Ugadi 2023 : ಜಗದ ಆದಿ ಈ ಯುಗಾದಿ! - Vistara News

ಧಾರ್ಮಿಕ

Ugadi 2023 : ಜಗದ ಆದಿ ಈ ಯುಗಾದಿ!

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಎಂಬಂತೆ ಯುಗಾದಿ (Ugadi 2023) ಮರಳಿ ಬಂದಿದೆ. ಈ ಹಬ್ಬದ ಸಂಪೂರ್ಣ ಮಾಹಿತಿ ನೀಡುವ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

ugadi 2023 know history significance celebrations and more about the festival in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುಬ್ರಹ್ಮಣ್ಯ ಸೋಮಯಾಜಿ
ಶುಭಕೃತ್‌ ಸಂವತ್ಸರವು ಉರುಳಿ ಶೋಭನಕೃತ್‌ ಸಂವತ್ಸರಕ್ಕೆ ತನ್ನ ಒಡೆತನವನ್ನು ವಹಿಸಿದೆ. ಯುಗಾದಿಯು (Ugadi 2023) ಆಸೇತು ಹಿಮಾಲಯ ಆಚರಿಸುವ ನಮ್ಮ ಸಂಭ್ರಮದ ಹಬ್ಬ. ಭಾರತೀಯ ಮಹರ್ಷಿಗಳು ನಿಸರ್ಗದ ಅಧ್ಯಯನದಿಂದ ವಿಶ್ವ ವಿಕಾಸಚಕ್ರದ ಆರಂಭದ ಬಿಂದುವನ್ನು ಗುರುತಿಸಿ ತಂದುಕೊಟ್ಟ ಪರ್ವದಿನ. ಕಾಲಾತೀತನಾದ ಭಗವಂತನು ಕಾಲಚಕ್ರದಲ್ಲೂ ವ್ಯಾಪಿಸಿ ಪ್ರಕೃತಿಮಾತೆಯನ್ನು ಸಸ್ಯಶ್ಯಾಮಲೆಯನ್ನಾಗಿಸುವ ಆರಂಭದ ದಿನ.

ಎಲ್ಲೆಲ್ಲೂ ಕಣ್ಮನಗಳನ್ನು ಸೆಳೆಯುವ ಬಣ್ಣ ಬಣ್ಣದ ಹೊಸ ಚಿಗುರುಗಳು ಹೊಸವರ್ಷದ ಹರ್ಷವನ್ನು ತರುತ್ತಿವೆ. ವಿಕಾಸದ ಹಾದಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿ, ನಮ್ಮೆಡೆಗೆ ಬಂದವರಿಗೆಲ್ಲ ತಂಪನ್ನು ನೀಡಿ, ತಾವಿದ್ದ ವೃಕ್ಷದ ಶೋಭೆಯಾಗಿದ್ದು, ಹಣ್ಣಾದ ಎಲೆಗಳು ಯೋಗಿಯಂತೆ ನಿರ್ಲಿಪ್ತ ಭಾವದಿಂದ ಹೊಸ ಚಿಗುರೆಲೆಗೆ ದಾರಿ ಮಾಡಿ ಕೊಟ್ಟು ತಮ್ಮ ಜಾಗದಿಂದ ಕಳಚಿಕೊಂಡಿವೆ. ಆ ಎಡೆಯಲ್ಲಿ ಹೊಸ ತಳಿರುಗಳು ಮುಂದಿನ ವಿಕಾಸದ ಹೊಣೆಹೊತ್ತು ಕರ್ತವ್ಯಪರವಾಗಿ ನಿಂತಿವೆ. ನಿಸರ್ಗವೆಲ್ಲವೂ ಹೊಸಬಗೆಯ ಚೈತನ್ಯದಿಂದ, ಕೋಗಿಲೆಯ ಇಂಚರದಿಂದ, ಸ್ನಾತೆಯಾಗಿ ಶುಭ್ರವಸ್ತ್ರವೇಷ್ಟಿತಳಾಗಿ, ಶುಚಿಸ್ಮಿತೆಯಾಗಿ ಕಂಗೊಳಿಸುವ ಮಹೋತ್ಸವದ ಪರ್ವಕಾಲ.

ಭಾರತೀಯ ಹಬ್ಬಗಳ ಹಿನ್ನೆಲೆ ಏನು?

ಭಾರತೀಯ ಸಂಸ್ಕೃತಿಯಲ್ಲಿ ದಿನಕ್ಕೊಂದು ಹಬ್ಬದಂತೆ ಹಬ್ಬಗಳ ಸಾಲು ಸಾಲು. ಒಂದೊಂದು ಹಬ್ಬದ ಆಚರಣೆ ಒಂದೊಂದು ಬಗೆಯದು. ಅಲ್ಲಿ ಆರಾಧಿಸುವ ಒಂದೊಂದು ದೇವತೆಗೆ ಒಂದೊಂದು ಬಗೆಯ ಭಕ್ಷ್ಯಗಳು. ಇದೆಲ್ಲ ಏಕೆ? ಬೇರೆ ಸಂಸ್ಕೃತಿಗಳಲ್ಲಿ ಇರುವಂತೆ ಕೆಲವೇ ಹಬ್ಬಗಳಿದ್ದರೆ ಅದನ್ನು ಸಂಭ್ರಮದಿಂದ, ವೈಭವದಿಂದ ಆಚರಿಸಬಹುದಲ್ಲವೇ? ಇಷ್ಟಾರು ಬಗೆಯ ಆಚರಣೆಗಳ ವೈವಿಧ್ಯವಾದರೂ ಏಕೆ, ಇನ್ನು ನಾವು ವಿಧ ವಿಧ ಭಕ್ಷ್ಯಗಳನ್ನು ಮಾಡಿ ದೇವರಿಗೆ ಕೊಡಬೇಕೇ? ದೇವರಿಗೆ ನಮ್ಮಂತೆ ನಾಲಿಗೆ ಚಪಲವೇ? ನಾವು ಕೊಟ್ಟ ಭಕ್ಷ್ಯಗಳಿಂದ ತೃಪ್ತಿ ಹೊಂದುವ ದೇವರು, ಸ್ವತಃ ಪರಾವಲಂಬಿ ಆದರೆ ನಮ್ಮನ್ನು ಹೇಗೆ ತಾನೇ ಕಾಪಾಡಿಯಾನು? ಎಂಬೆಲ್ಲ ಪ್ರಶ್ನೆಗಳು ಏಳಬಹುದು.

ಆದರೆ ಭಾರತೀಯ ಮಹರ್ಷಿಗಳು ತಂದ ಹಬ್ಬಗಳು ಕೇವಲ ತಿನ್ನುವ, ಕುಡಿಯುವ ಕುಣಿದಾಡುವ, ಹರಟೆ ಹೊಡೆಯುವ ಸಮಾರಂಭಗಳು ಮಾತ್ರವಲ್ಲ. ಅವು ಪರಮಾತ್ಮನ ಕಾಲ ಶರೀರದಲ್ಲಿ ಗಿಣ್ಣಿನಂತೆ ಇರುವ ಜಾಗಗಳು. ಶಕ್ತಿಯ ಕೆಂದ್ರಸ್ಥಾನಗಳು. “ತನ್ನ ಕಾಲರೂಪವಾದ ಶರೀರದಲ್ಲಿ ಭಗವಂತನು ಗೊತ್ತಾದ ಸ್ಥಾನಗಳಲ್ಲಿ ಜೀವಿಗಳಿಗೆ ಅವುಗಳ ಉದ್ಧಾರಕ್ಕಾಗಿ ಒದಗಿಸಿಕೊಡುವ ಸೌಲಭ್ಯಗಳೇ ಪರ್ವಗಳು; ಆ ಅನುಗ್ರಹದ ಉಪಯೋಗವನ್ನು ಕಳೆದುಕೊಳ್ಳಬಾರದು ” ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.

ಕಬ್ಬಿನ ಗಿಣ್ಣುಗಳಲ್ಲಿ ಒಂದೊಂದು ಗಿಣ್ಣೂ ಸಸ್ಯದ ಹೊಸ ಬೆಳವಣಿಗೆಗೆ ಬೀಜಭೂತವಾಗಿರುತ್ತದೆ. ಅಲ್ಲಿ ಎಷ್ಟು ಗಿಣ್ಣುಗಳು ಇರಬೇಕು ಎಂದು ನಿಸರ್ಗವೇ ತೀರ್ಮಾನಿಸುತ್ತದೆ. ಅದರ ಜಾತಿ ಮತ್ತು ಬೆಳವಣಿಗೆಗೆ ತಕ್ಕಂತೆ ಆ ಪರ್ವಗಳ ಸಂಖ್ಯೆ ಪ್ರಕೃತಿಯಲ್ಲಿ ನಿಯತವಾಗಿರುತ್ತದೆ. ಅದರ ಸಂಖ್ಯೆ ಹೆಚ್ಚಾಗಿದ್ದರೆ ಅದನ್ನೆಲ್ಲಾ ನೆಟ್ಟು ಬೆಳೆಸಿ ಗಿಡದ ಸಂತಾನವನ್ನು ವೃದ್ಧಿಪಡಿಸುವುದಕ್ಕೆ ಸಹಾಯವಾಗುತ್ತದೆ. ಅದನ್ನು ನಾವು ಉಪಯೋಗಿಸಲಿ, ಬಿಡಲಿ ಅದರ ಸಂಖ್ಯೆ ಎಷ್ಟಿರಬೇಕೋ ಅಷ್ಟು ಇದ್ದೇ ಇರುತ್ತದೆ. ಹಾಗೆಯೇ ಕಾಲವೃಕ್ಷದಲ್ಲಿರುವ ಹಬ್ಬಗಳಿಗೂ ಇದೇ ನಿಯಮ ಅನ್ವಯಿಸುತ್ತದೆ.

