Tumkur accident | ಕಂಬನಿ ಮಿಡಿದ ಸಿಎಂ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ - Vistara News

Latest

Tumkur accident | ಕಂಬನಿ ಮಿಡಿದ ಸಿಎಂ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ

ತುಮಕೂರು ಜಿಲ್ಲೆಯ ಕಳ್ಳಂಬೆಳ್ಳದಲ್ಲಿ ನಡೆದ ಅಪಘಾತದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

VISTARANEWS.COM


on

Tumkur accident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡು ಹಲವರು ಗಾಯಗೊಂಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ ಎಂದಿರುವ ಅವರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಈ ನಡುವೆ, ರಾಜ್ಯ ಸರಕಾರದಿಂದ ಮೃತರ ಕುಟುಂಬಗಳಿಗೆ ತಲಾ ೫ ಲಕ್ಷ ರೂ. ಮತ್ತು ಗಾಯಗೊಂಡಿರುವವರ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಾಳೆ ಮನೆಗಳಿಗೆ ಭೇಟಿ ನೀಡುವ ಸಾಧ್ಯತೆ
ಶಿರಾ ಅಪಘಾತದಲ್ಲಿ ಮೃತಪಟ್ಟವರು ಮತ್ತು ಗಾಯಕ್ಕೊಳಗಾದವರೆಲ್ಲರೂ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ನಿವಾಸಿಗಳು. ನಾಳೆ ರಾಯಚೂರು ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಮೃತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಸಾಧ್ಯತೆ ಇದೆ. ವಡವಟ್ಟಿ, ಕುರುಕುಂದ, ಶಾಂತಗಲ್ ಗ್ರಾಮಕ್ಕೆ ಭೇಟಿ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಎಚ್‌ಡಿಕೆ ಕಂಬನಿ
ʻʻತುಮಕೂರು ಜಿಲ್ಲೆಯ ಶಿರಾ ಬಳಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 9 ಜನರು ದುರ್ಮರಣಕ್ಕಾಗಿ, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಮೃತಪಟ್ಟವರು ಕೂಲಿಕಾರ್ಮಿಕರು, ಬದುಕು ಕಟ್ಟಿಕೊಳ್ಳಲು ಅವರೆಲ್ಲರೂ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದರೆಂದು ತಿಳಿದು ನನಗೆ ಅತೀವ ದುಃಖವಾಗಿದೆ.ʼʼ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024 : ಭಾರತ ತಂಡ ವಿಶ್ವ ಕಪ್​ ಗೆಲ್ಲುವುದಿಲ್ಲ; ಇಂಗ್ಲೆಂಡ್​ ಮಾಜಿ ಆಟಗಾರನ ಭವಿಷ್ಯ

T20 World Cup 2024: ಮೆನ್ ಇನ್ ಬ್ಲೂ ಪ್ರತಿಭೆಗಳನ್ನು ಹೊಂದಿರುತ್ತದೆ. ಅಂತಿಮವಾಗಿ ಅವರು ಮುಂಬರುವ ಟಿ 20 ವಿಶ್ವಕಪ್ 2024ರಲ್ಲಿ ವಿರೋಧ ತಂಡಗಳಿಗೆ ಗಮನಾರ್ಹ ಬೆದರಿಕೆ ಒಡ್ಡುವುದಿಲ್ಲ ಎಂದು ಲಾಯ್ಡ್ ಹೇಳಿದ್ದಾರೆ. ಈ ದಿಟ್ಟ ಹೇಳಿಕೆಯು ಐಸಿಸಿ ಪಂದ್ಯಾವಳಿಗಳಲ್ಲಿ ಭಾರತದ ಪ್ರದರ್ಶನದ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಹುಟ್ಟುಹಾಕಿದೆ.

VISTARANEWS.COM


on

T20 world cup 2024
Koo

ಬೆಂಗಳೂರು: ಜೂನ್ 1 ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯ ವಹಿಸಲಿರುವ ಐಸಿಸಿ ಟಿ 20 ವಿಶ್ವಕಪ್ 2024ರಲ್ಲಿ (T20 World Cup 2024) ಭಾರತ ಕಪ್ ಗೆಲ್ಲುವುದಿಲ್ಲ. ಆಯ್ಕೆ ಮಾಡಿರುವ ಭಾರತ ತಂಡ ಪ್ರಭಾವಿಯಾಗಿಲ್ಲ ಎಂದು ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಡೇವಿಡ್ ಲಾಯ್ಡ್ ಹೇಳಿಕೆ ನೀಡಿದ್ದಾರೆ. ಭಾರತ ತಂಡ ಸಾಮಾನ್ಯ ತಂಡವಾಗಿದೆ. ಹೀಗಾಗಿ ಈ ತಂಡಕ್ಕೆ ಗೆಲುವಿನ ಅವಕಾಶ ಕಡಿಮೆಯಿದೆ ಎಂದು ಅವರು ಹೇಳಿದ್ದಾರೆ. ಗಮನಾರ್ಹವಾಗಿ, ಭಾರತ ಕ್ರಿಕೆಟ್ ತಂಡವು 2013 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಆದಾಗ್ಯೂ, ಭಾರತವು ತವರು ನೆಲದಲ್ಲಿ ನಡೆದ 2023ರ ಐಸಿಸಿ ವಿಶ್ವಕಪ್​ನಲ್ಲಿ ರನ್ನರ್-ಅಪ್ ಆಗಿತ್ತು. ಎರಡು ಬಾರಿ ಡಬ್ಲ್ಯುಟಿಸಿಯ ಫೈನಲ್ ತಲುಪಿ ರನ್ನರ್ ಅಪ್​ ಸ್ಥಾನ ಪಡೆದುಕೊಂಡಿತ್ತು.

