Vastu Tips: ವಾಸ್ತು ಪ್ರಕಾರ ಮಕ್ಕಳ ಅಧ್ಯಯನ ಕೊಠಡಿ ಹೀಗಿರಬೇಕು - Vistara News

ಧಾರ್ಮಿಕ

Vastu Tips: ವಾಸ್ತು ಪ್ರಕಾರ ಮಕ್ಕಳ ಅಧ್ಯಯನ ಕೊಠಡಿ ಹೀಗಿರಬೇಕು

ವಾಸ್ತು ಶಾಸ್ತ್ರವು (Vastu Tips) ಅಡುಗೆಮನೆಯಿಂದ ಮಲಗುವ ಕೋಣೆಯವರೆಗೆ ಸಾಕಷ್ಟು ನಿಯಮಗಳನ್ನು ಹೊಂದಿರುತ್ತದೆ. ಮಕ್ಕಳ ಅಧ್ಯಯನ ಕೊಠಡಿಯು ವಾಸ್ತು ನಿಯಮಗಳ ಮೇಲೆ ಆಧಾರಿತವಾಗಿದ್ದರೆ ಅವರ ಮನಸ್ಸು ಅಧ್ಯಯನದ ಮೇಲೆ ಕೇಂದ್ರೀಕೃತವಾಗಿರುತ್ತದೆ.

VISTARANEWS.COM


on

Vastu Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಕ್ಕಳ (children) ಅಧ್ಯಯನ (study) ಚೆನ್ನಾಗಿ ನಡೆಯಬೇಕಿದ್ದರೆ ಅವರು ಅಧ್ಯಯನ ಮಾಡುವ ವಾತಾವರಣವೂ ಉತ್ತಮವಾಗಿರಬೇಕು. ವಾಸ್ತು ಪ್ರಕಾರ (Vastu Tips) ಮಕ್ಕಳ ಅಧ್ಯಯನ ಕೊಠಡಿ (study room) ಧನಾತ್ಮಕ ಅಂಶಗಳಿಂದ (positive energy) ತುಂಬಿರಬೇಕು.

ಮಕ್ಕಳ ಅಧ್ಯಯನ ವಾತಾವರಣದಲ್ಲಿ ದೋಷವಿದ್ದರೆ ಅದು ಅವರ ಮನಸ್ಸನ್ನು ವಿಚಲಿತಗೊಳಿಸುತ್ತದೆ. ಆದ್ದರಿಂದ ಮಕ್ಕಳು ಅಧ್ಯಯನ ಮಾಡುವ ಕೊಠಡಿ ಹೇಗಿರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಬಹು ಮುಖ್ಯ.

ವಾಸ್ತು ಶಾಸ್ತ್ರವು ಅಡುಗೆ ಮನೆಯಿಂದ ಮಲಗುವ ಕೋಣೆಯವರೆಗೆ ಸಾಕಷ್ಟು ನಿಯಮಗಳನ್ನು ಹೊಂದಿರುತ್ತದೆ. ಮಕ್ಕಳ ಅಧ್ಯಯನ ಕೊಠಡಿಯು ವಾಸ್ತು ನಿಯಮಗಳ ಮೇಲೆ ಆಧಾರಿತವಾಗಿದ್ದರೆ ಅವರ ಮನಸ್ಸು ಅಧ್ಯಯನದ ಮೇಲೆ ಕೇಂದ್ರೀಕೃತವಾಗಿರುತ್ತದೆ.

ವಾಸ್ತು ಶಾಸ್ತ್ರವು ಧನಾತ್ಮಕ ಶಕ್ತಿಯನ್ನು ಆಧರಿಸಿರುತ್ತದೆ. ಇದರಲ್ಲಿ ಮನೆಯ ಪರಿಸರವನ್ನು ಶುದ್ಧ ಮತ್ತು ಧನಾತ್ಮಕವಾಗಿಡಲು ಹಲವು ಕ್ರಮಗಳನ್ನು ನೀಡಲಾಗಿದೆ.


ಮಕ್ಕಳ ಮೇಲೆ ಏನು ಪ್ರಭಾವ?

ವಾಸ್ತು ಪ್ರಕಾರ ಅಧ್ಯಯನ ಕೊಠಡಿಯಲ್ಲಿ ವಾಸ್ತು ದೋಷವಿದ್ದರೆ ಮಕ್ಕಳಿಗೆ ಓದಲು ಮನಸ್ಸಾಗುವುದಿಲ್ಲ. ಮಗುವಿನ ಮನಸ್ಸು ಏಕಾಗ್ರತೆ ಹೊಂದಲು ಸಾಧ್ಯವಾಗುವುದಿಲ್ಲ ಮತ್ತು ಅದು ಅವರ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಅಧ್ಯಯನ ಕೋಣೆಯ ವಿಚಾರದಲ್ಲಿ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

ಟೇಬಲ್‌ ಯಾವ ದಿಕ್ಕಿನಲ್ಲಿರಬೇಕು?

ಮಕ್ಕಳ ಕೋಣೆಯಲ್ಲಿ ಯಾವಾಗಲೂ ಟೇಬಲ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಿ. ಇದರಿಂದ ಮಗುವಿನ ಮುಖವು ಉತ್ತರ, ಪೂರ್ವ ಅಥವಾ ಈಶಾನ್ಯಕ್ಕೆ ಇರುತ್ತದೆ. ಇದರಿಂದ ಅವರು ಅಧ್ಯಯನದತ್ತ ಹೆಚ್ಚಿನ ಗಮನ ಹರಿಸುತ್ತರೆ. ಈ ದಿಕ್ಕುಗಳನ್ನು ಎದುರಿಸುವುದರಿಂದ ಧನಾತ್ಮಕ ಶಕ್ತಿ ತುಂಬುತ್ತದೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುತ್ತದೆ.

ಪುಸ್ತಕದ ಕಪಾಟು ಎಲ್ಲಿರಬೇಕು?

ಮಕ್ಕಳ ಅಧ್ಯಯನ ಕೊಠಡಿಯಲ್ಲಿ ಪುಸ್ತಕದ ಕಪಾಟು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಈ ಶೆಲ್ಫ್ ಅನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು.

Vastu Tips


ಯಾವ ಚಿತ್ರಗಳನ್ನು ಇಡಬಹುದು ?

ಮಕ್ಕಳ ಓದುವ ಕೋಣೆಯಲ್ಲಿ ಗಣೇಶ ದೇವರ ಫೋಟೋ ಹಾಕಬೇಕು. ಪ್ರತಿನಿತ್ಯ ಗಣಪತಿಯನ್ನು ಪೂಜಿಸುವುದರಿಂದ ಮಕ್ಕಳ ಬುದ್ದಿಶಕ್ತಿ ಹಾಗೂ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದರಿಂದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಾರೆ.

ಮಕ್ಕಳ ಕೋಣೆಯಲ್ಲಿ ಸಂತೋಷವನ್ನು ಸಂಕೇತಿಸುವ ಚಿತ್ರಗಳನ್ನು ಯಾವಾಗಲೂ ಇಡಬೇಕು. ಮಹಾನ್ ವ್ಯಕ್ತಿಗಳ ಫೋಟೋಗಳನ್ನು ಅವರ ಕೋಣೆಯಲ್ಲಿ ಇರಿಸಿ, ಇದರಿಂದ ಅವರು ಅವರಂತೆ ಆಗಲು ಯೋಚಿಸುತ್ತಾರೆ. ಕೋಣೆಯ ಪೂರ್ವ ದಿಕ್ಕಿನಲ್ಲಿ ಸರಸ್ವತಿಯ ಚಿತ್ರವನ್ನು ಹಾಕಬಹುದು.

ಮಗುವಿಗೆ ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ತೊಂದರೆಗಳಿದ್ದರೆ, ಕೋಣೆಯ ಉತ್ತರ ದಿಕ್ಕಿನಲ್ಲಿ ಬ್ರಹ್ಮದೇವನ ಚಿತ್ರ ಅಥವಾ ವರ್ಣಚಿತ್ರವನ್ನು ಹಾಕಿ. ಇದು ಎಲ್ಲಾ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಎಲ್ಲಿ ಇರಬಾರದು ?

