LIC : ಎನ್‌ಎಂಡಿಸಿಯಲ್ಲಿನ 2% ಷೇರುಗಳನ್ನು ಮಾರಿ 700 ಕೋಟಿ ರೂ. ಗಳಿಸಿದ ಎಲ್‌ಐಸಿ Vistara News
Connect with us

ವಾಣಿಜ್ಯ

LIC : ಎನ್‌ಎಂಡಿಸಿಯಲ್ಲಿನ 2% ಷೇರುಗಳನ್ನು ಮಾರಿ 700 ಕೋಟಿ ರೂ. ಗಳಿಸಿದ ಎಲ್‌ಐಸಿ

ಕಬ್ಬಿಣದ ಅದಿರು ಉತ್ಪಾದಕ ಎನ್‌ಎಂಡಿಸಿಯಲ್ಲಿನ 2% ಷೇರುಗಳನ್ನು ಎಲ್‌ಐಸಿಯು ಮಾರಾಟ ಮಾಡಿದ್ದು, 700 ಕೋಟಿ ರೂ. (LIC) ಗಳಿಸಿದೆ.

VISTARANEWS.COM


on

NMDC
Koo

ನವ ದೆಹಲಿ: ಭಾರತೀಯ ಜೀವ ವಿಮಾ ನಿಗಮ (LIC) ಬುಧವಾರ ಸಾರ್ವಜನಿಕ ವಲಯದ ಎನ್‌ಎಂಡಿಸಿಯಿಂದ 2% ಷೇರುಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಎನ್‌ಎಂಡಿಸಿಯಲ್ಲಿ ಎಲ್‌ಐಸಿಯ ಷೇರು ಪಾಲು 13.69%ರಿಂದ 11.69% ಕ್ಕೆ ಇಳಿಕೆಯಾಗಿದೆ. ಈ ಷೇರು ವಿಕ್ರಯದಿಂದ ಎಲ್‌ಐಸಿಯು 700 ಕೋಟಿ ರೂ. ಆದಾಯವನ್ನು ಗಳಿಸಿದೆ.

2022ರ ಡಿಸೆಂಬರ್‌ 29ರಿಂದ 2023ರ ಮಾರ್ಚ್‌ 14 ರ ಅವಧಿಯಲ್ಲಿ ಎಲ್‌ಐಸಿಯು ಎನ್‌ಎಂಡಿಸಿಯಲ್ಲಿನ ಷೇರು ಪಾಲನ್ನು ಕಡಿತಗೊಳಿಸಿದೆ. ಪ್ರತಿ ಷೇರಿಗೆ ಸರಾಸರಿ 119 ರೂ.ಗಳಂತೆ ಮಾರಾಟವಾಗಿದೆ.

ಎನ್‌ಎಂಡಿಸಿಯ ಒಟ್ಟು 5.88 ಕೋಟಿ ಷೇರುಗಳನ್ನು ಎಲ್‌ಐಸಿಯು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಒಟ್ಟು 700 ಕೋಟಿ ರೂ. ಸಂಪಾದಿಸಿದೆ. ಎನ್‌ಎಂಡಿಸಿಯು ಕಬ್ಬಿಣದ ಅದಿರು ಗಣಿಗಾರಿಕೆ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ

ಪ್ರಮುಖ ಸುದ್ದಿ

Small savings schemes : ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಕೆ ಸಂಭವ

ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಏರಿಸುವ ಸಾಧ್ಯತೆ ಇದೆ. ಸರ್ಕಾರಿ ಬಾಂಡ್‌ಗಳ ಆದಾಯದಲ್ಲಿ ಇತ್ತೀಚಿನ ಏರಿಕೆ ಇದಕ್ಕೆ ಪುಷ್ಟಿ ( Small savings schemes) ನೀಡಿದೆ.

VISTARANEWS.COM


on

Edited by

cash
Koo

ನವ ದೆಹಲಿ: ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು (Small savings schemes) ಏರಿಸುವ ಸಾಧ್ಯತೆ ಇದೆ. 2023ರ ಏಪ್ರಿಲ್-ಜೂನ್‌ ಅವಧಿಯ ಬಡ್ಡಿ ದರಗಳು ಪರಿಷ್ಕರಣೆಯಾಗುವ ನಿರೀಕ್ಷೆ ಇದೆ. ಕಳೆದ 6 ತಿಂಗಳುಗಳಲ್ಲಿ ಇವುಗಳ ಬಡ್ಡಿ ದರದಲ್ಲಿ 0.30%ರಿಂದ 1.40% ತನಕ ಏರಿಕೆಯಾಗಿದೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರವು ಸರಕಾರಿ ಸಾಲಪತ್ರಗಳಲ್ಲಿ ಸಿಗುವ ಆದಾಯದ ಆಧಾರದಲ್ಲಿ ನಿಗದಿಪಡಿಸುತ್ತದೆ. ಐದು ವರ್ಷ ಅವಧಿಯ ಸರ್ಕಾರಿ ಬಾಂಡ್‌ಗಳ ಆದಾಯ 0.30% ಏರಿಕೆಯಾಗಿದ್ದು, 10 ವರ್ಷ ಅವಧಿಯ ಬಾಂಡ್‌ ಆದಾಯ 0.20% ಏರಿಕೆಯಾಗಿದೆ.

ಸಣ್ಣ ಉಳಿತಾಯ ಯೋಜನೆಜನವರಿ-ಮಾರ್ಚ್ ಅವಧಿಗೆ ಬಡ್ಡಿ ದರ
‌ಉಳಿತಾಯ ಠೇವಣಿ4.0%
1 ವರ್ಷದ ಟೈಮ್‌ ಡಿಪಾಸಿಟ್6.6%
‌2 ವರ್ಷದ ಟೈಮ್‌ ಡಿಪಾಸಿಟ್6.8%
‌3 ವರ್ಷದ ಟೈಮ್‌ ಡಿಪಾಸಿಟ್6.9%
‌5 ವರ್ಷದ ಟೈಮ್‌ ಡಿಪಾಸಿಟ್7.0%
‌5 ವರ್ಷದ ರಿಕರಿಂಗ್‌ ಡಿಪಾಸಿಟ್7.0%
ಹಿರಿಯ ನಾಗರಿಕರ ಉಳಿತಾಯ ಯೋಜನೆ8.0%
ಮಾಸಿಕ ಆದಾಯ ಖಾತೆ7.1%
ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್7.0%
ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಯೋಜನೆ7.1%
ಕಿಸಾನ್‌ ವಿಕಾಸ್‌ ಪತ್ರ7.2%
ಸುಕನ್ಯಾ ಸಮೃದ್ಧಿ ಖಾತೆ ಯೋಜನೆ7.6%

ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಸರ್ಕಾರಿ ಬಾಂಡ್‌ಗಳ ಆದಾಯ ಇಳಿಕೆಯಾಗಿತ್ತು. ಇದರ ಪರಿಣಾಮ ಸಣ್ಣ ಉಳಿತಾಯ ಯೋಜನೆಗಖ ಬಡ್ಡಿ ದರ ಕುಸಿದಿತ್ತು. ಆದರೆ ಆರ್‌ಬಿಐ ರೆಪೊ ದರ ಏರಿಕೆಯ ಬಳಿಕ ಬ್ಯಾಂಕ್‌ಗಳು ಠೇವಣಿ ಬಡ್ಡಿ ದರಗಳನ್ನು ಏರಿಸಿವೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕೂಡ ಏರಿಕೆಯಾಗುವ ನಿರೀಕ್ಷೆ ಉಂಟಾಗಿದೆ.

