Nirav Modi case This is public money, bank has not taken any action High Court struck downNirav Modi case : ಇದು ಸಾರ್ವಜನಿಕರ ದುಡ್ಡು, ಬ್ಯಾಂಕ್‌ ಯಾವ ಕ್ರಮವನ್ನೂ ಕೈಗೊಂಡಿಲ್ಲ: ಹೈಕೋರ್ಟ್‌ ತರಾಟೆ

ವಾಣಿಜ್ಯ

Nirav Modi case : ಇದು ಸಾರ್ವಜನಿಕರ ದುಡ್ಡು, ಬ್ಯಾಂಕ್‌ ಯಾವ ಕ್ರಮವನ್ನೂ ಕೈಗೊಂಡಿಲ್ಲ: ಹೈಕೋರ್ಟ್‌ ತರಾಟೆ

Nirav Modi case ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದಲ್ಲಿ ನೀರವ್‌ ಮೋದಿ ನಡೆಸಿದ ಭ್ರಷ್ಟಾಚಾರದ ಪರಿಣಾಮ ಸಾರ್ವಜನಿಕರ ನೂರಾರು ಕೋಟಿ ರೂ. ಅತಂತ್ರವಾಗಿದೆ. ಆದರೆ ಬ್ಯಾಂಕ್‌ ಕ್ರಮ ಕೈಗೊಂಡಿಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ವಿವರ ಇಲ್ಲಿದೆ.

VISTARANEWS.COM


on

Nirav modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ವಿತ್ತಾಪರಾಧಿ ನೀರವ್‌ ಮೋದಿ ಪ್ರಮುಖ ಆರೋಪಿಯಾಗಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ ಕುರಿತ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್‌ ಮಂಗಳವಾರ, ಬ್ಯಾಂಕ್‌ನ ನಿಷ್ಕ್ರಿಯತೆ ಬಗ್ಗೆ ತರಾಟೆಗೆ ತೆಗೆದುಕೊಂಡಿದೆ. ಈ ಹಗರಣದಲ್ಲಿ ಸಾರ್ವಜನಿಕ ನೂರಾರು ಕೋಟಿ ರೂ. ದುಡ್ಡಿನ ಪ್ರಶ್ನೆಯೂ ಇದೆ. ಆದರೆ ಬ್ಯಾಂಕ್‌ ಯಾವುದೇ ಕ್ರಮವನ್ನು ಇನ್ನೂ ಕೈಗೊಂಡಿಲ್ಲ ಎಂದು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಹೀಗೆಯೇ ಆದರೆ ಬ್ಯಾಂಕ್‌ನಿಂದ ಸಾಲ ಬಯಸುವ ಜನ ಸಾಮಾನ್ಯರ ಹಿತವನ್ನು ನೀಡುವವರು ಯಾರು? ಅವರ ಗತಿ ಏನು ಎಂದು ಬಾಂಬೆ ಹೈಕೋರ್ಟ್‌ ಪ್ರಶ್ನಿಸಿತು. ನೀರವ್‌ ಮೋದಿ ನಡೆಸಿದ ವರ್ಗಾವಣೆಗಳು, ತೆಗೆದುಕೊಂಡಿದ್ದ ಸಾಲಗಳು ಅನಧಿಕೃತ ಮತ್ತು ಕಾನೂನುಬಾಹಿರ ಎಂಬ ಅರಿವು ಆಗ ಗೊತ್ತಿರಲಿಲ್ಲ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನ್ಯಾಯಾಲಯಕ್ಕೆ ತಿಳಿಸಿದೆ. ಹೈಕೋರ್ಟ್‌ ಇ.ಡಿ ಮತ್ತು ಬ್ಯಾಂಕಿಗೆ ಎರಡು ವಾರದೊಳಗೆ ತಮ್ಮ ಅಫಿಡವಿಟ್‌ ಸಲ್ಲಿಸಲು ಸೂಚಿಸಿದೆ.

ನ್ಯಾಯಮೂರ್ತಿ ರೇವತಿ ಮೊಹಿರೆ, ನ್ಯಾಯಮೂರ್ತಿ ಗೌರಿ ಗೋಡ್ಸೆ ಅವರನ್ನು ಒಳಗೊಂಡಿದ್ದ ಪೀಠವು, ವಿಶೇಷ ಕೋರ್ಟ್‌ ಹಗರಣಕ್ಕೆ ಸಂಬಂಧಿಸಿ ಮುಟ್ಟುಗೋಲು ಹಾಕಿದ್ದ 9 ಆಸ್ತಿಗಳನ್ನು ಬಿಡುಗಡೆಗೊಳಿಸಲು ನೀಡಿದ್ದ ಆದೇಶವನ್ನು ಪ್ರಶ್ನಿಸಿ ತನಿಖಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಪ್ರಾಪರ್ಟಿಯ ಮೇಲೆ ತನಗೆ ಹಕ್ಕು ಇದೆ ಎಂದು ತನಿಖಾ ಏಜೆನ್ಸಿ ತಿಳಿಸಿತು. ಆದರೆ ಅದು ಬ್ಯಾಂಕಿಗೆ ಸೇರಬೇಕು ಎಂದು ಪಿಎನ್‌ಬಿ ವಾದಿಸಿದೆ.

ಪಿಎಂಎಲ್‌ಎ ವಿಶೇಷ ನ್ಯಾಯಾಲಯವು (prevention of money laundereing act) ಪಿಎಂಎಲ್‌ಎ ಕಾಯಿದೆಯ ಅಡಿಯಲ್ಲಿ 500 ಕೋಟಿ ರೂ. ಮೌಲ್ಯದ 12 ಆಸ್ತಿಗಳನ್ನು ಮುಟ್ಟುಗೋಲಿಗೆ (ಇ.ಡಿ) ತನಿಖಾ ಸಂಸ್ಥೆಗೆ ಅನುಮತಿ ನೀಡಿತ್ತು. ಈ 12 ಆಸ್ತಿಗಳಲ್ಲಿ ಎಲ್ಲದರ ಮೇಲೆಯೂ ತನ್ನ ಹಕ್ಕಿದೆ ಎಂದು ಪಿಎನ್‌ಬಿ ಪ್ರತಿಪಾದಿಸಿದೆ.

