Dating Application: ಡೇಟಿಂಗ್‌ ನೆಪದಲ್ಲಿ ಕೆಫೆಗೆ ಕರೆದ ಮಹಿಳೆ ಹೀಗಾ ಮಾಡೋದು? - Vistara News

Latest

Dating Application: ಡೇಟಿಂಗ್‌ ನೆಪದಲ್ಲಿ ಕೆಫೆಗೆ ಕರೆದ ಮಹಿಳೆ ಹೀಗಾ ಮಾಡೋದು?

Dating Application: ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ತಮಗೆ ಬೇಕಾದ ಸಂಗಾತಿಯನ್ನು ಹುಡುಕಿಕೊಂಡು ಮದುವೆಯಾಗುತ್ತಾರೆ. ಆದರೆ ಈ ಡೇಟಿಂಗ್ ಅಪ್ಲಿಕೇಶನ್ ಮೂಲಕ ಪರಿಚಯವಾಗುವವರು ಎಲ್ಲರೂ ಒಳ್ಳೆಯವರೇ ಆಗಿರುವುದಿಲ್ಲ. ಕೆಲವರಿಗೆ ಇದರ ಕಹಿ ಅನುಭವವೂ ಆಗಿದೆ. ಈಗ ಈ ಡೇಟಿಂಗ್ ನೆಪದಲ್ಲಿ ಸುಲಿಗೆ ಮಾಡುವ ಪ್ರಕರಣವೂ ನಡೆಯುತ್ತಿದೆ.ಡೇಟಿಂಗ್ ನೆಪದಲ್ಲಿ ಕೆಫೆ ಅಥವಾ ಪಬ್‌ಗೆ ಕರೆದು ಮೆನುವಿನಲ್ಲಿ ಇಲ್ಲದ ಫುಡ್ ಆರ್ಡರ್ ಮಾಡಿ ಸಿಕ್ಕಾಪಟ್ಟೆ ದುಡ್ಡನ್ನು ಪೀಕುವ ಜಾಲವೊಂದು ಈಗ ಪೊಲೀಸ್ ಬಲೆಗೆ ಬಿದ್ದಿದೆ.

VISTARANEWS.COM


on

Dating Application
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆ ಸಂಬಂಧ ಕುದುರುವುದು ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ. ಇಲ್ಲಿ ಯುವಕ-ಯುವತಿಯರು ಒಬ್ಬರನ್ನೊಬ್ಬರು ಭೇಟಿಯಾಗಿ ಮದುವೆ ನಿಶ್ಚಯ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕೆಲವು ಜನರು ತಮ್ಮ ಜೀವನ ಕಟ್ಟಿಕೊಂಡಿದ್ದರೆ, ಇನ್ನೂ ಕೆಲವರು ಈ ಅಪ್ಲಿಕೇಶನ್‌ನಲ್ಲಿ ಡೇಟಿಂಗ್ ಮಾಡಿ ಮೋಸ ಹೋಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಶನ್‌ (Dating Application) ಮೋಸದ ಹಗರಣವೊಂದು ಬೆಳಕಿಗೆ ಬಂದಿದೆ.

ಅಪ್ಲಿಕೇಶನ್‌ನಲ್ಲಿ ಭೇಟಿಯಾದ ಮಹಿಳೆಯೊಂದಿಗೆ ಡೇಟಿಂಗ್ ಮಾಡಿದ ದೆಹಲಿಯ ನಾಗರಿಕ ಸೇವಾ ಆಕಾಂಕ್ಷಿಯೊಬ್ಬರು ಕೆಫೆಯಲ್ಲಿ 1.20 ಲಕ್ಷ ರೂ.ಗಳ ಬಿಲ್ ಕೊಟ್ಟು ಹಣವನ್ನು ಕಳೆದುಕೊಂಡಿದ್ದಾರೆ. ಇದು ಪ್ರಮುಖ ನಗರಗಳಲ್ಲಿ ವ್ಯಾಪಕವಾಗಿ ಹರಡಿರುವ ‘ಟಿಂಡರ್ ಹಗರಣ’ದ ಅನೇಕ ಪ್ರಕರಣಗಳಲ್ಲಿ ಒಂದಾಗಿದೆ.

ರೆಡ್ಡಿಟ್ ಎಂಬ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಅನೇಕ ಪೋಸ್ಟ್‌ಗಳಿದ್ದು ಅವುಗಳಲ್ಲಿ ಕೆಲವು ಒಂದು ವರ್ಷ ಹಳೆಯದಾಗಿವೆ. ಅದರಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಮಹಿಳೆಯರೊಂದಿಗೆ ಡೇಟಿಂಗ್ ಮಾಡಿ ದುಬಾರಿ ಬಿಲ್ ತೆತ್ತು ಮೋಸಹೋದ ಜನರ ಖಾತೆಗಳ ಬಗ್ಗೆ ತಿಳಿಸುತ್ತದೆ. ಟಿಂಡರ್, ಬಂಬಲ್, ಹಿಂಜ್ ಮತ್ತು ಒಕ್ಯುಪಿಡ್‌ನಂತಹ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಯಾರಾದರೂ ಪ್ರೊಫೈಲ್‌ ಮಹಿಳೆಯ ಪ್ರೊಫೈಲ್‌ಗೆ ಮ್ಯಾಚ್ ಆದಾಗ ಅವಳು ತನ್ನ ವಾಟ್ಸಾಪ್ ಸಂಖ್ಯೆಯನ್ನು ಶೇರ್‌ ಮಾಡಿಕೊಂಡು ಅವರ ಜೊತೆ ಮಾತನಾಡಲು ಶುರು ಮಾಡುತ್ತಾಳೆ. ನಂತರ ಮಹಿಳೆ ಕೆಫೆ ಮತ್ತು ಪಬ್‌ಗಳಲ್ಲಿ ಮೀಟ್‌ ಆಗುವ ಎಂದು ಒತ್ತಾಯ ಮಾಡುವುದಕ್ಕೆ ಶುರುಮಾಡುತ್ತಾಳೆ. ಮಹಿಳೆಯ ಮಾತಿಗೆ ಒಪ್ಪಿ ಭೇಟಿಯಾಗುವುದಕ್ಕೆ ರೆಡಿಯಾದರೆ ಅವನಿಗೆ ನಿರ್ದಿಷ್ಟ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗಲು ಹೇಳಿ ಅಲ್ಲಿಂದ ಕೆಫೆ ಅಥವಾ ಪಬ್‌ಗೆ ಹೋಗುತ್ತಾರೆ

ಇನ್ನು ಕೆಫೆಯಲ್ಲಿ, ಮಹಿಳೆಯೇ ಆರ್ಡರ್ ಮಾಡುತ್ತಾಳೆ. ಆದರೆ ಈ ಮೋಸದಾಟದ ಬಗ್ಗೆ ಅರಿವಿಲ್ಲದ ಪುರುಷರು ಸುಮ್ಮನಿರುತ್ತಾರೆ. ನಂತರ, ಮಹಿಳೆ ಮೆನುವಿನಲ್ಲಿ ಇಲ್ಲದಿರುವ ಏನನ್ನಾದರೂ ಆರ್ಡರ್ ಮಾಡಿ ತನಗೆ ಅರ್ಜೆಂಟ್ ಕೆಲಸವಿದೆ ಎಂದು ಹೇಳಿ ಅವಸರದಿಂದ ಅಲ್ಲಿಂದ ಹೋಗುತ್ತಾಳೆ. ಆದರೆ ಬಿಲ್ ಬಂದಾಗ, ಅದರ ಬೆಲೆ ನೋಡಿ ಬಲಿಪಶು ಶಾಕ್ ಆಗುವುದಂತೂ ಖಂಡಿತ. ಈ ಬಗ್ಗೆ ಪ್ರತಿಭಟಿಸಿದರೆ, ಕೆಫೆ ಸಿಬ್ಬಂದಿಗಳು ಅವನಿಗೆ ಬೆದರಿಕೆ ಹಾಕುತ್ತಾರೆ.

