prerane spiritual column by sadhguru jaggi vasudev about The first step on the road to victory Prerane : ಗೆಲುವಿನ ಹಾದಿಯಲ್ಲಿ ಮೊದಲ ಹೆಜ್ಜೆ ಯಾವುದು? ಸದ್ಗುರು ಉತ್ತರ ಹೀಗಿದೆ! - Vistara News

ಧಾರ್ಮಿಕ

Prerane : ಗೆಲುವಿನ ಹಾದಿಯಲ್ಲಿ ಮೊದಲ ಹೆಜ್ಜೆ ಯಾವುದು? ಸದ್ಗುರು ಉತ್ತರ ಹೀಗಿದೆ!

ನಿಮ್ಮ ಇಂದಿನ ಜೀವನಕ್ಕೆ ನೀವೇ ಜವಾಬ್ದಾರರು ಎಂಬುದನ್ನು ನೀವು ಒಪ್ಪಿಕೊಂಡಾಗ ಗೆಲುವಿನ ಹಾದಿಯಲ್ಲಿ ನೀವು ಮೊದಲ ಪ್ರಮುಖ ಹೆಜ್ಜೆಯನ್ನಿಟ್ಟಂತೆ ಎನ್ನುತ್ತಾರೆ ಸದ್ಗುರು. ಅವರ ವಿಶೇಷ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿದೆ.

VISTARANEWS.COM


on

sadhguru jaggi vasudev
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸದ್ಗುರು ಜಗ್ಗಿ ವಾಸುದೇವ್‌
ನಿಮ್ಮ ಜೀವನವನ್ನು ನೀವು ಹೇಗೆ ಅನುಭವಿಸುತ್ತಿದ್ದೀರಿ ಎಂಬುದನ್ನು ಗಮನಿಸಿ ನೋಡಿದ್ದೀರಾ? ನೀವು ಯಾರೇ ಆಗಿರಲಿ, ಏನೇ ಆಗಿರಲಿ, ನಿಮ್ಮಲ್ಲಿರುವ ಯಾವುದೋ ಒಂದು ಅಜ್ಞಾತ ಭಾವ, ನೀವೀಗ ಇರುವುದಕ್ಕಿಂತ ಸ್ವಲ್ಪ ಹೆಚ್ಚಾಗಿರಬೇಕೆಂದು ಒತ್ತಾಯಿಸುತ್ತಲೇ ಇರುತ್ತದೆ, ಅಲ್ಲವೆ? ಇದು ನೀವು ಅರ್ಥಮಾಡಿಕೊಳ್ಳಬೇಕಾಗಿರುವ ಮೂಲಭೂತ ರಹಸ್ಯ. ನೀವು ಹಣಸಂಗ್ರಹಣೆಯಲ್ಲಿ ನಿಸ್ಸೀಮರಾದರೆ, ಹೆಚ್ಚು ಹಣ, ಅಧಿಕಾರಪ್ರಿಯರಾದರೆ ಉನ್ನತ ಪದವಿಗಳು, ಆಸ್ತಿಪಾಸ್ತಿ ಸಂಪಾದನೆ ಪ್ರಿಯವಾದರೆ, ಇನ್ನಷ್ಟು ಸ್ವತ್ತು-ಇದನ್ನಲ್ಲವೇ ನೀವು ಬಯಸುವುದು.

ಪ್ರೀತಿಯೆಂದರೂ ಇನ್ನಷ್ಟು ಬೇಕೆನ್ನುತ್ತೀರ. ಜ್ಞಾನವೆಂದರೆ ಹೆಚ್ಚೆಚ್ಚು ಜ್ಞಾನಿಗಳಾಗಬೇಕೆಂದು ಬಯಸುತ್ತೀರಿ. ಯಾವುದೇ ಆದರೂ ನಿರ್ದಿಷ್ಟ ಮಿತಿಯಲ್ಲಿ ನಿಮ್ಮ ಆಸೆ ನಿಲ್ಲುವುದಿಲ್ಲ. ವಾಹನದಲ್ಲಿ ಹೋಗುತ್ತಿರುವಿರಿ. ರಸ್ತೆಯಲ್ಲೊಂದು ಗುಂಡಿಯನ್ನು ಗಮನಿಸುತ್ತೀರಿ. ಅದನ್ನು ತಪ್ಪಿಸಿ ಹೋಗಬೇಕೆಂದರೆ, ರಸ್ತೆಯ ಬೇರೆ ಭಾಗಗಳನ್ನು ಗಮನಿಸ ಬೇಕಾಗುತ್ತದೆ. ಆದರೆ? ಗುಂಡಿಯನ್ನೇ ಗಮನಿಸುತ್ತಾ ಅದರಲ್ಲಿಯೇ ಹೋಗಿ ಸಿಕ್ಕಿಬೀಳುತ್ತೀರಿ.

prerane

ಇದು ಮನಸ್ಸಿನ ವೈಚಿತ್ರ್ಯ, ಯಾವುದು ಮನಸ್ಸಿನಲ್ಲಿ ಬೇಡವೆಂದು ನೆನೆಯುತ್ತೇವೆಯೋ ಅದೇ ನಡೆಯುತ್ತದೆ. ಒಂದು ಪರೀಕ್ಷೆ ಮಾಡೋಣ, ಐದು ನಿಮಿಷಗಳವರೆಗೆ ಕೋತಿಯನ್ನು ಕುರಿತು ನೆನೆಯಬಾರದೆಂದು, ಮನಸ್ಸಿನಲ್ಲಿ ಅಂದುಕೊಳ್ಳಿ. ಏನು ನಡೆಯುತ್ತದೆಂಬುದನ್ನು ಗಮನಿಸಿ. ಪೂರಾ ಐದು ನಿಮಿಷಗಳೂ ಕೋತಿಗಳೇ ನಿಮ್ಮ ಮನಸ್ಸನ್ನು ಆಕ್ರಮಿಸಿಬಿಡುತ್ತವೆ.

ಹಾಗೆಯೇ, ಒಂದು ಕುಟುಂಬದಲ್ಲಿ ಒಂದು ಸಮಸ್ಯೆಯುಂಟಾದರೆ ಅದನ್ನೇ ಕುರಿತು ಯೋಚಿಸುತ್ತಾ ಮುಳುಗಿದರೆ ಮುಂದೆ ಮಾಡಬೇಕಾಗಿರುವುದನ್ನು ಮಾಡಲಾರದೆ ಕೆಲಸವೆಲ್ಲವೂ ನಿಂತುಹೋಗುತ್ತದೆ. ಇರುವುದು ಸಾಲದೆ, ಮತ್ತಷ್ಟು ತೊಂದರೆಗಳು ಬಂದುಬಿಡುತ್ತವೆ. ತಲೆಯೆತ್ತಲು ಸಾಧ್ಯವಾಗುವುದೇ ಇಲ್ಲ.

ಯಾವುದೇ ಕಷ್ಟ ಬಂದರೂ ನಂಬಿಕೆಯನ್ನು ಬಿಡದೆ, ಮಾಡಬೇಕಾಗಿರುವುದನ್ನು ಗಮನವಿಟ್ಟು ಮಾಡಿದರೆ ಈಗಾಗಲೇ ಕಷ್ಟದಲ್ಲಿರುವ ಕುಟುಂಬ ಮತ್ತಷ್ಟು ಏಕೆ ಕೆಡುತ್ತದೆ?

