Online Shopping Fraud: ಅಮೆಜಾನ್‌ನಲ್ಲಿ 55,000 ರೂ. ಮೊಬೈಲ್ ಫೋನ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಟೀ ಕಪ್! - Vistara News

Latest

Online Shopping Fraud: ಅಮೆಜಾನ್‌ನಲ್ಲಿ 55,000 ರೂ. ಮೊಬೈಲ್ ಫೋನ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಟೀ ಕಪ್!

Online Shopping Fraud: ಅಮೆಜಾನ್ ಆ್ಯಪ್‌ನಲ್ಲಿ ಹೈ ಎಂಡ್ ಮೊಬೈಲ್ ಫೋನ್ ಆರ್ಡರ್ ಮಾಡಿದ ಮುಂಬೈ ವ್ಯಕ್ತಿಗೆ ಅದರ ಬದಲು ಅರ್ಧ ಡಜನ್ ಟೀ ಕಪ್ ಡೆಲಿವರಿ ಆಗಿದೆ. ಹೀಗಾಗಿ ಆ ವ್ಯಕ್ತಿ ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಸಂಸ್ಥೆಯೊಂದರಲ್ಲಿ ಡೆಪ್ಯೂಟಿ ಎಂಜಿನಿಯರ್ ಆಗಿರುವ ಅಮರ್ ಚವಾಣ್ ಅವರು ಅಮೆಜಾನ್‌ನಿಂದ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಮೊಬೈಲ್ ಫೋನ್ ಅನ್ನು ಆರ್ಡರ್ ಮಾಡಿ ಜುಲೈ 13 ರಂದು ಆನ್ಲೈನ್‌ನಲ್ಲಿ 54,999 ರೂ.ಗಳನ್ನು ಪಾವತಿಸಿದ್ದಾರೆ. ಎರಡು ದಿನಗಳ ನಂತರ, ಪಾರ್ಸೆಲ್ ಬಂದಿತು. ಆದರೆ ಅವರು ಅದನ್ನು ತೆರೆದಾಗ, ಆರು ಚಹಾ ಕಪ್‌ಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

VISTARANEWS.COM


on

Amazoan Fraud
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಮುಂಬೈ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮಗೆ ಬೇಕಾದ ವಸ್ತುಗಳನ್ನು ಮಾರುಕಟ್ಟೆಗೆ ಹೋಗಿ ಖರೀದಿಸುವ ಬದಲು ಆನ್‌ಲೈನ್ ಆ್ಯಪ್‌ಗಳಲ್ಲೇ ಆರ್ಡರ್ ಮಾಡಿ ಖರೀದಿಸುತ್ತಾರೆ. ಇದರಿಂದ ಅವರ ಕೆಲಸ ಸುಲಭವಾಗುತ್ತದೆ ನಿಜ ಆದರೆ ಅವರಿಗೆ ಇದರ ಮೋಸದ ಬಗ್ಗೆ ಅರಿವಿರುವುದಿಲ್ಲ. ಅದರಲ್ಲೂ ಅಮೆಜಾನ್ (Online Shopping Fraud) ಆನ್‌ಲೈನ್ ಡೆಲಿವರಿ ಆ್ಯಪ್ ಬಗ್ಗೆ ಈ ಹಿಂದೆ ಹಲವು ದೂರು ಕೇಳಿ ಬಂದಿತ್ತು. ಇದೀಗ ಅಮೆಜಾನ್ ಬಗ್ಗೆ ಮತ್ತೊಂದು ದೂರು ದಾಖಲಾಗಿದೆ.

ಅಮೆಜಾನ್ ಆ್ಯಪ್‌ನಲ್ಲಿ ಹೈ ಎಂಡ್ ಮೊಬೈಲ್ ಫೋನ್ ಆರ್ಡರ್ ಮಾಡಿದ ಮುಂಬೈ ವ್ಯಕ್ತಿಗೆ ಅದರ ಬದಲು ಅರ್ಧ ಡಜನ್ ಟೀ ಕಪ್ ಡೆಲಿವರಿ ಆಗಿದೆ. ಹೀಗಾಗಿ ಆ ವ್ಯಕ್ತಿ ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂಸ್ಥೆಯೊಂದರಲ್ಲಿ ಡೆಪ್ಯೂಟಿ ಎಂಜಿನಿಯರ್ ಆಗಿರುವ ಅಮರ್ ಚವಾಣ್ ಅವರು ಅಮೆಜಾನ್‌ನಿಂದ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಮೊಬೈಲ್ ಫೋನ್ ಅನ್ನು ಆರ್ಡರ್ ಮಾಡಿ ಜುಲೈ 13ರಂದು ಆನ್‌ಲೈನ್‌ನಲ್ಲಿ 54,999 ರೂ.ಗಳನ್ನು ಪಾವತಿಸಿದ್ದಾರೆ. ಎರಡು ದಿನಗಳ ನಂತರ, ಪಾರ್ಸೆಲ್ ಬಂದಿತು. ಆದರೆ ಅವರು ಅದನ್ನು ತೆರೆದಾಗ ಆರು ಚಹಾ ಕಪ್‌ಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

ಈ ಬಗ್ಗೆ ಅವರು ಅಮೆಜಾನ್ ಮತ್ತು ಮಾರಾಟಗಾರ ಸಂಸ್ಥೆಯನ್ನು ಸಂಪರ್ಕಿಸಿದರು, ಆದರೆ ಯಾವುದೇ ತೃಪ್ತಿಕರ ಉತ್ತರ ಸಿಗಲಿಲ್ಲ. ಹಾಗಾಗಿ ಅವರು ವಂಚನೆ ಆರೋಪದ ಮೇಲೆ ಅಮೆಜಾನ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅಮೆಜಾನ್‌ನಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗಿದೆ.

