SIP : SIP ಹೂಡಿಕೆ ಮೂಲಕ 10 ಕೋಟಿ ರೂ. ಗಳಿಸುವುದು ಹೇಗೆ? - Vistara News

ಮನಿ ಗೈಡ್

SIP : SIP ಹೂಡಿಕೆ ಮೂಲಕ 10 ಕೋಟಿ ರೂ. ಗಳಿಸುವುದು ಹೇಗೆ?

ಮ್ಯೂಚುವಲ್‌ ಫಂಡ್‌ ಸೇರಿದಂತೆ ನಾನಾ ಉಳಿತಾಯ ಸಾಧನಗಳಲ್ಲಿ ನಿಯಮಿತವಾಗಿ ದೀರ್ಘಕಾಲೀನ ಹೂಡಿಕೆ ಮಾಡುವ ಮೂಲಕ ಕೋಟ್ಯಂತರ ರೂ. ಆದಾಯ ಗಳಿಸಬಹುದು. ಸಿಪ್‌ ಮೂಲಕ 10 ಕೋಟಿ ರೂ. ಗಳಿಸಲು ಏನು ಮಾಡಬೇಕು? ಇಲ್ಲಿದೆ (SIP) ಉಪಯುಕ್ತ ವಿವರ.

VISTARANEWS.COM


on

cash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

FD interest rate: ಬಜಾಜ್ ಫೈನಾನ್ಸ್ ಹೆಚ್ಚಿನ ಅವಧಿಯ ಸ್ಥಿರ ಠೇವಣಿ ಬಡ್ಡಿ ದರಗಳಲ್ಲಿ ಏರಿಕೆ

FD interest rate: ಬಜಾಜ್ ಫಿನ್ ಸರ್ವ್ ಲಿಮಿಟೆಡ್‌ನ ಭಾಗವಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್, ಹೆಚ್ಚಿನ ಅವಧಿಗಳಲ್ಲಿ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿ ದರಗಳನ್ನು ಹೆಚ್ಚಿಸಿರುವುದಾಗಿ ಘೋಷಿಸಿದೆ.

VISTARANEWS.COM


on

Bajaj Finance hikes interest rates on long-term fixed deposits
Koo

ಪುಣೆ/ಮುಂಬೈ: ದೇಶದ ಅತಿದೊಡ್ಡ ಹಣಕಾಸು ಸೇವೆಗಳ ಸಂಸ್ಥೆಗಳಲ್ಲಿ ಒಂದಾದ ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಭಾಗವಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್ (Bajaj Finance), ಹೆಚ್ಚಿನ ಅವಧಿಗಳಲ್ಲಿ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿ ದರಗಳನ್ನು (FD interest rate) ಹೆಚ್ಚಿಸಿರುವುದಾಗಿ ಘೋಷಿಸಿದೆ.

ಏಪ್ರಿಲ್ 3, 2024 ರಿಂದ ಜಾರಿಗೆ ಬರುವಂತೆ, ಕಂಪನಿಯು ಹಿರಿಯ ನಾಗರಿಕರಿಗೆ ಎಫ್‌ಡಿ ದರಗಳನ್ನು 25 ರಿಂದ 35 ತಿಂಗಳ ಅಧಿಕಾರಾವಧಿಯಲ್ಲಿ 60 ಬೇಸಿಸ್ ಪಾಯಿಂಟ್‌ಗಳವರೆಗೆ ಮತ್ತು 18 ರಿಂದ 24 ತಿಂಗಳ ಅಧಿಕಾರಾವಧಿಯಲ್ಲಿ 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.

ಹಿರಿಯ ನಾಗರಿಕರಲ್ಲದವರಿಗೆ 25 ರಿಂದ 35 ತಿಂಗಳ ಅವಧಿಗೆ 45 ಬೇಸಿಸ್ ಪಾಯಿಂಟ್‌ಗಳು, 18 ಮತ್ತು 22 ತಿಂಗಳ ಅವಧಿಗೆ 40 ಬೇಸಿಸ್ ಪಾಯಿಂಟ್‌ಗಳು ಮತ್ತು 30 ಮತ್ತು 33 ತಿಂಗಳ ಅವಧಿಗೆ 35 ಬೇಸಿಸ್ ಪಾಯಿಂಟ್‌ಗಳವರೆಗೆ ಬಡ್ಡಿ ದರಗಳನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ: Gold Rate Today : ಬಂಗಾರದ ಬೆಲೆ ಏರುತ್ತಲೇ ಇದೆ; ಖರೀದಿಗೆ ಮೊದಲು ಇಲ್ಲಿರುವ ದರಪಟ್ಟಿ ನೋಡಿ

ಈ ಕ್ರಮವು ಚಾಲ್ತಿಯಲ್ಲಿರುವ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಸ್ಥಿರ ಮತ್ತು ಉತ್ತಮ ಆದಾಯವನ್ನು ಪಡೆಯಲು ಉಳಿತಾಯದಾರರಿಗೆ ಅವಕಾಶವನ್ನು ಒದಗಿಸುತ್ತದೆ. ಹಿರಿಯ ನಾಗರಿಕರು 42 ತಿಂಗಳ ಅವಧಿಯಲ್ಲಿ ಡಿಜಿಟಲ್ ಆಗಿ ಬುಕಿಂಗ್ ಮಾಡುವ ಮೂಲಕ 8.85% ವರೆಗೆ ಎಫ್‌ಡಿ ಬಡ್ಡಿ ದರಗಳನ್ನು ಪಡೆಯುವುದನ್ನು ಮುಂದುವರಿಸಬಹುದು ಮತ್ತು ಹಿರಿಯ ನಾಗರಿಕರಲ್ಲದವರು 8.60% ವರೆಗೆ ದರಗಳ ಲಾಭವನ್ನು ಪಡೆಯಬಹುದು.

