ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು! Vistara News

ಅಂಕಣ

ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!

ಪ್ರತಿ ಭಾರತೀಯನೂ, ಈ ದೇಶ ನನ್ನದು, ನಾನು ನನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶ ಏಳಿಗೆ ಆಗುತ್ತದೆ ಎಂದು ಭಾವಿಸಬೇಕು. ಆಗ ವಿಶ್ವದ ಯಾವ ಶಕ್ತಿಯೂ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ.

VISTARANEWS.COM


on

meri maati mera desh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara Column @ Hariprakash Konemane

ಅಪಿ ಸ್ವರ್ಣಮಯಿ ಲಂಕಾ ನ ಮೇ ಲಕ್ಷ್ಮಣ ರೋಚತೇ,
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ||

ರಾವಣನ ಜತೆಗಿನ ಯುದ್ಧದಲ್ಲಿ ಗೆದ್ದ ನಂತರ ಲಂಕೆಯ ನೆಲದಲ್ಲಿ ನಿಂತು ಶ್ರೀರಾಮ ಈ ಮಾತನ್ನು ಲಕ್ಷ್ಮಣನಿಗೆ ಹೇಳುತ್ತಾನೆ ಎಂಬ ಮಾತಿದೆ. ಇದು ಮೂಲ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ ಎಂದೂ ಕೆಲವರು ಹೇಳುತ್ತಾರೆ. ಅದಿರಲಿ, ಇದರ ಅರ್ಥ ಮಾತ್ರ ರಾಮನ ಸ್ವಭಾವಕ್ಕೆ ಸಹಜವಾಗಿಯೇ ಅನುಗುಣವಾಗಿದೆ. ಈ ಲಂಕೆಯು ಚಿನ್ನದಿಂದ ನಿರ್ಮಾಣ ಆಗಿರಬಹುದು, ಆದರೆ ತಾಯಿ ಮತ್ತು ತಾಯಿ ಭೂಮಿಯು ಸ್ವರ್ಗಕ್ಕಿಂತ ಹಿರಿದಾದದ್ದು ಎನ್ನುವುದು ಈ ಸಂಸ್ಕೃತ ಶ್ಲೋಕದ ಅರ್ಥ. ಶ್ರೀರಾಮನು ಎರಡು ವಿಚಾರಗಳನ್ನು ಇಲ್ಲಿ ಉಲ್ಲೇಖಿಸಿದ್ದಾನೆ. ಮೊದಲನೆಯದು ತಾಯಿ, ಎರಡನೆಯದು ತಾಯಿಭೂಮಿ.

ಲಕ್ಷ್ಮಣದ ಆಶಯದಂತೆ ಲಂಕೆಯಲ್ಲೇ ಇರಬೇಕೆಂದು ಶ್ರೀರಾಮ ನಿರ್ಧಾರ ಮಾಡಿದ್ದೇ ಆಗಿದ್ದರೆ ತಾಯಿ ಕೌಸಲ್ಯೆಯನ್ನು ಇಲ್ಲಿಗೇ ಕರೆತಂದು ವಾಸ ಮಾಡುವುದು ಕಷ್ಟವೇನೂ ಆಗಿರುತ್ತಿರಲಿಲ್ಲ. ಆದರೆ ಎರಡನೆಯದು ತಾಯಿಭೂಮಿ. ತಾಯಿಭೂಮಿ ಬೇಕೆಂದರೆ ಶ್ರೀರಾಮ ಮತ್ತೆ ಅಯೋಧ್ಯೆಗೇ ಮರಳಲೇಬೇಕು. ಅದು ಮಾತೃಭೂಮಿಯ ವಿಶೇಷತೆ. ಮಾತೃಭೂಮಿ ಎಂದರೆ ಏನು? ಅಲ್ಲಿನ ಅರಮನೆಯೇ? ಅಲ್ಲಿರುವ ಸ್ನೇಹಿತರೇ? ಅಲ್ಲಿರುವ ಬಂಧು ಬಳಗವೇ? ಅಲ್ಲಿರುವ ಸೇವಕರೇ? ಅಲ್ಲಿರುವ ಆಸ್ತಿಪಾಸ್ತಿಯೇ? ಇವೆಲ್ಲವೂ ಚಲಿಸುವಂತಹವು ಹಾಗೂ ಜಗತ್ತಿನಲ್ಲಿ ಎಲ್ಲಿಬೇಕಾದರೂ ನಿರ್ಮಾಣ ಮಾಡಿಕೊಳ್ಳಬಹುದಾದ ಸಂಗತಿಗಳು. ಆದರೆ, ಮಾತೃಭೂಮಿಯಲ್ಲಿ ಮಾತ್ರವೇ ಇರುವ ಏಕೈಕ ಅಂಶವೆಂದರೆ ಮಣ್ಣು. ನನ್ನ ಊರಿನ ಮಣ್ಣು, ಅದರ ವಾಸನೆ, ಅದರೊಂದಿಗಿನ ಒಡನಾಟ ಇಡೀ ವಿಶ್ವದ ಇನ್ನಾವ ಮಣ್ಣಿನಲ್ಲೂ ಸಿಗುವುದಿಲ್ಲ. ಅದು ಭಾರತೀಯರಿಗೆ ಮಣ್ಣಿನೊಂದಿಗಿರುವ ಸಂಬಂಧ.
ಸ್ವಾತಂತ್ರ್ಯ ಪ್ರಾಪ್ತಿಯ ಮಾರ್ಗದಲ್ಲಿ ದೇಶದಿಂದ ಬ್ರಿಟನ್ನಿನ ಕಡೆಗೆ ಸಾಗಿದವರು ವೀರ ಸಾವರ್ಕರ್. ಬ್ರಿಟಿಷರ ಗುಹೆಯೊಳಗೇ ನುಗ್ಗಿ ಬೆದರಿಸಿಬರುತ್ತೇನೆ ಎಂದೇನೊ ಸಾವರ್ಕರ್ ಹೊರಡುತ್ತಾರೆ. ಆ ಕಾರ್ಯದಲ್ಲಿ ಸಾಕಷ್ಟು ಯಶವನ್ನೂ ಕಾಣುತ್ತಾರೆ. ಆದರೆ ಅಲ್ಲಿಗೆ ತೆರಳಿದ ನಂತರ ಮಾತೃಭೂಮಿಯ ಮೇಲಿನ ಉತ್ಕಟ ಪ್ರೇಮವನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಅಲ್ಲಿನ ಸಮುದ್ರದ ಬಳಿ ನಿಂತು ಭಾರತದ ಕಡೆಗೆ ತಿರುಗಿ ಕಣ್ಣೀರು ಹಾಕುತ್ತಾರೆ. ಓ ಮಾತೃಭೂಮಿ, ನಿನಗಾಗಿ ತ್ಯಾಗ ಮಾಡುವುದೇ ಜೀವನ, ನಿನ್ನ ಹೊರತಾಗಿ ಜೀವಿಸುವುದೇ ಮರಣ ಎಂದು ಹೇಳಿದವರು ಸ್ವಾತಂತ್ರ್ಯ ವೀರ ಸಾವರ್ಕರ್‌. ಸಮುದ್ರದ ಬಳಿ ನಿಂತು ʼಸಾಗರಾ ಪ್ರಾಣ ತಳಮಳಲಾ…” ಎಂದು ಹೇಳಿದ್ದು, “ಓ ಮಾತೃಭೂಮಿ…” ಎಂದು ಉಲ್ಲೇಖಿಸುವಾಗಲೂ ಸಾವರ್ಕರ್ ಕಣ್ಣಿನಲ್ಲಿ ಇದ್ದದ್ದು ಇಲ್ಲಿನ ಭೂಭಾಗ, ಅಂದರೆ ಮಣ್ಣೇ ಅಲ್ಲವೇ.

ಇದೇನು ಇಷ್ಟು ಮಹಾನ್ ವಿಚಾರ? ಎಂದು ಯಾರಾದರೂ ಕೇಳಬಹುದು. ಮಣ್ಣಿನ ಕುರಿತು ಈ ಮಟ್ಟಿಗಿನ ಉತ್ಕಟ ಪ್ರೇಮವನ್ನು ಹೊಂದಿರುವ ನಾಗರಿಕತೆಗಳು ಹೆಚ್ಚಿಲ್ಲ. ಜೀವನ ಎಲ್ಲಿದ್ದರೂ ನಡೆಯುತ್ತದೆಯಲ್ಲವೇ? ಮನುಷ್ಯನಿಗೆ ಬೇಕಿರುವುದು ರೋಟಿ, ಕಪಡಾ, ಮಕಾನ್ ತಾನೇ? ಎನ್ನುವವರಿಗೆ ಮಣ್ಣಿನ ಮಹತ್ವ ತಿಳಿಯುವುದಿಲ್ಲ. ಹಾಗೆ ನೋಡಿದರೆ, ಹುಟ್ಟಿದ ಮಣ್ಣಲ್ಲೇ ಮಣ್ಣಾಗಬೇಕು ಎಂಬುದು ಭಾರತದ ಅತಿದೊಡ್ಡ ನಂಬಿಕೆ. ಸತ್ತರೆ ತಮ್ಮ ದೇಹ ಹುಟ್ಟೂರಿನ ಮಣ್ಣಲ್ಲಿ ಸಮಾಧಿಯಾಗಬೇಕು ಇಲ್ಲವೇ ಸುಟ್ಟು ಭಸ್ಮವಾಗಬೇಕು ಎಂಬುದು ಎಲ್ಲರ ಅಂತಿಮ ಬಯಕೆಯೇ ಆಗಿರುತ್ತದೆ. ಹಾಗಾಗಿಯೇ ದೊಡ್ಡ ದೊಡ್ಡ ಸಾಧಕರು, ಮಹಾ ವ್ಯಕ್ತಿಗಳು ನಿಧನರಾದ ಬಳಿಕ, ಅವರ ದೇಹವನ್ನು ತಾಯ್ನೆಲದಲ್ಲಿಯೇ ಮಣ್ಣು ಮಾಡಲಾಗುತ್ತದೆ. ಏಕೆಂದರೆ, ಅವರೆಲ್ಲರೂ ಆ ಮಣ್ಣಿನ ಮಕ್ಕಳೇ ಆಗಿರುತ್ತಾರೆ.
ಮಣ್ಣಿನ ಮಗ ಎನಿಸಿಕೊಳ್ಳುವುದು ಶ್ರೀಸಾಮಾನ್ಯನಿಂದ ಅಸಾಮಾನ್ಯರವರೆಗೆ- ಎಲ್ಲರಿಗೂ ಅಭಿಮಾನದ ಸಂಗತಿ ಇಲ್ಲಿ.

ಈಗ ಪ್ರಧಾನಿ ನರೇಂದ್ರ ಮೋದಿಯವರು ಮೇರೀ ಮಾಠಿ-ಮೇರಾ ದೇಶ್ ಅಭಿಯಾನಕ್ಕೆ ಕರೆ ನೀಡಿದ್ದಾರೆ. ದೇಶಾದ್ಯಂತ ಈಗ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮಾಚಣೆ ನಡೆಯುತ್ತಿದೆ. ಈ ಸಂಭ್ರಮಾಚರಣೆಯ ಸಮಾರೋಪಕ್ಕೆ ಮೇರೀ ಮಾಠಿ-ಮೇರಾ ದೇಶ್ ಅಂದರೆ ನನ್ನ ಮಣ್ಣು-ನನ್ನ ದೇಶ ಎಂಬ ಅಭಿಯಾನ. ಈ ಅಭಿಯಾನಕ್ಕೆ ಟ್ಯಾಗ್‌ಲೈನ್‌ ಎಂದರೆ ಮಿಟ್ಟೀ ಕೊ ನಮನ್-ವೀರೋಂ ಕಾ ವಂದನ್ ಎನ್ನುವುದು.

PM Narendra Modi

ನಮ್ಮ ದೇಶವನ್ನು ರಕ್ಷಣೆ ಮಾಡುವ ಸೈನಿಕರನ್ನು ಗೌರವಿಸುವುದು, ದೇಶದ ಸಾಧನೆಗಳನ್ನು ಸ್ಮರಿಸುವುದು. ಈ ಕಾರ್ಯಕ್ರಮಗಳನ್ನು ದೇಶದ ಹಳ್ಳಿ ಹಳ್ಳಿಗಳಲ್ಲೂ, ಜಿಲ್ಲಾ ಮಟ್ಟದಲ್ಲೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲೂ ಆಚರಿಸಲು ಕರೆ ನೀಡಿದ್ದಾರೆ. ಈ ಅಭಿಯಾನದಡಿ, ಗ್ರಾಮದಲ್ಲಿ ದೇಸಿ ಸಸಿಗಳನ್ನು ನೆಡುವುದು ಸೇರಿ ಅನೇಕ ಕಾರ್ಯಕ್ರಮಗಳಿವೆ. ದೇಶಕ್ಕೆ ಪ್ರಾಣತ್ಯಾಗ ಮಾಡಿದ ವೀರ ಸೈನಿಕರು, ಪೊಲೀಸರು, ಸ್ವಾತಂತ್ರ್ಯ ಹೋರಾಟಗಾರರ ಹೆಸರಿರುವ ಶಿಲಾಫಲಕವನ್ನು ಗ್ರಾಮ, ಗ್ರಾಮ ಪಂಚಾಯಿತಿಯಲ್ಲಿ ಸ್ಥಾಪಿಸುವುದೂ ಈ ಕಾರ್ಯದಲ್ಲಿ ಒಂದು. ಪಂಚ ಪ್ರಾಣ ಸಂಕಲ್ಪ, ಅಂದರೆ 1. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವ ಸಂಕಲ್ಪ, 2. ವಸಾಹತುಶಾಹಿ ಮಾನಸಿಕತೆಯ ಕುರುಹುಗಳನ್ನು ಕಿತ್ತೊಗೆಯುವುದು, 3. ನಮ್ಮ ಪರಂಪರೆಯಲ್ಲಿ ಹೆಮ್ಮೆ ಕಾಣುವುದು, 4. ನಮ್ಮ ಏಕತೆಯೇ ನಮ್ಮ ಶಕ್ತಿ ಎಂದು ತಿಳಿಯುವುದು, 5. ನಾಗರಿಕರಾಗಿ ಪ್ರಾಮಾಣಿಕತೆಯಿಂದ ನಮ್ಮ ಕರ್ತವ್ಯ ನಿರ್ವಹಿಸುವುದು. ಈ ಸಂಕಲ್ಪಗಳನ್ನು ಮಾಡುತ್ತ ಪ್ರತಿ ಗ್ರಾಮದಿಂದಲೂ ಮಣ್ಣನ್ನು ಸಂಗ್ರಹಿಸಿ ನವದೆಹಲಿಗೆ ಕಳಿಸಬೇಕು.

ನವದೆಹಲಿಯಲ್ಲಿ ಸೈನಿಕರ ನೆನಪಿನಲ್ಲಿ ಸ್ಥಾಪನೆಯಾಗಲಿರುವ ವನದಲ್ಲಿ, ದೇಶದ ವಿವಿಧೆಡೆಯಿಂದ ಬಂದ ಈ ಮಣ್ಣನ್ನು ಹಾಕಲಾಗುತ್ತದೆ. ಅಲ್ಲಿ ಸೈನಿಕರಿಗೆ ವಂದನೆ ಸಲ್ಲಿಸುವ ಗುರುತು, ವನ ನಿರ್ಮಾಣ ಮಾಡಲಾಗುತ್ತದೆ. ಪ್ರತಿ ಸೈನಿಕನೂ ಗಡಿಯಲ್ಲಿ ಕಾಯುವುದು ಮಣ್ಣನ್ನೇ. ದೇಶದ ಜನರಿಗೆ ಆಹಾರ ನೀಡುವ ರೈತನೂ, ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕನೂ ತಾಯಿಯ ಸಂಬಂಧವನ್ನು ಹೊಂದುವುದು ಕೊನೆಗೆ ಮಣ್ಣಿನೊಂದಿಗೆ.

ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವರು ಹೇಳುವುದು, ಈ ಮಣ್ಣಿಗಾಗಿ ಹೋರಾಡುವೆ ಎಂದು. ಸೈನಿಕರು ಹೇಳುವುದು, ಈ ಮಣ್ಣಿಗಾಗಿ ಪ್ರಾಣ ಕೊಡುವೆ ಎಂದು. ಆದರೆ ಮಣ್ಣು ಎನ್ನುವುದು ಇತ್ತೀಚಿನ ದಿನಗಳಲ್ಲಿ ರಿಯಲ್‌ ಎಸ್ಟೇಟ್‌ ವಸ್ತುವಾಗಿದೆ, ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾದದ್ದು. ಇಂದು ಹಣ ಎನ್ನುವುದು ಮನುಷ್ಯನನ್ನು ಎಷ್ಟು ಆವರಿಸಿಕೊಂಡಿದೆ ಎಂದರೆ, ಅವನಿಗೆ ಮಣ್ಣಿನ ಮೇಲಿನ ಮಾತೃ ಸಂಬಂಧ ಕಡಿಮೆಯಾಗುತ್ತಿದೆ. ರಿಯಲ್ ಎಸ್ಟೇಟ್ ಎನ್ನುವುದು ಒಂದು ಮಾಫಿಯಾವಾಗಿ ದಿನದಿನವೂ ಸಾವಿರಾರು ಎಕರೆ ಹೊಲ, ಗದ್ದೆಗಳನ್ನು ಲೇಔಟ್‌ಗಳಾಗಿ ಪರಿವರ್ತನೆ ಮಾಡುತ್ತಿದೆ. ಇದು ಕೇವಲ ಬೆಂಗಳೂರಿನ ಮಾತಲ್ಲ. ಜಿಲ್ಲಾ ಕೇಂದ್ರಗಳ ಸುತ್ತಮುತ್ತ, ತಾಲೂಕು ಕೇಂದ್ರದ ಆಸುಪಾಸಿನಲ್ಲೂ ಇದು ಹರಡಿಕೊಳ್ಳುತ್ತಿದೆ. ತಮ್ಮ ಜಮೀನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಸಣ್ಣ ಅಳುಕೂ ಇಲ್ಲದೆ ರೈತರು ಕೋಟಿ ಕೋಟಿ ಹಣಕ್ಕೆ ಸಂತೋಷದಿಂದ ಭೂಮಿಯನ್ನು ಮಾರುವುದನ್ನು ಕಂಡರೆ ಬೇಸರವಾಗುತ್ತದೆ. ಇದೇ ಮಾನಸಿಕತೆ ನಿಧಾನವಾಗಿ ದೇಶದ ಕುರಿತೂ ಮೂಡುತ್ತದೆ.

freedom Fight

ಈ ಹಿಂದೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಪ್ರತಿ ಗ್ರಾಮದಿಂದ ಇಟ್ಟಿಗೆಯನ್ನು ಪೂಜಿಸಿ ಕಳಿಸಿಕೊಡಲಾಗಿತ್ತು. ಕನ್ಯಾಕುಮಾರಿಯಲ್ಲಿ ನಿರ್ಮಾಣವಾದ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕಕ್ಕೆ ದೇಶದ ಎಲ್ಲ ಸರ್ಕಾರಗಳಿಂದಲೂ ಹಣ ಸಂಗ್ರಹ ಮಾಡಲಾಗಿತ್ತು. ಗುಜರಾತ್‌ನಲ್ಲಿ ಇತ್ತೀಚೆಗೆ ನಿರ್ಮಿಸಿರುವ ಸರ್ದಾರ್‌ ಪಟೇಲರ ಪ್ರತಿಮೆಗೆ (ಏಕತೆಯ ಪ್ರತಿಮೆ) ದೇಶದ ಪ್ರತಿ ಗ್ರಾಮದಿಂದ, ಕೃಷಿಯಲ್ಲಿ ಬಳಸಿದ ಕಬ್ಬಿಣದ ತುಂಡನ್ನು ಸಂಗ್ರಹಿಸಲಾಗಿತ್ತು. ಈಗ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿ ಪ್ರಜೆಯೂ ಹಣದ ದೇಣಿಗೆ ನೀಡುವ ಮೂಲಕ ತನ್ನ ಕರ್ತವ್ಯ ಮೆರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಿರ್ಮಾಣವಾದ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೂ ಪ್ರತಿ ಗ್ರಾಮದಿಂದ ಮಣ್ಣು ಸಂಗ್ರಹ ಮಾಡಲಾಗಿತ್ತು.

ಇದೆಲ್ಲ ಏನನ್ನು ಸಚಿಸುತ್ತದೆ? ದೇಶದ ನಿರ್ಮಾಣದಲ್ಲಿ ನಮ್ಮ ಪಾತ್ರವೂ ಇದೆ ಎನ್ನುವುದನ್ನು ಇದು ಜನಮಾನಸದಲ್ಲಿ ಮೂಡಿಸುತ್ತದೆ. ಈ ಪ್ರತಿಮೆ, ಮಂದಿರ ನಿರ್ಮಾಣದಲ್ಲಿ ನನ್ನ ಹಣ, ನನ್ನ ಊರಿನ ಮಣ್ಣು ಇದೆ ಎನ್ನುವುದೇ ಅದು ಸ್ವಂತದ ಅನುಭವ ನೀಡುತ್ತದೆ. ಈಗ ಮೇರಾ ಮಾಠಿ-ಮೇರಾ ದೇಶ್‌ ಅಭಿಯಾನವೂ ಪ್ರತಿ ಭಾರತೀಯನಲ್ಲಿ ಏಕತೆಯ ಭಾವನೆ ಮೂಡಿಸುತ್ತದೆ.

ಇದೆಲ್ಲ ಭಾವನಾತ್ಮಕ ವಿಚಾರಗಳು. ಈಗೇಕೆ? ಅಭಿವೃದ್ಧಿ ಕಡೆಗೆ ಗಮನ ನೀಡಬೇಕಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಈಗ ದೇಶದಲ್ಲಿ ಎಲ್ಲ ಸಂಪನ್ಮೂಲ ಇದೆ, ಮೂಲಸೌಕರ್ಯಗಳೂ ಎಂದಿಗಿಂತ ವೇಗವಾಗಿ ಬೆಳೆಯುತ್ತಿವೆ. ವಿಮಾನಗಳು ಇಳಿಯಬಹುದಾದಂತಹ ರಸ್ತೆಗಳನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಆದರೆ ದೇಶದ ಜನರಲ್ಲಿ ಜಾತಿ, ಲಿಂಗ, ಉಪಾಸನೆ ಆಧಾರದಲ್ಲಿ ಭಿನ್ನತೆ ಮೂಡಿಸುವ ಪ್ರಯತ್ನವೂ ಅಷ್ಟೇ ವೇಗದಿಂದ ಸಾಗಿದೆ. ಸನಾತನ ಧರ್ಮವನ್ನು ನಾಶ ಮಾಡುತ್ತೇನೆ ಎನ್ನುವುದರಿಂದ, ಪ್ರತ್ಯೇಕ ಜಾತಿಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳೂ ಆತಂಕ ಮೂಡಿಸುವಂತಹವು. ಇಂತಹ ಒಡಕನ್ನು ಮೀರಿ ನಿಲ್ಲಲು ಬೇಕಿರುವುದು ಒಮ್ಮತ. ಹಾಗಾಗಿ ಭಾವ ಜಾಗರಣೆಯೇ ಇಂದಿನ ಅಗತ್ಯ.

ಸ್ವಾತಂತ್ರ್ಯ

ಇದನ್ನೂ ಓದಿ: ವಿಸ್ತಾರ ಅಂಕಣ: ತುರ್ತು ಪರಿಸ್ಥಿತಿ ಕಡೆಗೆ ಹೊರಳುತ್ತಿದೆ ಡಿಜಿಟಲ್ ನೈತಿಕ ಪೊಲೀಸ್ ಗಿರಿ

ಪ್ರತಿ ಭಾರತೀಯನೂ, ಈ ದೇಶ ನನ್ನದು, ನಾನು ನನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶ ಏಳಿಗೆ ಆಗುತ್ತದೆ ಎಂದು ಭಾವಿಸಬೇಕು. ಆಗ ವಿಶ್ವದ ಯಾವ ಶಕ್ತಿಯೂ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ. ಮನಸ್ಸೊಂದಿದ್ದರೆ ಮಾರ್ಗ ಇರುತ್ತದೆ ಎನ್ನುವುದನ್ನು ಕೋವಿಡ್ ಸಮಯದಲ್ಲಿ ಭಾರತ ನಿರೂಪಿಸಿದೆ. ಒಂದೂ ಪಿಪಿಇ ಕಿಟ್ ತಯಾರಾಗದಿದ್ದ ಭಾರತವು ಕೆಲವೇ ತಿಂಗಳಲ್ಲಿ ಪಿಪಿಇ ಕಿಟ್ ರಫ್ತುದಾರ ದೇಶವಾಯಿತು. ತನ್ನ ನೂರ ನಲವತ್ತು ಕೋಟಿ ಜನರಿಗೆ ಲಸಿಕೆ ಅಷ್ಟೆ ಅಲ್ಲದೆ, ವಿಶ್ವದ ಅನೇಕ ದೇಶಗಳಿಗೂ ಲಸಿಕೆಯನ್ನು ಸರಬರಾಜು ಮಾಡಿತು. ಹಾಗಾಗಿ ಇಂದು ಬೇಕಾಗಿರುವುದು ಭಾವಜಾಗೃತಿಯ ಕೆಲಸ. ನಮ್ಮೆಲ್ಲರ ಮೈಯಲ್ಲಿ ಹರಿಯುವ ರಕ್ತವೊಂದೆ, ನಮ್ಮೆಲ್ಲ ನೆಲದಲ್ಲಿನ ಮಣ್ಣು ಒಂದೆ, ನಾವೆಲ್ಲ ಭಾರತೀಯರು ಎಂಬ ಭಾವನೆ ಇಂದು ಬಲವಾಗಿ ಬೇರೂರಬೇಕು. ಈ ಮಂತ್ರವೊಂದೇ ಸಾಕು ನಮ್ಮನ್ನು ವಿಶ್ವಗುರು ಆಗಿಸಲು. ಸದ್ಯ ದೇಶದ ಪ್ರತಿ ಹೃದಯವನ್ನೂ ತಲುಪಬಲ್ಲ ವ್ಯಕ್ತಿ ಎಂದು ಯಾರಾದರೂ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ. ಮೇರಿ ಮಾಠಿ-ಮೇರಾ ದೇಶ್ ರೀತಿಯ ಅಭಿಯಾನದ ಮೂಲಕ ದೇಶದಲ್ಲಿ ಭಾವಜಾಗರಣವನ್ನು ಮೋದಿಯವರಿಗಿಂತ ಉತ್ತಮವಾಗಿ ಬೇರೆ ಯಾರಿಂದ ಮೂಡಿಸಲು ಸಾಧ್ಯ? ನಾವೂ ಈ ಅಭಿಯಾನದಲ್ಲಿ ಭಾಗವಹಿಸೋಣ. ನಮ್ಮ ನೆಲ, ಮಣ್ಣಿನ ಮೇಲಿನ ಪ್ರೇಮವನ್ನು ನೈಜವಾಗಿಸಿಕೊಳ್ಳುವ ಮೂಲಕ ದೇಶಸೇವೆಗೆ ಅಳಿಲು ಸೇವೆ ಸಲ್ಲಿಸೋಣ ಅಲ್ಲವೇ?

ಕೊನೆ ಮಾತು: ಅಭಿಯಾನಕ್ಕಾಗಿಯೇ ವೆಬ್‌ಸೈಟ್‌ www.merimaatimeradesh.gov.inಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕಾರ್ಯಕ್ರಮದ ಸಂಪೂರ್ಣ ವಿವರ ಅಲ್ಲಿದೆ. ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಪ್ರತಿಜ್ಞೆಯನ್ನು ಓದುವ ಜತೆಗೆ ಮಣ್ಣಿನ ಜತೆಗೆ ಫೋಟೊ ತೆಗೆದುಕೊಂಡು ಅಪ್‌ಲೋಡ್‌ ಕೂಡ ಮಾಡಬಹುದು. ಈ ಮೂಲಕ ದೇಶದಲ್ಲಿ ಈ ಕಾರ್ಯ ಕೈಗೊಂಡಿರುವ ಕೋಟ್ಯಂತರ ಜನರ ಜತೆಯಾಗಬಹುದು.

ಇದನ್ನೂ ಓದಿ: ವಿಸ್ತಾರ ಅಂಕಣ: ತಮಿಳುನಾಡಿನ ರಾಜಕಾರಣಿಗಳು ಜನರನ್ನು ನಿರಂತರವಾಗಿ ಹೇಗೆ ವಂಚಿಸುತ್ತಿದ್ದಾರೆ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ದಶಮುಖ ಅಂಕಣ: ಬೆಳಗೆಂಬ ಬೆರಗು!

ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ಮಾತಿನಂತೆ, ಮುಂಜಾನೆಯ ಮೆಲುಗಾಳಿಯಲ್ಲಿ, ಎಳೆಕಿರಣದ ಬಿಸುಪಿನಲ್ಲಿ, ಇಬ್ಬನಿಯ ತಬ್ಬುಗೆಯಲ್ಲೇ ಅನಂತನನ್ನು ಅರಸಿದವರು ನಮ್ಮ ಕವಿಗಳು.

VISTARANEWS.COM


on

winter morning
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ಈ ಮಾಗಿಯ ಬೆಳಗುಗಳು (winter mornings) ಎಂದಿಗೂ ಮಾಗುವುದೇ ಇಲ್ಲ! ಕಾರಣ, ಪ್ರತಿ ಬೆಳಗ್ಗೆಯೂ ನಿದ್ದೆ ಮಾಗುವ ಮುನ್ನವೇ ಏಳಬೇಕು. ಇದರರ್ಥ ನಾವೇನು ನಸುಕಿನ ನಾಲ್ಕಕ್ಕೆ ಏಳುತ್ತೇವೆಂದಲ್ಲ, ಬೆಳಗ್ಗೆ ಏಳಕ್ಕೆ ಎದ್ದರೂ ನಿದ್ದೆ ಹರಿಯುವುದಿಲ್ಲ. ಬಲಿತು ಹಣ್ಣಾಗದ, ಅಪಕ್ವ ನಿದ್ದೆಯನ್ನು ಒದ್ದು ಏಳುವ ಸಾಹಸ ಸಣ್ಣದಲ್ಲ. ಬೆಚ್ಚನೆಯ ಹೊದಿಕೆಯನ್ನು ನಾವೇ ಅಪ್ಪಿ ಹಿಡಿದಿರುತ್ತೇವೋ, ಅದೇ ನಮ್ಮನ್ನು ಬಿಡುವುದಿಲ್ಲವೋ ಎಂಬ ಗೊಂದಲದ ನಡುವೆ ಏಳುವುದೆಂದರೆ, ನಮ್ಮ ಇಚ್ಛಾಶಕ್ತಿಯ ಪರೀಕ್ಷೆಯ ಕಾಲವೇ ತಾನೆ? ಕಿರುಚುವ ಅಲರಾಂನ ಬಾಯಿಗೆ ಬಡಿಯುವಾಗ ಮುಂಬೆಳಗೂ ಗೋಚರಿಸದಿದ್ದರೆ, ಗಂಟೆಯನ್ನು ಮತ್ಮತ್ತೆ ಪರಾಂಬರಿಸಬೇಕಾಗುತ್ತದೆ. ʻಈಗಿನ್ನೂ ನಡುರಾತ್ರಿ!ʼ ಎಂಬ ಹುಸಿ ಭಾವವನ್ನು ಕೊಡವಿಕೊಂಡು ಒಮ್ಮೆ ಕಿಟಕಿಯಾಚೆಗೆ ಹಣುಕಿದರೆ ಕಾಣುವುದು- ʻ…ಬರಿ ಬೆಳಗಲ್ಲೋ ಅಣ್ಣಾʼ!

ದಿನವೂ ಅದೇ ಬೆಳಗು, ಅದೇ ಬೈಗು… ಒಮ್ಮೆಯಾದರೂ ಸಾಕೆನಿಸಿದ್ದು ಉಂಟೇ? ನವನವೋನ್ಮೇಷಶಾಲಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಪ್ರತಿ ಋತುವಿಗೆ, ಪ್ರತಿ ದಿನಕ್ಕೆ, ಪ್ರತಿ ಸ್ಥಳಕ್ಕೆ, ಪ್ರತಿ ಜೀವಕ್ಕೆ, ಭಾವಕ್ಕೆ, ಭಕುತಿಗೆ ಪ್ರತಿಯೊಂದು ಸೂರ್ಯೋದಯವೂ (Sunrise) ಭಿನ್ನ, ಅನನ್ಯ. ಸೂರ್ಯನ ಹುಟ್ಟಿನ ಹೊರತಾಗಿ ಜಗತ್ತಿನ ಇನ್ಯಾವ ಹುಟ್ಟೂ ಈ ಪರಿಯಲ್ಲಿ ಶುದ್ಧ ಆನಂದದ ಅನುಭೂತಿಯನ್ನು ನೀಡಲಿಕ್ಕಿಲ್ಲ. ಇಷ್ಟೊಂದು ನಿತ್ಯನೂತನ ಎನಿಸಿದ ಸೃಷ್ಟಿಕ್ರಿಯೆಯೊಂದು ಕವಿಗಳ ಕಣ್ಣಿಗೆ ಗೋಚರಿಸಿದ್ದು ಹೇಗೆ (sunrise in poetry) ಎಂಬ ಸಹಜ ಕುತೂಹಲವಿದು. ಇದೇ ಹಿನ್ನೆಲೆಯಲ್ಲಿ, ಕವಿ ಕಣ್ಣಿನಲ್ಲಿ ರವಿ ಮೂಡಿದ ಬಿಂಬಗಳನ್ನು ಅರಸುತ್ತಾ ಹೊರಟಿದ್ದಾಗಿದೆ.

ಬೇಂದ್ರೆ ಕಾವ್ಯದ ಅನುಸಂಧಾನದಲ್ಲಿ ಶಬ್ದಕ್ಕೆ ಅರ್ಥಗಳನ್ನು ಹುಡುಕುವುದು ರಸಾವಿಷ್ಕಾರದ ಮಿತಿ. ವಾಚ್ಯದಿಂದ ಚಿತ್ತವೃತ್ತಿಯತ್ತ ಸಾಗಿದಾಗಲೇ ಕಾವ್ಯ ದಕ್ಕುವುದು. ಆದಾಗ್ಯೂ ಶಬ್ದಗಳಲ್ಲಿ ಹಿಡಿಯುವುದಕ್ಕೆ ಇದೊಂದು ಪ್ರಯತ್ನ. ಬೆಳಗು ಎನ್ನುವುದು ಬೇಂದ್ರೆಯವರನ್ನು ಭಾವಸಮಾಧಿಗೆ ದೂಡಿದ್ದು ಎಷ್ಟು ಬಾರಿಯೊ! ಈ ಸಮಯವು ಅವರಿಗೆ ಒಮ್ಮೆ ಮುತ್ತಿನ ನೀರಿನ ಎರಕದಂತೆ ಕಂಡರೆ, ಇನ್ನೊಮ್ಮೆ ಬೆಳಕೆಂಬ ಬೇಟೆಗಾರನಂತೆ ಕಾಣುತ್ತದೆ. ಈ ನಿತ್ಯ ನಾಟಕರಂಗಕ್ಕಾಗಿ ಅವರೊಮ್ಮೆ ʻಉಷಾಸೂಕ್ತʼವನ್ನು ಹಾಡಿದರೆ ಇನ್ನೊಮ್ಮೆ ʻಸೂರ್ಯನ ಹೊಳಿʼಯನ್ನೇ ಹರಿಸುತ್ತಾರೆ. ಅವರ ʻವಸಂತ ಮುಖʼ ಎನ್ನುವ ಕವನದಲ್ಲಿ, “ಉದಿತ ದಿನ! ಮುದಿತ ವನ/ ವಿಧವಿಧ ವಿಹಗಸ್ವನ/ ಇದುವೆ ಜೀವ, ಇದು ಜೀವನ/ ಪವನದಂತೆ ಪಾವನ” ಎಂದು ಬಣ್ಣಿಸುತ್ತಾರೆ. ಇದೀಗ ಬೆಳಕು ಒಡೆದ ಕ್ಷಣದಲ್ಲಿ ಸುತ್ತಲಿನ ವನ, ವನವಾಸಿಗಳೆಲ್ಲ ಸಚೇತನರಾಗುತ್ತಾ, ಜೀವ-ಜೀವನದ ನಡುವಿನ ಸಾಮರಸ್ಯವೆಂಬುದು ಉಷಾಕಾಲದ ಗಾಳಿಯಷ್ಟೇ ಶುದ್ಧವಾಗಿ ಭಾಸವಾಗುತ್ತಿದೆ ಅವರಿಗೆ.

