಂಬರ್ 19ರಂದು ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮ ಕುರಿತು ಆಡಿದ ಮಾತುಗಳು: ಇತಿಹಾಸ ಪೂರ್ವದಿಂದ ಈ ತನಕ ಮೂರು ಧರ್ಮಗಳು ಮಾತ್ರ ಆಚರಣೆಯಲ್ಲಿವೆ. ಅವು- ಹಿಂದೂ ಧರ್ಮ, ಪಾರ್ಸಿ ಧರ್ಮ ಮತ್ತು ಯಹೂದ್ಯ ಧರ್ಮ. ಈ ಮೂರು ಧರ್ಮಗಳು ಅಗಾಧವಾದ ಆಘಾತಗಳನ್ನು ಎದುರಿಸಿಯೂ, ತಮ್ಮ ಅಂತರಂಗದಲ್ಲಿ ಶಕ್ತಿ ಇರುವುದರಿಂದ ಈಗಲೂ ಉಳಿದುಕೊಂಡಿವೆ. ಈ ಪೈಕಿ ಯಹೂದ್ಯ ಧರ್ಮಕ್ಕೆ ತನ್ನಿಂದಲೆ ಹುಟ್ಟಿದ ಕ್ರೈಸ್ತ ಧರ್ಮವನ್ನು ಜೀರ್ಣಿಸಿಕೊಳ್ಳಲು ಆಗಲಿಲ್ಲ. ಅದು ತನ್ನ ತಾಯ್ನೆಲವನ್ನು ಬಿಡಬೇಕಾಗಿ ಬಂತು. ಹಿಂದೊಮ್ಮೆ ಬಹಳ ಪ್ರಾಖ್ಯಾತಿ ಪಡೆದಿದ್ದ ಪಾರ್ಸಿ ಧರ್ಮ ಕುರಿತು ಮಾತನಾಡಲು ಪಾರ್ಸಿಗಳು ಉಳಿದಿದ್ದಾರೆ. ಆದರೆ, ಭರತ ಖಂಡದ ಹಿಂದೂ ಧರ್ಮ ಮಾತ್ರ ಎಲ್ಲವನ್ನೂ ಎದುರಿಸಿ ಬೆಳೆಯುತ್ತಲೇ ಇದೆ. ಏಕೆಂದರೆ, ಇಲ್ಲಿ ವೈವಿಧ್ಯತೆ ಇದೆ. ವಿಗ್ರಹಾರಾಧನೆ, ಪುರಾಣ, ನಾಸ್ತಿಕತೆ, ಆಜ್ಞೇಯವಾದ, ಆಧುನಿಕ ವಿಜ್ಞಾನ- ಹೀಗೆ ಎಲ್ಲದಕ್ಕೂ ಹಿಂದೂ ಧರ್ಮದಲ್ಲಿ ಸ್ಥಾನವಿದೆ. ಅದಕ್ಕೇ ಹೇಳುವುದು: ಭಾರತ ಹಿಂದೂ ರಾಷ್ಟ್ರವಾಗಿ ಉಳಿದರಷ್ಟೆ ಬಹುತ್ವ ಉಳಿಯುತ್ತದೆ !

ಇನ್ನೊಂದು ಮಾತು, ಹಿಂದೂ ಧರ್ಮದಲ್ಲಿರುವ ಎಲ್ಲವೂ ಶ್ರೇಷ್ಠ ಎನ್ನುವ ಭಾವನೆಯನ್ನೂ ಅನೇಕರು ಬಿಡಬೇಕು. ಸುಧಾರಣೆಗೆ ಹಿಂದೂ ಧರ್ಮ ಸದಾ ಮುಕ್ತ, ಹಾಗೆಯೇ ಇರಬೇಕು. ಅದು ಮುಂದುವರಿಯಲಿ. ಯಾವುದೇ ವ್ಯವಸ್ಥೆಯನ್ನು ಸ್ವಲ್ಪವೂ ಬದಲಾಗದಂತೆ, ಇದ್ದಂತೆಯೇ ಇಡುವುದು ಮ್ಯೂಸಿಯಂನಲ್ಲಿ ಮಾತ್ರ. ಮ್ಯೂಸಿಯಂನಲ್ಲಿ ಇತಿಹಾಸ ಸಿಗುತ್ತದೆಯೇ ವಿನಃ ಜೀವ, ಜೀವನ ಸಿಗುವುದಿಲ್ಲ.

ಇದನ್ನೂ ಓದಿ: ವಿಸ್ತಾರ ಅಂಕಣ: ಮಸೂರಿಯಲ್ಲಿ ಕಲಿತ ಪಾಠವನ್ನು ಈ ಅಧಿಕಾರಿಗಳಿಗೆ ಮತ್ತೆ ನೆನಪಿಸುವವರು ಯಾರು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

Pak Afghan Conflict: ಸಡಿಲವಾಯ್ತು ಆಫ್ಘಾನ್‌ನೊಂದಿಗಿನ ಪಾಕ್‌ ಸಖ್ಯ, ತಾಲಿಬಾನಿಗಳಿಗೂ ಈಗ ಭಾರತವೇ ಮುಖ್ಯ!

Pak Afghan Conflict: ಹಸಿವಿನಿಂದ ಕಂಗೆಟ್ಟಿರುವ ಅಫಘಾನಿಸ್ತಾನಕ್ಕೆ ಗೋದಿ ಮತ್ತು ವೈದ್ಯಕೀಯ ವಸ್ತುಗಳ ನೆರವಿತ್ತ ಭಾರತದ ಕಾರ್ಯವನ್ನು ತಾಲಿಬಾನಿಗಳು ಭರಪೂರ ಹೊಗಳುತ್ತಿದ್ದಾರೆ. ಇನ್ನೊಂದೆಡೆ ಪಾಕಿಸ್ತಾನದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಕುರಿತ ಪತ್ರಕರ್ತ ಚೈತನ್ಯ ಹೆಗಡೆ ಅವರ ವಿಶ್ಲೇಷಣೆ ಇಲ್ಲಿದೆ.

VISTARANEWS.COM


on

Pak Afghan Conflict
Koo
ಚೈತನ್ಯ ಹೆಗಡೆ, ಪತ್ರಕರ್ತ

ಆಗಸ್ಟ್ 2021ರ ಮಧ್ಯಭಾಗ: ಭಾರತದ ಮುಖಭಾವ ಗಂಭೀರವಾಗಿತ್ತು. ಪಾಕಿಸ್ತಾನ ಗಹಗಹಿಸಿತ್ತು. ಕಾರಣ, ಅವತ್ತು ಅಫಘಾನಿಸ್ತಾನದಲ್ಲಿ (Pak Afghan Conflict) ತೆರೆದುಕೊಳ್ಳುತ್ತಿದ್ದ ವಿದ್ಯಮಾನಗಳು. ಯಾವಾಗ ಅಮೆರಿಕವು ತನ್ನ ಪಡೆಯನ್ನು ಅಫ್ಘನ್ ನೆಲದಿಂದ ಹಿಂದಕ್ಕೆ ಕರೆಸಿಕೊಳ್ಳುತ್ತ ಹೋಯಿತೋ ಅದರ ಬೆನ್ನಲ್ಲೇ ಜಗತ್ತಿನ ಟಿವಿ ಪರದೆಗಳನ್ನೆಲ್ಲ ಆಕ್ರಮಿಸಿದ್ದು ಬಂದೂಕುಧಾರಿ ವಿಕ್ಷಿಪ್ತ ತಾಲಿಬಾನಿಗಳು ಅಫಘಾನಿಸ್ತಾನದ ಅಧಿಕಾರ ಕೇಂದ್ರಗಳನ್ನೆಲ್ಲ ಹೊಕ್ಕು ಅನಾಗರಿಕ ಭಂಗಿಗಳಲ್ಲಿ ಅಬ್ಬರಿಸಿದ ದೃಶ್ಯಗಳು. ಇತ್ತ, ನಭಕ್ಕೆ ನೆಗೆಯುತ್ತಿದ್ದ ಅಮೆರಿಕದ ವಿಮಾನದ ಟಯರು, ರೆಕ್ಕೆಗಳನ್ನೆಲ್ಲ ಹಿಡಿದುಕೊಂಡು ಆ ನೆಲದಿಂದ ಪಾರಾಗಲು ಹೊರಟಿದ್ದ ಸಾಮಾನ್ಯ ಅಫಘನ್ನರ ದೃಶ್ಯಗಳು ಜಗತ್ತನ್ನು ಕಲಕಿದ್ದವು. 

ರಾಜತಾಂತ್ರಿಕ ದೃಷ್ಟಿಯಿಂದ ಭಾರತ ಬಿಕ್ಕಟ್ಟಿಗೆ ಸಿಲುಕಿ ತನ್ನೆಲ್ಲ ರಾಯಭಾರ ಉಪಸ್ಥಿತಿಯನ್ನು ಹಿಂದಕ್ಕೆ ಕರೆಸಿಕೊಂಡಿತು. ಇದೇ ಸಮಯಕ್ಕೆ ಪಾಕಿಸ್ತಾನ ಗಹಗಹಿಸುತ್ತಿದ್ದದ್ದು ಏಕೆಂದರೆ, ಯಾವ ತಾಲಿಬಾನ್ ಪಂಗಡಕ್ಕೆ ಪಾಕಿಸ್ತಾನದ ಬೆಂಬಲವಿತ್ತೋ ಅವರಲ್ಲಿ ಮೇಲುಗೈ ಪಡೆದಿದ್ದರು. ಅಮೆರಿಕ ಸೃಷ್ಟಿಸಿದ ಆಫ್ಘನ್ ನಿರ್ವಾತವನ್ನು ತುಂಬುವುದಕ್ಕೆ ಪಾಕಿಸ್ತಾನದ ಇನ್ನೊಬ್ಬ ಮಿತ್ರ ಚೀನಾ ಅದಾಗಲೇ ಕಾರ್ಯಪ್ರವೃತ್ತವಾಗಿದ್ದು ಸಹ ಭಾರತದ ಹಿನ್ನಡೆಯನ್ನು ಮತ್ತಷ್ಟು ದೊಡ್ಡದಾಗಿಸಿತು.

ಪ್ರಕ್ಷುಬ್ಧ ಅಫಘಾನಿಸ್ತಾನದ ಭೂಮಿಯಿಂದ ಭಾರತ ತನ್ನೆಲ್ಲ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾಯಿತು ಎಂಬುದಕ್ಕೆ ಮಾತ್ರವೇ ಆ ಹಿನ್ನಡೆ ಸೀಮಿತವಾಗಿರಲಿಲ್ಲ. ಅಮೆರಿಕದ ಅಭಯ ಛತ್ರದಡಿ ಅಲ್ಲಿನ ಸರ್ಕಾರದ ಚುಕ್ಕಾಣಿ ಹಿಡಿದಿದ್ದವರೆಲ್ಲರೂ ಭಾರತದ ಸ್ನೇಹಿತರೇ ಆಗಿದ್ದರು. ಅಶರಫ್ ಘನಿ, ಅಮರುಲ್ಲಾ ಸಲೇಹ್ ಇವರೆಲ್ಲ ಬೇರೆ ಬೇರೆ ದೇಶಗಳಿಗೆ ಹೋಗಬೇಕಾಯಿತು. 

