Infosys Work from home option is canceled for these employees in InfosysInfosys : ಇನ್ಫೋಸಿಸ್‌ನಲ್ಲಿ ಈ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಆಯ್ಕೆಯೇ ರದ್ದು

ವಾಣಿಜ್ಯ

Infosys : ಇನ್ಫೋಸಿಸ್‌ನಲ್ಲಿ ಈ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಆಯ್ಕೆಯೇ ರದ್ದು

Infosys ಇನ್ಫೋಸಿಸ್‌ ಅಮೆರಿಕ ಮತ್ತು ಕೆನಡಾದಲ್ಲಿ ವರ್ಕ್‌ ಫ್ರಮ್‌ ಹೋಮ್‌ ಪದ್ಧತಿಯನ್ನು ಅಂತ್ಯಗೊಳಿಸಿದೆ. ಕಚೇರಿಗೆ ಕಡ್ಡಾಯವಾಗಿ ಬರಲು ಸೂಚಿಸಿದೆ. ಇಲ್ಲಿದೆ ವಿವರ.

VISTARANEWS.COM


on

Infoysis
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಮೆರಿಕ ಮತ್ತು ಕೆನಡಾದಲ್ಲಿ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ (work from home) ಪದ್ಧತಿಯಲ್ಲಿ ಕೆಲಸ ಮಾಡುವ ಆಯ್ಕೆಯನ್ನು ಇನ್ಫೋಸಿಸ್‌ ರದ್ದುಪಡಿಸಿದೆ. ಹೀಗಾಗಿ ಕಚೇರಿಗೆ ಬಂದೇ ಟೆಕ್ಕಿಗಳು ಕೆಲಸ ಮಾಡುವುದು ಅನಿವಾರ್ಯವಾಗಿದೆ. ಒಂದು ವೇಳೆ ವರ್ಕ್‌ ಫ್ರಮ್‌ ಹೋಮ್‌ ಮಾಡುವುದಿದ್ದರೆ ಅದಕ್ಕೆ ವಿಶೇಷ ಅನುಮತಿ ಅಗತ್ಯ ಎಂದು ಕಂಪನಿ ತಿಳಿಸಿದೆ.

ವರ್ಕ್‌ ಫ್ರಮ್‌ ಹೋಮ್‌ ಕುರಿತ ಕಂಪನಿಯ ಹೊಸ ನೀತಿಯನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಇನ್ಫೋಸಿಸ್‌ ತಿಳಿಸಿದೆ. ಹೊಸ ನಿಯಮವು ಅಮೆರಿಕ ಮತ್ತು ಕೆನಡಾದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅನ್ವಯವಾಗಲಿದೆ. ಅಲ್ಲಿ 30,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

ಹೀಗಿದ್ದರೂ ಭಾರತದಲ್ಲಿ ಇರುವ ಉದ್ಯೋಗಿಗಳು ಕಚೇರಿಯಿಂದ ಕೆಲಸ ಮಾಡಬೇಕಾದ ಅಗತ್ಯ ಇಲ್ಲ. ಕಳೆದ ನವೆಂಬರ್‌ನಲ್ಲಿ ಉದ್ಯೋಗಿಗಳಿಗೆ ಮೂರು ಹಂತಗಳಲ್ಲಿ ಕಚೇರಿಗೆ ಮರಳಲು ಅವಕಾಶ ಕಲ್ಪಿಸಿತ್ತು. ಕಳೆದ ಫೆಬ್ರವರಿಯಲ್ಲಿ ಇನ್ಫೋಸಿಸ್‌ ಸ್ಥಾಪಕ ನಾರಾಯಣ ಮೂರ್ತಿ ಅವರು ವರ್ಕ್‌ ಫ್ರಮ್‌ ಹೋಮ್‌ಗೆ ಆತುಕೊಳ್ಳಬಾರದು. ಕಚೇರಿಯಿಂದ ಕೆಲಸ ಮಾಡುವುದು ಉತ್ತಮ ಎಂದಿದ್ದರು.

ದೇಶದ ಪ್ರಮುಖ ಐಟಿ ಕಂಪನಿಗಳಲ್ಲೊಂದಾಗಿರುವ ಇನ್ಫೋಸಿಸ್‌, ಜನವರಿ-ಮಾರ್ಚ್‌ ಅವಧಿಯ ತ್ರೈಮಾಸಿಕ ಹಣಕಾಸು ( Infosys Q4 results) ಫಲಿತಾಂಶವನ್ನು ಪ್ರಕಟಿಸಿದ್ದು, 6,128 ಕೋಟಿ ರೂ. ಲಾಭ ಗಳಿಸಿದೆ. ಪ್ರತಿ ಷೇರಿಗೆ 17.50 ರೂ.ಗಳ ಡಿವಿಡೆಂಡ್‌ ಅನ್ನೂ ಘೋಷಿಸಿದೆ. ಲಾಭದ ಪ್ರಮಾಣದಲ್ಲಿ 7.7% ಹೆಚ್ಚಳವಾಗಿದೆ.

ವರ್ಷದ ಹಿಂದೆ ಇದೇ ಅವಧಿಯಲ್ಲಿ ಕಂಪನಿಯು 5,696 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇನ್ಫೋಸಿಸ್‌ನ ಆದಾಯದಲ್ಲಿ 16% ಏರಿದ್ದು, 37,441 ಕೋಟಿ ರೂ.ಗೆ ಏರಿದೆ. ಕಳೆದ ಸಾಲಿನಲ್ಲಿ ಕಂಪನಿ 32,276 ಕೋಟಿ ರೂ. ಆದಾಯ ಗಳಿಸಿತ್ತು. ಜನವರಿ-ಮಾರ್ಚ್‌ ಅವಧಿಯಲ್ಲಿ ಇನ್ಫೊಸಿಸ್‌ನಲ್ಲಿ ಉದ್ಯೋಗಿಗಳ ವಲಸೆಯ ಪ್ರಮಾಭವು 24.3%ರಿಂದ 20.9%ಕ್ಕೆ ತಗ್ಗಿದೆ. ಫಲಿತಾಂಶವು ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ದರದ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ. ಷೇರು ದರ 2.79% ಇಳಿದಿತ್ತು. (1,383 ರೂ.) ‌