: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ನಡೆದಿರುವ 13,000 ಕೋಟಿ ರೂ. ಸಾಲ ಹಗರಣದ ಪ್ರಮುಖ ಆರೋಪಿ, ವಿತ್ತಾಪರಾಧಿ ಜ್ಯುವೆಲ್ಲರ್‌ ಮೆಹುಲ್‌ ಚೋಕ್ಸಿ (Mehul Choksi) ವಿರುದ್ಧದ ರೆಡ್‌ ಕಾರ್ನರ್‌ ನೋಟಿಸ್‌ ಅನ್ನು ಇಂಟರ್‌ಪೋಲ್‌ ಕೈಬಿಟ್ಟಿದೆ. ಇದರಿಂದಾಗಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಹಿನ್ನಡೆಯಾದಂತಾಗಿದೆ. ಇಂಟರ್‌ಪೋಲ್‌ ವೆಬ್‌ಸೈಟ್‌ನಲ್ಲಿ ಈಗ ಚೋಕ್ಸಿ ವಿರುದ್ಧದ ನೋಟಿಸ್‌ ಇಲ್ಲ ಎಂದು ಅವರ ಪರ ವಕೀಲರಾದ ವಿಜಯ್‌ ಅಗ್ರವಾಲ್‌ ತಿಳಿಸಿದ್ದಾರೆ. ಸಿಬಿಐ ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದೆ.

2021ರಲ್ಲಿ ಚೋಕ್ಸಿ ತಮ್ಮನ್ನು ಆಂಡಿಗುವಾ & ಬಾರ್ಬುಡಾದಿಂದ ಡೊಮಿನಿಕಾ ದ್ವೀಪ ರಾಷ್ಟ್ರಕ್ಕೆ ಅಪಹರಿಸುವ ಯತ್ನ ನಡೆದಿದೆ. ಇದರ ಉದ್ದೇಶ ಭಾರತಕ್ಕೆ ಗಡಿಪಾರು ಮಾಡುವುದಾಗಿದೆ ಎಂದು ದೂರಿದ್ದರು. ಮೂಲಗಳ ಪ್ರಕಾರ, ಚೋಕ್ಸಿ ಅವರನ್ನು ಅಪಹರಿಸುವ ಯತ್ನ ನಡೆದಿರುವ ಸಾಧ್ಯತೆ ಇದೆ ಎಂದು ಇಂಟರ್‌ಪೋಲ್‌ ಕೂಡ ಭಾವಿಸಿದೆ.

ಇದನ್ನೂ ಓದಿ: Nirav Modi | ನೀರವ್‌ ಮೋದಿ ಅರ್ಜಿ ವಜಾಗೊಳಿಸಿದ ಬ್ರಿಟನ್‌ ಹೈಕೋರ್ಟ್‌, ಭಾರತಕ್ಕೆ ಹಸ್ತಾಂತರ ಸನ್ನಿಹಿತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೃಷಿ

Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

ರಾಯಚೂರಿನ ಗುಡಿಪಾಡು ಆಂಜನೇಯ (Success Story) ಅವರು ಆನ್‌ಲೈನ್‌ನಲ್ಲಿ ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿ ಸುದ್ದಿಯಲ್ಲಿದ್ದಾರೆ. ಡಿಪ್ಲೊಮಾ ಪೂರ್ಣಗೊಳಿಸಿರುವ ಆಂಜನೇಯ ಅವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿ ಈಗ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮಾವು ಮಾರಾಟದ ಇವರ ಸಕ್ಸೆಸ್ ಸ್ಟೋರಿ ಇಲ್ಲಿದೆ.

VISTARANEWS.COM


on

By

Success Story
Koo

ಕೃಷಿ ಕೆಲಸಗಳಲ್ಲಿ ಕೇವಲ ಕಷ್ಟ ಪಟ್ಟು ದುಡಿದರೆ ಸಾಲದು, ಬುದ್ದಿವಂತಿಕೆಯೂ ಬೇಕು. ಆಗ ಮಾತ್ರ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ರೈತನೊಬ್ಬ (Success Story) ಸಾಬೀತು ಮಾಡಿದ್ದಾನೆ. ಈ ರೈತ ಬೇರೆಯಾರೂ ಅಲ್ಲ ನಮ್ಮ ಕರ್ನಾಟಕದವರೇ (karnataka) ಆಗಿದ್ದಾರೆ. ಮಾವಿನ ಕೃಷಿ (Mango Cultivation) ಮಾಡಿ ರಾಯಚೂರಿನ (Raichur) ಗುಡಿಪಾಡು ಆಂಜನೇಯ (Gudipadu Anjaneya) ಅವರು ಈಗ ಎಲ್ಲೆಡೆ ಸುದ್ದಿ ಮಾಡುತ್ತಿದ್ದಾರೆ. ಗುಡಿಪಾಡು ಆಂಜನೇಯ ಅವರು ಆನ್‌ಲೈನ್‌ನಲ್ಲಿ ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿ ಸುದ್ದಿಯಾಗುತ್ತಿದ್ದಾರೆ. ಡಿಪ್ಲೊಮಾ ಪೂರ್ಣಗೊಳಿಸಿರುವ ಆಂಜನೇಯ ಅವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು.

Success Story

ತೋಟಗಾರಿಕೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಹಣ್ಣು, ತರಕಾರಿ, ಹೂವು, ಅಲಂಕಾರಿಕ ಸಸ್ಯಗಳನ್ನು ಬೆಳೆಯುವ ವಿಜ್ಞಾನ ಮತ್ತು ಕಲೆಯನ್ನು ಕಲಿತು ಆನ್‌ಲೈನ್ ಪೋರ್ಟಲ್ ಮೂಲಕ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆಂಜನೇಯ ಅವರು ಆನ್‌ಲೈನ್ ನಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಮಾವಿನ ತಳಿಗಳಲ್ಲಿ ಪ್ರಮುಖವಾದವು ಬನಗನಪಲ್ಲಿ, ಮಲ್ಲಿಕಾ ಮತ್ತು ಕೇಸರಿ ಮಾವುಗಳು. ಇವರು ತಮ್ಮ ಮಾವಿನ ಹಣ್ಣುಗಳ ಮಾರಾಟ ಜಾಲವನ್ನು ರಾಯಚೂರಿನ ಹೊರಗೂ ವಿಸ್ತರಿಸಿದ್ದಾರೆ. ಬೆಂಗಳೂರಿನ ಜಯನಗರ, ವೈಟ್‌ಫೀಲ್ಡ್ ಮತ್ತು ಲಾಲ್ ಬಾಗ್‌ನ ಎಂಇಎಸ್ ಮೈದಾನದಲ್ಲಿ ಮಾವು ಮೇಳದಲ್ಲಿ ಪಾಲ್ಗೊಂಡಿರುವ ಇವರು, ಆನ್ ಲೈನ್ ಮೂಲಕ ರಾಜ್ಯದ ಮೂಲೆಮೂಲೆ ಮಾತ್ರವಲ್ಲ ಹೊರರಾಜ್ಯ, ವಿದೇಶಗಳಿಗೂ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ವಿದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ರೂಪಿಸುವ ಗುರಿ ಹೊಂದಿರುವ ಅವರು ಇತರ ಕೃಷಿಕರಿಗೂ ಪ್ರೇರಣೆಯಾಗಿದ್ದಾರೆ.