ಅಫಘಾನಿಸ್ತಾನದಲ್ಲಿ ಭಾರತವು ದೊಡ್ಡಮಟ್ಟದಲ್ಲಿ ದಶಕಗಳಿಂದ ಅಭಿವೃದ್ಧಿ ಪಾಲುದಾರನಾಗಿತ್ತು. ಅಲ್ಲಿನ ಸಂಸತ್ತು ಕಟ್ಟಿಸಿಕೊಟ್ಟಿದ್ದು ಭಾರತ. 42 ಮೆಗಾವ್ಯಾಟ್ ವಿದ್ಯುತ್ ಹಾಗೂ ನೀರಾವರಿಗಳೆರಡನ್ನೂ ಪೂರೈಸುವ ಸಲ್ಮಾ ಆಣೆಕಟ್ಟು ಭಾರತ-ಅಫಘಾನಿಸ್ತಾನಗಳ ಪ್ರೆಂಡ್ಶಿಪ್ ಡ್ಯಾಮ್ ಅಂತಲೇ ಕರೆಸಿಕೊಂಡಿತ್ತು. 218 ಕಿಲೊಮೀಟರುಗಳ ಹೆದ್ದಾರಿ ನಿರ್ಮಾಣ ಸೇರಿದಂತೆ ಅಫಘಾನಿಸ್ತಾನದ ಎಲ್ಲ ನಿರ್ಮಾಣ ಕೆಲಸಗಳಲ್ಲಿದ್ದದ್ದು ಭಾರತದ ದುಡ್ಡು, ಸಹಯೋಗ. ಇಂಥ ಅಫಘಾನಿಸ್ತಾನವನ್ನು ತಾಲಿಬಾನಿಗಳ ಕೈಗೆ ಕೊಟ್ಟು ಅಲ್ಲಿ ಜಾಗವಿಲ್ಲದೇ ನಿರ್ಗಮಿಸಬೇಕಾಯಿತಲ್ಲ ಎಂಬ ನೋವು ಸಣ್ಣದೇನಾಗಿರಲಿಲ್ಲ. 

ಆದರೆ…ರಾಜತಾಂತ್ರಿಕತೆ ಎನ್ನುವುದು ಸಹನೆಯನ್ನೂ ಹಾಗೂ ದೀರ್ಘಾವಧಿ ಆಟವನ್ನೂ ಬೇಡುತ್ತದೆ ಮತ್ತು ಆಗೀಗಿನ ಆಘಾತಗಳನ್ನು ನುಂಗಿಕೊಂಡು ಈ ಆಟವನ್ನು ಮುಂದುವರಿಸುವ ಕ್ಷಮತೆಯನ್ನು ಭಾರತ ರೂಢಿಸಿಕೊಂಡಿದೆ ಎಂಬ ಸಂದೇಶವನ್ನು ಅಫಘಾನಿಸ್ತಾನದ ಈಗಿನ ವಿದ್ಯಮಾನಗಳು ನಿರೂಪಿಸುತ್ತಿವೆ. ಈ ಎರಡು ವರ್ಷಗಳಲ್ಲಿ ಪರಿಸ್ಥಿತಿ ಹೇಗೆ ಬದಲಾಯಿಸಿದೆ ಎಂಬುದು ಸ್ವಾರಸ್ಯಕರ. 

ಹದತಪ್ಪಿದ ಪಾಕ್-ಆಫ್ಘನ್ ಬಾಂಧವ್ಯ

2021ರ ಆಗಸ್ಟ್-ಸೆಪ್ಟೆಂಬರ್ ಕಾಲಕ್ಕೆ ಹೋಗಿ ನೋಡಿದರೆ ಅಫಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಪ್ರತಿಷ್ಠಾಪಿಸುತ್ತಿರುವುದೇ ಪಾಕಿಸ್ತಾನ ಎಂಬಂತಹ ಚಿತ್ರಣವಿತ್ತು. ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫಯಾಜ್ ಹಮೀದ್ ಕಾಬೂಲಿಗೆ ಹೋಗಿ ತಾಲಿಬಾನ್ ನೇತಾರರ ಜತೆ ಚಹಾ ಕುಡಿದು ಬಂದಿದ್ದರು. ಅಫಘಾನಿಸ್ತಾನದ ಪಂಜಶೀರ್ ಕಣಿವೆಯಲ್ಲಿ ಅಳಿದುಳಿದ ತಾಲಿಬಾನ್ ವಿರೋಧಿಗಳು ಪ್ರತಿರೋಧ ತೋರುತ್ತಿದ್ದಾಗ ಪಾಕಿಸ್ತಾನವೇ ಅವರನ್ನು ಸಂಪೂರ್ಣ ಹಿಮ್ಮೆಟ್ಟಿಸುವುದಕ್ಕೆ ತಾಲಿಬಾನಿಗಳಿಗೆ ಮಿಲಿಟರಿ ಸಹಾಯವನ್ನೂ ಕೊಟ್ಟಿತು. ಮೇಲ್ನೋಟಕ್ಕೆ ಅಮೆರಿಕದ ಮಿತ್ರನಾಗಿದ್ದರೂ, ಯಾವಾಗೆಲ್ಲ ಅಫಘಾನಿಸ್ತಾನದಲ್ಲಿ ಪ್ರಮುಖ ತಾಲಿಬಾನ್ ನಾಯಕರು ಅಮೆರಿಕದ ಕಾರ್ಯಾಚರಣೆಯಿಂದ ಸಂಕಷ್ಟಕ್ಕೆ ಸಿಲುಕಿಕೊಂಡರೋ ಆಗೆಲ್ಲ ಅವರನ್ನು ತನ್ನ ನೆಲಕ್ಕೆ ಕರೆಸಿಕೊಂಡು ಬಚಾವಾಗಿಸಿದೆ ಪಾಕಿಸ್ತಾನ. ವಾಜಪೇಯಿ ಕಾಲದಲ್ಲಿ ಕಂದಹಾರಿಗೆ ವಿಮಾನ ಅಪಹರಣವಾದಾಗ ಆಗಲ್ಲಿ ಆಳುತ್ತಿದ್ದ ತಾಲಿಬಾನಿಗಳು ಐಎಸ್ಐ ತಾಳಕ್ಕೆ ತಕ್ಕಂತೆ ಕುಣಿದಿದ್ದರು. ಅಷ್ಟೇಕೆ, ಅಮೆರಿಕವು ಹುಡುಕುತ್ತಿದ್ದ ಒಸಾಮಾ ಬಿನ್ ಲಾಡೆನ್ ಅಂತಿಮವಾಗಿ ಶಿಕಾರಿಯಾಗಿದ್ದು ಪಾಕಿಸ್ತಾನದ ನೆಲದಲ್ಲೇ ಎಂಬುದು ತಾಲಿಬಾನ್ ಜತೆ ಆ ದೇಶದ ಸಖ್ಯವನ್ನು ಜಗತ್ತಿಗೆ ಸ್ಪಷ್ಟವಾಗಿಯೇ ವಿವರಿಸುತ್ತದೆ. 

ಆದರೀಗ ಎರಡು ಪ್ರಮುಖ ಘಟನೆಗಳು ನಡೆದಿವೆ. ವಾರಗಳ ಹಿಂದೆ ಇದೇ ಅಫಘಾನಿಸ್ತಾನದ ಮೇಲೆ ಪಾಕಿಸ್ತಾನವು ವಾಯುದಾಳಿ ನಡೆಸಿದೆ. ಅದು ಅಧಿಕಾರದಲ್ಲಿರುವ ತಾಲಿಬಾನಿಗಳನ್ನು ಕ್ರುದ್ಧವಾಗಿಸಿದೆ. ನಮ್ಮ ನಾಗರಿಕರು ಮತ್ತು ಮಕ್ಕಳನ್ನು ಪಾಕಿಸ್ತಾನವು ಕೊಂದಿದೆ ಎಂದು ತಾಲಿಬಾನ್ ಪ್ರತಿಕ್ರಿಯಿಸಿತ್ತು. ಇದಕ್ಕೂ ಪೂರ್ವಭಾವಿ ಘಟನೆ ಎಂದರೆ ಕಳೆದ ಅಕ್ಟೋಬರಿನ ಚಳಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಅಫ್ಘನ್ ನಿರಾಶ್ರಿತರನ್ನು ಪಾಕಿಸ್ತಾನ ನಿರ್ದಯೆಯಿಂದ ಅಫಘಾನಿಸ್ತಾನಕ್ಕೆ ಅಟ್ಟಿತು. ತೆಹ್ರಿಕ್ ತಾಲಿಬಾನ್ ಪಾಕಿಸ್ತಾನ ಎಂಬ ಉಗ್ರರ ಗುಂಪು ತಾಲಿಬಾನಿನ ಸಿದ್ಧಾಂತಗಳಿಂದಲೇ ಸ್ಫೂರ್ತಿ ಪಡೆದು ಪಾಕಿಸ್ತಾನದ ನೆಲದಲ್ಲಿ ಉಗ್ರವಾದಿ ಕೃತ್ಯಗಳನ್ನು ನಡೆಸುತ್ತಿರುವುದರಿಂದ ದಾಖಲೆ-ಪತ್ರಗಳಿಲ್ಲದ ಅಫಘಾನಿ ಮಂದಿ ತನ್ನ ನೆಲದಲ್ಲಿರುವುದು ತನಗೆ ಅಪಾಯ ಎಂಬ ನಿಲವು ಪಾಕಿಸ್ತಾನದ್ದು. 

ಡುರಾಂಡ್ ಲೈನ್ ಮತ್ತು ಪಶ್ತೂನ್ ರಾಷ್ಟ್ರವಾದದ ಸವಾಲು!

ಉಗ್ರವಾದವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ತಾಲಿಬಾನಿಗಳಿಗೆ ಪಾಕಿಸ್ತಾನವು ಆಗಾಗ ಆತುಕೊಂಡುಬಂದಿದ್ದರೂ, ಪಾಶ್ಚಾತ್ಯರ ಎದುರಿಗೆ ಅದೇನೇ ಮುಸ್ಲಿಂ ಕಾರ್ಡ್ ಅಡಿಯಲ್ಲಿ ಒಂದಾದರೂ, ಪಾಕಿಸ್ತಾನ ಹಾಗೂ ಅಫಘಾನಿಸ್ತಾನಗಳ ನಡುವೆ ಐತಿಹಾಸಿಕವಾಗಿಯೇ ಒಂದು ವಿಭಜಕ ಗೆರೆ ಇದೆ. ಉಳಿದೆಲ್ಲ ಸವಾಲುಗಳು ಹಿನ್ನೆಲೆಗೆ ಹೋದಾಗ ಆ ವಿಭಜನಾತ್ಮಕ ಅಂಶವೇ ಮುನ್ನೆಲೆಗೆ ಬರುತ್ತದೆ ಹಾಗೂ ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳನ್ನು ಹೊಡೆದಾಟಕ್ಕೆ ಹಚ್ಚುತ್ತದೆ. 

ಆ ಅಂಶವೇ, ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳ ಗಡಿ ನಿರ್ಧರಿಸುವ 2,600 ಕಿಲೊಮೀಟರುಗಳ ಉದ್ದದ ಡುರಾಂಡ್ ಲೈನ್. 1893ರ ವೇಳೆಗೆ ತಮ್ಮ ಅಂದಿನ ರಾಜನನ್ನು ಒತ್ತಡಕ್ಕೆ ಒಳಪಡಿಸಿ ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರವು ನಿರ್ಧರಿಸಿರುವ ಈ ಗಡಿರೇಖೆ ತಮಗೆ ಸುತರಾಂ ಇಷ್ಚವಿಲ್ಲ ಅನ್ನೋದು ಅಫಘಾನಿಸ್ತಾನವು ಯಾವತ್ತೂ ಹೇಳಿಕೊಂಡುಬಂದಿರುವ ಮಾತು. 

ಈ ಚೌಕಾಶಿಯಲ್ಲೇ ಪಾಕಿಸ್ತಾನಕ್ಕಿರುವ ಬಹುದೊಡ್ಡ ಆತಂಕವೂ ಸ್ಪಷ್ಟವಾಗುತ್ತದೆ. ಅದೆಂದರೆ ಪಶ್ತೂನ್ ರಾಷ್ಟ್ರವಾದ!

