Rupay debit card | ರುಪೇ ಡೆಬಿಟ್‌ ಕಾರ್ಡ್‌, ಕಡಿಮೆ ಮೌಲ್ಯದ ಯುಪಿಐ ವ್ಯವಹಾರ ಉತ್ತೇಜಿಸಲು 2,600 ಕೋಟಿ ರೂ. ನೆರವು Vistara News

ಪ್ರಮುಖ ಸುದ್ದಿ

Rupay debit card | ರುಪೇ ಡೆಬಿಟ್‌ ಕಾರ್ಡ್‌, ಕಡಿಮೆ ಮೌಲ್ಯದ ಯುಪಿಐ ವ್ಯವಹಾರ ಉತ್ತೇಜಿಸಲು 2,600 ಕೋಟಿ ರೂ. ನೆರವು

ದೇಶದಲ್ಲಿ ರುಪೇಕಾರ್ಡ್‌ ಮತ್ತು ಯುಪಿಐ ಮೂಲಕ ಹಣಕಾಸು ವ್ಯವಹಾರಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ 2,600 ಕೋಟಿ ರೂ. ನೀಡಲಿದೆ. ನಗದು ರಹಿತ (Rupay debit card) ವ್ಯವಹಾರಗಳಿಗೆ ಇದು ಬೆಂಬಲಿಸಲಿದೆ.

VISTARANEWS.COM


on

rupay card
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ದೇಶದಲ್ಲಿ ರುಪೇ ಡೆಬಿಟ್‌ ಕಾರ್ಡ್‌ ಹಾಗೂ ಕಡಿಮೆ ಮೌಲ್ಯದ ಯುಪಿಐ ಹಣಕಾಸು ವರ್ಗಾವಣೆಗಳನ್ನು ಉತ್ತೇಜಿಸಲು 2,600 ಕೋಟಿ ರೂ.ಗಳ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ.( Rupay debit card) ಈ ಕುರಿತ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

ವ್ಯಕ್ತಿಯಿಂದ ವ್ಯಾಪಾರಿಗೆ (Person-to-merchant) ಯುಪಿಐ ಮೂಲಕ ಹಣ ಪಾವತಿಗೆ ಇನ್ಸೆಂಟಿವ್‌ ಸಿಗಲಿದೆ. ರುಪೇ ಡೆಬಿಟ್‌ ಕಾರ್ಡ್‌ ಬಳಕೆಗೂ ಉತ್ತೇಜನ ಸಿಗಲಿದೆ.

ವ್ಯಾಪಾರಿಗಳ ಜತೆಗೆ ಯುಪಿಐ ಕ್ಯುಆರ್‌ ಕೋಡ್‌ ವ್ಯವಸ್ಥೆ ಅಳವಡಿಸುವ ಬ್ಯಾಂಕ್‌ಗಳಿಗೆ ಇನ್ಸೆಂಟಿವ್‌ ಸಿಗಲಿದೆ. ಪ್ರಸ್ತುತ ಯುಪಿಐ ಅಥವಾ ರುಪೇ ಡೆಬಿಟ್‌ ಕಾರ್ಡ್‌ ಮೂಲಕ ಹಣ ಸ್ವೀಕರಿಸುವಾಗ ವ್ಯಾಪಾರಿಗಳಿಗೆ ಯಾವುದೇ ಶುಲ್ಕ ತಗಲುವುದಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

ಮಾನವ ಜನ್ಮವು ಪರಮಾತ್ಮನ ಕೃಪೆ. ಪರಮಾತ್ಮನ ಕೃಪೆಯಿಂದ ದೊರಕಿರುವ ಈ ಮಾನವ ಜನ್ಮವನ್ನು ವ್ಯರ್ಥವಾಗಿ ಕಳೆದುಕೊಳ್ಳಬಾರದೆಂಬ ಕಳಕಳಿಯಿಂದ ಗುರುವರ್ಯರಾದ ತಾತಯ್ಯನವರು ಈ ಭಕ್ತಿತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ.

VISTARANEWS.COM


on

kaivara tatayya
Koo
jayaram-column

ಕೈವಾರದ ತಾತಯ್ಯನವರು ಮಾನವ ಜನ್ಮದ ಶ್ರೇಷ್ಠತೆಯನ್ನು ಹಲವಾರು ಬೋಧನೆಗಳಲ್ಲಿ ಎತ್ತಿಹಿಡಿದಿದ್ದಾರೆ. ನರಜನ್ಮದಲ್ಲಿ ಮಾತ್ರ ಮೋಕ್ಷವನ್ನು ಕಂಡುಕೊಳ್ಳಲು ಸಾಧ್ಯವಿದೆ. ನಿನ್ನನ್ನು ನೀನು ತಿಳಿದು ಆತ್ಮಜ್ಞಾನಿಯಾಗು. ಮತಿಹೀನನಾಗಿ ವರ್ತಿಸುತ್ತಾ, ಇಂದ್ರಿಯಗಳನ್ನು ನಿಗ್ರಹಿಸದಿದ್ದರೆ ಅಧ್ಯಾತ್ಮವಿದ್ಯೆ ಅಂಟುವುದಿಲ್ಲ. ಹೀಗೆ ಹಲವಾರು ಮಹತ್ವದ ವಿಷಯಗಳನ್ನು ತಾತಯ್ಯನವರು ಸರಳವಾದ ಮಾತುಗಳಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬೋಧಿಸಿದ್ದಾರೆ.

ಮಾನವ ಜನ್ಮವು ಪರಮಾತ್ಮನ ಕೃಪೆ. ಪರಮಾತ್ಮನ ಕೃಪೆಯಿಂದ ದೊರಕಿರುವ ಈ ಮಾನವ ಜನ್ಮವನ್ನು ವ್ಯರ್ಥವಾಗಿ ಕಳೆದುಕೊಳ್ಳಬಾರದೆಂಬ ಕಳಕಳಿಯಿಂದ ಗುರುವರ್ಯರಾದ ತಾತಯ್ಯನವರು ಈ ಭಕ್ತಿತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ. ಪ್ರತಿಯೊಂದು ಜೀವಿಗೂ ಮರಣವಿದೆ. ಇದು ಸತ್ಯ. ಮರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮರಣದ ನಂತರ ಹುಟ್ಟುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿದೆ. ಈ ಚಿಂತನೆಯನ್ನು ತಾತಯ್ಯನವರು ಮುಂದಿಡುತ್ತಿದ್ದಾರೆ.

ಯೆಂತ ಕಾಲಮೈನ ಯೆರುಕ ಲೇಕನು ಜೀವಿ
ಚಚ್ಚಿ ಪುಟ್ಟುಚುನುಂಡು ಸಹಜಮಿದಿಯು

ತಾತಯ್ಯನವರು ಈ ಪದ್ಯದಲ್ಲಿ ಮಾನವರಿಗೆ ನೇರವಾಗಿ ತತ್ವಬೋಧೆಯನ್ನು ಮಾಡಿದ್ದಾರೆ. ಎಷ್ಟೇ ಕಾಲ ಕಳೆದರೂ ಅಜ್ಞಾನದಿಂದ ಕೂಡಿರುವ ಜೀವಿಯು ಮತ್ತೆ ಮತ್ತೆ ಸತ್ತು ಹುಟ್ಟುತ್ತಿರುತ್ತಾನೆ. ಇದು ಸಹಜವಾದ ಪ್ರಕ್ರಿಯೆ. ಕಾರಣವೆಂದರೇ ಅಜ್ಞಾನ. ಯಾರಿಗಾದರೇ ಕೇವಲ ಪ್ರಾಪಂಚಿಕವಾದ ವ್ಯವಹಾರದಲ್ಲಿ ಮಾತ್ರ ಆಸಕ್ತಿ ಇರುತ್ತದೋ ಅವರು ಅಜ್ಞಾನಿಗಳು. ಮಾನವಜನ್ಮದಲ್ಲಿ ಹುಟ್ಟಿದ ಮೇಲೆ ಪರಲೋಕದ ಚಿಂತನೆಯನ್ನು ಮಾಡುತ್ತಿರಬೇಕು. ಅಜ್ಞಾನಿಯಾಗದೇ ಆತ್ಮಜ್ಞಾನಿಯಾಗಿ ಈ ಸಹಜಸ್ಥಿತಿಯಿಂದ ತಪ್ಪಿಸಿಕೊಂಡು ಪಾರಾಗು ಎನ್ನುತ್ತಿದ್ದಾರೆ ತಾತಯ್ಯನವರು.