ಭಾರತದ ಅತಿ ದೊಡ್ಡ ಸಾಫ್ಟ್‌ವೇರ್‌ ಸೇವೆ ರಫ್ತುದಾರ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (TaTa Consultancy Services -TCS) ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ 11,392 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 14.76% ಏರಿಕೆ ದಾಖಲಿಸಿದೆ. ಹಾಗೆಯೇ ಟಿಸಿಎಸ್‌ ಪ್ರತಿ ಷೇರಿಗೆ 24 ರೂ.ಗಳ ಡಿವಿಡೆಂಡ್‌ ಅನ್ನೂ ಘೋಷಿಸಿದೆ. ಇನ್ಫೋಸಿಸ್‌ ಜನವರಿ-ಮಾರ್ಚ್‌ನಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ 3,611 ಕಡಿತಗೊಳಿಸಿದೆ. ಒಟ್ಟಾರೆಯಾಗಿ 343,234 ಉದ್ಯೋಗಿಗಳು ಇದ್ದಾರೆ.

2022-23ರ ಸಾಲಿನಲ್ಲಿ ಟಿಸಿಎಸ್‌ ಪ್ರಬಲ ಬೆಳವಣಿಗೆಯನ್ನು ದಾಖಲಿಸಿದೆ. ಆರ್ಡರ್‌ ಬುಕ್‌ ಗಣನೀಯ ಬೆಳವಣಿಗೆ ದಾಖಲಿಸಿದೆ. ಇದು ಕಂಪನಿಯ ಸೇವೆಯ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸವನ್ನು ಬಿಂಬಿಸಿದೆ ಎಂದು ಟಿಸಿಎಸ್‌ ಸಿಇಒ ರಾಜೇಶ್‌ ಗೋಪಿನಾಥನ್‌ ಅವರು ತಿಳಿಸಿದ್ದಾರೆ. ಟಿಸಿಎಸ್‌ ಸಿಇಒ ರಾಜೇಶ್‌ ಗೋಪಿನಾಥನ್‌ ಅವರು 2023ರ ಜೂನ್‌ 1ರಂದು ಕೆ. ಕೃತಿವಾಸನ್‌ ಅವರಿಗೆ ಅಧಿಕಾರ ವಹಿಸಿಕೊಡಲಿದ್ದಾರೆ. ರಿಟೇಲ್‌, ಸಿಪಿಜಿ, ಜೀವ ವಿಜ್ಞಾನ ಮತ್ತು ಹೆಲ್ತ್‌ ಕೇರ್‌ ವಲಯದಲ್ಲಿ ಟಿಸಿಎಸ್‌ ಉತ್ತಮ ಬೆಳವಣಿಗೆ ದಾಖಲಿಸಿದೆ.

ಇದನ್ನೂ ಓದಿ: TCS mass resignation : ಟಿಸಿಎಸ್‌ನಲ್ಲಿ ಮಹಿಳಾ ಟೆಕ್ಕಿಗಳ ಸಾಮೂಹಿಕ ರಾಜೀನಾಮೆ‌, ಕಾರಣವೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Startup Investment : ಡ್ರಿಂಕ್​​ಪ್ರೈಮ್​ ವಿಸ್ತರಣಾ ಯೋಜನೆಯಲ್ಲಿ ಎಸ್​​ಐಡಿಬಿಐ ಹಣಕಾಸು ಸಂಸ್ಥೆಯ ಹೂಡಿಕೆ

Startup Investment : ಪ್ರಸ್ತುತ ಅಸ್ತಿತ್ವದಲ್ಲಿರುವ ಹೂಡಿಕೆದಾರರೊಂದಿಗೆ ಎಸ್​ವಿಸಿಎಲ್ , ಡ್ರಿಂಕ್​​ ಪ್ರೈಮ್ ಗೆ ಆರ್ಥಿಕ ಬೆಂಬ ನೀಡುವ ಮೂಲಕ ಬ್ರಾಂಡ್ ನ ಸಾಮರ್ಥ್ಯ ಮತ್ತು ಮಾರುಕಟ್ಟೆ ಮೌಲ್ಯದ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಎಸ್ ವಿಸಿಎಲ್ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದ ಮೂಲಕ ಕಾರ್ಯತಂತ್ರದ ಹೂಡಿಕೆಭಾಗವಾಗಿ 3 ಮಿಲಿಯನ್ ಡಾಲರ್​ (25,04,88,900.00 ರೂಪಾಯಿ) ಸಂಗ್ರಹಿಸಲಾಗಿದೆ.

VISTARANEWS.COM


on

Startup Investment
Koo

ಬೆಂಗಳೂರು: ಭಾರತದ 30 ವರ್ಷಗಳಷ್ಟು ಹಳೆಯದಾದ ವಾಟರ್ ಪ್ಯೂರಿಫೈಯರ್ ಉದ್ಯಮವಾಗಿರುವ ಡ್ರಿಂಕ್​​ಪ್ರೈಮ್​ನಲ್ಲಿ (DrinkPrime) ಹೂಡಿಕೆ ನಿರ್ವಹಣಾ ಕಂಪನಿಯಾದ ಎಸ್ಐಡಿಬಿಐ ವೆಂಚರ್ ಕ್ಯಾಪಿಟಲ್ ಲಿಮಿಟೆಡ್ (SVCL) ಹೂಡಿಕೆ ಮಾಡಿದೆ (Startup Investment). ಎಸ್​ವಿಸಿಎಲ್​ ಎಸ್​​ಐಡಿಬಿಐನ (SIDBI) ಸಂಪೂರ್ಣ ಸ್ವಾಮ್ಯದ ಹಣಕಾಸು ಸಂಸ್ಥೆಯಾಗಿದ್ದು ಭಾರತದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ (MSME) ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಹೂಡಿಕೆದಾರರೊಂದಿಗೆ ಎಸ್​ವಿಸಿಎಲ್ , ಡ್ರಿಂಕ್​​ ಪ್ರೈಮ್ ಗೆ ಆರ್ಥಿಕ ಬೆಂಬ ನೀಡುವ ಮೂಲಕ ಬ್ರಾಂಡ್ ನ ಸಾಮರ್ಥ್ಯ ಮತ್ತು ಮಾರುಕಟ್ಟೆ ಮೌಲ್ಯದ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಎಸ್ ವಿಸಿಎಲ್ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದ ಮೂಲಕ ಕಾರ್ಯತಂತ್ರದ ಹೂಡಿಕೆಭಾಗವಾಗಿ 3 ಮಿಲಿಯನ್ ಡಾಲರ್​ (25,04,88,900.00 ರೂಪಾಯಿ) ಸಂಗ್ರಹಿಸಲಾಗಿದೆ.