Continue Reading

ಪ್ರಮುಖ ಸುದ್ದಿ

Foreign Trade Policy 2023 : ವಿದೇಶಗಳ ಜತೆ ವ್ಯಾಪಾರದಲ್ಲಿ ಡಾಲರ್‌ ಬದಲು ರೂಪಾಯಿಗೆ ಆದ್ಯತೆ ನೀಡಿದ ಹೊಸ ನೀತಿ

ಭಾರತ ಶುಕ್ರವಾರ ತನ್ನ ವಿದೇಶಾಂಗ ವ್ಯಾಪಾರ ನೀತಿಯನ್ನು ಪ್ರಕಟಿಸಿದೆ. (Foreign Trade Policy 2023 ) ಹಲವು ಮಹತ್ವದ ಬದಲಾವಣೆಗಳನ್ನು ಒಳಗೊಂಡಿದೆ. ವಿವರ ಇಲ್ಲಿದೆ.

VISTARANEWS.COM


on

Edited by

export
Koo

ನವ ದೆಹಲಿ: ಭಾರತ ಶುಕ್ರವಾರ ತನ್ನ ವಿದೇಶಾಂಗ ವ್ಯಾಪಾರ ನೀತಿಯನ್ನು (Foreign Trade Policy 2023) ಪ್ರಕಟಿಸಿದ್ದು, 5 ವರ್ಷಗಳ ಸೀಮಿತ ಅವಧಿಯ ಬದಲು ದೀರ್ಘಕಾಲೀನ ದೃಷ್ಟಿಗೆ ಆದ್ಯತೆ ನೀಡಿದೆ. ವಿದೇಶಗಳ ಜತೆಗೆ ವ್ಯಾಪಾರದಲ್ಲಿ ಡಾಲರ್‌ ಬದಲಿಗೆ ರೂಪಾಯಿ ಬಳಕೆಗೆ ಉತ್ತೇಜಿಸಲಾಗಿದೆ. ಇದುವರೆಗೆ ವಿದೇಶಾಂಗ ವ್ಯಾಪಾರ ನೀತಿಯ ಅವಧಿ ಐದು ವರ್ಷಗಳಿಗೆ ಮುಕ್ತಾಯವಾಗುತ್ತಿತ್ತು. ಇದೀಗ ಮುಕ್ತಾಯದ ದಿನ ಇರುವುದಿಲ್ಲ. ಆದರೆ ಕಾಲಾನುಸಾರ ಪರಿಷ್ಕರಣೆ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಹೊಸ ವಿದೇಶಾಂಗ ನೀತಿಯು ಡೈನಾಮಿಕ್‌ ಆಗಿದ್ದು, ಅದಕ್ಕೆ ಕೊನೆಯ ದಿನಾಂಕ ಇರುವುದಿಲ್ಲ. ನಾವು ಪ್ರತಿಕ್ರಿಯೆ, ಸಲಹೆಗಳನ್ನು ಅಧರಿಸಿ ದಾಖಲೆಗಳನ್ನು ಪರಿಷ್ಕರಿಸುತ್ತೇವೆ. ಯಾವುದಾದರೂ ಕ್ಷೇತ್ರವು ತನಗೆ ನೀತಿಯಲ್ಲಿ ಆದ್ಯತೆ ಇಲ್ಲ ಎಂದು ಭಾವಿಸಿದರೆ ನಿರಾಸೆಪಡಬೇಕಿಲ್ಲ ಎಂದು ವಿದೇಶಾಂಗ ವ್ಯಾಪಾರ ನೀತಿಯ ಪ್ರಧಾನ ನಿರ್ದೇಶಕ ಸಂತೋಷ್‌ ಸಾರಂಗಿ ತಿಳಿಸಿದರು.

ನೂತನ ವಿದೇಶಾಂಗ ವ್ಯಾಪಾರ ನೀತಿಯ ಮುಖ್ಯಾಂಶ:

2030ರ ವೇಳೆಗೆ 2 ಲಕ್ಷ ಕೋಟಿ ಡಾಲರ್‌ (164 ಲಕ್ಷ ಕೋಟಿ ರೂ.) ರಫ್ತು ನಡೆಸುವ ಗುರಿಯನ್ನು ಭಾರತ ಹೊಂದಿದೆ.

ವಿದೇಶಾಂಗ ವ್ಯಾಪಾರ ನೀತಿಗೆ ಕೊನೆಯ ದಿನಾಂಕ ಇರುವುದಿಲ್ಲ, ಕಾಲಾನುಸಾರ ಪರಿಷ್ಕರಣೆ ಇರುತ್ತದೆ.

ಭಾರತವು ಕರೆನ್ಸಿ ಬಿಕ್ಕಟ್ಟು ಅಥವಾ ಡಾಲರ್‌ ಕೊರತೆ ಎದುರಿಸುತ್ತಿರುವ ದೇಶಗಳ ಜತೆಗೆ ರೂಪಾಯಿ ಮೂಲಕ ವಹಿವಾಟು ನಡೆಸಲು ಸಿದ್ಧವಿರುವುದಾಗಿ ಘೋಷಿಸಿದೆ.

2022-23ರಲ್ಲಿ ಭಾರತವು 765 ಶತಕೋಟಿ ಡಾಲರ್‌ (62 ಲಕ್ಷ ಕೋಟಿ ರೂ.) ಮೌಲ್ಯದ ರಫ್ತು ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ.

ಫರೀದಾಬಾದ್‌, ಮೊರಾದಾಬಾದ್‌, ಮಿರ್ಜಾಪುರ ಮತ್ತು ವಾರಾಣಸಿಯನ್ನು ರಫ್ತು ಕೇಂದ್ರವಾಗಿ ಘೋಷಿಸಲಾಗಿದೆ.

ಕೊರಿಯರ್‌ ಮೂಲಕ ರಫ್ತಿಗೆ ಮೌಲ್ಯವನ್ನು ಪ್ರತಿ ಯುನಿಟ್‌ಗೆ 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗೆ ಏರಿಸಲಾಗಿದೆ.

ಸರಾಸರಿ ರಫ್ತು ಬದ್ಧತೆಯ ವ್ಯಾಪ್ತಿಯಿಂದ ಡೇರಿ ವಲಯವನ್ನು ಮುಕ್ತಗೊಳಿಸಲಾಗಿದೆ.

ಇ-ಕಾಮರ್ಸ್‌ ವ್ಯಾಪಾರವನ್ನು 2023 ವೇಳೆಗೆ 300 ಶತಕೋಟಿ ಡಾಲರ್‌ಗೆ ( 24 ಲಕ್ಷ ಕೋಟಿ ರೂ.) ಏರಿಸುವ ಗುರಿ.

ರಫ್ತು ಬಾಧ್ಯತೆಯನ್ನು ಪಾಲಿಸುವಲ್ಲಿ ವಿಫಲರಾದವರಿಗೆ ಒನ್‌ ಟೈಮ್‌ ಸೆಟ್ಲ್‌ಮೆಂಟ್‌ ನೀತಿ.

Continue Reading

ಅಂಕಣ

Brand story : ಚೀನಾದ ಇ-ಕಾಮರ್ಸ್‌ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?