ಈ ಕುರಿತು ಬಜಾಜ್ ಫೈನಾನ್ಸ್‌ನ ಫಿಕ್ಸ್‌ಡ್ ಡೆಪಾಸಿಟ್ ಮತ್ತು ಇನ್ವೆಸ್ಟ್‌ಮೆಂಟ್ಸ್ ಮುಖ್ಯಸ್ಥ ಸಚಿನ್ ಸಿಕ್ಕಾ ಮಾತನಾಡಿ, “ಹಲವಾರು ಹೂಡಿಕೆ ಆಯ್ಕೆಗಳಲ್ಲಿ ನಮ್ಮ ವರ್ಧಿತ ದರಗಳು ಸ್ಥಿರತೆಯನ್ನು ಬಯಸುವ ಹೂಡಿಕೆದಾರರಿಗೆ ಆಕರ್ಷಕ ಪ್ರಸ್ತಾಪವನ್ನು ಪ್ರಸ್ತುತಪಡಿಸುತ್ತವೆ. ವರ್ಷಗಳಲ್ಲಿ, ಲಕ್ಷಾಂತರ ಠೇವಣಿದಾರರು ಬಜಾಜ್ ಬ್ರಾಂಡ್‌ನಲ್ಲಿ ನಂಬಿಕೆ ಇಟ್ಟಿದ್ದಾರೆ. ಅವರಿಗೆ ಉತ್ತಮ ಅನುಭವ, ಹೆಚ್ಚಿನ ಮೌಲ್ಯ ಮತ್ತು ಅವರ ಉಳಿತಾಯಕ್ಕೆ ಸುರಕ್ಷಿತ ಆಯ್ಕೆಯನ್ನು ನೀಡುವತ್ತ ನಾವು ಗಮನ ಹರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮಾರ್ಚ್ 31, 2024 ರ ವೇಳೆಗೆ ಬಜಾಜ್ ಫೈನಾನ್ಸ್‌ನ ಗ್ರಾಹಕ ಫ್ರ್ಯಾಂಚೈಸ್ ಸುಮಾರು 83.64 ಎಂಎಂ ಆಗಿತ್ತು. ಮಾರ್ಚ್ 31, 2024 ರ ವೇಳೆಗೆ 60,000 ಕೋಟಿ ರೂ. ಗಿಂತ ಹೆಚ್ಚಿನ ಠೇವಣಿಯೊಂದಿಗೆ ಕಂಪನಿಯು ದೇಶದ ಅತಿದೊಡ್ಡ ಠೇವಣಿ ತೆಗೆದುಕೊಳ್ಳುವ ಎನ್‌ಬಿಎಫ್‌ಸಿ ಯಾಗಿ ಹೊರಹೊಮ್ಮಿದೆ.

ಡಿಸೆಂಬರ್ 31, 2023 ರ ವೇಳೆಗೆ ಅದರ ಅಪ್ಲಿಕೇಶನ್ ಪ್ಲಾಟ್‌ ಫಾರ್ಮ್‌ನಲ್ಲಿ ನಿವ್ವಳ ಬಳಕೆದಾರರು 49.19 ಮಿಲಿಯನ್ ಆಗಿದ್ದರು. ಡೇಟಾ.ಐಓ ವರದಿಯ ಪ್ರಕಾರ, ಬಜಾಜ್ ಫಿನ್ ಸರ್ವ್ ಅಪ್ಲಿಕೇಶನ್ ಭಾರತದ ಪ್ಲೇಸ್ಟೋರ್‌ನಲ್ಲಿ ಹಣಕಾಸು ಡೊಮೇನ್‌ನಲ್ಲಿ 4ನೇ ಅತಿ ಹೆಚ್ಚು ಡೌನ್ ಲೋಡ್ ಮಾಡಲಾದ ಅಪ್ಲಿಕೇಶನ್ ಎಂಬ ಹಿರಿಮೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Road Accident: ಭೀಕರ ರಸ್ತೆ ಅಪಘಾತ; 5 ಶಾಲಾ ವಿದ್ಯಾರ್ಥಿಗಳ ಸಾವು

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಪ್ರೋಗ್ರಾಂ ಕ್ರಿಸಿಲ್‌ನ ಎಎಎ/ಸ್ಥಿರ ಮತ್ತು ಐಸಿಆರ್‌ಎಎಸ್‌ನ ಎಎಎ (ಸ್ಥಿರ) ನೊಂದಿಗೆ ಅತ್ಯುನ್ನತ ಸ್ಥಿರತೆಯ ರೇಟಿಂಗ್‌ಗಳನ್ನು ಹೊಂದಿದೆ, ಇದು ಹೂಡಿಕೆದಾರರಿಗೆ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಕಂಪನಿಯ ಅಪ್ಲಿಕೇಶನ್ ಹೂಡಿಕೆ ಮಾರುಕಟ್ಟೆಯನ್ನು ಸಹ ನೀಡುತ್ತದೆ, ಅಲ್ಲಿ ಗ್ರಾಹಕರು ವ್ಯಾಪಕ ಶ್ರೇಣಿಯ ಮ್ಯೂಚುವಲ್ ಫಂಡ್‌ಗಳನ್ನು ಪ್ರವೇಶಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಮನಿ ಗೈಡ್

Aadhaar ATM: ಬ್ಯಾಂಕ್‌ಗೆ ಹೋಗಬೇಕಿಲ್ಲ, ಎಟಿಎಂ ಕಾರ್ಡ್‌ ಬೇಕಿಲ್ಲ; ಮನೆಗೇ ಹಣ ತರಿಸಿಕೊಳ್ಳಬಹುದು!

