ITR Filing : ಐಟಿ ರಿಟರ್ನ್‌ನಲ್ಲಿ ಎಷ್ಟು ವಿಧಗಳಿವೆ? ಯಾರು ಯಾವುದನ್ನು ಬಳಸಬೇಕು? Vistara News

ವಾಣಿಜ್ಯ

ITR Filing : ಐಟಿ ರಿಟರ್ನ್‌ನಲ್ಲಿ ಎಷ್ಟು ವಿಧಗಳಿವೆ? ಯಾರು ಯಾವುದನ್ನು ಬಳಸಬೇಕು?

ITR Filing ಆದಾಯ ತೆರಿಗೆ ವಿವರ ಸಲ್ಲಿಕೆಯನ್ನು ಜುಲೈ 31ರೊಳಗೆ ಮಾಡುವುದು ಸೂಕ್ತ. ಆದಾಯ ತೆರಿಗೆ ರಿಟರ್ನ್‌ ವಿಧಗಳ ವಿವರ ಇಲ್ಲಿದೆ.

VISTARANEWS.COM


on

tax
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಳೆದ 2022-23ರ ಆದಾಯ ತೆರಿಗೆಯ ವಿವರ ಸಲ್ಲಿಕೆಗೆ (Income tax return filing) ಕೊನೆಯ ದಿನಾಂಕ ಜುಲೈ 31 ಆಗಿದೆ. ಇನ್ನು ಆರು ದಿನ ಮಾತ್ರ ಉಳಿದಿದೆ. ಹೀಗಾಗಿ ಐಟಿ ರಿಟರ್ನ್‌ ಸಲ್ಲಿಸದಿದ್ದರೆ ಗಡುವಿನ ಒಳಗಾಗಿ ಸಲ್ಲಿಸುವುದು ಸೂಕ್ತ. ಐಟಿಆರ್‌ಗಳಲ್ಲಿ ಏಳು ವಿಧಗಳಿವೆ. ಐಟಿಆರ್-‌1ರಿಂದ ಐಟಿಆರ್‌ -7 ತನಕ ಅರ್ಜಿ ವಿಧಗಳು ಇವೆ. ಇವುಗಳಲ್ಲಿ ನಿಮಗೆ ಯಾವುದು ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಳ್ಳ ಬೇಕು.

ಐಟಿಆರ್-‌1 ಸಹಜ್:

ಐಟಿಆರ್-‌1 ಯಾರಿಗೆ ಅನ್ವಯವಾಗುತ್ತದೆ ಎಂಬುದ್ನು ತಿಳಿಯೋಣ. ಈ ಅರ್ಜಿಯು ಕೆಳಕಂಡವರಿಗೆ ಅಗತ್ಯ.

  1. ವೇತನ/ ಪಿಂಚಣಿ ಆದಾಯ ಇರುವವರಿಗೆ ಅನ್ವಯ.
  2. ಒಂದು ಮನೆಯ ಆಸ್ತಿಯಿಂದ ಆದಾಯ ಇರುವವರಿಗೆ (ಹಳೆ ವರ್ಷದ ನಷ್ಟ ಫಾರ್‌ವರ್ಡ್‌ ಆಗಿರುವುದನ್ನು ಹೊರತುಪಡಿಸಿ)
  3. ಇತರ ಮೂಲಗಳಿಂದ ಆದಾಯ ಇರುವವರಿಗೆ ( ಲಾಟರಿ ಮತ್ತು ಕುದುರೆ ರೇಸ್‌ ಇತ್ಯಾದಿಗಳಿಂದ)
  4. 5,000 ರೂ. ತನಕ ಕೃಷಿ ಆದಾಯ ಇರುವವರಿಗೆ ಅನ್ವಯ.

ಯಾರು ಐಟಿಆರ್-‌1 ಬಳಸಬಾರದು?

  1. ಒಟ್ಟು ಆದಾಯ 50 ಲಕ್ಷ ರೂ.ಗಿಂತ ಹೆಚ್ಚು ಇರುವವರು.
  2. ಕೃಷಿ ಆದಾಯ 5,000 ರೂ.ಗಿಂತ ಹೆಚ್ಚು ಇರುವವರು.
  3. ತೆರಿಗೆಗೆ ಅರ್ಹ ಕ್ಯಾಪಿಟಲ್‌ ಗೇನ್ಸ್‌ ಇರುವವರು.
  4. ಬಿಸಿನೆಸ್‌ ಅಥವಾ ಪ್ರೊಫೆಷನ್‌ ಮೂಲಕ ಆದಾಯ ಗಳಿಸುವವರು.
  5. ಕಂಪನಿಯ ನಿರ್ದೇಶಕ ಆಗಿದ್ದರೆ.
  6. ಅನ್‌ ಲಿಸ್ಟೆಡ್‌ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಇದ್ದರೆ.
  7. ವಿದೇಶಿ ಮೂಲದ ಆದಾಯ ಇದ್ದರೆ.
  8. ಸೆಕ್ಷನ್‌ 194 N ಅಡಿಯಲ್ಲಿ ತೆರಿಗೆ ಕಡಿತ ಆಗಿದ್ದರೆ.
  9. ಇಎಸ್‌ಒಪಿ ಅಡಿಯಲ್ಲಿ ತೆರಿಗೆ ಕಡಿತ ಮುಂದೂಡಿಕೆಯಾಗಿದ್ದರೆ.
  10. ಫಾರ್‌ ವರ್ಡ್‌ ಲಾಸ್‌ ಆಗಿದ್ದರೆ.

ಐಟಿಆರ್-‌2 ಇದು ಕೆಳಕಂಡವರಿಗೆ ಅಗತ್ಯ:

  1. ಐಟಿಆರ್‌ 2 ವೇತನ/ಪಿಂಚಣಿ ಆದಾಯ ಇರುವವರಿಗೆ ಬೇಕು.
  2. ಮನೆಯ ಪ್ರಾಪರ್ಟಿಯಿಂದ ಆದಾಯ ಇರುವವರಿಗೆ ಅಗತ್ಯ.
  3. ಇತರ ಮೂಲಗಳಿಂದ ಆದಾಯ.
  4. ಕಂಪನಿಯ ನಿರ್ದೇಶಕ ಆಗಿದ್ದರೆ.
  5. ಕಂಪನಿಯ ಪಾಲುದಾರಿಕೆ ಇದ್ದರೆ
  6. ಅನ್‌ ಲಿಸ್ಟೆಡ್‌ ಈಕ್ವಿಟಿ ಶೇರುಗಳಿಂದ ಆದಾಯ ಇದ್ದರೆ
  7. ಕ್ಯಾಪಿಟಲ್‌ ಗೈನ್ಸ್‌ ಆದಾಯ ಇದ್ದರೆ
  8. ವಿದೇಶಿ ಮೂಲದ ಆದಾಯ ಇದ್ದರೆ
  9. ಕೃಷಿ ಆದಾಯ 5,000 ರೂ. ಮೀರಿದ್ದರೆ.
  10. ಒಟ್ಟು ಆದಾಯ 50 ಲಕ್ಷ ರೂ. ಮೀರಿದ್ದರೆ.