ಜನನ ಮರಣಮುಲೆನ್ನೋ..

ಮಾನವನಾಗಿ ಹುಟ್ಟುವುದಕ್ಕೆ ಮೊದಲು ಏನಾಗಿದ್ದೇವೋ? ಯಾರಿಗೂ ಗೊತ್ತಿಲ್ಲ. ಮಾನವ ಜನ್ಮದಲ್ಲಿರುವ ಆತ್ಮ ಹಿಂದೆ ಯಾವ ಯಾವ ಜೀವರಾಶಿಗಳಲ್ಲಿ ಸೇರಿಕೊಂಡು ಜೀವಿಸಿತ್ತೋ? ಯಾರಿಗೂ ಗೊತ್ತಿಲ್ಲ. ಇದರ ಮನವರಿಕೆಯನ್ನು ತಾತಯ್ಯನವರು ಮಾಡಿಕೊಡುತ್ತಿದ್ದಾರೆ.

ಜನನಮರಣಮುಲೆನ್ನೊ ಜಾತುಲೆನ್ನಾಯೆನೋ
ತಲಿದಂಡ್ರುಲೆಂದರೋ ತನುವುಲೆನ್ನೋ
ಇಪ್ಪುಡು ಧರಲೋನ ಯಿಟುವಂಟಿ ಮಾನವ
ದೇಹಂಬು ನಿರ್ಮಿಂಚೆ ಮಾಧವುಂಡು||

ಈವರೆಗೆ ಅದೆಷ್ಟು ಸಲ ಜನನ ಮರಣಗಳಾದವೋ, ಅದೆಷ್ಟು ಜಾತಿಗಳಾದವೋ, ಅದೆಷ್ಟು ಮಂದಿ ತಾಯಿತಂದೆಗಳನ್ನು ಪಡೆದದ್ದಾಯಿತೋ, ಅದಕ್ಕೆ ಲೆಕ್ಕವೇ ಇಲ್ಲ. ಎಷ್ಟೆಷ್ಟು ಶರೀರಗಳನ್ನು ಪಡೆದು ಮಣ್ಣುಗೂಡಿಸಿದ್ದಾಯಿತೋ, ಲೆಕ್ಕವಿಲ್ಲ. ಹಿಂದಿನ ಜನ್ಮಗಳು ಏನೇ ಇರಲಿ, ಕಳೆದು ಹೋಯಿತು. ಚಿಂತೆ ಮಾಡಬೇಡ. ಈಗಲಾದರೂ, ಜ್ಞಾನ ಸಂಪಾದನೆಗೆ ಅವಕಾಶವಿರುವ ವಿವೇಕದಿಂದ ಕೂಡಿರುವ ಮಾನವಜನ್ಮ ಬಂದಿದೆ. ಲೋಕೇಶ್ವರನಾದ ಮಾಧವನು ಇಂತಹ ಶ್ರೇಷ್ಠವಾದ ಮಾನವದೇಹವನ್ನು ಕೊಟ್ಟಿದ್ದಾನೆ, ಹಾಳುಮಾಡಿಕೊಳ್ಳಬೇಡ ಎಂದು ಎಚ್ಚರಿಸುತ್ತಿದ್ದಾರೆ ತಾತಯ್ಯನವರು.

ಭೂಮಿಯಲ್ಲಿ ಇಂತಹ ಮಾನವದೇಹವನ್ನು ಪಡೆದ ಮೇಲೆ ಮಾಡಬೇಕಾದ ಕರ್ತವ್ಯವೇನು? ಅದರ ಫಲಶ್ರುತಿಯೇನು? ಪದ್ಯದ ಕೊನೆಯಲ್ಲಿ ಈ ರೀತಿಯಾಗಿ ಬೋಧಿಸುತ್ತಿದ್ದಾರೆ ತಾತಯ್ಯನವರು.
ಹಿಂದೆ ಮಾಡಿದ ತಪ್ಪನ್ನು ಮಾಡದಿರು..

ನಮ್ಮ ಕಣ್ಣ ಮುಂದೆಯೇ ಮಾನವ ದೇಹವಿಲ್ಲದ ಅದೆಷ್ಟೋ ಜಂತುಗಳಿವೆ. ಆದರೆ ಈ ಜಂತುಗಳಿಗೆ ಮಾನವನಿಗಿರುವಷ್ಟು ಜ್ಞಾನವಿಲ್ಲ, ಅನುಕೂಲಗಳಿಲ್ಲ. ಆ ಜಂತುಗಳು ಪರಮಾತ್ಮನಾದ ಜಗದೀಶ್ವರನ ಸ್ಮರಣೆ ಮಾಡುವುದಿಲ್ಲ. ಮಾನವನಾಗಿ ಹುಟ್ಟಿದ ಮೇಲೆ ನೀನು ಪರಮಾತ್ಮನ ಸ್ಮರಣೆಯನ್ನು ಮಾಡದಿದ್ದರೆ ಏನು ಪ್ರಯೋಜನ? ಮಾನವಜನ್ಮದ ಸಾರ್ಥಕವೇನು? ಆ ಜಂತುವಿಗೂ ಮಾನವರಿಗೂ ಇರುವ ವ್ಯತ್ಯಾಸವೇನು? ತಾತಯ್ಯನವರು ಹೀಗೆ ಬೋಧಿಸಿದ್ದಾರೆ.

ಮುನುಪಟಿ ವಿಧಂಬುನ ಮೂರ್ಖುಡೈ ಪೋವಲದು
ಜಗದೀಶ್ವರುನಿ ಜಪಮು ಚೇಸಿ ನೀವು
ಪಟ್ಟು ವದಲಕ ಪರಮಂದೆ ದೃಷ್ಟಿವುಂಚಿ
ಚಾವು-ಪುಟ್ಟು ಲೇನಿ ಸೌಖ್ಯಸಂಪದಲನುಂಡು||

kaivara tatayya2

ಹಿಂದಿನ ಜನ್ಮಗಳಲ್ಲಿ ಮಾಡಿದದಂತೆ ಈ ಸಲವೂ ಮೂರ್ಖನಾಗಿ ಹೊರಡುವವನಾಗಬೇಡ. ಮಾನವಜನ್ಮವನ್ನು ಎಷ್ಟೋ ಪೂರ್ವಜನ್ಮಗಳ ಪುಣ್ಯದಿಂದ ಪಡೆದಿದ್ದೀಯ. ಈ ಸದಾವಕಾಶವನ್ನು ಕಳೆದುಕೊಳ್ಳಬೇಡ. ಪರಮಾತ್ಮನಾದ ಜಗದೀಶ್ವರನ ಜಪಸ್ಮರಣೆಯನ್ನು ಮಾಡು. ಪಟ್ಟು ಬಿಡದೆ ಪರಮಲಕ್ಷ್ಯವಾಗಿರುವ ಮೋಕ್ಷದಲ್ಲೇ ದೃಷ್ಟಿಯನ್ನಿಟ್ಟು, ಸಾವು-ಹುಟ್ಟುಗಳಿಲ್ಲದ ಸೌಖ್ಯ ಸಂಪತ್ತುಗಳನ್ನು ಅನುಭವಿಸು ಎನ್ನುತ್ತಿದ್ದಾರೆ ತಾತಯ್ಯನವರು.

