Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಜನವರಿ 22 ರಿಂದ 28 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೇಷ: ಈ ವಾರ ಮನೆಯಲ್ಲಿ ನೆಮ್ಮದಿ

Weekly Horoscope

ಆರ್ಥಿಕ ಪ್ರಗತಿಯ ಕುರಿತು ನಿಶ್ಚಿತ ರೂಪುರೇಷೆಗಳನ್ನು ನಿಗದಿಗೊಳಿಸಿಕೊಳ್ಳಬಹುದು. ಬಲವಾದ ಸ್ವರೂಪದ ಯಶಸ್ಸನ್ನು ಕಾಣುವಲ್ಲಿ ಶುಕ್ರ ಮತ್ತು ಶನಿ ಗ್ರಹಗಳು ಆರ್ಥಿಕವಾದ ಬೆಂಬಲ ಒದಗಿಸಬಲ್ಲವು. ಕೋಪ ತಾಪಗಳ ನಿಯಂತ್ರಣ ಇರಲಿ. ಕಾಲು ಕೆದರಿ ಜಗಳಕ್ಕೆ ಬರುವವರನ್ನು ನಿರ್ಲಕ್ಷಿಸಿ, ಮಾತಿಗೆ ಮಾತು, ವಿತಂಡವಾದ, ನಿಂದನೆ, ದೂಷಣೆಗಳು ಬೇಡ. ಇವು ನಿಮ್ಮ ಶಾಂತವಾದ ಮನಸ್ಸನ್ನು ಹಾಳುಗೆಡುವುತ್ತವೆ. ಬಾಳ ಸಂಗಾತಿಯ ಆರೋಗ್ಯ ತುಸು ಕಳವಳ ಮೂಡಿಸಬಹುದು. ಆದರೆ ದಾಂಪತ್ಯದಲ್ಲಿನ ಬೆಸುಗೆಯಿಂದ ಮನೆಯಲ್ಲಿ ನೆಮ್ಮದಿ ಇರುತ್ತದೆ.
ಶುಭ ಸಂಖ್ಯೆ: 5 ಶುಭ ದಿಕ್ಕು: ಪಶ್ಚಿಮ

ವೃಷಭ: ಆರ್ಥಿಕವಾಗಿ ಯಶಸ್ಸು

Weekly Horoscope

ಮನಸ್ಸಿನ ಕೋಲಾಹಲಕ್ಕೆ ವಿರುದ್ಧ ಲಿಂಗಿಗಳು ಕಾರಣರಾಗಬಲ್ಲರು. ಅರ್ಥಪೂರ್ಣವಾದ ಪ್ರೇಮ, ಪ್ರೀತಿಯ ವಿಚಾರದಲ್ಲಿ ಹೆಜ್ಜೆ ಇಡಿ. ಆತುರದ ನಿರ್ಣಯ ಕುತ್ತಿಗೆಗೆ ಬರಬಹುದು. ಎಚ್ಚರ. ಬೌದ್ಧಿಕವಾದ ನಡೆ, ನುಡಿ, ಸೂಕ್ಷ್ಮವಾದ ತಿಳುವಳಿಕೆಯೊಂದಿಗಿನ ಹೆಜ್ಜೆಗಳಿಂದ ಆರ್ಥಿಕವಾದ ಕಾರ್ಯಕ್ರಮ ಸಂವರ್ಧನೆಗಳಲ್ಲಿ ಯಶಸ್ಸನ್ನು ಸಂಪಾದಿಸಬಲ್ಲಿರಿ. ಆದರೂ ತುಂಬಾ ಜಾಣತನ ಪ್ರದರ್ಶಿಸದಿರಿ. ಕೆಲವು ಕಿರಾತಕರ ಕೈಗೆ ಸಿಕ್ಕಿ ಬಿದ್ದರೆ ನಿಮ್ಮನ್ನು ಸತಾಯಿಸಬಲ್ಲರು. ಮಾತಿನಲ್ಲಿ ಎಚ್ಚರ ಇರಲಿ. ಮಹಾಲಕ್ಷ್ಮೀಯನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಉತ್ತರ

ಮಿಥುನ: ಕೆಲಸದಲ್ಲಿ ಪ್ರಶಂಸೆ, ಯಶಸ್ಸಿನ ಸಮಯ

Weekly Horoscope

ಸದ್ವಿವೇಕ ಚಾತುರ್ಯದ ಮಾತು, ಶಿಸ್ತುಬದ್ಧ ಕಾರ್ಯ ವಿಧಾನಗಳಿಂದ ಉನ್ನತ ವಾದುದನ್ನು ಸಾಧಿಸಬಲ್ಲಿರಿ. ಮನೆಯಲ್ಲಿಯೂ ಶಾಂತಿ ಇರುವಂತೆ ಜಾಗ್ರತೆ ವಹಿಸಿ. ಕೆಲಸದ ಸ್ಥಳದಲ್ಲಿ ಬಹು ಮಟ್ಟಿಗಿನ ಪ್ರಶಂಸೆ, ಪ್ರಮೋಷನ್‌ಗೆ ಬೇಕಾದ ದಿಸೆಯತ್ತ ಸೂಕ್ತವಾದುದು ಏನು, ಹೇಗೆ, ಎತ್ತ ಇತ್ಯಾದಿ ಸುಳಿವುಗಳು ಸಿಗಬಹುದು. ಕೆಲಸದ ಸ್ಥಳದಲ್ಲಿ ಉಲ್ಲಾಸ, ಲವಲವಿಕೆ ಸಾಧ್ಯ. ಮಕ್ಕಳ ಬಗೆಗೆ ಕೊಂಚ ಲಕ್ಷ್ಯವಹಿಸಿ. ಧೈರ್ಯದಿಂದ ಇದ್ದರೆ ಹಲವು ಯಶಸ್ಸುಗಳ ಬಗೆಗಿನ ನಿರ್ಣಾಯಕ ಹಂತದಲ್ಲಿ ಚತುರತೆ ತೋರಬಲ್ಲಿರಿ. ಶಿವನನ್ನು ಸ್ತುತಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಆಗ್ನೇಯ

