Nita Ambani : ಮಗನ ಮದುವೆ ಗಡಿಬಿಡಿಯಲ್ಲಿ ನೀತಾ ಅಂಬಾನಿ ಪಾಪರಾಜಿಗಳಿಗೆ ಹೇಳಿದ್ದೇನು? ವಿಡಿಯೊ ವೈರಲ್ - Vistara News

Latest

Nita Ambani : ಮಗನ ಮದುವೆ ಗಡಿಬಿಡಿಯಲ್ಲಿ ನೀತಾ ಅಂಬಾನಿ ಪಾಪರಾಜಿಗಳಿಗೆ ಹೇಳಿದ್ದೇನು? ವಿಡಿಯೊ ವೈರಲ್

Nita Ambani: ಅಂಬಾನಿ ಮನೆತನದ ಕುಡಿ ಅನಂತ್ ಅಂಬಾನಿಯ ವಿವಾಹವು ಜುಲೈ 12ರಂದು ರಾಧಿಕಾ ಮರ್ಚೆಂಟ್ ಅವರ ಜೊತೆ ಮುಂಬೈನಲ್ಲಿ ನಡೆಯಲಿದೆ. ಅಂಬಾನಿ ದಂಪತಿ ತಮ್ಮ ಮುಂಬೈ ನಿವಾಸದಲ್ಲಿ ಶಿವಶಕ್ತಿ ಪೂಜೆಯನ್ನು ಆಯೋಜಿಸಿದೆ. ಕುಟುಂಬ ಸದಸ್ಯರು ತಮ್ಮ ಪೂಜೆಯಲ್ಲಿ ಹಲವಾರು ತಾರೆಯರನ್ನು ಆಹ್ವಾನಿಸಿದ್ದಾರೆ. ನೀತಾ ಅಂಬಾನಿ ಹಲವಾರು ಕೆಲಸಗಳ ನಡುವೆಯೂ ಕೆಲವು ನಿಮಿಷ ಬಿಡುವು ಮಾಡಿಕೊಂಡು ಪಾಪಾರಾಜಿಗಳಿ ಆಸನದ ವ್ಯವಸ್ಥೆಯನ್ನು ಪರೀಕ್ಷಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ, ಇದರಲ್ಲಿ ಮುಂಬೈನಲ್ಲಿ ಮಳೆಯ ಮಧ್ಯೆ ಮದುವೆಯ ಸ್ಥಳದಲ್ಲಿ ಪಾಪಾರಾಜಿಗಳನ್ನು ಆರಾಮವಾಗಿ ಇರಿಸಲಾಗಿದೆಯೇ ಎಂದು ಅವರ ಬಳಿ ಕೇಳುತ್ತಿರುವುದು ಕಂಡುಬಂದಿದೆ.

VISTARANEWS.COM


on

Nita Ambani
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಮುಂಬೈ : ಅಂಬಾನಿ ಮನೆತನದ ಕುಡಿ ಅನಂತ್ ಅಂಬಾನಿಯ ವಿವಾಹವು ಜುಲೈ 12ರಂದು ರಾಧಿಕಾ ಮರ್ಚೆಂಟ್ ಅವರ ಜೊತೆ ಮುಂಬೈನಲ್ಲಿ ನಡೆಯಲಿದೆ. ವಿವಾಹಕ್ಕೂ ಮೊದಲು ಅಂಬಾನಿ ದಂಪತಿ ಹಲವಾರು ಸಮಾರಂಭಗಳನ್ನು ಏರ್ಪಡಿಸಿದ್ದರು, ವಿವಾಹ ಪೂರ್ವ ಸಮಾರಂಭಗಳಾಗಿ ಭೋಜನಕ್ಕೂಟ, ಸಂಗೀತ ಸಮಾರಂಭ, ಸಾಮೂಹಿಕ ವಿವಾಹ ಹೀಗೆ ಹಲವರು ಕಾರ್ಯಕ್ರಮಗಳು ನಡೆಸಿದ್ದರು. ಶ್ರೀಮಂತ ಮನೆತನದವರಾದರೂ ಕೂಡ ದೇವರ ಮೇಲೆ ಅಪಾರ ಭಕ್ತಿಯುಳ್ಳ ಈ ಕುಟುಂಬ ಇದೀಗ ಅನಂತ್ ಅಂಬಾನಿ ಮದುವೆಗೂ ಮುನ್ನ ತಮ್ಮ ಮುಂಬೈ ನಿವಾಸದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪಾಪರಾಜಿಗಳನ್ನು (ಸುದ್ದಿ ಮತ್ತು ಫೋಟೊಗಳಿಗಾಗಿ ಕಾದು ನಿಂತವರು) ಕೈಮುಗಿದು ಮಾತನಾಡಿಸಿದ ನೀತಾ ಅಂಬಾನಿ (Nita Ambani )ಅವರ ಸೌಜನ್ಯ ಹಲವರ ಮನಗೆದ್ದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂಬಾನಿ ದಂಪತಿ ತಮ್ಮ ಮುಂಬೈ ನಿವಾಸದಲ್ಲಿ ಶಿವಶಕ್ತಿ ಪೂಜೆಯನ್ನು ಆಯೋಜಿಸಿದೆ. ಕುಟುಂಬ ಸದಸ್ಯರು ತಮ್ಮ ಪೂಜೆಯಲ್ಲಿ ಹಲವಾರು ತಾರೆಯರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಅನೇಕ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗಾಗಿ ವರನ ತಾಯಿ ನೀತಾ ಅಂಬಾನಿ ಹಲವಾರು ಕೆಲಸಗಳ ನಡುವೆಯೂ ಕೆಲವು ನಿಮಿಷ ಬಿಡುವು ಮಾಡಿಕೊಂಡು ಪಾಪರಾಜಿಗಳಿ ಆಸನದ ವ್ಯವಸ್ಥೆಯನ್ನು ಪರೀಕ್ಷಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ, ಇದರಲ್ಲಿ ಮುಂಬೈನಲ್ಲಿ ಮಳೆಯ ಮಧ್ಯೆ ಮದುವೆಯ ಸ್ಥಳದಲ್ಲಿ ಪಾಪಾರಾಜಿಗಳನ್ನು ಆರಾಮವಾಗಿ ಇರಿಸಲಾಗಿದೆಯೇ ಎಂದು ಅವರ ಬಳಿ ಕೇಳುತ್ತಿರುವುದು ಕಂಡುಬಂದಿದೆ.