ಒಂದು ದಿನದಲ್ಲಿ ಪ್ರಾತಃಕಾಲ, ಮಧ್ಯಾಹ್ನ ಕಾಲ, ಸಾಯಂಕಾಲ ಇವುಗಳಿರುವುದು ಸ್ಥೂಲ ದೃಷ್ಟಿಗೂ ಗೋಚರವಾಗುತ್ತದೆ. ಅದನ್ನೇನೂ ಬದಲಾಯಿಸಬೇಕು ಎಂದು ನಾವು ಬಯಸದೇ ನಮ್ಮ ಭೌತಿಕ ಪ್ರಯೋಜನಗಳಿಗೆ ಅವನ್ನು ಬಳಸಿಕೊಳ್ಳುತ್ತೇವೆ. ಹಾಗೆಯೇ ಮಹರ್ಷಿಗಳ ಸೂಕ್ಷ್ಮ ದೃಷ್ಟಿಗೆ ಗೋಚರವಾದ ಈ ಪರ್ವಕಾಲ-ಹಬ್ಬಗಳನ್ನು ಹೀಗೆಯೇ ಅರಿತು ಉಪಯೋಗಿಸಿಕೊಳ್ಳುವುದು ಜಾಣತನ. ಈ ಪರ್ವಕಾಲಗಳು ಕೇವಲ ಭೌತಿಕ ಜೀವನಕ್ಕೆ ಮಾತ್ರವೇ ಸಂಬಂಧಿಸದೇ, ದೈವಿಕ- ಆಧ್ಯಾತ್ಮಿಕ ಉನ್ನತಿಗೂ ಕಾರಣವಾಗುವುದನ್ನು ಗುರುತಿಸಿ ಲೋಕಹಿತದ ದೃಷ್ಟಿಯಿಂದ ನಮಗೆ ತಂದುಕೊಟ್ಟಿದ್ದಾರೆ. ಅವು ನಾವು ಹೇಳಿದಾಗ ಬರುವುದಿಲ್ಲ. ಅವು ಬಂದಾಗ ಅವನ್ನು ವ್ಯರ್ಥಗೊಳಿಸದೆ ಉಪಯೋಗಿಸಿಕೊಳ್ಳಬೇಕು. ಹಬ್ಬಗಳ ಸಂಖ್ಯೆಯನ್ನು ನಾವು ತೀರ್ಮಾನ ಮಾಡುವ ಅವೈಜ್ಞಾನಿಕ ಪದ್ಧತಿ ನಮ್ಮಲ್ಲಿಲ್ಲ. ಅದನ್ನು ನಿಸರ್ಗವೇ ತೀರ್ಮಾನಿಸುತ್ತದೆ. ಅದನ್ನು ತಮ್ಮ ತಪಸ್ಯೆಯಿಂದ ಗುರುತಿಸಿ ಜೀವಲೋಕಹಿತದ ದೃಷ್ಟಿಯಿಂದ ತಿಳಿಸುವ ಕೆಲಸವನ್ನು ನಮ್ಮ ಮಹರ್ಷಿಗಳು ಮಾಡಿದ್ದಾರೆ ಎಂಬುದನ್ನು ನಾವು ನೆನಪಿಡಬೇಕು.

ನೈವೇದ್ಯ-ಪ್ರಸಾದಗಳ ಋಷಿ ದೃಷ್ಟಿ

ಹಾಗೆಯೇ ಆಯಾ ದೇವತೆಗಳಿಗೆ ಪ್ರೀತಿಕರವಾದ ಭಕ್ಷ್ಯಗಳ ತಯಾರಿಯೂ ಸಹ ನಮ್ಮ ಅಥವಾ ದೇವತೆಗಳ ನಾಲಿಗೆ ಚಾಪಲ್ಯದಿಂದ ಬಂದ ಪದ್ಧತಿಯಲ್ಲ. ಅಂತಹ ಭಕ್ಷ್ಯವನ್ನು ನಿವೇದಿಸಿ ಪ್ರಸಾದ ರೂಪವಾಗಿ ಸೇವಿಸಿದಾಗ ನಮ್ಮ ದೇಹದಲ್ಲಿ ಆ ದೇವತಾ ಪ್ರಬೋಧಕ್ಕೆ, ದರ್ಶನಕ್ಕೆ ಸಂಬಂಧಿಸಿದ ಕೇಂದ್ರಗಳು ತೆರೆದುಕೊಳ್ಳುತ್ತವೆ ಎಂಬುದು ಮಹರ್ಷಿಗಳು ಕಂಡುಕೊಂಡ ಪದಾರ್ಥ ವಿಜ್ಞಾನ; ವೈಜ್ಞಾನಿಕ ಸತ್ಯ. ಅದಕ್ಕಾಗಿ ಬಂದ ಆಚರಣೆಗಳಿವು ಎಂಬುದು ಜ್ಞಾನಿಜನರ ಮಾತು. ಇಷ್ಟು ಹಿನ್ನೆಲೆಯಲ್ಲಿ ಮತ್ತು ಪರಮ ಪೂಜ್ಯ ಶ್ರೀರಂಗಪ್ರಿಯ ಸ್ವಾಮಿಗಳು ಈ ವಿಷಯವಾಗಿ ಅನುಗ್ರಹಿಸಿದ ವಿಷಯಗಳ ನೋಟದಲ್ಲಿ ಪ್ರಸ್ತುತ ಯುಗಾದಿ ಹಬ್ಬದ ಬಗ್ಗೆ ಆಲೋಚಿಸೋಣ.

ವರ್ಷಾರಂಭ ಯಾವ ದಿನ?

ಯಾವುದಾದರೂ ನಿರ್ದಿಷ್ಟ ದಿನವನ್ನು ವರ್ಷದ ಪ್ರಾರಂಭದ ದಿನವೆಂದು ಭಾವಿಸಿ ಅಂದು ಸಂತೋಷವನ್ನು ಆಚರಿಸುವ ಪದ್ಧತಿಯು ಎಲ್ಲಾ ಜನಾಂಗದಲ್ಲೂ ಇದೆ. ಆದರೆ ಪುರುಷಾರ್ಥ ಸಾಧನೆಗೆ ಪೂರ್ಣವಾಗಿ ಹೊಂದಿಕೊಳ್ಳುವ ಯುಗಾದಿ ಪರ್ವಕ್ಕೆ ತಕ್ಕ ಕಾಲವನ್ನು ಆರಿಸಿಕೊಂಡಿರುವುದು ಈ ದೇಶದ ಮಹರ್ಷಿಗಳ ವಿವೇಕಕ್ಕೆ ಸೇರಿದ್ದು. ಇದಕ್ಕೆ ಅವರು ಆರಿಸಿಕೊಂಡಿರುವ ಅಯನ, ಋತು, ಮಾಸ, ಪಕ್ಷ,ತಿಥಿ ಎಲ್ಲವೂ ಅಂದಿನ ಕರ್ಮ ಮತ್ತು ಉದ್ದೇಶಗಳಿಗೆ ಸಮರ್ಥವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ನಾವು ಗಮನಿಸಬೇಕು.

ಉತ್ತರಾಯಣ-ವಸಂತ ಋತು

ಉತ್ತರಾಯಣವು ದೇವತೆಗಳ ಹಗಲು. ದೇವತಾರಾಧನೆಗೆ ಪ್ರಶಸ್ತವಾದ ಅಯನ. ಯುಗಾದಿಯು ದೇವತಾರಾಧನೆಗೆ ನಿಯತವಾಗಿರುವ ಶುಭಪರ್ವ. ದೇವಮಾರ್ಗಕ್ಕೆ ಹಿತಕರವಾಗಿರುವ ಉತ್ತರಾಯಣವನ್ನೇ ಈ ಹಬ್ಬಕ್ಕೆ ತೆಗೆದುಕೊಂಡಿರುವುದು ಉಚಿತವಾಗಿದೆ. ವಸಂತ ಋತು, ಋತುಗಳ ರಾಜ. ಮೇಲೆ ತಿಳಿಸಿದಂತೆ ಪ್ರಕೃತಿಯು ಹೊಸ ಹೂವು, ತಳಿರುಗಳಿಂದ ತನ್ನನ್ನು ಸಿಂಗರಿಸಿಕೊಂಡು ಜಗತ್ತಿಗೆ ಹೊಸತನದ ಸಂದೇಶವನ್ನು ಸಾರುವ ಋತು. ಜೀವಲೋಕಕ್ಕೆ ಹಳೆಯ ಹೇವರಿಕೆಯ ಸಂಸ್ಕಾರಗಳನ್ನು ಕೊಡವಿ ಸತ್ಯ-ಶಿವ-ಸುಂದರವಾದ ಧರ್ಮ-ಅರ್ಥ-ಕಾಮಗಳನ್ನು ಪಡೆಯುವ ಸಾಧನೆಯ ಮಾರ್ಗದಲ್ಲಿ ಹೊಸ ಹೆಜ್ಜೆಯನ್ನಿಡಲು ಪ್ರೇರಿಸುವ ಋತುರಾಜ. ಶುಭಾಶಂಸನೆ, ಶುಭ ಪ್ರತಿಜ್ಞೆ, ಶಿವ ಸಂಕಲ್ಪಗಳನ್ನು ಮಾಡಲು ಪ್ರೇರಕವಾದ ಕಾಲ. “ತನ್ಮೇ ಮನಃ ಶಿವ ಸಂಕಲ್ಪಮಸ್ತು” ಎಂಬ ಪಲ್ಲವಿಯ ವೇದಮಂತ್ರಗಳನ್ನುಅರ್ಥಪೂರ್ಣವಾಗಿಸುವ ಕಾಲ.

ಐಹಿಕವಾಗಿ ಈ ಸಂಕಲ್ಪಗಳಾದರೆ, ಪಾರಮಾರ್ಥಿಕವಾಗಿ ಒಳಗಿನ ಪ್ರಕೃತಿಯಲ್ಲೂ ಸಹಜವಾಗಿ ಪ್ರಸನ್ನತೆ ಉಂಟಾಗಿ “ತದೇವ ರಮ್ಯಂ ಪರಮ ನಯನೋತ್ಸವ ಕಾರಣಂ” ಎಂದು ಜ್ಞಾನಿಗಳು ಸ್ವಾನುಭವದಿಂದ ಗಾನಮಾಡುವ ಪರಮಪುರುಷನ ಸೌಂದರ್ಯದ ಅನುಭವಕ್ಕೂ ಒಳಮುಖವಾದ ಆಕರ್ಷಣೆ ಉಂಟಾಗುವ ಪರ್ವಕಾಲ ಎಂಬುದು ಅನುಭವಿಗಳ ಮಾತು. ಅಲ್ಲದೇ ಈ ಋತುವಿನ ಸಮಶೀತೋಷ್ಣವಾದ ವಾತಾವರಣವೂ ದೇವತಾಪೂಜೆಗೆ ಬೇಕಾದ ಅರ್ಥ ಸಂಗ್ರಹ, ಪೂಜಾ ಕಾರ್ಯ ಎಲ್ಲಕ್ಕೂ ಹಿತಕರ.

ವಸಂತವೇ ಮುಂತಾದ ಮೂರು ಋತುಗಳು ಉಷ್ಣತಾ ಪ್ರಧಾನವಾಗಿವೆ. ಅವು ಅಗ್ನಿ ಅಥವಾ ಶಿವ ಸ್ವರೂಪದ ಪ್ರತೀಕ. ಶರತ್ತು ಮುಂತಾದ ಮೂರು ಋತುಗಳು ಶೈತ್ಯ ಪ್ರಧಾನ. ಅವು ಸೋಮ ಅಥವಾ ಶಕ್ತಿಸ್ವರೂಪದ ಪ್ರತೀಕ. ಈ ಅಗ್ನಿ ಮತ್ತು ಸೋಮ ಅಥವಾ ಶಿವ-ಶಕ್ತಿಗಳ ಯೋಗದಿಂದಲೇ ಈ ಜಗತ್ತಿನ ಸೃಷ್ಟಿ ಎಂಬುದನ್ನೇ ಬ್ರಹ್ಮಪುರಾಣವು ಸಾರುತ್ತದೆ. ಅದರಿಂದ ಈ ಶೈತ್ಯ ಉಷ್ಣತೆಗಳ ಸಂಗಮಕಾಲವನ್ನು ಸೃಷ್ಟಿಕರ್ತನು ಸೃಷ್ಟಿಯನ್ನು ಪ್ರಾರಂಭಿಸಿದ ದಿನ ಎಂದು ಭಾವಿಸಿರುವುದೂ ಸಹ ಸರ್ವಥಾ ಉಚಿತವಾಗಿದೆ. ಶಿವ-ಶಕ್ತಿಗಳು ಹೊರಮುಖವಾಗಿ ಸೇರಿದರೆ ಸೃಷ್ಟಿ. ಒಳಮುಖವಾಗಿ ಸೇರಿದರೆ ಸಮಾಧಿ. ಅಂತಹ ಸಮಾಧಿಯೋಗಕ್ಕೂ ಅದಕ್ಕನುಗುಣವಾದ ಲೋಕಯಾತ್ರೆಯ ಆಯೋಜನೆಗೂ ಸ್ಫೂರ್ತಿ ನೀಡುವ ಸಂಧಿಸಮಯ ಇದು.