ಕಟಕ: ಅತಿಯಾದ ಆತ್ಮವಿಶ್ವಾಸದಿಂದ ಕೇಡು

Weekly Horoscope

ಯಾವುದೇ ಸಂದರ್ಭದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳದಿರಿ. ಶನೈಶ್ವರ ಸ್ವಾಮಿಯು ನಿಮ್ಮ ವಿಷಯದಲ್ಲಿ ಕೆಲ ಶಿಸ್ತು, ಸಂಯಮಗಳನ್ನು ಅಪೇಕ್ಷಿಸಿಯೇ ಸೂಕ್ತವಾದ ವರ್ಚಸ್ಸು ಹಾಗೂ ಸಿದ್ಧಿಗಳಿಗೆ ಬೇಕಾದ ದಾರಿಯನ್ನು ತೋರಿಸುತ್ತಾನೆ. ಅತಿಯಾದ ಆತ್ಮವಿಶ್ವಾಸ ಕೇಡು ತರಬಲ್ಲದು. ಸೋತು ಗೆಲ್ಲಲು ಸಜ್ಜಾಗಿ. ಒಳಿತನ್ನು ನಿರೀಕ್ಷಿಸಬಹುದು. ಗೆಲುವಿನ ಕುದುರೆಯ ಮೇಲೆ ದೃಷ್ಟಿ ಇರಿಸಿ. ಆದರೆ ಅತಿಯಾದ ಲಾಭಕ್ಕೆ ಆಸೆ ಪಡದಿರಿ. ಸೋಲು ಗ್ಯಾರಂಟಿ. ಬಾಳ ಸಂಗಾತಿಯ ಬೆಂಬಲ ಲಭ್ಯ. ಶ್ರೀ ಗುರು ದತ್ತಾತ್ರೇಯನನ್ನು ಸ್ತುತಿಸಿದರೆ ಕ್ಷೇಮ.
ಶುಭ ಸಂಖ್ಯೆ : 1 ಶುಭ ದಿಕ್ಕು: ಪೂರ್ವ

ಸಿಂಹ: ಉತ್ಸಾಹವಿದ್ದರೆ ಆದಾಯವೂ ಜಾಸ್ತಿ

Weekly Horoscope

ನಿಮ್ಮ ನಡೆ ನುಡಿ ಸಿಂಹದಂತೆ ಘನ ಗಾಂಭೀರ್ಯದ ತೂಕದೊಂದಿಗೆ ಶೋಭಿಸುವುದು ಸಾಧ್ಯವಿದ್ದರೂ ಬಾಳ ಸಂಗಾತಿಯ ಜತೆ ಹಲವು ವಿಚಾರಗಳನ್ನು ಚರ್ಚಿಸಿಯೇ ಸೂಕ್ತ ನಿರ್ಣಯವನ್ನು ತಳೆಯಿರಿ. ಅದೃಷ್ಟದ ಬಾಗಿಲು ಕೇವಲ ಘನ ಗಾಂಭೀರ್ಯದಲ್ಲಿ ಅಡಕಗೊಂಡಿಲ್ಲ. ಆಳಾಗಿ ದುಡಿದು ಅರಸನಾಗಿ ಉಣ್ಣುವ ಕಲೆಯನ್ನು ಕೈವಶ ಮಾಡಿಕೊಳ್ಳಿ. ಮಕ್ಕಳ ಮೂಲಕ ಸಂತೋಷ ಲಭ್ಯವಿದೆ. ಮಕ್ಕಳ ಆರೋಗ್ಯದ ಬಗೆಗೂ ಲಕ್ಷ್ಯ ಇರಲಿ. ಒಳ್ಳೆಯ ತಿಳುವಳಿಕೆ ಹೇಳಿ ಮುನ್ನಡೆಸಿ, ಒಳಿತಿದೆ. ದುರ್ಗಾ ಸ್ತುತಿ ಕ್ಷೇಮ.
ಶುಭ ಸಂಖ್ಯೆ :4 ಶುಭ ದಿಕ್ಕು: ಈಶಾನ್ಯ

ಕನ್ಯಾ: ಕೆಲಸದ ಸ್ಥಳದಲ್ಲಿ ಎಲ್ಲರಿಂದ ಪ್ರಶಂಸೆ

Weekly Horoscope

ಸಮಾಧಾನದ, ನಿತ್ಯವೂ ನಲಿವಿನ ಕೌಟುಂಬಿಕ ಸ್ಥಿತಿಗತಿ ನಿಮ್ಮ ಅದೃಷ್ಟದ ವಿಷಯವಾಗಿದೆ. ಹಲವಾರು ಬಗೆಯ ಪ್ರಾಪ್ತಿಗೂ ಇದು ಸಕಾಲ. ಸರ್ಪದ ಕಿರಿಕಿರಿ ಇದ್ದದ್ದು ಸ್ಪಷ್ಟ. ಹೀಗಾಗಿ ನರಸಿಂಹನನ್ನು, ಕುಮಾರ ಸ್ವಾಮಿ, ದುರ್ಗೆಯನ್ನು ಆರಾಧಿಸಿ. ಉನ್ನತ ಶಿಕ್ಷಣ, ಸ್ವಂತ ಉದ್ಯೋಗ, ಕೆಲಸದ ಸ್ಥಳದಲ್ಲಿ ಎಲ್ಲರ ಪ್ರಶಂಸೆಗಳಿಂದ ಮನಸ್ಸಿನ ನೆಮ್ಮದಿ ನಿಮಗೆ ಲಭ್ಯವಿದೆ. ಕೋಪವಿರದ ಸರಳ, ಶಾಂತ ನಡೆ ನುಡಿಯಿಂದ ಅನೇಕ ದುಷ್ಟ ಶಕ್ತಿಗಳ ವಿರುದ್ಧ ಅಂತಿಮ ಜಯ ಗಳಿಸುವಿರಿ. ಗಣೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ದಕ್ಷಿಣ

