ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳ ದರ ಹೀಗಿದೆ - Vistara News

ವಾಣಿಜ್ಯ

ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳ ದರ ಹೀಗಿದೆ

ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ಕೆಲವು ಪದಾರ್ಥಗಳ ದರ ಇಳಿದಿದೆ, ಕೆಲವು ಪದಾರ್ಥಗಳ ದರ ಹೆಚ್ಚಳವಾಗಿದೆ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

ದಿನಸಿ ಪೇಟೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

20/07/2022

ಸರಕು ದರ (ರೂಪಾಯಿ)
ಸಕ್ಕರೆ (50 ಕೆ.ಜಿ.)
1. ಉತ್ತಮ ದಪ್ಪ
2. ಮಧ್ಯಮ ಸಣ್ಣ

1860-1870
1810-1815
ಬೆಲ್ಲ
1. ಸಣ್ಣ ಅಚ್ಚು
2. ದಪ್ಪ ಅಚ್ಚು
3. ಉಂಡೆ [ಸೇಲಂ]
4. ಕೊಲ್ಲಾಪುರ

4400- 4450
4200- 4300
4000- 4200
4300- 5200
ತೊಗರಿಬೇಳೆ ಹೊಸದು 50 ಕೆ.ಜಿ.
1. ದೇಶಿ ಶಿವಲಿಂಗ (ಜಿಎಸ್ಟಿ)
2. ವಿದೇಶಿ ಶಿವಲಿಂಗ
5. ವಿದೇಶಿ ಮಧ್ಯಮ
3. ಗುಲ್ಬರ್ಗ ಪಟ್ಕ ಸಾರ್ಟೆಕ್ಸ್
4. ರೆಗ್ಯುಲರ್

5400- 5420
4490- 4500
4400- 4500
4600- 4650
4450- 4550
ಕಡ್ಲೆ ಬೇಳೆ 50 ಕೆ.ಜಿ.
1. ಲಕನ್
2. ತ್ರಿಶುಲ್
3. ಮಹಾರಾಜಾ
4. ಅಕೋಲ

3350-3400
3300-3350
3200-3250
3050-3100
ಹುರಿಕಡ್ಲೆ 30 ಕೆ.ಜಿ.
1. ಫೈನ್
2. ಮೀಡಿಯಂ

2300 – 2500
2100 – 2150
ಉದ್ದಿನ ಬೇಳೆ 50 ಕೆ.ಜಿ.
1. ಡಬಲ್ ಹಾರ್ಸ್
2. ಹನುಮಾನ್
3. ವೈಟ್ ಗೋಲ್ಡ್
4. ಮಧ್ಯಮ ದರ್ಜೆ
5. ಗೋಲಾ

6700-6750
5450-54500
5290-5300
4600-4700
4700-5400
ಹೆಸರು ಬೇಳೆ 50 ಕೆ.ಜಿ.
1. ಸೋಂ ಪರಿ
2. ಮಧ್ಯಮ

4800-4850
4700-4750
ಹೆಸರು ಕಾಳು
1. ಉತ್ತಮ
2. ಮಧ್ಯಮ

4600-4700
3900-4200
ಅಲಸಂದೆ
1. ಉತ್ತಮ
2. ಮಧ್ಯಮ

3450-3550
3350-3400
ಅವರೆ ಕಾಳು
1. ಉತ್ತಮ
2. ಮಧ್ಯಮ
ಅವರೆ ಬೇಳೆ
1. ಉತ್ತಮ
2. ಮಧ್ಯಮ

ಹುರುಳಿ ಕಾಳು
1. ಉತ್ತಮ
2. ಮಧ್ಯಮ

4450- 4500
4300- 4350

5000-5250
4900- 4950
2900-3000

3000-3100
2900-2950
ರಾಗಿ 100 ಕೆ.ಜಿ.
1. ಕ್ಲೀನ್ಡ್‌ ಉತ್ತಮ
2. ಮಧ್ಯಮ

3400-3450
2900-3000
ಅಕ್ಕಿ ಸೋನಾ ಮಸೂರಿ (100 ಕೆ. ಜಿ.)
1. ರಾ ರೈಸ್ ನುಚ್ಚು 2 ವರ್ಷ ಹಳೇದು
2. 1 ವರ್ಷ ಹಳೇದು
3. ಸ್ಟೀಮ್ 2 ವರ್ಷ ಹಳೇದು
4. ಸ್ಟೀಮ್ 1 ವರ್ಷ ಹಳೇದು
4. ಆರ್ ಎನ್ ಆರ್ ಸ್ಟೀಮ್
4. ಕಾವೇರಿ 1 ವರ್ಷ ಹಳೇದು
5. ಐ ಆರ್8 (100 ಕೆ.ಜಿ)
6. ಇಡ್ಲಿಕಾರ್ (100 ಕೆ.ಜಿ)

5000- 5200
4400- 4500
4000- 4100
3600- 3800
3900-4000
3600-3700
3000-3200
3200-3300
ಬೆಳ್ಳುಳ್ಳಿ ಎಂಪಿ 100 ಕೆ.ಜಿ.
1. ಎಂಪಿ ಲಡ್ಡು
2. ಎಂಪಿ ಗೋಲಾ
3. ಮಧ್ಯಮ
4. 30 ಕೆ.ಜಿ. ಬಾಕ್ಸ್

4,000-4,500
3,000-3,500
2,000-2,200
1850-1900
ಈರುಳ್ಳಿ
1. ಮಹಾರಾಷ್ಟ್ರ ದಪ್ಪ
2. ಮಧ್ಯಮ
3. ಕರ್ನಾಟಕ ದಪ್ಪ
4. ಮಧ್ಯಮ

800-900
600-650
700-750
500-600
ಆಲೂಗಡ್ಡೆ (50 ಕೆ.ಜಿ.)
1. ಲಾಕರ್ ದಪ್ಪ
2. ಲಾಕರ್ ಮಧ್ಯಮ
3. ಆಗ್ರಾ ದಪ್ಪ
4. ಆಗ್ರಾ ಮಧ್ಯಮ

1350-1400
1150-1200
950-1200
900- 1000
ಹಸಿ ಶುಂಠಿ (60 ಕೆ.ಜಿ.)
1. ಹೈಟೆಕ್
2. ಮಧ್ಯಮ

2400-2600
1500-1800
ಅಡುಗೆ ಎಣ್ಣೆ
ಸೂರ್ಯಕಾಂತಿ ಎಣ್ಣೆ
1. ಸನ್‌ಪ್ಯೂರ್ 10 ಲೀ.
2. ಸನ್‌ಪ್ಯೂರ್ 15 ಕೆ.ಜಿ
3. ಗೋಲ್ಡ್‌ವಿನ್ನರ್ 10 ಲೀ.
4. ಗೋಲ್ಡ್‌ವಿನ್ನರ್ 15 ಕೆ.ಜಿ
4. ಫಾರ್ಚುನ್ 10 ಲೀ.
5. ಫಾರ್ಚುನ್ 15 ಕೆ.ಜಿ
6. ಜೆಮಿನಿ 10 ಲೀ.
7. ಜೆಮಿನಿ 15 ಕೆ.ಜಿ


1710
2820
1750
2850
1750
2850
1820
3070
ಚೆಕ್ಕಿ ಅಟ್ಟ (50 ಕೆ.ಜಿ.)
1. ಐಸ್
2. ಆರೇಂಜ್
3. ಕೇಸರಿ

1500- 1510
1550- 1560
1400- 1410
ತಂದೂರಿ ಅಟ್ಟ ( 50 ಕೆ. ಜಿ.)
1. ಕೇಸರಿ ಪಿಚ್
2. ರಾಕ್ಷಿ
3. ಲಕ್ಶ್ಮಿ
4. ಮೋಹಿನಿ
5. ಕೃಷ್ಣ ತಂದೂರಿ ಅಟ್ಟ
6. ಕೃಷ್ಣ ಚಕ್ಕೆ ಅಟ್ಟ

1460- 1470
1480- 1490
1300- 1310
1380- 1390
1510- 1520
1510- 1520
ಸಾದಾ ಸೂಜಿ (50 ಕೆ.ಜಿ.)
1. ಆರೆಂಜ್
2. ವೇಣುಗೋಪಾಲ್
3. ರಾಕ್ಷಿ
4. ಹೀರೊ
5. ಮೋಹಿನಿ
6. ಕೃಷ್ಣ ಸೂಪರ್ ವ್ಯಾಲ್ಯೂ
7. ಕೃಷ್ಣ ಪ್ರೀಮಿಯಂ

1730- 1740
1740
1710- 1720
1520- 1530
1530- 1540
1570- 1580
1720- 1730
ಚಿರೋಟಿ ಸೂಜಿ (50 ಕೆ.ಜಿ.)
1. ವೇಣುಗೋಪಾಲ್
2. ಕೀಸರಿ ಪಿಚ್
3. ಹೀರೊ
4. ಕೃಷ್ಣ ಪ್ರೀಮಿಯಂ