“ಪಟ್ಟು ವದಲಕ ಮರಮಂದೆ ದೃಷ್ಠಿವುಂಚಿ” ತಾತಯ್ಯನವರು ಮಾನವರಿಗೆ ನೀಡುತ್ತಿರುವ ಎಚ್ಚರಿಕೆ ಇದು. ಪರಮಾತ್ಮನ ಸ್ಮರಣೆ ಮಾಡು, ಇದು ತಾತಯ್ಯನವರು ಬೋಧಿಸುತ್ತಿರುವ ಉಪದೇಶ. ದೃಢ ಸಂಕಲ್ಪದಿಂದ, ಹಿಡಿದ ಪಟ್ಟು ಬಿಡದೆ ಪರಮಾತ್ಮನ ಸ್ಮರಣೆಯನ್ನು ಮಾಡಬೇಕು ಎನ್ನುತ್ತಿದ್ದಾರೆ. ಉದಾಸೀನದ ಸ್ಮರಣೆಯಿಂದ ಪ್ರಯೋಜನವಿಲ್ಲ. ಆದುದರಿಂದ ಜಪಸ್ಮರಣೆಯಲ್ಲಿ ಸಡಿಲವಾಗದೆ ಬಿಗಿಯಾದ, ದೃಢವಾದ ಹಿಡಿತವಿರಬೇಕು.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ನವರಾತ್ರಿ ವಿಶೇಷ: ಅಖಿಲಾಂಡೇಶ್ವರಿಯ ವರ್ಣನೆ

ಪರದಲ್ಲಿ ದೃಷ್ಠಿ ಇರಿಸಬೇಕೆಂದು ಹೇಳಿದ್ದಾರೆ. ಇದು ಬಹಳ ಮುಖ್ಯವಾದುದು. ಲೌಕಿಕ ಭೋಗಗಳನ್ನು ಬಯಸಿ ಮಾಡುವ ಅನೇಕ ಜಪಗಳು ಶಾಶ್ವತವಾದ ಸುಖಗಳನ್ನು ನೀಡುವುದಿಲ್ಲ. ಅಜ್ಞಾನಿ ಜನರು ಧನಕನಕ ಭೋಗಗಳೆಂಬ ಅಲ್ಪಲಾಭಕ್ಕೆ ಮರುಳಾಗಿ ಅದನ್ನೇ ಸುಖವೆಂದು ಭ್ರಮಿಸುತ್ತಾರೆ. ಆದರೆ ಸ್ವಲ್ಪವೇ ಕಾಲದ ನಂತರ ಭೋಗವು ರೋಗವಾಗಿ ಪರಿಣಮಿಸುತ್ತದೆ. ಕೊನೆಗೆ ತಮ್ಮ ತಪ್ಪಿನ ಅರಿವಾಗುತ್ತದೆ. ನೀನು ಹಾಗಾಗಬೇಡ, ಜ್ಞಾನಿಯಾಗಿ ಹುಟ್ಟುಸಾವುಗಳಿಲ್ಲದ ಭಗವಂತನ ಸಾನ್ನಿಧ್ಯವನ್ನು ಸೌಖ್ಯ ಸಂಪದವೆಂದು ಅರಿತುಕೋ. ಲೋಕದ ಇನ್ನಿತರ ಅಲ್ಪವಸ್ತುಗಳಿಗೆ ಆಸೆಪಡದೆ ಮೋಕ್ಷತತ್ವದಲ್ಲಿ ಮನಸ್ಸಿಟ್ಟು ಸ್ಮರಿಸು, ಆಗ ಜಗದೀಶ್ವರನು ನಿನ್ನನ್ನು ತನ್ನ ಲೋಕಕ್ಕೆ ಕರೆದುಕೊಂಡು ತನ್ನ ಬಳಿ ಇರಿಸಿಕೊಳ್ಳುತ್ತಾನೆ. ಇದು ಮೋಕ್ಷಪದವಿ. ಇಲ್ಲಿಗೆ ಹೋದಮೇಲೆ ಪುನ: ಈ ಲೋಕಕ್ಕೆ ಹಿಂತಿರುಗಿ ಬರಬೇಕಾಗಿಲ್ಲ. ಹುಟ್ಟುಸಾವುಗಳ ತಂಟೆ ಇರುವುದಿಲ್ಲ. ಇದೇ ನಿಜವಾದ ಆನಂದ. ಭಗವಂತನ ನಾಮಜಪದ ಸ್ಮರಣೆಯಿಂದ ಈ ಮೋಕ್ಷಸಾಧನೆಯನ್ನು ಮಾಡು, ಹಿಂದಿನ ಜನ್ಮಗಳಲ್ಲಿ ಮೂರ್ಖತನದಿಂದ ಮಾಡಿದ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೋ ಎನ್ನುತ್ತಿದ್ದಾರೆ ತಾತಯ್ಯನವರು.

ಹುಟ್ಟು ಸಾವುಗಳಿಲ್ಲದ ಮೋಕ್ಷ ಪಡೆಯಲು ಈ ಮಾನವದೇಹದಲ್ಲಿಯೇ ಸಾಧನೆ ಮಾಡಬೇಕು. ಈ ಸಾಧನೆಗೆ ಪರಮಾತ್ಮನ ನಿರಂತರ ಸ್ಮರಣೆಯೇ ಉತ್ತಮವಾದ ಸಾಧನ ವಿಧಾನವಾಗಿದೆ. ಮಾನವಜನ್ಮ ಲಭಿಸಿರುವ ಈ ಸಮಯದಲ್ಲೂ ಮೋಕ್ಷ ಸಾಧನೆಗಾಗಿ ಭಗವಂತನ ಸ್ಮರಣೆಮಾಡದೆ, ಇಹಭೋಗಗಳಿಗೆ ಆಸೆಪಟ್ಟರೇ ಯಮಪಾಶಕ್ಕೆ ತುತ್ತಾಗಬೇಕಾಗುತ್ತದೆ. ಭಕ್ತನಾಗು, ಭಜನೆ ಮಾಡು, ಹುಟ್ಟುಸಾವುಗಳಿಲ್ಲದ ಸೌಖ್ಯಸಂಪತ್ತನ್ನು ಅನುಭವಿಸು ಎಂದು ತಾತಯ್ಯನವರು ಮಾನವರನ್ನು ಈ ಬೋಧನೆಯ ಮೂಲಕ ಜಾಗೃತಗೊಳಿಸಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ ಅಂಕಣ: ಮೂಢಭಕ್ತಿಯಿಂದ ಶೀಘ್ರಮುಕ್ತಿ

Continue Reading

ಅಂಕಣ

ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

ಒಳಜಗಳದಲ್ಲಿ ಪಕ್ಷದ ಮಾನವನ್ನು ಹಾದಿಬೀದಿ ರಂಪಕ್ಕೆ ಬಳಸಿಕೊಳ್ಳುತ್ತಿರುವ ಇಬ್ಬರು ಶಾಸಕರ ವಿರುದ್ಧ ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಕಾಂಗ್ರೆಸ್ ವರಿಷ್ಟರು ಕೈಚೆಲ್ಲಿರುವುದು ಸದ್ಯದ ನೋಟ.