ಸಾಕಷ್ಟು ಶ್ರಮ

ಆಂಜನೇಯ ತಮ್ಮ ವ್ಯವಹಾರದ ಆರಂಭದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅವರು ಗ್ರಾಹಕರ ವಿಳಾಸವನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿ, ಪ್ರತಿಯೊಂದು ಹಂತವನ್ನು ಅನುಸರಿಸಿ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅದನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಮಾರ್ಗಗಳನ್ನು ಹುಡುಕುತ್ತಿದ್ದರು. ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೊದಲು, ಆಂಜನೇಯ ಅವರು ಮೋಸಂಬಿ ಮತ್ತು ನಿಂಬೆಯನ್ನು ಮಾರುಕಟ್ಟೆ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರು.

Mango Breeds

ಆನ್ ಲೈನ್ ಪೋರ್ಟಲ್ ಪ್ರಾರಂಭ

ಬಳಿಕ ಆಂಜನೇಯ ಅವರು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ (KSMDMCL) ಅಂಚೆ ಇಲಾಖೆಯ ಸಹಯೋಗದೊಂದಿಗೆ ತಮ್ಮ ಪೋರ್ಟಲ್ ಅನ್ನು ಪ್ರಾರಂಭಿಸಿದರು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ ಪ್ರಾರಂಭಿಸಿರುವ ಕರ್ ಸಿರಿ ಮ್ಯಾಂಗೋಸ್ (https://www.karsirimangoes.karnataka.gov.in) ವೆಬ್‌ಸೈಟ್ 2022ರಲ್ಲಿ ವಿವಿಧ ಬಗೆಯ ಹಣ್ಣುಗಳಿಗಾಗಿ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು. ಈ‌ ವೆಬ್ ಸೈಟ್ ಮೂಲಕವೇ ಈ ರೈತ ಮಾವು ಮಾರಿ ಲಾಭ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Mysore News: ಮೈಸೂರಿನಲ್ಲಿ ಪಾಲಿಕೆಯಿಂದ ನಿಷೇಧಿತ ಪ್ಲಾಸ್ಟಿಕ್‌ ವಶ; 1.61 ಲಕ್ಷ ರೂ. ದಂಡ

ಇದು ಗ್ರಾಹಕರ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸುತ್ತದೆ. ಹಣ್ಣುಗಳ ಚಿತ್ರಗಳು ಮತ್ತು ಹೆಸರುಗಳ ಜೊತೆಗೆ ವೆಬ್‌ಸೈಟ್ ಮಾವಿನ ಸರಬರಾಜಿಗೆ ಕಾರಣರಾದ ರೈತರ ಹೆಸರು ಮತ್ತು ಸಂಖ್ಯೆಗಳನ್ನು ಸಹ ಪ್ರದರ್ಶಿಸುತ್ತದೆ. ಮಾವು ಬೆಳೆಗಾರರಿಗೆ ಈ ವೆಬ್‌ಸೈಟ್ ಆಶಾದಾಯಕವಾಗಿದೆ. ಇದನ್ನು ಬಳಸಿಕೊಂಡೇ ಆಂಜನೇಯ ಅವರು ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿದ್ದಾರೆ.

Continue Reading

ಕ್ರೀಡೆ

Yuvraj Singh : ಅಪಾರ್ಟ್​ಮೆಂಟ್ ವಿತರಣೆಯಲ್ಲಿ ಮೋಸ, ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ನೋಟಿಸ್​ ಕೊಟ್ಟ ಯುವರಾಜ್ ಸಿಂಗ್

Yuvraj Singh : ಈ ಸಂಸ್ಥೆಗಳು ಭರವಸೆ ನೀಡಿದಂತೆ ಸ್ವಾಧೀನದ ದೃಷ್ಟಿಯಿಂದ ಯೋಜನೆಗಳ ವಿತರಣೆಯನ್ನು ಸಹ ಸರಿಯಾದ ಸಮಯದಲ್ಲಿ ಪೂರೈಸಲಾಗಿಲ್ಲ ಎಂದು ಸಿಂಗ್ ಹೇಳಿದ್ದಾರೆ. ವಿಶೇಷವೆಂದರೆ, ಮಾಜಿ ಕ್ರಿಕೆಟ್ ತಾರೆ 2020 ರಲ್ಲಿ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿ ವಸತಿ ಘಟಕವನ್ನು ಕಾಯ್ದಿರಿಸಿದ್ದರು.

VISTARANEWS.COM


on

Yuvraj Singh
Koo

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ (Yuvraj Singh)​ ಅವರು ದೆಹಲಿ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಎರಡು ಕಾನೂನು ನೋಟಿಸ್ ನೀಡಿದ್ದಾರೆ. ಈ ಸಂಸ್ಥೆಗಳು ನಡೆಸುವ ಯೋಜನೆಗಳಿಗೆ ಮೋಸದ ಪ್ರಚಾರ ಚಟುವಟಿಕೆಗಳ ಮೂಲಕ ಗೌಪ್ಯತೆ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸಂಸ್ಥೆಗಳು ಭರವಸೆ ನೀಡಿದಂತೆ ಸ್ವಾಧೀನದ ದೃಷ್ಟಿಯಿಂದ ಯೋಜನೆಗಳ ವಿತರಣೆಯನ್ನು ಸಹ ಸರಿಯಾದ ಸಮಯದಲ್ಲಿ ಪೂರೈಸಲಾಗಿಲ್ಲ ಎಂದು ಸಿಂಗ್ ಹೇಳಿದ್ದಾರೆ. ವಿಶೇಷವೆಂದರೆ, ಮಾಜಿ ಕ್ರಿಕೆಟ್ ತಾರೆ 2020 ರಲ್ಲಿ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿ ವಸತಿ ಘಟಕವನ್ನು ಕಾಯ್ದಿರಿಸಿದ್ದರು. ಯುವರಾಜ್ ಸಿಂಗ್ ಅವರನ್ನು ಪ್ರತಿನಿಧಿಸುವ ರಿಜ್ವಾನ್ ಲಾ ಅಸೋಸಿಯೇಟ್ಸ್ ಎಂಬ ಕಾನೂನು ಸಂಸ್ಥೆಯು ಯೋಜನೆಯ ವಿಳಂಬದಿಂದಾಗಿ ಉಂಟಾದ ಹಾನಿಯ ಕ್ಲೇಮ್​ನೊಂದಿಗೆ ನೋಟಿಸ್ ನೀಡಿದೆ.

