Success Story: ಉಜಾಲಾ ಮೂಲಕ ಜನಸಾಮಾನ್ಯರೂ ಹೊಳೆಯುವಂತೆ ಮಾಡಿದ ರಾಮಚಂದ್ರನ್‌ ಯಶಸ್ಸಿನ ಕಥೆ - Vistara News

ವಾಣಿಜ್ಯ

Success Story: ಉಜಾಲಾ ಮೂಲಕ ಜನಸಾಮಾನ್ಯರೂ ಹೊಳೆಯುವಂತೆ ಮಾಡಿದ ರಾಮಚಂದ್ರನ್‌ ಯಶಸ್ಸಿನ ಕಥೆ

Success Story: ಮೂಥೆದತ್ ಪಂಜನ್ ರಾಮಚಂದ್ರನ್‌ ಯಶಸ್ವಿ ಉದ್ಯಮಿ. ಅವರು ಕೇವಲ 5 ಸಾವಿರ ರೂ.ಯಿಂದ ಉದ್ಯಮ ಆರಂಭಿಸಿದ್ದರು. ಸದ್ಯ ಅವರ ಕಂಪೆನಿ ಮೌಲ್ಯ 13 ಸಾವಿರ ಕೋಟಿ ರೂ.

VISTARANEWS.COM


on

ramachandran
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರ: ಮೂಥೆದತ್ ಪಂಜನ್ ರಾಮಚಂದ್ರನ್‌ ಯಶಸ್ವಿ ಉದ್ಯಮಿ. ಹೀಗೆಂದ ಕೂಡಲೇ ಅವರು ಯಾರು ಎನ್ನುವುದು ಬಹುತೇಕರಿಗೆ ಗೊತ್ತಾಗುವುದಿಲ್ಲ. ಉಜಾಲಾ(Ujala) ಕಂಪೆನಿ ಸ್ಥಾಪಕರು ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಜನ ಸಾಮಾನ್ಯರ ಬದುಕಲ್ಲಿ ಉಜಾಲಾ ಬೀರಿದ ಹೊಳಪು ಅಂತಹದ್ದು. ರಾಮಚಂದ್ರನ್‌ ಅವರ ಯಶಸ್ಸಿನ ಪಯಣ ಯುವ ಜನತೆಗೆ ಸ್ಫೂರ್ತಿದಾಯಕವಾಗಲಿದೆ. ಕೇವಲ 5 ಸಾವಿರ ರೂ. ಬಂಡವಾಳದಿಂದ ಉದ್ಯಮ ಆರಂಭಿಸಿದ ಅವರು ಇಂದು ಅದನ್ನು ಸಾವಿರಾರು ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನಾಗಿಸಿದ್ದಾರೆ (Success Story). ಇದರ ಹಿಂದೆ ಇದ್ದುದು ಅವರ ಶ್ರಮ, ಶ್ರದ್ಧೆ, ಸಾಧಿಸುವ ಛಲ.

ಕನಸು ನನಸು ಮಾಡುವತ್ತ ಹೆಜ್ಜೆ ಹಾಕಿದ ರಾಮಚಂದ್ರನ್

ಜ್ಯೋತಿ ಲ್ಯಾಬೊರೇಟರೀಸ್ ಲಿಮಿಟೆಡ್‌ನ ಸ್ಥಾಪಕ ಮತ್ತು ಅಧ್ಯಕ್ಷ ಈ ಮೂಥೆದತ್ ಪಂಜನ್ ರಾಮಚಂದ್ರನ್. ಅವರು ಅಸಂಖ್ಯಾತ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಮಾದರಿ. ಅವರ ಉದ್ಯಮದ ಪಯಣವು 5,000 ರೂ.ಗಳ ಸಾಲದೊಂದಿಗೆ ಪ್ರಾರಂಭವಾಯಿತು ಎನ್ನುವುದು ವಿಶೇಷ. ಕೇರಳದ ತ್ರಿಶೂರ್‌ನ ಸೈಂಟ್‌ ಥಾಮಸ್ ಕಾಲೇಜಿನಿಂದ ಬಿ.ಕಾಂ. ಪದವಿ ಪಡೆದ ನಂತರ ರಾಮಚಂದ್ರನ್ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಲು ಆರಂಭಿಸಿದರು. ಅಕೌಂಟೆಂಟ್ ಆಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರೂ, ತಮ್ಮದೇ ಆದ ಉದ್ಯಮ ಸ್ಥಾಪಿಸುವ ಅವರ ಕನಸು ಬತ್ತಲಿಲ್ಲ. ಇದರ ಭಾಗವಾಗಿ ಅವರು ಆರಂಭದಲ್ಲಿ ಫ್ಯಾಬ್ರಿಕ್ ವೈಟ್ನರ್ ಅಭಿವೃದ್ಧಿಪಡಿಸುವತ್ತ ಯತ್ನಿಸಿದರೂ ಅದರಲ್ಲಿ ವಿಫಲರಾದರು.

ಟರ್ನಿಂಗ್ ಪಾಯಿಂಟ್‌

ಆರಂಭಿಕ ಹೆಜ್ಜೆಗಳನ್ನು ಇಡುವಾಗ ಎಡವಿದರೂ ರಾಮಚಂದ್ರನ್‌ ಧೃತಿಗೆಡಲಿಲ್ಲ.‌ ಈ ಸಮಯದಲ್ಲೇ ಅವರ ಬದುಕಿಗೊಂದು ಅನಿರೀಕ್ಷಿತ ತಿರುವು ನಿಯತಕಾಲಿಕವೊಂದರ ರೂಪದಲ್ಲಿ ಎದುರಾಯಿತು. ನೇರಳೆ ಬಣ್ಣದ ಮೂಲಕ ಬಟ್ಟೆಗೆ ಬಿಳಿ ಮತ್ತು ಹೊಳಪನ್ನು ನೀಡುವ ಮೂಲಕ ಜವಳಿ ರಂಗದಲ್ಲಿ ಕ್ರಾಂತಿಯನ್ನುಂಟು ಮಾಡಬಹುದು ಎಂದು ನಿಯತಕಾಲಿಕವೊಂದರಲ್ಲಿ ಪ್ರಸ್ತಾವಿಸಲಾಗಿತ್ತು. ಇದನ್ನು ಓದಿದ ರಾಮಚಂದ್ರನ್‌ ನೇರಳೆ ಬಣ್ಣಗಳೊಂದಿಗೆ ಪ್ರಯೋಗ ಮಾಡಲು ಒಂದು ವರ್ಷ ಮೀಸಲಿಟ್ಟರು.