1740
1450-1460
1450-1460
1600-1610
ಮೈದಾ (50 ಕೆ.ಜಿ.)
1. ಡೂಮ್ ಲೈಟ್
2. ಸುನಿಲ್
3. ಗ್ರೇಟ್ ಇಂಡಿಯಾ
4. ಹೀರೊ
5. ಕೃಷ್ಣ ಬ್ಲೂ ಮೈದಾ
6. ಕೃಷ್ಣ ವ್ಯಾಲ್ಯೂ ಮೈದಾ

1710
1600- 1610
1410
1440- 1450
1540- 1550
1480- 1490
ಕಡ್ಲೆ ಹಿಟ್ಟು
1. ಶಂಕರ್ 30 ಕೆ.ಜಿ
2. ಶಂಕರ್ 10 ಕೆ.ಜಿ
3. ಶಂಕರ್ 21 ಕೆಜಿ ಪ್ಯಾಕೆಟ್

2120
745
1610
ಬೆಳೆ ಕಾಳು
1. ದೇಸಿ ಶಿವಲಿಂಗ
2. ಪಟ್ಕ ಸಾರ್ಟೆಕ್ಸ್
3. ರೆಗ್ಯುಲರ್
4. ವಿದೇಶಿ ಶಿವಲಿಂಗ
5. ವಿದೇಶಿ ಮಧ್ಯಮ

5480-5500
4900-5000
4700-4750
4600-4650
4500-4550
ಕಡ್ಲೆಕಾಳು (50 ಕೆಜಿ)
1. ಕ್ಲಿನ್ ಬೋಲ್ಡ್
2. ಮಧ್ಯಮ

3100-3150
2900-3000

ಇದನ್ನೂ ಓದಿ| ಆದಾಯಕ್ಕಾಗಿ ಷೇರು ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು 3,000 ಕೋಟಿ ರೂ. ಹೂಡಿಕೆಗೆ EPFO ಚಿಂತನೆ

ಮೀಡಿಯಂ ಕುಕಿಂಗ್ ಆಯಿಲ್ ೧ ಲೀಟರ್‌ನ ೧೦ ಪ್ಯಾಕೆಟ್

1. ಸನ್ ಪ್ರಿಯಾ
2. ಸನ್ ಪಾರ್ಕ್
3. ಸನ್ ಪವರ್
4. ಸೂರ್ಯ ಪವರ್
1360
1370
1350
1340
ದೀಪದೆಣ್ಣೆ 1 ಲೀ.ನ 10 ಪ್ಯಾಕೆಟ್
1. ಆನಂದಂ
2. ಅಂದo
3. ಅಕ್ಷಯ
4. ನಂದಿನಿ

1380
1370
1360
1370
ಕಡ್ಲೆಕಾಯಿ ಎಣ್ಣೆ
1. ಪ್ಯೂರ್ ನಟ್ 10 ಲೀ.
2. ಕೆ ಎನ್ ಜೆ 10 ಲೀ.
3. ನಟ್ ಗೋಲ್ಡ್ 10 ಲೀ.

1725
1690
1690
ಪಾಮ್ ಆಯಿಲ್ 1 ಲೀ.ನ 10 ಪ್ಯಾಕೆಟ್
1. ರುಚಿಗೋಲ್ಡ್ 10 ಲೀ.
2. ಲೀಡರ್ ಗೋಲ್ಡ್ 10 ಲೀ.
3. ರುಚಿಗೋಲ್ಡ್ 15 ಕೆ.ಜಿ

1260
1240
2230
ರಗ್ಯುಲರ್ ವನಸ್ಪತಿ
1. ರುಚಿ No1, 10 ಕೆ.ಜಿ
2. ರುಚಿ No1, 15 ಕೆ.ಜಿ
3. ಎಟೂಝೆಡ್ 15 ಕೆ.ಜಿ

1350
2300
2400
ಬೇಕರಿ ಸ್ಪೆಷಲ್ ವನಸ್ಪತಿ 15 ಕೆ.ಜಿ ಬಾಕ್ಸ್
1. ಗ್ರೀನ್ ಗೋಲ್ಡ್
2. ಗ್ರೇಟ್ ಚೆಫ್
3. ಬೆಸ್ ಪಫ್
4. ಬೆಸ್ ಕ್ರೀಮ್
5. ಬೆಸ್ ಬಿಸ್ಕೆಟ್
6. ಬೇಕರ್ ಕಿಂಗ್

2630
2650
2500
2450
2450
2500
ಮೆಣಸಿನಕಾಯಿ 100 ಕೆ.ಜಿ.: ಪಿ.ಸಿ.ಎನ್. ಟ್ರೇಡರ್ಸ್ [ಎಪಿಎಮ್‌ಸಿ]
1. ಬ್ಯಾಡಗಿ ಸ್ಟೆಮ್‌
2. ಬ್ಯಾಡಗಿ ಸ್ಟೆಮ್‌ ಲೆಸ್
3. ಗುಂಟೂರು ಸ್ಟೆಮ್‌
4. ಗುಂಟೂರು ಸ್ಟೆಮ್‌ಲೆಸ್
4. ಮಣ್‌ಕಟ್

34,000-50,000
20,000-40,000
15,000-25,000
30,000-32,000
20,000-23,000
ಹುಣಸೆ ಹುಳಿ (100 ಕೆ.ಜಿ.)
1. ರೌಂಡ್
2. ಪ್ಲವರ್
3. ಕರ್ಪುಳಿ

6,000-12,000
4,000-11,000
10,000-16,000
ದನಿಯಾ (40 ಕೆ.ಜಿ.)
1. ಉತ್ತಮ ಹಸಿರು
2. ಮಧ್ಯಮ ಹಸಿರು
3. ಮಧ್ಯಮ
4. ಬ್ರೋಕನ್

6,800-8,500
5,800-6500
5,000-5,500
5,000-5,500
ಮಸಾಲ ದರ (1 ಕೆ.ಜಿ.)ಕನಿಷ್ಠಗರಿಷ್ಠ
ಅರಿಶಿಣ ಕೊಂಬು
1. ದಪ್ಪ
2. ಮಧ್ಯಮ
3. ಜೀರಿಗೆ ಉತ್ತಮ
4. ಜೀರಿಗೆ ಮಧ್ಯಮ

120
90
260
240

125
100
265
245
ಗಸಗಸೆ
1. ಫೈನ್
2. ಮೀಡಿಯಂ

1200
1350

1250
1400
ಮೆಂತ್ಯೆ8290
ಸಾಸುವೆ
1. ಸಾಸುವೆ ಸಣ್ಣ
2. ಸಾಸುವೆ ದಪ್ಪ

82
78

83
80
ಏಲಕ್ಕಿ
1. 8 ಎಂ.ಎಂ.
2. 7.5 ಎಂ.ಎಂ.
3. 7. ಎಂ.ಎಂ.
4. ಪಾನ್ ಬಹಾರ್‌

1450
1350
1250
1000

1500
1400
1300
1050
ಲವಂಗ
1. ಮಡಗಸ್ಕರ್
2. ಲಾಲ್ ಪರಿ
3. ಚಕ್ಕೆ
4. ಮರಾಠಿ ಮೊಗ್ಗು ಒರಿಜಿನಲ್
5. ಅನಾನಸ್ ಹೂ
6. ಒಣ ಕೊಬ್ಬರಿ
7. ಮಧ್ಯಮ

710
750
290
850
780
170
160

720
760
300
900
830
175
165
ಕಾಳು ಮೆಣಸು
1. ಆಟೋಮ್
2. ಗಾರ್ಬಲ್ಡ್‌

550
520

560
530
ಗೋಡಂಬಿ
1. ಜೆ ಎಚ್
3. ಡಬ್ಲ್ಯೂ 240
4. ಡಬ್ಲ್ಯೂ 240 ಪಾನ್ ರೊಟ್ಟಿ

720
740
940

770
870
950
ಬಾದಾಮಿ620640
ದ್ರಾಕ್ಷಿ190240
ಎಳ್ಳು
1. ಕಪ್ಪು
2. ಬಿಳಿ
3. ನೈಲಾನ್

120
140
160

130
145
165

[ ಮೊಟ್ಟೆ (ಎನ್.ಇ.ಸಿ.ಸಿ) 100ಕ್ಕೆ 450 ರೂಪಾಯಿ]

ಎಪಿಎಂಸಿ ತರಕಾರಿ ಸಗಟು ದರ (1 ಕೆ. ಜಿ.ಗೆ) 20 ಜುಲೈ, 2022

ತರಕಾರಿಕನಿಷ್ಠಗರಿಷ್ಠ
ಟೊಮ್ಯಾಟೊ619
ಹುರುಳಿಕಾಯಿ ನಾಟಿ           3545
ಹ್ಯಾರಿಕೊಟ್‌ ಬೀನ್ಸ್    4550
ಬದನೆಕಾಯಿ ಬಿಳಿ     2535
ಬದನೆಕಾಯಿ ಗುಂಡು  2530
ಬೀಟ್‌ರೂಟ್‌             3035
ಹಾಗಲಕಾಯಿ            3035
ಸೀಮೆ ಬದನೆಕಾಯಿ      2025
ಸೌತೆಕಾಯಿ                  2530
ಗೊರಿಕಾಯಿ ಗೊಂಚಲು  2025
ಕ್ಯಾಪ್ಸಿಕಮ್‌ 3545
ಹಸಿ ಮೆಣಸಿನಕಾಯಿ     2530
ಸಣ್ಣ ಮೆಣಸಿನಕಾಯಿ   4560
ಬಜ್ಜಿ ಮೆಣಸಿನಕಾಯಿ4560
ಊಟಿ ಕ್ಯಾರೆಟ್           4550
ನಾಟಿ ಕ್ಯಾರೆಟ್              4050
ತೆಂಗಿನಕಾಯಿ               2025
ಎಲೆಕೋಸು                1518
ನವಿಲು ಕೋಸು3540
ಹೂ ಕೋಸು ಸಣ್ಣ     3540
ನುಗ್ಗೆಕಾಯಿ             2535
ಮೂಲಂಗಿ 1520
ಹಿರೇಕಾಯಿ3035
ಬೆಂಡೆಕಾಯಿ               3035
ಈರುಳ್ಳಿ                   1516
ಬೆಳ್ಳುಳ್ಳಿ                   4555
ಆಲೂಗಡ್ಡೆ               3032
ತೊಂಡೆಕಾಯಿ 2025
ಸೋರೆಕಾಯಿ 2025