Aadhaar ATM: ಹಣದ ಅವಶ್ಯಕತೆ ಇದ್ದಾಗ ಬ್ಯಾಂಕ್ ಅಥವಾ ಎಟಿಎಂಗೆ ಹೋಗಲು ಸಮಯ ಇಲ್ಲದೇ ಇದ್ದಾಗ ಮನೆಗೆ ಹಣ ತರಿಸಿಕೊಳ್ಳಬಹುದು. ಇದಕ್ಕೆ ಸಹಾಯ ಮಾಡುತ್ತದೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತೇ?

VISTARANEWS.COM


on

By

Aadhaar ATM
Koo

ಕಾರ್ಡ್, ಫೋನ್ ವಹಿವಾಟು ಎಷ್ಟೇ ಚಾಲ್ತಿಯಲ್ಲಿದ್ದರೂ ಕೆಲವೊಮ್ಮೆ ನಗದು (cash) ಸ್ವಲ್ಪವಾದರೂ ಕೈಯಲ್ಲಿ ಬೇಕಾಗುತ್ತದೆ. ಆದರೆ ಈಗ ಎಲ್ಲರೂ ಬ್ಯುಸಿ. ಬ್ಯಾಂಕ್ (bank), ಎಟಿಎಂಗೆ (ATM) ಹೋಗಲು ಪುರುಸೊತ್ತಿಲ್ಲ. ಸುರಕ್ಷತೆ ಹಿನ್ನೆಲೆಯಲ್ಲಿ ಬ್ಯಾಂಕ್ ಕಾರ್ಡ್ ಗಳನ್ನು ಇನ್ನೊಬ್ಬರ ಕೈಗೆ ಕೊಡುವ ಹಾಗಿಲ್ಲ. ಹೀಗಿರುವಾಗ ತುರ್ತು ಹಣ ಬೇಕಾದಾಗ ಏನು ಮಾಡುವುದು ಎನ್ನುವ ಚಿಂತೆ ಇನ್ನು ಬೇಡ. ಯಾಕೆಂದರೆ ಆಧಾರ್ ಎಟಿಎಂ (Aadhaar ATM) ಇದ್ದರೆ ಸಾಕು ಮನೆಯಲ್ಲೇ ಕುಳಿತು ಹಣವನ್ನು ಪಡೆಯಬಹುದು.

ನಗದು ಹಣದ ಅವಶ್ಯಕತೆ ಇದ್ದಾಗ ಬ್ಯಾಂಕ್ ಅಥವಾ ಎಟಿಎಂಗೆ ಭೇಟಿ ನೀಡಲು ಸಮಯವಿಲ್ಲದೇ ಇದ್ದಾಗ ಐಪಿಪಿಬಿ (ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್- IPPB) ಆನ್‌ಲೈನ್ ಆಧಾರ್ ಎಟಿಎಂ (AEPS) ಸೇವೆಯನ್ನು ಬಳಸಿಕೊಂಡು ಮನೆಯಲ್ಲೇ ಕುಳಿತು ಹಣವನ್ನು ಪಡೆಯಬಹುದು.

ಈ ಕುರಿತು ಎಕ್ಸ್ ನಲ್ಲಿ (X) ಮಾಹಿತಿ ನೀಡಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತುರ್ತು ನಗದು ಅಗತ್ಯವಿದ್ದಾಗ ಬ್ಯಾಂಕ್‌ಗೆ ಭೇಟಿ ನೀಡಲು ಸಮಯವಿಲ್ಲದೇ ಇದ್ದಾಗ PPBONLine ಆಧಾರ್ ATM (AePS) ಸೇವೆಯನ್ನು ಬಳಸಿಕೊಂಡು ಮನೆಯಲ್ಲೇ ಕುಳಿತು ಹಣವನ್ನು ಪಡೆಯಬಹುದು. ಆಗ ಪೋಸ್ಟ್‌ಮ್ಯಾನ್ (postman) ನಿಮ್ಮ ಮನೆ ಬಾಗಿಲಿಗೆ ಬಂದು ಹಣವನ್ನು ನೀಡುತ್ತಾರೆ ಎಂದು ಹೇಳಿದೆ.

ಇದನ್ನು ಓದಿ: Silver price: ಗಗನಕ್ಕೇರುತ್ತಿದೆ ಬೆಳ್ಳಿ ದರ; ಹೂಡಿಕೆ ಮಾಡಲು ಇದು ಸಕಾಲ

ಆಧಾರ್ ಎಟಿಎಂ ಹೇಗೆ ಕೆಲಸ ಮಾಡುತ್ತದೆ ?