ಉದ್ಯಮ ಆರಂಭಿಸಲು ಸಹೋದರನಿಂದ ಸಾಲ

ಅದರಂತೆ ರಾಮಚಂದ್ರನ್‌ ತಮ್ಮ ಕನಸಿನ ಉದ್ಯಮವನ್ನು ನನಸು ಮಾಡಲು ಕಾರ್ಯಪ್ರವೃತ್ತರಾದರು. 1983ರಲ್ಲಿ ತನ್ನ ಸಹೋದರನಿಂದ 5,000 ರೂ.ಗಳ ಸಾಲ ಪಡೆದು ತ್ರಿಶೂರ್‌ನಲ್ಲಿರುವ ತಮ್ಮ ಜಾಗದಲ್ಲಿ ಸಣ್ಣ ತಾತ್ಕಾಲಿಕ ಕಾರ್ಖಾನೆಯನ್ನು ಸ್ಥಾಪಿಸಿದರು. ಅದಕ್ಕೆ ತಮ್ಮ ಮಗಳು ಜ್ಯೋತಿಯ ಹೆಸರಿಟ್ಟರು. ಹೀಗೆ ಜ್ಯೋತಿ ಲ್ಯಾಬೊರೇಟರೀಸ್ ಜನ್ಮ ತಾಳಿತು. ಶುಭ್ರ ಬಿಳಿ ಬಟ್ಟೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸುವುದು ಅವರ ಉದ್ದೇಶವಾಗಿತ್ತು. ಅವರ ಈ ಉದ್ದೇಶವೇ ಮುಂದೆ ಉಜಾಲಾ ಸುಪ್ರೀಂ ಲಿಕ್ವಿಡ್ ಫ್ಯಾಬ್ರಿಕ್ ವೈಟ್ನರ್ ಉದಯಕ್ಕೆ ಕಾರಣವಾಯಿತು.

ಉಜಾಲಾದ ಆರಂಭಿಕ ದಿನಗಳು

ಆರಂಭದಲ್ಲಿ ಉಜಾಲಾ ಲಿಕ್ವಿಡ್ ಫ್ಯಾಬ್ರಿಕ್ ವೈಟ್ನರ್ ಅನ್ನು 6 ಮಹಿಳಾ ನೌಕರರು ಮನೆ ಮನೆಗೆ ಒಯ್ದು ಮಾರಾಟ ಮಾಡುತ್ತಿದ್ದರು. ಕ್ರಮೇಣ ಉಜಾಲಾಗೆ ಬೇಡಿಕೆ ಹೆಚ್ಚಾಗತೊಡಗಿತು. ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿತು. 1997ರ ಹೊತ್ತಿಗೆ ಈ ಉತ್ಪನ್ನವು ಭಾರತದಾದ್ಯಂತ ಗ್ರಾಹಕರನ್ನು ತಲುಪಿತು.

ಇದನ್ನೂ ಓದಿ: E-commerce jobs| ಇ-ಕಾಮರ್ಸ್‌ ಕಂಪನಿಗಳಿಂದ ಶಾಪಿಂಗ್‌ ಸೀಸನ್‌ಗೆ ಡೆಲಿವರಿ ಸಿಬ್ಬಂದಿ ನೇಮಕ ಚುರುಕು

ಏಕ-ಉತ್ಪನ್ನ ಉದ್ಯಮವಾಗಿ ಪ್ರಾರಂಭವಾದ ಜ್ಯೋತಿ ಲ್ಯಾಬ್ಸ್‌ನ ಉತ್ಪನ್ನಗಳು ಯಶಸ್ವಿಯಾಗುತ್ತಿದ್ದಂತೆ ಬಹು ಬ್ರ್ಯಾಂಡ್‌ ಸಂಸ್ಥೆಯಾಗಿ ರೂಪಾಂತರಗೊಂಡಿತು. ಇದೀಗ ಕಂಪೆನಿಯು ಏರ್ ಕೇರ್, ಡಿಟರ್ಜೆಂಟ್, ಸೊಳ್ಳೆ ಬತ್ತಿ, ಆಫ್ಟರ್‌ ವಾಶ್‌ ಲಿಕ್ವಿಟ್‌, ಸೋಪ್‌ ಮುಂತಾದ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಮಾತ್ರವಲ್ಲ ಜ್ಯೋತಿ ಲ್ಯಾಬ್ಸ್ ಜರ್ಮನ್ ಕಂಪೆನಿ ಹೆಂಕೆಲ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿದೆ. ಪ್ರಸ್ತುತ, ಕಂಪನಿಯು 13,583 ಕೋಟಿ ರೂ.ಗಳ ಬಂಡವಾಳವನ್ನು ಹೊಂದಿದೆ.

2020ರಲ್ಲಿ ರಾಮಚಂದ್ರನ್ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ನಿವೃತ್ತರಾದರು. ಸದ್ಯ ಹಿರಿಯ ಮಗಳು ಎಂ.ಆರ್.ಜ್ಯೋತಿ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

RBI Dividend: ಆರ್‌ಬಿಐನಿಂದ ಕೇಂದ್ರಕ್ಕೆ 2.11 ಲಕ್ಷ ಕೋಟಿ ರೂ.‌ ಡಿವಿಡೆಂಡ್! ಮುಂದಿನ ಸರ್ಕಾರಕ್ಕೆ ವರ!

RBI Dividend: ಕೇಂದ್ರ ಸರ್ಕಾರಕ್ಕೆ 2023-24ನೇ ಸಾಲಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ ದಾಖಲೆಯ 2.11 ಲಕ್ಷ ಕೋಟಿ ರೂ. ಡೆವಿಡೆಂಡ್‌ (ಲಾಭಾಂಶ) ನೀಡಲು ಒಪ್ಪಿಗೆ ನೀಡಿರುವುದು ಕೂಡ ಷೇರು ಮಾರುಕಟ್ಟೆಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. 2022-23ರಲ್ಲಿ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ 87 ಸಾವಿರ ಕೋಟಿ ರೂ. ನೀಡಿತ್ತು. ಆದರೆ, ಅದು ಎರಡು ಪಟ್ಟು ಜಾಸ್ತಿಯಾಗಿರುವುದರಿಂದ ಹೊಸ ಸರ್ಕಾರಕ್ಕೆ ಭಾರಿ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

RBI Dividend
Koo

ಮುಂಬೈ: ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದಿದ್ದು, ಇನ್ನೆರಡು ತಿಂಗಳು ಬಾಕಿ ಇವೆ. ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಇನ್ನೆರಡು ಹಂತದ ಮತದಾನಕ್ಕೆ ಅಬ್ಬರದ ಪ್ರಚಾರ ನಡೆಯುತ್ತಿದೆ. ಇದರ ಬೆನ್ನಲ್ಲೇ, ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ (Reserve Bank Of India) ಮಹತ್ವದ ಪ್ರಕಟಣೆ ಹೊರಬಿದ್ದಿದೆ. ಕೇಂದ್ರ ಸರ್ಕಾರಕ್ಕೆ ಆರ್‌ಬಿಐ 2023-24ನೇ ಸಾಲಿನಲ್ಲಿ 2.11 ಲಕ್ಷ ಕೋಟಿ ರೂ. ಡಿವಿಡೆಂಡ್‌ (Dividend) (ಲಾಭಾಂಶ) ನೀಡುವುದಾಗಿ ಘೋಷಣೆ ಮಾಡಿದೆ.