ತುಲಾ: ಈ ವಾರ ಯಾರನ್ನೂ ನಂಬದಿರಿ

Weekly Horoscope

ಪಂಚಮ ಶನಿ ಕಾಟದ ಕಾರಣದಿಂದಾಗಿ ಹಗುರವಾಗಿದ್ದ ತಲೆಯ ಮೇಲೀಗ ಭಾರ ಬೀಳುತ್ತ ಹೋಗುವ ಸಮಯ. ಆದರೂ ಶನಿ, ಶುಕ್ರಯುತಿಯಿಂದಾಗಿ ಪೂರ್ವ ಪುಣ್ಯದ ಭಾಗ ವಿಶೇಷವಾಗಿ ನಿಮ್ಮನ್ನು ಕಾಪಾಡಲು ಕತ್ತಲಿನ ದೊಡ್ಡ ವರ್ತಮಾನದಲ್ಲೂ ಟಾರ್ಚ್‌ ಬೆಳಕಿನಂತೆ ಸೂಕ್ತವಾದ ದಾರಿಯನ್ನು ಬೆಳಗಿ ತೋರಿಸಲಿದೆ. ಅಕ್ಷರಶಃ ಯಾರನ್ನೂ ನಂಬದಿರಿ. ಆದರೆ ಮುಖದಲ್ಲಿ ಮಂದಹಾಸವಿರಲಿ. ದೋಷ ಭರಿತನಾದ ಕುಜ ಧನ ಲಾಭದ ದಾರಿ ಕಾಣಿಸಿದರೂ ಕಾಣದಂತೆ ಮಾಯವಾಗುವ (ಧನ ನಷ್ಟ) ತಾಪತ್ರಯ ತರುತ್ತಾನೆ. ರಾಮ ರಕ್ಷಾ ಮಂತ್ರ ಪಠಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ವಾಯವ್ಯ

ವೃಶ್ಚಿಕ: ಪ್ರಮೋಷನ್‌ ಪಡೆಯುವ ಸಮಯ

Weekly Horoscope

ಸುಖವು ಮರೀಚಿಕೆಯಾಗದು, ಆತ್ಮ ವಿಶ್ವಾವಿರಲಿ. ಸುಖದ ತಳಹದಿ ಗಟ್ಟಿಯಾಗಿ ಇರಲಿದೆ. ನಿಮ್ಮ ಅನೇಕ ಅರಿಷ್ಟಗಳನ್ನು ದೂರವಾಗಿಸಲು ಗುರು ಅನುಗ್ರಹವಿದೆ. ಮೇಧಾ ದಕ್ಷಿಣಾ ಮೂರ್ತಿ ಶಿವನನ್ನು ಸ್ತುತಿಸಿ. ದೈವಿಕವಾದ ಯೋಗಗಳು ಅರ್ಥಪೂರ್ಣವಾಗಿ ಚಾಲನೆ ಪಡೆಯಲು ಬುಧನು ಬುದ್ಧಿ ಶಕ್ತಿಯನ್ನು ನಿಮಗೆ ಸಂವೇದಿಸುತ್ತಾನೆ. ಕೆಲಸದ ಸ್ಥಳದಲ್ಲಿ ಪ್ರಮೋಷನ್‌ ನಿರೀಕ್ಷೆ ಮಾಡಬಹುದು. ನಷ್ಟಗಳನ್ನು ತರುವುದಕ್ಕೆ ಕೇತು ಹಪಹಪಿಸುತ್ತಿದ್ದಾನೆ. ವಿರುದ್ಧ ಲಿಂಗಿಗಳ ಬಗೆಗೆ ಎಚ್ಚರ ಇರಲಿ. ವಿರಾಟ ಮಾರುತಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ನೈಋತ್ಯ

ಧನಸ್ಸು: ನಿಮಗೆ ಶುಭಕರ ವಾರ

Weekly Horoscope

ಬೌದ್ಧಿಕ ಬಲ ನಿಮ್ಮ ಪಾಲಿಗೆ ಸಂಜೀವಿನಿಯಾಗಿದೆ. ಜ್ಞಾನಿಗಳಾದ ನೀವು ದುರ್ಬುದ್ಧಿಗಳನ್ನು ಪ್ರದರ್ಶಿಸಲಾರಿರಿ ಎಂಬುದು ನಿಸ್ಸಂಶಯ. ಹಾಗೆಯೇ ದುರ್ಬುದ್ಧಿ ಹೊಂದಿದವರಿಂದ ಅಂತರ ಕಾಯ್ದುಕೊಳ್ಳಿ. ನಗು, ಮಾತುಗಳು ಸ್ನೇಹ ಪೂರ್ಣವಾಗಿ ಹೊರ ಹೊಮ್ಮಲಿ. ನಿಮ್ಮದೇ ಆದ ಸ್ವಂತ ವಹಿವಾಟು ಸೂಕ್ತರಾದವರ ಜತೆಗಿನ ಪಾರ್ಟ್‌ನರ್‌ಶಿಪ್‌ ವ್ಯವಹಾರ ಗೆಲುವು ತರುತ್ತದೆ. ಬಾಳ ಸಂಗಾತಿಯ ಜತೆ ಹೊಂದಾಣಿಕೆ ಇರಲಿ. ಚರ್ಚೆಗಳಿಗೆ ದಾರಿ ಬೇಡ. ಧೈರ್ಯವೇ ನಿಮ್ಮನ್ನು ಕಾಪಾಡುವ ಅಸ್ತ್ರವೂ ಆಗುವ ಈ ವಾರದ ದಿನಗಳು ಶುಭಕರವಾಗಿದೆ. ವೆಂಕಟೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ದಕ್ಷಿಣ