ಸಮಸ್ಯೆಗಳು ತಾವಾಗಿಯೇ ಬರುವುದಿಲ್ಲ. ನಿಮಗೆ ತಿಳಿಯದಂತೆ ಅವುಗಳನ್ನು ನೀವೇ ಸೃಷ್ಟಿಸಿಕೊಳ್ಳುತ್ತೀರಿ. ಎಡವಿದ ಕಾಲಿನತ್ತ, ತೊಂದರೆಯ ಕುಟುಂಬದತ್ತ ಗಮನವಿಡದೆ, ಮಾಡಬೇಕಾಗಿರುವುದನ್ನು ಸರಿಯಾದ ರೀತಿಯಲ್ಲಿ ಮಾಡಲು ಯೋಚಿಸಿ. ಅದನ್ನು ಪೂರ್ಣವಾಗಿ ಮನಸ್ಸಿಟ್ಟು ತಲೀನತೆಯಿಂದ ಮಾಡಿ ನೋಡಿ. ಈ ಭಯ ಅರ್ಥವಿಲ್ಲದ್ದೆಂದು ಆಗ ತಿಳಿದುಬರುತ್ತದೆ.

ಹೀಗೆ ಯಾವಾಗಲೂ ನಿಮ್ಮ ಮನಸ್ಸಿನಲ್ಲಿ, ವಿಸ್ತರಿಸುವಿಕೆಗೆ ಇನ್ನೊಂದು ಮಾರ್ಗವು ಇದ್ದೇ ಇರುತ್ತದೆಯಲ್ಲವೆ? ಇನ್ನೂ ಸ್ವಲ್ಪ, ಇನ್ನೂ ಸ್ವಲ್ಪ ಬೇಕೆಂಬ ಆಸೆ, ನೀವಿರುವ ಸ್ಥಿತಿಯಿಂದ ಮತ್ತಷ್ಟು ಮೇಲಕ್ಕೆ, ವಿಸ್ತಾರಕ್ಕೆ ಹೋಗಬೇಕೆಂಬ ಆಸೆ.
ನಿಮ್ಮನ್ನು ಇಡೀ ಭೂಮಂಡಲಕ್ಕೆ ರಾಜನನ್ನಾಗಿಯೋ ರಾಣಿಯನ್ನಾಗಿಯೋ ಮಾಡಿಬಿಟ್ಟೆವೆಂದು ಭಾವಿಸೋಣ.
ನೀವು ಅದರಿಂದಲಾದರೂ ತೃಪ್ತರಾಗುತ್ತೀರಾ? ‘ಅದು ಸರಿ, ಆ ಚಂದ್ರ….’ಎಂದಲ್ಲವೇ ನೀವು ಯೋಚನೆ ಮಾಡುವುದು? ಗಮನವಿಟ್ಟು ನೋಡಿ. ಹಾಗಾದರೆ ನೀವು ನಿಜವಾಗಿಯೂ ಬಯಸುವುದು ಏನು? ಹಣವೆ, ಸ್ವತ್ತೆ, ಪ್ರೀತಿಯೆ, ಜ್ಞಾನವೆ? ನಿಮಗೆ ಬೇಕಾಗಿರುವುದಾದರೂ ಏನು? ವಾಸ್ತವದಲ್ಲಿ ನೀವು ಹುಡುಕುತ್ತಿರುವುದೇನು? ವಿಸ್ತಾರವಾಗುತ್ತಾ ಹೋಗುವುದು ಮಾತ್ರ, ಅಲ್ಲವೆ?

ಈಗಿರುವುದಕ್ಕಿಂತ ಸ್ವಲ್ಪ ಹೆಚ್ಚಿನದನ್ನೇ ನೀವು ಬಯಸುತ್ತೀರಿ. ನೀವು ಜೀವನವೆಂಬ ಮರದಲ್ಲಿ, ಪ್ರತಿದಿನ ಮೇಲಕ್ಕೆ ಏರುತ್ತಾ, ಅಲ್ಲಿ ದೊರೆಯುವ ಫಲವನ್ನು ಸವಿಯಬೇಕೆಂದು ಎಣಿಸುತ್ತಿದ್ದೀರಿ, ಅಲ್ಲವೆ? ಹಾಗಾದರೆ ನೀವು ಹುಡುಕುತ್ತಿರುವ ವಿಸ್ತಾರ, ಯಾವ ಅಳತೆಯದಾಗಿದ್ದರೆ ಸಾಕೆಂದು ನಿಶ್ಚಯಿಸಿಕೊಳ್ಳುತ್ತೀರಿ? ಎಷ್ಟು ವಿಸ್ತಾರವಾದರೆ ಇದು ನಿಲ್ಲುತ್ತದೆ? ಅದು ಏನು? ಎಲ್ಲಿದೆ? ಅದರ ಗಡಿ ಏನಾದರೂ ತಿಳಿಯುತ್ತದೆಯೆ? ನೋಡಿ, ನೀವು ಎಲ್ಲೆಯಿಲ್ಲದ ವಿಸ್ತಾರವನ್ನು ಆಸೆಪಡುತ್ತಿದ್ದೀರಿ. ಎಲ್ಲೆ ಮೀರಿದ ವಿಸ್ತಾರವನ್ನು ಬಯಸುತ್ತಿದ್ದೀರಿ. ಅದನ್ನು ಪಡೆದು ಅನುಭವಿಸಲು ನಿಮ್ಮ ಬಳಿ ಇರುವ ಸಾಧನಗಳಾದರೂ ಯಾವುವು?

ಹೀಗೆ ಜೀವನದಲ್ಲಿ ಮುನ್ನಡೆದು ಉನ್ನತ ಗುರಿಗಳನ್ನು ಸಾಧಿಸಬೇಕಾದರೆ, ಎಲ್ಲವನ್ನು ಅನುಭವಿಸಬೇಕಾದರೆ, ಎಲ್ಲೆಗೆ ಸೀಮಿತವಾಗಿರುವ ನಮ್ಮ ಐದು ಪಂಚೇಂದ್ರಿಯಗಳನ್ನು ದಾಟಿ ಹೋಗಬೇಕು.

sadhguru jaggi vasudev
sadhguru jaggi vasudev

ಈ ಪಂಚೇಂದ್ರಿಯಗಳನ್ನು ಅರ್ಥಮಾಡಿಕೊಂಡು, ಅವನ್ನು ದಾಟಿ ಹೋಗಲು, ನಿಮ್ಮ ಗ್ರಹಿಕೆಯ ಸಾಮರ್ಥ್ಯ ಉನ್ನತ ಮಟ್ಟಕ್ಕೇರಬೇಕು. ಗ್ರಹಿಕೆ ಉನ್ನತ ಮಟ್ಟಕ್ಕೇರಬೇಕಾದರೆ, ಮೊತ್ತಮೊದಲು ನಿಮ್ಮ ಗ್ರಹಿಕೆಯಲ್ಲಿರುವ ದೋಷಕ್ಕೆ ಕಾರಣವೇನೆಂದು ಮತ್ತು ಸರಿಯಾದ ಅರ್ಥವನ್ನು ಗ್ರಹಿಸುವುದಕ್ಕೆ ಏನು ಅಡ್ಡಿಯಾಗುತ್ತಿದೆ, ಎಂಬುದನ್ನು ತಿಳಿದುಕೊಳ್ಳಬೇಕು.