ಯಾರು ಐಟಿಆರ್-‌2 ಬಳಸಬಾರದು? : ಬಿಸಿನೆಸ್‌ ಮೂಲಕ ಆದಾಯ ಇರುವವರು ಐಟಿಆರ್-‌2 ಬಳಸಬಾರದು.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಐಟಿಆರ್-‌3 ಯಾರಿಗೆ ಅಗತ್ಯ? ಪ್ರಾಪರ್ಟಿ ಅಥವಾ ಬಿಸಿನೆಸ್‌, ಪ್ರೊಫೆಶನ್ ಮೂಲಕ ಆದಾಯ ಇರುವವರು ಐಟಿಆರ್-‌3 ಬಳಸಬೇಕು. ಕಂಪನಿಯ ನಿರ್ದೇಶಕರಾಗಿರುವವರು, ಅನ್‌ ಲಿಸ್ಟೆಡ್‌ ಕಂಪನಿಯ ಈಕ್ವಿಟಿ ಶೇರುಗಳನ್ನು ಹೊಂದಿರುವವರು, ಹೌಸ್‌ ಪ್ರಾಪರ್ಟಿ, ವೇತನ/ಪಿಂಚಣಿ, ಇತರ ಮೂಲಗಳಿಂದ ಆದಾಯ ಇರುವವರು ಬಳಸಬಹುದು. ಕಂಪನಿಯ ಪಾಲುದಾರಿಕೆ ಇದ್ದರೆ ಸಲ್ಲಿಸಬಹುದು. ಕೊನೆಯ ಗಳಿಗೆಯಲ್ಲಿ ಐಟಿಆರ್‌ ಸಲ್ಲಿಸುವುದಕ್ಕಿಂತ ಸಾಕಷ್ಟು ಮೊದಲೇ ಸಿದ್ಧತೆ ನಡೆಸಿ ರಿಟರ್ನ್‌ ಫೈಲಿಂಗ್‌ ಮಾಡುವುದು ಸೂಕ್ತ. ಈ ಸಲ ಗಡುವು ಮುಂದೂಡಿಕೆ ಆಗುವ ಸಾಧ್ಯತೆ ಕಡಿಮೆ ಎಂದು ಕೂಡ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಗಡುವಿನ ಒಳಗೆ ಸಲ್ಲಿಸುವುದು ಸೂಕ್ತ. ಗಡುವು ಮೀರಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವಿಳಂಬಿತ ಶುಲ್ಕ, ಪೆನಾಲ್ಟಿ, ಬಡ್ಡಿ ಅನ್ವಯವಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: 1.5 ಲಕ್ಷ ರೂ. ಹೂಡಿಕೆ ಮಾಡಿ 2.27 ಕೋಟಿ ರೂ. ಗಳಿಸಿ! ಯಾವುದು ಈ ಸ್ಕೀಂ?

Money Guide: ಸುರಕ್ಷಿತ ಹೂಡಿಕೆ ಎಂದೇ ಕರೆಯಲ್ಪಡುವ ಪಿಪಿಎಫ್‌ ಮೂಲಕ ಉತ್ತಮ ಆದಾಯವನ್ನು ಪಡೆಯಬಹುದು. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

ppf
Koo

ಬೆಂಗಳೂರು: ಭಾರತದ ಮಧ್ಯಮ ವರ್ಗದ ಕುಟುಂಬಗಳಿಗೆ ಅನೇಕ ಕನಸುಗಳಿರುತ್ತವೆ. ಸ್ವಂತ ಮನೆ ಇರಬೇಕು, ವಾಹನ ಹೊಂದಬೇಕು, ವ್ಯಾಪಾರ ಮಾಡಬೇಕು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಹೀಗೆ… ಈ ಕನಸುಗಳನ್ನು ನನಸು ಮಾಡಲು ಅವರು ಕಷ್ಟಪಟ್ಟು ದುಡಿಯುತ್ತಾರೆ. ಇಂತಹ ಶ್ರಮದ ದುಡಿಮೆಯನ್ನು ಸುರಕ್ಷಿತವಾಗಿ ಇಡುವುದು ಕೂಡ ಮುಖ್ಯ. ಅದಕ್ಕೆ ಅತ್ಯುತ್ತಮ ಆಯ್ಕೆ ಸಾರ್ವಜನಿಕ ಭವಿಷ್ಯ ನಿಧಿ (Public Provident Fund–PPF) ಎಂದು ತಜ್ಞರು ಸಲಹೆ ನೀಡುತ್ತಾರೆ. ಪಿಪಿಎಫ್ ಮೂಲಕ ಹೂಡಿಕೆ ಮಾಡುವುದರಿಂದ ಸುರಕ್ಷತೆ ದೊರೆಯುವುದಷ್ಟೇ ಅಲ್ಲ ಉತ್ತಮ ಆದಾಯವೂ ಲಭ್ಯವಾಗುತ್ತದೆ. ಈ ಕುರಿತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ದೀರ್ಘಕಾಲೀನ ಹೂಡಿಕೆ

ಪಿಪಿಎಫ್‌ ದೀರ್ಘಕಾಲೀನ ಹೂಡಿಕೆದಾರರ ನೆಚ್ಚಿನ ಆಯ್ಕೆ ಎಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ತಿಂಗಳಿಗೆ 12,500 ರೂ. ಹೂಡಿಕೆ ಮಾಡಿದರೆ 2.27 ಕೋಟಿ ರೂ. ಆದಾಯ ಸಿಗಲಿದೆ. ಪಿಪಿಎಫ್‌ ಅನ್ನು ಹಣಕಾಸು ಸಚಿವಾಲಯದ ರಾಷ್ಟ್ರೀಯ ಉಳಿತಾಯ ಸಂಸ್ಥೆಯು 1968ರಲ್ಲಿ ಪರಿಚಯಿಸಿತ್ತು. ಇದು ಸರ್ಕಾರಿ ಬೆಂಬಲಿತ ಯೋಜನೆಯಾಗಿದ್ದು, ವಿಶೇಷವಾಗಿ ನಿವೃತ್ತಿಗಂತಲೇ ವಿನ್ಯಾಸಗೊಳಿಸಲಾಗಿದೆ.

ಅರ್ಹತೆಗಳೇನು?