ವಿವಾಹಪೂರ್ವ ಸಮಾರಂಭದ ಹೊರಗೆ ಮೀಸಲಿಟ್ಟ ಸ್ಥಳದಲ್ಲಿ ಕುಳಿತ ಪಾಪರಾಜಿಗಳ ಬಳಿ ಬಂದ ನೀತಾ ಅಂಬಾನಿಯವರು “ನಿಮಗೆ ಆರಾಮದಾಯಕವಾಗಿದೆಯೇ? ನಾನು ನಿಮ್ಮೆಲ್ಲರಿಗೂ ಪ್ರಸಾದವನ್ನು ಕಳುಹಿಸಲಿದ್ದೇನೆ” ಎಂದು ಹಿಂದಿಯಲ್ಲಿ ಕೇಳಿದರು. ಇದಕ್ಕೆ ಪಾಪರಾಜಿಗಳು ಅವರು ಹೌದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:60ರಲ್ಲೂ ಬಳ್ಳಿಯಂತೆ ಬಳುಕುವ ನೀತಾ ಅಂಬಾನಿ ಫಿಟ್‌ನೆಸ್‌ ಸಿಕ್ರೆಟ್‌ ಹೀಗಿದೆ!

ಅನಂತ್ ಅಂಬಾನಿ ಮದುವೆ ಜುಲೈ 12ರಂದು ನಡೆಯಲಿರುವ ಕಾರಣ ಈಗಾಗಲೇ ಕುಟುಂಬ ಸದಸ್ಯರೆಲ್ಲರೂ ಅಂಬಾನಿ ನಿವಾಸಕ್ಕೆ ಆಗಮಿಸಿದ್ದಾರೆ. ಹಾಗೇ ಶ್ಲೋಕಾ ಮೆಹ್ತಾ ಅಂಬಾನಿ ಅವರ ತಾಯಿ ಮೋನಾ ಮೆಹ್ತಾ ಮತ್ತು ಆನಂದ್ ಪಿರಮಾಲ್ ಅವರ ತಾಯಿ ಸ್ವಾತಿ ಪಿರಮಾಲ್ ಮೆಹಂದಿ ಸಮಾರಂಭಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Stuck in Lift: ಫ್ಯಾನಿಲ್ಲ, ಲೈಟಿಲ್ಲ, ಆಹಾರವಿಲ್ಲ; 2 ದಿನ ಲಿಫ್ಟ್‌ನಲ್ಲಿ ಸಿಲುಕಿದ್ದವನ ಸ್ಥಿತಿ ಹೇಗಿರಬಹುದು ಊಹಿಸಿ!

Stuck in Lift: ಸ್ಥಳೀಯ ಸಿಪಿಐ ನಾಯಕ ಮತ್ತು ಸ್ಥಳೀಯ ಶಾಸಕರ ಹಾಸ್ಟೆಲ್‌ನ ಸಿಬ್ಬಂದಿ ರವೀಂದ್ರನ್ ಅವರು ಬೆನ್ನುನೋವಿನ ಚಿಕಿತ್ಸೆಗಾಗಿ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹೋಗಿದ್ದರು. ಎಕ್ಸ್-ರೇ ನಂತರ ಅವರು ಲಿಫ್ಟ್ ಮೂಲಕ ವೈದ್ಯರ ಬಳಿಗೆ ಹೋಗುತ್ತಿದ್ದಾಗ ಅದು ಸಡನ್ ಆಗಿ ನಿಂತಿದೆ. ಆಗ ಅವರು ತಮ್ಮ ಫೋನ್ ಬಳಸಿ ಲಿಫ್ಟ್ ಒಳಗೆ ಬರೆದ ಹಲವಾರು (ಸಹಾಯವಾಣಿ) ಸಂಖ್ಯೆಗಳಿಗೆ ಕಾಲ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. 42 ಗಂಟೆಗಳ ಕಾಲ ಲಿಫ್ಟ್ ಒಳಗೆ ಸಿಲುಕಿಕೊಂಡಿದ್ದರು. ಅವರ ಕರಾಳ ಅನುಭವ ಇಲ್ಲಿದೆ ಓದಿ.