ಬೇರೆ ಆಯ್ಕೆಯಿಲ್ಲದೆ, ಅವನು ಬಿಲ್ ಪಾವತಿಸುತ್ತಾನೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜನರು ಪೊಲೀಸರನ್ನು ಸಂಪರ್ಕಿಸುವುದಿಲ್ಲ. ಏಕೆಂದರೆ ತನಿಖೆಯ ವೇಳೆ ಅವನು ಡೇಟಿಂಗ್ ಅಪ್ಲಿಕೇಶನ್ ಮೂಲಕ ಜನರನ್ನು ಭೇಟಿಯಾಗುತ್ತಿದ್ದಾನೆ ಎಂದು ಅವನ ಕುಟುಂಬಕ್ಕೆ ತಿಳಿಯಬಹುದೆಂದು ಹೆದರುತ್ತಾರೆ.

Dating Application

ಕೆಫೆ ಮಾಲೀಕರು, ವ್ಯವಸ್ಥಾಪಕರು ಮತ್ತು ಡೇಟಿಂಗ್ ಮಹಿಳೆಯರು ಸೇರಿದಂತೆ ಹಲವಾರು ಹೆಣೆದ ಬಲೆಯಾಗಿದೆ ಇದು ಎಂದು ಪೊಲೀಸರು ತಿಳಿಸಿದ್ದಾರೆ. ಐಎಎಸ್ ಆಕಾಂಕ್ಷಿಯನ್ನು ಗುರಿಯಾಗಿಸಿಕೊಂಡು ನಡೆದ ಇತ್ತೀಚಿನ ದೆಹಲಿ ಘಟನೆಯಲ್ಲಿ, ಕೆಫೆಯ ಮಾಲೀಕ ಅಕ್ಷಯ್ ಪಹ್ವಾ ಮತ್ತು ಸಂತ್ರಸ್ತೆಯ ‘ಡೇಟ್’ ಅಫ್ಸಾನ್ ಪರ್ವೀನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಗಂಡನ ಕುಡಿತ ನಿಲ್ಲಿಸಬೇಕೆ? ಹಾಗಾದ್ರೆ ಬಿಜೆಪಿ ಸಚಿವರೊಬ್ಬರ ಈ ಟಿಪ್ಸ್‌ ಟ್ರೈ ಮಾಡಿ ನೋಡಿ!

ಅಲ್ಲದೇ ಈ ಮೋಸದ ಆಟದಿಂದ ಬಂದ ಬಿಲ್ ಹಣದಲ್ಲಿ 15 ಪ್ರತಿಶತವನ್ನು ಮಹಿಳೆಗೆ, 45 ಪ್ರತಿಶತವನ್ನು ವ್ಯವಸ್ಥಾಪಕರಿಗೆ ಮತ್ತು ಉಳಿದ 40 ಪ್ರತಿಶತವನ್ನು ಮಾಲೀಕರಿಗೆ ಹಂಚಲಾಗುತ್ತದೆ ಎಂದು ಆರೋಪಿಗಳಲ್ಲಿ ಒಬ್ಬ ಪೊಲೀಸರಿಗೆ ತಿಳಿಸಿದ್ದಾರೆ.

Dating Application

ಈ ಪ್ರಕರಣ ದೆಹಲಿ ಮಾತ್ರವಲ್ಲ ದೆಹಲಿ-ಎನ್ಸಿಆರ್, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಹಗರಣ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಪುರುಷರು ಮಾತ್ರ ಗುರಿಯಾಗುತ್ತಿಲ್ಲ. ಈ ತಿಂಗಳ ಆರಂಭದಲ್ಲಿ, ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿದ ಮತ್ತು ಅವರ ಮನೆಗಳಲ್ಲಿ ದರೋಡೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಇಬ್ಬರು ಪುರುಷರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

(ಇಲ್ಲಿ ಬಳಸಿರುವುದು ಸಾಂದರ್ಭಿಕ ಚಿತ್ರ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ವಿಮಾನದಲ್ಲಿ ದಢೂತಿ ಹೆಂಗಸಿನ ಡ್ಯಾನ್ಸ್‌! ನಗಲಾರದೆ ಅಳಲಾರದೆ ತೊಳಲಾಡಿದ ಪ್ರಯಾಣಿಕರು!

ಹಾರುತ್ತಿರುವ ವಿಮಾನದಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡುವ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Viral Video) ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಘಟನೆ ಇಂಡಿಗೋ ವಿಮಾನದಲ್ಲಿ ನಡೆದಿದ್ದು, ಮಹಿಳೆ ವಿರುದ್ಧ ಕ್ರಮಕ್ಕೆ ಸಾಕಷ್ಟು ಮಂದಿ ಆಗ್ರಹಿಸಿದ್ದಾರೆ. ವಿಮಾನದಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ನಡೆಯುವ ಇಂಥ ರೀಲ್ಸ್‌ ಹುಚ್ಚಾಟಗಳಿಗೆ ತಡೆ ಹಾಕಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.

VISTARANEWS.COM


on

By

Viral Video
Koo

ನವದೆಹಲಿ: ಸಾರ್ವಜನಿಕ ಪ್ರದೇಶಗಳಲ್ಲಿ ರೀಲ್ಸ್ (reels) ಮಾಡುವವರ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪವೂ ಕೇಳಿ ಬರುತ್ತಿದೆ. ಆದರೂ ಇದು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚಿಗೆ ವಿಮಾನ ನಿಲ್ದಾಣದಲ್ಲಿ (airport) ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿ ನೆಟ್ಟಿಗರಿಂದ ಆಕ್ರೋಶಕ್ಕೆ ಕೆಲವರು ಗುರಿಯಾಗಿದ್ದರು. ಈಗ ಮಹಿಳೆಯೊಬ್ಬರು ವಿಮಾನದ (Flight) ಒಳಗೆ ರೀಲ್ಸ್ ಮಾಡಿ ಹಂಚಿಕೊಂಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಸಾರ್ವಜನಿಕ ಸಾರಿಗೆ, ಬೀದಿಗಳು, ವಿಮಾನ ನಿಲ್ದಾಣದ ಹೊರಭಾಗ ಮತ್ತು ವಿಮಾನಯಾನದ ವೇಳೆ ನೃತ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಲೇ ಇದೆ. ಇದೀಗ ಇಂತಹ ಮತ್ತೊಂದು ಘಟನೆ ವರದಿಯಾಗಿದೆ. ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ನೆಟ್ಟಿಗರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಲ್ಮಾ ಶೇಕ್ ಎಂಬ ಮಹಿಳೆ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಕ್ಲಿಪ್ ನಲ್ಲಿ ಮಹಿಳೆ ಕಪ್ಪು ಬಣ್ಣದ ಸೀರೆಯನ್ನು ಧರಿಸಿದ್ದು, ಇತರ ಪ್ರಯಾಣಿಕರು ತಮ್ಮ ಆಸನಗಳಲ್ಲಿ ಕುಳಿತಿದ್ದಾರೆ. ಫ್ಲೈಟ್ ಅಟೆಂಡೆಂಟ್‌ಗಳು ಓವರ್‌ಹೆಡ್ ಬಿನ್ ಅನ್ನು ಮುಚ್ಚುತ್ತಿದ್ದಂತೆ, ಶೇಕ್ ಎ.ಆರ್. ರೆಹಮಾನ್ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸ್ಟೈಲ್ ಸ್ಟೈಲ್ ಥಾನ್ ಹಾಡಿಗೆ ನೃತ್ಯ ಮಾಡಿದ್ದಾರೆ. ಅವರ ಹಿಂದಿದ್ದ ಇತರ ಪ್ರಯಾಣಿಕರು ಆಕೆಯನ್ನು ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಪೋಸ್ಟ್ ಅನ್ನು ಕೆಲವು ಗಂಟೆಗಳ ಹಿಂದೆಯಷ್ಟೇ ಸಾಮಾಜಿಕ ಮಾಧ್ಯಮವಾದ ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ಅನಂತರ ಇದು ಸಾವಿರಾರು ಲೈಕ್‌ಗಳನ್ನು ಗಳಿಸಿದೆ. ಕೆಲವರು ಹಂಚಿಕೊಂಡಿದ್ದಾರೆ. ಅನೇಕರು ಇದಕ್ಕೆ ಪ್ರತಿಕ್ರಿಯೆಯನ್ನು ಮಾಡಿದ್ದಾರೆ.