ಜೂನ್‌ 4ರಂದು ನೂತನ ಸರ್ಕಾರ ರಚನೆಯಾಗಲಿದೆ. ವಿತ್ತೀಯ ಕೊರತೆ ನೀಗಿಸುವ ದಿಸೆಯಲ್ಲಿ ಆರ್‌ಬಿಐನ 2.11 ಲಕ್ಷ ಕೋಟಿ ರೂ. ಹೊಸ ಸರ್ಕಾರಕ್ಕೆ ವರದಾನವಾಗಲಿದೆ. ಅದರಲ್ಲೂ, ಆರ್‌ಬಿಐ ಇತಿಹಾಸದಲ್ಲಿಯೇ ದಾಖಲೆ ಮೊತ್ತದ ಡಿವಿಡೆಂಡ್‌ಅನ್ನು ಕೇಂದ್ರ ಸರ್ಕಾರಕ್ಕೆ ನೀಡುವುದಾಗಿ ಘೋಷಿಸಿರುವುದು ಹೊಸ ಸರ್ಕಾರಕ್ಕೆ ಭಾರಿ ಅನುಕೂಲವಾಗಲಿವೆ. ಇದು ದೇಶದ ಒಟ್ಟು ಜಿಡಿಪಿಯ ಶೇ.4ರಷ್ಟು ಮೊತ್ತವಾಗಿದೆ ಎಂದು ತಿಳಿದುಬಂದಿದೆ.

ಷೇರು ಪೇಟೆ ಲಯಕ್ಕೂ ಇದೇ ಕಾರಣ

ಕೇಂದ್ರ ಸರ್ಕಾರಕ್ಕೆ 2023-24ನೇ ಸಾಲಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ ದಾಖಲೆಯ 2.11 ಲಕ್ಷ ಕೋಟಿ ರೂ. ಡೆವಿಡೆಂಡ್‌ (ಲಾಭಾಂಶ) ನೀಡಲು ಒಪ್ಪಿಗೆ ನೀಡಿರುವುದು ಕೂಡ ಷೇರು ಮಾರುಕಟ್ಟೆಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. 2022-23ರಲ್ಲಿ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ 87 ಸಾವಿರ ಕೋಟಿ ರೂ. ನೀಡಿತ್ತು. ಆದರೆ, ಅದು ಎರಡು ಪಟ್ಟು ಜಾಸ್ತಿಯಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಣ ಸಿಗುತ್ತದೆ. ಆ ಹಣವು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ವಿನಿಯೋಗವಾಗುತ್ತದೆ. ಇದರಿಂದ ಷೇರು ಪೇಟೆಯಲ್ಲಿ ಲಾಭ ಗಳಿಸಬಹುದು ಎಂಬ ಕಾರಣದಿಂದ ಹೂಡಿಕೆ ಜಾಸ್ತಿಯಾಗಿದೆ. ಗುರುವಾರವೂ ಸಾರ್ವಜನಿಕ ವಲಯದ ಸಂಸ್ಥೆಗಳು ಲಾಭ ಗಳಿಸಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

“ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಮಹತ್ವದ ಸುಧಾರಣೆ ತಂದಿದೆ. ಆರ್ಥಿಕ ಶಿಸ್ತು, ವಿತ್ತೀಯ ಪ್ರಕ್ರಿಯೆಗಳಲ್ಲಿ ಸುಧಾರಣಾ ಕ್ರಮಗಳನ್ನು ಅನುಸರಿಸಿಕೊಂಡಿದೆ. ಇದರಿಂದಾಗಿ ಭಾರತದ ಷೇರು ಮಾರುಕಟ್ಟೆಯು ಕಳೆದ ಒಂದು ದಶಕದಲ್ಲಿ ಗಣನೀಯ ಏಳಿಗೆ ಕಂಡಿದೆ. 10 ವರ್ಷಗಳ ಹಿಂದೆ ಸೆನ್ಸೆಕ್ಸ್‌ 25 ಸಾವಿರ ಪಾಯಿಂಟ್ಸ್‌ ಹೊಂದಿತ್ತು. ಆದರೀಗ, ಸೆನ್ಸೆಕ್ಸ್‌ 75 ಸಾವಿರ ಪಾಯಿಂಟ್ಸ್‌ಗೆ ಏರಿಕೆಯಾಗಿದೆ. ಈಕ್ವಿಟಿ ಮಾರುಕಟ್ಟೆಯ ಮೌಲ್ಯವು ಕೆಲ ದಿನಗಳ ಹಿಂಷ್ಟೇ 5 ಲಕ್ಷ ಕೋಟಿ ಡಾಲರ್‌ ಆಗಿದೆ. ಹಾಗಾಗಿ, ಜೂನ್‌ 4ರಂದು ಷೇರು ಮಾರುಕಟ್ಟೆಯು ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Continue Reading

ಕರ್ನಾಟಕ

Arecanut Price: ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್‌ ಕಿ ಬಾರ್ ₹60,000 ಪಾರ್ ಆಗಲಿದೆಯಾ?

ಕಳೆದೊಂದು ವಾರದಿಂದ (Arecanut Price) ಅಡಿಕೆ ಇಳಿಮುಖದ ಧಾರಣೆಯ ಕಡೆಗೆ ವಾಲಿದೆ. ಚುನಾವಣೆಯ ಪಲಿತಾಂಶ ಮತ್ತು ಪೂರ್ಣ ಪ್ರಮಾಣದ ನೀತಿ ಸಂಹಿತೆ ತೆರವು ಕಾಣುವವರೆಗೆ ಬಹುಶಃ ಅಡಿಕೆ ಧಾರಣೆ ದೊಡ್ಡ ಮಟ್ಟದ ಏರಿಳಿತವನ್ನು ಕಾಣಲಿಕ್ಕಿಲ್ಲ. ಹಾಗಂತ ಅಡಿಕೆ ತೋಟದ ಉಪ ಬೆಳೆಗಳ ಧಾರಣೆ ಏರುತ್ತಿದೆ. ಈ ಕುರಿತ ನಿಖರ ವಿಶ್ಲೇಷಣೆ ಇಲ್ಲಿದೆ.