VISTARANEWS.COM


on

Stuck in Lift
Koo

ವ್ಯಕ್ತಿ ಲಿಫ್ಟ್‌ನೊಳಗೆ ಸಿಲುಕಿಕೊಂಡು ಒದ್ದಾಡುವಂತಹ ದೃಶ್ಯಗಳನ್ನು ನಾವು ಹೆಚ್ಚು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಆಸ್ಪತ್ರೆಯೊಂದರಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಭರ್ತಿ 42 ಗಂಟೆಗಳ ಕಾಲ ಲಿಫ್ಟ್ (Stuck in Lift) ಒಳಗೆ ಸಿಲುಕಿಕೊಂಡಿದ್ದು, ಸುಮಾರು ಎರಡು ದಿನಗಳ ಕಾಲ ಅವರು ಲಿಫ್ಟ್‌ನೊಳಗೆ ಪರದಾಡಿದ ರೀತಿ ಕೇಳಿದರೆ ಯಾರಿಗಾದರೂ ಗಾಬರಿಯಾಗುವುದು ಖಂಡಿತ.

ಸ್ಥಳೀಯ ಸಿಪಿಐ ನಾಯಕ ಮತ್ತು ಸ್ಥಳೀಯ ಶಾಸಕರ ಹಾಸ್ಟೆಲ್‍ನ ಸಿಬ್ಬಂದಿ ರವೀಂದ್ರನ್ ಅವರು ಬೆನ್ನುನೋವಿನ ಚಿಕಿತ್ಸೆಗಾಗಿ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದರು. ಎಕ್ಸ್-ರೇ ನಂತರ, ಅವರು ಲಿಫ್ಟ್‌ ಮೂಲಕ ವೈದ್ಯರ ಬಳಿಗೆ ಹೋಗುತ್ತಿದ್ದಾಗ ಅದು ಸಡನ್ ಆಗಿ ನಿಂತಿದೆ. ಆಗ ಅವರು ತಮ್ಮ ಫೋನ್ ಬಳಸಿ ಲಿಫ್ಟ್ ಒಳಗೆ ಬರೆದ ಹಲವಾರು (ಸಹಾಯವಾಣಿ) ಸಂಖ್ಯೆಗಳಿಗೆ ಕಾಲ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಅವರ ಫೋನ್ ಕೆಳಗೆ ಬಿದ್ದು ಹಾಳಾಗಿದೆ. ನಂತರ ಅವರು ಲಿಫ್ಟ್‌ನ ಒಂದು ಮೂಲೆಯಲ್ಲಿ ಕುಳಿತು ಯಾರಾದರೂ ಬರುತ್ತಾರೆ ಎಂದು ಕಾಯತೊಡಗಿದ್ದಾರೆ.

ಅನಿವಾರ್ಯವಾದಾಗ ಲಿಫ್ಟ್‌ನ ಒಂದು ಮೂಲೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಅವರಿಗೆ ಬಾಯಾರಿಕೆ, ಹಸಿವು ಆದ ಕಾರಣ ನಿದ್ರೆ ಕೂಡ ಬರಲಿಲ್ಲ. ಅವರು ನಿಯಮಿತವಾಗಿ ಆಲರಂ ಬೆಲ್ ಅನ್ನು ಒತ್ತುತ್ತಲೇ ಇದ್ದರಂತೆ. ಲಿಫ್ಟ್ ಚೇಂಬರ್‌ನಲ್ಲಿ ಫ್ಯಾನ್ ಮತ್ತು ಬೆಳಕು ಎರಡೂ ಇರಲಿಲ್ಲ. ಸ್ವಲ್ಪ ಗಾಳಿ ಒಳಗೆ ಬರುತ್ತಿದ್ದರಿಂದ ಅವರ ಜೀವ ಉಳಿದಿದೆ. ಕೊನೆಗೆ ಅವರು ತಮ್ಮ ನೈತಿಕ ಸ್ಥೈರ್ಯವನ್ನು ಉಳಿಸಿಕೊಳ್ಳಲು, ತಮ್ಮ ಹೆಂಡತಿ ಬರೆದು ಪ್ರಕಟಿಸಿದ ಕವಿತೆಗಳನ್ನು ಮೆಲುಕು ಹಾಕಿದರಂತೆ. ಎರಡು ದಿನ ಲಿಫ್ಟ್‌ನಲ್ಲಿ ಸಿಕ್ಕಿ ಬಿದ್ದು ಹೊರ ಬಂದಿರುವ ರವೀಂದ್ರನ್ ಆ ಸಂಕಷ್ಟದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಇತ್ತ ಅವರ ಪತ್ನಿ ಮತ್ತು ಮಕ್ಕಳು ಅವರು ಮನೆಗೆ ಬರದಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ. ಯಾಕೆಂದರೆ ಅವರು ಆಗಾಗ ಕೆಲಸದ ನಿಮಿತ್ತ ಮನೆಗೇ ಬರುತ್ತಿರಲಿಲ್ಲವಂತೆ. ಆದರೆ ಭಾನುವಾರ ಅವರು ಮನೆಗೆ ಹಿಂತಿರುಗದಿದ್ದಾಗ ಮತ್ತು ಅವರ ಪೋನ್‌ಗೆ ಕರೆ ಮಾಡಿದರೂ ಅದು ಸಿಗದಿದ್ದಾಗ ಅವರಿಗೆ ಚಿಂತೆ ಶುರುವಾಗಿದೆ. ಹಾಗಾಗಿ ಶಾಸಕರ ಹಾಸ್ಟೆಲ್ ಮತ್ತು ಸಿಪಿಐ ಕಚೇರಿಗೆ ಕರೆ ಮಾಡಿದಾಗ ರವೀಂದ್ರನ್ ಶನಿವಾರ ಮಧ್ಯಾಹ್ನದಿಂದ ಕಾಣೆಯಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ:  ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Stuck in Lift

ಭಾನುವಾರ ಮಧ್ಯಾಹ್ನದ ವೇಳೆಗೆ, ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು ಮತ್ತು ಹಾಗಾಗಿ ಅವರನ್ನು ಪೊಲೀಸರು ಹುಡುಕಾಡಿದ್ದಾರೆ. ಕೊನೆಯಲ್ಲಿ ಸೋಮವಾರ ಬೆಳಗ್ಗೆ ಲಿಫ್ಟ್ ಆಪರೇಟರ್ ನಿಧಾನವಾಗಿ ಕರ್ತವ್ಯಕ್ಕೆ ಹಾಜರಾದಾಗ ರವೀಂದ್ರನ್ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದ್ದು, ಲಿಫ್ಟ್ ಆಪರೇಟರ್‌ಗಳು ಸೇರಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ.