ಒಬ್ಬರು, ಇತರರಿಗೆ ಯಾಕೆ ತೊಂದರೆ ಕೊಡುತ್ತೀರಿ ಏನು ಕೇಳಿದ್ದರೆ, ಇನ್ನೊಬ್ಬರು, ಇದು ಯಾವ ರೀತಿಯ ಏರ್‌ಲೈನ್? ಅಂತಹ ಅಸಂಬದ್ಧ ಮತ್ತು ಭಯಭೀತ ವ್ಯಕ್ತಿಯನ್ನು ವಿಮಾನದಲ್ಲಿ ರೀಲ್ ಮಾಡಲು ಅವರು ಹೇಗೆ ಅನುಮತಿಸುತ್ತಿದ್ದಾರೆ? ವಿಮಾನಯಾನ ಸಂಸ್ಥೆಯು ಈ ಮಹಿಳೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ. ಇದರಿಂದ ಇನ್ಯಾರೂ ಮತ್ತೆ ಎಂದಿಗೂ ಹೀಗೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಇಂತಹ ಘಟನೆಗಳು ಮತ್ತೆ ನಡೆಯದಂತೆ ತಡೆಯಲು ಇಂಡಿಗೋ ವಿಮಾನ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ರಜೆಯಲ್ಲೂ ಮಗುವಿನ ಹೋಮ್‌ ವರ್ಕ್ ನೋಡಿ ಸಿಟ್ಟಾದ ತಾಯಿ ಮಾಡಿದ್ದೇನು? ವಿಡಿಯೊ ನೋಡಿ!

ಮತ್ತೊಬ್ಬರು ಕಾಮೆಂಟ್ ನಲ್ಲಿ ಗಗನಸಖಿ ಆಕೆಗೆ ರೀಲ್‌ಗಳನ್ನು ಮಾಡಲು ಹೇಗೆ ಅವಕಾಶ ನೀಡಿದರು? ವಿಮಾನ ಹಾರಾಟ ಸಂದರ್ಭದಲ್ಲಿ ಗಗನಸಖಿಯೂ ಸಹ ಭಯಭೀತರಾಗುತ್ತಾರೆ ಎಂದು ತಿಳಿಸಿದ್ದಾರೆ. ಈ ರೀತಿಯ ಜನರು ವಿಮಾನಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಬೇಕು ಎಂದು ಇನ್ನೊಬ್ಬರು ಹೇಳಿದ್ದಾರೆ.

Continue Reading

ಸಿನಿಮಾ

OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!

ಒಟಿಟಿಯಲ್ಲಿ (OTT Releases) ಈ ವಾರ ಬಹು ನಿರೀಕ್ಷೆಯ ಚಲನಚಿತ್ರ, ಸರಣಿಗಳು ತೆರೆಗೆ ಬರಲಿದ್ದು ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ ಒದಗಿಸಲಿದೆ. ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಮಿರ್ಜಾಪುರದ ಸೀಸನ್ 3 ಕೂಡ ಪ್ರೈಮ್ ವಿಡಿಯೋದಲ್ಲಿ ಜುಲೈ 5ರಿಂದ ತೆರೆ ಕಾಣಲಿದೆ. ಇದರೊಂದಿಗೆ ಇನ್ನು ಹಲವು ಆಕ್ಷನ್, ಥ್ರಿಲರ್, ರೊಮ್ಯಾಂಟಿಕ್ ಕಥೆಯನ್ನು ಒಳಗೊಂಡಿರುವ ಚಿತ್ರ, ಸರಣಿ ಬಿಡುಗಡೆಯಾಗಲಿದೆ. ಪ್ರಮುಖ ಚಿತ್ರಗಳು ಮತ್ತು ವೆಬ್‌ ಸಿರೀಸ್‌ಗಳ ಮಾಹಿತಿ ಹಾಗೂ ವಿಡಿಯೊಗಳು ಇಲ್ಲಿವೆ.

VISTARANEWS.COM


on

By

OTT Releases
Koo

ಮುಂದಿನ ಏಳು ದಿನಗಳಲ್ಲಿ ಒಟಿಟಿಯು (OTT) ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ ಒದಗಿಸಲಿದೆ. ಹಲವಾರು ಸರಣಿ (shows), ಚಲನಚಿತ್ರಗಳು (movies) ತೆರೆಗೆ (OTT Releases) ಬರಲಿದ್ದು, ವೀಕ್ಷಕರ ಎಲ್ಲ ಅಗತ್ಯಗಳನ್ನೂ ಪೂರೈಸುವಂತಿದೆ. ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಪಂಕಜ್ ತ್ರಿಪಾಠಿ, ಅಲಿ ಫಜಲ್, ಶ್ವೇತಾ ತ್ರಿಪಾಠಿ, ವಿಜಯ್ ವರ್ಮಾ ಮತ್ತು ಇತರರು ಮಿರ್ಜಾಪುರದ ಸೀಸನ್ 3 ಮೂಲಕ ಮರಳಿ ಬರಲಿದ್ದಾರೆ. ಇದರೊಂದಿಗೆ ಇನ್ನು ಹಲವು ಥ್ರಿಲ್ಲಿಂಗ್, ರೊಮ್ಯಾಂಟಿಕ್ ಚಿತ್ರಗಳು ತೆರೆಗೆ ಬರಲಿದೆ.