ಚೈತ್ರಮಾಸ-ಶುಕ್ಲಪಕ್ಷ-ಪ್ರಥಮಾ

ಇನ್ನು ಚೈತ್ರಮಾಸದಲ್ಲೇ ಪುಷ್ಪಪಲ್ಲವಗಳು ಬಿರಿಯುವುದು ಮತ್ತು ಅದಕ್ಕಾಗಿ ಮಧುವು ಸೃಷ್ಟಿಯಾಗುವುದು. ಈ ದೃಷ್ಟಿಯಿಂದಲೂ ವರ್ಷಾರಂಭಕ್ಕೆ ತಕ್ಕುದಾದ ಮಾಸ ಚೈತ್ರಮಾಸ. ಶುಕ್ಲಪಕ್ಷವು ದೇವತಾರಾಧನೆಗೂ ಕೃಷ್ಣ ಪಕ್ಷವು ಪಿತೃಗಳ ಆರಾಧನೆಗೂ ಶ್ರೇಷ್ಠವಾಗಿವೆ. ದೇವತಾರಾಧನೆಯೇ ಪ್ರಧಾನವಾಗಿರುವ ಯುಗಾದಿ ಪರ್ವದ ಆಚರಣೆಗೆ ತಕ್ಕ ಪಕ್ಷವೇ ಶುಕ್ಲಪಕ್ಷ. ಓಷಧಿ-ವನಸ್ಪತಿಗಳ ಅಭಿವೃದ್ಧಿಗೆ, ಅವುಗಳ ರಾಜನಾದ ಸೋಮನ ಅಭ್ಯುದಯಕ್ಕೆ ಕಾರಣವಾದ ಪಕ್ಷವೇ ಶುಕ್ಲಪಕ್ಷ. ಎಂದೇ ಶುಕ್ಲಪಕ್ಷವನ್ನು ಆರಿಸಿರುವುದು ಅತ್ಯಂತ ಉಚಿತವಾಗಿದೆ. ಇನ್ನು ಪ್ರಥಮಾ ತಿಥಿಯು, ಚಂದ್ರನ ಪ್ರಥಮ ಕಲೆಯು ಕಾಣಿಸಿಕೊಳ್ಳುವ ದಿನ. ಅದರಿಂದ ವರ್ಷದ ಪ್ರಥಮ ದಿನವನ್ನಾಗಿ ಅದನ್ನು ಪರಿಗಣಿಸಿರುವುದು ಯುಕ್ತವಾಗಿದೆ. ಇವಿಷ್ಟೂ ಚಾಂದ್ರಮಾನ ಯುಗಾದಿಯನ್ನು ಆಚರಿಸುವ ಕಾಲದ ಮಹತ್ವವಾಯಿತು.

ugadi 2023 know history significance celebrations and more about the festival in kannada

ಸೌರಮಾನ ಯುಗಾದಿ

ಇನ್ನು ಸೌರಮಾನ ಯುಗಾದಿಯ ಕಾಲದ ವಿಷಯ. ಅದಕ್ಕೆ ನಿಯತವಾಗಿರುವ ಕಾಲ ಮೇಷಮಾಸದ ಸಂಕ್ರಮಣ. ಅಯನ, ಮಾಸಗಳು ಚಾಂದ್ರಮಾನ ಯುಗಾದಿಯ ಅಯನ ಮಾಸಗಳೇ. ಇದಲ್ಲದೇ ದಿನದ ವಿಶೇಷವನ್ನು ಗಮನಿಸಿದರೆ ಅದು ಸಂಕ್ರಮಣದ ದಿನ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು ಸಂಕ್ರಮಣ ಎನ್ನುತ್ತಾರೆ. ವರ್ಷದಲ್ಲಿ 12 ಸಂಕ್ರಮಣಗಳು. ಇವೆಲ್ಲವೂ ಪರ್ವ ಕಾಲಗಳೇ. ಮೇಲೆ ತಿಳಿಸಿದಂತೆ ಕಾಲವೃಕ್ಷದಲ್ಲಿರುವ ಗಿಣ್ಣಿನ ಜಾಗಗಳೇ.

ಇವುಗಳಲ್ಲಿ ಮೇಷಸಂಕ್ರಮಣವು “ಮಹಾವಿಷುವ” ಎಂದು ಕರೆಯಲ್ಪಡುವ ವಿಶೇಷ ಪರ್ವಕಾಲ. ಈ ವಿಷುವ ಕಾಲದಲ್ಲಿ ಹೊರಗಿನ ಸೂರ್ಯನು ರಾಶಿಯಲ್ಲಿ ಹೆಜ್ಜೆ ಹಾಕುವಂತೆಯೇ ಸಮಕಾಲದಲ್ಲಿ ಒಳಗಿನ ಜೀವ ಸೂರ್ಯನೂ ಸುಷುಮ್ನೆಯ ಗ್ರಂಥಿಯೊಳಗೆ ಸಂಗಮ ಹೊಂದುತ್ತಾನೆ; ಸಹಜವಾಗಿ ಸಮಾಧಿ ಸ್ಥಿತಿಯಲ್ಲಿ ಅವಗಾಹನೆ ಮಾಡ ತೊಡಗುತ್ತಾನೆ ಎಂಬುದು ಯೋಗಿಗಳ ಅನುಭವವೇದ್ಯವಾದ ವಿಷಯ. ಅದರಿಂದಲೇ ಈ ಸಂಗಮ ಕಾಲವು ಧ್ಯಾನಕ್ಕೆ, ಪೂಜೆ ದಾನಗಳಿಗೆ ಮತ್ತು ತರ್ಪಣಗಳಿಗೆ ಅತ್ಯಂತ ಶ್ರೇಷ್ಠವಾಗಿದೆ.

ಈ “ಸಂಗಮ” “ಸಾಮ್ಯ”ಗಳೆಲ್ಲ ಕೇವಲ ಆಕಸ್ಮಿಕ ಘಟನೆಗಳಲ್ಲ. ಪ್ರಕೃತಿನಿಯಮದಂತೆ ಸಹಜವಾಗಿ ಐಕ್ಯ ಹೊಂದುವ ಒಳ-ಹೊರ ಸಂಗಮ, ಸಾಮ್ಯಗಳು ಅವು. ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಈ ಪರ್ವ ಕಾಲಗಳ ಮಹಾ ಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ಹೀಗೆ ಯುಗಾದಿ ಪರ್ವಕ್ಕೆ ಮಹರ್ಷಿಗಳು ನಿಗದಿಸಿರುವ ಕಾಲವಿಶೇಷವು ಆಧಿ ಭೌತಿಕ-ಹೊರಗಿನ ಕ್ಷೇತ್ರಕ್ಕೆಸಂಬಂಧಿಸಿದುದು, ಆಧಿ ದೈವಿಕ-ಒಳಗೆ ನಿಯಾಮಕರಾಗಿರುವ ದೇವತೆಗಳಿಗೆ ಸೇರಿದ್ದು, ಮತ್ತು ಆಧ್ಯಾತ್ಮಿಕ-ಎಲ್ಲಕ್ಕೂ ಅಂತರ್ಯಾಮಿಯಾದ ಆತ್ಮಕ್ಕೆ ಸೇರಿದ್ದು–ಈ ಮೂರೂ ಕ್ಷೇತ್ರಗಳ ಅಭಿವೃದ್ಧಿಗೆ ಕಾರಣವಾಗಿದೆ. ದೇವತಾನುಗ್ರಹದಿಂದ ಮತ್ತು ಪುರುಷ ಪ್ರಯತ್ನದಿಂದ ಈ ಮೂರೂ ಕ್ಷೇತ್ರಗಳಲ್ಲಿ ದೊರೆಯಬಹುದಾದ ಎಲ್ಲಾ ಪುರುಷಾರ್ಥ ಸಾಧನೆಗೂ ಹೊಂದಿಕೆಯಾಗಿ ಮಹರ್ಷಿಗಳ ಅದ್ಭುತವಾದ ಕಾಲವಿಜ್ಞಾನದ ಕೈಗನ್ನಡಿಯಾಗಿದೆ.

ಆಚರಣೆ, ದ್ರವ್ಯ-ಕರ್ಮಗಳ ಔಚಿತ್ಯ

ಈ ದಿನದಲ್ಲಿ ಬಳಸುವ ದ್ರವ್ಯಗಳು ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕೂ ಪುರುಷಾರ್ಥಗಳನ್ನು ಪಡೆಯುವ ಸಾಧನಗಳಾಗಿರುವಂತೆ ಜ್ಞಾನಿಗಳು ಅಳವಡಿಸಿದ್ದಾರೆ.

ಅಭ್ಯಂಗ ಸ್ನಾನ

ಅಂದು ಅಭ್ಯಂಗ ಸ್ನಾನ ಮಾಡಬೇಕು. ಅಭ್ಯಂಗ ಸ್ನಾನದಿಂದ ಮುಪ್ಪು, ಆಯಾಸ ಮತ್ತು ವಾತದ ದೋಷಗಳ ನಿವಾರಣೆ, ದೃಷ್ಟಿ ಪಾಟವ, ಪ್ರಸನ್ನತೆ, ಪುಷ್ಟಿ, ಆಯುರ್ವೃದ್ಧಿ, ನಿದ್ರಾ ಸೌಖ್ಯ, ಚರ್ಮದ ಆರೋಗ್ಯ, ಸೌಂದರ್ಯ ವೃದ್ಧಿ ಇತ್ಯಾದಿ ಭೌತಿಕ ಪ್ರಯೋಜನಗಳಂತೂ ಇದ್ದೇ ಇವೆ ಎಂದು ಆಯುರ್ವೇದವು ಸಾರುತ್ತದೆ. ಯುಗಾದಿಯಾದರೋ ಪರ್ವ ಕಾಲ. ಶೀಘ್ರಫಲ ಕೊಡುವ ಶಕ್ತಿಯಿಂದ ಕೂಡಿದ ಕಾಲ.

ಇಂದಿನ ಅಭ್ಯಂಗ ಸ್ನಾನದಿಂದ ಮನೋಬಲವೂ ವೃದ್ಧಿಯಾಗಿ ಫಲವು ವೀರ್ಯವತ್ತರವಾಗುತ್ತದೆ. ಈ ಭೌತಿಕ ಪ್ರಯೋಜನಗಳ ಜೊತೆಗೇ ಒಳಗೆ ಧಾತುಸಾಮ್ಯವೂ ಉಂಟಾದರೆ ದೇವತಾರಾಧನೆಗೆ ಅತ್ಯಂತ ಸಹಕಾರಿಯಾದ ಸ್ಥಿತಿ ನಮಗೆ ಬರುತ್ತದೆ. “ಧಾತುಪ್ರಸಾದಾನ್ಮಹಿಮಾನಮೀಶಂ” ಎಂದು ಉಪನಿಷತ್ತು ಸಾರುವಂತೆ ಧಾತುಗಳ ಪ್ರಸನ್ನತೆ ಇರುವವನು ಒಳಗಿನ ಪ್ರಕಾಶವನ್ನು ಅನುಭವಿಸಲು ಸಮರ್ಥನಾಗುತ್ತಾನೆ.