Continue Reading

Latest

Viral Video: ಸ್ಟ್ರೆಚರ್‌ ಇಲ್ಲದ ಸರ್ಕಾರಿ ಆಸ್ಪತ್ರೆ; ಪತಿಯನ್ನು ಬೆನ್ನ ಮೇಲೆ ಹೊತ್ತು ನಡೆದ ಪತ್ನಿ! ಮನಮಿಡಿಯುವ ವಿಡಿಯೊ

Viral Video: ಕಾಲಿನ ಮೂಳೆ ಮುರಿತಕ್ಕೊಳಗಾದ ಪತಿಗೆ ಚಿಕಿತ್ಸೆ ನೀಡಲು ಪತ್ನಿ ಭಿಂಡ್ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಳು. ಆದರೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಸಾಗಿಸಲು ಸ್ಟ್ರೆಚರ್ ಲಭ್ಯವಿರಲಿಲ್ಲ. ತನ್ನ ಗಂಡನನ್ನು ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಕರೆದುಕೊಂಡು ಹೋಗುವುದು ಅನಿವಾರ್ಯವಾದ ಕಾರಣ ಅವಳು ಅವನನ್ನು ಆಸ್ಪತ್ರೆಯ ಮೂಲಕ ಸುಮಾರು 50 ಮೀಟರ್ ದೂರ ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ನಡೆದಿದ್ದಾಳೆ. ಈ ವಿಡಿಯೊ ನಮ್ಮ ಆಡಳಿತ ವ್ಯವಸ್ಥೆಯ ಮೇಲಿನ ಆಕ್ರೋಶಕ್ಕೆ ಕಾರಣವಾಗಿದೆ.

VISTARANEWS.COM


on

Viral Video
Koo


ಸರ್ಕಾರಿ ಆಸ್ಪತ್ರೆಗಳು ಬಡವರಿಗಾಗಿ ಇದ್ದರೂ ಅವು ಬಡವರಿಗೆ ಸರಿಯಾಗಿ ಸೇವೆಗಳನ್ನು ಒದಗಿಸುತ್ತಿಲ್ಲ. ಬದಲಾಗಿ ಬಡವರ ಜೊತೆ ಅಲ್ಲಿನ ಸಿಬ್ಬಂದಿಗಳು ತುಂಬಾ ಕ್ರೂರವಾಗಿ ವರ್ತಿಸುತ್ತಾರೆ. ಅಂತಹದೊಂದು ಘಟನೆ ಇದೀಗ ಮಧ್ಯಪ್ರದೇಶದಲ್ಲಿ ಜಿಲ್ಲಾ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಮಹಿಳೆಯೊಬ್ಬರು ಗಾಯಗೊಂಡ ಪತಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದರು. ಆದರೆ ಅಲ್ಲಿ ಅವರಿಗಾದ ಗತಿ ನೋಡಿದರೆ ಸರ್ಕಾರಿ ಆಸ್ಪತ್ರೆಗಳ ಬೇಜವಾಬ್ದಾರಿತನ ಬಯಲಿಗೆ ಬರುತ್ತದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಟೀಕೆಗೆ ಕಾರಣವಾಗಿದೆ.

ಪತಿ ಕಾಲಿನ ಮೂಳೆ ಮುರಿತಕ್ಕೊಳಗಾದ ಹಿನ್ನೆಲೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲು ಪತ್ನಿ ಭಿಂಡ್ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾಳೆ. ಆದರೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಸಾಗಿಸಲು ಸ್ಟ್ರೆಚರ್ ಲಭ್ಯವಿರಲಿಲ್ಲ. ತನ್ನ ಗಂಡನನ್ನು ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಕರೆದುಕೊಂಡು ಹೋಗುವುದು ಅನಿವಾರ್ಯವಾದ ಕಾರಣ ಅವಳು ಅವನನ್ನು ಆಸ್ಪತ್ರೆಯ ಮೂಲಕ ಸುಮಾರು 50 ಮೀಟರ್ ದೂರ ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ನಡೆದಿದ್ದಾಳೆ. ಇದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. ಇದು ಸಾರ್ವಜನಿಕರ ಆಕ್ರೋಶ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳಿಗೆ ಕಾರಣವಾಗಿದೆ. ಹಾಗಾಗಿ ಆಸ್ಪತ್ರೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎನ್ನಲಾಗಿದೆ.

