Sexual Abuse: ತನ್ನ ಹಸ್ತಮೈಥುನದ ವಿಡಿಯೊ ಕಳುಹಿಸಿ ವಿದ್ಯಾರ್ಥಿಯನ್ನು ಕಾಮದ ಬಲೆಗೆ ಸಿಲುಕಿಸಿದ್ದ ಶಿಕ್ಷಕಿಯ ಬಂಧನ! - Vistara News

Latest

Sexual Abuse: ತನ್ನ ಹಸ್ತಮೈಥುನದ ವಿಡಿಯೊ ಕಳುಹಿಸಿ ವಿದ್ಯಾರ್ಥಿಯನ್ನು ಕಾಮದ ಬಲೆಗೆ ಸಿಲುಕಿಸಿದ್ದ ಶಿಕ್ಷಕಿಯ ಬಂಧನ!

Sexual Abuse: ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಿಗೆ ಗೌರವವಿರುತ್ತದೆ. ಆದರೆ ಇಲ್ಲೊಬ್ಬ ಶಿಕ್ಷಕಿ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಯನ್ನೇ ಬಳಸಿಕೊಂಡಿದ್ದಾಳೆ. ಆಸ್ಟ್ರೇಲಿಯಾದ ನೈಋತ್ಯ ಸಿಡ್ನಿಯಲ್ಲಿರುವ ಲುರ್ನಿಯಾ ಹೈಸ್ಕೂಲ್ ನಲ್ಲಿ 17 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 30 ವರ್ಷದ ಶಿಕ್ಷಕಿ ತೈಲಾ ಬ್ರೇಲಿಯನ್ನು ಬಂಧಿಸಲಾಗಿದೆ.ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕೆ ಹಾಗೂ ವಿದ್ಯಾರ್ಥಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Sexual Abuse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಶಿಕ್ಷಕರನ್ನು ದೇವರಿಗೆ ಹೋಲಿಸುತ್ತಾರೆ. ಯಾಕೆಂದರೆ ಅವರು ತಮ್ಮ ವಿದ್ಯೆಯನ್ನು ಶಿಷ್ಯರಿಗೆ ಧಾರೆ ಎರೆಯುವ ಮೂಲಕ ಅವರನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗುತ್ತಾರೆ. ಹಾಗಾಗಿ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಿಗೆ ಗೌರವವಿರುತ್ತದೆ. ಆದರೆ ಇಲ್ಲೊಬ್ಬ ಶಿಕ್ಷಕಿ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಯನ್ನೇ ಬಳಸಿಕೊಂಡಿದ್ದಾಳೆ. ಆಸ್ಟ್ರೇಲಿಯಾದ ನೈಋತ್ಯ ಸಿಡ್ನಿಯಲ್ಲಿರುವ ಲುರ್ನಿಯಾ ಹೈಸ್ಕೂಲ್ ನಲ್ಲಿ 17 ವರ್ಷದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ (Sexual Abuse) ನೀಡಿದ ಆರೋಪದ ಮೇಲೆ 30 ವರ್ಷದ ಶಿಕ್ಷಕಿ ತೈಲಾ ಬ್ರೇಲಿಯನ್ನು ಬಂಧಿಸಲಾಗಿದೆ.

ತನ್ನ ಅಧಿಕಾರವನ್ನು ದುರಪಯೋಗಪಡಿಸಿಕೊಂಡು ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕೆ ಹಾಗೂ ವಿದ್ಯಾರ್ಥಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಮಂಗಳವಾರದಂದು ಶಿಕ್ಷಕಿ ಬ್ರೇಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಶಿಕ್ಷಕಿ, ವಿದ್ಯಾರ್ಥಿಗೆ ಅಶ್ಲೀಲ ವಿಡಿಯೊಗಳನ್ನು ಕಳುಹಿಸುವುದು ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಕಾರಣ ತಾನು ಜೈಲಿಗೆ ಹೋಗುತ್ತಿದ್ದೇನೆ. ಇದರಿಂದ ತಾನು ತನ್ನ ಕುಟುಂಬ, ತನ್ನ ಪತಿ ಮತ್ತು ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾಳೆ.

ಜುಲೈ ಆರಂಭದಲ್ಲಿ ವಿದ್ಯಾರ್ಥಿಯನ್ನು ಸ್ನ್ಯಾಪ್‍ಚಾರ್ಟ್‍ನಲ್ಲಿ ಪರಿಚಯ ಮಾಡಿಕೊಂಡ ಶಿಕ್ಷಕಿ ಬ್ರೇಲಿ ಆತನೊಂದಿಗೆ ಅನೈತಿಕ ಸಂಬಂಧ ಹೊಂದಲು ಯೋಜನೆ ಮಾಡಿದ್ದಾಳೆ ಮತ್ತು ಜುಲೈ ಆರಂಭದಲ್ಲಿ ಇವರು ಒಬ್ಬರಿಗೊಬ್ಬರು ಮೆಸೇಜ್ ಕಳುಹಿಸಲು ಪ್ರಾರಂಭಿದರು. ಅಲ್ಲದೇ ಆರೋಪಿ ಶಿಕ್ಷಕಿ ನಗ್ನವಾಗಿ ಮತ್ತು ಹಸ್ತಮೈಥುನ ಮಾಡಿಕೊಳ್ಳುವ ತನ್ನ ಹಲವಾರು ಪೋಟೊಗಳು ಮತ್ತು ವಿಡಿಯೊಗಳನ್ನು ವಿದ್ಯಾರ್ಥಿಗೆ ಕಳುಹಿಸಿದ್ದಾಳೆ. ಹಾಗೇ ವಿದ್ಯಾರ್ಥಿ ಕೂಡ ತನ್ನ ಹಲವಾರು ಪೋಟೊ ಮತ್ತು ವಿಡಿಯೊವನ್ನು ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಆರೋಪಿ ಹದಿಹರೆಯದ ವಿದ್ಯಾರ್ಥಿಯನ್ನು ತನ್ನ ಉತ್ತರ ವೊಲ್ಲೊಂಗಾಂಗ್ ಮನೆಗೆ ಕರೆದಿದ್ದಾಳೆ, ಅಲ್ಲಿ ಅವಳು ಅವನನ್ನು ಮಹಡಿಯ ಕೋಣೆಗೆ ಕರೆದೊಯ್ದು ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ಆತನನ್ನು ಉದ್ರೇಕಿಸಿದಳು. ಒಂದು ವಾರದ ನಂತರ, ಅವರು ಬ್ರೇಲಿಯ ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಿದರು ಎಂದು ಆರೋಪಿಸಲಾಗಿದೆ. ಬ್ರೇಲಿಯನ್ನು ಸಂತೋಷಪಡಿಸಲು ಆಗಾಗ ಅಶ್ಲೀಲ ಪೋಟೊಗಳನ್ನು ಕಳುಹಿಸಲು ಹೇಳುತ್ತಿದ್ದಳು. ಇದರಿಂದ ತಾನು ಒತ್ತಡಕ್ಕೊಳಗಾಗಿದ್ದೇನೆ ಎಂದು ವಿದ್ಯಾರ್ಥಿ ನಂತರ ಪೊಲೀಸರಿಗೆ ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ಬ್ರೇಲಿ ಸಾಮಾಜಿಕ ಮಾಧ್ಯಮದ ಮೂಲಕ ಮೂವರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ, ಆದರೆ ಸದ್ಯ ಅವಳು ಕೇವಲ ಒಬ್ಬನೊಂದಿಗೆ ಮಾತ್ರ ಸಂಬಂಧ ಹೊಂದಿರುವ ಆರೋಪಗಳನ್ನು ಎದುರಿಸುತ್ತಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ:  ಪ್ರಣಯಕ್ಕೆ ಡಿಸ್ಟರ್ಬ್‌ ಆಯಿತೆಂದು ಕೋಪಗೊಂಡ ಪ್ರಿಯತಮ ಮಹಿಳೆಯ ಮಗುವನ್ನು ನೆಲಕ್ಕೆ ಬಡಿದು ಕೊಂದ!