ಮಕರ: ಗುರು ರಾಯರ ಸ್ತುತಿಸಿ

Weekly Horoscope

ಆರೋಗ್ಯದ ಕುರಿತು ಗಮನವಿರಲಿ. ಬಾಳ ಸಂಗಾತಿಯ ಆರೋಗ್ಯವೂ ಚಿಂತೆಗೆ ದಾರಿ ಮಾಡಬಹುದಾಗಿದೆ. ಸೂಕ್ತವಾಗಿ ಗಮನ ಕೊಡಿ. ಹಣಕಾಸಿನ ವಿಚಾರ ತೊಂದರೆ ಆಗದಿದ್ದರೂ ಸಮಾಧಾನವಿರದ ದಿನಗಳು ಇವು. ಏನೋ ಒಂದನ್ನು ಅಂತೂ ಬಗೆಹರಿಸಿಯಾಯ್ತು ಎಂಬಷ್ಟರಲ್ಲಿ ಮತ್ತೊಂದು ಆತಂಕ ಸೃಷ್ಟಿಯಾಗುವ ಕಿರಿಕಿರಿ ಎದುರಿಸುವಿರಿ. ಗುರು ಸಾರ್ವಭೌಮನಾದ ಶ್ರೀ ರಾಘವೇಂದ್ರ ಸ್ವಾಮಿಯನ್ನು ಹಾಗೂ ಮಾರುತಿಯನ್ನು ಬಿಡದೆ ಸ್ತುತಿಸಿ. ಕಾಮಧೇನುವಾದ ರಾಯರ ಅನುಗ್ರಹ ಅನೇಕ ತಾಪತ್ರಯಗಳನ್ನು ದೂರ ಮಾಡುವ ದಿವ್ಯತೆಯನ್ನು ಪಡೆದಿದೆ.
ಶುಭ ಸಂಖ್ಯೆ : 3 ಶುಭ ದಿಕ್ಕು: ಆಗ್ನೇಯ

ಕುಂಭ: ಸೂರ್ಯನೇ ಸುಡುವ ಕಾವಲಿಯಾಗದಿರಲಿ

Weekly Horoscope

ವರ್ಚಸ್ಸು, ಧನ ಲಾಭವೆಲ್ಲ ಇದೆ. ಆದರೆ ಗೀರಿದರೆ ಬೆಂಕಿ ಹತ್ತುವಂತೆ ಬೆಂಕಿಗಟ್ಟಿಯಾಗುವ ಧೂರ್ತರು ನಿಮ್ಮ ಸಂಯಮ ಹಾಗೂ ತಾಳ್ಮೆಯನ್ನು ಹಾಳು ಮಾಡಬಲ್ಲರು. ಜೀರ್ಣಾಂಗದ ಕುರಿತಾದ ಸಮಸ್ಯೆ ಎದುರಾದೀತು. ನಿರ್ಲಕ್ಷ್ಯ ತೋರದಿರಿ. ಸುಲಭವಾಗಿ ಸಿಗುವ ಸಾಲದ ಬಗ್ಗೆ ಅಸ್ಥೆ ತಳೆದು ಸಾಲದ ಶೂಲ ಹೊರಲು ಮುಂದಾಗದಿರಿ. ಸರ್ರನೆ ಬಂದು ಕೇಳಿದರೆಂದು ಹಣ ಕೊಡಲು ಹೋಗಬೇಡಿ. ಶನಿ ಕಾಟದ ದಟ್ಟ ದಿನಗಳು ಇವು. ಸೂರ್ಯನ ಬೆಳಕು ಬೇಕು. ಆದರೆ ಸೂರ್ಯನೇ ಸುಡುವ ಕಾವಲಿ ಆಗಬಾರದು. ಮಾರುತಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಉತ್ತರ

ಮೀನ: ಲವಲವಿಕೆಯಿಂದ ಕೂಡಿದ ವಾರ

Weekly Horoscope

ನೀರಿನ ಬಗೆಗೆ ಎಚ್ಚರ. ಅಲರ್ಜಿಗಳು, ವಿಶೇಷವಾಗಿ ಕಲುಷಿತ ನೀರಿನಿಂದಾಗಿ ಉದರ ಸಮಸ್ಯೆ, ಅತಿಸಾರ ಇತ್ಯಾದಿ ಬೆನ್ನು ಹತ್ತದಂತೆ ಎಚ್ಚರ ಇರಲಿ. ಡಿ ಹೈಡ್ರೇಷನ್‌ ಆಗದಂತೆಯೂ ನಿಗಾ ಇಡಿ. ಪ್ರಾಪ್ತಿಯ ವಿಚಾರ ಮುಖ್ಯವಾಗಿ ಹಿರಿಯ ಆಸ್ತಿಯ ಕಾರಣ ಮುನ್ನಲೆಗೆ ಬಂದು ವ್ಯಾಜ್ಯದ ಸುಳಿಯಾಗಿ ಸುತ್ತಿಕೊಳ್ಳಬಹುದು. ಉತ್ತಮವಾದ ಕುಜನು ಧೈರ್ಯ, ಸಾಹಸ, ಶಕ್ತಿ ಹಾಗೂ ಲವಲವಿಕೆಗಳನ್ನು ಕೊಡುತ್ತಾನೆ. ಕುಮಾರಸ್ವಾಮಿಯನ್ನು ಆರಾಧಿಸಿ. ಧನ ಸಮೃದ್ಧಿಗೆ ನರಸಿಂಹನನ್ನು ಸ್ತುತಿಸಿ ಗೆಲ್ಲಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

MLC Election: ವಿಧಾನ ಪರಿಷತ್‌ ಚುನಾವಣೆ; ಸಿ.ಟಿ.ರವಿ, ಎನ್.ರವಿಕುಮಾರ್‌ ಸೇರಿ ಮೂವರಿಗೆ ಬಿಜೆಪಿ ಟಿಕೆಟ್‌

MLC Election: ವಿಧಾನಪರಿಷತ್‌ ಚುನಾವಣೆಗೆ ಮಾಜಿ ಸಚಿವ ಸಿ.ಟಿ.ರವಿ, ಎಂಎಲ್‌ಸಿ ಎನ್‌.ರವಿಕುಮಾರ್‌ ಹಾಗೂ ಮಾಜಿ ಶಾಸಕ ಎಂ.ಜಿ.ಮುಳೆ ಅವರನ್ನು ಬಿಜೆಪಿ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.

VISTARANEWS.COM


on

MLC Election
Koo

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ಗೆ (MLC Election) ನಡೆಯವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್‌ 3 ಕೊನೆಯ ದಿನವಾಗಿದೆ. ಹೀಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮಾಜಿ ಸಚಿವ ಸಿ.ಟಿ.ರವಿ, ಎಂಎಲ್‌ಸಿ ಎನ್‌.ರವಿಕುಮಾರ್‌ ಹಾಗೂ ಮಾಜಿ ಶಾಸಕ ಎಂ.ಜಿ.ಮುಳೆ ಅವರನ್ನು ಬಿಜೆಪಿ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.

