Chaturmasya 2022 | ಮಾತೃತ್ವವನ್ನು ಗೌರವಿಸುವುದು ಸಮಾಜದ ಕರ್ತವ್ಯ: ರಾಘವೇಶ್ವರ ಭಾರತೀ ಸ್ವಾಮೀಜಿ - Vistara News

ಅಧ್ಯಾತ್ಮ

Chaturmasya 2022 | ಮಾತೃತ್ವವನ್ನು ಗೌರವಿಸುವುದು ಸಮಾಜದ ಕರ್ತವ್ಯ: ರಾಘವೇಶ್ವರ ಭಾರತೀ ಸ್ವಾಮೀಜಿ

Chaturmasya 2022 | ಗೋಕರ್ಣದ ಅಶೋಕೆಯಲ್ಲಿ ಶ್ರೀ ರಾಘವೇಶ್ವರಭಾರತೀ ಸ್ಮಾಮೀಜಿಯವರು ಚಾತುರ್ಮಾಸ್ಯ ವೃತ ಕೈಗೊಂಡಿದ್ದಾರೆ. ಭಾನುವಾರ ನಡೆದ ಮಾತೃಸಮಾವೇಶ ಕಾರ್ಯಕ್ರಮದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗೋಕರ್ಣ: ಮಾತೃತ್ವವನ್ನು ಗೌರವಿಸುವುದು ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು. ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ (Chaturmasya) ಅಂಗವಾಗಿ ಭಾನುವಾರ (ಜುಲೈ 31) ನಡೆದ ಮಾತೃ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.

Chaturmasya
ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ

ಜಗತ್ತಿನಲ್ಲಿ ಪುರುಷ ಏನು ಬೇಕಾದರೂ ಆಗಬಹುದು, ಆದರೆ ಮಾತೆ ಮಾತ್ರ ಆಗಲಾರ. ಆದ್ಧರಿಂದ ಪುರುಷ ಸಾಧಿಸುವ ಯಾವುದೇ ಯಶಸ್ಸಿನ ಕೀರ್ತಿಯು ಆತನನ್ನು ಹೊತ್ತು ಹೆತ್ತು ಸಲಹಿದ ಮಾತೆಗೆ ಸಲ್ಲಬೇಕು. ಆದರೆ ಮಾತೃಶಕ್ತಿಯ ಸ್ವರೂಪ ಅಡಿಗಲ್ಲಿನಂತೆ. ರಾಮನಷ್ಟು ಕೌಸಲ್ಯೆ, ಕೃಷ್ಣನಷ್ಟು ಯಶೋಧೆ ಮುನ್ನಲೆಗೆ ಬಂದಿಲ್ಲ. ಮಹಿಳೆ ಎಂದರೆ ಜನನದಿಂದಲೇ ದೇವಿಯ ಸ್ವರೂಪವನ್ನು ಹೊಂದಿರುವ ಶಕ್ತಿ. ಹೆಣ್ಣನ್ನು ನೋಯಿಸುವುದೆಂದರೆ ಅದು ಅತ್ಯಂತ ಪಾಪದ ಕಾರ್ಯ. ಆ ಹಕ್ಕು ಯಾರಿಗೂ ಇಲ್ಲ. ಆಕೆ ಕಣ್ಣೀರು ಇಟ್ಟರೆ ಅದು ಶಾಪ. ಮಹಿಳೆ ಸಂತೋಷವಾಗಿದ್ದರೆ ಮಾತ್ರ ಶ್ರೇಯಸ್ಸು.

ತಾಯಿಯ ಋಣ ತೀರಿಸಲು ಅಸಾಧ್ಯ. ಅದು ಅಗೋಚರವಾಗಿರುತ್ತದೆ. ತಾಯಿಯಾದವಳು ಎಲೆಮರೆಯ ಕಾಯಿಯಾಗಿಯೇ ಉಳಿದುಬಿಡುತ್ತಾಳೆ. ಆದಿಶಂಕರರು ಮಾತೆಯರಿಗೆ ನೀಡಿದ ಮಹತ್ವವನ್ನು ಮಾತೃಪಂಚಕದಲ್ಲಿ ಬಣ್ಣಿಸಿದ್ದಾರೆ. ತಾಯಿಯ ಹಾರೈಕೆಯ ಫಲವಾಗಿ ಮನುಷ್ಯ ಎತ್ತರಕ್ಕೆ ಬೆಳೆಯುತ್ತಾನೆ. ಆದರೆ, ಅದಕ್ಕೆ ಪ್ರತಿಯಾಗಿ ಒಣಗಿದ ಅಕ್ಕಿಕಾಳು ಹಾಕುವ ಸ್ಥಿತಿ ನನ್ನದು ಎಂದು ಶಂಕರರು ವೇದನೆಯಿಂದ ಹೇಳಿದರು ಎಂದು ಸ್ವಾಮೀಜಿ ತಿಳಿಸಿದರು.

ಸ್ತ್ರೀಯರಿಗೆ ಬಾಹುಬಲ ಇಲ್ಲದಿದ್ದರೂ ಭಾವ ಬಲ ಇದೆ. ಸ್ತ್ರೀಯರಿಗೆ ಕೋಮಲತ್ವ ಇದೆ. ಅದಕ್ಕೆ ಎಂದಿಗೂ ಧಕ್ಕೆ ಬರಬಾರದು. ಯಾವುದೇ ವಯೋಮಾನದ ಮಹಿಳೆಯರನ್ನು ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ. ಯಾವ ಮಕ್ಕಳೂ ಮಾತೆಯ ಬಗ್ಗೆ ಅವಜ್ಞೆ ಮಾಡಬಾರದು. ಮಾತೆಯರಿಗೆ ಕ್ಲೇಶ ಕೊಡಬಾರದು ಎಂದು ಹೇಳಿದರು.

ಮಾತೆಯರು ಮಠದ ಶಕ್ತಿ. ಮಠದ ಪ್ರಾಣ ಇರುವುದೂ ಈ ಶಕ್ತಿಯಲ್ಲೆ. ವ್ಯಾಸಪೂಜೆಯ ದಿನ ಇದ್ದ ಜನಸ್ತೋಮಕ್ಕಿಂತ ಹೆಚ್ಚಿನ ಮಾತೃಸ್ತೋಮ ಇಂದು ಸೇರಿದೆ. ಶ್ರೀಮಠದ ಮಾತೃಶಕ್ತಿ ಬೆಳೆದಿರುವುದರ ಸಂಕೇತ ಇದು. ತಾಯಂದಿರು ಮಠಕ್ಕೆ ಕೊಟ್ಟ ಸ್ಪಂದನ ಅಂಥದ್ದು ಎಂದು ಬಣ್ಣಿಸಿದರು. ಮಠದಲ್ಲಿ ಪುರುಷರು ಮಾಡಬೇಕಾದ ಕಾರ್ಯವನ್ನು ಮಾತೆಯರು ಮಾಡುತ್ತಿದ್ದಾರೆ. ಶ್ರೀಮಠವು ಯಾವುದೇ ಯೋಜನೆಯನ್ನು ನೀಡಿದರೂ, ಮಾತೆಯರು ಅದನ್ನು ಈವರೆಗೆ ಯಶಸ್ವಿಯಾಗಿ ಮಾಡುತ್ತಾ ಬಂದಿದ್ದಾರೆ. ಮಠದ ಮಾತೆಯರೆಂಬ ಪುಣ್ಯಭೂಮಿಯಲ್ಲಿ ಯಾವ ಸತ್ಕಾರ್ಯಗಳ ಬೀಜ ಬಿತ್ತಿದರೂ ಚಿನ್ನ ಬೆಳೆಯುತ್ತದೆ ಎಂದು ಹೇಳಿದರು.

ಮಾತೃ ಸಮಾವೇಶ ಅಂಗವಾಗಿ ಛಾತ್ರಭಿಕ್ಷೆ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಇಲ್ಲಿ ಕಲಿಯುವ ವಟುಗಳಿಗೆ ಮಾತೆಯರು ಭಿಕ್ಷಾಸೇವೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ದೇವಿಕಾ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | Chaturmas 2022 | ಯಾವ ಯತಿವರ್ಯರ ಚಾತುರ್ಮಾಸ್ಯ ವ್ರತಾಚರಣೆ ಎಲ್ಲಿ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ರಾಜಮಾರ್ಗ ಅಂಕಣ: ಇಂದು ಶ್ರೀರಾಮ ನವಮಿ. ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

VISTARANEWS.COM


on

sri rama rajamarga column
Koo

ಈ ಕತೆಯನ್ನು ಓದಿದ ನಂತರ ನೀವು ಯಾರನ್ನೂ ದ್ವೇಷ ಮಾಡುವುದಿಲ್ಲ!

Rajendra-Bhat-Raja-Marga-Main-logo

ಇಂದು ರಾಮನವಮಿ (Sri Ram Navami). ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರವೂ ಹೌದು! ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ!

ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ ಅನ್ನುವುದು ವಾಸ್ತವ. ಅದರಲ್ಲಿಯೂ ಮೊದಲನೆಯದ್ದು ಭಾರೀ ಕಷ್ಟ.