ಈ ಯೋಜನೆಯಲ್ಲಿ ಭಾರತೀಯ ನಾಗರಿಕರು ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯಲು ಸಾಧ್ಯವಿದೆ. ಅಪ್ರಾಪ್ತ ವಯಸ್ಕರು ಅಥವಾ ಮಾನಸಿಕ ಅಸ್ವಸ್ಥರ ಪರವಾಗಿ ಗಾರ್ಡಿಯನ್‌ಗಳು ಕನಿಷ್ಠ 500 ರೂ. ಮತ್ತು ವಾರ್ಷಿಕ ಮಿತಿ ರೂ 1.5 ಲಕ್ಷ ರೂ.ಯೊಂದಿಗೆ ಪಿಪಿಎಫ್ ಖಾತೆಯನ್ನು ಪ್ರಾರಂಭಿಸಬಹುದು. ಅದಾಗ್ಯೂ ಅನಿವಾಸಿ ಭಾರತೀಯರು ಹೊಸ ಪಿಪಿಎಫ್‌ ಅಕೌಂಟ್‌ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ.

ಅವಧಿ

ಒಂದು ಪಿಪಿಎಫ್‌ ಅಕೌಂಟ್‌ಗೆ 15 ವರ್ಷಗಳ ಲಾಕ್‌ ಇನ್‌ ಅವಧಿ ಇರುತ್ತದೆ. ಅದಕ್ಕೂ ಮುನ್ನ ಫಂಡ್‌ ಅನ್ನು ಪೂರ್ಣಪ್ರಮಾಣದಲ್ಲಿ ಹಿಂತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಲಾಕ್‌ ಇನ್‌ ಅವಧಿಯನ್ನು ಮತ್ತೆ 5 ವರ್ಷ ವಿಸ್ತರಿಸಬಹುದು. ವರ್ಷಕ್ಕೆ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಲಂಪ್ಸಮ್‌ ಅಥವಾ ಕಂತುಗಳಲ್ಲಿ ಕಟ್ಟಬಹುದು. ಅಕೌಂಟ್‌ ಸಕ್ರಿಯವಾಗಲು ಪ್ರತಿ ವರ್ಷ ಕಟ್ಟಬೇಕು.

ಪಿಪಿಎಫ್ ಹೂಡಿಕೆಯ ಮೇಲೆ ಸಾಲ

ಇನ್ನೊಂದು ವಿಶೇಷ ಎಂದರೆ ಪಿಪಿಎಫ್‌ನಲ್ಲಿ ನೀವು ಮಾಡುವ ಇನ್ವೆಸ್ಟ್‌ಮೆಂಟ್‌ ಮೇಲೆ ಸಾಲ ಪಡೆಯಬಹುದು. ಆದರೆ ಇದಕ್ಕೆ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ. ಖಾತೆಯ 3-6ನೇ ವರ್ಷದಲ್ಲಿ ಮಾತ್ರ ಸಾಲ ಪಡೆಯಬಹುದು. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಹಣಕ್ಕಾಗಿ ಮಾತ್ರ ಕ್ಲೇಮ್‌ ಮಾಡಿಕೊಳ್ಳಬಹುದು.‌

2.27 ಕೋಟಿ ರೂ. ಆದಾಯ ಪಡೆಯುವುದು ಹೇಗೆ?

ಈ ಮೊದಲು ಹೇಳಿದಂತೆ ಪಿಪಿಎಫ್‌ ಖಾತೆಯಿಂದ 2.27 ಕೋಟಿ ರೂ. ಆದಾಯ ಗಳಿಸಿಸುವುದು ಹೇಗೆ ಎನ್ನುವುದನ್ನು ನೋಡೋಣ. ಪಿಪಿಎಫ್ ಖಾತೆಯಲ್ಲಿ 35 ವರ್ಷಗಳವರೆಗೆ ತಿಂಗಳಿಗೆ ಕೇವಲ 12,500 ಅಥವಾ ವಾರ್ಷಿಕವಾಗಿ 1.50 ಲಕ್ಷ ರೂ. ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಪ್ರಸ್ತುತ ಪಿಪಿಎಫ್‌ ಬಡ್ಡಿ ದರ 7.10%. ಇದನ್ನು ಪರಿಗಣಿಸಿ ಮೆಚ್ಯುರಿಟಿ ಸಮಯದಲ್ಲಿ (35 ವರ್ಷ ಆದ ಮೇಲೆ) ಸುಮಾರು 2.27 ಕೋಟಿ ರೂ. ಆದಾಯವನ್ನು ಪಡೆಯಬಹುದು.

ಇದನ್ನೂ ಓದಿ: Money Guide: ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಹಣ ಏನಾಗುತ್ತದೆ? ಹಣ ಮರಳಿ ಪಡೆಯುವುದು ಹೇಗೆ?

ಮುಂದುವರಿಸುವುದು ಹೇಗೆ?

ಪಿಪಿಎಫ್‌ ಖಾತೆಗಳ ಅವಧಿ 15 ವರ್ಷಗಳು. ಹಾಗಿದ್ದರೂ ಅದನ್ನು ಮತ್ತೆ ಮುಂದುವರಿಸುವ ಅವಕಾಶವಿದೆ. ಐದು ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಿಸಬಹುದು. 20 ವರ್ಷಗಳ ನಂತರವೂ ಮುಂದುವರಿಯಲು ನೀವು ಫಾರ್ಮ್ 16-ಎಚ್‌ (16-H) ಅನ್ನು ಸಲ್ಲಿಸಬೇಕಾಗುತ್ತದೆ. ಆಫ್‌ಲೈನ್‌ ಹಾಗೂ ಆನ್‌ಲೈನ್‌ ವಿಧಾನದಲ್ಲಿ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಮೂಲ ಮೊತ್ತಕ್ಕೆ ಟ್ಯಾಕ್ಸ್‌ ಬೆನಿಫಿಟ್‌ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ದೇಶ

Equity Market: 4 ಟ್ರಿಲಿಯನ್ ಡಾಲರ್‌ ತಲುಪಿದ ಭಾರತೀಯ ಈಕ್ವಿಟಿ ಮಾರುಕಟ್ಟೆ

USD 4 ಟ್ರಿಲಿಯನ್‌ಗಿಂತ ಹೆಚ್ಚು ಮೌಲ್ಯದ ಇತರ ಮಾರುಕಟ್ಟೆಗಳಲ್ಲಿ US, ಚೀನಾ, ಜಪಾನ್ ಮತ್ತು ಹಾಂಗ್ ಕಾಂಗ್ ಸೇರಿವೆ.