VISTARANEWS.COM


on

arecanut price
Koo

| ಅರವಿಂದ ಸಿಗದಾಳ್, ಮೇಲುಕೊಪ್ಪ

ಕಳೆದ ತಿಂಗಳು ಏರಿಕೆ ಗ್ರಾಫ್ (Arecanut Price) ಕಂಡು ರೈತರಲ್ಲಿ ಸಂತಸ ಮೂಡಿಸಿದ ಶಿವಮೊಗ್ಗ ಅಡಿಕೆ ಧಾರಣೆ, ಮೇ ತಿಂಗಳಿನ ಪ್ರಾರಂಭದಲ್ಲಿ ಮತ್ತೊಂದು ಸಣ್ಣ ಮೊತ್ತದ ಏರಿಕೆ ದಾಖಲಿಸಿ, ಕಳೆದೊಂದು ವಾರದಿಂದ ಇಳಿಮುಖದ ಧಾರಣೆಯ ಕಡೆಗೆ ವಾಲಿದೆ. ಚುನಾವಣೆಯ ಪಲಿತಾಂಶ ಮತ್ತು ಪೂರ್ಣ ಪ್ರಮಾಣದ ನೀತಿ ಸಂಹಿತೆ ತೆರವು ಕಾಣುವವರೆಗೆ ಬಹುಶಃ ಅಡಿಕೆ ಧಾರಣೆ ದೊಡ್ಡ ಮಟ್ಟದ ಏರಿಳಿತವನ್ನು ಕಾಣಲಿಕ್ಕಿಲ್ಲ. ಆದರೆ
ಕಳೆದ ವಾರ ಅಂದರೆ 14.05.2024ರಂದು ಗರಿಷ್ಠ ₹ 54,596 ದಾಖಲಿಸಿದ್ದ ರಾಶಿ ಇಡಿ ಧಾರಣೆ, ದಿನ ದಿನವೂ ಇಳಿಯುತ್ತ, ಇವತ್ತು ₹ 53,009 ಬಂದು ನಿಂತಿದೆ. ಸರಿ ಸುಮಾರು ₹ 1,500 ದರ ‘ಅಡಿಕೆ ರಾಶಿ ಇಡಿ’ಯಲ್ಲಿ ಕೊರತೆ ಕಾಣಿಸಿದೆ.

ಅಡಿಕೆ ರಾಶಿ ಇಡಿಯಲ್ಲಿ ₹1,500 ಇಳಿಮುಖವಾಗಿದ್ದರೆ, ಅಡಿಕೆ ಬೆಟ್ಟೆ ಧಾರಣೆಯಲ್ಲಿ ಕೇವಲ ₹.500 ಮಾತ್ರ ಇಳಿಕೆಯಾಗಿದ್ದು, ಆಲ್‌ಮೋಸ್ಟ್ ಸ್ಥಿರತೆಯನ್ನೇ ಉಳಿಸಿಕೊಂಡಿದೆ. ಇದೇ ಸಮಯದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿರುವ ಆವಕವೂ (ಪೂರೈಕೆ) ಗಣನೀಯವಾಗಿ ಅತ್ತ-ಇತ್ತ ಆಗುತ್ತಿರುವುದು ಕಂಡು ಬಂದಿದೆ. ಅಡಿಕೆ ಆವಕ ಏರಿಳಿಕೆ ಆಗುತ್ತಿದ್ದರೂ, ಅಡಿಕೆ ಧಾರಣೆ ಮಾತ್ರ ಇಳಿಯುತ್ತಿರುವುದು ಒಂದು ವಿಶೇಷ.

ಶಿವಮೊಗ್ಗ APMC ದಾಖಲೆಗಳ ಪ್ರಕಾರ ಹೆಚ್ಚು ವ್ಯಾಪಾರವಾಗುವ ‘ರಾಶಿ ಇಡಿ ಅಡಿಕೆ’ ಆವಕದ ‘ಏರಿಳಿಕೆ’ ಹೀಗಿದೆ:
ದಿನಾಂಕ 14.05.2024 – 15,921 ಕ್ವಿಂಟಾಲ್
ದಿನಾಂಕ 15.05.2024 – 5,435 ಕ್ವಿಂಟಾಲ್
ದಿನಾಂಕ 16.05.2024 – 14,464ಕ್ವಿಂಟಾಲ್
ದಿನಾಂಕ 20.05.2024 – 3231 ಕ್ವಿಂಟಾಲ್
ದಿನಾಂಕ 21.05.2024 – 11,538 ಕ್ವಿಂಟಾಲ್
ರಾಶಿ ಇಡಿ ಧಾರಣೆ 53,009ಕ್ಕೆ ಇಳಿಕೆಯಾದಾಗ, ಗೊರಬಲು ಅಡಿಕೆ ₹.38,800 ಸನಿಹದಲ್ಲಿದೆ.

ಸಿಪ್ಪೆ ಗೋಟು ದರ ಏರಿಕೆ

ಈ ಎಲ್ಲ ವೆರೈಟಿಗಳ ಧಾರಣೆಯ ಇಳಿಕೆ ಕಾಣುತ್ತಿರುವಾಗ, ಸಿಪ್ಪೆ ಗೋಟು ದರ ಮಾತ್ರ ಸಣ್ಣ ಮಟ್ಟದ ಏರಿಕೆಯನ್ನು ದಾಖಲಿಸಿದೆ. APMC ಮಂಡಿ ಮತ್ತು ಸೊಸೈಟಿಗಳಲ್ಲಿ ಸಿಪ್ಪೆ ಗೋಟು ಅಡಿಕೆ ವ್ಯವಹಾರ ಬಹಳ ಕಮ್ಮಿ ಮತ್ತು ನಗದು ಮಾರುಕಟ್ಟೆಯಲ್ಲೇ ಹೆಚ್ಚಾಗಿ ಸಿಪ್ಪೆ ಗೋಟು ಅಡಿಕೆ ವ್ಯಾಪಾರ ಕಾಣುವುದು.