ಗೃಹಾಲಂಕಾರ

ಅಂದು ತಳಿರು ತೋರಣಗಳಿಂದ ಮನೆಯನ್ನೂ, ಮನೆಯನ್ನೂ ಮನಸ್ಸು ದಿವ್ಯ ಭಾವಕ್ಕೆ ಏರುವಂತೆ ಅಲಂಕರಿಸಬೇಕೆಂದು ಶ್ರೀರಂಗ ಮಹಾಗುರುಗಳ ಅಭಿಪ್ರಾಯವಾಗಿತ್ತು. ಭಗವಂತನ ಚಿಹ್ನೆಗಳಿಂದ ಕೂಡಿದ ಧ್ವಜವನ್ನು ಹಾರಿಸಬೇಕು.”ಆ ಪತಾಕೆಯು ತನ್ನ ಸಂದೇಶಾಮೃತದ ಭಾವದಿಂದ ಭಗವಂತನ ಪರಮೋನ್ನತವಾದ ಪಾದಾರವಿಂದವನ್ನೇ ಮುಟ್ಟಬೇಕು ” ಎಂಬ ಅವರ ಮಾತು ಇಲ್ಲಿ ಸ್ಮರಣೀಯ.

ugadi 2023 know history significance celebrations and more about the festival in kannada

ಸಂಕಲ್ಪ

ವರ್ಷಪ್ರತಿಪತ್ತಿನ ವ್ರತವನ್ನು ನಾನು ಆಚರಿಸುತ್ತೇನೆ ಎಂಬ ಸಂಕಲ್ಪ. “ಹರಿಃ ಓಂ ತತ್ಸತ್” ಎಂದು ದೇಶ-ಕಾಲಾತೀತನಾದ ಪರಮಾತ್ಮನನ್ನು ಸ್ಮರಿಸಿ ನಂತರ ಕಾಲದೇಶಗಳನ್ನೂ, ಕರ್ಮ, ಅದರ ಉದ್ದೇಶಗಳನ್ನೂ ಸ್ಮರಿಸುತ್ತೇವೆ. ಇದರಿಂದ ಭಗವಂತನು ದೇಶಕಾಲಾತೀತನಾಗಿದ್ದರೂ ದೇಶ ಕಾಲಗಳು ಅವನ ಶರೀರವೇ ಆಗಿವೆ ಎಂಬ ತತ್ತ್ವವು ಸ್ಮರಣೆಗೆ ಬರುತ್ತದೆ. ತಾನು ಆಚರಿಸುವ ಕರ್ಮದ ಗೊತ್ತು-ಗುರಿಗಳೂ ಮನಸ್ಸಿನಲ್ಲಿ ಬೇರೂರುತ್ತವೆ. ಇವೆಲ್ಲವುಗಳ ಅರಿವಿನಿಂದ ಮಾಡಿದ ಕರ್ಮವೇ ವೀರ್ಯವತ್ತರವಾಗುವುದು.

“ಯದೇವ ವಿದ್ಯಯಾ ಕರೋತಿ, ತದೇವ ವೀರ್ಯವತ್ತರಂ ಭವತಿ” ಎಂಬಂತೆ. ಯಾವ ಕಾಮನೆಗಳನ್ನೂ ಇಟ್ಟುಕೊಳ್ಳದೇ ಎಲ್ಲವೂ ಭಗವಂತನ ಪ್ರೀತಿಗಾಗಿ ಎಂಬ ಸಂಕಲ್ಪದಿಂದ ವ್ರತವನ್ನು ಆಚರಿಸುವುದು ಉತ್ತಮ ಕಲ್ಪ. ಆದರೂ ಭಗವಂತನ ಪ್ರೀತಿಗೆ ವಿರೋಧವಲ್ಲದ ಒಳ್ಳೆಯ ಕಾಮನೆಯಿಂದ ಕೂಡಿದ ಸಂಕಲ್ಪದಿಂದ ಆಚರಿಸಿದರೂ ಒಳ್ಳೆಯದೇ. ಧರ್ಮಕ್ಕೆ ವಿರೋಧವಲ್ಲದ ಕಾಮವು ಪವಿತ್ರವಾದುದು. ಗೀತೆಯಲ್ಲಿ ಭಗವಂತನು ಅಪ್ಪಣೆ ಕೊಡಿಸಿದಂತೆ-“ಧರ್ಮಾವಿರುದ್ಧೋ ಭೂತೇಷು ಕಾಮೋsಸ್ಮಿ ಭರತರ್ಷಭ” – ಧರ್ಮಕ್ಕೆ ಅವಿರೋಧವಾದ ಕಾಮವೇ ನಾನು ಎಂದಿದ್ದಾನೆ.

ದೇವತಾ ಪೂಜೆ

ಇಷ್ಟದೇವತಾಪೂಜೆಯ ಜೊತೆಗೇ ಇಂದು ಬ್ರಹ್ಮದೇವರ ಮತ್ತು ಅವರ ಶರೀರದಂತಿರುವ ಕಾಲಪುರುಷನ ಆರಾಧನೆಯನ್ನು ವಿಧಿಸಿದ್ದಾರೆ. “ಸತ್ಯಯುಗದ ಸೃಷ್ಟಿಯು ಪ್ರಾರಂಭವಾದ ದಿವಸವಿದು” ಎಂಬ ಮಾತಿನ ತಾತ್ತ್ವಿಕ ಅರ್ಥದಲ್ಲಿಯೂ ಸೃಷ್ಟಿಕರ್ತನನ್ನು ಪೂಜಿಸುವುದು ಉಚಿತವಾಗಿಯೇ ಇದೆ. “ಓ ಭಗವಂತ! ನಿನ್ನ ದೇಹವಾಗಿರುವ ಈ ಕಾಲದಲ್ಲಿರುವ ಪರ್ವಸ್ಥಾನಗಳನ್ನು ಅರಿತು ಅವುಗಳನ್ನು ಧರ್ಮಾರ್ಥಕಾಮಗಳನ್ನು ಸಾಧಿಸುವುದಕ್ಕೂ ಮತ್ತು ಕಾಲವನ್ನೇ ದಾಟಿಬಿಡುವ ಮಹೋದ್ಯಮಕ್ಕೂ ಉಪಯೋಗಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸು” ಎಂದು ಅವನಲ್ಲಿ ಪ್ರಾರ್ಥಿಸುತ್ತೇವೆ.

ugadi 2023 know history significance celebrations and more about the festival in kannada

ಹೋಮ

ಹೃದಯದಲ್ಲಿ ಚೆನ್ನಾಗಿ ಭಗವಂತನನ್ನು ಆರಾಧಿಸಿದಮೇಲೆ ಹೊರಗೂ ಪ್ರತಿಮೆ, ತೀರ್ಥ, ಅಗ್ನಿ ಇವುಗಳಲ್ಲಿಯೂ ಅವನನ್ನು ಆವಾಹನೆ ಮಾಡಿ ಪೂಜೆ ಮಾಡುವುದೂ ಆ ಅಂತರಂಗ ಪೂಜೆಯ ವಿಸ್ತಾರವೇ ಆಗಿದೆ. ಅಗ್ನಿಯ ತೇಜೋರೂಪವಾದ ದೇಹ, ಪ್ರಕಾಶಸ್ವರೂಪ, ಎಲ್ಲವೂ ಭಗವಂತನ ಪ್ರತೀಕ, ಪ್ರತಿಮೆ, ಪ್ರತಿನಿಧಿ ಎಲ್ಲವೂ ಆಗಿದೆ. ಈ ಮನೋಧರ್ಮದಿಂದ ಅಂದು ಅಗ್ನಿಯಲ್ಲಿ ಹೋಮಮಾಡಬೇಕು. ಯುಗಾದಿಯಂದು ದೇವರ ಪೂಜೆಯ ಮಾಧ್ಯಮವಾದ ಅಗ್ನಿಯನ್ನು “ಯವಿಷ್ಠ”-ಅತ್ಯಂತ ಕಿರಿಯವನು ಎಂದು ಹೆಸರಿಸಿದ್ದಾರೆ.

ಸೃಷ್ಟಿಯ ಆರಂಭದಲ್ಲಿ ಶಕ್ತಿಯು ಅತ್ಯಂತ ಸೂಕ್ಷ್ಮವೆಂದು ಉಪಾಸಿಸಲ್ಪಡುತ್ತದೆ. ಅದರ ಪ್ರತಿನಿಧಿಯಾದ ಅಗ್ನಿಯನ್ನು ಯುಗಾರಂಭದ ದಿನ ಹಾಗೆ ಪೂಜಿಸುವುದು ಉಚಿತವೇ ಆಗಿದೆ. ಅಣುವಿಗಿಂತಲೂ ಅಣುವಾಗಿ ಮಹತ್ತಿಗಿಂತಲೂ ಮಹತ್ತಾಗಿ ಇರುವವನು ಭಗವಂತ ಎಂಬ ಶ್ರುತಿ ವಾಕ್ಯವನ್ನು ಇಲ್ಲಿ ಸ್ಮರಿಸಬಹುದು.

ಪಂಚಾಂಗ ಶ್ರವಣ

ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವು ಕಾಲಕೋಶದ ಪಂಚಾಂಗಗಳು.ಇವುಗಳ ಜ್ಞಾನದೊಡನೆಯೇ ಕರ್ಮಗಳನ್ನು ಮಾಡಬೇಕು. ಯುಗಾದಿಯಂದು ಕಾಲಪುರುಷನ ಆರಾಧನೆಯೇ ಮುಖ್ಯವಾಗಿರುವಾಗ ಅವುಗಳ ಶ್ರವಣ ಮಾಡಿ ಅದರಿಂದ ವರ್ಷದ ಆದಿಮಂಗಲವನ್ನು ಆಚರಿಸುವುದು ಸಹಜವಾಗಿದೆ. ಇಡೀ ಸಂವತ್ಸರದ ಕಾಲದ ಯೋಗವನ್ನು ಕೇಳಿ ತಿಳಿದು ಅದಕ್ಕೆ ತಕ್ಕಂತೆ ವರ್ಷದ ಐಹಿಕ-ಪಾರಮಾರ್ಥಿಕ ಕಾರ್ಯಗಳ ಯೋಜನೆಯನ್ನು ರೂಪಿಸಿಕೊಳ್ಳುವುದಕ್ಕೂ ಇದು ಸಹಕಾರಿ. ಎಂದೇ ಪಂಚಾಗ ಶ್ರವಣ ಈ ಪರ್ವದಿನದ ಒಂದು ಮುಖ್ಯ ಕಲಾಪವಾಗಿದೆ.