VISTARANEWS.COM


on

BSE building
Koo

ಮುಂಬಯಿ: ಪ್ರಮುಖ ಸ್ಟಾಕ್ ಎಕ್ಸ್‌ಚೇಂಜ್ (stock exchange) ಬಿಎಸ್‌ಇಯಲ್ಲಿ (BSE) ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯಮಾಪನವು (Equity Market) ಬುಧವಾರ ಮೊದಲ ಬಾರಿಗೆ 4 ಟ್ರಿಲಿಯನ್ ಅಮೆರಿಕನ್‌ ಡಾಲರ್‌ (3.33 ಕೋಟಿ ಕೋಟಿ ರೂ.) ಮೈಲಿಗಲ್ಲನ್ನು ತಲುಪಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ದಿನದ ಆರಂಭಿಕ ವಹಿವಾಟಿನಲ್ಲಿ ಸಕಾರಾತ್ಮಕವಾಗಿದ್ದು, 305.44 ಪಾಯಿಂಟ್‌ಗಳ ಏರಿಕೆ ಕಂಡು 66,479.64ಕ್ಕೆ ತಲುಪಿದೆ. ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿ (Equity Market) ಆಶಾವಾದ ಹಬ್ಬಿದ್ದು, ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಬೆಳಗಿನ ವಹಿವಾಟಿನಲ್ಲಿ ₹3,33,26,881.49 ಕೋಟಿಗಳನ್ನು ತಲುಪಿತು. ಡಾಲರ್‌ಗೆ 83.31 ರೂ. ವಿನಿಮಯ ದರದಲ್ಲಿ ಅದು USD 4 ಟ್ರಿಲಿಯನ್‌ ಆಗುತ್ತದೆ.

ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಈ ವರ್ಷ ಇಲ್ಲಿಯವರೆಗೆ 5,540.52 ಪಾಯಿಂಟ್‌ಗಳು ಅಥವಾ ಶೇಕಡಾ 9.10ರಷ್ಟು ಏರಿಕೆ ಕಂಡಿದ್ದರೆ, ಅದರ ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್) ಸುಮಾರು ₹ 50.81 ಲಕ್ಷ ಕೋಟಿಗಳಷ್ಟು ಜಿಗಿದಿದೆ. ಈ ವರ್ಷದ ಸೆಪ್ಟೆಂಬರ್ 15ರಂದು 30-ಷೇರ್ ಬೆಂಚ್‌ಮಾರ್ಕ್ ತನ್ನ ಸಾರ್ವಕಾಲಿಕ ಗರಿಷ್ಠ 67,927.23 ಅನ್ನು ತಲುಪಿತು.

USD 4 ಟ್ರಿಲಿಯನ್‌ಗಿಂತ ಹೆಚ್ಚು ಮೌಲ್ಯದ ಇತರ ಮಾರುಕಟ್ಟೆಗಳಲ್ಲಿ US, ಚೀನಾ, ಜಪಾನ್ ಮತ್ತು ಹಾಂಗ್ ಕಾಂಗ್ ಸೇರಿವೆ. ಮೇ 24, 2021ರಂದು, BSE ಯಲ್ಲಿ ಎಲ್ಲಾ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು USD 3-ಟ್ರಿಲಿಯನ್ ಮಾರ್ಕ್ ಅನ್ನು ಮುಟ್ಟಿತು.

ಮೇ 28, 2007ರಂದು ಪಟ್ಟಿಮಾಡಿದ ಸಂಸ್ಥೆಗಳ ಮೌಲ್ಯಮಾಪನವು USD 1-ಟ್ರಿಲಿಯನ್ ಮಟ್ಟವನ್ನು ದಾಟಿತ್ತು. USD 1 ಟ್ರಿಲಿಯನ್‌ನಿಂದ USD 1.5 ಟ್ರಿಲಿಯನ್‌ವರೆಗಿನ ಪ್ರಯಾಣ ಜೂನ್ 6, 2014ರಂದು ತುದಿ ಮುಟ್ಟಿದೆ. ಇದು ಏಳು ವರ್ಷಗಳಲ್ಲಿ. ಜುಲೈ 10, 2017ರಂದು ಪಟ್ಟಿ ಮಾಡಲಾದ ಕಂಪನಿಗಳ m-ಕ್ಯಾಪ್ USD 2 ಟ್ರಿಲಿಯನ್ ತಲುಪಿತು. 1.5 ಟ್ರಿಲಿಯನ್ ಮಟ್ಟದಿಂದ 1,130 ದಿನಗಳನ್ನು ತೆಗೆದುಕೊಂಡಿತು. ಅಲ್ಲಿಂದ, ಡಿಸೆಂಬರ್ 16, 2020ರಂದು USD 2.5 ಟ್ರಿಲಿಯನ್ ಮಾರ್ಕ್ ಅನ್ನು ದಾಟಲು 1,255 ದಿನಗಳನ್ನು ತೆಗೆದುಕೊಂಡಿತು.

ಇದನ್ನೂ ಓದಿ: Equity Funds : ಅಗ್ರೆಸ್ಸಿವ್‌ ಹೂಡಿಕೆದಾರರಿಗೆ ಹೆಚ್ಚು ಲಾಭ ನೀಡುವ ಈಕ್ವಿಟಿ ಫಂಡ್ಸ್

Continue Reading

ದೇಶ

Adani Stocks: ‘ಗೂಳಿ’ಯಂತೆ ಜಿಗಿದ ಅದಾನಿ ಗ್ರೂಪ್‌ ಷೇರುಗಳ ಮೌಲ್ಯ, 20% ಏರಿಕೆಗೆ ಏನು ಕಾರಣ?

Adani Stocks: ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರುಗಳ ಮೌಲ್ಯವು ದಿಢೀರನೆ ಏರಿಕೆಯಾಗಿದೆ. ಇತ್ತೀಚೆಗೆ ಅದಾನಿ-ಹಿಂಡನ್‌ಬರ್ಗ್‌ ರಿಸರ್ಚ್‌ ಪ್ರಕರಣದ ಕುರಿತು ಸೆಬಿ ತನಿಖೆಯ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪೇ ಇದಕ್ಕೆ ಕಾರಣ ಎನ್ನಲಾಗಿದೆ.