ಶೌಚಾಲಯದಿಂದ ಬರುವ ನಕಾರಾತ್ಮಕ ಶಕ್ತಿಯು ಅಧ್ಯಯನದಿಂದ ಮಕ್ಕಳ ಮನಸ್ಸನ್ನು ವಿಚಲಿತಗೊಳಿಸುತ್ತದೆ ಎಂಬ ಕಾರಣಕ್ಕಾಗಿ ಶೌಚಾಲಯದ ಬಳಿ ಅಧ್ಯಯನ ಕೊಠಡಿಯನ್ನು ಎಂದಿಗೂ ನಿರ್ಮಿಸಬಾರದು.

ಇದನ್ನೂ ಓದಿ: Vastu Tips: ಮನೆಯಲ್ಲಿ ನೆಮ್ಮದಿ ನೆಲೆಸಬೇಕೆ? ಹಾಗಿದ್ದರೆ ಅಡುಗೆ ಒಲೆಯ ದಿಕ್ಕು ಸರಿಯಾಗಿರಲಿ!

ಕೊಠಡಿ ಹೇಗಿರಬೇಕು?

ಮಕ್ಕಳ ಅಧ್ಯಯನ ಕೊಠಡಿಯು ಯಾವಾಗಲೂ ಸ್ವಚ್ಛವಾಗಿರಬೇಕು. ಪುಸ್ತಕಗಳನ್ನು ಅಲ್ಲಲ್ಲಿ ಹರಡಿ ಅಸ್ತವ್ಯಸ್ತವಾಗಿ ಇಡಬೇಡಿ. ಈ ರೀತಿ ಮಾಡುವುದರಿಂದ ಮಕ್ಕಳ ಮನಸ್ಸು ಏಕಾಗ್ರತೆ ಹೊಂದಲು ಕಷ್ಟವಾಗಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಗೋವಾದಲ್ಲಿ ಹಿಂದೂಗಳ ಮೇಲಿತ್ತು ಜುಟ್ಟಿನ ತೆರಿಗೆ!

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಪಠ್ಯಪುಸ್ತಕಗಳಲ್ಲಿ “ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ” ಎಂಬ ಸಾಲುಗಳನ್ನೇ ನಾವೆಲ್ಲಾ ಹಿಂದೆ ಓದಿದ್ದುಂಟು. ಹತ್ತಾರು ಸಾವಿರ ವರ್ಷಗಳ ಸಮೃದ್ಧ ಇತಿಹಾಸದ ಭಾರತವನ್ನು ಈತ ಕಂಡುಹಿಡಿದನಂತೆ! ಆತ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು 1498ರಲ್ಲಿ. ಕ್ರೈಸ್ತ ಕ್ರೌರ್ಯ ಪರಂಪರೆಯ ಅವನ ಮತ್ತು ಪೋರ್ತುಗೀಸರ ಅನ್ಯಾಯ, ಅತ್ಯಾಚಾರಗಳಿಗೆ ಅಂಕೆಯೇ ಇರಲಿಲ್ಲ.

VISTARANEWS.COM


on

goa ನನ್ನ ದೇಶ ನನ್ನ ದನಿ
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ದೇಶದ ಗತ-ಇತಿಹಾಸವೇ (History of India) ಹಾಗೆ. ನಂಬಲು ಅಸಾಧ್ಯವಾದ ಸಂಗತಿಗಳೇ ಅಧಿಕಾಧಿಕ. ಗೋವಾ (Goa) ಎಂದರೆ ಭೂಮಿಯ ಮೇಲಿನ ಸ್ವರ್ಗ ಎಂಬ ಅಪವ್ಯಾಖ್ಯಾನವಿದೆ. ಮದ್ಯಪಾನ (Liquor consuming) ಇತ್ಯಾದಿಗಳನ್ನು ವೈಭವೀಕರಿಸಿ, ಪ್ರವಾಸಿಗರನ್ನು (Tourists) ಆಕರ್ಷಿಸುವ ದೋಚುವ ಹುನ್ನಾರ ನಡೆದೇ ಇದೆ. ತತ್ಸಂಬಂಧೀ ಆದಾಯವೇ ಪ್ರಮುಖವಾಗಿ ಹೋಗಿ ಆ ರಾಜ್ಯಕ್ಕೆ ಮುಕ್ತಿಯೇ ಇಲ್ಲವಾಗಿದೆ. ಹಿಂದಿನ ಗೋಮಾಂತಕದ (Gomanthaka) ದೇವಾಲಯಗಳ (Temples) ಬಗೆಗೆ, ವಿಭಿನ್ನ-ವಿಶಿಷ್ಟ ಸಂಸ್ಕೃತಿಯ ಬಗೆಗೆ ಕೇಳುವವರೇ ಇಲ್ಲ. ಮತಾಂತರೀ ಕ್ರೈಸ್ತರ (Conversion) ಭಯಂಕರ ಹಿಂಸಾಪರ್ವಕ್ಕೆ (Violence) ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತುತ್ತಾದವರು ಗೋವಾದ ಹಿಂದೂಗಳು.

ಆದರೂ, ಸೇಂಟ್ (ಖಂಡಿತಾ ಆತ ಸಂತನೂ ಅಲ್ಲ, ಸಜ್ಜನನೂ ಅಲ್ಲ) ಫ್ರಾನ್ಸಿಸ್ ಕ್ಸಾವಿಯರ್ (ಸಾಮಾನ್ಯ ಯುಗದ 16ನೆಯ ಶತಮಾನ)ನನ್ನೇ ಸಾಲಾಗಿ ನಿಂತು ನಮಸ್ಕರಿಸಿ ಬರುವ ಮೂರ್ಖ ಹಿಂದೂಗಳು ನಾವಾಗಿದ್ದೇವೆ. ಈತ ತನ್ನ ಕಿಂಗ್-ಗೆ ಪತ್ರ ಬರೆದು ಗೋವಾದಲ್ಲಿ Inquisition ಅತ್ಯಂತ ಆವಶ್ಯಕ ಎಂದು ಒತ್ತಾಯಿಸಿದ್ದ. ಈ ಹಿಂಸೆಗೆ ಬಲಿಯಾದವರ ಅಧಿಕೃತ ಸಂಖ್ಯೆಯೇ 16202. ಇದರಲ್ಲಿ 4012 ಮಂದಿ ಮಹಿಳೆಯರೇ ಇದ್ದರು. ಪೋರ್ತುಗೀಸರ ಎಲ್ಲ ವಸಾಹತುಗಳಲ್ಲಿಯೂ ಯಾತನಾ ಶಿಬಿರಗಳಿದ್ದವು (Concentration Camps). ಹಿಂದೂಗಳ ಮೇಲೆ ಇವರದ್ದು “ಅಚ್ಚುಕಟ್ಟಾದ ಹಿಂಸಾವಿಧಾನ”. ಜರ್ಮನಿಯ ನಾಜಿಗಳನ್ನು ನೆನಪಿಸುವಂತಹುದು. ವಿಚಾರಣೆಯ ಅವಧಿಯಲ್ಲಿ ದುರದೃಷ್ಟಶಾಲಿ ಹಿಂದೂಗಳು ಮಾಡುವ ಚೀತ್ಕಾರ, ವಿಸರ್ಜನೆಗಳ ಬಗೆಗೆ ಗುಮಾಸ್ತರು ವಿವರವಾಗಿ ಬರೆದಿಡುತ್ತಿದ್ದರು. ಕಾಲಿಗೆ ಭಾರ ಕಟ್ಟಿ ಹಿಂಭಾಗದಿಂದ ಕೈಗಳಿಗೆ ಹಗ್ಗ ಕಟ್ಟಿ ಆಪಾದಿತನನ್ನು ಮೇಲೆಳೆಯುತ್ತಿದ್ದರು. ಹೆಬ್ಬೆರಳಿನ ಉಗುರಿನ ಕಣ್ಣುಗಳಿಗೆ ಸೂಜಿಗಳಿಂದ ಚುಚ್ಚುತ್ತಿದ್ದರು. ಬಿಸಿ ಎಣ್ಣೆ, ಸುಣ್ಣದ ನೀರು, ಉರಿಯುವ ಗಂಧಕ ಇವೆಲ್ಲವನ್ನೂ ಹಿಂಸೆಗೆ ಧಾರಾಳವಾಗಿ ಬಳಸುತ್ತಿದ್ದರು. ಉರಿಯುವ ಕೊಳ್ಳಿಗಳಿಂದ ಕಂಕುಳಿಗೆ ತಿವಿಯುತ್ತಿದ್ದರು. ದೊಡ್ಡ ರಾಟೆಯ ಮೇಲೆ ಆಪಾದಿತರನ್ನು ಹಿಗ್ಗಿಸಿ ಸಾಯಿಸುತ್ತಿದ್ದರು. ಹಿಂದೂ ಸಂಪ್ರದಾಯ, ಆಚರಣೆಗಳನ್ನು ಅನುಸರಿಸಿಕೊಂಡು ಬಂದುದೇ ಇವರ ಅಪರಾಧ!