ಇನ್ನೊಂದು ಕವನದಲ್ಲಿ ಬೆಳಗು- ರಾತ್ರಿಗಳ ನಡುವಿನ ಅನನ್ಯ ನಂಟು ಅವರನ್ನು ಸೆಳೆಯುತ್ತದೆ. “ಬೆಳಗು ಗಾಳಿ ತಾಕಿ ಚಳಿತು/ ಇರುಳ ಮರವು ಒಡೆದು ತಳಿತು/ ಅರುಣ ಗಂಧ ಹರಹಿ ಒಳಿತು/ ನಸುಕು ಬಂತು” ಎಂದು ಸಂಭ್ರಮಿಸುತ್ತಾರೆ. ಉದಯಕಾಲದ ವರ್ಣನೆಯನ್ನು ಹೊತ್ತ ಮತ್ತೊಂದು ಕವನದಲ್ಲಿ, “ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಮ್‌ ಎಂದು ಬಿಟ್ಟ ಮಾರ/ ಗುಡಿಗೋಪುರಕ್ಕು ಬಲೆ ಬೀಸಿ ಬಂದ, ಅಗೊ ಬೆಳಕು ಬೇಟೆಗಾರ” ಎನ್ನುವ ಕುಶಲ ಉಪಮೆಯನ್ನು ಚಿತ್ರಿಸುತ್ತಾರೆ. “ಸೂರ್ಯನ ಹೊಳಿ” ಎನ್ನುವ ಕವನದಲ್ಲಿ ಒಡನಾಟಕ್ಕಾಗಿ ಹಂಬಲಿಸುತ್ತದೆ ಕವಿಮನ. “ಬಂದದ ಸೂರ್ಯನ ಹೊಳಿ/ ನಡೀ ಮೈತೊಳಿ, ನೀರಿನ್ಯಾಗಿಳಿ/ ಬಾ ಗೆಣೆಯಾ, ಯಾಕ ಮೈಛಳೀ” ಎಂದು ಬಿಸಿಲಲ್ಲೇ ತೋಯಿಸಿಬಿಡುತ್ತಾರೆ. ಅವರ ಪಾಲಿಗೆ ಬೆಳಗೆಂದರೆ ಕೇವಲ ದೃಶ್ಯವೈಭವವಲ್ಲ, ಇಡೀ ಲೋಕವನ್ನು ಸಚೇತನಗೊಳಿಸುವ ಕ್ರಿಯೆ. ಹಾಗಾಗಿಯೇ ಬೆಳಗೆನ್ನುತ್ತಿದ್ದಂತೆ ಅಷ್ಟೊಂದು ವೈವಿಧ್ಯಮಯ ಭಾವಗಳ ಸಂಚಾರ ಅವರ ಕವನಗಳಲ್ಲಿ. “ಅರಿಯದು ಆಳವು ತಿಳಿಯದು ಮನವು/ ಕಾಣದೋ ಬಣ್ಣಾ/ ಕಣ್ಣಿಗೆ ಕಾಣದೋ ಬಣ್ಣಾ” ಎಂದು ಬೆಳಗಿನ ಬಣ್ಣವನ್ನು ಕಾಣಲೆಂದು ಭಾವತೀವ್ರತೆಯಿಂದ ಕಣ್ಮುಚ್ಚುತ್ತಾರೆ.

ಕುವೆಂಪು ಅವರ ಕಾವ್ಯಗಳಲ್ಲಿ ರವಿದರ್ಶನ ಹೇಗಿದೆ ಎಂಬ ಬಗ್ಗೆ ಪಿಎಚ್‌ಡಿಗಳನ್ನು ಮಾಡಿದ್ದರೆ ಅಚ್ಚರಿಯಿಲ್ಲ. ʻಉದಯರವಿʼ ಎನ್ನುವ ಅವರ ಮನೆಯ ಹೆಸರೇ ಸೂರ್ಯೋದಯದ ಬಗೆಗೆ ಅವರಿಗಿದ್ದ ಅಸೀಮ ಪ್ರೀತಿಯನ್ನು ಸೂಚಿಸುತ್ತದೆ. ಪ್ರತಿಯೊಂದು ಮಾಸ, ಋತುಗಳಲ್ಲಿ ʻಶಿಶುರವಿʼಯ ಬೆಳವಣಿಗೆ ಚೋದ್ಯಗಳನ್ನು ಹೃದ್ಯವಾಗಿ ಚಿತ್ರಿಸುತ್ತಾರವರು. ಅವರ ʻಶರತ್ಕಾಲದ ಸೂರ್ಯೋದಯʼ ಎಂಬ ಕವನದಲ್ಲಿ, “ಹಚ್ಚನೆ ಪಚ್ಚನೆ ವೇದಿಕೆಯಲ್ಲಿ/ ಸಾಸಿರಗಟ್ಟಲೆ ಮುತ್ತನು ಚೆಲ್ಲಿ/ ರನ್ನದ ಕಿರುಹಣತೆಗಳಲ್ಲಿ/ ಶ್ಯಾಮಲ ತೈಲದಿ ಹೊನ್ನಿನ ಬತ್ತಿ/ ಕಾಮನಬಿಲ್ಲಿನ ಬೆಂಕಿಯು ಹೊತ್ತಿ/ ಸೊಡರುರಿಯುತ್ತಿದೆ ಅಲ್ಲಲ್ಲಿ!” ಎಂದು ಹುಲ್ಲಿನ ತಲೆಯ ಇಬ್ಬನಿಯ ಮೇಲೆ ಶಿಶುರವಿಯ ಕಿರಣಗಳು ಮೂಡಿಸಿದ ಕಾಮನಬಿಲ್ಲಿನ ಸೊಡರುಗಳ ಅನೂಹ್ಯ ವರ್ಣನೆಯನ್ನು ಕಟ್ಟಿಕೊಡುತ್ತಾರೆ.

ಅವರ ಕಾವ್ಯ ಪ್ರಪಂಚದಲ್ಲಿ ಸುಮ್ಮನೊಂದು ಸುತ್ತು ಹೊಡೆದರೆ ಹೆಜ್ಜೆಹೆಜ್ಜೆಗೆ ಬಾಲರವಿ ಎದುರಾಗುತ್ತಾನೆ. ʻಬಾ ಫಾಲ್ಗುಣ ರವಿ ದರ್ಶನಕೆ, ಆನಂದಮಯ ಈ ಜಗಹೃದಯ, ನೋಡು ತಳಿತ ತಳಿರ ನಡುವೆ ಅರುಣ ಕಿರಣ ಸರಿಯ ಸುರಿಸಿ, ಈ ಸುಂದರ ಪ್ರಾತಃಕಾಲದಿ, ಏನಿದೀ ದಿವ್ಯ ದೃಶ್ಯʼ ಎಂದು ಜಗದ ಸುತ್ತುಗಟ್ಟಿ ಪ್ರಾತಃಕಾಲವನ್ನು ಬಣ್ಣಿಸುತ್ತಾರವರು. ʻಉಷೆಯು ನಿಶೆಯ ಚುಂಬಿಸುವʼ ಆ ಘಳಿಗೆಯಲ್ಲಿ, “ಉದಯಿಸಿ ಬರೆ ಬಾಲರವಿ, ಉದಯಗಿರಿ ಲಲಾಟದಿ/ ಧ್ಯಾನಲೀನನಾಗೆ ಕವಿ ಶೈಲ ಶಿಲಾ ಪೀಠದಿ” ಎಂದು ಕವಿಮನ ಧ್ಯಾನಕ್ಕೆ ಜಾರುತ್ತದೆ. ʻಪ್ರಾತಃಕಾಲʼ ಎಂಬ ಕವಿತೆಯಲ್ಲಿ, “ಆಹ! ನಾಕವೆ ನಮ್ಮ ಲೋಕಕೆ ಕಳಚಿ ಬಿದ್ದಿದೆ ಬನ್ನಿರಿ! ತುಂಬಿಕೊಳ್ಳಲು ನಿಮ್ಮ ಹೃದಯದ ಹೊನ್ನ ಬಟ್ಟಲ ತನ್ನಿರಿ” ಎಂದು ಸಂಭ್ರಮಿಸುತ್ತಾರೆ.

ಭಾದ್ರಪದದ ಸುಪ್ರಭಾತ, ಫಾಲ್ಗುಣ ಮಾಸದ ಸೂರ್ಯೋದಯ, ಶರತ್ಕಾಲದ ಸೂರ್ಯೋದಯ, ಆಷಾಢ ಸುಪ್ರಭಾತ, ವೈಶಾಖದ ಸೂರ್ಯೋದಯ- ಹೀಗೆ ಕಾಲಕಾಲಕ್ಕೆ ಉದಯರವಿಯ ಸೌಂದರ್ಯವನ್ನವರು ವರ್ಣಿಸಿದ್ದಾರೆ. ಎಲ್ಲಿಯವರೆಗೆಂದರೆ ರವಿಯನ್ನು ತನ್ನ ಕೆಳೆಯನಂತೆ ಕಂಡು ಕಾಲೆಳೆಯುವ ಸಾಲುಗಳೂ ಇವೆ. “ಬರಿ ಬಣಗು ಬ್ರಹ್ಮಚಾರಿಯೊ ನೀನು ಹಾಗಿದ್ದರೆ/ ಬುದ್ಧಿ ಹೇಳುವೆ ಕೇಳು, ಬೇಗನೆ ಮದುವೆಯಾಗು/ ಉಷೆಯ ಊರೊಳು ಇನಿತು ತಳುವಿ/ ಬರಬಹುದಂತೆ” ಎಂದು ಸೂರ್ಯನನ್ನು ಛೇಡಿಸುತ್ತಾರೆ.

Morning Vastu Tips

ಜಿ.ಎಸ್.‌ ಶಿವರುದ್ರಪ್ಪನವರ ಕವಿತೆಯಲ್ಲಿ ರವಿ ಮತ್ತು ಕವಿಯ ನಡುವಿಗೊಂದು ಸುಂದರ ಆಟ ನಡೆಯುತ್ತಿದೆ. “ಯಾರವರು ಯಾರವರು ಯಾರು?/ ಬಾಗಿಲಲಿ ಬಂದವರು ನಿಂದವರು ಯಾರು? ಒಳಗೆಲ್ಲಾ ಬೆಳಕನ್ನು ಚೆಲ್ಲಿದವರಾರು? ತುಂಬಿದ್ದ ಕತ್ತಲನು ಕಳೆದವರು ಯಾರು?” ಎಂದು ಬಾಗಿಲಾಚೆಗೆ ಇರುವವನ ಬಗ್ಗೆ ಗೊತ್ತಿದ್ದೂ ಸೋಜಿಗ ತೋರುತ್ತಾರೆ. ಅವರ ಇನ್ನೊಂದು ಕವನದಲ್ಲಿ, “ಬಾಂದಳ ಚುಂಬಿತ ಶುಭ್ರ ಹಿಮಾವೃತ/ ತುಂಗ ಶೃಂಗದಲಿ ಗೃಹವಾಸಿ/ ದೀನ ಅನಾಥರ ದುಃಖಿ ದರಿದ್ರರ/ ಮುರುಕು ಗುಡಿಸಲಲಿ ಉಪವಾಸಿ!” ಎನ್ನುತ್ತ ಸೂರ್ಯನಿಗೆ ಉಪ್ಪರಿಗೆ ಮನೆ, ಮುರುಕು ಗುಡಿಸಲು- ಎಲ್ಲ ಒಂದೇ ಎಂಬ ಸತ್ಯವನ್ನು ಬಿಚ್ಚಿಡುತ್ತಾರೆ. ಇನ್ನು, ಮಾಸ್ತಿ ವೆಂಕಟೇಶ ಅಯ್ಯಂಗಾರರ ನೇಸರನೂ ನಾಡನ್ನು ಬೆಳಗಿಸಲೆಂದೇ ಬಂದವ. “ಮೂಡಣ ಬೈಲಿಂದ ಮೇಲಕ್ಕೆ ಹಾರಿ/ ದೂರದ ಮಲೆಯ ತಲೆಯನೆ ಏರಿ” ಇರುಳನ್ನು ಹೊರಳಿಸುವವ.

ಇದನ್ನೂ ಓದಿ: ದಶಮುಖ ಅಂಕಣ: ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ!

ನಮ್ಮ ಇಳೆವೆಣ್ಣಿನೊಂದಿಗೆ ನೇಸರನ ಪ್ರೇಮದಾಟ ಹೊಸದೇನಲ್ಲ. ಯಾವುದೇ ಬಂಧನಗಳಿಗೆ ಸಿಲುಕದೆಯೂ ಅವಿಚ್ಛಿನ್ನವಾಗಿ ಸಾಗಿಬಂದ ಅನಂತ ಪ್ರಣಯಿಗಳಿವರು. ಹಸಿರು ಸೀರೆಗೊಪ್ಪುವ ಹೂ ಕುಬಸವನ್ನು ತೊಟ್ಟು ಇಬ್ಬನಿಯ ಮಾಲೆ ಧರಿಸಿ ಕಾದವಳ ನಿರೀಕ್ಷೆ ಬಿ.ಆರ್.‌ ಲಕ್ಷ್ಮಣರಾಯರ ಕವನದಲ್ಲಿ ಹುಸಿ ಹೋಗಲಿಲ್ಲ. “ಕಂಡೊಡನೆ ನೇಸರನ ಕೆಂಪಾದವು ಕೆನ್ನೆ/ ಪುಲಕಿಸಿ ನಸು ಬಿಸಿಯೇರಿತು ಒಡಲು/ ಅವನು ಸೋಕಿದೊಡನೆ/ ನಾಚಿಕೆಯ ಮಂಜುತೆರೆ ಸರಿಸುತ್ತ ಪ್ರಿಯತಮನು/ ಇಳೆಯ ಚುಂಬಿಸಿದನು!” ಎಂಬಂತೆ ಕಾಣುತ್ತದೆ ಕವಿ ಕಣ್ಣಿಗೆ.

ಸೂರ್ಯೋದಯದ ರಂಗಿನಷ್ಟೇ ವೈವಿಧ್ಯಮಯ ಅದರ ವರ್ಣನೆಗಳು. ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ʻಬಾ ಬಾ ಓ ಬೆಳಕೇ, ಕರುಣಿಸಿ ಈ ನೆಲಕೆʼ ಕವನದಲ್ಲಿ ಸೂರ್ಯನೆಂಬಾತ ಗೆಳೆಯ, ಪ್ರೇಮಿಯೆಲ್ಲಾ ಅಲ್ಲ. “ವಿಶ್ವದೆದೆಯ ಪದಕವೆ/ ಬಾಂದಳದ ತಿಲಕವೆ/ ನಿನ್ನೊಳಗಿರುವ ಸತ್ಯ ತೋರು/ ಬಂಗಾರದ ಫಲಕವೇ” ಎಂದು ವಿಶ್ವಕ್ಕೆಲ್ಲಾ ಸತ್ಯದರ್ಶನ ಮಾಡಿಸುವವನಂತೆ ಗೋಚರಿಸುತ್ತಾನೆ. ʻಚೆಲುವೆ ಯಾರೊ ನನ್ನ ತಾಯಿಯಂತೆʼ ಎಂಬ ಇನ್ನೊಂದು ಕವನದಲ್ಲಿ, ಉದಯರವಿಯು ಕೆಂಪಗೆ, ದುಂಡಗೆ ಭೂತಾಯಿಯ ಹಣೆಗಿಟ್ಟ ಬೊಟ್ಟಿನಂತೆ ಕಾಣುತ್ತಾನೆ ಕವಿಗೆ.

ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ಮಾತಿನಂತೆ, ಮುಂಜಾನೆಯ ಮೆಲುಗಾಳಿಯಲ್ಲಿ, ಎಳೆಕಿರಣದ ಬಿಸುಪಿನಲ್ಲಿ, ಇಬ್ಬನಿಯ ತಬ್ಬುಗೆಯಲ್ಲೇ ಅನಂತನನ್ನು ಅರಸಿದವರು ನಮ್ಮ ಕವಿಗಳು. ಮುಂಬೆಳಗಿನ ಹೊಂಬಣ್ಣದ ಎಳೆಯೊಂದೇ ಸಾಕು, ಅವರ ಮಾನಸ ಸರಸಿಯಲ್ಲಿ ತಿರೆ ಸಗ್ಗವಾಗುವುದಕ್ಕೆ; ಲೋಕ ಮೀರಿದ ಮೋಹದಲ್ಲಿ ಆ ನಾಕವನ್ನೂ ಮರೆಯುವುದಕ್ಕೆ! ಹಾಗಾಗಿ ಮಾಗಿಯ ಚಳಿ ಇದ್ದರಿರಲಿ, ಏಳಿ ಬೇಗ, ಕಾಣಿ ಬೆಳಗೆಂಬ ಬೆರಗ!