ಇದನ್ನೂ ಓದಿ: Kavya Maran : ಸೋತಾಗ ಕಣ್ಣೀರು ಹಾಕಿದ ಕಾವ್ಯಾ ಮಾರನ್​, ​ ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನೇ ನಗಿಸಿದರು; ಇಲ್ಲಿದೆ ವಿಡಿಯೊ

ಸಿಂಗ್ ಅವರಿಗೆ ಪ್ರೀಮಿಯಂ ಗುಣಮಟ್ಟದ ಅಪಾರ್ಟ್​ಮೆಂಟ್​ ಕೊಡುವೆ ಭರವಸೆ ನೀಡಲಾಗಿತ್ತು. ಆದರೆ ರಿಯಲ್ ಎಸ್ಟೇಟ್ ಕಡಿಮೆ ಗುಣಮಟ್ಟದ ಅಪಾರ್ಟ್​​ಮೆಂಟ್​ ಮಂಜೂರು ಮಾಡುವ ಮೂಲಕ ಮೋಸ ಮಾಡಿದೆ ಎಂದು ಆರೋಪಿಸಲಾಗಿದೆ. ವಿಶೇಷವೆಂದರೆ, ಈ ಯೋಜನೆ ಮೆಸರ್ಸ್ ಉಪ್ಪಲ್ ಹೌಸಿಂಗ್ ಪ್ರೈವೇಟ್ ಲಿಮಿಟೆಡ್​ ಸೇರಿದೆ. ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಗೌಪ್ಯತೆ ಹಕ್ಕುಗಳ ಉಲ್ಲಂಘನೆಗಾಗಿ ಮೆಸರ್ಸ್ ಬ್ರಿಲಿಯಂಟ್ ಎಟೋಯಿಲ್ ಪ್ರೈವೇಟ್ ಲಿಮಿಟೆಡ್ ಎಂಬ ಮತ್ತೊಂದು ಸಂಸ್ಥೆಗೆ ಎರಡನೇ ನೋಟಿಸ್ ನೀಡಲಾಗಿದೆ.

ಈ ವಿವಾದವು ಮುಖ್ಯವಾಗಿ ವ್ಯಕ್ತಿತ್ವ ಹಕ್ಕುಗಳಿಗೆ ಸಂಬಂಧಿಸಿದಂತೆ ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆ ಮತ್ತು ಸೆಲೆಬ್ರಿಟಿಯ ಬ್ರಾಂಡ್ ಮೌಲ್ಯದ ದುರುಪಯೋಗಕ್ಕೆ ಸಂಬಂಧಿಸಿದೆ.

ಒಪ್ಪಂದವು ಕಳೆದ ವರ್ಷ ನವೆಂಬರ ನಲ್ಲಿ ಮುಕ್ತಾಯಗೊಂಡಿತ್ತು

ರಿಯಲ್ ಎಸ್ಟೇಟ್ ಸಂಸ್ಥೆ ಕೈಗೊಂಡ ಯೋಜನೆಗಳ ಪ್ರಚಾರ ಮತ್ತು ಅನುಮೋದನೆಗೆ ಸಂಬಂಧಿಸಿದಂತೆ ಸಂಬಂಧಿತ ಪಕ್ಷಗಳು ತಿಳಿವಳಿಕೆ ಒಪ್ಪಂದಕ್ಕೆ (ತಿಳಿವಳಿಕೆ ಒಪ್ಪಂದ) ಸಹಿ ಹಾಕಿರುವುದು ಅತ್ಯಗತ್ಯ. ಆದಾಗ್ಯೂ, ಈ ತಿಳಿವಳಿಕೆ ಒಪ್ಪಂದವು ಕಳೆದ ವರ್ಷ ನವೆಂಬರ್ 23 ರಂದು ಕೊನೆಗೊಂಡಿತು. ಅದರ ಹೊರತಾಗಿಯೂ, ಸಂಸ್ಥೆಯು ಯುವರಾಜ್ ಸಿಂಗ್ ಅವರ ಹೆಸರನ್ನು ಬಿಲ್ಬೋರ್ಡ್ ಜಾಹೀರಾತುಗಳ ಮೂಲಕ ಮತ್ತು ಯೋಜನಾ ಸ್ಥಳದಲ್ಲಿ ಬಳಸುವುದನ್ನು ಮುಂದುವರಿಸಿತ್ತು.

ಸಂಸ್ಥೆಯು ಸುದ್ದಿ ಲೇಖನಗಳ ಜೊತೆಗೆ ಅವರ ವ್ಯಕ್ತಿತ್ವವನ್ನು ತಮ್ಮ ಸಾಮಾಜಿಕ ಮಾಧ್ಯಮ ಅಭಿಯಾನಗಳಲ್ಲಿ ಬಳಸುವ ಮೂಲಕ ಉಲ್ಲಂಘನೆ ಮುಂದುವರಿಸಿತ್ತು. ಇದರಿಂದಾಗಿ ಕೃತಿಸ್ವಾಮ್ಯ, ಪ್ರಚಾರದ ಹಕ್ಕು ಮತ್ತು ವ್ಯಕ್ತಿತ್ವದ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಯುವರಾಜ್ ಸಿಂಗ್ ಆರೋಪಿಸಿದ್ದಾರೆ.

Continue Reading

ದೇಶ

Samsung Galaxy: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್ 55 5ಜಿ ಸ್ಮಾರ್ಟ್‌ಫೋನ್ ರಿಲೀಸ್‌; ಏನಿದರ ವಿಶೇಷತೆ?

Samsung Galaxy: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಗ್ಯಾಲಕ್ಸಿ ಎಫ್ ಸರಣಿಯ ಅತ್ಯಂತ ಪ್ರೀಮಿಯಂ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್ 55 5ಜಿ ಅನ್ನು ಇಂದು ಬಿಡುಗಡೆ ಮಾಡಿದ್ದು, ನಯವಾಗಿ ಮತ್ತು ಸೊಗಸಾಗಿರುವ ಗ್ಯಾಲಕ್ಸಿ ಎಫ್55 5ಜಿ ಪ್ರೀಮಿಯಂ ಬ್ಯಾಕ್ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದ್ದು, ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸೀರೀಸ್ ಉತ್ಪನ್ನಗಳಲ್ಲಿಯೇ ಮೊದಲ ಬಾರಿಗೆ ಕ್ಲಾಸಿ ವೀಗನ್ ಲೆದರ್ ವಿನ್ಯಾಸದ ಸ್ಮಾರ್ಟ್‌ಫೋನ್ ಅನ್ನು ರಿಲೀಸ್‌ ಮಾಡಿದೆ.