ಆಧಾರ್ ಎಟಿಎಂ ಅಥವಾ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯನ್ನು (AEPS) ಬಯೋಮೆಟ್ರಿಕ್‌ನೊಂದಿಗೆ ಮಾತ್ರ ಬಳಸಬಹುದು ಮತ್ತು ಆಧಾರ್-ಲಿಂಕ್ ಮಾಡಿದ ಖಾತೆಯಿಂದ ಹಣವನ್ನು ಪಡೆಯಬಹುದು ಅಥವಾ ಪಾವತಿಗಳನ್ನು ಮಾಡಬಹುದು.

Aadhaar ATM


Aadhaar Enabled Payment System (AEPS) ಎಂಬುದು ಪಾವತಿ ಸೇವೆಯಾಗಿದೆ. ಆಧಾರ್ ಮೂಲಕ ಸಕ್ರಿಯಗೊಳಿಸಿರುವ ಬ್ಯಾಂಕ್ ಗ್ರಾಹಕರು ಅದನ್ನೇ ಗುರುತಾಗಿ ಇಟ್ಟುಕೊಂಡು ಬ್ಯಾಂಕ್ ಖಾತೆಯನ್ನು ಪ್ರವೇಶಿಸಲು, ಬ್ಯಾಲೆನ್ಸ್ ವಿಚಾರಣೆ, ನಗದು ಹಿಂಪಡೆಯುವಿಕೆಯಂತಹ ಮೂಲಭೂತ ಬ್ಯಾಂಕಿಂಗ್ ವಹಿವಾಟುಗಳನ್ನು ನಿರ್ವಹಿಸಬಹುದು.


ಯಾವ ಸೇವೆ ಪಡೆಯಬಹುದು?

ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ ಮೂಲಕ ಗ್ರಾಹಕರು ನಗದು ಹಿಂಪಡೆಯುವಿಕೆ, ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್ ಮೆಂಟ್ ಮತ್ತು ಆಧಾರ್‌ ಮೂಲಕ ಆಧಾರ್ ನಿಧಿ ವರ್ಗಾವಣೆ ಮಾಡಬಹುದಾಗಿದೆ.

ಸೇವೆ ಪಡೆಯುವುದು ಹೇಗೆ?

ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯನ್ನು ಬಳಸಬೇಕೆಂದು ಬಯಸಿದರೆ ಇದಕ್ಕಾಗಿ AEPS ಸೇವೆಯನ್ನು ನೀಡುವ ಬ್ಯಾಂಕ್‌ ನಲ್ಲಿ ಖಾತೆಯನ್ನು ಹೊಂದಿರಬೇಕು. ಬ್ಯಾಂಕ್‌ಗೆ ಲಿಂಕ್ ಮಾಡಲಾದ ಆಧಾರ್ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಮಾಡಿರಬೇಕು.

ಶುಲ್ಕಗಳು ಹೇಗಿದೆ ?

ಇಂಡಿಯನ್ ಪೋಸ್ಟ್ ಪೇಮೆಂಟ್ ಪೇಮೆಂಟ್ ಬ್ಯಾಂಕ್ ನೀಡುವ ವಿವಿಧ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ ಸೇವೆಗಳಿಗೆ ಗ್ರಾಹಕರಿಗೆ ಯಾವುದೇ ವಹಿವಾಟು ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ ಚಾಲ್ತಿಯಲ್ಲಿರುವ ಶುಲ್ಕಗಳ ಪ್ರಕಾರ ಡೋರ್‌ಸ್ಟೆಪ್ ಸೇವಾ ಶುಲ್ಕಗಳು ಅನ್ವಯವಾಗುತ್ತದೆ.

Continue Reading

ವಾಣಿಜ್ಯ

Silver price: ಗಗನಕ್ಕೇರುತ್ತಿದೆ ಬೆಳ್ಳಿ ದರ; ಹೂಡಿಕೆ ಮಾಡಲು ಇದು ಸಕಾಲ

Silver price: ಕೆಲವು ವರ್ಷಗಳಿಂದ ಚಿನ್ನಕ್ಕೆ ಪೈಪೋಟಿ ಮಾಡುವಂತೆ ಏರಿಕೆಯಾಗುತ್ತಿದೆ. ಹೀಗೆ ಮುಂದುವರಿದರೆ ಬೆಳ್ಳಿಯ ದರ ಮುಂದಿನ ಕೆಲವು ತಿಂಗಳುಗಳಲ್ಲಿ 1 ಲಕ್ಷ ರೂ. ಗಡಿಯನ್ನೂ ತಲುಪಬಹುದು. ಹೀಗಾಗಿ ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಇದು ಸರಿಯಾದ ಸಮಯವಾಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

