Maha Shivaratri 2023 : ಶಿವನ ಮಹಾ ಮಹೋತ್ಸವ ಮಹಾ ಶಿವರಾತ್ರಿ - Vistara News

ಧಾರ್ಮಿಕ

Maha Shivaratri 2023 : ಶಿವನ ಮಹಾ ಮಹೋತ್ಸವ ಮಹಾ ಶಿವರಾತ್ರಿ

ಇಂದು ಮಹಾ ಶಿವರಾತ್ರಿ (Maha Shivaratri 2023 ). ಈ ಹಬ್ಬದ ಮಹತ್ವವೇನು? ಈ ಆಚರಣೆಯಲ್ಲಿ ಮಹರ್ಷಿಗಳ ಕೊಡುಗೆ ಏನು? ಇದನ್ನು ಹೇಗೆ ಆಚರಿಸಬೇಕು? ಎಂದು ಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿಗಳ ಅಧ್ಯಯನ-ಸಂಶೋಧನೆಗಳನ್ನು ನಡೆಸುತ್ತಿರುವ ವಿದ್ವಾನ್ ನರಸಿಂಹ ಭಟ್ ಬಡಗು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Maha Shivaratri
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Maha Shivaratri 2023

ವಿದ್ವಾನ್ ನರಸಿಂಹ ಭಟ್ ಬಡಗು
ಭಾರತೀಯರ ಜೀವನಪದ್ಧತಿ ಅತಿ ವಿಶಿಷ್ಟವಾದದ್ದು. ಅದಕ್ಕೆ ಕಾರಣವಿಷ್ಟೆ; ಇವರ ಬದುಕು ಒಂದು ದಿನ ಹುಟ್ಟುವುದು ಇನ್ನೊಂದು ದಿನ ಸಾಯುವುದು ಮತ್ತು ಈ ಹುಟ್ಟುಸಾವುಗಳ ಮಧ್ಯೆ ಹಾಗೂ ಹೀಗೋ ಒಂದಷ್ಟು ದಿನ ಜೀವನವನ್ನು ಸವೆಸುವುದು ಇಷ್ಟೇ ಅಲ್ಲ. ಈ ಬದುಕಿಗೆ ಯಾವ ಅರ್ಥವೂ ಇಲ್ಲ. ಪಶುಗಳೂ ಇಂತಹ ಬದುಕನ್ನು ನಡೆಸುತ್ತವೆ. ಇದಕ್ಕಿಂತಲೂ ಭಿನ್ನವೂ ಇದರ ಜೊತೆಗೂಡಿದ್ದೂ ಆದ ಯಾವ ಅಂತರಂಗದ ಬದುಕುಂಟೋ ಅದೇ ನಿಜವಾದದ್ದು ಎಂದು ಸಾರಿದ ಭಾರತೀಯ ಮಹರ್ಷಿಗಳು ಇಂದ್ರಿಯ ತೃಪ್ತಿಯನ್ನು ಬಿಟ್ಟಿಲ್ಲ. ಆತ್ಮತೃಪ್ತಿಯನ್ನು ಮರೆತಿಲ್ಲ. ಇವೆರಡರ ಸಮನ್ವಯದ ಬಾಳಾಟವನ್ನೇ ಜೀವನ’ ಎಂದರು.

ಈ ಮಾನವಶರೀರವು ಇಹ ಮತ್ತು ಪರಗಳನ್ನು ಅತ್ಯಂತ ವ್ಯವಸ್ಥಿತವಾಗಿ ಅನುಭವಿಸಲೆಂದೇ ಭಗವಂತ ನಮಗೆ ಕೊಟ್ಟ ಅನುಗ್ರಹಯಂತ್ರ. ಅನೇಕ ಜನ್ಮಗಳ ಪುಣ್ಯದಿಂದ ಮಾತ್ರ ಮಾನವಜನ್ಮವನ್ನು ಪಡೆಯಲು ಸಾಧ್ಯ. ಆದ್ದರಿಂದ ಈ ಜನ್ಮದಲ್ಲೇ ಈ ಜೀವಕ್ಕೆ ಉತ್ತಮ ಸಂಸ್ಕಾರವನ್ನು ಕೊಡುವುದರ ಮೂಲಕ ಜೀವವು ದೇವನಲ್ಲಿ ಒಂದಾಗಬೇಕು. ಅದಕ್ಕೆಂದೇ ಭಗವಂತ ನಮಗಾಗಿ ಕೊಟ್ಟ ಉತ್ತಮಕಾಲಘಟ್ಟವನ್ನೇ “ಹಬ್ಬ” “ಪರ್ವ” “ಮಹೋತ್ಸವ” ಇತ್ಯಾದಿ ಪದಗಳಿಂದ ಕರೆಯಲಾಗಿದೆ. ಇಂತಹ ವಿಶೇಷಕಾಲಘಟ್ಟಗಳಲ್ಲಿ `ʻಶಿವರಾತ್ರಿ’ ಎಂಬ (Maha Shivaratri 2023) ವಿಶಿಷ್ಟ ಪರ್ವವೂ ಒಂದಾಗಿದೆ.

ಇಂದು ಈ ಶಿವರಾತ್ರಿಮಹೋತ್ಸವವನ್ನು ಭಯಂಕರವಾಗಿ ಆಚರಿಸಲಾಗುತ್ತಿದೆ. ಅದರ ಒಂದು ಝಲಕ್ಕನ್ನು ನೋಡುವುದಾದರೆ; ಇದು ರಾತ್ರಿ ಆಚರಿಸುವ ಹಬ್ಬ. ರಾತ್ರಿಯೆಲ್ಲಾ ಎಚ್ಚರವಾಗಿರುವ ಕಾಲ. ಅದಕ್ಕಾಗಿ ಜಾಗರಣೆ ಮಾಡಬೇಕು ಎಂಬಿಷ್ಟೇ ಅಂಶದಿಂದ ಜಾಗರಣೆಯನ್ನು ವಿದ್ಯುದ್ದೀಪದಿಂದ ರಾತ್ರಿಯನ್ನೇ ಹಗಲಾಗಿಸಿಕೊಂಡು ಬಗೆಬಗೆಯ ಆಟದಲ್ಲಿ ಕೂಟದಲ್ಲಿ ಕಾಲವನ್ನು ಕಳೆಯಲಾಗುತ್ತಿದೆ. ಜೂಜು ಮೋಜು ಮಸ್ತಿಯಲ್ಲೇ ಕಾಲಕಳೆಯುವ ಜನರು ಒಂದು ಕಡೆಯಾದರೆ ಉಪವಾಸ ಜಾಗರಣೆ ಇವೆಲ್ಲ ಮೂಢನಂಬಿಕೆಯ ಆಚರಣೆಗಳು ಎಂದು ಹೇಳುತ್ತಾ ಕಂಠಪರ್ಯಂತ ತಿಂದು ಗಡದ್ದಾಗಿ ನಿದ್ದೆ ಮಾಡಿ ಸುಖವಾಗಿ ರಾತ್ರಿ ಕಳೆಯಿತು! ಎಂದು ಹೇಳುವವರು ಇನ್ನೊಂದು ಕಡೆ.

ಅಷ್ಟು ಇಷ್ಟು ಭಗವಂತ, ಧರ್ಮ, ಎಂದೆಲ್ಲ ನಂಬಿದವರು ಸಾಧ್ಯವಾದಷ್ಟು ಉಪವಾಸದ ಹೆಸರಿನಲ್ಲಿ ಅಲ್ಪಸ್ವಲ್ಪ ತಿಂದು ತಿಳಿದಷ್ಟು ಪೂಜೆ ಮಾಡಿ ಈ ರಾತ್ರಿಯನ್ನು ಹಾಗೂಹೀಗೂ ಕಳೆದು ಶಿವರಾತ್ರಿಯನ್ನು ಆಚರಿಸಿದೆ ಎಂದು ಧನ್ಯಭಾವವನ್ನು ಅನುಭವಿಸುವವರು ಇನ್ನು ಹಲವರು. ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್’ ಅಷ್ಟೊ ಇಷ್ಟೊ ತಿಳಿದೋ ತಿಳಿಯದೋ ಧರ್ಮವನ್ನು ಆಚರಿಸುವುದು ಉತ್ತಮಪಕ್ಷವೇ. ಹಾಗಾದರೆ ಶಿವರಾತ್ರಿ ಎಂದರೇನು? ಈ ಆಚರಣೆಯಲ್ಲಿ ಮಹರ್ಷಿಗಳ ಕೊಡುಗೆ ಎನು? ಇದನ್ನು ಹೇಗೆ ಆಚರಿಸಬೇಕು? ಎಂಬಿತ್ಯಾದಿ ವಿಷಯಗಳನ್ನು ಶ್ರೀರಂಗಮಹಾಗುರುವಿನ ನೋಟದ ಜೊತೆ ತಿಳಿಯುವ ಪ್ರಯತ್ನ ಮಾಡೋಣ.

ಪುರಾಣಕಥೆಗಳು ಹೇಳುವುದೇನು?

ಒಮ್ಮೆ ಬ್ರಹ್ಮದೇವನು ವೈಕುಂಠಕ್ಕೆ ತೆರಳುತ್ತಾನೆ. ಆಗ ಶ್ರೀವಿಷ್ಣುವು ಶ್ರೀದೇವೀ ಭೂದೇವಿಯರಿಂದ ಸೇವೆಪಡೆಯುತ್ತಿದ್ದನು. ಬ್ರಹ್ಮದೇವನ ಆಗಮನವನ್ನು ಅಲಕ್ಷಿಸಿದ್ದನು. ಇದಕ್ಕೆ ಕೋಪಕೊಂಡ ಬ್ರಹ್ಮದೇವನು; ʻʻಅಯ್ಯಾ ! ಮಹಾವಿಷ್ಣುವೇ! ಈ ಸೃಷ್ಟಿಕರ್ತಾ ಬ್ರಹ್ಮನೇ ಬಂದರೂ ತಿರಸ್ಕಾರವೇ? ಎದ್ದೇಳು! ನಾನು ನಿನ್ನ ಪಿತಾಮಹ ಬಂದಿದ್ದೇನೆʼʼ ಎಂದ. ಅತ್ತ ಮಹಾವಿಷ್ಣುವು ತನ್ನ ಶಯನದಿಂದಲೇ; ʻʻನಿನಗೆ ಮಂಗಳವಾಗಲಿ! ನೀನೂ ಬಂದು ಈ ಆಸನದಲ್ಲಿ ಕುಳಿತುಕೊʼʼ ಎಂದನು. ಆ ಕ್ಷಣದಲ್ಲಿ ಬ್ರಹನು ಇನ್ನಷ್ಟು ಕೋಪದಿಂದ; ʻʻನಿನ್ನ ರಕ್ಷಕ ನಾನು. ಈ ಸೃಷ್ಟಿಗೇ ಕಾರಣ. ಇಷ್ಟಿದ್ದೂ ನನ್ನನ್ನು ಅಪಮಾನಿಸಿರುವೆಯಲ್ಲʼʼ ಎಂದನು.