ಈ ಪ್ರಕರಣ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಬ್ರೇಲಿಯನ್ನು ಅವರ ಕುಟುಂಬವು ಬೆಂಬಲಿಸಿತು. ಆದರೆ ವಿದ್ಯಾರ್ಥಿಗಳ ಸುರಕ್ಷತೆಗೆ ತನ್ನ ಬದ್ಧತೆಯನ್ನು ಒತ್ತಿಹೇಳಿರುವ ಶಿಕ್ಷಣ ಇಲಾಖೆ ಅವಳ ತಪ್ಪಿಗೆ ಬಾಕಿ ಇರುವ ವೇತನ ನೀಡದೆ ಅಮಾನತುಗೊಳಿಸಿದೆ. ವಾರಕ್ಕೆ ಮೂರು ಬಾರಿ ಪೊಲೀಸ್ ಠಾಣೆಗೆ ಬಂದು ಸಹಿ ಮಾಡುವಂತೆ ಮತ್ತು ಸಾಮಾಜಿಕ ಮಾಧ್ಯಮದಿಂದ ದೂರವಿರುವುದು ಸೇರಿದಂತೆ ಕಠಿಣ ಷರತ್ತುಗಳ ಅಡಿಯಲ್ಲಿ ಬ್ರೈಲಿಗೆ ಜಾಮೀನು ನೀಡಲಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral News: ಬಸ್ ನಿಲ್ಲಿಸದಿದ್ದಕ್ಕೆ ಕೋಪಗೊಂಡು ಕಂಡಕ್ಟರ್‌ ಮೇಲೆ ನಾಗರಹಾವನ್ನು ಎಸೆದ ಮಹಿಳೆ!

Viral News: ಬಸ್ ನಿಲ್ಲಿಸಲಿಲ್ಲ ಎಂದು ಕೋಪಗೊಂಡ ಮಹಿಳೆಯೊಬ್ಬಳು ಬಸ್ಸಿನ ಹಿಂಭಾಗಕ್ಕೆ ಬಿಯರ್ ಬಾಟಲಿಯನ್ನು ಎಸೆದು ಹಾನಿ ಮಾಡಿದ್ದಾಳೆ. ಆಗ ಬಸ್‌ ನಿಲ್ಲಿಸಿ ಅವಳನ್ನು ತರಾಟೆಗೆ ತೆಗೆದುಕೊಂಡ ಮಹಿಳಾ ಕಂಡಕ್ಟರ್ ಮೇಲೆ ಮಹಿಳೆ ತನ್ನ ಚೀಲದಲ್ಲಿದ್ದ ನಾಗರಹಾವನ್ನು ಎಸೆದಿದ್ದಾಳೆ. ಮೈಮೇಲೆ ಹಾವು ಬಿದ್ದಾಗ ಕಂಡಕ್ಟರ್‌ ಕಕ್ಕಾಬಿಕ್ಕಿಯಾಗಿದ್ದಾರೆ. ಈ ವಿಚಿತ್ರ ಘಟನೆಯ ಸುದ್ದಿ ಇಲ್ಲಿದೆ.

VISTARANEWS.COM


on

Viral News
Koo


ಹೈದರಾಬಾದ್: ಸಾಮಾನ್ಯವಾಗಿ ಗಂಡಸರು ಕುಡಿದು ರಸ್ತೆಯಲ್ಲಿ ಅವಾಂತರಗಳನ್ನು ಸೃಷ್ಟಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ಕುಡಿದು ಅದರ ಮತ್ತಿನಲ್ಲಿ ಬಸ್ ಕಂಡಕ್ಟರ್ ಜೊತೆ ರೌಡಿ ಹಾಗೇ ವರ್ತಿಸಿದ್ದಾಳೆ. ಕುಡಿದ ಮತ್ತಿನಲ್ಲಿದ್ದ ಮಹಿಳೆ ಬಸ್ ನಿಲ್ಲಿಸದಿದ್ದಕ್ಕೆ ಕೋಪಗೊಂಡು ಬಸ್ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದ್ದಲ್ಲದೇ ಬಸ್ಸಿನ ಮಹಿಳಾ ಕಂಡಕ್ಟರ್‌ನ ಮೇಲೆ ಹಾವನ್ನು ಎಸೆದಿದ್ದಾಳೆ. ಈ ಘಟನೆ ವಿದ್ಯಾನಗರದಲ್ಲಿ ಗುರುವಾರ ಸಂಜೆ ನಡೆದಿದ್ದು ಇದು ಎಲ್ಲೆಡೆ ವೈರಲ್‌ (Viral News)ಆಗಿದೆ.

ಟಿಜಿಎಸ್‍ಆರ್‌ಟಿಸಿ ಬಸ್ ವಿದ್ಯಾನಗರದ ಮೂಲಕ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತಿದ್ದ 50 ವರ್ಷ ವಯಸ್ಸಿನ ಬೇಗಂ ಎಂಬ ಮಹಿಳೆ ಬಸ್ ಅನ್ನು ನಿಲ್ಲಿಸಲು ಹೇಳಿದ್ದಾಳೆ. ಆದರೆ ಕಂಡಕ್ಟರ್ ಹಾಗೂ ಡ್ರೈವರ್ ಬಸ್ ನಿಲ್ಲಿಸಲಿಲ್ಲ. ಇದರಿಂದ ಕೋಪಗೊಂಡ ಮಹಿಳೆ ಬಸ್ಸಿನ ಹಿಂಭಾಗಕ್ಕೆ ಬಿಯರ್ ಬಾಟಲಿಯನ್ನು ಎಸೆದು ಹಿಂಭಾಗದ ವಿಂಡ್ ಶೀಲ್ಡ್ ಗೆ ಹಾನಿಮಾಡಿದ್ದಾಳೆ. ಆಗ ಬಸ್ ನಿಲ್ಲಿಸಿ ಡ್ರೈವರ್, ಮಹಿಳಾ ಕಂಡೆಕ್ಟರ್ ಹಾಗೂ ಪ್ರಯಾಣಿಕರು ಅವಳನ್ನು ಹಿಡಿದು ತರಾಟೆಗೆ ತೆಗೆದುಕೊಂಡಾಗ ಮಹಿಳೆ ತನ್ನ ಚೀಲದಲ್ಲಿದ್ದ ನಾಗರಹಾವನ್ನು ಮಹಿಳಾ ಕಂಡಕ್ಟರ್ ಮೈಮೇಲೆ ಎಸೆದಿದ್ದಾಳೆ. ಆಗ ಕಂಡಕ್ಟರ್ ಮೈಮೇಲೆ ಬಿದ್ದ ಹಾವು ಅವರಿಗೆ ಯಾವುದೇ ಹಾನಿ ಮಾಡದೆ ಪಕ್ಕಕ್ಕೆ ಸರಿದುಕೊಂಡು ಹೋಗಿದೆ. ಇದರಿಂದ ಕಂಡಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಟಿಜಿಎಸ್‍ಆರ್‌ಟಿಸಿ ಎಂಡಿ ವಿಸಿ ಸಜ್ಜನರ್, ಇಂತಹ ಘಟನೆಗಳನ್ನು ನೋಡುವುದು ದುಃಖಕರವಾಗಿದೆ ಎಂದು ತಿಳಿಸಿ ಆರ್‌ಟಿಸಿ ನೌಕರರು ಮತ್ತು ಬಸ್‍ಗಳ ಮೇಲೆ ಇಂತಹ ದಾಳಿಗಳನ್ನು ಮಾಡದಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ. ಮತ್ತು ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಮತ್ತು ಪೊಲೀಸರ ಸಹಾಯದಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಜ್ಜನರ್ ಹೇಳಿದ್ದಾರೆ.