VISTARANEWS.COM


on

Madhu Bangarappa Beluru Gopalakrishna
Koo
mogasale logo

ಈ ವರ್ಷ ಮಳೆಗಾಲ ರಾಜ್ಯದಲ್ಲಿ ಸಂಪೂರ್ಣ ಕೈಕೊಟ್ಟಿದೆ. ವಾಡಿಕೆಯ ಒಂದಂಶದಷ್ಟೂ ಮಳೆ ಸುರಿದಿಲ್ಲ, ಒರತೆ ಒತ್ತಸಿಲ್ಲ. ಬಹುತೇಕ ಎಲ್ಲ ನದಿ ಹಳ್ಳ ತೊರೆಗಳೂ ಬತ್ತಿ ಹೋಗುವ ಹಂತದಲ್ಲಿವೆ. ಸರ್ವಋತು ನದಿಗಳೂ ಬಟಾಬಯಲಾಗುತ್ತಿವೆ. ದೊಡ್ಡ ದೊಡ್ಡ ಅಣೆಕಟ್ಟಿನ ಹಿಂಭಾಗದಲ್ಲಿ ನೂರಾರು ಹೆಕ್ಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಜಲಾಶಯಗಳು ದೊಡ್ಡ ದೊಡ್ಡ ಆಟದ ಮೈದಾನದಂತೆ ಭಾಸವಾಗುತ್ತಿವೆ. ಕೆರೆ ಕಟ್ಟೆಗಳಂತೂ ಒಣಗಿ ಹೋಗಿವೆ. ಜಾನುವಾರುಗಳು ಹುಲ್ಲಿಗಾಗಿ ಒಣಗಿ ಬಾಯ್ಬಿರಿದ ನೆಲ ನೆಕ್ಕುವ ಸ್ಥಿತಿ ಸಾಮಾನ್ಯವಾಗಿದೆ. ಕರ್ನಾಟಕಕ್ಕೆ ಹೆಸರು ತಂದ ಜೋಗದ ಜಲಪಾತವೂ ಸೇರಿದಂತೆ ಬಹುತೇಕ ದಭೆದಭೆಗಳಲ್ಲಿ ಧುಮ್ಮಿಕ್ಕುವ ಸುಂದರ ನೋಟ ನೀರೇ ಇಲ್ಲದೆ ನೀರವವಾಗಿದೆ. ಜೋಗ ಎಂದಾಕ್ಷಣ ಶರಾವತಿ ನೆನಪಿಗೆ ಬರುತ್ತದೆ. ಅಂಬುತೀರ್ಥದಲ್ಲಿ ಹುಟ್ಟಿ ಜೋಗದಲ್ಲಿ ಧುಮುಕುವವರೆಗೂ ಅದು ಸರಿಯುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಅದಕ್ಕೆ ವಿಶ್ವ ಖ್ಯಾತಿ ತಂದ ಜೋಗ್ ಫಾಲ್ಸ್ ಎನ್ನುವುದು ಮಳೆ ಇಲ್ಲದೆ ಜೋಕ್ ಫಾಲ್ಸ್ ಆಗಿದೆ.

ರಾಜಕಾರಣಕ್ಕೆ ಹೊರಳಿದರೆ ಜಲಪಾತಕ್ಕಿಂತ ಹೆಚ್ಚಿನ ಸದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಅಡರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ 135 ಶಾಸಕ ಬಲದೊಂದಿಗೆ ಅಧಿಕಾರ ಹಿಡಿದು ಹೊಯ್‍ಕೈ ಒಳ ಜಗಳದಲ್ಲಿ ಮುಳುಗಿರುವುದು ರಾಜಧಾನಿ ಬೆಂಗಳೂರಿನ ಸಮಾಚಾರವಾದರೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ರಾಜಕೀಯದಲ್ಲಿ ಅಲ್ಲೋಲಕಲ್ಲೋಲವೇ ನಡೆದಿದೆ. ಆರು ತಿಂಗಳಿನಿಂದಲೂ ಅನಿಯಂತ್ರಿತವಾಗಿರುವ ಅಲ್ಲೋಲ ಕಲ್ಲೋಲದ ಒಂದು ತುದಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸೊರಬ ಶಾಸಕ ಮಧು ಬಂಗಾರಪ್ಪ ಇದ್ದಾರೆ. ಇನ್ನೊಂದು ತುದಿಯಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಇದ್ದಾರೆ. ಇವರಿಬ್ಬರ ಜಗಳ ಮಲೆನಾಡ ಜಿಲ್ಲೆಯ ಪ್ರಶಾಂತ ವಾತಾವರಣದಲ್ಲಿ ಬಗ್ಗಡವೆಬ್ಬಿಸಿದೆ. ಸಮೃದ್ಧ ಮಳೆಗಾಲದ ದಿನಗಳಲ್ಲಿ ಭೋರ್ಗರೆದು ಧುಮ್ಮಿಕ್ಕುವ ಜೋಗ ಜಲಪಾತದ ನೆನಪನ್ನು ಈ ಇಬ್ಬರ ಜಗಳ ನೆನಪಿಸುತ್ತಿದೆ.

ಸಿದ್ದರಾಮಯ್ಯ ಸಂಪುಟ ರಚನೆ ಮಾಡಿದಾಗ ಹೃದಯ ಒಡೆದುಕೊಂಡವರು ಮುಖ್ಯವಾಗಿ ಇಬ್ಬರು. ಅದರಲ್ಲಿ ಮೊದಲಿಗರು ವಿಧಾನ ಪರಿಷತ್‍ನಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಹಾಲಿ ಎಂಎಲ್‍ಸಿಯಗಿರುವ ಬಿ.ಕೆ. ಹರಿಪ್ರಸಾದ್. ಎರಡನೆಯವರು ಬೇಳೂರು ಗೋಪಾಲಕೃಷ್ಣ. ಈ ಇಬ್ಬರೂ ಮಧು ಬಂಗಾರಪ್ಪನವರಂತೆ ಪ್ರಬಲ ರಾಜಕೀಯ ಪ್ರಭಾವ ಹೊಂದಿರುವ ಈಡಿಗ ಸಮುದಾಯಕ್ಕೆ ಸೇರಿದ ಮುಖಂಡರು. ಇಬ್ಬರೂ ಸಚಿವರಾಗುವ ಕನಸು ಕಟ್ಟಿಕೊಂಡಿದ್ದವರು. ಹರಿಪ್ರಸಾದ್ ಮೂರು ಅವಧಿ ರಾಜ್ಯಸಭಾ ಸದಸ್ಯರಾಗಿದ್ದು ಕಾಂಗ್ರೆಸ್ ಹೈಕಮಾಂಡ್‍ಗೆ ಬಹಳ ಬಹಳ ಬೇಕಾದವರೆಂದು ಪ್ರತೀತಿ. ಒಂದು ಒಂದೂವರೆ ವರ್ಷ ಹಿಂದಷ್ಟೇ ರಾಜ್ಯ ರಾಜಕಾರಣಕ್ಕೆ ಮರಳಿ ತಾವು ನೆಟ್ಟ ಸಚಿವ ಪಟ್ಟದ ಕನಸಿಗೆ ನೀರು ಗೊಬ್ಬರ ಹಾಕುತ್ತ ಬಂದವರು. ಬಿಜೆಪಿ ಆಡಳಿತ ಹೋಗುತ್ತದೆ; ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆಂಬ ಬಹುತೇಕರ ನಿರೀಕ್ಷೆ ಹರಿಪ್ರಸಾದ್ ಅವರದೂ ಆಗಿತ್ತು. ಮತ್ತು ಸಚಿವರಾಗುವ ಎಲ್ಲ ಅರ್ಹತೆಯೂ ಯೋಗ್ಯತೆಯೂ ಅವರಲ್ಲಿತ್ತು. ತಾನೊಂದು ಬಗೆದರೆ ವಿಧಿಯೊಂದು ಬಗೆಯಿತು ಎಂಬಂತೆ ಸಿದ್ದರಾಮಯ್ಯ ಅವರನ್ನು ಸಂಪುಟದಿಂದ ಹೊರಗಿಟ್ಟರಷ್ಟೇ ಅಲ್ಲ ದೂರವೂ ಇಟ್ಟರು. ಹರಿಪ್ರಸಾದ್ ಸಚಿವರಾಗುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಕಾಲತ್ತು ವಹಿಸಿದ್ದರು. ಸ್ವತಃ ಸೋನಿಯಾ ಗಾಂಧಿಯವರು ಕೂಡಾ ಸಚಿವ ಪಟ್ಟಕ್ಕೆ ಹರಿಪ್ರಸಾದ್‍ರ ಹೆಸರನ್ನು ಶಿಫಾರಸು ಮಾಡಿದ್ದರು ಎಂಬ ಸುದ್ದಿಯೂ ಇದೆ. ಆದರೆ ಸಿದ್ದರಾಮಯ್ಯ ಅದ್ಯಾವುದನ್ನೂ ಪರಿಗಣಿಸಲಿಲ್ಲ.