ಜೀವನದ ಉನ್ನತ ರಹಸ್ಯಗಳು ಕೆಲವರಿಗೆ ಮಾತ್ರ ಸುಲಭವಾಗಿ ಅರ್ಥವಾಗುತ್ತದೆ, ಮತ್ತೆ ಕೆಲವರಿಗೆ ಅರ್ಥವಾಗದ ಒಗಟಾಗಿ ಪರಿಣಮಿಸುವುದು ಏಕೆ? ಇದಕ್ಕೆ ಕಾರಣ ಅವರು ಬೇರೆ ರೀತಿಯಲ್ಲಿ ಹುಟ್ಟಿರಬಹುದೆಂದು ಹೇಳಲಾಗದು.
ಇದಕ್ಕಿರುವ ಕಾರಣವೆಂದರೆ, ಈಗ ನಾವಿರುವ ರೀತಿಯಲ್ಲಿ ಕೆಲವು ಮೂಲಭೂತವಾದ ನ್ಯೂನತೆಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಹಾಗೆ, ನಿಮಗೆ ನೀವಾಗಿಯೇ ಮಾಡಿಕೊಂಡ ಅಡಚಣೆಗಳು ಯಾವುವು? ಅಂತಹ ಅಡಚಣೆಗಳನ್ನು ಹೋಗಲಾಡಿಸುವುದು ಹೇಗೆ? ಅದಕ್ಕೆ ಅಗತ್ಯವಾದ ತಂತ್ರಜ್ಞಾನ ಯಾವುದು? ಆ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನು ಒಂದೊಂದಾಗಿ ನೋಡೋಣ.

ಒಬ್ಬ ಹೊಸದಾದ ಡಾಕ್ಟರಿದ್ದರು. ಅವರು ಪರೀಕ್ಷೆ ಪಾಸು ಮಾಡಬೇಕೆಂದು ಓದಿದವರಲ್ಲ. ಒಬ್ಬ ಒಳ್ಳೆಯ ಡಾಕ್ಟರಾಗಬೇಕೆಂದು, ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಗುರಿಯಿದ್ದವರು. ಅವರ ಬಳಿಗೆ ರೋಗಿಯೊಬ್ಬ ಬಂದ.

ಆ ರೋಗಿಯದು, ತತ್‌ಕ್ಷಣ ಗಮನ ನೀಡದಿದ್ದರೆ, ಪ್ರಾಣ ಹೋಗಿಬಿಡುವಂತಹ ಪರಿಸ್ಥಿತಿ. ಈ ಡಾಕ್ಟರು ಎಲ್ಲವನ್ನೂ ಶ್ರದ್ಧೆಯಿಂದ ಕೇಳಿ, ಸಮಸ್ಯೆ ಏನೆಂಬುದನ್ನು ಕಂಡುಹಿಡಿದು, ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಮಾಡಿದರು. ಆ ರೋಗಿ ಎರಡೇ ದಿನಗಳಲ್ಲಿ ಎದ್ದು ಕುಳಿತುಕೊಳ್ಳುವಂತಾದರು. ಒಂದೇ ವಾರದಲ್ಲಿ ಓಡಾಡುವಂತೆಯೂ ಆಯಿತು.
‘ಅವರು ಸಾಯುವ ಸ್ಥಿತಿಯಲ್ಲಿದ್ದರು. ಬೇರೆ ಯಾವ ಡಾಕ್ಟರ ಬಳಿ ಹೋಗಿದ್ದರೂ ಬದುಕುತ್ತಿರಲಿಲ್ಲ. ನಾನು ಸರಿಯಾಗಿ ಓದಿಕೊಂಡು ಎಲ್ಲವನ್ನು ಸರಿಯಾಗಿ ಮಾಡಿದ್ದರಿಂದ ಈಗವರು ಜೀವಂತವಾಗಿದ್ದಾರೆ. ಇವರಿಗೆ ಪ್ರಾಣವನ್ನು ಕೊಟ್ಟವನು ನಾನೇ’, ಎಂದುಕೊಂಡರು.

ಇನ್ನೊಂದು ದಿನ ಅವರ ಬಳಿಗೆ ಮತ್ತೊಬ್ಬ ರೋಗಿ ಬಂದರು. ಅವರ ದೇಹಸ್ಥಿತಿಯೂ, ಒಡನೆಯೇ ಗಮನ ನೀಡದಿದ್ದರೆ, ಪ್ರಾಣ ಹೋಗಿಬಿಡುವಂತಿತ್ತು. ಮತ್ತೆ ಡಾಕ್ಟರು ಸಮಸ್ಯೆ ಏನೆಂಬುದನ್ನು ಸರಿಯಾಗಿ ಪರೀಕ್ಷಿಸಿ ತಕ್ಕ ರೀತಿಯಲ್ಲಿ ಚಿಕಿತ್ಸೆ ನೀಡಿದರು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಆದರೆ ರೋಗಿ ನಿಧನನಾದನು. ಈಗ ಇದೇ ಡಾಕ್ಟರು ಏನು ಹೇಳುತ್ತಾರೆ? ‘ಎಷ್ಟು ಸರಿಯಾಗಿ ನಾನು ಅವರನ್ನು ಮೇಲಕ್ಕೆ ಕಳುಹಿಸಿಬಿಟ್ಟೆ!’ ಎಂದೆ? ಇಲ್ಲ, ‘ಇದು ದೇವರಿಚ್ಛೆ. ಆ ರೋಗಿಯ ಹಣೆಬರಹ, ಅವರನ್ನು ಕರೆದುಕೊಂಡು ಬಂದವರು ತಡವಾಗಿ ಬಂದರು, ’ಎಂದು ಏನಾದರೊಂದನ್ನು ಹೇಳಿ, ಅಪವಾದ ವರ್ಗಾಯಿಸುತ್ತಾರೆ. ನಾವು ನೆನೆದಂತೆಯೇ ನಡೆದರೆ ಅಂಥದನ್ನು‘ನಾನು ಮಾಡಿದೆ’ ಎಂದೂ, ಹಾಗೆ ನಡೆಯದಿದ್ದರೆ ‘ನಾನು ಜವಾಬ್ದಾರನಲ್ಲ’ ಎನ್ನುವುದು ನಮ್ಮ ಜಾಯಮಾನ.

ನೀವು ಎಲ್ಲವನ್ನೂ ಹೀಗೆಯೇ ನಡೆಯಬೇಕೆಂದು ಬಯಸುತ್ತೀರಿ. ಅದು ಹಾಗೆಯೇ ನಡೆದರೆ ಅದಕ್ಕೆ ನೀವೇ ಜವಾಬ್ದಾರರು. ಹಾಗೆ ನಡೆಯದಿದ್ದರೆ ಅದರ ಜವಾಬ್ದಾರಿಯನ್ನು ಯಾರ ಮೇಲೆ ಹೊರಿಸಬೇಕು? ಯಾರೂ ದೊರೆಯದೆ ಹೋದರೆ, ಯಾವಾಗಲೂ ನಾವು ಹೇಳುವುದೆಲ್ಲವನ್ನೂ ಕೇಳಲು ಮೇಲೆ ಒಬ್ಬ ಮೂರ್ಖನಿದ್ದಾನೆ. ಅಲ್ಲವೆ!
ನೀವು ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದರೆ ‘ಚೆನ್ನಾಗಿ ಬರೆದಿದ್ದೇನೆ’ ಎನ್ನುತ್ತೀರಿ. ಸರಿಯಾಗಿ ಬರೆಯದಿದ್ದರೆ?
‘ಸಮಯವೇ ಸಾಲದು’, ‘ಸಿಲಬಸ್‌ನಲ್ಲಿ ಇಲ್ಲದ ಪ್ರಶ್ನೆಗಳೆಲ್ಲವೂ ಬಂದುಬಿಟ್ಟಿವೆ’ ಎನ್ನುತ್ತೀರಿ. ಇಲ್ಲವೆ, ಬೇರೇನಾದರೂ ಕಾರಣಗಳನ್ನು ಹುಡುಕುತ್ತೀರಿ. ಏಕೆ?