ಪಾಕಿಸ್ತಾನದ ಮಿಲಿಟರಿ ಮತ್ತು ಆಡಳಿತ ಸೂತ್ರಗಳಲ್ಲಿ ಹೆಚ್ಚಿನ ಹಿಡಿತವಿರುವುದು ಪಂಜಾಬ್ ಪ್ರಾಂತ್ಯದ ಮುಸ್ಲಿಮರಿಗೆ. ಈ ಡುರಾಂಡ್ ಗಡಿರೇಖೆಯ ಅತ್ತಕಡೆ ಮತ್ತು ಇತ್ತ ಕಡೆ ಬಹಳದೊಡ್ಡ ಸಂಖ್ಯೆಯಲ್ಲಿರುವುದು ಪಶ್ತೂನ್ ಬುಡಕಟ್ಟು ಜನಾಂಗ. ಎಲ್ಲರೂ ಮುಸ್ಲಿಮರೇ ಆದರೂ ಆಚಾರ-ವಿಚಾರಗಳಲ್ಲಿ ಅಂತರ ಇದ್ದೇ ಇದೆ. ಅಫಘಾನಿಸ್ತಾನದಲ್ಲಿ ಪಶ್ತೂನಿಗಳು ಮಾತನಾಡುವ ಪಶ್ತೊ ಭಾಷೆ ಅಧಿಕೃತ ಭಾಷೆಗಳಲ್ಲೊಂದು. ಪಾಕಿಸ್ತಾನದ ವಿಚಾರಕ್ಕೆ ಬಂದರೆ ಉರ್ದು ರಾಷ್ಟ್ರಭಾಷೆ. ಅಮೆರಿಕದೊಂದಿಗೆ ಕೈಜೋಡಿಸಿದ್ದಕ್ಕಾಗಿ ಜಾಗತಿಕ ರಾಜಕಾರಣದಲ್ಲಿ ನಿರ್ಲಕ್ಷ್ಯಿಸಲಾಗದ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ತಾನವು ಅದೇ ಕಾರಣಕ್ಕೆ ಅಫಘಾನಿಸ್ತಾನದ ತಾಲಿಬಾನ್ ಮೇಲೂ ಪ್ರಭಾವ ಹೊಂದಿತ್ತು. ಇಸ್ಲಾಂ ಅನ್ನು ರಕ್ಷಿಸಬೇಕು ಎಂಬ ಗಲಾಟೆ ಎಬ್ಬಿಸಿ ಅದು ಪಶ್ತೂನಿ ಐಡೆಂಟಿಟಿಯನ್ನು ಮುಚ್ಚಿ ಹಾಕುತ್ತಿತ್ತು. ಪಶ್ತೂನಿಗಳ ರಕ್ತ ಪಾಕಿಸ್ತಾನದ ಪಾಲಿಗೆ ಅಗ್ಗ ಎಂಬ ಮಾತಿದೆ. ಅಂತೆಯೇ 90ರ ದಶಕದಲ್ಲಿ ಕಾಶ್ಮೀರದಲ್ಲಿ ಉಗ್ರವಾದಕ್ಕೆ ಸಹ ಇವರನ್ನು ಪಾಕಿಸ್ತಾನ ಬಳಸಿಕೊಂಡಿತ್ತು. 

ಆದರೆ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮೊದಲಿದ್ದ ಮಹತ್ವವೀಗ ಪಾಕಿಸ್ತಾನಕ್ಕಿಲ್ಲ. ತಾಲಿಬಾನಿಗೆ ಸಹ ತನ್ನ ನೆಲದಲ್ಲಿ ಹೋರಾಡಿಕೊಂಡಿರುವುದಕ್ಕೆ ಅಮೆರಿಕ ಎಂಬ ಗುಮ್ಮ ಇಲ್ಲ. ತಾಲಿಬಾನಿಗಳಿಗೆ ಅಧಿಕಾರ ಸೂತ್ರ ಸಿಕ್ಕಿದ ಮೇಲೆ ಅವರ ಸವಾಲುಗಳು ಮಾಮೂಲಿನ ಉಗ್ರವಾದಿ ಸಂಘಟನೆಗೆ ಇರುವಂಥದ್ದಲ್ಲ. ಅದು ಸರ್ವಾಧಿಕಾರಿ ಇಸ್ಲಾಂ ಪ್ರಭುತ್ವವೇ ಆಗಿದ್ದರೂ ಒಂದುಮಟ್ಟಿಗೆ ಸರ್ಕಾರವನ್ನು ನಡೆಸಬೇಕಲ್ಲ… ಅದಕ್ಕೆ ಜಗತ್ತಿನ ಸಹಕಾರ ಬೇಕು. ಚೀನಾ ಸಹಕರಿಸುತ್ತಿದೆಯಾದರೂ ಅದು ಗಣಿಗಾರಿಕೆಯಂಥ ಸಹಭಾಗಿತ್ವಗಳನ್ನು ಬಯಸುತ್ತಿದೆಯೇ ಹೊರತು ಒಟ್ಟಾರೆ ಆಫ್ಘನ್ ಉದ್ಧಾರವನ್ನಲ್ಲ. ಅಮೆರಿಕವು ಆಫ್ಘನ್ ನಲ್ಲಿದ್ದಷ್ಟು ಕಾಲವೂ ಅವರಿವರ ಕೈಗೆ ಶಸ್ತ್ರ ಕೊಟ್ಟು ಆಟವಾಡಿತೇ ಹೊರತು ಬೇರೆ ಅನುಕೂಲಗಳನ್ನು ಮಾಡಲಿಲ್ಲ. ಶಾಲೆ, ಆಣೆಕಟ್ಟು, ನೀರಾವರಿ, ಮಾನವ ಸಂಪನ್ಮೂಲ ತರಬೇತಿ ಅಂತೆಲ್ಲ ಅಫಘಾನಿಸ್ತಾನದ ಜತೆ ಈ ಹಿಂದೆ ಬಾಂಧವ್ಯ ಬೆಸೆದಿರುವ ಏಕಮಾತ್ರ ಉದಾಹರಣೆ ಎಂದರೆ ಭಾರತ ದೇಶದ್ದು ಮಾತ್ರ! ತಾಲಿಬಾನಿಗರಿಗೂ ಗೊತ್ತು ಈ ವಾಸ್ತವ. ಹಾಗೆಂದೇ ಅದು 2022ರಿಂದೀಚೆಗೆ ಭಾರತವನ್ನು ರಮಿಸುತ್ತ ಬಂತು. ಆ ಸೂಚನೆಗಳನ್ನು ಸಂಪೂರ್ಣ ತಿರಸ್ಕರಿಸದೇ ಭಾರತವೂ ನಾಜೂಕಿನ ಹೆಜ್ಜೆ ಇಟ್ಟಿತು. 

ಪಾಕ್ ಪ್ರಭಾವ ಕುಗ್ಗಿದೆಡೆ ಭಾರತದ ನಾಜೂಕು ನಡೆ

1996ರಲ್ಲಿ ಅಫಘಾನಿಸ್ತಾನವು ತಾಲಿಬಾನಿಗಳ ವಶಕ್ಕೆ ಬಂದಾಗ ಭಾರತವು ತಕ್ಷಣಕ್ಕೆ ಅಲ್ಲಿನ ರಾಜತಾಂತ್ರಿಕ ಕಚೇರಿಗಳನ್ನು ಮುಚ್ಚಿತ್ತು. ನಂತರ 2001ರಲ್ಲಿ ಅಮೆರಿಕ ನೇತೃತ್ವದ ಮಿಲಿಟರಿ ಶಕ್ತಿ ಆ ನೆಲಕ್ಕೆ ಹೋಗಿ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಿ ಸ್ಥಳೀಯರಿಗೆ ಸರ್ಕಾರ ಸ್ಥಾಪಿಸುವ ಅವಕಾಶ ಮಾಡಿದಾಗ ಭಾರತವೇ ಮೊದಲಿಗನಾಗಿ ಅಲ್ಲಿ ರಾಯಭಾರ ವ್ಯವಸ್ಥೆಗಳನ್ನು ತೆರೆದಿತ್ತು. 

ಇವತ್ತಿನ ಜಾಗತಿಕ ರಾಜಕಾರಣ ಹೇಗಿದೆ ಎಂದರೆ ನೈತಿಕ ಪ್ರಶ್ನೆಗಳನ್ನು ಒಡ್ಡಿ ಯಾವ ಜಾಗವನ್ನೂ ಖಾಲಿ ಬಿಡುವಂತಿಲ್ಲ. ಉದಾಹರಣೆಗೆ, ತಾಲಿಬಾನಿಗಳು ಮಹಿಳೆಯರಿಗೆ ಶಿಕ್ಷಣ ಕೊಡುತ್ತಿಲ್ಲವಾದ್ದರಿಂದ ನಾವು ಅವರ ಜತೆ ವ್ಯವಹರಿಸುವುದೇ ಇಲ್ಲ ಎಂಬೆಲ್ಲ ನಿಲುವಿಗೆ ಅಂಟಿಕೊಳ್ಳುವುದು ವ್ಯಾವಹಾರಿಕ ನೆಲೆಯಲ್ಲಿ ಸಾಧ್ಯವಿಲ್ಲ. ಏಕೆಂದರೆ ಚೀನಾವೋ ಇನ್ಯಾವುದೋ ಶಕ್ತಿಯೋ ಆ ನಿರ್ವಾತವನ್ನು ತುಂಬುತ್ತದಲ್ಲದೇ ಅದನ್ನು ಭಾರತದ ವಿರುದ್ಧವೂ ಬಳಸಿಕೊಂಡೀತು. ಹಾಗೆಂದೇ, ತಾಲಿಬಾನಿಗೆ ಅಧಿಕೃತ ಜಾಗತಿಕ ಮನ್ನಣೆಯನ್ನೇನೂ ಕೊಡದೆಯೂ ಅದರ ಜತೆಗೆ ಒಂದು ಸಂವಹನವನ್ನು ಕಾಯ್ದುಕೊಳ್ಳುವ ಮಾದರಿಯನ್ನು ಭಾರತ ಅಳವಡಿಸಿಕೊಂಡಿದೆ.

ಜೂನ್ 2022ರಲ್ಲಿ ಭಾರತದ ರಾಯಭಾರಿಗಳು ಕಾಬೂಲಿನಲ್ಲಿ ತಾಲಿಬಾನಿ ಪ್ರತಿನಿಧಿಗಳನ್ನು ಭೇಟಿಯಾದರು. ಅಫಘಾನಿಸ್ತಾನದಲ್ಲಿ ಭಾರತದ ಉಪಸ್ಥಿತಿ ಬೇಕೆಂಬ ಒತ್ತಾಸೆ ಅವರಿಂದಲೇ ಬಂತು. ಹಾಗೆಂದೇ, ಭಾರತವೀಗ ಕಾಬೂಲಿನಲ್ಲಿ ಅಧಿಕೃತವಾಗಿ ರಾಯಭಾರ ಕಚೇರಿಯನ್ನು ಮರುಚಾಲನೆ ಮಾಡದೇ ಇದ್ದರೂ ಅಲ್ಲಿಗೆ “ತಾಂತ್ರಿಕ ಸಿಬ್ಬಂದಿ”ಯನ್ನು ಕಳುಹಿಸಿದೆ. ಹಸಿವಿನಿಂದ ಕಂಗೆಟ್ಟಿರುವ ಅಫಘಾನಿಸ್ತಾನಕ್ಕೆ ಗೋದಿ ಮತ್ತು ವೈದ್ಯಕೀಯ ವಸ್ತುಗಳ ನೆರವಿತ್ತ ಭಾರತದ ಕಾರ್ಯವನ್ನು ತಾಲಿಬಾನಿಗಳು ಭರಪೂರ ಹೊಗಳುತ್ತಿದ್ದಾರೆ. 