ಸ್ಪ್ರಿಂಟ್

ಜುಲೈ 2ರಂದು ನೆಟ್ ಫ್ಲಿಕ್ಸ್ ನಲ್ಲಿ ತೆರೆ ಕಂಡ ಸ್ಪ್ರಿಂಟ್ ಚಿತ್ರವು ಡ್ರೈವ್ ಟು ಸರ್ವೈವ್‌ನ ಹಿಂದಿನ ರಚನೆಕಾರರಾದ ಬಾಕ್ಸ್ ಟು ಬಾಕ್ಸ್ ಫಿಲ್ಮ್ಸ್‌ನಿಂದ ಕೌಶಲ್ಯಪೂರ್ಣವಾಗಿ ರಚಿಸಲಾದ ಹೆಚ್ಚು ನಿರೀಕ್ಷಿತ ಕ್ರೀಡಾ ಸಾಕ್ಷ್ಯಚಿತ್ರ ಸರಣಿಯಾಗಿದೆ. ವಿಶ್ವ ಪ್ರಸಿದ್ಧ ಸ್ಪ್ರಿಂಟರ್‌ಗಳಾದ ಶಾಕಾರಿ ರಿಚರ್ಡ್‌ಸನ್, ನೋಹ್ ಲೈಲ್ಸ್ ಮತ್ತು ಶೆರಿಕಾ ಜಾಕ್ಸನ್ ಅವರ ಜೀವನದ ಕಥೆಯನ್ನು ಆಧರಿಸಿದೆ. 2023ರ ಬುಡಾಪೆಸ್ಟ್‌ನಲ್ಲಿನ ವಿಶ್ವ ಚಾಂಪಿಯನ್‌ಶಿಪ್‌ನಿಂದ 2024 ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದವರೆಗೆ ಅಸಾಮಾನ್ಯ ಪ್ರಯಾಣವನ್ನು ಕೈಗೊಳ್ಳುವಾಗ ಈ ಗಣ್ಯ ಸ್ಪರ್ಧಿಗಳನ್ನು ವ್ಯಾಖ್ಯಾನಿಸುವ ಕಠಿಣ ತರಬೇತಿ ನಿಯಮಗಳು, ವೈಯಕ್ತಿಕ ವಿಜಯಗಳು ಮತ್ತು ವೈಭವದ ನಿರಂತರ ಅನ್ವೇಷಣೆಯನ್ನು ಇದು ಅನಾವರಣಗೊಳಿಸುತ್ತದೆ.


ಬೆವರ್ಲಿ ಹಿಲ್ಸ್ ಕಾಪ್: ಆಕ್ಸೆಲ್ ಎಫ್

ಜುಲೈ 3ರಂದು ನೆಟ್ ಫ್ಲಿಕ್ಸ್ ನಲ್ಲಿ ತೆರೆಗೆ ಬಂದಿರುವ ಎಡ್ಡಿ ಮರ್ಫಿ ಬೆವರ್ಲಿ ಹಿಲ್ಸ್ ಕಾಪ್: ಆಕ್ಸೆಲ್ ಎಫ್‌ನಲ್ಲಿ ಐಕಾನಿಕ್ ಡಿಟೆಕ್ಟಿವ್ ಆಕ್ಸೆಲ್ ಫೋಲಿಯಾಗಿ ಹಿಂದಿರುಗಿದ್ದಾನೆ. ಟೇಲರ್ ಪೈಜ್ ಚಿತ್ರಿಸಿದ ಅವನ ಮಗಳು ಜೇನ್ ಬೆದರಿಕೆಗೆ ಒಳಗಾದಾಗ ಆಕ್ಸೆಲ್ ಡಿಟೆಕ್ಟಿವ್ ಬಾಬಿ ಅಬಾಟ್ ಮತ್ತು ಹಳೆಯ ಸ್ನೇಹಿತರಾದ ಬಿಲ್ಲಿ ರೋಸ್‌ವುಡ್ ಮತ್ತು ಜಾನ್ ಟ್ಯಾಗರ್ಟ್ ಜೊತೆಗೂಡಿ ಅಪಾಯಕಾರಿ ಪಿತೂರಿಯನ್ನು ಬಿಚ್ಚಿಡುತ್ತಾನೆ. 1994 ರ ಬೆವರ್ಲಿ ಹಿಲ್ಸ್ ಕಾಪ್ IIIರ ಬಳಿಕ 30 ವರ್ಷಗಳ ಅನಂತರ ಬಿಡುಗಡೆಯಾಗಲಿರುವ ಈ ಚಲನಚಿತ್ರವು ಆಕ್ಷನ್-ಕಾಮಿಡಿ ಫ್ರ್ಯಾಂಚೈಸ್‌ನಲ್ಲಿ ನಾಲ್ಕನೇ ಸರಣಿಯಾಗಿದೆ.


ಬಾಬ್ ಮಾರ್ಲಿ: ಒನ್ ಲವ್

ಜುಲೈ 3ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತೆರೆಕಂಡ ಈ ಚಲನಚಿತ್ರವನ್ನು ಮಾರ್ಲಿ ಕುಟುಂಬದ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಇದರಲ್ಲಿ ಕಿಂಗ್ಸ್ ಲಿ ಬೆನ್- ಆದಿರ್ ನಟಿಸಿದ್ದಾರೆ. 1976 ರಿಂದ 1978 ರವರೆಗಿನ ಪ್ರಮುಖ ವರ್ಷಗಳ ಮೇಲೆ ಈ ಚಿತ್ರ ಕೇಂದ್ರೀಕರಿಸಿದೆ. ಹತ್ಯೆಯ ಪ್ರಯತ್ನದಿಂದ ಬದುಕುಳಿಯುವ ಮತ್ತು ಐತಿಹಾಸಿಕ “ಒನ್ ಲವ್ ಪೀಸ್ ಕನ್ಸರ್ಟ್” ಸೇರಿದಂತೆ ಮಾರ್ಲಿಯ ಆಳವಾದ ಪ್ರಯಾಣವನ್ನು ಇದು ನಿರೂಪಿಸುತ್ತದೆ.


ಇಫ್

ಜುಲೈ 3ರಿಂದ ಬುಕ್ ಮೈ ಶೋ ನಲ್ಲಿ ತೆರೆ ಕಾಣುತ್ತಿರುವ ಜಾನ್ ಕ್ರಾಸಿನ್ಸ್ ಕಿ ನಿರ್ದೇಶಿಸಿದ ಇಫ್ ಮೋಡಿಮಾಡುವ ಲೈವ್-ಆಕ್ಷನ್ ಮತ್ತು ಅನಿಮೇಟೆಡ್ ಫ್ಯಾಂಟಸಿ ಹಾಸ್ಯ ಚಿತ್ರವಾಗಿದೆ. ಇದರಲ್ಲಿ ಕೈಲಿ ಫ್ಲೆಮಿಂಗ್ ಬೀಯಾಗಿ ನಟಿಸಿದ್ದಾರೆ. ಪ್ರತಿಯೊಬ್ಬರು ಕೈಬಿಟ್ಟ ಕಾಲ್ಪನಿಕ ಸ್ನೇಹಿತರನ್ನು ನೋಡುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಮರೆತುಹೋದ ಸ್ನೇಹಿತರನ್ನು ಅವರ ಮೂಲ ಸಹಚರರೊಂದಿಗೆ ಮರುಸಂಪರ್ಕಿಸಲು ಬೀ ಸಾಹಸವನ್ನು ಪ್ರಾರಂಭಿಸುತ್ತಾನೆ.ಚಿತ್ರದಲ್ಲಿ ರಿಯಾನ್ ರೆನಾಲ್ಡ್ಸ್, ಫಿಯೋನಾ ಶಾ ಮತ್ತು ಸ್ವತಃ ಕ್ರಾಸಿನ್ಸ್ಕಿ ನಟಿಸಿದ್ದಾರೆ. ಸ್ಟೀವ್ ಕ್ಯಾರೆಲ್, ಫೋಬ್ ವಾಲರ್-ಬ್ರಿಡ್ಜ್, ಲೂಯಿಸ್ ಗೊಸೆಟ್ ಜೂನಿಯರ್ ಮತ್ತು ಎಮಿಲಿ ಬ್ಲಂಟ್ ಅವರ ಧ್ವನಿಗಳು ಕಾಲ್ಪನಿಕ ಸ್ನೇಹಿತರಿಗೆ ಜೀವ ತುಂಬುತ್ತವೆ.