ಒಟ್ಟು 11 ಕ್ಷೇತ್ರಗಳ ಪೈಕಿ ಬಿಜೆಪಿ ಸಂಖ್ಯಾಬಲದ ಆಧಾರದ ಮೇಲೆ ಮೂರು ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಿದೆ. ಹೀಗಾಗಿ ಮೂರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಎನ್​. ರವಿ ಕುಮಾರ್ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ಇನ್ನು ಲೋಕಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಟಿ. ರವಿ ಅವರಿಗೆ ಪರಿಷತ್‌ ಟಿಕೆಟ್‌ ಒಲಿದಿದೆ. ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಲೋಕಸಭಾ ಟಿಕೆಟ್‌ ತ್ಯಾಗ ಮಾಡಿದ್ದ ಸುಮಲತಾ ಅಂಬರೀಶ್​ಗೆ ಅವಕಾಶ ಸಿಕ್ಕಿಲ್ಲ.

ಇನ್ನು ಮಾಜಿ ಶಾಸಕ ಎಂ.ಜಿ ಮುಳೆ ಅವರು ಮರಾಠ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಈ ಮೊದಲು ಜೆಡಿಎಸ್‌ನಲ್ಲಿ ಶಾಸಕರಾಗಿದ್ದರು. ಕಳೆದ ಬಾರಿ ಬಸವಕಲ್ಯಾಣ ಉಪಚುನಾವಣೆ ವೇಳೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದೀಗ ಅವರಿಗೆ ಬಿಜೆಪಿ ಪರಿಷತ್ ಟಿಕೆಟ್‌ ಸಿಕ್ಕಿದೆ.

ಹೈಕಮಾಂಡ್‌ ನಾಯಕರಿಗೆ ಸಿ.ಟಿ.ರವಿ ಧನ್ಯವಾದ

ಇದನ್ನೂ ಓದಿ | Exit poll 2024: ಮೂರು ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಸೀಟು 400 ದಾಟಲಿದೆ!

ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಮಾಜಿ ಸಚಿವ ಸಿ.ಟಿ.ರವಿ ಅವರು ಹೈಕಮಾಂಡ್‌ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ. ಕರ್ನಾಟಕ ವಿಧಾನಪರಿಷತ್ತಿನ ದೈವಾರ್ಷಿಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಲ್‌.ಸತೋಷ್, ,ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಕೋರ್ ಕಮಿಟಿಯ ಎಲ್ಲಾ ನನ್ನ ಸಹೋದ್ಯೋಗಿ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ ವಿಧಾನಪರಿಷತ್ತಿಗೆ ಅಭ್ಯರ್ಥಿಗಳಾಗಿ ಆಯ್ಕೆಯಾದ‌ ಎನ್‌. ರವಿಕುಮಾರ್ ಹಾಗೂ ಎಂ.ಜಿ. ಮೂಳೆಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Udupi Pocso case: ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಕೇಸ್‌; 8-9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ!

Udupi Pocso case: ವಿದ್ಯಾರ್ಥಿನಿಯರ ಮೇಲೆ ಯುವ ಉದ್ಯಮಿ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೊ ಮಾಡಿಕೊಳ್ಳುತ್ತಿದ್ದ. ಈ ಬಗ್ಗೆ ಪೋಕ್ಸೊ ಪ್ರಕರಣ ದಾಖಲಾಗುತ್ತಲೇ ಆರೋಪಿ ಪರಾರಿಯಾಗಿದ್ದಾನೆ.

VISTARANEWS.COM


on

Udupi Pocso case
Koo

ಉಡುಪಿ: ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಪ್ರಕರಣವೊಂದು (Physical Abuse) ಬೆಳಕಿಗೆ ಬಂದಿದೆ. ಯುವ ಉದ್ಯಮಿಯೊಬ್ಬ ತನ್ನ ಪ್ರಭಾವ ಬಳಸಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಪೋಕ್ಸೊ ಪ್ರಕರಣ (Udupi Pocso case) ದಾಖಲಾಗುತ್ತಲೇ ಆರೋಪಿ ಪರಾರಿಯಾಗಿದ್ದಾನೆ.

ಉದ್ಯಮಿ ಶ್ರೇಯಸ್ ನಾಯ್ಕ (25) ಆರೋಪಿ. ಬಾಲಕಿಯೊಬ್ಬಳ ಮೇಲೆ ಒಂದು ವರ್ಷದಿಂದ ಆರೋಪಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದ. ಹಾಲಾಡಿ ರಸ್ತೆ ಹೆಗ್ಗೋಡ್ಲುವಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಆ ದೃಶ್ಯಗಳನ್ನು ಸೆರೆಹಿಡಿದುಕೊಂಡಿದ್ದಾನೆ. ಬಾಲಕಿ ಗರ್ಭಿಣಿ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೇ 18 ರಂದು ಪೋಕ್ಸೊ ಪ್ರಕರಣ ದಾಖಲಾಗಿದ್ದು, ಸದ್ಯ ತಲೆಮರೆಸಿಕೊಂಡಿರುವ ಶ್ರೇಯಸ್‌ಗಾಗಿ ಬಂಧನಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.

ಶಾಲೆ, ಕಾಲೇಜು ವಿದ್ಯಾರ್ಥಿನಿಯರೇ ಈತನ ಟಾರ್ಗೆಟ್

ಶಾಲೆ, ಕಾಲೇಜು ವಿದ್ಯಾರ್ಥಿನಿಯರೇ ಆರೋಪಿ ಶ್ರೇಯಸ್‌ ಟಾರ್ಗೆಟ್ ಆಗಿದ್ದು, 8-9 ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಮಾಡಿರಬಹುದು ಎಂಬ ಶಂಕೆ ವ್ಯಕ್ಯವಾಗಿದೆ. ಸುಮಾರು 50ಕ್ಕೂ ಅಧಿಕ ಅಶ್ಲೀಲ ವಿಡಿಯೊಗಳನ್ನು ಆರೋಪಿ ಸೆರೆಹಿಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿಯರು, ಯುವತಿಯರ ಜತೆಗಿನ ವಿಡಿಯೊಗಳನ್ನು ಸೆರೆಹಿಡಿದು ತನ್ನ ಲ್ಯಾಪ್‌ಟಾಪ್‌ನಲ್ಲಿ ಆಸಾಮಿ ಇರಿಸಿಕೊಳ್ಳುತ್ತಿದ್ದ.