ಇದನ್ನೂ ಓದಿ: ದಶಮುಖ ಅಂಕಣ: ಶುಭಾಶಯ ಪತ್ರಗಳೆಂಬ ಚಿತ್ರ-ಕಾವ್ಯಗಳು

Continue Reading

ಅಂಕಣ

Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

Prerane Column : ವಿದ್ಯೆ ಎಂದರೆ ನಾಳೆ ದುಡ್ಡು ಮಾಡಲು ಇರುವ ದಾರಿ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದರೆ, ನಿಜವಾದ ವಿದ್ಯೆಯ ಉದ್ದೇಶ ಅದಲ್ಲವೇ ಅಲ್ಲ.

VISTARANEWS.COM


on

sadghuru with students
Koo
Sadhuru Jaggi Vasudev

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ಇಂದಿನ ವಿದ್ಯಾಭ್ಯಾಸದ ಉದ್ದೇಶ (Education System), ಇಲ್ಲಿರುವುದೆಲ್ಲವನ್ನೂ ನಮಗೆ ಉಪಯೋಗವಾಗುವಂತೆ ಬಳಸಿಕೊಳ್ಳುವುದು ಹೇಗೆ ಎಂಬುದಾಗಿದೆ. ಒಂದು ಎಲೆಯನ್ನೂ ತಮ್ಮ ಲಾಭಕ್ಕಾಗಿ ಉಪಯೋಗಿಸುವ ಸ್ವಾರ್ಥದ ಮನೋಭಾವನೆ (Selfish mind) ಮನುಷ್ಯರಿಗೆ ಬಂದುಬಿಟ್ಟಿದೆ. ಮರ, ಗಾಳಿ, ಭೂಮಿಯ ತಳದಲ್ಲಿ ಹುದುಗಿಸುವ ಪ್ರಕೃತಿ ಸಂಪತ್ತು, ಕಡೆಗೆ ಕಣ್ಣಿಗೆ ಕಾಣದ ಸೂಕ್ಷ್ಮವಾದ ವೈರಸ್‌ನಲ್ಲೂ ತಮಗೆ ಏನು ಆದಾಯ ದೊರೆಯಬಹುದೆಂಬುದೇ ಅವರ ಯೋಚನೆ (Prerane Column).

ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ತನ್ನದೇ ಆದ ಒಂದು ಪ್ರಪಂಚವಿದೆ. ಪ್ರಕೃತಿಗೆ ಸಂಬಂಧಿಸಿದಂತೆ ಮನುಷ್ಯರೂ ಬೇರೆ ಜೀವಿಗಳಂತೆಯೇ ಒಂದು ಜೀವಿ, ಎಲ್ಲವನ್ನೂ ಒಳಗೂಡಿಸಿಕೊಳ್ಳುವುದೇ ನಿಜವಾದ ವಿದ್ಯೆ..
ಆದರೆ, ಮನುಷ್ಯರು ಮಾತ್ರ ತಮ್ಮ ಬಗೆಗೆ ಏನನ್ನು ಯೋಚಿಸುತ್ತಾರೆಂದು ನಿಮಗೆ ಗೊತ್ತೇ?

ಕಾಗೆ, ಜೇನ್ನೊಣ ಮತ್ತು ಮನುಷ್ಯ ಸ್ವರ್ಗಕ್ಕೆ ಹೋದಾಗ..

ಒಂದು ಕಾಗೆ, ಒಂದು ಜೇನ್ನೊಣ, ಒಬ್ಬ ಮನುಷ್ಯ ಒಂದೇ ಸಮಯದಲ್ಲಿ ಮರಣವನ್ನಪ್ಪಿದರು. ದೇವಲೋಕಕ್ಕೆ ಅವರನ್ನು ಕರೆದುಕೊಂಡು ಹೋಗಿ ವಿಚಾರಣೆಗೆ ನಿಲ್ಲಿಸಿದರು. ಅಲ್ಲಿ ಅವರಿಗೆ ಎಲ್ಲಿ ಜಾಗ ಬೇಕೆಂದು ದೇವರು ಕೇಳಿದರು.
1. ಜೇನ್ನೊಣವು, ಭೂಮಿಯ ಮೇಲಿದ್ದಾಗ ಹಲವು ಬಗೆಯ ಮಕರಂದವನ್ನು ಶೇಖರಿಸಿದೆ. ನನಗೆ ಸ್ವರ್ಗ ದೊರೆತರೆ ಸಂತೋಷವಾಗುತ್ತದೆ ಎಂದಿತು.

2.ಕಾಗೆ, ಹಲವಾರು ಬಗೆಯ ಬೀಜಗಳನ್ನು ನಾನು ಬೇರೆ ಬೇರೆ ಸ್ಥಳಗಳಲ್ಲಿ ಉಗುಳಿದ ಕಾರಣ ಅರಣ್ಯ ಅಭಿವೃದ್ಧಿಯಾಯಿತು. ಪ್ರಕೃತಿಗೆ ಸಹಾಯಮಾಡಿದ ನನಗೂ ಸ್ವರ್ಗದಲ್ಲಿ ಸ್ಥಳ ಬೇಕು ಎಂದಿತು.

3.ಆದರೆ ಮನುಷ್ಯ, “ಏ ಹಲೋ? ನೀನು ಕುಳಿತಿರುವುದು ನನ್ನ ಕುರ್ಚಿ, ಎದ್ದೇಳು” ಎಂದನು.

ದೇವರು ತನ್ನ ಆಕಾರದಂತೆಯೇ ಇರುವುದಾಗಿ ಮನುಷ್ಯರ ಕಲ್ಪನೆಯಿರುವುದರಿಂದ ನಮಗೆ ಮಿತಿಮೀರಿದ ಅಹಂಭಾವ. ಬೇರೆ ಜೀವರಾಶಿಗಳಿಗಿಂತ ಹೆಚ್ಚಿನ ಬುದ್ಧಿವಂತಿಕೆಯಿದೆ ಎಂದುಕೊಂಡಿರುವುದರಿಂದ ತಮ್ಮನ್ನು ದೇವರನ್ನಾಗಿಯೇ ಭಾವಿಸಿ, ತಮ್ಮ ಸುಖವನ್ನು ಮಾತ್ರ ಸದಾಕಾಲ ಯೋಚಿಸುತ್ತಾ ತಮಗೆ ಹೊಂದಿಕೆಯಾಗದ ಎಲ್ಲವನ್ನೂ ಈ ಪ್ರಪಂಚದಿಂದಲೇ ಅಳಿಸಿಹಾಕಲು ಮುಂದಾಗಿದ್ದಾರೆ ಜನರು.

ಈ ಮನೋಭಾವಕ್ಕೆ ಜತೆಗೂಡುವಂತೆ ರಚಿತವಾಗಿವುದೇ ಇಂದಿನ ವಿದ್ಯಾಭ್ಯಾಸದ ದೊಡ್ಡ ಕೊರತೆ. ಒಬ್ಬ ವಿಜ್ಞಾನಿ ತನ್ನ ಸಂಶೋಧನಾ ಲೇಖನಗಳನ್ನು ಜೋಡಿಸಿಕೊಳ್ಳಲು ಒಂದು ಜೆಮ್ ಕ್ಲಿಪ್ಪನ್ನು ಹುಡುಕಾಡಿದಾಗ ಒಂದು ಬಾಗಿದ ಕ್ಲಿಪ್ ದೊರಕಿತು. ಅದನ್ನು ಸರಿಪಡಿಸಲು ಒಂದು ಉಪಕರಣವನ್ನು ಹುಡುಕುತ್ತಿದ್ದಾಗ ಜೆಮ್ ಕ್ಲಿಪ್‌ಗಳ ಪೆಟ್ಟಿಗೆಯೇ ಸಿಕ್ಕಿತು. ವಿಜ್ಞಾನಿಯು, ಸರಿಯಾಗಿದ್ದ ಹೊಸ ಕ್ಲಿಪ್ಪಿನಿಂದ ಬಾಗಿದ್ದ ಕ್ಲಿಪ್ಪನ್ನು ಸರಿಮಾಡಲು ಪ್ರಾರಂಭಿಸಿದ. ಇದರಿಂದ ಆಶ್ಚರ್ಯಗೊಂಡ ಸಹಾಯಕನನ್ನು ನೋಡಿದ ವಿಜ್ಞಾನಿಗೆ ತನ್ನ ತಪ್ಪಿನ ಅರಿವಾಯಿತು.

ನಿಜವಾದ ವಿದ್ಯಾಭ್ಯಾಸ ಅಂದರೆ ಏನು?

ನಿಜವಾದ ವಿದ್ಯಾಭ್ಯಾಸವೆಂದರೆ ಗಂಡು, ಹೆಣ್ಣು ಎಂಬ ಭೇದ ಭಾವ ಕೂಡದು. ಇಬ್ಬರಿಗೂ ಶ್ರೇಯಸ್ಸು ಒದಗಿಸುವಂತೆ ಅದು ಸಾಮಾನ್ಯವಾಗಿರಬೇಕು. ಬೇರೆಯವರ ಕಣ್ಣಿಗೆ ಮಿಂಚುವಂತೆ ಕಾಣಬೇಕೆಂಬ ಕಾರಣಕ್ಕಾಗಿ ಅದು ರೂಪಿತವಾದರೆ ಕುಟುಂಬಗಳು ಮಾತ್ರವಲ್ಲ ಸಂಬಂಧಗಳು ಹಾಗೂ ಸಮುದಾಯಗಳಲ್ಲಿಯೂ ತೊಂದರೆಗಳು ಕಂಡುಬರುತ್ತವೆ.

sadghuru with students

ಹಿಂದೆ ನಮ್ಮ ದೇಶದಲ್ಲಿದ್ದ ಶಿಕ್ಷಣವು ಕೇವಲ ಒಬ್ಬ ವ್ಯಕ್ತಿಯನ್ನು ರೂಪಿಸುವಲ್ಲಿ ಮಾತ್ರ ನಿಲ್ಲದೆ, ಅವರೊಂದಿಗೆ ಸೇರಿದವರೆಲ್ಲರನ್ನೂ ಸೇರಿಸಿಕೊಂಡು ಮುನ್ನಡೆಯುವ ಸಲುವಾಗಿ ರೂಪುಗೊಂಡಿತ್ತು. ಇತರರನ್ನೂ ತನ್ನಂತೆಯೇ ಭಾವಿಸುವಂತೆ ಅದು ರೂಪುಗೊಂಡಿತ್ತು.

ಆದರೆ, ಇಂಗ್ಲಿಷ್ ಆಳ್ವಿಕೆಯಡಿಯಲ್ಲಿ ರೂಢಿಗೆ ಬಂದ ವಿದ್ಯಾಭ್ಯಾಸ, ನಾವು ಎಂದು ಹೇಳುವುದರ ಬದಲಾಗಿ ನಾನು ಎಂದು ಪರಿಗಣಿಸುವಂತೆ ಮಾಡಿತು. ನಾನು, ನನ್ನದು ಎಂಬುದನ್ನು ಮಾತ್ರ ಗಮನದಲ್ಲಿರಿಸಿಕೊಂಡಿರುವ ವಿದ್ಯಾಭ್ಯಾಸವು, ಸಮಾಜಕ್ಕೆ, ಕುಟುಂಬಕ್ಕೆ ಎಂದಿಗೂ ಉಪಯೋಗವಾಗುವಂತಹುದಲ್ಲ.

ನಾವು ಜೀವಿಸುವ ಮನೆಯನ್ನು ಇಲ್ಲವೆ ದೇಶವನ್ನು ಕಡೆಗಣಿಸಿ ನಮ್ಮದೇ ಆದ ದೇಶದಲ್ಲಿ ಅನ್ಯದೇಶದವರಂತೆ ಭಾವನೆಯನ್ನು ಉಂಟುಮಾಡುವ ವಿದ್ಯಾಭ್ಯಾಸ ಸರಿಯಾದುದಲ್ಲ. ಬದುಕಲು ಮರ‍್ಗವನ್ನು ಮಾತ್ರ ತೋರಿಸಿ ಅಲ್ಲಿಗೆ ನಿಂತುಬಿಡದೆ, ವಿದ್ಯಾವಂತರು ತಮ್ಮ ದೃಷ್ಟಿಯನ್ನು ಬೇರೆ ಕೋನಗಳಿಂದ ನೋಡಲು ಅವಕಾಶ ನೀಡುವಂತಹ ಸಮಗ್ರ ವಿದ್ಯಾಭ್ಯಾಸದ ಅಗತ್ಯವಿದೆ.

ನಮ್ಮ ಗ್ರಾಮಗಳಲ್ಲಿ ಲಕ್ಷಗಟ್ಟಲೆ ಜನರು ಹಲವು ತಲೆಮಾರುಗಳಿಂದ ಅದೇ ರೀತಿಯಲ್ಲಿ ದೀನರಾಗಿ ಜೀವನವನ್ನು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಸಮೃದ್ಧಿಯಾಗಿ, ಸುರಕ್ಷತೆಯಿಂದ ಅತ್ಯಂತ ಶಕ್ತಿಶಾಲಿಗಳಾಗಿದ್ದ ಸಮಾಜದ ಪ್ರಜೆಗಳು ಇಂದು ಆಧಾರ ಕಳೆದುಕೊಂಡಂತೆ ಕಂಡುಬರುತ್ತಿದ್ದಾರೆ. ಸಾರ್ವತ್ರಿಕ ಅಭಿವೃದ್ಧಿಯಲ್ಲಾಗಲಿ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಾಗಲಿ, ಭೂಮಿಯನ್ನು ಬಳಸಿಕೊಳ್ಳುವುದರಲ್ಲಾಗಲಿ ಅವರ ಜೀವನ-ವಿಧಾನ ಸ್ವಲ್ಪವೂ ಮುನ್ನಡೆ ಸಾಧಿಸುತ್ತಿಲ್ಲ. ಅವರ ಮುತ್ತಾತಂದಿರು, ತಾತಂದಿರು, ತಂದೆತಾಯಿಯರು ಸಿಕ್ಕಿಹಾಕಿಕೊಂಡಿದ್ದ ಕೆಸರಿನಿಂದ ಇಂದಿನ ಹೊಸ ತಲೆಮಾರು ಹೊರಗೆ ಬರಲು ಸಾಧ್ಯವಾಗಬೇಕಾದರೆ ಅದಕ್ಕೆ ಮುಖ್ಯ ಮೆಟ್ಟಲಾದ ವಿದ್ಯಾಕ್ಷೇತ್ರದ ಅಭಿವೃದ್ಧಿಯಾಗಬೇಕು. ಆದರೆ ಇಂದಿನ ವಿದ್ಯಾಭ್ಯಾಸ ಅದರಿಂದ ಬಿಡುಗಡೆ ಮಾಡುವುದಕ್ಕೆ ಬದಲಾಗಿ ಮತ್ತಷ್ಟು ಗೊಂದಲಕ್ಕೆ ಕೆಡವಿ ಅವರ ಜೀವನವನ್ನೊಂದು ಹೋರಾಟವನ್ನಾಗಿ ಮಾಡಿದೆ.

ಮೂರು ಶತಕಗಳ ಹಿಂದೆ ಇಲ್ಲಿನ ಪ್ರಜೆಗಳೆಲ್ಲರೂ ಓದಲು ಬರೆಯಲು ಕಲಿತವರಾಗಿದ್ದರು. ವಿದ್ಯಾಭ್ಯಾಸ ಮತ್ತು ಸಂಸ್ಕೃತಿಗಳು ಭಾರತದ ಎರಡು ಅಡಿಗಲ್ಲುಗಳಾಗಿ, ಶಕ್ತಿಯುತವಾಗಿ ಮುಂದುವರಿಯುತ್ತಿರುವವರೆಗೂ, ಅವರನ್ನು ಸ್ವಾಧೀನಪಡಿಸಿಕೊಳ್ಳಲು ಇರುವ ಅಡೆತಡೆಗಳನ್ನು, ಮೆಕಾಲೆಯು ಬ್ರಿಟಿಷ್ ಸರಕಾರಕ್ಕೆ ವಿವರಿಸಿದನು. ಈ ಮಹಾನ್ ಶಕ್ತಿಗಳನ್ನು ಬಗ್ಗುಬಡಿಯಲು ಬೇಕಾದ ಯೋಜನೆಗಳನ್ನು ಅವರು ರೂಪಿಸತೊಡಗಿದರು. ಅದರಲ್ಲಿ ಮುಖ್ಯವಾಗಿ ನಡೆದಿದ್ದು, ಇನ್ನೂರು ವರ್ಷಗಳ ಅವಧಿಯಲ್ಲಿ, ಭಾರತದ ಪ್ರಜೆಗಳಲ್ಲಿ ಸುಮಾರು ಶೇಕಡಾ ಎಪ್ಪತ್ತರಷ್ಟು ಜನರು ಅನಕ್ಷರಸ್ಥರಾಗಿದ್ದು!

ಯೋಜನೆಯನ್ನು ರೂಪಿಸಿಕೊಂಡು ಏನನ್ನಾದರೂ ನಾಶ ಮಾಡಲು ನಮಗೆ ಸಾಧ್ಯವಿರುವಾಗ ಹಾಗೆಯೇ ನಿರ್ಮಿಸಲು ಏಕೆ ಸಾಧ್ಯವಾಗುವುದಿಲ್ಲ? ಇದನ್ನು ಅರ್ಥ ಮಾಡಿಕೊಳ್ಳದೆ ಇಂದಿನ ಸನ್ನಿವೇಶವನ್ನು ದೂರುತ್ತಾ, ಬದುಕನ್ನು ನೂಕುತ್ತಾ ಇದ್ದರೆ ಏನನ್ನೂ ಬದಲಾಯಿಸಲಾಗುವುದಿಲ್ಲ.