ರೆಡ್ ಸ್ವಾನ್

ಜುಲೈ 3ರಿಂದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಪ್ರದರ್ಶನ ಕಾಣುತ್ತಿರುವ ರೆಡ್ ಸ್ವಾನ್ ದಕ್ಷಿಣ ಕೊರಿಯಾದ ಕಥೆಯನ್ನು ಆಧರಿಸಿದೆ. ರೆಡ್ ಸ್ವಾನ್ ಓಹ್ ವಾನ್-ಸೂ ಎಂಬ ಮಹಿಳೆಯ ಕಥೆಯನ್ನು ಎತ್ತಿ ತೋರಿಸುತ್ತದೆ. ಬಡತನದಿಂದ ವಿಶ್ವ ದರ್ಜೆಯ ಗಾಲ್ಫ್ ಆಟಗಾರನಾಗಲು ಮತ್ತು ಅನಂತರ ಪ್ರಬಲ ಹ್ವೈನ್ ಗ್ರೂಪ್‌ನ ಉತ್ತರಾಧಿಕಾರಿಯಾದ ಕಿಮ್ ಯೋಂಗ್-ಗುಕ್ ಅವರನ್ನು ಮದುವೆಯಾಗುತ್ತಾಳೆ. ವಾನ್-ಸೂ ಅವರ ಪರಿಪೂರ್ಣ ಜೀವನವು ಸಿಯೋ ಡೋ-ಯೂನ್ ಎಂಬ ವ್ಯಕ್ತಿಯನ್ನು ತನ್ನ ಅಂಗರಕ್ಷಕನಾಗಿ ನೇಮಿಸಿಕೊಂಡಾಗ ಬದಲಾಗುತ್ತದೆ. ಪೊಲೀಸ್ ಅಕಾಡೆಮಿಯ ಪದವೀಧರ ಮತ್ತು ಮಾರ್ಷಲ್ ಆರ್ಟ್ಸ್ ಪರಿಣಿತರಾದ ಡೋ -ಯೂನ್ ಗುಪ್ತ ಕಾರ್ಯಸೂಚಿಯೊಂದಿಗೆ ಭದ್ರತಾ ತಂಡವನ್ನು ಸೇರುತ್ತಾನೆ. ಅವನು ವಾನ್-ಸೂನನ್ನು ಹಲವಾರು ಬೆದರಿಕೆಗಳಿಂದ ರಕ್ಷಿಸಿದಾಗ ಅವನು ತನ್ನ ಸ್ನೇಹಿತನ ನಿಗೂಢ ಸಾವಿನ ಸಂಪರ್ಕವನ್ನು ಒಳಗೊಂಡಂತೆ ಹ್ವೈನ್ ಕುಟುಂಬದ ಬಗ್ಗೆ ಕರಾಳ ರಹಸ್ಯಗಳನ್ನು ಬಹಿರಂಗಪಡಿಸುತ್ತಾನೆ.


ಫ್ಯೂರಿಯೋಸಾ: ಎ ಮ್ಯಾಡ್ ಮ್ಯಾಕ್ಸ್ ಸಾಗಾ

ʼಫ್ಯೂರಿಯೋಸಾ: ಎ ಮ್ಯಾಡ್ ಮ್ಯಾಕ್ಸ್ ಸಾಗಾʼ ಎಂಬುದು ಐಕಾನಿಕ್ ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್ ಮತ್ತು ಫ್ರ್ಯಾಂಚೈಸ್‌ನಲ್ಲಿ ಐದನೇ ಸರಣಿಯಾಗಿದೆ. ಜಾರ್ಜ್ ಮಿಲ್ಲರ್ ನಿರ್ದೇಶಿಸಿದ ಈ ಚಲನಚಿತ್ರವು ಜುಲೈ 4ರಿಂದ ಬುಕ್ ಮೈ ಶೋ ನಲ್ಲಿ ಲಭ್ಯವಾಗಲಿದೆ. ನಿರ್ದಯಿ ಸೇನಾಧಿಕಾರಿ ವಿರುದ್ಧ ಹೊರಡುವ ಅಸಾಧಾರಣ ಇಂಪರೇಟರ್ ಫ್ಯೂರಿಯೊಸಾ ಅವಳ ಕಥೆಯನ್ನು ಇದು ಹೊಂದಿದೆ.


ಸ್ಪೇಸ್ ಕೆಡೆಟ್

ಜುಲೈ 4ರಂದು ಪ್ರೈಮ್ ವಿಡಿಯೊಳದಲ್ಲಿ ತೆರೆ ಕಾಣುವ ಎಮ್ಮಾ ರಾಬರ್ಟ್ಸ್ ಅವರ ಹಾಸ್ಯ ಚಿತ್ರ ಗಗನಯಾತ್ರಿಯಾಗುವ ಕನಸು ಕಾಣುವ ಫ್ಲೋರಿಡಾದ ಸ್ವತಂತ್ರ ಮನೋಭಾವದ ಹುಡುಗಿಯೊಬ್ಬಳ ಕಥೆಯನ್ನು ಆಧರಿಸಿದೆ. ಔಪಚಾರಿಕ ವೈಜ್ಞಾನಿಕ ತರಬೇತಿಯ ಕೊರತೆಯ ಹೊರತಾಗಿಯೂ ರೆಕ್ಸ್‌ನ ನಿರ್ಣಯ, ತ್ವರಿತ ಬುದ್ಧಿ ಮತ್ತು ವರ್ಚಸ್ಸು ಅವಳನ್ನು ತನ್ನ ಗೆಳೆಯರಿಂದ ಹೇಗೆ ಭಿನ್ನವಾಗುವಂತೆ ಮಾಡುತ್ತದೆ ಎಂಬುದು ಕಥೆಯ ಸಾರ.


ಆರ್ಥರ್ ದಿ ಕಿಂಗ್

ಜುಲೈ 5ರಿಂದ ಲಯನ್ಸ್ ಗೇಟ್ ಪ್ಲೇ ನಲ್ಲಿ ಪ್ರದರ್ಶನ ಕಾಣುವ ಆರ್ಥರ್ ದಿ ಕಿಂಗ್ ಒಂದು ಹೃದಯಸ್ಪರ್ಶಿ ಸಾಹಸ ಚಿತ್ರವಾಗಿದೆ. ಮಾರ್ಕ್ ವಾಲ್‌ಬರ್ಗ್ ಮೈಕೆಲ್ ಲೈಟ್ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ನಡೆದ ಕಠಿಣ ಸಾಹಸ ರೇಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅನಿರೀಕ್ಷಿತವಾಗಿ ಆರ್ಥರ್ ಎಂಬ ಬೀದಿ ನಾಯಿಯೊಂದಿಗೆ ಆಳವಾದ ಬಂಧವನ್ನು ರೂಪಿಸುತ್ತಾರೆ. ಮೈಕೆಲ್ ಲಿಂಡ್‌ನಾರ್ಡ್ ಅವರ ಆತ್ಮಚರಿತ್ರೆ ಆರ್ಥರ್: ದಿ ಡಾಗ್ ವು ಕ್ರಾಸ್ಡ್ ದಿ ಜಂಗಲ್ ಟು ಫೈಂಡ್ ಎ ಹೋಮ್‌ನಲ್ಲಿ ವಿವರಿಸಿದ ನೈಜ ಘಟನೆಗಳ ಆಧಾರದ ಮೇಲೆ ಕಥೆಯನ್ನು ಹೆಣೆಯಲಾಗಿದೆ.