ಟಿ20 ವಿಶ್ವಕಪ್​ ಕುರಿತು ಹೇಳುವುದಾದರೆ 2007ರ ಆವೃತ್ತಿಯ ವಿಜೇತ ತಂಡ 2021ರ ಲೀಗ್ ಹಂತದಲ್ಲೇ ಹೊರಕ್ಕೆ ಬಿದ್ದಿತ್ತು. ಪ್ರತಿಷ್ಠಿತ ಪಂದ್ಯಾವಳಿಯ 2022ರ ಆವೃತ್ತಿಯಲ್ಲಿ ಸೆಮಿಫೈನಲ್​​ನಲ್ಲಿ ಇಂಗ್ಲೆಂಡ್​ಗೆ ಶರಣಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಕೊರತೆ ಮುಂದುವರಿದಿದೆ.

ಭಾರತ ತಂಡದ ಸಾಮರ್ಥ್ಯವನ್ನು ಊಹಿಸಬಹುದು

ಲಾಯ್ಡ್​ ಅವರು ಟೀಮ್ ಇಂಡಿಯಾ ಆಯ್ಕೆ ವಿಧಾನವನ್ನು ಟೀಕಿಸಿದರು ಭಾರತ ತಂಡವನ್ನು ಬ್ಯಾಟ್ ಮತ್ತು ಬೌಲಿಂಗ್​ನಲ್ಲಿ ಅಪಾಯಗಳನ್ನು ತಡೆಯುವ ಸಾಮರ್ಥ್ಯ ಇರುವ ತಂಡ ಅಲ್ಲ ಎಂದಿದ್ದಾರೆ. ಈ ತಂಡದ ಸಾಮರ್ಥ್ಯವನ್ನು ಯಾರು ಬೇಕಾದರೂ ಊಹಿಸಬಹುದು ಎಂದು ಹೇಳಿದರು. ಕಳೆದ ದಶಕದಲ್ಲಿ ಭಾರತ ತಂಡದ ಸ್ಥಿರತೆಯ ಕೊರತೆಯನ್ನು ಸಹ ಲಾಯ್ಡ್ ಎತ್ತಿ ತೋರಿಸಿದರು. ಐಸಿಸಿ ಸ್ಪರ್ಧೆಗಳಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನದ ಪ್ರವೃತ್ತಿಯನ್ನು ಬೊಟ್ಟು ಮಾಡಿದ್ದಾರೆ.

ಭಾರತವು ಪ್ರತಿಭಾವಂತ ಆಟಗಾರರನ್ನು ಹೊಂದಿದೆ. ಆದರೆ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅವರ ಅಪಾಯ-ಮುಕ್ತ ಕಾರ್ಯತಂತ್ರ ಸರಿಯಾಗಿಲ್ಲ. ಕಳೆದ ದಶಕದಲ್ಲಿ ಸ್ಟಾರ್-ಸ್ಟಡೆಡ್ ಲೈನ್ಅಪ್ ಹೊಂದಿದ್ದರೂ ಐಸಿಸಿ ಸ್ಪರ್ಧೆಗಳಲ್ಲಿ ಪ್ರಬಲ ಶಕ್ತಿಯಾಗುವ ಸಾಮರ್ಥ್ಯ ಹೊಂದಿಲ್ಲ ಎಂದು ಇಂಗ್ಲೆಂಡ್​​ನ ಮಾಜಿ ವೇಗಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: IPL 2024 : ಸಚಿನ್​, ಧೋನಿ, ರೋಹಿತ್​; ಒಂದೇ ಜಾಹೀರಾತಿನಲ್ಲಿ ಮೂರು ಪೀಳಿಗೆಯ ನಾಯಕರು; ಇಲ್ಲಿದೆ ವಿಡಿಯೊ

ಮೆನ್ ಇನ್ ಬ್ಲೂ ಪ್ರತಿಭೆಗಳನ್ನು ಹೊಂದಿರುತ್ತದೆ. ಅಂತಿಮವಾಗಿ ಅವರು ಮುಂಬರುವ ಟಿ 20 ವಿಶ್ವಕಪ್ 2024ರಲ್ಲಿ ವಿರೋಧ ತಂಡಗಳಿಗೆ ಗಮನಾರ್ಹ ಬೆದರಿಕೆ ಒಡ್ಡುವುದಿಲ್ಲ ಎಂದು ಲಾಯ್ಡ್ ಹೇಳಿದ್ದಾರೆ. ಈ ದಿಟ್ಟ ಹೇಳಿಕೆಯು ಐಸಿಸಿ ಪಂದ್ಯಾವಳಿಗಳಲ್ಲಿ ಭಾರತದ ಪ್ರದರ್ಶನದ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಹುಟ್ಟುಹಾಕಿದೆ.