ಆಗ ಮಹಾವಿಷ್ಣುವು ʻʻನನ್ನ ನಾಭಿಕಮಲದಲ್ಲಿ ಹುಟ್ಟಿರುವುದರಿಂದ ನೀನು ನನ್ನ ಮಗʼʼ ಎಂದನು. ಹೀಗೆ ನಾನು ಸೃಷ್ಟಿಕರ್ತಾ ಎಂದು ಬ್ರಹ್ಮನೂ, ನಾನು ನಿನ್ನನ್ನೇ ಸೃಷ್ಟಿಸಿದ ತಂದೆ ಎಂದು ವಿಷ್ಣುವೂ ಹೀಗೆ ಇಬ್ಬರ ಮಧ್ಯೆ ವಿವಾದ ಆರಂಭವಾಯಿತು. ಬ್ರಹ್ಮನು ಪಾಶುಪತವನ್ನೂ ವಿಷ್ಣುವು ಮಾಹೇಶ್ವರಾಸ್ತ್ರವನ್ನೂ ಪ್ರಯೋಗಿಸಲು ಮುಂದಾದರು. ಇದರಿಂದ ದೇವಗಣ ಭಯಗ್ರಸ್ತವಾಯಿತು. ಹೆದರಿ ಕೈಲಾಸದಲ್ಲಿರುವ ಶಿವನ ಬಳಿ ಓಡಿದರು.

ಈ ಮೊದಲೇ ವಿಷಯವನ್ನು ತಿಳಿದ ಶಿವನು ʻʻನಾನು ಈ ವಿವಾದವನ್ನು ಪರಿಹರಿಸುವೆʼʼ ʻʻಶಿವಲಿಂಗತಯೋದ್ಭೂತಃ ಕೋಟಿಸೂರ್ಯಸಮಪ್ರಭಃʼʼ ಎಂದು ಶಿವನು ತನ್ನ ಜ್ಯೋತಿರ್ಮಯರೂಪವನ್ನು ಪ್ರಕಟಪಡಿಸಿದನು. ಆಗ ಈ ಎರಡೂ ಅಸ್ತ್ರಗಳೂ ಲಿಂಗದಲ್ಲಿ ಲೀನವಾದವು. ಈ ಅವತಾರದ ದಿನವನ್ನೇ ʻಮಹಾಶಿವರಾತ್ರಿ’ ಎಂದು ಕರೆಯಲಾಗಿದೆ. (ಈಶಾನಸಂಹಿತಾ) ಇದೊಂದು ಕೇವಲ ಕಥೆಯಲ್ಲ. ತಾತ್ತ್ವಿಕವಾದ ಹಿನ್ನೆಲೆಯೂ ಉಂಟು. ಅದನ್ನು ಮುಂದೆ ನೋಡೋಣ.

ಮಹಾಕಾಲನಿಗೆ ಯಾವುದು ಕಾಲ?

ಮಹಾಕಾಲನಾದ ಶಿವನ ಆರಾಧನೆಗೆ ವಿಶೇಷವಾದ ಕಾಲ ಕೃಷ್ಣಪಕ್ಷದ ಚತುರ್ದಶೀ. ಪ್ರತಿಮಾಸದಲ್ಲೂ ಕೃಷ್ಣಪಕ್ಷದಲ್ಲಿ ಬರುವ ಚತುರ್ದಶಿಗೂ ಶಿವರಾತ್ರಿ ಎಂದೇ ಹೆಸರು. ಆದರೆ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಗೆ ʻಮಹಾಶಿವರಾತ್ರಿ’ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ತಿಥಿಯೂ ಒಂದೊಂದು ದೇವತೆಯ ಅಧಿಷ್ಠಾನವಾಗಿರುತ್ತದೆ. ಚತುರ್ಥಿಗೆ ಗಣೇಶ ಅಧಿಷ್ಠಾನ ದೇವತೆಯಾದಂತೆ ಚತುರ್ದಶಿಗೆ ಶಿವನು ಅಧಿಷ್ಠಾನ ದೇವನಾಗಿರುತ್ತಾನೆ. ಅಂದರೆ ಆಯಾ ತಿಥಿಯು ಆಯಾ ದೇವತೆಯ ಉಪಾಸನೆಗೆ ಪ್ರಶಸ್ತವಾದ ಕಾಲ ಎಂಬುದಾಗಿ ನಮ್ಮ ಪರಂಪರೆ ಸಾರಿದೆ. ಇದರಲ್ಲೂ ರಾತ್ರಿಯು ಶಿವನ ಉಪಾಸನೆಗೆ ಅತ್ಯಂತ ಶ್ರೇಷ್ಠವಾಗಿದೆ.

ಶಿವನಿಗೂ ರಾತ್ರಿಗೂ ಸಂಬಂಧವಿದೆ. ಸತ್ತ್ವ-ರಜಸ್ಸು-ತಮಸ್ಸು ಎಂಬ ತ್ರಿಗುಣಗಳಿಗೆ ತ್ರಿಮೂರ್ತಿಗಳಲ್ಲಿ ಕ್ರಮವಾಗಿ ವಿಷ್ಣು-ಬ್ರಹ್ಮ-ಮಹೇಶ್ವರರು ಅಧಿಪತಿಯಾಗಿರುತ್ತಾರೆ. ಕಾಲದಲ್ಲೂ ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಹೀಗೆ ಒಂದೊಂದು ಕಾಲಕ್ಕೂ ಒಂದೊಂದು ದೇವತೆಯ ಪ್ರಾಧಾನ್ಯವಿರುತ್ತದೆ. ರಾತ್ರಿಯಲ್ಲಿ ತಮಸ್ಸಿನ ಆಧಿಕ್ಯವಿರುವುದರಿಂದಗೆ ಶಿವನಿಗೆ ಪ್ರಾಧಾನ್ಯ.

ಶಿವನನ್ನು ಸಂಹಾರಕರ್ತಾ ಎಂದು ಕರೆಯಲಾಗುತ್ತದೆ. ಸ್ವಾಭಾವಿಕವಾಗಿ ರಾತ್ರಿಯು ಸಂಹಾರಕಾಲದ ಪ್ರತಿನಿಧಿ. ಇಂದ್ರಿಯಗಳನ್ನು ಸೆಳೆದುಕೊಳ್ಳುವ ಕಾಲ. ಜೀವಿಯು ಕರ್ಮಚೇಷ್ಟೆಗಳನ್ನೆಲ್ಲಾ ಬಿಟ್ಟು ಚೈತನ್ಯವನ್ನು ಉಪಸಂಹರಿಸಿಕೊಂಡು ನಿದ್ದೆಗೆ ಜಾರುವ ಕಾಲವಿದು.ಚʻʻಯಸ್ಯಾಂ ಜಾಗೃತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ”(ಗೀತಾ-69) ಎಂಬಂತೆ ಸಾಮಾನ್ಯ ಜೀವಿಯು ಜಾಡ್ಯನಿದ್ದೆಯಲ್ಲಿದ್ದರೆ ಮುನಿಯಾದವನು ಆಜಾಡ್ಯನಿದ್ರೆ –ಸಮಾಧಿಯಲ್ಲಿ ಮುಳುಗಿರುತ್ತಾನೆ. ಸಾಧಕನಿಗಿದು ಸಾಧನೆಗೆ ಪರ್ವಕಾಲವಾಗಿದೆ.

ಮನಸಸ್ಪತಿಯ ಜಾಗೃತವಾಗುವ ಪರ್ವ

ಶುಕ್ಲಪಕ್ಷದಲ್ಲಿ ಚಂದ್ರನು ವೃದ್ಧಿಹೊಂದುತ್ತಾ ಕೃಷ್ಣಪಕ್ಷದಲ್ಲಿ ಕ್ಷೀಣಿಸುತ್ತಾ ಹೋಗುತ್ತಾನೆ. ಚಂದ್ರನ ಪ್ರಭಾವ ಇಡೀ ಬ್ರಹ್ಮಾಂಡದ ಮೇಲೆ ಬೀರುತ್ತದೆ. ಅಲ್ಲದೇ ಚಂದ್ರನನ್ನು ಮನಸ್ಸಿಗೆ ಅಧಿಪತಿ ಎಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ. ಹಾಗಾಗಿ ಚಂದ್ರನ ವೃದ್ಧಿಕ್ಷಯಗಳು ನಮ್ಮ ಮನಸ್ಸಿನ ಮೇಲೂ ಪ್ರಭಾವವನ್ನು ಬೀರದಿರದು. ಈ ಕೃಷ್ಣಪಕ್ಷದ ರಾತ್ರಿಯು ವಿಶೇಷವಾದ ತಮಸ್ಸಿನ ಆವರಣವಾಗಿರುವುದರಿಂದ ಸಾಮಾನ್ಯ ಜೀವಿಯು ಜಾಡ್ಯನಿದ್ದೆಗೆ ಜಾರುವುದು ಸಹಜ. ಮತ್ತು ಈ ಗಾಢವಾದ ತಮಸ್ಸಿನ ಕಾಲವೇ ರಾಕ್ಷಸೀಶಕ್ತಿಗಳು ಪ್ರಬುದ್ಧರಾಗುವ ಸನ್ನಿವೇಶವಿರುತ್ತದೆ.