ಡೆಸ್ಪರೇಟ್ ಲೈಸ್

ಜುಲೈ 5ರಂದು ನೆಟ್ ಫ್ಲಿಕ್ಸ್ ನಲ್ಲಿ ತೆರೆ ಕಾಣುವ ಈ ಚಿತ್ರ ವಂಚನೆ, ನಿಷ್ಠೆ ಮತ್ತು ಕೌಟುಂಬಿಕ ಬಂಧಗಳ ಸಂಕೀರ್ಣತೆಗಳ ವಿಷಯಗಳ ಕುರಿತು ವರ್ಣಿಸುತ್ತದೆ. ಡೆಸ್ಪರೇಟ್ ಲೈಸ್ ಬ್ರೆಜಿಲಿಯನ್ ನಾಟಕ ಸರಣಿಯಾಗಿದ್ದು ಲಿಯಾನಾ ಅವರ ಸುತ್ತ ಸುತ್ತುತ್ತದೆ.


ಗೊಯೊ

ಜುಲೈ 5ರಂದು ನೆಟ್ ಫ್ಲಿಕ್ಸ್‌ನಲ್ಲಿ ತೆರೆ ಕಾಣಲಿರುವ ಈ ಚಿತ್ರ ಯುವ ಸ್ವಲೀನತೆಯ ಕಥೆಯನ್ನು ಹೊಂದಿದೆ. ಬ್ಯೂನಸ್ ಐರಿಸ್‌ನಲ್ಲಿರುವ ನ್ಯಾಷನಲ್ ಮ್ಯೂಸಿಯಂ ಆಫ್ ಫೈನ್ ಆರ್ಟ್ಸ್‌ನಲ್ಲಿ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುವ ಗೊಯೊ ವಿಫಲ ದಾಂಪತ್ಯದಿಂದಾಗಿ ಪ್ರೀತಿಯಿಂದ ಭ್ರಮನಿರಸನಗೊಂಡಿರುತ್ತಾನೆ. ಮ್ಯೂಸಿಯಂನಲ್ಲಿ ಹೊಸ ಭದ್ರತಾ ಸಿಬ್ಬಂದಿ ಇವಾಳನ್ನು ಭೇಟಿಯಾದಾಗ ಅವನ ಜೀವನವು ಅನಿರೀಕ್ಷಿತ ತಿರುವು ಪಡೆಯುತ್ತದೆ.

ಇದನ್ನೂ ಓದಿ: Kannada New Movie: ‘ಕಣಂಜಾರು’ ಟೀಸರ್ ಮೆಚ್ಚಿದ ಚಂದನವನ!

ಮಿರ್ಜಾಪುರ ಸೀಸನ್ 3

ಜುಲೈ 5ರಂದು ಪ್ರೈಮ್ ವಿಡಿಯೋದಲ್ಲಿ ತೆರೆ ಕಾಣುವ ಮಿರ್ಜಾಪುರ ಸೀಸನ್ 3 ಸಾಹಸಗಾಥೆಯನ್ನು ಹೇಳುತ್ತದೆ. ಕಾನೂನುಬಾಹಿರ ನಗರವನ್ನು ವ್ಯಾಖ್ಯಾನಿಸುವ ಕ್ರೂರ ಅಧಿಕಾರದ ವಿರುದ್ಧ ಹೋರಾಟ ಮತ್ತು ಸೇಡಿನ ಕಥೆಯನ್ನು ಹೊಂದಿದೆ. ಅಪರಾಧ, ರಾಜಕೀಯ, ಹೊಸ ಮೈತ್ರಿ ಮತ್ತು ದ್ರೋಹಕ್ಕೆ ಸಂಬಂಧಿಸಿ ಕಥೆ ಹೆಣೆಯಲಾಗಿದೆ. ವಿಜಯ್ ವರ್ಮಾ, ಇಶಾ ತಲ್ವಾರ್, ಆಸಿಫ್ ಖಾನ್, ರಾಜೇಶ್ ತೈಲಂಗ್ ಮತ್ತು ಶೀಬಾ ಚಡ್ಡಾ ಮೊದಲಾದವರು ನಟಿಸಿದ್ದಾರೆ.

ದಿ ಸಿಡಿಂಗ್

ಜುಲೈ 5ರಂದು ಬುಕ್ ಮೈ ಶೋ ನಲ್ಲಿ ತೆರೆ ಕಾಣುವ ಈ ಚಿತ್ರ ವಿಂಡಮ್ ಸ್ಟೋನ್ ಎಂಬ ಪಾದಯಾತ್ರಿಕನು ನಿರ್ಜನವಾದ ಮರುಭೂಮಿಯಲ್ಲಿ ಕಳೆದುಹೋದ ಕಥೆಯನ್ನು ಹೇಳುತ್ತದೆ. ಅಲ್ಲಿ ಆತ ಆಶ್ರಯವನ್ನು ಹುಡುಕುತ್ತಿರುವಾಗ ಅಲೀನಾ ಎಂಬ ಮಹಿಳೆಯನ್ನು ಕಾಣುತ್ತಾನೆ. ಬಳಿಕ ಅಲೀನಾಳಲ್ಲಿ ಅವಿತಿರುವ ಕರಾಳ ರಹಸ್ಯಗಳನ್ನು ಇದು ಬಿಚ್ಚಿಡುತ್ತದೆ.

Continue Reading

Latest

Sexual Harassment: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕಿರುಕುಳ

Sexual Harassment: ಕಾಮ, ಕ್ರೋಧ, ಮೋಹ, ಮದ, ಮತ್ಸರ ಇವೆಲ್ಲವೂ ಅಂಕೆಯಲ್ಲಿದ್ದರೆ ಚೆನ್ನ. ಆದರೆ ಈಗ ಎಳೆಯ ಮಕ್ಕಳನ್ನು ಕೂಡ ಕಾಮುಕ ದೃಷ್ಟಿಯಲ್ಲಿ ನೋಡುವ ದುರಂತ ಕಾಲದಲ್ಲಿದ್ದೇವೆ. ರೈಲಿನಲ್ಲಿ ಅಜ್ಜಿಯೊಂದಿಗೆ ಪ್ರಯಾಣಿಸುತ್ತಿದ್ದ ಬಾಲಕಿಯೊಬ್ಬಳಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ವ್ಯಕ್ತಿಯೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅಶ್ಲೀಲ ವಿಡಿಯೊಗಳನ್ನು ನೋಡುವಂತೆ ಒತ್ತಾಯಿಸಿದ್ದಲ್ಲದೇ ಅಸಭ್ಯ ಸನ್ನೆಗಳನ್ನು ಸಹ ಮಾಡಿ ಕಿರುಕುಳ ಕೊಟ್ಟಿದ್ದಾನೆ.