ಪ್ರತೀ ವರ್ಷವೂ ನಗದು ಮಾರುಕಟ್ಟೆಯಲ್ಲಿ ಮೇ 15 ರ ನಂತರ ಸಿಪ್ಪೆ ಗೋಟು ಅಡಿಕೆ ಚೇತರಿಕೆ ಕಾಣುವುದು ಎಂದು ನಂಬಿಕೆ ಮತ್ತು ವಾಡಿಕೆಯಾಗಿದೆ. ಅದರಂತೆ ಮೇ 15 ರಿಂದ ಸಿಪ್ಪೆ ಗೋಟು ಅಡಿಕೆ ಏರಿಕೆಯೊಂದಿಗೆ ₹.19,000 ದಲ್ಲಿ ವ್ಯಾಪಾರ ನೆಡೆಯುತ್ತಿದೆ ಎಂದು ವರದಿಯಾಗಿದೆ. (ಸಿಪ್ಪೆ ಗೋಟಿನ ಅಡಿಕೆಗೆ ಬಿಲ್ಲ ಇರುವುದಿಲ್ಲ. ಅಧಿಕೃತವಾಗಿ APMC ಯಲ್ಲಿ ಇದರ ವ್ಯವಹಾರ ಕಡಿಮೆ ಇರುವುದರಿಂದ, ವ್ಯಾಪಾರಸ್ತರು/ಏಜಂಟರು ನೇರವಾಗಿ ರೈತರ ಅಂಗಳದಲ್ಲೇ ಖರೀಧಿ ಮಾಡುವುದರಿಂದ ವ್ಯಾವಹಾರಿಕ ದಾಖಲೆಗಳು ಎಲ್ಲಾ ಕಡೆ ಇರುವುದು ಕಮ್ಮಿ.)
ಸಿಪ್ಪೆ ಗೋಟು ದರ ಇನ್ನಷ್ಟು ಏರುವ ನಿರೀಕ್ಷೆಯಿದ್ದು, ಸದ್ಯದಲ್ಲೇ ಓಪನ್ ನಗದು ಮಾರುಕಟ್ಟೆಯಲ್ಲಿ ₹.20,000 ದಾಟುವ ನಿರೀಕ್ಷೆ ರೈತರದು.

ಅಡಿಕೆ ಬೆಳೆಗಾರರ ನಿರೀಕ್ಷೆ ಮತ್ತು ಅಭಿಪ್ರಾಯ ಪ್ರಕಾರ, ಎಲ್ಲಾ ವೆರೈಟಿ ಅಡಿಕೆಗಳ (ಹಸ, ಬೆಟ್ಟೆ, ಇಡಿ, ಗೊರಬಲು, ಸಿಪ್ಪೆ ಗೋಟು) ಧಾರಣೆಗಳು ಚುನಾವಣೆ ನೀತಿ ಸಂಹಿತೆ ತೆರವುಗೊಂಡ ಮೇಲೆ, ವ್ಯಾಪಾರ ವಹಿವಾಟು ತೀವ್ರತೆ ಪಡೆದು, ಧಾರಣೆ ಗ್ರಾಫ್ ಮೇಲ್ಮುಖವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ಉಪ ಬೆಳೆ ಧಾರಣೆ ಏರಿಕೆ

ಅಡಿಕೆ ಬೆಲೇ ಏರಿಳಿತವಾಗುವ ಸಮಯದಲ್ಲಿ, ಅಡಿಕೆಯ ತೋಟದಲ್ಲಿನ ಉಪ ಬೆಳೆಯಾದ ಕಾಳು ಮೆಣಸು ಧಾರಣೆ ಗಣನೀಯವಾಗಿ ಏರುತ್ತಿದ್ದು, ಕಳೆದ ವಾರ ₹.56,500 (ಕ್ವಿಂಟಾಲಿಗೆ) ಇದ್ದ ದರ, ಇವತ್ತು ₹.60,000 ದಾಟಿದೆ. ವಿಯಟ್ಣಾಮ್‌ನಲ್ಲಿ ಕಾಳು ಮೆಣಸು ಬೆಳೆ ತೀವ್ರ ಕುಸಿತ ಕಂಡ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು, ಭಾರತದ ಕಾಳು ಮೆಣಸಿಗೆ ಜಾಕ್ ಪಾಟ್ ಧಾರಣೆ ಸಿಗಲಿದೆ ಎಂದು ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ಬಹುಶಃ ಎಲ್ಲ ಧಾರಣೆಗಳ ಗಣನೀಯ ಏರಿಳಿತಗಳಿಗೂ ಚಾಲನೆ ಸಿಗುವುದು ಜೂನ್ ನಾಲ್ಕರ ನಂತರ? ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್ಕಿ ಬಾರ್ ₹ 60,000 ಪಾರ್’ ಆಗಲಿದೆಯಾ? ಕಾದು ನೋಡಬೇಕು!

ಇದನ್ನೂ ಓದಿ: Cocoa Price: ಅಡಿಕೆ ಮರದೆತ್ತರಕ್ಕೆ ಕೋಕೋ ಬೆಳೆಯ ಧಾರಣೆ! 800% ಏರಿಕೆ!

Continue Reading

ದೇಶ

Share Market: ಸೆನ್ಸೆಕ್ಸ್‌ ನೆಗೆತ, ನಿಫ್ಟಿ ಜಿಗಿತ; ಮೋದಿ ಭವಿಷ್ಯ ನಿಜವಾಗುತ್ತಾ? ಇಂದಿನ ಏರಿಕೆಗೆ ಕಾರಣಗಳು ಗೊತ್ತಾ?

Share Market: ಷೇರು ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ 1,197 ಪಾಯಿಂಟ್ಸ್‌ ಏರಿಕೆಯೊಂದಿಗೆ ದಾಖಲೆಯ 75,460 ಪಾಯಿಂಟ್ಸ್‌ಗೆ ತಲುಪಿದರೆ, ನಿಫ್ಟಿಯು 370 ಪಾಯಿಂಟ್ಸ್‌ ಏರಿಕೆಯೊಂದಿಗೆ 22,989 ಪಾಯಿಂಟ್ಸ್‌ ತಲುಪಿದೆ. ಇದು ಲೋಕಸಭೆ ಚುನಾವಣೆ ಫಲಿತಾಂಶ, ಸ್ಥಿರ ಸರ್ಕಾರದ ಮುನ್ಸೂಚನೆಗೆ ಹಿಡಿದ ಕನ್ನಡಿ ಎಂದೇ ವಿಶ್ಲೇಷಿಸಲಾಗುತಿದೆ.