VISTARANEWS.COM


on

By

Silver price
Koo

ಬೆಂಗಳೂರು: ಚಿನ್ನದ (gold) ಹೊರತಾಗಿ ಎಲ್ಲರೂ ಇಷ್ಟಪಡುವ ಬೆಳ್ಳಿ ಬೆಲೆ (Silver price) ಕೂಡ ಈಗ ಗಗನಕ್ಕೆ ಏರುತ್ತಿದೆ. ಹೀಗೆ ಮುಂದುವರಿದರೆ ಬೆಳ್ಳಿ ದರ ಕೆ.ಜಿ. ಗೆ 1 ಲಕ್ಷ ರೂ.ವರೆಗೂ ತಲುಪಬಹುದು. ರಾಜಕೀಯ, ಭೌಗೋಳಿಕ ಉದ್ವಿಗ್ನತೆ ಮತ್ತು ಮಾರುಕಟ್ಟೆಯಲ್ಲಿ ಉಂಟಾದ ತಲ್ಲಣಗಳ ಕಾರಣದಿಂದ ಕಳೆದ ಕೆಲವು ಸಮಯಗಳಿಂದ ಬೆಳ್ಳಿ ಬೆಲೆಯೂ ಚಿನ್ನಕ್ಕೆ ಪೈಪೋಟಿ ನೀಡುವಂತೆ ಏರಿಕೆಯಾಗುತ್ತಿದೆ ಎಂಬುದನ್ನು ಆರ್ಥಿಕ ಅಂಕಿ ಅಂಶಗಳು ತೋರಿಸುತ್ತಿವೆ.

ಕಳೆದ ವರ್ಷದಿಂದ ಬೆಳ್ಳಿಯ ಬೆಲೆಗಳಲ್ಲಿ ಶೇ. 7.19ರಷ್ಟು ಹೆಚ್ಚಾಗಿದ್ದರೆ ಚಿನ್ನದ ಬೆಲೆ ಶೇ. 13ರಷ್ಟು ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಬೆಳ್ಳಿಯ ದರದಲ್ಲಿ ಸರಿಸುಮಾರು ಶೇ. 11ರಷ್ಟು ಮತ್ತು ಚಿನ್ನದ ಬೆಲೆಯಲ್ಲಿ ಶೇ. 15ರಷ್ಟು ಏರಿಕೆಯಾಗಿದೆ. ಏಪ್ರಿಲ್ 8ರಂದು ಬೆಳ್ಳಿ ಪ್ರತಿ ಕೆ.ಜಿ. ಗೆ 81,313 ರೂಪಾಯಿಗಳಾಗಿದ್ದರೆ, ಚಿನ್ನದ ದರ 10 ಗ್ರಾಂಗೆ 70,850 ರೂ.ಗಳಾಗಿದೆ.

ಇದನ್ನೂ ಓದಿ: Amul Chocolates: ಶೀಘ್ರವೇ ದುಬಾರಿಯಾಗಲಿದೆ ಅಮೂಲ್ ಚಾಕೊಲೇಟ್, ಐಸ್‌ಕ್ರೀಮ್‌!

ಹೂಡಿಕೆಗೆ ಇದು ಸಕಾಲ

ಬೆಳ್ಳಿಯ ಮೇಲೆ ಹೂಡಿಕೆಗೆ ಇದು ಸಕಾಲ. ಈಗ ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಸಕಾಲ. ಕಳೆದ ಕೆಲವು ತಿಂಗಳುಗಳಿಂದ ಬೆಳ್ಳಿಯ ದರ ಏರಿಕೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಮೂಡಿಸಿದೆ ಎಂದು ವಿತ್ತ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.


ಇದು ಕೆಲವು ವರ್ಷಗಳವರೆಗೆ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ನಾವು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಸಲಹೆ ನೀಡುತ್ತೇವೆ ಮತ್ತು ಬೆಳ್ಳಿ ದರ ಕೆ.ಜಿ 92,000 ರೂ. ನಿಂದ 1 ಲಕ್ಷ ರೂ. ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಒಂದುವೇಳೆ ಕುಸಿತವಾದರೂ. 75,000 ರೂ. ಗಿಂತ ಕಡಿಮೆ ಆಗಲಾರದು ಎಂದು ಪರಿಣತರು ಹೇಳಿದ್ದಾರೆ.

ಬೆಳ್ಳಿ ದರ ಏಕೆ ಹೆಚ್ಚಾಗುತ್ತಿದೆ?

ಕೋವಿಡ್ ಸಾಂಕ್ರಾಮಿಕ, ಯುದ್ಧದಂತಹ ಭೂರಾಜಕೀಯ ಉದ್ವಿಗ್ನತೆಗಳು 2020ರಿಂದ ಮಾರುಕಟ್ಟೆಯ ಮೇಲೆ ಅಪಾರ ಪರಿಣಾಮ ಬೀರಿದೆ. 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ, ಕಳೆದ ವರ್ಷ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮತ್ತು ಇತರ ಉದ್ವಿಗ್ನತೆಗಳು ಭೌಗೋಳಿಕ ರಾಜಕೀಯ ಅನಿಶ್ಚಿತತೆ, ಮಾರುಕಟ್ಟೆಯ ತಲ್ಲಣವನ್ನು ಹೆಚ್ಚಿಸಿದೆ. ಹೀಗಾಗಿ ಬೆಳ್ಳಿಯ ಮೇಲೆ ಸುರಕ್ಷಿತ ಹೂಡಿಕೆಗೆ ಬೇಡಿಕೆಯನ್ನು ಹೆಚ್ಚಿಸಿದೆ ಬೆಳ್ಳಿ ಕೇವಲ ಧರಿಸುವ ಆಭರಣಗಳಾಗಿ ಮಾತ್ರ ಬಳಕೆಯಾಗುತ್ತಿಲ್ಲ. ಎಲೆಕ್ಟ್ರಾನಿಕ್ಸ್, ಸೌರಶಕ್ತಿ ಮತ್ತು ಆರೋಗ್ಯ ರಕ್ಷಣೆಯಂತಹ ವಲಯಗಳಲ್ಲೂ ಇದಕ್ಕೆ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿಯ ವಾರ್ಷಿಕ ಪೂರೈಕೆಯು ಕಳೆದ 10 ವರ್ಷಗಳಲ್ಲಿ ಹೆಚ್ಚಾಗಿಲ್ಲ. ಯಾಕೆಂದರೆ ಪ್ರಾಥಮಿಕ ಬೆಳ್ಳಿಯ ನಿಕ್ಷೇಪಗಳನ್ನು ಕಂಡುಹಿಡಿಯುವುದು ಕಷ್ಟ. ಅಲ್ಲದೇ ಆಟೋಮೋಟಿವ್ ಉದ್ಯಮದಲ್ಲಿ ಎಲೆಕ್ಟ್ರಾನಿಕ್ ಘಟಕಗಳ ಮತ್ತು ಬ್ಯಾಟರಿ ಚಾರ್ಜಿಂಗ್ ಮೂಲಸೌಕರ್ಯದಲ್ಲಿ ಬೆಳ್ಳಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಹೀಗಾಗಿ ಬೆಳ್ಳಿ ದರಗಳಲ್ಲಿ ಗಣನೀಯ ಏರಿಕೆಯಾಗುತ್ತಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.