ಟಿ20 ವಿಶ್ವಕಪ್​​ನಲ್ಲಿ ಬೆದರಿಕೆ ಒಡ್ಡುವುದಿಲ್ಲ; ಡೇವಿಡ್ ಲಾಯ್ಡ್

ಟಾಕ್ಸ್ಪೋರ್ಟ್ ಕ್ರಿಕೆಟ್ ಪಾಡ್​ಕಾಸ್ಟ್​ನಲ್ಲಿ ಡೇವಿಡ್ ಲಾಯ್ಡ್ ಹೀಗೆ ಹೇಳಿದ್ದಾರೆ. “ಇದು ಸಾಕಷ್ಟು ಊಹಿಸಬಹುದಾದ ತಂಡ. ಕುಡುಗೋಲುಗಳು ಕಡಿಮೆಯಾಗಿಲ್ಲ. ಎದುರಾಳಿಗಳು ಗುಣಮಟ್ಟ ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಬ್ಯಾಟ್ ಅಥವಾ ಚೆಂಡಿನೊಂದಿಗೆ ಅಪಾಯವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ಮುಂಬರುವ ಟಿ 20 ವಿಶ್ವಕಪ್ 2024 ರಲ್ಲಿ ಭಾರತವನ್ನು ಪಾಕಿಸ್ತಾನ ಐರ್ಲೆಂಡ್, ಯುಎಸ್ಎ ಮತ್ತು ಕೆನಡಾ ಜೊತೆಗೆ ಎ ಗುಂಪಿನಲ್ಲಿ ಇದೆ. ಭಾರತೀಯ ತಂಡವು ಜೂನ್ 5 ರಂದು ನ್ಯೂಯಾರ್ಕ್​ನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಅಭಿಯಾನ ಪ್ರಾರಂಭಿಸಿದೆ. ನಂತರ ಜೂನ್ 9 ರಂದು ಪಾಕಿಸ್ತಾನದ ವಿರುದ್ಧ ಬೃಹತ್ ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನ ಜೂನ್ 1ರಂದು ಅಮೆರಿಕದಲ್ಲಿ ಬಾಂಗ್ಲಾದೇಶ ವಿರುದ್ಧ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯವನ್ನು ಆಡಲಿದೆ.

ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಮ್ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.

ಮೀಸಲು ಆಟಗಾರರುಃ ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಭಾರತದ ಗುಂಪು ಹಂತದ ಹಣಾಹಣಿ

ಜೂನ್ 05: ಭಾರತ vs ಐರ್ಲೆಂಡ್, ನಸ್ಸೌ ಕೌಂಟಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ನ್ಯೂಯಾರ್ಕ್​​
ಜೂನ್ 09: ಭಾರತ vs ಪಾಕಿಸ್ತಾನ, ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ನ್ಯೂಯಾರ್ಕ್
ಜೂನ್ 12: ಭಾರತ vs ಯುಎಸ್ಎ, ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ನ್ಯೂಯಾರ್ಕ್
ಜೂನ್ 14: ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್​​ನ ಭಾರತ vs ಕೆನಡಾ

Continue Reading

ಪ್ರವಾಸ

Udupi Tour: ಉಡುಪಿಗೆ ಹೋದಾಗ ನೀವು ನೋಡಲೇಬೇಕಾದ 10 ಸ್ಥಳಗಳಿವು

ಆಧ್ಯಾತ್ಮಿಕತೆ, ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಅನುಭವಗಳ ಪರಿಪೂರ್ಣ ಮಿಶ್ರಣವನ್ನು ನೀಡುವ ಉಡುಪಿ ಸ್ಮರಣೀಯ ಪ್ರವಾಸಕ್ಕೆ (Udupi Tour) ಸೂಕ್ತವಾದ ತಾಣವಾಗಿದೆ. ಸಾಹಸ, ವಿಶ್ರಾಂತಿ ಅಥವಾ ಆಧ್ಯಾತ್ಮಿಕತೆಯ ಅನುಭವದಲ್ಲಿ ಮಿಂದೇಳಲು ಬಯಸಿದರೆ ಇಲ್ಲಿಗೊಮ್ಮೆ ಭೇಟಿ ನೀಡಲು ಮರೆಯದಿರಿ.

VISTARANEWS.COM


on

By

Udupi Tour
Koo

ಕೃಷ್ಣನ ನಾಡು ಉಡುಪಿಯಲ್ಲಿ ಪ್ರವಾಸಿಗರನ್ನು (Udupi Tour) ಸೆಳೆಯುವ ಹಲವಾರು ತಾಣಗಳಿವೆ. ಸ್ನೇಹಿತರು, ಬಂಧುಗಳೊಂದಿಗೆ ಉಡುಪಿಗೆ ಭೇಟಿ ನೀಡಿದಾಗ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ, ಪಾಕಶಾಲೆಯ ಸವಿರುಚಿ, ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಮರೆಯದಿರಿ.

ಕರ್ನಾಟಕದ (karnataka) ಕರಾವಳಿ ಪ್ರದೇಶದಲ್ಲಿ ( coastal region) ನೆಲೆಸಿರುವ ಉಡುಪಿಯು ಹಲವಾರು ಸುಂದರ ಅನುಭವಗಳನ್ನು ನೀಡುತ್ತದೆ. ಸ್ಮರಣೀಯ ಪ್ರವಾಸಕ್ಕೆ ಇದೊಂದು ಸೂಕ್ತ ತಾಣವಾಗಿದೆ. ಪ್ರಾಚೀನ ದೇವಾಲಯಗಳಿಂದ (temples) ಹಿಡಿದು ಸುಂದರ ಕಡಲತೀರಗಳವರೆಗೆ (beach).. ಉಡುಪಿಯಲ್ಲಿ ಭೇಟಿ ನೀಡಬಹುದಾದ ಕೆಲವು ಅತ್ಯುತ್ತಮ ತಾಣಗಳಿವೆ.


ಶ್ರೀ ಕೃಷ್ಣ ದೇವಾಲಯ

ಉಡುಪಿಯ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕೃಷ್ಣ ದೇವಸ್ಥಾನದಿಂದ ಪ್ರವಾಸವನ್ನು ಆರಂಭಿಸಬಹುದು. ಭಗವಾನ್ ಕೃಷ್ಣನಿಗೆ ಸಮರ್ಪಿತವಾಗಿರುವ ಈ ದೇವಾಲಯವು ವಿಶಿಷ್ಟವಾದ ವಾಸ್ತುಶಿಲ್ಪ ಮತ್ತು ಧಾರ್ಮಿಕ ಮಹತ್ವಕ್ಕಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಹಲವು ಆಚರಣೆಗಳು ಯಾತ್ರಿಕರನ್ನು ಸಮ್ಮೋಹನಗೊಳಿಸುವುದು.