VISTARANEWS.COM


on

Share Market
Koo

ಮುಂಬೈ: “ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶ ಪ್ರಕಟವಾಗುವ ಜೂನ್‌ 4ರಂದು ಭಾರತದ ಷೇರು ಮಾರುಕಟ್ಟೆಯು (Share Market) ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಇದೇ ಮಾತು ಹೇಳಿದ್ದಾರೆ. ಇದರ ಮಧ್ಯೆಯೇ, ಗುರುವಾರ (ಮೇ 23) ಷೇರು ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ 1,197 ಪಾಯಿಂಟ್ಸ್‌ ಏರಿಕೆಯೊಂದಿಗೆ ದಾಖಲೆಯ 75,460 ಪಾಯಿಂಟ್ಸ್‌ಗೆ ತಲುಪಿದರೆ, ನಿಫ್ಟಿಯು 370 ಪಾಯಿಂಟ್ಸ್‌ ಏರಿಕೆಯೊಂದಿಗೆ 22,989 ಪಾಯಿಂಟ್ಸ್‌ ತಲುಪಿದೆ. ಲೋಕಸಭೆ ಚುನಾವಣೆ ಫಲಿತಾಂಶ, ಸ್ಥಿರ ಸರ್ಕಾರದ ಮುನ್ಸೂಚನೆಯ ಸಂಕೇತವಾಗಿಯೇ ಷೇರು ಮಾರುಕಟ್ಟೆಯು ದಾಖಲೆ ಬರೆದಿದೆ ಎಂದೇ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

“ನಿಫ್ಟಿಯು ದಾಖಲೆಯ ಏರಿಕೆ ಕಾಣುವ ಮೂಲಕ ಚುನಾವಣೆ ನಂತರದಲ್ಲಿ ದೇಶದಲ್ಲಿ ರಾಜಕೀಯ ಸ್ಥಿರತೆ ಇರುತ್ತದೆ ಎಂಬ ಸಂದೇಶ ರವಾನಿಸಿದೆ. ಅತಿ ಹೆಚ್ಚಿನ ಹಣ ಹೂಡಿಕೆ ಮಾಡುವವರು ಸೇರಿ ಎಲ್ಲರಿಗೂ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ” ಎಂದು ಜಿಯೋಜೀತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ರಣತಂತ್ರಗಾರ ವಿ.ಕೆ.ವಿಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ, ಸಾರ್ವತ್ರಿಕ ಚುನಾವಣೆ ಫಲಿತಾಂಶದ ದಿನ ಷೇರು ಪೇಟೆಯಲ್ಲಿ ಲವಲವಿಕೆ ಇದ್ದೇ ಇರುತ್ತದೆ. ಆದರೆ, ಜೂನ್‌ 4ರಂದು ಇತಿಹಾಸ ಸೃಷ್ಟಿಯಾಗುತ್ತದೆ ಎಂದು ಹೇಳುತ್ತಿರುವುದು ಹೂಡಿಕೆದಾರರ ಖುಷಿ ಹೆಚ್ಚಿಸಿದೆ.

Share Market

ಕೇಂದ್ರಕ್ಕೆ ಆರ್‌ಬಿಐ ಲಾಭಾಂಶದ ಕೊಡುಗೆ

ಕೇಂದ್ರ ಸರ್ಕಾರಕ್ಕೆ 2023-24ನೇ ಸಾಲಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ ದಾಖಲೆಯ 2.10 ಲಕ್ಷ ಕೋಟಿ ರೂ. ಡೆವಿಡೆಂಡ್‌ (ಲಾಭಾಂಶ) ನೀಡಲು ಒಪ್ಪಿಗೆ ನೀಡಿರುವುದು ಕೂಡ ಷೇರು ಮಾರುಕಟ್ಟೆಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. 2022-23ರಲ್ಲಿ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ 87 ಸಾವಿರ ಕೋಟಿ ರೂ. ನೀಡಿತ್ತು. ಆದರೆ, ಅದು ಎರಡು ಪಟ್ಟು ಜಾಸ್ತಿಯಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಣ ಸಿಗುತ್ತದೆ. ಆ ಹಣವು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ವಿನಿಯೋಗವಾಗುತ್ತದೆ. ಇದರಿಂದ ಷೇರು ಪೇಟೆಯಲ್ಲಿ ಲಾಭ ಗಳಿಸಬಹುದು ಎಂಬ ಕಾರಣದಿಂದ ಹೂಡಿಕೆ ಜಾಸ್ತಿಯಾಗಿದೆ. ಗುರುವಾರವೂ ಸಾರ್ವಜನಿಕ ವಲಯದ ಸಂಸ್ಥೆಗಳು ಲಾಭ ಗಳಿಸಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಷೇರು ಮಾರುಕಟ್ಟೆ ಬಗ್ಗೆ ಮೋದಿ ಹೇಳಿದ್ದೇನು?

“ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಮಹತ್ವದ ಸುಧಾರಣೆ ತಂದಿದೆ. ಆರ್ಥಿಕ ಶಿಸ್ತು, ವಿತ್ತೀಯ ಪ್ರಕ್ರಿಯೆಗಳಲ್ಲಿ ಸುಧಾರಣಾ ಕ್ರಮಗಳನ್ನು ಅನುಸರಿಸಿಕೊಂಡಿದೆ. ಇದರಿಂದಾಗಿ ಭಾರತದ ಷೇರು ಮಾರುಕಟ್ಟೆಯು ಕಳೆದ ಒಂದು ದಶಕದಲ್ಲಿ ಗಣನೀಯ ಏಳಿಗೆ ಕಂಡಿದೆ. 10 ವರ್ಷಗಳ ಹಿಂದೆ ಸೆನ್ಸೆಕ್ಸ್‌ 25 ಸಾವಿರ ಪಾಯಿಂಟ್ಸ್‌ ಹೊಂದಿತ್ತು. ಆದರೀಗ, ಸೆನ್ಸೆಕ್ಸ್‌ 75 ಸಾವಿರ ಪಾಯಿಂಟ್ಸ್‌ಗೆ ಏರಿಕೆಯಾಗಿದೆ. ಈಕ್ವಿಟಿ ಮಾರುಕಟ್ಟೆಯ ಮೌಲ್ಯವು ಕೆಲ ದಿನಗಳ ಹಿಂಷ್ಟೇ 5 ಲಕ್ಷ ಕೋಟಿ ಡಾಲರ್‌ ಆಗಿದೆ. ಹಾಗಾಗಿ, ಜೂನ್‌ 4ರಂದು ಷೇರು ಮಾರುಕಟ್ಟೆಯು ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Continue Reading