ವ್ಯವಸ್ಥಿತವಾದ ವಿದ್ಯಾಭ್ಯಾಸ, ಒಗ್ಗಟ್ಟು, ಆರೋಗ್ಯ, ಒಂದು ಮುನ್ನೋಟ ಅಥವಾ ಉದ್ದೇಶ, ಇಂತಹ ಯಾವುದೂ ಇಲ್ಲದೆ ಕೋಟಿಗಟ್ಟಲೆ ಜನರು ಬಳಲಿ ಬೆಂಡಾಗುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಯಾವ ದೇಶವೂ ಮುನ್ನಡೆಯಲು ಸಾಧ್ಯವಾಗುವುದಿಲ್ಲ.

ಅದೇ ಕೋಟಿಗಟ್ಟಲೆ ಜನರು ಕಲಿತವರಾಗಿದ್ದು, ಒಳ್ಳೆಯ ನೀತಿವಂತರಾಗಿದ್ದು, ಉತ್ತಮ ಆರೋಗ್ಯಶಾಲಿಗಳಾಗಿದ್ದುಕೊಂಡು, ರ‍್ಪಣಾ ಮನೋಭಾವವನ್ನು ಹೊಂದಿದ್ದು, ಸಮರ್ಥವಾಗಿ ಕೆಲಸಗಳನ್ನು ನಿರ್ವಹಿಹಿಸಿದರೆ, ಎಂಥೆಂಥ ಅದ್ಭುತಗಳನ್ನು ಸಾಧಿಸಬಹುದೆಂಬುದನ್ನು ಯೋಚಿಸಿ.

ವಿದ್ಯೆ ಎಂಬುದು ಒಂದು ಶಕ್ತಿಯುತವಾದ ಆಯುಧ. ಬೇರೆ ಜೀವರಾಶಿಗಳೊಂದಿಗೆ ಅನ್ಯೋನ್ಯವಾಗಿರುವಂತಹವರಿಗೆ ಮಾತ್ರ ಅದನ್ನು ನೀಡಬೇಕು. ಉನ್ನತಮಟ್ಟದ ವಿದ್ಯಾಭ್ಯಾಸ ನೀಡುವುದರ ಮೂಲಕ ವಿಶ್ವದ ಯಾವುದೇ ಒಂದು ಸಣ್ಣ ಬಿಂದುವಿನಿಂದಲೂ ಅವರು ತಮ್ಮ ಜೀವನವನ್ನು ಬುದ್ಧಿವಂತಿಕೆಯಿಂದ ಅಳವಡಿಸಿಕೊಳ್ಳಲು ಅವರು ಸಿದ್ಧರಾಗಿರಬೇಕೆಂಬುದೇ ನನ್ನ ಅಭಿಲಾಷೆ.

ಈಜು ತರಬೇತಿಯಲ್ಲಿ ಸಾಲಿನ ಕೊನೆಗೆ ನಿಲ್ಲುತ್ತಿದ್ದ ಶಿಷ್ಯ

ಒಂದು ಗುರುಕುಲದಲ್ಲಿ ಬೆಳೆದ ಶಿಷ್ಯರು ಈಜುವ ತರಬೇತಿಗಾಗಿ ಹೊರಟರು. ಪ್ರತಿಯೊಬ್ಬರೂ ನದಿಯಲ್ಲಿ ಕುಪ್ಪಳಿಸುತ್ತಾ ಈಜಿಕೊಂಡು ಬಂದು ದಡವನ್ನು ಸೇರಬೇಕೆಂಬುದು ನಿಯಮ. ಅವರಲ್ಲಿ ಒಬ್ಬನು ಮಾತ್ರ ಯಾವಾಗಲೂ ಸಾಲಿನಲ್ಲಿ ಕೊನೆಗೆ ನಿಲ್ಲುತ್ತಿದ್ದುದನ್ನು ಅವರ ಗುರುಗಳು ಹಲವಾರು ಬಾರಿ ಗಮನಿಸಿದರು.
ಒಂದು ದಿನ ಅವನನ್ನು ಕರೆದು, ಈವತ್ತಿನಿಂದ ನೀನೇ ಮೊದಲನೆಯದಾಗಿ ಗೆದ್ದು ಬರಬೇಕು ಎಂದರು. ನಡುಗುತ್ತಾ ನಿಂತಿದ್ದ ಅವನನ್ನು ನೀರಿನೊಳಕ್ಕೆ ನೂಕಿದರು. ಏನಾಶ್ಚರ್ಯ! ಶಿಷ್ಯನು ಅನಾಯಾಸದಿಂದ ಈಜಿದನು. ಅವನಿಗೆ ಇದ್ದಕ್ಕಿದ್ದಂತೆ ಭಯವೆಲ್ಲವೂ ತೊಲಗಿಹೋಗಿ ಧೈರ್ಯ ತುಂಬಿಕೊಂಡಿತು.

ಗುರುಗಳು ಶಿಷ್ಯನಿಗೆ ಹೇಳಿದರು, ತುರ್ತಾಗಿ ಜವಾಬ್ದಾರಿ ವಹಿಸಿ, ಕೂಡಲೇ ಗಮನ ಹರಿಸಿ ಮಾಡಬೇಕಾದ ಕೆಲಸಗಳಿರುತ್ತವೆ. ಅಂತಹ ಸಂರ‍್ಭದಲ್ಲಿ ತಡಮಾಡಿದರೆ ಕೆಲಸ ಹಾಳಾಗುತ್ತದೆ. ಗಾಬರಿಯನ್ನು ದೂರವಿರಿಸಿ ಕೂಡಲೇ ಕರ‍್ಯಗತವಾಗಲು ಬೇಕಾದ ತರಬೇತಿ ಇಂದು ನಿನಗೆ ದೊರೆಯಿತು ಎಂದರು.

ನಮ್ಮಿಂದ ಆಗದ ಕೆಲಸ ಮಾಡದಿದ್ದರೆ ತಪ್ಪಾಗುವುದಿಲ್ಲ. ನಮ್ಮಿಂದ ಆಗುವ ಕೆಲಸವನ್ನು ಮಾಡದಿರುವುದು ಬಹು ದೊಡ್ಡ ಅಪರಾಧ. ನಾವು ತಡಮಾಡದೆ ನಿರ್ವಹಿಸಬೇಕಾದ ಕರ್ತವ್ಯ ಇದು.

ಗ್ರಾಮ ಪ್ರದೇಶಗಳಲ್ಲಿ ಪ್ರಾಥಮಿಕ ಪಾಠಶಾಲೆಗಳಾಗಿ ಈಶ ವಿದ್ಯಾ ನಡೆಸುತ್ತಿರುವ ಶಾಲೆಗಳ ವಾರ್ಷಿಕ ಸಮಾರಂಭಗಳು ನಡೆದಾಗ, ನಾವು ಕೆಲವು ಶಾಲೆಗಳನ್ನು ಪ್ರಾರಂಭಿಸಿರುವುದನ್ನು ತಿಳಿದ ಜನರು ಚಪ್ಪಾಳೆ ತಟ್ಟುತ್ತಾರೆ. ಒಂದು ಲಕ್ಷ ಮರಗಳನ್ನು ನೆಟ್ಟಿರುವುದನ್ನು, ಸಾವಿರಕ್ಕೆ ಮೇಲ್ಪಟ್ಟ ಹಳ್ಳಿಗಳಿಗೆ ವೈದ್ಯಕೀಯ ನೆರವನ್ನು ಕಲ್ಪಿಸಿದುದನ್ನು ತಿಳಿದು ಜನರು ಆಶ್ಚರ್ಯಪಡುತ್ತಾರೆ.

ಇಂತಹ ಸಣ್ಣ ಪುಟ್ಟ ಕಾರ್ಯಗಳಿಗಾಗಿ ಜನರು ತೃಪ್ತಿಗೊಂಡು ಚಪ್ಪಾಳೆ ಹಾಕಿದಾಗಲೆಲ್ಲಾ ನನಗೆ ಮನಸ್ಸಿನಲ್ಲಿ ನೋವುಂಟಾಗುತ್ತದೆ. ಕೆಲವು ಪಾಠಶಾಲೆಗಳು ನಮಗೆ ಏತೇತಕ್ಕೂ ಸಾಕಾಗುವುದಿಲ್ಲ. ಸಾವಿರಗಟ್ಟಲೆ ಶಾಲೆಗಳು ಪ್ರಾರಂಭವಾಗಬೇಕು, ಲಕ್ಷ ಮರಗಳೂ ಸಾಕಾಗುವುದಿಲ್ಲ; ಕೋಟಿಗಟ್ಟಲೆ ಮರಗಳನ್ನು ನೆಡಬೇಕು, ಬೆಳಸಬೇಕು. ತಮ್ಮ ದೇಹದ ಬಗೆಗೆ ಸ್ವಲ್ಪವೂ ತಿಳುವಳಿಕೆಯಿಲ್ಲದ, ಹಳ್ಳಿಯ ಜನರಿಗೆ ಆರೋಗ್ಯದ ಬಗೆಗೆ ತಿಳುವಳಿಕೆ ಬರುವಂತಾಗಬೇಕು. ಅವರಿಗೆ ಮೂಲಭೂತ ವೈದ್ಯಕೀಯ ಸೌಲಭ್ಯಗಳು ದೊರೆಯವಂತಾಗಬೇಕು.

ಜವಾಬ್ದಾರಿಯಿಲ್ಲದ ತಿಳುವಳಿಕೆಯೇ ಪ್ರಪಂಚದಲ್ಲಿ ಇಂದು ಅನೇಕ ವಿನಾಶಗಳಿಗೆ ಮೂಲ ಕಾರಣವಾಗಿದೆ. ನಮ್ಮ ಹೊಣೆಗಾರಿಕೆಯ ಬಗೆಗೆ ತೀವ್ರವಾದ ಆಸಕ್ತಿ, ಇತರರ ಬಗೆಗೆ ಅನುಕಂಪ, ಎಲ್ಲರ ಬಗೆಗೂ ಪ್ರೀತಿ ಇವುಗಳನ್ನು ನಮ್ಮಲ್ಲಿ ಬೆಳೆಸದ ಯಾವುದೇ ವಿದ್ಯಾಭ್ಯಾಸ ಅಪಾಯಕಾರಿ.

ಇದನ್ನೂ ಓದಿ: Prerane Column : ನೀವು ಆಹಾರವನ್ನು ಅನುಭವಿಸುತ್ತಾ ತಿಂತೀರಾ? ಇಲ್ಲ ಸುಮ್ನೆ ನುಂಗ್ತೀರಾ?

ಮಾನವ ಇತಿಹಾಸದಲ್ಲಿ ಇದಕ್ಕೆ ಮುಂಚೆ ಇಂತಹ ಸಾಧಕವಾದ, ಅನುಕೂಲಕರವಾದ ಪರಿಸ್ಥಿತಿ ಎಂದೂ ಒದಗಿ ಬಂದಿರಲಿಲ್ಲ. ಅಗತ್ಯವಿರುವ ಮೂಲ ವಸ್ತು, ಔದ್ಯೋಗಿಕ ಕೌಶಲ್ಯ, ಕಾರ್ಯ ನಿರ್ವಹಣಾ ಸಾಮರ್ಥ್ಯ ಇದಾವುದಕ್ಕೂ ಈಗ ಕೊರತೆಯಿಲ್ಲ. ಬೇಕಾಗಿರುವುದು ಮನೋನಿಶ್ಚಯ, ಮುನ್ನಡೆ ಇವುಗಳು ಮಾತ್ರ. ಸಮರ್ಪಣಾ ಮನೋಭಾವದಿಂದ ಮುನ್ನಡೆದರೆ ಮುಂದಿನ ಇಪ್ಪತ್ತು ವರ್ಷಗಳಲ್ಲಿ ನಾವು ಕನಸಿನಲ್ಲಿ ಕಾಣುವ ಅದ್ಭುತವಾದ ಸನ್ನಿವೇಶವನ್ನು ಇಲ್ಲಿ ಕಾಣಲು ಸಾಧ್ಯವಾಗುತ್ತದೆ.


ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – [email protected]

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ತಿಳಿಸಿ

Continue Reading

ಅಂಕಣ

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

Raja Marga Column : ಅಮ್ಮೆಂಬಳ ಸುಬ್ಬ ರಾವ್‌ ಪೈ ಅವರು ಕೆನರಾ ಬ್ಯಾಂಕ್‌ ಮತ್ತು ಕೆನರಾ ವಿದ್ಯಾ ಸಂಸ್ಥೆಗಳ ಸ್ಥಾಪಕರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಅವರು ಅದನ್ನು ಹೇಗೆ ಕಟ್ಟಿದರು ಅನ್ನುವುದು ತುಂಬಾ ಇಂಟ್ರೆಸ್ಟಿಂಗ್‌.

VISTARANEWS.COM


on

Canara Bank Ammembala Subbarao Pai
Koo
RAJAMARGA

ಅಮ್ಮೆಂಬಳ ಸುಬ್ಬರಾವ್ ಪೈ (Ammembala Subbarao Pai) ಅವರು ಬ್ಯಾಂಕಿಂಗ್ ವ್ಯವಸ್ಥೆಗೆ (Banking System) ಭಾರೀ ಸ್ಫೂರ್ತಿಯನ್ನು ನೀಡಿದ ಕೆನರಾ ಬ್ಯಾಂಕನ್ನು (Canara Bank) ದೇಶಕ್ಕೆ ಕೊಡುಗೆಯಾಗಿ ನೀಡಿದವರು. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಇಂದು ಭಾರೀ ಕೀರ್ತಿಯನ್ನು ಪಡೆದಿರುವ ಮಂಗಳೂರಿನ ಕೆನರಾ ವಿದ್ಯಾಸಂಸ್ಥೆಗಳನ್ನು (Canara Education Institutes) ಸಮರ್ಪಣೆ ಮಾಡಿದವರು (Raja Marga Column).

ಅಮ್ಮೆಂಬಳ ಸುಬ್ಬರಾವ್ ಪೈ ಅವರು 1852ರ ಇಸವಿಯ ನವೆಂಬರ್ 19ರಂದು ಮಂಗಳೂರಿನ ಹತ್ತಿರ ಇರುವ ಮೂಲ್ಕಿಯಲ್ಲಿ ಜನಿಸಿದರು. ಅವರ ತಂದೆ ಉಪೇಂದ್ರ ಪೈ ಅವರು ಮುನ್ಸಿಫರ ಕೋರ್ಟನಲ್ಲಿ ಜನಪ್ರಿಯ ವಕೀಲರಾಗಿದ್ದರು.

ಮಂಗಳೂರಿನ ಕನ್ನಡ ಶಾಲೆಯಲ್ಲಿ ಓದಿ ಎಫ್.ಎ ಪರೀಕ್ಷೆ ಮುಗಿಸಿದ ನಂತರ ಸುಬ್ಬರಾವ್ ಪೈ ಅವರು ಮದ್ರಾಸಿಗೆ ತೆರಳಿ ಪದವಿ ಮತ್ತು ಕಾನೂನು ಪದವಿಗಳನ್ನು ಪಡೆದರು. ಅಲ್ಲಿ ಅವರಿಗೆ ದೊರೆತ ಜಸ್ಟೀಸ್ ಹಾಲೋವೇ ಎಂಬ ಶಿಕ್ಷಕರ ವ್ಯಕ್ತಿತ್ವವು ಅವರ ಮೇಲೆ ಭಾರೀ ಪ್ರಭಾವ ಬೀರಿತು. ‘ಸ್ವಂತಕ್ಕಿಂತ ಸಮಾಜಕ್ಕೆ ಹೆಚ್ಚು’ ಎಂಬ ಕಲ್ಪನೆ ಕೊಟ್ಟದ್ದೇ ಅವರು.

1876ರಲ್ಲಿ ತಮ್ಮ ತಂದೆಯವರು ನಿಧನ ಆದ ಕಾರಣದಿಂದ ಮಂಗಳೂರಿಗೆ ಹಿಂದಿರುಗಿದ ಸುಬ್ಬರಾವ್ ಪೈಯವರು ಉತ್ತಮವಾಗಿ ವಕೀಲಿ ವೃತ್ತಿ ನಡೆಸುತ್ತಿದ್ದರು. ತಮಗೆ ದುಡ್ಡು ಬಾರದಿದ್ದರೂ ಚಿಂತೆಯಿಲ್ಲ ಎಂಬ ಧೋರಣೆ ಅವರದ್ದು. ಅದಕ್ಕಾಗಿ ಆದಷ್ಟೂ ಕೋರ್ಟಿನ ಹೊರಗೇ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಅವರ ಪ್ರಯತ್ನ ಜಾರಿಯಲ್ಲಿ ಇತ್ತು. ಅವರಿಗೆ ದುಡ್ಡು ಆದ್ಯತೆ ಆಗಿರಲಿಲ್ಲ.

ಕೆನರಾ ವಿದ್ಯಾಸಂಸ್ಥೆಗಳ ಸ್ಥಾಪನೆ

1891ರ ಹೊತ್ತಿಗೆ ಶಿಕ್ಷಕರಾಗಿದ್ದ ಅವರ ಕೆಲವು ಸ್ನೇಹಿತರು ಮಂಗಳೂರಿನಲ್ಲಿ ಉತ್ತಮ ಶಾಲೆಗಳ ಕೊರತೆಯನ್ನು ಪ್ರಸ್ತಾಪಿಸಿದರು. ಆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅವರು ತುಂಬಾ ಕಾಳಜಿಯನ್ನು ವಹಿಸಿ ಕೆನರಾ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿದರು. ಮಂಗಳೂರಿನ ಕೇಂದ್ರ ಭಾಗದಲ್ಲಿ ಅವರ ತಂದೆ ಉಪೇಂದ್ರ ಪೈ ಅವರು ಉಚಿತವಾಗಿ ಕೊಟ್ಟ 22 ಎಕರೆ ಜಾಗದಲ್ಲಿ ಇಂದು ಕೆನರಾ ವಿದ್ಯಾಸಂಸ್ಥೆಗಳು ತಲೆ ಎತ್ತಿ ನಿಂತಿರುವುದನ್ನು ನೋಡುವುದೇ ಚಂದ. ಆ ವಿದ್ಯಾಸಂಸ್ಥೆಯಲ್ಲಿ ಇಂದು ಸಾವಿರಾರು ವಿದ್ಯಾರ್ಥಿಗಳು ಕ್ವಾಲಿಟಿ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಯಾವಾಗಲೂ ಹೇಳುತ್ತಿದ್ದ ಮುಖ್ಯವಾದ ಮಾತು – ನಿಮ್ಮ ಗುರಿಗಳ ಮೇಲೆ ಫೋಕಸ್ ಮಾಡಿ. ಆಗ ಲಾಭವು ನಿಮ್ಮನ್ನು ಅನುಸರಿಸಿಕೊಂಡು ಬರುತ್ತದೆ.