ವಾಲ್ಮೀಕಿಯು ಕೆತ್ತಿದ್ದು ಅದ್ಭುತವಾದ ವ್ಯಕ್ತಿತ್ವ ರಾಮ

ಶ್ರೀರಾಮನ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಗಂಟೆಗಳ ಕಾಲ ಮಾತಾಡಿದ್ದೇನೆ. ಅವನ ಜೀವನದ ಪ್ರತೀ ಒಂದು ಘಟನೆ ಕೂಡ ನನಗೆ ಬೆರಗನ್ನೇ ಮೂಡಿಸುತ್ತದೆ. ಆದಿ ಕವಿ ವಾಲ್ಮೀಕಿಯು ರಾಮಾಯಣದ ಮೂಲಕ ಕೆತ್ತಿದ ರಾಮನ ಪಾತ್ರವು ಅದು ವಿಶ್ವದ ಅದ್ಭುತ!

ನನಗೆ ಅಚ್ಚರಿ ಮೂಡಿಸಿದ ಒಂದೆರಡು ಘಟನೆಗಳು

ಶ್ರೀ ರಾಮನಿಗೆ ಪಟ್ಟಾಭಿಷೇಕಕ್ಕೆ ಸಂಕಲ್ಪವನ್ನು ದಶರಥನು ತೆಗೆದುಕೊಂಡಾಗಿತ್ತು. ಅದಕ್ಕಾಗಿ ತೀವ್ರ ಹಂಬಲ ಪಟ್ಟವರು ಅಯೋಧ್ಯೆಯ ಪ್ರತೀ ಒಬ್ಬ ನಾಗರಿಕರು. ರಾಮನು ಅರಸ ಆಗಬಾರದು ಅಂತ ಒಬ್ಬರೂ ಹೇಳಿರಲಿಲ್ಲ. ಪಟ್ಟಾಭಿಷೇಕಕ್ಕೆ ದಿನವನ್ನು ನಿಗದಿ ಮಾಡಿದ ದಶರಥ ಮಹಾರಾಜನು ಇಡೀ ಅಯೋಧ್ಯಾ ನಗರವನ್ನು ಸಿಂಗಾರ ಮಾಡಿ ಪಟ್ಟಕ್ಕೆ ಸಿದ್ಧತೆ ಮಾಡಿದ್ದನು.

ಆದರೆ ಮಂಥರೆ ಎಂಬ ಅತೃಪ್ತ ಆತ್ಮವು ಕೈಕೇಯಿ ರಾಣಿಯ ತಲೆಯನ್ನು ಕೆಡಿಸಿ ರಾಮನ ಪಟ್ಟಾಭಿಷೇಕಕ್ಕೆ ವಿಘ್ನವನ್ನು ಒಡ್ಡಿದ್ದು ನಮಗೆಲ್ಲ ಗೊತ್ತಿದೆ. ಹಿಂದೆ ಯಾವುದೋ ಒಂದು ಕಾಲದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಕೈಕೇಯಿಯು ಆ ಮಧ್ಯರಾತ್ರಿ ದಶರಥ ಮಹಾರಾಜನಿಗೆ ಕೇಳಿದಾಗ ರಾಜನು ಅದನ್ನು ನೆರವೇರಿಸಲು ಸಾಧ್ಯವೇ ಆಗದೇ ಕುಸಿದು ಬಿದ್ದ ಕಥೆಯು ಕೂಡ ನಮಗೆ ಗೊತ್ತಿದೆ.

ಪಿತೃ ವಾಕ್ಯಂ ಶಿರೋಧಾರ್ಯಂ!

ಆಗ ಶ್ರೀ ರಾಮನು ಕಟ್ಟು ಬಿದ್ದದ್ದು ಯಾವುದೋ ಒಂದು ಗಳಿಗೆಯಲ್ಲಿ ತನ್ನ ಅಪ್ಪ ತನ್ನ ಚಿಕ್ಕಮ್ಮನಿಗೆ ಕೊಟ್ಟಿದ್ದ ಒಂದು ಮಾತಿಗೆ! ಅದನ್ನು ತಂದೆಯು ನೇರವಾಗಿ ಹೇಳಲು ಸಾಧ್ಯ ಆಗದೆ ಕಣ್ಣೀರನ್ನು ಸುರಿಸುತ್ತ ನೆಲಕ್ಕೆ ಒರಗಿದಾಗಲೂ ರಾಮನಿಗೆ ಅದು ಖಂಡಿತವಾಗಿಯೂ ‘ಪಿತೃ ವಾಕ್ಯಮ್ ಶಿರೋಧಾರ್ಯಮ್’!

king dasharatha

ರಾಮನು ಅರಸ ಆಗಬಾರದು ಎಂದು ರಾಣಿ ಕೈಕೇಯಿಯ ಮನಸ್ಸಿನಲ್ಲಿ ಕೂಡ ಇರಲಿಲ್ಲ. ಆದರೆ ಆಕೆಯಲ್ಲಿ ಆ ಭ್ರಮೆ ಮತ್ತು ಪುತ್ರ ವಾತ್ಸಲ್ಯವನ್ನು ಹುಟ್ಟಿಸಿದವಳು ಆ ಗೂನಜ್ಜಿ ಮಂಥರೆ!

ಅವಳು ಹೇಗೂ ಅಯೋಧ್ಯೆಯ ಪ್ರಜೆ ಆಗಿರಲಿಲ್ಲ. ಅವಳು ಕೈಕೇಯಿಯ ತಾಯಿಯ ಮನೆಯಿಂದ ಕೈಕೇಯಿ ಜೊತೆಗೆ ಬಂದವಳು. ಒಂದು ರೀತಿಯಲ್ಲಿ ಶ್ರೀರಾಮನು ಪಟ್ಟವೇರಿ ಅರಸನಾಗಲು ಆ ಅಯೋಧ್ಯೆಯಲ್ಲಿ ನೂರು ಪ್ರತಿಶತದ ಬಹುಮತದ ಮುದ್ರೆ ಇತ್ತು! ಆದರೆ ರಾಮನು ತಂದೆ ಬಹಳ ಹಿಂದೆ ತನ್ನ ರಾಣಿಗೆ ಕೊಟ್ಟ ಒಂದು ಮಾತಿಗೆ ಕಟ್ಟು ಬಿದ್ದು ಅರಸೊತ್ತಿಗೆಯನ್ನು ಎಡಗಾಲಿನಿಂದ ಒದ್ದು ನಾರು ಮುಡಿ ತೊಟ್ಟು ಕಾಡಿಗೆ ಹೋದವನು. ತನ್ನದೇ ಹಕ್ಕಿನ ರಾಜ್ಯವನ್ನು ತ್ಯಾಗ ಮಾಡಲು ಆತ ಹಿಂದೆ ಮುಂದೆ ನೋಡಲಿಲ್ಲ!

‘ನೀನು ಕೊಟ್ಟ ಮಾತಿಗೆ ನಾನು ಹೇಗೆ ಹೊಣೆ ಆಗಬೇಕು?’ ಎಂದು ಅಪ್ಪನನ್ನು ಒಂದು ಮಾತು ಕೂಡ ಶ್ರೀ ರಾಮನು ಕೇಳಲಿಲ್ಲ! ಆ ರೀತಿಯ ಸಣ್ಣ ಯೋಚನೆ ಕೂಡ ಆತನ ಮನದಲ್ಲಿ ಬರಲಿಲ್ಲ ಅಂದರೆ ಅದು ಅದ್ಭುತವೇ ಹೌದು! ಸರ್ವಾಲಂಕಾರ ಆಗಿದ್ದ ಅಯೋಧ್ಯೆಯ ನಡುವೆ ಯಾವ ವಿಷಾದ ಕೂಡ ಇಲ್ಲದೆ ಎದ್ದು ಹೋಗುವುದು ಸುಲಭ ಅಲ್ಲ! ಅದು ರಾಮನಿಗೆ ಮಾತ್ರ ಸಾಧ್ಯವಾಗುವ ನಡೆ.

ರಾಮನಿಗೆ ನೂರು ಪ್ರತಿಶತ ಜನಮತದ ಬೆಂಬಲ ಇತ್ತು!

ಆಗ ಪೂರ್ಣ ಜನಮತ ತನ್ನ ಪರವಾಗಿ ಇದ್ದಾಗ ರಾಮನು ಪಿತೃ ವಾಕ್ಯವನ್ನು ಧಿಕ್ಕರಿಸಿ ಆಡಳಿತವನ್ನು ಮಾಡಬಹುದಿತ್ತು ಎಂದು ನನಗೆ ಹಲವರು ಕೇಳಿದ್ದಾರೆ. ಆದರೆ ಆಗ ರಾಮನು ಕೇವಲ ದಶರಥನ ಮಗ ಮಾತ್ರ ಆಗಿದ್ದ. ಅರಸ ಆಗಿರಲಿಲ್ಲ ಅನ್ನುವುದು ನನ್ನ ಉತ್ತರ!

ಮುಂದೆ ರಾಣಿ ಕೈಕೇಯಿ ಕಾಡಿಗೆ ಬಂದು ತಮ್ಮ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ಅಯೋಧ್ಯೆಗೆ ಬರಬೇಕು ಎಂದು ಎಷ್ಟು ವಿನಂತಿ ಮಾಡಿದರೂ ರಾಮಚಂದ್ರನ ಮನಸ್ಸು ಒಂದಿಷ್ಟೂ ವಿಚಲಿತ ಆಗಲಿಲ್ಲ. ಕಣ್ಣೀರು ಸುರಿಸುತ್ತಾ ಬಂದ ಭರತನನ್ನು ಧೈರ್ಯ ತುಂಬಿಸಿ ಅರಸನಾಗಲು ಮಾನಸಿಕವಾಗಿ ಸಿದ್ಧತೆ ಮಾಡಿ ಕಳುಹಿಸಿದ್ದು ಅದೇ ರಾಮ. ಈ ರೀತಿಯ ನಿರ್ಧಾರಗಳು ರಾಮನ ವ್ಯಕ್ತಿತ್ವದ ಕೈಗನ್ನಡಿ.