ಜೀವನದಲ್ಲಿ ಯಶಸ್ಸು ಪಡೆಯಬೇಕೇ? ಈ ವಿಡಿಯೋವನ್ನು ನೋಡಿ.

ಗೆಲುವಿಗೆ ತಕ್ಷಣವೇ ಹೊಣೆಯನ್ನು ಹೊತ್ತುಕೊಳ್ಳುತ್ತ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿರುವ ನಾವು, ತಪ್ಪು ನಡೆದಾಗ ಮಾತ್ರ ಅದಕ್ಕೆ ಬೇರೆಯದೇ ಹೊಣೆಗಾರಿಕೆಯನ್ನು ಯೋಚಿಸುತ್ತೇವೆ.

ಈಗ ನಾನು ಕೇಳುವುದೇನೆಂದರೆ, ನೀವು ನೆನೆದಂತೆ ನಡೆಯದಿದ್ದರೂ ಅದಕ್ಕೆ ನೀವೇ ಜವಾಬ್ದಾರರೆ? ಈಗ, ನೀವೆಂದುಕೊಂಡಂತೆ ನಡೆಯದ ಘಟನೆಗೆ ನೀವು ಜವಾಬ್ದಾರನೆಂದು ತಿಳಿಯುವುದಾದರೆ, ಅದನ್ನು ಹೇಗೆ ನಡೆಸುವುದೆಂಬ ಸಾಮರ್ಥ್ಯವನ್ನು ನೀವು ಸಂಪಾದಿಸಲು ಸಾಧ್ಯವಾಗುತ್ತದೆ. ಈಗ ನಿಮ್ಮ ಸಾಮರ್ಥ್ಯಕ್ಕೆ ನೀವು ಜವಾಬ್ದಾರರಾದರೆ ನಿಮ್ಮ ಅಸಾಮರ್ಥ್ಯಕ್ಕೂ ನೀವೇ ತಾನೆ?

ಇದನ್ನೂ ಓದಿ :Prerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ!

ನಾಳೆ ನಾನು ಹೀಗಿರಬೇಕು, ನನ್ನ ಜೀವನ ಹೀಗೆ ಅರಳಬೇಕೆಂದು ಆಸೆಪಡುತ್ತೀರಿ. ಈಗ ನೀವಿರುವ ಸ್ಥಿತಿಗೆ ‘ನಾನೇ ಜವಾಬ್ದಾರ’ಎಂದು ಹೊಣೆ ಹೊರಲು ನೀವು ಸಿದ್ಧರಾಗಿಲ್ಲದಿದ್ದರೆ, ನಾಳೆ ಹೇಗಿರಬೇಕೆಂಬುದನ್ನು ನೀವು ರೂಪುಗೊಳಿಸಲು ಸಾಧ್ಯವೆ? ‘ಈಗ ನಾನು ಹೇಗಿದ್ದೇನೆಯೋ ಅದಕ್ಕೆ ಸಂಪೂರ್ಣವಾಗಿ ನಾನೇ ಹೊಣೆ’ ಎಂದು ಹೇಳುವ ಸ್ಥಿತಿ ನಿಮಗೆ ಬಂದರೆ ಮಾತ್ರ, ನಾಳೆ ಹೇಗೆ ಇರಬೇಕೆಂಬುದನ್ನು ಕನಸು ಕಾಣಲು ನಿಮಗೆ ಹಕ್ಕು ದೊರೆಯುತ್ತದೆ. ನಿಮ್ಮ ಜೀವನದ ಮಟ್ಟ ಉನ್ನತವಾಗಿರಲಿ, ಕೆಳಮಟ್ಟದಲ್ಲಿರಲಿ, ಸುಂದರವಾಗಿಯೋ, ಕೊಳಕಾಗಿಯೋ, ಅದು ಹೇಗಾದರೂ ಇರಲಿ, ನೀವು ಅದಕ್ಕೆ ಸಂಪೂರ್ಣವಾಗಿ ಹೊಣೆ ಹೊರುತ್ತೀರಾ?

ನಿಮ್ಮ ಉತ್ತರ ‘ಹೌದು, ನಾನೇ ಜವಾಬ್ದಾರ’ ಎಂದರೆ, ಗೆಲುವಿನ ಹಾದಿಯಲ್ಲಿ ನೀವು ಮೊದಲ ಪ್ರಮುಖ ಹೆಜ್ಜೆಯನ್ನಿಟ್ಟಿದ್ದೀರೆಂದು ಅರ್ಥ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕರ್ನಾಟಕ

Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ; ಅರಮನೆ ಆವರಣದಲ್ಲಿ ವಜ್ರಮುಷ್ಠಿ ಕಾಳಗ

Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ ಶುರವಾಗಿದ್ದು, ಚಾಮುಂಡಿ ಬೆಟ್ಟದಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗುತ್ತಿದೆ. ಜತೆಗೆ ಮೈಸೂರು ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಯುತ್ತಿದೆ.

VISTARANEWS.COM


on

By

mysore dasara
Koo

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysore Dasara ) ಜಂಬೂ ಸವಾರಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶನಿವಾರ ಮುಂಜಾನೆಯಿಂದಲೇ ಬಿರುಸಿನ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿಯನ್ನು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಸಮಯ ಸನ್ನಿಹಿತವಾಗುತ್ತಿದೆ. ಇದಕ್ಕಿಂತ ಮೊದಲು ಚಾಮುಂಡಿ ಸನ್ನಿಧಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಬೆಳ್ಳಿ ರಥದ ಮೂಲಕ ಅರಮನೆಗೆ ಮೆರವಣಿಗೆ ಮೂಲಕ ಕಳಿಸಿಕೊಡಲಾಯಿತು.

ವಿಜಯ ದಶಮಿಯ ಜಂಬೂ ಸವಾರಿಗೆ ಅಂಬಾವಿಲಾಸ ಅರಮನೆ ಸಜ್ಜಾಗಿದೆ. ಅರಮನೆ ಅಂಗಳದಲ್ಲಿ 35 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಶುರುವಾಗಿದ್ದು, ಅಂಬಾವಿಲಾಸ ಅರಮನೆ ತಲುಪಲಿದೆ. ನೇರಳೆ ಬಣ್ಣದ ಸೀರೆಯಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಅಶ್ವಾರೋಹಣ ಅಲಂಕಾರದಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಅಲ್ಲಿಂದ ಅರಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