ಆದರೆ, ಅಮೆಜಾನ್ ನಲ್ಲಿ ಇಂತಹ ಹಗರಣಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವ್ಯಕ್ತಿಯೊಬ್ಬ ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ ‘ವಿವೋ ವೈ20ಎ’ ಮೊಬೈಲ್‌ಗಾಗಿ ಆರ್ಡರ್ ಮಾಡಿದ್ದಾನೆ. ಆದರೆ ಡೆಲಿವರಿ ಆದ ವಸ್ತು ಕಂಡು ಶಾಕ್ ಆಗಿದ್ದಾನೆ. ಅದರಲ್ಲಿ ಮೊಬೈಲ್ ಬದಲು ಸಾಬೂನು ಸಿಕ್ಕಿದೆ. ತಕ್ಷಣ ಆನ್ಲೈನ್ ಅಪ್ಲಿಕೇಶನ್‌ನ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದ್ದಾರೆ. ಆದರೆ ಅವರಿಂದ ಯಾವುದೇ ಸಹಾಯ ಸಿಗದ ಕಾರಣ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಬಟ್ಟೆ ಹರಿದುಕೊಂಡು ಪುರುಷನ ಮೇಲೆ ಮುಗಿಬಿದ್ದ ಮಹಿಳೆ! ಅಬ್ಬಾ, ಎಂಥ ಜಗಳಗಂಟಿ ಎಂದ ನೆಟ್ಟಿಗರು!

ಅಲ್ಲದೇ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಮೆಜಾನ್ ಕಂಪನಿಯಿಂದ ಪ್ರತಿಕ್ರಿಯೆ ಬಂದಿತ್ತು ಹಣ ವಾಪಸ್ ಕೊಡಲಾಗಿದೆ ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೇ ಬೆಂಗಳೂರಿನ ದಂಪತಿ ಎಕ್ಸ್ ಬಾಕ್ಸ್ ಕಂಟ್ರೋಲರ್ ಎನ್ನುವ ಪ್ರಾಡಕ್ಟ್ ಅನ್ನು ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದರು. ಅಮೆಜಾನ್ ಸಂಸ್ಥೆ ಪಾರ್ಸಲ್ ಅನ್ನು ಡೆಲಿವರಿ ಮಾಡಿತ್ತು. ಆದರೆ ಪಾರ್ಸಲ್ ಓಪನ್ ಮಾಡಿದರೆ ಬಾಕ್ಸ್ ನಿಂದ ಜೀವಂತ ನಾಗರಹಾವು ಹೊರ ಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Pralhad Joshi: ಕೇಂದ್ರ ಸರ್ಕಾರದಿಂದ 80 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ; ಪ್ರಲ್ಹಾದ್‌ ಜೋಶಿ

Pralhad Joshi: ಕೇಂದ್ರ ಸರ್ಕಾರ ದೇಶದ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಿಸುತ್ತಿದೆ ಎಂದು ತಿಳಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿದ್ದು, ಇದರ ಬಜೆಟ್ 11.80 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ.

VISTARANEWS.COM


on

Central government to distribute free food grains to 80 crore beneficiaries of the country says Pralhad Joshi
Koo

ನವದೆಹಲಿ: ಕೇಂದ್ರ ಸರ್ಕಾರ ದೇಶದ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಿಸುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು.

ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, “ಒಂದು ರಾಷ್ಟ್ರ ಒಂದು ಪಡಿತರ ಚೀಟಿ” ಮತ್ತು “ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ” ಯಡಿ ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Pralhad Joshi: ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲು; ಪ್ರಲ್ಹಾದ್‌ ಜೋಶಿ

2019ರಲ್ಲಿ ಶುರುವಾದ “ಒಂದು ರಾಷ್ಟ್ರ ಒಂದು ಪಡಿತರ ಚೀಟಿ” ಯೋಜನೆಯಡಿ ಸುಮಾರು 145 ಕೋಟಿ ವಹಿವಾಟು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಸಚಿವರು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿದ್ದು, ಇದರ ಬಜೆಟ್ 11.80 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ವಿವರಿಸಿದರು.

497 ಲಕ್ಷ ಮೆ. ಟನ್ ಆಹಾರ ಧಾನ್ಯ ವಿತರಣೆ

2023-24ರಲ್ಲಿ “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ” ಯೋಜನೆಯಡಿ, ಸುಮಾರು 81.35 ಕೋಟಿ ಫಲಾನುಭವಿಗಳಿಗೆ 497 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Job Alert: ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಐಟಿಐ ಪಾಸಾದವರು ಅಪ್ಲೈ ಮಾಡಿ

ಎಥೆನಾಲ್ ಉತ್ಪಾದನೆ ವೃದ್ದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಥೆನಾಲ್ ಉತ್ಪಾದನಾ ಸಾಮರ್ಥ್ಯ 1,589 ಕೋಟಿ ಲೀಟರ್‌ಗೆ ಏರಿದೆ. ಭಾರತದ ದೇಶೀಯ ಅಗತ್ಯಗಳನ್ನು ಪೂರೈಸಲು ಸಾಕಾಗುವಷ್ಟಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಇದೇ ವೇಳೆ ತಿಳಿಸಿದರು.

Continue Reading

ಸಿನಿಮಾ

Movies on Israel: ಪ್ಯಾಲೇಸ್ತಿನ್‌ ಉಗ್ರರ ವಿರುದ್ಧ ಇಸ್ರೇಲ್ ಸೇಡು! ಮೈನವಿರೇಳಿಸುವ ಈ ಸಿನೆಮಾಗಳನ್ನು ನೋಡಲೇಬೇಕು!