VISTARANEWS.COM


on

Samsung Galaxy F55 5G Smartphone Released With Exciting Classy Veegan Leather Design
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಗ್ಯಾಲಕ್ಸಿ ಎಫ್ ಸರಣಿಯ ಅತ್ಯಂತ ಪ್ರೀಮಿಯಂ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ (Samsung Galaxy) ಎಫ್ 55 5ಜಿ ಅನ್ನು ಇಂದು ಬಿಡುಗಡೆ ಮಾಡಿದೆ.

ನಯವಾಗಿ ಮತ್ತು ಸೊಗಸಾಗಿರುವ ಗ್ಯಾಲಕ್ಸಿ ಎಫ್55 5ಜಿ ಪ್ರೀಮಿಯಂ ಬ್ಯಾಕ್ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದ್ದು, ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸೀರೀಸ್ ಉತ್ಪನ್ನಗಳಲ್ಲಿಯೇ ಮೊದಲ ಬಾರಿಗೆ ಕ್ಲಾಸಿ ವೀಗನ್ ಲೆದರ್ ವಿನ್ಯಾಸದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಗ್ಯಾಲಕ್ಸಿ ಎಫ್55 5ಜಿ ಸೂಪರ್ ಅಮೋಲ್ಡ್+ ಡಿಸ್ಪ್ಲೇ, ಶಕ್ತಿಶಾಲಿ ಸ್ನ್ಯಾಪ್ ಡ್ರಾಗನ್ 7 ಜೆನ್ 1 ಪ್ರೊಸೆಸರ್, 45ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್, 4 ಜನರೇಷನ್ ಆಂಡ್ರಾಯ್ಡ್ ಅಪ್ ಡೇಟ್‌ಗಳು ಮತ್ತು 5 ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್‌ಗಳಂತಹ ವಿಭಾಗ-ಶ್ರೇಷ್ಠ ಫೀಚರ್‌ಗಳನ್ನು ಹೊಂದಿದ್ದು, ಬಳಕೆದಾರರು ಮುಂದಿನ ಹಲವು ವರ್ಷಗಳ ಕಾಲ ಹೊಸ ಫೀಚರ್ ಮತ್ತು ಹೆಚ್ಚಿನ ಭದ್ರತೆಯನ್ನು ಹೊಂದಬಹುದಾಗಿದೆ.

ಇದನ್ನೂ ಓದಿ: Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಈ ಕುರಿತು ಮಾತನಾಡಿ, “ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸರಣಿಯಲ್ಲಿಯೇ ಮೊದಲ ಬಾರಿಗೆ ಸ್ಯಾಡಲ್ ಸ್ಟಿಚ್ ಮಾದರಿಯ ಕ್ಲಾಸಿ ವೀಗನ್ ಲೆದರ್ ವಿನ್ಯಾಸವನ್ನು ನೀಡಲಾಗುತ್ತಿದೆ. ಗ್ಯಾಲಕ್ಸಿ ಎಫ್55 5ಜಿ ಏಪ್ರಿಕಾಟ್ ಕ್ರಶ್ ಮತ್ತು ರೈಸಿನ್ ಬ್ಲ್ಯಾಕ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಬರಲಿದೆ. ಇದರ ಜತೆಗೆ, ಸೂಪರ್ ಅಮೋಲ್ಡ್+ 120ಹರ್ಟ್ಜ್ ಡಿಸ್ಪ್ಲೇ, ಶಕ್ತಿಯುತ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹಾಗೂ 4 ಜನರೇಷನ್‌ಗಳ ಓಎಸ್ ಅಪ್‌ಡೇಟ್‌ಗಳು, ಐದು ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್ ಮತ್ತು ನಾಕ್ಸ್ ಸೆಕ್ಯೂರಿಟಿ ಫೀಚರ್‌ಗಳನ್ನು ಹೊಂದಿದೆ. ಈ ಮೂಲಕ ಸ್ಯಾಮ್‌ಸಂಗ್ ತನ್ನ ಗ್ರಾಹಕರಿಗೆ ಉನ್ನತ-ಶ್ರೇಣಿಯ ಅನುಭವಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಕ್ಲಾಸಿ ವೀಗನ್ ಲೆದರ್ ಡಿಸೈನ್

ಮಂತ್ರಮುಗ್ಧಗೊಳಿಸುವಂತೆ ವಿನ್ಯಾಸಗೊಳಿಸಲಾಗಿರುವ ಗ್ಯಾಲಕ್ಸಿ ಎಫ್55 5ಜಿ ವಿಶಿಷ್ಟವಾದ ಸ್ಯಾಡಲ್ ಸ್ಟಿಚ್ ಮಾದರಿ ಜತೆಗೆ ಕ್ಲಾಸಿ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ ಹೊಂದಿದೆ. ಕ್ಯಾಮೆರಾ ಡೆಕೊ ಗೋಲ್ಡನ್ ಬಣ್ಣದಲ್ಲಿ ಬರುತ್ತದೆ ಮತ್ತು ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಏಪ್ರಿಕಾಟ್ ಕ್ರಶ್ ಮತ್ತು ರೈಸಿನ್ ಬ್ಲ್ಯಾಂಕ್ ಎಂಬ ಎರಡು ಮನಮೋಹಕ ಬಣ್ಣಗಳ ಆಯ್ಕೆಗಳು ಲಭ್ಯವಿದೆ. ಸ್ಮಾರ್ಟ್‌ಫೋನ್ ಕೇವಲ 180 ಗ್ರಾಂ ತೂಗುತ್ತದೆ ಮತ್ತು 7.8 ಎಂಎಂ ಅಗಲ ಹೊಂದಿದ್ದು, ನಯವಾಗಿದೆ ಹಾಗೂ ಬಳಸುವಾಗ ಅದ್ಭುತ ಅನುಭವ ಉಂಟು ಮಾಡಲಿದೆ.