“ಎಸ್ಐಡಿಬಿಐ ವೆಂಚರ್ ಕ್ಯಾಪಿಟಲ್ ಲಿಮಿಟೆಡ್ ನಮ್ಮ ದೀರ್ಘಕಾಲೀನ ಹೂಡಿಕೆದಾರರ ಗುಂಪಿಗೆ ಸೇರಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಮೇಲಿನ ಅವರ ನಂಬಿಕೆಯು ಕುಡಿಯುವ ನೀರಿನ ಉದ್ಯಮದಲ್ಲಿ ಡ್ರಿಂಕ್​ಪ್ರೈಮ್ ನ ಆವಿಷ್ಕಾರಕ್ಕೆ ಲಭಿಸಿದ ಬಲಿಷ್ಠ ಬೆಂಬಲವಾಗಿದೆ. ನಮ್ಮ ಅಸಾಧಾರಣ ಬೆಳವಣಿಗೆಯ ಯಾನದಲ್ಲಿ ನಂಬಿಕೆಯೂ ಆಗಿದೆ. 2021 ರಿಂದ 2023 ರವರೆಗೆ, ನಾವು ಗಮನಾರ್ಹವಾದ 3 ಪಟ್ಟು ಬೆಳವಣಿಗೆ ಸಾಧಿಸಿದ್ದೇವೆ. ಕಾರ್ಯತಂತ್ರದ ಹೂಡಿಕೆಯು ವ್ಯವಹಾರ ವಿಸ್ತರಣೆಗೆ ಅವಕಾಶ ಒದಗಿಸುತ್ತದೆ” ಎಂದು ಡ್ರಿಂಕ್ ಪ್ರೈಮ್ ಸಹ ಸಂಸ್ಥಾಪಕ ಮತ್ತು ಸಿಇಒ ವಿಜೇಂದರ್ ರೆಡ್ಡಿ ಮುತ್ಯಾಲ ಹೇಳಿದರು.

ಎಸ್ ವಿಸಿಎಲ್ ಸಂಸ್ಥೆಯು ಡ್ರಿಂಕ್​​​ ಪ್ರೈಮ್ ನಲ್ಲಿ ಮಾಡಿರುವ ಹೂಡಿಕೆಯು ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಭಾರತದಾದ್ಯಂತ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರುವ ಧ್ಯೇಯವನ್ನು ಹೊಂದಿದೆ. ಈ ಪಾಲುದಾರಿಕೆಯು ನಿರ್ಣಾಯಕ ಸಾಮಾಜಿಕ ಸವಾಲುಗಳನ್ನು ಪರಿಹರಿಸುವ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ವಿನೂತನ ಸ್ಟಾರ್ಟ್​​ಅಪ್​ಗಳನ್ನು ಬೆಂಬಲಿಸುವ ಬದ್ಧತೆಯ ಪ್ರತೀಕವಾಗಿದೆ ಎಂದು ವಿಜೇಂದರ್ ರೆಡ್ಡಿ ಅವು ಹೇಳಿದರು.

“ನಾವು ಡ್ರಿಂಕ್​​ ಪ್ರೈಮ್ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಮತ್ತು ಅದನ್ನು ಭಾರತದ ಪ್ರಮುಖ ವಾಟರ್ ಟೆಕ್ ಬ್ರಾಂಡ್ ಆಗಿ ಮಾಡಲು ಪ್ರಯತ್ನಿಸುತ್ತೇವೆ, ಅದೇ ಸಮಯದಲ್ಲಿ ಅದರ ನಾವಿನ್ಯ ಕೊಡುಗೆಗಳನ್ನು ಜಗತ್ತಿಗೆ ಪ್ರಸ್ತುತಪಡಿಸಲಿದ್ದೇವೆ. ಎಲ್ಲರಿಗೂ ಶುದ್ಧ, ಸುರಕ್ಷಿತ ಮತ್ತು ಆರೋಗ್ಯಕರ ಕುಡಿಯುವ ನೀರನ್ನು ಒದಗಿಸುವ ಧ್ಯೇಯವನ್ನು ಡ್ರಿಂಕ್ ಪ್ರೈಮ್ ವಿಸ್ತರಿಸಲಿದೆ ಮತ್ತು ಆ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತದೆ ಎಂದು ಖಚಿತಪಡಿಸಿಕೊಂಡಿದ್ದೆವೆ. ನಾವು ಯೋಜನೆಯನ್ನು ನಂಬುತ್ತೇವೆ ಮತ್ತು ವರ್ಷಗಳಲ್ಲಿ ಡ್ರಿಂಕ್​ ಪ್ರೈಮ್​ ಬೆಳವಣಿಗೆ ಗಮನಿಸಿದ್ದೇವೆ. ಈಗ, ನಾವು ಡ್ರಿಂಕ್ ಪ್ರೈಮ್ ನ ತ್ವರಿತ ಬೆಳವಣಿಗೆಯನ್ನು ಎದುರು ನೋಡುತ್ತಿದ್ದೇವೆ ” ಎಂದು ಎಸ್ ಐಡಿಬಿಐ ವೆಂಚರ್ ಕ್ಯಾಪಿಟಲ್ ಲಿಮಿಟೆಡ್ ನ ಹಿರಿಯ ಫಂಡ್ ಮ್ಯಾನೇಜರ್ ದೇಬ್ರಾಜ್ ಬ್ಯಾನರ್ಜಿ ಹೇಳಿದರು.