ನೈತಿಕ ಸಾಮಾಜಿಕ ಅಪರಾಧಗಳು ಘಟಿಸುವ ಕಾಲವೂ ಇದೇ ಆಗಿದೆ. ಇದೇ ಕಾಲವು ತಮಸ್ಸಿನ ಅಧಿಪತಿಗೆ ಪ್ರಿಯವಾದದ್ದು. ಮಂದಮತಿಗಳು ಈ ಕಾಲವನ್ನು ನಿದ್ದೆಯಲ್ಲಿ ಕಳೆಯುತ್ತಾರೆ. ಪ್ರಾಜ್ಞರಾದವರು ಈ ಕಾಲವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಅವರಿಗಿದು ಸಂಧ್ಯಾಕಾಲ. ಮಧ್ಯರಾತ್ರಿಯನ್ನೂ ಸಂಧ್ಯಾಕಾಲಗಳಲ್ಲಿ ಒಂದೆಂದೂ ಇದು ಸಾಧನೆಗೆ ಅತ್ಯಂತ ಪ್ರಶಸ್ತ ಎಂದು ತೀರ್ಮಾನಿಸಲಾಗಿದೆ.

ʻʻನಿಶಿ ಭ್ರಮಂತಿ ಭೂತಾನಿ ಶಕ್ತಯಃ ಶೂಲಭೃದ್ಯತಃ” – ಶಿವ ಮತ್ತು ಅವನ ಅನುಚರರು ಸಂಚರಿಸುವ ಕಾಲವೂ ಇದೇ ಆಗಿದೆ. ʻʻಇಲ್ಲಿ ಶಿವನ ಸಹಚಾರಿಗಳಾಗಿ ಹೇಳಲ್ಪಟ್ಟಿರುವ ಭೂತಗಳು ಭಯ ಅಥವಾ ಬೀಭತ್ಸಗಳಿಗೆ ಕಾರಣರಾಗಿರುವ ಜೀವಿಗಳಲ್ಲ. ಜ್ಞಾನಿ ಭಕ್ತರಾದ ಪರಿವಾರಗಳು. ಆರಾಧಿಸುವವರಿಗೆ ಇಷ್ಟಾರ್ಥವನ್ನು ಅನುಗ್ರಹಿಸುವ ಶಕ್ತಿ ಇವುಗಳಿಗಿದೆ. ಅವು ಸಂಹಾರಕಾರ್ಯದಲ್ಲೂ ಶಿವನಿಗೆ ಸಹಾಯ ಮಾಡುತ್ತವೆ” ಎಂದು ಶ್ರೀರಂಗಮಹಾಗುರುಗಳು ವ್ಯಾಖ್ಯಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಚತುರ್ದಶೀ ನಿರ್ಣಯ ಹೇಗೆ?

ʻʻಮಾಘಮಾಸಸ್ಯ ಕೃಷ್ಣಾಯಾಂ ಚತುರ್ದಶ್ಯಾಂ ಸುರೇಶ್ವರ!|
ಅಹಂ ವತ್ಸ್ಯಾಮಿ ಭೂಪೃಷ್ಠೇ ರಾತ್ರೌ, ನೈವ ದಿವಾ ಕಲೌ || (ನಾಗರಖಂಡ)

ಎಂಬ ವಚನಾನುಸಾರ ಮಾಘ ಕೃಷ್ಣ ಚತುರ್ದಶಿಯು ಮಹಾಶಿವರಾತ್ರಿ ಎಂದು ಪರಿಗಣಿತವಾಗಿದೆ. ಇನ್ನು ಕೆಲವು ಕಡೆ ʻʻಫಾಲ್ಗುನಸ್ಯ ಚತುರ್ದಶ್ಯಾಂ ಕೃಷ್ಣಪಕ್ಷೇ ಸಮಾಹಿತಾಃ” (ಹೇಮಾದ್ರಿ ತೀರ್ಥಖಂಡ) ಎಂಬುದಾಗಿ ಫಾಲ್ಗುಣ ಮಾಸವನ್ನು ಸ್ವೀಕರಿಸಲಾಗುತ್ತದೆ. ಏನೇ ಆದರೂ ಚತುರ್ದಶಿಯು ಶಿವದೇವತಾತ್ಮಕವಾದ ತಿಥಿಯಾಗಿದೆ.

ತಿಥಿಯ ನಿರ್ಣಯ ಹೇಗೆ?
೧. “ಸರ್ವಾಪಿ ಶಿವರಾತ್ರಿಃ ಪ್ರದೋಷವ್ಯಾಪಿನ್ಯೇವ” (ನಿರ್ಣಯಾಮೃತ) “ಸೂರ್ಯಾಸ್ತದ ಅನಂತರ ಎರಡು ಘಂಟೆಯ ಕಾಲವೇ ಪ್ರದೋಷಕಾಲ. ಈ ಸಮಯದಲ್ಲಿ ಚತುರ್ದಶೀ ತಿಥಿಯು ಇರಬೇಕು.
೨. “ಪ್ರದೋಷನಿಶೀಥೋಭಯವ್ಯಾಪ್ತಿಃ ಇತಿ ಮಾಧವಃ ʼʼಪ್ರದೋಷ ಮತ್ತು ರಾತ್ರಿಯ ಎಂಟನೆ ಮುಹೂರ್ತದವರೆಗೆ ಚತುರ್ದಶೀ ಇರಬೇಕು.
೩. ಎರಡು ರಾತ್ರಿಯೂ ವ್ಯಾಪ್ತವಾಗಿದ್ದರೆ ಮಾರನೇ ದಿನವನ್ನೇ ಪರಿಗಣಿಸಬೇಕು.
೪. ಎರಡೂ ದಿನಗಳಲ್ಲಿಯೂ ತಿಥಿಯು ರಾತ್ರಿವ್ಯಾಪಿನಿಯಲ್ಲದಿದ್ದರೆ ಮಾರನೇ ದಿನವನ್ನೇ ಬಳಸಬೇಕು (ಹೇಮಾದ್ರಿ ಮತ್ತು ಕೌಸ್ತುಭ).
೫. ತ್ರಯೋದಶಿವಿದ್ಧವಾದ ಚತುರ್ದಶಿಯೇ ಶ್ರೇಷ್ಠ ಎಂಬುದಾಗಿ ಸ್ಕಂದಪುರಾಣ ಸಾರಿದೆ. ಈ ವ್ರತವು ಭಾನುವಾರ ಮತ್ತು ಮಂಗಳವಾರ ಹಾಗೂ ಶಿವ ಯೋಗದಿಂದ ಕೂಡಿದ್ದರೆ ಅತ್ಯಂತ ಶ್ರೇಷ್ಠ ಎಂಬುದಾಗಿ ತಿಳಿಯಬೇಕು.

ಶಿವನ ಸಂಖ್ಯೆ ಹನ್ನೊಂದು. ಚೈತ್ರಾದಿ ಮಾಸದಿಂದ ಮಾಘಮಾಸವು ಹನ್ನೊಂದನೇ ಮಾಸವಾಗಿದೆ. ಹಾಗಾಗಿ ಈ ಮಾಸವನ್ನು ʻʻಮಹಾಶಿವರಾತ್ರಿʼʼ ಎನ್ನಲಾಗಿದೆ. ʻʻಸಾಧಕರ ಅಂತರರಂಗದಲ್ಲಿ ಯಾವಾಗ ವಿಶೇಷವಾಗಿ ಶಿವನ ಸಾಕ್ಷಾತ್ಕಾರ ಆಗುತ್ತದೆಯೋ ಆ ಕಾಲವನ್ನೇ ಆಚರಣೆಗೆ ಬಳಸಬೇಕು” ಎಂಬುದು ಶ್ರೀರಂಗಮಹಾಗುರುಗಳ ಅಂತರಂಗವಾಗಿತ್ತು.

maha shivaratri 2023

ಉಪವಾಸ ಹೇಗೆ?

ಉಪವಾಸವು ಮಹಾಶಿವರಾತ್ರಿ ವ್ರತದಲ್ಲಿ ಬಹುಮುಖ್ಯವಾದ ಅಂಗ. ಆಹಾರದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದೇ ಉಪವಾಸ ಎಂಬರ್ಥವನ್ನು ಇಂದು ಎಲ್ಲಾ ಕಡೆ ಕಾಣುತ್ತೇವೆ. ಆದರೆ ಶ್ರೀರಂಗಮಹಾಗುರುಗಳು ಇದನ್ನು ವಿಶೇಷವಾಗಿ ವ್ಯಾಖ್ಯಾನಿಸುತ್ತಿದ್ದರು. “ಉಪ-ಸಮೀಪೇ, ವಾಸ-ಇರುವುದು. ಅಂದರೆ ಭಗವಂತನ ಬಳಿ ಮನಸ್ಸನ್ನು ಸದಾ ಇರಿಸುವುದೇ ಉಪವಾಸವಪ್ಪ” ಎಂದು. ಉಪವಾಸಕ್ಕೆ ನಿಜವಾದ ಅರ್ಥ ಇದುವೇ . ಇಂತಹ ಸ್ಥಿತಿಗೆ ಆಹಾರವನ್ನು ಬಳಸದೇ ಇರುವುದೂ ಕಾರಣ ಎಂಬರ್ಥದಲ್ಲಿ ಉಪವಾಸ ಪದದ ಬಳಕೆ ಉಚಿತವಾಗುವುದು.

“ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ”(ಗೀತಾ೨.೫೯) ಎಂಬ ಗೀತಾಚಾರ್ಯನ ಮಾತಿನಂತೆ ಆಹಾರವನ್ನು ಬಳಸದೇ ಇರುವುದು ವಿಷಯಲಾಲಸೆಯನ್ನು ದೂರಮಾಡುವುದು. ಆಗ ಇಂದ್ರಿಯನಿಗ್ರಹ ಮತ್ತು ಮನೋನಿಗ್ರಹ ಸುಲಭ. ನಿಗ್ರಹವೇ ಇಲ್ಲಿ ಮುಖ್ಯ ಉದ್ದೇಶವೇ ಹೊರತು ಕೇವಲ ಆಹಾರವನ್ನು ಬಳಸದಿರುವುದು ಎಂದೂ ಅಲ್ಲ. ಮತ್ತು ನಿಗ್ರಹವುಳ್ಳವನಿಗೆ ಹಸಿವು ಬಾಯಾರಿಕೆಗಳ ಪರಿವೆಯೇ ಇರದು. ಇಂತಹ ಕಂಡೀಶನ್ನು ಏನುಂಟು ಅದನ್ನೇ ಉಪವಾಸ ಎಂದು ಮಹರ್ಷಿಗಳು ಕರೆದಿದ್ದಾರೆ.

ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗು ಅಶಕ್ತರಾದವರು ಭಗವಂತನ ಪೂಜೆಗೆ ತೊಡಕು ಉಂಟಾಗದ ರೀತಿಯಲ್ಲಿ ಆಹಾರವನ್ನು ಬಳಸಿದರೆ ತಪ್ಪಲ್ಲ ಎಂದು ಶಾಸ್ತ್ರಗಳು ವಿಧಿಸಿವೆ. “ಉಪೋಷಿತೈಃ ಪೂಜಿತಃ ಸನ್ ನರಕಾತ್ ತಾರಯೇತ್ ತಥಾ”(ಗರುಡ) –ಈ ಉಪವಾಸವು ಎಲ್ಲಾ ಪಾಪಗಳನ್ನು ಪರಿಹರಿಸಿ ನಮ್ಮನ್ನು ಉದ್ಧಾರ ಮಾಡುವ ಉತ್ತಮವದ ವ್ರತಾಂಗವಾಗಿದೆ.

ಜಾಗರಣ ಎಂದರೇನು?
ಜಾಗರಣವು ಶಿವರಾತ್ರಿಯ ಇನ್ನೊಂದು ಮುಖ್ಯವಾದ ಅಂಗ. ಜಾಗರಣ ಎಂದರೆ ಎಚ್ಚರವಾಗಿರುವುದು. “ತಸ್ಯಾಂ ಜಾಗರಣಾದ್ರುದ್ರಃ ಪೂಜಿತೋ ಭುಕ್ತಿಮುಕ್ತಿದಃ” (ಗರುಡ) ಈ ದಿನ ಮಾಡಿದ ಜಾಗರಣವು ಇಹದಲ್ಲಿ ಭೋಗಕ್ಕೆ ಬೇಕಾದ ಸಂಪತ್ತನ್ನೂ, ಮತ್ತು ಪರದ ಭೋಗಕ್ಕೆ ಬೇಕಾದ ವೈರಾಗ್ಯವನ್ನೂ ಕೊಡುವುದಾಗಿದೆ. ಆದ್ದರಿಂದ ಈ ದಿನ ಮಾಡುವ ಜಾಗರಣಕ್ಕೆ ಅಷ್ಟೊಂದು ವಿಶೇಷತೆ ಇದೆ. ಹಾಗಾದರೆ ಜಾಗರಣೆ ಎಂದರೆ ಕೇವಲ ನಿದ್ದೆ ಮಾಡದೆ ಎಚ್ಚರವಾಗಿರುವುದು ಎಂಬ ಅರ್ಥವಲ್ಲ. ನಮ್ಮ ಇಂದ್ರಿಯ, ದೇಹ, ಮನಸ್ಸು ಇವುಗಳನ್ನೆಲ್ಲಾ ಅತ್ಯಂತ ಪಟುವಾಗಿಸಿಕೊಂಡು ಅವುಗಳಿಂದ ಭಗವಂತನನ್ನು ಪೂಜಿಸಬೇಕು, ಸ್ತೋತ್ರಮಾಡಬೇಕು, ಧ್ಯಾನಿಸಬೇಕು ಎಂದರ್ಥ. ನಮ್ಮೆಲ್ಲಾ ಕರಣಕಳೆಬರಗಳನ್ನೆಲ್ಲವನ್ನೂ ಭಗವಂತನಿಗಾಗಿ ಮೀಸಲಿಡುವ ಪವಿತ್ರಕಾಲವೇ ಜಾಗರಣ. ಹೊರತು ಎಚ್ಚರವಾಗಿದ್ದುಕೊಂಡು ಇನ್ನಾವುದೋ ಬಹಿರ್ಮುಖವಾದ ವ್ಯಾಪಾರದಲ್ಲೋ, ಮೋಜು ಮಸ್ತಿನಲ್ಲೋ ಕಾಲಹರಣ ಮಾಡುವುದು ಜಾಗರಣ ಖಂಡಿತ ಆಗಲಾರದು. ಇದು ಭಗವಂತನಿಗೆ ಮಾಡುವ ಅಪಚಾರ. ಸ್ತ್ರೀಯರು ಪುರುಷರು ಎಲ್ಲಾ ಜಾತಿಜನಾಂಗದವರೂ ಎಲ್ಲರೂ ಈ ಜಾಗರಣವನ್ನು ಮಾಡಬಹುದು. ಇಲ್ಲಿ ಒಂದನ್ನು ಮಾತ್ರ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ವ್ರತ ನಿಯಮಗಳೆಲ್ಲವೂ ಯಾರು ಭಗವಂತನ ಮಡಿಲನ್ನು ಸೇರಿ ಈ ಸಂಸಾರಬಂಧನದಿಂದ ಮುಕ್ತಿ ಪಡೆಯಬೇಕು ಎಂದು ಅಪೇಕ್ಷಿಸುತ್ತಾರೋ ಅಂತಹವರಿಗೆ ಮಾತ್ರ ಎಂದು.

ಶಿವರಾತ್ರಿಯ ಪೂಜಾ ವಿಧಾನ

ಶಿವರಾತ್ರಿಯ ದಿನ ಇಡೀ ರಾತ್ರಿ ಪೂಜೆಯನ್ನು ಮಾಡಬೇಕು. ನಾಲ್ಕೂ ಯಾಮಗಳೂ ಪೂಜಾ ಯೋಗ್ಯವಾದ ಕಾಲವಾಗಿವೆ. ಶಿವಲಿಂಗ ಅಥವಾ ಕಲಶದಲ್ಲಿ ಶಿವನನ್ನು ಆವಾಹಿಸಿ ಷೋಡಶೋಪಚಾರಗಳಿಂದ ಪೂಜಿಸಬೇಕು. “ಅಭಿಷೇಕಪ್ರಿಯಃ ಶಿವಃ” ಎಂಬಂತೆ ಅಭಿಷೇಕವು ಶಿವನಿಗೆ ಅತ್ಯಂತ ಶ್ರೇಷ್ಠ. ಹಾಗಾಗಿ ಮೊದಲನೆಯ ಯಾಮದಲ್ಲಿ ಹಾಲಿನಿಂದ, ಎರಡನೆ ಯಾಮದಲ್ಲಿ ಮೊಸರಿನಿಂದ, ಮೂರನೆ ಯಾಮದಲ್ಲಿ ತುಪ್ಪದಿಂದ ಮತ್ತು ನಾಲ್ಕನೆ ಯಾಮದಲ್ಲಿ ಜೇನುತುಪ್ಪದಿಂದ ಅಭಿಷೇಕ ಮಾಡಬೇಕು.

ಯಜುರ್ವೇದದಲ್ಲಿ ಬರುವ ರುದ್ರಾನುವಾಕ ಮಂತ್ರವನ್ನು ಅಭಿಷೇಕದ ಜೊತೆ ಪಠಿಸಬೇಕು. ಪಂಚಾಮೃತ, ಗಂಧ, ಕುಂಕುಮ, ಕರ್ಪೂರ, ತೀರ್ಥ, ಸುವರ್ಣತೀರ್ಥಗಳಿಂದ ಶಿವನಿಗೆ ಅಭಿಷೇಕ ಮಾಡಬೇಕು. ಎಕ್ಕೆ, ಕರವೀರ, ಬಿಲ್ವ ಬಕುಲ ಇವು ಶಂಕರನಿಗೆ ಪ್ರಿಯಕರ. ಇವುಗಳಲ್ಲೂ ಬಿಲ್ವಪತ್ರೆ ಅತ್ಯಂತ ಶ್ರೇಷ್ಠವಾಗಿದೆ. ಮೂರು ದಳಗಳು ತ್ರಿಮೂರ್ತಿಗಳ ಪ್ರತಿರೂಪ. “ಇದರ ದರ್ಶನ, ಸ್ಪರ್ಶ ಮತ್ತು ಸಮರ್ಪಣೆಗಳು ಶಿವಸ್ಥಾನಕ್ಕೆ ಏರಿಸಬಲ್ಲವು ಎಂಬುದನ್ನು ಶ್ರೀರಂಗಮಹಾಗುರುಗಳು ಪ್ರಯೋಗದೊಂದಿಗೆ ಪಾಠ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಲಿಂಗಾಷ್ಟಕ, ಬಿಲ್ವಾಷ್ಟಕ ಮೊದಲಾದ ಸ್ತೋತ್ರಗಳಿಂದ ಶಿವನನ್ನು ಸ್ತುತಿ ಮಾಡಬೇಕು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಶಿವ ಅಷ್ಟೋತ್ತರ ಅಥವಾ ಸಹಸ್ರನಾಮಗಳಿಂದ ಅರ್ಚನೆ, ಶಿವಕಥಾಶ್ರವಣ, ಭಜನ, ಶಿವನಾಮಸಂಕೀರ್ತನ, ಹೀಗೆ ಶಿವಮಯವಾಗಿ ಜಾಗರೂಕರಾಗಿ ರಾತ್ರಿಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಮರುದಿನ ಬೆಳಿಗ್ಗೆ ಪಾರಣೆ (ವ್ರತಾಂತಭೋಜನ) ಮಾಡಿ ಶಿವರಾತ್ರಿವ್ರತವನ್ನು ಪೂರ್ಣಗೊಳಿಸಬೇಕು.