ಪೋರ್ತುಗೀಸರ ದುರಾಡಳಿತದ ಗೋವಾದ್ದು ಭಯಂಕರ ಇತಿಹಾಸ. ಇವರ ಅಮಾನುಷ ಹಿಂಸಾಚಾರದ ಘಟನಾವಳಿ ಬಹಳ ದೊಡ್ಡದೇ ಇದೆ. ಕೆಲವಂತೂ ತೀರ ವಿಚಿತ್ರ ಎನ್ನಿಸುವಂತಿವೆ. ಇಸ್ಲಾಮೀ ಆಕ್ರಮಣಕಾರಿಗಳ ದುರಾಡಳಿತ ಕಾಲದ “ಜಿಜಿಯಾ” ತೆರಿಗೆಯನ್ನು ಹೋಲುವ ಈ ಪೋರ್ತುಗೀಸ್ ಕ್ರೂರಿಗಳ ಅನೇಕ ತೆರಿಗೆಗಳು ಮಾನವ ಸಮಾಜವೇ ತಲೆ ತಗ್ಗಿಸುವಂತಹುವು. ಅದರಲ್ಲೊಂದು ಈ ಜುಟ್ಟಿನ ತೆರಿಗೆ. ಹೀಗೊಂದು ತೆರಿಗೆಯಿತ್ತೆಂಬುದೇ ನಮ್ಮಲ್ಲಿ ಬಹಳ ಜನರಿಗೆ ತಿಳಿಯದು.

ಸಾಮಾನ್ಯ ಯುಗದ 17ನೆಯ ಶತಮಾನದ ಆದ್ಯಂತ ಗೋವಾದ ಪೋರ್ತುಗೀಸ್ ಆಳರಸರಿಗೆ ಹಣದ ಅಭಾವವಿತ್ತು, ಭ್ರಷ್ಟಾಚಾರ ಮಿತಿ ಮೀರಿತ್ತು. ಹೇಗೆಲ್ಲಾ ಜನರ ತಲೆ ಒಡೆದು ಹಣ – ತೆರಿಗೆ ದೋಚಬಹುದು, ಎಂದೇ ಯೋಚಿಸುತ್ತಿದ್ದರು. ಚರ್ಚಿನ ದಂಡಾಧಿಕಾರದ ಮತ್ತು ಪರಮತ ಹಿಂಸೆಯ ಉದ್ದೇಶದ (Inquisition) ವಿಕೃತ ಶಿಕ್ಷಾವಿಧಾನಗಳು ಅಲ್ಲಿದ್ದ ಹಿಂದುಗಳಲ್ಲಿ ಅಸುರಕ್ಷತೆಯನ್ನು ಹುಟ್ಟುಹಾಕಿದ್ದವು. ವ್ಯಾಪಾರ, ವ್ಯವಹಾರ, ಕೃಷಿ ಇತ್ಯಾದಿಗಳು ಅತಂತ್ರವಾಗಿದ್ದವು. 1704ರ ಅಕ್ಟೋಬರ್ ತಿಂಗಳ 12ರಂದು ನಡೆದ ಆಡಳಿತಗಾರರ ಮತ್ತು ಚರ್ಚಿನ ಮುಖ್ಯಸ್ಥರ ಸಭೆಯಲ್ಲಿ ಹೇಗೆಲ್ಲಾ ಗೋವಾದ ಹಿಂದುಗಳನ್ನು ದೋಚಬಹುದು, ತೆರಿಗೆ ಹೆಸರಿನಲ್ಲಿ ಲೂಟಿ ಮಾಡಬಹುದು ಎಂದು ಸಮಾಲೋಚಿಸಲಾಯಿತು. ಪಕ್ಕದಲ್ಲಿದ್ದ ಬಿಜಾಪುರದ ಆದಿಲ್ ಶಾಹೀ ಮತ್ತು ಮೊಘಲರ ಆಡಳಿತದ ಜಿಜಿಯಾ ರೀತಿಯ ತೆರಿಗೆಯನ್ನು ಯಾವ ರೀತಿ ವಿಧಿಸಬಹುದು, ಎಂಬ ಚರ್ಚೆಯೂ ಆಯಿತು.

ಪಣಜಿಯಲ್ಲಿ 1972ರಲ್ಲಿ ಪ್ರಕಟವಾದ ವಿ.ಟಿ.ಗುಣೆ ಅವರ “a Detailed Subject-Index and a Table of Contents in Brief” ಕೃತಿಯು ವಿಶದಪಡಿಸುವಂತೆ, ಬಹುಪಾಲು ಹಿಂದೂಗಳು ಜುಟ್ಟು ಬಿಡುವುದರಿಂದ ಈ “ಜುಟ್ಟಿನ ತೆರಿಗೆ” ವಿಧಿಸಲು ತೀರ್ಮಾನಿಸಲಾಯಿತು. ಕ್ರೈಸ್ತೇತರರು ಮಾತ್ರ ಈ ತೆರಿಗೆಯನ್ನು ತೆರಬೇಕಾಗಿತ್ತು. ಸಣ್ಣ ವ್ಯಾಪಾರಿಗಳು, ಅಕ್ಕಸಾಲಿಗರು ಮೂರು ಕ್ಸೆರಾಫಿನ್ (ಗೋವಾ ಪೋರ್ತುಗೀಸರ ನಾಣ್ಯ) ತೆರಬೇಕು; ಸಗಟು ವ್ಯಾಪಾರಿಗಳು ಐದು ಕ್ಸೆರಾಫಿನ್ ಮತ್ತು ಉಳಿದವರು ಎರಡು ಕ್ಸೆರಾಫಿನ್ ತೆರಿಗೆ ಕಟ್ಟಬೇಕು, ಎಂದು ತೀರ್ಮಾನಿಸಲಾಯಿತು. ಈ ಜುಟ್ಟಿನ ತೆರಿಗೆ ದೋಚಲು ನಿಗದಿತವಾದ ಪಡೆಯು, ತೆರಿಗೆದಾರರ ಪಟ್ಟಿ ಸಿದ್ಧಪಡಿಸಿಕೊಂಡು ಗೋವಾದ ಹಿಂದೂಗಳ ಭರ್ತ್ಸನೆಯಲ್ಲಿ ಹಿಂಸೆಯಲ್ಲಿ ನಿರತವಾಯಿತು. ಅಕ್ಷರಶಃ ನಿಯಂತ್ರಣವೇ ಇರಲಿಲ್ಲ. ಕೆಲವೆಡೆ ಐವತ್ತು, ನೂರು ಕ್ಸೆರಾಫಿನ್ ಗಳಷ್ಟು ಹಣ ಕಿತ್ತುಕೊಂಡ ಉದಾಹರಣೆಗಳೂ ಇದ್ದವು.