ಇದನ್ನೂ ಓದಿ: Gold Rate Today: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ, ಮತ್ತೆ ಚಿನ್ನದ ಮಾರುಕಟ್ಟೆಯಲ್ಲಿ ತುರುಸು; ದರಗಳು ಹೀಗಿವೆ

ಹೂಡಿಕೆಯನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡಿದ ಡ್ರಿಂಕ್ ಪ್ರೈಮ್ ನ ಸಹ-ಸಂಸ್ಥಾಪಕ ಮತ್ತು ಸಿಒಒ ಮಾನಸ್ ರಂಜನ್ ಹೋಟಾ, “ಈ ಕಾರ್ಯತಂತ್ರದ ಹೂಡಿಕೆಯು ವಿಸ್ತರಣಾ ಯೋಜನೆಗಳ ವೇಗವನ್ನು ದ್ವಿಗುಣಗೊಳಿಸಲು, ನಮ್ಮ ನವೀನ ಉತ್ಪನ್ನಗಳ ಪೋರ್ಟ್ ಫೋಲಿಯೊವನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ. ಅದೇ ರೀತಿ ನಮ್ಮ ಉದ್ಯಮದ ಪ್ರಮುಖ ಮತ್ತು ಉದ್ಯಮದ ಜೀವಾಳವಾಗಿರುವ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ವೈಶಿಷ್ಟ್ಯವನ್ನು ಬಲಪಡಿಸಲು ಡ್ರಿಂಕ್ ಪ್ರೈಮ್ ಗೆ ವಿಪುಲ ಅವಕಾಶ ನೀಡುತ್ತದೆ” ಎಂದು ಹೇಳಿದರು.

ಡ್ರಿಂಕ್ ಪ್ರೈಮ್ ನಲ್ಲಿ ದೀರ್ಘಕಾಲೀನ ಹೂಡಿಕೆದಾರರು ಹೊಂದಿರುವ ನಂಬಿಕೆ ಮತ್ತು ಸ್ಟಾರ್ಟ್ ಅಪ್ ನ ಸಾಮರ್ಥ್ಯ ಅಪೂರ್ವವಾಗಿದೆ. “ಡ್ರಿಂಕ್ ಪ್ರೈಮ್ ಕಳೆದ ಎಂಟು ವರ್ಷಗಳಿಂದ ಭಾರತದ ನೀರು ಶುದ್ಧೀಕರಣ ಮಾರುಕಟ್ಟೆಯನ್ನು ಆಳುತ್ತಿದೆ ದಶಕಗಳಿಂದ ಸ್ಥಗಿತಗೊಂಡಿದ್ದ ಉದ್ಯಮದಲ್ಲಿ ಅವರು ಅನ್ವೇಷಣೆ, ಆವಿಷ್ಕಾರ ಮತ್ತು ಬದಲಾವಣೆಯನ್ನು ಸೃಷ್ಟಿಸುವುದನ್ನು ನಾನು ನೋಡಿದ್ದೇನೆ. ಅದಕ್ಕಾಗಿಯೇ ನಾನು ಡ್ರಿಂಕ್​ಪ್ರೈಮ್​ನಲ್ಲಿ ಮರುಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಪಾಲಿಕ್ಯಾಬ್ ಇಂಡಿಯಾ ಲಿಮಿಟೆಡ್​​ನ ಕಾರ್ಯನಿರ್ವಾಹಕ ನಿರ್ದೇಶಕ ಭರತ್ ಜೈಸಿಂಘಾನಿ ಹೇಳಿದ್ದಾರೆ.

ಡ್ರಿಂಕ್ ಪ್ರೈಮ್ ಪ್ರಸ್ತುತ ಭಾರತದ ಏಳು ನಗರಗಳಲ್ಲಿ 2 ಲಕ್ಷಕ್ಕೂ ಹೆಚ್ಚು + ಕುಟುಂಬಗಳಿಗೆ ಶುದ್ಧ, ಸುರಕ್ಷಿತ ಮತ್ತು ಆರೋಗ್ಯಕರ ಕುಡಿಯುವ ನೀರಿನ ಲಭ್ಯತೆ ನೀಡಿದೆ. ಎಲ್ಲರಿಗೂ ಸುರಕ್ಷಿತ ಕುಡಿಯುವ ನೀರು ಲಭ್ಯವಾಗುವಂತೆ ಮಾಡುವ ತನ್ನ ಧ್ಯೇಯಕ್ಕೆ ಹತ್ತಿರವಾಗಲು ವಿಸ್ತರಣಾ ಯೋಜನೆಗಳು ಜಾರಿಯಲ್ಲಿರುವುದರಿಂದ, ಡ್ರಿಂಕ್ ಪ್ರೈಮ್ ತನ್ನ ಎರಡನೇ ಹಂತದ ನಿಧಿಸಂಗ್ರಹಕ್ಕೆ ಸಜ್ಜಾಗುತ್ತಿದೆ.

Continue Reading

ವಾಣಿಜ್ಯ

SBI Rates: ಎಸ್‌ಬಿಐನಲ್ಲಿ ಎಫ್‌ಡಿ ಇಟ್ಟವರಿಗೆ ಬಂಪರ್‌ ನ್ಯೂಸ್;‌ ಭಾರಿ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್!

SBI Rates: 2023ರ ಡಿಸೆಂಬರ್‌ನಲ್ಲಿ ಎಸ್‌ಬಿಐ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿತ್ತು. ಈಗ ಮತ್ತೆ 25ರಿಂದ 75 ಮೂಲಾಂಕಗಳವರೆಗೆ ಬಡ್ಡಿದರವನ್ನು ಏರಿಕೆ ಮಾಡಿದೆ. ಇದರಿಂದ ಸ್ಥಿರ ಠೇವಣಿದಾರರಿಗೆ ಭಾರಿ ಪ್ರಮಾಣದಲ್ಲಿ ಅನುಕೂಲವಾಗಲಿದೆ.

VISTARANEWS.COM


on

SBI Rates
Koo

ಮುಂಬೈ: ದೇಶದ ಅಗ್ರ ಸಾರ್ವಜನಿಕ ವಲಯದ ಬ್ಯಾಂಕ್‌ (SBI) ಆಗಿರುವ ಎಸ್‌ಬಿಐ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಸ್ಥಿರ ಠೇವಣಿದಾರರು ಬ್ಯಾಂಕ್‌ನಲ್ಲಿ ಇಟ್ಟಿರುವ ಮೊತ್ತದ ಮೇಲಿನ ಬಡ್ಡಿಯನ್ನು ಆಯಾ ಯೋಜನೆಗಳಿಗೆ ಅನ್ವಯವಾಗುವಂತೆ ಶೇ.0.25ರಿಂದ (25 ಮೂಲಾಂಕ) ಶೇ.0.75ರ (75 ಮೂಲಾಂಕ)ವರೆಗೆ ಬಡ್ಡಿದರವನ್ನು (SBI FD Interest Rates) ಏರಿಕೆ ಮಾಡಿದ್ದು, ಇದರಿಂದ ಸ್ಥಿರ ಠೇವಣಿದಾರರಿಗೆ ಭಾರಿ ಅನುಕೂಲವಾಗಲಿದೆ. ನೂತನ ಬಡ್ಡಿದರವು ಮೇ 15ರಿಂದಲೇ ಅನ್ವಯವಾಗಲಿದ್ದು, ಇದು ಗ್ರಾಹಕರ ಸಂತಸವನ್ನು ಹೆಚ್ಚಿಸಿದೆ.