ಅಡಕೆ ಧಾರಣೆ: 20 ಜುಲೈ, 2022

ಕುಮಟಾಕನಿಷ್ಠಗರಿಷ್ಠ
1. ಕೋಕಾ
2. ಚಿಪ್ಪು
3. ಫ್ಯಾಕ್ಟರಿ
4. ಹಳೆ ಚಾಲಿ
5. ಹೊಸ ಚಾಲಿ
1.18089
2. 26089
3.10109
4. 43899
5. 36809
1. 29999
2. 31199
3. 19549
4. 46429
5. 39519
ಶಿರಸಿಕನಿಷ್ಠಗರಿಷ್ಠ
1. ಚಾಲಿ
2. ಬೆಟ್ಟೆ
3. ಬಿಳಿಗೋಟು
4. ರಾಶಿ
1. 33699
2.35196
3.21199
4. 40799
1. 39699
2.46518
3. 32289
4. 49899
ಚಿತ್ರದುರ್ಗಕನಿಷ್ಠಗರಿಷ್ಠ
1. ಅಪಿ
2. ಕೆಂಪುಗೋಟು
3. ಬೆಟ್ಟೆ
4. ರಾಶಿ
1.48922
2.29000
3. 38419
4. 48429
1. 49332
2. 29400
3.38859
4. 48869
ಶಿವಮೊಗ್ಗಕನಿಷ್ಠಗರಿಷ್ಠ
ಗೊರಬಲು
ಬೆಟ್ಟೆ
ರಾಶಿ
ಸರಕು
1. 17500
2. 49090
3. 47009
4. 57669
1. 37299
2.53486
3. 49459
4. 79596
ಸಾಗರಕನಿಷ್ಠಗರಿಷ್ಠ
ಕೆಂಪುಗೋಟು
ಕೋಕ
ಚಾಲಿ
ಬಿಳಿಗೋಟು
ರಾಶಿ
ಸಿಪ್ಪೆಗೋಟು
1. 22339
2.15022
3. 30000
4.20560
5. 37699
6. 13999
1. 37199
2. 34089
3. 37069
4. 27869
5. 49609
6. 21198

ಇದನ್ನೂ ಓದಿ| ಆದಾಯಕ್ಕಾಗಿ ಷೇರು ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು 3,000 ಕೋಟಿ ರೂ. ಹೂಡಿಕೆಗೆ EPFO ಚಿಂತನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Tax Returns: ಪಾಕ್‌ ಜನರಿಗೆ ಬೆಲೆಯೇರಿಕೆ ಬೆನ್ನಲ್ಲೇ ತೆರಿಗೆ ಹೊರೆ; ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ನೋಡಿ!

Tax Returns: ಹಣದುಬ್ಬರದಿಂದ ಪಾಕಿಸ್ತಾನವು ತತ್ತರಿಸಿ ಹೋಗಿದೆ. ಒಂದೆಡೆ, ಪಾಕಿಸ್ತಾನಕ್ಕೆ ಬೇರೆ ದೇಶಗಳಿಂದ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಹಣಕಾಸು ನೆರವು ಸಿಗುತ್ತಿಲ್ಲ. ಇನ್ನೊಂದೆಡೆ, ಹಣದುಬ್ಬರ ನಿಯಂತ್ರಣ ಮಾಡಲು ಆಗುತ್ತಿಲ್ಲ. ಹಾಗಾಗಿ, ಪಾಕಿಸ್ತಾನದ ನಾಗರಿಕರು ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಪಾವತಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಹಣದುಬ್ಬರ ಏರಿಕೆಯು ಅವರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಇದರ ಬೆನ್ನಲ್ಲೇ, ಸರ್ಕಾರವು ಜನರಿಗೆ ತೆರಿಗೆ ಎಂಬ ಗುರಾಣಿ ಬಳಸಲು ಮುಂದಾಗಿದೆ.

VISTARANEWS.COM


on

Tax Returns
Koo

ಇಸ್ಲಾಮಾಬಾದ್:‌ ಉಗ್ರರ ಪೋಷಣೆ, ಹಣಕಾಸು ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನ (Pakistan) ದಿವಾಳಿಯಾಗಿದೆ. ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎದುರು ಹಣಕ್ಕಾಗಿ ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ. ಸಾಲ ಪಡೆಯಲು ಹೆಣಗಾಡುತ್ತಿದೆ. ಹಣದುಬ್ಬರದ ಏರಿಕೆಯಿಂದಾಗಿ ಜನರ ಜೀವನವೂ ಸಂಕಷ್ಟಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ, ದೇಶದ ನಾಗರಿಕರ ವಿರುದ್ಧ ಪಾಕಿಸ್ತಾನವು ತೆರಿಗೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಆದಾಯ ತೆರಿಗೆ ರಿಟರ್ನ್ಸ್‌ (Tax Returns) ಸಲ್ಲಿಸದ 5 ಲಕ್ಷ ಜನರ ಸಿಮ್‌ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಿದೆ.

ಪಾಕಿಸ್ತಾನದ ಖಜಾನೆಯಲ್ಲಿ ಹಣವಿಲ್ಲ. ಇದರಿಂದ ಸುಗಮವಾಗಿ ಆಡಳಿತ ನಡೆಸುವುದು ಬಿಡಿ ನೌಕರರಿಗೆ ಸಂಬಳ ಕೊಡಲೂ ಆಗುತ್ತಿಲ್ಲ. ಹಾಗಾಗಿ, ಜನರಿಂದ ತೆರಿಗೆ ಸಂಗ್ರಹಿಸಲು ಪಾಕಿಸ್ತಾನವು ಮುಂದಾಗಿದೆ. ಇದರ ಭಾಗವಾಗಿಯೇ, 2023ರಲ್ಲಿ ಐಟಿ ರಿಟರ್ನ್ಸ್‌ ಸಲ್ಲಿಸದ 5,06,671 ಜನರ ಸಿಮ್‌ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲು ಪಾಕಿಸ್ತಾನದ ಫೆಡರಲ್‌ ಬೋರ್ಡ್‌ ಆಫ್‌ ರೆವೆನ್ಯೂ (FBR) ನಿರ್ಧರಿಸಿದೆ. ಅವರು ಐಟಿ ರಿಟರ್ನ್ಸ್‌ ಸಲ್ಲಿಸಿದ ಬಳಿಕವೇ ಸಿಮ್‌ಕಾರ್ಡ್‌ಗಳನ್ನು ಸಕ್ರಿಯಗೊಳಿಸಲಾಗುವುದು ಎಂದು ಕೂಡ ತಿಳಿಸಿದೆ.

ಸಿಮ್‌ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವ ಕುರಿತು ಪಾಕಿಸ್ತಾನದ ಟೆಲಿಕಮ್ಯುನಿಕೇಷನ್‌ ಅಥಾರಿಟಿಗೆ (PTA) ನಿರ್ದೇಶನ ನೀಡಲಾಗಿದೆ. ಸಿಮ್‌ ಕಾರ್ಡ್‌ ಬಂದ್‌ ಮಾಡಿರುವ ಕುರಿತು ಮೇ 15ರೊಳಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ತೆರಿಗೆ ಪಾವತಿಸದ ಸುಮಾರು 24 ಲಕ್ಷ ತೆರಿಗೆದಾರರನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಆರಂಭಿಕ ಹಂತದಲ್ಲಿ 5 ಲಕ್ಷ ತೆರಿಗೆದಾರರ ಸಿಮ್‌ ಕಾರ್ಡ್‌ ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಗಿದೆ.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ

ಪಾಕಿಸ್ತಾನದಲ್ಲಿ ಹಣದುಬ್ಬರದ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯು ಗಗಣಕ್ಕೇರಿದೆ. ಒಂದು ಲೀಟರ್‌ ಹಾಲಿಗೆ 212 ರೂ., ಕೆ.ಜಿ ಅಕ್ಕಿಗೆ 330 ರೂ., ಒಂದು ಕೆ.ಜಿ ಸೇಬಿಗೆ 300 ರೂ., ಒಂದು ಕೆ.ಜಿ ಟೊಮ್ಯಾಟೊಗೆ 125 ರೂ., ಒಂದು ಕೆ.ಜಿ ಈರುಳ್ಳಿ 125 ರೂ., ಒಂದು ಲೀಟರ್‌ ಪೆಟ್ರೋಲ್‌ಗೆ 290 ರೂ. ಇದೆ. ದಿನೇದಿನೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇರುವುದು ಪಾಕಿಸ್ತಾನದ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ನಂತರದ ದುಸ್ಥಿತಿ ಹೀಗೆಯೇ ಮುಂದುವರಿದಿರುವುದು ಅವರನ್ನು ಆತಂಕಕ್ಕೆ ದೂಡಿದೆ.

ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಲು ಹೆಣಗಾಡುತ್ತಿದೆ. ಈಗಾಗಲೇ ಐಎಂಎಫ್‌ 1.10 ಶತಕೋಟಿ ಡಾಲರ್‌ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಮೂರು ವರ್ಷಗಳವರೆಗೆ 6 ಶತಕೋಟಿ ಡಾಲರ್‌ ಸಾಲ ನೀಡಿ ಎಂಬುದಾಗಿ ಪಾಕಿಸ್ತಾನ ಮನವಿ ಮಾಡುತ್ತಿದೆ. ಆದರೆ, ಪಾಕ್‌ನಲ್ಲಿ ದಿನೇದಿನೆ ಹಣದುಬ್ಬರದ ಏರಿಕೆಯಾಗುತ್ತಿರುವ ಕಾರಣ ಸಾಲ ನೀಡಲು ಐಎಂಎಫ್‌ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Narendra Modi:”ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ…ಅಲ್ಲಿ ಪಾಕಿಸ್ತಾನ ಅಳುತ್ತಾ ಪ್ರಾರ್ಥಿಸುತ್ತಿದೆ”-ಮೋದಿ ಅಟ್ಯಾಕ್‌

Continue Reading

ದೇಶ

Reliance Retail: ರಿಲಯನ್ಸ್ ರಿಟೇಲ್‌ನ ಟಿರಾ ಬ್ಯೂಟಿಯಿಂದ ಹೊಸ ಬ್ರ್ಯಾಂಡ್ ‘ನೈಲ್ಸ್ ಅವರ್ ವೇ’ ಅನಾವರಣ

Reliance Retail: ರಿಲಯನ್ಸ್ ರೀಟೇಲ್‌ನ ಟಿರಾ ಬ್ಯೂಟಿಯಿಂದ ತನ್ನ ಇತ್ತೀಚಿನ ಖಾಸಗಿ ಲೇಬಲ್ ಬ್ರಾಂಡ್ ‘ನೈಲ್ಸ್ ಅವರ್ ವೇ’ (Nails Our Way) ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು,ಇದು ಪ್ರೀಮಿಯಂ ಉಗುರು ಬಣ್ಣ ಮತ್ತು ಆರೈಕೆ ಉತ್ಪನ್ನಗಳ ವ್ಯಾಪಕವಾದ ಶ್ರೇಣಿ ಹೊಂದಿದೆ.

VISTARANEWS.COM


on

Reliance Retail Tira Beauty launch new brand Nails Our Way
Koo

ಮುಂಬೈ: ರಿಲಯನ್ಸ್ ರೀಟೇಲ್‌ನ (Reliance Retail) ಟಿರಾ ಬ್ಯೂಟಿಯಿಂದ ತನ್ನ ಇತ್ತೀಚಿನ ಖಾಸಗಿ ಲೇಬಲ್ ಬ್ರಾಂಡ್ ‘ನೈಲ್ಸ್ ಅವರ್ ವೇ’ (Nails Our Way) ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಪ್ರೀಮಿಯಂ ಉಗುರುಗಳ ಬಣ್ಣ ಮತ್ತು ಆರೈಕೆ ಉತ್ಪನ್ನಗಳ ವ್ಯಾಪಕವಾದ ಶ್ರೇಣಿ ಇದು ಹೊಂದಿದ್ದು, ಗ್ರಾಹಕರು ತಮ್ಮ ವಿಶಿಷ್ಟ ಶೈಲಿ ಅಭಿವ್ಯಕ್ತಪಡಿಸಲು ಮತ್ತು ವೈಯಕ್ತಿಕ ಸೃಜನಶೀಲತೆಗಾಗಿ ಅಳವಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

ನೈಲ್ಸ್ ಅವರ್ ವೇ ನ ವಿಶೇಷತೆ

‘ನೈಲ್ಸ್ ಅವರ್ ವೇ’ ಎಂಬುದು ಉಗುರುಗಳ ಆರೈಕೆಗೆ ನವೀನವಾದ ವಿಧಾನವನ್ನು ತರುತ್ತದೆ. ಈ ಉತ್ಪನ್ನ ಸಾಲಿನಲ್ಲಿ ಜೆಲ್ ವೆಲ್, ಸ್ವಿಫ್ಟ್ ಡ್ರೈ, ಬ್ರೀತ್ ಅವೇ ಮತ್ತು ಟ್ರೀಟ್ ಕೋಟ್ ನೇಲ್ ಎನಾಮೆಲ್ ಸಂಗ್ರಹಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Karnataka legislative council: ವಿಧಾನ ಪರಿಷತ್‌ನ 6 ಕ್ಷೇತ್ರಗಳಿಗೆ ಜೂ.3 ಎಲೆಕ್ಷನ್;‌ ಜೂ. 6ಕ್ಕೆ ಫಲಿತಾಂಶ

ಈ ಸಂಗ್ರಹವು ವೈವಿಧ್ಯಮಯ ಬಣ್ಣಗಳ ಪ್ಯಾಲೆಟ್ ಹೊಂದಿದ್ದು, ಪ್ರತಿ ಮನಸ್ಥಿತಿ ಮತ್ತು ಸಂದರ್ಭಕ್ಕೂ ಪರಿಪೂರ್ಣ ಹೊಂದಾಣಿಕೆ ಖಾತ್ರಿಪಡಿಸುತ್ತದೆ. ರೋಮಾಂಚಕ ಬಣ್ಣಗಳ ಜತೆಗೆ ನೋ ಬಂಪ್ ಬೇಸ್, ಕ್ಯೂಟಿ ಕೇರ್ ಮತ್ತು ಉಗುರುಗಳ ಪೋಷಣೆಗೆ, ಬಲಪಡಿಸುವುದಕ್ಕೆ ಮತ್ತು ರಕ್ಷಣೆಗೆ ಕಠಿಣ ಸಲ್ಯೂಷನ್ ಗಳನ್ನು ಒಳಗೊಂಡಂತೆ ಅಗತ್ಯವಾದ ಉಗುರು ಆರೈಕೆ ಉತ್ಪನ್ನಗಳನ್ನು ನೀಡುತ್ತದೆ.

ಈ ಶ್ರೇಣಿಯು ನವೀನ 2 ಟೋನ್ಡ್ ವ್ಯಾನಿಶರ್ ಮತ್ತು ಅಸಿಟೋನ್-ಮುಕ್ತ ಸಂಪೂರ್ಣ ಸ್ವಚ್ಛ ಮಾಡುವಂಥ ಸೌಮ್ಯವಾದ ಹಾಗೂ ಪರಿಣಾಮಕಾರಿಯಾದ ಉಗುರು ಬಣ್ಣವನ್ನು ತೆಗೆಯುವ ಸಾಧನಗಳನ್ನು ಪರಿಚಯಿಸುತ್ತದೆ.

ಸಂಪೂರ್ಣ ಮಿನಿಕ್ಯೂರ್ (ಕೈ ಬೆರಳುಗಳ ಅಲಂಕಾರ) ಮಾಡುವ ಸಲ್ಯೂಷನ್‌ಗಳನ್ನು ಹುಡುಕುತ್ತಿರುವವರಿಗೆ, ಫ್ರೆಂಚ್ ಎಂ ಅಪ್ ಮತ್ತು ನೇಯ್ಲ್ಡ್ ಇಟ್‌ ನಂತಹ ಅನುಕೂಲಕರ ಕಿಟ್‌ಗಳು ಸಹ ಲಭ್ಯವಿವೆ, ಮನೆಯಲ್ಲಿ ವೃತ್ತಿಪರ ಗುಣಮಟ್ಟದಲ್ಲಿ ಕಾಣುವುದಕ್ಕೆ ಸಿದ್ಧವಾಗಲು ಅಗತ್ಯವಿರುವ ಎಲ್ಲ ಸಾಧನಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: Jolly LLB 3: ಬರ್ತಿದೆ ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 3; ಈ ಬಾರಿ ಇದೆ ಸರ್‌ಪ್ರೈಸ್!

Tirabeauty.com ಮೂಲಕ ಆನ್‌ಲೈನ್‌ನಲ್ಲಿ ಸಂಪೂರ್ಣ ‘ನೈಲ್ಸ್ ಅವರ್ ವೇ’ ಸಂಗ್ರಹವನ್ನು ಕಾಣಬಹುದಾಗಿದೆ.