goa ನನ್ನ ದೇಶ ನನ್ನ ದನಿ

ತುಂಬಾ ಹಿಂದೆ ಅಂದರೆ, 1567ರಲ್ಲಿಯೇ ಗೋವಾದಲ್ಲಿ ನಡೆದ ಆಡಳಿತಗಾರರ ಮತ್ತು ಚರ್ಚಿನ ಮುಖ್ಯಸ್ಥರ ಮೊದಲ ಸಭೆಯಲ್ಲಿ ಹಿಂದೂಗಳ ವಿಗ್ರಹಾರಾಧನೆ, ಸಂಪ್ರದಾಯಗಳು, ಪೂಜೆಗಳು, ಆಚಾರ ವಿಚಾರಗಳು, ಮೈಮೇಲೆ ಗಂಧವನ್ನು ಲೇಪಿಸಿಕೊಳ್ಳುವುದು, ತುಳಸೀ ಪೂಜೆ ಮಾಡುವುದು ಇತ್ಯಾದಿ ಎಲ್ಲವನ್ನೂ ಟೀಕಿಸಲಾಯಿತು, ನಿಷೇಧಿಸಲಾಯಿತು. ಜನಿವಾರ ಹಾಕುವ ಸಮುದಾಯಗಳು ಜನಿವಾರವನ್ನು ಅಡಗಿಸಿಕೊಳ್ಳಬೇಕಿತ್ತು. ಜುಟ್ಟು ಬಿಟ್ಟವರ ಮೇಲೆಯೂ ದಾಳಿ ಹೆಚ್ಚಾಗುತ್ತಹೋಯಿತು. 1868ರಲ್ಲಿ ಲಿಸ್ಬೋವಾದಲ್ಲಿ ಪ್ರಕಟವಾದ ಪೋರ್ತುಗೀಸ್ ಭಾಷೆಯ “Subsidios para a Historia da India Portuguesa” (ಲೇಖಕ: ಆರ್.ಜೆ.ಡೇ ಲಿಮಾ ಫೆಲ್ನರ್ : ಪುಟಗಳು 58, 62 ಇತ್ಯಾದಿ) ಗ್ರಂಥದಲ್ಲಿ ಗೋವಾ ಹಿಂದೂಗಳ ಮೇಲಾಗುತ್ತಿದ್ದ ಬೀಭತ್ಸ ಹಿಂಸೆಯ ವಿವರಗಳಿವೆ.

ಎಸ್.ಜೆ.ಸೆಬಾಸ್ಟಿಯೋ ಫರ್ನಾಂಡಿಸ್ ಎಂಬವನು ಬರೆದ ಪತ್ರವೊಂದರಲ್ಲಿ ಕೆಲವು ಭಯಾನಕ ವಿವರಗಳಿವೆ: “ಹಿಂಸೆ ತಾಳಲಾರದೆ ಹಿಂದೂವೊಬ್ಬ ಕೊನೆಗೊಮ್ಮೆ ಬಲವಂತದ ಮತಾಂತರಕ್ಕೆ ಒಪ್ಪಿದರೆ, ಬ್ಯಾಪ್ಟೈಸಾಗಲು ಸಿದ್ಧನಾದರೆ ಜೆಸ್ಯೂಟ್ ಬ್ರದರ್ ಒಬ್ಬ ತಕ್ಷಣವೇ ಅವನ ಜುಟ್ಟು ಕತ್ತರಿಸುತ್ತಾನೆ. ಮರವೊಂದಕ್ಕೆ ಆ ಜುಟ್ಟನ್ನು ನೇತುಹಾಕಲಾಗುತ್ತದೆ. ಅಲ್ಲಿ ಸೇರಿದ ಕ್ರೈಸ್ತ ಯುವಕರೆಲ್ಲಾ ಆ ಜುಟ್ಟಿಗೆ ಉಗಿಯುತ್ತಾರೆ, ಆ ಮರಕ್ಕೆ ಕಲ್ಲುಗಳನ್ನು ಎಸೆಯುತ್ತಾರೆ, ಕುಣಿದು ಸಂಭ್ರಮಿಸುತ್ತಾರೆ. ಎಲ್ಲ ಸೇರಿ ಹಿಂದೂ ದೇವತೆಗಳಿಗೆ ಕೆಟ್ಟ ಕೆಟ್ಟ ಮಾತುಗಳನ್ನಾಡುತ್ತಾರೆ, ಬೈಯುತ್ತಾರೆ. ಮುಗ್ಧರಾದ ನಾವು ಇಂತಹುದನ್ನು ನಂಬುವುದು ಕಷ್ಟ. ಪೋರ್ತುಗಲ್ ನ ಕಿಂಗ್-ಗೆ, ಅಂದಿನ ಗೋವಾದ ಚೀಫ್ ರೆವಿನ್ಯೂ ಕಮ್ ಟ್ರೋಲರ್ (Comptroller) ಆಗಿದ್ದ ಸಿಮಾವ್ ಬೊಟೆಲ್ಹೋ ಬರೆದ ಪತ್ರದಲ್ಲಿಯೂ ಇಂತಹ ಅಮಾನುಷ ರಾಕ್ಷಸೀ ವ್ಯವಹಾರಗಳ ಚಿತ್ರಣವಿದೆ. “ಅವಹೇಳನ, ಶಿಕ್ಷೆ, ಹಿಂಸೆಗಳಿಗೆ ಸಾಕಾಗಿಹೋದ ಹಿಂದೂಗಳು ಬ್ಯಾಪ್ಟೈಸಾಗಲು ಒಪ್ಪಿದ ಕೂಡಲೇ, ಅವರೆಲ್ಲರ ತಲೆಯನ್ನು ಬೋಳಿಸಲಾಗುತ್ತದೆ. ವಿಗ್ರಹಾರಾಧನೆಯ ಅಪರಾಧಕ್ಕೆ ಆ ಎಲ್ಲ ಹಿಂದೂಗಳಿಗೆ ಗೋಮಾಂಸವನ್ನು ಒತ್ತಾಯಪೂರ್ವಕವಾಗಿ ತಿನ್ನಿಸಲಾಗುತ್ತದೆ” ಎಂಬ ವಿವರಗಳು ಈ ಪತ್ರದಲ್ಲಿವೆ.

ನಮ್ಮ ಪಠ್ಯಪುಸ್ತಕಗಳಲ್ಲಿ “ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ” ಎಂಬ ಸಾಲುಗಳನ್ನೇ ನಾವೆಲ್ಲಾ ಹಿಂದೆ ಓದಿದ್ದುಂಟು. ಹತ್ತಾರು ಸಾವಿರ ವರ್ಷಗಳ ಸಮೃದ್ಧ ಇತಿಹಾಸದ ಭಾರತವನ್ನು ಈತ ಕಂಡುಹಿಡಿದನಂತೆ! ಆತ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು 1498ರಲ್ಲಿ. ಕ್ರೈಸ್ತ ಕ್ರೌರ್ಯ ಪರಂಪರೆಯ ಅವನ ಮತ್ತು ಪೋರ್ತುಗೀಸರ ಅನ್ಯಾಯ, ಅತ್ಯಾಚಾರಗಳಿಗೆ ಅಂಕೆಯೇ ಇರಲಿಲ್ಲ. ಹೀಗಿದ್ದೂ ನಮ್ಮಲ್ಲಿ ಎಂತಹ ದೇಶದ್ರೋಹಿಗಳು, ವಂಚಕರು, ಸಮಯಸಾಧಕರು ಇದ್ದಾರೆ ಎಂದರೆ, 1998ರಲ್ಲಿ ಈ ವಾಸ್ಕೋ ಡ ಗಾಮಾನ ಭಾರತ ಭೇಟಿಯ 500 ವರ್ಷಗಳ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿತ್ತು. ಜನರು ಥೂ ಎಂದು ಹೀನಾಮಾನವಾಗಿ ಉಗಿದ ಮೇಲೆ, ಈ “ಆಚರಣೆ” ರದ್ದಾಯಿತು. ನಾವು ಸ್ವಾಭಿಮಾನ ಶೂನ್ಯರಾದರೆ, ನಮ್ಮ ಅಸ್ಮಿತೆಯನ್ನೇ ಮರೆತರೆ, ಶತ್ರುಗಳನ್ನು – ಆಕ್ರಮಣಕಾರಿ ರಿಲಿಜನ್ನಿನವರನ್ನೇ ಆರಾಧಿಸಲು ತೊಡಗಿದರೆ, ಭಾರತ-ಶತ್ರುಗಳನ್ನು ಅರ್ಥ ಮಾಡಿಕೊಳ್ಳದೇಹೋದರೆ, ಮತ್ತೆ ಪರಾಕ್ರಾಂತರಾಗುತ್ತೇವೆ. ಎಚ್ಚೆತ್ತುಕೊಳ್ಳದೇ ಹೋದರೆ ಈ ಬಾರಿ ಹೇಳಹೆಸರಿಲ್ಲದಂತಾಗುತ್ತೇವೆ.