ಇದನ್ನೂ ಓದಿ: ತನ್ನ ಹಸ್ತಮೈಥುನದ ವಿಡಿಯೊ ಕಳುಹಿಸಿ ವಿದ್ಯಾರ್ಥಿಯನ್ನು ಕಾಮದ ಬಲೆಗೆ ಸಿಲುಕಿಸಿದ್ದ ಶಿಕ್ಷಕಿಯ ಬಂಧನ!

ಈ ಬಗ್ಗೆ ಮಾತನಾಡಿದ ಮಹಿಳಾ ಕಂಡಕ್ಟರ್, “ನಾನು ಅವಳನ್ನು ಹಿಡಿದು ಅವಳೊಂದಿಗೆ ಮಾತನಾಡುತ್ತಿದ್ದೆ, ಅವಳ ಬಳಿ ಬಸ್ ಮೇಲೆ ಏಕೆ ದಾಳಿ ಮಾಡಿದೆ ಎಂದು ಕೇಳುತ್ತಿದ್ದೆ, ಆಗ ಅವಳು ಇದ್ದಕ್ಕಿದ್ದಂತೆ ತನ್ನ ಚೀಲದಿಂದ ಹಾವನ್ನು ಹೊರತೆಗೆದು ನನ್ನ ಮೇಲೆ ಎಸೆದಳು. ಅಲ್ಲಿದ್ದ ಎಲ್ಲರೂ ಓಡಿಹೋದರು” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮಹಿಳೆಯನ್ನು ವಿಚಾರಣೆ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Continue Reading

Latest

Viral News: ದಂತ ಕಸಿ ಮಾಡಲು ಮೂಳೆಗಳಿಗಾಗಿ ಸಾವಿರಾರು ಶವಗಳನ್ನು ಕದ್ದ ಚೀನಾ ಕಂಪನಿ!

Viral News: ಚೀನಾದ ಕಂಪನಿಯೊಂದು ದಂತ ಕಸಿ ಮಾಡಲು ಸ್ಮಶಾನಗಳು ಮತ್ತು ವೈದ್ಯಕೀಯ ಪ್ರಯೋಗಾಲಯಗಳಿಂದ 4,000ಕ್ಕೂ ಹೆಚ್ಚು ಶವಗಳನ್ನು ಕದ್ದಿದೆ ಎಂದು ಆರೋಪಿಸಲಾಗಿದೆ. ಅಲೋಜೆನಿಕ್ ಮೂಳೆ ಕಸಿಗಳನ್ನು ಉತ್ಪಾದಿಸಲು ಮೂಳೆಗಳನ್ನು ಬಳಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಉತ್ತರ ಪ್ರಾಂತ್ಯದ ಶಾಂಕ್ಸಿಯ ರಾಜಧಾನಿ ತೈಯುವಾನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬೀಜಿಂಗ್ ಬ್ರೇವ್ ವಕೀಲರ ಸಂಘದ ಅಧ್ಯಕ್ಷ ಯಿ ಶೆಂಗ್ಹುವಾ ಹೇಳಿದ್ದಾರೆ.

VISTARANEWS.COM


on

Viral News
Koo


ಚೀನಾದ ಕಂಪನಿಯೊಂದು ದಂತ ಕಸಿ ಮಾಡಲು ಸ್ಮಶಾನಗಳು ಮತ್ತು ವೈದ್ಯಕೀಯ ಪ್ರಯೋಗಾಲಯಗಳಿಂದ 4,000 ಕ್ಕೂ ಹೆಚ್ಚು ಶವಗಳನ್ನು ಕದ್ದಿದೆ ಎಂದು ಆರೋಪಿಸಲಾಗಿದೆ. ಪ್ರಸಿದ್ಧ ಕ್ರಿಮಿನಲ್ ವಕೀಲರು ಗುರುವಾರ ಈ ಪ್ರಕರಣಕ್ಕೆ ಸಂಬಂಧಪಟ್ಟ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral News) ಆಗಿದೆ.

ಬೀಜಿಂಗ್ ಬ್ರೇವ್ ವಕೀಲರ ಸಂಘದ ಅಧ್ಯಕ್ಷ ಯಿ ಶೆಂಗ್ಹುವಾ, ಉತ್ತರ ಪ್ರಾಂತ್ಯದ ಶಾಂಕ್ಸಿಯ ರಾಜಧಾನಿ ತೈಯುವಾನ್‍ನ ಪೊಲೀಸರು ಅಲೋಜೆನಿಕ್ ಮೂಳೆ ಕಸಿಗಳನ್ನು ಉತ್ಪಾದಿಸಲು ಮೂಳೆಗಳನ್ನು ಬಳಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಶಾಂಕ್ಸಿ ಅರೋಯಿ ಬಯೋಮೆಟೀರಿಯಲ್ಸ್ ಎಂಬ ಕಂಪನಿಯು ಸಿಚುವಾನ್, ಗುವಾಂಗ್ಕ್ಸಿ ಮತ್ತು ಶಾಂಡೊಂಗ್ ಪ್ರಾಂತ್ಯಗಳಿಂದ ಶವಗಳು ಮತ್ತು ಶವದ ಕೈಕಾಲುಗಳನ್ನು ಅಕ್ರಮವಾಗಿ ಖರೀದಿಸಿ ಮೂಳೆ ಕಸಿಗಳನ್ನು ತಯಾರಿಸಲು ಬಳಸುತ್ತಿದೆ ಎಂದು ಶಂಕಿಸಲಾಗಿದೆ ಎಂದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ತಿಳಿಸಲಾಗಿದೆ.

ಇದರಿಂದ ಕಂಪನಿಯು 380 ಮಿಲಿಯನ್ ಯುವಾನ್ (ಯುಎಸ್ $ 53 ಮಿಲಿಯನ್) ಗಳಿಸಿದೆ. ಅದರಲ್ಲೂ ದಂತ ಕಸಿಗಾಗಿ ಮೂಳೆಗಳನ್ನು ಮಾರಾಟ ಮಾಡುವುದರಿಂದ ಹೆಚ್ಚು ಆದಾಯ ಗಳಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ರೋಗಿಗಳಲ್ಲಿ ಕಸಿಗಳಿಗೆ ಸಾಕಷ್ಟು ಮೂಳೆ ಸಾಂದ್ರತೆ ಇಲ್ಲದಿದ್ದಾಗ ಅಲೋಜೆನಿಕ್ ಕಸಿಗಳನ್ನು ಬಳಸಲಾಗುತ್ತದೆ, ಆದರೆ ಮೂಳೆಯನ್ನು ಸಾಮಾನ್ಯವಾಗಿ ಸೊಂಟದ ಬದಲಿಯಂತಹ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವ ರೋಗಿಗಳಿಂದ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.