ಇವೆಲ್ಲವಕ್ಕೆ ಪ್ರತಿಯಾಗಿ ಅಫಘಾನಿಸ್ತಾನದ ನೆಲದಲ್ಲಿ ಭಾರತ ವಿರೋಧಿ ಸಂಚುಗಳು ತಲೆಎತ್ತದಂತೆ ನೋಡಿಕೊಳ್ಳುವುದು ಹಾಗೂ ಪಾಕಿಸ್ತಾನವನ್ನು ಆಫ್ಘನ್ ಸಖ್ಯದಿಂದ ದೂರವಾಗಿಸಿ, ಚೀನಾದ ಉಪಸ್ಥಿತಿಗೂ ಒಂದು ಸಮತೋಲನ ಕಂಡುಕೊಳ್ಳುವುದು ಭಾರತದ ಪ್ರಯತ್ನವಾಗಲಿದೆ.

ಜಾಗತಿಕ ರಾಜಕಾರಣದಲ್ಲಿ ಶಾಶ್ವತ ವೈರಿಗಳು ಇಲ್ಲವೇ ಸ್ನೇಹಿತರಿರುವುದಿಲ್ಲ, ಹಿತಾಸಕ್ತಿಗಳಷ್ಟೇ ಶಾಶ್ವತ ಎಂಬ ಮಾತಿದೆ. ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ ಇವೆಲ್ಲ ಕಾಲಕಾಲಕ್ಕೆ ಭಾರತದ ಪ್ರಭಾವಳಿಯಿಂದ ಹೊರಗೆ ಹೋಗಿಬಿಟ್ಟವೇನೋ ಎಂಬ ಸ್ಥಿತಿ ಆಗೀಗ ಬರುತ್ತಿರುತ್ತದೆ. ಆದರೆ ಆ ಸ್ಥಿತಿಯೇ ಅಂತಿಮವಲ್ಲ. ತನ್ನ ಹಿತಾಸಕ್ತಿ ರಕ್ಷಿಸಿಕೊಳ್ಳುವುದಕ್ಕೆ ಭಾರತವು ನಾಜೂಕಿನ ಆಟಗಳನ್ನೂ ಆಡಬಲ್ಲದು ಹಾಗೂ ಕೈತಪ್ಪಿ ಹೋದಂತೆನಿಸಿದ್ದನ್ನು ಮತ್ತೆ ಹತೋಟಿಗೆ ತೆಗೆದುಕೊಳ್ಳಬಲ್ಲದು ಎಂಬುದನ್ನು ಅಫಘಾನಿಸ್ತಾನದ ವಿದ್ಯಮಾನವು ನಿರೂಪಿಸುತ್ತಿದೆ.

ಇದನ್ನೂ ಓದಿ: Indian Navy Power: ಸೊಮಾಲಿಯಾದ ಕಡಲ್ಗಳ್ಳರನ್ನು ಬಗ್ಗುಬಡಿದು ಜಗತ್ತಿಗೆ ಸಂದೇಶ ನೀಡಿದೆ ಭಾರತದ ಕ್ಷಾತ್ರ!

Continue Reading

ಸ್ಫೂರ್ತಿ ಕತೆ

Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

Raja marga Column : ಆ ಹೆಣ್ಮಗಳಿಗೆ ಕಣ್ಣೇ ಕಾಣಿಸುವುದಿಲ್ಲ. ಆದರೆ, ಛಲದಿಂದ ಆಕೆ ಒಳಗಿನ ಕಣ್ಣಿಂದ ಓದಿಗಳು. ಒಂದಲ್ಲ ಎರಡು ಬಾರಿ ಯುಪಿಎಸ್ಸಿ ಪಾಸ್‌ ಮಾಡಿದಳು. ಈಗ ಆಕೆ ಜಿಲ್ಲಾಧಿಕಾರಿ.

VISTARANEWS.COM


on

Raja Marga Column Pranjal pateel
Koo
RAJAMARGA

Raja Marga Column : ಭಾರತದ ಅತ್ಯಂತ ಕ್ಲಿಷ್ಟವಾದ ಪರೀಕ್ಷೆ ಅಂದರೆ ಐಎಎಸ್. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ UPSC ನಡೆಸುವ ಈ ಪರೀಕ್ಷೆಯಲ್ಲಿ‌ (UPSC Exam) ಪ್ರತೀ ವರ್ಷ 7ರಿಂದ 8 ಲಕ್ಷ ಯುವಕ – ಯುವತಿಯರು ತಮ್ಮ ಪ್ರತಿಭೆಯನ್ನು ನಿಕಷಕ್ಕೆ ಒಡ್ಡುತ್ತಿದ್ದು ತೇರ್ಗಡೆ ಆಗುವವರ ಪ್ರಮಾಣ 2-3% ಮಾತ್ರ! ಅಂತಹ ಪರೀಕ್ಷೆಯಲ್ಲಿ ಪೂರ್ಣ ಕುರುಡುತನ ಇರುವ ಪ್ರಾಂಜಲ್‌ ಪಾಟೀಲ್‌ (Pranjal Patil) ಎಂಬ ಹುಡುಗಿಯೊಬ್ಬಳು ಎರಡು ಬಾರಿ ತೇರ್ಗಡೆಯಾದರು (IAS officer) ಅಂದರೆ ನಂಬೋದು ಹೇಗೆ? ಇಲ್ಲಿದೆ ಅವರ ಕತೆ,

Raja Marga Column: ಆಕೆ ಮಹಾರಾಷ್ಟ್ರದವರು

ಪ್ರಾಂಜಲ್‌ ಪಾಟೀಲ್ ಮಹಾರಾಷ್ಟ್ರದ ಉಲ್ಲಾಸ ನಗರದವರು. ಹುಟ್ಟುವಾಗ ಆಕೆಗೆ ಮಸುಕು ಮಸುಕಾಗಿ ಕಾಣುತ್ತಿತ್ತು. ಆರು ವರ್ಷ ಪ್ರಾಯ ಆದಾಗ ಪೂರ್ತಿಯಾಗಿ ಕುರುಡುತನ ಆವರಿಸಿತ್ತು. ಸಣ್ಣ ಪ್ರಾಯದಲ್ಲಿಯೇ ಆಕೆಯ ದೊಡ್ಡ ಕನಸುಗಳಿಗೆ ಕೊಳ್ಳಿ ಇಟ್ಟ ಅನುಭವ ಆಗಿತ್ತು. ಆದರೆ ಮನೆಯವರು ಮತ್ತು ಹೆತ್ತವರು ಆಕೆಯ ಮನೋಸ್ಥೈರ್ಯವನ್ನು ಕುಸಿಯಲು ಬಿಡಲಿಲ್ಲ.

ಆಕೆ ಮಹಾ ಪ್ರತಿಭಾವಂತೆ. ದಾದರ್ ನಗರದ ಕಮಲ ಮೆಹ್ತಾ ಕುರುಡು ಮಕ್ಕಳ ಶಾಲೆಗೆ ಸೇರಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಾರೆ. ಬ್ರೈಲ್ ಲಿಪಿಯಲ್ಲಿ ಓದಲು ಮತ್ತು ಬರೆಯಲು ಕಲಿಯುತ್ತಾರೆ. ಮುಂದೆ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ರಾಜನೀತಿ ಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ.

Raja Marga Column Pranjal Pateel
ತಂದೆ ಮತ್ತು ತಾಯಿ ಜತೆ ಪ್ರಾಂಜಲ್‌ ಪಾಟೀಲ್‌

ಆಗ ಏನೂ ಕಾಣದಿದ್ದರೂ ಉಲ್ಲಾಸ ನಗರದ ಮನೆಯಿಂದ ಹೊರಟು ಒಬ್ಬಳೇ ಛತ್ರಪತಿ ಶಿವಾಜಿ ಟರ್ಮಿನಲ್ ನವರೆಗೆ ಹೋಗಿ ಹಿಂದೆ ಬರುತ್ತಿದ್ದರು. ಮುಂಬೈ ನಗರದ ಜನರು ತನ್ನ ಬಗ್ಗೆ ತುಂಬಾನೇ ಅನುಕಂಪವನ್ನು ಹೊಂದಿದ್ದರು ಅನ್ನುತ್ತಾರೆ ಆಕೆ.

Raja Marga Column: ಆಕೆಯ ಕನಸುಗಳಿಗೆ ಆಕಾಶವೂ ಮಿತಿ ಅಲ್ಲ!

ಮುಂದೆ ಪ್ರಾಂಜಲ್ ಹೊರಟದ್ದು ದೆಹಲಿಗೆ. ಜವಾಹರಲಾಲ್ ನೆಹರು ವಿವಿಯ ಮೂಲಕ ಆಕೆ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ಪಡೆಯುತ್ತಾರೆ. ಅದೇ ಹೊತ್ತಿಗೆ ವಿದುಷಿ ಎಂಬ ಗೆಳತಿಯ ಮಾತಿನಿಂದ ಆಕೆ ಪ್ರಭಾವಿತರಾಗುತ್ತಾರೆ. ಐಎಎಸ್ ಪರೀಕ್ಷೆಗೆ ಗಂಭೀರವಾದ ಸಿದ್ಧತೆ ನಡೆಸುವಂತೆ ವಿದುಷಿ ಆಕೆಗೆ ಸಲಹೆ ಕೊಡುತ್ತಾರೆ.

Raja Marga Column Pranjal Pateel

ಆಗ ಆಕೆಗೆ JAWS (Job Access With Speech) ಎಂಬ ಸಾಫ್ಟವೇರ್ ನೆರವಿಗೆ ಬರುತ್ತದೆ. ಅದು ಯಾವುದೇ ಪುಸ್ತಕವನ್ನು ಗಟ್ಟಿಯಾಗಿ ಓದಿ ಹೇಳುವ ಸಾಫ್ಟ್‌ವೇರ್. ತನ್ನ ಆಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಕೆ ದಿನಕ್ಕೆ 10-12 ಗಂಟೆ ಪುಸ್ತಕಗಳನ್ನು ಓದುತ್ತಾರೆ. ವಿಡಿಯೋ ಪಾಠಗಳನ್ನು ಕೇಳುತ್ತಾರೆ. ತನ್ನ ಗೆಳತಿಯ ನೆರವನ್ನು ಪಡೆಯುತ್ತಾರೆ.

ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಿಸುತ್ತದೆ

2016ರಲ್ಲೀ ಅವರು ಭಾರತೀಯ ರೈಲ್ವೇ ಸೇವೆಗೆ ಅರ್ಜಿ ಹಾಕುತ್ತಾರೆ. ಆದರೆ ಆಕೆ ಕುರುಡಿ ಎಂಬ ಕಾರಣಕ್ಕೆ ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಣೆ ಮಾಡುತ್ತದೆ. ಆಗ ಸಿಟ್ಟಿಗೆದ್ದ ಆಕೆ ಪ್ರಧಾನಿ ನರೇಂದ್ರ ಮೋದಿಗೆ ಮತ್ತು ರೈಲ್ವೇ ಮಂತ್ರಿ ಸುರೇಶ್ ಪ್ರಭು ಅವರಿಗೆ ನೇರವಾಗಿ ಪತ್ರ ಬರೆಯುತ್ತಾರೆ. ಆಗ ಸುರೇಶ್ ಪ್ರಭು ಅವರು ಆಕೆಯನ್ನು ಸಂಪರ್ಕ ಮಾಡಿ ನಿಮ್ಮ ವಿದ್ಯೆಗೆ ತಕ್ಕದಾದ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ ಆಗಲೇ ಐಎಎಸ್ ಪರೀಕ್ಷೆಯ ತಯಾರಿಯಲ್ಲಿ ಮುಳುಗಿದ್ದ ಪ್ರಾಂಜಲ್ ಆ ಪ್ರಸ್ತಾಪವನ್ನು ಸ್ವೀಕಾರ ಮಾಡುವುದಿಲ್ಲ.