VISTARANEWS.COM


on

Adani Stocks Rise
Koo

ಮುಂಬೈ: ಗೌತಮ್‌ ಅದಾನಿ (Gautam Adani) ನೇತೃತ್ವದ ಅದಾನಿ ಗ್ರೂಪ್‌ ಷೇರುಗಳ (Adani Stocks) ಮೌಲ್ಯವು ಮಂಗಳವಾರ (ನವೆಂಬರ್‌ 18) ದಿಢೀರನೇ ಏರಿಕೆಯಾಗಿದೆ. ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ವಹಿವಾಟು (Share Market) ಆರಂಭವಾಗುತ್ತಲೇ ಅದಾನಿ ಗ್ರೂಪ್‌ ಷೇರುಗಳ ಮೌಲ್ಯದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅದಾನಿ ಗ್ರೂಪ್‌ ಷೇರುಗಳ ಮೌಲ್ಯವು ಶೇ.20ರಷ್ಟು ಏರಿಕೆಯಾಗಿದ್ದು, ಹೂಡಿಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ಬೆಳಗ್ಗೆ ಟ್ರೇಡಿಂಗ್‌ ಆರಂಭವಾಗುತ್ತಲೇ ಅದಾನಿ ಟೋಟಲ್‌ ಗ್ಯಾಸ್‌ನ ಷೇರುಗಳ ಮೌಲ್ಯವು ಶೇ.20ರಷ್ಟು ಏರಿಕೆಯಾಯಿತು. ಹಾಗೆಯೇ, ಅದಾನಿ ಎನರ್ಜಿ ಸೊಲ್ಯೂಷನ್ಸ್‌ ಷೇರುಗಳ ಬೆಲೆ ಶೇ.13ರಷ್ಟು ಏರಿಕೆ ಕಂಡಿತು. ನಿಫ್ಟಿ ಸ್ಟಾಕ್ಸ್‌ನಲ್ಲಿ ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಪೋರ್ಟ್ಸ್‌ ಸೇರಿ ಹಲವು ಅಂಗಸಂಸ್ಥೆಗಳ ಷೇರುಗಳ ಮೌಲ್ಯವು ಶೇ.3-4ರಷ್ಟು ಏರಿಕೆಯಾಗಿದೆ. ಅಲ್ಲದೆ ಅದಾನಿ ಗ್ರೂಪ್‌ ವ್ಯಾಪ್ತಿಗೆ ಬರುವ ಎನ್‌ಡಿಟಿವಿ, ಎಸಿಸಿ, ಅಂಬುಜಾ ಸಿಮೆಂಟ್‌ ಕಂಪನಿಗಳ ಮೌಲ್ಯವೂ ಏರಿಕೆಯಾಗಿದೆ. ಎನ್‌ಡಿಟಿವಿ ಷೇರುಗಳ ಮೌಲ್ಯ ಶೇ.7.78ರಷ್ಟು, ಅಂಬುಜಾ ಸಿಮೆಂಟ್‌ ಶೇ.3.73ರಷ್ಟು ಹಾಗೂ ಎಸಿಸಿಯು ಶೇ.3.02ರಷ್ಟು ಏರಿಕೆ ಕಂಡಿದೆ.

ದಿಢೀರ್‌ ಏರಿಕೆಗೆ ಕಾರಣ ಏನು?

ಗೌತಮ್‌ ಅದಾನಿ ಅವರ ಅದಾನಿ ಗ್ರೂಪ್‌ ವಿರುದ್ಧ ಹಿಂಡನ್‌ಬರ್ಗ್‌ ವರದಿಯಲ್ಲಿ ಮಾಡಲಾದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಮಾರುಕಟ್ಟೆ ನಿಯಂತ್ರಕ ಸೆಬಿಯನ್ನು (SEBI) ಅನುಮಾನಿಸಲು ಸಾಧ್ಯವಿಲ್ಲ ಎಂದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌ ಹೇಳಿರುವುದೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರುಗಳ ಮೌಲ್ಯ ದಿಢೀರನೆ ಏರಿಕೆಯಾಗಲು ಕಾರಣ ಎಂದು ತಿಳಿದುಬಂದಿದೆ. “ತನಿಖೆ ನಡೆಸುತ್ತಿರುವ ಸೆಬಿಯು ಎಲ್ಲ ರೀತಿಯ ತನಿಖೆ ಮುಗಿಸಲಿ. ಅಲ್ಲದೆ, ಸೆಬಿಯನ್ನು ಅನುಮಾನಿಸಲು ಆಗುವುದಿಲ್ಲ ಹಾಗೂ ಹಿಂಡನ್‌ಬರ್ಗ್‌ ವರದಿಯ ಎಲ್ಲ ಆರೋಪಗಳನ್ನು ನಿಜ ಎಂದು ಭಾವಿಸಬೇಕಿಲ್ಲ. ತನಿಖೆಗೆ ಎಸ್‌ಐಟಿ ರಚಿಸುವ ಅವಶ್ಯಕತೆ ಇಲ್ಲ” ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಇದನ್ನೂ ಓದಿ: Sri Lanka Port: ಶ್ರೀಲಂಕಾದಲ್ಲಿ ಭಾರತದ ಇನ್ನಷ್ಟು ಪ್ರಭಾವ; ಅದಾನಿ ಟರ್ಮಿನಲ್‌ನಲ್ಲಿ ಅಮೆರಿಕ ಭಾರಿ ಹೂಡಿಕೆ

ಅದಾನಿ ಗ್ರೂಪ್‌ಗೆ ಭಾರಿ ಲಾಭ

ಕಳೆದ ವರ್ಷಕ್ಕೆ (2022) ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ (2023) ಅದಾನಿ ಪವರ್ ಕಂಪನಿಯ ಏಕೀಕೃತ ಲಾಭವು ಒಂಬತ್ತು ಪಟ್ಟು ಏರಿಕೆಯಾಗಿ 6,594 ಕೋಟಿ ರೂ.ಗೆ ತಲುಪಿದೆ. 2023- 2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ತೆರಿಗೆ ನಂತರದ ಏಕೀಕೃತ ಲಾಭವು ಶೇಕಡಾ 848ರಷ್ಟು ಏರಿಕೆಯಾಗಿ 6,594 ಕೋಟಿ ರೂ.ಗೆ ತಲುಪಿದೆ ಎಂದು ಕಂಪನಿಯು ತಿಳಿಸಿದೆ. ಹಿಂಡನ್‌ಬರ್ಗ್‌ ವರದಿ ಬಳಿಕ ಅದಾನಿ ಗ್ರೂಪ್‌ ಷೇರುಗಳ ಮೌಲ್ಯ ಕುಸಿದಿತ್ತು. ಇದರಿಂದ ಹೂಡಿಕೆದಾರರಿಗೆ ನಷ್ಟವುಂಟಾಗಿತ್ತು. ಅಲ್ಲದೆ, ಅದಾನಿ ಗ್ರೂಪ್‌ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Vidyarthi Bhavan : ಹೊಸ ಲುಕ್‌ನಲ್ಲಿ ಮಿಂಚುತ್ತಿದೆ ವಿದ್ಯಾರ್ಥಿ ಭವನ; ಏನೇನು ಬದಲಾಗಿದೆ ನೋಡಿ!