Continue Reading

ಮನಿ-ಗೈಡ್

Money Guide: ಕಾರ್ಪೊರೇಟ್- ವೈಯಕ್ತಿಕ ಆರೋಗ್ಯ ವಿಮೆಯ ನಡುವಿನ ವ್ಯತ್ಯಾಸ ತಿಳಿದಿರಲಿ

Money Guide: ಕೆಲಸವಿರುವಾಗ ಆರೋಗ್ಯ ವಿಮೆಯ ಚಿಂತೆ ಇರುವುದಿಲ್ಲ. ಕೈಯಲ್ಲಿ ಹಣವಿರುವುದರಿಂದ ಹೂಡಿಕೆ ಮಾಡುವ ಒಲವು ಇರುವುದಿಲ್ಲ. ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿ ಎಲ್ಲವನ್ನೂ ದೋಚಿಕೊಂಡು ಹೋದಾಗಲೇ ನಾನು ಮೊದಲೇ ಆರೋಗ್ಯ ವಿಮೆಯ ಬಗ್ಗೆ ಯೋಚಿಸಬೇಕಿತ್ತು ಎನ್ನುವಂತೆ ಮಾಡುತ್ತದೆ.

VISTARANEWS.COM


on

By

Health Plan
Koo

ನಿತ್ಯದ ಕೆಲಸದ ಒತ್ತಡದಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಜನರು ಆರೋಗ್ಯದ ಅಪಾಯವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಆರೋಗ್ಯದ ಸುರಕ್ಷತೆಯಿಂದ (Health Plan) ಸಣ್ಣ ವಯಸ್ಸಿನಲ್ಲೇ ಉಳಿತಾಯ (saving) ಮಾಡುವುದು ಅನಿವಾರ್ಯವಾಗುತ್ತಿದೆ. ಹೀಗಾಗಿ ಹೆಚ್ಚಿನವರಿಗೆ ಮ್ಯೂಚುಯಲ್ ಫಂಡ್‌ (Mutual fund) ಮತ್ತು ಎಸ್‌ಐಪಿಗಳು (SIP) ದೀರ್ಘಾವಧಿಗೆ ಉತ್ತಮ ಹಣಕಾಸಿನ ಸಾಧನಗಳಾಗಿ ಕಾಣುತ್ತದೆ. ಇದರ ಮಧ್ಯೆ ವೈಯಕ್ತಿಕ ಆರೋಗ್ಯ ವಿಮೆ (personal health insurance) ಕೂಡ ಹಣಕಾಸಿನ ಉತ್ಪನ್ನವಾಗಿ ಕಾಣುತ್ತಿದೆ. ಆದರೆ ಇಲ್ಲಿ ವೈಯಕ್ತಿಕ ಆರೋಗ್ಯ ವಿಮಾ ಪಾಲಿಸಿಗಿಂತ ಉದ್ಯೋಗದಾತರ ಕಾರ್ಪೊರೇಟ್ ವಿಮೆಯ (corporate insurance) ಮೇಲಿನ ಅವಲಂಬನೆ ಹೆಚ್ಚಾಗಿದೆ (Money Guide).

ಕೆಲವೊಂದು ಬಾರಿ ಇದು ಎಲ್ಲ ವೆಚ್ಚಗಳನ್ನು ಸರಿದೂಗಿಸಲು ಸಾಕಾಗುವುದಿಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿ, ಅನಿರೀಕ್ಷಿತ ಘಟನೆಗಳಲ್ಲಿ ಹಣಕಾಸಿನ ಒತ್ತಡಕ್ಕೆ ಇದು ಕಾರಣವಾಗುತ್ತದೆ.

ಯುವ ವೃತ್ತಿಪರರ ಮುಂದೆ ಇರುವ ಹೆಚ್ಚಿನ ಸವಾಲೆಂದರೆ ದೀರ್ಘಾವಧಿಯ ಉಳಿತಾಯಕ್ಕಿಂತ ತಕ್ಷಣದ ತೃಪ್ತಿಯ ಕಡೆಗೆ ಅವರ ಒಲವು. ತಕ್ಷಣದ ವೈಯಕ್ತಿಕ, ವೃತ್ತಿ ಗುರಿಗಳನ್ನು ಅನುಸರಿಸುವುದರ ಮೇಲೆಯೇ ಅವರು ಗಮನ ಕೇಂದ್ರೀಕರಿಸುವುದರಿಂದ ಭವಿಷ್ಯದ ಅನಿಶ್ಚಯಗಳಿಗೆ ಅವರು ಸಿದ್ಧವಾಗಿರುವುದಿಲ್ಲ. ಹೀಗಾಗಿ ವೈಯಕ್ತಿಕ ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡುವುದನ್ನು ಅವರು ಸಾಮಾನ್ಯವಾಗಿ ಕಡೆಗಣಿಸುತ್ತಾರೆ. ಅವರ ಈ ಮನಸ್ಥಿತಿಯು ಮುಂದೆ ಎದುರಾಗುವ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳಿಂದ ಗಮನಾರ್ಹ ಆರ್ಥಿಕ ಹೊರೆಗಳಿಗೆ ಕಾರಣವಾಗುತ್ತದೆ.


ಇದನ್ನೂ ಓದಿ: Money Guide: ಫೊರೆಕ್ಸ್‌ ಕಾರ್ಡ್‌ V/S ಕ್ರೆಡಿಟ್‌ ಕಾರ್ಡ್‌: ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ?

ಯುವ ವೃತ್ತಿಪರರ ಒಂದು ವರ್ಗವು ಉದ್ಯಮಿ ಮತ್ತು ಸ್ವಯಂ ಉದ್ಯೋಗಿಗಳನ್ನು ಒಳಗೊಂಡಿದೆ. ಇವರಿಗೆ ವ್ಯವಹಾರದ ಬೆಳವಣಿಗೆ ಮತ್ತು ಪೋಷಣೆಗಾಗಿ ಹಣವನ್ನು ನಿಯೋಜಿಸುವ ಅಗತ್ಯವು ಆದ್ಯತೆಯಾಗಿ ಕಾಣುತ್ತದೆ. ಇದರಿಂದ ದೀರ್ಘಾವಧಿಯ ಆರೋಗ್ಯ ರಕ್ಷಣೆಯನ್ನು ಕಡೆಗಣಿಸುತ್ತಾರೆ.

ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ವಿಮೆಯು ಎಲ್ಲರಿಗೂ ಕಡ್ಡಾಯವಾಗಿದೆ. ಇದರಿಂದ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. ದೈಹಿಕ ಮತ್ತು ಆರ್ಥಿಕ ಯೋಗಕ್ಷೇಮವನ್ನು ನೋಡಿಕೊಳ್ಳಬಹುದು.

ವೃತ್ತಿಜೀವನವನ್ನು ಪ್ರಾರಂಭಿಸುತ್ತಿರುವಾಗ ಕಾರ್ಪೊರೇಟ್ ಮತ್ತು ವೈಯಕ್ತಿಕ ಆರೋಗ್ಯ ವಿಮೆಯ ನಡುವಿನ ವ್ಯತ್ಯಾಸವನ್ನು ಮೊದಲು ತಿಳಿದುಕೊಳ್ಳಬೇಕು. ಇದರಿಂದ ಆರೋಗ್ಯದ ಅಗತ್ಯಗಳನ್ನು ಹೆಚ್ಚು ಸಮಗ್ರವಾಗಿ ಪರಿಹರಿಸಲು ಸಾಧ್ಯವಾಗುವುದು. ಜೇಬಿನಲ್ಲಿ ಸೀಮಿತ ಆದಾಯದೊಂದಿಗೆ ಒಬ್ಬರ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಆರ್ಥಿಕ ಹೊರೆಯನ್ನು ನಿವಾರಿಸುವ ಒಟ್ಟಾರೆ ಹಣಕಾಸುಗಳನ್ನು ಯೋಜಿಸಲು ಇದು ಸಹಾಯ ಮಾಡುತ್ತದೆ.

ಕಾರ್ಪೊರೇಟ್ ವಿಮೆ ಮತ್ತು ವೈಯಕ್ತಿಕ ಆರೋಗ್ಯ ವಿಮೆಯ ನಡುವೆ ಇರುವ ವ್ಯತ್ಯಾಸ.

ಸುಧಾರಿತ ಮತ್ತು ಸೇರಿಸಿದ ಕವರೇಜ್

ಅನೇಕ ಕಾರ್ಪೊರೇಟ್ ವಿಮಾ ಯೋಜನೆಗಳು ಕಡಿಮೆ ಕವರೇಜ್ ಮೊತ್ತದೊಂದಿಗೆ ಸೀಮಿತ ವ್ಯಾಪ್ತಿಯನ್ನು ನೀಡುತ್ತವೆ ಮತ್ತು ಕಾಪೇಗಳು, ಸಬ್‌ಲಿಮಿಟ್‌ಗಳಂತಹ ಇತರ ಷರತ್ತುಗಳು ವೈದ್ಯಕೀಯ ಆರೈಕೆಗಾಗಿ ಗಮನಾರ್ಹವಾದ ಔಟ್-ಆಫ್-ಪಾಕೆಟ್ ವೆಚ್ಚಗಳಿಗೆ ಕಾರಣವಾಗುತ್ತವೆ. ವೈಯಕ್ತಿಕ ಆರೋಗ್ಯ ವಿಮೆಯು ವ್ಯಕ್ತಿಗಳಿಗೆ ತಮ್ಮ ವಿಶಿಷ್ಟ ಅಗತ್ಯಗಳಿಗೆ ತಕ್ಕಂತೆ ಕವರೇಜ್ ಮಾಡಲು ಅನುಮತಿಸುತ್ತದೆ. ಹೆಚ್ಚು ಸಮಗ್ರ ವ್ಯಾಪ್ತಿಯನ್ನು ಒದಗಿಸುತ್ತದೆ.

ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳಿಂದ ಪರಿಹಾರ

ವೈಯಕ್ತಿಕ ಆರೋಗ್ಯ ವಿಮೆಯನ್ನು ಹೊಂದಿರುವುದು ವ್ಯಕ್ತಿಯ ಮನಸ್ಸಿನ ಶಾಂತಿ ಮತ್ತು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಗಂಭೀರವಾದ ಅನಾರೋಗ್ಯ ಅಥವಾ ಗಾಯದ ಸಂದರ್ಭದಲ್ಲಿ ವೈಯಕ್ತಿಕ ಆರೋಗ್ಯ ವಿಮೆಯು ಸುರಕ್ಷತಾ ನಿವ್ವಳವಾಗಿ ಕಾರ್ಯನಿರ್ವಹಿಸುತ್ತದೆ. ವೈದ್ಯಕೀಯ ಆರೈಕೆಯ ಹೆಚ್ಚಿನ ವೆಚ್ಚಗಳಿಂದ ಗ್ರಾಹಕರನ್ನು ರಕ್ಷಿಸುತ್ತದೆ.

ಪರ್ಯಾಯವಾಗಿ ಗ್ರಾಹಕರು ವೈಯಕ್ತಿಕ ಆರೋಗ್ಯ ಯೋಜನೆಯನ್ನು ಆಯ್ಕೆ ಮಾಡದಿರಲು ಆದ್ಯತೆ ನೀಡಿದರೆ ಅವರು ತಮ್ಮ ಪ್ರಸ್ತುತ ಕಾರ್ಪೊರೇಟ್ ಆರೋಗ್ಯ ಯೋಜನೆಗೆ ಹೆಚ್ಚುವರಿಯಾಗಿ ಟಾಪ್-ಅಪ್ ಆರೋಗ್ಯ ನೀತಿಯ ಆಯ್ಕೆಯನ್ನು ಹೊಂದಿರುತ್ತಾರೆ. ಟಾಪ್-ಅಪ್ ಆರೋಗ್ಯ ಯೋಜನೆಯನ್ನು ಆರಿಸಿಕೊಳ್ಳುವ ಮೂಲಕ ಕ್ಲೈಮ್ ಸಮಯದಲ್ಲಿ ತಮ್ಮ ಕಾರ್ಪೊರೇಟ್ ಆರೋಗ್ಯ ನೀತಿಯಿಂದ ಒದಗಿಸಲಾದ ವ್ಯಾಪ್ತಿಯನ್ನು ಮೀರಿದರೆ ಉಂಟಾಗಬಹುದಾದ ಅನಿರೀಕ್ಷಿತ ವೆಚ್ಚಗಳಿಂದ ವ್ಯಕ್ತಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು.


ಜೀವನ ಆಯ್ಕೆಗಳಿಗೆ ಹೊಂದಿಕೊಳ್ಳುವಿಕೆ

ಉದ್ಯೋಗಿಗಳ ಆರೋಗ್ಯ ರಕ್ಷಣೆಯ ಮೇಲೆ ಕಡಿಮೆ ಅವಲಂಬನೆ – ಬೆಳವಣಿಗೆಯ ಅವಕಾಶಗಳನ್ನು ಹುಡುಕಲು ಅಥವಾ ಕೈಗಾರಿಕೆಗಳನ್ನು ಬದಲಾಯಿಸಲು ಅಥವಾ ಉನ್ನತ ಶಿಕ್ಷಣಕ್ಕೆ ಮುಂದುವರಿಯಲು ಅಥವಾ ಸ್ವಂತವಾಗಿ ವ್ಯಾಪಾರವನ್ನು ಪ್ರಾರಂಭಿಸಲು ಉದ್ಯೋಗ ಪರಿವರ್ತನೆಗಳನ್ನು ಅನುಭವಿಸಬಹುದು. ಈ ಸ್ಥಿತ್ಯಂತರಗಳ ಸಮಯದಲ್ಲಿ, ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಗೆ ವ್ಯಕ್ತಿಗಳು ಗುರಿಯಾಗುವಂತೆ ಆರೋಗ್ಯ ವಿಮಾ ರಕ್ಷಣೆಯಲ್ಲಿ ಅಂತರಗಳಿರಬಹುದು. ವೈಯಕ್ತಿಕ ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿರಂತರ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಬಹುದು ಮತ್ತು ಉದ್ಯೋಗ ಪರಿವರ್ತನೆಯ ಸಮಯದಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸುವ ಅಪಾಯವನ್ನು ತಗ್ಗಿಸಬಹುದು.

ಕಡಿಮೆ ಪ್ರೀಮಿಯಂನ ಪ್ರಯೋಜನ

ವಿಮಾ ಕಂತುಗಳನ್ನು ನಿರ್ಧರಿಸುವಲ್ಲಿ ವಯಸ್ಸು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಯುವ ಪಾಲಿಸಿದಾರರಿಗೆ ಹಳೆಯ ಗ್ರಾಹಕರಿಗಿಂತ ಕಡಿಮೆ ಪ್ರೀಮಿಯಂ ವಿಧಿಸಲಾಗುತ್ತದೆ. ಭವಿಷ್ಯದಲ್ಲಿ ಅವರು ಯಾವುದೇ ಜೀವನಶೈಲಿ ಕಾಯಿಲೆಗೆ ಒಳಗಾದಾಗ ಹೆಚ್ಚಿದ ಪ್ರೀಮಿಯಂಗಳು ಅಥವಾ ವ್ಯಾಪ್ತಿಗೆ ನಿರ್ಬಂಧಗಳ ಬಗ್ಗೆ ಚಿಂತಿಸದೆಯೇ ಅದನ್ನು ತಕ್ಷಣವೇ ಆವರಿಸಲಾಗುತ್ತದೆ ಎಂದು ಇದು ಖಚಿತಪಡಿಸುತ್ತದೆ.

ತೆರಿಗೆ ಪ್ರಯೋಜನ

ವೈಯಕ್ತಿಕ ಆರೋಗ್ಯ ವಿಮೆಗೆ ಪಾವತಿಸಿದ ಪ್ರೀಮಿಯಂಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಡಿ ಅಡಿಯಲ್ಲಿ ತೆರಿಗೆ ವಿನಾಯಿತಿಗಳಿಗೆ ಅರ್ಹವಾಗಿವೆ. ಈ ನಿಬಂಧನೆಯು ವ್ಯಕ್ತಿಗಳಿಗೆ ತೆರಿಗೆಗಳನ್ನು ಉಳಿಸಲು ಅನುಮತಿಸುತ್ತದೆ. ಸಂಭಾವ್ಯ ಉಳಿತಾಯ ತೆರಿಗೆಯ ಆದಾಯವು 75,000 ರೂ. ವರೆಗೆ ಇರುತ್ತದೆ. ವೈಯಕ್ತಿಕ ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡುವ ಮೂಲಕ ವ್ಯಕ್ತಿಗಳು ತಮ್ಮ ಯೋಗಕ್ಷೇಮವನ್ನು ಭದ್ರಪಡಿಸಿಕೊಳ್ಳುವುದಲ್ಲದೆ ಒಟ್ಟಾರೆ ಆರ್ಥಿಕ ಆರೋಗ್ಯಕ್ಕೆ ಕೊಡುಗೆ ನೀಡುವ ಗಮನಾರ್ಹ ತೆರಿಗೆ ಪ್ರಯೋಜನಗಳನ್ನು ಸಹ ಪಡೆದುಕೊಳ್ಳುತ್ತಾರೆ.

ಪ್ರಾಮುಖ್ಯತೆ ತಿಳಿಯಿರಿ

ವೈಯಕ್ತಿಕ ಆರೋಗ್ಯ ವಿಮೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದು ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು ಆರೋಗ್ಯ ಆಯ್ಕೆಗಳ ಮೇಲೆ ಹೆಚ್ಚಿನ ಸ್ವಾಯತ್ತತೆಯನ್ನು ಹೊಂದಲು ನಿರ್ಣಾಯಕವಾಗಿದೆ.

ಬಹು ವಿಮಾ ಪಾಲಿಸಿಗಳ ಕುರಿತು ಸಂಪೂರ್ಣ ಸಂಶೋಧನೆ ನಡೆಸುವುದು, ಅವುಗಳ ವೈಶಿಷ್ಟ್ಯಗಳು, ಪ್ರಯೋಜನಗಳು ಮತ್ತು ವೆಚ್ಚಗಳನ್ನು ಹೋಲಿಸುವುದು ಮತ್ತು ಯೋಜನೆಯನ್ನು ಆಯ್ಕೆ ಮಾಡುವ ಮೊದಲು ಪ್ರತಿ ವೈಶಿಷ್ಟ್ಯವು ಕ್ಲೈಮ್‌ಗಳು ಮತ್ತು ವಿಮಾ ಮೊತ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸೂಕ್ತವಾಗಿದೆ. ವೈಯಕ್ತಿಕ ಆರೋಗ್ಯ ಅಗತ್ಯತೆಗಳನ್ನು ನಿರ್ಣಯಿಸಿ ಮತ್ತು ಹೆಚ್ಚು ಸೂಕ್ತವಾದ ಮತ್ತು ಸಾಕಷ್ಟು ವ್ಯಾಪ್ತಿಯನ್ನು ಒದಗಿಸುವಯೋಜನೆಯನ್ನು ಆಯ್ಕೆ ಮಾಡಿ.