Raja Marga Column Pranjal Pateel
ಸೀರೆ ಉಟ್ಟಾಗ ಹೀಗಿದ್ದಾರೆ ನೋಡಿ ಪ್ರಾಂಜಲ್‌ ಪಾಟೀಲ್

ಆಕೆ ಎರಡು ಬಾರಿ ಐಎಎಸ್ ಪರೀಕ್ಷೆ ತೇರ್ಗಡೆ ಆದರು!

ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾದರು! ಅದೂ ಯಾವ ಕೋಚಿಂಗ್ ಇಲ್ಲದೆ! ಆದರೆ ಆಲ್ ಇಂಡಿಯಾ ರ‍್ಯಾಂಕಿಂಗ್ 744 ಬಂದಿತ್ತು. ಅದು ಅವರಿಗೆ ತೃಪ್ತಿ ತರಲಿಲ್ಲ. ಯಾವುದೋ ಒಂದು ಅಜ್ಞಾತ ಇಲಾಖೆಯಲ್ಲಿ ಸಾಮಾನ್ಯ ಅಧಿಕಾರಿಯಾಗಿ ಕೆಲಸ ಮಾಡಲು ಆಕೆ ರೆಡಿ ಇರಲಿಲ್ಲ. ಅದಕ್ಕೋಸ್ಕರ ಎರಡನೇ ಬಾರಿಗೆ ಅಷ್ಟೇ ಪ್ರಯತ್ನ ಮಾಡಿ 2017ರಲ್ಲಿ ಮತ್ತೆ ಐಎಎಸ್ ಪರೀಕ್ಷೆ ಬರೆದರು. ಈ ಬಾರಿ ಕೂಡ ತೇರ್ಗಡೆ ಆದರು. ಈ ಬಾರಿ ರ‍್ಯಾಂಕಿಂಗ್ 124 ಬಂದಿತ್ತು!

Visually impaired IAS officer Pranjal pateel

ಅವರ ಕನಸಿನ ರೆಕ್ಕೆಗೆ ಸಾವಿರ ಗರಿಗಳು!

ಭಾರತದ ಮೊಟ್ಟ ಮೊದಲ ದೃಷ್ಟಿ ವಿಕಲತೆಯ ಸಾಧಕಿಯಾಗಿ ಆಕೆ ಐಎಎಸ್ ಪರೀಕ್ಷೆ ತೇರ್ಗಡೆ ಆಗಿದ್ದರು! ಲಿಖಿತ ಪರೀಕ್ಷೆಯಲ್ಲಿ ಆಕೆ ಪಡೆದ ಅಂಕಗಳು 854! ಹಾಗೂ ಸಂದರ್ಶನದಲ್ಲಿ ಆಕೆ ಪಡೆದ ಅಂಕಗಳು 179! ಒಟ್ಟು 1033 ಅನ್ನುವುದು ಕೂಡ ನಿಜವಾದ ಕ್ರೆಡಿಟ್. ತರಬೇತಿಯನ್ನು ಮುಗಿಸಿ ಮೇ 28, 2018ರಂದು ಅವರು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಸಿಸ್ಟಂಟ್ ಕಲೆಕ್ಟರ್ ಆಗಿ ನೇಮಕ ಪಡೆಯುತ್ತಾರೆ. ಮುಂದೆ ಅಕ್ಟೋಬರ್ 14, 2019ರಂದು ಸಬ್ ಕಲೆಕ್ಟರ್ ಆಗಿ ತಿರುವನಂತಪುರಂ ಜಿಲ್ಲೆಗೆ ನೇಮಕ ಪಡೆಯುತ್ತಾರೆ!

Pranjal pateel with Komal sing pateel
ಕೋಮಲ್‌ ಸಿಂಗ್‌ ಪಾಟೀಲ್‌ ಜತೆ ಮದುವೆಯಾದ ಕ್ಷಣ

ಯಾರ ಸಹಾಯ ಇಲ್ಲದೆ ತನ್ನ ಕೆಲಸಗಳನ್ನು ತಾನೇ ಮಾಡುವ, ಅದ್ಭುತವಾದ ಮೆಮೊರಿ ಪವರ್ ಹೊಂದಿರುವ, ಸಮಾಜ ಸೇವೆಯ ತೀವ್ರವಾದ ತುಡಿತ ಹೊಂದಿರುವ, ಬೆಟ್ಟವನ್ನು ಕರಗಿಸುವ ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಹೊಂದಿರುವ ಪ್ರಾಂಜಲ್ ಪಾಟೀಲ್ ಮತ್ತು ಆಕೆಯ ಗಂಡ ಕೋಮಲ್ ಸಿಂಗ್ ಪಾಟೀಲ್ ಅವರು ಇತ್ತೀಚೆಗೆ ತಮ್ಮ ಅಂಗದಾನಕ್ಕೆ ಜೊತೆಯಾಗಿ ಸಹಿ ಹಾಕಿ ಸುದ್ದಿ ಆಗಿದ್ದಾರೆ.

ಆಕೆಯ ಒಂದು ಮಾತು ನನಗೆ ಭಾರೀ ಕನೆಕ್ಟ್ ಆಗಿದ್ದು ಅದನ್ನು ಇಲ್ಲಿ ಉಲ್ಲೇಖ ಮಾಡುತ್ತೇನೆ.

SUCCESS doesn’t give us INSPIRATION. But the STRUGGLE behind the SUCCESS gives us the INSPIRATION. ಹೌದು ತಾನೇ?

ಇದನ್ನೂ ಓದಿ : Raja Marga Column : ಈ ಶಾರ್ಪ್‌ ಶೂಟರ್‌ ಅಜ್ಜಿ ಮೊದಲ ಬಾರಿ ಗನ್‌ ಹಿಡಿದದ್ದು 67ನೇ ವಯಸ್ಸಲ್ಲಿ!

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಇ-ಸಿಮ್ ಮೇಲಿನ ದಾಳಿಯಲ್ಲಿ ಫೋನ್ ಸಂಖ್ಯೆಗಳ ಹೈಜಾಕ್

ಸೈಬರ್‌ ಸೇಫ್ಟಿ ಅಂಕಣ: ಯಾವುದೇ ಹೊಸ ತಂತ್ರಜ್ಞಾನವನ್ನು ಬಳಸುವಾಗ ಅದರ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ತಿಳಿದು ಮುಂದುವರಿಯುವುದು ಒಳ್ಳೆಯದು. ಸೈಬರ್‌ ಲೋಕದಲ್ಲಿ ಆತುರ ತೋರದೆ, ಆಮಿಷಕ್ಕೆ ಒಳಗಾಗದೆ ಜಾಗರೂಕರಾಗಿರಿ.

VISTARANEWS.COM


on

esim cyber safety column
Koo
cyber safty logo

ಸೈಬರ್‌ ಸೇಫ್ಟಿ ಅಂಕಣ: ಇ-ಸಿಮ್‌ ಅಂದರೆ ಇದ್ಯಾವ ಸಿಮ್‌ ಅಂತೀರಾ? ಇ-ಸಿಮ್‌(eSIM) ಎನ್ನುವುದು ಉದ್ಯಮ-ಪ್ರಮಾಣಿತ ಡಿಜಿಟಲ್ ಸಿಮ್ (dijital sim) ಆಗಿದ್ದು ಅದು ಭೌತಿಕ ಸಿಮ್ ಅನ್ನು ಬಳಸದೆಯೇ ನಿಮ್ಮ ನೆಟ್‌ವರ್ಕ್ ಪೂರೈಕೆದಾರರಿಂದ ಮೊಬೈಲ್ ಯೋಜನೆಯನ್ನು ಸಕ್ರಿಯಗೊಳಿಸಲು ನಿಮಗೆ ಅನುಮತಿಸುತ್ತದೆ. ಎಂಬೆಡೆಡ್ ಸಬ್‌ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್‌ಗಳು (eSIMಗಳು) ಮೊಬೈಲ್ ಸಾಧನದ ಚಿಪ್‌ನಲ್ಲಿ ಸಂಗ್ರಹಿಸಲಾದ ಡಿಜಿಟಲ್ ಕಾರ್ಡ್‌ಗಳಾಗಿವೆ ಮತ್ತು ಭೌತಿಕ SIM ಕಾರ್ಡ್‌ನಂತೆಯೇ ಅದೇ ಪಾತ್ರ ಮತ್ತು ಉದ್ದೇಶವನ್ನು ಪೂರೈಸುತ್ತವೆ. ಆದರೆ ಇವುಗಳನ್ನು ಹೊರಗಿನಿಂದ (ರಿಮೋಟ್‌) ರಿಪ್ರೊಗ್ರಾಮ್ ಮಾಡಬಹುದು, ನಿಷ್ಕ್ರಿಯಗೊಳಿಸಬಹುದು, ಬದಲಾಯಿಸಬಹುದು, ಅಳಿಸಬಹುದು. ಇದನ್ನು ಬಳಸಿದರೆ ನಿಮ್ಮ ಮೊಬೈಲ್‌ ಸಾಧನವನ್ನು ಬದಲಾಯಿಸುವುದು ಸರಳವಾಗಿರುವುದಿಲ್ಲ.

ಎಲ್ಲಾ ಪ್ರಮುಖ ಮೊಬೈಲ್ ಸಾಧನ ತಯಾರಕರು eSIM ಫೋನ್‌ಗಳನ್ನು ಹೊಂದಿದ್ದಾರೆ, ಆದರೆ ಇದು ಹೊಸ ತಂತ್ರಜ್ಞಾನವಾಗಿರುವುದರಿಂದ ಎಲ್ಲಾ ಮಾದರಿಗಳು eSIMಗೆ ಹೊಂದಿಕೆಯಾಗುವುದಿಲ್ಲ. ಆಪಲ್‌ ಐಫೋನ್‌ ಸೇರಿದಂತೆ ಐಫೋನ್‌ XS ಮತ್ತು ಗೂಗಲ್‌ ಪಿಕ್ಸೆಲ್‌ ಸಾಧನಗಳು, ಮೊಟೊರೋಲಾ Razr 5G ಮತ್ತು ಸ್ಯಾಮ್‌ಸಂಗ್‌ Galaxy ಸಾಧನಗಳಲ್ಲಿ eSIM ಅನ್ನು ಬಳಸಬಹುದಾಗಿದೆ. ನೀವು iPhone ನಲ್ಲಿ ಎಂಟು ಅಥವಾ ಹೆಚ್ಚಿನ eSIM ಗಳನ್ನು ಸ್ಥಾಪಿಸಬಹುದು ಮತ್ತು ಒಂದೇ ಸಮಯದಲ್ಲಿ ಎರಡು ಫೋನ್ ಸಂಖ್ಯೆಗಳನ್ನು ಬಳಸಬಹುದು. ಎರಡು ಸಿಮ್‌ಗಳನ್ನು ಬಳಸುವ ಅವಕಾಶ iPhone ಬಳಕೆದಾರರಿಗಿಲ್ಲದಿರುವುದರಿಂದ ಅವರಲ್ಲಿ ಇ-ಸಿಮ್‌ ಬಳಕೆ ಹೆಚ್ಬಾಗಿ ಕಂಡುಬರುತ್ತದೆ.