ಮನಿ-ಗೈಡ್

Money Guide: 1 ಕೋಟಿ ರೂ. ದುಡಿಯಬೇಕೆ? ಈ ಅಪಾಯ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide: ಭವಿಷ್ಯಕ್ಕಾಗಿ ಹೂಡಿಕೆ ಮಾಡಬೇಕು ಎನ್ನುವುದು ಬಹುತೇಕರ ಆಗ್ರಹ. ಆದರೆ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎನ್ನವ ಬಗ್ಗೆ ಗೊಂದಲ ಮೂಡುತ್ತದೆ. ಇಲ್ಲಿ ನಾವು ನಿಮಗೆ ಪರಿಚಯಿಸುವ ಯೋಜನೆ ಸರ್ಕಾರಿ ಬೆಂಬಲಿತ ಪ್ಲಾನ್‌ ಆಗಿದ್ದು, ಇಲ್ಲಿ ಹೂಡಿಕೆ ಮಾಡುವುದರಿಂದ ಯಾವುದೇ ಆತಂಕವಿಲ್ಲ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು 1 ಕೋಟಿ ರೂ.ಗಿಂತ ಹೆಚ್ಚು ಸಂಗ್ರಹಿಸಬಹುದು. ಹಾಗಾದರೆ ಇದು ಯಾವ ಯೋಜನೆ? ಯಾರೆಲ್ಲ ಹೂಡಿಕೆ ಮಾಡಬಹುದು? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ, ದುಬಾರಿ ಜೀವನ ಶೈಲಿಯಿಂದಾಗಿ ಹಣಕಾಸಿನ ವಿಚಾರದಲ್ಲಿ ಎಲ್ಲರೂ ಎಚ್ಚರಿಕೆ ವಹಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಉಳಿತಾಯ ಮಾಡುವತ್ತ ಗಮನ ಹರಿಸಬೇಕು ಎನ್ನುವುದು ಆರ್ಥಿಕ ತಜ್ಞರ ಸಲಹೆ. ಹಾಗಾದರೆ ಉಳಿತಾಯ, ನಿವೃತ್ತಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದಾದರೆ ಯಾವುದು ಉತ್ತಮ? ಎನ್ನುವ ಪ್ರಶ್ನೆ ಸಹಜವಾಗಿ ಎದುರಾಗುತ್ತದೆ. ಇದಕ್ಕೆ ತಜ್ಞರು ನೀಡುವ ಉತ್ತರ ಸಾರ್ವಜನಿಕ ಭವಿಷ್ಯ ನಿಧಿ (Public Provident Fund). ಇದು ಕೇಂದ್ರ ಸರ್ಕಾರ ಬೆಂಬಲಿತ ಪ್ಲಾನ್‌ ಆಗಿದ್ದು, ಸಣ್ಣ ಹೂಡಿಕೆದಾರರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಬೆಂಬಲಿತ ಪ್ಲಾನ್‌ ಆದ ಕಾರಣ ಇಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಅಲ್ಲ ಎನ್ನುವುದು ಬಹು ದೊಡ್ಡ ಪ್ಲಸ್‌ ಪಾಯಿಂಟ್‌. ಪಿಪಿಎಫ್‌ ಖಾತೆ ತೆರೆಯುವವರಿಗೆ ವಾರ್ಷಿಕ ಶೇ. 7.1ರಷ್ಟು ಬಡ್ಡಿ ದೊರೆಯಲಿದೆ. ಅಲ್ಲದೆ ಈ ಹೂಡಿಕೆಯ ಮೂಲಕ ಸಾಲವನ್ನೂ ಪಡೆಯಬಹುದು. ಜತೆಗೆ ತೆರಿಗೆ ವಿನಾಯಿತಿಯೂ ಲಭಿಸುತ್ತದೆ. ವಿಶೇಷ ಎಂದರೆ ನಿಯತಕಾಲಿಕ ಹೂಡಿಕೆಗಳು ಮತ್ತು ಸಂಯೋಜನೆಯ ಮೂಲಕ ನೀವು ಪಿಪಿಎಫ್‌ನಿಂದ 1 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ (Money Guide).

1 ಕೋಟಿ ರೂ. ಪಡೆಯುವ ವಿಧಾನ

ಹೂಡಿಕೆ ಅವಧಿಒಟ್ಟು ಪಿಪಿಎಫ್‌
ಹೂಡಿಕೆ
ಒಟ್ಟು ಬಡ್ಡಿಮೆಚ್ಯೂರಿಟಿ ಮೊತ್ತ
15 ವರ್ಷ1.5 ಲಕ್ಷ ರೂ.18.18 ಲಕ್ಷ ರೂ.40.68 ಲಕ್ಷ ರೂ.
20 ವರ್ಷ1.5 ಲಕ್ಷ ರೂ.36.58 ಲಕ್ಷ ರೂ.66.58 ಲಕ್ಷ ರೂ.
30 ವರ್ಷ1.5 ಲಕ್ಷ ರೂ.1.09 ಕೋಟಿ ರೂ.1.54 ಕೋಟಿ ರೂ.

ವಿವಿಧ ಅವಧಿಗಳಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂ. ಹೂಡಿಕೆ ಮಾಡುವ ಮೂಲಕ ನಿಮ್ಮ ಮೆಚ್ಯೂರಿಟಿ ಮೊತ್ತವು 40 ಲಕ್ಷ ರೂ.ಯಿಂದ 1.5 ಕೋಟಿ ರೂ.ಗೆ ಹೇಗೆ ಬೆಳೆಯಬಹುದು ಎಂಬುದನ್ನು ಮೇಲಿನ ಉದಾಹರಣೆ ವಿವರಿಸುತ್ತದೆ.

ತೆರಿಗೆ ವಿನಾಯಿತಿ

ಇನ್ನು ಸೆಕ್ಷನ್‌ 80 ಸಿ ಅಡಿಯಲ್ಲಿ 1.5 ಲಕ್ಷ ರೂ. ತನಕ ತೆರಿಗೆ ವಿನಾಯಿತಿ ಸಿಗಲಿದೆ. ಅಂದರೆ ಯೋಜನೆಯಲ್ಲಿ ಮಾಡಿದ ಸಂಪೂರ್ಣ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ನೀವು ಪಡೆಯುತ್ತೀರಿ. ಇದಲ್ಲದೆ, ಹೂಡಿಕೆಯಿಂದ ಪಡೆದ ಬಡ್ಡಿಗೂ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಅಲ್ಲದೆ ಯೋಜನೆ ಮುಕ್ತಾಯವಾದ ಬಳಿಕ ಪಡೆದಯುವ ಮೊತ್ತವೂ ತೆರಿಗೆಮುಕ್ತವಾಗಿರುತ್ತದೆ.