Movies on Israel: ಯುದ್ಧದ ಸನ್ನಿವೇಶವನ್ನು ಹಲವಾರು ಚಲನಚಿತ್ರಗಳು ಸೆರೆ ಹಿಡಿದಿದ್ದರೂ ಅದು ಜನಸಾಮಾನ್ಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ಕಡಿಮೆ. ಆದರೆ ಈ ಐದು ಚಲನಚಿತ್ರಗಳು ಮಾತ್ರ ಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷದಿಂದ (Israel-Palestine Conflict) ಆಗುತ್ತಿರುವ ಪ್ರಮುಖ ಸಮಸ್ಯೆಗಳು ಮತ್ತು ಸಂಘರ್ಷದ ಮಧ್ಯೆ ವಾಸಿಸುವ ಜನರ ಬದುಕನ್ನು ತೆರೆದಿಟ್ಟಿದೆ. ತಮ್ಮ ದೇಶದ ಮೇಲೆ, ತಮ್ಮ ಜನರ ಮೇಲೆ ದಾಳಿ ಮಾಡುವ ಪ್ಯಾಲೇಸ್ತಿನ್‌ ಉಗ್ರರ ಮೇಲೆ ಇಸ್ರೇಲ್‌ ಬೇಹುಗಾರಿಕೆ ಪಡೆ ಪ್ರತಿದಾಳಿ ನಡೆಸುವ, ಅವರನ್ನು ಹುಡುಕಿ ಹುಡುಕಿ ನಾಶಪಡಿಸುವ ದೃಶ್ಯಗಳು ರೋಚಕವಾಗಿವೆ.

VISTARANEWS.COM


on

By

Movies on Israel
Koo

ಇಸ್ರೇಲ್-ಪ್ಯಾಲೇಸ್ತಿನ್‌ ಸಂಘರ್ಷ (Israel-Palestine Conflict) ಕೆಲವು ತಿಂಗಳುಗಳಿಂದ (Movies on Israel) ಉಲ್ಬಣಗೊಂಡಿದೆ. ಇದರಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ವಸತಿ ಕಳೆದುಕೊಂಡು ಬೇರೆ ಸ್ಥಳಗಳಿಗೆ ವಲಸೆ ಹೋಗಿದ್ದಾರೆ. ಯುದ್ಧದ (war) ಸನ್ನಿವೇಶವನ್ನು ಹಲವಾರು ಚಲನಚಿತ್ರಗಳು (film) ಸೆರೆ ಹಿಡಿದಿದ್ದರೂ ಅದು ಜನಸಾಮಾನ್ಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ಕಡಿಮೆ. ಆದರೆ ಈ ಐದು ಚಲನಚಿತ್ರಗಳು ಮಾತ್ರ ಯುದ್ಧದ ಚಿತ್ರಣವನ್ನು ಮನಮುಟ್ಟುವಂತೆ ಕಟ್ಟಿ ಕೊಟ್ಟಿದೆ.

ಮ್ಯೂನಿಚ್

2005ರ ಈ ಚಲನಚಿತ್ರವು ಪಶ್ಚಿಮ ಜರ್ಮನಿಯ ಮ್ಯೂನಿಚ್‌ನಲ್ಲಿ 1972ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ 11 ಇಸ್ರೇಲ್ ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ಅಪಹರಣ-ಹತ್ಯೆಯನ್ನು ಆಧರಿಸಿದೆ.


ಹೆಸರಾಂತ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶನದ ಈ ಚಲನಚಿತ್ರವು ‘ಬ್ಲ್ಯಾಕ್ ಸೆಪ್ಟೆಂಬರ್’ ಎಂಬ ಪ್ಯಾಲೆಸ್ತೀನಿಯನ್ ಭಯೋತ್ಪಾದಕ ಸಂಘಟನೆ ನಡೆಸಿದ ಭೀಕರ ಹತ್ಯೆಯ ಅನಂತರದ ಪರಿಣಾಮಗಳನ್ನು ಬಿಂಬಿಸಿದೆ. ಸೇಡಿನ ಕಥೆಯನ್ನು ಆಧರಿಸಿರುವ ಈ ಚಿತ್ರವು ಮುಯ್ಯಿಗೆ ಮುಯ್ಯಿ ಎಂಬಂತೆ ‘ಕಣ್ಣಿಗೆ ಕಣ್ಣು’ ಎಂಬುದನ್ನು ಉಲ್ಲೇಖಿಸುತ್ತದೆ. ತನ್ನ ದೇಶದ ಕ್ರೀಡಾಪಟುಗಳ ಬರ್ಬರ ಹತ್ಯೆ ನಡೆಸಿದ ಉಗ್ರರನ್ನು ಇಸ್ರೇಲ್‌ ಬೇಹುಗಾರಿಕೆ ಪಡೆ ಹುಡುಕಿ ಹುಡುಕಿ ಕೊಲ್ಲುವ ಸನ್ನಿವೇಶಗಳು ರೋಮಾಂಚನಗೊಳಿಸುತ್ತವೆ.

ರೈಡ್ ಆನ್ ಎಂಟೆಬ್ಬೆ

1977ರ ಈ ಚಲನಚಿತ್ರವು ʼಆಪರೇಷನ್ ಎಂಟೆಬ್ಬೆʼ ಮೇಲೆ ಆಧರಿತವಾಗಿದೆ. ನಾಲ್ವರು ಪ್ಯಾಲೇಸ್ತಿನಿಯನ್‌ ಭಯೋತ್ಪಾದಕರು ಹಲವಾರು ಇಸ್ರೇಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಫ್ರಾನ್ಸ್ ಏರ್‌ಬಸ್ ಎ300 ಅನ್ನು ಹೈಜಾಕ್ ಮಾಡಿದ ಅನಂತರ ಇಸ್ರೇಲ್ ಸರ್ಕಾರವು ಯೋಜಿಸಿದ ರಕ್ಷಣಾ ಕಾರ್ಯಾಚರಣೆ ಇದಾಗಿದೆ.