ಮಲ್ಪೆ ಬೀಚ್

ವಿಶ್ರಾಂತಿ ಬಯಸಿದರೆ ಮಲ್ಪೆ ಬೀಚ್‌ ಗಿಂತ ಉತ್ತಮ ತಾಣ ಬೇರೆ ಇಲ್ಲ. ಚಿನ್ನದ ಮರಳು ಮತ್ತು ಆಕಾಶ ನೀಲಿ ನೀರಿನ ಸುಂದರವಾದ ದೃಶ್ಯವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಬಿಸಿಲಿನಲ್ಲಿ ಬೇಯುತ್ತಿರಲಿ, ದಡದಲ್ಲಿ ಆರಾಮವಾಗಿ ಅಡ್ಡಾಡುತ್ತಿರಲಿ ಅಥವಾ ಪ್ಯಾರಾಸೈಲಿಂಗ್ ಮತ್ತು ಜೆಟ್-ಸ್ಕೀಯಿಂಗ್‌ನಂತಹ ರೋಮಾಂಚಕ ಜಲ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು.


ಸೇಂಟ್ ಮೇರಿಸ್ ದ್ವೀಪ

ಮಲ್ಪೆ ಬೀಚ್‌ನಿಂದ ಸೇಂಟ್ ಮೇರಿಸ್ ದ್ವೀಪಕ್ಕೆ ಚಿಕ್ಕದಾದ ದೋಣಿ ವಿಹಾರವನ್ನು ನಡೆಸಬಹುದು. ಇದು ವಿಶಿಷ್ಟವಾದ ಕಲ್ಲಿನ ರಚನೆಗಳು ಮತ್ತು ಪ್ರಾಚೀನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.


ಮಣಿಪಾಲ

ಶೈಕ್ಷಣಿಕ ಸಂಸ್ಥೆಗಳು, ಉತ್ಸಾಹಭರಿತ ಕೆಫೆಗಳು ಮತ್ತು ಸಾಂಸ್ಕೃತಿಕ ಆಕರ್ಷಣೆಗಳಿಗೆ ನೆಲೆಯಾಗಿರುವ ಮಣಿಪಾಲದ ರೋಮಾಂಚಕ ಪಟ್ಟಣವನ್ನು ಸುತ್ತಾಡಬಹುದು. ಇಲ್ಲಿನ ಮಣಿಪಾಲ್ ವಿಶ್ವವಿದ್ಯಾನಿಲಯದ ಕ್ಯಾಂಪಸ್, ಹೆರಿಟೇಜ್ ವಿಲೇಜ್, ತಾರಾಲಯ ಸೇರಿದಂತೆ ಪ್ರವಾಸಿಗರು ಇಷ್ಟಪಡುವ ಇನ್ನೂ ಅನೇಕ ತಾಣಗಳು ಇಲ್ಲಿವೆ. ಸ್ಥಳೀಯ ತಿನಿಸುಗಳಲ್ಲಿ ರುಚಿಕರವಾದ ಬೀದಿ ಆಹಾರವನ್ನು ಇಲ್ಲಿ ಸವಿಯಬಹುದು.


ಪಡುಕೆರೆ ಬೀಚ್

ಪಡುಕೆರೆ ಬೀಚ್‌ನಲ್ಲಿ ನಗರದ ಜೀವನದ ಜಂಜಾಟದಿಂದ ದೂರವಾಗಿ ಪ್ರಶಾಂತ ಸಮುದ್ರ ತೀರದಲ್ಲಿ ಸುತ್ತಾಡಬಹುದು. ಕಡಲ ತೀರವಾಸಿಗಳ ಜನ ಜೀವನವನ್ನು ಕಾಣಬಹುದು. ಶಾಂತವಾದ ವಾತಾವರಣ ಮತ್ತು ವಿಹಂಗಮ ನೋಟಗಳಿಗೆ ಹೆಸರುವಾಸಿಯಾದ ಪ್ರಶಾಂತ ಕರಾವಳಿ ಇದನ್ನು ಸ್ವರ್ಗ ಮಾಡಿದೆ.


ಆನೆಗುಡ್ಡೆ ವಿನಾಯಕ ದೇವಸ್ಥಾನ

ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಗಣಪತಿಗೆ ಪೂಜೆ ಸಲ್ಲಿಸಿ. ಹಚ್ಚ ಹಸಿರಿನ ಬೆಟ್ಟಗಳ ನಡುವೆ ನೆಲೆಸಿರುವ ಈ ಪವಿತ್ರ ಕ್ಷೇತ್ರದಲ್ಲಿ ದೇವಾಲಯದ ಸಂಕೀರ್ಣ ವಾಸ್ತುಶೈಲಿಯನ್ನು ಗಮನಿಸಿ. ಹತ್ತಿರದಲ್ಲೇ ಇರುವ ನೀರಿನ ನಡುವೆ ನೆಲೆಯಾಗಿರುವ ಈಶ್ವರ ದೇವಾಲಯಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.


ಕೂಡ್ಲು ಜಲಪಾತ

ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ಗುಪ್ತ ರತ್ನವಾದ ಕೂಡ್ಲು ಜಲಪಾತವನ್ನು ತಲುಪಲು ಹಸಿರು ಕಾಡುಗಳ ಮೂಲಕ ರಮಣೀಯವಾದ ಚಾರಣವನ್ನು ಪ್ರಾರಂಭಿಸಿ. ಹಸಿರು ಎಲೆಗಳು ಮತ್ತು ಚಿಲಿಪಿಲಿ ಹಕ್ಕಿಗಳಿಂದ ಸುತ್ತುವರೆದಿರುವ ನೀರಿನ ಸೌಂದರ್ಯ ನಿಮ್ಮ ತನುಮನವನ್ನು ತಣಿಸುವ ಅನುಭವ ಕೊಡುವುದು.