Continue Reading

ವಾಣಿಜ್ಯ

Money Guide : ತಿಂಗಳಿಗೆ 12 ಸಾವಿರಕ್ಕೂ ಹೆಚ್ಚು ಪಿಂಚಣಿ; ಎಲ್​​ಐಸಿ ಪರಿಚಯಿಸಿದೆ ಹೊಸ ಯೋಜನೆ

LIC Pension Scheme: ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹಲವಾರು ದಶಕಗಳಿಂದ ಭಾರತೀಯರಿಗೆ ವಿಶ್ವಾಸಾರ್ಹ ವಿಮಾ ಕಂಪೆನಿಯಾಗಿ ಗುರುತಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಪಿಂಚಣಿ ಭದ್ರತೆಯ ಹೆಚ್ಚುತ್ತಿರುವ ಅಗತ್ಯವನ್ನು ಗುರುತಿಸಿರುವ ಎಲ್ ಇಸಿ ಸರಳ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ.

VISTARANEWS.COM


on

By

LIC Pension Scheme
Koo

ಹೊಸದಿಲ್ಲಿ: ಇತ್ತಿಚಿನ ಕೆಲವು ವರ್ಷಗಳಲ್ಲಿ ಖಾಸಗಿ ವಲಯದ ಉದ್ಯೋಗಗಳು ಆಕರ್ಷಕ ವೇತನವನ್ನು ನೀಡಿದರೂ ಅವುಗಳಲ್ಲಿ ಸಾಮಾನ್ಯವಾಗಿ ಪಿಂಚಣಿ (pension) ಸೌಲಭ್ಯವನ್ನು ಹೊಂದಿರುವುದಿಲ್ಲ. ಹೀಗಾಗಿ ಹೆಚ್ಚಿನ ಉದ್ಯೋಗಿಗಳು ಉತ್ತಮ ಪಿಂಚಣಿ ಯೋಜನೆ ಹುಡುಕಾಟದಲ್ಲಿರುತ್ತಾರೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (Life Insurance Corporation) ಹಲವಾರು ದಶಕಗಳಿಂದ ಭಾರತೀಯರಿಗೆ ವಿಶ್ವಾಸಾರ್ಹ ವಿಮಾ ಕಂಪೆನಿಯಾಗಿ ಗುರುತಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಪಿಂಚಣಿ ಭದ್ರತೆಯ ಹೆಚ್ಚುತ್ತಿರುವ ಅಗತ್ಯವನ್ನು ಗುರುತಿಸಿರುವ ಎಲ್ ಇಸಿ ಸರಳ ಪಿಂಚಣಿ ಯೋಜನೆಯನ್ನು (LIC Pension Scheme) ಪ್ರಾರಂಭಿಸಿದೆ (Money Guide).

ಎಲ್ಐಸಿ ಸರಳ ಪಿಂಚಣಿ ಯೋಜನೆಯು ಹೂಡಿಕೆ ಮತ್ತು ನಿವೃತ್ತಿ ಜೀವನದಲ್ಲಿ ನಿರ್ದಿಷ್ಟ ಆದಾಯವನ್ನು ಹೊಂದಬೇಕು ಎನ್ನುವ ಯೋಚನೆಯಲ್ಲಿರುವವರಿಗೆ ಇದೊಂದು ಉತ್ತಮ ಆಯ್ಕೆ.

ಎಲ್ಐಸಿ ಸರಳ ಪಿಂಚಣಿ ಯೋಜನೆ (LIC Saral Pension Scheme)

ಎಲ್ಐಸಿಯ ಸರಳ ಪಿಂಚಣಿ ಯೋಜನೆಯು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ಮಾರ್ಗಸೂಚಿಗಳ ಮೂಲಕ ಪ್ರಮಾಣಿತ ಯೋಜನೆಯಾಗಿದೆ. ಈ ಯೋಜನೆಯು ಪಾಲಿಸಿಯ ಪ್ರಾರಂಭದಲ್ಲೇ ನಿರ್ದಿಷ್ಟ ವಾರ್ಷಿಕ ದರಗಳನ್ನು ಖಾತರಿಪಡಿಸುತ್ತದೆ. ನಿವೃತ್ತಿಯ ಅನಂತರ ಜೀವಿತಾವಧಿಯಲ್ಲಿ ನಿಖರವಾದ ಪಿಂಚಣಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: Electronic voting machine: ಎಲೆಕ್ಟ್ರಾನಿಕ್ ಮತಯಂತ್ರ ಹೇಗೆ ಕೆಲಸ ಮಾಡುತ್ತೆ ಗೊತ್ತಾ ?