ಪೊಲೀಸರು 18 ಟನ್ ಮೂಳೆಗಳು ಮತ್ತು 34,000 ಕ್ಕೂ ಹೆಚ್ಚು ಈಗಾಗಲೇ ಸಿದ್ಧಪಡಿಸಿದ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಯಿ ಪ್ರಕಟಿಸಿದ ದಾಖಲೆಗಳು ತಿಳಿಸಿವೆ. ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ ಸು ಎಂಬ ಶಂಕಿತನು ಯುನ್ನಾನ್, ಚಾಂಗ್ಕಿಂಗ್, ಗುಯಿಝೌ ಮತ್ತು ಸಿಚುವಾನ್ ನ ಸ್ಮಶಾನಗಳಿಂದ 4,000 ಕ್ಕೂ ಹೆಚ್ಚು ಮಾನವ ದೇಹಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು. ಯುನ್ನಾನ್ ಪ್ರಾಂತ್ಯದ ಶುಯಿಫು, ಚಾಂಗ್ಕಿಂಗ್ ನ ಬನಾನ್ ಜಿಲ್ಲೆ, ಗುಯಿಝೌನ ಶಿಕಿಯಾನ್ ಕೌಂಟಿ ಮತ್ತು ಸಿಚುವಾನ್‍ನ ಡೇಯಿಂಗ್ ಕೌಂಟಿಯ ಚಿತಾಗಾರದ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಹೆಚ್ಚಿನ ಸಂಸ್ಕರಣೆಗಾಗಿ ಸು ಅವರ ಕಂಪನಿಗೆ ಸಾಗಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ವೇಗವಾಗಿ ಬಂದು ಅಪ್ಪಳಿಸಿದ ಸ್ಕಾರ್ಪಿಯೋ; ಒಂದೇ ಕುಟುಂಬದ ಮೂವರು ಪಾರಾಗಿದ್ದೇ ಅಚ್ಚರಿ!

ಅಲ್ಲದೇ ತನಿಖೆಯ ಸಮಯದಲ್ಲಿ ಇನ್ನೂ75 ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಚಿತಾಗಾರಗಳಲ್ಲಿನ ಕಾರ್ಮಿಕರು ಮೂಳೆಗಳನ್ನು ಸುಗೆ ಮಾರಾಟ ಮಾಡಲು ಶವಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿದ್ದಾರೆ ಎಂದು ಶಂಕಿಸಲಾಗಿದೆ. ಶಾಂಡೊಂಗ್‌ನ ಕಿಂಗ್ಡಾವೊ ಯೂನಿವರ್ಸಿಟಿ ಆಸ್ಪತ್ರೆಯ ಲಿವರ್ ಸೆಂಟರ್ ಅಕ್ರಮವಾಗಿ ಶವಗಳನ್ನು ಕಂಪನಿಗೆ ಮಾರಾಟ ಮಾಡಿದೆ ಎಂಬ ಹೇಳಿಕೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಹಾಗೇ ವೈದ್ಯಕೀಯ ವಿಜ್ಞಾನಕ್ಕೆ ಉತ್ತಮ ಕೊಡುಗೆ ನೀಡಿದ ಲಿವರ್ ಸೆಂಟರ್ ನ ನಿರ್ದೇಶಕ ಲಿ ಬಾಕ್ಸಿಂಗ್ ಅವರು ಈ ಪ್ರಕರಣದಲ್ಲಿ ಕೈಜೋಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

Continue Reading

ರಾಜಕೀಯ

Jagdeep Dhankhar: ರಾಜ್ಯಸಭಾಧ್ಯಕ್ಷರನ್ನು ಹುದ್ದೆಯಿಂದ ಇಳಿಸಲು ಹೊರಟಿವೆ ಪ್ರತಿಪಕ್ಷಗಳು! ಇದು ಸಾಧ್ಯವೇ?

ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರೊಂದಿಗಿನ ವಾಗ್ವಾದದ ಬಳಿಕ ಇಂಡಿಯಾ ಬ್ಲಾಕ್ ಕೂಟದ ನಾಯಕರು ಒಟ್ಟಾಗಿ ರಾಜ್ಯಸಭೆಯಿಂದ ಹೊರ ನಡೆದಿದ್ದರು. ರಾಜ್ಯಸಭಾ ಅಧ್ಯಕ್ಷರಾದ ಜಗದೀಪ್ ಧನ್‌ಕರ್ (Jagdeep Dhankhar) ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಸ್ತಾವನೆಗೆ 87 ಸದಸ್ಯರು ಸಹಿ ಹಾಕಿದ್ದಾರೆ ಎಂದು ವಿರೋಧ ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯಸಭಾಧ್ಯಕ್ಷರನ್ನು ಹುದ್ದೆಯಿಂದ ಕೆಳಗಿಸಲು ಸಾಧ್ಯವೇ? ಇದರ ಪ್ರಕ್ರಿಯೆ ಏನು ಎನ್ನುವ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Jagdeep Dhankhar
Koo

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್ (Jagdeep Dhankhar) ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ (no-confidence resolution) ಮಂಡಿಸಲು ಸಿದ್ಧತೆ ನಡೆಸುತ್ತಿದೆ. 18ನೇ ಅಧಿವೇಶನದಲ್ಲಿ ಶುಕ್ರವಾರ ರಾಜ್ಯಸಭೆಯಲ್ಲಿ (Rajya Sabha) ವಿರೋಧ ಪಕ್ಷಗಳ ನಾಯಕರುಗಳು (Leaders of opposition parties) ಮತ್ತು ಸಭಾಪತಿ ಜಗದೀಪ್ ಧನ್‌ಕರ್ ನಡುವೆ ವಾಗ್ವಾದ ನಡೆದಿದ್ದು, ಪ್ರತಿಪಕ್ಷ ʼಇಂಡಿಯಾʼ ಬಣಗಳು ಅವರ ವಿರುದ್ಧ ನೊಟೀಸ್ ಸಲ್ಲಿಸಲು ಮುಂದಾಗಿವೆ.

ಮೂಲಗಳ ಪ್ರಕಾರ ನೊಟೀಸ್ ಬಗ್ಗೆ ಚರ್ಚಿಸಿ ನಿರ್ಧರಿಸಬೇಕಿದೆ. ಇದು ಯಾವ ಸಮಯದವರೆಗೆ ಎಂಬುದು ತಿಳಿದು ಬಂದಿಲ್ಲ. ವಿರೋಧ ಪಕ್ಷಗಳು ಅವರನ್ನು ಪದಚ್ಯುತಗೊಳಿಸಲು ಸಂಖ್ಯಾಬಲವನ್ನು ಹೊಂದಿಲ್ಲದ ಕಾರಣ ನಿರ್ಣಯವು ಜಾರಿಯಾಗದಿದ್ದರೂ ಇದು ಅಧ್ಯಕ್ಷರಿಗೆ ವಿರೋಧವನ್ನು ಎತ್ತಿ ತೋರಿಸುವ ವಿಧಾನವಾಗುತ್ತದೆ ಎನ್ನುವುದು ಪ್ರತಿಪಕ್ಷಗಳ ಲೆಕ್ಕಾಚಾರವಾಗಿದೆ.