ಚೀನಾದಿಂದ ಕಳೆದ ಎರಡು ವರ್ಷಗಳಿಂದ ದೂರವಾಗಿದ್ದ ಇ-ಕಾಮರ್ಸ್‌ ದಿಗ್ಗಜ ಅಲಿಬಾಬಾದ ಸ್ಥಾಪಕ ಜಾಕ್‌ ಮಾ, ಇದೀಗ ತವರಿಗೆ ಮರಳಿದ್ದಾರೆ. ಜತೆಗೆ ಅಲಿಬಾಬಾ 6 ಕಂಪನಿಗಳಾಗಿ ಮೊದಲ ಬಾರಿಗೆ ವಿಭಜನೆಯಾಗುತ್ತಿದೆ. (Brand story) ಈ ಬೆಳವಣಿಗೆ ಜಾಗತಿಕ ಕಾರ್ಪೊರೇಟ್‌ ವಲಯದ ಗಮನ ಸೆಳೆದಿದೆ.

VISTARANEWS.COM


on

Edited by

Jack Ma
Koo
brand story

ಚೀನಾದ ಕಾರ್ಪೊರೇಟ್‌ ವಲಯದಲ್ಲಿ ಅತಿ ದೊಡ್ಡ ಇ-ಕಾಮರ್ಸ್‌ ಕಂಪನಿಯಾಗಿರುವ ಅಲಿಬಾಬಾ ದೊಡ್ಡ ಸಂಚಲನ ಸೃಷ್ಟಿಸಿದೆ. ಇದಕ್ಕೆ ಕಾರಣ ದೈತ್ಯ ಸಮೂಹ ತನ್ನ 24 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದು. (Brand story) ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಸಮೂಹದ ಷೇರು ದರದಲ್ಲಿ ಏರಿಕೆಯಾಗಿದೆ. 1999ರ ಜೂನ್‌ 28ರಂದು ಸ್ಥಾಪನೆಯಾದ ಅಲಿಬಾಬಾ ಗ್ರೂಪ್‌ ಹೋಲ್ಡಿಂಗ್‌ ಲಿಮಿಟೆಡ್‌ (Alibaba Group Holding Limited) ಚೀನಾದ ಅತಿ ದೊಡ್ಡ ಇ-ಕಾಮರ್ಸ್‌ ಕಂಪನಿ. ಜತೆಗೆ ರಿಟೇಲ್‌, ಇಂಟರ್‌ನೆಟ್‌ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಹಿವಾಟು ನಡೆಸುತ್ತಿದೆ.

ಜಾಗತಿಕ ಮಟ್ಟದ ಇ-ಕಾಮರ್ಸ್‌ ದಿಗ್ಗಜ ಕಂಪನಿಗಳನ್ನು ಗಮನಿಸಿದರೆ, ಚೀನಾದ ಅಲಿಬಾಬಾ ಮತ್ತು ಅಮೆರಿಕದ ಅಮೆಜಾನ್‌ ದೈತ್ಯ ಕಂಪನಿಗಳು. ಆದರೆ ಇವೆರಡರ ಬಿಸಿನೆಸ್‌ ಮಾದರಿಯಲ್ಲಿ ವ್ಯತ್ಯಾಸವೂ ಇದೆ. ಅಮೆಜಾನ್‌ ಹೊಸ ಮತ್ತು ಹಳೆಯ ಸರಕುಗಳನ್ನು ಇ-ಕಾಮರ್ಸ್‌ ಮೂಲಕ ಮಾರಾಟ ಮಾಡುವ ದೈತ್ಯ ರಿಟೇಲರ್‌ ಕಂಪನಿಯಾಗಿದ್ದರೆ, ಅಲಿಬಾಬಾ, ಮಾರಾಟಗಾರರು ಮತ್ತು ಖರೀದಿದಾರರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಅಲಿಬಾಬಾ ನಡೆಸುತ್ತಿರುವ Taobao ಎಂಬ ಇ-ಕಾಮರ್ಸ್‌ ತಾಣದಲ್ಲಿ ಮಾರಾಟಗಾರರು-ಖರೀದಿದಾರರು ತಮ್ಮ ವರ್ಗಾವಣೆಗೆ ಯಾವುದೇ ಹಣ ಕೊಡಬೇಕಿಲ್ಲ. ಶುಲ್ಕ ರಹಿತ ಮಾರುಕಟ್ಟೆ ವೇದಿಕೆ ಇದಾಗಿದೆ. ಸಣ್ಣ ವರ್ತಕರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಅಲಿಬಾಬಾ ದೊಡ್ಡ ರಿಟೇಲರ್‌ಗಳಿಗೂ ವಿಶೇಷವಾಗಿ ಮುಡಿಪಾಗಿರುವ Tmal ಎಂಬ ಇ-ಕಾಮರ್ಸ್‌ ತಾಣವನ್ನೂ ಒಳಗೊಂಡಿದೆ. ಇಲ್ಲಿ ಗ್ಯಾಪ್‌, ನೈಕ್‌, ಆಪಲ್‌ ಮೊದಲಾದ ಬ್ರ್ಯಾಂಡ್‌ಗಳ ಬಿಸಿನೆಸ್‌ ನಡೆಯುತ್ತದೆ. ಈ ಸೈಟ್‌ ಬಳಸುವ ರಿಟೇಲರ್ಸ್‌ಗಳಿಂದ ಠೇವಣಿ, ವಾರ್ಷಿಕ ಬಳಕೆದಾರರ ಶುಲ್ಕ, ಸೇಲ್ಸ್‌ ಕಮೀಶನ್‌ ಪಡೆದು ಅಲಿಬಾಬಾ ತನ್ನ ಆದಾಯವನ್ನು ಪಡೆಯುತ್ತದೆ. ಅಲಿಬಾಬಾ ಅಲಿಪೇ (Alipay) ಎಂಬ‌ ಸೆಕ್ಯೂರ್ ಪೇಮೆಂಟ್‌ ಸಿಸ್ಟಮ್ ಅನ್ನೂ ಹೊಂದಿದೆ. ‌

ಜಾಕ್‌ ಮಾ (Jack Ma) ಮಾಲಿಕತ್ವದ ಅಲಿಬಾಬಾ ಗ್ರೂಪ್‌, 220 ಶತಕೋಟಿ ಡಾಲರ್‌ ( ಅಂದಾಜು 18 ಲಕ್ಷ ಕೋಟಿ ರೂ.) ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಅಲಿಬಾಬಾ ಸಮೂಹವು 6 ಪ್ರತ್ಯೇಕ ಕಂಪನಿಗಳಾಗಿ ವಿಭಜನೆಯಾಗುವುದರ ಜತೆಗೆ ಹಲವು ಐಪಿಒಗಳನ್ನೂ ನಡೆಸಲಿದೆ. ಹೀಗಾಗಿ ಷೇರು ಹೂಡಿಕೆದಾರರಿಗೆ ಅಲಿಬಾಬಾ ಕಂಪನಿಗಳಲ್ಲಿ ಹೂಡಿಕೆಗೆ ಅವಕಾಶ ಸಿಗಲಿದೆ ಎಂದು ವರದಿಯಾಗಿದೆ. ತಂತ್ರಜ್ಞಾನ ವಲಯದ ದಿಗ್ಗಜ ಕಂಪನಿಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಹೊಂದುತ್ತಿವೆ ಎಂಬ ಚೀನಿ ಸರ್ಕಾರದ ಆಕ್ಷೇಪವನ್ನು ಎದುರಿಸಲು ಹಾಗೂ ಫಂಡ್‌ ಸಂಗ್ರಹಿಸಲು ಜಾಕ್‌ ಮಾಗೆ ಈ ನಡೆ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಲಿಬಾಬಾ ಗ್ರೂಪ್‌ ಈ ರೀತಿ ವಿಭಜನೆಯಾಗಲಿದೆ- ಕ್ಲೌಡ್‌ ಇಂಟಲಿಜೆನ್ಸ್‌ ಗ್ರೂಪ್‌, ಟಾಬಾವೊ ಟಿಮಾಲ್‌ ಕಾಮರ್ಸ್‌ ಗ್ರೂಪ್‌, ಲೋಕಲ್‌ ಸರ್ವೀಸ್‌ ಗ್ರೂಪ್‌, ಕೈನಿಯೊ ಸ್ಮಾರ್ಟ್ ಲಾಜಿಸ್ಟಿಕ್ಸ್‌ ಗ್ರೂಪ್‌, ಗ್ಲೋಬಲ್‌ ಡಿಜಿಟಲ್‌ ಕಾಮರ್ಸ್‌ ಗ್ರೂಪ್‌ ಮತ್ತು ಡಿಜಿಟಲ್‌ ಮೀಡಿಯಾ & ಎಂಟರ್‌ಟೈನ್‌ಮೆಂಟ್‌ ಗ್ರೂಪ್.