Madhu Bangarappa in Belagavi Winter Session

ಬೇಳೂರರದು ಇನ್ನೊಂದು ಬಗೆಯ ಕಥೆ. ಸಾಗರದಿಂದ ಮೂರು ಬಾರಿ ಶಾಸಕರಾದವರು ಅವರು. ಬಿಜೆಪಿ ಶಾಸಕರೂ ಆಗಿದ್ದರು. ಆ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ಮೇಲುಗೈ ಪಡೆದಿತ್ತು. ಅವರು ಮುಖ್ಯಮಂತ್ರಿಯಾದರು. ಅವರ ಸಂಪುಟದಲ್ಲಿ ಈಡಿಗ ಕೋಟಾದಲ್ಲಿ ತಾವು ಸಚಿವರಾಗುವ ಹಂಬಲ ಬೇಳೂರು ಅವರದಾಗಿತ್ತು. ಅಲ್ಲೂ ಕೂಡಾ ಅವರಿಗೆ ತಾನೊಂದು ಬಗೆದರೆ ವಿಧಿಯೊಂದು ಬಗೆಯಿತು ಎಂಬಂತಾಯಿತು. ಅದೇ ಚುನಾವಣೆಯಲ್ಲಿ ಹರತಾಳು ಹಾಲಪ್ಪ ಪಕ್ಕದ ಸೊರಬ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈಡಿಗ ಕೋಟಾದ ಲಾಭ ಅವರಿಗೆ ದಕ್ಕಿ ಸಚಿವರಾದರಷ್ಟೇ ಅಲ್ಲ ಜಿಲ್ಲಾ ಉಸ್ತುವರಿ ಸಚಿವರೂ ಆದರು. ಈಗ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸದೇ ಇರುವ ಬೇಳೂರರು ಆಗ ಬಿಜೆಪಿ ವಿರುದ್ಧವೂ ಬಂಡಾಯದ ಬಾವುಟ ಹಾರಿಸಲಿಲ್ಲ. ಆದರೆ ಹರತಾಳರ ನಿದ್ದೆಗೆಡಿಸಲು ಏನೆಲ್ಲ ಬೇಕೋ ಆ ಎಲ್ಲ ರಾಜಕೀಯವನ್ನು ಮಾಡಿದರು ಎನ್ನುವುದು ಹರತಾಳರ ಶಿಬಿರದಿಂದ ಕೇಳಿಬರುವ ಆರೋಪ. ಹಗರಣವೊಂದರಲ್ಲಿ ಸಿಕ್ಕು ಬಿದ್ದ ಹರತಾಳರು ಸಚಿವ ಸ್ಥಾನ ಕಳೆದುಕೊಂಡರು. ಅವರು ಕಳೆದುಕೊಂಡಿದ್ದು ತನಗೇ ಸಿಗುತ್ತದೆಂಬ ಬೇಳೂರರ ಆಸೆ ಹಳಿ ಹತ್ತಲಿಲ್ಲ.

ಯಡಿಯೂರಪ್ಪ ಅಥವಾ ನಂತರದ ಬಿಜೆಪಿ ಸರ್ಕಾರದಲ್ಲಿ ಬೇಳೂರರಿಗೆ ಸಚಿವ ಸ್ಥಾನದ ರಾಜ ಮರ್ಯಾದೆ ಸಿಗಲೇ ಇಲ್ಲ. ಮುನಿಸಿಕೊಂಡ ಅವರು ಶಾಸಕ ಸ್ಥಾನದ ಅವಧಿ ಮುಗಿದ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಾಳಯ ಸೇರಿದರು. ಸಾಗರ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪನವರದು ಬಹಳ ಆಳಕ್ಕೆ ಇಳಿದ ಕಾಡು ಮರದ ಬೇರಿನ ಬಗೆಯ ರಾಜಕೀಯ. ಚುನಾವಣಾ ಸೋಲು ಗೆಲುವು ಮೀರಿದ ರಾಜಕೀಯ ಶಕ್ತಿ ಅವರದು. ಅವರ ಹತ್ತಿರದ ಸೋದರ ಸಂಬಂಧಿ ಬೇಳೂರರು. ಕಾಗೋಡರಿಗೆ ವಯಸ್ಸು ಬಹಳ ಆಗಿರುವುದರಿಂದ ಬೇರೆ ಮುಖದ ಹುಡುಕಾಟ ಕಾಂಗ್ರೆಸ್‍ನಲ್ಲಿ ನಡೆದಿದೆ ಎಂಬ ವಾಸನೆ ಹಿಡಿದ ಬೇಳೂರರು ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರಷ್ಟೇ ಅಲ್ಲ 135 ಶಾಸಕರಲ್ಲಿ ಒಬ್ಬರಾಗಿ ಆಯ್ಕೆಯೂ ಆದರು. 1989ರಲ್ಲಿ ಕಾಂಗ್ರೆಸ್ ಪಕ್ಷ 178 ಶಾಸಕ ಬಲದೊಂದಿಗೆ ಅಧಿಕಾರಕ್ಕೆ ಬಂದಿತ್ತು. 1918ರಲ್ಲಿ 122 ಸದಸ್ಯ ಬಲದೊಂದಿಗೆ ಅಧಿಕಾರ ಹಿಡಿದಿತ್ತು. ಈಗ 2023ರಲ್ಲಿ ಪಕ್ಷ 135 ಶಾಸಕ ಬಲದಲ್ಲಿ ಅಧಿಕಾರ ಹಿಡಿಯಿತು. ಬೇಳೂರರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ಅವರು ಅಂದುಕೊಂಡತೆಯೇ ಎಲ್ಲವೂ ನಡೆದಿದ್ದರೆ ಅವರಿಟ್ಟ ಆಸೆ ಈಡೇರುತ್ತಿತ್ತೋ ಏನೋ, ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ನೇತೃತ್ವದ ಇಬ್ಬಣದಲ್ಲಿ ನಲುಗಿದ ಕಾಂಗ್ರೆಸ್ ಪಕ್ಷದ ಒಳಸುಳಿ ರಾಜಕೀಯ ಬೇಳೂರರ ಕನಸನ್ನು ಕಮರುವಂತೆ ಮಾಡಿತು.

Beluru Gopalakrishna

ಈಗ ಬೇಳೂರರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯನ್ನು ತಮಗೆ ಆಗಿರುವ ಅನ್ಯಾಯಕ್ಕೆ ಗುರಿ ಮಾಡಿಲ್ಲ. ಬದಲಿಗೆ ಅವರ ಆಕ್ರೋಶ ಪುಟಿಯುತ್ತಿರುವುದು ಸಚಿವ ಮಧು ಬಂಗಾರಪ್ಪ ವಿರುದ್ಧ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕರಾಗಿರುವ ಮಧು ಅವರನ್ನು ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ಮಾಡಿರುವ ರೀತಿಯ ಬಗ್ಗೆ. ಶಿವಮೊಗ್ಗ ಜಿಲ್ಲೆ ರಾಜಕೀಯದಲ್ಲಿ ಈಡಿಗರದು ಗಣನೀಯ ಪಾತ್ರ. ಈ ಸಮುದಾಯದಿಂದ ಬೆಳೆದು ರಾಜಕೀಯದಲ್ಲಿ ವರ್ಚಸ್ವೀ ನಾಯಕರಾಗಿ ಬೆಳೆದ ಸಾರೆಕೊಪ್ಪ ಬಂಗಾರಪ್ಪ ರಾಜಕೀಯಕ್ಕೆ ಕರೆತಂದು ಬೆಳೆಸಿದ ಕೆಲವರಲ್ಲಿ ಬೇಳೂರು, ಹರತಾಳು ಕೂಡಾ ಇದ್ದಾರೆ. ಹಿಂದುಳಿದ ವರ್ಗಗಳ ರಾಜ್ಯ ಮಟ್ಟದ ನಾಯಕರೆನಿಸಿದವರು ಬಂಗಾರಪ್ಪ. ಅವರ ಭೌತಿಕ ನಿರ್ಗಮನದ ಬಳಿಕ ಆ ಮಟ್ಟಕ್ಕೆ ಏರುವುದು ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಅವರಿಗೆ ಈವರೆಗೆ ಸಾಧ್ಯವಾಗಿಲ್ಲ. (ಮುಂದೆ ಅಂಥ ಅವಕಾಶ ಅವರಿಗೆ ಒಲಿದೀತೇ ಈಗಲೇ ಹೇಳಲಾಗದು) ಕಾಗೋಡು ತಿಮ್ಮಪ್ಪ ದಶಕಗಳ ಕಾಲ ರಾಜಕೀಯ ಮಾಡಿದರೂ ಸಿಎಂ ಹೊರತಾಗಿ ವಿವಿಧ ಹುದ್ದೆಗಳಲ್ಲಿ ವಿರಾಜಮಾನರಾದರೂ ಅವರು ಜಿಲ್ಲಾ ನಾಯಕ ಮಟ್ಟದಲ್ಲೇ ಉಳಿದರು, ರಾಜ್ಯದ ನಾಯಕ ಆಘುವ ಅವಕಾಶ ಅವರಿಗೆ ಒದಗಿ ಬರಲಿಲ್ಲ. ರಾಜ್ಯಮಟ್ಟದ ನಾಯಕರಾಗುವುದು ಅಷ್ಟೆಲ್ಲ ಸುಲಭದ ಮಾತಲ್ಲ ಎನ್ನುವುದು ಮಧು ಮತ್ತು ಬೇಳೂರರಿಬ್ಬರಿಗೂ ಗೊತ್ತಿದೆ. ಎಂದೇ ಜಿಲ್ಲೆಯ ನಾಯಕತ್ವ ಪಡೆಯುವುದಕ್ಕೆ ಪೈಪೋಟಿ ಸಾಗಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಲೋಕಸಭೆ ಚುನಾವಣೆಗೆ ತಯಾರಿ ಮತ್ತು ರಾಜ್ಯ ಬಿಜೆಪಿಯ ತಳಮಳ