ಚಿತ್ರವು ಉಗಾಂಡಾದ ಎಂಟೆಬ್ಬೆ ವಿಮಾನ ನಿಲ್ದಾಣದಿಂದ ಡೇರ್‌ಡೆವಿಲ್ ರಕ್ಷಣಾ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸುತ್ತದೆ. ‘ಆಪರೇಷನ್ ಥಂಡರ್ಬೋಲ್ಟ್’ ಶೀರ್ಷಿಕೆಯ ಕಾರ್ಯಾಚರಣೆಯು ಅತ್ಯಂತ ಕಷ್ಟಕರವಾಗಿತ್ತು. ಯಾಕೆಂದರೆ ಭಯೋತ್ಪಾದಕರು ಉಗಾಂಡಾದ ಅಧ್ಯಕ್ಷ ಇದಿ ಅಬಿನ್ ಅವರ ಬೆಂಬಲವನ್ನು ಹೊಂದಿದ್ದರು. ಆದರೂ ಇಸ್ರೇಲ್‌ ಯೋಧರು ಭಾರಿ ಸಾಹಸದಿಂದ ಮೇಲುಗೈ ಸಾಧಿಸಿದರು. ಈ ಚಿತ್ರವು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದಿದೆ.

ಅಜಾಮಿ

ಈ ಚಲನಚಿತ್ರದ ಕತೆಯನ್ನು ಪ್ಯಾಲೇಸ್ತಿನಿಯನ್ ಸ್ಕ್ಯಾಂಡರ್ ಕಾಪ್ಟಿ ಮತ್ತು ಇಸ್ರೇಲ್ ಯಹೂದಿ ಯಾರೋನ್ ಶಾನಿ ಬರೆದಿದ್ದಾರೆ. ಇದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಜೀವನದ ಸುತ್ತ ಸುತ್ತುತ್ತದೆ.


ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿರುವ ಜಾಫಾ ಚಿತ್ರದ ಕೇಂದ್ರ ಬಿಂದು. ಇಲ್ಲಿ ಹಲವಾರು ಪಾತ್ರಗಳಿವೆ. ಅವರೆಲ್ಲರೂ ಬಡವರು ಮತ್ತು ಸಾಕಷ್ಟು ಸಂಘರ್ಷವನ್ನು ಎದುರಿಸುತ್ತಾರೆ. ಇಸ್ರೇಲ್ – ಅರಬ್ ಜಗತ್ತಿನಲ್ಲಿ ಜೀವನದ ಸಂಪೂರ್ಣ ವಾಸ್ತವ, ಹಿಂಸೆ, ಪ್ರೀತಿ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.

ಪ್ಯಾರಡೈಸ್ ನೌ

ಈ ಚಿತ್ರವು ಟೆಲ್ ಅವೀವ್‌ನ ಮಿಲಿಟರಿ ಚೆಕ್‌ಪಾಯಿಂಟ್‌ನಲ್ಲಿ ಬಾಂಬ್‌ಗಳನ್ನು ಸ್ಫೋಟಿಸುವ ಕಾರ್ಯವನ್ನು ವಹಿಸಿಕೊಂಡಿರುವ ಇಬ್ಬರು ಪ್ಯಾಲೇಸ್ತಿನಿಯನ್ ಆತ್ಮಹತ್ಯಾ ಬಾಂಬರ್‌ಗಳನ್ನು ಆಧರಿಸಿದೆ. ಮದುವೆಯಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಇಬ್ಬರು ಇಸ್ರೇಲ್ ಪ್ರಜೆಗಳಂತೆ ವೇಷ ಧರಿಸಿ ಸ್ಫೋಟಕ್ಕೆ ಮುಂದಾಗಿದ್ದರು.


ಇಸ್ರೇಲ್ ಗಡಿ ದಾಟುವಾಗ ನಡೆಯುವ ಘಟನೆಗಳು, ಆತ್ಮಹತ್ಯಾ ಬಾಂಬರ್‌ಗಳಾಗಲು ಕಾರಣವಾಗುವ ಭಾವನಾತ್ಮಕ ಮತ್ತು ಮಾನಸಿಕ ಅಂಶಗಳನ್ನು ಸೂಕ್ಷ್ಮವಾಗಿ ಸಿನೆಮಾದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಇದು ಅತ್ಯುತ್ತಮ ವಿದೇಶಿ ಚಿತ್ರ ಎಂಬ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿದೆ.

ಲೆಮನ್ ಟ್ರೀ

ಪ್ಯಾಲೇಸ್ತಿನಿಯನ್ ಮಹಿಳೆಯ ಹೋರಾಟದ ಕಟುವಾದ ಮತ್ತು ಸುಂದರವಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇಸ್ರೇಲ್ ಅಧಿಕಾರಿಗಳು ತನ್ನ ನಿಂಬೆ ತೋಟದಲ್ಲಿನ ಮರಗಳನ್ನು ಕಿತ್ತು ಹಾಕುವುದನ್ನು ತಡೆಯುವುದು ಈ ಚಿತ್ರದ ಸಾರ. ಪ್ರಪಂಚದಾದ್ಯಂತದ ವಿವಿಧ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರವನ್ನು ಪ್ರದರ್ಶಿಸಲಾಗಿದೆ. ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ನವೊನ್ ಅವರು ಪ್ಯಾಲೇಸ್ತಿನಿಯನ್ ಮಹಿಳೆ ಸಲ್ಮಾ ಅವರ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದರು.


ಇದನ್ನೂ ಓದಿ: Pushpa 2: ಪುಷ್ಪ 2 ಕ್ಲೈ ಮ್ಯಾಕ್ಸ್‌ ದೃಶ್ಯ ಲೀಕ್‌; ಕೋಪ ಹೊರ ಹಾಕಿದ ಅರ್ಜುನ್‌ ಫ್ಯಾನ್ಸ್‌!