Sri Ramachandra

ಮುಂದೆ ಅದೇ ರಾಮನು ರಾವಣನ ವಧೆಯಾದ ನಂತರ ಅತ್ಯಂತ ವಿಧಿವತ್ತಾಗಿ ಲಂಕೆಯಲ್ಲಿ ಆತನ ಕ್ರಿಯಾಕರ್ಮ ಮುಗಿಸುತ್ತಾನೆ. ಆಗ ರಾಮ ಹೇಳಿದ ಎರಡು ಮಾತುಗಳನ್ನು ಕೇಳಿ.

ರಾಮನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ!

‘ನಾನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ. ಅವನ ಒಳಗಿದ್ದ ರಾವಣತ್ವವನ್ನು! ಯಾರನ್ನೇ ಆದರೂ ಮರಣದ ನಂತರ ದ್ವೇಷ ಮಾಡಬಾರದು. ರಾವಣನು ಹೇಳಿ ಕೇಳಿ ಮಹಾ ಬ್ರಾಹ್ಮಣ. ಆತನು ದೈವಭಕ್ತ. ಆದ್ದರಿಂದ ಅವನನ್ನು ಗೌರವಿಸುವುದು ನಮ್ಮ ಕರ್ತವ್ಯ!’

ಸೀತೆಯನ್ನು ಅಗ್ನಿಪರೀಕ್ಷೆ ಮಾಡಿದ್ದು ಸರಿಯಾ?

ಮುಂದೆ ಅದೇ ರಾಮಚಂದ್ರನು ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಆಗುವ ಮೊದಲು ತನ್ನ ಪತ್ನಿ ಸೀತೆಯನ್ನು ಅಯೋಧ್ಯೆಯ ಜನರ ಮುಂದೆ ಅಗ್ನಿ ಪರೀಕ್ಷೆಗೆ ಒಡ್ಡಿದ ವಿಷಯದ ಬಗ್ಗೆ ತುಂಬಾ ಟೀಕೆಗಳು ಇವೆ. ಅದೇ ರೀತಿ ಒಬ್ಬ ಸಾಮಾನ್ಯ ಅಗಸನ ಮಾತನ್ನು ಕೇಳಿ ತನ್ನ ಕೈ ಹಿಡಿದ ಮಡದಿ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿದ ನಿರ್ಧಾರದ ಬಗ್ಗೆ ಕೂಡ ಸಾಕಷ್ಟು ಟೀಕೆಗಳು ಬಂದಿವೆ.

ಆದರೆ ಅವೆರಡು ಕೂಡ ಶ್ರೀರಾಮನು ರಾಜಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು. ಅವು ಸೀತಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು ಅಲ್ಲ!

ರಾಜನ ನಡೆಗಳು ಸಂಶಯಾಸ್ಪದ ಆಗಿರಬಾರದು!

ರಾಜಾರಾಮನಾಗಿ ತನ್ನ ಪ್ರತಿಯೊಬ್ಬ ಪ್ರಜೆಯ ಮುಂದೆ ಸಂಶಯಾತೀತವಾಗಿ ಇರಬೇಕು ಮತ್ತು ಕಾಣಿಸಿಕೊಳ್ಳಬೇಕು ಎನ್ನುವುದು ರಾಜನ ಆದ್ಯ ಕರ್ತವ್ಯ. ತಾನು ನೆಟ್ಟಗಿರುವುದು ಮಾತ್ರವಲ್ಲ, ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಭಾವಿಸುವುದು ಒಬ್ಬ ರಾಜನ ಆದ್ಯತೆಯೇ ಆಗಿದೆ. ಒಬ್ಬ ಬಹು ಸಾಮಾನ್ಯ ಅಗಸನೂ ಅರಸನಿಗೆ ಒಬ್ಬ ಗೌರವಾನ್ವಿತ ಪ್ರಜೆಯೇ ಆಗಿದ್ದಾನೆ. ಆತನ ಮನದ ಸಂಶಯವನ್ನು ಕೂಡ ನಿವಾರಣೆ ಮಾಡುವುದು ಒಬ್ಬ ಅರಸನ ಕರ್ತವ್ಯ. ಹೀಗೆ ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

ರಾವಣ ಆಗುವುದು ಕಷ್ಟವೇ!

ರಾಮ ಆಗುವುದು ಎಷ್ಟು ಕಷ್ಟವೋ ರಾವಣ ಆಗುವುದು ಅಷ್ಟೇ ಕಷ್ಟ! ಕವಿ ವಾಲ್ಮೀಕಿಯು ಕಥಾ ನಾಯಕ ರಾಮನ ಪಾತ್ರಕ್ಕೆ ಎಷ್ಟು ಶಕ್ತಿ ತುಂಬಿದ್ದಾನೋ ಖಳನಾದ ರಾವಣನ ಪಾತ್ರಕ್ಕೆ ಕೂಡ ಅಷ್ಟೇ ಶಕ್ತಿಯನ್ನು ತುಂಬಿದ್ದಾನೆ. ಆತನ ಪಾತ್ರವೂ ಅಮೋಘವೆ ಆಗಿದೆ!

ಸೀತಾ ಸ್ವಯಂವರದಲ್ಲಿ ತನಗಾದ ಅಪಮಾನದಿಂದ ಕುದ್ದು ಹೋಗಿದ್ದ ರಾವಣನ ಅಂತರ್ಯದಲ್ಲಿ ಸೀತೆಯನ್ನು ಒಮ್ಮೆ ಗೆಲ್ಲಬೇಕು ಎಂದು ಮಾತ್ರ ಇತ್ತು. ಅನುಭವಿಸುವುದು ಆಗಿರಲಿಲ್ಲ. ಅನುಭವಿಸುವ ಆಸೆ ಇದ್ದಿದ್ದರೆ ಅವನದ್ದೇ ಲಂಕೆಯಲ್ಲಿ ಏಕಾಂಗಿ ಆಗಿದ್ದ ಸೀತೆಯು ತನ್ನ ಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ!

ಹೀಗೊಂದು ಕಥೆಯನ್ನು ನಾನು ಓದಿದ್ದು!

ಈ ಕಥೆಯು ಮೂಲ ರಾಮಾಯಣದಲ್ಲಿ ಇಲ್ಲ. ಆದರೆ ಅದ್ಭುತವಾಗಿದೆ. ಕಾಲ್ಪನಿಕ ಎಂದು ಬೇಕಾದರೂ ಕರೆಯಿರಿ. ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದಿದ್ದ ಶ್ರೀರಾಮನಿಗೆ ರಾವಣನ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಆಲ್ಲಿ ಕೇಳಿಬರುತ್ತವೆ. ಆತನು ಮಹಾ ಯೋಧ. ಆತನನ್ನು ಸೋಲಿಸುವುದು ಖಂಡಿತ ಸುಲಭದ ಕೆಲಸ ಅಲ್ಲ ಎಂದು ಗೊತ್ತಾಗುತ್ತದೆ. ಅದಕ್ಕೆ ‘ಶತ್ರು ಸಂಹಾರ’ದ ಯಾಗವನ್ನು ಮಾಡಬೇಕು ಎಂದು ಅಲ್ಲಿದ್ದ ಹಿರಿಯರು ಹೇಳುತ್ತಾರೆ.

ಲಂಕೆ ಹೇಳಿ ಕೇಳಿ ರಾಕ್ಷಸರ ನಾಡು! ಅಲ್ಲಿ ಆ ಯಾಗವನ್ನು ಮಾಡಬೇಕು ಅಂತಾದರೆ ಪುರೋಹಿತರು ಯಾರು ಸಿಗುತ್ತಾರೆ? ಆಗ ಹಿರಿಯರು ಇನ್ನೊಂದು ಉಪಾಯವನ್ನು ಹೇಳುತ್ತಾರೆ. ಲಂಕೆಯಲ್ಲಿ ಒಬ್ಬನೇ ಬ್ರಾಹ್ಮಣ ಇರುವುದು ಅದು ರಾವಣ! ಆತನಿಗೆ ಎಲ್ಲಾ ವೇದ ವಿದ್ಯೆಗಳು ಗೊತ್ತಿವೆ. ಆತ ಪುರೋಹಿತನಾಗಿ ಬರಲು ಒಪ್ಪಿದರೆ ಆದೀತು ಎಂಬ ಅಭಿಪ್ರಾಯ ಬಂತು.

ತನ್ನದೇ ವಧೆಯನ್ನು ಮಾಡುವ ‘ಶತ್ರುಸಂಹಾರ ಯಾಗ’ಕ್ಕೆ ಪುರೋಹಿತನಾಗಿ ರಾವಣನು ಬರಬಹುದೇ? ಈ ಪ್ರಶ್ನೆಯು ಎದ್ದಾಗ ನೋಡೋಣ, ಒಮ್ಮೆ ಪ್ರಯತ್ನ ಮಾಡೋಣ ಎಂಬ ಮಾತು ಬಂತು. ಆಗ ರಾವಣನಿಗೆ ಶ್ರೀರಾಮನ ಕಡೆಯಿಂದ ಗೌರವಪೂರ್ವಕ ಆಮಂತ್ರಣವು ಹೋಯಿತು. ರಾವಣ ಬರಲು ಸಾಧ್ಯ ಇಲ್ಲವೇ ಇಲ್ಲ ಎಂದು ಎಲ್ಲರೂ ನಂಬಿದ್ದರು.