ಕಾಪು ಬೀಚ್

ಕಾಪು ಬೀಚ್‌ನ ಪ್ರಶಾಂತ ತೀರದಲ್ಲಿ ಪ್ರಾಚೀನ ಮರಳುಗಳು ಅರೇಬಿಯನ್ ಸಮುದ್ರದ ಶಾಂತ ಅಲೆಗಳನ್ನು ಸಂಧಿಸುತ್ತವೆ. ಸ್ನೇಹಿತರೊಂದಿಗೆ ವಿರಾಮದ ಪಿಕ್ನಿಕ್ ಅನ್ನು ಇಲ್ಲಿ ಆನಂದಿಸಬಹುದು. ಕಡಲತೀರದ ಮೇಲೆ ಮರಳು ಕೋಟೆಗಳನ್ನು ನಿರ್ಮಿಸಿ ಮತ್ತು ಕರಾವಳಿಯ ಉದ್ದಕ್ಕೂ ಇರುವ ಸ್ಥಳೀಯ ತಿನಿಸುಗಳಲ್ಲಿ ತಾಜಾ ಸಮುದ್ರಾಹಾರ ಭಕ್ಷ್ಯಗಳನ್ನು ಸವಿಯಬಹುದು.


ಅಂಬಲಪಾಡಿ ಮಹಾಕಾಳಿ ದೇವಸ್ಥಾನ

ದೈವಿಕ ಸೆಳವು ಕೊಡುವ ಅಂಬಲಪಾಡಿ ಮಹಾಕಾಳಿ ದೇವಾಲಯ ಸಾಕಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುವುದು. ದೇವಾಲಯದ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿದೆ. ಇಲ್ಲಿನ ಉತ್ಸವಗಳು ರೋಮಾಂಚನ ಉಂಟು ಮಾಡುತ್ತದೆ.


ಇದನ್ನೂ ಓದಿ: Mangalore Tour: ಮಂಗಳೂರಿಗೆ ಬಂದರೆ ಈ ಸ್ಥಳಗಳಿಗೆ ಭೇಟಿ ಕೊಡಲು ಮರೆಯದಿರಿ

ಉಡುಪಿ ಪಾರಂಪರಿಕ ಗ್ರಾಮ

ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ಸಾಂಸ್ಕೃತಿಕ ಎನ್‌ಕ್ಲೇವ್ ಉಡುಪಿ ಹೆರಿಟೇಜ್ ವಿಲೇಜ್‌ ಗೆ ಭೇಟಿ ನೀಡಲು ಸಮಯ ಮೀಸಲಿಡಿ. ಪಾರಂಪರಿಕ ಮನೆಗಳಿಂದ ಕೂಡಿದ ವಿಲಕ್ಷಣ ಬೀದಿಗಳಲ್ಲಿ ಸ್ಥಳೀಯ ಕುಶಲಕರ್ಮಿಗಳ ಕಾರ್ಯಾಗಾರಗಳನ್ನು ಕಾಣಬಹುದು.

Continue Reading

ಪ್ರಮುಖ ಸುದ್ದಿ

IPL 2024 : ಸಚಿನ್​, ಧೋನಿ, ರೋಹಿತ್​; ಒಂದೇ ಜಾಹೀರಾತಿನಲ್ಲಿ ಮೂರು ಪೀಳಿಗೆಯ ನಾಯಕರು; ಇಲ್ಲಿದೆ ವಿಡಿಯೊ

IPL 2024 : ಜಾಹೀರಾತಿನಲ್ಲಿ ತನ್ನ ಮರೆಗುಳಿತನಕ್ಕೆ ಹೆಸರುವಾಸಿಯಾದ ರೋಹಿತ್ ತನ್ನ ಫೋನ್ ಅನ್ನು ತಂಡದ ಬಸ್​ನಲ್ಲಿ ಬಿಟ್ಟು ಹೋಗುವ ಹಾಸ್ಯಮಯವಾಗಿ ಸಂದರ್ಭವನ್ನು ತೋರಿಸಲಾಗಿದೆ. ಇದು ಮ್ಯೂಚುವಲ್​​ಫಂಡ್​ಸಹಿಹೈ ಎಂಬ ಪೋರ್ಟಲ್​ ಕುರಿತಾದ ಜಾಹೀರಾಗಿದೆ. ಸಚಿನ್ ತೆಂಡೂಲ್ಕರ್ ಮತ್ತು ಧೋನಿ ಮೂಲಕ ಇದನ್ನು ಹೆಚ್ಚು ರಸವತ್ತಾಗಿ ತೋರಿಸಲಾಗಿದೆ.

VISTARANEWS.COM


on

IPL 2024
Koo

ಬೆಂಗಳೂರು: ತಾವು ಆರಾಧಿಸುವ ಕ್ರಿಕೆಟಿಗರನ್ನು ಸಮಯ ಸಿಕ್ಕಾಗೆಲ್ಲ ನೋಡುವುದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅತ್ಯಂತ ಸಂತೋಷದ ಸುದ್ದಿ. ಆದರೆ ಮೂರು ಪ್ರಖ್ಯಾತ ಕ್ರಿಕೆಟಿಗರನ್ನು ಒಂದೇ ವೇದಿಕೆಯಲ್ಲಿ ನೋಡುವುದರಲ್ಲಿ ಸಿಗುವ ಆನಂದ ಇನ್ನೆಲ್ಲೂ ಸಿಗುವುದಿಲ್ಲ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸಮಯದಲ್ಲಿ ಪ್ರಸಾರವಾದ ಮ್ಯೂಚುವಲ್ ಫಂಡ್​ ಒಂದರ ಜಾಹೀರಾತು ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾಕೆಂದರೆ ಈ ಜಾಹೀರಾತಿನಲ್ಲಿ, ಮೂರು ತಲೆಮಾರಿನ ಭಾರತೀಯ ಕ್ರಿಕೆಟ್ ನಾಯಕರಾದ ಸಚಿನ್ ತೆಂಡೂಲ್ಕರ್, ಎಂ. ಎಸ್. ಧೋನಿ ಮತ್ತು ರೋಹಿತ್ ಶರ್ಮಾ ಒಟ್ಟಿಗೆ ಸೇರಿ ಕಾಣಿಸಿಕೊಂಡಿದ್ದಾರೆ. ಇದು ಸಂಚಲನ ಮೂಡಿಸಿದೆ.