7ರಿಂದ 45 ದಿನಗಳವರೆಗೆ 2 ಕೋಟಿ ರೂ. ಠೇವಣಿ ಇರಿಸಿದರೆ, ಅದರ ಮೇಲಿನ ಬಡ್ಡಿದರವನ್ನು ಬದಲಾವಣೆ ಮಾಡಿಲ್ಲ. ಆದರೆ, 46ರಿಂದ 179 ದಿನ ಠೇವಣಿ ಇಟ್ಟರೆ ಶೇ.4.75ರ ಬದಲು ಶೇ.5.50ರಷ್ಟು ಬಡ್ಡಿದರ ಸಿಗಲಿದೆ. ಹಿರಿಯ ನಾಗರಿಕರಿಗೆ ಶೇ.5.25ರ ಬದಲು ಶೇ.6ರಷ್ಟು ಬಡ್ಡಿ ಸಿಗಲಿದೆ. ಇನ್ನು ಒಂದರಿಂದ ಎರಡು ವರ್ಷದವರೆಗೆ ಸ್ಥಿರ ಠೇವಣಿ ಇರಿಸುವ ಸಾಮಾನ್ಯ (2 ಕೋಟಿ ರೂ.ಗಿಂತ ಕಡಿಮೆ ಮೊತ್ತ ಠೇವಣಿ ಇರಿಸುವವರು) ಠೇವಣಿದಾರರಿಗೆ ಶೇ.6.8ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇ.7.3ರಷ್ಟು ಬಡ್ಡಿ ಸಿಗಲಿದೆ.

ಹೀಗಿದೆ ನೂತನ ಬಡ್ಡಿದರ (2 ಕೋಟಿ ರೂ.ಗಿಂತ ಕಡಿಮೆ ಠೇವಣಿ ಮಾಡಿದವರಿಗೆ)

ಎಫ್‌ಡಿ ಅವಧಿನೂತನ ಬಡ್ಡಿದರಹಿರಿಯ ನಾಗರಿಕರಿಗೆ
180-210 ದಿನ6%6.50%
211 ದಿನದಿಂದ 1 ವರ್ಷ6.25%6.75%
1-2 ವರ್ಷ6.80%7.30%
2-3 ವರ್ಷ7%7%
3-5 ವರ್ಷ6.75%7.25%
5-10 ವರ್ಷ6.50%7.50%

ಎಫ್‌ಡಿ ಬಡ್ಡಿದರ ಏರಿಸಲು ಕಾರಣವೇನು?

ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಆರ್ಥಿಕತೆಯು ಏಳಿಗೆಯತ್ತ ಸಾಗುತ್ತಿದೆ. ಇದರಿಂದ ಬ್ಯಾಂಕ್‌ಗಳಲ್ಲಿ ವಾಹಿವಾಟು ಜಾಸ್ತಿಯಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮುಂದಿನ ದಿನಗಳಲ್ಲೂ ರೆಪೋ ದರದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಕಡಿಮೆ ಇದೆ. ಇದರಿಂದ ಗೃಹ ಸಾಲದ ಮೇಲೆ ಹೆಚ್ಚಿನ ಇಎಂಐ ಕಟ್ಟುವ ಹೊರೆಯು ಜನರಿಗೆ ಇರುವುದಿಲ್ಲ. ಹಾಗಾಗಿ, ಎಸ್‌ಬಿಐ ಸೇರಿ ಹಲವು ಬ್ಯಾಂಕ್‌ಗಳು ಜನರಿಂದ ಹೆಚ್ಚಿನ ಠೇವಣಿಯನ್ನು ಸೆಳೆಯಲು ಸ್ಥಿರ ಠೇವಣಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: RBI Monetary Policy: ಸಾಲಗಾರರಿಗೆ ಆರ್‌ಬಿಐ ಗುಡ್‌ ನ್ಯೂಸ್;‌ ರೆಪೋ ದರ ಯಥಾಸ್ಥಿತಿ

Continue Reading

ಮನಿ ಗೈಡ್

EPF Withdraw Rule: ಪಿಎಫ್‌ ಮುಂಗಡ ಹಣ ಪಡೆಯುವುದು ಈಗ ಮತ್ತಷ್ಟು ಸುಲಭ; ಹೊಸ ಬದಲಾವಣೆಯ ಸಂಪೂರ್ಣ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಹೊಂದಿರುವ ಸದಸ್ಯರಿಗೆ ಇಲ್ಲಿದೆ ಗುಡ್ ನ್ಯೂಸ್. ಶಿಕ್ಷಣ, ಮದುವೆ ಮತ್ತು ವಸತಿಗಾಗಿ ಪಿಎಫ್ ನಿಂದ ಮುಂಗಡ ಹಣವನ್ನು ಪಡೆಯುವುದು ಈಗ ಸುಲಭವಾಗಿದೆ. ಈ ಬಗ್ಗೆ ನಿಯಮಗಳು (EPF Withdraw Rule) ಏನು ಹೇಳಿವೆ ಗೊತ್ತೇ? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