Mysore dasara 2024
Mysore dasara 2024

ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಶನಿವಾರ ಮಧ್ಯಾಹ್ನ 1:41 ರಿಂದ 2:10ರ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ನಂದಿ ಧ್ವಜ ಪೂಜೆಯನ್ನು ಉದ್ಘಾಟಕ ಹಂಪನಾ, ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಸೇರಿದಂತೆ ಇತರೆ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ನಂದಿಧ್ವಜ ಪೂಜೆ ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದ್ದು, ಅರಮನೆ ಒಳಂಗಣದಿಂದ ಪ್ರಾರಂಭಗೊಂಡು ಬನ್ನಿ ಮಂಟಪದ ವರಗೆ ಮೆರವಣಿಗೆ ನಡೆಯಲಿದೆ. ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆ ಹಾಗೂ ವಿವಿಧ ಇಲಾಖೆಗಳಿಂದ 49 ಸ್ಥಬ್ದ ಚಿತ್ರಗಳು ಸಂಚಾರ ಇರಲಿದೆ. ಸಂಜೆ 4ಗಂಟೆಯಿಂದ 4:30 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಂಸದ ಹಾಗೂ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ರವರಿಂದ ಪುಷ್ಪರ್ಚನೆ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು, ರಾಜ್ಯಪಾಲ ಥಾವರ ಚಂದ್ ಗೆಹಲೊಟ್ ರಿಂದ ಕವಯತು ವೀಕ್ಷಣೆಯೊಂದಿಗೆ ಗೌರವ ವಂದನೆ ಸ್ವೀಕಾರ ಆಗಲಿದೆ.

Continue Reading

ಬೆಂಗಳೂರು

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌ ಆಗಿವೆ. ಸವಾರರು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಲಗ್ಗೆ ಇಟ್ಟಿದ್ದರು.

VISTARANEWS.COM


on

By

Ayudha Puja celebrations across the karnataka state Temples housefull by devotees
Koo

ಬೆಂಗಳೂರು: ನಾಡಿನೆಲ್ಲೆಡೆ ಆಯುಧ ಪೂಜಾ (Ayudha Puja) ಸಂಭ್ರಮ ಜೋರಾಗಿದೆ. ಆಯುಧ ಪೂಜೆಯ ಸಲುವಾಗಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ಬನಶಂಕರಿ, ಆ್ಯಕ್ಸಿಡೆಂಡ್ ಗಣೇಶ, ಸರ್ಕಲ್ ಮಾರಮ್ಮ, ಕಾಡುಮಲ್ಲೆಶ್ವರಂ ದೇವಸ್ಥಾನಕ್ಕೆ ಭಕ್ತರು ದೌಡಾಯಿಸಿದ್ದಾರೆ. ಬೆಳಗಿನಿಂದಲೇ ಪಂಚಾಭಿಷೇಕ ನೇರಿವೇರಿದ್ದು, ವಿಶೇಷ ಅಲಂಕಾರ ಮಾಡಿ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Ayudha Puja celebrations across the karnataka state  Temples housefull by devotees

ಅಲ್ಲದೇ ಮನೆಗಳಲ್ಲಿ ಆಯುಧಗಳಿಗೆ ಪೂಜೆ ಮಾಡಿ ಸಲ್ಲಿಸಿದ್ದು, ವಾಹನಗಳಿಗೆ ಪೂಜೆ ಮಾಡುವ ಸಲುವಾಗಿ ಸಾಕಷ್ಟು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ವಾಹನ ಸವಾರರು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಆಯುಧ ಪೂಜೆಯ ಸಂಭ್ರಮ ಜೋರಾಗಿತ್ತು. ದೇವಿಗೆ ಮುತ್ತಿನ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆಯಿಂದ ದೇವಿಗೆ ವಿಶೇಷ ಪೂಜೆ ಪುರಸ್ಕಾರ ನಡೆದಿದೆ.

Ayudha Puja celebrations across the karnataka state  Temples housefull by devotees

ಭಕ್ತರು ತಮ್ಮ ವಾಹನಗಳಿಗೆ ಪೂಜೆ ಮಾಡಿಸಲು ಮುಗಿಬಿದ್ದಿದ್ದರು. ಹೀಗಾಗಿ ಸರ್ಕಲ್ ಮಾರಮ್ಮ ದೇವಸ್ಥಾನದ ಸುತ್ತ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಟ್ರಾಫಿಕ್‌ ಕ್ಲಿಯರ್‌ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇಂದು ಶುಕ್ರವಾರ ಬೆಳಗ್ಗೆಯಿಂದ ಸಂಜೆಯವೆಗೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.

ವಿಸ್ತಾರ ನ್ಯೂಸ್‌ ಕಚೇರಿಯಲ್ಲೂ ಆಯುಧ ಪೂಜೆ ಸಂಭ್ರಮ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದಸರಾ ಸಂಭ್ರಮ

Dasara 2024 : ಮೈಸೂರು ದಸರಾ ಉತ್ಸವದಲ್ಲಿ ಕಣ್ಮನ ಸೆಳೆಯುತ್ತಿದೆ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನ

Dasara 2024 : ಮೈಸೂರು ದಸರಾ ಉತ್ಸವದಲ್ಲಿ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನ ಗಮನ ಸೆಳೆಯುತ್ತಿದ್ದು, ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ.

VISTARANEWS.COM


on

By

dasara 2024
Koo

ಬೆಂಗಳೂರು: ವೈಭವದ ದಸರಾ ಉತ್ಸವ (Dasara 2024 ) ಜೋರಾಗಿದ್ದು, ಭಿನ್ನ-ವಿಭಿನ್ನ ರೀತಿಯಲ್ಲಿ ಗೊಂಬೆಗಳನ್ನು ಕೂರಿಸಿ ಜನರು ಸಂಭ್ರಮಿಸುತ್ತಿದ್ದಾರೆ. ಸದ್ಯ ಮೈಸೂರು ದಸರಾ ಉತ್ಸವದಲ್ಲಿ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನವು ಎಲ್ಲರ ಕಣ್ಮನ ಸೆಳೆಯುತ್ತಿದೆ.

ಕ್ರಿ. ಶ.12-14 ನೆಯ ಶತಮಾನದವರೆಗೆ ಪ್ರವರ್ಧಮಾನಕ್ಕೆ ಬಂದಿದ್ದ ಈ ಹೊಯ್ಸಳ ದೇವಾಲಯ ಶೈಲಿಯು, ಹೊಯ್ಸಳ ಸಾಮ್ರಾಜ್ಯದ ಪತನದೊಂದಿಗೆ ಲುಪ್ತವಾಗಿ ಹೋಯಿತು. ಹಾಗೂ ಸುಮಾರು 800 ವರ್ಷಗಳಿಂದೀಚೆಗೆ ಈ ಶೈಲಿಯಲ್ಲಿ ಯಾವುದೇ ದೇವಾಲಯವು ನಿರ್ಮಾಣವಾಗಿರುವುದು ಕಂಡು ಬಂದಿರುವುದಿಲ್ಲ.

ಪ್ರಸ್ತುತ ಆರ್ಕಿಟೆಕ್ಟ್ ಮೈತ್ರೇಯಿ ಎಂಬುವವರು 7 ಅಡಿ ಎತ್ತರದ ಹೊಯ್ಸಳ ದೇವಾಲಯದ ಮಾದರಿಯನ್ನು ಮರದಲ್ಲಿ ರಚಿಸುವ ವಿನಮ್ರ ಪ್ರಯತ್ನವನ್ನು ಮಾಡಿದ್ದಾರೆ. ಸದ್ಯಕ್ಕೆ 7’ಎತ್ತರ, 7’ಅಗಲ ಹಾಗೂ 7’ ಉದ್ದವಿರುವ ಗರ್ಭಗೃಹ ಮತ್ತು ಶುಕನಾಸಿಯ ಭಾಗದ ರಚನೆಯನ್ನು ಮಾಡಿದ್ದು, ನವರಂಗ ಮತ್ತು ಮಂಟಪಗಳನ್ನು ರಚಿಸಿ ಜೋಡಿಸಲಾಗುವುದು.