ಧನ್‌ಕರ್ ವಿರುದ್ಧ ಕ್ರಮ ಕೈಗೊಳ್ಳುವ ಪ್ರಸ್ತಾವನೆಗೆ 87 ಸದಸ್ಯರು ಸಹಿ ಹಾಕಿದ್ದಾರೆ ಎಂದು ವಿರೋಧ ಪಕ್ಷದ ಮೂಲಗಳು ತಿಳಿಸಿವೆ. ಎರಡು ದಿನಗಳ ಹಿಂದೆ ಸದನಸ ನಾಯಕ ಜೆ.ಪಿ. ನಡ್ಡಾ ಅವರಿಗೆ ಅನೌಪಚಾರಿಕವಾಗಿ ಉಪಾಧ್ಯಕ್ಷರನ್ನು ಪದಚ್ಯುತಗೊಳಿಸುವ ಪ್ರಸ್ತಾಪವನ್ನು ಸಲ್ಲಿಸಲು ಪ್ರತಿಪಕ್ಷಗಳು ಚಿಂತಿಸಿವೆ ಎಂದು ಮೂಲಗಳು ತಿಳಿಸಿವೆ.

ಪ್ರತಿಪಕ್ಷಗಳ ಆತಂಕವೇನು?

ಸದನದಲ್ಲಿ ವಿರೋಧ ಪಕ್ಷದ ನಾಯಕರ ಮೈಕ್‌ ಅನ್ನು ಪದೇಪದೇ ಆಫ್‌ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಸದನವನ್ನು ನಿಯಮ ಮತ್ತು ಸಂಪ್ರದಾಯಗಳ ಪ್ರಕಾರ ನಡೆಸಬೇಕೆಂದು ಅವರು ಬಯಸುತ್ತಿದ್ದು, ಸದಸ್ಯರ ವಿರುದ್ಧ ವೈಯಕ್ತಿಕ ಟೀಕೆಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳ ವಿರುದ್ಧ ಅವರು ಪಕ್ಷಪಾತ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದರಿಂದ ಧನ್‌ಕರ್ ಮತ್ತು ಇಂಡಿಯಾ ಬ್ಲಾಕ್ ಪಕ್ಷಗಳ ನಡುವೆ ಸಾಕಷ್ಟು ವಾಗ್ವಾದ ನಡೆಯಿತು. ಸೋನಿಯಾ ಗಾಂಧಿ ನೇತೃತ್ವದ ಪ್ರತಿಪಕ್ಷಗಳು ರಾಜ್ಯಸಭೆಯಿಂದ ಹೊರನಡೆದ ಬೆನ್ನಲ್ಲೇ, ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಿ, ರಾಜ್ಯಸಭಾಧ್ಯಕ್ಷರು ಮೇಲ್ಮನೆಯಲ್ಲಿ ಪ್ರತಿಪಕ್ಷಗಳಿಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.


ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಮತ್ತು ಧನ್‌ಕರ್ ನಡುವೆ ತೀವ್ರ ವಾಗ್ವಾದ ನಡೆದ ಬಳಿಕ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಾಯಕರು ಸದನದಿಂದ ಹೊರನಡೆದಿದ್ದರು. ಇದಕ್ಕೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ಪ್ರತಿಪಕ್ಷಗಳು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು. ಸೋನಿಯಾ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರನ್ನು ಒಳಗೊಂದು ಸುದ್ದಿಗೋಷ್ಠಿ ನಡೆಸಿದ ಜಯಾ ಬಚ್ಚನ್, “ನಾವು ಶಾಲಾ ಮಕ್ಕಳಲ್ಲ. ನಾನು ಅವರ ಮಾತಿನಿಂದ ಅಸಮಾಧಾನಗೊಂಡಿದ್ದೇನೆ. ವಿಶೇಷವಾಗಿ ಮಾತನಾಡಲು ನಿಂತಾಗ, ಮೈಕ್ ಸ್ವಿಚ್ ಆಫ್ ಆಗಿತ್ತು. ಅವರು ಪ್ರತಿ ಬಾರಿಯೂ ಅಸಂಸದೀಯ ಪದಗಳನ್ನು ಬಳಸುತ್ತಾರೆʼʼ ಎಂದು ಆರೋಪಿಸಿದ್ದರು.

ವಿರೋಧ ಪಕ್ಷಗಳು ಹೇಳುವುದೇನು?

ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಮಾತನಾಡಿ, ಸಭಾಪತಿಯ ಧೋರಣೆ ಪಕ್ಷಪಾತದಿಂದ ಕೂಡಿದೆ. ರಾಜ್ಯಸಭೆಯಲ್ಲಿ ಸಭಾಪತಿ ಪಕ್ಷಾತೀತ ಆಗಿರಬೇಕು. ಎಲ್ಲಾ ಆಯ್ಕೆಗಳು ಮುಕ್ತವಾಗಿವೆ. ಕಾನೂನು ಮತ್ತು ನಿಯಮ ಪುಸ್ತಕದಲ್ಲಿ ಏನೇ ಇರಲಿ, ಸಂವಿಧಾನದಲ್ಲಿ ಏನೇ ಇರಲಿ, ನಡವಳಿಕೆಯ ಕಾರ್ಯವಿಧಾನದೊಳಗೆ, ಕಾನೂನಿನಲ್ಲಿ ಯಾವುದೇ ನಿಬಂಧನೆಗಳು ಇರಲಿ, ಎಲ್ಲಾ ಆಯ್ಕೆಗಳು ನಮಗೆ ಮುಕ್ತವಾಗಿವೆ. ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವಾಗ ನಾವು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶವಿಲ್ಲ. ಅವರಿಗೂ ಆಗಾಗ ಅಡ್ಡಿಪಡಿಸಲಾಗುತ್ತದೆ. ಅವರ ಮೈಕ್‌ಗಳನ್ನು ಆಗಾಗ ಆಫ್‌ ಮಾಡಲಾಗುತ್ತದೆ ಎಂದು ರಾಜ್ಯಸಭೆಯ ಕಾಂಗ್ರೆಸ್ ಉಪ ನಾಯಕ ಪ್ರಮೋದ್ ತಿವಾರಿ ಆರೋಪಿಸಿದ್ದಾರೆ.

Jagdeep Dhankhar
Jagdeep Dhankhar


ಉಪಾಧ್ಯಕ್ಷರನ್ನು ಹೇಗೆ ತೆಗೆದು ಹಾಕಬಹುದು?

ಉಪಾಧ್ಯಕ್ಷರು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿದ್ದಾರೆ ಮತ್ತು ಮೇಲ್ಮನೆಯ ಸುಗಮ ಕಾರ್ಯನಿರ್ವಹಣೆಗಾಗಿ ನಿಯಮಗಳು ಮತ್ತು ಸಂಪ್ರದಾಯಗಳನ್ನು ಎತ್ತಿಹಿಡಿಯುವ ಮೂಲಕ ಸಂಸದೀಯ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಅವರನ್ನು ಭಾರತದ ಉಪರಾಷ್ಟ್ರಪತಿ ಹುದ್ದೆಯಿಂದ ತೆಗೆದುಹಾಕಿದಾಗ ಮಾತ್ರ ಅವರನ್ನು ರಾಜ್ಯಸಭೆ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಬಹುದು!