ಸಲ್ಮಾ ಅವರ ನಿಂಬೆ ತೋಟ ಅವರಿಗೆ ರಹಸ್ಯವಾಗಿ ಕಾಣುತ್ತದೆ ಮತ್ತು ಬೆದರಿಕೆಯನ್ನು ಒಡ್ಡಿದಂತೆ ಭಾಸವಾಗುತ್ತದೆ. ಹೀಗಾಗಿ ಅಧಿಕಾರಿಗಳು ಎಲ್ಲಾ ಮರಗಳನ್ನು ಕಿತ್ತುಹಾಕಲು ಯೋಜಿಸುತ್ತಾರೆ. ಆದರೆ ಸಲ್ಮಾ ಮತ್ತು ಅವರ ವಕೀಲರು ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ತೆಗೆದುಕೊಳ್ಳಲು ನಿರ್ಧರಿಸುತ್ತಾರೆ. ಚಲನಚಿತ್ರವು ವಿವಿಧ ವಿಷಯಗಳ ಮೇಲೆ ನೆಲೆಸಿದೆ. ಮಾನವ ಸಹಾನುಭೂತಿ ಮತ್ತು ಭಾವನೆಯ ಮೇಲೂ ಬೆಳಕು ಚೆಲ್ಲಿದೆ.

Continue Reading

Latest

Viral Video: ಜಲಾವೃತ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಮಹಿಳೆಗೆ ಪುಂಡರ ಕಿರುಕುಳ; ವಿಡಿಯೊ ನೋಡಿ ಜನಾಕ್ರೋಶ

Viral Video: ಉತ್ತರ ಪ್ರದೇಶದ ಲಕ್ನೊದಲ್ಲಿ ಜಲಾವೃತ ರಸ್ತೆಯಲ್ಲಿ ಬೈಕ್‍ನಲ್ಲಿ ಪುರುಷನೊಂದಿಗೆ ಹಿಂಬದಿಯಲ್ಲಿ ಮಹಿಳೆ ಕುಳಿತು ಪ್ರಯಾಣಿಸುತ್ತಿರುವಾಗ ಆಕೆಗೆ ಪುಂಡರ ಗುಂಪು ಕಿರುಕುಳ ನೀಡಿದೆ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಗಮನ ಸೆಳೆದಿದೆ ಮತ್ತು ಟೀಕೆಗೆ ಗುರಿಯಾಗಿದೆ. ಉತ್ತರ ಪ್ರದೇಶದ ರಾಜಧಾನಿಯ ತಾಜ್ ಹೋಟೆಲ್ ಸೇತುವೆಯ ಕೆಳಗೆ ಈ ಘಟನೆ ನಡೆದಿದೆ. ಈ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.

VISTARANEWS.COM


on

Viral Video
Koo


ದೇಶದ ಹಲವೆಡೆ ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಎಲ್ಲೆಡೆ ಪ್ರವಾಹ ಸೃಷ್ಟಿಯಾಗಿದೆ. ರಸ್ತೆಗಳಲ್ಲಿ, ಮನೆಯ ಸುತ್ತಮುತ್ತ, ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಪರಿಸ್ಥಿತಿ ಹೀಗಿರುವಾಗ ಪ್ರವಾಹದಿಂದ ತುಂಬಿದ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಂಕಷ್ಟದಲ್ಲಿ ಸಹಾಯ ಮಾಡುವುದು ಮಾನವೀಯತೆ. ಆದರೆ ಇಲ್ಲೊಂದು ಪುರುಷರು ಗುಂಪು ಮೋಟಾರ್ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಈ ಘಟನೆ ಬುಧವಾರ ಲಕ್ನೋದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಉತ್ತರ ಪ್ರದೇಶದ ಲಕ್ನೊದಲ್ಲಿ ಜಲಾವೃತ ರಸ್ತೆಯಲ್ಲಿ ಬೈಕ್‍ನಲ್ಲಿ ಪುರುಷನೊಂದಿಗೆ ಹಿಂಬದಿಯಲ್ಲಿ ಮಹಿಳೆ ಕುಳಿತು ಪ್ರಯಾಣಿಸುತ್ತಿರುವಾಗ ಆಕೆಗೆ ಪುರುಷರ ಗುಂಪು ಕಿರುಕುಳ ನೀಡಿದೆ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಗಮನ ಸೆಳೆದಿದೆ ಮತ್ತು ಟೀಕೆಗೆ ಗುರಿಯಾಗಿದೆ.ಯುಪಿ ರಾಜಧಾನಿಯ ತಾಜ್ ಹೋಟೆಲ್ ಸೇತುವೆಯ ಕೆಳಗೆ ಬುಧವಾರ ಹಗಲಿನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವಿಡಿಯೊದಲ್ಲಿ, ನೀರು ತುಂಬಿದ ರಸ್ತೆಯಲ್ಲಿ ಸೇತುವೆಯ ಕೆಳಗೆ ಜಮಾಯಿಸಿದ ಪುರುಷರ ಗುಂಪು ಮಹಿಳೆ ಮತ್ತು ಪುರುಷ ಸವಾರಿ ಮಾಡುತ್ತಿದ್ದ ಬೈಕ್ ಅನ್ನು ಸುತ್ತುವರಿದಿದ್ದಾರೆ. ಅವರು ಪ್ರವಾಹದ ರಸ್ತೆಯನ್ನು ದಾಟುತ್ತಿದ್ದಾಗ, ಆಗಲೇ ಅಲ್ಲಿದ್ದ ಪುರುಷರ ಗುಂಪು ಅವರ ಮೇಲೆ ನೀರನ್ನು ಚಿಮುಕಿಸಲು ಪ್ರಾರಂಭಿಸಿದರು. ಭಾರಿ ಮಳೆಯ ಸಮಯದಲ್ಲಿ ಪ್ರವಾಹದ ರಸ್ತೆಯಲ್ಲಿ, ಪುರುಷರ ಈ ಕೃತ್ಯದಿಂದ ಇವರಿಬ್ಬರಿಗೆ ರಸ್ತೆಯನ್ನು ದಾಟಲು ಕಷ್ಟವಾಯಿತು. ಅಲ್ಲದೇ ಕೆಲವು ಪುರುಷರು ಬೈಕ್ ಅನ್ನು ಹಿಂದಿನಿಂದ ಎಳೆಯಲು ಪ್ರಯತ್ನಿಸಿದರು, ಇದರಿಂದ ಅವರಿಬ್ಬರು ಬೈಕ್‍ನಿಂದ ಕೆಳಗೆ ಬಿದ್ದಿದ್ದಾರೆ. ಮಹಿಳೆ ಬೈಕಿನಿಂದ ಬಿದ್ದಾಗ, ಒಬ್ಬ ವ್ಯಕ್ತಿ ಅವಳಿಗೆ ಎದ್ದೇಳಲು ಸಹಾಯ ಮಾಡಿದನು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಸೇತುವೆಯ ಕೆಳಗೆ ಇದ್ದ ಜನಸಮೂಹವನ್ನು ಚದುರಿಸಿದರು.