ಅದಾದ ನಂತರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ 1894ರಲ್ಲಿ ಕೆನರಾ ಹೆಣ್ಣು ಮಕ್ಕಳ ಹೈಸ್ಕೂಲನ್ನು ಕೂಡ ಅವರು ತೆರೆದರು. ಅಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಬಗೆಗೆ ಸಮಾಜದಲ್ಲಿ ಪ್ರೋತ್ಸಾಹದ ವಾತಾವರಣ ಇರಲಿಲ್ಲ. ಆದ್ದರಿಂದ ಕೆನರಾ ವಿದ್ಯಾಸಂಸ್ಥೆಯ ಸ್ಥಾಪನೆಯು ಕ್ರಾಂತಿಕಾರಕ ಹೆಜ್ಜೆಯೇ ಆಗಿತ್ತು.

ಮುಂದೆ ಕೆನರಾ ವಿದ್ಯಾಸಂಸ್ಥೆಗಳು ಭಾರೀ ದೊಡ್ಡ ಹೆಮ್ಮರ ಆಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಾ ಮುಂದೆ ಸಾಗಿವೆ. ಶತಮಾನೋತ್ಸವ ಕಂಡಿವೆ.

ಹೆಣ್ಣುಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಅಂದಿನ ದಿನಗಳಲ್ಲಿ ನಿರುತ್ಸಾಹದ ವಾತಾವರಣವನ್ನು ಕಂಡಾಗ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಕಂಡುಹಿಡಿದ ಪರಿಹಾರವು ಅದ್ಭುತವಾಗಿಯೇ ಇತ್ತು. ಅದು ಉಳಿತಾಯ ಪ್ರಜ್ಞೆ.

ಹಿಡಿಯಕ್ಕಿಯಿಂದ ಆರಂಭ ಆಯಿತು ಕೆನರಾ ಬ್ಯಾಂಕ್!

ತಮ್ಮ ಹೆಣ್ಣು ಮಕ್ಕಳಿಗೆ ಓದು ಬರಹ ಬೇಕು ಎಂದು ಆಸೆ ಪಡುವ ತಾಯಿಯರು ಪ್ರತೀದಿನ ‘ಹಿಡಿ ಅಕ್ಕಿ ಉಳಿಸಿ’ ಎಂಬ ಅಭಿಯಾನದ ಮೂಲಕ ಅಮ್ಮೆಂಬಳ ಪೈಯವರು ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಇದೇ ಉಳಿತಾಯದ ಶ್ರೇಷ್ಠ ಚಿಂತನೆಯು ಮುಂದೆ ಯಶಸ್ವಿಯಾಗಿ ಅವರಿಂದ ಹುಟ್ಟಿದ್ದು ‘ಹಿಂದೂ ಪರ್ಮನೆಂಟ್ ಫಂಡ್ʼ ಎಂಬ ಹಣಕಾಸು ಸಂಸ್ಥೆ. ಇದೇ ಮುಂದೆ ಕೆನರಾ ಬ್ಯಾಂಕ್ ಆಯಿತು.

‘ಉತ್ತಮ ಬ್ಯಾಂಕ್ ಎನ್ನುವುದು ಸಮಾಜದ ಆರ್ಥಿಕ ಶಕ್ತಿಯ ಕೇಂದ್ರ ಮಾತ್ರವಲ್ಲ, ಅದು ಸಾಮಾನ್ಯ ಜನರ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಜವಾಬ್ಧಾರಿಯನ್ನು ತನ್ನ ಮೇಲಿರಿಸಿಕೊಂಡಿದೆ’ ಎಂಬುದು ಅಮ್ಮೆಂಬಳ ಸುಬ್ಬರಾವ್ ಪೈ ಅವರು ಬಲವಾಗಿ ನಂಬಿದ ಧ್ಯೇಯ ಆಗಿತ್ತು. ಲಾಭದ ಗಳಿಕೆಗಿಂತ ಜನಸಾಮಾನ್ಯರ ಆರ್ಥಿಕ ಸಬಲೀಕರಣವು ಅವರ ಉದ್ದೇಶವಾಗಿತ್ತು.

ಬ್ರಿಟಿಷ್ ಬ್ಯಾಂಕುಗಳ ತಾರತಮ್ಯದ ವಿರುದ್ಧ ಸಿಡಿದು ನಿಂತ ಕೆನರಾ ಬ್ಯಾಂಕ್

1906ರಲ್ಲಿ ಕೆನರಾ ಬ್ಯಾಂಕ್ ಸ್ಥಾಪನೆಯು ಆಗಿನ ಕಾಲದಲ್ಲಿ ಭಾರೀ ಸಂಚಲನವನ್ನು ಮೂಡಿಸಿದ್ದು ಹೇಗೆ?

ಅದು ಶತಮಾನದ ಆರಂಭದ ದಶಕ. ಭಾರತದಲ್ಲಿ ಆಗ ಬ್ರಿಟನ್‌ ರಾಣಿಯ ಆಡಳಿತ. ಮಂಗಳೂರಿನಲ್ಲಿ ಆಗ ಇದ್ದದ್ದು ಬ್ರಿಟಿಷರಿಗೆ ಸೇರಿದ ಮದ್ರಾಸ್‌ ಬ್ಯಾಂಕಿನ ಶಾಖೆಯೊಂದೇ! ಸಂಪೂರ್ಣವಾಗಿ ಬ್ರಿಟಿಷ್‌ ಅಧಿಕಾರಿಗಳೇ ತುಂಬಿದ್ದ ಈ ಬ್ಯಾಂಕ್‌ನಲ್ಲಿ ಭಾರತೀಯರು ಕಾರಕೂನರ ಮತ್ತು ಜವಾನನ ಕೆಲಸಕ್ಕೆ ಮಾತ್ರ ನೇಮಕ ಆಗುತ್ತಿದ್ದರು. ಆ ಬ್ಯಾಂಕ್‌ ಕೇವಲ ಶ್ರೀಮಂತರತ್ತ ಮಾತ್ರ ಮುಖವನ್ನು ಮಾಡಿತ್ತು. ಆದರೆ ಅದು ವಿಧಿಸುತ್ತಿದ್ದ ಬಡ್ಡಿ ಮಾತ್ರ ವಿಪರೀತ ಪ್ರಮಾಣದ್ದಾಗಿತ್ತು. ಬಡವರು ಬ್ಯಾಂಕಿನ ಒಳಗೆ ಬರಲು ಸಾಧ್ಯವೇ ಇರಲಿಲ್ಲ!

Ammembala Subbarao pai Canara Bank

ಜನ ಸಾಮಾನ್ಯರು ತಮ್ಮ ಕಠಿಣ ದುಡಿಮೆಯ ಹಣವನ್ನು ಸುರಕ್ಷಿತವಾಗಿಡಲು ಪಡುತ್ತಿದ್ದ ಕಷ್ಟಗಳು, ಸಂಕಷ್ಟದ ವೇಳೆ ಸಾಲಕ್ಕಾಗಿ ಅಲೆದಾಡುತ್ತಿದ್ದ ಕಷ್ಟವನ್ನು ನೋಡಿ ಸುಬ್ಬರಾವ್ ಪೈ ಅವರು ಭಾರೀ ಚಿಂತನೆಗೆ ತೊಡಗಿದರು. ಬಡವರ ಕಷ್ಟಗಳಿಗೆ ಅವರ ಮನಸ್ಸು ಕರಗಿತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಣದಿಂದಲೇ ನಿಧಿ ಸ್ಥಾಪಿಸಿ, ಉಳಿತಾಯದ ಅವಕಾಶ ಮತ್ತು ಸಾಲವನ್ನು ನೀಡುವುದು ಅವರ ಉದೇಶ ಆಗಿತ್ತು.

ವಿಶೇಷವಾಗಿ ಶಿಕ್ಷಣದ ಸಾಲ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಕೆನರಾ ಬ್ಯಾಂಕಿನ ಆದ್ಯತೆ ಆಗುವಂತೆ ಅವರು ಮಾಡಿದರು. ಹೆಣ್ಣುಮಕ್ಕಳ ಶೈಕ್ಷಣಿಕ ಸಾಲವನ್ನು ಆದ್ಯತೆಯ ಸಾಲವಾಗಿ ಅವರು ಘೋಷಣೆ ಮಾಡಿದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ‘ಆದ್ಯತೆಯ ಸಾಲ’ ನೀಡಿದ ದೇಶದ ಮೊದಲ ಬ್ಯಾಂಕು ಎಂಬ ಕೀರ್ತಿಯು ಕೂಡ ಕೆನರಾ ಬ್ಯಾಂಕಿಗೆ ದೊರೆಯಿತು! ಇದೆಲ್ಲವೂ ಅಮ್ಮೆಂಬಳ ಸುಬ್ಬರಾವ್ ಪೈ ಅವರ ದೂರದೃಷ್ಟಿಯ ಸಂಕೇತವೇ ಆಗಿದೆ.

ಕೆನರಾ ಬ್ಯಾಂಕಿನ ನಿಧಿಯನ್ನು ಸಂಗ್ರಹಿಸಲು ಸುಬ್ಬರಾವ್ ಪೈ ಅವರು ಹಾಕಿದ ಶ್ರಮವು ಅಷ್ಟಿಷ್ಟಲ್ಲ. ಅವರು ಎತ್ತಿನ ಗಾಡಿಯಲ್ಲಿ ಊರೂರು ಸುತ್ತಿ ತಲಾ 50 ರೂ. ಬೆಲೆಯ ಎರಡು ಸಾವಿರ ಷೇರು ಪತ್ರಗಳನ್ನು ಮಾರಿ ನಿಧಿಯನ್ನು ಸಂಗ್ರಹಿಸಿದರು! ಹೀಗೆ ಸುಬ್ಬರಾವ್ ಪೈಯವರ ಘನ ಅಧ್ಯಕ್ಷತೆಯಲ್ಲಿ 1906ರಲ್ಲಿ ಆರಂಭ ಆದ ಬ್ಯಾಂಕು ಇಂದು ದೇಶ, ವಿದೇಶಗಳಲ್ಲಿ ಅವರು ಮಾಡಿರುವ ಶ್ರೇಷ್ಠವಾದ ಕಾಯಕವನ್ನು ಸಾರುತ್ತಿದೆ. ಆ ಬ್ಯಾಂಕ್ ಸ್ಥಾಪನೆಯಿಂದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಹೆಸರು ಶಾಶ್ವತ ಸ್ಥಾನ ಪಡೆಯಿತು. ಇಂದು ಕೆನರಾ ಬ್ಯಾಂಕ್ ಭಾರತದ ಅತೀ ಶ್ರೇಷ್ಠವಾದ ಬ್ಯಾಂಕುಗಳ ಸಾಲಿನಲ್ಲಿ ಸ್ಥಾನ ಪಡೆದಿದೆ.

ಅಮ್ಮೆಂಬಳ ಪೈ ಅವರು 1909ರ ಜುಲೈ 25ರಂದು ಕೇವಲ ತಮ್ಮ 57ನೆಯ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರು ಸ್ಥಾಪನೆ ಮಾಡಿದ ಸಂಸ್ಥೆಗಳು ಮತ್ತು ಶಾಲೆಗಳು ಮುಖ್ಯವಾದ ಸಾಮಾಜಿಕ ಕೊಡುಗೆಯಾಗಿ ಉಳಿದವು. ಹಗಲಿರುಳು ಬಡಜನತೆಗಾಗಿ ಮಾಡಿದ ಕಾರ್ಯಗಳು ಅವರನ್ನು ಚಿರಂಜೀವಿ ಆಗಿ ಮಾಡಿದವು.

ಇದನ್ನೂ ಓದಿ: Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

ಮೌಢ್ಯಗಳ ವಿರುದ್ಧ ಹೋರಾಟ

ಅಮ್ಮೆಂಬಳ ಸುಬ್ಬರಾವ್ ಪೈ ಅವರು ಆಗಿನ ಕಾಲಕ್ಕೆ ತುಂಬಾ ಅಡ್ವಾನ್ಸ್ ಆಗಿದ್ದರು. ತನ್ನದೇ ಸಮಾಜದ ಒಬ್ಬ ಮಹಿಳೆಯು ಅಂತರ್ಜಾತೀಯ ಮದುವೆಯ ಕಾರಣಕ್ಕೆ ಸಾಮಾಜಿಕವಾದ ಬಹಿಷ್ಕಾರಕ್ಕೆ ಒಳಗಾದಾಗ ತುಂಬಾ ನೊಂದರು. ಮುಂದೆ ಅದೇ ಮಹಿಳೆ ನಿಧನರಾದಾಗ ಅವರ ಕೊನೆಯ ಇಚ್ಛೆಯಂತೆ ಪೈಯವರೇ ಮುಂದೆ ನಿಂತು ತನ್ನ ಗೆಳೆಯರ ಸಹಕಾರ ಪಡೆದು ಹಿಂದೂ ಸಂಪ್ರದಾಯದ ಪ್ರಕಾರ ಅವರ ಅಂತಿಮ ವಿಧಿಗಳನ್ನು ಪೂರ್ತಿ ಮಾಡಿದರು. ಈ ಕಾರಣಕ್ಕೆ ಅವರು ಒಂದು ಪ್ರಬಲ ವರ್ಗದ ಜನರ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಆದರೆ ಪೈಯವರು ಅವುಗಳಿಗೆ ಕ್ಯಾರೇ ಅನ್ನಲಿಲ್ಲ!

ಮಂಗಳೂರಿನಲ್ಲಿ ತನ್ನದೇ ಗೆಳೆಯರ ಬಳಗ ಕಟ್ಟಿಕೊಂಡು ಅಮ್ಮೆಂಬಳ ಪೈಯವರು ಮೌಢ್ಯಗಳ ವಿರುದ್ಧ ಭಾರೀ ಹೋರಾಟಗಳನ್ನು ನಡೆಸಿದರು. ಅವರೇ ಸ್ಥಾಪನೆ ಮಾಡಿದ ಕೆನರಾ ಬ್ಯಾಂಕಿನ ಉದ್ದೇಶಗಳಲ್ಲಿ ಮೌಢ್ಯಗಳ ವಿರುದ್ಧ ಹೋರಾಟ ಕೂಡ ಒಂದಾಗಿದೆ. ಶಿಕ್ಷಣ ಸಾಲಕ್ಕಾಗಿ ಬ್ಯಾಂಕ್ ಒಳಗೆ ಕಾಲಿಟ್ಟ ಯಾವುದೇ ಹುಡುಗಿಗೆ ಒಂದು ಕ್ಷಣ ಕೂಡ ಕಾಯಿಸದೆ ಸಾಲ ಕೊಡಬೇಕು ಎನ್ನುವುದು ಅವರು ಬ್ಯಾಂಕ್ ಅಧಿಕಾರಿಗಳಿಗೆ ಕೊಟ್ಟ ನಿರ್ದೇಶನ ಆಗಿತ್ತು. ಅದನ್ನು ಬ್ಯಾಂಕ್ ಇಂದು ಕೂಡ ಪಾಲಿಸುತ್ತಿದೆ.

ಅವರು ಸ್ಥಾಪನೆ ಮಾಡಿದ ಕೆನರಾ ಬ್ಯಾಂಕ್ ಮತ್ತು ಕೆನರಾ ವಿದ್ಯಾಸಂಸ್ಥೆಗಳು ಇರುವ ತನಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಹೆಸರು ಶಾಶ್ವತ ಆಗಿರುವುದು ಖಂಡಿತ.

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

ಸೂಫಿಗಳು ಹಿಂದೂ- ಮುಸ್ಲಿಂ ಭಾವೈಕ್ಯದ ಕೊಂಡಿ ಎಂದು ಶ್ಲಾಘಿಸಲಾಗುತ್ತದೆ. ಆದರೆ ಇದು ಸುಳ್ಳು.ಇದನ್ನು ಇಸ್ಲಾಮಿಕ್‌ ಇತಿಹಾಸಕಾರರ ಪಠ್ಯಗಳಿಂದಲೇ ತಿಳಿಯಬಹುದು.