ಚೀನಾಕ್ಕೆ ಮರಳಿದ ಜಾಕ್‌ ಮಾ

jack ma
Jack Ma

ಕಳೆದ 2021ರ ನವೆಂಬರ್ ಬಳಿಕ ಚೀನಾದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಸುದ್ದಿಯಾಗಿದ್ದ ಜಾಕ್‌ ಮಾ, ವಿದೇಶದಲ್ಲಿದ್ದರು. ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆಯೇ ಎಂಬ ಊಹಾಪೋಹವೂ ಉಂಟಾಗಿತ್ತು.‌ ಶಾಂಘೈನಲ್ಲಿ ಬಹಿರಂಗವಾಗಿಯೇ ಕ್ಸೀ ಜಿನ್‌ಪಿಂಗ್‌ ಸರ್ಕಾರವನ್ನು ಟೀಕಿಸಿದ್ದರು. ಜಾಕ್‌ ಮಾ ಹಾಗೂ ಚೀನಿ ಅಧ್ಯಕ್ಷ ಜಿನ್‌ ಪಿಂಗ್‌ ನಡುವೆ ಭಿನ್ನಾಭಿಪ್ರಾಯದ ಬಗ್ಗೆ ವದಂತಿ ಹರಡಿತ್ತು. ಇದೀಗ ಮತ್ತೆ ಚೀನಾಕ್ಕೆ ಆಗಮಿಸಿದ್ದಾರೆ. ಇದರೊಂದಿಗೆ ಸೂಪರ್‌ ಮಾರ್ಕೆಟ್‌ನಿಂದ ಡೇಟಾ ಸೆಂಟರ್‌ ತನಕ ಎಲ್ಲ ಬಿಸಿನೆಸ್‌ ಅನ್ನೂ ಒಂದೇ ಸಮೂಹದ ವೇದಿಕೆಯಲ್ಲಿ ಇಡುವ ಪದ್ಧತಿಗೆ ಅಲಿಬಾಬಾ ತಿಲಾಂಜಲಿ ನೀಡಿದೆ. ಅಲಿಬಾಬಾ ವಿಭಜನೆಯ ಸುದ್ದಿ ಹಿನ್ನೆಲೆಯಲ್ಲಿ ಅದರ ಷೇರು ದರದಲ್ಲಿ 15% ಏರಿಕೆಯಾಗಿದೆ.

ಇಂಗ್ಲಿಷ್‌ ಶಿಕ್ಷಕರಾಗಿದ್ದ ಜಾಕ್‌ ಮಾ ಕಟ್ಟಿದ ಇ-ಕಾಮರ್ಸ್‌ ಸಾಮ್ರಾಜ್ಯ!

ಅಲಿ ಬಾಬಾ ಎಂದೊಡನೆ ಬಾಲ್ಯದಲ್ಲಿ ಕೇಳುತ್ತಿದ್ದ ಅಲಿಬಾಬಾ ಮತ್ತು ನಲುವತ್ತು ಕಳ್ಳರ ಕತೆ ನೆನಪಾಗಬಹುದು. ಅರೇಬಿಯಾದ ಜಾನಪದ ಕಥಾ ನಾಯಕನ ಹೆಸರನ್ನು 24 ವರ್ಷಗಳ ಹಿಂದೆ ಜಾಕ್‌ ಮಾ ಅವರು ತಮ್ಮ ಇ-ಕಾಮರ್ಸ್‌ ಕಂಪನಿಗೆ ಇಟ್ಟಿದ್ದರು. ಆಗ ಅಲಿಬಾಬಾ ಚೀನಾದ ಅತಿ ದೊಡ್ಡ ಇ-ಕಾಮರ್ಸ್‌ ಕಂಪನಿಯಾಗಲಿದೆ ಎಂದು ಅಂದುಕೊಂಡಿರಲಿಲ್ಲ. ಏಕೆಂದರೆ ಚೀನಾದ ಹನ್‌ಜುಯು ಎಂಬಲ್ಲಿ ಪುಟ್ಟ ಅಪಾರ್ಟ್‌ಮೆಂಟ್‌ನಲ್ಲಿ ಒಂದಷ್ಟು ಮಂದಿ ಗೆಳೆಯರ ಬಳಗದೊಂದಿಗೆ 60 ಸಾವಿರ ಡಾಲರ್‌ ಬಂಡವಾಳವನ್ನು ಹೊಂದಿಸಿ ಸಣ್ಣದಾಗಿ ವ್ಯಾಪಾರ ಶುರು ಹಚ್ಚಿಕೊಂಡಿದ್ದರು. ಆದರೆ ಬಳಿಕ ನಡೆದದ್ದು ಈಗ ರೋಚಕ ಇತಿಹಾಸ. ಜಾಕ್‌ ಮಾ ಕೇವಲ 15 ವರ್ಷದಲ್ಲೇ ಚೀನಾದ ನಂ.1 ಮತ್ತು ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತರಾಗಿ ಹೊರಹೊಮ್ಮಿದ್ದರು. 2005ರಲ್ಲಿ ಅಲಿಬಾಬಾ, ಚೀನಾದಲ್ಲಿ ಯಾಹೂವನ್ನು ಖರೀದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. 2014ರಲ್ಲಿ ನ್ಯೂಯಾರ್ಕ್‌ ಷೇರು ವಿನಿಮಯ ಕೇಂದ್ರದಲ್ಲಿ (New York Stock Exchange) ಅಲಿಬಾಬಾದ ಆರಂಭಿಕ ಷೇರು ಬಿಡುಗಡೆ (Initial public offering) ನಡೆಯಿತು. ಕಂಪನಿಗೆ 25 ಶತಕೋಟಿ ಡಾಲರ್‌ ಹಣ ಹರಿದು ಬಂತು. ಮಾರುಕಟ್ಟೆ ಮೌಲ್ಯ 231 ಶತಕೋಟಿ ಡಾಲರ್‌ಗೆ ಜಿಗಿಯಿತು. ಇದು ಆಗ ವಿಶ್ವದ ಐಪಿಒ ಚರಿತ್ರೆಯಲ್ಲಿಯೇ ಅತಿ ದೊಡ್ಡದು ಎಂದು ದಾಖಲೆಗೆ ಪಾತ್ರವಾಗಿತ್ತು. 2018ರಲ್ಲಿ 500 ಶತ ಫೋರ್ಬ್ಸ್‌ 2020ರಲ್ಲಿ ಅಲಿಬಾಬಾವನ್ನು ಜಗತ್ತಿನ 31ನೇ ಅತಿ ದೊಡ್ಡ ಪಬ್ಲಿಕ್ ಕಂಪನಿ ಎಂದು ಘೋಷಿಸಿತು.‌ ಅದೇ ವರ್ಷ ಜಗತ್ತಿನ ಐದನೇ ಅತಿ ದೊಡ್ಡ ಕೃತಕ ಬುದ್ಧಿಮತ್ತೆ ಕಂಪನಿ (Artificial intelligence) ಎನ್ನಿಸಿತು.