ನೀವು eSIM ಅನ್ನು ಬಳಸುತ್ತಿದ್ದರೆ ಮತ್ತು ನೀವು ಫೋನ್‌ಗಳನ್ನು ಬದಲಾಯಿಸಬೇಕಾದರೆ, ನಿಮ್ಮ eSIM ಅನ್ನು ಹೇಗೆ ವರ್ಗಾಯಿಸುವುದು ಎಂದು ವಿಚಾರಿಸಲು ನಿಮ್ಮ ಸ್ಥಳೀಯ ಪೂರೈಕೆದಾರರನ್ನು ಸಂಪರ್ಕಿಸಬೇಕಾಗುತ್ತದೆ. ಆಂಡ್ರಾಯ್ಡ್ ಮತ್ತು iOS ಇ-ಸಿಮ್‌ ವರ್ಗಾವಣೆ ಪರಿಕರಗಳನ್ನು ಹೊಂದಿದ್ದರೂ, ಎಲ್ಲಾ ವಾಹಕರೂ eSIM ವರ್ಗಾವಣೆಯನ್ನು ಅನುಮತಿಸುವುದಿಲ್ಲ. ಸೇವೆ ಒದಗಿಸುವವರಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಬೆಂಬಲಿಸುವ ಸಾಧನಕ್ಕೆ ಬಳಕೆದಾರರು eSIM ಅನ್ನು ಸೇರಿಸಬಹುದು.

ಈ ತಂತ್ರಜ್ಞಾನವು ಸ್ಮಾರ್ಟ್‌ಫೋನ್ ತಯಾರಕರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಏಕೆಂದರೆ eSIMಗಳು SIM ಕಾರ್ಡ್ ಸ್ಲಾಟ್‌ನ ಅಗತ್ಯವನ್ನು ನಿವಾರಿಸುತ್ತದೆ ಮತ್ತು ಸಣ್ಣ ಧರಿಸಬಹುದಾದ (wearable) ಸಾಧನಗಳಲ್ಲಿಯೂ ಸೆಲ್ಯುಲಾರ್ ಸಂಪರ್ಕವನ್ನು ನೀಡಬಹುದು.

ಹೊಸ ತಂತ್ರಜ್ಞಾನ ಬಳಕೆಗೆ ಬರುತ್ತಿದ್ದಂತೆ ಅದನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಸೈಬರ್‌ ಕ್ರಿಮಿನಲ್‌ಗಳು ಕುತಂತ್ರ ಮಾಡಿರುತ್ತಾರೆ. ಹೊಸ eSIM ಕಾರ್ಡ್‌ಗೆ ಬದಲಿಸುವಾಗ (ಪೋರ್ಟ್) ಮಾಡುವಾಗ ನಿಮ್ಮ ಫೋನ್ ಸಂಖ್ಯೆಯನ್ನು ಕದಿಯಲು ಸಿಮ್ ಸ್ವ್ಯಾಪರ್‌ಗಳು ಕಾಯುತ್ತಿರುತ್ತಾರೆ.

cyber crime

ರಷ್ಯಾದ ಸೈಬರ್‌ ಸೆಕ್ಯುರಿಟಿ ಸಂಸ್ಥೆ F.A.C.C.T. ದೇಶ ಮತ್ತು ಪ್ರಪಂಚದಾದ್ಯಂತದ ಸಿಮ್ ಸ್ವ್ಯಾಪರ್‌ಗಳು ಫೋನ್ ಸಂಖ್ಯೆಗಳನ್ನು ಹೈಜಾಕ್ ಮಾಡಲು ಮತ್ತು ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಲು, ರಕ್ಷಣೆಗಳನ್ನು ಬೈಪಾಸ್ ಮಾಡಲು ಈ ಬದಲಾವಣೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿ ಮಾಡಿದೆ. F.A.C.C.T. ಯ ರಕ್ಷಣೆಯ ವಿಶ್ಲೇಷಕರು ಕೇವಲ ಒಂದು ಹಣಕಾಸು ಸಂಸ್ಥೆಯ ಆನ್‌ಲೈನ್ ಸೇವೆ ಬಳಸುವ ಗ್ರಾಹಕರ ವೈಯಕ್ತಿಕ ಖಾತೆಗಳನ್ನು ಪ್ರವೇಶಿಸಲು ನೂರಕ್ಕೂ ಹೆಚ್ಚು ಪ್ರಯತ್ನಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಿದೆ. ಮೊಬೈಲ್ ಸಂಖ್ಯೆಯೊಳಗೆ ಪ್ರವೇಶಿಸಲು, ಅಪರಾಧಿಗಳು ಡಿಜಿಟಲ್ ಸಿಮ್ ಕಾರ್ಡ್ ಅನ್ನು ಬದಲಿಸುವ ಅಥವಾ ಮರುಸ್ಥಾಪಿಸುವ ಕಾರ್ಯವನ್ನು ಉಪಯೋಗಿಸುತ್ತಾರೆ. ಹಿಂದೆ, SIM ಸ್ವ್ಯಾಪರ್‌ಗಳು ದಾಳಿ ಮಾಡಲು ಸೋಷಿಯಲ್‌ ಇಂಜಿನಿಯರಿಂಗ್‌ನ ವಿವಿಧ ತಂತ್ರಗಳನ್ನು ಬಳಸುತ್ತಿದ್ದರು. ವಿಕ್ಟಿಮ್‌ನ ಸಂಖ್ಯೆಯನ್ನು ಪೋರ್ಟ್ ಮಾಡಲು ಸಹಾಯ ಮಾಡುವ ಮೊಬೈಲ್ ಕ್ಯಾರಿಯರ್ ಸೇವೆಗಳಲ್ಲಿ ಕೆಲಸ ಮಾಡುತ್ತಿರುವವರ ಸಹಕಾರದೊಂದಿಗೆ ತಮ್ಮ ತಂತ್ರಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರು. ಈ ಕುತಂತ್ರವನ್ನು ತಡೆಯಲು ಕಂಪನಿಗಳು ಹೆಚ್ಚಿನ ರಕ್ಷಣೆಗಳನ್ನು ಜಾರಿಗೆ ತಂದಿದ್ದರಿಂದ, ಸೈಬರ್ ಅಪರಾಧಿಗಳು ಹೊಸ ತಂತ್ರಜ್ಞಾನಗಳನ್ನು ಬಳಸುವ ಅವಕಾಶಗಳತ್ತ ತಮ್ಮ ಗಮನವನ್ನು ಹರಿಸಿದರು.

ಈಗ, ಆಕ್ರಮಣಕಾರರು ಕದ್ದ, ವಿವೇಚನಾರಹಿತವಾಗಿ ಬಳಸಿದ ಅಥವಾ ಸೋರಿಕೆಯಾದ ರುಜುವಾತುಗಳೊಂದಿಗೆ ಬಳಕೆದಾರರ ಮೊಬೈಲ್ ಖಾತೆಯನ್ನು ಬಳಸುತ್ತಾರೆ. ಬಲಿಪಶುವಿನ ಸಂಖ್ಯೆಯನ್ನು ತಮ್ಮದೇ ಆದ ಮತ್ತೊಂದು ಸಾಧನಕ್ಕೆ ಪೋರ್ಟ್ ಮಾಡಲು ಪ್ರಾರಂಭಿಸುತ್ತಾರೆ. ಹೊಸ eSIM ಅನ್ನು ಸಕ್ರಿಯಗೊಳಿಸಲು ಬಳಸಬಹುದಾದ ಮೊಬೈಲ್ ಖಾತೆಯನ್ನು ಹೈಜಾಕ್‌ಮಾಡಿ QR ಕೋಡ್ ಅನ್ನು ಪಡೆಯುತ್ತಾರೆ. ನಂತರ ಅವರು ಅದನ್ನು ತಮ್ಮ ಸಾಧನದೊಂದಿಗೆ ಸ್ಕ್ಯಾನ್ ಮಾಡುತ್ತಾರೆ. ಆಗ ಸಂಖ್ಯೆಯು ಹೈಜಾಕ್ ಆಗುತ್ತದೆ. ಸಂತ್ರಸ್ತರ ಮೊಬೈಲ್ ಫೋನ್ ಸಂಖ್ಯೆಗೆ ಪ್ರವೇಶವನ್ನು ಪಡೆದ ನಂತರ, ಸೈಬರ್ ಅಪರಾಧಿಗಳು ಬ್ಯಾಂಕ್‌ಗಳು ಮತ್ತು ಮೆಸೆಂಜರ್‌ಗಳು ಸೇರಿದಂತೆ ವಿವಿಧ ಸೇವೆಗಳಿಗೆ ಪ್ರವೇಶ ಕೋಡ್‌ಗಳು ಮತ್ತು ಎರಡು ಅಂಶಗಳ ದೃಢೀಕರಣವನ್ನು (2-Factor Authentication) ಪಡೆಯಬಹುದು. ಅಪರಾಧಿಗಳಿಗೆ ಮೋಸದ ಯೋಜನೆಗಳನ್ನು ಜಾರಿಗೆ ತರಲು ಹೆಚ್ಚಿನ ಅವಕಾಶಗಳನ್ನು ಕೊಡುತ್ತದೆ. ಯೋಜನೆಯಲ್ಲಿ ವಿವಿಧ ಮಾರ್ಪಾಡುಗಳಿವೆ ಆದರೆ ವಂಚಕರು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಎಫ್‌ಎಸಿಸಿಟಿ ವಿಶ್ಲೇಷಕ ಡಿಮಿಟ್ರಿ ಡುಡ್ಕೋವ್ ವಿವರಿಸಿದ್ದಾರೆ.

ದಾಳಿಕೋರರಿಗೆ ಒಂದು ಬೋನಸ್ ಏನೆಂದರೆ, ಸಂಖ್ಯೆಯನ್ನು ತಮ್ಮ ಸಾಧನಕ್ಕೆ ಪೋರ್ಟ್ ಮಾಡುವ ಮೂಲಕ, ಅವರು ವಿವಿಧ ಮೆಸೆಂಜರ್ ಅಪ್ಲಿಕೇಶನ್‌ಗಳಲ್ಲಿ ಸಿಮ್-ಸಂಪರ್ಕಿತ ಖಾತೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ನಂತರ ಬಲಿಪಶುವಿನಂತೆ ನಟಿಸಿ ಅವರ ಬಂಧುಮಿತ್ರರಿಗೆ ಹಣವನ್ನು ಕಳುಹಿಸುವಂತೆ ಮೋಸದ ಸಂದೇಶಗಳನ್ನು ಕಳುಹಿಸಬಹುದು. ವಿಕ್ಟಿಮ್‌ನ ಬ್ಯಾಂಕ್‌ಖಾತೆಗಳನ್ನೂ ಬಳಸಬಹುದು. eSIM-ಸ್ವಾಪಿಂಗ್ ದಾಳಿಯ ವಿರುದ್ಧ ರಕ್ಷಿಸಲು, ಸಂಶೋಧಕರು ಮೊಬೈಲ್‌ ಸೇವಾ ಪೂರೈಕೆದಾರರ ಖಾತೆಗೆ ಸಂಕೀರ್ಣ ಮತ್ತು ಅನನ್ಯ ಪಾಸ್‌ವರ್ಡ್‌ಗಳನ್ನು ಬಳಸಲು ಶಿಫಾರಸು ಮಾಡುತ್ತಾರೆ. ಜೊತೆಗೆ ಎರಡು ಅಂಶದ ದೃಢೀಕರಣವನ್ನು ಸಕ್ರಿಯಗೊಳಿಸುವಂತೆ ತಿಳಿಸುತ್ತಾರೆ.