VISTARANEWS.COM


on

sufi
Koo

ಈ ಅಂಕಣವನ್ನು ಇಲ್ಲಿ ಕೇಳಿ:

ajjampura manjunath

ಸೂಫಿಗಳನ್ನು ಹಲವೆಡೆ ಸೂಫಿ ಸಂತರು, Sufi Saints ಎಂದು ಸಂಬೋಧಿಸಿರುವುದನ್ನು ಗಮನಿಸಬಹುದು. ವಿಶೇಷವಾಗಿ ಕನ್ನಡ ಸಾಹಿತ್ಯದಲ್ಲಿ ಸೂಫಿಗಳನ್ನು “ಮತಧರ್ಮಗಳ ನಡುವಿನ ಸೇತುವೆಯಾಗಿದ್ದರು” ಎಂಬಂತಹ ಸುಳ್ಳುಗಳನ್ನು ಹೆಣೆದು ನಮ್ಮನ್ನೆಲ್ಲಾ ಅನೃತದ ಅಂಧಕಾರದಲ್ಲಿ ಮುಳುಗಿಸಿದ್ದಾರೆ. ಅವರು ಸಂತರೂ ಅಲ್ಲ, Saints ಸಹ ಅಲ್ಲ. ಅವರು ಇಸ್ಲಾಮಿನ ಯೋಧರು, ಜಿಹಾದಿಗಳು, ಮುಜಾಹಿದ್‌ಗಳು. ಡಂಭಾಚಾರದ ದೊಡ್ಡ ದೊಡ್ಡ ವಾಕ್ಯಗಳನ್ನು ಬರೆದ ಮಾತ್ರಕ್ಕೆ ಅವರು ಸಂತರಾಗಲಾರರು. ಸ್ವತಃ ಅನುಸರಿಸದ, ಜೀರ್ಣಿಸಿಕೊಳ್ಳದ ಮಾತುಗಳು ಅಧ್ಯಾತ್ಮವೆನಿಸುವುದಿಲ್ಲ. ಲೋಕೋನ್ನತಿಯ, ಲೋಕಹಿತದ ಅನುಭಾವವಿರದ ವ್ಯಕ್ತಿಗಳ ಕಾವ್ಯವು ಅದೆಷ್ಟೇ “ಆಕರ್ಷಕ” ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದು ಸಂತವಾಣಿಯೂ ಅಲ್ಲ, ಅವರು ಸಂತರೂ ಅಲ್ಲ. ಈ ಪರಿಪ್ರೇಕ್ಷ್ಯದಲ್ಲಿ ಸೂಫಿಗಳನ್ನು ಸಂತರೆಂದು ಸಂಬೋಧಿಸಿಲ್ಲ.

ಮುಸ್ಲಿಂ ಇತಿಹಾಸಕಾರ ಸಯ್ಯದ್ ಅತ್ತರ್ ಅಬ್ಬಾಸ್ ರಿಜ್ವಿ ರಚಿಸಿರುವ “ಎ ಹಿಸ್ಟರಿ ಆಫ್ ಸೂಫಿಸಂ ಇನ್ ಇಂಡಿಯಾ” (A history of Sufism in India – ಸಂಪುಟ 1, ನವದೆಹಲಿ, 1978) ಒಂದು ಮಹತ್ತ್ವದ ಗ್ರಂಥ. ಹಾಗೆಂದು ರಿಜ್ವಿ ರಾಷ್ಟ್ರೀಯ ಇತಿಹಾಸದ ಪರ ಎಂದು ನಾವು ತಪ್ಪು ತಿಳಿಯುವ ಅಗತ್ಯವಿಲ್ಲ.

ಇಸ್ಲಾಮಿನ ಮತಸಿದ್ಧಾಂತಕ್ಕೆ ಅನುಗುಣವಾಗಿಯೇ, ಈವರೆಗೆ ಕಾಫಿರರ ದೇಶಗಳ ಮೇಲೆ ಇಸ್ಲಾಮೀ ಆಕ್ರಮಣಕಾರರ ದಾಳಿ ನಡೆದಿರುವುದು ಮತ್ತು ಈಗಲೂ ನಡೆಯುತ್ತಿರುವುದು. ಸಾವಿರ ವರ್ಷಗಳ ಕಾಲ ಸ್ವತಃ ಇಸ್ಲಾಮೀ ಆಸ್ಥಾನ ಇತಿಹಾಸಕಾರರೇ, ಇಸ್ಲಾಮಿನ ಬಗೆಗೆ ಸ್ಪಷ್ಟವಾಗಿ ಹೇಳಿದ್ದಾರೆ, ದಾಖಲಿಸಿದ್ದಾರೆ. ಅವೆಲ್ಲವೂ ಬಹಳ ಮಹತ್ತ್ವದ ದಾಖಲೆಗಳೇ. ಅದೇ ರೀತಿಯಲ್ಲಿಯೇ ರಿಜ್ವಿ ಸಹ ಬರೆದಿದ್ದಾನೆ. ಇಲ್ಲಿ ರಿಜ್ವಿ ಪ್ರಸ್ತುತಪಡಿಸಿರುವ ದಾಖಲೆಗಳು ಏನು ಹೇಳುತ್ತವೆ, ಎಂಬುದನ್ನು ಎಚ್ಚರಿಕೆಯಿಂದ ಗಮನಿಸಬೇಕು.

ಕಾಫಿರರಿಗೆ ಸೇರಿದ ಎಲ್ಲ ಆರಾಧನಾ ಕೇಂದ್ರಗಳನ್ನೂ ಧ್ವಂಸ ಮಾಡಬೇಕು, ಅಷ್ಟೇ ಅಲ್ಲ, ಅಲ್ಲಿ ಅದೇ ತಾಣಗಳಲ್ಲಿ ಇಸ್ಲಾಮೀ ಮತಕ್ಕೆ ಸಂಬಂಧಿಸಿದ ಕಟ್ಟಡಗಳನ್ನೇ ಕಟ್ಟಬೇಕು, ಆ ಕಟ್ಟಡಗಳಲ್ಲಿ ಕಾಫಿರರ ದೇವಾಲಯಗಳ ಧ್ವಂಸಾವಶೇಷಗಳನ್ನು ಸ್ಪಷ್ಟವಾಗಿ ಕಾಣುವಂತೆಯೇ ಅಳವಡಿಸಬೇಕು, ಎಂಬುದನ್ನೇ ಇಸ್ಲಾಂ ಹೇಳಿಕೊಂಡು ಬಂದಿದೆ ಮತ್ತು ಮಾಡಿಕೊಂಡೂ ಬಂದಿದೆ. ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿಯೇ ಕಟ್ಟಿದ್ದ ಬಾಬರಿ ಮಸೀದಿಯಲ್ಲಿ ದೊರೆತಿರುವ ಹಿಂದೂ ಶೈಲಿಯ ಸ್ಥಂಭಗಳು ಕೆತ್ತನೆಗಳು ವಿಗ್ರಹಗಳು ಅಕಸ್ಮಾತ್ ಉಳಿದುಕೊಂಡು ಬಂದಿಲ್ಲ. ನಿರ್ಮಾಣದಲ್ಲಿ ಅಳವಡಿಸಲ್ಪಟ್ಟಿರುವುದು ಉದ್ದೇಶಪೂರ್ವಕವಾಗಿಯೇ. ಇಂದಿಗೂ ಭಾರತದಲ್ಲಿ ಹತ್ತಾರು ಸಾವಿರ ಮಸೀದಿಗಳಲ್ಲಿ, ಮಜಾರುಗಳಲ್ಲಿ (ಮಜಾರುಗಳೆಂದರೆ ಇಸ್ಲಾಮೀ ಮತಪ್ರಮುಖರ ಭವ್ಯವಾದ ಗೋರಿಗಳು) ಮಖಬರಾಗಳಲ್ಲಿ ಹಿಂದೂ – ಜೈನ- ಬೌದ್ಧ ಶಿಲ್ಪಗಳನ್ನು ಮತ್ತು ಕೆತ್ತನೆಗಳಿರುವ ಕಂಬಗಳನ್ನು ನೋಡಬಹುದು. ಇವೆಲ್ಲವೂ ಉದ್ದೇಶಪೂರ್ವಕವಾಗಿಯೇ ಉಳಿಸಿಕೊಂಡು ಬಂದಿರುವಂತಹವು. ಕಳೆದ ಏಳೆಂಟು ದಶಕಗಳಲ್ಲಿ ಕಮ್ಯೂನಿಸ್ಟರು, ಅಲಿಗಢದ ಜಿಹಾದೀ ವಿದ್ವಾಂಸರು ಮತ್ತು ಮಿಷನರಿಗಳು ಬರೆದಿಟ್ಟಿರುವ ವಿಕೃತ ಇತಿಹಾಸವನ್ನು ಶಾಲಾ ಕಾಲೇಜುಗಳಲ್ಲಿ ಓದಿದ ನಮಗೆಲ್ಲಾ ನಿಜ-ಇತಿಹಾಸದ ಇಂತಹ ದಾಖಲೆಗಳನ್ನು ನಂಬುವುದೇ ಕಷ್ಟವಾಗಿದೆ.

history of sufism

ಕಳೆದ ಒಂದು ಸಾವಿರ ವರ್ಷಗಳ ಇತಿಹಾಸದಲ್ಲಿ, ಜಿಹಾದೀ ಆಕ್ರಮಣಕಾರೀ ಸೇನೆಯೊಂದಿಗೆ ಮಾರುವೇಷದ ಮತಪ್ರಚಾರಕರೂ (ಸೂಫಿಗಳು) ಒಳನಾಡಿಗೆ ಹೋಗುತ್ತಿದ್ದರು. ಅನೇಕ (ಮೋಸದ) ವೇಷಗಳಲ್ಲಿ ಆಡಂಬರದ ಡಾಂಭಿಕ ಹೆಸರುಗಳಲ್ಲಿ ಇಸ್ಲಾಮಿನ ಕೆಲಸ ಮಾಡುತ್ತಿದ್ದರು. ದೇವಾಲಯಗಳ ಮೇಲೆ ದಾಳಿ ಮಾಡುವುದರಲ್ಲಿ ಇಂತಹವರದ್ದು ಪ್ರಧಾನವಾದ ಪಾತ್ರ, ಎಂಬುದಕ್ಕೆ ಇಸ್ಲಾಮೀ ದಾಖಲೆಗಳೇ ಇವೆ. ನಾಶವಾದ ದೇವಾಲಯಗಳ ತಾಣಗಳಲ್ಲಿ, ಅವುಗಳ ಧ್ವಂಸಾವಶೇಷಗಳನ್ನೇ ಬಳಸಿಕೊಂಡು ಇವರೆಲ್ಲಾ ತಮಗೆ ಬೇಕಾದಂತೆ ಕಟ್ಟಡಗಳನ್ನೂ ನಿರ್ಮಿಸಿಕೊಂಡು ವಿಹರಿಸುತ್ತಿದ್ದರು. ಆ ನಿರ್ಮಾಣಗಳಿಗೋ ದೊಡ್ಡ ದೊಡ್ಡ ಹೆಸರುಗಳು ಬೇರೆ! ಹಿಂದೂ ದೇವಾಲಯಗಳ ಲೂಟಿಗೆ ನೆರವಾದ ಇಂತಹ ಕೆಲವು ಮತಪ್ರಚಾರಕರು ಆ ಆಕ್ರಮಣಗಳಲ್ಲಿ ಸತ್ತುಹೋಗುತ್ತಿದ್ದ ಘಟನೆಗಳೂ ಜರುಗುತ್ತಿದ್ದವು. ಅಂತಹ ಎಲ್ಲ ತಾಣಗಳಲ್ಲಿ ಶೀಘ್ರವಾಗಿಯೇ ಸ್ಮಾರಕಗಳು ನಿರ್ಮಾಣವಾಗಿ, ಅಂತಹವರನ್ನು ಷಹೀದ್ (ಹುತಾತ್ಮ) ಎಂದು ಘೋಷಿಸಲಾಗುತ್ತಿತ್ತು. ಹೀಗೆ ಹಿಂದೂ ಸಂಸ್ಕೃತಿಯ ಉಗಮಸ್ಥಾನದಾದ್ಯಂತ ಬಹಳ ದೊಡ್ಡ ಸಂಖ್ಯೆಯ ಗುಂಬಜ್‌ಗಳು, ಗಂಜ್‌ಗಳು ಹುಟ್ಟಿಕೊಂಡವು ಮತ್ತು ಅವುಗಳ ಬಗೆಗೆ ಸುಳ್ಳುಕಥೆಗಳೂ ಅಷ್ಟೇ ಬೇಗ ಪ್ರಚಲಿತವಾದವು. ಬಹರಾಯಿಚ್‌ನಲ್ಲಿದ್ದ (ಉತ್ತರ ಪ್ರದೇಶ) ಸೂರ್ಯ ದೇವಾಲಯದ ಮೇಲೆ ದಾಳಿ ಮಾಡಿದಾಗ ಇಂತಹ ಓರ್ವ ಮತಪ್ರಚಾರಕ ಸಯ್ಯಿದ್ ಸಾಲಾರ್ ಮಸೂದ್ ಸತ್ತ. ಅನಂತರದ ದಾಳಿಗಳಲ್ಲಿ ಬಹರಾಯಿಚ್‌ನ ಆ ಸೂರ್ಯ ದೇವಾಲಯವು ಧ್ವಂಸವಾಯಿತು ಮತ್ತು ಅದೇ ತಾಣದಲ್ಲಿ ಅವನ ಹೆಸರಿನ ಮಜಾರ್ ತಲೆಯೆತ್ತಿ ನಿಂತಿದೆ. ಅವನು ಈಗ “ಬಹರಾಯಿಚ್‌ನ ಹೆಮ್ಮೆ” ಎನಿಸಿದ್ದಾನೆ ಮತ್ತು ಅವನ ಬಗೆಗೆ ತುಂಬ ತುಂಬ ಸಾಹಿತ್ಯ ಸಿಕ್ಕುತ್ತದೆ. ಇತಿಹಾಸದಲ್ಲಿ ಇಂತಹ ಜಿಹಾದೀ ದಾಳಿಗಳಲ್ಲಿ ಬದುಕುಳಿದ ಅನೇಕ ಮತಪ್ರಚಾರಕರು ಹಿಂದೂ ದೇವಾಲಯಗಳನ್ನು ನಾಶ ಮಾಡಿದ ತಾಣಗಳಲ್ಲಿಯೇ ನೆಲೆನಿಂತರು. ಒಳನಾಡಿನ ತುಂಬ ಇರುವ ದೊಡ್ಡ ಸಂಖ್ಯೆಯ ಮಸೀದಿಗಳು, ಮಜಾರುಗಳು ಇಂತಹುವೇ ಮತ್ತು ಇವೆಲ್ಲವೂ ದೇವಾಲಯಗಳ ತಾಣಗಳ ಮೇಲೆಯೇ ನಿರ್ಮಾಣವಾಗಿವೆ.

ಮೊದಮೊದಲ ಕಾಲಾವಧಿಯ ಸೂಫಿಗಳಿಗಾಗಲೀ, ಪಾಪಾಸುಕಳ್ಳಿಯಂತೆ ಹುಟ್ಟಿ ಬೆಳೆದ ಅನಂತರದ ಸಾಲುಸಾಲು ಸೂಫಿ ಸಂತತಿಗಾಗಲೀ ಒಂದೇ ಮಾರ್ಗ, ಒಂದೇ ಗುರಿ. ಗೊಂದಲವೇ ಇಲ್ಲ, ಎಲ್ಲರೂ ಇಸ್ಲಾಮೀ ಸಾಮ್ರಾಜ್ಯಶಾಹಿ ಸ್ಥಾಪನೆಯ ಹಾದಿಯ ಮುಜಾಹಿದ್‌ಗಳೇ. ವಿಶಾಲ ಭಾರತವನ್ನು ಮತ್ತು ಈ ಭಾಗದ ಇತಿಹಾಸವನ್ನು ಗಮನಿಸಿ ಹೇಳುವುದಾದರೆ, ಈ ಯಾವ ಸೂಫಿಯ ಪ್ರಜ್ಞೆಯಲ್ಲೂ ಅಧ್ಯಾತ್ಮದ ಒಂದು ಎಳೆಯೂ ಕಾಣುವುದಿಲ್ಲ. ಅನಂತರದ ಕಾಲಘಟ್ಟದಲ್ಲಿ ಸಾ|| ಯುಗದ 15, 16, 17, 18ನೆಯ ಶತಮಾನಗಳಲ್ಲಿ ಸ್ಪೇನ್ ಮತ್ತು ಪೋರ್ತುಗಲ್ ದೇಶಗಳ ಸಾಮ್ರಾಜ್ಯಶಾಹಿ, ವಸಾಹತುಶಾಹಿ ದುಃಶಕ್ತಿಗಳೊಂದಿಗೆ ಷಾಮೀಲಾಗಿ ಕೆಲಸ ಮಾಡಿದ ಕ್ರೈಸ್ತ ಮತಾಂತರಿ ಮಿಷನರಿಗಳಂತೆಯೇ ಈ ದೇಶದಲ್ಲಿ ಕಾರ್ಯನಿರ್ವಹಿಸಿದ ಬಹುತೇಕ ಎಲ್ಲ ಸೂಫಿಗಳೂ ಮತಾಂಧರಾಗಿದ್ದರು ಮತ್ತು ಇಸ್ಲಾಮೀ ಪ್ರಭುತ್ವದ ಸ್ಥಾಪನೆಗಾಗಿ ಪಣತೊಟ್ಟ ಉಗ್ರಗಾಮಿಗಳಾಗಿದ್ದರು.