ಗಮನದಲ್ಲಿ ಇರಲಿ

ವೈಯಕ್ತಿಕ ಆರೋಗ್ಯ ವಿಮೆಯನ್ನು ಆಯ್ಕೆ ಮಾಡುವಾಗ ಕೆಲವು ವಿಷಯಗಳು ಗಮನದಲ್ಲಿ ಇರಲಿ. ಖರೀದಿಸುವ ಮೊದಲು ಪಾಲಿಸಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ. ಪಾಲಿಸಿಯ ಕಾಯುವ ಅವಧಿ, ಹೊರಗಿಡುವಿಕೆ, ಸಹ-ಪಾವತಿ, ಕೊಠಡಿ ಬಾಡಿಗೆ ಮಿತಿ ಮತ್ತು ರೋಗದ ಉಪ-ಮಿತಿಗಳನ್ನು ಅರ್ಥಮಾಡಿಕೊಳ್ಳಿ. ಸರಿಯಾದ ಕವರೇಜ್ ಮೊತ್ತವನ್ನು ಹೊಂದಿರುವ ಪಾಲಿಸಿಯನ್ನು ಆಯ್ಕೆ ಮಾಡಿ. ಏಕೆಂದರೆ ಗಂಭೀರ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚವನ್ನು ಸರಿದೂಗಿಸಲು ಸಿದ್ಧರಾಗಿರಿ

ಯೋಜನೆಯನ್ನು ಆಯ್ಕೆ ಮಾಡುವ ಮೊದಲು ವಿಮಾದಾರರ ಕ್ಲೈಮ್ ಸೆಟಲ್‌ಮೆಂಟ್ ಅನುಪಾತವನ್ನು ನೋಡಿ. ಇದು ವಿಮಾದಾರರು ಇತ್ಯರ್ಥಪಡಿಸಿದ ಕ್ಲೈಮ್‌ಗಳ ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ
ವೈದ್ಯಕೀಯ ತುರ್ತು ಸ್ಥಿತಿಯ ಸಮಯದಲ್ಲಿ ನಗದು ರಹಿತ ಆಸ್ಪತ್ರೆಗೆ ನೀಡುವ ನೀತಿಗಳನ್ನು ಗಮನಿಸಿ.

ಪಾಲಿಸಿ ಖರೀದಿಯ ಸಮಯದಲ್ಲಿ ಎಲ್ಲಾ ಪೂರ್ವ ಅಸ್ತಿತ್ವದಲ್ಲಿರುವ ಷರತ್ತುಗಳನ್ನು ತಿಳಿದುಕೊಳ್ಳಿ. ವಿಮೆಗಾರರು ಹಲವಾರು ವರ್ಷಗಳ ಪ್ರೀಮಿಯಂ ಪಾವತಿಯ ಅನಂತರವೂ ಗಮನಾರ್ಹ ಶೇಕಡಾವಾರು ಕ್ಲೈಮ್‌ಗಳನ್ನು ತಿರಸ್ಕರಿಸುತ್ತಾರೆ. ಏಕೆಂದರೆ ಖರೀದಿಯ ಸಮಯದಲ್ಲಿ ಗ್ರಾಹಕರು ವೈದ್ಯಕೀಯ ಸ್ಥಿತಿಯನ್ನು ಘೋಷಿಸಲಿಲ್ಲ ಎಂದು ಅವರು ನಿರ್ಧರಿಸಬಹುದು.

ವೈಯಕ್ತಿಕ ಆರೋಗ್ಯ ವಿಮೆಯು ಯುವ ವೃತ್ತಿಪರರಿಗೆ ಅಮೂಲ್ಯವಾದ ಹೂಡಿಕೆಯಾಗಿದೆ. ವಿಶೇಷ ವ್ಯಾಪ್ತಿಯನ್ನು ನೀಡುತ್ತದೆ. ಕೆಲಸದ ವರ್ಗಾವಣೆಯ ಸಮಯದಲ್ಲಿ ರಕ್ಷಣೆ, ಮತ್ತು ಅಗತ್ಯವಿರುವ ಸಮಯದಲ್ಲಿ ಅವರ ಒಟ್ಟಾರೆ ಇತರ ಹೂಡಿಕೆಗಳನ್ನು ಆರೋಗ್ಯ ವೆಚ್ಚಗಳಿಗೆ ತಿರುಗಿಸದಿರುವಂತೆ ಮಾಡುತ್ತದೆ. ಇದು ಸಮಗ್ರ ವ್ಯಾಪ್ತಿಯನ್ನು ಒದಗಿಸುತ್ತದೆ. ಆರೋಗ್ಯ ನಿರ್ಧಾರಗಳ ಮೇಲೆ ಹೆಚ್ಚಿನ ನಿಯಂತ್ರಣ ಮತ್ತು ಆರ್ಥಿಕ ಭದ್ರತೆಗೆ ಆರೋಗ್ಯ ವಿಮೆ ಪೂರಕವಾಗಿದೆ.

Continue Reading

ಮನಿ-ಗೈಡ್

Money Guide: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳಿವು

Money Guide: ಹೆಣ್ಣು ಈ ಸಮಾಜದ ಕಣ್ಣು ಎನ್ನುವ ಮಾತಿದೆ. ಹಿಂದಿನಿಂದಲೂ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಮಹತ್ವದ, ಪೂಜನೀಯ ಸ್ಥಾನ-ಮಾನ ನೀಡಲಾಗಿತ್ತು. ಆದರೆ ಕ್ರಮೇಣ ಲಿಂಗ ತಾರತಮ್ಯ ಹೆಚ್ಚಾಗಿ ಮಹಿಳೆಯರನ್ನು ಮೂಲೆಗುಂಪು ಮಾಡಲಾಯಿತು. ಇದೀಗ ಮತ್ತೆ ಪರಿಸ್ಥಿತಿ ಬದಲಾಗಿದೆ. ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾದನೆಯನ್ನು ತೋರುತ್ತಿದ್ದಾರೆ. ದೇಶದಲ್ಲಿ ಈಗಲೂ ಕಂಡು ಬರುವ ಲಿಂಗ ತಾರತಮ್ಯವನ್ನು ತೊಲಗಿಸಲು ಸರ್ಕಾರ ಜಾರಿಗೆ ತಂದ ಹಲವು ಯೋಜನೆಗಳ ಮಾಹಿತಿ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಹೆಣ್ಣು ಮಕ್ಕಳನ್ನು ಈ ದೇಶದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇಂದು ಹೆಣ್ಣು ಮಕ್ಕಳು ತಮ್ಮ ಇತಿಮಿತಿಯನ್ನು ಮೀರಿ ಎಲ್ಲ ರಂಗದಲ್ಲಿಯೂ ಸಾಧನೆ ತೋರುತ್ತಿದ್ದಾರೆ. ಆದರೂ ಲಿಂಗ ಅಸಮಾನತೆ ಎನ್ನುವುದು ಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಹೆಣ್ಣು-ಗಂಡು ಎಂಬ ತಾರತಮ್ಯ ಚಾಲ್ತಿಯಲ್ಲಿದೆ. ಇದೇ ಕಾರಣಕ್ಕೆ ಸಾಕಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ಪರಿಸ್ಥಿತಿಯನ್ನು ತೊಡೆದು ಹಾಕಲು, ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಲು ಸಾಕಷ್ಟು ಯೋಜನೆ ಜಾರಿಗೊಳಿಸುತ್ತಿದೆ. ಇಂದಿನ ಮನಿಗೈಡ್‌ (Money Guide)ನಲ್ಲಿ ದೇಶದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ವಿವರಿಸಲಾಗಿದೆ.

ಬೇಟಿ ಬಚಾವೋ, ಬೇಟಿ ಪಡಾವೋ (BBBP) ಯೋಜನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ರಲ್ಲಿ ಪ್ರಾರಂಭಿಸಿದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಲಿಂಗ ಆಧಾರಿತ ತಾರತಮ್ಯವನ್ನು ಪರಿಹರಿಸುವ ಮತ್ತು ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಜಿಲ್ಲಾ ಮಟ್ಟದ ಉಪಕ್ರಮಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಲಿಂಗ ಆಧಾರಿತ ಗರ್ಭಪಾತವನ್ನು ತಡೆಗಟ್ಟುವುದು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಶಿಕ್ಷಣವನ್ನು ಬೆಂಬಲಿಸುವುದು ಮುಂತಾದ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ.