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆದರೆ ಶ್ರೀರಾಮನ ಆಮಂತ್ರಣಕ್ಕೆ ತಲೆ ಬಾಗಿ ರಾವಣನು ಬಂದೇ ಬಿಟ್ಟ! ಪುರೋಹಿತನಾಗಿ ಕೂತು ‘ಶತ್ರು ಸಂಹಾರ’ ಯಾಗವನ್ನು ಪೂರ್ತಿ ಮಾಡಿದ. ಪೂರ್ಣಾಹುತಿ ಆದ ನಂತರ ಶ್ರೀರಾಮನು ಪುರೋಹಿತ ರಾವಣನ ಪಾದ ಮುಟ್ಟಿ ನಮಸ್ಕಾರ ಮಾಡಿದ!

ಆಗ ರಾವಣ ರಾಮನಿಗೆ ಕೈ ಮುಗಿದು ಹೇಳಿದ ಮಾತು ಕೇಳಿ.

“ಶ್ರೀರಾಮ, ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ನಂತರ ಪಾಪ ಪ್ರಜ್ಞೆಯಿಂದ ಸರಿಯಾಗಿ ನಿದ್ದೆಯು ಬರುತ್ತಿಲ್ಲ. ನಿದ್ದೆ, ವಿಶ್ರಾಂತಿ ಇಲ್ಲದೆ ದಣಿದು ಬಿಟ್ಟಿದ್ದೇನೆ. ನಿನ್ನ ಕಾಲ ಮೇಲೆ ಒಂದು ಗಳಿಗೆ ಮಲಗಬೇಕು ಅನ್ನಿಸ್ತಾ ಇದೆ! ನಿನ್ನ ಅನುಮತಿಯನ್ನು ಕೊಡುವೆಯಾ?’

ತನ್ನ ಗೆಲುವಿಗೆ ಬೇಕಾಗಿ ದೊಡ್ಡ ಯಾಗವನ್ನೇ ಮಾಡಿಕೊಟ್ಟ ರಾವಣನ ವಿನಂತಿಯನ್ನು ಶ್ರೀರಾಮನು ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಶ್ರೀರಾಮ ಅಸ್ತು ಅಂದ. ರಾವಣನು ಪುಟ್ಟ ಮಗುವಿನ ಹಾಗೆ ರಾಮನ ಕಾಲಿನ ಮೇಲೆ ಸುದೀರ್ಘ ಕಾಲ ಮೈಮರೆತು ಮಲಗಿದ. ಎಲ್ಲವನ್ನೂ ಮರೆತು ಬಿಟ್ಟನು! ತನ್ನ ಪಾಪದ ಭೀತಿಯನ್ನು ರಾಮನ ಪಾದಮೂಲದಲ್ಲಿ ಇಟ್ಟು ಎದೆಯ ಭಾರವನ್ನು ಇಳಿಸಿ ಹೊರಟು ಹೋದನು ರಾವಣ!

ಈಗ ಹೇಳಿ ರಾವಣ ಆಗುವುದು ಅಷ್ಟು ಸುಲಭವಾ?

ಇದನ್ನೂ ಓದಿ: Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Continue Reading

ಭವಿಷ್ಯ/ಧಾರ್ಮಿಕ

Baba Vanga: 2024 ವರ್ಷವಿಡೀ ಭಯಾನಕ! ಬಾಬಾ ವಂಗಾ ಭವಿಷ್ಯ

Baba Vanga: ಹಲವು ವರ್ಷಗಳ ಹಿಂದೆ ಬಲ್ಗೇರಿಯಾದ ಅಂಧ ಮಹಿಳೆ ನುಡಿದಿರುವ ಭವಿಷ್ಯವಾಣಿಗಳು ನಿಜವಾಗುತ್ತಿರುವುದರಿಂದ 2024ರ ಕುರಿತು ಅವರು ಏನು ಹೇಳಿರಬಹುದು ಎನ್ನುವ ಕುತೂಹಲ ಸಾಕಷ್ಟು ಮಂದಿಗೆ ಇದೆ. ಇದಕ್ಕೆ ಉತ್ತರ ಇಲ್ಲಿದೆ.

VISTARANEWS.COM


on

By

Baba vanga
Koo

ದೆಹಲಿ: ಬಾಬಾ ವಂಗಾ (Baba Vanga) ಅವರ ಭವಿಷ್ಯವಾಣಿಯನ್ನು ಸಾಕಷ್ಟು ಮಂದಿ ನಂಬುತ್ತಾರೆ. ಇದಕ್ಕೆ ಮುಖ್ಯ ಕಾರಣ ಬಲ್ಗೇರಿಯಾದ (Bulgaria) ಈ ಅಂಧ ಮಹಿಳೆಯು ಹಲವು ವರ್ಷಗಳ ಹಿಂದೆಯೇ ನುಡಿಡಿರುವ ಬಹುತೇಕ ಭವಿಷ್ಯವಾಣಿಗಳು ನಿಜವಾಗಿವೆ. ಹೀಗಾಗಿ ಬಾಬಾ ವಂಗಾ ಅವರು ನುಡಿದಿರುವ ಭವಿಷ್ಯದ ಬಗ್ಗೆ ಕೇಳಲು ಬಹುತೇಕ ಮಂದಿ ಕುತೂಹಲದಿಂದ ಕಾಯುತ್ತಿರುತ್ತಾರೆ.

ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಎಂಬ ಹೆಸರಿನ ಬಲ್ಗೇರಿಯನ್ ಮಹಿಳೆ ಬಾಬಾ ವಂಗಾ ತಮ್ಮ ಜೀವಿತಾವಧಿಯಲ್ಲಿ ಹಲವಾರು ಭವಿಷ್ಯವಾಣಿಗಳನ್ನು ಮಾಡಿದ್ದಾರೆ. ಎರಡು ದಶಕಗಳ ಹಿಂದೆಯೇ ಅವರು ನಿಧನರಾಗಿರುವ ಅವರ ಭವಿಷ್ಯವಾಣಿಗಳ ಬಗ್ಗೆ ಜನರು ನಿರಂತರ ಚರ್ಚೆ ಮಾಡುತ್ತಿರುತ್ತಾರೆ.

ಬಾಬಾ ವಂಗಾ ಅವರು ಈ ಹಿಂದೆ ಅಮೆರಿಕದ (america) ಮೇಲೆ ಉಗ್ರರ ದಾಳಿ, ಬರಾಕ್‌ ಒಬಾಮಾ (Barack Obama) ಅಮೆರಿಕ ಅಧ್ಯಕ್ಷರಾಗುವುದು, ಬ್ರೆಕ್ಸಿಟ್‌ (Brexit), ಡಯಾನಾ (Diana) ಸಾವಿನ ಕುರಿತು ನುಡಿದಿರುವ ಹಲವು ಭವಿಷ್ಯಗಳು ನಿಜವಾಗಿವೆ. ಇದೀಗ 2024ರ ಕುರಿತು ಅವರು ನುಡಿದಿರುವ ಭವಿಷ್ಯವಾಣಿ ಇಂತಿದೆ.

ಇದನ್ನೂ ಓದಿ: RBI News: ಆರ್‌ಬಿಐ ಯುಪಿಐ ಮೂಲಕ ಇನ್ನು ನಗದು ಠೇವಣಿ ಸೌಲಭ್ಯ; ಎಟಿಎಂ ಕಾರ್ಡ್‌ ಅಗತ್ಯವಿಲ್ಲ

ಹವಾಮಾನ ಬದಲಾವಣೆಗಳು


ಜಗತ್ತಿನಲ್ಲಿ 2024ರಲ್ಲಿ ತೀವ್ರ ಹವಾಮಾನ ಬದಲಾವಣೆಗಳು ಸಂಭವಿಸುತ್ತದೆ. ನೈಸರ್ಗಿಕ ವಿಕೋಪಗಳನ್ನು ಹೆಚ್ಚಾಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ಕುರಿತು ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಈ ಬಾರಿ ಜಾಗತಿಕ ಶಾಖದ ಅಲೆಗಳು ಶೇ. 67ರಷ್ಟು ಹೆಚ್ಚಾಗಿ ಸಂಭವಿಸುತ್ತಿವೆ ಮತ್ತು ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ವಿಶ್ವ ಹವಾಮಾನ ಸಂಸ್ಥೆಯು ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುವ ಸಂಗತಿಗಳನ್ನು ಗುರುತಿಸಿದ್ದು,ಈಗಾಗಲೇ ಮುನ್ಸೂಚನೆಯನ್ನೂ ನೀಡಿದ್ದಾರೆ.

ಸೈಬರ್ ದಾಳಿ

ಬಾಬಾ ವಂಗಾ ಸಾವನ್ನಪ್ಪಿದ್ದಾಗ ಇನ್ನೂ ಅಂತರ್ಜಾಲ ವ್ಯವಸ್ಥೆಯೇ ಸರಿಯಾಗಿ ಬೆಳೆದಿರಲಿಲ್ಲ. ಆದರೆ ಆಕೆ ಸಾವಿನ ಸಮಯದಲ್ಲಿ 2024 ರಲ್ಲಿ ಸೈಬರ್ ದಾಳಿಗಳು ಹೆಚ್ಚಾಗುವ ಮುನ್ಸೂಚನೆ ನೀಡಿದ್ದರು. ವಿಶೇಷವಾಗಿ ಪವರ್ ಗ್ರಿಡ್‌ ಮತ್ತು ನೀರಿನ ಸಂಸ್ಕರಣಾ ಯೋಜನೆಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಸೈಬರ್ ದಾಳಿಯಾಗುವ ಅಪಾಯವಿದೆ ಎಂದು ಅವರು ಹೇಳಿದ್ದರು.