ಶಾಲೆ, ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಥೇಟ್ ಪ್ರಜ್ವಲ್ ರೇವಣ್ಣ ಮಾದರಿಯಲ್ಲೇ ಈ ವಿಕೃತ ಕಾಮಿ ವಿಡಿಯೊ ಮಾಡಿಕೊಳ್ಳುತ್ತಿದ್ದ. ನಂತರ ಯುವತಿಯರನ್ನು ಬ್ಲ್ಯಾಕ್‌ಮೇಲ್‌ ಮಾಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ.

ಇದನ್ನೂ ಓದಿ | Drowned in Water : ನೀರಿನಲ್ಲಿ ಮುಳುಗಿ ಮುಂಬೈ ಮೂಲದ ಇಬ್ಬರು ಬಾಲಕಿಯರು ಸಾವು

ಆರೋಪಿಯ ಲ್ಯಾಪ್‌ಟಾಪ್‌ ವಶಕ್ಕೆ ಪಡೆದ ಸೈಬರ್ ಪೊಲೀಸ್

ಆರೋಪಿ ಶ್ರೇಯಸ್‌ ಲ್ಯಾಪ್‌ಟಾಪ್‌ ಅನ್ನು ಸೈಬರ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲ್ಯಾಪ್‌ಟಾಪ್‌ಗೆ ಆರೋಪಿ ಪಾಸ್ ವರ್ಡ್ ಇಟ್ಟಿದ್ದು, ಸುಮಾರು 50ಕ್ಕೂ ಅಧಿಕ ವಿಡಿಯೊಗಳು ಇರುವ ಶಂಕೆ ವ್ಯಕ್ತವಾಗಿದೆ. ಸಂತ್ರಸ್ತೆ ಹೇಳಿಕೆ ಆಧರಿಸಿ ಆರೋಪಿ ಮನೆಯಿಂದ ಲ್ಯಾಪ್‌ಟಾಪ್‌ ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ಶಾಲಾ, ಕಾಲೇಜಿನ 8-9 ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಶಂಕೆ ವ್ಯಕ್ತವಾಗಿದ್ದು, ಯಾರಾದರೂ ಸಂತ್ರಸ್ತೆಯರಿದ್ದಲ್ಲಿ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಶ್ರೇಯಸ್ ನಾಯ್ಕ ಬಂಧನಕ್ಕೆ ದಲಿತ ಸಂಘಟನೆಗಳ ಒತ್ತಾಯ

ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಪ್ರಕರಣ ಬೆಳಿಕಿಗೆ ಬಂದ ಹಿನ್ನೆಲೆಯಲ್ಲಿ ಆರೋಪಿ ಶ್ರೇಯಸ್ ನಾಯ್ಕ (25) ಬಂಧನಕ್ಕೆ ದಲಿತ ಸಂಘಟನೆಗಳು ಒತ್ತಾಯ ಮಾಡಿವೆ. ಆರೋಪಿ ಪ್ರಭಾವಿ ಕುಟುಂಬದಿಂದ ಬಂದಿದ್ದು, ಪೊಲೀಸರ ತನಿಖೆ ಬಗ್ಗೆ ದಲಿತ ಸಂಘಟನೆಗಳು ಅಸಮಾಧಾನ ಹೊರಹಾಕಿವೆ.

ಶ್ರೇಯಸ್ ಕುಟುಂಬಸ್ಥರು ಇಲಾಖೆಯಲ್ಲಿದ್ದಾರೆ, ಈ ಕಾರಣದಿಂದ ಆತನ ರಕ್ಷಣೆ ನಡೆಯುತ್ತಿದೆ ಎಂದು ಆರೋಪಿಸಿರುವ ದಲಿತ ಸಂಘಟನೆಗಳು, ಶ್ರೇಯಸ್ ನಾಯ್ಕ ಬಗ್ಗೆ‌ ಸ್ಥಳೀಯವಾಗಿ ಹಲವು ಆರೋಪಗಳು ಇತ್ತು. ಹೀಗಾಗಿ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿವೆ.

Continue Reading

ಕ್ರಿಕೆಟ್

Aaron Jones: 17 ವರ್ಷಗಳ ಹಿಂದಿನ ಟಿ20 ವಿಶ್ವಕಪ್​ ದಾಖಲೆ ಸರಿಗಟ್ಟಿದ ಯುಎಸ್​ಎ ಬ್ಯಾಟರ್​ ಆರೋನ್ ಜೋನ್ಸ್

Aaron Jones: 4ನೇ ಕ್ರಮಾಂಕದಲ್ಲಿ ಆಡಲಿಳಿದ ಆರೋನ್ ಜೋನ್ಸ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿ ಕೆನಡಾ ಬೌಲರ್​ಗಳ ಬೆವರಿಳಿಸಿದರು. ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಡಿದಟ್ಟಿ ನೆರದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.

VISTARANEWS.COM


on

Aaron Jones
Koo

ನ್ಯೂಯಾರ್ಕ್​: ಕೆನಡಾ(CAN vs USA) ವಿರುದ್ಧ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಸಿಕ್ಸರ್​ಗಳ ಸುರಿಮಳೆ ಸುರಿಸಿದ ಅಮೆರಿಕ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಆರೋನ್ ಜೋನ್ಸ್(Aaron Jones) ಟಿ20 ವಿಶ್ವಕಪ್(T20 World Cup)​ ಟೂರ್ನಿಯಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಟಿ20 ವಿಶ್ವಕಪ್​ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ 2ನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ.

ಡಲ್ಲಾಸ್​ನಲ್ಲಿ ನಡೆದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಆಡಲಿಳಿದ ಆರೋನ್ ಜೋನ್ಸ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿ ಕೆನಡಾ ಬೌಲರ್​ಗಳ ಬೆವರಿಳಿಸಿದರು. ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಡಿದಟ್ಟಿ ನೆರದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.