ಎಚ್ಚರ, ಜಾಗೃತಿ, ಸ್ವರಕ್ಷಣೆಗಳು ನಮ್ಮ ಕಣ್ಣು ತೆರೆಸಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಜಗತ್ತಿನ ಇತಿಹಾಸ ಕನ್ನಡದಲ್ಲಿ ತರಲು ಆಸೆಪಟ್ಟಿದ್ದ ನಿರಂಜನ

Continue Reading

ದೇಶ

Kedarnath Temple: ಕೇದಾರನಾಥ ದೇಗುಲದಿಂದ 228 ಕೆ.ಜಿ ಚಿನ್ನ ಮಾಯ; ದೇವರ ಕಣ್ಣೆದುರೇ ಹಗರಣ!

Kedarnath Temple: ಕೇದಾರನಾಥ ದೇವಾಲಯದಲ್ಲಿ ಚಿನ್ನದ ಹಗರಣ ನಡೆದಿದೆ. ಈ ಕುರಿತು ಯಾರೂ ಏಕೆ ಮಾತನಾಡುವುದಿಲ್ಲ? ಕೇದಾರನಾಥ ದೇವಾಲಯದಲ್ಲಿಯೇ ಹಗರಣ ನಡೆದಿರುವಾಗ, ದೆಹಲಿಯಲ್ಲಿ ದೇವಾಲಯ ನಿರ್ಮಿಸಲಾಗುತ್ತದೆಯೇ ಎಂಬುದಾಗಿ ಮಹಾರಾಷ್ಟ್ರದ ಮುಂಬೈನಲ್ಲಿ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Kedarnath Temple
Koo

ಮುಂಬೈ: ಒಡಿಶಾದ ಪುರಿಯಲ್ಲಿರುವ ವಿಶ್ವಪ್ರಸಿದ್ಧ ಜಗನ್ನಾಥ ದೇವಾಲಯದಲ್ಲಿರುವ ರತ್ನಭಂಡಾರವನ್ನು ತೆಗೆಯಲಾಗಿದ್ದು, ಕೆ.ಜಿಗಟ್ಟಲೆ ಚಿನ್ನ, ಬೆಳ್ಳಿಯ ಆಭರಣಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆಯೇ, ಉತ್ತರಾಖಂಡದಲ್ಲಿರುವ ಐತಿಹಾಸಿಕ ಕೇದಾರನಾಥ ದೇವಾಲಯದಲ್ಲಿದ್ದ (Kedarnath Temple) ಸುಮಾರು 228 ಕೆ.ಜಿ ಚಿನ್ನವನ್ನು ಕಳ್ಳತನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ (Swami Avimukteshwaranand) ಅವರೇ ಈ ಕುರಿತು ಆರೋಪ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ ಶಿವಸೇನೆ ನಾಯಕ (UBT) ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೆಹಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಾಣದ ಕುರಿತು ಚಿಂತನೆ ನಡೆದಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದರು. “ಕೇದಾರನಾಥ ದೇವಾಲಯದಲ್ಲಿ ಚಿನ್ನದ ಹಗರಣ ನಡೆದಿದೆ. ಈ ಕುರಿತು ಯಾರೂ ಏಕೆ ಮಾತನಾಡುವುದಿಲ್ಲ? ಕೇದಾರನಾಥ ದೇವಾಲಯದಲ್ಲಿಯೇ ಹಗರಣ ನಡೆದಿರುವಾಗ, ದೆಹಲಿಯಲ್ಲಿ ದೇವಾಲಯ ನಿರ್ಮಿಸಲಾಗುತ್ತದೆಯೇ? ಆ ಮೂಲಕ ಇಲ್ಲೂ ಹಗರಣ ಮಾಡಲಾಗುತ್ತದೆಯೇ” ಎಂದು ಪ್ರಶ್ನಿಸಿದರು.

“ಉತ್ತರಾಖಂಡದ ಕೇದಾರನಾಥ ದೇವಾಲಯದಲ್ಲಿ 228 ಕೆ.ಜಿ ಚಿನ್ನವನ್ನು ಮಂಗಮಾಯ ಮಾಡಲಾಗಿದೆ. ಆದರೆ, ಇದುವರೆಗೆ ತನಿಖೆ ಆರಂಭವಾಗಿಲ್ಲ. ಇದಕ್ಕೆಲ್ಲ ಯಾರು ಹೊಣೆ? ಈಗ ಅವರು ದೆಹಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇದೆಲ್ಲ ನಡೆಯಬಾರದು” ಎಂಬುದಾಗಿ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಖಾರವಾಗಿ ಹೇಳಿದರು. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಕೇದಾರನಾಥ ದೇವಾಲಯವೂ ಒಂದಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಹಿಂದುಗಳು ಭೇಟಿ ನೀಡುತ್ತಾರೆ. ಕೆಲ ದಿನಗಳ ಹಿಂದಷ್ಟೇ ಕೇದಾರನಾಥ ಯಾತ್ರೆ ಆರಂಭವಾಗಿದೆ.

ಉದ್ಧವ್‌ ಠಾಕ್ರೆ ಮತ್ತೆ ಸಿಎಂ ಆಗಲಿ

ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾದ ಕುರಿತು ಮಾತನಾಡಿದ ಅವರು, “ನಾವೆಲ್ಲರೂ ಸನಾತನ ಧರ್ಮವನ್ನು ಅನುಸರಿಸುವವರು. ನಮಗೆ ಪಾಪ ಹಾಗೂ ಪುಣ್ಯದ ವ್ಯಾಖ್ಯಾನ ಗೊತ್ತಿದೆ. ಜಗತ್ತಿನಲ್ಲೇ ದೊಡ್ಡ ಪಾಪ ಎಂದರೆ ಅದು ಮೋಸ ಮಾಡುವುದು. ಉದ್ಧವ್‌ ಠಾಕ್ರೆ ಅವರಿಗೆ ಅಂತಹ ಮೋಸ ಆಗಿದೆ. ಅವರು ಮತ್ತೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವವರೆಗೂ ನಮಗಾದ ನೋವು ಕಡಿಮೆಯಾಗುವುದಿಲ್ಲ. ಉದ್ಧವ್‌ ಠಾಕ್ರೆ ಅವರಿಗೆ ಮೋಸ ಆಗಿದ್ದಕ್ಕೆ ಮಹಾರಾಷ್ಟ್ರದ ಜನರಿಗೂ ನೋವಾಗಿದೆ. ಕಳೆದ ಚುನಾವಣೆಯಲ್ಲೂ ಇದರ ಪ್ರತಿಬಿಂಬ ಗೋಚರವಾಗಿದೆ” ಎಂದು ಹೇಳಿದರು. ಉದ್ಧವ್‌ ಠಾಕ್ರೆ ಅವರ ಶಿವಸೇನೆಯು ಇಬ್ಭಾಗವಾಗಿ, ಏಕನಾಥ್‌ ಶಿಂಧೆ ಅವರು ಬಿಜೆಪಿ ಜತೆ ಕೈಜೋಡಿಸಿ, ಸರ್ಕಾರ ರಚಿಸಿದ ಕುರಿತು ಅವರು ಹೇಳಿದರು.