VISTARANEWS.COM


on

Sexual Harassment
Koo

ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ಆಗಾಗ ಕೇಳಿ ಬರುತ್ತಲೇ ಇದೆ. ಬಸ್,
ರೈಲುಗಳಲ್ಲಿ , ಹೋಟೆಲ್, ರೆಸ್ಟೋರೆಂಟ್, ಮಾಲ್‍ಗಳಂತಹ ಹೊರಗಿನ ಸ್ಥಳದಲ್ಲಿ ಮಾತ್ರವಲ್ಲ ಕೆಲವೊಮ್ಮೆ ಕೆಲವು ಮಹಿಳೆಯರು ತಮ್ಮ ಮನೆಯೊಳಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಒಟ್ಟಾರೆ ಹೆಣ್ಣು ಮಕ್ಕಳ ಮೇಲಿನ ಶೋಷಣೆ ಕಡಿಮೆಯಾಗುವುದಿಲ್ಲ. ಇದೀಗ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ (Sexual Harassment )ನೀಡಿದ ಘಟನೆ ಬೆಳಕಿಗೆ ಬಂದಿದೆ.

ಇಟಾರ್ಸಿಯಿಂದ ಭೋಪಾಲ್‍ಗೆ ತೆರಳುತ್ತಿದ್ದ ಮಂಗಳಾ ಎಕ್ಸ್‌ಪ್ರೆಸ್‌ನಲ್ಲಿ ಸೆಕೆಂಡ್ ಕ್ಲಾಸ್ ಎಸಿ ಕೋಚ್ ಎ -1 ರಲ್ಲಿ 14 ವರ್ಷದ ಬಾಲಕಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ. ಬಾಲಕಿ ತನ್ನ ಅಜ್ಜಿಯ ಜೊತೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಆಗ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿ ಅಶ್ಲೀಲ ವಿಡಿಯೊಗಳನ್ನು ನೋಡುವಂತೆ ಒತ್ತಾಯಿಸಿದ್ದಲ್ಲದೇ ಅಸಭ್ಯ ಸನ್ನೆಗಳನ್ನು ಸಹ ಮಾಡಿದ್ದಾನೆ. ಕಿರುಕುಳವನ್ನು ಸಹಿಸಲಾಗದೆ ಭಯಭೀತಳಾದ ಬಾಲಕಿ ತನ್ನ ಅಜ್ಜಿಗೆ ಮಾಹಿತಿ ನೀಡಿದ್ದಾಳೆ. ಬಾಲಕಿ ಈ ಘಟನೆಯ ಬಗ್ಗೆ ಸರ್ಕಾರಿ ರೈಲ್ವೆ ಪೊಲೀಸ್ (ಜಿ ಆರ್ ಪಿ) ನಿಯಂತ್ರಣ ಕೊಠಡಿಗೆ ವರದಿ ಮಾಡಿದ್ದಾಳೆ. ರೈಲು ಬೀನಾ ತಲುಪಿದಾಗ, ಜಿಆರ್‌ಪಿ ಅಧಿಕಾರಿಗಳು ಬಂದು, ತಕ್ಷಣದ ಕ್ರಮ ತೆಗೆದುಕೊಳ್ಳುವ ಬದಲು, ಎಫ್ಐಆರ್ ದಾಖಲಿಸಲು ರೈಲಿನಿಂದ ಇಳಿಯುವಂತೆ ಅವರು ಹುಡುಗಿಗೆ ಸೂಚಿಸಿದರು. ಆದರೆ ಅವಳು ಅದಕ್ಕೆ ನಿರಾಕರಿಸಿದಳು.

ಕೊನೆಗೆ ಬಾಲಕಿ ಗ್ವಾಲಿಯರ್‌ಗೆ ಬಂದು ತನ್ನ ತಂದೆಯನ್ನು ಭೇಟಿಯಾಗಿ ಅವರ ಜೊತೆ ಗ್ವಾಲಿಯರ್‌ನ ಜಿಆರ್‌ಪಿ ಠಾಣೆಯಲ್ಲಿ ಸೆಕ್ಷನ್ 74 ಬಿಎನ್ಎಸ್ 11/12 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾಳೆ. ರಾಣಿ ಕಮಲಾಪತಿ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡ ಗ್ವಾಲಿಯರ್‌ನ ಜಿರ್‌ಪಿ ಠಾಣೆ ಮುಂದಿನ ಕ್ರಮಕ್ಕಾಗಿ ರಾಣಿ ಕಮಲಪತಿ ಠಾಣೆಯ ಜಿಆರ್‌ಪಿಗೆ ವರ್ಗಾಯಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಾಮೂಹಿಕ ವಿವಾಹದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಅಂಬಾನಿ ಕುಟುಂಬ

ಲೈಂಗಿಕ ಕಿರುಕುಳ ಬಾಲಕಿಯರ ಮೇಲೆ ಮಾತ್ರ ನಡೆಯುತ್ತಿಲ್ಲ. ಈ ವರ್ಷದ ಮೇ ತಿಂಗಳಿನಲ್ಲಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ತಾನು ಲೈಂಗಿಕ ದೌರ್ಜನ್ಯವನ್ನು ಎದುರಿಸಿದ್ದೇನೆ ಎಂದು 16 ವರ್ಷದ ಬಾಲಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅದು ಸಖತ್ ವೈರಲ್ ಆಗಿತ್ತು. ಸಮಯ್ ಪುರ್ ಬದ್ಲಿ ಕಡೆಗೆ ಹೋಗುತ್ತಿದ್ದ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ ನಂತರ ತನ್ನ ಸಹ ಪ್ರಯಾಣಿಕರು ತನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದಾತ ದೂರಿದ್ದ.

Continue Reading

ಪ್ರಮುಖ ಸುದ್ದಿ

Samrat Choudhary: ಅಯೋಧ್ಯೆಯಲ್ಲಿ ತಲೆ ಬೋಳಿಸಿಕೊಂಡು ರಾಮನಿಗೆ ಪೇಟ ಅರ್ಪಿಸಿದ ಬಿಹಾರ ಡಿಸಿಎಂ! ಇದಕ್ಕಿದೆ ವಿಶೇಷ ಕಾರಣ!

Samrat Choudhary: ನಿತೀಶ್ ಕುಮಾರ್ ಅವರು ಮಹಾಘಟಬಂಧನ್ ಮೈತ್ರಿಕೂಟವನ್ನು ತೊರೆದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪೇಟವನ್ನು ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಬಿಹಾರ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಸಾಮ್ರಾಟ್ ಚೌಧರಿ ತಮ್ಮ ಪ್ರತಿಜ್ಞೆಯನ್ನು ಪೂರೈಸಿದ್ದಾರೆ. ನಿತೀಶ್ ಕುಮಾರ್ ಅವರು ಇಂಡಿ-ಮೈತ್ರಿಕೂಟಕ್ಕೆ ರಾಜೀನಾಮೆ ನೀಡಿ ಎನ್‌ಡಿಎಗೆ ಮರಳಿದ್ದಾರೆ. ಹಾಗಾಗಿ ಸಾಮ್ರಾಟ್ ಚೌಧರಿ ಅವರು ಈಗ ಅಯೋಧ್ಯೆಯಲ್ಲಿ ಭಗವಾನ್ ರಾಮನಿಗೆ ತಮ್ಮ ಮುಡಿಯನ್ನು ಅರ್ಪಿಸಿ ತಮ್ಮ ಪೇಟವನ್ನು ರಾಮನ ಪಾದಗಳಿಗೆ ಅರ್ಪಿಸುವ ಮೂಲಕ ತಮ್ಮ ಪ್ರತಿಜ್ಞೆಯನ್ನು ಪೂರೈಸಿದ್ದಾರೆ.