ಬಿಲಿಯನೇರ್‌ ಉದ್ಯಮಿಯಾಗಿ ದಂತಕತೆಯಾಗಿರುವ ಜಾಕ್‌ಮಾ , ಇದಕ್ಕೂ ಮುನ್ನ ಇಂಗ್ಲಿಷ್‌ ಶಿಕ್ಷಕರಾಗಿದ್ದರು. 1964 ಸೆಪ್ಟೆಂಬರ್‌ 10ರಂದು ಜನಿಸಿದ ಜಾಕ್‌ ಮಾಗೆ ಈಗ 58 ವರ್ಷ ವಯಸ್ಸು. ಬಾಲ್ಯದಲ್ಲಿಯೇ ಇಂಗ್ಲಿಷ್‌ ಕಲಿಕೆಗೆ ಅತೀವ ಆಸಕ್ತಿ ವಹಿಸಿದ್ದರು. 1988ರಲ್ಲಿ ಇಂಗ್ಲಿಷ್‌ನಲ್ಲಿ ಬಿಎ ಓದಿದರು. ಹಂಗ್ಜುವೊ ಡಿಯಾಂಝಿ ಯುನಿವರ್ಸಿಟಿಯಲ್ಲಿ ಇಂಗ್ಲಿಷ್‌ ಶಿಕ್ಷಕರಾಗಿದ್ದರು. ಹಾರ್ವರ್ಡ್‌ನಲ್ಲಿ ಶಿಕ್ಷಕರಾಗಲು ಹಲವು ಸಲ ಯತ್ನಿಸಿದ್ದರೂ ವಿಫಲರಾಗಿದ್ದರು.

ಅಲಿಬಾಬಾ ಕೇವಲ ಇ-ಕಾಮರ್ಸ್‌ ಕಂಪನಿಯಲ್ಲ!

ಅಲಿಬಾಬಾ ಕೇವಲ ಇ-ಕಾಮರ್ಸ್‌ ಕಂಪನಿಯೊಂದೇ ಅಲ್ಲ, ಅದು ಜಗತ್ತಿನ ನಾನಾ ದೇಶಗಳ ಹಲವಾರು ಕಂಪನಿಗಳು ಹಾಗೂ ಸ್ಟಾರ್ಟಪ್‌ಗಳಲ್ಲಿ ಹೂಡಿಕೆಯನ್ನೂ ಮಾಡಿದೆ. ಕಾರ್ಪೊರೇಟ್‌ ಜಗತ್ತಿನ ಪ್ರಮುಖ ವೆಂಚರ್‌ ಕ್ಯಾಪಿಟಲ್‌ ಕಂಪನಿಗಳಲ್ಲಿ (venture capital firm) ಅಲಿಬಾಬಾ ಕೂಡಾ ಒಂದು. ವೀಸಾ ಹೊರತುಪಡಿಸಿದರೆ ಎರಡನೇ ಅತಿ ದೊಡ್ಡ ಫಿನ್‌ಟೆಕ್‌ ಕಂಪನಿಯಾದ ಆಂಟ್‌ ಗ್ರೂಪ್‌ ಕೂಡ ಅಲಿಬಾಬಾದ ಭಾಗವಾಗಿದೆ. ಇದು ಅಲಿಪೇ (Alipay) ಎಂಬ ಬೃಹತ್‌ ಮೊಬೈಲ್‌ ಡಿಜಿಟಲ್‌ ಪೇಮೆಂಟ್‌ ಪ್ಲಾಟ್‌ಫಾರ್ಮ್‌ ಅನ್ನು ಒಳಗೊಂಡಿದೆ. ಇದನ್ನು 103 ಕೋಟಿ ಬಳಕೆದಾರರು ಮತ್ತು 8 ಕೋಟಿ ವರ್ತಕರು ಬಳಸುತ್ತಿದ್ದಾರೆ ಎಂದರೆ ಇದರ ಅಗಾಧತೆಯನ್ನು ಊಹಿಸಿ. ಚೀನಾದಲ್ಲಿ ಥರ್ಡ್‌ ಪಾರ್ಟಿ ಪೇಮೆಂಟ್‌ ಮಾರುಕಟ್ಟೆಯಲ್ಲಿ 55% ಪಾಲನ್ನು ಅಲಿಪೇ ಹೊಂದಿದೆ. ಆಲಿಬಾಬಾ ಡಾಟ್‌ಕಾಮ್‌ ಅತಿ ದೊಡ್ಡ B2B ಕಂಪನಿಯಾಗಿದ್ದರೆ, ಟಾವೊಬಾಯೊ ಅತಿದೊಡ್ಡ C2C (Taobao) ಮತ್ತು ಟಿಮಾಲ್‌ ಅತಿ ದೊಡ್ಡ B2C ಕಂಪನಿಯಾಗಿದೆ.

ಅಲಿಬಾಬಾ ಹೆಸರು ಹೇಗೆ ಬಂತು?

ನಾನು ಸ್ಯಾನ್‌ ಫ್ರಾನ್ಸಿಸ್ಕೊದ ಕಾಫಿ ಶಾಪ್‌ ಒಂದರಲ್ಲಿ ವಿರಾಮದ ವೇಳೆ ಕಾಲ ಕಳೆಯುತ್ತಿದ್ದೆ. ಅಲ್ಲಿಗೆ ಬೇರೆ ಬೇರೆ ದೇಶಗಳ ಜನ ಬರುತ್ತಿದ್ದರು. ಅಮೆರಿಕನ್ನರು, ಯುರೋಪಿಯನ್ನರು, ಭಾರತೀಯರನ್ನು ಕಂಡು ಅಲಿಬಾಬಾ ಹೆಸರು ಕೇಳಿದ್ದೀರಾ ಎಂದಾಗ ಗೊತ್ತು ಎನ್ನುತ್ತಿದ್ದರು. ಅಲಿಬಾಬಾ ಮತ್ತು ನಲುವತ್ತು ಕಳ್ಳರ ಜಾನಪದೆ ಕಥೆ ಎಲ್ಲರಿಗೂ ಗೊತ್ತಿತ್ತು. ಆದರೆ ಅಲಿಬಾಬಾ ಕಳ್ಳನಲ್ಲ, ಚತುರಮತಿ. ಸ್ಮಾರ್ಟ್‌ ಬಿಸಿನೆಸ್‌ಮ್ಯಾನ್.‌ ಹಳ್ಳಿಗರಿಗೆ ಸಹಕರಿಸುತ್ತಿದ್ದ. ಅಲಿಬಾಬಾ ಹೆಸರು ಉಚ್ಚಾರಣೆ ಮಾಡುವುದು ಕೂಡ ಸುಲಭ. ಹೀಗಾಗಿ ಇದೇ ಹೆಸರನ್ನು ನನ್ನ ಕಂಪನಿಗೆ ಇಟ್ಟೆ ಎನ್ನುತ್ತಾರೆ ಜಾಕ್‌ ಮಾ.