ಒಟ್ಟು 40 ಎಸೆತ ಎದುರಿಸಿದ ಆರೋನ್ ಜೋನ್ಸ್ ಅಜೇಯ 94 ರನ್​ ಬಾರಿಸಿದರು. ಇದರಲ್ಲಿ 60 ರನ್​ ಕೇವಲ ಸಿಕ್ಸರ್​ ಮೂಲಕವೇ ದಾಖಲಾಯಿತು. ಒಟ್ಟು 10 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿದರು. 10 ಸಿಕ್ಸರ್​ ಬಾರಿಸುವ ಮೂಲಕ ವೆಸ್ಟ್​ ಇಂಡೀಸ್​ನ ಮಾಜಿ ಬ್ಯಾಟರ್​ ಕ್ರಿಸ್​ ಗೇಲ್​ ದಾಖಲೆಯನ್ನು ಸರಿಗಟ್ಟಿದರು. ಕ್ರಿಸ್​ ಗೇಲ್​ 2007ರಲ್ಲಿ ಉದ್ಘಾಟನ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ​ ವಿರುದ್ಧ 10 ಸಿಕ್ಸರ್​ ಬಾರಿಸಿದ್ದರು. ಈ ದಾಖಲೆಯನ್ನು 17ವರ್ಷಗಳ ಬಳಿಕ ಜೋನ್ಸ್ ಸರಿಗಟ್ಟಿದ್ದಾರೆ. ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್​ ದಾಖಲೆ ಇನ್ನೂ ಕೂಡ ಕ್ರಿಸ್​ ಗೇಲ್​ ಹೆಸರಿನಲ್ಲಿದೆ. 2016ರಲ್ಲಿ ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಗೇಲ್​ 11 ಸಿಕ್ಸರ್​ ಬಾರಿಸಿದ್ದರು.

ಇದನ್ನೂ ಓದಿ CAN vs USA: ಕೆನಡಾ ಪರ ಟಿ20 ವಿಶ್ವಕಪ್​ ಪಂದ್ಯವಾಡಿದ ದಾವಣಗೆರೆಯ ಶ್ರೇಯಸ್

ಟಿ20 ವಿಶ್ವಕಪ್​ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರು

ಆಟಗಾರಸಿಕ್ಸರ್​ವಿರುದ್ಧವರ್ಷ
ಕ್ರಿಸ್​ ಗೇಲ್​11ಇಂಗ್ಲೆಂಡ್​2016
ಕ್ರಿಸ್​ ಗೇಲ್​10ದಕ್ಷಿಣ ಆಫ್ರಿಕಾ2007
ಆರೋನ್ ಜೋನ್ಸ್10ಕೆನಡಾ2024
ರೀಲಿ ರೊಸೊ8ಬಾಂಗ್ಲಾದೇಶ2022

ಭರ್ಜರಿ ಗೆಲುವು ಸಾಧಿಸಿದ ಅಮೆರಿಕ


ಇಲ್ಲಿನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ, ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಕೆನಡಾ ತಂಡ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕದ ಬ್ಯಾಟಿಂಗ್​ ನೆರವಿನಿಂದ 5 ವಿಕೆಟ್​ಗೆ 194 ರನ್​ ಬಾರಿಸಿತು. ಜವಾಬಿತ್ತ ಅಮೆರಿಕ ಈ ಬೃಹತ್​ ಮೊತ್ತವನ್ನು 17.4 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 197 ರನ್​ ಬಾರಿಸಿ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಯುಎಸ್​ಎ ಗರಿಷ್ಠ ಮೊತ್ತ ಚೇಸ್​ ಮಾಡಿದ ದಾಖಲೆ ಬರೆಯಿತು. ಇದಕ್ಕೂ ಮುನ್ನ 168 ರನ್​ಗಳನ್ನು ಚೇಸ್ ಮಾಡಿದ್ದು ತಂಡದ ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್​ನ ಚೊಚ್ಚಲ ಪಂದ್ಯದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ.

Continue Reading

ಬೆಂಗಳೂರು

Education News : ನೀಟ್ ಪರೀಕ್ಷೆ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ

Education News : ರಾಜ್ಯದಲ್ಲಿ 1.24 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಲಭ್ಯವಿದ್ದು, ರ‍್ಯಾಂಕ್‌ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ನೀಟ್ ಪರೀಕ್ಷೆ ಬಳಿಕವೇ ಎಂಜಿನಿಯರ್ ಸೀಟು ಹಂಚಿಕೆ ಮಾಡಲಾಗುವುದು ಎಂದು ಕೆಇಎ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

VISTARANEWS.COM


on

By

education News
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನೀಟ್‌ ಪರೀಕ್ಷೆ ಬಳಿಕವೇ ಎಂಜಿನಿಯರ್‌ ಸೀಟು ಹಂಚಿಕೆ ಮಾಡಲಾಗುವುದು ಎಂದು ಕೆಇಎ ಕಾರ್ಯ ನಿವಾರ್ಹಕ ನಿರ್ದೇಶಕ ಪ್ರಸನ್ನ (Education News) ತಿಳಿಸಿದ್ದಾರೆ. ನೀಟ್ ಫಲಿತಾಂಶಕ್ಕೂ ಮುನ್ನವೇ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಮೊದಲು ಮೆಡಿಕಲ್ ಸೀಟ್ ಹಂಚಿಕೆ ಮಾಡಿ ನಂತರ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಲಾಗುವುದು ಎಂದರು.

ಬೇರೆ ಬೇರೆ ಕಾಲೇಜಿನಲ್ಲಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ ಎಂಬ ದೂರಿನ ಕುರಿತು ಪ್ರತಿಕ್ರಿಯಿಸಿದ ಅವರು, ಸಿಇಟಿ ಪರೀಕ್ಷೆಯಲ್ಲಿ ಒಳ್ಳೆಯ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತದೆ. ಸೀಟ್ ಸಿಗುವುದಿಲ್ಲ ಎಂಬ ಆತಂಕದಲ್ಲಿ ಡೋನೇಷನ್ ಕೊಟ್ಟು ಅಡ್ಮಿಶನ್ ಮಾಡಿಸಬೇಡಿ. ಒಳ್ಳೆಯ ರ‍್ಯಾಂಕ್‌ ಪಡೆದವರಿಗೆ ಒಳ್ಳೆಯ ಕಾಲೇಜು ಸಿಗುತ್ತದೆ ಎಂದರು.