Vidyarthi Bhavan: ಬೆಂಗಳೂರಿನ ಜನಪ್ರಿಯ ವಿದ್ಯಾರ್ಥಿ ಭವನ ಈಗ ಹೊಸ ಲುಕ್‌ನೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತಿದೆ. ಹಾಗಿದ್ದರೆ ಏನಾಗಿದೆ ಬದಲಾವಣೆ.

VISTARANEWS.COM


on

Vidyarthi Bhavana
Koo

ಬೆಂಗಳೂರು: ಬೆಂಗಳೂರಿನ ಐಡೆಂಟಿಟಿ ಎಂಬಂತೆ ಗುರುತಿಸಿಕೊಂಡಿರುವ ಜನಪ್ರಿಯ ಫುಡ್‌ ಜಾಯಿಂಟ್‌ ಗಾಂಧಿ ಬಜಾರ್‌ನ ವಿದ್ಯಾರ್ಥಿ ಭವನ (Vidyarthi Bhavan). ರಾಜಧಾನಿಗೆ ಬಂದವರು ಒಮ್ಮೆಯಾದರೂ ವಿದ್ಯಾರ್ಥಿ ಭವನಕ್ಕೆ ಹೋಗದೆ ಇರುವುದಿಲ್ಲ. ಇಂಥ ಆಕರ್ಷಕ ಹೋಟೆಲ್‌ ಈಗ ಹೊಸ ರೂಪ ಪಡೆದುಕೊಂಡಿದೆ. ತನ್ನ ಪಾರಂಪರಿಕ ಶೈಲಿಯೊಂದಿಗೆ ಗಮನ ಸೆಳೆಯುತ್ತಿರುವ ಈ ರೆಸ್ಟೋರೆಂಟ್‌ ಈಗ ಹೊಸ ವಿನ್ಯಾಸಗಳೊಂದಿಗೆ ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿ ಭವನಕ್ಕೆ ದೊಡ್ಡ ಇತಿಹಾಸವೇ ಇದೆ. 1943ರಲ್ಲಿ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ (Gandhi Bazar in Basavanagudi) ಆರಂಭಗೊಂಡ ಈ ಹೋಟೆಲ್‌ 80 ವರ್ಷಗಳ ಬಳಿಕವೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇದಕ್ಕೆ ಕಾರಣ ಅಲ್ಲಿನ ರುಚಿಕರ ಮಸಾಲೆ ದೋಸೆ (Vidyarthi Bhavan Masala dosa) ಮತ್ತು ಘಮಘಮಿಸುವ ಫಿಲ್ಟರ್‌ ಕಾಫಿ (Vidyarthi Bhavan).

ಉಡುಪಿಯ ವೆಂಕಟರಮಣ ಉರಾಳರು ಸ್ಥಾಪಿಸಿದ ಈ ಹೋಟೆಲ್‌ಗೆ ವಿದ್ಯಾರ್ಥಿ ಭವನ ಎಂಬ ಹೆಸರು ಬರುವುದಕ್ಕೂ ಒಂದು ಒಂದು ಕಥೆ ಇದೆ. ಮೊದಲು ಈ ಹೋಟೆಲ್‌ಗೆ ಹೆಸರು ಇರಲಿಲ್ಲ. ಈ ಭಾಗದಲ್ಲಿ ಶಾಲೆ ಮತ್ತು ಕಾಲೇಜುಗಳು ಇದ್ದಿದ್ದರಿಂದ ವಿದ್ಯಾರ್ಥಿಗಳನ್ನೇ ಟಾರ್ಗೆಟ್‌ ಮಾಡಿ ಈ ಹೋಟೆಲ್‌ ಆರಂಭಿಸಲಾಗಿತ್ತು. ಹೀಗಾಗಿ ವಿದ್ಯಾರ್ಥಿ ಭವನ ಎಂಬ ಹೆಸರು ಇಡಲಾಯಿತು. ಅಲ್ಪ ಕಾಲದಲ್ಲೇ ಜನಪ್ರಿಯತೆಯನ್ನು ಗಳಿಸಿದ ವಿದ್ಯಾರ್ಥಿ ಭವನವನ್ನು ಮುಂದೆ ವೆಂಕಟರಮಣ ಉರಾಳರ ತಮ್ಮ ಪರಮೇಶ್ವರ ಉರಾಳ ಅವರು ಮುಂದುವರಿಸಿದರು.

ಮುಚ್ಚುವ ಹೋಟೆಲ್‌ಗೆ ಜೀವದಾನ ನೀಡಿದ್ದು ನಾರಾಯಣಮೂರ್ತಿ!

ನಿಜವೆಂದರೆ, ಈ ಹೋಟೆಲ್‌ ಇವತ್ತು ಕೂಡಾ ಉಳಿದಿದೆ ಎಂದರೆ ಅದಕ್ಕೆ ಕಾರಣ ಇನ್ಫೋಸಿಸ್‌ ಸ್ಥಾಪಕರಾದ ನಾರಾಯಣ ಮೂರ್ತಿ ಅವರು ಎಂದು ಹೇಳಲಾಗುತ್ತಿದೆ. ಪರಮೇಶ್ವರ ಉರಾಳರು 1970ರಲ್ಲಿ ಈ ಹೋಟೆಲನ್ನು ಕುಂದಾಪುರದ ರಾಮಕೃಷ್ಣ ಅಡಿಗರಿಗೆ ಮಾರಾಟ ಮಾಡಿದ್ದರು. ಮುಂದೆ ಹಲವು ವರ್ಷ ಇದು ಚೆನ್ನಾಗಿಯೇ ನಡೆಯಿತು. ಆದರೆ, ರಾಮಕೃಷ್ಣ ಅಡಿಗರಿಗೆ ವಯಸ್ಸಾದಾಗ ಅದನ್ನು ನೋಡಿಕೊಳ್ಳುವುದು ಕಷ್ಟವಾಯಿತು. ಅವರ ಮಕ್ಕಳು ಒಳ್ಳೆಯ ಉದ್ಯೋಗದಲ್ಲಿದ್ದರು. ಹೀಗಾಗಿ ಈ ಹೋಟೆಲ್‌ನ್ನು ಪಡೆದು ಒಂದು ಕಮರ್ಷಿಯಲ್‌ ಕಾಂಪ್ಲೆಕ್ಸ್‌ ಕಟ್ಟಿಸುವುದು ಉತ್ತಮ ಎಂಬ ಅಭಿಪ್ರಾಯ ಬಂತು. ಆಗ ಅದು ಇನ್ಫೋಸಿಸ್‌ನ ನಾರಾಯಣ ಮೂರ್ತಿ ಅವರ ಕಿವಿಗೆ ಬಿತ್ತು. ನಾರಾಯಣ ಮೂರ್ತಿ ಅವರು ರಾಮಕೃಷ್ಣ ಅಡಿಗರ ಮಗ ಅರುಣ್‌ ಅಡಿಗರ ಜತೆ ಮಾತನಾಡಿ ಹೋಟೆಲ್‌ ಉದ್ಯಮ ಮುಂದುವರಿಸುವಂತೆ ಸಲಹೆ ನೀಡಿದರು ಎನ್ನಲಾಗಿದೆ. ಅದರಂತೆ ಅರುಣ್‌ ಅವರು ತಮ್ಮ ಉದ್ಯೋಗ ಬಿಟ್ಟು ವಿದ್ಯಾರ್ಥಿ ಭವನವನ್ನು ನೋಡಿಕೊಳ್ಳುತ್ತಿದ್ದಾರೆ. ಹೊಸ ಹೊಸ ಅನ್ವೇಷಣೆಗಳ ಮೂಲಕ ಜನಮನ ಗೆಲ್ಲುತ್ತಿದ್ದಾರೆ.