ಇದನ್ನೂ ಓದಿ: ಕೆಸರು ಗದ್ದೆಯಲ್ಲಿ ಹೊರಳಾಡಿದ ದಂಪತಿ; ವೈರಲ್ ಆಯ್ತು ಇವರಿಬ್ಬರ ನಾಗಿನಿ ಡ್ಯಾನ್ಸ್‌!

ಜಲಾವೃತ ರಸ್ತೆಯಲ್ಲಿ ಪುರುಷ ಮತ್ತು ಮಹಿಳೆಗೆ ಕಿರುಕುಳ ನೀಡಿದ ಪುರುಷರನ್ನು ಗುರುತಿಸಲು ಪೊಲೀಸರು ಮುಂದಾಗಿದ್ದಾರೆ. ಈ ವಿಡಿಯೊ ನೋಡಿ ಹಲವಾರು ಸೋಶಿಯಲ್ ಮೀಡಿಯಾ ಬಳಕೆದಾರರು ಪುರುಷರ ನಡವಳಿಕೆಯ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಮತ್ತು ಘಟನೆಯನ್ನು ಟೀಕಿಸಿದಾರೆ.

Continue Reading

Latest

Viral Video: ಪ್ರೀತಿಸಿದ ಹುಡುಗಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ; ಗಾಬರಿಗೊಳಿಸುವ ವಿಡಿಯೊ

Viral Video: ಪ್ರೀತಿಗೆ ನಂಬಿಕೆಯೇ ತಳಹದಿ. ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ ಎಂದರೆ ಅವರ ಎಲ್ಲಾ ಸಮಸ್ಯೆಗಳು, ಅವರ ಹಿಂದಿನ ಕಹಿ ಘಟನೆಗಳನ್ನು ಒಪ್ಪಿಕೊಂಡು ಜೊತೆಯಾಗಿ ಬಾಳಬೇಕು.ಕೆಲವೊಮ್ಮೆ ಯಾವುದೋ ಕಹಿಯ ನೆನಪನ್ನು ಹೇಳದೇ ಹೋದರೆ ಅದನ್ನು ತಪ್ಪಾಗಿ ತಿಳಿಯದೇ ಇಬ್ಬರೂ ಕುಳಿತು ಪರಸ್ಪರ ಚರ್ಚಿಸಿ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು. ಆದರೆ ಇಲ್ಲೊಬ್ಬ ಪ್ರೇಮಿ ತನ್ನ ಗೆಳತಿಗೆ ಈ ಹಿಂದೆ ಸಂಬಂಧವಿದೆ ಎಂದು ತಿಳಿದ ನಂತರ ಆಕೆಯನ್ನು ಹಿಗ್ಗಾಮುಗ್ಗಾ ಹೊಡೆದಿದ್ದಾನೆ. ಈ ವಿಡಿಯೊ ದೀಪಿಕಾ ಭಾರದ್ವಾಜ್ ಹಂಚಿಕೊಂಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

VISTARANEWS.COM


on

Viral Video
Koo


ಸಂಬಂಧದಲ್ಲಿ ನಂಬಿಕೆ, ಪ್ರೀತಿ ಬಹಳ ಮುಖ್ಯವಾಗುತ್ತದೆ. ಪ್ರೀತಿ, ನಂಬಿಕೆ ಇಲ್ಲದ ಸಂಬಂಧವನ್ನು ಮುಂದುವರಿಸುವುದು ಒಳ್ಳೆಯದಲ್ಲ. ಇದರಿಂದ ನಮ್ಮ ಜೀವನ ನಾವೇ ಹಾಳುಮಾಡಿಕೊಂಡಂತಾಗುತ್ತದೆ. ಕೆಲವರ ಜೀವನದಲ್ಲಿ ಈ ಹಿಂದೆ ಲವ್ ಆಗಿ ಬ್ರೇಕ್ ಅಪ್ ಕೂಡ ಆಗಿರಬಹುದು. ಆದರೆ ನಾವು ಪ್ರೀತಿಸಿದವರು ನಮ್ಮನ್ನು ಮಾತ್ರ ಪ್ರೀತಿಸಿರಬೇಕು ಎಂಬ ಮನೋಭಾವ ಕೆಲವು ಯುವಕರಲ್ಲಿರುತ್ತದೆ. ಹಾಗಾಗಿ ಅಂತವರೊಂದಿಗೆ ಬದುಕುವುದು ಬಾರೀ ಕಷ್ಟ. ಅಂತಹದೊಂದು ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ (Viral Video) ಆಗಿದೆ.

ತನ್ನ ಗೆಳತಿಗೆ ಈ ಹಿಂದೆ ಸಂಬಂಧವಿದೆ ಎಂದು ತಿಳಿದ ನಂತರ ಗೆಳೆಯ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಈ ವಿಡಿಯೊ ದೀಪಿಕಾ ಭಾರದ್ವಾಜ್ ಹಂಚಿಕೊಂಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.