ಮಧು ಅವರನ್ನು ಈಡಿಗ ಕೋಟಾದಲ್ಲಿ ಸಚಿವರನ್ನಾಗಿ ಮಾಡುವ ಮೂಲಕ ಸಿದ್ದರಾಮಯ್ಯ, ಹರಿಪ್ರಸಾದರನ್ನು ವ್ಯವಸ್ಥಿತವಾಗಿ ದೂರವಿಟ್ಟರು. ಅದೇ ಕಾಲಕ್ಕೆ ಶಿವಮೊಗ್ಗದಿಂದ ಇನ್ನೊಬ್ಬ ಈಡಿಗ ಮಂತ್ರಿ ಸ್ಥಾನಕ್ಕೆ ಏರದಂತೆ ತಡೆಯುವ ಯತ್ನವೂ ಯಶಸ್ವಿಯಾಯಿತು. ತನ್ನ ರಾಜಕೀಯ ಭವಿಷ್ಯಕ್ಕೆ ಮಧು ಬಂಗಾರಪ್ಪ ಕೊಡಲಿ ಕಾವಿನಂತಾಗಿದ್ದಾರೆಂಬ ಸೆಡವು ಸಿಟ್ಡು ಅಸಮಾಧಾನ ಆಕ್ರೋಶ ಬೇಳೂರರಲ್ಲಿ ಮಡುಗಟ್ಟಿದೆ. ಹೋದಲ್ಲಿ ಬಂದಲ್ಲಿ ಅವರು ಕುದಿ ಎಸರಿನಂತಾಗಿರುವ ಸಿಟ್ಟನ್ನು ಕಾರಿಕೊಳ್ಳುತ್ತಿದ್ದಾರೆ. ಮಧು ಬಂಗಾರಪ್ಪ ಈ ವಿಚಾರದಲ್ಲಿ ಮೌನ ವ್ರತಧಾರಿಯೇನೂ ಅಲ್ಲ. ಬೇಳೂರರಿಗೆ ಕಿರಿಕಿರಿ ಮಾಡುವ ತಂತ್ರ ಅವರಿಗೂ ಗೊತ್ತಿದೆ, ಮಾಡುತ್ತಿದ್ದಾರೆ ಕೂಡಾ. ಮಧು ತಾವು ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಅಧಿಕೃತ ಪ್ರವಾಸ ಮಾಡುವಾಗಲೆಲ್ಲ ಸ್ಥಳೀಯ ಶಾಸಕರಾದ ತಮ್ಮನ್ನು ಕಡೆಗಣಿಸುತ್ತಿದ್ದಾರೆಂಬ ಆರೋಪ ಬೇಳೂರರದು. ತಮ್ಮ ಕ್ಷೇತ್ರದಲ್ಲಿ ಅಧಿಕೃತ ಪ್ರವಾಸ ಮಾಡುವಾಗ ಶಿರಸಿ-ಸಿದ್ದಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೀಮಣ್ಣ ನಾಯ್ಕರನ್ನು ಜೊತೆಗಿಟ್ಟುಕೊಂಡು ಓಡಾಡುತ್ತಾರೆಂಬ ಮಾತನ್ನೂ ಬೇಳೂರರು ಆಡಿದ್ದು ವರದಿಯಾಗಿದೆ; ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅವರು ಸುಮ್ಮನೆ ಹೇಳಿರಲಿಕ್ಕಿಲ್ಲ ಎನ್ನಲು ಸಾಕಷ್ಟು ಪೂರಕ ಪುರಾವೆ ಅವರಲ್ಲಿರಲೇಬೇಕು. ಭೀಮಣ್ಣ ನಾಯ್ಕರು, ಮಧು ಬಂಗಾರಪ್ಪನವರ ಸೋದರ ಮಾವ. ತಾಯಿಯ ತಮ್ಮ. ಇವರಿಬ್ಬರದು ರಕ್ತ ಸಂಬಂಧ ಒಂದೆಡೆಯಾದರೆ ಮಿತ್ರತ್ವ ಇನ್ನೊಂದೆಡೆ. ಮಧು ಅವರಿಗೆ ರಾಜಕೀಯವಾಗಿ ಅನುಕೂಲ ಆಗುತ್ತದೆ ಎಂದಾದರೆ ಪಕ್ಷ ರಾಜಕಾರಣವನ್ನು ಬದಿಗೆ ತಳ್ಳುವ ಸ್ವಭಾವ ಭೀಮಣ್ಣ ನಾಯ್ಕರದು.

Karnataka Election 2023 The Congress top leadership divided on the CM issue

ಇವರಿಬ್ಬರನ್ನೂ ಕರೆದು ಚರ್ಚೆ ನಡೆಸಿ ಹೊಂದಿಕೊಂಡು ಹೋಗಿ ಎನ್ನುವ ಅಧಿಕಾರ ಅರ್ಹತೆ ಇರುವ ಕಗೋಡು ತಿಮ್ಮಪ್ಪನವರು ಮೌನ ತಾಳಿದ್ದಾರೆ. ಪಕ್ಷದೊಳಗೆ ನಡೆಯುತ್ತಿರುವ ನಿತ್ಯ ಜಗಳಕ್ಕೆ ಒಂದು ತೆರೆ ಎಳೆಯುವ ಕೆಲಸಕ್ಕೆ ಅವರು ಮುಂದಾಗದೇ ಇರುವುದಕ್ಕೆ ಅವರದೇ ಆದ ರಾಜಕಾರಣದ ಕಾರಣವಿರಬಹುದು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ತಮಗೆ ಟಿಕೆಟ್ ನಿರಾಕರಿಸಿದ್ದರ ಬಗ್ಗೆ ಅವರಲ್ಲಿ ಅಸಮಾಧಾನವಿದೆ; ತಮಗೆ ಕೊಡದಿದ್ದರೆ ಮಗಳು ರಾಜನಂದಿನಿಗಾದರೂ ಕೊಡಿ ಎಂಬ ಅವರ ಅವಹಾಲು ಕೆಲಸ ಮಾಡಲಿಲ್ಲ. ಜೀವನದ ಉದ್ದಕ್ಕೂ ಸಮಾಜವಾದಿ ಸಿದ್ಧಾಂತದ ಬಗ್ಗೆ ಹೇಳುತ್ತ ಬಂದಿರುವ ಕಾಗೋಡರ ಮಗಳು ಇದೀಗ ಬಿಜೆಪಿ ಪಾಳಯದಲ್ಲಿದ್ದಾರೆ. ಇದೆಲ್ಲ ಅವರನ್ನು ರಾಜಕೀಯದಿಂದ ಒಂದಿಷ್ಟು ದೂರ ಇರುವಂತೆ ಮಾಡಿರಬಹುದು. ಇನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸ್ಥಿತಿ. ಒಳಜಗಳದಲ್ಲಿ ಪಕ್ಷದ ಮಾನವನ್ನು ಹಾದಿಬೀದಿ ರಂಪಕ್ಕೆ ಬಳಸಿಕೊಳ್ಳುತ್ತಿರುವ ಇಬ್ಬರು ಶಾಸಕರ ವಿರುದ್ಧ ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಜಿಲ್ಲಾ ಕಾಂಗ್ರೆಸ್ ವರಿಷ್ಟರು ಕೈಚೆಲ್ಲಿರುವುದು ಸದ್ಯದ ನೋಟ. ಹಾಗಂತ ಕೆಪಿಸಿಸಿಗೆ ಇದು ಗೊತ್ತಿಲ್ಲವೆಂದೇನೂ ಅಲ್ಲ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಸಿದ್ದರಾಮಯ್ಯ ವಿರುದ್ಧ ಶೀತಲ ಸಮರ ಸಾರಿರುವಾಗ, ನೀವು ಕಚ್ಚಾಡಬಾರದು ಎಂದು ಅವರು ಯಾವ ಬಾಯಲ್ಲಿ ಹೇಳಿಯಾರು. ಮಧು ಮತ್ತು ಬೇಳೂರರ ನಡುವಣ ನಿತ್ಯ ಪ್ರಹಸನ ವರ್ತಮಾನ ಕರ್”ನಾಟಕ”ದ ಮುಂದುವರಿದ ಅಂಕವಾಗಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂತರಾಜು ವರದಿ ಹೆಸರಿನಲ್ಲಿ ಜನತೆಯ ಕಣ್ಣಿಗೆ ಮಣ್ಣು