ವಿದ್ಯಾರ್ಥಿ ಭವನದಲ್ಲಿ ಕ್ಯೂನಲ್ಲಿ ನಿಲ್ಲುವುದೇ ಖುಷಿ!

ನಿಜವೆಂದರೆ ವಿದ್ಯಾರ್ಥಿ ಭವನ ಒಂದು ಸಣ್ಣ ಹೋಟೆಲ್‌. ನೀವು ಅಲ್ಲಿ ಒಂದು ದೋಸೆ ತಿನ್ನಬೇಕು ಎಂದರೆ ಅರ್ಧ ಗಂಟೆಯಾದರೂ ಕಾಯಬೇಕು. ಆದರೆ, ಜನರು ಕಾಯುವಿಕೆಯಲ್ಲೇ ಖುಷಿಪಡುತ್ತಾರೆ. ಅದೆಷ್ಟೋ ಸಾಹಿತಿಗಳು, ಸಿನಿಮಾ ನಟ-ನಟಿಯರು, ರಾಜಕಾರಣಿಗಳಿಗೆ ಇದೊಂದು ಫೇವರಿಟ್‌ ತಾಣವಾಗಿ ಮಾರ್ಪಟ್ಟಿದೆ. ಕೆಲವರಿಗೆ ಅಲ್ಲಿಗೆ ಹೋಗಿ ಒಂದು ಫೋಟೊ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಹಾಕುವುದೇ ಘನತೆಯ ಸಂಕೇತ.

ಇಲ್ಲಿ ತುಪ್ಪ, ದೋಸೆ, ಮಸಾಲೆ ದೋಸೆಯಲ್ಲದೆ, ಇಡ್ಲಿ, ಖಾರಾಬಾತ್‌, ಪೂರಿ ಸಾಗು, ರವೆ ವಡೆ, ಕೇಸರಿ ಬಾತ್‌ ಕೂಡಾ ಭಾರಿ ಫೇಮಸ್‌. ಇಲ್ಲಿನ ಫುಡ್‌ಗೆ ಯಾವುದೇ ಕೃತಕ ವಸ್ತುಗಳನ್ನು ಬೆರೆಸುವುದಿಲ್ಲ. ಬೆಣ್ಣೆಯೂ ಶುದ್ಧ, ತುಪ್ಪವೂ ಶುದ್ಧ. ಬೆಣ್ಣೆಯನ್ನು ಹಳ್ಳಿಯ ಭಾಗದಿಂದಲೇ ತರಿಸಲಾಗುತ್ತದೆ. ಹೀಗಾಗಿ ನೀವು ಇಲ್ಲಿ ದೋಸೆ ತಿಂದರೆ ಕೈ ತೊಳೆದರೂ ಪರಿಮಳ ಹಾಗೇ ಇರುತ್ತದೆ.

ಈ ಹೋಟೆಲ್‌ನಲ್ಲಿ ಸರ್ವ್‌ ಮಾಡುವವರು ಒಮ್ಮೆಗೇ 14 ತಟ್ಟೆಗಳನ್ನು ಹಿಡಿದುಕೊಂಡು ಬಂದು ಸರ್ವ್‌ ಮಾಡುವುದು ವಿಶೇಷ. ಅದರ ವಿಡಿಯೋಗಳು ಗಮನ ಸೆಳೆದಿವೆ. ಈ ವಿಡಿಯೊವನ್ನು ಸ್ವತಃ ಉದ್ಯಮಿ ಆನಂದ ಮಹೀಂದ್ರಾ ಅವರೇ ಹಂಚಿಕೊಂಡಿದ್ದರಿಂದ ವಿದ್ಯಾರ್ಥಿ ಭವನ ದೇಶಾದ್ಯಂತ ಮಿರಮಿರ ಮಿಂಚಿತ್ತು.

ಈಗ ನಡೆದಿರುವ ಬದಲಾವಣೆ ಏನು?

ಮೊದಲು ಇಲ್ಲಿ ಅಲ್ಲೇ ತಿನ್ನುವವರಿಗೆ ಮತ್ತು ಪಾರ್ಸೆಲ್‌ಗೆ ಒಂದೇ ಕೌಂಟರ್‌ ಇತ್ತು. ಈಗ ಪಾರ್ಸೆಲ್‌ಗೆ ಪ್ರತ್ಯೇಕ ಕೌಂಟರ್‌ ಮಾಡಲಾಗಿದೆ. ಹೀಗಾಗಿ ಕಾಯುವಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಹೋಟೆಲ್‌ನಲ್ಲಿರುವ ಹೊಸ ಆಕರ್ಷಣೆ ಏನೆಂದರೆ, ಹೋಟೆಲ್‌ನ ಪ್ರವೇಶ ದ್ವಾರದ ಪಕ್ಕದ ಗೋಡೆಯಲ್ಲಿ ಬರೆಯಲಾಗಿರುವ ಆಕರ್ಷಕ ಚಿತ್ರಗಳು. ಕಳೆದ ಕೆಲವು ದಿನಗಳಿಂದ ಟೀಮ್‌ ಇನ್‌ಕ್ರೇಜ್‌ ಎಂಬ ತಂಡ ಹೋಟೆಲ್‌ನ ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸುತ್ತಿತ್ತು, ಅದೀಗ ಪೂರ್ಣಗೊಂಡಿದೆ.