Hoysala temple model showcased at Mysuru Dasara festival
dasara 2024

ಮಾದರಿಯ ಪೂರ್ಣ ಹಂತದಲ್ಲಿ ಒಟ್ಟು 9’x 11’ ವಿಸ್ತೀರ್ಣವನ್ನು ಹೊಂದಿರುತ್ತದೆ. ಈ ಮಾದರಿಯನ್ನು ಶಿಲ್ಪಾಶಾಸ್ತ್ರದ ಅಳತೆಗಳಿಗೆ ಅನುಗುಣವಾಗಿ ನಿರ್ಮಿಸಲಾಗಿರುತ್ತದೆ. ಪ್ರಸ್ತುತ ಮೈಸೂರು ದಸರಾ ಉತ್ಸವದ ಪ್ರದರ್ಶನದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ.

ಭಾರತೀಯ ಪರಂಪರೆಯು ಅನಾದಿ ಕಾಲದಿಂದಲೂ ಆಧ್ಯಾತ್ಮಿಕ, ತತ್ವಶಾಸ್ತ್ರ, ವೈಚಾರಿಕತೆ, ನಂಬಿಕೆ, ಶ್ರದ್ಧೆಗಳನ್ನೊಳಗೊಂಡ ಸಂಸ್ಕೃತಿಯೆಂಬ ಮೂಲಸ್ತೋತ್ರದಿಂದ ಹರಿದುಬಂದಿದೆ. ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದ ಶಿಲ್ಪ ಶಾಸ್ತ್ರಗಳ, ಆಗಮಗಳ ಆಧಾರದಲ್ಲಿ ಹಲವು ಪೂಜಾ ಪದ್ಧತಿಗಳು ಹಾಗೂ ದೇವಾಲಯ ವಾಸ್ತುಶಿಲ್ಪಗಳು ವಿವಿಧ ಆಯಮಗಳಲ್ಲಿ ಮೂರ್ತಗೊಂಡವು.

ಅವು ಕ್ರಿ. ಶ.ಆರನೆಯ ಶತಮಾನದ ನಂತರ ಶಿಲಾ ಮಾಧ್ಯಮದಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಶೈಲಿಯಲ್ಲಿ ನಿರ್ಮಾಣಗೊಂಡವು. ಕರ್ನಾಟಕದಲ್ಲಿ ಚಾಲುಕ್ಯ, ರಾಷ್ಟ್ರಕೂಟ ಹಾಗೂ ಹೊಯ್ಸಳರ ಕಾಲಘಟ್ಟದಲ್ಲಿ, ಅಂದರೆ ಕ್ರಿ. ಶ. 6-14 ನೇ ಶತಮಾನದವರೆಗೆ ಸುಮಾರು 800 ವರ್ಷಗಳಲ್ಲಿ ವೇಸರ ಅಥವಾ ಕರ್ಣಾಟ ದ್ರಾವಿಡ ಎಂದು ಕರೆಯಲ್ಪಡುವ ಒಂದು ವಿಶಿಷ್ಟ ಶೈಲಿಯುಲ್ಲಿ ದೇವಾಲಯ ಶಿಲ್ಪವು ವಿಕಸಿತಗೊಂಡಿತು.

dasara 2024
dasara 2024

ಹೊಯ್ಸಳರ ಕಾಲದಲ್ಲಿ (11 ರಿಂದ 14 ನೇ ಶತಮಾನ) ಈ ಶೈಲಿಯುಲ್ಲಿ ರಚಿತಗೊಂಡ ದೇವಾಲಯಗಳು ತಮ್ಮ ವಿನ್ಯಾಸ, ಆಕಾರ, ಅಲಂಕರಣ ಮತ್ತು ಕಲಾ ನೈಪುಣ್ಯತೆದಲ್ಲಿ ಪರಾಕಷ್ಟೆಯನ್ನು ತಲುಪಿದ್ದು ಹೊಯ್ಸಳ ದೇವಾಲಯಗಳೆಂದು ಪ್ರಸಿದ್ಧವಾಗಿದೆ. ಈ ಕಾಲಘಟ್ಟದಲ್ಲಿ ಹಲವು ಚಿಕ್ಕ ದೊಡ್ಡ ದೇವಾಲಯಗಳು ನಿರ್ಮಾಣಗೊಂಡಿದ್ದು, ಬೇಲೂರಿನ ಚೆನ್ನಕೇಶ್ವರ, ಹಳೆಬೀಡಿನ ಹೊಯ್ಸಳೇಶ್ವರ, ಸೋಮನಾಥಪುರದ ಕೇಶವ ದೇವಾಲಯಗಳು ಜಗತ್ಪ್ರಸಿದ್ಧವಾಗಿವೆ.

ಕ್ರಿ. ಶ. 14 ನೆಯ ಶತಮಾನದಲ್ಲಿ ಹೊಯ್ಸಳ ಶೈಲಿಯಿ ಲುಪ್ತವಾಗಿದ್ದು, ಅಲ್ಲಿಂದ ಈಚೆಗೆ ಅಂದರೆ ಸುಮಾರು 700 ವರ್ಷಗಳಿಂದ ಯಾವುದೇ ದೇವಾಲಯವು ವೇಸರ ಅಥವಾ ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡಿರುವುದಿಲ್ಲ. ಹೀಗಾಗಿ ಪ್ರಸ್ತುತ ಆಧುನಿಕ ಆಕರ ಗ್ರಂಥ ಹಾಗೂ ಪ್ರಾಚೀನ ಶಾಸ್ತ್ರ ಗ್ರಂಥಗಳ ಕೂಲಂಕುಷ ಅಧ್ಯಯನದೊಂದಿಗೆ ಹೊಯ್ಸಳ ದೇವಾಲಯಗಳ ತುಲನಾತ್ಮಕ ವಿಶ್ಲೇಷಣೆ ಮಾಡಿ, 7 ಅಡಿ ಎತ್ತರದ ಹೊಯ್ಸಳ ದೇವಾಲಯದ ಮಾದರಿ ನಿರ್ಮಾಣದ ಪ್ರಯತ್ನವನ್ನು ಮಾಡಲಾಗಿದೆ. ಸೀಮಿತ ಸಂಪನ್ಮೂಲ ಹಾಗೂ ಸಮಯದಲ್ಲಿ ಹೊಯ್ಸಳ ವಾಸ್ತು ಶೈಲಿಯ ಪ್ರಮುಖ ಅಂಶಗಳನ್ನು ಅಳವಡಿಸಿ ಮಹಾಗನಿ ಮರ ಮತ್ತು plywood ಬಳಸಿ ರಚಿಸಲಾಗಿದೆ.