Continue Reading

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ದ್ವಾದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಭಾನುವಾರದವರೆಗೂ ವೃಶ್ಚಿಕ ರಾಶಿಯಲ್ಲೇ ನೆಲಸಲ್ಲಿದ್ದಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯ ವಿವಾಹ ಅಪೇಕ್ಷಿತರಿಗೆ ಅನುಕೂಲಕರ ವಾತಾವರಣವಿದು, ಶುಭ ಸುದ್ದಿ ಸಿಗಲಿದೆ. ಆರ್ಥಿಕವಾಗಿ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಶುಭ. ಕನ್ಯಾ ರಾಶಿಯವರು ಶುಭ ಕಾರ್ಯಗಳಿಗಾಗಿ ಹೆಚ್ಚು ಖರ್ಚು ಮಾಡುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕಾರಣಾಂತರಗಳಿಂದ ಒತ್ತಡ ಹೆಚ್ಚಾಗುವುದರ ಜತಗೆ ಜವಾಬ್ದಾರಿಗಳು ಹೆಚ್ಚಾಗಲಿದೆ. ಕೋಪದಿಂದ ವರ್ತಿಸುವ ಸಾಧ್ಯತೆ ಇದೆ. ಆತುರದಲ್ಲಿ ಮಾತುಗಳು ಒಳ್ಳೆಯದಲ್ಲ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (10-12-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ.
ತಿಥಿ: ದ್ವಾದಶಿ 07:12 ವಾರ: ಭಾನುವಾರ
ನಕ್ಷತ್ರ: ಸ್ವಾತಿ 11:49 ಯೋಗ: ಅತಿಗಂಡ 11:49
ಕರಣ: ತೈತುಲ 07:12 ಅಮೃತಕಾಲ: ಬೆಳಗ್ಗೆ 3:17 ರಿಂದ 04:54ರವರೆಗೆ
ದಿನದ ವಿಶೇಷ: ಶೃಂಗೇರಿ ಮಹಾಪ್ರದೋಷ, ಮಾನವ ಹಕ್ಕುಗಳ ದಿನ

ಸೂರ್ಯೋದಯ : 06:31  ಸೂರ್ಯಾಸ್ತ : 05:54

ರಾಹುಕಾಲ : ಸಂಜೆ 4:28ರಿಂದ 5:54
ಗುಳಿಕಕಾಲ: ಮಧ್ಯಾಹ್ನ 3:03 ರಿಂದ 4:28
ಯಮಗಂಡಕಾಲ: ಮಧ್ಯಾಹ್ನ 12:12 ರಿಂದ 1:38

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಹೂಡಿಕೆ ವ್ಯವಹಾರಗಳಲ್ಲಿ ಅಧಿಕ ಲಾಭ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಅನುಕೂಲಕರ ವಾತಾವರಣವಿದು, ಶುಭ ಸುದ್ದಿ ಸಿಗಲಿದೆ. ಆರ್ಥಿಕವಾಗಿ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಶುಭ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:6

Horoscope Today

ವೃಷಭ: ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕವಾಗಿ ಸದೃಢವಾಗಿರಲಿದೆ. ಅತಿರೇಕದ ಮಾತುಗಳಿಂದ ಅಪಾಯ ತಂದುಕೊಳ್ಳುವುದು ಬೇಡ. ಆರೋಗ್ಯವು ದಿನದ ಕೊನೆಯಲ್ಲಿ ಹದಗೆಡುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ. ಉದ್ಯೋಗಿಗಳಿಗೆ ಶುಭ ಫಲ ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ:5

Horoscope Today

ಮಿಥುನ: ಕೆಲಸ ಕಾರ್ಯಗಳಲ್ಲಿ ನಿಧಾನಗತಿ. ಆರೋಗ್ಯ ಮಧ್ಯಮವಾಗಿರಲಿದೆ. ಅನೇಕ ವಿಚಾರಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಸಾಧ್ಯತೆ ಇದೆ. ಆರ್ಥಿಕ ಲಾಭ ಸಾಧಾರಣವಾಗಿರಲಿದೆ. ವ್ಯಾಪಾರ-ವ್ಯವಹಾರದಲ್ಲಿ ಮಿಶ್ರಫಲ ಇರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3

Horoscope Today

ಕಟಕ: ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಸಿಗಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಹಳೆಯ ಸ್ನೇಹಿತರು, ಕುಟುಂಬದ ಆಪ್ತರೊಂದಿಗೆ ಸಮಯ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಸಿಂಹ: ಆರೋಗ್ಯದ ಕುರಿತು ಕಾಳಜಿ ಇರಲಿ. ಒತ್ತಡದಿಂದ ಹೊರಬರಲು ವ್ಯಸನಗಳಿಗೆ ಬಲಿಯಾಗುವುದು ಬೇಡ. ಆರ್ಥಿಕವಾಗಿ ಕೊಂಚ ಲಾಭ ಇರಲಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಹೊಸ ಭರವಸೆ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ: ಶುಭ ಕಾರ್ಯಗಳಿಗಾಗಿ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕಾರಣಾಂತರಗಳಿಂದ ಒತ್ತಡ ಹೆಚ್ಚಾಗುವುದರ ಜತಗೆ ಜವಾಬ್ದಾರಿಗಳು ಹೆಚ್ಚಾಗಲಿದೆ. ಕೋಪದಿಂದ ವರ್ತಿಸುವ ಸಾಧ್ಯತೆ ಇದೆ. ಆತುರದಲ್ಲಿ ಮಾತುಗಳು ಒಳ್ಳೆಯದಲ್ಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಹಿರಿಯರಿಂದ ಒತ್ತಡ ಇರಲಿದೆ. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ಹಿಂದೆ ನೀಡಿದ ಸಾಲ ಮರಳುವ ಸಾಧ್ಯತೆ ಇದೆ. ಆಪ್ತರಿಂದ ಸಲಹೆ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 6