EPF Withdrawal Rule
Koo

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPF Withdraw Rule) ಶಿಕ್ಷಣ, ಮದುವೆ ಮತ್ತು ವಸತಿಗೆ ಸಂಬಂಧಿಸಿ ಮುಂಗಡ ಕ್ಲೈಮ್‌ಗಳಿಗಾಗಿ (advance claims) ಸ್ವಯಂ-ಮೋಡ್ ಸೆಟಲ್‌ಮೆಂಟ್ (auto-mode settlement ) ಅನ್ನು ಪರಿಚಯಿಸುವುದಾಗಿ ಘೋಷಿಸಿದೆ. ಈ ವ್ಯವಸ್ಥೆಯಲ್ಲಿ ಯಾರದೇ ಹಸ್ತಕ್ಷೇಪವಿಲ್ಲದೆ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಬಹುದು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೇಳಿಕೆಯ ಪ್ರಕಾರ, ಅನಿರುದ್ಧ್ ಪ್ರಸಾದ್ ಎಂಬುವರು 2024ರ ಮೇ 9ರಂದು ಪ್ಯಾರಾ 68J ಅಡಿಯಲ್ಲಿ ಅನಾರೋಗ್ಯಕ್ಕಾಗಿ ಮುಂಗಡವಾಗಿ ಅರ್ಜಿ ಸಲ್ಲಿಸಿದ್ದರು. ಅವರ ಮುಂಗಡ ಕ್ಲೈಮ್ ಅನ್ನು 2024ರ ಮೇ 11 ರಂದು 92,143 ರೂ. ಅನ್ನು ಮೂರು ದಿನಗಳ ಒಳಗೆ ಇತ್ಯರ್ಥಪಡಿಸಲಾಗಿದೆ. ಇಂತಹ ಹಲವು ಮಂದಿ ಇಪಿಎಫ್‌ಒನಲ್ಲಿ ಮುಂಗಡ ಕ್ಲೈಮ್ ಪಾವತಿಯ ಪ್ರಯೋಜನವನ್ನು ಪಡೆದಿದ್ದಾರೆ.

ಇಪಿಎಫ್‌ಒ ಆಟೋ ಮೋಡ್ ಸೆಟಲ್ಮೆಂಟ್

ಅನಾರೋಗ್ಯದ ಕಾರಣಕ್ಕಾಗಿ ಮುಂಗಡ ಕ್ಲೈಮ್ ಮಾಡಲು 2020ರ ಏಪ್ರಿಲ್ ನಲ್ಲಿ ಕ್ಲೈಮ್ ಸೆಟ್ಲ್ ಮೆಂಟ್ ಸ್ವಯಂ ಮೋಡ್ ಅನ್ನು ಪರಿಚಯಿಸಲಾಯಿತು. ಈಗ ಈ ಮಿತಿಯನ್ನು 1 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 2.25 ಕೋಟಿ ಸದಸ್ಯರು ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

2023- 24ರ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ಸುಮಾರು 4.45 ಕೋಟಿ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿದೆ. ಅದರಲ್ಲಿ ಶೇ. 60ಕ್ಕಿಂತ ಹೆಚ್ಚು ಮಂದಿ ಒಟ್ಟು 2.84 ಕೋಟಿ ಕ್ಲೈಮ್‌ಗಳು ಮುಂಗಡ ಕ್ಲೈಮ್‌ಗಳಾಗಿವೆ. ವರ್ಷದಲ್ಲಿ ಇತ್ಯರ್ಥವಾದ ಒಟ್ಟು ಮುಂಗಡ ಕ್ಲೇಮ್‌ಗಳಲ್ಲಿ ಸುಮಾರು 89.52 ಲಕ್ಷ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ.

ಪಿಎಫ್ ಹಿಂಪಡೆಯುವುದು ಹೇಗೆ?

ಇಪಿಎಫ್ ಸದಸ್ಯರು ನಿಯಮ 68J ಅಡಿಯಲ್ಲಿ ವೈದ್ಯಕೀಯ ಕಾಯಿಲೆಗಳಿಗೆ ಇಪಿಎಫ್ ಹಿಂತೆಗೆದುಕೊಳ್ಳುವಿಕೆಗೆ ಅನ್ವಯಿಸಲು ನಿಯಮಗಳನ್ನು ತಿಳಿದಿರಬೇಕು, ನಿಯಮ 68K ಅಡಿಯಲ್ಲಿ ಮದುವೆ ಅಥವಾ ಉನ್ನತ ಶಿಕ್ಷಣ ಮತ್ತು ನಿಯಮ 68B ಅಡಿಯಲ್ಲಿ ವಸತಿ ಸೌಲಭ್ಯಕ್ಕಾಗಿ ಮುಂಗಡವನ್ನು ಪಡೆಯಬಹುದು.

ನಿಯಮ 68 ಜೆ

ಇಪಿಎಫ್ ಸದಸ್ಯರು ಉದ್ಯೋಗದಾತ ಅಥವಾ ವೈದ್ಯರಿಂದ ಸಹಿ ಮಾಡಿದ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ವೈದ್ಯಕೀಯ ಕ್ಲೈಮ್‌ಗಾಗಿ, ಇಪಿಎಫ್ ಯೋಜನೆಗೆ ಎಷ್ಟು ವರ್ಷಗಳವರೆಗೆ ಅನ್ವಯಿಸಲಾಗಿದೆ ಎಂಬ ನಿಯಮವಿಲ್ಲ.

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

ನಿಯಮ 68K

ಮದುವೆ ಅಥವಾ ಉನ್ನತ ಶಿಕ್ಷಣದ ಉದ್ದೇಶಗಳಿಗಾಗಿ ಪಿಎಫ್ ಹಣವನ್ನು ಹಿಂಪಡೆಯಲು ಇಪಿಎಫ್ ಸದಸ್ಯರು ಇಪಿಎಫ್‌ಒನೊಂದಿಗೆ 7 ವರ್ಷಗಳನ್ನು ಪೂರ್ಣಗೊಳಿಸಬೇಕು. ಇಪಿಎಫ್ ಸದಸ್ಯರು ಅದನ್ನು ಆನ್‌ಲೈನ್ ಸ್ವರೂಪದಲ್ಲಿ ಘೋಷಿಸಬೇಕಾಗುತ್ತದೆ. ಆದ್ದರಿಂದ ಅವರು ತಮ್ಮ ಷೇರಿನ ಗರಿಷ್ಠ ಶೇ. 50ರಷ್ಟನ್ನು ಬಡ್ಡಿಯೊಂದಿಗೆ ಹಿಂತೆಗೆದುಕೊಳ್ಳಬಹುದು.