ಇದನ್ನೂ ಓದಿ: Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ!

Continue Reading

ಪ್ರಮುಖ ಸುದ್ದಿ

Daiva Miracle: ಕರಾವಳಿಯಲ್ಲಿ ಮತ್ತೊಂದು ದೈವ ಪವಾಡ! ಕಳ್ಳನನ್ನು ಹಿಡಿದು ಕೊಟ್ಟ ಬಬ್ಬು ಸ್ವಾಮಿ ದೈವ

Daiva Miracle: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಪ್ರಾರ್ಥನೆಯ ಬಳಿಕ ಜು.6ರಂದು ಬೆಳಿಗ್ಗೆ ಕಳ್ಳ ಪತ್ತೆಯಾಗಿದ್ದಾನೆ! ಕಳವು ಮಾಡಿ ನಗರದಿಂದ ಪರಾರಿಯಾಗಲು ಬಸ್‌ ನಿಲ್ದಾಣಕ್ಕೆ ತೆರಳಿ ಅಲ್ಲಿ ಕಾಯುತ್ತಿದ್ದ ಈತ ಸಿಕ್ಕಿಬಿದ್ದಿದ್ದಾನೆ.

VISTARANEWS.COM


on

babbu swamy daiva miracle
Koo

ಉಡುಪಿ: ಕರಾವಳಿ (Karavali) ದೈವ ಸನ್ನಿಧಿಯಲ್ಲಿ (Daiva miracle) ಮತ್ತೊಂದು ಪವಾಡಸದೃಶ ಘಟನೆ ನಡೆದಿದ್ದು, ಇದೊಂದು ದೈವ ಕಾರಣಿಕದ ಘಟನೆ ಎಂದೇ ಭಕ್ತರು ಹೇಳುತ್ತಿದ್ದಾರೆ. ಉಡುಪಿಯ (Udupi news) ಚಿಟ್ಪಾಡಿ ಕಸ್ತೂರ್ಬಾ ನಗರ ಬಬ್ಬು ಸ್ವಾಮಿ (Babbu Swamy Daiva) ಸನ್ನಿಧಾನದಲ್ಲಿ ಕಳವು (Theft) ಮಾಡಿದ ವ್ಯಕ್ತಿಯನ್ನು 24 ಗಂಟೆಯ ಒಳಗೆ ಬಂಧಿಸಲಾಗಿದೆ. ಇದರ ಸೂಚನೆಯನ್ನೂ ದೈವವೇ ನೀಡಿದೆ!

ಜು.4ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಲಾಗಿತ್ತು. ಮರುದಿನ ಅಂದರೆ ಜು.5ರಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ನಡೆದಿತ್ತು. ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ದೈವಕ್ಕೆ ಪ್ರಶ್ನೆ ಹಾಕಲಾಗಿತ್ತು. ಊರಿನ ಸಂಕಷ್ಟ ಬಗೆಹರಿಸುವ ದೈವ ಸನ್ನಿಧಾನದಲ್ಲಿ ಕಳ್ಳತನವಾಗಿದ್ದಕ್ಕೆ ಭಕ್ತಾದಿಗಳು ಬೇಸರ ವ್ಯಕ್ತಪಡಿಸಿದ್ದರು.

24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಪ್ರಾರ್ಥನೆಯ ಬಳಿಕ ಜು.6ರಂದು ಬೆಳಿಗ್ಗೆ ಕಳ್ಳ ಪತ್ತೆಯಾಗಿದ್ದಾನೆ! ಕಳವು ಮಾಡಿ ನಗರದಿಂದ ಪರಾರಿಯಾಗಲು ಬಸ್‌ ನಿಲ್ದಾಣಕ್ಕೆ ತೆರಳಿ ಅಲ್ಲಿ ಕಾಯುತ್ತಿದ್ದ ಈತ ಸಿಕ್ಕಿಬಿದ್ದಿದ್ದಾನೆ. ಬಸ್ ನಿಲ್ದಾಣ ಪರಿಸರದಲ್ಲಿ ಅಲರ್ಟ್‌ ಆಗಿದ್ದ ಆಟೋ ಚಾಲಕರೊಬ್ಬರಿಂದ ಈತನ ಪತ್ತೆಯಾಗಿದೆ.

ಈತ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದ. ಸಿಸಿಟಿವಿಯಲ್ಲಿ ಕಳ್ಳನ ವಿಡಿಯೋ ನೋಡಿದ್ದ ಆಟೋ ಚಾಲಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಾಗಲಕೋಟೆ ಮೂಲದ ಮುದುಕಪ್ಪ ಪೊಲೀಸರ ಸೆರೆಯಾದ ಕಳ್ಳನಾಗಿದ್ದು, ಈತ ಬಾಗಲಕೋಟೆಗೆ ಹೋಗಬೇಕಾದ ಬಸ್ಸಿಗೆ ಕಾಯುತ್ತಾ ನಿಲ್ದಾಣದಲ್ಲಿ ನಿದ್ದೆ ಹೋಗಿದ್ದ. ಬೆಳಿಗ್ಗೆ ಎಂಟು ಗಂಟೆಯಾದರೂ ಮಂಪರಿನಲ್ಲಿ ಮಲಗಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ದೈವಸ್ಥಾನಗಳಲ್ಲಿ ಕಳ್ಳತನ ಮಾಡುವ ಚಾಳಿ ಹೊಂದಿದ್ದ ಕಳ್ಳ ಮುದುಕಪ್ಪ, ಚಿಟ್ಪಾಡಿ ದೈವಸ್ಥಾನದ ನಂತರ ಉದ್ಯಾವರ ಪರಿಸರದಲ್ಲೂ ಕಳ್ಳತನ ಮಾಡಿದ್ದ. ದೋಚಿದ ಹಣದೊಂದಿಗೆ ಬಾಗಲಕೋಟೆಗೆ ಹೋಗಲು ತಯಾರಿ ಮಾಡಿಕೊಂಡು ಬಸ್‌ ನಿಲ್ದಾಣಕ್ಕೆ ಬಂದಿದ್ದು, ಅಂದು ಬಸ್ ಸಿಗದ ಕಾರಣ ಬಸ್ ಸ್ಟಾಂಡ್‌ನಲ್ಲಿ ಉಳಿದುಕೊಂಡಿದ್ದ.

ಹೀಗೆ ಕಳ್ಳನನ್ನು ತೋರಿಸಿ ಮಾತು ಉಳಿಸಿಕೊಂಡ ಬಬ್ಬು ಸ್ವಾಮಿ ದೈವದ ಕಾರಣಿಕದ ಬಗ್ಗೆ ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದ ಹಿಂದೆಯೂ ಇದೇ ಸನ್ನಿಧಾನದಲ್ಲಿ ಇನ್ನೊಂದು ಪವಾಡ ನಡೆದಿತ್ತು. ದೈವ ಸನ್ನಿಧಾನಕ್ಕಾಗಿ ಕೊರೆಯಿಸಿದ ಬೋರ್ವೆಲ್‌ನಲ್ಲಿ ನೀರು ಸಿಗದೇ ಹೋದಾಗ ಸಾಮೂಹಿಕ ಪ್ರಾರ್ಥನೆ ನಡೆಸಲಾಗಿತ್ತು. ಪ್ರಾರ್ಥನೆ ನಡೆದ ಬೆನ್ನಲ್ಲೇ ಬೋರ್‌ವೆಲ್‌ನಿಂದ ಆಕಾಶದೆತ್ತರಕ್ಕೆ ನೀರು ಚಿಮ್ಮಿತ್ತು!