ಇದನ್ನೂ ಓದಿ: KCET Result 2024: ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಲಿಂಕ್‌ ಇಲ್ಲಿದೆ

1.24 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಲಭ್ಯ

ಇನ್ನೂ ರಾಜ್ಯದಲ್ಲಿ 1.24 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಲಭ್ಯವಿದೆ. ರ‍್ಯಾಂಕ್‌ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಇನ್ನೂ ಕಾಲೇಜು ಶುಲ್ಕವನ್ನು ನಿಗದಿ ಮಾಡಿಲ್ಲ. ಕಳೆದ ವರ್ಷ 40,110 ರೂಪಾಯಿ ಶುಲ್ಕ ಸರ್ಕಾರಿ ಕಾಲೇಜುಗಳಿಗೆ ಇತ್ತು. ಈ ಬಾರಿ ಎಷ್ಟೆಂದು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಆನ್‌ಲೈನ್‌ನಲ್ಲೇ ವೆರಿಫಿಕೇಶನ್‌

ಎಲ್ಲ ಪ್ರಕ್ರಿಯೆಗಳು ಆನ್ ಲೈನ್‌ನಲ್ಲೆ ನಡೆಯಲಿದೆ. ಶೇ.100 ರಷ್ಟು ಡಾಕ್ಯುಮೆಂಟ್ ಪರಿಶೀಲನೆ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಕೆಇಎ ಮುಂದೆ ಬಂದು ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ. ಎಲ್ಲಾ ದಾಖಲಾತಿಗಳನ್ನು ಆನ್‌ಲೈನ್‌ನಲ್ಲೇ ಪರಿಶೀಲನೆ ನಡೆಯಲಿದೆ ಎಂದರು. ನಿನ್ನೆ ಶನಿವಾರ (ಜೂ.1) ಸಂಜೆ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಹಠಾತ್ ಪ್ರಕಟಿಸಿದ ಬೆನ್ನಲ್ಲೇ ಭಾನುವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಸುದ್ದಿಗೋಷ್ಠಿ ನಡೆಸಿ ಎಲ್ಲ ಮಾಹಿತಿಯನ್ನು ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
MLC Election
ಕರ್ನಾಟಕ15 mins ago

MLC Election: ವಿಧಾನ ಪರಿಷತ್‌ ಚುನಾವಣೆ; ಸಿ.ಟಿ.ರವಿ, ಎನ್.ರವಿಕುಮಾರ್‌ ಸೇರಿ ಮೂವರಿಗೆ ಬಿಜೆಪಿ ಟಿಕೆಟ್‌

Actor Dhanush unveils new poster from Ilaiyaraaja biopic
ಕಾಲಿವುಡ್36 mins ago

Actor Dhanush: ಇಳಯರಾಜ ಬಯೋಪಿಕ್‌ ಹೊಸ ಪೋಸ್ಟರ್‌ ಔಟ್‌; ಸಹೋದರರು ಎಂದು ಕಮಲ್‌ ಹಾಸನ್‌ ಹೇಳಿದ್ಯಾರಿಗೆ?

Murder Case
ಚಾಮರಾಜನಗರ37 mins ago

Murder Case : ಚಾಮರಾಜನಗರದಲ್ಲಿ ಅತ್ತಿಗೆ ಮೇಲಿನ ಮೋಹಕ್ಕೆ ಅಣ್ಣನನ್ನೇ ಕೊಂದ ಕಾಮುಕ ತಮ್ಮ

Venkatesh Iyer Marriage
ಕ್ರೀಡೆ50 mins ago

Venkatesh Iyer Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್​ ಅಯ್ಯರ್​

West Bengal
ದೇಶ51 mins ago

West Bengal: ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ; ಗುಂಡಿಕ್ಕಿ ಕೊಂದು, ರುಂಡ ಕಡಿದು ಒಯ್ದ ದುಷ್ಕರ್ಮಿಗಳು

Electric shock Electronic City
ಬೆಂಗಳೂರು ಗ್ರಾಮಾಂತರ1 hour ago

Electric Shock: ಪಲ್ಲಕ್ಕಿ ಹೊತ್ತಿದ್ದ ಟ್ರ್ಯಾಕ್ಟರ್‌ಗೆ ಪ್ರವಹಿಸಿದ ವಿದ್ಯುತ್‌; ಕ್ಷಣಾರ್ಧದಲ್ಲೇ ಇಬ್ಬರು ಸುಟ್ಟು ಕರಕಲು

Udupi Pocso case
ಪ್ರಮುಖ ಸುದ್ದಿ1 hour ago

Udupi Pocso case: ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಕೇಸ್‌; 8-9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ!

Aaron Jones
ಕ್ರಿಕೆಟ್1 hour ago

Aaron Jones: 17 ವರ್ಷಗಳ ಹಿಂದಿನ ಟಿ20 ವಿಶ್ವಕಪ್​ ದಾಖಲೆ ಸರಿಗಟ್ಟಿದ ಯುಎಸ್​ಎ ಬ್ಯಾಟರ್​ ಆರೋನ್ ಜೋನ್ಸ್

Indian 2 Audio Launch Kamal Haasan Simbu Kajal Aggarwal
ಕಾಲಿವುಡ್2 hours ago

Indian 2 Audio Launch: ಅದ್ಧೂರಿಯಾಗಿ ನೆರವೇರಿತು ʼಇಂಡಿಯನ್‌ 2ʼ ಸಿನಿಮಾದ ಆಡಿಯೊ ಲಾಂಚ್‌!

Traffic Advisory
Lok Sabha Election 20242 hours ago

Traffic Advisory : ಲೋಕಸಭೆ ಎಲೆಕ್ಷನ್‌ ಕೌಂಟಿಂಗ್‌; ಬೆಂಗಳೂರಲ್ಲಿ ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು22 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