ಸಿಬಿಎಸ್ಇ ಉಡಾನ್ (CBSE Udaan) ಯೋಜನೆ

ಈ ಯೋಜನೆಯನ್ನು ಮುಖ್ಯವಾಗಿ 11 ಮತ್ತು 12ನೇ ತರಗತಿಯ ಹುಡುಗಿಯರನ್ನು ಗುರಿಯಾಗಿಸಿಕೊಂಡು ಜಾರಿಗೆ ತರಲಾಗಿದೆ. ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಉಚಿತ ಕಲಿಕಾ ಉಪಕರಣಗಳ ವಿತರಣೆ, ವರ್ಚುವಲ್ ತರಗತಿ ಆಯೋಜನೆ ಮತ್ತು ವೃತ್ತಿ ಮಾರ್ಗದರ್ಶನವನ್ನು ನೀಡುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲು 10ನೇ ತರಗತಿಯಲ್ಲಿ ವಿಜ್ಞಾನ ಮತ್ತು ಗಣಿತದಲ್ಲಿ ಕನಿಷ್ಠ ಶೇ. 70 ಅಂಕ ಪಡೆಯುವುದು ಕಡ್ಡಾಯ.

ಬಾಲಿಕಾ ಸಮೃದ್ಧಿ (Balika Samriddhi) ಯೋಜನೆ

ಈ ವಿದ್ಯಾರ್ಥಿ ವೇತನವನ್ನು ಆರ್ಥಿಕವಾಗಿ ದುರ್ಬಲ ಕುಟುಂಬಗಳ ಹೆಣ್ಣು ಮಕ್ಕಳಿಗೆ ನೀಡಲಾಗುತ್ತದೆ. ಅವರ ಶಿಕ್ಷಣಕ್ಕೆ ನೆರವಾಗುವುದು ಈ ಯೋಜನೆ ಉದ್ದೇಶ. ಜನನದ ಸಮಯದಲ್ಲಿ ನಗದು ಹಸ್ತಾಂತರ ಮತ್ತು 18 ವರ್ಷದವರೆಗೆ ವಾರ್ಷಿಕ ವಿದ್ಯಾರ್ಥಿ ವೇತನವನ್ನು ಒದಗಿಸಲಾಗುತ್ತದೆ.

ಸುಕನ್ಯಾ ಸಮೃದ್ಧಿ (Sukanya Samriddhi) ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗೆ ಧನ ಸಹಾಯ ಮಾಡಲು ನೆರವಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಹೆಣ್ಣು ಮಗು ಮತ್ತು ಅವಳ ಆರ್ಥಿಕ ಅಗತ್ಯಗಳಿಗಾಗಿ ಸರ್ಕಾರದ ಬೆಂಬಲಿತ ಸಣ್ಣ ಡೆಪಾಸಿಟ್ ಯೋಜನೆಯಾಗಿದೆ. ‘ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನವನ್ನು ನೀಡುತ್ತದೆ. ಯೋಜನೆಯಿಂದ ಸಿಗುವ ಬಡ್ಡಿ ಅಥವಾ ಉಳಿತಾಯ ಹಣಕ್ಕೆ ತೆರಿಗೆ ಕಟ್ಟುವ ಆವಶ್ಯಕತೆ ಕೂಡ ಇರುವುದಿಲ್ಲ. ಹೆಣ್ಣು ಮಗುವಿನ ಜನನದ ನಂತರ ಆಕೆ 10 ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು, ಅಲ್ಲಿ ನೀವು ಕನಿಷ್ಠ 250 ರೂಪಾಯಿಗಳನ್ನು ಡೆಪಾಸಿಟ್ ಮಾಡಬೇಕಾಗುತ್ತದೆ. ನಂತರದ ವರ್ಷಗಳಲ್ಲಿ, ಕನಿಷ್ಠ 250 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ. ಒಂದು ಆರ್ಥಿಕ ವರ್ಷದಲ್ಲಿ ಡೆಪಾಸಿಟ್ ಇಡಬೇಕು.

ಮಾಧ್ಯಮಿಕ ಶಿಕ್ಷಣದ ಬಾಲಕಿಯರಿಗೆ ರಾಷ್ಟ್ರೀಯ ಪ್ರೋತ್ಸಾಹಕ (National Scheme of Incentive for Girls of Secondary Education) ಯೋಜನೆ

ಶಿಕ್ಷಣ ವಂಚಿತ ಹುಡುಗಿಯರ ಮಾಧ್ಯಮಿಕ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹಿಸುವ ಈ ಯೋಜನೆಯು 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ 3,000 ರೂ.ಗಳ ಸ್ಥಿರ ಠೇವಣಿಯನ್ನು ನೀಡುತ್ತದೆ. ಅರ್ಹ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು, 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ: Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್‌ ಅಪ್‌ ಲೋನ್‌ಗೆ ಅಪ್ಲೈ ಮಾಡಿ

ಇದಲ್ಲದೆ ವಿವಿಧ ರಾಜ್ಯಗಳಲ್ಲಿಯೂ ಹೆಣ್ಣು ಮಕ್ಕಳಿಗೆ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ. ಕರ್ನಾಟಕದ ಭಾಗ್ಯಶ್ರೀ ಯೋಜನೆ, ಮಧ್ಯಪ್ರದೇಶದ ಲಾಡ್ಲಿ ಲಕ್ಷ್ಮೀ ಯೋಜನೆ, ಮಹಾರಾಷ್ಟ್ರದ ಮಾಝಿ ಕನ್ಯಾ ಭಾಗ್ಯಶ್ರೀ ಯೋಜನೆ, ತಮಿಳುನಾಡಿನ ಮುಖ್ಯಮಂತ್ರಿಯ ಹೆಣ್ಣು ಮಕ್ಕಳ ರಕ್ಷಣೆ ಯೋಜನೆ ಇತ್ಯಾದಿ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿವೆ.

Continue Reading
Advertisement
Kim Jong Un
ವಿದೇಶ12 mins ago

Kim Jong Un: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಸುಖಕ್ಕೆ ಬೇಕು ಪ್ರತಿ ವರ್ಷ 25 ಹುಡುಗಿಯರು! ಏನಿದು ಆಹ್ಲಾದ ತಂಡ?

Hassan Pen Drive case Prajwal Revanna case
ಪ್ರಮುಖ ಸುದ್ದಿ53 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಮೇಲೆ ಮೈಸೂರಿನಲ್ಲೂ ಒಂದು ಕೇಸ್‌; ತಾಯಿ ಮೇಲೆ ಲೈಂಗಿಕ ಕಿರುಕುಳ, ಅಪಹರಣ ಎಂದು ದೂರು ನೀಡಿದ ಮಗ

Health Tips Kannada
ಆರೋಗ್ಯ1 hour ago

Health Tips Kannada: ಕೊಲೆಸ್ಟ್ರಾಲ್‌ ತಗ್ಗಿಸಲು ಈ ಬೆಳಗಿನ ಪೇಯಗಳಿಂದ ಸಾಧ್ಯ! ಪ್ರಯತ್ನಿಸಿ

Karnataka Weather Forecast
ಮಳೆ2 hours ago

Karnataka Weather : ಭಯಂಕರ ಬಿಸಿಲಿನಲ್ಲೂ ಮಳೆ ಸೂಚನೆ ಕೊಟ್ಟ ಹವಾಮಾನ ತಜ್ಞರು

Religious Freedom
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಅಮೆರಿಕದ ಬುದ್ಧಿಗೇಡಿಗಳ ವರದಿಯಲ್ಲಿ ಭಾರತದ ಬಗ್ಗೆ ಹಸಿ ಸುಳ್ಳುಗಳು

Health Tips Kannada
ಆರೋಗ್ಯ2 hours ago

Health Tips Kannada: ಕಣ್ಣಿನ ಕೆಳಗೆ ಕಪ್ಪಾಗಿದೆಯೇ? ಇಲ್ಲಿದೆ ಸರಳ ಮನೆಮದ್ದು

Dina Bhavishya
ಭವಿಷ್ಯ3 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Lok Sabha Election
ಪ್ರಮುಖ ಸುದ್ದಿ8 hours ago

Lok Sabha Election : ಕುರುಬರಿಗೆ ಟಿಕೆಟ್ ಕೊಡದ ಮೋದಿ ಕಂಬಳಿ ತೊಟ್ಟು ಡ್ರಾಮಾ ಆಡ್ತಾರೆ: ಸಿದ್ದರಾಮಯ್ಯ

Tsering Namgyal
ದೇಶ8 hours ago

Tsering Namgyal: ಲಡಾಕ್‌ನಲ್ಲಿ ತ್ಸೆರಿಂಗ್‌ ನಾಮ್‌ಗ್ಯಾಲ್‌ಗೆ ಟಿಕೆಟ್‌ ಕೊಟ್ಟ ಕಾಂಗ್ರೆಸ್; ಭಾರಿ ಹೈಡ್ರಾಮಾ

IPL 2024
ಪ್ರಮುಖ ಸುದ್ದಿ8 hours ago

IPL 2024 : ರಾಜಸ್ಥಾನ್ ವಿರುದ್ಧ ಎಸ್​​ಆರ್​ಎಚ್​​ ತಂಡಕ್ಕೆ ರೋಚಕ 1 ರನ್ ಗೆಲುವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ13 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