ಜಾಹೀರಾತಿನಲ್ಲಿ ತನ್ನ ಮರೆಗುಳಿತನಕ್ಕೆ ಹೆಸರುವಾಸಿಯಾದ ರೋಹಿತ್ ತನ್ನ ಫೋನ್ ಅನ್ನು ತಂಡದ ಬಸ್​ನಲ್ಲಿ ಬಿಟ್ಟು ಹೋಗುವ ಹಾಸ್ಯಮಯವಾಗಿ ಸಂದರ್ಭವನ್ನು ತೋರಿಸಲಾಗಿದೆ. ಇದು ಮ್ಯೂಚುವಲ್​​ಫಂಡ್​ಸಹಿಹೈ ಎಂಬ ಪೋರ್ಟಲ್​ ಕುರಿತಾದ ಜಾಹೀರಾಗಿದೆ. ಸಚಿನ್ ತೆಂಡೂಲ್ಕರ್ ಮತ್ತು ಧೋನಿ ಮೂಲಕ ಇದನ್ನು ಹೆಚ್ಚು ರಸವತ್ತಾಗಿ ತೋರಿಸಲಾಗಿದೆ.

ಭಾರತದ ಮಾಜಿ ಆಟಗಾರರಾದ ಸಚಿನ್ ಮತ್ತು ಎಂ. ಎಸ್. ಧೋನಿ, ನಿವೃತ್ತಿ ನಂತರದ ಹೂಡಿಕೆ ಯೋಜನೆಯ ಬಗ್ಗೆ ರೋಹಿತ್​ಗೆ ಸಲಹೆ ನೀಡಲು ಮುಂದುವರಿಯುತ್ತಾರೆ. ಆದರೆ, ರೋಹಿತ್​ ಅದಾಗಲೇ ತಾವು ಹೂಡಿಕೆ ಮಾಡುತ್ತಿರುವಾಗಿ ಹೇಳುವ ಮೂಲಕ ಜಾಹೀರಾತು ಮುಂದುವರಿಯುತ್ತದೆ.

ಭಾರತದ ಮಾಜಿ ನಾಯಕ ಎಂ. ಎಸ್. ಧೋನಿ ಮತ್ತು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಮ್ಯೂಚುವಲ್ ಫಂಡ್​ಗಳನ್ನು ಉತ್ತೇಜಿಸುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಸುದೀರ್ಘ ಇತಿಹಾಸ ಹೊಂದಿದ್ದಾರೆ. ಆದರೆ, ಈ ಹೊಸ ಜಾಹೀರಾತಿನಲ್ಲಿ ರೋಹಿತ್ ಶರ್ಮಾ ಅವರನ್ನೂ ಸೇರಿಸಿಕೊಳ್ಳಲಾಗಿದೆ.

ಜಾಹೀರಾತಿನಲ್ಲಿ ಹಾಸ್ಯಮಯ ಅಂಶಗಳಿವೆ ಇದು ರೋಹಿತ್ ಅ ಮರೆತುಹೋಗುವ ಅಭ್ಯಾಸವನ್ನು ಎತ್ತಿ ತೋರಿಸುತ್ತದೆ. ಮೂವರು ಕ್ರಿಕೆಟ್ ಐಕಾನ್​ಗಳು ಲಘೂ ಹಾಸ್ಯದಲ್ಲಿ ತೊಡಗಿಕೊಂಡಿರುದು ಕಾಣುತ್ತದೆ. ಈ ಪ್ರಸಿದ್ಧ ಆಟಗಾರರು ಒಂದೇ ತೆರೆಯ ಮೇಲೆ ಕಾಣಿಸಿಕೊಳ್ಳುವುದು ವೀಕ್ಷಕರಿಗೆ ಒಂದು ಅದ್ಭುತ ಹಳಹಳಿಕೆಯಾಗಿರುತ್ತದೆ.

ಐಪಿಎಲ್ 2024 ನಂತರ ರೋಹಿತ್ ಶರ್ಮಾ ಭವಿಷ್ಯವೇನು?

2024 ರ ಐಪಿಎಲ್ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ತೋರಿದ್ದರು. ಅವರು ಪಂದ್ಯಾವಳಿಯನ್ನು ಆಕ್ರಮಣಕಾರಿ ವಿಧಾನದೊಂದಿಗೆ ಪ್ರಾರಂಭಿಸಿದರು. ಆದರೆ ಅಂತಿಮ ಹಂತಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಹೆಣಗಾಡಿದರು. ಇದರ ಹೊರತಾಗಿಯೂ, ಅವರು ತವರು ನೆಲದಲ್ಲಿ ಸಿಎಸ್​​ಕೆ ವಿರುದ್ಧ ಶತಕ ಗಳಿಸುವಲ್ಲಿ ಯಶಸ್ವಿಯಾದರು. ಎಲ್ಎಸ್​ಜಿ ವಿರುದ್ಧ ಬಲವಾದ ಪ್ರದರ್ಶನದೊಂದಿಗೆ ಋತುವನ್ನು ಮುಗಿಸಿದರು. ಒಟ್ಟಾರೆಯಾಗಿ, ಶರ್ಮಾ 14 ಪಂದ್ಯಗಳಲ್ಲಿ 150 ರ ಸ್ಟ್ರೈಕ್ ರೇಟ್ ನೊಂದಿಗೆ 417 ರನ್ ಗಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ನಿರಾಶಾದಾಯಕ ಋತು ಹೊಂದಿದ್ದು, 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಜೂನ್ 1 ರಿಂದ ಯುಎಸ್ಎಯಲ್ಲಿ ಪ್ರಾರಂಭವಾಗುವ ಟಿ 20 ವಿಶ್ವಕಪ್ 2024 ರಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