ಇದನ್ನು ರಾಜ್ಯಸಭೆಯಲ್ಲಿ ನಿರ್ಣಯದ ಮೂಲಕ ಮಾಡಬಹುದು. ಆ ವೇಳೆ ಬಹುಪಾಲು ಸದಸ್ಯರ ಅಂಗೀಕಾರ ಮುಖ್ಯವಾಗುತ್ತದೆ. ಬಳಿಕ ಲೋಕಸಭೆಯ ಒಪ್ಪಿಗೆ ಬೇಕಾಗುತ್ತದೆ. ಈ ಉದ್ದೇಶಕ್ಕಾಗಿ ನಿರ್ಣಯವನ್ನು ಕನಿಷ್ಠ 14 ದಿನಗಳ ಸೂಚನೆಯ ಅನಂತರ ಮಾತ್ರ ವರ್ಗಾಯಿಸಬಹುದು. ಸಂವಿಧಾನದ ಪರಿಚ್ಛೇದ 67(b) ಪ್ರಕಾರ ಉಪರಾಷ್ಟ್ರಪತಿಯನ್ನು ರಾಜ್ಯಸಭೆಯ ನಿರ್ಣಯದ ಮೂಲಕ ಎಲ್ಲಾ ಸದಸ್ಯರ ಬಹುಮತದ ಬಳಿಕ ಸದನದ ಒಪ್ಪಿಗೆ ಪಡೆದು ತೆಗೆದು ಹಾಕಬಹುದು. ಆದರೆ ನಿರ್ಣಯವನ್ನು ಮಂಡಿಸುವ ಕನಿಷ್ಠ ಹದಿನಾಲ್ಕು ದಿನಗಳ ಸೂಚನೆಯನ್ನು ನೀಡಬೇಕಾಗುತ್ತದೆ.

ಏನು ಪ್ರಕ್ರಿಯೆ?

ಪದಚ್ಯುತಿ ನಿರ್ಣಯವನ್ನು ರಾಜ್ಯಸಭೆಯಲ್ಲಿ ಮಾತ್ರ ಮಂಡಿಸಬಹುದೇ ಹೊರತು ಲೋಕಸಭೆಯಲ್ಲಿ ಅಲ್ಲ.
ಇದನ್ನೂ ಓದಿ: Parliament Session: ರಾಜ್ಯಸಭೆಯಲ್ಲಿ ಮತ್ತೊಮ್ಮೆ ಜಗದೀಪ್ ಧನಕರ್-ಜಯಾ ಬಚ್ಚನ್ ಜಟಾಪಟಿ! ಈ ವಿಡಿಯೊ ನೋಡಿ

ನಿರ್ಣಯವನ್ನು ರಾಜ್ಯಸಭೆಯಲ್ಲಿ ಬಹುಮತದಿಂದ ಅಂಗೀಕರಿಸಬೇಕಾಗುತ್ತದೆ. ಬಳಿಕ ಲೋಕಸಭೆಯಲ್ಲಿ ಸರಳ ಬಹುಮತದಿಂದಾದರೂ ಒಪ್ಪಿಗೆ ಸೂಚಿಸಬೇಕಾಗುತ್ತದೆ. ನಿರ್ಣಯವು ಪರಿಗಣನೆಯಲ್ಲಿರುವಾಗ ಅಧ್ಯಕ್ಷರು ಸದನದ ಅಧ್ಯಕ್ಷತೆ ವಹಿಸುವಂತಿಲ್ಲ. ಹಾಜರಾಗಬಹುದು, ಮಾತನಾಡಬಹುದು ಮತ್ತು ಕಲಾಪದಲ್ಲಿ ಭಾಗವಹಿಸಬಹುದು. ಆದರೆ ಮತ ಚಲಾಯಿಸಲು ಸಾಧ್ಯವಿಲ್ಲ.
ರಾಜ್ಯಸಭೆಯ ಅಧ್ಯಕ್ಷರ ಪದಚ್ಯುತಿಗೆ ನಿರ್ಣಯವು ಪರಿಗಣನೆಯಲ್ಲಿರುವಾಗ ಸಮಾನ ಮತಗಳು ಬಂದರೆ ಲೋಕಸಭೆಯ ಅಧ್ಯಕ್ಷರು ತಮ್ಮ ಮತ ಚಲಾಯಿಸಬಹುದಾಗಿದೆ.

Continue Reading

ವಿದೇಶ

Britain Violence: ಬ್ರಿಟನ್‌ನಲ್ಲಿ ವಲಸಿಗರು, ಮುಸ್ಲಿಮರ ವಿರುದ್ಧ ಪ್ರತಿಕಾರದ ದಾಳಿ ನಡೆಯುತ್ತಿರುವುದೇಕೆ?

Anti-Racist Protests: ಉತ್ತರ ಇಂಗ್ಲೆಂಡ್‌ನ ಸೌತ್‌ಪೋರ್ಟ್‌ನಲ್ಲಿ ನೃತ್ಯ ಕಾರ್ಯಕ್ರಮದ ವೇಳೆ ನಡೆದ ದಾಳಿಯಲ್ಲಿ ಆರರಿಂದ ಒಂಬತ್ತು ವರ್ಷ ವಯಸ್ಸಿನ ಮೂವರು ಬಾಲಕಿಯರು ಕೊಲ್ಲಲ್ಪಟ್ಟರು. ಇತರ ಎಂಟು ಮಕ್ಕಳು ಮತ್ತು ಇಬ್ಬರು ವಯಸ್ಕರು ಗಾಯಗೊಂಡರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ದಾಳಿಕೋರರಲ್ಲಿ ಒಬ್ಬನಾದ 17 ವರ್ಷದ ಆಕ್ಸೆಲ್ ರುಡಕುಬಾನ ಎಂಬಾತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಮೂರು ಕೊಲೆ ಪ್ರಕರಣ, 10 ಕೊಲೆ ಯತ್ನದ ಆರೋಪ ಮತ್ತು ಹರಿತವಾದ ಬ್ಲೇಡ್ ಅನ್ನು ಹೊಂದಿರುವ ಆರೋಪ ಹೊರಿಸಲಾಗಿದೆ. ಈ ಘಟನೆ ವಲಸಿಗರು ಮತ್ತು ಮುಸ್ಲಿಮರ ವಿರುದ್ಧ ಸ್ಥಳಿಯ ಜನರು ರೊಚ್ಚಿಗೇಳುವಂತೆ ಮಾಡಿದೆ.

VISTARANEWS.COM


on

By

Anti-Racist Protests
Koo

ಮಕ್ಕಳ ನೃತ್ಯ ಕಾರ್ಯಕ್ರಮವೊಂದರಲ್ಲಿ ನಡೆದ ದಾಳಿಯಿಂದ ಉಂಟಾದ ಗಲಭೆ (Britain Violence) ಈಗ ಯುಕೆಯ (United Kingdom) ವಿವಿಧ ಭಾಗಗಳನ್ನು ಆವರಿಸಿದೆ. ಅಲ್ಲಲ್ಲಿ ಪ್ರತಿಭಟನೆಗಳು (protest) ನಡೆಯುತ್ತಿದ್ದು, ವಲಸಿಗರು, ಮುಸ್ಲಿಮರನ್ನು (muslim community) ಗುರಿಯಾಗಿಸಿಕೊಂಡು ಅಂಗಡಿ ಧ್ವಂಸ, ಪೊಲೀಸರೊಂದಿಗೆ ಘರ್ಷಣೆ ಹೆಚ್ಚಾಗುತ್ತಿದೆ.