ಆರ್ಥಿಕ ಬಿಕ್ಕಟ್ಟು

2024ರ ವರ್ಷವು ಜಾಗತಿಕವಾಗಿ ಆರ್ಥಿಕ ಬದಲಾವಣೆಯನ್ನು ಕಾಣುತ್ತದೆ. ಇದು ರಾಜಕೀಯ ಉದ್ವಿಗ್ನತೆಗೆ ಕಾರಣವಾಗಬಹುದು. ಸಾಲದ ಪ್ರಮಾಣ ಹೆಚ್ಚಾಗಬಹುದು. ಯುಎಸ್ ನಲ್ಲಿ ಹಣದುಬ್ಬರ, ಜಪಾನ್ ನಲ್ಲಿ ಆರ್ಥಿಕ ಕುಸಿತ, ಯುಕೆಯಲ್ಲಿ ಹೆಚ್ಚಿನ ಬಡ್ಡಿದರಗಳು ಮತ್ತು ಕಡಿಮೆ ಉತ್ಪಾದಕತೆ, ಚೀನಾ ದೇಶಕ್ಕೂ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂದು ಅವರು ಹೇಳಿದ್ದಾರೆ.

ರೋಗಗಳಿಗೆ ಚಿಕಿತ್ಸೆ

ಆಲ್ ಜ್ಹಮರ್ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಔಷಧ ಲಭ್ಯವಾಗುವುದಾಗಿ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚೆಗೆ ರಷ್ಯಾದಲ್ಲಿ ನಡೆಯುತ್ತಿರುವ ಕ್ಯಾನ್ಸರ್ ಬಗ್ಗೆ ಸಂಶೋಧನೆಯ ಬಗ್ಗೆ ಹೇಳಿಕೆ ನೀಡಿದ್ದು, ಶೀಘ್ರದಲ್ಲೇ ಕ್ಯಾನ್ಸರ್ ಲಸಿಕೆಗಳು ಲಭ್ಯವಾಗುವ ಸಾಧ್ಯತೆಯ ಬಗ್ಗೆ ತಿಳಿಸಿದ್ದರು.

ಯುದ್ಧ

2024ರಲ್ಲಿ ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಯ ಸಾಧ್ಯತೆ ಬಗ್ಗೆ ಸುಳಿವು ನೀಡಿರುವ ಬಾಬಾ ವಂಗಾ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗುವ ಬಗ್ಗೆಯೂ ಸೂಚನೆ ನೀಡಿದ್ದಾರೆ.

Continue Reading

ಅಂಕಣ

ತಾತಯ್ಯ ತತ್ವಾಮೃತಂ: ಯಮನಿಗೆ ಅಂಜದ ಸತ್ಯವ್ರತಿಗಳು

ತಾತಯ್ಯ ತತ್ವಾಮೃತಂ: ಪರಮ ಪತಿವ್ರತೆ, ಅಂತರಂಗದ ಭಕ್ತ, ಸಿದ್ಧಯೋಗಿ ಹಾಗೂ ಭಾಗವತರು ಇವರುಗಳು ಸಾವು-ನೋವುಗಳಿಗೆ ಅಂಜದ ಸತ್ಯವ್ರತಿಗಳು. ಇವರನ್ನು ಮುಟ್ಟಲು ಯಮಧರ್ಮರಾಯನು ಹೆದರುತ್ತಾನೆ ಎನ್ನುತ್ತಾರೆ ತಾತಯ್ಯನವರು.

VISTARANEWS.COM


on

kaivara tatayya column
Koo
jayaram-column

ತಾತಯ್ಯ ತತ್ವಾಮೃತಂ: ಕೈವಾರ ತಾತಯ್ಯನವರು ಈ ಬೋಧನೆಯಲ್ಲಿ ಸಾವಿಗೆ ಅಂಜದ ಸತ್ಯವ್ರತಿಗಳ ಬಗ್ಗೆ ವಿವರಿಸುತ್ತಿದ್ದಾರೆ. ಸತ್ಯವನ್ನು ಅರಿತು ಪಾಲಿಸುವವರು ಸತ್ಯವ್ರತಿಗಳು. ಇಂತಹ ಸತ್ಯವ್ರತಿಗಳನ್ನು ಮುಟ್ಟಲು ಯಮಧರ್ಮರಾಜನು ಹೆದರುತ್ತಾನೆ ಎಂದು ತಾತಯ್ಯನವರು ಹೇಳುತ್ತಿದ್ದಾರೆ. ಇಲ್ಲಿ ಹೇಳಿರುವ ನಾಲ್ಕು ಬಗೆಯ ಸಾಧಕರು ಭಗವಂತನಿಗೆ ಪ್ರಿಯವಾಗುವಂತೆ ತಮ್ಮ ಶಪಥವನ್ನು ತಮ್ಮ ಶರೀರದ ಕೊನೆಯ ಉಸಿರು ಇರುವವರೆಗೆ ಬಿಡದೆ ವ್ರತದಂತೆ ಪಾಲಿಸುತ್ತಾ ಸಾಧಕರೆನಿಸಿಕೊಳ್ಳುತ್ತಾರೆ ಎಂಬುದು ತಾತಯ್ಯನವರ ಅಭಿಪ್ರಾಯವಾಗಿದೆ. ಅಂತಹ ಸಾಧಕರನ್ನು ವಿವರವಾಗಿ ತಿಳಿಯೋಣ..

1) ಪರಮ ಪತಿವ್ರತೆ :

ಪರಮ ಪತಿವ್ರತ – ಪತಿ ನಷ್ಟಮೈನನೂ
ತನ ವ್ರತಮು ವಿಡಚುನಾ ತಪಸಿ ರೀತಿ||

ಪತಿವ್ರತೆ ಎಂದರೆ ಪತಿಸೇವೆಯೆಂಬ ವ್ರತವನ್ನು ಹಿಡಿದವಳೆಂದು ಅರ್ಥ. ಪತಿ ತೀರಿಕೊಂಡರೂ ಆಕೆಯು ಪತಿಚಿಂತನೆ ಎಂಬ ತನ್ನ ವ್ರತವನ್ನು ಬಿಡದೇ ಇರುವವಳನ್ನು ತಾತಯ್ಯನವರು ಪರಮ ಪತಿವ್ರತೆ ಎಂದು ಕರೆದಿದ್ದಾರೆ. ಇಕೆಯು ತಪಸ್ಸಿನಲ್ಲಿರುವ ತಪಸ್ವಿಗೆ ಸಮಾನಳಾದ ತಪಸ್ವಿನಿ. ಇಂತಹವರು ಸಾವಿಗೆ ಅಂಜುವುದಿಲ್ಲ. ಪತಿಸೇವೆಗಿಂತಲೂ ಮಿಗಿಲಾದುದು ಈ ಲೋಕದಲ್ಲಿ ಇಲ್ಲವೆಂದು ಭಾವಿಸಿ, ಗೃಹಕೃತ್ಯದಲ್ಲಿ ದಕ್ಷಳಾಗಿ, ಪ್ರಿಯವಾದಿನಿಯಾಗಿ, ಪತಿಯಲ್ಲೇ ಪ್ರಾಣವಿಟ್ಟುಕೊಂಡಿರುವ ಪತಿವ್ರತೆಯೇ ನಿಜವಾದ ಪತ್ನಿ. ಪತಿಯನ್ನೇ ಗುರು-ದೈವವೆಂದು ಆರಾಧಿಸುವವಳು ಪರಮ ಪತಿವ್ರತೆ. ಇಂತಹ ಪತಿವ್ರತೆಯು ಸದಾಕಾಲ ಪತಿಯ ಚಿಂತನೆಯನ್ನೇ ಮಾಡುತ್ತಾ ಕಾಲ ಕಳೆಯುತ್ತಾಳೆ. ಪತಿ ನಿಧನರಾಗಿದ್ದರೂ ಹೃದಯದಲ್ಲಿ ಅನುಕ್ಷಣವೂ ಪತಿಧ್ಯಾನದಲ್ಲಿ ಇರುವ ಪರಮ ಪತಿವ್ರತೆಯನ್ನು ಯಮಧರ್ಮರಾಯನು ಮುಟ್ಟಲು ಹೆದರುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ವನವಾಸಕ್ಕೆ ಬಂದಿದ್ದ ಸೀತಾಮಾತೆಗೆ ಅನುಸೂಯದೇವಿ ಪತಿವ್ರತೆಯ ಮಹತ್ವವನ್ನು ಬೋಧಿಸುತ್ತಾ “ಪತಿವ್ರತೆಯಾದ ಸಾಧ್ವಿಗೆ ಪತಿಯೇ ದೇವಾಧಿದೇವತೆಗಳಿಗಿಂತ ಹೆಚ್ಚಿನ ಶ್ರೇಷ್ಠ ದೈವ” ಎಂದು ಉಪದೇಶವನ್ನು ಮಾಡುತ್ತಾಳೆ. ಮಹಿಳೆಯರ ಬಗ್ಗೆ ತಾತಯ್ಯನವರು ಹೊಂದಿದ್ದ ಗೌರವ ಭಾವನೆ ಈ ಪದ್ಯದಲ್ಲಿ ವ್ಯಕ್ತವಾಗಿದೆ. ವಿಧವೆಯನ್ನು ತಾತಯ್ಯನವರು ಪತಿವ್ರತೆಯನ್ನಾಗಿಯೂ, ತಪಸ್ವಿನಿಯನ್ನಾಗಿಯೂ ಪ್ರಶಂಸಿದ್ದಾರೆ. ಸತಿ ಸಾವಿತ್ರಿಯ ಉದಾಹರಣೆಯನ್ನೂ ಇಲ್ಲಿ ಪ್ರಸ್ತಾಪಿಸಬಹುದಾಗಿದೆ.