ಯಾವುದೇ ಹೊಸ ತಂತ್ರಜ್ಞಾನವನ್ನು ಬಳಸುವಾಗ ಅದರ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ತಿಳಿದು ಮುಂದುವರಿಯುವುದು ಒಳ್ಳೆಯದು. ಸೈಬರ್‌ ಲೋಕದಲ್ಲಿ ಆತುರ ತೋರದೆ, ಆಮಿಷಕ್ಕೆ ಒಳಗಾಗದೆ ಜಾಗರೂಕರಾಗಿರಿ. ಯಾವುದೇ ಸಂಚಿಗೆ ಸಿಲುಕಿದರೆ 1930 ಕ್ಕೆ ಕರೆ ಮಾಡಿ ನಿಮ್ಮ ದೂರು ದಾಖಲಿಸಲು ಮರೆಯಬೇಡಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲದಲ್ಲಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಬ್ಲ್ಯಾಕ್‌ಹೋಲ್?

Continue Reading

ಅಂಕಣ

ತಾತಯ್ಯ ತತ್ವಾಮೃತಂ: ಯಮನಿಗೆ ಅಂಜದ ಸತ್ಯವ್ರತಿಗಳು

ತಾತಯ್ಯ ತತ್ವಾಮೃತಂ: ಪರಮ ಪತಿವ್ರತೆ, ಅಂತರಂಗದ ಭಕ್ತ, ಸಿದ್ಧಯೋಗಿ ಹಾಗೂ ಭಾಗವತರು ಇವರುಗಳು ಸಾವು-ನೋವುಗಳಿಗೆ ಅಂಜದ ಸತ್ಯವ್ರತಿಗಳು. ಇವರನ್ನು ಮುಟ್ಟಲು ಯಮಧರ್ಮರಾಯನು ಹೆದರುತ್ತಾನೆ ಎನ್ನುತ್ತಾರೆ ತಾತಯ್ಯನವರು.

VISTARANEWS.COM


on

kaivara tatayya column
Koo
jayaram-column

ತಾತಯ್ಯ ತತ್ವಾಮೃತಂ: ಕೈವಾರ ತಾತಯ್ಯನವರು ಈ ಬೋಧನೆಯಲ್ಲಿ ಸಾವಿಗೆ ಅಂಜದ ಸತ್ಯವ್ರತಿಗಳ ಬಗ್ಗೆ ವಿವರಿಸುತ್ತಿದ್ದಾರೆ. ಸತ್ಯವನ್ನು ಅರಿತು ಪಾಲಿಸುವವರು ಸತ್ಯವ್ರತಿಗಳು. ಇಂತಹ ಸತ್ಯವ್ರತಿಗಳನ್ನು ಮುಟ್ಟಲು ಯಮಧರ್ಮರಾಜನು ಹೆದರುತ್ತಾನೆ ಎಂದು ತಾತಯ್ಯನವರು ಹೇಳುತ್ತಿದ್ದಾರೆ. ಇಲ್ಲಿ ಹೇಳಿರುವ ನಾಲ್ಕು ಬಗೆಯ ಸಾಧಕರು ಭಗವಂತನಿಗೆ ಪ್ರಿಯವಾಗುವಂತೆ ತಮ್ಮ ಶಪಥವನ್ನು ತಮ್ಮ ಶರೀರದ ಕೊನೆಯ ಉಸಿರು ಇರುವವರೆಗೆ ಬಿಡದೆ ವ್ರತದಂತೆ ಪಾಲಿಸುತ್ತಾ ಸಾಧಕರೆನಿಸಿಕೊಳ್ಳುತ್ತಾರೆ ಎಂಬುದು ತಾತಯ್ಯನವರ ಅಭಿಪ್ರಾಯವಾಗಿದೆ. ಅಂತಹ ಸಾಧಕರನ್ನು ವಿವರವಾಗಿ ತಿಳಿಯೋಣ..

1) ಪರಮ ಪತಿವ್ರತೆ :

ಪರಮ ಪತಿವ್ರತ – ಪತಿ ನಷ್ಟಮೈನನೂ
ತನ ವ್ರತಮು ವಿಡಚುನಾ ತಪಸಿ ರೀತಿ||

ಪತಿವ್ರತೆ ಎಂದರೆ ಪತಿಸೇವೆಯೆಂಬ ವ್ರತವನ್ನು ಹಿಡಿದವಳೆಂದು ಅರ್ಥ. ಪತಿ ತೀರಿಕೊಂಡರೂ ಆಕೆಯು ಪತಿಚಿಂತನೆ ಎಂಬ ತನ್ನ ವ್ರತವನ್ನು ಬಿಡದೇ ಇರುವವಳನ್ನು ತಾತಯ್ಯನವರು ಪರಮ ಪತಿವ್ರತೆ ಎಂದು ಕರೆದಿದ್ದಾರೆ. ಇಕೆಯು ತಪಸ್ಸಿನಲ್ಲಿರುವ ತಪಸ್ವಿಗೆ ಸಮಾನಳಾದ ತಪಸ್ವಿನಿ. ಇಂತಹವರು ಸಾವಿಗೆ ಅಂಜುವುದಿಲ್ಲ. ಪತಿಸೇವೆಗಿಂತಲೂ ಮಿಗಿಲಾದುದು ಈ ಲೋಕದಲ್ಲಿ ಇಲ್ಲವೆಂದು ಭಾವಿಸಿ, ಗೃಹಕೃತ್ಯದಲ್ಲಿ ದಕ್ಷಳಾಗಿ, ಪ್ರಿಯವಾದಿನಿಯಾಗಿ, ಪತಿಯಲ್ಲೇ ಪ್ರಾಣವಿಟ್ಟುಕೊಂಡಿರುವ ಪತಿವ್ರತೆಯೇ ನಿಜವಾದ ಪತ್ನಿ. ಪತಿಯನ್ನೇ ಗುರು-ದೈವವೆಂದು ಆರಾಧಿಸುವವಳು ಪರಮ ಪತಿವ್ರತೆ. ಇಂತಹ ಪತಿವ್ರತೆಯು ಸದಾಕಾಲ ಪತಿಯ ಚಿಂತನೆಯನ್ನೇ ಮಾಡುತ್ತಾ ಕಾಲ ಕಳೆಯುತ್ತಾಳೆ. ಪತಿ ನಿಧನರಾಗಿದ್ದರೂ ಹೃದಯದಲ್ಲಿ ಅನುಕ್ಷಣವೂ ಪತಿಧ್ಯಾನದಲ್ಲಿ ಇರುವ ಪರಮ ಪತಿವ್ರತೆಯನ್ನು ಯಮಧರ್ಮರಾಯನು ಮುಟ್ಟಲು ಹೆದರುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ವನವಾಸಕ್ಕೆ ಬಂದಿದ್ದ ಸೀತಾಮಾತೆಗೆ ಅನುಸೂಯದೇವಿ ಪತಿವ್ರತೆಯ ಮಹತ್ವವನ್ನು ಬೋಧಿಸುತ್ತಾ “ಪತಿವ್ರತೆಯಾದ ಸಾಧ್ವಿಗೆ ಪತಿಯೇ ದೇವಾಧಿದೇವತೆಗಳಿಗಿಂತ ಹೆಚ್ಚಿನ ಶ್ರೇಷ್ಠ ದೈವ” ಎಂದು ಉಪದೇಶವನ್ನು ಮಾಡುತ್ತಾಳೆ. ಮಹಿಳೆಯರ ಬಗ್ಗೆ ತಾತಯ್ಯನವರು ಹೊಂದಿದ್ದ ಗೌರವ ಭಾವನೆ ಈ ಪದ್ಯದಲ್ಲಿ ವ್ಯಕ್ತವಾಗಿದೆ. ವಿಧವೆಯನ್ನು ತಾತಯ್ಯನವರು ಪತಿವ್ರತೆಯನ್ನಾಗಿಯೂ, ತಪಸ್ವಿನಿಯನ್ನಾಗಿಯೂ ಪ್ರಶಂಸಿದ್ದಾರೆ. ಸತಿ ಸಾವಿತ್ರಿಯ ಉದಾಹರಣೆಯನ್ನೂ ಇಲ್ಲಿ ಪ್ರಸ್ತಾಪಿಸಬಹುದಾಗಿದೆ.

2) ಅಂತರಂಗದ ಭಕ್ತ:

ವಿಷ್ಣುಭಕ್ತುಂಡೈನ ವಿಪ್ರುಡು ಯೇವೇಳ
ಮರಚುನಾ ಸದ್ಗುರುನಿ ಮನಸುಲೋನ ||

ಇನ್ನು ಎರಡನೇಯ ಸಾಧಕ. ವಿಷ್ಣುಭಕ್ತನಾದ ವಿಪ್ರನು ಸದಾಕಾಲ ಸದ್ಗುರುವನ್ನು ಮನಸ್ಸಿನಲ್ಲಿ ಮರೆಯದೇ ಸ್ಮರಿಸುತ್ತಿರುತ್ತಾನೋ ಇಂತಹವನನ್ನೂ ಯಮನು ಮುಟ್ಟಲು ಅಂಜುತ್ತಾನೆ. ಇವನು ಅಂತರಂಗದ ಸಾಧಕ. ಇಲ್ಲಿ ವಿಪ್ರನೆಂದರೆ ಬ್ರಾಹ್ಮಣನೆಂದು ಅರ್ಥವಲ್ಲ. ಯಾರಾದರೇ ಸದಾಕಾಲ ಅಂತರಂಗದಲ್ಲಿ ಭಗವಂತನನ್ನು ಸ್ಮರಿಸುತ್ತಿರುತ್ತಾರೋ ಅವರೆಲ್ಲರೂ ವಿಪ್ರರೆ. ಭಕ್ತಿಯ ಭಾವಪರವಶತೆಯನ್ನು ತಾತಯ್ಯನವರು ಎತ್ತಿಹಿಡಿದಿದ್ದಾರೆ. “ಯಾವ ಜಾತಿಯವನೇ ಆಗಿರಲಿ, ಯಾವ ನೀತಿಯವನೇ ಆಗಿರಲಿ ಹರಿಭಕ್ತಿಯನ್ನು ಹೊಂದಿರುವವನೇ ಅಗ್ರಜನು” ಎಂದಿದ್ದಾರೆ ತಾತಯ್ಯನವರು. ಅಂತರಂಗದ ಭಕ್ತನು ಯಾವುದೇ ಲೋಕವ್ಯವಹಾರದಲ್ಲಿದ್ದರೂ ಮನಸ್ಸಿನಲ್ಲಿ ಭಗವಂತನ ಧ್ಯಾನ ಬಿಡುವುದಿಲ್ಲ. ಅವನು ಮಾಡುವ ಎಲ್ಲಾ ಕರ್ತವ್ಯಗಳನ್ನು ಭಗವಂತನ ಆರಾಧನೆ ಎಂದು ಮಾಡುತ್ತಿರುತ್ತಾನೆ. ಇಲ್ಲಿ ವಿಷ್ಣುಭಕ್ತರೆಂದರೆ ಭಗವಂತನ ಆರಾಧಕರು ಎಂದು ಅರ್ಥ. ಸದ್ಗುರುವೆಂದರೆ ಭಗವಂತ. ನಿರಂತರವಾಗಿ ಮನಸ್ಸಿನಲ್ಲಿ ಭಗವಂತನನ್ನು ಸ್ಮರಿಸುವವರು ಸತ್ಯವ್ರತಿಗಳು ಎಂದಿದ್ದಾರೆ ತಾತಯ್ಯನವರು. ಇವರು ಸಾವಿಗೆ ಹೆದರುವುದಿಲ್ಲ.