ಈ ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಟೀಕೆ ಮತ್ತು ಟ್ರೋಲ್‌ಗಳನ್ನು ಹುಟ್ಟುಹಾಕಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಜೀವ್ ಶ್ರೀವಾಸ್ತವ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಸಿವಿಲ್ ಸರ್ಜನ್ ಉಸ್ತುವಾರಿ ಡಾ.ಜೆ.ಎಸ್.ಯಾದವ್ ನಿರಾಕರಿಸಿದ್ದಾರೆ. ಸ್ಟ್ರೆಚರ್ ಅಲಭ್ಯತೆಯ ಹಿಂದಿನ ಕಾರಣಗಳನ್ನು ವಿವರಿಸಲು ಸಹಾಯಕ ವ್ಯವಸ್ಥಾಪಕ ಸಾಕೇತ್ ಚೌರಾಸಿಯಾ ಅವರಿಗೆ ನೋಟಿಸ್ ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ರೈಲ್ವೆ ಸೇತುವೆ ಮೇಲೆ ಫೋಟೊಶೂಟ್‌; ರೈಲು ಬಂದಾಗ 90 ಅಡಿ ಆಳಕ್ಕೆ ಜಿಗಿದ ದಂಪತಿ!

ಈ ಘಟನೆಯು ಭಿಂಡ್ ಜಿಲ್ಲಾ ಆಸ್ಪತ್ರೆಯ ಸೌಲಭ್ಯಗಳು ಮತ್ತು ಸೇವೆಗಳ ಸ್ಥಿತಿಯ ಬಗ್ಗೆ ಜನರಲ್ಲಿ ಕಳವಳವನ್ನು ಹೆಚ್ಚಿಸಿದೆ, ಸ್ಥಳೀಯರು ರೋಗಿಗಳ ಆರೈಕೆ ಮತ್ತು ಮೂಲಸೌಕರ್ಯಗಳಲ್ಲಿ ಸುಧಾರಣೆಗಳನ್ನು ತರುವಂತೆ ಒತ್ತಾಯಿಸಲಾಗಿದೆ. ಈ ಮಹಿಳೆಯಯನ್ನು ನೋಡಿದರೆ ಪುರಾಣದ ಸತಿ ಸಾವಿತ್ರಿ ನೆನಪಾಗುತ್ತಿದ್ದಾಳೆ.

Continue Reading

Latest

Sexual Abuse: ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ

Sexual Abuse: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪ್ರತಿಷ್ಠಿತ ಶಾಲಾ ಆವರಣದಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ಅದೇ ಶಾಲೆಯ ಕಿರಿಯ ತರಗತಿಯಲ್ಲಿ ಓದುತ್ತಿದ್ದ 12 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಅನಾರೋಗ್ಯದ ಕಾರಣ ಶಾಲೆಯ ಆರೋಗ್ಯ ಕೇಂದ್ರಕ್ಕೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದರು. ಆರೋಪಿ ವಿದ್ಯಾರ್ಥಿ, ವಿದ್ಯಾರ್ಥಿನಿಯನ್ನು ಶೌಚಾಲಯಕ್ಕೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನಂತೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Sexual Abuse
Koo

ಶಾಲಾ ಕಾಲೇಜುಗಳೆಂದರೆ ವಿದ್ಯಾ ದೇಗಲವಿದ್ದಂತೆ. ಅಲ್ಲಿಗೆ ಬರುವ (Sexual Abuse) ಮಕ್ಕಳು ವಿದ್ಯೆ ಕಲಿತು ತಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲು ಪ್ರಯತ್ನಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದೆ. ಶಾಲಾ ಶಿಕ್ಷಕರಿಂದ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರುವುದು ಮಾತ್ರವಲ್ಲ ತಮ್ಮ ಸಹಪಾಠಿಗಳಿಂದಲೂ ಅತ್ಯಾಚಾರಕ್ಕೆ (Rape Case) ಒಳಗಾಗುತ್ತಿದ್ದಾರೆ. ಅಂತಹದೊಂದು ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

ಜುಲೈ 13ರ ಶನಿವಾರ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪ್ರತಿಷ್ಠಿತ ಶಾಲಾ ಆವರಣದಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ಅದೇ ಶಾಲೆಯ ಕಿರಿಯ ತರಗತಿಯಲ್ಲಿ ಓದುತ್ತಿದ್ದ 12 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ನಂತರ ಈ ಘಟನೆಯ ಬಗ್ಗೆ ತಿಳಿದ ಶಾಲೆಯ ಪ್ರಾಂಶುಪಾಲರು ಬಹೋದಾಪುರ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.

Rape Case

ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಅಪ್ರಾಪ್ತ ವಯಸ್ಸಿನವರಾದ ಕಾರಣ ವಿಶೇಷ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಗ್ವಾಲಿಯರ್ ಎಎಸ್‍ಪಿ ನಿರಂಜನ್ ಶರ್ಮಾ, “ಗ್ವಾಲಿಯರ್ನ ಪ್ರತಿಷ್ಠಿತ ಶಾಲೆಯೊಂದರ ಪ್ರಾಂಶುಪಾಲರ ಗಮನಕ್ಕೆ ಬಂದಿದ್ದು, ಶಾಲೆಯ ವಿದ್ಯಾರ್ಥಿಯೊಬ್ಬ ಶಾಲೆಯ ಆವರಣದಲ್ಲಿ ಕಿರಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಶಾಲಾ ಪ್ರಾಂಶುಪಾಲರು ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ” ಎಂದು ತಿಳಿಸಿದ್ದಾರೆ.