ಇದನ್ನೂ ಓದಿ: Snake Rescue: ಶಿರಾದಲ್ಲಿ ಹೆಬ್ಬಾವು ರಕ್ಷಿಸಿದ ಮಾಜಿ ಸೈನಿಕ

6.7″ ಫುಲ್ ಎಚ್ಡಿ+ ಸೂಪರ್ ಅಮೋಲ್ಡ್+ ಡಿಸ್‌ಪ್ಲೇ ಹೊಂದಿರುವ ಗ್ಯಾಲಕ್ಸಿ ಎಫ್55 5ಜಿ ಗ್ರಾಹಕರಿಗೆ ಅತ್ಯದ್ಭುತ ದೃಶ್ಯ ವೈಭವ ಮತ್ತು ಸೊಗಸಾದ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ದೊಡ್ಡ ಡಿಸ್‌ಪ್ಲೇಯು 1000 ನಿಟ್‌ಗಳ ಸಾಮರ್ಥ್ಯದ ಹೆಚ್ಚಿನ ಬ್ರೈಟ್‌ನೆಸ್‌ ಹೊಂದಿದೆ ಮತ್ತು ವಿಷನ್ ಬೂಸ್ಟರ್ ತಂತ್ರಜ್ಞಾನದಿಂದಾಗಿ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಬಳಕೆದಾರರು ತಮ್ಮ ಮೊಬೈಲ್ ಅನ್ನು ಅಡೆತಡೆಯಿಲ್ಲದೆ ವೀಕ್ಷಣೆ ಮಾಡಬಹುದಾಗಿದೆ.

ಶಕ್ತಿಯುತ ಪ್ರೊಸೆಸರ್

ಗ್ಯಾಲಕ್ಸಿ ಎಫ್55 5ಜಿ 4ಎನ್ಎಂ ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 7 ಜೆನ್ 1 ಪ್ರೊಸೆಸರ್‌ ಹೊಂದಿದ್ದು, ಬಳಕೆದಾರರಿಗೆ ನಿರರ್ಗಳವಾಗಿ ಮಲ್ಟಿ ಟಾಸ್ಕಿಂಗ್ ಮಾಡುವ ಅವಕಾಶ ಒದಗಿಸುತ್ತದೆ. 5ಜಿಯ ಅಪ್ರತಿಮ ವೇಗ ಮತ್ತು ಸಂಪರ್ಕ ಇರುವ ಕಾರಣ ಬಳಕೆದಾರರು ಎಲ್ಲಿಗೆ ಹೋದರೂ ಕನೆಕ್ಟೆಡ್ ಆಗಿರಬಹುದು ಮತ್ತು ಸಂಪರ್ಕದಲ್ಲಿರಬಹುದು. ವೇಗವಾಗಿ ಡೌನ್‌ಲೋಡ್‌, ಸುಗಮ ಸ್ಟ್ರೀಮಿಂಗ್ ಮತ್ತು ನಿರರ್ಗಳವಾಗಿ ಬ್ರೌಸಿಂಗ್ ಮಾಡಬಹುದು. ಪ್ರೊಸೆಸರ್ ಉತ್ತಮ ಗುಣಮಟ್ಟದ ಆಡಿಯೋ ಮತ್ತು ದೃಶ್ಯಗಳನ್ನು ನೀಡುವುದರ ಜತೆಗೆ ಹೈಸ್ಪೀಡ್ ಕನೆಕ್ಟಿವಿಟಿ ಹೊಂದಿದ್ದು, ಸೊಗಸಾದ ಮೊಬೈಲ್ ಗೇಮಿಂಗ್ ಅನುಭವವನ್ನು ನೀಡುತ್ತದೆ.

ನೈಟೋಗ್ರಫಿ ಕ್ಯಾಮೆರಾ

ಗ್ಯಾಲಕ್ಸಿ ಎಫ್55 5ಜಿ ಹೆಚ್ಚಿನ ರೆಸೆಲ್ಯೂಶನ್ ಹೊಂದಿರುವ ಮತ್ತು ಶೇಕ್-ಫ್ರೀ ಅಂದರೆ ಕೈ ಅಲುಗಾಡಿದರೂ ಸ್ಪಷ್ಟವಾದ ವೀಡಿಯೋ ಮತ್ತು ಫೋಟೋಗಳನ್ನು ಶೂಟ್ ಮಾಡಬಹುದಾದ 50 ಎಂಪಿ (ಓಐಎಸ್) ನೋ ಶೇಕ್ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ ಕೈ ನಡುಕ ಅಥವಾ ಆಕಸ್ಮಿಕ ಅಲುಗಾಟಗಳಿಂದ ಉಂಟಾಗುವ ಮಸುಕುತನವನ್ನು ತಡೆಯುತ್ತದೆ. ಕ್ಯಾಮೆರಾ ಸೆಟಪ್ 8ಎಂಪಿ ಅಲ್ಟ್ರಾ-ವೈಡ್ ಸೆನ್ಸರ್ ಅನ್ನು ಸಹ ಒಳಗೊಂಡಿದೆ. ವಿಶೇಷವಾಗಿ ಗ್ಯಾಲಕ್ಸಿ ಎಫ್55 5ಜಿ ನೈಟೋಗ್ರಫಿ ಫೀಚರ್ ಜತೆಗೆ ಬರುತ್ತದೆ, ಈ ಫೀಚರ್ ಕಡಿಮೆ-ಬೆಳಕಿನ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಫ್55 5ಜಿ ವಿವರವಾದ, ತೀಕ್ಷ್ಣವಾದ ಸೆಲ್ಫಿ ತೆಗೆಯಲು 50ಎಂಪಿ ಸಾಮರ್ಥ್ಯದ ಹೈ ರೆಸಲ್ಯೂಶನ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಸೂಪರ್-ಫಾಸ್ಟ್ ಚಾರ್ಜಿಂಗ್

ಗ್ಯಾಲಕ್ಸಿ ಎಫ್55 5ಜಿ ಪ್ಯಾಕ್‌ಗಳು 5000 ಎಂಎಎಚ್ ಬ್ಯಾಟರಿ ಹೊಂದಿದೆ. ಅದರಿಂದ ದೀರ್ಘ ಕಾಲ ಬ್ರೌಸಿಂಗ್, ಗೇಮಿಂಗ್ ಮತ್ತು ಬಿಂಜ್ ವೀಕ್ಷಣೆ ಮಾಡಬಹುದಾಗಿದೆ. ಗ್ಯಾಲಕ್ಸಿ ಎಫ್55 5ಜಿ ಬಳಕೆದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಆರಾಮಾಗಿ ಮೊಬೈಲ್ ಬಳಸಲು, ಸಂಪರ್ಕದಲ್ಲಿರಲು, ಮನರಂಜನೆ ನೀಡಲು ಮತ್ತು ಉತ್ಪಾದಕತೆ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಫ್55 5ಜಿ ಕಡಿಮೆ ಸಮಯದಲ್ಲಿ ಹೆಚ್ಚಿನ ಚಾರ್ಜ್ ಮಾಡಬಹುದಾದ 45ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ.