2) ಅಂತರಂಗದ ಭಕ್ತ:

ವಿಷ್ಣುಭಕ್ತುಂಡೈನ ವಿಪ್ರುಡು ಯೇವೇಳ
ಮರಚುನಾ ಸದ್ಗುರುನಿ ಮನಸುಲೋನ ||

ಇನ್ನು ಎರಡನೇಯ ಸಾಧಕ. ವಿಷ್ಣುಭಕ್ತನಾದ ವಿಪ್ರನು ಸದಾಕಾಲ ಸದ್ಗುರುವನ್ನು ಮನಸ್ಸಿನಲ್ಲಿ ಮರೆಯದೇ ಸ್ಮರಿಸುತ್ತಿರುತ್ತಾನೋ ಇಂತಹವನನ್ನೂ ಯಮನು ಮುಟ್ಟಲು ಅಂಜುತ್ತಾನೆ. ಇವನು ಅಂತರಂಗದ ಸಾಧಕ. ಇಲ್ಲಿ ವಿಪ್ರನೆಂದರೆ ಬ್ರಾಹ್ಮಣನೆಂದು ಅರ್ಥವಲ್ಲ. ಯಾರಾದರೇ ಸದಾಕಾಲ ಅಂತರಂಗದಲ್ಲಿ ಭಗವಂತನನ್ನು ಸ್ಮರಿಸುತ್ತಿರುತ್ತಾರೋ ಅವರೆಲ್ಲರೂ ವಿಪ್ರರೆ. ಭಕ್ತಿಯ ಭಾವಪರವಶತೆಯನ್ನು ತಾತಯ್ಯನವರು ಎತ್ತಿಹಿಡಿದಿದ್ದಾರೆ. “ಯಾವ ಜಾತಿಯವನೇ ಆಗಿರಲಿ, ಯಾವ ನೀತಿಯವನೇ ಆಗಿರಲಿ ಹರಿಭಕ್ತಿಯನ್ನು ಹೊಂದಿರುವವನೇ ಅಗ್ರಜನು” ಎಂದಿದ್ದಾರೆ ತಾತಯ್ಯನವರು. ಅಂತರಂಗದ ಭಕ್ತನು ಯಾವುದೇ ಲೋಕವ್ಯವಹಾರದಲ್ಲಿದ್ದರೂ ಮನಸ್ಸಿನಲ್ಲಿ ಭಗವಂತನ ಧ್ಯಾನ ಬಿಡುವುದಿಲ್ಲ. ಅವನು ಮಾಡುವ ಎಲ್ಲಾ ಕರ್ತವ್ಯಗಳನ್ನು ಭಗವಂತನ ಆರಾಧನೆ ಎಂದು ಮಾಡುತ್ತಿರುತ್ತಾನೆ. ಇಲ್ಲಿ ವಿಷ್ಣುಭಕ್ತರೆಂದರೆ ಭಗವಂತನ ಆರಾಧಕರು ಎಂದು ಅರ್ಥ. ಸದ್ಗುರುವೆಂದರೆ ಭಗವಂತ. ನಿರಂತರವಾಗಿ ಮನಸ್ಸಿನಲ್ಲಿ ಭಗವಂತನನ್ನು ಸ್ಮರಿಸುವವರು ಸತ್ಯವ್ರತಿಗಳು ಎಂದಿದ್ದಾರೆ ತಾತಯ್ಯನವರು. ಇವರು ಸಾವಿಗೆ ಹೆದರುವುದಿಲ್ಲ.

3) ಸಿದ್ಧಯೋಗಿ:

ಮೇರುವಪೈ ಚೇರಿ ಮೆಲಗ ನೇರ್ಚಿನ ಯೋಗಿ
ಚಿಕ್ಕುನಾ ಸಂಸಾರ ಚಿಕ್ಕುಲಂದು ||

ಸಿದ್ಧಯೋಗಿಯನ್ನು ತಾತಯ್ಯನವರು ಇಲ್ಲಿ ಪ್ರಸ್ತಾಪಿಸಿದ್ದಾರೆ. ದೇಹದಲ್ಲಿರುವ ಮೇರುವಿನ ಮೇಲೆ ಸಮಾಧಿಯೋಗ ವಿಧಾನದಿಂದ ಸಂಚರಿಸುವುದನ್ನು ಕಲಿತ ಸಾಧಕಯೋಗಿಯು ಸಂಸಾರದ ತೊಡಕುಗಳಿಗೆ ಸಿಕ್ಕಿಹಾಕಿಕೊಳ್ಳುವನೇ? ಎನ್ನುತ್ತಿದ್ದಾರೆ. ತಾತಯ್ಯನವರು ಸಹ ಗೃಹಸ್ಥರಾಗಿದ್ದಾಗ ಸಂಸಾರದ ತೊಡಕುಗಳಿಗೆ ಸಿಕ್ಕದೆ ಬಾಳಿ, ಗೃಹತ್ಯಾಗಮಾಡಿ ನಂತರ ಯೋಗಿಗಳಾದವರು. “ಮೇರುವ” ಎಂದರೆ ಮೇರುಪರ್ವತ, ಬಂಗಾರದ ಬೆಟ್ಟ ಎಂದು ಅರ್ಥ. ಆದರೆ ಯೋಗಭಾಷೆಯಲ್ಲಿ ಮೇರುವ ಎಂದರೆ ಮೇರುದಂಡ. ಇದು ದೇಹದ ಬೆನ್ನುಮೂಳೆ. ಈ ಮೇರುದಂಡದಲ್ಲಿಯೇ ಸುಷುಮ್ನನಾಡಿಯು ಗುದಭಾಗದಿಂದ ಮಸ್ತಕದ ಬ್ರಹ್ಮರಂಧ್ರದವರೆಗೆ ಹಬ್ಬಿದೆ. ಕುಂಡಲಿನೀ ಸಾಧಕ ಯೋಗಿಯು ಈ ನಾಡಿಯ ಮೂಲಕ ಮೂಲಾಧಾರಚಕ್ರದಿಂದ ಸಹಸ್ರಾರ ಚಕ್ರದವರೆಗೆ ಸಂಚರಿಸುತ್ತಾ ಪರಮಾತ್ಮನಲ್ಲಿ ಲೀನವಾಗುವ ಸಾಧನೆಯನ್ನು ಮಾಡಿರುತ್ತಾನೆ.

ಇಂತಹ ಯೋಗಿ ಬ್ರಹ್ಮಾನಂದವನ್ನು ಪಡೆಯುತ್ತಾನೆ. ಅಂತರಂಗ-ಬಹಿರಂಗ ಎರಡರಲ್ಲೂ ಈ ಸಾಧಕಯೋಗಿ ಬ್ರಹ್ಮವನ್ನು ಕಾಣುತ್ತಿರುತ್ತಾನೆ. ರಾಗ-ದ್ವೇಷಗಳಿಗೆ, ಅಹಂಕಾರ, ಮಮಕಾರಗಳ ತೊಡಕುಗಳಲ್ಲಿ ಈ ಯೋಗಿ ಸಿಕ್ಕಿಬೀಳುವುದಿಲ್ಲ. ಈತ ಮಾಯಗೆ ವಶನಲ್ಲ. ಸಂಸಾರದ ಮೋಹ-ಮಮತೆಗಳ ಬಲೆ ಇಲ್ಲ. ಇಂತಹ ಯೋಗಿಯ ಮೇಲೆ ಯಮನಿಗೆ ಅಧಿಕಾರವಿಲ್ಲ. ಏಕೆಂದರೆ ಪಾಪ-ಪುಣ್ಯಗಳ ಆಧಾರದ ಮೇಲೆ ಯಮನಿಗೆ ದಂಡಾಧಿಕಾರವಿರುತ್ತದೆ. ಯೋಗಿಗೆ ಪಾಪಪುಣ್ಯಗಳೇ ಇರುವುದಿಲ್ಲ. “ದಂಡಧರುಡು ಮಮ್ಮು ದಂಡಿಂಪ ವೆರುಚುನು” ಯೋಗಿಗಳನ್ನು ದಂಡಿಸಲು, ಮುಟ್ಟಲು ಯಮನು ಅಂಜುತ್ತಾನೆ ಎಂದಿದ್ದಾರೆ ತಾತಯ್ಯನವರು.