ವರದಿ ಪ್ರಕಾರ, ಘಟನೆ ನಡೆದ ದಿನ, ಜುಲೈ 13ರಂದು ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಅನಾರೋಗ್ಯದ ಕಾರಣ ಶಾಲೆಯ ಆರೋಗ್ಯ ಕೇಂದ್ರಕ್ಕೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದರು. ಇದರ ನಂತರ ಆರೋಪಿ ವಿದ್ಯಾರ್ಥಿ, ವಿದ್ಯಾರ್ಥಿನಿಯನ್ನು ಶೌಚಾಲಯಕ್ಕೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ, ಸಂತ್ರಸ್ತೆ ಘಟನೆಯ ಬಗ್ಗೆ ಅಲ್ಲಿದ್ದ ನರ್ಸ್‍ಗೆ ಮಾಹಿತಿ ನೀಡಿದಳು. ಬಳಿಕ ಈ ವಿಷಯವು ಶಾಲಾ ಅಧಿಕಾರಿಗಳ ಗಮನಕ್ಕೆ ತಂದ ಕಾರಣ , ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Continue Reading

ಸಿನಿಮಾ

Soldier 2: ಮುಂದಿನ ವರ್ಷ ‘ಸೋಲ್ಜರ್ 2’ ಶೂಟಿಂಗ್; ಮತ್ತೆ ಒಂದಾಗಲಿದ್ದಾರೆಯೇ ಬಾಬಿ ಡಿಯೋಲ್-ಪ್ರೀತಿ ಜಿಂಟಾ?

ಆಕ್ಷನ್ -ಥ್ರಿಲ್ಲರ್ ಚಿತ್ರವಾದ ʼಸೋಲ್ಜರ್ʼ ʼಕುಚ್ ಕುಚ್ ಹೋತಾ ಹೈʼ ಅನಂತರ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯಾಗಿ ಚಿತ್ರವಾಗಿ ಹೊರಹೊಮ್ಮಿತ್ತು. ಅತ್ಯದ್ಭುತ ಸಂಗೀತದ ಜೊತೆಗೆ ನಟನಟಿಯ ನಡುವಿನ ಕೆಮೆಸ್ಟ್ರಿಯನ್ನು ಸಾಕಷ್ಟು ಪ್ರೇಕ್ಷಕರ ಮನ ಗೆದ್ದಿತ್ತು. ಚಿತ್ರದ ಜನಪ್ರಿಯತೆಗೆ ಇದು ಪ್ರಮುಖ ಕಾರಣವಾಗಿತ್ತು. ಕೆಲವು ಸಮಯದ ಹಿಂದೆಯಷ್ಟೇ ಬಾಬಿ ಡಿಯೋಲ್ ಅವರು ʼಸೋಲ್ಜರ್‌ʼನ ಮುಂದಿನ ಭಾಗದ (Soldier 2) ಬಗ್ಗೆ ಸುಳಿವು ನೀಡಿದ್ದರು. ನಿರ್ಮಾಪಕ ತೌರಾನಿ ಅವರು ಈಗ ಈ ಬಗ್ಗೆ ವಿವರ ನೀಡಿದ್ದಾರೆ.

VISTARANEWS.COM


on

By

Soldier 2
Koo

ಸೋಲ್ಜರ್ ಸೋಲ್ಜರ್ ಮೀಟಿ ಬಾತೆ ಬೋಲ್ ಕರ್.. 1998ರಲ್ಲಿ ಬಿಡುಗಡೆಯಾದ ರಮೇಶ್ ತೌರಾನಿಯವರ (Ramesh Taurani) ಸೋಲ್ಜರ್ (Soldier) ಚಿತ್ರದ ಈ ಹಾಡು ಆಗ ಬಹುಜನರ ಮನ ಗೆದ್ದಿತ್ತು. ಸೈನಿಕನೊಬ್ಬನ ಜೀವನ ಕಥೆಯನ್ನು ಆಧರಿಸಿ ಬಂದಿರುವ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸನ್ನೂ ಗಳಿಸಿತ್ತು. ಇದೀಗ ಇದರ ಮುಂದುವರಿದ ಭಾಗ ಸೋಲ್ಜರ್ 2ನ (Soldier 2) ಚಿತ್ರೀಕರಣ ಮುಂದಿನ ವರ್ಷ ಆರಂಭಗೊಳ್ಳಲಿದೆ ಎಂಬುದನ್ನು ಚಿತ್ರದ ನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ.

ಅಬ್ಬಾಸ್- ಮಸ್ತಾನ್ (Abbas-Mustan) ಮತ್ತು ಬಾಬಿ ಡಿಯೋಲ್ (Bobby Deol) ನಡುವಿನ ಜಂಟಿ ಸಹಯೋಗದಲ್ಲಿ ನಿರ್ಮಾಣಗೊಂಡ ಮೊದಲ ಚಿತ್ರ ಸೋಲ್ಜರ್. ಬಾಲಿವುಡ್ ನ ಕ್ಯೂಟ್ ನಟಿ ಪ್ರೀತಿ ಜಿಂಟಾ (Preity Zinta) ಈ ಚಿತ್ರದ ಮೂಲಕವೇ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು.


ಆಕ್ಷನ್ -ಥ್ರಿಲ್ಲರ್ ಚಿತ್ರವಾದ ಸೋಲ್ಜರ್ ಆ ವರ್ಷದಲ್ಲಿ ಕುಚ್ ಕುಚ್ ಹೋತಾ ಹೈ ಅನಂತರ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯಾಗಿ ಚಿತ್ರವಾಗಿ ಹೊರಹೊಮ್ಮಿತು. ಅತ್ಯದ್ಭುತ ಸಂಗೀತದ ಜೊತೆಗೆ ನಟನಟಿಯ ನಡುವಿನ ಕೆಮೆಸ್ಟ್ರಿಯನ್ನು ಸಾಕಷ್ಟು ಪ್ರೇಕ್ಷಕರ ಮನ ಗೆದ್ದಿತು. ಚಿತ್ರದ ಜನಪ್ರಿಯತೆಗೆ ಇದು ಪ್ರಮುಖ ಕಾರಣವಾಯಿತು.