1999ರ ಜೂನ್‌ 28ರಂದು ಜಾಕ್‌ ಮಾ ಅವರು 17 ಸ್ನೇಹಿತರು ಮತ್ತು ವಿದ್ಯಾರ್ಥಿಗಳೊಂದಿಗೆ ಅಲಿಬಾಬಾ ಡಾಟ್‌ ಕಾಮ್‌ ಅನ್ನು (Alibaba.com) ಸ್ಥಾಪಿಸಿದರು. ಆರಂಭಿಕ ಹಂತದಲ್ಲಿ ಸ್ವಿಡಿಶ್‌ ಮೂಲದ ಇನ್ವೆಸ್ಟ್‌ ಎಬಿ, ಗೋಲ್ಡ್‌ಮನ್‌ ಸ್ಯಾಕ್ಸ್‌ ಮತ್ತು ಸಾಫ್ಟ್‌ ಬ್ಯಾಂಕ್‌ ಹೂಡಿಕೆ ಲಭಿಸಿತು. ಚೀನಾದ ಉತ್ಪನ್ನಗಳನ್ನು ಇ-ಕಾಮರ್ಸ್‌ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ರಫ್ತು ಮಾಡಲು ಅಮೆಜಾನ್‌ ಬೃಹತ್‌ ವೇದಿಕೆಯಾಗಿ ಬದಲಾಯಿತು.

2020ರ ತನಕ ಅಲಿಬಾಬಾ ಡಾಟ್‌ ಕಾಮ್‌ ಭಾರತದ ನಾನಾ ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡಿತ್ತು. ಮುಖ್ಯವಾಗಿ ಬಿಗ್‌ ಬಾಸ್ಕೆಟ್‌, ಪೇಟಿಎಂ, ಸ್ನಾಪ್‌ಡೀಲ್‌, ಜೊಮ್ಯಾಟೊ ಮೊದಲಾದ ಸ್ಟಾರ್ಟಪ್‌ಗಳಲ್ಲಿ ಅಲಿಬಾಬಾ ಹೂಡಿಕೆ ಮಾಡಿತ್ತು. ಆದರೆ ಇತ್ತೀಚೆಗೆ ಪೇಟಿಎಂನಿಂದ ತನ್ನ ಷೇರುಗಳನ್ನು 1.67 ಶತಕೋಟಿ ಡಾಲರ್‌ಗೆ ( ಅಂದಾಜು 1369 ಕೋಟಿ ರೂ.) ಮಾರಾಟ ಮಾಡಿತ್ತು.

ಅಜ್ಞಾತವಾಸ ಮುಕ್ತಾಯಗೊಳಿಸಿ ಚೀನಾಕ್ಕೆ ಮರಳಿದ ಜಾಕ್‌ ಮಾ:

ಸುಮಾರು 2 ವರ್ಷ ಕಾಲ ಚೀನಾದಿಂದ ನಾಪತ್ತೆಯಾಗಿದ್ದ ಜಾಕ್‌ ಮಾ ಮತ್ತೆ ತವರಿಗೆ ಮರಳಿದ್ದಾರೆ. ಕಳೆದ ಎರಡು ವರ್ಷ ನಾನಾ ದೇಶಗಳ ನಡುವೆ ಅಲೆದಾಡುತ್ತಿದ್ದರು. ನಿಖರವಾಗಿ ಎಲ್ಲಿ ಇರುತ್ತಿದ್ದರು ಎಂಬುದೇ ಗೊತ್ತಾಗುತ್ತಿರಲಿಲ್ಲ. ಜಾಲತಾಣದಲ್ಲೂ ಯಾವುದೇ ಪೋಸ್ಟ್ ಹಾಕುತ್ತಿರಲಿಲ್ಲ. ಜಪಾನ್‌, ಥಾಯ್ಕೆಂಡ್‌, ಯುರೋಪ್‌, ಆಸ್ಟ್ರೇಲಿಯಾದಲ್ಲಿ ಸಂಚರಿಸುತ್ತಿದ್ದರು. ಆದರೆ ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಚೀನಾದ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಕಮ್ಯುನಿಸ್ಟ್‌ ಸರ್ಕಾರಕ್ಕೂ ಅಲಿಬಾಬಾ ಸಮೂಹಕ್ಕೂ ಸಂಘರ್ಷ ಏರ್ಪಟ್ಟಿತ್ತು. ಖಾಸಗಿ ಉದ್ಯಮಿಗಳನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಜಾಕ್‌ ಮಾ 2019ರಲ್ಲಿ ಟೀಕಿಸಿದ್ದರು. ಚೀನಾದ ಬ್ಯಾಂಕ್‌ಗಳು ಪಾನ್‌ ಶಾಪ್‌ ಮೆಂಟಾಲಿಟಿಯನ್ನು ಹೊಂದಿದ್ದು, ಖಾಸಗಿ ವಲಯದ ಉದ್ಯಮಿಗಳಿಗೆ ಕಂಟಕಪ್ರಾಯವಾಗಿವೆ ಎಂದು ವಾಗ್ದಾಳಿ ನಡೆಸಿದ್ದರು.

ಇದಾದ ಬಳಿಕ ಚೀನಿ ಸರ್ಕಾರ ಅಲಿಬಾಬಾ ಕಂಪನಿಗಳ ವಿರುದ್ಧ Anti trust ತನಿಖೆ ನಡೆಸಿತ್ತು. ಮಾರುಕಟ್ಟೆ ನಿಯಂತ್ರಕವು ಜಾಕ್‌ ಮಾ ಅವರ ಆಂಟ್‌ ಗ್ರೂಪ್‌ನ ಐಪಿಒ ಅನ್ನು ರದ್ದುಪಡಿಸಿತ್ತು. ಈ ಘಟನೆಯ ಬಳಿಕ ಜಾಕ್‌ ಮಾ ಚೀನಾದಲ್ಲಿ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿರಲಿಲ್ಲ. ಕಳೆದ ಒಂದು ವರ್ಷದಿಂದ ವಿದೇಶದಲ್ಲಿದ್ದರು. ಈ ನಡುವೆ ಚೀನಾದಲ್ಲಿ ಆರ್ಥಿಕತೆ ಮಂದಗತಿಯಲ್ಲಿ ಇರುವುದರಿಂದ ಅದರ ರಕ್ಷಣೆಗೆ ಉದ್ಯಮಿಗಳ ನೆರವು ಮತ್ತು ಮಹತ್ವದ ಅರಿವು ಕ್ಸಿ ಜಿನ್‌ಪಿಂಗ್‌ ಅವರಿಗೆ ಉಂಟಾಗಿದೆ. ಖಾಸಗಿ ವಲಯದ ಉದ್ಯಮಿಗಳ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ. ಇದರ ಭಾಗವಾಗಿಯೇ ಜಾಕ್‌ ಮಾ ಮರಳಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ: Brand story | ಗೌತಮ್‌ ಶಾಂತಿಲಾಲ್‌ ಅದಾನಿ ಮುಟ್ಟಿದ್ದೆಲ್ಲ ಚಿನ್ನ, ಏನಿದು ಕಮಾಲ್ ?!