4) ಗುಪ್ತಸಾಧಕರಾದ ಭಾಗವತರು:

ಅಂಗಭಾವಮು ತೆಲಿಸಿ ಲಿಂಗಜ್ಯೋತಿನಿ ಜೂಚಿ
ಬಹು ಗುಪ್ತುಡೈವುಂಡು ಭಾಗವತುಡು||

ಭಾಗವತರೆಂದರೆ ಭಗವಂತನ ಜನ. ಉಪಾಸನೆಯಿಂದ ಭಗವಂತನನ್ನು ಓಲಿಸಿಕೊಂಡು ಸಾಕ್ಷಾತ್ಕಾರ ಪಡೆದುಕೊಂಡ ಅನನ್ಯ ಭಕ್ತರೇ ಭಾಗವತರು. ಇಂತಹ ಭಾಗವತರು ದೇಹದ ಬಗ್ಗೆ ಮೋಹವಿಲ್ಲದೆ, ಪರಮಾತ್ಮ ಭಾವದಿಂದ ಸ್ವಪ್ರಕಾಶವುಳ್ಳ ಲಿಂಗಜ್ಯೋತಿ ರೂಪನಾದ ಭಗವಂತನನ್ನು ತನ್ನಲ್ಲೇ ಕಂಡುಕೊಂಡು ಆನಂದಮಯನಾಗಿರುತ್ತಾನೆ. ಈತನು ಗುಟ್ಟು ಬಿಟ್ಟುಕೊಡದೆ, ಅರಿಯದವನಂತೆ ಸುಮ್ಮನಿರುವ ಗೂಡಸಾಧಕನಾದ ಭಾಗವತ. ಇತನು ಲಿಂಗಜ್ಯೋತಿಯನ್ನು ಕಂಡುಕೊಂಡಿರುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ಲಿಂಗಜ್ಯೋತಿಯೆಂದರೆ ಭಗವಂತನೆಂಬ ಪ್ರಕಾಶದ ಪರಂಜ್ಯೋತಿ ಎಂದರ್ಥ. ಯೋಗಭಾಷೆಯಲ್ಲಿ ಇದನ್ನು ಆಕಾಶದೀಪ ಎಂದೂ ಕರೆಯುತ್ತಾರೆ. ಸ್ವಪ್ರಕಾಶದ ಪರಂಜ್ಯೋತಿಯಾಗಿರುವ ಲಿಂಗಜ್ಯೋತಿಯನ್ನು ಕಂಡುಕೊಂಡ ಭಾಗವತನು ಬಾಹ್ಯದಲ್ಲಿ ಬಲ್ಲವನೆಂದು ತೋರ್ಪಡಿಸಿಕೊಳ್ಳದೆ ಸಾಮಾನ್ಯನಂತೆ ವರ್ತಿಸುತ್ತಾ ಗೂಢಸಾಧಕನಾಗಿರುತ್ತಾನೆ. ಇಂತಹ ಗುಪ್ತಾಸಾಧಕನಾದ ಸತ್ಯವ್ರತನು ಸಾವಿಗೆ ಅಂಜುವುದಿಲ್ಲ.

ಪರಮ ಪತಿವ್ರತೆ, ಅಂತರಂಗದ ಭಕ್ತ, ಸಿದ್ಧಯೋಗಿ ಹಾಗೂ ಭಾಗವತರು ಇವರುಗಳು ಸಾವು-ನೋವುಗಳಿಗೆ ಅಂಜದ ಸತ್ಯವ್ರತಿಗಳು. ಇವರನ್ನು ಮುಟ್ಟಲು ಯಮಧರ್ಮರಾಯನು ಹೆದರುತ್ತಾನೆ ಎನ್ನುತ್ತಾ ತಾತಯ್ಯನವರು ಭಕ್ತಿಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ ಅಂಕಣ: ಶ್ರೀರಾಮಭಜನೆ ಭವರೋಗಕ್ಕೆ ಔಷಧಿ

Continue Reading

ಅಂಕಣ

ತತ್ತ್ವ ಶಂಕರ: ಲೋಕಕ್ಕೆ ಜ್ಞಾನದ ಮಹತಿಯನ್ನು ಹೊತ್ತಿಸಿದ ಮಹಾತ್ಮರು…

ಶಂಕರಾಚಾರ್ಯರ ಅದ್ವೈತ ವೇದಾಂತವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಸಲು ಈ ಸರಣಿ ನೀಡಲಾಗುತ್ತಿದೆ. ಈ ಲೇಖನದಲ್ಲಿ ಸ್ಫೂರ್ತಿದಾಯಕ ಧಾರ್ಮಿಕ ಕತೆಗಳಿರುತ್ತವೆ. ಧಾರ್ಮಿಕ ಮೌಲ್ಯಗಳಿರುತ್ತವೆ.

VISTARANEWS.COM


on

Shankaracharya
Koo
  • ತಪಸ್ವಿ

ಹರೇ ರಾಮ, ‘ಶಂಕರಂ ಲೋಕ ಶಂಕರಂ. ಆದಿ ಶಂಕರಾಚಾರ್ಯರು (Adi Shankaracharya) ಆಚಾರ್ಯತ್ರಯರಲ್ಲಿ ಮೇರು ಎಂದೆನಿಸಿದ ವೇದಾಂತ ಸಾಮ್ರಾಜ್ಯದ ತಾರೆಯಂತೆ ಪ್ರಕಾಶಿಸಿದವರು. ಆಚಾರ್ಯರು ತಮ್ಮ ಅಲ್ಪ ಜೀವಿತಾವಧಿಯಲ್ಲಿ ಧರ್ಮದ ಉದ್ಧಾರವನ್ನು ಮಾಡಿ ಲೋಕಕ್ಕೆ ಒಳಿತು ಮಾಡಿದರು. ಅಳಿಸಿದ ಆಚರಣೆಗಳನ್ನು, ತಿರುಗಿದ ಧರ್ಮದ ನಿಲುವನ್ನು ಪುನಃ ಸದ್ದಿಶೆಯ ಕಡೆ ತಿರುಗಿಸಿದರು. ಸಾವಿರಾರು ಗ್ರಂಥಗಳ ಮೂಲಕ ಧರ್ಮದ ಮೂಲಭೂತ ಸಂಪತ್ತನ್ನು ಧರ್ಮದ ಸಾರವನ್ನು ಮುಂದಿನವರವರೆಗೂ ತಲುಪಿಸುವ ಮಹತ್ಕಾರ್ಯ ಮಾಡಿದರು. ಮಠಗಳನ್ನು ಸ್ಥಾಪಿಸಿ ವೇದಗಳ ಪರಂಪರೆ, ನಮ್ಮ ದೇಶದ ಹಿರಿಮೆಯನ್ನು ಕಾಪಾಡುವಲ್ಲಿ ಅವರು ಶ್ರಮಿಸಿದರು. ಅದ್ವೈತ ವೇದಾಂತವನ್ನು ವಿಶ್ವದ ಮೂಲೆಮೂಲೆಗೂ ತಲುಪಿಸುವ ಮೂಲಕ ಮೋಕ್ಷದ ಮಾರ್ಗ, ಆತ್ಮ ಸಾಕ್ಷಾತ್ಕಾರಗಳ ಮಾರ್ಗದ ಸಾಧನೆಯನ್ನು ಲೋಕಕ್ಕೆ ತೆರೆದಿಟ್ಟರು.

ಬದುಕಿದ್ದು ಅಲ್ಪವಾದರೂ ಅಲ್ಪರಿಗೆ ಬದುಕನ್ನು ನೀಡಿದವರು ಆಚಾರ್ಯರು. ಭಕ್ತಿ ಮಾರ್ಗದಿಂದ ಆರಂಭಿಸಿ ಅತ್ಯುನ್ನತ ಜ್ಞಾನ ಮಾರ್ಗದವರೆಗೂ ತಮ್ಮ ಕೃತಿಗಳನ್ನು ರಚಿಸಿ ನಮ್ಮಲ್ಲಿರುವ ಅಜ್ಞಾನವನ್ನು ತೊಲಗಿಸುವ ಕಾರ್ಯ ಮಾಡಿದರು. ನಾವೆಲ್ಲರೂ ನೂರು ವರ್ಷ ಬದುಕಿದರೂ ನಮ್ಮದು ಪೂರ್ಣ ಜೀವನ ಆಗಲಾರದು. ಆದರೆ ಆಚಾರ್ಯರು 32 ಸಂವತ್ಸರಗಳಿಗೆ ಪೂರ್ಣತೆಯ ಶಿಖರವನ್ನು ಏರಿದ ಮಹಾಯೋಗಿ. ಸಾಕ್ಷಾತ್ ಶಂಕರನ ಅವತಾರವಾದ ಶಂಕರರು ಲೋಕಕ್ಕೆ ಜ್ಞಾನದ ಮಹತಿಯನ್ನು ಹೊತ್ತಿಸಿದ ಮಹಾತ್ಮರು. ಧರ್ಮದ ಕಿಡಿಯನ್ನು ಹಚ್ಚಿ ಅದು ಮುಂದಿನ ಸಾವಿರಾರು ವರ್ಷಗಳ ಕಾಲ ಉರಿಯುವಂತೆ ಮಾಡಿದವರು. ದ್ವೈತದಿಂತ ಅದ್ವೈತ ಸಿದ್ಧಿಯ ಪ್ರಾಪ್ತಿಯ ಮಾರ್ಗವನ್ನು ಹಾಕಿದವರು. ನಮ್ಮ ಪರಂಪರೆಯಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನವಿದೆ. ಅದನ್ನು ನಾವು ಶಂಕರರ ಜೀವನದಲ್ಲಿ ಕಾಣಬಹುದಾಗಿದೆ. ಎಂತಹ ಅಜ್ಞಾನಿಗಳಿಗೂ ಅರ್ಥವಾಗುವ ಹಾಗೆ ಸಂಸ್ಕೃತ ಭಾಷೆಯಲ್ಲಿ ತಮ್ಮ ಕೃತಿಗಳನ್ನು ರಚಿಸಿ ಲೋಕ್ಕೆ ಅನುಗ್ರಹ ಮಾಡಿದ್ದಾರೆ. ಸಾಮಾನ್ಯರಿಗೆ ಸಾಮಾನ್ಯರಂತೆ, ಜ್ಞಾನಿಗಳಿಗೆ ಮೇರು ಜ್ಞಾನಿಗಳಂತೆ ಸಾಧನೆಯ ಮಾರ್ಗ ತೋರಿದ ಮಹಾನ್ ಯತಿಗಳು ಆಚಾರ್ಯರು. ಅವರು ಸ್ಥಾಪಿಸಿದ ಮಠಗಳು ಇಂದಿಗೂ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದು ಲೋಕಕ್ಕೆ ಮಾರ್ಗದರ್ಶನ ಮಾಡುತ್ತಿವೆ.