ಈ ಚಿತ್ರಗಳು ಪೂರ್ಣಗೊಂಡಾಗ ಅಲ್ಲಿ ಇಡೀ ಬಸವನ ಗುಡಿಯೇ ಅರಳಿಕೊಂಡಿದೆ. ಬಸವನ ಗುಡಿಯ ಚಾರಿತ್ರಿಕ ಚೆಲುವು, ಈಗಿನ ಬಣ್ಣ, ಬ್ಯೂಗಲ್‌ ರಾಕ್‌ ಬೆಟ್ಟ.. ಹೀಗೆ ಎಲ್ಲವನ್ನೂ ಒಳಗೊಂಡ ದೃಶ್ಯಗಳು ರೇಖಾಚಿತ್ರಗಳಲ್ಲಿ ಜೀವ ತಳೆದಿದೆ. ಇಲ್ಲಿ ಬುಲ್‌ ಟೆಂಪಲ್‌ನ ದೊಡ್ಡ ಗಣೇಶ ಇದ್ದಾನೆ, ಕೆಂಪೇಗೌಡರಿದ್ದಾರೆ, ಕಡಲೆ ಪರಿಷೆ ಸೇರಿದಂತೆ ಸಾಂಸ್ಕೃತಿಕ ಅಸ್ಮಿತೆಗಳಿವೆ.

ಈ ಹೋಟೆಲ್‌ಗೆ ಬಂದು ಹೋದ ದ.ರಾ. ಬೇಂದ್ರೆ, ನಿಸಾರ್‌ ಅಹಮದ್‌ ಸೇರಿದಂತೆ ಹಲವು ಸಾಹಿತಿಗಳ ಚಿತ್ರಗಳಿವೆ.

ನಿಮ್ಮ ಪ್ರತಿಭೆ ಮತ್ತು ಶ್ರದ್ಧೆಗಳು ಹೋಟೆಲ್‌ಗೆ ಹೊಸ ಲವಲವಿಕೆಯನ್ನು ತಂದುಕೊಟ್ಟಿವೆ. ನಮ್ಮ ಪುಟ್ಟ ಜಾಗವನ್ನು ನೀವು ಸಮೃದ್ಧಗೊಳಿಸಿದ್ದೀರಿ. ಆ ಮೂಲಕ ಎಲ್ಲರನ್ನೂ ಇಲ್ಲಿಗೆ ಬರುವಂತೆ ಪ್ರೇರೇಪಿಸುತ್ತಿದ್ದೀರಿ ಎಂದು ವಿದ್ಯಾರ್ಥಿ ಭವನದ ಫೇಸ್‌ಬುಕ್‌ನಲ್ಲಿ ಬರೆಯಲಾಗಿದೆ.

ಇದನ್ನು ಓದಿ: ಒಲಿಂಪಿಕ್ಸ್‌ಗೆ ಸೇರಿಸಿ: ವಿದ್ಯಾರ್ಥಿ ಭವನದ ವೇಯ್ಟರ್‌ ಬಗ್ಗೆ ಆನಂದ್‌ ಮಹೀಂದ್ರ ಟ್ವೀಟ್

ಹಾಗಿದ್ದರೆ ಅಲ್ಲಿಗೆ ಯಾವಾಗ ಹೋಗಬೇಕು?

ಇಷ್ಟೆಲ್ಲ ಕೇಳಿದ ಮೇಲೆ ನಿಮಗೆ ಅಲ್ಲಿಗೊಮ್ಮೆ ಹೋಗಿ ಚಿತ್ರಗಳನ್ನು ನೋಡಬೇಕು, ಒಂದು ದೋಸೆ, ಫಿಲ್ಟರ್‌ ಕಾಫಿ ಕುಡಿಯಬೇಕು ಅನಿಸಿದರೆ ಖಂಡಿತವಾಗಿಯೂ ಹೋಗಿ. ಹೋಗುವ ಮುನ್ನ ಸಮಯ ನೋಡಿಕೊಳ್ಳಿ.

ಸೋಮವಾರದಿಂದ ಗುರುವಾರ: ಬೆಳಗ್ಗೆ 6.30 ರಿಂದ 11.30, ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ
ಶುಕ್ರವಾರ ವಾರದ ರಜಾ ದಿನ
ಶನಿವಾರ ಮತ್ತು ಭಾನುವಾರ: ಬೆಳಗ್ಗೆ 6.30ರಿಂದ 12, ಮಧ್ಯಾಹ್ನ 1.30ರಿಂದ ರಾತ್ರಿ 8
ಅಂದ ಹಾಗೆ ಮಲ್ಲೇಶ್ವರದಲ್ಲೂ ಹೊಸ ಬ್ರಾಂಚ್‌ ಓಪನ್‌ ಆಗಿದೆ.

Continue Reading
Advertisement
Fashion Show
ದೇಶ34 mins ago

Fashion Show : ಏಕತೆಗೆ ಧಕ್ಕೆ; ಫ್ಯಾಶನ್​ ಶೋದಲ್ಲಿ ಬುರ್ಖಾ ಹಾಕಿದ್ದಕ್ಕೆ ಮುಸ್ಲಿಂ ನಾಯಕನ ಆಕ್ಷೇಪ!

kalpamrutha cold pressed oil production unit inaugurated
ಕರ್ನಾಟಕ34 mins ago

ಕಲ್ಪಾಮೃತ ಶುದ್ಧ ಗಾಣದ ಎಣ್ಣೆ ಉತ್ಪಾದನಾ ಘಟಕಕ್ಕೆ ಚಾಲನೆ

Gadaga accident two bike riders dead
ಕರ್ನಾಟಕ34 mins ago

Road Accident : ಸೋದರನ ನಿಶ್ಚಿತಾರ್ಥ ಮುಗಿಸಿ ಹೊರಟ ಇಬ್ಬರು ಅಪಘಾತದಲ್ಲಿ ಮೃತ್ಯು

Anju who went to Pakistan for to marry her lover, returns to India
ದೇಶ37 mins ago

Anju Love Story: ಪಾಕ್‌ಗೆ ಹೋಗಿ ಪ್ರಿಯಕರನ ಮದ್ವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್!

vijaypura accident
ಕರ್ನಾಟಕ50 mins ago

Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

Task force committee meeting at Kottur
ವಿಜಯನಗರ1 hour ago

Vijayanagara News: ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ನೇಮಿರಾಜ ನಾಯ್ಕ

Pooja Gandhi and Vijay Ghorpade
ಕರ್ನಾಟಕ1 hour ago

Pooja Gandhi: ಮಳೆ ಹುಡುಗಿಗೆ ಮಂತ್ರ ಮಾಂಗಲ್ಯ; ಹೊಸ ಬಾಳಿಗೆ ಕಾಲಿಟ್ಟ ಪೂಜಾ ಗಾಂಧಿ

Bombay High court orders to son to vacate his mother flat
ಕೋರ್ಟ್1 hour ago

ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

TV Mohandas Pai Priyank Kharge
ಕರ್ನಾಟಕ1 hour ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

physical abuse
ದೇಶ2 hours ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