ದಾನ

ಎಲ್ಲಾ ಪರ್ವಕಾಲಗಳಲ್ಲೂ ಸತ್ಪಾತ್ರರಿಗೆ ದಾನಮಾಡುವುದು ಶ್ರೇಷ್ಠ ಕರ್ಮವೇ. ಈ ಯುಗಾದಿ ಪರ್ವದಲ್ಲಿ ಅನ್ನದಾನವೇ ಮುಂತಾದ ದಾನಗಳ ಜೊತೆ ಪಂಚಾಂಗ, ಜಲಪಾತ್ರೆ, ವಸ್ತ್ರಭೂಷಣಗಳನ್ನೂ ದಾನ ಮಾಡುವುದನ್ನು ವಿಧಿಸಿದೆ. ಬೇಸಿಗೆ ಕಾಲದ ಆರಂಭವಾಗಿರುವುದರಿಂದ ನೀರಿನ ಪಾತ್ರೆಗಳನ್ನು ದಾನ ಮಾಡುವುದು, ಮತ್ತು ಆ ದಿನದಿಂದ ಆರಂಭಿಸಿ ಬೇಸಿಗೆ ಮುಗಿಯುವವರೆಗೂ ಅರವಟ್ಟಿಗೆಗಳಲ್ಲಿ ಸಿಹಿ ನೀರು,ಮಜ್ಜಿಗೆ,ಪಾನಕಗಳನ್ನು ದಾನಮಾಡುವುದು ಕಾಲೋಚಿತವಾಗಿದೆ. ದಾನ ಮಾಡುವಾಗ-” ವಿಷ್ಣುರ್ದಾತಾ ವಿಷ್ಣುರ್ದ್ರವ್ಯಂ ಪ್ರತಿಗೃಹ್ಣಾಮಿ ವೈ ವದೇತ್ʼʼ-ದಾನ ಮಾಡುವವನು ವಿಷ್ಣು, ದ್ರವ್ಯವೂ ಆ ಭಗವಂತನೇ, ಆ ಭಾವದಿಂದ ಅದನ್ನು ಸ್ವೀಕರಿಸುತ್ತೇನೆ ಎಂಬಂತೆ ಕೊಡುವವನು, ತೆಗೆದುಕೊಳ್ಳುವವನು ಇಬ್ಬರೂ ಈ ಭಾವ ಸಮೃದ್ಧಿಯಿಂದ ಮಾಡಿದಾಗ ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ಪುಣ್ಯ-ಪುರುಷಾರ್ಥ ಎರಡೂ ಲಭಿಸುತ್ತದೆ ಎಂಬುದು ಅನುಭವಿಗಳ ಮಾತು.

ನೈವೇದ್ಯ-ಪ್ರಸಾದ

ಯುಗಾದಿಯ ದಿನದ ವಿಶೇಷ ನೈವೇದ್ಯ ಹೂವಿನೊಡನೆ ಕುಡಿದ ಚಿಗುರುಬೇವು-ಬೆಲ್ಲ.
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಲ ಭಕ್ಷಣಮ್ ||

ವಜ್ರ ದೇಹಿಯಾಗಿ, ಶತಾಯುಶಿಯಾಗಿ, ಐಹಿಕ-ಪಾರಮಾರ್ಥಿಕ ಸಂಪತ್ತಿನಿಂದ ಕೂಡಿರಲು ಮತ್ತು ಎಲ್ಲಾ ಅರಿಷ್ಟಗಳ ನಿವಾರಣೆಗಾಗಿ ಈ ಬೇವು -ಬೆಲ್ಲವನ್ನು ಸೇವಿಸುತ್ತೇನೆ ಎಂಬ ಶ್ಲೋಕವು ಪ್ರಸಿದ್ಧವಾಗಿದೆ. ಬೇವು ಅಸ್ಥಿಗತವಾದ ರೋಗವನ್ನೂ ವಿಷದ ಸೋಂಕನ್ನೂ ನಿವಾರಿಸುವ ಮಹೌಷಧಿ. ಬೆಲ್ಲ ಸೇರಿಸಿದಾಗ ಬೇವಿನಲ್ಲಿನ ವಾತ ದೋಷವು ಶಮನವಾಗುತ್ತದೆ. ದೇಹಕ್ಕೆ ಸಂಬಂಧಿಸಿದಂತೆ ಬೇವು-ಬೆಲ್ಲಗಳ ಯೋಗ ಆರೋಗ್ಯವರ್ಧಕವಾಗಿರುವಂತೆ ಜೀವನದ ಸಿಹಿ-ಕಹಿಗಳನ್ನು ಸಮನಾಗಿ ಭಾವಿಸಿ ಜೀವನವನ್ನು ಸಮಾಹಿತಚಿತ್ತದಿಂದ ನಡೆಸುವ ಧೀರಯೋಗಿಯ ಆದರ್ಶವನ್ನೂ ನೆನಪಿಗೆ ತರುವುದಾಗಿದೆ.

ಯೋಗಿಗೆ ಮಾತ್ರವಲ್ಲದೇ ಗಂಭೀರವಾಗಿ ನೆಮ್ಮದಿಯ ಜೀವನ ನಡೆಸುವ ಸಾಮಾನ್ಯರಿಗೂ ಈ ಪಾಠವು ಅವಶ್ಯಕ. ಆ ದಿನದಿಂದ ಆರಂಭಿಸಿ ಇಡೀ ಸಂವತ್ಸರದಲ್ಲೂ ಕಡೆಗೆ ಇಡೀ ಜೀವನದಲ್ಲೂ ಅಂತಹ ಸಮಸ್ಥಿತಿಯನ್ನು ತಂದುಕೊಳ್ಳುವ ಸ್ಪೂರ್ತಿ ಈ ಪ್ರಸಾದ ಸೇವನೆಯಲ್ಲಿದೆ. ಅಲ್ಲದೇ ಯುಗಾದಿಯ ದೇವತೆಯಾದ ಪ್ರಜಾಪತಿ ಕಾಲಪುರುಷನಿಗೆ ಪ್ರಿಯವಾದ ನೈವೇದ್ಯವಾಗಿದೆ. ಕಾಲಪುರುಷನ ಸುಪ್ರಸನ್ನತೆ-ಸಾಕ್ಷಾತ್ಕಾರಗಳಿಗೆ ಅನುಗುಣವಾದ ಕೇಂದ್ರಗಳು ಒಳಗಿನ ಪ್ರಕೃತಿಯಲ್ಲಿ ವಿಕಾಸಗೊಳ್ಳಲು ಈ ಬೇವು-ಬೆಲ್ಲದ ಸೇವನೆ ಸಹಕಾರಿಯಾಗಿದೆ ಎಂಬ ಋಷಿವಿಜ್ಞಾನವನ್ನು ಮನಗಾಣಬೇಕು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಉಪಸಂಹಾರ

ಹೀಗೆ ಭಾರತೀಯರ ಬೇರೆ ಹಬ್ಬಗಳಂತೆಯೇ ಯುಗಾದಿ ಪರ್ವವು ಕಾಲದ ದೃಷ್ಟಿಯಿಂದ ವಿಶೇಷ ಪರಿಣಾಮಕಾರಿಯಾಗಿದ್ದು ಜೀವಲೋಕದ ಇಹ-ಪರಗಳ ಬಾಳಾಟಕ್ಕೆ ಸಹಕಾರಿಯಾಗಿದೆ. ಆ ಪರ್ವವಿಶೇಷದಲ್ಲಿ ಉಪಯೋಗಿಸುವ ದ್ರವ್ಯಗಳು, ಮಾಡುವ ದೇವತಾರಾಧನೆಗಳು, ಕರ್ಮ-ಕಲಾಪಗಳು ಎಲ್ಲವೂ ನಮ್ಮ ಒಳ-ಹೊರ ಜೀವನದ ಏಳಿಗೆಗೆ, ಪುರುಷಾರ್ಥ ಪ್ರಾಪ್ತಿಗೆ ಅತ್ಯಂತ ಸಹಾಯಕವಾಗುವಂತೆ ನಮ್ಮ ಮಹರ್ಷಿಗಳು ಯೋಜಿಸಿ ತಂದುಕೊಟ್ಟಿದ್ದಾರೆ. ಯಾವುದೋ ಒಂದು ದಿನವನ್ನು ಸುಮ್ಮನೇ ವರ್ಷಾರಂಭ ಎಂದು ಆಚರಿಸದೇ ಸೃಷ್ಟಿಯ ಆರಂಭದ ನಿಸರ್ಗದ ಹೆಜ್ಜೆಯನ್ನು ಅನುಸರಿಸಿ ಜೀವಲೋಕದ ಮೇಲೆ ಆ ಕಾಲವು ಮಾಡುವ ಪರಿಣಾಮದ ಆಧಾರದ ಮೇಲೆ ತಂದ ಪರ್ವದಿನವಾಗಿದೆ.

ಈ ಸಂಸ್ಕೃತಿಯಲ್ಲಿ ಬಂದ ಯಾವ ಆಚರಣೆಯೂ ಅರ್ಥಹೀನವಾಗಿ ಶುಷ್ಕವಾಗಿ ಬಂದುದಲ್ಲ. ಸ್ಥೂಲ ಜೀವನದ ಹಿಂಬದಿಯ ದೇವತಾ ಶಕ್ತಿಗಳ ಸೂಕ್ಷ್ಮಜೀವನ, ಅದರ ಹಿಂಬದಿಯಲ್ಲಿ ಅಂತರ್ಯಾಮಿಯಾಗಿ ಚೈತನ್ಯಮಯವಾಗಿ ಬೆಳಗುತ್ತಿರುವ ಪರಮಾತ್ಮನ ವರೆಗೂ ದೃಷ್ಟಿಯನ್ನು ಹರಿಸಿ ಸರ್ವಾಂಗ ಸುಂದರವಾದ ಜೀವನವನ್ನು ಸವಿಯಲು ಅನುಗುಣವಾಗಿ ಅವರು ಇಲ್ಲಿನ ಜೀವನವಿಧಾನಗಳನ್ನು, ಹಬ್ಬ ಹರಿದಿನಗಳನ್ನು ಗುರುತಿಸಿ ರೂಪಿಸಿದರು. ಅಂತಹ ಮಹರ್ಷಿಮನೋರಮವಾದ ಹಿನ್ನೆಲೆಯಿಂದ ಈ ಪರ್ವಕಾಲವನ್ನು ಆಚರಿಸಿ ಸಂಭ್ರಮಿಸೋಣ.

ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Ugadi Makeup Trend: ಸ್ತ್ರೀಯರ ಯುಗಾದಿ ಸಂಭ್ರಮಕ್ಕೆ ಸ್ಪೆಷಲ್‌ ಫೆಸ್ಟಿವ್ ಮೇಕಪ್‌ ಮಂತ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Bengaluru News: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ: ವಿ. ಅಪ್ಪಣ್ಣ ಆಚಾರ್ಯ

Bengaluru News: ಹರಿಕಥಾಮೃತಸಾರವನ್ನು ರಚನೆ ಮಾಡಿದಂತಹ ಶ್ರೀ ಜಗನ್ನಾಥದಾಸರ ಚಿಂತನೆ ಬಹಳ ವಿಶಾಲವಾದದ್ದು‌.ಅವರ ಕಾರುಣ್ಯ ಮಹತ್ವದ್ದು. ಅವರ ದೂರ ದೃಷ್ಟಿ ಸಮಾಜಮುಖಿಯಾಗಿತ್ತು. ಆದ ಕಾರಣವೇ ಹರಿಕಥಾಮೃತಸಾರ ಕೃತಿಯು ಇಂದಿಗೂ ನಿತ್ಯ ನೂತನವಾಗಿದೆ ಎಂದು ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಗೌರವ ನಿರ್ದೇಶಕ ವಿದ್ವಾನ್ ಅಪ್ಪಣ್ಣಾಚಾರ್ಯ ತಿಳಿಸಿದ್ದಾರೆ.