ಇದನ್ನೂ ಓದಿ: Panjurli Daiva: ಶರತ್‌ ಶೆಟ್ಟಿ ಕೊಲೆ ಆರೋಪಿ ಶರಣಾಗತಿ; ಎಳೆತಂದು ನಿಲ್ಲಿಸಿತೇ ಪಂಜುರ್ಲಿ ದೈವ?

Continue Reading

ಚಿತ್ರದುರ್ಗ

Murugha mutt : ಮುರುಘಾ ಮಠದಲ್ಲಿ ಕಳ್ಳತನ; ದರ್ಬಾರ್‌ ಹಾಲ್‌ನಲ್ಲಿದ್ದ 22 ಕೆಜಿ ತೂಕದ ಬೆಳ್ಳಿ ಮೂರ್ತಿ ಎಗರಿಸಿದ ಕಳ್ಳರು

Murugha mutt : ಮುರುಘಾ ಮಠದಲ್ಲಿದ್ದ 22 ಕೆಜಿ ತೂಕದ ಬೆಳ್ಳಿ ಮೂರ್ತಿಯನ್ನು ಕಳ್ಳರು ಕಳ್ಳತನ (Theft Case) ಮಾಡಿದ್ದಾರೆ. ಈ ಸಂಬಂಧ ಮಠದ ಸದಸ್ಯರು ಠಾಣೆ ಮೆಟ್ಟಿಲೇರಿದ್ದಾರೆ.

VISTARANEWS.COM


on

By

murugha mutt
Koo

ಚಿತ್ರದುರ್ಗ: ಮುರುಘಾ ಮಠದಲ್ಲಿ ಬೆಳ್ಳಿ ಮೂರ್ತಿಯೊಂದು (Murugha mutt ) ಕಳ್ಳತನವಾಗಿದೆ. ಮುಂಜಾನೆ ಪೂಜೆಗೆಂದು ಹೋದಾಗ ಮೂರ್ತಿ ಕಳವು (Theft Case) ಆಗಿರುವುದು ಬೆಳಕಿಗೆ ಬಂದಿದೆ ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು ಜೂನ್‌ 26ರಂದೇ ಮಠದಲ್ಲಿ ಸಿಸಿಟಿವಿ ಆಫ್ ಆಗಿದೆ. ಈ ವೇಳೆ ದರ್ಬಾರ್ ಹಾಲ್‌ನಲ್ಲಿದ್ದ 22 ಕೆಜಿ ತೂಕದ ಬೆಳ್ಳಿ‌ಮೂರ್ತಿ ಕಳ್ಳತನವಾಗಿದೆ. ಕಳ್ಳರು ಸಿಸಿಟಿವಿ ಆಫ್ ಮಾಡಿ ಕಳ್ಳತನ‌ ಮಾಡಿರಬಹುದು. ಈ ಕುರಿತು ಮೊದಲು ಮಠದ ಆಂತರಿಕ ಸಭೆ ಕರೆದು ವಿಚಾರಣೆ ಮಾಡಿದ್ದೇವೆ. ಆದರೆ ಕಳ್ಳತನ ಮಾಡಿದ್ದು ಯಾರು ಏನು ಎಂಬುದು ತಿಳಿದುಬಂದಿಲ್ಲ.

ಕಾರ್ಯಕ್ರಮದ ಒತ್ತಡದಿಂದಾಗಿ ಕಳ್ಳತನವಾಗಿರುವುದು ಅರಿವಿಗೆ ಬಂದಿರಲಲ್ಲ. ಮಠದ ಯುವಕರು ಗಮನಿಸಿ ಮಾಹಿತಿ ನೀಡಿದ್ದಾರೆ. ಈ ಹಿಂದೆ ಸ್ವಾಮೀಜಿಗೆ ಸವಿನೆನಪಿಗಾಗಿ ಸಮಾರಂಭವೊಂದರಲ್ಲಿ ಬೆಳ್ಳಿ ಮೂರ್ತಿಯನ್ನು ನೀಡಲಾಗಿತ್ತು. ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದೇವೆ ಎಂದು ಬಸವಕುಮಾರ ಸ್ವಾಮೀಜಿ ಮಾಹಿತಿ ನೀಡಿದರು. ಬಸವಕುಮಾರ ಸ್ವಾಮೀಜಿ ಜತೆಗೆ ಮಠದ ಆಡಳಿತ ಮಂಡಳಿ ಸದಸ್ಯರು ಸೇರಿ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ತೆರಳಿ ದೂರು ದಾಖಲಿಸಲಿದ್ದಾರೆ.

ಇದನ್ನೂ ಓದಿ: Divya Vasantha: ಗೌರ್ಮೆಂಟ್ ಸ್ಕೂಲ್‌ನಲ್ಲಿ ಓದಿ, ಸೇಲ್ಸ್ ಗರ್ಲ್‌ ಆಗಿದ್ದ ದಿವ್ಯಾ ವಸಂತ ಬಳಿ ಇದೆ ಈ ದುಬಾರಿ ಕಾರು!

ಓಡಿಹೋಗಲು ಯತ್ನಿಸಿದ ಚಡ್ಡಿ ಗ್ಯಾಂಗ್‌ನ ಇಬ್ಬರ ಕಾಲಿಗೆ ಗುಂಡಿಕ್ಕಿದ ಪೊಲೀಸರು!

ಮಂಗಳೂರು: ಖತರ್ನಾಕ್‌ ಚಡ್ಡಿ ಗ್ಯಾಂಗ್‌ (Chaddi gang) ದರೋಡೆಕೋರರ (Robbers) ಗುಂಪಿನ ಇಬ್ಬರ ಕಾಲಿಗೆ ಮಂಗಳೂರು ಪೊಲೀಸರು (Mangalore Police) ಗುಂಡು ಹಾರಿಸಿ (Shoot Out) ಮತ್ತೆ ಬಂಧಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳ ಮಹಜರು ಮಾಡಲು ಹೋದಾಗ ಇವರು ತಪ್ಪಿಸಿಕೊಳ್ಳಲು ಯತ್ನಿಸಿದ್ದರು.

ಮಂಗಳೂರು ಹೊರವಲಯದ ಮುಲ್ಕಿ ಎಂಬಲ್ಲಿ ಘಟನೆ ನಡೆದಿದೆ. ನಿನ್ನೆ ಸಕಲೇಶಪುರದಿಂದ ಬಂಧಿಸಿ ಕರೆತಂದಿದ್ದ ಕಳ್ಳರನ್ನು ಈ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಉಡುಪಿಯಲ್ಲಿ ಒಬ್ಬರು ವೃದ್ಧ ದಂಪತಿಯ ಮನೆ ದರೋಡೆ ಮಾಡಿದ್ದ ಕಳ್ಳರು, ಆ ಮನೆಯ ಕಾರನ್ನೂ ಕದ್ದು ಅದರಲ್ಲಿ ಪರಾರಿಯಾಗಿದ್ದರು. ಆ ಕಾರನ್ನು ಬಿಟ್ಟು ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟಿದ್ದರು. ಕಾರು ಇದ್ದ ಸ್ಥಳಕ್ಕೆ ಮಹಜರಿಗೆ ಇವರನ್ನು ಕರೆತಂದಾಗ ಇಬ್ಬರು ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದರು.

ಎಎಸ್‌ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇವರ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಎಲ್ಲಿ ದರೋಡೆ ನಡೆಸಿದ್ದರು?

ಮಂಗಳೂರಿನ ಕಾಪಿಕಾಡು ಬಳಿಯ ಕೋಟೆಕಣಿ ಎಂಬಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಡ್ಡಿ, ಬನಿಯನ್ ಗ್ಯಾಂಗ್​ಗೆ ಸೇರಿದ ಮಧ್ಯಪ್ರದೇಶದ ನಾಲ್ಕು ಜನ ದರೋಡೆಕೋರರ ಬಂಧವಾಗಿದೆ. ರಾಜು ಸಿಂಗ್ವಾನಿಯ (24), ಮಯೂರ್ (30), ಬಾಲಿ (22), ವಿಕ್ಕಿ (21) ಬಂಧನಕ್ಕೆ ಒಳಗಾದವರು.