Maha Shivaratri 2023

ಜಿಜ್ಞಾಸಾಪರಿಹಾರ

ಶಿವನು ತಮಸ್ಸಿಗೆ ಅಧಿದೇವತೆ, ಸಂಹಾರಕ ಅಂದರೆ ಕೊಲ್ಲುವವನು. ಹೀಗಿದ್ದೂ ಇಂತಹ ದೇವರನ್ನು ಪೂಜಿಸುವುದು ಮೂರ್ಖತನವಲ್ಲವೇ? ಇಂತಹ ದೇವರ ಪೂಜೆಯಿಂದ ಫಲವಾದರೂ ಏನು? ಮತ್ತು ಹಿಂದೆ ನೆನೆಪಿಸಿದ ಕಥೆಯ ತಾತ್ತ್ವಿಕವಾದ ಹಿನ್ನೆಲೆ ಏನು? ಎಂಬ ಮೊದಲಾದ ಪ್ರಶ್ನೆಗಳು ಓದುಗರ ಮನಸ್ಸಿನಲ್ಲಿ ಮೂಡುವುದು ಸಹಜ. ಈ ಸೃಷ್ಟಿಯಲ್ಲಿ ಸತ್ತ್ವ, ರಜಸ್ಸು ಮತ್ತು ತಮಸ್ಸು ಈ ಮೂರೂ ಗುಣಗಳು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಸಾಮರಸ್ಯ ಇರಲು ಸಾಧ್ಯ.

ಒಬ್ಬ ಮನುಷ್ಯ ದಿನದ ಇಪ್ಪತ್ತನಾಲ್ಕೂ ಗಂಟೆಗಳ ಕಾಲವೂ ಅವಿಶ್ರಾಂತವಾಗಿ ಕೆಲಸದಲ್ಲಿ ನಿರತನಾದರೆ ಆರೋಗ್ಯ ಕೆಡುವುದಿಲ್ಲವೇ? ಕಾಲಕಾಲಕ್ಕೆ ನಿದ್ದೆಯನ್ನು ಮಾಡಿ ಕೆಲಸವನ್ನು ಮಾಡಿದರೆ ಆರೋಗ್ಯವಾಗಿ ಬದುಕಬಹುದು. ಹಾಗೆಯೇ ಜೀವಿಗಳು ಕರ್ಮಫಲಗಳನ್ನು ಅನುಭವಿಸಿ ಬಳಲಿದಾಗ ವಿಶ್ರಾಂತಿ ಪಡೆಯಲು ಅವನು “ಮರಣ ರೂಪವಾದ ವಿಶ್ರಾಂತಿಯನ್ನು ಕರುಣಿಸುವ ಕರುಣಾಮಯನಾದ ದೇವನೇ ಆಗಿದ್ದಾನೆ. ಜಾಗೃತ್ತಿಗೆ ಹೇಗೆ ರಜಸ್ಸು ಕಾರಣವೋ. ಸಮಾಧಾನಕ್ಕೆ ಸತ್ತ್ವಗುಣ ಕಾರಣ. ನಿದ್ದೆಗೆ ತಮಸ್ಸು ಕಾರಣ. ಶಿವನ ಅನುಗ್ರಹದಿಂದಲೇ ನಾವು ನಿತ್ಯವೂ ಸುಖವಾಗಿ ನಿದ್ರಿಸುತ್ತಿದ್ದೇವೆ.ಯಾವುದೇ ಗುಣವು ವ್ಯತ್ಯಾಸವಾದರೂ ಸೃಷ್ಟಿಯಲ್ಲಿ ಏರುಪೇರು ಸಹಜ. ಒಬ್ಬ ಸಾಧಕನು ಈ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಈ ಮೂರೂ ಗುಣಗಳ ಅಧಿಷ್ಠಾನ ದೇವತೆಗಳ ಪ್ರಸಾದ ಅತಿಮುಖ್ಯ.

ನಮ್ಮ ಜೀವನಕ್ಕೆ ಅಡ್ಡಿಪಡಿಸುವ ರಾಕ್ಷಸೀಸ್ವಭಾವನ್ನು ನಾಶಪಡಿಸುವುದು ಸಂಹಾರಕಾರ್ಯವಾದರೂ ಇದರಿಂದ ಜೀವಸಂಕುಲಕ್ಕೆ ಒಳಿತೇ. ಇಂತಹ ದೇವರನ್ನು ಪೂಜಿಸುವುದರಿಂದ ಜೀವಕ್ಕೆ, ಜೀವನಕ್ಕೆ ಹೊಸ ಉತ್ಸಾಹವನ್ನು ಕೊಡುತ್ತದೆ. ನಮ್ಮ ಮಹರ್ಷಿಗಳ ಯಾವ ಉದ್ಘೋಷವಿದೆಯೋ ಪುರುಷಾರ್ಥಮಯ ಬಾಳಾಟ ಇದೇ ಮಾನವನ ಚರಮ ಮತ್ತು ಪರಮ ಲಕ್ಷ್ಯ. ಇದನ್ನು ಪಡೆಯಲು ಶಿವರಾತ್ರಿಮಹೋತ್ಸವವು ಸಾಧನವಾಗಲಿ ಎಂದು ಶಂಕರನನ್ನು ಪ್ರಾಥಿಸಿ ಮಂಗಳಮಾಡುತ್ತೇನೆ.

– ಲೇಖಕರು ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Prerane : ಧ್ಯಾನದಿಂದ ಮಾತ್ರ ಮೃತ್ಯು ಭಯ ದಾಟಲು ಸಾಧ್ಯ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bengaluru News: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ: ವಿ. ಅಪ್ಪಣ್ಣ ಆಚಾರ್ಯ

Bengaluru News: ಹರಿಕಥಾಮೃತಸಾರವನ್ನು ರಚನೆ ಮಾಡಿದಂತಹ ಶ್ರೀ ಜಗನ್ನಾಥದಾಸರ ಚಿಂತನೆ ಬಹಳ ವಿಶಾಲವಾದದ್ದು‌.ಅವರ ಕಾರುಣ್ಯ ಮಹತ್ವದ್ದು. ಅವರ ದೂರ ದೃಷ್ಟಿ ಸಮಾಜಮುಖಿಯಾಗಿತ್ತು. ಆದ ಕಾರಣವೇ ಹರಿಕಥಾಮೃತಸಾರ ಕೃತಿಯು ಇಂದಿಗೂ ನಿತ್ಯ ನೂತನವಾಗಿದೆ ಎಂದು ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಗೌರವ ನಿರ್ದೇಶಕ ವಿದ್ವಾನ್ ಅಪ್ಪಣ್ಣಾಚಾರ್ಯ ತಿಳಿಸಿದ್ದಾರೆ.

VISTARANEWS.COM


on

Sri Vedavyasa Jayanti programme at Bengaluru
Koo

ಬೆಂಗಳೂರು: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮವಾಗುತ್ತದೆ ಎಂದು ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಗೌರವ ನಿರ್ದೇಶಕ ವಿದ್ವಾನ್ ಅಪ್ಪಣ್ಣಾಚಾರ್ಯ (Bengaluru News) ಹೇಳಿದರು‌.

ಬೆಂಗಳೂರಿನ ಗಿರಿನಗರದ ಭಂಡಾರಕೇರಿ ಮಠದಲ್ಲಿ ಗುರುವಾರ ಭಾಗವತಾಶ್ರಮ ಪ್ರತಿಷ್ಠಾನ ಮತ್ತು ಲೋಕ ಸಂಸ್ಕೃತಿ ಕಲಾವಿದ್ಯಾ ವಿಕಾಸ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಗುರು ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಮಹೋತ್ಸವ, ಶ್ರೀ ಮಾಧ್ವ ರಾದ್ಧಾತ ಸಂವರ್ಧಕ ಸಭಾದ 81ನೇ ಅಧಿವೇಶನ, ಶ್ರೀ ವೇದವ್ಯಾಸ ಜಯಂತಿ ಸರಣಿಯ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

ಹರಿದಾಸ ಸಾಹಿತ್ಯದಲ್ಲಿ ಅನುಭವ ಉದ್ಗಾರಗಳ ಚಿಂತನೆ ವಿಷಯ ಕುರಿತು ಪ್ರೌಢ ಉಪನ್ಯಾಸ ನೀಡಿದ ಅವರು, ಹರಿಕಥಾಮೃತಸಾರವನ್ನು ರಚನೆ ಮಾಡಿದಂತಹ ಶ್ರೀ ಜಗನ್ನಾಥದಾಸರ ಚಿಂತನೆ ಬಹಳ ವಿಶಾಲವಾದದ್ದು‌. ಅವರ ಕಾರುಣ್ಯ ಮಹತ್ವದ್ದು. ಅವರ ದೂರ ದೃಷ್ಟಿ ಸಮಾಜಮುಖಿಯಾಗಿತ್ತು. ಆದ ಕಾರಣವೇ ಹರಿಕಥಾಮೃತಸಾರ ಕೃತಿಯು ಇಂದಿಗೂ ನಿತ್ಯ ನೂತನವಾಗಿದೆ ಎಂದು ಹೇಳಿದರು.

ಹರಿಕಥಾಮೃತಸಾರವನ್ನು ಓದಿ ನಾವು ವಿಶಾಲರಾಗಬೇಕು. ಆ ಮೂಲಕ ದೊಡ್ಡವರಾಗಬೇಕು. ಬದುಕನ್ನು ಹಸನ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಅವರು ಬ್ಯಾಗವಟ್ಟಿಯ ನರಸಿಂಹ ದಾಸ ಕುಲಕರ್ಣಿ ಅವರು ನಡೆಸಿದ ಸಮಾಜಮುಖಿ ಚಟುವಟಿಕೆಗಳನ್ನು ವಿವರಿಸಿದರು.

ಮಾನವಿ ಜಗನ್ನಾಥದಾಸರ ಮನೆಯೇ ಮಂದಿರವಾದ ಕಥೆಯನ್ನು ಸುಂದರವಾಗಿ ನಿರೂಪಿಸಿದರು. ಹರಿಕಥಾಮೃತಸಾರ ರಚನೆ ಆದಂತಹ ಸಂದರ್ಭ, ಹಿರಿಯರು ಅವರ ಮೇಲೆ ಮಾಡಿದಂತಹ ಕೃಪೆ ಮತ್ತು ಜಗನ್ನಾಥದಾಸರ ಕಾರುಣ್ಯಗಳನ್ನು ಸಮರ್ಥವಾಗಿ ಅಪ್ಪಣ್ಣಾಚಾರ್ಯರು ವಿವರಿಸಿದರು.

ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಇದನ್ನೂ ಓದಿ: Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

ಸಂಜೆ ಮಹಾಭಾರತ ಕುರಿತು ವಿವಾದ-ಸಂವಾದ ಕಾರ್ಯಕ್ರಮ ನಡೆಯಿತು. ವಿದ್ವಾನ್ ತಿರುಮಲ ಕುಲಕರ್ಣಿ ಮತ್ತು ವೆಂಕಟೇಶ ಕುಲಕರ್ಣಿ ಅವರು ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.

Continue Reading

ಕರ್ನಾಟಕ

Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

Udupi News: ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಸೇರಿದಂತೆ ಇಬ್ಬರು ವಿದ್ವಾಂಸರು ಆಯ್ಕೆಯಾಗಿದ್ದಾರೆ. ವೇದಪೀಠ ಪ್ರಶಸ್ತಿಗೆ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಆಯ್ಕೆಯಾಗಿದ್ದು, ಹಿರಿಯ ಅಗ್ನಿಹೋತ್ರಿ, ಪ್ರಾಚಾರ್ಯ ದಾಮೋದರಾಚಾರ್ಯರಿಗೆ 1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಹಾಗೂ ಯುವ ವಿದ್ವಾಂಸರಿಗೆ ಮಠ ನೀಡುವ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ, ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ವಾನ್ ಸತ್ಯಬೋಧಾಚಾರ್ಯ ಹೊನ್ನಾಳಿ ಆಯ್ಕೆ ಗೊಂಡಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ ಎಂದು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

VISTARANEWS.COM


on

Udupi
ಉಡುಪಿ ಶ್ರೀ ಭಂಡಾರಕೇರಿ ಮಠದ ಪ್ರಶಸ್ತಿಗೆ ಭಾಜನರಾದ ವಿದ್ವಾನ್ ದಾಮೋದರಾಚಾರ್ಯ, ವಿದ್ವಾನ್ ಮಧ್ವೇಶ ನಡಿಲ್ಲಾಯ, ವಿದ್ವಾನ್ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ.
Koo

ಉಡುಪಿ: ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಸೇರಿದಂತೆ ಇಬ್ಬರು ವಿದ್ವಾಂಸರು ಆಯ್ಕೆಯಾಗಿದ್ದಾರೆ. ವೇದಪೀಠ ಪ್ರಶಸ್ತಿಗೆ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಆಯ್ಕೆಯಾಗಿದ್ದು, ಹಿರಿಯ ಅಗ್ನಿಹೋತ್ರಿ, ಪ್ರಾಚಾರ್ಯ ದಾಮೋದರಾಚಾರ್ಯರಿಗೆ 1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ (Udupi News) ತಿಳಿಸಿದ್ದಾರೆ.

ಯುವ ವಿದ್ವಾಂಸರಿಗೆ ಮಠ ನೀಡುವ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ, ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ವಾನ್ ಸತ್ಯಬೋಧಾಚಾರ್ಯ ಹೊನ್ನಾಳಿ ಆಯ್ಕೆ ಗೊಂಡಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ.

ಇದನ್ನೂ ಓದಿ: Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

ಬೆಂಗಳೂರಿನ ಗಿರಿನಗರದ ಭಾಗವತಾಶ್ರಮದಲ್ಲಿ ಮೇ 20ರಂದು ಆಯೋಜಿಸಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಅಭಿನಂದನೆ, ಶ್ರೀ ವಿದ್ಯೇಶತೀರ್ಥರ 70ನೇ ವರ್ಧಂತಿ, ವಿದ್ವಾಂಸರಿಂದ ವಾಕ್ಯಾರ್ಥ ಗೋಷ್ಠಿ, ಶೋಭಾಯಾತ್ರೆ, ನರಸಿಂಹ ಮಂತ್ರಹೋಮವೂ ನೆರವೇರಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಪ್ರಶಸ್ತಿಗೆ ಭಾಜನರಾದವರ ಪರಿಚಯ ಹೀಗಿದೆ:

ವಿದ್ವಾನ್ ದಾಮೋದರಾಚಾರ್ಯ

ಪ್ರತಿ ದಿನವೂ ಶಾಸ್ತ್ರ ವಿದ್ಯಾ ಅಧ್ಯಯನ, ಅಧ್ಯಾಪನ, ಅಗ್ನಿಹೋತ್ರ ನಡೆಸುತ್ತಾ, ಸನಾತನ ಭಾರತೀಯ ಪರಂಪರೆಯನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿಯನ್ನು ಸಂಭ್ರಮದಿಂದಲೇ ನಿರ್ವಹಿಸುತ್ತಿರುವವರು ಈರೋಡಿನ ವಿದ್ವಾನ್ ದಾಮೋದರಾಚಾರ್ಯ. ವಿದ್ವಾನ್ ಪದ್ಮನಾಭಾಚಾರ್ಯ-ಜಾನಕೀಬಾಯಿ ಅವರ ಪುತ್ರರಾದ ಇವರು ತಂದೆಯಿಂದಲೇ ವ್ಯಾಕರಣ, ವೇದ, ಶಾಸ್ತ್ರಗಳನ್ನು ಕಲಿತರು. ಪವಿತ್ರ ಕ್ಷೇತ್ರ ರಂಗದ ಬಳಿಯ ಸಿರುಗಮಣಿ ಎಂಬ ಗ್ರಾಮದಲ್ಲಿ ತಂದೆಯವರೇ ಪ್ರಾರಂಭಿಸಿದ ವೇದರಕ್ಷಣ ವೇದವ್ಯಾಸ ಗುರುಕುಲದಲ್ಲಿ 12 ವರ್ಷ ವೇದ ಅಧ್ಯಯನ ಮಾಡಿದವರು. ನಂತರ ಕಾಂಚೀಪುರದ ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ವೇದಾಂತ, ಘನ, ಐತರೇಯ ಬ್ರಾಹ್ಮಣ, ಗೃಹ್ಯಸೂತ್ರಗಳ ಸಹಿತ ವೇದಾಧ್ಯಯನ ನಡೆಸಿದರು.

ನಂತರ ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ಹಿರಿಯ ವಿದ್ವಾಂಸ ಮಾಹುಲಿ ಗೋಪಾಲಾಚಾರ್ಯ ಮತ್ತು ವಿದ್ಯಾಸಿಂಹಾಚಾರ್ಯರ ಶಿಷ್ಯತ್ವ ಪಡೆದು 8 ವರ್ಷಗಳ ಕಾಲ ದ್ವೈತ ವೇದಾಂತ ಅಧ್ಯಯನ ನಡೆಸಿದರು. ಬಹು ವಿಶೇಷ ಎಂದರೆ ಇವರು ನಿತ್ಯ ಅಗ್ನಿಹೋತ್ರಿಗಳು, ಸೋಮಯಾಜಿಗಳು. ವಾಜಪೇಯ ಮಹಾಯಾಗ ಮಾಡಲು ಸಿದ್ಧರಾಗಿರುವ ಸಿದ್ಧಪುರುಷರು. ತಮ್ಮ ತಂದೆಯರು ಸ್ಥಾಪಿಸಿದ ಗುರುಕುಲವನ್ನು 2000ರಿಂದ ಈರೋಡಿನಲ್ಲಿ ಮುನ್ನಡೆಸುತ್ತಿರುವುದು ಬಹು ವಿಶೇಷ. ಚೆನ್ನೈನಲ್ಲಿರುವ ಶ್ರೀ ಕಾಂಚಿಪುರಂ ವೇದ ರಕ್ಷಣಾ ನಿಧಿ ಟ್ರಸ್ಟ್ ಸಹಾಯ ಪಡೆದು ಗುರುಕುಲವನ್ನು ಸುವ್ಯವಸ್ಥಿತ ವಿದ್ಯಾಕೇಂದ್ರ ಮಾಡಿರುವುದು ಹೆಮ್ಮೆಯ ವಿಚಾರ. ಪ್ರಸ್ತುತ ಎಂಟನೇ ತಂಡದ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ದಾಮೋದರಾಚಾರ್ಯ ನಾಡಿನ ಹಿರಿಮೆ. ಅಪರೂಪದಲ್ಲಿ ಅನುರೂಪ ವ್ಯಕ್ತಿತ್ವ ಹೊಂದಿದವರು.

ಇದನ್ನೂ ಓದಿ: BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

ವಿದ್ವಾನ್ ಮಧ್ವೇಶ ನಡಿಲ್ಲಾಯ

ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥರ ಶಿಷ್ಯರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿದ ಈ ಯುವ ಪ್ರತಿಭೆ, ವಿದ್ಯಾರ್ಥಿ ದಿಸೆಯಲ್ಲಿಯೇ ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 7 ಚಿನ್ನದ ಪದಕ, ತಿರುಪತಿಯ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ 3 ಚಿನ್ನದ ಪದಕ, ರಾಜ್ಯ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 11 ಚಿನ್ನದ ಪದಕ ಪಡೆದ ಜ್ಞಾನ ಚೇತನ. 2021 ರಲ್ಲಿ ವಿವಿಧ ಮಾಧ್ವ ಪೀಠಾಧಿಪತಿಗಳ ಸಮ್ಮುಖ ಸಮಗ್ರ ಶ್ರೀಮನ್ ನ್ಯಾಯಸುಧಾ ಪರೀಕ್ಷೆ ನೀಡಿ ‘ಸುಧಾ ಪಂಡಿತ’ ಕೀರ್ತಿಗೆ ಭಾಜನರಾದವರು. ಸದ್ಯ ಬೆಂಗಳೂರಿನ ಪ್ರತಿಷ್ಠಿತ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಾಪಕರಾಗಿ ಮಧ್ವೇಶ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.