VISTARANEWS.COM


on

Sri Vedavyasa Jayanti programme at Bengaluru
Koo

ಬೆಂಗಳೂರು: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮವಾಗುತ್ತದೆ ಎಂದು ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಗೌರವ ನಿರ್ದೇಶಕ ವಿದ್ವಾನ್ ಅಪ್ಪಣ್ಣಾಚಾರ್ಯ (Bengaluru News) ಹೇಳಿದರು‌.

ಬೆಂಗಳೂರಿನ ಗಿರಿನಗರದ ಭಂಡಾರಕೇರಿ ಮಠದಲ್ಲಿ ಗುರುವಾರ ಭಾಗವತಾಶ್ರಮ ಪ್ರತಿಷ್ಠಾನ ಮತ್ತು ಲೋಕ ಸಂಸ್ಕೃತಿ ಕಲಾವಿದ್ಯಾ ವಿಕಾಸ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಗುರು ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಮಹೋತ್ಸವ, ಶ್ರೀ ಮಾಧ್ವ ರಾದ್ಧಾತ ಸಂವರ್ಧಕ ಸಭಾದ 81ನೇ ಅಧಿವೇಶನ, ಶ್ರೀ ವೇದವ್ಯಾಸ ಜಯಂತಿ ಸರಣಿಯ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

ಹರಿದಾಸ ಸಾಹಿತ್ಯದಲ್ಲಿ ಅನುಭವ ಉದ್ಗಾರಗಳ ಚಿಂತನೆ ವಿಷಯ ಕುರಿತು ಪ್ರೌಢ ಉಪನ್ಯಾಸ ನೀಡಿದ ಅವರು, ಹರಿಕಥಾಮೃತಸಾರವನ್ನು ರಚನೆ ಮಾಡಿದಂತಹ ಶ್ರೀ ಜಗನ್ನಾಥದಾಸರ ಚಿಂತನೆ ಬಹಳ ವಿಶಾಲವಾದದ್ದು‌. ಅವರ ಕಾರುಣ್ಯ ಮಹತ್ವದ್ದು. ಅವರ ದೂರ ದೃಷ್ಟಿ ಸಮಾಜಮುಖಿಯಾಗಿತ್ತು. ಆದ ಕಾರಣವೇ ಹರಿಕಥಾಮೃತಸಾರ ಕೃತಿಯು ಇಂದಿಗೂ ನಿತ್ಯ ನೂತನವಾಗಿದೆ ಎಂದು ಹೇಳಿದರು.

ಹರಿಕಥಾಮೃತಸಾರವನ್ನು ಓದಿ ನಾವು ವಿಶಾಲರಾಗಬೇಕು. ಆ ಮೂಲಕ ದೊಡ್ಡವರಾಗಬೇಕು. ಬದುಕನ್ನು ಹಸನ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಅವರು ಬ್ಯಾಗವಟ್ಟಿಯ ನರಸಿಂಹ ದಾಸ ಕುಲಕರ್ಣಿ ಅವರು ನಡೆಸಿದ ಸಮಾಜಮುಖಿ ಚಟುವಟಿಕೆಗಳನ್ನು ವಿವರಿಸಿದರು.

ಮಾನವಿ ಜಗನ್ನಾಥದಾಸರ ಮನೆಯೇ ಮಂದಿರವಾದ ಕಥೆಯನ್ನು ಸುಂದರವಾಗಿ ನಿರೂಪಿಸಿದರು. ಹರಿಕಥಾಮೃತಸಾರ ರಚನೆ ಆದಂತಹ ಸಂದರ್ಭ, ಹಿರಿಯರು ಅವರ ಮೇಲೆ ಮಾಡಿದಂತಹ ಕೃಪೆ ಮತ್ತು ಜಗನ್ನಾಥದಾಸರ ಕಾರುಣ್ಯಗಳನ್ನು ಸಮರ್ಥವಾಗಿ ಅಪ್ಪಣ್ಣಾಚಾರ್ಯರು ವಿವರಿಸಿದರು.

ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಇದನ್ನೂ ಓದಿ: Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

ಸಂಜೆ ಮಹಾಭಾರತ ಕುರಿತು ವಿವಾದ-ಸಂವಾದ ಕಾರ್ಯಕ್ರಮ ನಡೆಯಿತು. ವಿದ್ವಾನ್ ತಿರುಮಲ ಕುಲಕರ್ಣಿ ಮತ್ತು ವೆಂಕಟೇಶ ಕುಲಕರ್ಣಿ ಅವರು ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.

Continue Reading

ಕರ್ನಾಟಕ

Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

Udupi News: ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಸೇರಿದಂತೆ ಇಬ್ಬರು ವಿದ್ವಾಂಸರು ಆಯ್ಕೆಯಾಗಿದ್ದಾರೆ. ವೇದಪೀಠ ಪ್ರಶಸ್ತಿಗೆ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಆಯ್ಕೆಯಾಗಿದ್ದು, ಹಿರಿಯ ಅಗ್ನಿಹೋತ್ರಿ, ಪ್ರಾಚಾರ್ಯ ದಾಮೋದರಾಚಾರ್ಯರಿಗೆ 1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಹಾಗೂ ಯುವ ವಿದ್ವಾಂಸರಿಗೆ ಮಠ ನೀಡುವ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ, ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ವಾನ್ ಸತ್ಯಬೋಧಾಚಾರ್ಯ ಹೊನ್ನಾಳಿ ಆಯ್ಕೆ ಗೊಂಡಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ ಎಂದು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

VISTARANEWS.COM


on

Udupi
ಉಡುಪಿ ಶ್ರೀ ಭಂಡಾರಕೇರಿ ಮಠದ ಪ್ರಶಸ್ತಿಗೆ ಭಾಜನರಾದ ವಿದ್ವಾನ್ ದಾಮೋದರಾಚಾರ್ಯ, ವಿದ್ವಾನ್ ಮಧ್ವೇಶ ನಡಿಲ್ಲಾಯ, ವಿದ್ವಾನ್ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ.
Koo

ಉಡುಪಿ: ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಸೇರಿದಂತೆ ಇಬ್ಬರು ವಿದ್ವಾಂಸರು ಆಯ್ಕೆಯಾಗಿದ್ದಾರೆ. ವೇದಪೀಠ ಪ್ರಶಸ್ತಿಗೆ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಆಯ್ಕೆಯಾಗಿದ್ದು, ಹಿರಿಯ ಅಗ್ನಿಹೋತ್ರಿ, ಪ್ರಾಚಾರ್ಯ ದಾಮೋದರಾಚಾರ್ಯರಿಗೆ 1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ (Udupi News) ತಿಳಿಸಿದ್ದಾರೆ.

ಯುವ ವಿದ್ವಾಂಸರಿಗೆ ಮಠ ನೀಡುವ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ, ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ವಾನ್ ಸತ್ಯಬೋಧಾಚಾರ್ಯ ಹೊನ್ನಾಳಿ ಆಯ್ಕೆ ಗೊಂಡಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ.

ಇದನ್ನೂ ಓದಿ: Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

ಬೆಂಗಳೂರಿನ ಗಿರಿನಗರದ ಭಾಗವತಾಶ್ರಮದಲ್ಲಿ ಮೇ 20ರಂದು ಆಯೋಜಿಸಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಅಭಿನಂದನೆ, ಶ್ರೀ ವಿದ್ಯೇಶತೀರ್ಥರ 70ನೇ ವರ್ಧಂತಿ, ವಿದ್ವಾಂಸರಿಂದ ವಾಕ್ಯಾರ್ಥ ಗೋಷ್ಠಿ, ಶೋಭಾಯಾತ್ರೆ, ನರಸಿಂಹ ಮಂತ್ರಹೋಮವೂ ನೆರವೇರಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಪ್ರಶಸ್ತಿಗೆ ಭಾಜನರಾದವರ ಪರಿಚಯ ಹೀಗಿದೆ:

ವಿದ್ವಾನ್ ದಾಮೋದರಾಚಾರ್ಯ

ಪ್ರತಿ ದಿನವೂ ಶಾಸ್ತ್ರ ವಿದ್ಯಾ ಅಧ್ಯಯನ, ಅಧ್ಯಾಪನ, ಅಗ್ನಿಹೋತ್ರ ನಡೆಸುತ್ತಾ, ಸನಾತನ ಭಾರತೀಯ ಪರಂಪರೆಯನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿಯನ್ನು ಸಂಭ್ರಮದಿಂದಲೇ ನಿರ್ವಹಿಸುತ್ತಿರುವವರು ಈರೋಡಿನ ವಿದ್ವಾನ್ ದಾಮೋದರಾಚಾರ್ಯ. ವಿದ್ವಾನ್ ಪದ್ಮನಾಭಾಚಾರ್ಯ-ಜಾನಕೀಬಾಯಿ ಅವರ ಪುತ್ರರಾದ ಇವರು ತಂದೆಯಿಂದಲೇ ವ್ಯಾಕರಣ, ವೇದ, ಶಾಸ್ತ್ರಗಳನ್ನು ಕಲಿತರು. ಪವಿತ್ರ ಕ್ಷೇತ್ರ ರಂಗದ ಬಳಿಯ ಸಿರುಗಮಣಿ ಎಂಬ ಗ್ರಾಮದಲ್ಲಿ ತಂದೆಯವರೇ ಪ್ರಾರಂಭಿಸಿದ ವೇದರಕ್ಷಣ ವೇದವ್ಯಾಸ ಗುರುಕುಲದಲ್ಲಿ 12 ವರ್ಷ ವೇದ ಅಧ್ಯಯನ ಮಾಡಿದವರು. ನಂತರ ಕಾಂಚೀಪುರದ ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ವೇದಾಂತ, ಘನ, ಐತರೇಯ ಬ್ರಾಹ್ಮಣ, ಗೃಹ್ಯಸೂತ್ರಗಳ ಸಹಿತ ವೇದಾಧ್ಯಯನ ನಡೆಸಿದರು.

ನಂತರ ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ಹಿರಿಯ ವಿದ್ವಾಂಸ ಮಾಹುಲಿ ಗೋಪಾಲಾಚಾರ್ಯ ಮತ್ತು ವಿದ್ಯಾಸಿಂಹಾಚಾರ್ಯರ ಶಿಷ್ಯತ್ವ ಪಡೆದು 8 ವರ್ಷಗಳ ಕಾಲ ದ್ವೈತ ವೇದಾಂತ ಅಧ್ಯಯನ ನಡೆಸಿದರು. ಬಹು ವಿಶೇಷ ಎಂದರೆ ಇವರು ನಿತ್ಯ ಅಗ್ನಿಹೋತ್ರಿಗಳು, ಸೋಮಯಾಜಿಗಳು. ವಾಜಪೇಯ ಮಹಾಯಾಗ ಮಾಡಲು ಸಿದ್ಧರಾಗಿರುವ ಸಿದ್ಧಪುರುಷರು. ತಮ್ಮ ತಂದೆಯರು ಸ್ಥಾಪಿಸಿದ ಗುರುಕುಲವನ್ನು 2000ರಿಂದ ಈರೋಡಿನಲ್ಲಿ ಮುನ್ನಡೆಸುತ್ತಿರುವುದು ಬಹು ವಿಶೇಷ. ಚೆನ್ನೈನಲ್ಲಿರುವ ಶ್ರೀ ಕಾಂಚಿಪುರಂ ವೇದ ರಕ್ಷಣಾ ನಿಧಿ ಟ್ರಸ್ಟ್ ಸಹಾಯ ಪಡೆದು ಗುರುಕುಲವನ್ನು ಸುವ್ಯವಸ್ಥಿತ ವಿದ್ಯಾಕೇಂದ್ರ ಮಾಡಿರುವುದು ಹೆಮ್ಮೆಯ ವಿಚಾರ. ಪ್ರಸ್ತುತ ಎಂಟನೇ ತಂಡದ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ದಾಮೋದರಾಚಾರ್ಯ ನಾಡಿನ ಹಿರಿಮೆ. ಅಪರೂಪದಲ್ಲಿ ಅನುರೂಪ ವ್ಯಕ್ತಿತ್ವ ಹೊಂದಿದವರು.