ಮೊನ್ನೆ ರಾತ್ರಿ ವೃದ್ಧ ದಂಪತಿಗಳಿದ್ದ ಮನೆಗೆ ಕನ್ನ ಹಾಕಿದ್ದ ಈ ತಂಡ ದರೋಡೆ ಮಾಡಿತ್ತು. ವೃದ್ಧ ದಂಪತಿಗೆ ಹಲ್ಲೆ ಮಾಡಿ ಲೂಟಿ ಮಾಡಿದ್ದರು. ಹಲ್ಲೆಗೊಳಗಾದ ವಿಕ್ಟರ್ ಮೆಂಡೋನ್ಸಾ(71), ಪ್ಯಾಟ್ರಿಷಾ ಮೆಂಡೋನ್ಸಾ(60) ಆಸ್ಪತ್ರೆಗೆ ದಾಖಲಾಗಿದ್ದರು. ಆರೋಪಿಗಳಿಂದ 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 1 ಲಕ್ಷ ರೂ. ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ 3೦00 ರೂಪಾಯಿ ನಗದು ಹಣವನ್ನು ದರೋಡೆ ಮಾಡಿದ್ದರು. ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸ್ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್​​ನಲ್ಲಿ ದರೋಡೆಕೋರರರು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು. ಬಳಿಕ ಬಸ್ ಫಾಲೋ ಮಾಡಿ ಬಂಧಿಸಿದ್ದರು.

ಉಡುಪಿಯಲ್ಲಿ ಕೆಲ ತಿಂಗಳ ಹಿಂದೆ ʼಬನಿಯನ್‌ ಗ್ಯಾಂಗ್‌ʼ ಸಕ್ರಿಯವಾಗಿತ್ತು. ಬನಿಯನ್‌ ಹಾಗೂ ಚಡ್ಡಿ ಧರಿಸಿ ಬರುವ ಈ ಕಳ್ಳರು ಮೈಗೆ ಎಣ್ಣೆ ಹಚ್ಚಿಕೊಂಡು ಫೀಲ್ಡಿಗಿಳಿಯುತ್ತಾರೆ. ಎಲ್ಲರೂ ಗಾಢ ನಿದ್ರೆ ಜಾರುವ ಸಮಯಕ್ಕೆ ಕಾದುಕುಳಿತು ನಂತರ ಕಳ್ಳತನಕ್ಕೆ ಮುಂದಾಗುತ್ತಾರೆ. ರಾತ್ರೋ ರಾತ್ರಿ ಕಳ್ಳ ಬೆಕ್ಕಿನಂತೆ ನುಗ್ಗುವ ಇವರು ಕ್ಷಣಾರ್ಧದಲ್ಲಿ ಚಿನ್ನಾಭರಣವನ್ನು ಲೂಟಿ ಮಾಡಿ ಪರಾರಿ ಆಗುತ್ತಾರೆ.

ಈ ಕಚ್ಚಾ ಬನಿಯನ್ ಗ್ಯಾಂಗ್ ಪತ್ತೆ ಮಾಡುವುದೇ ಉಡುಪಿ ಪೊಲೀಸರಿಗೆ ಸವಾಲಾಗಿತ್ತು. ಸಂತೆಕಟ್ಟೆಯಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣದಲ್ಲಿ ಈ ತಂಡದ ಕೃತ್ಯ ಬಯಲಾಗಿತ್ತು. ಕೃತ್ಯದ ಬಳಿಕ ಈ ಗ್ಯಾಂಗ್ ಸಿಂಗಲ್ ಚಪ್ಪಲಿಯನ್ನು ಬಿಟ್ಟು ಹೋಗುತ್ತಿತ್ತು. ಸೊಂಟಕ್ಕೆ ಚಪ್ಪಲಿ ಕಟ್ಟಿಕೊಂಡು ಬರುವ ಈ ಗ್ಯಾಂಗ್‌ ಡೆಲ್ಲಿ ಕ್ರೈಮ್-2 ವೆಬ್ ಸೀರೀಸ್‌ ಕಚ್ಚಾ ಬನಿಯನ್ ಗ್ಯಾಂಗ್ ನೆನಪಿಸುವಂತಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
valmiki corporation scam culprits
ಪ್ರಮುಖ ಸುದ್ದಿ24 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮತ್ತೊಬ್ಬನ ಬಂಧನ; ಛತ್ತೀಸ್‌ಗಢದಲ್ಲೂ ವಂಚಿಸಿದ್ದ!

Anant Ambani Wedding
ದೇಶ28 mins ago

Anant Ambani Wedding: ಮಗನ ಮದುವೆಯಲ್ಲಿ ರಿಲಯನ್ಸ್ ಉದ್ಯೋಗಿಗಳಿಗೂ ಭರ್ಜರಿ ಔತಣ ನೀಡಿದ ಮುಖೇಶ್ ಅಂಬಾನಿ

Former MPs
ದೇಶ28 mins ago

Formers MPs: ಚುನಾವಣೆಯಲ್ಲಿ ಸೋತರೂ ಸರ್ಕಾರಿ ಬಂಗಲೆ ಬಿಡದ 200 ಮಾಜಿ ಸಂಸದರು; ನೋಟಿಸ್‌ ಜಾರಿ

Hardik Pandya
ಕ್ರೀಡೆ32 mins ago

Hardik Pandya: ರೋಡ್​ ಶೋದಲ್ಲಿ ಚಕ್ ದೇ! ಇಂಡಿಯಾ ಹಾಡಿದ ಹಾರ್ದಿಕ್​ ಪಾಂಡ್ಯ; ವಿಡಿಯೊ ವೈರಲ್​

Monkey Attack
Latest1 hour ago

Monkey Attack: ಹುಡುಗಿಯ ಮೇಲೆ ಏಕಾಏಕಿ ದಾಳಿ ಮಾಡಿದ ಕೋತಿ; ವಿಡಿಯೊ ಇದೆ

Actor Yash
ಸಿನಿಮಾ1 hour ago

Actor Yash: ಯಶ್‌ ಅಭಿನಯದ ಈ ಸೂಪರ್‌ ಹಿಟ್‌ ಚಿತ್ರ ರಿ-ರಿಲೀಸ್‌; ಎರಡೂವರೆ ವರ್ಷಗಳ ಬಳಿಕ ರಾಕಿಂಗ್‌ ಸ್ಟಾರ್‌ ಥಿಯೇಟರ್‌ಗೆ ಎಂಟ್ರಿ

assault case viral video
ವೈರಲ್ ನ್ಯೂಸ್1 hour ago

Viral Video: ಬೆಂಗಳೂರಲ್ಲಿ ಹಾಡಹಗಲೇ‌‌ ಪುಂಡಾಟ, 15 ಮಂದಿಯಿಂದ ಯುವಕನ ಮೇಲೆ ಹಲ್ಲೆ

Kashmir encounter
ದೇಶ1 hour ago

Kashmir Encounter: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ನಾಲ್ವರು ಯೋಧರು ಹುತಾತ್ಮ; ಮುಂದುವರಿದ ಕಾರ್ಯಾಚರಣೆ

BJP MLA
ಪ್ರಮುಖ ಸುದ್ದಿ2 hours ago

BJP MLA: ಡಿಗ್ರಿ ಉಪಯೋಗಕ್ಕೆ ಬರಲ್ಲ, ಪಂಕ್ಚರ್‌ ಅಂಗಡಿ ತೆರೆಯಿರಿ; ವಿದ್ಯಾರ್ಥಿಗಳಿಗೆ ಬಿಜೆಪಿ ಶಾಸಕ ಕರೆ!

Pani Puri Machine
Latest2 hours ago

Pani Puri Machine: ಬೆಂಗಳೂರಿಗೆ ಬಂದಿದೆ ಪಾನಿಪುರಿ ನೀಡುವ ಮೆಷಿನ್! ಇದು ಹೇಗಿದೆ ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ16 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ22 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ3 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