sufi text

ಈ ಸೂಫಿಗಳ ಹಿಂಡು, ಇಸ್ಲಾಮೀ ಆಕ್ರಮಣಕಾರಿ ಸೇನೆಯೊಂದಿಗೆ, ಇಲ್ಲವೇ ಮೊದಲೇ, ಗುರಿಯತ್ತ ಸಾಗಿಬಿಡುತ್ತಿತ್ತು. ಇಸ್ಲಾಮೀ ಸಾಮ್ರಾಜ್ಯ ಸ್ಥಾಪನೆಗಾಗಿ ಸೇನೆಯ ಕಣ್ಣುಕಿವಿಗಳಂತೆ (ಬೇಹುಗಾರರಂತೆ) ಕೆಲಸ ಮಾಡಿ ಯುದ್ಧ ಗೆಲ್ಲಲು ಮೊದಲೇ ಹೋಗಿ ತಮ್ಮ ಸೇನೆಗೆ ಮಾಹಿತಿ ನೀಡುವ ಕೆಲಸದಲ್ಲಿ ಅತಿಹೆಚ್ಚು ಸಫಲರಾದವರು ಈ ‘ಚಿಶ್ತೀಯಾ ಸಿಲ್‌ಸಿಲಾ’ ಸೂಫಿಗಳು. ಅದರಲ್ಲೂ ದಕ್ಷಿಣ ಭಾರತದಲ್ಲಿ ಎಲ್ಲೆಲ್ಲಿ ಈ ಸೂಫಿಗಳು ಹೋಗಿ ಪ್ರಮುಖ ಸ್ಥಳಗಳಲ್ಲಿ ನೆಲೆಸಿದರೋ, ಅಲ್ಲಿಯ ಹಿಂದೂಗಳು ಇವರ ನಿಜಸ್ವರೂಪವನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಅರ್ಥ ಮಾಡಿಕೊಳ್ಳುವುದರಲ್ಲಿ ಕಾಲ ಮಿಂಚಿಹೋಗಿತ್ತು. ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮೊಹಮ್ಮದ್ ಬಿನ್ ತುಘಲಕ್ ಅವರ ಸೇನಾ ಕಾರ್ಯಾಚರಣೆಗಳನ್ನು, ಆಕ್ರಮಣಗಳನ್ನು ಸರಿಯಾಗಿ ತಿಳಿದುಕೊಳ್ಳಲು, ದಕ್ಷಿಣ ಭಾರತದಾದ್ಯಂತ ಹರಡಿದ್ದ ಸೂಫಿಗಳ ಬೇಹುಗಾರಿಕೆಯ ಜಾಲದ ಸರ್ವೇಕ್ಷಣೆಯನ್ನು ಮೊದಲು ಮಾಡಬೇಕಾಗುತ್ತದೆ. ದೆಹಲಿಯ ಖ್ಯಾತ ಚಿಶ್ತೀಯಾ ಸೂಫಿ ತರೀಕಾದ (ಸಿಲ್‌ಸಿಲಾ) ನಿಜಾಮುದ್ದೀನ್ ಔಲಿಯಾ ಎಂಬವನು ಸೂಫಿಗಳನ್ನು ತಂಡತಂಡವಾಗಿ ಎಲ್ಲ ದಿಕ್ಕುಗಳಿಗೆ – ಎಲ್ಲ ಪ್ರಾಂತಗಳಿಗೆ ಕಳುಹಿಸಿದನು. ಸ್ಥಳೀಯ ಹಿಂದೂ ಸಮುದಾಯದ ವಿರುದ್ಧ ನಡೆದ ಜಿಹಾದ್ ಕಾರ್ಯಾಚರಣೆಯಲ್ಲಿ ಈ ಎಲ್ಲ ಸೂಫಿಗಳೂ ತೀವ್ರತೆಯಿಂದ ಕೆಲಸ ಮಾಡಿದರು. ಇಸ್ಲಾಮೀ ಪ್ರಭುತ್ವದ ಸೇವೆ ಸಲ್ಲಿಸಲು, ನಿಜಾಮುದ್ದೀನನ ಪ್ರಧಾನ ಶಿಷ್ಯನಾದ ನಸೀರುದ್ದೀನ್ ಚಿರಾಗ್-ಈ-ದಿಹ್ಲೀ, ಈ ಸೂಫಿಗಳಿಗೆ ಪ್ರೇರಣೆ ನೀಡಿದನು. ಅವನು ಈ ಸೂಫಿಗಳಿಗೆ ಕಾವ್ಯಾತ್ಮಕವಾಗಿ,

The essence of Sufism is not an external garment,
Gird up your loins to serve the Sultan and be a Sufi

“ಸೂಫೀವಾದದ ಜೀವಾಳವು ಮನುಷ್ಯ ಧರಿಸುವ ಹೊರಗಿನ ಬಟ್ಟೆಯಲ್ಲಿಲ್ಲ. ಸುಲ್ತಾನನಿಗೆ ಸೇವೆ ಸಲ್ಲಿಸಲು ಸವಾಲು ಸ್ವೀಕರಿಸಬೇಕು, ಟೊಂಕ ಕಟ್ಟಿ ನಿಭಾಯಿಸಬೇಕು. ಆಗ ನೀವು ನಿಜವಾದ ಸೂಫಿ ಎನಿಸಿಕೊಳ್ಳುವಿರಿ” ಎಂದು ಹೇಳಿದನಂತೆ (ಲೇಖಕ ಎಸ್.ಎ.ಎ.ರಿಜ್ವಿ. ಗ್ರಂಥ: “ಎ ಹಿಸ್ಟರಿ ಆಫ್ ಸೂಫಿಸ್ಮ್ ಇನ್ ಇಂಡಿಯಾ” ಸಂಪುಟ 1. ನವದೆಹಲಿ. 1978ರ ಪ್ರಕಟಣೆ. ಪುಟ 189).

islamic invasion

ಸಾಮಾನ್ಯ ಯುಗದ 1823ರಲ್ಲಿ ಇಸ್ಲಾಂ ಮತನಿಷ್ಠ ನವಾಬನೊಬ್ಬನು ತಮಿಳುನಾಡಿನ ಚೆಂಗಲಪಟ್ಟು, ದಕ್ಷಿಣ ಆರ್ಕಾಟ್, ತಂಜಾವೂರು, ತಿರುಚಿರಾಪಲ್ಲಿ ಮತ್ತು ಉತ್ತರ ಆರ್ಕಾಟ್ ಜಿಲ್ಲೆಗಳಲ್ಲಿರುವ ಇಸ್ಲಾಮೀ ಪವಿತ್ರ ಸ್ಥಳಗಳಿಗೆ ಪ್ರವಾಸ ಮಾಡಿದನು ಮತ್ತು ಅವನ ಈ ಪ್ರವಾಸದ ಕಥನವೂ ಲಭ್ಯವಿದೆ. ಆ ನವಾಬನ ಆಸ್ಥಾನ ಲಿಪಿಕಾರನೇ ಈ ವಿವರಗಳನ್ನು ದಾಖಲಿಸಿದ್ದಾನೆ. ಈ ಸೂಫಿಗಳು ಎಲ್ಲೆಲ್ಲಿಗೆ ಹೋದರು ಮತ್ತು ಏನೇನು ಮಾಡಿದರು ಎಂಬ ವಿವರಗಳು ಇದರಿಂದ ದೊರೆಯುತ್ತವೆ. ಸಾ|| ಯುಗದ 1565ರಲ್ಲಿ ವಿಜಯನಗರ ಸಾಮ್ರಾಜ್ಯವು ನಾಶವಾದ ಮೇಲೆ ತಮಿಳುನಾಡಿನ ಈ ಭಾಗಗಳು ಮತ್ತೆ ಇಸ್ಲಾಮೀ ಆಕ್ರಮಣಗಳಿಗೆ ತುತ್ತಾದವು. ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲು ಮತ್ತು ಹಿಂದೂಗಳನ್ನು ಮತಾಂತರಿಸಲು ಸೂಫಿಗಳು ಹಿಂಡುಗಳಲ್ಲಿ ವಕ್ಕರಿಸಿದರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ವೇದಕಾಲದಲ್ಲಿ ಗೋ ಮಾಂಸ ಭಕ್ಷಣೆ ಇತ್ತೇ?

“ಈ ಪ್ರದೇಶದಲ್ಲಿ ಇಸ್ಲಾಮನ್ನು ಈ ಸೂಫಿಗಳು ಭದ್ರವಾಗಿ ನೆಲೆಗೊಳಿಸಿದರು” ಎಂದು ಈ ಲಿಪಿಕಾರನು ತುಂಬು ಹೃದಯದಿಂದ ಶ್ಲಾಘಿಸಿದ್ದಾನೆ. ಈ “ಕಾಂಚೀಪುರಂನ ಹೆಮ್ಮೆ” ಎಂದರೆ ಹಜರತ್ ನತ್ತರ್ ವಲೀ; ಅವನೇ ಈ ಕಾಂಚೀಪುರಂನ ಮುಖ್ಯ ದೇವಾಲಯವನ್ನು ಬಲಾತ್ಕಾರದಿಂದ ವಶಕ್ಕೆ ಪಡೆದ ಮತ್ತು ಅದನ್ನು ತನ್ನ ಖಾನ್‌ಕಾ (ಸೂಫಿಗಳ ತಂಗುದಾಣ)ವನ್ನಾಗಿ ಪರಿವರ್ತಿಸಿದ. ದೇವಾಲಯದ ಶಿವಲಿಂಗ ಕುರಿತು ಈ ಲಿಪಿಕಾರನು “ಸೈತಾನನನ್ನು (ಶಿವಲಿಂಗ) ತುಂಡುತುಂಡು ಮಾಡಿ ಶಾಶ್ವತ ನರಕಕ್ಕೆ ಕಳುಹಿಸಲಾಯಿತು. ಬುತ್-ಲಿಂಗ್ (ಭೂತಲಿಂಗ) ಹೆಸರಿನ ಈ ವಿಗ್ರಹವನ್ನು ಕಾಫಿರರು ಪೂಜಿಸುತ್ತಿದ್ದರು; ಅದನ್ನು ಕತ್ತರಿಸಿ ರುಂಡವನ್ನು ಬೇರ್ಪಡಿಸಲಾಯಿತು. ದೇಹದ (ವಿಗ್ರಹದ) ಒಂದು ಭಾಗವು ನೆಲಕ್ಕುರುಳಿತು. ಅದೇ ಜಾಗದಲ್ಲಿ ಈಗ ವಲೀ ಅವರ ಗೋರಿ ನಿರ್ಮಿತವಾಗಿದೆ ಮತ್ತು ಇಂದಿಗೂ (ಸಾಮಾನ್ಯ ಯುಗದ 1823) ತನ್ನ ಪ್ರಭಾವವನ್ನು ಬೀರುತ್ತಿದೆ” ಎಂದು ದಾಖಲಿಸಿದ್ದಾನೆ (ಗುಲಾಮ್ ಅಬ್ದುಲ್ ಖಾದಿರ್ ನಜೀರ್ ಬರೆದ “ಬಾಬ್ರಿ ಆಜಮ್ ಅಥವಾ ಆಜಮ್ ಶಾ ನವಾಬ್ ವಲಾಜಾ ಅವರ ಯಾತ್ರೆಗಳು”. ಮದ್ರಾಸ್. 1960. ಪುಟ 128).

ಇಸ್ಲಾಮೀ ಆಕ್ರಮಣದ ಮೊದಲ ಹಂತದ ಆಕ್ರಮಿತ ಸ್ಥಳಗಳನ್ನು ಗಮನಿಸಿದಾಗ, ಹಿಂದೂ ದೇವಾಲಯಗಳು ಧ್ವಂಸವಾದ ತಾಣಗಳಲ್ಲಿರುವ ಮಸೀದಿಗಳು ಮತ್ತು ಖಾನ್‌ಕಾಗಳು, ಸೂಫಿಗಳಿಂದ ಇಲ್ಲವೇ ಸೂಫಿಗಳಿಗಾಗಿ ನಿರ್ಮಾಣವಾಗಿರುವುದು ಆಕಸ್ಮಿಕವೇನಲ್ಲ, ಎಂಬುದು ರುಜುವಾತಾಗುತ್ತದೆ. ಅಂತೆಯೇ, ಧ್ವಂಸವಾದ ಹಿಂದೂ ದೇವಾಲಯಗಳ ಅವಶೇಷಗಳಿಂದಲೇ ಬಹುಪಾಲು ಈ ಮಸೀದಿಗಳನ್ನು – ಖಾನ್‌ಕಾಗಳನ್ನು ನಿರ್ಮಿಸಲಾಗಿದೆ, ಎಂಬುದೂ ಖಚಿತವಾಗುತ್ತದೆ. ಲಾಹೋರ್, ಮುಲ್ತಾನ್ (ಮೂಲಸ್ಥಾನ), ಉಚ್ (ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿದೆ), ಅಜ್ಮೀರ್, ದೆಹಲಿ, ಬದಾಯ್ಞೂ (ಉತ್ತರ ಪ್ರದೇಶ), ಕನೌಜ್ (ಕನ್ಯಾಕುಬ್ಜ), ಕಲ್ಪಿ, ಬಿಹಾರ್ ಷರೀಫ್, ಮಾನೇರ್, ಲಖನೌತಿ (ಲಕ್ಷ್ಮಣಾವತಿ), ಪಾಟಣ, ಪಾಟ್ನಾ, ಬುರ್ಹಾನ್‌ಪುರ, ದೌಲತಾಬಾದ್, ಗುಲಬರ್ಗಾ, ಬೀದರ್, ಬಿಜಾಪುರ (ಇಂದಿನ ವಿಜಯಪುರ), ಗೋಲ್ಕೊಂಡ, ಆರ್ಕಾಟ್, ವೆಲ್ಲೋರ್, ತಿರುಚಿರಾಪಲ್ಲಿ, ಇತ್ಯಾದಿ ಸ್ಥಳಗಳು ಪ್ರಮುಖ ಸೂಫಿ ಕೇಂದ್ರಗಳಾಗಿದ್ದವು. ಇಲ್ಲೆಲ್ಲಾ ಅನೇಕ ದರ್ಗಾಗಳಿವೆ ಮತ್ತು ಇವೆಲ್ಲವೂ ಇಸ್ಲಾಮೀ ವಿಗ್ರಹ ಭಂಜನೆಯ ಪುರಾವೆಗಳಾಗಿವೆ. ಈ ಲಕ್ಷಣವನ್ನೇ ಒಳನಾಡಿನ ಅನೇಕ ಕಡೆಗಳಲ್ಲಿರುವ ಮಸೀದಿಗಳಲ್ಲಿ, ದರ್ಗಾಗಳಲ್ಲಿ ಕಾಣುತ್ತೇವೆ. ಅಲ್ಲಾಹುವು ಬೇರಾವ ದೈವವನ್ನೂ ಸಹಿಸುವುದಿಲ್ಲ ಮತ್ತು ಅವನು ಪ್ರವಾದಿಯವರಿಗೆ ಹೇಳಿರುವ ರೀತಿಯ ಆರಾಧನಾ ಪದ್ಧತಿಯನ್ನು ಬಿಟ್ಟು, ಬೇರಾವ ಪದ್ಧತಿಯನ್ನೂ ಒಪ್ಪುವುದಿಲ್ಲ. ಬಹುಮುಖ್ಯವಾಗಿ ಈ ಸೂಫಿಗಳು ಅಂತಹ ಅಲ್ಲಾಹುವಿನ ಸಮರ್ಪಿತ ಯೋಧರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ನೆಹರೂ ಮನಸ್ಸು ಮಾಡಿದ್ದರೆ, ಗಾಂಧೀ ಹತ್ಯೆಯನ್ನು ತಪ್ಪಿಸಬಹುದಿತ್ತು!

Continue Reading
Advertisement
gold bride
ಕರ್ನಾಟಕ10 mins ago

Gold Rate Today: ಬಂಗಾರದ ಬೆಲೆಯಲ್ಲಿ ತುಸು ಇಳಿಕೆ, ಬೆಳ್ಳಿ ದರವೂ ಕುಸಿತ

road Accident
ಕರ್ನಾಟಕ18 mins ago

Road Accident : ಸಿಎಂ‌ ಬರುವ ದಾರಿಯಲ್ಲಿ ಅಪಘಾತ; ಆಂಬ್ಯುಲೆನ್ಸ್‌ ಬಾರದೆ ವ್ಯಕ್ತಿ ನರಳಾಟ

Brindavana Serial Kannada Vishwanath Ravindra Haveri
ಕಿರುತೆರೆ21 mins ago

Brindavana Serial Kannada: ʻಏನಾಗಲಿ ಮುಂದೆ ಸಾಗು ನೀʼಎಂದ ʻಬೃಂದಾವನʼ ಧಾರಾವಾಹಿ ಮಾಜಿ ನಾಯಕ!

mamtha
ದೇಶ26 mins ago

Mamata Banerjee: ಸಲ್ಮಾನ್‌ ಖಾನ್‌ ಜತೆ ಮಮತಾ ಬ್ಯಾನರ್ಜಿ ಡ್ಯಾನ್ಸ್‌! ವಿಡಿಯೊ ಇಲ್ಲಿದೆ

namitha actress
South Cinema49 mins ago

Actress Namitha: ಚೆನ್ನೈ ಪ್ರವಾಹ; ಅವಳಿ ಮಕ್ಕಳೊಂದಿಗೆ ಅಪಾಯಕ್ಕೆ ಸಿಲುಕಿದ್ದ ನಟಿ!

karnataka live news kannada today news live vistara news november 18 and CM Siddaramaiah BS Yediyurappa and DCM DK Shivakumar
Live News55 mins ago

Karnataka Live News: ರಾಜ್ಯದ ಮಹತ್ವದ ಸುದ್ದಿಗಳು; ರಾಜ್ಯಸಭೆಗೆ ಕರ್ನಾಟಕದಿಂದ ಸೋನಿಯಾ ಗಾಂಧಿ?

karni sena chief murder
ದೇಶ1 hour ago

ಕರ್ಣಿ ಸೇನಾ ನಾಯಕನ ಹತ್ಯೆ ವಿರೋಧಿಸಿ ಇಂದು ರಾಜಸ್ಥಾನ ಬಂದ್, ಗೆಹ್ಲೋಟ್‌ ಮೇಲೆ ಆರೋಪ

Wedding Fashion
ಫ್ಯಾಷನ್1 hour ago

Wedding Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ವೆಡ್ಡಿಂಗ್‌ ಪರ್ಸ್

Ranbir Kapoor Animal was shot at Saif Ali Khan’s 800 crore Pataudi Palace
ಬಾಲಿವುಡ್1 hour ago

Animal Movie: 150 ಕೋಣೆಯ ಅರಮನೆಯಲ್ಲಿ ʻಅನಿಮಲ್‌ʼ ಶೂಟಿಂಗ್‌; ಇದು ಯಾರ ಬಂಗಲೆ ನೋಡಿ!

self harm muskath
ಕ್ರೈಂ2 hours ago

Self Harm: 6 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾದ ಯುವತಿ ಆತ್ಮಹತ್ಯೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

read your daily horoscope predictions for december 6 2023
ಪ್ರಮುಖ ಸುದ್ದಿ6 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ14 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ15 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ15 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ4 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

ಟ್ರೆಂಡಿಂಗ್‌