ಇದನ್ನೂ ಓದಿ: BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

ವಿದ್ವಾನ್ ಮಧ್ವೇಶ ನಡಿಲ್ಲಾಯ

ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥರ ಶಿಷ್ಯರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿದ ಈ ಯುವ ಪ್ರತಿಭೆ, ವಿದ್ಯಾರ್ಥಿ ದಿಸೆಯಲ್ಲಿಯೇ ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 7 ಚಿನ್ನದ ಪದಕ, ತಿರುಪತಿಯ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ 3 ಚಿನ್ನದ ಪದಕ, ರಾಜ್ಯ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 11 ಚಿನ್ನದ ಪದಕ ಪಡೆದ ಜ್ಞಾನ ಚೇತನ. 2021 ರಲ್ಲಿ ವಿವಿಧ ಮಾಧ್ವ ಪೀಠಾಧಿಪತಿಗಳ ಸಮ್ಮುಖ ಸಮಗ್ರ ಶ್ರೀಮನ್ ನ್ಯಾಯಸುಧಾ ಪರೀಕ್ಷೆ ನೀಡಿ ‘ಸುಧಾ ಪಂಡಿತ’ ಕೀರ್ತಿಗೆ ಭಾಜನರಾದವರು. ಸದ್ಯ ಬೆಂಗಳೂರಿನ ಪ್ರತಿಷ್ಠಿತ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಾಪಕರಾಗಿ ಮಧ್ವೇಶ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.

ವಿದ್ವಾನ್ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ ಅವರು ಶ್ರೀಧರಾಚಾರ್ಯ ಮತ್ತು ಧನ್ಯಾ ಅವರ ಪುತ್ರ. ದ್ವಿತೀಯ ಮಂತ್ರಾಲಯ ಹೊನ್ನಾಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸೇವೆ ಮಾಡಿ ವಿಶೇಷ ಅನುಗ್ರಹಿತರಾದ ಇವರು ಬೆಂಗಳೂರಿನ ಉತ್ತರಾದಿ ಮಠದ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ 14 ವರ್ಷ ಅಧ್ಯಯನ ಮಾಡಿದರು. 2012 ರಲ್ಲಿ ಧಾರವಾಡದಲ್ಲಿ ಸುಧಾ ಪರೀಕ್ಷೆ ನೀಡಿ ಸುಧಾ ಪಂಡಿತರೆಂಬ ಕೀರ್ತಿಗೆ ಭಾಜನರಾದವರು.

ಇದನ್ನೂ ಓದಿ: Head Coach: ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಮ್​ ಇಂಡಿಯಾದ ಸ್ಟಾರ್​ ಮಾಜಿ ಆಟಗಾರ

2015ರಲ್ಲಿ ಬೆಂಗಳೂರಿನಲ್ಲಿ ಸಮಗ್ರ ಶ್ರೀಮನ್ ನ್ಯಾಯ ಸುಧಾ ಎಂಬ ಕಠಿಣತಮ ಪರೀಕ್ಷೆ, 2017ರಲ್ಲಿ ಏಕಕಾಲದಲ್ಲಿ ವ್ಯಾಸತ್ರಯಗಳ ಪರೀಕ್ಷೆ ನೀಡಿದ ಪ್ರತಿಭಾ ಪುಂಜ. ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜನೆಗೊಂಡಿದ್ದ ವಿದ್ವತ್ ಸಭೆಯಲ್ಲಿ ಶ್ರೀ ಮನ್ ನ್ಯಾಯಸುಧಾಚಾರ್ಯ ಹಾಗೂ ವ್ಯಾಸತ್ರಯಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸಿದ ಯುವ ಚೇತನ. ತಿರುಪತಿಯಲ್ಲಿ ಖ್ಯಾತ ವಿದ್ವಾಂಸ ದೇವನಾಥಾಚಾರ್ಯರ ಬಳಿ ತರ್ಕ ಮತ್ತು ಮೀಮಾಂಸಾ ಶಾಸ್ತ್ರಗಳ ಅಧ್ಯಯನ ಮಾಡಿ, 2009- 2010ರಲ್ಲಿ ತೆನಾಲಿ ಪರೀಕ್ಷೆಯಲ್ಲೂ ಜಯಭೇರಿ ಬಾರಿಸಿದ ಜ್ಞಾನವಂತ. ವಯಸ್ಸು ಚಿಕ್ಕದಿದ್ದರೂ ಅಧ್ಯಯನ ಮತ್ತು ಅಧ್ಯಾಪನದಲ್ಲಿ ವಿಶೇಷ ಶ್ರದ್ಧೆ ಮತ್ತು ಆಸಕ್ತಿ ಹೊಂದಿದ್ದು, ಗುರುಸೇವೆಯಲ್ಲೇ ಪರಮ ಸುಖ ಕಾಣುವ ಸಾಧಕರಾಗಿರುವುದು ಗಮನಾರ್ಹ. ಪ್ರಸ್ತುತ ಉತ್ತರಾದಿ ಮಠದ ಸುಧಾ ಗ್ರಂಥ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅಂತಿಮ ಹಂತದ ಪರೀಕ್ಷೆಗಾಗಿ ಉನ್ನತ ಮಟ್ಟದ ತರಬೇತಿ ನೀಡುವ ಗುರುತರ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವುದು ವಿಶೇಷ.

Continue Reading

ಬೆಂಗಳೂರು

Bengaluru News: ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ಮಾನ್ಯತೆ ನೀಡಿ; ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ

Bengaluru News: ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವಕ್ಕೆ ಬುಧವಾರ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು. ಬಳಿಕ ಶ್ರೀಗಳು ಆಶೀರ್ವಚನ ನೀಡಿದರು.

VISTARANEWS.COM


on

Sri Vedavyasa Jayanti Madhva Raddhanta Samvardhak Sabha 81st session at Bengaluru
Koo

ಬೆಂಗಳೂರು: ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ನಗರದ (Bengaluru News) ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವಕ್ಕೆ ಬುಧವಾರ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ವ್ಯಾಸ ಮತ್ತು ದಾಸ ಸಾಹಿತ್ಯದಲ್ಲಿರುವ ವಿಶೇಷ ಜ್ಞಾನದ ಅರಿವು ಮೂಡಿದರೆ ಬದುಕು ಸಾರ್ಥಕವಾಗುತ್ತದೆ ಎಂದರು. ವ್ಯಾಸ ಸಾಹಿತ್ಯ ಪ್ರಖರ ಸೂರ್ಯನಂತೆ. ನಾವು ಅದರ ಪ್ರಭೆಯನ್ನು ನೇರವಾಗಿ ಪಡೆಯಲು ಅಸಾಧ್ಯ. ಆದರೆ ಅದೇ ಕಿರಣ ಚಂದ್ರಮಂಡಲದ ಮೇಲೆ ಬಿದ್ದು, (ದಾಸ ಸಾಹಿತ್ಯವಾಗಿ) ನಮಗೆ ಬಂದರೆ ಅದು ಸಂತೋಷ, ನೆಮ್ಮದಿ ಮತ್ತು ಸುಖವನ್ನು ನೀಡಬಲ್ಲದು. ಆದ ಕಾರಣ ಈ ಸಭಾದಲ್ಲಿ ದಾಸ ಸಾಹಿತ್ಯದ ಚಿಂತನ- ಮಂಥನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಗೌರವ ನಿರ್ದೇಶಕ ಅಪ್ಪಣ್ಣಾಚಾರ್ಯ, ಮಠದ ಹಿರಿಯ ಸ್ವಯಂಸೇವಕರಾದ ಗೋಪಾಲಕೃಷ್ಣ ಇತರರು ಇದ್ದರು. ಸಂಜೆ ವಾಲ್ಮೀಕಿ ರಾಮಾಯಣದ ವಿವಾದ-ಸಂವಾದದಲ್ಲಿ ವಿದ್ವಾಂಸರಾದ ಕೆ. ಕೃಷ್ಣರಾಜ ಭಟ್ ಮತ್ತು ಬಂಡಿ ಶ್ಯಾಮಾಚಾರ್ಯ ಪಾಲ್ಗೊಂಡಿದ್ದರು. ಮೇ 21ರವರೆಗೆ ನಿತ್ಯ ಶ್ರೀ ಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನೆರವೇರಲಿದೆ.

ಏನೇನು ಕಾರ್ಯಕ್ರಮ?

ಮೇ 16ರಂದು ಬೆಳಗ್ಗೆ 9ಕ್ಕೆ ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಗೌರವ ನಿರ್ದೇಶಕ ಅಪ್ಪಣ್ಣಾಚಾರ್ಯ ಅವರು ‘ ಹರಿದಾಸ ಸಾಹಿತ್ಯದಲ್ಲಿ ಅನುಭವ ಉದ್ಗಾರಗಳ ಚಿಂತನೆ’ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 5ಕ್ಕೆ ಪಂಡಿತರಾದ ತಿರುಮಲ ಕುಲಕರ್ಣಿ ಮತ್ತು ವೆಂಕಟೇಶ ಕುಲಕರ್ಣಿ ಅವರು ಮಹಾಭಾರತ- ವಾದ- ಸಂವಾದ- ನಡೆಸಿಕೊಡಲಿದ್ದಾರೆ.

ಮೇ 17ರಂದು ಬೆಳಗ್ಗೆ 9ರಿಂದ 12-ಸಂಜೆ 4ರಿಂದ 6ರವರೆಗೆ ವಾಕ್ಯಾರ್ಥ ಗೋಷ್ಠಿ ಸಂಪನ್ನಗೊಳ್ಳಲಿದೆ. ವಿದ್ವಾನ್ ಪಿ.ಎಸ್. ಶೇಷಗಿರಿ ಆಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾಂಸರಾದ ವೀರನಾರಾಯಣ ಪಾಂಡುರಂಗಿ, ಸತ್ತಿಗೇರಿ ವಾಸುದೇವ, ಕಟ್ಟಿ ನರಸಿಂಹ ಆಚಾರ್ಯ, ಪ್ರಹ್ಲಾದಾಚಾರ್ಯ ಜೋಷಿ, ಸುಧೀಂದ್ರಾಚಾರ್ಯ, ರಂಗನಾಥ ಗಣಾಚಾರಿ, ನಾಗರಾಜಾಚಾರ್ಯ, ಗುರುರಾಜ ಕಲ್ಕೂರ, ಶ್ರೀನಿವಾಸಮೂರ್ತಿ ಮತ್ತು ಮಾತರಿಶ್ವಾಚಾರ್ಯ ಭಾಗವಹಿಸಲಿದ್ದಾರೆ. ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಇದನ್ನೂ ಓದಿ: Job Alert: ಗುಡ್‌ನ್ಯೂಸ್‌: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಪಿಎಸ್‌ಸಿ; ಇಲ್ಲಿದೆ ಹೊಸ ವೇಳಾಪಟ್ಟಿ

ಮೇ 18ರಂದು ವರ್ಧಂತಿ ಮಹೋತ್ಸವ

ಮೇ 18ರಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರ 70ನೇ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11ಕ್ಕೆ ವಿವಿಧ ಹೋಮ, ಹರಿಕಥಾಮೃತ ಸಾರ ಪಾರಾಯಣ, ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ. ಎಚ್.ವಿ. ಸತ್ಯನಾರಾಯಣರಿಂದ ಉಪನ್ಯಾಸ (ವಾದಿರಾಜ ವಿರಚಿತ ವೈಕುಂಠ ವರ್ಣನೆ), ಸಂಜೆ ವಿವಿಧ ರಂಗದ ಗಣ್ಯರಿಗೆ ಸನ್ಮಾನವಿದೆ.