ವಿದ್ವಾನ್ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ ಅವರು ಶ್ರೀಧರಾಚಾರ್ಯ ಮತ್ತು ಧನ್ಯಾ ಅವರ ಪುತ್ರ. ದ್ವಿತೀಯ ಮಂತ್ರಾಲಯ ಹೊನ್ನಾಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸೇವೆ ಮಾಡಿ ವಿಶೇಷ ಅನುಗ್ರಹಿತರಾದ ಇವರು ಬೆಂಗಳೂರಿನ ಉತ್ತರಾದಿ ಮಠದ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ 14 ವರ್ಷ ಅಧ್ಯಯನ ಮಾಡಿದರು. 2012 ರಲ್ಲಿ ಧಾರವಾಡದಲ್ಲಿ ಸುಧಾ ಪರೀಕ್ಷೆ ನೀಡಿ ಸುಧಾ ಪಂಡಿತರೆಂಬ ಕೀರ್ತಿಗೆ ಭಾಜನರಾದವರು.

ಇದನ್ನೂ ಓದಿ: Head Coach: ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಮ್​ ಇಂಡಿಯಾದ ಸ್ಟಾರ್​ ಮಾಜಿ ಆಟಗಾರ

2015ರಲ್ಲಿ ಬೆಂಗಳೂರಿನಲ್ಲಿ ಸಮಗ್ರ ಶ್ರೀಮನ್ ನ್ಯಾಯ ಸುಧಾ ಎಂಬ ಕಠಿಣತಮ ಪರೀಕ್ಷೆ, 2017ರಲ್ಲಿ ಏಕಕಾಲದಲ್ಲಿ ವ್ಯಾಸತ್ರಯಗಳ ಪರೀಕ್ಷೆ ನೀಡಿದ ಪ್ರತಿಭಾ ಪುಂಜ. ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜನೆಗೊಂಡಿದ್ದ ವಿದ್ವತ್ ಸಭೆಯಲ್ಲಿ ಶ್ರೀ ಮನ್ ನ್ಯಾಯಸುಧಾಚಾರ್ಯ ಹಾಗೂ ವ್ಯಾಸತ್ರಯಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸಿದ ಯುವ ಚೇತನ. ತಿರುಪತಿಯಲ್ಲಿ ಖ್ಯಾತ ವಿದ್ವಾಂಸ ದೇವನಾಥಾಚಾರ್ಯರ ಬಳಿ ತರ್ಕ ಮತ್ತು ಮೀಮಾಂಸಾ ಶಾಸ್ತ್ರಗಳ ಅಧ್ಯಯನ ಮಾಡಿ, 2009- 2010ರಲ್ಲಿ ತೆನಾಲಿ ಪರೀಕ್ಷೆಯಲ್ಲೂ ಜಯಭೇರಿ ಬಾರಿಸಿದ ಜ್ಞಾನವಂತ. ವಯಸ್ಸು ಚಿಕ್ಕದಿದ್ದರೂ ಅಧ್ಯಯನ ಮತ್ತು ಅಧ್ಯಾಪನದಲ್ಲಿ ವಿಶೇಷ ಶ್ರದ್ಧೆ ಮತ್ತು ಆಸಕ್ತಿ ಹೊಂದಿದ್ದು, ಗುರುಸೇವೆಯಲ್ಲೇ ಪರಮ ಸುಖ ಕಾಣುವ ಸಾಧಕರಾಗಿರುವುದು ಗಮನಾರ್ಹ. ಪ್ರಸ್ತುತ ಉತ್ತರಾದಿ ಮಠದ ಸುಧಾ ಗ್ರಂಥ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅಂತಿಮ ಹಂತದ ಪರೀಕ್ಷೆಗಾಗಿ ಉನ್ನತ ಮಟ್ಟದ ತರಬೇತಿ ನೀಡುವ ಗುರುತರ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವುದು ವಿಶೇಷ.

Continue Reading

ಬೆಂಗಳೂರು

Bengaluru News: ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ಮಾನ್ಯತೆ ನೀಡಿ; ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ

Bengaluru News: ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವಕ್ಕೆ ಬುಧವಾರ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು. ಬಳಿಕ ಶ್ರೀಗಳು ಆಶೀರ್ವಚನ ನೀಡಿದರು.

VISTARANEWS.COM


on

Sri Vedavyasa Jayanti Madhva Raddhanta Samvardhak Sabha 81st session at Bengaluru
Koo

ಬೆಂಗಳೂರು: ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ನಗರದ (Bengaluru News) ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವಕ್ಕೆ ಬುಧವಾರ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ವ್ಯಾಸ ಮತ್ತು ದಾಸ ಸಾಹಿತ್ಯದಲ್ಲಿರುವ ವಿಶೇಷ ಜ್ಞಾನದ ಅರಿವು ಮೂಡಿದರೆ ಬದುಕು ಸಾರ್ಥಕವಾಗುತ್ತದೆ ಎಂದರು. ವ್ಯಾಸ ಸಾಹಿತ್ಯ ಪ್ರಖರ ಸೂರ್ಯನಂತೆ. ನಾವು ಅದರ ಪ್ರಭೆಯನ್ನು ನೇರವಾಗಿ ಪಡೆಯಲು ಅಸಾಧ್ಯ. ಆದರೆ ಅದೇ ಕಿರಣ ಚಂದ್ರಮಂಡಲದ ಮೇಲೆ ಬಿದ್ದು, (ದಾಸ ಸಾಹಿತ್ಯವಾಗಿ) ನಮಗೆ ಬಂದರೆ ಅದು ಸಂತೋಷ, ನೆಮ್ಮದಿ ಮತ್ತು ಸುಖವನ್ನು ನೀಡಬಲ್ಲದು. ಆದ ಕಾರಣ ಈ ಸಭಾದಲ್ಲಿ ದಾಸ ಸಾಹಿತ್ಯದ ಚಿಂತನ- ಮಂಥನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಗೌರವ ನಿರ್ದೇಶಕ ಅಪ್ಪಣ್ಣಾಚಾರ್ಯ, ಮಠದ ಹಿರಿಯ ಸ್ವಯಂಸೇವಕರಾದ ಗೋಪಾಲಕೃಷ್ಣ ಇತರರು ಇದ್ದರು. ಸಂಜೆ ವಾಲ್ಮೀಕಿ ರಾಮಾಯಣದ ವಿವಾದ-ಸಂವಾದದಲ್ಲಿ ವಿದ್ವಾಂಸರಾದ ಕೆ. ಕೃಷ್ಣರಾಜ ಭಟ್ ಮತ್ತು ಬಂಡಿ ಶ್ಯಾಮಾಚಾರ್ಯ ಪಾಲ್ಗೊಂಡಿದ್ದರು. ಮೇ 21ರವರೆಗೆ ನಿತ್ಯ ಶ್ರೀ ಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನೆರವೇರಲಿದೆ.

ಏನೇನು ಕಾರ್ಯಕ್ರಮ?

ಮೇ 16ರಂದು ಬೆಳಗ್ಗೆ 9ಕ್ಕೆ ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಗೌರವ ನಿರ್ದೇಶಕ ಅಪ್ಪಣ್ಣಾಚಾರ್ಯ ಅವರು ‘ ಹರಿದಾಸ ಸಾಹಿತ್ಯದಲ್ಲಿ ಅನುಭವ ಉದ್ಗಾರಗಳ ಚಿಂತನೆ’ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 5ಕ್ಕೆ ಪಂಡಿತರಾದ ತಿರುಮಲ ಕುಲಕರ್ಣಿ ಮತ್ತು ವೆಂಕಟೇಶ ಕುಲಕರ್ಣಿ ಅವರು ಮಹಾಭಾರತ- ವಾದ- ಸಂವಾದ- ನಡೆಸಿಕೊಡಲಿದ್ದಾರೆ.

ಮೇ 17ರಂದು ಬೆಳಗ್ಗೆ 9ರಿಂದ 12-ಸಂಜೆ 4ರಿಂದ 6ರವರೆಗೆ ವಾಕ್ಯಾರ್ಥ ಗೋಷ್ಠಿ ಸಂಪನ್ನಗೊಳ್ಳಲಿದೆ. ವಿದ್ವಾನ್ ಪಿ.ಎಸ್. ಶೇಷಗಿರಿ ಆಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾಂಸರಾದ ವೀರನಾರಾಯಣ ಪಾಂಡುರಂಗಿ, ಸತ್ತಿಗೇರಿ ವಾಸುದೇವ, ಕಟ್ಟಿ ನರಸಿಂಹ ಆಚಾರ್ಯ, ಪ್ರಹ್ಲಾದಾಚಾರ್ಯ ಜೋಷಿ, ಸುಧೀಂದ್ರಾಚಾರ್ಯ, ರಂಗನಾಥ ಗಣಾಚಾರಿ, ನಾಗರಾಜಾಚಾರ್ಯ, ಗುರುರಾಜ ಕಲ್ಕೂರ, ಶ್ರೀನಿವಾಸಮೂರ್ತಿ ಮತ್ತು ಮಾತರಿಶ್ವಾಚಾರ್ಯ ಭಾಗವಹಿಸಲಿದ್ದಾರೆ. ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಇದನ್ನೂ ಓದಿ: Job Alert: ಗುಡ್‌ನ್ಯೂಸ್‌: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಪಿಎಸ್‌ಸಿ; ಇಲ್ಲಿದೆ ಹೊಸ ವೇಳಾಪಟ್ಟಿ

ಮೇ 18ರಂದು ವರ್ಧಂತಿ ಮಹೋತ್ಸವ

ಮೇ 18ರಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರ 70ನೇ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11ಕ್ಕೆ ವಿವಿಧ ಹೋಮ, ಹರಿಕಥಾಮೃತ ಸಾರ ಪಾರಾಯಣ, ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ. ಎಚ್.ವಿ. ಸತ್ಯನಾರಾಯಣರಿಂದ ಉಪನ್ಯಾಸ (ವಾದಿರಾಜ ವಿರಚಿತ ವೈಕುಂಠ ವರ್ಣನೆ), ಸಂಜೆ ವಿವಿಧ ರಂಗದ ಗಣ್ಯರಿಗೆ ಸನ್ಮಾನವಿದೆ.