ನಿಯಮ 68B

ಫ್ಲಾಟ್/ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು, ಇಪಿಎಫ್ ಸದಸ್ಯರು ಇಪಿಎಫ್‌ಒನೊಂದಿಗೆ ಐದು ವರ್ಷಗಳನ್ನು ಪೂರ್ಣಗೊಳಿಸಬೇಕು. ಇಪಿಎಫ್‌ಒ ಮನೆಯ ದುರಸ್ತಿ ಮತ್ತು ನವೀಕರಣಕ್ಕಾಗಿ ಮುಂಗಡ ಹಿಂತೆಗೆದುಕೊಳ್ಳುವಿಕೆಯನ್ನು ಸಹ ಅನುಮತಿಸುತ್ತದೆ. ಇದನ್ನು ಎರಡು ಬಾರಿ ಮಾಡಬಹುದು. ಹಿಂಪಡೆಯಬಹುದಾದ ಮೊತ್ತವು ಉದ್ದೇಶವನ್ನು ಅವಲಂಬಿಸಿರುತ್ತದೆ. ಶೇ.90ರವರೆಗೂ ಹಣ ಹಿಂಪಡೆಯಲು ಸಾಧ್ಯ.

Continue Reading

ಮನಿ-ಗೈಡ್

Money Guide: ಪ್ಯಾನ್‌ ಕಾರ್ಡ್‌ ಕಳೆದುಹೋದರೆ ಚಿಂತೆ ಬೇಡ; ಮನೆಯಲ್ಲೇ ಕೂತು ಡುಬ್ಲಿಕೇಟ್‌ ಪಡೆಯುವ ವಿಧಾನ ಇಲ್ಲಿದೆ

Money Guide: ನಮ್ಮ ಆರ್ಥಿಕ ಚಟುವಟಿಕೆಗೆ ಪ್ಯಾನ್‌ ನಂಬರ್‌ ಕಡ್ಡಾಯಗೊಳಿಸಲಾಗಿದೆ. ಅಂದರೆ ಪ್ಯಾನ್‌ ಕಾರ್ಡ್ ಇಲ್ಲದೆ ಇನ್‌ಕಮ್‌ ಟ್ಯಾಕ್ಸ್, ಬ್ಯಾಂಕಿನ ವಹಿವಾಟನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಆಕಸ್ಮಿಕವಾಗಿ ಪ್ಯಾನ್‌ ಕಾರ್ಡ್‌ ಕಳೆದು ಹೋದರೆ ಏನು ಮಾಡಬೇಕು? ಮರಳಿ ಪಡೆಯುವುದು ಹೇಗೆ? ಡುಬ್ಲಿಕೇಟ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲೇ ಹೇಗೆ ಅಪ್ಲೈ ಮಾಡಬಹುದು? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ಕೇಂದ್ರ ಸರ್ಕಾರವು ನಾಗರಿಕರಿಗೆ ಹಲವು ರೀತಿಯ ದಾಖಲೆಗಳನ್ನು ನೀಡಿದೆ. ಇವುಗಳಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪ್ಯಾನ್ ಕಾರ್ಡ್ ಮುಖ್ಯವಾದುದು. ಹಣ ವರ್ಗಾವಣೆಯಿಂದ ಹಿಡಿದು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ದಾಖಲೆಗಳು ಅಗತ್ಯ. ಅದರಲ್ಲೂ ನಮ್ಮ ಆರ್ಥಿಕ ಚಟುವಟಿಕೆಗೆ ಪ್ಯಾನ್‌ ನಂಬರ್‌ (Permanent Account Number) ಕಡ್ಡಾಯಗೊಳಿಸಲಾಗಿದೆ. ಅಂದರೆ ಪ್ಯಾನ್‌ ಕಾರ್ಡ್ ಇಲ್ಲದೆ ಇನ್‌ಕಮ್‌ ಟ್ಯಾಕ್ಸ್, ಬ್ಯಾಂಕಿನ ವಹಿವಾಟನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಆಕಸ್ಮಿಕವಾಗಿ ಪ್ಯಾನ್‌ ಕಾರ್ಡ್‌ ಕಳೆದು ಹೋದರೆ ಏನು ಮಾಡಬೇಕು? ಮರಳಿ ಪಡೆಯುವುದು ಹೇಗೆ? ಡುಬ್ಲಿಕೇಟ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲೇ ಹೇಗೆ ಅಪ್ಲೈ ಮಾಡಬಹುದು? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ಮೊದಲು ಏನು ಮಾಡಬೇಕು?

ನಿಮ್ಮ ಪ್ಯಾನ್‌ ಕಾರ್ಡ್‌ ಕಳೆದುಹೋಗಿದ್ದರೆ ಅಥವಾ ಕಳವಾಗಿದ್ದರೆ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಇದರಿಂದ ಬೇರೆಯವರು ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡದಂತೆ ತಡೆಯಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಪ್ಯಾನ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಹೆಚ್ಚುತ್ತಿರುವುದುರಿಂದ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಬಳಿಕ ನಕಲಿ ಪ್ಯಾನ್‌ ಕಾರ್ಡ್‌ಗೆ ಅಪ್ಲೈ ಮಾಡಬಹುದು. ನಕಲಿ ಪ್ಯಾನ್‌ ಕಾರ್ಡ್‌ನ ಅನುಕೂಲವೆಂದರೆ ನಿಮಗೆ ಹಳೆ ನಂಬರ್ ಸಿಗಲಿದೆ. ಅದು ನಿಮ್ಮ ಕಳೆದು ಹೋದ ಪಾನ್ ಕಾರ್ಡ್‌ನ ನಕಲಿಯಾಗಿರುತ್ತದೆ.