ಕೆಲವು ಸಮಯದ ಹಿಂದೆಯಷ್ಟೇ ಬಾಬಿ ಡಿಯೋಲ್ ಅವರು ಸೋಲ್ಜರ್‌ನ ಉತ್ತರಭಾಗದ ಬಗ್ಗೆ ಸುಳಿವು ನೀಡಿದ್ದರು. ತೌರಾನಿ ಅವರು ಅದರ ಉತ್ತರಭಾಗವನ್ನು ನಿರ್ಮಿಸಲು ಬಯಸುತ್ತಿದ್ದಾರೆ ಎಂದು ಹೇಳಿದ್ದರು. ಇತ್ತೀಚೆಗೆ ಇಷ್ಕ್ ವಿಷ್ಕ್‌ನ ಉತ್ತರ ಭಾಗವನ್ನು ಇಷ್ಕ್ ವಿಷ್ಕ್ ರೀಬೌಂಡ್ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿದ ಹಿರಿಯ ನಿರ್ಮಾಪಕರು, ಸೋಲ್ಜರ್ ಫ್ರ್ಯಾಂಚೈಸ್‌ನೊಂದಿಗೆ ಬರುವ ಅವರ ಯೋಜನೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಖಚಿತಪಡಿಸಿದ್ದಾರೆ.


ಖಂಡಿತವಾಗಿಯೂ ಸೋಲ್ಜರ್‌ನ ಮುಂದಿನ ಭಾಗವನ್ನು ತಯಾರಿಸುತ್ತಿದ್ದೇವೆ. ಮುಂದಿನ ವರ್ಷ ಚಿತ್ರದ ಚಿತ್ರೀಕರಣ ಆರಂಭಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಹಿದ್ ಕಪೂರ್, ಅಮೃತಾ ರಾವ್ ಮತ್ತು ಶೆನಾಜ್ ಖಜಾನೆ ಇಶ್ಕ್ ವಿಷ್ಕ್ ರೀಬೌಂಡ್‌ನಲ್ಲಿ ಇಲ್ಲ. ಆದರೆ ಬಾಬಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಸೋಲ್ಜರ್ 2 ನಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಾರೆಯೇ ಎಂಬುದು ಖಚಿತವಾಗಿಲ್ಲ. ಕಥೆಯು ಹೇಗೆ ರೂಪುಗೊಳ್ಳುತ್ತದೆ ಎಂಬುದರ ಆಧಾರದ ಮೇಲೆ ಬಾಬಿ ಮತ್ತು ಪ್ರೀತಿ ಅದರ ಭಾಗವಾಗುತ್ತಾರೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು ಎಂದು ತೌರಾನಿ ತಿಳಿಸಿದ್ದಾರೆ.

ʼಕ್ಯಾ ಕೆಹೆನಾʼ ಚಿತ್ರ ಪ್ರೀತಿ ಜಿಂಟಾ ಅವರ ಮೊದಲ ಚಿತ್ರವಾಗಿದ್ದರೂ ʼಸೋಲ್ಜರ್ʼ ಪ್ರೀತಿ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತು. ತೌರಾನಿ ನಿರ್ಮಿಸಿದ ಚಿತ್ರಗಳಲ್ಲಿ ಮೆರಿ ಕ್ರಿಸ್‌ಮಸ್, ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಕೂಡ ಒಂದು, ಮೊದಲು ಪ್ರೀತಿ ಝಿಂಟಾ ಕ್ಯಾ ಕೆಹನಾಗೆ ಸಹಿ ಮಾಡಿದ್ದರು. ಆದರೆ ಚಿತ್ರ ತಡವಾಗಿ ಬಿಡುಗಡೆಯಾಯಿತು. ಕ್ಯಾ ಕೆಹೆನಾ ಮತ್ತು ಸೋಲ್ಜರ್ ನ ಶೂಟಿಂಗ್ ಕಾರ್ಯಗಳು ಏಕಕಾಲಕ್ಕೆ ನಡೆಯುತ್ತಿತ್ತು.


ಕ್ಯಾ ಕೆಹನಾ ಬಿಡುಗಡೆ ವಿಳಂಬಕ್ಕೆ ಕಾರಣ?

ಏಪ್ರಿಲ್ 1998ರ ವೇಳೆಗೆ ʼಸೋಲ್ಜರ್ʼ ಸಿದ್ಧವಾಗಿತ್ತು. ನಾವು ಅದನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ಬಯಸಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಕಾರಣ ವಿಧು ವಿನೋದ್ ಚೋಪ್ರಾ ನಿರ್ಮಿಸಿದ ʼಕರೀಬ್ʼ ಎಂಬ ಬಾಬಿ ಅಭಿನಯದ ಮತ್ತೊಂದು ಚಿತ್ರದ ಸಂಗೀತ ಹಕ್ಕುಗಳನ್ನು ನಾವು ಹೊಂದಿದ್ದೆವು. ಅದರ ಸಂಗೀತವನ್ನು ಜೂನ್‌ನಲ್ಲಿ ಮತ್ತು ಚಿತ್ರವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ನಾವು ಬಯಸಿದ್ದೇವು ಎಂದು ಚೋಪ್ರಾ ಹೇಳಿದರು. ಬಾಬಿಯ ಎರಡು ಚಿತ್ರಗಳು ಒಂದೇ ತಿಂಗಳಲ್ಲಿ ಬಿಡುಗಡೆಯಾಗುವುದು ನಮಗೂ ಇಷ್ಟವಿರಲಿಲ್ಲ ಎಂದು ತೌರಾನಿ ಹೇಳಿದರು.