ಸಾಲ ಪಡೆಯಲಿರುವ ಅರ್ಹತೆ

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ನಲ್ಲಿ ನೀವು ಮಾಡುವ ಇನ್ವೆಸ್ಟ್‌ಮೆಂಟ್‌ ಮೇಲೆ ಸಾಲ ಪಡೆಯಬಹುದು. ಖಾತೆ ತೆರೆದ 3-6ನೇ ವರ್ಷದಲ್ಲಿ ಸಾಲ ಪಡೆಯಲು ನೀವು ಅರ್ಹರಾಗಿರುತ್ತೀರಿ. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಮೊತ್ತವನ್ನು ಮಾತ್ರ ಸಾಲಕ್ಕಾಗಿ ಕ್ಲೈಮ್‌ ಮಾಡಿಕೊಳ್ಳಬಹುದು.‌

ಯಾರೆಲ್ಲ ತೆರೆಯಬಹುದು?

ಭಾರತೀಯ ನಾಗರಿಕರು ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯುವ ಸೌಕರ್ಯವಿದೆ. ಅನಿವಾಸಿ ಭಾರತೀಯರು ಹೊಸ ಪಿಪಿಎಫ್‌ ಅಕೌಂಟ್‌ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ. ಆದರೆ 5 ವರ್ಷಗಳ ಹೆಚ್ಚುವರಿ ಅವಧಿ ಇರುವುದಿಲ್ಲ. ಈ ಯೋಜನೆಯಲ್ಲಿ ನೀವು ವರ್ಷಕ್ಕೆ ಕನಿಷ್ಠ 500 ರೂ ಮತ್ತು ಗರಿಷ್ಠ 1.5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು. ಒಂದು ಹಣಕಾಸು ವರ್ಷದಲ್ಲಿ ನೀವು ಗರಿಷ್ಠ 12 ಕಂತುಗಳಲ್ಲಿ ಹಣವನ್ನು ಠೇವಣಿ ಇಡುವ ಸೌಲಭ್ಯವೂ ಇದೆ. ಆಫ್‌ಲೈನ್‌ ಹಾಗೂ ಆನ್‌ಲೈನ್‌ ವಿಧಾನದಲ್ಲಿ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. 

ಇದನ್ನೂ ಓದಿ: Money Guide: ತೆರಿಗೆ ವಿನಾಯಿತಿ ಪಡೆಯಬೇಕೆ? ಮಾ. 31ರೊಳಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ

Continue Reading
Advertisement
Teacher
ವಿದೇಶ18 mins ago

17 ವರ್ಷದ ವಿದ್ಯಾರ್ಥಿಯ ಜತೆ 30 ಸಲ ಸೆಕ್ಸ್‌ ಮಾಡಿದ ಶಿಕ್ಷಕಿ; ಮುಂದೇನಾಯ್ತು ಅನ್ನೋದೇ ರೋಚಕ!

Travel Tips
ಪ್ರವಾಸ28 mins ago

Travel Tips: ಪ್ರವಾಸಪ್ರಿಯರೇ, ನಿಮ್ಮ ವಿಮಾನ ಪ್ರಯಾಣ ಆರಾಮದಾಯಕವಾಗಬೇಕಿದ್ದರೆ ಈ ಟಿಪ್ಸ್‌‌ ಪಾಲಿಸಿ!

SRH vs RR Qualifier 2
ಕ್ರೀಡೆ34 mins ago

SRH vs RR Qualifier 2: ಕ್ವಾಲಿಫೈಯರ್​ ಪಂದ್ಯಕ್ಕೆ ಕ್ಷಣಗಣನೆ; ಇತ್ತಂಡಗಳ ಬಲಾಬಲ ಹೇಗಿದೆ?

Road Accident
ಕರ್ನಾಟಕ43 mins ago

Road Accident: ಮೂಡಿಗೆರೆಯಲ್ಲಿ ಮೆಸ್ಕಾಂ ಲಾರಿ-ಓಮ್ನಿ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ನಾಲ್ವರ ದುರ್ಮರಣ

ಕ್ರೈಂ44 mins ago

Rave party: ಆಶಿ ರಾಯ್ ಡ್ರಗ್ಸ್‌ ಸೇವಿಸಿಲ್ಲ; ನಟಿ ಹೇಮಾ ಸೇವಿಸಿದ್ದು ಯಾವ ಮಾತ್ರೆ? ರಿಪೋರ್ಟ್‌ ರಿವೀಲ್!

Rameshwaram Cafe
ಪ್ರಮುಖ ಸುದ್ದಿ45 mins ago

Rameshwaram Cafe: ನಮ್ಮ ರೆಸ್ಟೋರೆಂಟ್‌ನಲ್ಲಿ ಜಿರಳೆ ಇರಲಿಲ್ಲ, ಕಳಪೆ ಆಹಾರ ಬಳಸಿಲ್ಲ; ರಾಮೇಶ್ವರಂ ಕೆಫೆ ಸ್ಪಷ್ಟನೆ

RBI Dividend
ದೇಶ57 mins ago

RBI Dividend: ಆರ್‌ಬಿಐನಿಂದ ಕೇಂದ್ರಕ್ಕೆ 2.11 ಲಕ್ಷ ಕೋಟಿ ರೂ.‌ ಡಿವಿಡೆಂಡ್! ಮುಂದಿನ ಸರ್ಕಾರಕ್ಕೆ ವರ!

kamal haasan starrer Indian 2 movie released worldwide on July 12
ಸಿನಿಮಾ59 mins ago

Indian 2: ಜು.12ಕ್ಕೆ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರ ರಿಲೀಸ್‌

Makemytrip
ಪ್ರವಾಸ1 hour ago

makemytrip : ರೈಲು ಪ್ರಯಾಣದ ವೇಳೆ ಹೊಸತನ ತರಲು ವೈಶಿಷ್ಟ್ಯಗಳನ್ನು ಪರಿಚಯಿಸಿದ ಮೇಕ್‌ಮೈಟ್ರಿಪ್‌

SRISHTI 2024
ಬೆಂಗಳೂರು1 hour ago

SRISHTI 2024: ಬೆಂಗಳೂರಿನಲ್ಲಿ ಮೇ 24ರಿಂದ 26ರವರೆಗೆ ʼಸೃಷ್ಟಿ ಇನ್ನೋವೇಶನ್‌ ಎಕ್ಸ್‌ಚೇಂಜ್ʼ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