Continue Reading

ಪ್ರಮುಖ ಸುದ್ದಿ

IPL 2024 : ಮಾಜಿ ನಾಯಕ ಶೇನ್​ ವಾರ್ನ್​ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್​

IPL 2024 : ಸಂಜು ಸ್ಯಾಮ್ಸನ್​ ಸ್ಪಿನ್ ಮಾಂತ್ರಿಕ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ರಾಜಸ್ಥಾನ್ ತಂಡದ ಇತರ ಮಾಜಿ ನಾಯಕರುಗಳಾದ ರಾಹುಲ್ ದ್ರಾವಿಡ್ (18 ಗೆಲುವುಗಳು), ಶೇನ್ ವ್ಯಾಟ್ಸನ್ (8 ಗೆಲುವುಗಳು), ಅಜಿಂಕ್ಯ ರಹಾನೆ (9 ಗೆಲುವುಗಳು) ಮತ್ತು ಸ್ಟೀವ್ ಸ್ಮಿತ್ (15 ಗೆಲುವು) ಅವರಂತಹ ಆಟಗಾರರನ್ನು ಪರಿಗಣಿಸಿದಾಗ ಈ ಸಾಧನೆಯ ಮಹತ್ವದ್ದಾಗಿದೆ.

VISTARANEWS.COM


on

IPL 2024
Koo

ಅಹಮದಾಬಾದ್​​: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್​ನ ರಾಜಸ್ಥಾನ್​ ರಾಯಲ್ಸ್​​ ಫ್ರ್ಯಾಂಚೈಸಿ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದುಕೊಂಡಿದ್ದಾರೆ. ಅವರು ಮಾಜಿ ನಾಯಕ ಹಾಗೂ ವಿಶ್ವ ಪ್ರಸಿದ್ಧ ಸ್ಪಿನ್ನರ್​ ದಿ. ಶೇನ್ ವಾರ್ನ್ ಅವರ ಸಾಧನೆಯೊಂದನ್ನು ಸರಿಗಟ್ಟಿದ್ದಾರೆ. ಬುಧವಾರ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024 ಎಲಿಮಿನೇಟರ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದ ಬಳಿಕ ಸಂಜು ಈ ಸಾಧನೆಗೆ ಪಾತ್ರರಾಗಿದ್ದಾರೆ.

ಈ ಗೆಲುವಿನೊಂದಿಗೆ ನಾಯಕನಾಗಿ ಸಂಜು ಸ್ಯಾಮ್ಸನ್ ಅವರ ಒಟ್ಟು ಗೆಲುವು 31 ಪಂದ್ಯಗಳಿಗೆ ತಲುಪಿತು. ಇದು 2008 ರಲ್ಲಿ ತಂಡವನ್ನು ಉದ್ಘಾಟನಾ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದ ಸ್ಪಿನ್ ಮಾಂತ್ರಿಕ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ರಾಜಸ್ಥಾನ್ ತಂಡದ ಇತರ ಮಾಜಿ ನಾಯಕರುಗಳಾದ ರಾಹುಲ್ ದ್ರಾವಿಡ್ (18 ಗೆಲುವುಗಳು), ಶೇನ್ ವ್ಯಾಟ್ಸನ್ (8 ಗೆಲುವುಗಳು), ಅಜಿಂಕ್ಯ ರಹಾನೆ (9 ಗೆಲುವುಗಳು) ಮತ್ತು ಸ್ಟೀವ್ ಸ್ಮಿತ್ (15 ಗೆಲುವು) ಅವರಂತಹ ಆಟಗಾರರನ್ನು ಪರಿಗಣಿಸಿದಾಗ ಈ ಸಾಧನೆಯ ಮಹತ್ವದ್ದಾಗಿದೆ.

ಇದನ್ನೂ ಓದಿ: IPL 2024 : ಮುಂದಿನ ವರ್ಷವೂ ಧೋನಿ ಐಪಿಎಲ್​ ಆಡ್ತಾರೆ; ಸಿಎಸ್​ಕೆ ಸಿಇಒ ಸ್ಪಷ್ಟನೆ

ಈ ನಾಯಕರಲ್ಲಿ ಪ್ರತಿಯೊಬ್ಬರೂ ಫ್ರ್ಯಾಂಚೈಸಿ ಕ್ರಿಕೆಟ್​ನಲ್ಲಿ ವಿಶಿಷ್ಟವಾದ ಹೆಗ್ಗುರುತು ಸ್ಥಾಪಿಸಿದ್ದರು. ಆದರೆ ಉದ್ಘಾಟನಾ ಋತುವಿನಲ್ಲಿ ಶೇನ್ ವಾರ್ನ್ ಅವರ ಬಲವಾದ ನಾಯಕತ್ವವು ಉನ್ನತ ಮಾನದಂಡ ಸ್ಥಾಪಿಸಿದೆ. ಈಗ, 2021ರಲ್ಲಿ ಸ್ಮಿತ್ ಅವರಿಂದ ನಾಯಕತ್ವದ ಅಧಿಕಾರ ವಹಿಸಿಕೊಂಡ ಬಳಿಕ ಸ್ಯಾಮ್ಸನ್ ತನ್ನನ್ನು ತಾನು ಯೋಗ್ಯ ಉತ್ತರಾಧಿಕಾರಿಯೆಂದು ಸಾಬೀತುಪಡಿಸಿಕೊಳ್ಳುತ್ತಿದ್ದಾರೆ.