ಮೇ 19ರಂದು ಶ್ರೀ ವಿದ್ಯಾಮಾನ್ಯರ ಪುಣ್ಯಸ್ಮರಣೆ

ಉಡುಪಿ ಪಲಿಮಾರು- ಭಂಡಾರಕೇರಿ ಉಭಯ ಮಠದ ಪೀಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರ ಪುಣ್ಯಸ್ಮರಣೆ ಮೇ 19ರಂದು ನೆರವೇರಲಿದೆ. ಬೆಳಗ್ಗೆ 9ಕ್ಕೆ ಶ್ರೀ ವಿದ್ಯೇಶ ವಿಠಲಾಂಕಿತ ಕೃತಿಗಳ ಚಿಂತನ- ಮಂಥನ ನಡೆಯಲಿದ್ದು, ಹಲವು ವಿದ್ವಾಂಸರು ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ಶ್ರೀ ವಿದ್ಯೇಶತೀರ್ಥರಿಂದ ಅನುಗ್ರಹ ಸಂದೇಶವಿದೆ.

ಇದನ್ನೂ ಓದಿ: Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

ಮೇ 20ರಂದು ಶೋಭಾಯಾತ್ರೆ- ಪೇಜಾವರ ಶ್ರೀ ಸಾನ್ನಿಧ್ಯ

ಮೇ 20 ರಂದು ವೇದವ್ಯಾಸ ಜಯಂತಿ ಮತ್ತು ವಿದ್ಯಾಮಾನ್ಯರ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ 8ಕ್ಕೆ ಹೋಮ, 9ಕ್ಕೆ ವೇದ ಶಾಸ್ತ್ರ ವಿನೋದ, ಮಧ್ಯಾಹ್ನ 2ಕ್ಕೆ ವಸಂತ ಉತ್ಸವ, ಸಂಜೆ 5ಕ್ಕೆ ಶ್ರೀ ವಿದ್ಯಾಮಾನ್ಯರ ಭಾವಚಿತ್ರ ಶೋಭಾಯಾತ್ರೆ, ಸಂಜೆ 6ಕ್ಕೆ ಸಭಾ ಕಾರ್ಯಕ್ರಮವಿದೆ. ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ವಿದ್ವಾಂಸ ಡಾ. ಆನಂದತೀರ್ಥ ನಾಗಸಂಪಿಗೆ ಉಪನ್ಯಾಸ ನೀಡಲಿದ್ದಾರೆ. ನಂತರ ಮಠದ ವಾರ್ಷಿಕ ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ದೇಶ

Tirupati Temple: ತಿರುಪತಿಯ ಆಗಸ್ಟ್ ತಿಂಗಳ ಟಿಕೆಟ್ ವೇಳಾಪಟ್ಟಿ ಬಿಡುಗಡೆ: ಹೀಗೆ ಬುಕ್‌ ಮಾಡಿ

Tirupati Temple: ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

VISTARANEWS.COM


on

Tirupathi Temple
Koo

ತಿರುಪತಿ: ದೇಶದ ಪ್ರಸಿದ್ಧ ಯಾತ್ರಾ ಸ್ಥಳ ತಿರುಮಲ ತಿರುಪತಿ ದೇವಸ್ಥಾನ(Tirupati Temple)ಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ (TTD) ಬಿಡುಗಡೆ ಮಾಡಿದೆ. ಹೀಗಾಗಿ ಆಗಸ್ಟ್‌ನಲ್ಲಿ ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರು ಈ ಪಟ್ಟಿಯನ್ನು ಗಮನಿಸಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

ಶ್ರೀವಾರಿ ದೇವಸ್ಥಾನದಲ್ಲಿ ವಾರ್ಷಿಕ ಪವಿತ್ರೋತ್ಸವ ಆಗಸ್ಟ್ 15ರಿಂದ 17ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಸುವ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕರ ಸೇವೆ, ವಾರ್ಷಿಕ ಪವಿತ್ರೋತ್ಸವ ಸೇವಾ ಟಿಕೆಟ್‌ಗಳನ್ನು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮಾತ್ರವಲ್ಲ ತಿರುಮಲ ಶ್ರೀವಾರಿ ವರ್ಚುವಲ್ ಸೇವೆಗಳಿಗೆ ಸಂಬಂಧಿಸಿದ ಆಗಸ್ಟ್ ತಿಂಗಳ ಕೋಟಾ ಮತ್ತು ಅವುಗಳ ಸ್ಲಾಟ್‌ಗಳನ್ನು ಮೇ 21ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯ. ಜತೆಗೆ ಆಗಸ್ಟ್‌ನ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಚೇತನರು, ವೃದ್ಧರಿಗಾಗಿ ವಿಶೇಷ ಕೋಟಾ

ವೃದ್ಧರು, ವಿಶೇಷ ಚೇತನರು ಮತ್ತು ದೀರ್ಘಕಾಲದ ಕಾಯಿಲೆ ಇರುವವರಿಗೆ ನೀಡಲಾಗುವ ಆಗಸ್ಟ್‌ನ ಉಚಿತ ವಿಶೇಷ ದರ್ಶನ ಟಿಕೆಟ್‌ಗಳು ಮೇ 23ರಂದು ಮಧ್ಯಾಹ್ನ 3 ಗಂಟೆಯಿಂದ ಆನ್‌ಲೈನ್‌ನಲ್ಲಿ ಲಭಿಸಲಿದೆ. ಮೇ 24ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆಗಸ್ಟ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪ್ರಕಟಿಸಲಿದೆ. ಜತೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಆಗಸ್ಟ್ ರೂಮ್ ಕೋಟಾವನ್ನು ಮೇ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಟಿಕೆಟ್‌ ಬುಕ್‌ ಮಾಡುವ ವಿಧಾನ

  • ತಿರುಮಲ ತಿರುಪತಿ ದೇವಸ್ಥಾನಗಳ ದರ್ಶನ ಟಿಕೆಟ್ ಬುಕ್ ಮಾಡಲು, ಟಿಟಿಡಿಯ ಅಧಿಕೃತ ಆನ್‌ಲೈನ್ ಬುಕಿಂಗ್ ವೆಬ್‌ಸೈಟ್‌ https://ttdevasthanams.ap.gov.inಗೆ ಭೇಟಿ ನೀಡಿ.
  • ದರ್ಶನ ಪ್ರಕಾರವನ್ನು ಆಯ್ಕೆ ಮಾಡಿಕೊಂಡು ಮೊಬೈಲ್‌ ನಂಬರ್‌ ನೀಡಿ ಲಾಗಿನ್‌ ಆಗಿ.
  • ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ.
  • ಆಲ್‌ನೈಲ್‌ ಮೂಲಕ ಟಿಕೆಟ್‌ ಮೊತ್ತವನ್ನು ಪಾವತಿಸಿ.
  • ನಿಮ್ಮ ಟಿಕೆಟ್‌ ಬುಕ್‌ ಆಗಿರುವ ಬಗ್ಗೆ ಮಾಹಿತಿ ಎಸ್‌ಎಂಎಸ್‌ ಮೂಲಕ ನಿಮಗೆ ರವಾನೆಯಾಗುತ್ತದೆ.

ಇದನ್ನೂ ಓದಿ: Ayodhya: ಅಯೋಧ್ಯೆಯಲ್ಲಿ ಜನದಟ್ಟಣೆ ನಿಭಾಯಿಸುವ ಸಲಹೆ ನೀಡಿದ ತಿರುಪತಿಯ ಎಂಜಿನಿಯರ್‌ಗಳ ತಂಡ

Continue Reading
Advertisement
karnataka Weather Forecast
ಮಳೆ26 mins ago

Karnataka Weather : ಈ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ

Food Tips Kannada
ಆರೋಗ್ಯ56 mins ago

Food Tips Kannada: ಶಕ್ತಿವರ್ಧಕಗಳಲ್ಲ, ನಿಮ್ಮ ಶಕ್ತಿಯನ್ನೇ ಬಸಿದು ತೆಗೆಯುವ ಆಹಾರಗಳಿವು!

World Aids Vaccine Day
ದೇಶ2 hours ago

World Aids Vaccine Day: ಇಂದು ವಿಶ್ವ ಏಡ್ಸ್ ಲಸಿಕೆ ದಿನ; ಈ ದಿನದ ಹಿನ್ನೆಲೆ ಏನು?

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರ ಬೆನ್ನ ಹಿಂದೆ ನಡೆಯುತ್ತೆ ಪಿತೂರಿ..ಎಚ್ಚರವಾಗಿರಿ

ipl 2024
ಪ್ರಮುಖ ಸುದ್ದಿ6 hours ago

IPL 2024 : ಲಕ್ನೊ ವಿರುದ್ಧವೂ ಸೋತ ಮುಂಬೈ; ಹತ್ತನೇ ಸ್ಥಾನ ಕಾಯಂ

Anjali Murder Case
ಕರ್ನಾಟಕ7 hours ago

Anjali Murder Case: ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

Kanhaiya Kumar
ದೇಶ7 hours ago

Kanhaiya Kumar: ಪ್ರಚಾರದ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯ ಕುಮಾರ್‌ ಮೇಲೆ ಹಲ್ಲೆ; ವಿಡಿಯೊ ಇಲ್ಲಿದೆ

Murder Case
ಬೆಂಗಳೂರು7 hours ago

Murder Case: ಯಲಹಂಕದಲ್ಲಿ ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ

Siddaramaiah
ಸಂಪಾದಕೀಯ7 hours ago

ವಿಸ್ತಾರ ಸಂಪಾದಕೀಯ: ಗ್ರೇಸ್‌ ಮಾರ್ಕ್ಸ್‌ ಅಲ್ಲ, ಗುಣಮಟ್ಟದ ಶಿಕ್ಷಣವೇ ಫಲಿತಾಂಶಕ್ಕೆ ದಾರಿ

Pavithra Jayaram
ಸಿನಿಮಾ7 hours ago

ನಟಿ ಪವಿತ್ರ ಜಯರಾಮ್‌ ಸಾವಿನ ಬೆನ್ನಲ್ಲೇ ಪ್ರಿಯತಮ ಚಂದ್ರಕಾಂತ್ ಆತ್ಮಹತ್ಯೆ; ಖಿನ್ನತೆಗೆ ನಟ ಬಲಿ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ11 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