ದೇಶದ ಶ್ರೀಮಂತಿಕೆಗೆ ಉದ್ಯಮಿಗಳ ನೆರವು ಅಗತ್ಯ, ಸಿರಿವಂತರಾಗಿ ಮತ್ತು ಜವಾಬ್ದಾರಿಯುತರಾಗಿರಿ, ಇತರರಿಗೆ ಸಹಕರಿಸಿ, ನೀವೆಲ್ಲ ನಮ್ಮವರೇ ಹೊರತು ಬೇರೆಯವರಲ್ಲ- ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ. ಈ ಹಿಂದೆ ಖಾಸಗಿ ವಲಯದ ಉದ್ಯಮಿಗಳತ್ತ ಕೆಂಗಣ್ಣು ಬೀರಿದ್ದ ಜಿನ್‌ಪಿಂಗ್‌ ಇತ್ತೀಚೆಗೆ ವರಸೆ ಬದಲಿಸಿದ್ದು, ಓಲೈಕೆಗೆ ಮುಂದಾಗಿರುವುದನ್ನು ಅವರ ಹೇಳಿಕೆಗಳು ಬಿಂಬಿಸಿವೆ.

ಜಾಕ್‌ ಮಾ ಅವರ ಪ್ರಸಿದ್ಧ ನುಡಿ ಮುತ್ತುಗಳು ಇಂತಿವೆ:

  • ಒಳ್ಳೆಯ ಬಾಸ್‌ ಒಳ್ಳೆಯ ಕಂಪನಿಗಿಂತ ಮಿಗಿಲು
  • ನಾನು ಸದಾ ನನಗಿಂತ ಸ್ಮಾರ್ಟ್‌ ಆಗಿರುವ ಜನರನ್ನು ಹುಡುಕುತ್ತಿರುತ್ತೇನೆ. ಸ್ಮಾರ್ಟ್‌ ಆಗಿರುವ ಜನ ಒಟ್ಟಿಗೆ ಕೆಲಸ ಮಾಡುವಂತೆ ಮಾಡುವುದು ನನ್ನ ಕೆಲಸ. ಏಕೆಂದರೆ ಮೂರ್ಖರು ಸುಲಭವಾಗಿ ಒಟ್ಟಿಗೆ ಕೆಲಸ ಮಾಡುತ್ತಾರೆ. ಆದರೆ ಬುದ್ಧಿವಂತರು ಹಾಗಲ್ಲ, ಅವರಲ್ಲಿ ಭಿನ್ನ ಆಲೋಚನೆ, ದೃಷ್ಟಿಕೋನ ಇರುವುದರಿಂದ ಅವರಿಗೆ ಒಟ್ಟಿಗೆ ಕೆಲಸ ಮಾಡುವುದು ಕಷ್ಟ. ಆದರೆ ಅವರು ಒಟ್ಟಿಗೆ ಕೆಲಸ ಮಾಡುವಂತೆ ನೋಡಿದರೆ ನೀವು ಗೆಲ್ಲುವುದು ಸುಲಭ.
  • ಯಾವುದಾದರೂ ಬರುತ್ತಿದೆ ಎಂದು ಗೊತ್ತಾದರೆ ಈಗಿನಿಂದಲೇ ಎದುರಿಸಲು ತಯಾರಾಗುವುದು ಮುಖ್ಯ. ಛಾವಣಿ ಇದ್ದಾಗಲೇ ಅದನ್ನು ದುರಸ್ತಿ ಮಾಡಬೇಕು.
  • ದೂರುಗಳು ಇದ್ದಲ್ಲಿ ಅವಕಾಶವೂ ಇರುತ್ತದೆ.
  • 21ನೇ ಶತಮಾನದಲ್ಲಿ ನಿಮ್ಮ ಕಂಪನಿ ಹೇಗಿದೆ ಎಂಬುದಕ್ಕಿಂತಲೂ, ನಿಮ್ಮ ಅಧಿಕಾರಕ್ಕಿಂತಲೂ, ನೀವು ಒಳ್ಳೆಯವರಾಗಿರುವುದು ಮುಖ್ಯ. ಅದು ಪ್ರಬಲ ಶಕ್ತಿ.
  • ಉದ್ಯಮಿಯಾಗಿ ನೀವು ಆಶಾವಾದಿಗಳಾಗಿ ನಿಲ್ಲದಿದ್ದರೆ, ನಿಮಗೆ ತೊಂದರೆಯಾದೀತು. ಹೀಗಾಗಿ ನಾನು ಆಶಾವಾದಿಗಳನ್ನೇ ಆಯ್ಕೆ ಮಾಡುತ್ತೇನೆ.
Continue Reading

ಪ್ರಮುಖ ಸುದ್ದಿ

Boost to Make in India : 36,400 ಕೋಟಿ ರೂ. ಮೌಲ್ಯದ ಡೀಲ್‌ಗಳಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ

ಕೇಂದ್ರ ಸರ್ಕಾರವು 36,400 ಕೋಟಿ ರೂ. ಮೌಲ್ಯದ ರಕ್ಷಣಾ ಖರೀದಿ ಒಪ್ಪಂದಗಳಿಗೆ ಗುರುವಾರ ಸಹಿ ಹಾಕಲಾಗಿದೆ. (Boost to Make in India) ಇದು ಸ್ವದೇಶಿ ಉತ್ಪಾದನೆಗೂ ಪುಷ್ಟಿ ನೀಡಲಿದೆ.

VISTARANEWS.COM


on

Edited by

make in India
Koo

ನವ ದೆಹಲಿ: ಕೇಂದ್ರ ಸರ್ಕಾರವು 36,400 ಕೋಟಿ ರೂ. ಮೌಲ್ಯದ ರಕ್ಷಣಾ ಖರೀದಿ ಒಪ್ಪಂದಗಳಿಗೆ ಗುರುವಾರ ಸಹಿ ಹಾಕಿದೆ. ಇದರಿಂದಾಗಿ ಭೂ ಸೇನೆ, ನೌಕಾ ಪಡೆ ಮತ್ತು ವಾಯುಸೇನೆಗೆ ( Boost to Make in India) ಹೆಚ್ಚಿನ ಶಸ್ತ್ರಾಸ್ತ್ರಗಳು ಪೂರೈಕೆಯಾಗಲಿದೆ. ಮತ್ತೊಂದು ಕಡೆ ಆತ್ಮನಿರ್ಭರ ಭಾರತಕ್ಕೆ (Aatmanirbhara Bharata ) ಪುಷ್ಟಿ ಸಿಗಲಿದೆ.

ಕೇಂದ್ರ ಸರ್ಕಾರ ಎರಡು ಆಕಾಶ್‌ ಏರ್‌ ಡಿಫೆನ್ಸ್‌ ಕ್ಷಿಪಣಿ ವ್ಯವಸ್ಥೆಯನ್ನು (Akash air defence missile systems) ಖರೀಸಲು, ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ (Bharat Dynamics Limited) ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಮೌಲ್ಯ 6,000 ಕೋಟಿ ರೂ.ಗಳಾಗಿದೆ.