ಇದನ್ನೂ ಓದಿ: New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

ಗ್ಯಾಲಕ್ಸಿ ಎಫ್55 5ಜಿ, ಹಲವಾರು ಹೊಸ ಆವಿಷ್ಕಾರಗಳನ್ನು ಹೊಂದಿದೆ. ಇದರ ವಾಯ್ಸ್ ಫೋಕಸ್‌ ಫೀಚರ್ ವಾತಾವರಣದಲ್ಲಿನ ಶಬ್ದವನ್ನು ಕಡಿತಗೊಳಿಸಿ ಅದ್ಭುತ ಕರೆ ಅನುಭವ ನೀಡುತ್ತದೆ ಮತ್ತು ಆ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸಲಿದೆ. ಕ್ವಿಕ್ ಶೇರ್ ವೈಶಿಷ್ಟ್ಯವು ಬಳಕೆದಾರರಿಗೆ ಫೈಲ್‌ಗಳು, ಫೋಟೋಗಳು ಮತ್ತು ಡಾಕ್ಯುಮೆಂಟ್‌ಗಳನ್ನು ನಿಮ್ಮ ಲ್ಯಾಪ್‌ಟಾಪ್ ಮತ್ತು ಟ್ಯಾಬ್ ಸೇರಿದಂತೆ ಯಾವುದೇ ಸಾಧನ ಅದು ದೂರದಲ್ಲಿದ್ದರೂ ಕೂಡ ತ್ವರಿತವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಫ್55 5ಜಿ ನೊಂದಿಗೆ ನಾಲ್ಕು ಜನರೇಷನ್‌ಗಳ ಓಎಸ್ ಅಪ್‌ಡೇಟ್‌ಗಳು ಮತ್ತು ಐದು ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್‌ಗಳನ್ನು ಒದಗಿಸುತ್ತಿದ್ದು, ಬಳಕೆದಾರರು ಮುಂಬರುವ ವರ್ಷಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ಮತ್ತು ಹೆಚ್ಚಿನ ಭದ್ರತೆಯನ್ನು ಆನಂದಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ.

Continue Reading

ವಾಣಿಜ್ಯ

New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

ಹಣಕಾಸು ನಿಯಮ, ಎಲ್ ಪಿಜಿ ದರ, ಸಂಚಾರ ನಿಯಮ, ಆಧಾರ್ ಕಾರ್ಡ್ ನವೀಕರಣ ಸೇರಿದಂತೆ ಜೂನ್ 1ರಿಂದ ಹಲವು ಪ್ರಮುಖ ಆರ್ಥಿಕ ನಿಯಮಗಳಲ್ಲಿ ಬದಲಾವಣೆಗಳು (New Financial Rules) ಆಗಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

New Financial Rules
Koo

ಮೇ ತಿಂಗಳಾಂತ್ಯದಲ್ಲಿ ಈಗ ನಾವಿದ್ದೇವೆ. ಹೀಗಾಗಿ ಮುಂದಿನ ತಿಂಗಳ ಆರಂಭದಿಂದಲೇ ವಿವಿಧ ಹಣಕಾಸು ನಿಯಮಗಳು (New Financial Rules) ಬದಲಾಗಲಿದೆ. ಜೂನ್ 1ರಿಂದ (june) ಯಾವೆಲ್ಲ ಹೊಸ ನಿಯಮಗಳು ಬರಲಿದೆ, ಹಣಕಾಸು ಕಾನೂನಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಎಂಬ ಕುರಿತು ಮಾಹಿತಿ ಇಲ್ಲಿದೆ.

2024ರ ಜೂನ್ 1ರಿಂದ ಐದು ಪ್ರಮುಖ ಆರ್ಥಿಕ ಬೆಳವಣಿಗೆಗಳು ಸಂಭವಿಸುತ್ತಿವೆ. ಇದರಲ್ಲಿ ಮುಖ್ಯವಾಗಿ ಹೊಸ ಹಣಕಾಸು ನಿಯಮಗಳು ಜಾರಿಗೆ ಬರಲಿದೆ. ಅವುಗಳಲ್ಲಿ ಹಣಕಾಸು ನಿಯಮ (Financial Changes), ಎಲ್ ಪಿಜಿ ದರ (LPG Cylinder Prices), ಸಂಚಾರ ನಿಯಮ (New Traffic Rules), ಆಧಾರ್ ಕಾರ್ಡ್ (Aadhaar card update) ನವೀಕರಣ ಸೇರಿವೆ.

ಎಲ್ ಪಿ ಜಿ ಸಿಲಿಂಡರ್ ಬೆಲೆಗಳು

ತೈಲ ಮಾರುಕಟ್ಟೆ ಕಂಪೆನಿಗಳು ಪ್ರತಿ ತಿಂಗಳ ಮೊದಲನೇ ದಿನ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ನಿಗದಿ ಪಡಿಸುತ್ತದೆ ಎಂಬುದನ್ನು ಗಮನಿಸುವುದು ಅತ್ಯಗತ್ಯ. ಮೇ ತಿಂಗಳಲ್ಲಿ ಸಂಸ್ಥೆಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದವು. ಆದರೂ ತೈಲ ಸಂಸ್ಥೆಗಳು ಜೂನ್ 1 ರಂದು ಮತ್ತೆ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಿವೆ.

ತೈಲ ಮಾರುಕಟ್ಟೆ ಕಂಪೆನಿಗಳು ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ನಿರ್ಧರಿಸುತ್ತವೆ. 14 ಕೆ.ಜಿ. ದೇಶೀಯ ಮತ್ತು 19 ಕೆ.ಜಿ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ, ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳಲ್ಲಿ ಜೂನ್ ಮೊದಲನೇ ತಾರೀಖಿನಂದು ಬದಲಾವಣೆ ಆಗುತ್ತವೆ.

ಬ್ಯಾಂಕುಗಳಿಗೆ ರಜೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಿಡುಗಡೆ ಮಾಡಿದ ಬ್ಯಾಂಕ್ ಹಾಲಿಡೇ ಪಟ್ಟಿಯ ಪ್ರಕಾರ ಜೂನ್‌ನಲ್ಲಿ 10 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದು ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರದ ರಜಾದಿನಗಳನ್ನು ಒಳಗೊಂಡಿದೆ. ಆದರೆ ಈ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.