ಆರ್​ಸಿಬಿ ವಿರುದ್ಧದ ರೋಚಕ ಪಂದ್ಯ

ಎಲಿಮಿನೇಟರ್​ ಆಟದ ವಿಚಾರಕ್ಕೆ ಬಂದರೆ ಎರಡೂ ಕಡೆಯವರ ನಡುವಿನ ಘರ್ಷಣೆ ಒಂದು ಅದ್ಭುತ ಪ್ರದರ್ಶನವಾಗಿತ್ತು. ಋತುವನ್ನು ಅಬ್ಬರದಿಂದ ಪ್ರಾರಂಭಿಸಿದ ರಾಜಸ್ಥಾನ ರಾಯಲ್ಸ್ ಕೊನೆಯಲ್ಲಿ ಸತತ ನಾಲ್ಕು ಸೋಲು ಕಂಡಿತು. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಏಳು ಬೀಳುಗಳ ನಡುವೆ ಪ್ಲೇಆಫ್​ಗೇರಿದ್ದು ಆರ್​ಸಿಬಿ ಪಾಲಿಗೆ ಅಚ್ಚರಿಯ ವಿಚಾರ. ಅಂತೆಯೇ ಎರಡೂ ತಂಡಗಳು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವು.

ಅನುಕ್ರಮವಾಗಿ ಎರಡು ಮತ್ತು ಮೂರು ವಿಕೆಟ್​ಗಳನ್ನು ಪಡೆದ ರವಿಚಂದ್ರನ್ ಅಶ್ವಿನ್ ಮತ್ತು ಅವೇಶ್ ಖಾನ್ ನೇತೃತ್ವದ ರಾಜಸ್ಥಾನದ ಬೌಲಿಂಗ್ ಘಟಕವು ಆರ್​ಸಿಬಿಯನ್ನು 172 ರನ್​ಗಳಿಗೆ ನಿಯಂತ್ರಿಸಿತು. ರನ್​ ಚೇಸಿಂಗ್ ಕೆಲವೊಂದು ಕ್ಷಣದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದರೂ ಇನ್ನೂ ಒಂದು ಓವರ್​ ಬಾಕಿ ಇರುವಂತೆಯೇ ಆರ್​ಆರ್​ ಗುರಿ ತಲುಪಿತ್ತು.

ಮೇ 24 ರಂದು ಚೆಪಾಕ್​ನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಖಾಮುಖಿಯಾಗಲಿದೆ ರಾಜಸ್ಥಾನ್​. ಹೀಗಾಗಿ ಸಂಜು ಪಡೆಗೆ ಇನ್ನು ಫೈನಲ್​ಗೇರಲು ಒಂದು ಹೆಜ್ಜೆ ಬಾಕಿಯಿದೆ. ಸಂಜು ನೇತೃತ್ವದ ತಂಡದ ಪ್ರಶಸ್ತಿಗಾಗಿ ಕಾಯುತ್ತಿದೆ.

Continue Reading
Advertisement
Naxals
ದೇಶ19 mins ago

Naxals: ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಎನ್‌ಕೌಂಟರ್

IPL 2024
ಪ್ರಮುಖ ಸುದ್ದಿ31 mins ago

IPL 2024 : ಐಪಿಎಲ್​ನಲ್ಲಿ ಕಳಪೆ ದಾಖಲೆಯೊಂದನ್ನು ಸೃಷ್ಟಿಸಿ ನಿರ್ಗಮಿಸಿದ ಆರ್​ಸಿಬಿ

arecanut price
ಕರ್ನಾಟಕ1 hour ago

Arecanut Price: ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್‌ ಕಿ ಬಾರ್ ₹60,000 ಪಾರ್ ಆಗಲಿದೆಯಾ?

Self Harming Husband commits suicide for taking his wife home
ಕರ್ನಾಟಕ1 hour ago

Self Harming: ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ಪತಿ ಆತ್ಮಹತ್ಯೆ!

WhatsApp AI
ತಂತ್ರಜ್ಞಾನ1 hour ago

WhatsApp AI: WhatsAppಗೂ ಬಂತು ಎಐ; ನಿಮ್ಮ ಪ್ರೊಫೈಲ್‌ ಫೋಟೊ ಇನ್ನು AI ಜನರೇಟೆಡ್!‌

T20 world cup 2024
ಕ್ರೀಡೆ2 hours ago

T20 World Cup 2024 : ಭಾರತ ತಂಡ ವಿಶ್ವ ಕಪ್​ ಗೆಲ್ಲುವುದಿಲ್ಲ; ಇಂಗ್ಲೆಂಡ್​ ಮಾಜಿ ಆಟಗಾರನ ಭವಿಷ್ಯ

Udupi Tour
ಪ್ರವಾಸ2 hours ago

Udupi Tour: ಉಡುಪಿಗೆ ಹೋದಾಗ ನೀವು ನೋಡಲೇಬೇಕಾದ 10 ಸ್ಥಳಗಳಿವು

Agee hunnime Thousands of devotees have darshan of Shri Renukamba Devi of Chandragutti
ಶಿವಮೊಗ್ಗ2 hours ago

Shivamogga News: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

an inscription of Hulagi Katte built during the Vijayanagara kings was discovered
ಕೊಪ್ಪಳ2 hours ago

Koppala News: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹುಲಗಿ ಕಟ್ಟೆಯ ಶಾಸನ ಪತ್ತೆ

CM Siddaramaiah inaugurated the website of the inter caste marriage registration website in Mysore
ಕರ್ನಾಟಕ2 hours ago

Mysore News: ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು, ಆದರೆ ಆ ಹುಡುಗಿ ಒಪ್ಪಲಿಲ್ಲ ಎಂದ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ18 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