ಎರಡು ಆಯ್ಕೆ ಇದೆ

ಈ ಯೋಜನೆಯಲ್ಲಿ ಪಾಲಿಸಿದರನಿಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಒಂದು ಖರೀದಿ ಬೆಲೆಯ ಶೇ. 100ರಷ್ಟು ಲಾಭದೊಂದಿಗೆ ಜೀವನ ಪರ್ಯಂತ ಪಿಂಚಣಿ ಸೌಲಭ್ಯ ಹಾಗೂ ಇನ್ನೊಂದು ತನ್ನ ಮರಣದ ಬಳಿಕ ಅವಲಂಬಿತರಿಗೆ ಶೇ. 100ರಷ್ಟು ಆರ್ಥಿಕ ಭದ್ರತೆಯನ್ನು ಒದಗಿಸುವುದು. ಎರಡನೇ ಆಯ್ಕೆಯನ್ನು ವಿವಾಹಿತರು ತಮ್ಮ ಸಂಗಾತಿಗಾಗಿ ಆಯ್ಕೆ ಮಾಡಿಕೊಳ್ಳಬಹುದು.

LIC Pension Scheme


ಅರ್ಹತೆ

ಈ ಯೋಜನೆಯ ಅರ್ಹತೆ ಪಡೆಯಲು ಪಾಲಿಸಿದಾರರು 40 ರಿಂದ 80 ವರ್ಷ ವಯಸ್ಸಿನವರಾಗಿರಬೇಕು. ಖರೀದಿ ಬೆಲೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ.

ಕನಿಷ್ಠ ಮೊತ್ತ

ಎಲ್ಐಸಿ ಸರಳ ಪಿಂಚಣಿ ಯೋಜಯು ಮೂರು ಖರೀದಿ ಬೆಲೆಯ ಸ್ಲ್ಯಾಬ್‌ಗಳಿಗೆ ವಾರ್ಷಿಕ ದರಗಳನ್ನು ಹೆಚ್ಚಿಸುವುದರೊಂದಿಗೆ ಹೆಚ್ಚಿನ ಖರೀದಿ ಬೆಲೆಗಳಿಗೆ ಪ್ರೋತ್ಸಾಹವನ್ನು ಒದಗಿಸುತ್ತದೆ. ವಾರ್ಷಿಕ ಪಾವತಿಗಳ ಆಧಾರದಲ್ಲಿ ಪ್ರೋತ್ಸಾಹವು ಬದಲಾಗುತ್ತದೆ ಮತ್ತು ಪಾವತಿಯಲ್ಲಿನ ಕಡಿತದಲ್ಲೂ ವ್ಯತ್ಯಾಸವಾಗುತ್ತದೆ.

ನಿವೃತ್ತಿ ಯೋಜನೆ ಪ್ರಯೋಜನಗಳು

ಸರಳ ಪಿಂಚಣಿ ಯೋಜನೆಯು ನಿವೃತ್ತಿ ಯೋಜನೆಗೆ ಪರಿಹಾರವಾಗಿದೆ. ಪಿಎಫ್ ಮತ್ತು ನಿವೃತ್ತಿಯ ಅನಂತರ ಸಂಗ್ರಹವಾದ ಗ್ರಾಚ್ಯುಟಿ ಹಣವನ್ನು ಒಳಗೊಂಡು ಒಟ್ಟು ಮೊತ್ತದ ಹೂಡಿಕೆಗಳ ಮೂಲಕ ವಾರ್ಷಿಕವಾಗಿ ಖರೀದಿಗೆ ಅವಕಾಶವಿದೆ.

ಉದಾ- 42 ವರ್ಷ ವಯಸ್ಸಿನವರು 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಪಿಂಚಣಿಯಾಗಿ 12,388 ರೂಪಾಯಿಗಳನ್ನು ಪಡೆಯುತ್ತಾರೆ.

ವಿಶ್ವದ ನಂಬರ್ ಒನ್‌ ಜಾಗತಿಕ ವಿಮೆ ಬ್ರ್ಯಾಂಡ್ ಎಲ್‌ಐಸಿ

ಭಾರತದ ಬೃಹತ್‌ ಜೀವವಿಮೆ ಸಂಸ್ಥೆ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಜಾಗತಿಕವಾಗಿ ಪ್ರಬಲ ವಿಮಾ ಬ್ರಾಂಡ್ ಆಗಿದೆ. ಬ್ರಾಂಡ್ ಫೈನಾನ್ಸ್ ಇನ್ಶೂರೆನ್ಸ್ ಸಂಸ್ಥೆಯ 2024ರ ವರದಿ ಇದನ್ನು ತಿಳಿಸಿದೆ.