ಈ ವಿಷಯವು ನಂಬಿಕೆ, ಪ್ರಾಮಾಣಿಕತೆ ಮತ್ತು ಸಂಬಂಧಗಳಲ್ಲಿ ಹಿಂಸೆಯ ಸ್ವೀಕಾರಾರ್ಹತೆಯ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಕೀಲೆ ದೀಪಿಕಾ ಭಾರದ್ವಾಜ್ ಅವರು ಪುರುಷರ ಹಕ್ಕುಗಳ ಬಗ್ಗೆ ವಿವಾದಾತ್ಮಕ ಪ್ರಶ್ನೆಯನ್ನು ಮುಂದಿಟ್ಟ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಮತ್ತು “ನಿಮ್ಮ ಗೆಳತಿಗೆ ಈ ಹಿಂದೆ ಲವ್ ಇತ್ತು ಎಂದು ನಿಮಗೆ ತಿಳಿದರೆ ಮತ್ತು ಅವಳು ಅದನ್ನು ನಿಮ್ಮಿಂದ ಮರೆಮಾಚಿದರೆ ಅವಳನ್ನು ಹೊಡೆಯುವುದು ಸಮರ್ಥನೀಯವೇ?” ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಯು ವಿವಿಧ ವೇದಿಕೆಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಭಾವನಾತ್ಮಕ ಅಥವಾ ದೈಹಿಕ ಯಾವುದೇ ರೂಪದಲ್ಲಿ ಹಿಂಸೆಯನ್ನು ಎಂದಿಗೂ ಸಮರ್ಥಿಸಲಾಗುವುದಿಲ್ಲ. ಸಂಬಂಧಗಳು ಪರಸ್ಪರ ಗೌರವ, ನಂಬಿಕೆ ಮತ್ತು ಸಂವಹನದ ಮೇಲೆ ನಿರ್ಮಿಸಲ್ಪಟ್ಟಿವೆ. ಸಂಗಾತಿಯು ತನ್ನ ಹಿಂದಿನ ಪ್ರೀತಿ ವಿಚಾರ ಬಹಿರಂಗಪಡಿಸಿದರೆ ಅದು ಹಿಂಸಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗಬಾರದು. ಅಂತಹ ನಡವಳಿಕೆಯು ನೈತಿಕವಾಗಿ ತಪ್ಪು ಮಾತ್ರವಲ್ಲ, ಕಾನೂನಾತ್ಮಕವಾಗಿಯೂ ಶಿಕ್ಷಾರ್ಹವಾಗಿದೆ. ದೈಹಿಕ ಹಲ್ಲೆ, ಯಾವುದೇ ಸಂದರ್ಭದಲ್ಲೂ, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಮತ್ತು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಎಂದು ತಿಳಿಸಲಾಗಿದೆ.

ನಂಬಿಕೆ ಮತ್ತು ಸಂವಹನವು ಯಾವುದೇ ಆರೋಗ್ಯಕರ ಸಂಬಂಧದ ಆಧಾರಸ್ತಂಭಗಳಾಗಿವೆ. ಸಂಗಾತಿಯು ತಮ್ಮ ಹಿಂದಿನ ಪ್ರೇಮ ಪ್ರಸಂಗವನ್ನು ಮರೆಮಾಚಿದರೆ, ಅದು ಸಂಬಂಧವನ್ನು ಕಳೆದುಕೊಳ್ಳುವ ಭಯದಿಂದ ಮಾಡಿರಬಹುದು. ಅದಕ್ಕಾಗಿ ಹಿಂಸಾಚಾರದ ಮಾರ್ಗವನ್ನು ಅನುಸರಿಸುವ ಬದಲು, ಮುಕ್ತ ಮತ್ತು ಪ್ರಾಮಾಣಿಕ ಸಂವಹನದ ಮೂಲಕ ಸಮಸ್ಯೆಯನ್ನು ಪರಿಹರಿಸುವುದು ಬಹಳ ಮುಖ್ಯ. ಮರೆಮಾಚುವಿಕೆಯ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಂಡರೆ ಹೊಡೆದಾಟವಿಲ್ಲದೇ ಜಗಳಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಲಾಗಿದೆ.

ಮಹಿಳೆಯರ ಮೇಲಿನ ಹಿಂಸಾಚಾರವು ವಿಶ್ವಾದ್ಯಂತ ವ್ಯಾಪಕವಾದ ಸಮಸ್ಯೆಯಾಗಿದೆ. ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸಲು ಮಹಿಳೆಯರ ಮೇಲಿನ ದೌರ್ಜನ್ಯದ ಹಿಂದಿನ ಕೆಲವು ಪ್ರಕರಣಗಳನ್ನು ಉದಾಹರಣೆಯಾಗಿ ನೀಡಲಾಗಿದೆ. 2012ರ ನಿರ್ಭಯಾ ಪ್ರಕರಣ, 2013 ದಕ್ಷಿಣ ಆಫ್ರಿಕಾದ ರೂಪದರ್ಶಿ ರೀವಾ ಸ್ಟೀನ್ಕಾಂಪ್ ಪ್ರಕರಣ, 2015ರ ಜ್ಯೋತಿ ಸಿಂಗ್ ಅತ್ಯಾಚಾರ ಪ್ರಕರಣ , 2018ರಲ್ಲಿ ನಡೆದ ಕಥುವಾ ಅತ್ಯಾಚಾರ ಪ್ರಕರಣಗಳು ಭಾರತದಲ್ಲಿ ನಡೆಯುತ್ತಿರುವ ಲೈಂಗಿಕ ಹಿಂಸಾಚಾರದ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಕಾನೂನಾತ್ಮಕವಾಗಿ, ದೈಹಿಕ ಹಲ್ಲೆ ಅಪರಾಧವಾಗಿದೆ. ಕೌಟುಂಬಿಕ ಹಿಂಸಾಚಾರದಿಂದ ವ್ಯಕ್ತಿಗಳನ್ನು ರಕ್ಷಿಸಲು ಅನೇಕ ದೇಶಗಳು ಕಠಿಣ ಕಾನೂನುಗಳನ್ನು ಹೊಂದಿವೆ. ಭಾರತದಲ್ಲಿ, ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005, ಮಹಿಳೆಯರನ್ನು ನಿಂದನೆಯಿಂದ ರಕ್ಷಿಸಲು ಸೂಕ್ತ ಕ್ರಮಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: ಮೆಟ್ರೊದೊಳಗೆ ಚಪ್ಪಲಿಯಿಂದ ಹೊಡೆದಾಡಿಕೊಂಡ ಪ್ರಯಾಣಿಕರು! ವಿಡಿಯೊ ನೋಡಿ