VISTARANEWS.COM


on

Samrat Choudhary
Koo

ಈ ಹಿಂದೆ ಜೆಡಿಯು ಮುಖ್ಯಸ್ಥರಾದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಘಟಬಂಧನ್ ಮೈತ್ರಿಕೂಟವನ್ನು ತೊರೆದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪೇಟವನ್ನು ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಬಿಹಾರ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಸಾಮ್ರಾಟ್ ಚೌಧರಿ (Samrat Choudhary) ಅವರು ಇದೀಗ ತಮ್ಮ ಪ್ರತಿಜ್ಞೆಯನ್ನು ನೆನಪಿಸಿಕೊಂಡಿದ್ದು ಅದನ್ನು ಪೂರೈಸಿದ್ದಾರೆ.

ಇದೀಗ ಇಂಡಿ-ಮೈತ್ರಿಕೂಟಕ್ಕೆ ರಾಜೀನಾಮೆ ನೀಡಿದ ನಂತರ ನಿತೀಶ್ ಕುಮಾರ್ ಅವರು ಎನ್‍ಡಿಎಗೆ ಮರಳಿದ್ದಾರೆ. ಹಾಗಾಗಿ ಸಾಮ್ರಾಟ್ ಚೌಧರಿ ಅವರು ಈಗ ಅಯೋಧ್ಯೆಯಲ್ಲಿ ಭಗವಾನ್ ರಾಮನಿಗೆ ತಮ್ಮ ಮುಡಿಯನ್ನು ಅರ್ಪಿಸಿ ತಮ್ಮ ಪೇಟವನ್ನು ರಾಮನ ಪಾದಗಳಿಗೆ ಅರ್ಪಿಸುವ ಮೂಲಕ ತಮ್ಮ ಪ್ರತಿಜ್ಞೆಯನ್ನು ಪೂರೈಸಿದ್ದಾರೆ.

ಈ ಕುರಿತು ಮಾತನಾಡಿದ ಸಾಮ್ರಾಟ್ ಚೌಧರಿ “ನಿತೀಶ್ ಕುಮಾರ್ ಅವರು ಇಂಡಿ- ಮೈತ್ರಿಕೂಟದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‍ಡಿಎಗೆ ಮರಳಿದ ದಿನ, ನಾನು ನನ್ನ ಪೇಟವನ್ನು ಭಗವಾನ್ ರಾಮನಿಗೆ ಅರ್ಪಿಸುತ್ತೇನೆ ಎಂದು ಘೋಷಿಸಿದೆ. ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪೇಟ ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದೆ ಎಂಬುದು ನಿಜ. ಆದರೆ ಈಗ ಅವರು ಇಂಡಿ-ಮೈತ್ರಿಕೂಟದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‍ಡಿಎ) ಮರಳಿದ್ದಾರೆ, ಹಾಗಾಗಿ ನನ್ನ ಪೇಟವನ್ನು ಭಗವಾನ್ ರಾಮನ ಪಾದಗಳಿಗೆ ಅರ್ಪಿಸುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ನಿತೀಶ್ ಕುಮಾರ್ ಎನ್‍ಡಿಎಗೆ ಮರಳಿದ್ದು ಕಳೆದ ದಶಕದಲ್ಲಿ ಮೈತ್ರಿಗಳಲ್ಲಿ ಐದನೇ ಬದಲಾವಣೆಯನ್ನು ಸೂಚಿಸುತ್ತದೆ, ಇದರ ಪರಿಣಾಮವಾಗಿ ಮಹಾಘಟಬಂಧನ್ ಸರ್ಕಾರದ ಪತನವಾಯಿತು ಮತ್ತು ಬಿಹಾರದಲ್ಲಿ ಹೊಸ ಎನ್‍ಡಿಎ ನೇತೃತ್ವದ ಸರ್ಕಾರ ರಚನೆಯಾಯಿತು. ಬಿಜೆಪಿ ನಾಯಕರಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: ಮಕ್ಕಳನ್ನು ಬೆಲ್ಟ್‌ನಿಂದ ಕ್ರೂರವಾಗಿ ಥಳಿಸಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

ಈ ನಡುವೆ ತಮ್ಮ ಪ್ರತಿಜ್ಞೆಯನ್ನು ನೆನೆಪಿಸಿಕೊಂಡ ಚೌಧರಿ ಜೂನ್ 2ರಂದು ಅಯೋಧ್ಯೆಗೆ ತೆರಳಿ ತಲೆ ಬೋಳಿಸಿಕೊಂಡ ನಂತರ ಅವರು ಇಂದು ರಾಮ ಮಂದಿರದಲ್ಲಿ ತಮ್ಮ ಪೇಟವನ್ನು ಅರ್ಪಿಸಿದ್ದಾರಂತೆ.

Continue Reading
Advertisement
Viral Video
ವೈರಲ್ ನ್ಯೂಸ್3 mins ago

Viral Video: ವಿಮಾನದಲ್ಲಿ ದಢೂತಿ ಹೆಂಗಸಿನ ಡ್ಯಾನ್ಸ್‌! ನಗಲಾರದೆ ಅಳಲಾರದೆ ತೊಳಲಾಡಿದ ಪ್ರಯಾಣಿಕರು!

OTT Releases
ಸಿನಿಮಾ12 mins ago

OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!

Sexual Harassment
Latest19 mins ago

Sexual Harassment: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕಿರುಕುಳ

Woman Doctor
ದೇಶ31 mins ago

ಬೇರೆ ಹುಡುಗಿಗೆ ಮೋಸ ಆಗಬಾರದು; ಮದುವೆಯಾಗಲ್ಲ ಎಂದ ಗೆಳೆಯನ ಗುಪ್ತಾಂಗ ಕತ್ತರಿಸಿದ ಯುವತಿ! Video ಇದೆ

Designer Hairpins Fashion
ಫ್ಯಾಷನ್43 mins ago

Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

Amritpal Singh
ದೇಶ1 hour ago

Amritpal Singh: ಜೈಲಿನಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ ಸಿಂಗ್‌ಗೆ ಪೆರೋಲ್‌

Bridge Collapse
ದೇಶ1 hour ago

Bridge Collapse: ಬಿಹಾರದಲ್ಲಿ ಮತ್ತೆರಡು ಸೇತುವೆ ಕುಸಿತ; 15 ದಿನಗಳಲ್ಲಿ ಇದು 7ನೇ ಪ್ರಕರಣ!

Stabbing Case
ಕರ್ನಾಟಕ2 hours ago

Stabbing Case: ಕಾಲೇಜಿನೊಳಗೆ ಬಿಡದ್ದಕ್ಕೆ ಸೆಕ್ಯೂರಿಟಿ ಗಾರ್ಡ್‌ನ ಇರಿದು ಕೊಂದ ವಿದ್ಯಾರ್ಥಿ!

ಕರ್ನಾಟಕ2 hours ago

Rain News: ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆ ಅಬ್ಬರ; ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಜನ ಪರದಾಟ

Cabinet Committees
ದೇಶ3 hours ago

Cabinet Committees: ಸಂಪುಟ ಸಮಿತಿಗಳನ್ನು ರಚಿಸಿದ ಕೇಂದ್ರ; ಭದ್ರತಾ ಸಮಿತಿಗೆ ಮೋದಿಯೇ ಮುಖ್ಯಸ್ಥ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