ಹೊಯ್ಸಳ ದೇವಾಲಯಗಳಲ್ಲಿ ಪ್ರಮುಖವಾಗಿ ನಾಲ್ಕು ಭಾಗಗಳಿವೆ. (1)ಗರ್ಭಗೃಹ (2)ಶುಕನಾಸಿ (3)ನವರಂಗ ; (4)ಮಂಟಪ ಹಾಗೂ ಹಲವು ಬಾರಿ 2, 3, 4 ಅಥವಾ 5 ಗರ್ಭಗೃಹಗಳನ್ನು ಹೊಂದಿರುತ್ತದೆ. ಆಗ ಅವುಗಳನ್ನು ದ್ವಿಕೂಟ, ತ್ರಿಕೂಟ, ಚತುಷಕೂಟ, ಪಂಚಕೂಟ ಎಂದು ಕ್ರಮವಾಗಿ ಕರೆಯುತ್ತಾರೆ. ಸಾಧಾರಣವಾಗಿ ಗರ್ಭಗೃಹ ಚೌಕ ಅಥವಾ ನಕ್ಷತ್ರಕಾರದ ತಲ ವಿನ್ಯಾಸವನ್ನು ಹೊಂದಿರುತ್ತದೆ. ಚೌಕ ವಿನ್ಯಾಸವು ಹಿಂಬಣೆ, ಮುಂಬಣೆಗಳನ್ನು ಹೊಂದಿದ್ದು ವಿಪುಲ ಅಲಂಕಾರಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಒಟ್ಟಾಗಿ ವಿನ್ಯಾಸ ಮತ್ತು ಯೋಜನೆಯಲ್ಲಿ ಸಂಕೀರ್ಣವಾಗಿದ್ದು ಆಕರ್ಷಕವಾಗಿ ಮೂಡಿ ಬಂದಿರುತ್ತದೆ.

ಇದರ ಊರ್ಧ್ವಚ್ಛಂದದಲ್ಲಿ (Elevation) ಕೆಲವು ವರಗಗಳನ್ನು ಹೀಗೆ ಗುರುತಿಸಬಹುದು
⦁ ಜಗತಿ; ದೇವೇಲಾಯಗಳು ಎತ್ತರದ ಜಗತಿಯ ಮೇಲೆ ನಿಂತಿರುತ್ತವೆ. ಇದು ಪ್ರದಕ್ಷಿಣ ಪಥವಾಗಿ ಬಳಸಲ್ಪಡುತ್ತದೆ.
⦁ ಪೀಠ; ಜಗತಿಯ ಮೇಲೆ ಅಡ್ಡ ಪಟ್ಟಿಕೆಗಳ ಅಲಂಕರಣವುಳ್ಳ ಪೀಠವಿರುತ್ತದೆ.
⦁ ಜಂಘ; ಪೀಠದ ಮೇಲೆಯಿರುವ ಗೋಡೆಯನ್ನು ಜಂಘ ಎಂದು ಕರೆಯುತ್ತಾರೆ. ಕೂಟಛಾದ್ಯ ಎಂಬ ಮುಂಚಾಚು ಗೋಡೆಯನ್ನು ಜಂಘ ಮತ್ತು ಉಪರಿ ಜಂಘ ಎಂದು ವಿಂಗಡಿಸುತ್ತದೆ. ಜಂಘವು ಮೂರ್ತಿ ಶಿಲ್ಪದಿಂದಲೂ ಉಪರಿ ಜಂಘವು ಪಂಜರಗಳಿಂದ ಅಲಂಕೃತಗೊಂಡಿರುತ್ತದೆ.
⦁ ಛಾದ್ಯ; ವಿಶಾಲವಾದ ಮುಂಚಾಚು ಇರುವ ಸ್ತರ. ಇದು ಜಂಘ ಮತ್ತು ಶಿಖರವನ್ನು ವಿಂಗಡಿಸುತ್ತದೆ.
⦁ ಶಿಖರ; ಛಾದ್ಯದ ಮೇಲಿನ ಶಿಖರವು ಹಲವು ಅಂತಸ್ತು ಅಥವಾ ಭೂಮಿಗಳನ್ನು ಹೊಂದಿರುತ್ತದೆ. ಇಲ್ಲಿಯ ವಿಶೇಷ ಅಲಂಕಾರಣವು ಅಂತಸ್ತುಗಳನ್ನು ಗುರುತಿಸುವ ರೇಖೆಗಳನ್ನು ಮುಚ್ಚಿತ್ತವೆ.
⦁ ಕಂಠ/ಗಲ; ಶಿಖರ ಮತ್ತು ಘಂಟಾ ರಚನೆಯ ನಡುವೆ ಕಿರದಾದ ಕಂಠ ಅಥವಾ ಗಲ ಎಂಬ ವರ್ಗವಿರುತ್ತದೆ.
⦁ ಘಂಟಾ; ಶಿಖರದ ಮೇಲೆ ಘಂಟಾ ರಚನೆಯಿದ್ದು ಅದರ ಮೇಲ್ತುದಿಯಲ್ಲಿ ಅತಿ ಸುಂದರವಾದ ಕಲ್ಲಿನ ಕಲಶವಿರುತ್ತದೆ.
⦁ ಕಲಶ
ಹೀಗೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಕ್ರಮಭದ್ದವಾದ ಅಲಂಕರಣ, ಅಂಗಾಂಗ ಪ್ರಮಾಣ, ಬೇರೆ ಬೇರೆ ಭಾಗಗಳಲ್ಲಿರುವ ಸಂತುಲನ, ಯೋಜನಬದ್ದವಾದ ವಿನ್ಯಾಸಗಳಿಂದ ಹೊಯ್ಸಳ ದೇವಾಲಯವು ಅತ್ಯದ್ಭುತ ಸೌಂದರ್ಯದ ಆಗರವಾಗಿ ರೂಪಿತಗೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Navaratri : ನವರಾತ್ರಿ ಸಂಭ್ರಮದಲ್ಲಿ ಗೊಂಬೆಗಳಂತೆ ಮಿಂಚಿದ ಹೆಂಗಳೆಯರು

Navaratri: ನವರಾತ್ರಿಯಂದು ಬಣ್ಣಕ್ಕೂ ಎಲ್ಲಿಲ್ಲದ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಒಂದೇ ತರಹ ಬಟ್ಟೆ ಧರಿಸಿ ಮಿಂಚಿದ್ದಾರೆ.

VISTARANEWS.COM


on

By

navaratri
Koo

ಬೆಂಗಳೂರು: ನವರಾತ್ರಿಯ(Navaratri) ಸಂಭ್ರಮ ಎಲ್ಲೆಡೆ ಕಳೆಕಟ್ಟಿದೆ. ದೇವಿಯನ್ನು ವಿವಿಧ ರೂಪದಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಇನ್ನೊಂದು ವಿಶೇಷ ಎಂದರೆ 9 ದಿನಗಳಿಗೆ 9 ಬಣ್ಣದ ಬಟ್ಟೆ. ಒಂದೊಂದು ದಿನ ಒಂದೊಂದು ಬಣ್ಣದ ಬಟ್ಟೆ ಧರಿಸುವುದು ವಾಡಿಕೆ. ಹೀಗೆ ನವರಾತ್ರಿಯ ವೈಭವ ಜೋರಾಗಿದ್ದು, ಹೆಂಗಳೆಯರು ಒಂದೇ ತರಹದ ಸೀರೆಯನ್ನುಟ್ಟು ಮಿಂಚಿದ್ದಾರೆ.

ಜೆ.ಎಸ್.ಎಸ್ ಪದವಿ ಮಹಾವಿದ್ಯಾಲಯದ ಬೋಧಕ – ಬೋಧಕೇತರ ಮಹಿಳಾ ಸಿಬ್ಬಂದಿ ಶರನ್ನವರಾತ್ರಿ ಸಂಭ್ರಮದ ಮೊದಲ ದಿನ .