ದೀಪಿಕಾ ಭಾರದ್ವಾಜ್ ಅವರ ಟ್ವೀಟ್‌ನಲ್ಲಿ ಕೇಳಲಾದ ಪ್ರಶ್ನೆಯು ಹಿಂಸಾಚಾರ, ನಂಬಿಕೆ ಮತ್ತು ಸಂಬಂಧಗಳಲ್ಲಿ ಗೌರವದ ಬಗ್ಗೆ ವ್ಯಾಪಕ ಚರ್ಚೆಗಳಿಗೆ ಕಾರಣವಾಗಿದೆ. ಸಂವಹನ ಮತ್ತು ತಿಳುವಳಿಕೆ ಹಿಂಸೆ ಮತ್ತು ಆಕ್ರಮಣಶೀಲತೆಯನ್ನು ಬದಲಿಸುವ ಸಂಸ್ಕೃತಿಯನ್ನು ಬೆಳೆಸುವುದು ಬಹಳ ಮುಖ್ಯ. ಮಹಿಳೆಯರು ಸುರಕ್ಷಿತ ಮತ್ತು ಗೌರವಾನ್ವಿತರು ಎಂದು ಭಾವಿಸುವ ಮತ್ತು ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಬಹುದಾದ ವಾತಾವರಣವನ್ನು ಸೃಷ್ಟಿಸುವತ್ತ ಸಮಾಜವು ಕೆಲಸ ಮಾಡಬೇಕು ಎಂಬುದಾಗಿ ತಿಳಿಸಲಾಗಿದೆ.

Continue Reading
Advertisement
utthana vaarshika katha spardhe the last date for submission of the story is october 10
ಬೆಂಗಳೂರು13 mins ago

Utthana Katha Spardhe 2024: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ; ಕಥೆ ತಲುಪಿಸಲು ಅ.10 ಕೊನೆಯ ದಿನ

World Breastfeeding Week
ಆರೋಗ್ಯ27 mins ago

World Breastfeeding Week: ವಿಶ್ವ ಸ್ತನ್ಯಪಾನ ಸಪ್ತಾಹ; ಹಾಲುಣಿಸಿದರೆ ಮಗುವಿಗೆ ಮಾತ್ರವಲ್ಲ, ತಾಯಿಗೂ ಲಾಭ!

Saree Fashion
ಫ್ಯಾಷನ್33 mins ago

Saree Fashion: ಕಂಟೆಂಪರರಿ ಪ್ರಿಂಟೆಡ್‌ ವಿನ್ಯಾಸದಲ್ಲೂ ಬಂತು ಆರ್ಗನ್ಜಾ ಸೀರೆ!

kotak bank smart watch
ವಾಣಿಜ್ಯ36 mins ago

kotak bank smart watch: ಮೊಬೈಲ್‌ ಬೇಕಿಲ್ಲ, ವಾಚ್‌ನಲ್ಲೇ ಆನ್‌ಲೈನ್‌ ಪೇಮೆಂಟ್‌! ಬಂದಿದೆ ಕೋಟಕ್-ಜಿಓಕ್ಯೂಐಐ ಸ್ಮಾರ್ಟ್ ವಾಚ್!

Paris Olympics 2024
ಪ್ರಮುಖ ಸುದ್ದಿ41 mins ago

Paris Olympics 2024 : ಭಾರತದವರೇ ಆದ ಎಚ್​ಎಸ್​ ಪ್ರಣಯ್​ ಸೋಲಿಸಿ ಕ್ವಾರ್ಟರ್​​ ಫೈನಲ್ಸ್​ಗೇರಿದ ಲಕ್ಷ್ಯ ಸೇನ್​

Wayanad Landslide
ದೇಶ45 mins ago

Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ

Central government to distribute free food grains to 80 crore beneficiaries of the country says Pralhad Joshi
ದೇಶ48 mins ago

Pralhad Joshi: ಕೇಂದ್ರ ಸರ್ಕಾರದಿಂದ 80 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ; ಪ್ರಲ್ಹಾದ್‌ ಜೋಶಿ

ICW 2024
ಫ್ಯಾಷನ್2 hours ago

ICW 2024: ಟ್ರೆಂಡ್‌ ಲಿಸ್ಟ್‌ಗೆ ಸೇರಿದ ಇಂಡಿಯಾ ಕೌಚರ್‌ ವೀಕ್‌ನ ಡಿಸೈನರ್‌ ವೇರ್‌ಗಳಿವು!

Diksha Daga
ಕ್ರೀಡೆ2 hours ago

Diksha Dagar : ಗಾಲ್ಫರ್​ ದೀಕ್ಷಾ ದಾಗರ್​ ಪ್ರಯಾಣಿಸುತ್ತಿದ್ದ ಕಾರು ಪ್ಯಾರಿಸ್​​ನಲ್ಲಿ ಅಪಘಾತ

Puja Khedkar
ದೇಶ2 hours ago

Puja Khedkar: ಮಾಜಿ ಟ್ರೈನಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ಗೆ ಮತ್ತೊಂದು ಸಂಕಷ್ಟ; ಜಾಮೀನು ಅರ್ಜಿ ವಜಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ7 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ8 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ8 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