ಮೇಕ್‌ ಇನ್‌ ಇಂಡಿಯಾಗೆ ಬಲ:

ಈ ಸುಧಾರಿತ ಕ್ಷಿಪಣಿ ಸಿಸ್ಟಮ್‌ಗಳು ಭಾರತೀಯ ಸೇನೆಗೆ ಯಾವುದೇ ಶತ್ರುವಿನ ವಿಮಾನ ಅಥವಾ ದ್ರೋನ್‌ ಅನ್ನು ಗಡಿಯಲ್ಲಿ ಹೊಡೆದುರುಳಿಸಲು ಸಹಕಾರಿಯಾಗಲಿದೆ. ಈ ಕ್ಲಿಯರೆನ್ಸ್‌ನಿಂದಾಗಿ ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಪುಷ್ಟಿ ಸಿಗಲಿದೆ. ಶಸ್ತ್ರಾಸ್ತ್ರಗಳ ಆಮದು ವೆಚ್ಚ ಇಳಿಕೆಯಾಗಲಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಕೂಡ ಪ್ರಯೋಜನಕಾರಿಯಾಗಲಿದೆ.

ರಕ್ಷಣಾ ಸಚಿವಾಲಯವು 11 ಗಸ್ತು ನೌಕೆಗಳನ್ನು ಹಾಗೂ 6 ಕ್ಷಿಪಣಿ ವಾಹಕ ನೌಕೆಗಳನ್ನು ಖರೀದಿಸಲು ಕೂಡ 19,600 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿದೆ. ಸುಧಾರಿತ ಆಕಾಶ್‌ ವೆಪ್ಪನ್‌ ಸಿಸ್ಟಮ್‌, 12 ವೆಪ್ಪನ್‌ ಲೊಕೇಟಿಂಗ್‌ ರಾಡಾರ್‌ಗಳನ್ನೂ ಖರೀದಿಸಲು 9,100 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರ ದೇಶದಲ್ಲಿಯೇ ಶಸ್ತ್ರಾಸ್ತ್ರ ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಲಡಾಕ್‌ನ ಗಲ್ವಾನ್‌ ಕಣಿವೆಯಲ್ಲಿ ಚೀನಾ ಜತೆಗಿನ ಸಂಘರ್ಷ ನಡೆದು ಮೂರು ವರ್ಷಗಳ ಬಳಿಕ, ಹೊಸತಾಗಿ ಭಾರತ ಶಸ್ತ್ರಾಸ್ತ್ರ ಖರೀದಿಗೆ ಮೆಗಾ ಒಪ್ಪಂದವನ್ನು ಮಾಡಿಕೊಂಡಿದೆ.

ದೇಶದ ರಕ್ಷಣಾ ಕ್ಷೇತ್ರದಲ್ಲೂ ಆತ್ಮನಿರ್ಭರತೆ ಸಾಧಿಸಲು ಕೇಂದ್ರ ಸರ್ಕಾರವು ಮೇಕ್‌ ಇನ್‌ ಇಂಡಿಯಾಗೆ (Make In India) ಒತ್ತು ನೀಡುತ್ತಿರುವ ಕಾರಣ ಭಾರತದ ಯುದ್ಧವಿಮಾನ, ಶಸ್ತ್ರಾಸ್ತ್ರಗಳಿಗೆ ಬೇರೆ ದೇಶಗಳಿಂದ ಹೆಚ್ಚಿನ ಬೇಡಿಕೆ ಉಂಟಾಗಿದೆ. ಇದೇ ಕಾರಣದಿಂದಾಗಿ ಕಳೆದ ಐದು ವರ್ಷದಲ್ಲಿ ರಕ್ಷಣಾ ರಫ್ತು ಶೇ.339ರಷ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ದೇಶೀಯ ಎಲ್‌ಸಿಎ ತೇಜಸ್‌ ಎಂಕೆ2 (Tejas Mk2) ಯುದ್ಧವಿಮಾನಗಳ ಖರೀದಿಗೆ 16 ದೇಶಗಳು ಆಸಕ್ತಿ ತೋರಿವೆ. ಇದಕ್ಕಾಗಿ ಉತ್ಪಾದನೆ ಕ್ಷಿಪ್ರಗೊಳಿಸಲು ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ

Continue Reading
Advertisement
IPL 2023: IPL fan park after three years; Opportunity in Karnataka too
ಕ್ರಿಕೆಟ್2 mins ago

IPL 2023: ಮೂರು ವರ್ಷಗಳ ಬಳಿಕ ಐಪಿಎಲ್​ ಫ್ಯಾನ್​ ಪಾರ್ಕ್​; ಕರ್ನಾಟಕದಲ್ಲಿಯೂ ಇರಲಿದೆ ಜೋಶ್​

Mallikarjun khuba joins JDS
ಕರ್ನಾಟಕ4 mins ago

JDS Karnataka: ಬಿಜೆಪಿಯಿಂದ ಜೆಡಿಎಸ್‌ಗೆ ಮರಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ

Navjot Sidhu to be released from Jail
ದೇಶ10 mins ago

ಏ.1ರಂದು ಜೈಲಿಂದ ಬಿಡುಗಡೆಯಾಗಲಿದ್ದಾರೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು; ಪತ್ನಿ ಟ್ವೀಟ್ ಬೆನ್ನಲ್ಲೇ ಸಿಧು ಟ್ವೀಟ್​

Release Rs 17.42 crore dues to MySugar factory says Dinesh Gooligowda
ಕರ್ನಾಟಕ11 mins ago

MySugar Factory: ಮೈಶುಗರ್ ಕಾರ್ಖಾನೆಗೆ ಬಾಕಿ ಇರುವ 17.42 ಕೋಟಿ ರೂ. ಬಿಡುಗಡೆ ಮಾಡಿ: ದಿನೇಶ್‌ ಗೂಳಿಗೌಡ

Modi With Kharge
ಅಂಕಣ16 mins ago

ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು

ಆರೋಗ್ಯ17 mins ago

New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್!‌ ಭಾರತದಲ್ಲೇ ಮೊದಲ ಕೇಸ್‌!

ವೈರಲ್ ನ್ಯೂಸ್20 mins ago

Viral News : ನೂಡಲ್ಸ್‌ನಿಂದಲೇ ರಸ್ತೆ ಗುಂಡಿ ಮುಚ್ಚುವ ವ್ಯಕ್ತಿ! ವೈರಲ್‌ ಆಗ್ತಿದೆ ಈತನ ಕೆಲಸ

Boys death
ಕರ್ನಾಟಕ26 mins ago

Mysterious death : ನಿರ್ಜನ ಪ್ರದೇಶದಲ್ಲಿ 8 ವರ್ಷದ ಬಾಲಕನ ಶವ ಪತ್ತೆ; ದುಷ್ಕರ್ಮಿಗಳು ಕೊಲೆ ಮಾಡಿ ಎಸೆದ ಶಂಕೆ

6 die of suffocation in Delhi After Due to mosquito coil
ದೇಶ47 mins ago

ಒಂದೇ ಕುಟುಂಬದ 6 ಮಂದಿಯ ಪ್ರಾಣ ತೆಗೆದ ಸೊಳ್ಳೆ ಬತ್ತಿ; ಹಾಸಿಗೆ ಮೇಲೆ ಬಿದ್ದು ಭುಗಿಲೆದ್ದ ಹೊಗೆ, ಬೆಂಕಿ

Gas tragedy
ಕರ್ನಾಟಕ48 mins ago

Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್‌ ಸಿಲಿಂಡರ್‌ ಲೀಕ್‌ ಆಗಿ 7 ಕಾರ್ಮಿಕರ ದಾರುಣ ಸಾವು

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Sphoorti Salu
ಸುವಚನ10 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

SSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು

ಕರ್ನಾಟಕ21 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ1 day ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ4 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ4 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ಟ್ರೆಂಡಿಂಗ್‌

error: Content is protected !!