Horoscope Today

ವೃಶ್ಚಿಕ: ಸಂಗಾತಿಯ ಆರೋಗ್ಯದ ಸಲವಾಗಿ ಖರ್ಚು ಹೆಚ್ಚಾಗಲಿದೆ. ಕಾಲಹರಣ ಮಾಡುವ ಆಲೋಚನೆಗಳಿಂದ ದೂರವಿರಿ. ಸಹದ್ಯೋಗಿಗಳಿಂದ ಕಿರಿಕಿರಿ ಸಾಧ್ಯತೆ. ವ್ಯಾಪಾರ ವ್ಯವಹಾರ ಸಾಧಾರಣವಾಗಿರಲಿದೆ. ಹೂಡಿಕೆಯ ವ್ಯವಹಾರಗಳಲ್ಲಿ ಪ್ರಗತಿ. ಕೌಟುಂಬಿಕವಾಗಿ ಮಿಶ್ರಫಲ .
ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ಆಪ್ತರಿಂದ ಬೆಂಬಲ ಸಿಗಲಿದೆ. ಕೆಲಸಕಾರ್ಯಗಳಲ್ಲಿ ಪ್ರಗತಿ ಇರಲಿದೆ. ಆಪ್ತರಿಂದ ಹಣದ ಸಹಾಯದ ಕೋರಿಕೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಕರ: ಉತ್ಸಾಹಭರಿತ ಜೀವನ ಇರಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ಹೂಡಿಕೆ ವ್ಯವಹಾರಗಳಲ್ಲಿ ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ. ಯಾವುದಾದರೂ ಸಭೆ-ಸಮಾರಂಭಗಳಿಗೆ ಭಾಗವಹಿಸುವಿರಿ. ನಿರೀಕ್ಷೆಯ ಹೊಸ ಭರವಸೆಗಳು ಮೂಡಲಿವೆ. ಆಪ್ತರೊಂದಿಗೆ ಮಾತುಕತೆ. ಕುಟುಂಬದ ಸದಸ್ಯರಿಗೆ ಸಲಹೆ ಸಹಕಾರ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ಇತರರನ್ನು ಟೀಕಿಸುತ್ತ ಸಮಯ ವ್ಯರ್ಥ ಮಾಡುವುದು ಬೇಡ. ಭೂಮಿಗೆ ಸಂಬಂಧಿಸಿದಂತೆ ವ್ಯಾಪಾರ ವ್ಯವಹಾರದಲ್ಲಿ ಲಾಭ. ಪ್ರಯಾಣ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮೀನ: ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಖರ್ಚು ಹೆಚ್ಚಾಗಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ನಿಮ್ಮ ನಿರೀಕ್ಷೆಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರಿಂದ ಒತ್ತಡ ಹೆಚ್ಚಾಗಲಿದೆ. ಸಂಗಾತಿಯ ವರ್ತನೆ ನಿಮ್ಮ ಖ್ಯಾತಿಯ ಮೇಲೆ ಪರಿಣಾಮ ಬೀರಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ದಿಢೀರ್ ಧನಲಾಭ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

Continue Reading

ಕರ್ನಾಟಕ

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Car Accident: ಚಿಕ್ಕಬಳ್ಳಾಪುರ ಬಳಿಯ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ವೇಗವಾಗಿ ಬಂದಾಗ ಕಾರು ಅಪಘಾತ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ.

VISTARANEWS.COM


on

Car accident
Koo

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದು ನಾಲ್ವರು ದುರ್ಮರಣ ಹೊಂದಿದ ಘಟನೆ (Car Accident) ನಗರದ ಬೈಪಾಸ್ ಬಳಿಯ ಅಂಜನೇಯ ಸ್ವಾಮಿ ದೇವಾಲಯದ ಬಳಿ ನಡೆದಿದೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ವೇಗವಾಗಿ ಬಂದು ಗುಂಡಿಯೊಳಗೆ ಬಿದ್ದಿದ್ದರಿಂದ ಕಾರಿನೊಳಗಿದ್ದ ನಾಲ್ವರು ಜಲಸಮಾಧಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಕಾರನ್ನು ಗುಂಡಿಯಿಂದ ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಮೃತರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಾರು ಹರಿದು ಅಯ್ಯಪ್ಪ ಮಾಲಾಧಾರಿ ಸಾವು, ಇಬ್ಬರಿಗೆ ಗಂಭೀರ ಗಾಯ

ಚಿಕ್ಕಬಳಾಪುರ: ಕಾರು ಹರಿದ ಪರಿಣಾಮ ಅಯ್ಯಪ್ಪಸ್ವಾಮಿ ಮಾಲಾಧಾರಿಯೊಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಬಳಿ ನಡೆದಿದೆ.

ಹಿಂದೂಪುರ ಮೂಲದ ಪ್ರಹ್ಲಾದ (36) ಮೃತರು. ಗಾಯಗೊಂಡ ಮಣಿಕಂಠ ಹಾಗು ವೆಂಕಟೇಶ್ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಹಿಂದೂಪುರದಿಂದ ಶಬರಿಮಲೆಗೆ ಪಾದಯಾತ್ರೆ ಮಾಡುತಿದ್ದ ವೇಳೆ ಕಾರು ಹರಿದಿದ್ದರಿಂದ ದುರಂತ ಸಂಭವಿಸಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bus Accident: ಬಸ್‌ ಪಲ್ಟಿಯಾಗಿ ನಾಲ್ವರ ಸಾವು; ಮದುವೆಗೆ ಹೊರಟಿದ್ದವರು ಮಸಣ ಸೇರಿದರು

ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರ ಸವಾರರ ಸಾವು

Bike accident

ಆನೇಕಲ್: ಬೈಕ್‌ನಿಂದ ಬಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಜಿಗಣಿ ಸಮೀಪದ ಮಾದ ಪಟ್ಟಣದ ಬಳಿ ಶನಿವಾರ ನಡೆದಿದೆ. ರಸ್ತೆ ಹಂಪ್ ಗೊತ್ತಾಗದೇ ಸಾಗಿದ್ದರಿಂದ ಬೈಕ್ ಸ್ಕಿಡ್ ಆಗಿ ಅಪಘಾತ (Bike Accident) ಸಂಭವಿಸಿದೆ.

ಒಡಿಶಾ ಮೂಲದ ಕಾರ್ಮಿಕರಾದ ಫೋಕೀರ್ ಚರಣ್ ಪ್ರಧಾನ್ (29), ಬೀರ್ ಸಿಂಗ್ ನಾಯಕ್(24) ಮೃತರು. ಕೆಲಸ ಮುಗಿಸಿಕೊಂಡು ಜಿಗಣಿಯಿಂದ ಇಂಡ್ಲವಾಡಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾದಪಟ್ಟಣ ಬಳಿ ರಸ್ತೆ ಹಂಪ್ ಗೊತ್ತಾಗದೆ ಸವಾರ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಮುಂಭಾಗದಲ್ಲಿ ನಿಂತಿದ್ದ ಬಸ್‌ಗೆ ಬೈಕ್‌ ಡಿಕ್ಕಿಯಾಗಿದೆ. ಇದರಿಂದ ಸವಾರರು ಹಾರಿ ಬಿದ್ದಾಗ ಬಸ್‌ಗೆ ತಲೆ ತಗುಲಿ ಗಂಭೀರ ಗಾಯಗೊಂಡಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Someshwara Beach: ದ್ವಿತೀಯ ಪಿಯುಸಿ ಇಬ್ಬರು ವಿದ್ಯಾರ್ಥಿಗಳು ಸೋಮೇಶ್ವರದಲ್ಲಿ ಸಮುದ್ರಪಾಲು

L&t ಕಂಪನಿಯಲ್ಲಿ ಹೆಲ್ಪರ್‌ ಆಗಿ ಫೋಕೀರ್ ಚರಣ್ ಪ್ರಧಾನ್, ಶಕ್ತಿ ಪ್ರೊಸೆಸಿಂಗ್ ಕಂಪನಿಯಲ್ಲಿ ಸಹಾಯಕನಾಗಿ ಬೀರ್ ಸಿಂಗ್ ನಾಯಕ್ ಕೆಲಸಮಾಡುತ್ತಿದ್ದ. ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
kaivara tatayya
ಅಂಕಣ20 mins ago

ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

Madhu Bangarappa Beluru Gopalakrishna
ಅಂಕಣ35 mins ago

ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

Rain News
ಉಡುಪಿ35 mins ago

Karnataka Weather : ಮೈಸೂರು ಸೇರಿ 11 ಜಿಲ್ಲೆಗಳಿಗೆ ಮಳೆ ಅಲರ್ಟ್‌!

Vistara Editorial, Let the strengthening government schools
ಕರ್ನಾಟಕ50 mins ago

ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

HD Kumaraswamy
ಕರ್ನಾಟಕ7 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ8 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ8 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ8 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ3 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ಟ್ರೆಂಡಿಂಗ್‌