3) ಸಿದ್ಧಯೋಗಿ:

ಮೇರುವಪೈ ಚೇರಿ ಮೆಲಗ ನೇರ್ಚಿನ ಯೋಗಿ
ಚಿಕ್ಕುನಾ ಸಂಸಾರ ಚಿಕ್ಕುಲಂದು ||

ಸಿದ್ಧಯೋಗಿಯನ್ನು ತಾತಯ್ಯನವರು ಇಲ್ಲಿ ಪ್ರಸ್ತಾಪಿಸಿದ್ದಾರೆ. ದೇಹದಲ್ಲಿರುವ ಮೇರುವಿನ ಮೇಲೆ ಸಮಾಧಿಯೋಗ ವಿಧಾನದಿಂದ ಸಂಚರಿಸುವುದನ್ನು ಕಲಿತ ಸಾಧಕಯೋಗಿಯು ಸಂಸಾರದ ತೊಡಕುಗಳಿಗೆ ಸಿಕ್ಕಿಹಾಕಿಕೊಳ್ಳುವನೇ? ಎನ್ನುತ್ತಿದ್ದಾರೆ. ತಾತಯ್ಯನವರು ಸಹ ಗೃಹಸ್ಥರಾಗಿದ್ದಾಗ ಸಂಸಾರದ ತೊಡಕುಗಳಿಗೆ ಸಿಕ್ಕದೆ ಬಾಳಿ, ಗೃಹತ್ಯಾಗಮಾಡಿ ನಂತರ ಯೋಗಿಗಳಾದವರು. “ಮೇರುವ” ಎಂದರೆ ಮೇರುಪರ್ವತ, ಬಂಗಾರದ ಬೆಟ್ಟ ಎಂದು ಅರ್ಥ. ಆದರೆ ಯೋಗಭಾಷೆಯಲ್ಲಿ ಮೇರುವ ಎಂದರೆ ಮೇರುದಂಡ. ಇದು ದೇಹದ ಬೆನ್ನುಮೂಳೆ. ಈ ಮೇರುದಂಡದಲ್ಲಿಯೇ ಸುಷುಮ್ನನಾಡಿಯು ಗುದಭಾಗದಿಂದ ಮಸ್ತಕದ ಬ್ರಹ್ಮರಂಧ್ರದವರೆಗೆ ಹಬ್ಬಿದೆ. ಕುಂಡಲಿನೀ ಸಾಧಕ ಯೋಗಿಯು ಈ ನಾಡಿಯ ಮೂಲಕ ಮೂಲಾಧಾರಚಕ್ರದಿಂದ ಸಹಸ್ರಾರ ಚಕ್ರದವರೆಗೆ ಸಂಚರಿಸುತ್ತಾ ಪರಮಾತ್ಮನಲ್ಲಿ ಲೀನವಾಗುವ ಸಾಧನೆಯನ್ನು ಮಾಡಿರುತ್ತಾನೆ.

ಇಂತಹ ಯೋಗಿ ಬ್ರಹ್ಮಾನಂದವನ್ನು ಪಡೆಯುತ್ತಾನೆ. ಅಂತರಂಗ-ಬಹಿರಂಗ ಎರಡರಲ್ಲೂ ಈ ಸಾಧಕಯೋಗಿ ಬ್ರಹ್ಮವನ್ನು ಕಾಣುತ್ತಿರುತ್ತಾನೆ. ರಾಗ-ದ್ವೇಷಗಳಿಗೆ, ಅಹಂಕಾರ, ಮಮಕಾರಗಳ ತೊಡಕುಗಳಲ್ಲಿ ಈ ಯೋಗಿ ಸಿಕ್ಕಿಬೀಳುವುದಿಲ್ಲ. ಈತ ಮಾಯಗೆ ವಶನಲ್ಲ. ಸಂಸಾರದ ಮೋಹ-ಮಮತೆಗಳ ಬಲೆ ಇಲ್ಲ. ಇಂತಹ ಯೋಗಿಯ ಮೇಲೆ ಯಮನಿಗೆ ಅಧಿಕಾರವಿಲ್ಲ. ಏಕೆಂದರೆ ಪಾಪ-ಪುಣ್ಯಗಳ ಆಧಾರದ ಮೇಲೆ ಯಮನಿಗೆ ದಂಡಾಧಿಕಾರವಿರುತ್ತದೆ. ಯೋಗಿಗೆ ಪಾಪಪುಣ್ಯಗಳೇ ಇರುವುದಿಲ್ಲ. “ದಂಡಧರುಡು ಮಮ್ಮು ದಂಡಿಂಪ ವೆರುಚುನು” ಯೋಗಿಗಳನ್ನು ದಂಡಿಸಲು, ಮುಟ್ಟಲು ಯಮನು ಅಂಜುತ್ತಾನೆ ಎಂದಿದ್ದಾರೆ ತಾತಯ್ಯನವರು.

4) ಗುಪ್ತಸಾಧಕರಾದ ಭಾಗವತರು:

ಅಂಗಭಾವಮು ತೆಲಿಸಿ ಲಿಂಗಜ್ಯೋತಿನಿ ಜೂಚಿ
ಬಹು ಗುಪ್ತುಡೈವುಂಡು ಭಾಗವತುಡು||

ಭಾಗವತರೆಂದರೆ ಭಗವಂತನ ಜನ. ಉಪಾಸನೆಯಿಂದ ಭಗವಂತನನ್ನು ಓಲಿಸಿಕೊಂಡು ಸಾಕ್ಷಾತ್ಕಾರ ಪಡೆದುಕೊಂಡ ಅನನ್ಯ ಭಕ್ತರೇ ಭಾಗವತರು. ಇಂತಹ ಭಾಗವತರು ದೇಹದ ಬಗ್ಗೆ ಮೋಹವಿಲ್ಲದೆ, ಪರಮಾತ್ಮ ಭಾವದಿಂದ ಸ್ವಪ್ರಕಾಶವುಳ್ಳ ಲಿಂಗಜ್ಯೋತಿ ರೂಪನಾದ ಭಗವಂತನನ್ನು ತನ್ನಲ್ಲೇ ಕಂಡುಕೊಂಡು ಆನಂದಮಯನಾಗಿರುತ್ತಾನೆ. ಈತನು ಗುಟ್ಟು ಬಿಟ್ಟುಕೊಡದೆ, ಅರಿಯದವನಂತೆ ಸುಮ್ಮನಿರುವ ಗೂಡಸಾಧಕನಾದ ಭಾಗವತ. ಇತನು ಲಿಂಗಜ್ಯೋತಿಯನ್ನು ಕಂಡುಕೊಂಡಿರುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ಲಿಂಗಜ್ಯೋತಿಯೆಂದರೆ ಭಗವಂತನೆಂಬ ಪ್ರಕಾಶದ ಪರಂಜ್ಯೋತಿ ಎಂದರ್ಥ. ಯೋಗಭಾಷೆಯಲ್ಲಿ ಇದನ್ನು ಆಕಾಶದೀಪ ಎಂದೂ ಕರೆಯುತ್ತಾರೆ. ಸ್ವಪ್ರಕಾಶದ ಪರಂಜ್ಯೋತಿಯಾಗಿರುವ ಲಿಂಗಜ್ಯೋತಿಯನ್ನು ಕಂಡುಕೊಂಡ ಭಾಗವತನು ಬಾಹ್ಯದಲ್ಲಿ ಬಲ್ಲವನೆಂದು ತೋರ್ಪಡಿಸಿಕೊಳ್ಳದೆ ಸಾಮಾನ್ಯನಂತೆ ವರ್ತಿಸುತ್ತಾ ಗೂಢಸಾಧಕನಾಗಿರುತ್ತಾನೆ. ಇಂತಹ ಗುಪ್ತಾಸಾಧಕನಾದ ಸತ್ಯವ್ರತನು ಸಾವಿಗೆ ಅಂಜುವುದಿಲ್ಲ.

ಪರಮ ಪತಿವ್ರತೆ, ಅಂತರಂಗದ ಭಕ್ತ, ಸಿದ್ಧಯೋಗಿ ಹಾಗೂ ಭಾಗವತರು ಇವರುಗಳು ಸಾವು-ನೋವುಗಳಿಗೆ ಅಂಜದ ಸತ್ಯವ್ರತಿಗಳು. ಇವರನ್ನು ಮುಟ್ಟಲು ಯಮಧರ್ಮರಾಯನು ಹೆದರುತ್ತಾನೆ ಎನ್ನುತ್ತಾ ತಾತಯ್ಯನವರು ಭಕ್ತಿಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ ಅಂಕಣ: ಶ್ರೀರಾಮಭಜನೆ ಭವರೋಗಕ್ಕೆ ಔಷಧಿ

Continue Reading
Advertisement
Lok Sabha Election 2024 DK Shivakumar Suresh assetsworth Rs 598 crore and 259.19 crore Increase in 5 years
Lok Sabha Election 20242 mins ago

Lok Sabha Election 2024: ಡಿ.ಕೆ. ಸುರೇಶ್‌ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!

Summer Fashion
ಫ್ಯಾಷನ್4 mins ago

Summer Fashion: ಸಮ್ಮರ್‌ ಸೀಸನ್‌ನಲ್ಲಿ ಸಿಂಪಲ್‌ ಸ್ಲಿವ್‌ಲೆಸ್‌ ಗೌನ್‌ಗಳ ಹಂಗಾಮ!

job alert
ಉದ್ಯೋಗ5 mins ago

Job Alert: ಗುಡ್‌ನ್ಯೂಸ್‌; 93 ಬ್ಯಾಂಕ್‌ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

Aditi Rao Hydari engaged to Siddharth
ಟಾಲಿವುಡ್12 mins ago

Aditi Rao Hydari: ಎಂಗೇಜ್‌ ಆಗಿರುವ ಫೋಟೊ ಶೇರ್‌ ಮಾಡಿದ ಅದಿತಿ ರಾವ್ ಹೈದರಿ!

Henrich Klasen- IPL
ಪ್ರಮುಖ ಸುದ್ದಿ14 mins ago

IPL 2024 : ಅಪ್ಪನ ಸಿಕ್ಸರ್​​ಗೆ ಚಿಯರ್ಸ್ ಹೇಳಿದ ಕ್ಲಾಸೆನ್ ಪುತ್ರಿ, ಇಲ್ಲಿದೆ ವಿಡಿಯೊ

Actor Govinda
ದೇಶ17 mins ago

Actor Govinda: ಶಿವಸೇನೆ ನಾಯಕನ ಜತೆ ನಟ ಗೋವಿಂದಾ ಚರ್ಚೆ; ಚುನಾವಣಾ ಕಣಕ್ಕೆ ಎಂಟ್ರಿ?

SSLC Students Fighting
ಬೆಂಗಳೂರು23 mins ago

SSLC Students Fight: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಹೊಡಿಬಡಿ; ಮೂವರಿಗೆ ಚಾಕು ಇರಿತ

RCB team
ಕ್ರೀಡೆ44 mins ago

IPL 2024 : ಕೊಹ್ಲಿ- ಗಂಭೀರ್ ಮುಖಾಮುಖಿಯಲ್ಲಿ ವಿಜಯ ಯಾರಿಗೆ?

toll hike
ಬೆಂಗಳೂರು51 mins ago

Toll Hike: ಮತ್ತೆ ಟೋಲ್‌ ಬರೆ; ಬೆಂಗಳೂರು-ಮೈಸೂರು ಓಡಾಟ ಇನ್ನಷ್ಟು ದುಬಾರಿ

Arvind Kejriwal
ದೇಶ1 hour ago

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ತಪ್ಪದ ಸಂಕಷ್ಟ; ಇನ್ನೂ 4 ದಿನ ಜೈಲೇ ಗತಿ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20243 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20245 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ12 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