ಜುಲೈ 29ರಂದು ಉತ್ತರ ಇಂಗ್ಲೆಂಡ್‌ನ ಸೌತ್‌ಪೋರ್ಟ್‌ನಲ್ಲಿ ಟೇಲರ್ ಸ್ವಿಫ್ಟ್ ನೃತ್ಯ ಕಾರ್ಯಕ್ರಮದ ವೇಳೆ ನಡೆದ ದಾಳಿಯಲ್ಲಿ ಆರರಿಂದ ಒಂಬತ್ತು ವರ್ಷ ವಯಸ್ಸಿನ ಮೂವರು ಬಾಲಕಿಯರು ಕೊಲ್ಲಲ್ಪಟ್ಟರು. ಇತರ ಎಂಟು ಮಕ್ಕಳು ಮತ್ತು ಇಬ್ಬರು ವಯಸ್ಕರು ಗಾಯಗೊಂಡರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ದಾಳಿಕೋರರಲ್ಲಿ ಒಬ್ಬನಾದ 17 ವರ್ಷದ ಆಕ್ಸೆಲ್ ರುಡಕುಬಾನ ಎಂಬಾತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಮೂರು ಕೊಲೆ ಪ್ರಕರಣ, 10 ಕೊಲೆ ಯತ್ನದ ಆರೋಪ ಮತ್ತು ಹರಿತವಾದ ಬ್ಲೇಡ್ ಅನ್ನು ಹೊಂದಿರುವ ಆರೋಪ ಹೊರಿಸಲಾಗಿದೆ. ಈ ಘಟನೆ ವಲಸಿಗರು ಮತ್ತು ಮುಸ್ಲಿಮರ ವಿರುದ್ಧ ಸ್ಥಳಿಯ ಜನರು ರೊಚ್ಚಿಗೇಳುವಂತೆ ಮಾಡಿದೆ.

ಘಟನೆಯ ಬಳಿಕ ಆಕ್ಸೆಲ್ ರುಡಾಕುಬಾನಾ ವೇಲ್ಸ್‌ನ ಕಾರ್ಡಿಫ್‌ನಲ್ಲಿ ಹುಟ್ಟಿ ಬೆಳೆದಿದ್ದು, ಈತ ಇಸ್ಲಾಮಿ ವಲಸಿಗ ಎಂಬ ಸುಳ್ಳು ಮಾಹಿತಿ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಡಿದೆ. ಈ ತಪ್ಪು ಮಾಹಿತಿಯಿಂದ ಸ್ಥಳೀಯ ಮಸೀದಿಯ ಮೇಲೆ ದಾಳಿಯ ಪ್ರಯತ್ನ ಸೇರಿದಂತೆ ಸೌತ್‌ಪೋರ್ಟ್‌ನಲ್ಲಿ ಹಿಂಸಾತ್ಮಕ ಮುಸ್ಲಿಂ ವಿರೋಧಿ ಪ್ರತಿಭಟನೆಗಳು ಆರಂಭವಾಯಿತು.


ತೀವ್ರಗೊಂಡ ಪ್ರತಿಭಟನೆ

ಕೋಪಗೊಂಡ ಪ್ರತಿಭಟನಾಕಾರರ ಗುಂಪು ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರ ಡೌನಿಂಗ್ ಸ್ಟ್ರೀಟ್ ಕಚೇರಿಯ ಮೇಲೆ ದಾಳಿ ನಡೆಸಿ ವಲಸೆಯ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಮತ್ತು ಸರ್ಕಾರದಿಂದ ಕ್ರಮಕ್ಕೆ ಒತ್ತಾಯಿಸಿದರು. “ನಮ್ಮ ಮಕ್ಕಳನ್ನು ಉಳಿಸಿ” ಮತ್ತು “ನಮಗೆ ನಮ್ಮ ದೇಶ ಮರಳಬೇಕು” ಎಂಬ ಗುಂಪಿನ ಘೋಷಣೆಯನ್ನು ಕೂಗಿದ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆಗಳನ್ನು ನಡೆಸಿದರು. ರಾತ್ರಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಮೆಟ್ರೋಪಾಲಿಟನ್ ಪೊಲೀಸರು 111 ಮಂದಿಯನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಐದು ಮಂದಿ ಅಧಿಕಾರಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸೌತ್‌ಪೋರ್ಟ್‌ನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಪೊಲೀಸ್ ವ್ಯಾನ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು.

ಬಳಿಕ ಬ್ರಿಟನ್‌ನಾದ್ಯಂತ ಸುಂದರ್‌ಲ್ಯಾಂಡ್, ಮ್ಯಾಂಚೆಸ್ಟರ್, ಪ್ಲೈಮೌತ್ ಮತ್ತು ಬೆಲ್‌ಫಾಸ್ಟ್ ಸೇರಿದಂತೆ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಲಭೆಗಳು ಹೆಚ್ಚಾಗಿವೆ. ಪ್ರತಿಭಟನಾಕಾರರು ವಲಸಿಗರನ್ನು ಅಥವಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಅಂಗಡಿಗಳನ್ನು ಧ್ವಂಸಗೊಳಿಸುತ್ತಿದ್ದಾರೆ.

ಗಲಭೆ ಹಿಂದೆ ಯಾರಿದ್ದಾರೆ?

ಪ್ರಮುಖ ಮುಸ್ಲಿಂ ವಿರೋಧಿ ಮತ್ತು ವಲಸೆ-ವಿರೋಧಿ ಕಾರ್ಯಕರ್ತ ಎಂದು ಗುರುತಿಸಿಕೊಂಡಿರುವ ಸ್ಟೀಫನ್ ಯಾಕ್ಸ್ ಲೇ ಲೆನ್ನನ್ ಉದ್ವಿಗ್ನತೆಯನ್ನು ಪ್ರಚೋದಿಸಲು ಸುಳ್ಳು ಮಾಹಿತಿಯನ್ನು ಹರಡಿದ್ದಾನೆ ಎಂದು ಆರೋಪಿಸಲಾಗಿದೆ. ಪೋಲೀಸರ ಪ್ರಕಾರ ಘರ್ಷಣೆಯಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು ಸ್ಥಳೀಯ ಪ್ರದೇಶಗಳ ಹೊರಗಿನ ಬಲಪಂಥೀಯ ಹೋರಾಟಗಾರರು. ಇವರೊಂದಿಗೆ ಸ್ಥಳೀಯ ಸಮಸ್ಯೆ ಹೊಂದಿರುವ ಕೆಲವು ವ್ಯಕ್ತಿಗಳು ಅಥವಾ ಯುವಕರು ಸಹ ಸೇರಿಕೊಂಡಿದ್ದಾರೆ.