ಡ್ರೈವಿಂಗ್ ಲೈಸೆನ್ಸ್ ನಿಯಮ

ಹೊಸ ಡ್ರೈವಿಂಗ್ ಲೈಸೆನ್ಸ್ ನಿಯಮಗಳು ಜೂನ್ ತಿಂಗಳಿನಿಂದ ಅನ್ವಯವಾಗಲಿದೆ. ಹೊಸ ನಿಯಮದ ಪ್ರಕಾರ ಅತೀ ವೇಗದಲ್ಲಿ ವಾಹನ ಚಲಾಯಿಸಿದರೆ 1000ರಿಂದ 2000 ರೂ.ವರೆಗೆ ದಂಡ ತೆರಬೇಕಾಗಬಹುದು. ಅದೇ ಸಮಯದಲ್ಲಿ, ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ 500 ರೂ ದಂಡವನ್ನು ಪಾವತಿಸಬೇಕಾಗುತ್ತದೆ.
ಇದಲ್ಲದೇ ಚಾಲಕ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ ದಂಡದ ಮೊತ್ತ ಈಗ ಇರುವುದಕ್ಕಿಂತ ಹೆಚ್ಚಾಗುತ್ತದೆ.

ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು 18 ವರ್ಷ ಪೂರ್ಣಗೊಂಡಿರಬೇಕು ಎಂಬುದು ಹಳೆಯ ನಿಯಮ. ಹೊಸ ನಿಯಮಗಳ ಅಡಿಯಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ 25,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಜೂನ್ 1ರಿಂದ ಆರ್ ಟಿಒ ಗಳಿಗಿಂತ ಖಾಸಗಿ ಡ್ರೈವಿಂಗ್ ತರಬೇತಿ ಕೇಂದ್ರಗಳಲ್ಲಿ ಡ್ರೈವಿಂಗ್ ಪರೀಕ್ಷೆಯನ್ನು ನಡೆಸಬಹುದು. ಅಲ್ಲದೇ ಅಪ್ರಾಪ್ತ ವಯಸ್ಕರು ಚಾಲನೆ ಮಾಡುವಾಗ ಅಪಘಾತ ಉಂಟು ಮಾಡಿದರೆ ಅವರು 25 ವರ್ಷ ವಯಸ್ಸಿನವರೆಗೆ ಚಾಲನಾ ಪರವಾನಗಿಯನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಹೆಚ್ಚುವರಿಯಾಗಿ, ಅವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಬಹುದು. ಅವರ ಪೋಷಕರನ್ನು ಜೈಲಿಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ: Money Guide: 1 ಕೋಟಿ ರೂ. ದುಡಿಯಬೇಕೆ? ಈ ಅಪಾಯ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ


ಆಧಾರ್ ಕಾರ್ಡ್ ನಿಯಮ

ಜೂನ್ 14 ರ ಮೊದಲು ಆಧಾರ್ ಕಾರ್ಡ್ ಅನ್ನು ನವೀಕರಿಸದಿದ್ದರೆ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸರಳವಾಗಿ ಹೇಳುವುದಾದರೆ ಜೂನ್ 14 ರ ಅನಂತರ ಆಧಾರ್ ಕಾರ್ಡ್ ನವೀಕರಿಸಲು ಶುಲ್ಕ ವಿಧಿಸಲಾಗುತ್ತದೆ.

ಯುಐಡಿಎಐ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸುವ ದಿನಾಂಕವನ್ನು ಜೂನ್ 14 ರವರೆಗೆ ವಿಸ್ತರಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಆಧಾರ್ ಹೊಂದಿರುವವರು ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ನವೀಕರಿಸಬಹುದು. ಆದರೂ ಆಫ್‌ಲೈನ್ ಅಪ್‌ಡೇಟ್‌ಗಾಗಿ ಜೂನ್ 14 ರ ಬಳಿಕ ಆಧಾರ್ ಕೇಂದ್ರಕ್ಕೆ ಹೋಗುವಾಗ ಪ್ರತಿ ಅಪ್‌ಡೇಟ್‌ಗೆ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Continue Reading
Advertisement
T20 World Cup 2024
ಕ್ರೀಡೆ22 mins ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು

Viral Video
ವೈರಲ್ ನ್ಯೂಸ್23 mins ago

Viral Video: ವಿಮಾನದ ರೆಕ್ಕೆ ಮೇಲೆ ನಡೆದುಕೊಂಡು ಹೊರ ಬಂದ ಪ್ರಯಾಣಿಕರು; ವೈರಲಾಯ್ತು ವಿಡಿಯೋ

self harming chandrashekar ವಾಲ್ಮೀಕಿ
ಪ್ರಮುಖ ಸುದ್ದಿ27 mins ago

ವಾಲ್ಮೀಕಿ ನಿಗಮ ಅಧೀಕ್ಷಕ ಆತ್ಮಹತ್ಯೆ ಪ್ರಕರಣ: ಮೂವರ ಮೇಲೆ ಎಫ್‌ಐಆರ್; ಡೆತ್‌ ನೋಟ್‌ನಲ್ಲಿರುವ ಸಚಿವ ಯಾರು?

Chetan and Naveen gowda
ಕರ್ನಾಟಕ40 mins ago

Prajwal Revanna Case: ಪೆನ್ ಡ್ರೈವ್ ಹಂಚಿಕೆ ಪ್ರಕರಣ; ಚೇತನ್, ನವೀನ್ ಗೌಡ ಎಸ್ಐಟಿ ವಶಕ್ಕೆ

Pushpa 2
ಸಿನಿಮಾ1 hour ago

Pushpa 2: ʼಪುಷ್ಪ 2ʼ ಸಿನಿಮಾ ತಂಡದಿಂದ ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ಎರಡನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್ಸ್‌

Traffic Violation Case filed against driver if petrol runs out and vehicle stops on road
ಬೆಂಗಳೂರು1 hour ago

Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

Aravind Kejriwal
ದೇಶ1 hour ago

Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆ; ಜಾಮೀನು ವಿಸ್ತರಣೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

Success Story
ಕೃಷಿ2 hours ago

Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

Radhika Pandit
ಸ್ಯಾಂಡಲ್ ವುಡ್2 hours ago

Radhika Pandit: ಅಭಿಮಾನಿಗಳ ಪ್ರಶ್ನೆ ಎದುರಿಸಲು ನಟಿ ರಾಧಿಕಾ ಪಂಡಿತ್ ಸಿದ್ಧ; ಹೊಸ ಸಿನಿಮಾ ಘೋಷಿಸ್ತಾರಾ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ?

chakravarthy sulibele
ಬೆಂಗಳೂರು2 hours ago

Chakravarthy Sulibele: ಮೈಸೂರಿನಲ್ಲಿ ಇಂದು ಸಂಜೆ ಚಕ್ರವರ್ತಿ ಸೂಲಿಬೆಲೆಗೆ ವೀರ ಸಾವರ್ಕರ್‌ ಸಮ್ಮಾನ್‌ ಪ್ರಶಸ್ತಿ ಪ್ರದಾನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ21 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