ನಮ್ಮ ಸಾಧನೆ ಎಂದರೆ ಇಂತೆಯೇ ಇರಬೇಕು. ನಮ್ಮ ಕಾರ್ಯದಿಂದ ನಮ್ಮನ್ನು ಗುರುತಿಸುವಂತೆ ಆಗಬೇಕು ಹೊರತು ಹೆಸರಿನಿಂದ ಅಲ್ಲ. ಇಂದಿನ ಕಾಲದಲ್ಲಿ ವಿಷಯ ಸುಖದ ಹಿಂದೆ ಓಡುತ್ತಿರುವ ಎಲ್ಲರಿಗೂ ಆಚಾರ್ಯರ ಜೀವನವು ಮಾದರಿಯಾಗಬೇಕು. ಹಣವೇ ಎಲ್ಲಾ, ಅದರಿಂದಲೇ ಎಲ್ಲಾ ಸುಖವನ್ನು ಪಡೆಯಬಹುದು ಎಂದು ಇಂದಿನ ಶಿಕ್ಷಣವೂ ಕೂಡ ಹಣದ ಹಿಂದೆಯೇ ಓಡುವಂತೆ ಯುವಜನರ ಬುದ್ಧಿಯನ್ನು ತಿರುಗಿಸುತ್ತಿದೆ. ಆದ್ದರಿಂದ ನಮ್ಮ ದೇಶದಲ್ಲಿ ಇಂದಿಗೂ ಇಂತಹ ಮೌಢ್ಯ ಜೀವನವನ್ನು ಕಾಣುತ್ತಿದ್ದೇವೆ.

ಇದನ್ನೂ ಓದಿ : Sirsi News : ದೇವಸ್ಥಾನದ ಬಾಗಿಲು ಮುರಿದರು; ಚಾಕ್‌ಪೀಸ್‌ನಿಂದ ಶಿವಲಿಂಗದ ಮೇಲೆ ಬರೆದು ವಿಕೃತಿ

ಭಜ ಗೋವಿಂದಂ ಆಚಾರ್ಯರ ಕೃತಿಯನ್ನು ಓದಿ ಜೀವನದಲ್ಲಿ ಅಳವಡಿಸಿಕೊಂಡರೆ ಅದರಂತಹಾ ಸಜ್ಜೀವನ ಇನ್ನೊಬ್ಬರದಲ್ಲ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ಸರಿಯಾದ ಭಾರತೀಯ ಶಿಕ್ಷಣವನ್ನೊಳಗೊಂಡ ಶಿಕ್ಷಣವಾಗಬೇಕು. ಇಂದು ನಾವು ಬೇರೆ ಯಾರೋ ಬರೆದ ವಿಷಯಗಳನ್ನು ತರಗತಿಗಳಲ್ಲಿ ಓದುತ್ತಿದ್ದೇವೆ. ಆದರೆ ಆ ಎಲ್ಲಾ ವಿಚಾರಗಳನ್ನು ಎಷ್ಟೋ ಹಿಂದೆ ನಮ್ಮ ಪೂರ್ವಜರಾದ ಋಷಿ ಮುನಿಗಳು ವೇದ ಉಪನಿಷತ್ ಸಾಹಿತ್ಯಗಳಲ್ಲಿ ಹೇಳಿದ್ದಾರೆ. ಭಾಷಾ ಜ್ಞಾನದ ಲೋಪದಿಂದ ಈ ಸಾಹಿತ್ಯಗಳಲ್ಲಿ ಅಡಗಿರುವ ಸತ್ಯಗಳನ್ನು ತಿಳಿಯಲು ನಮಗೆ ಅಸಾಧ್ಯವಾಯಿತು. ನಂತರ ನಮ್ಮ ಒಳಗಿನ ಭಿನ್ನಾಭಿಪ್ರಾಯಗಳಿಂದ ನಮ್ಮನ್ನು ಬೇರೆಯವರು ವಸಾಹತು ನಡೆಸಿದರು. ನಾವು ನಮ್ಮತನದಿಂದ ದೂರವಾಗುತ್ತಾ ಬಂದೆವು. ಆದರೆ ಕಾಲವು ಇನ್ನೂ ಮುಗಿಯಲಿಲ್ಲ. ಕಳೆದು ಹೋಗುತ್ತಿರುವ ಧಾರ್ಮಿಕತೆಯನ್ನು ಪುನರ್ ಸ್ಥಾಪಿಸುವಲ್ಲಿ ನಮ್ಮ ಪ್ರಯತ್ನವು ಸಾಗಬೇಕು. ಎಷ್ಟೇ ಧರ್ಮವು ನಾಶವಾದರೂ ವಿನಾಶ ಎಂಬುವುದು ಈ ನಮ್ಮ ಸನಾತನ ಹಿಂದೂ ವೈದಿಕ ಧರ್ಮಕ್ಕೆ ಇಲ್ಲ. ನಮ್ಮ ಸನಾತನ ಧರ್ಮ ಎಂದರೆ ಪ್ರಕೃತಿ. ಸೂರ್ಯ ಚಂದ್ರರು ಇರುವವರೆಗೂ ಈ ಧರ್ಮವು ಶಾಶ್ವತ. ಇದು ಆಚಾರ್ಯರ ತತ್ತ್ವ ಸಂದೇಶದ ಸಂಕ್ಷಿಪ್ತ ನೋಟವಾಗಿದೆ.
ಆಚಾರ್ಯರ ತತ್ತ್ವ ಸಂದೇಶವನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಿ…

Continue Reading
Advertisement
Gurucharan Singh soon to get married faced financial crunch
ಸಿನಿಮಾ3 mins ago

Gurucharan Singh: ನಿಗೂಢವಾಗಿ ನಾಪತ್ತೆಯಾದ ಈ ನಟನಿಗೆ ಶೀಘ್ರದಲ್ಲೇ ಮದುವೆ!

IPL 2024
ಪ್ರಮುಖ ಸುದ್ದಿ9 mins ago

IPL 2024 : ಡೇವಿಡ್ ವಾರ್ನರ್ ಅವರೊಂದಿಗೆ ‘ಈ’ ಅದ್ಭುತ ಐಪಿಎಲ್ ದಾಖಲೆಯನ್ನು ಸರಿಗಟ್ಟಿದ ಕೊಹ್ಲಿ

War 2 A galaxy of stars descended at a Mumbai restaurant on Sunday evening
ಸ್ಯಾಂಡಲ್ ವುಡ್24 mins ago

War 2 Movie: `ವಾರ್‌2′, `ಬ್ರಹ್ಮಾಸ್ತ್ರ’ ತಂಡಕ್ಕೆ ಸ್ಪೆಷಲ್‌ ಡಿನ್ನರ್‌ ಪಾರ್ಟಿ ಆಯೋಜಿಸಿದ ಅಯಾನ್ ಮುಖರ್ಜಿ !

hd revanna prajwal revanna
ಪ್ರಮುಖ ಸುದ್ದಿ32 mins ago

Hasan Pen Drive Case: ಎಲ್ಲೂ ಕಾಣದ ಪ್ರಜ್ವಲ್‌, ಇಂದು ಎಚ್‌ಡಿ ರೇವಣ್ಣ ಹೈಕೋರ್ಟ್‌ ಮೊರೆ

ವಿದೇಶ43 mins ago

Stab wound: ಗರ್ಲ್‌ಫ್ರೆಂಡ್‌ನ ಚುಚ್ಚಿ ಕೊಲ್ಲೋ ಮುನ್ನ ಗೂಗಲ್‌ ಸರ್ಚ್‌ ಮಾಡಿದ್ದ ಹಂತಕ!

Actress Haripriya Vasishta Simha Buys A Swanky New SUV Car
ಸ್ಯಾಂಡಲ್ ವುಡ್1 hour ago

Actress Haripriya: ಐಷಾರಾಮಿ ಕಾರು ಖರೀದಿಸಿದ ʻಸಿಂಹಪ್ರಿಯಾʼ! ಬೆಲೆ ಎಷ್ಟು?

Kane Williamson
ಕ್ರೀಡೆ1 hour ago

Kane Williamson : ನ್ಯೂಜಿಲ್ಯಾಂಡ್ ವಿಶ್ವ ಕಪ್​ ತಂಡಕ್ಕೆಕೇನ್​ ವಿಲಿಯಮ್ಸನ್​ ನಾಯಕ

PM Narendra Modi
ಕರ್ನಾಟಕ1 hour ago

PM Narendra Modi: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಅಬ್ಬರದ ಪ್ರಚಾರಕ್ಕೆ ಸಿದ್ಧತೆ

PM Not OBC Said by Rahul Gandhi and BJP hits back to him
ಪ್ರಮುಖ ಸುದ್ದಿ1 hour ago

PM Narendra Modi: ಸಂಪತ್ತು ಮರುಹಂಚಿಕೆಯ ರಾಹುಲ್ ಗಾಂಧಿ ಐಡಿಯಾ ನಗರ ನಕ್ಸಲ್ ಚಿಂತನೆ: ಪಿಎಂ ಮೋದಿ

ವೈರಲ್ ನ್ಯೂಸ್2 hours ago

Viral Video: ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದ ಮಗು; ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 29 2024
ಭವಿಷ್ಯ5 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202417 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202420 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202421 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202422 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

ಟ್ರೆಂಡಿಂಗ್‌