ಗಲಭೆಯ ಹಿಂದಿನ ಪ್ರೇರಣೆ

ಗಲಭೆಕೋರರು ತಮ್ಮನ್ನು “ದೇಶಭಕ್ತರು” ಎಂದು ಪ್ರತಿಪಾದಿಸಿದ್ದಾರೆ. ಹೆಚ್ಚುತ್ತಿರುವ ವಲಸೆಯು ಬ್ರಿಟಿಷ್ ಸಮಾಜವನ್ನು ದುರ್ಬಲಗೊಳಿಸುತ್ತಿವೆ ಎಂದು ಪ್ರತಿಪಾದಿಸುತ್ತಿದ್ದಾರೆ. ವಲಸೆಯು ಹಿಂಸಾಚಾರ ಮತ್ತು ಅಪರಾಧವನ್ನು ಉತ್ತೇಜಿಸುತ್ತದೆ ಮತ್ತು ರಾಜಕಾರಣಿಗಳು ವಲಸಿಗರಿಗೆ ಒಲವು ತೋರುತ್ತಾರೆ ಎಂದು ಅವರು ವಾದಿಸಿದ್ದಾರೆ. ಬ್ರಿಟನ್‌ನಲ್ಲಿ ವಲಸಿಗರು ಹೆಚ್ಚುತ್ತಿದ್ದಾರೆ. ಅವರಿಂದ ಸ್ಥಳೀಯ ಬ್ರಿಟಿಷರಿಗೆ ಅಪಾಯ ಎದುರಾಗಿದೆ ಎಂಬ ಆಕ್ರೋಶ ಹೆಚ್ಚುತ್ತಿದೆ.

ಸರ್ಕಾರದ ಪ್ರತಿಕ್ರಿಯೆ ಏನು?

ಗಲಭೆಗಳಿಗೆ ಪ್ರತಿಕ್ರಿಯೆಯಾಗಿ ಸ್ಟಾರ್ಮರ್ ನೇತೃತ್ವದ ಸರ್ಕಾರವು ಕ್ಷಿಪ್ರ ಕ್ರಮ ಕೈಗೊಂಡಿದೆ. ಸುಮಾರು 600 ಹೆಚ್ಚುವರಿ ಜೈಲು ಸ್ಥಳಗಳನ್ನು ಲಭ್ಯವಾಗುವಂತೆ ಮಾಡಿದೆ. ಪರಿಸ್ಥಿತಿಯು ಉಲ್ಬಣಗೊಳ್ಳುವುದನ್ನು ತಡೆಯಲು ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಿಂಸಾತ್ಮಕ ಕೃತ್ಯಕ್ಕಾಗಿ 58 ವರ್ಷ ವಯಸ್ಸಿನ ಬ್ರಿಟಿಷ್ ವ್ಯಕ್ತಿಯೊಬ್ಬರಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: Bangladesh Unrest: ಭಾರತದ ಗಡಿಯೊಳಗೆ ಪ್ರವೇಶಕ್ಕೆ ಬಾಂಗ್ಲಾದ 600 ಜನ ಯತ್ನ-BSF ಮಾಹಿತಿ

ಫೇಸ್‌ಬುಕ್‌ನಲ್ಲಿ ಜನಾಂಗೀಯ ದ್ವೇಷವನ್ನು ಹುಟ್ಟುಹಾಕಲು ಬೆದರಿಕೆಯ ಭಾಷೆ ಬಳಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಹ ಸರ್ಕಾರ ಗುರಿಯಾಗಿಸಿಕೊಂಡಿದೆ. ಪ್ರಚೋದನೆ ಮತ್ತು ಆನ್‌ಲೈನ್‌ನಲ್ಲಿ ಸುಳ್ಳು ಮಾಹಿತಿ ಹರಡುವುದನ್ನು ತಡೆಯಲು ಸಚಿವ ಪೀಟರ್ ಕೈಲ್ ಪ್ರಮುಖ ಟೆಕ್ ಕಂಪನಿಗಳಾದ ಟಿಕ್‌ಟಾಕ್, ಮೆಟಾ, ಗೂಗಲ್ ಮತ್ತು ಎಕ್ಸ್‌ನ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ.

Continue Reading
Advertisement
Bangladesh Unrest
ಕರ್ನಾಟಕ5 mins ago

Bangladesh Unrest: ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ

Viral News
Latest7 mins ago

Viral News: ಬಸ್ ನಿಲ್ಲಿಸದಿದ್ದಕ್ಕೆ ಕೋಪಗೊಂಡು ಕಂಡಕ್ಟರ್‌ ಮೇಲೆ ನಾಗರಹಾವನ್ನು ಎಸೆದ ಮಹಿಳೆ!

Viral News
Latest13 mins ago

Viral News: ದಂತ ಕಸಿ ಮಾಡಲು ಮೂಳೆಗಳಿಗಾಗಿ ಸಾವಿರಾರು ಶವಗಳನ್ನು ಕದ್ದ ಚೀನಾ ಕಂಪನಿ!

Jagdeep Dhankhar
ರಾಜಕೀಯ21 mins ago

Jagdeep Dhankhar: ರಾಜ್ಯಸಭಾಧ್ಯಕ್ಷರನ್ನು ಹುದ್ದೆಯಿಂದ ಇಳಿಸಲು ಹೊರಟಿವೆ ಪ್ರತಿಪಕ್ಷಗಳು! ಇದು ಸಾಧ್ಯವೇ?

Bangladesh Unrest
ವಿದೇಶ39 mins ago

Bangladesh Unrest: ಪ್ರತಿಭಟನೆಗೆ ಮಣಿದು ರಾಜೀನಾಮೆಗೆ ಮುಂದಾದ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಒಬೈದುಲ್ ಹಸನ್

ed raid
ಬೆಂಗಳೂರು53 mins ago

ED Raid: ಬೆಂಗಳೂರು, ಧಾರವಾಡದಲ್ಲಿ ಕೆಐಎಡಿಬಿ ಕಚೇರಿಗಳಿಗೆ ಇಡಿ ದಾಳಿ; 26 ಗಂಟೆ ಪರಿಶೀಲಿಸಿದರೂ ಮುಗಿಯದ ಹಗರಣದ ದಾಖಲೆ!

Govt Quota Seats
ಕರ್ನಾಟಕ1 hour ago

Govt Quota Seats: ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌; ಇನ್ಮುಂದೆ ಖಾಸಗಿ ಪದವಿ ಕಾಲೇಜುಗಳಲ್ಲೂ ಸಿಗಲಿದೆ ಸರ್ಕಾರಿ ಕೋಟಾ ಸೀಟ್!

Team India
ಕ್ರೀಡೆ1 hour ago

Team India: ಆಸೀಸ್​ ಪ್ರವಾಸದಲ್ಲಿ 2 ದಿನಗಳ ಪಿಂಕ್‌ ಬಾಲ್‌ ಅಭ್ಯಾಸ ಪಂದ್ಯ ಆಡಲಿದೆ ಭಾರತ ತಂಡ

Narendra Modi
ದೇಶ2 hours ago

Narendra Modi: ಭೂಕುಸಿತ ಪೀಡಿತ ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ

Anti-Racist Protests
ವಿದೇಶ2 hours ago

Britain Violence: ಬ್ರಿಟನ್‌ನಲ್ಲಿ ವಲಸಿಗರು, ಮುಸ್ಲಿಮರ ವಿರುದ್ಧ ಪ್ರತಿಕಾರದ ದಾಳಿ ನಡೆಯುತ್ತಿರುವುದೇಕೆ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