ಎಲ್ಐಸಿಯ ಬ್ರ್ಯಾಂಡ್ ಮೌಲ್ಯವು 9.8 ಶತಕೋಟಿ ಡಾಲರ್‌ಗಳಲ್ಲಿ ಸ್ಥಿರವಾಗಿದೆ. ಜೊತೆಗೆ ಬ್ರ್ಯಾಂಡ್ ಸಾಮರ್ಥ್ಯದ ಸೂಚ್ಯಂಕ ಸ್ಕೋರ್ 88.3ರಲ್ಲಿದ್ದು, AAA ಬ್ರ್ಯಾಂಡ್ ಸಾಮರ್ಥ್ಯದ ರೇಟಿಂಗ್ ಅನ್ನು ಹೊಂದಿದೆ.

ಎಲ್ ಇಸಿ ನಂತರದ ಶ್ರೇಯಾಂಕಗಳ ಪ್ರಕಾರ ಕ್ಯಾಥೆ ಲೈಫ್ ಇನ್ಶುರೆನ್ಸ್ ಎರಡನೇ ಪ್ರಬಲ ಬ್ರ್ಯಾಂಡ್ ಆಗಿದೆ. ಇದು ಬ್ರ್ಯಾಂಡ್ ಮೌಲ್ಯದಲ್ಲಿ 4.9 ಶತಕೋಟಿ ಡಾಲರ್‌ ಇದ್ದು, 9 ಶೇಕಡಾ ಹೆಚ್ಚಳ ಕಂಡಿದೆ. NRMA ಇನ್ಶುರೆನ್ಸ್ ನಂತರದ ಸ್ಥಾನದಲ್ಲಿದ್ದು, 82 ಸೂಚ್ಯಂಕ ಹಾಗೂ 1.3 ಶತಕೋಟಿ ಡಾಲರ್‌ ಬ್ರಾಂಡ್ ಮೌಲ್ಯ ಹೊಂದಿದೆ.

Continue Reading
Advertisement
Mahesh Babu SS Rajamouli return from Dubai
South Cinema15 mins ago

Mahesh Babu: ಹೇಗಿದೆ ಮಹೇಶ್‌ ಬಾಬು ಲುಕ್‌? ರಾಜಮೌಳಿ ಪ್ಲ್ಯಾನ್​ ಉಲ್ಟಾ!

MS Dhoni
ಪ್ರಮುಖ ಸುದ್ದಿ22 mins ago

MS Dhoni : ಸಿಎಸ್​ಕೆ ವಾರ್ಷಿಕೋತ್ಸವದಂದೇ 101 ಮೀಟರ್ ಸಿಕ್ಸರ್ ಬಾರಿಸಿದ ಧೋನಿ!

Modi In Karnataka
ಪ್ರಮುಖ ಸುದ್ದಿ42 mins ago

PM Narendra Modi: ಬೆಂಗಳೂರಿನಲ್ಲಿ ಇಂದು ಮೋದಿ; ಸಂಚಾರಕ್ಕೆ ಪರ್ಯಾಯ ರಸ್ತೆಗಳ ಸೂಚನೆ

MS Dhoni
ಪ್ರಮುಖ ಸುದ್ದಿ1 hour ago

MS Dhoni : ಧೋನಿ ಆಡಲು ಇಳಿದಾಗ ಸ್ಟೇಡಿಯಮ್​ನಲ್ಲಿ ಶಬ್ದ ಮಾಲಿನ್ಯ; ಡಿಕಾಕ್ ಹೆಂಡತಿಯ ಪೋಸ್ಟ್​ ವೈರಲ್​

Impact Player Rule
ಕ್ರೀಡೆ1 hour ago

Impact Player Rule : ಇಂಪ್ಯಾಕ್ಟ್​ ಪ್ಲೇಯರ್​​ ಸಿಕ್ಕಾಪಟ್ಟೆ ವಿರೋಧ; ಇದೀಗ ಋತುರಾಜ್​ ಸರದಿ

Tillu Square anupama parameswaran movie tillu square release date
ಒಟಿಟಿ2 hours ago

Tillu Square: ಅನುಪಮಾ ಪರಮೇಶ್ವರನ್‌‌ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗ

rowdy sheeters attack bangalore
ಕ್ರೈಂ2 hours ago

Rowdy Sheeters: ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಮಚ್ಚು ಲಾಂಗ್, ಬೀದಿಯಲ್ಲೇ ಅಟ್ಟಾಡಿಸಿದರು!

KL Rahul
ಪ್ರಮುಖ ಸುದ್ದಿ2 hours ago

KL Rahul : ಐಪಿಎಲ್​ನಲ್ಲಿ ಧೋನಿಯ ದಾಖಲೆಯೊಂದನ್ನು ಮುರಿದ ಕೆ. ಎಲ್ ರಾಹುಲ್​

Neha Murder Case dhruva sarja priya savadi and kavya shastry condemn
ಸಿನಿಮಾ2 hours ago

Neha Murder Case: ನೇಹಾ ಹತ್ಯೆ: ಅಪರಾಧಿಗೆ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ

IPL 2024
ಕ್ರೀಡೆ2 hours ago

IPL 2024 : ಸೋಲಿನ ಬಳಿಕ ಚೆನ್ನೈ ತಂಡದ ಅಂಕಪಟ್ಟಿಯಲ್ಲಿನ ಸ್ಥಾನವೆಷ್ಟು? ಇಲ್ಲಿದೆ ಎಲ್ಲ ವಿವರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ19 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20246 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ1 week ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

ಟ್ರೆಂಡಿಂಗ್‌