ಮೇ 19ರಂದು ಶ್ರೀ ವಿದ್ಯಾಮಾನ್ಯರ ಪುಣ್ಯಸ್ಮರಣೆ

ಉಡುಪಿ ಪಲಿಮಾರು- ಭಂಡಾರಕೇರಿ ಉಭಯ ಮಠದ ಪೀಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರ ಪುಣ್ಯಸ್ಮರಣೆ ಮೇ 19ರಂದು ನೆರವೇರಲಿದೆ. ಬೆಳಗ್ಗೆ 9ಕ್ಕೆ ಶ್ರೀ ವಿದ್ಯೇಶ ವಿಠಲಾಂಕಿತ ಕೃತಿಗಳ ಚಿಂತನ- ಮಂಥನ ನಡೆಯಲಿದ್ದು, ಹಲವು ವಿದ್ವಾಂಸರು ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ಶ್ರೀ ವಿದ್ಯೇಶತೀರ್ಥರಿಂದ ಅನುಗ್ರಹ ಸಂದೇಶವಿದೆ.

ಇದನ್ನೂ ಓದಿ: Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

ಮೇ 20ರಂದು ಶೋಭಾಯಾತ್ರೆ- ಪೇಜಾವರ ಶ್ರೀ ಸಾನ್ನಿಧ್ಯ

ಮೇ 20 ರಂದು ವೇದವ್ಯಾಸ ಜಯಂತಿ ಮತ್ತು ವಿದ್ಯಾಮಾನ್ಯರ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ 8ಕ್ಕೆ ಹೋಮ, 9ಕ್ಕೆ ವೇದ ಶಾಸ್ತ್ರ ವಿನೋದ, ಮಧ್ಯಾಹ್ನ 2ಕ್ಕೆ ವಸಂತ ಉತ್ಸವ, ಸಂಜೆ 5ಕ್ಕೆ ಶ್ರೀ ವಿದ್ಯಾಮಾನ್ಯರ ಭಾವಚಿತ್ರ ಶೋಭಾಯಾತ್ರೆ, ಸಂಜೆ 6ಕ್ಕೆ ಸಭಾ ಕಾರ್ಯಕ್ರಮವಿದೆ. ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ವಿದ್ವಾಂಸ ಡಾ. ಆನಂದತೀರ್ಥ ನಾಗಸಂಪಿಗೆ ಉಪನ್ಯಾಸ ನೀಡಲಿದ್ದಾರೆ. ನಂತರ ಮಠದ ವಾರ್ಷಿಕ ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ದೇಶ

Tirupati Temple: ತಿರುಪತಿಯ ಆಗಸ್ಟ್ ತಿಂಗಳ ಟಿಕೆಟ್ ವೇಳಾಪಟ್ಟಿ ಬಿಡುಗಡೆ: ಹೀಗೆ ಬುಕ್‌ ಮಾಡಿ

Tirupati Temple: ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

VISTARANEWS.COM


on

Tirupathi Temple
Koo

ತಿರುಪತಿ: ದೇಶದ ಪ್ರಸಿದ್ಧ ಯಾತ್ರಾ ಸ್ಥಳ ತಿರುಮಲ ತಿರುಪತಿ ದೇವಸ್ಥಾನ(Tirupati Temple)ಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ (TTD) ಬಿಡುಗಡೆ ಮಾಡಿದೆ. ಹೀಗಾಗಿ ಆಗಸ್ಟ್‌ನಲ್ಲಿ ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರು ಈ ಪಟ್ಟಿಯನ್ನು ಗಮನಿಸಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

ಶ್ರೀವಾರಿ ದೇವಸ್ಥಾನದಲ್ಲಿ ವಾರ್ಷಿಕ ಪವಿತ್ರೋತ್ಸವ ಆಗಸ್ಟ್ 15ರಿಂದ 17ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಸುವ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕರ ಸೇವೆ, ವಾರ್ಷಿಕ ಪವಿತ್ರೋತ್ಸವ ಸೇವಾ ಟಿಕೆಟ್‌ಗಳನ್ನು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮಾತ್ರವಲ್ಲ ತಿರುಮಲ ಶ್ರೀವಾರಿ ವರ್ಚುವಲ್ ಸೇವೆಗಳಿಗೆ ಸಂಬಂಧಿಸಿದ ಆಗಸ್ಟ್ ತಿಂಗಳ ಕೋಟಾ ಮತ್ತು ಅವುಗಳ ಸ್ಲಾಟ್‌ಗಳನ್ನು ಮೇ 21ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯ. ಜತೆಗೆ ಆಗಸ್ಟ್‌ನ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಚೇತನರು, ವೃದ್ಧರಿಗಾಗಿ ವಿಶೇಷ ಕೋಟಾ

ವೃದ್ಧರು, ವಿಶೇಷ ಚೇತನರು ಮತ್ತು ದೀರ್ಘಕಾಲದ ಕಾಯಿಲೆ ಇರುವವರಿಗೆ ನೀಡಲಾಗುವ ಆಗಸ್ಟ್‌ನ ಉಚಿತ ವಿಶೇಷ ದರ್ಶನ ಟಿಕೆಟ್‌ಗಳು ಮೇ 23ರಂದು ಮಧ್ಯಾಹ್ನ 3 ಗಂಟೆಯಿಂದ ಆನ್‌ಲೈನ್‌ನಲ್ಲಿ ಲಭಿಸಲಿದೆ. ಮೇ 24ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆಗಸ್ಟ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪ್ರಕಟಿಸಲಿದೆ. ಜತೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಆಗಸ್ಟ್ ರೂಮ್ ಕೋಟಾವನ್ನು ಮೇ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಟಿಕೆಟ್‌ ಬುಕ್‌ ಮಾಡುವ ವಿಧಾನ

  • ತಿರುಮಲ ತಿರುಪತಿ ದೇವಸ್ಥಾನಗಳ ದರ್ಶನ ಟಿಕೆಟ್ ಬುಕ್ ಮಾಡಲು, ಟಿಟಿಡಿಯ ಅಧಿಕೃತ ಆನ್‌ಲೈನ್ ಬುಕಿಂಗ್ ವೆಬ್‌ಸೈಟ್‌ https://ttdevasthanams.ap.gov.inಗೆ ಭೇಟಿ ನೀಡಿ.
  • ದರ್ಶನ ಪ್ರಕಾರವನ್ನು ಆಯ್ಕೆ ಮಾಡಿಕೊಂಡು ಮೊಬೈಲ್‌ ನಂಬರ್‌ ನೀಡಿ ಲಾಗಿನ್‌ ಆಗಿ.
  • ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ.
  • ಆಲ್‌ನೈಲ್‌ ಮೂಲಕ ಟಿಕೆಟ್‌ ಮೊತ್ತವನ್ನು ಪಾವತಿಸಿ.
  • ನಿಮ್ಮ ಟಿಕೆಟ್‌ ಬುಕ್‌ ಆಗಿರುವ ಬಗ್ಗೆ ಮಾಹಿತಿ ಎಸ್‌ಎಂಎಸ್‌ ಮೂಲಕ ನಿಮಗೆ ರವಾನೆಯಾಗುತ್ತದೆ.

ಇದನ್ನೂ ಓದಿ: Ayodhya: ಅಯೋಧ್ಯೆಯಲ್ಲಿ ಜನದಟ್ಟಣೆ ನಿಭಾಯಿಸುವ ಸಲಹೆ ನೀಡಿದ ತಿರುಪತಿಯ ಎಂಜಿನಿಯರ್‌ಗಳ ತಂಡ

Continue Reading
Advertisement
SRH vs PBKS
ಕ್ರೀಡೆ46 seconds ago

SRH vs PBKS: ಒಂದು ದಿನ ಕಳೆಯುವ ಮುನ್ನವೇ ಕೊಹ್ಲಿಯ ಸಿಕ್ಸರ್​ ದಾಖಲೆ ಮುರಿದ ಅಭಿಷೇಕ್

Harish Poonja
ಕರ್ನಾಟಕ34 mins ago

Harish Poonja: ಪೊಲೀಸರಿಗೆ ಧಮ್ಕಿ; ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

Ebrahim Raisi
ವಿದೇಶ44 mins ago

Ebrahim Raisi: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ

PBKS vs SRH
ಕ್ರೀಡೆ1 hour ago

PBKS vs SRH: ಸೋಲಿನ ಮೂಲಕ ಅಭಿಯಾನ ಮುಗಿಸಿದ ಪಂಜಾಬ್​; ಹೈದರಾಬಾದ್​​ಗೆ 4 ವಿಕೆಟ್​ ಜಯ

West Nile fever Health department on alert
ಆರೋಗ್ಯ2 hours ago

West Nile fever : ಕೇರಳದಲ್ಲಿ ವೆಸ್ಟ್‌ ನೈಲ್ ಭೀತಿ; ಮೈಸೂರು ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಅಲರ್ಟ್‌

Great Khali
ದೇಶ2 hours ago

Great Khali: ಜಗತ್ತಿನ ಕುಬ್ಜ ಮಹಿಳೆಯನ್ನು ಮಗುವಿನಂತೆ ಎತ್ತಿ ಆಡಿಸಿದ ಗ್ರೇಟ್‌ ಖಲಿ; ಜನ ಕೆಂಡವಾಗಿದ್ದು ಏಕೆ?

Kalki 2898 AD
ಪ್ರಮುಖ ಸುದ್ದಿ2 hours ago

Kalki 2898 AD: ಮೇ 22ಕ್ಕೆ ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿಯ ಅನಾವರಣ; ಕಲ್ಕಿ ಚಿತ್ರದ 5ನೇ ಸೂಪರ್ ಸ್ಟಾರ್ ಯಾರು?

RCB vs CSK
ಕ್ರೀಡೆ2 hours ago

RCB vs CSK: ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ ಬರೆದ ಆರ್​ಸಿಬಿ-ಚೆನ್ನೈ ಪಂದ್ಯ

Rain News
ಕರ್ನಾಟಕ2 hours ago

Rain News: ಕುಷ್ಟಗಿಯಲ್ಲಿ ಸಿಡಿಲು ಬಡಿದು ರೈತ ಸಾವು, ಯುವಕನಿಗೆ ಗಂಭೀರ ಗಾಯ

Prajwal Revanna Case
ಕರ್ನಾಟಕ2 hours ago

ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