ಶರನ್ನವರಾತ್ರಿ ಸಂಭ್ರಮದ ಎರಡನೇ ದಿನ ಹಸಿರು ಸೀರೆಯಲ್ಲಿ ಮಿಂಚಿ ಸಂಭ್ರಮಿಸಿ ಮಹಿಳಾಮಣಿಯರು

ತರ್ಮಾಕೋಲ್‌ನಲ್ಲಿ ಮೂಡಿ ಬಂತು ಅಂಬಾರಿ

ನಾಡ ಹಬ್ಬ ದಸರಾ ಹಾಗೂ ನವರಾತ್ರಿ ಸಂಭ್ರಮ ಶುರುವಾಗಿದೆ. ವಿಜಯ ದಶಮಿಯಂದು ಗರ್ಜಿಸಲು ತರ್ಮಾಕೋಲ್ ಆನೆಗಳು, ಅಂಬಾರಿ ಸಹ ರಗಡ್ಡಗಿದ್ದು, ಗತಿಸಿ ಹೋದ ಇತಿಹಾಸ ಇಲ್ಲಿ ಕಾಣಸಿಗುತ್ತಿವೆ. ಒಂಬತ್ತು ದಿನಗಳ ನವರಾತ್ರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಹೆಂಗಳೆಯರು ಕಲರ್ ಕಲರ್ ಸೀರೆಯುಟ್ಟು ಮಸ್ತಿ ಮಾಡುತ್ತಿದ್ದರೆ, ಇತ್ತ ವಿಜಯದಶಮಿ ದಿನಕ್ಕೆ ತರ್ಮಾಕೋಲ್‌ನಲ್ಲಿ ಅಂಬಾರಿ ಮೂಡಿ ಬಂದಿದೆ. ಇದನ್ನು ನೋಡಿದರೆ ಸೇಮ್‌ ಮೈಸೂರು ಅಂಬಾರಿಯಂತೆ ಭಾಸವಾಗುತ್ತದೆ.

ಅಂದಹಾಗೆ ವುಡ್‌ನಲ್ಲಿ ಬೇಕಾದಂತಹ ಐಟಮ್ಸ್ ತಯಾರಿಸೋದು ಕಷ್ಟವಲ್ಲ ಆದರೆ ಅದನ್ನು ಮೆಂಟೇನ್ ಮಾಡೋದು ಕಷ್ಟಕರವೆಂದು ಜನರು ತರ್ಮಾಕೋಲ್ ಗೊಂಬೆಗಳಿಗೆ ಮೊರೆ ಹೋಗಿದ್ದಾರೆ. ತರ್ಮಾಕೋಲ್‌ನಲ್ಲಿ ಅಂಬಾರಿ, ಜೋಡಿ ಗೊಂಬೆಗಳು, ಹಂಪಿಯ ದೇವಸ್ಥಾನ, ಯಕ್ಷಗಾನದ ಮಂಟಪ, ಆನೆ, ಕಮಲದ ಹೂಗಳು ಮಾತ್ರವಲ್ಲ ಮೈಸೂರು ಅರಮನೆ ಸೇರಿದಂತೆ ಹಲವಾರು ವಿಭಿನ್ನವಾದ ಕಲೆಗಳು ಮೂಡಿ ಬಂದೀವೆ. ಸಿಲಿಕಾನ್ ಸಿಟಿ ಜನರಿಗೆ ಹಬ್ಬದ ಸಂಭ್ರಮಕ್ಕೆ ತರ್ಮಾಕೋಲ್‌ನಿಂದ ಮಾಡಿರುವ ವಸ್ತುಗಳು ಗಮನ ಸೆಳೆಯುತ್ತಿವೆ.

Continue Reading
Advertisement
Gode Bengaluru
ಬೆಂಗಳೂರು5 ನಿಮಿಷಗಳು ago

Gode Bengaluru : ಬೆಂಗಳೂರು ಗೋಡೆಗಳ ಮೇಲೆ ಚಿತ್ತಾರ; ʻಗೋಡೆ ಬೆಂಗಳೂರುʼ ಘೋಷಿಸಿದ ಅನ್‌ಬಾಕ್ಸಿಂಗ್‌

Pralhad Joshi
ದೇಶ20 ನಿಮಿಷಗಳು ago

Pralhad Joshi : ನನಗೆ ಸಹೋದರಿಯೇ ಇಲ್ಲ! ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ತಪ್ಪು ಮಾಡಿದ್ದರೆ ಕಾನೂನು ಕ್ರಮವಾಗಲಿ- ಪ್ರಲ್ಹಾದ ಜೋಶಿ

African boy successfully undergoes surgery for rare aplastic anemia
ಬೆಂಗಳೂರು1 ಗಂಟೆ ago

Aplastic anemia : ಅತಿ ವಿರಳ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆಯಿಂದ ಬಳಲುತ್ತಿದ್ದ ಆಫ್ರಿಕಾ ಮೂಲದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Self Harming
ಚಿತ್ರದುರ್ಗ4 ಗಂಟೆಗಳು ago

Self Harming: ಪ್ರೀತ್ಸೆ ಅಂತ ಪ್ರಾಣ ತಿಂದ ಯುವಕ; ಕಾಲೇಜು ಕಟ್ಟಡದ ಮೇಲಿಂದು ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

Actress Amulyas brother film director Deepak aras passes away
ಸಿನಿಮಾ6 ಗಂಟೆಗಳು ago

Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ನಿಧನ

Fraud case Union Minister Pralhad Joshis brother duped of ticket for Lok Sabha polls
ಬೆಂಗಳೂರು6 ಗಂಟೆಗಳು ago

Fraud Case : ಲೋಕಸಭೆ ಚುನಾವಣೆಗೆ ಟಿಕೆಟ್‌ ಕೊಡಿಸುವುದಾಗಿ ಕೋಟಿ ರೂ. ಲೂಟಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರನ ವಿರುದ್ಧ ಎಫ್‌ಐಆರ್‌ ದಾಖಲು

Dina bhavishya
ಭವಿಷ್ಯ13 ಗಂಟೆಗಳು ago

Dina Bhavishya : ಅತಿಯಾದ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಪಿತೂರಿ ಮಾಡುವ ಜನರ ಬಗ್ಗೆ ಇರಲಿ ಎಚ್ಚರ

Gosavi samaj lathicharged Sri Ram Sene calls for bandh in Lakshmeshwara town on October 19
ಗದಗ1 ದಿನ ago

Lakshmeshwara Town: ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್; ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಶ್ರೀರಾಮಸೇನೆ ಕರೆ

A man killed his wife and her lover then committed suicide
ಬೆಂಗಳೂರು1 ದಿನ ago

Murder Case: ಪ್ರಿಯಕರ ಜತೆ ಏಕಾಂತದಲ್ಲಿ ಇರುವಾಗಲೆ ಪತ್ನಿ ಲಾಕ್‌; ಇಬ್ಬರನ್ನು ಕೊಂದು ಪತಿ ಸೂಸೈಡ್‌

Parvati Nair to play dual role in suspense thriller un Paravail Tamil film
ಸಿನಿಮಾ1 ದಿನ ago

Parvati Nair : ಸಸ್ಪೆನ್ಸ್ ಥ್ರಿಲ್ಲರ್‌ ʻಊಣ್‌ ಪರವೈಲ್‌ʼ ತಮಿಳು ಚಿತ್ರದಲ್ಲಿ ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಮಿಂಚಿಂಗ್‌

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