ಆನ್‌ಲೈನ್‌ನಲ್ಲಿ ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಪಡೆಯುವ ರೀತಿ

  • ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಅಪ್ಲಿಕೇಷನ್‌ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.
  • ನಿಮ್ಮ ಪ್ಯಾನ್‌ ನಂಬರ್‌, ಆಧಾರ್‌ ನಂಬರ್‌ ಮತ್ತು ಡೇಟ್‌ ಆಫ್‌ ಬರ್ತ್‌ ಕಾಲಂ ಭರ್ತಿ ಮಾಡಿ.
  • ಗಮನವಿಟ್ಟು ಷರತ್ತುಗಳನ್ನು ಓದಿ ಮನನ ಮಾಡಿಕೊಳ್ಳಿ.
  • ಕ್ಯಾಪ್ಚಾ ಕೋಡ್‌ ಭರ್ತಿ ಮಾಡಿ.
  • Submit ಬಟನ್‌ ಕ್ಲಿಕ್‌ ಮಾಡಿ.
  • ಈಗ ಹೊಸ ಪುಟ ತೆರೆದುಕೊಳ್ಳಲಿದ್ದು, ಅದರಲ್ಲಿ ನಿಮ್ಮ ಪ್ಯಾನ್‌ ಕಾರ್ಡ್‌ನ ವಿವರ ಕಂಡು ಬರುತ್ತದೆ.
  • ಪುಟದ ಕೆಳಗೆ ಕಂಡು ಬರುವ OTP on Email ID, Mobile Number ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
  • Generate OTP ಆಪ್ಶನ್‌ ಕ್ಲಿಕ್‌ ಮಾಡಿ.
  • ಒಟಿಪಿ ನಮೂದಿಸಿ Validate ಬಟನ್‌ ಆಯ್ಕೆ ಮಾಡಿ.

ಆಫ್‌ಲೈನ್‌ನಲ್ಲಿ ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಪಡೆಯುವ ರೀತಿ

  • ಪ್ಯಾನ್ ಸೆಂಟರ್, ಐಟಿ ಪ್ಯಾನ್ ಸೇವಾ ಕೇಂದ್ರಕ್ಕೆ ತೆರಳಿ.
  • ‘Request for New PAN Changes or Correction in PAN Data’ ಅರ್ಜಿ ಪಡೆದು ಭರ್ತಿ ಮಾಡಿ.
  • ಗಮನಿಸಿ ಬ್ಲಾಕ್ ಲೆಟರ್‌ನಲ್ಲಿ, ಕಪ್ಪು ಶಾಹಿಯಲ್ಲಿ, ಆಂಗ್ಲ ಭಾಷೆಯಲ್ಲೇ ಫಾರ್ಮ್ ಭರ್ತಿ ಮಾಡಬೇಕು.
  • ಪ್ಯಾನ್ ಸಂಖ್ಯೆ ನಮೂದಿಸಿ. ಜತೆಗೆ ಇತ್ತೀಚಿನ ಛಾಯಾಚಿತ್ರ, ಸಹಿ ಅಗತ್ಯ.
  • ಬಳಿಕ ಅರ್ಜಿ ಸಲ್ಲಿಸಿ.

ಯಾವೆಲ್ಲ ದಾಖಲೆ ಅಗತ್ಯ?

  • ಐಡಿ ಪುರಾವೆ: ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್
  • ವಯಸ್ಸು ಪುರಾವೆ: ಜನನ ಪ್ರಮಾಣ ಪತ್ರ, ಪಿಂಚಣಿ ಪತ್ರ, ವಿವಾಹ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್
  • ಅಫಿಡವೀತ್ ವಿಳಾಸ ಪುರಾವೆ: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಪಿಂಚಣಿ ಪತ್ರ

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading
Advertisement
T20 World Cup 2024
ಕ್ರೀಡೆ8 mins ago

T20 World Cup 2024: ಟಿ20 ವಿಶ್ವಕಪ್​ನಲ್ಲಿ‘ನಂದಿನಿ’ ಲಾಂಛನ; ಹರ್ಷ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ

pm narendra modi yogi adityanath
ಪ್ರಮುಖ ಸುದ್ದಿ32 mins ago

PM Narendra Modi: ʼಗೂಂಡಾರಾಜ್‌ʼ ನೆನಪಿಸಿದ ಮೋದಿ, ಉ.ಪ್ರದಲ್ಲಿ ʼಯೋಗಿ ಸ್ವಚ್ಛತಾ ಅಭಿಯಾನʼಕ್ಕೆ ಮೆಚ್ಚುಗೆ

Viral video
ವೈರಲ್ ನ್ಯೂಸ್40 mins ago

Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

Head Coach
ಕ್ರೀಡೆ43 mins ago

Head Coach: ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಮ್​ ಇಂಡಿಯಾದ ಸ್ಟಾರ್​ ಮಾಜಿ ಆಟಗಾರ

Drowned in water
ಹಾಸನ1 hour ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

HD DeveGowda Wont celebrate 92nd birthday
ರಾಜಕೀಯ1 hour ago

HD Devegowda: 92ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದ ಎಚ್‌ಡಿ ದೇವೇಗೌಡ; ಮೊಮ್ಮಗನ ಕೇಸ್‌ನಿಂದ ಈ ತೀರ್ಮಾನ?

hd revanna case
ಕ್ರೈಂ1 hour ago

HD Revanna Case: ಎಚ್‌ಡಿ ರೇವಣ್ಣ ಮತ್ತೆ ಕೋರ್ಟ್‌ನಲ್ಲಿ; ಎಸ್‌ಐಟಿ ಅಧಿಕಾರಿಗಳು ರೇವಣ್ಣ ನಿವಾಸದಲ್ಲಿ!

Murder case
ದಾವಣಗೆರೆ1 hour ago

Murder Case : ಚಾಕುವಿನಿಂದ ಇರಿದು ಯುವಕನ ಕೊಲೆ; ಹಂತಕರಿಗಾಗಿ ಪೊಲೀಸರ ಹುಡುಕಾಟ

Amruthadhaare Serial bhoomika in birthday chaya singh
ಕಿರುತೆರೆ1 hour ago

Amruthadhaare Serial: ಇಂದು ಭೂಮಿಕಾಗೆ ಹುಟ್ಟು ಹಬ್ಬ: ರೀಲ್‌ ಗಂಡ ಎಸ್ಟೇಟ್​ ಬರೆದು ಕೊಟ್ರು! ರಿಯಲ್‌ ಗಂಡ ಕೊಟ್ಟ ಗಿಫ್ಟ್‌ ಏನು?

Theft in two houses in Kudligi taluk
ವಿಜಯನಗರ1 hour ago

Theft Case: ಕೂಡ್ಲಿಗಿಯ ಎರಡು ಮನೆಗಳಲ್ಲಿ ಕಳ್ಳತನ; ಬಂಗಾರ, ಬೆಳ್ಳಿ, ನಗದು ದೋಚಿದ ಕಳ್ಳರು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