ಇದನ್ನೂ ಓದಿ:Iti Acharya: ಬಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬ ಕನ್ನಡತಿ; ದಕ್ಷಿಣ ಭಾರತದ ಚಿತ್ರಗಳ ಬಳಿಕ ಹಿಂದಿಯಲ್ಲೂ ಅಭಿನಯ

ಎರಡೂ ಟ್ರೇಲರ್‌ಗಳು ಒಂದೇ ಸಮಯದಲ್ಲಿ ಬಿಡುಗಡೆಯಾದರೆ ಅವು ಹೇಗೆ ಇರುತ್ತವೆ ಎಂದು ನಾವು ಚಿಂತಿಸಿದ್ದೆವು. ಒಂದೇ ನಟ ನಟಿಸಿರುವ ಎರಡು ಚಿತ್ರಗಳಿಗೆ ಪ್ರಚಾರಕ್ಕೂ ತೊಂದರೆಯಾಗುತ್ತಿತ್ತು. ಅದಕ್ಕಾಗಿಯೇ ನಾವು ʼಕರೀಬ್‌ʼ ಮೊದಲೇ ಬಿಡುಗಡೆ ಮಾಡಬೇಕಾಗಿತ್ತು. ಹೀಗಾಗಿ ʼಕ್ಯಾ ಕೆಹನಾʼ ಚಿತ್ರದ ಬಿಡುಗಡೆಗೆ ಕೊಂಚ ವಿಳಂಬವಾಯಿತು ಎಂದು ಹಳೆಯ ಸಂಗತಿಯನ್ನು ವಿವರಿಸಿದರು.

Continue Reading
Advertisement
2nd Puc Result
ಪ್ರಮುಖ ಸುದ್ದಿ2 mins ago

‌2nd PUC Exam Result: ದ್ವಿತೀಯ ಪಿಯುಸಿ ಪರೀಕ್ಷೆ- 3 ಫಲಿತಾಂಶ ಪ್ರಕಟ, 23.73% ವಿದ್ಯಾರ್ಥಿಗಳು ಪಾಸ್

Stuck in Lift
Latest8 mins ago

Stuck in Lift: ಫ್ಯಾನಿಲ್ಲ, ಲೈಟಿಲ್ಲ, ಆಹಾರವಿಲ್ಲ; 2 ದಿನ ಲಿಫ್ಟ್‌ನಲ್ಲಿ ಸಿಲುಕಿದ್ದವನ ಸ್ಥಿತಿ ಹೇಗಿರಬಹುದು ಊಹಿಸಿ!

7th Pay Commission
ಕರ್ನಾಟಕ23 mins ago

7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿ 58% ಹೆಚ್ಚಳ; ಸಂಪೂರ್ಣ ಲೆಕ್ಕ ಕೊಟ್ಟ ಸಿದ್ದರಾಮಯ್ಯ

Viral Video
Latest27 mins ago

Viral Video: ಸ್ಟ್ರೆಚರ್‌ ಇಲ್ಲದ ಸರ್ಕಾರಿ ಆಸ್ಪತ್ರೆ; ಪತಿಯನ್ನು ಬೆನ್ನ ಮೇಲೆ ಹೊತ್ತು ನಡೆದ ಪತ್ನಿ! ಮನಮಿಡಿಯುವ ವಿಡಿಯೊ

7th Pay Commission
ಕರ್ನಾಟಕ37 mins ago

7th Pay Commission: ಆ.1ರಿಂದ ನೌಕರರ ವೇತನ ಹೆಚ್ಚಳ; ಸರ್ಕಾರಕ್ಕೆ ವಾರ್ಷಿಕ 20,208 ಕೋಟಿ ಹೆಚ್ಚುವರಿ ಹೊರೆ ಎಂದ ಸಿಎಂ

Sexual Abuse
Latest39 mins ago

Sexual Abuse: ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ

MAX Teaser
ಸ್ಯಾಂಡಲ್ ವುಡ್45 mins ago

MAX Teaser: ಬಹುನಿರೀಕ್ಷಿತ ʼಮ್ಯಾಕ್ಸ್ʼ ಚಿತ್ರದ ಟೀಸರ್‌ ಔಟ್‌; ರೌಡಿಗಳ ಅಡ್ಡದಲ್ಲಿ ನಿಂತು ಲಾಂಗ್‌ ಬೀಸಿದ ಸುದೀಪ್‌

Soldier 2
ಸಿನಿಮಾ48 mins ago

Soldier 2: ಮುಂದಿನ ವರ್ಷ ‘ಸೋಲ್ಜರ್ 2’ ಶೂಟಿಂಗ್; ಮತ್ತೆ ಒಂದಾಗಲಿದ್ದಾರೆಯೇ ಬಾಬಿ ಡಿಯೋಲ್-ಪ್ರೀತಿ ಜಿಂಟಾ?

Rain Effect
ಮಳೆ1 hour ago

Rain Effect : ಭಾರಿ ಮಳೆಗೆ ಶಿರೂರು ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿದ್ದ ಮಹಿಳೆ ಮೃತದೇಹ ಪತ್ತೆ

RCB
ಕ್ರೀಡೆ1 hour ago

RCB: ಆರ್​ಸಿಬಿ ಕಪ್​ ಗೆಲ್ಲದಿರಲು ನೈಜ ಕಾರಣ ತಿಳಿಸಿದ ತಂಡದ ಮಾಜಿ ಆಟಗಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ21 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