Sexual Harassment: 80 ವರ್ಷದ ಅಜ್ಜಿಯ ಮೇಲೆ ನಿರಂತರ ಅತ್ಯಾಚಾರ; ಮೊಮ್ಮಗನಿಗೆ ಜೀವಾವಧಿ ಶಿಕ್ಷೆ - Vistara News

Latest

Sexual Harassment: 80 ವರ್ಷದ ಅಜ್ಜಿಯ ಮೇಲೆ ನಿರಂತರ ಅತ್ಯಾಚಾರ; ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

Sexual Harassment: ಅಜ್ಜಿ ಹಾಗೂ ಮೊಮ್ಮಕ್ಕಳ ಬಾಂಧವ್ಯ ತುಂಬಾ ಅನ್ಯೋನ್ಯವಾದದ್ದು. ಮೊಮ್ಮಕ್ಕಳ ಲಾಲನೆ ಪಾಲನೆಯನ್ನು ತಾಯಿಗಿಂತ ತುಸು ಹೆಚ್ಚಾಗಿಯೇ ಅಜ್ಜಿಯಂದಿರು ಮಾಡುತ್ತಾರೆ. ಆದರೆ ಇಲ್ಲೊಬ್ಬ ಮೊಮ್ಮಗ ತನ್ನ ಅಜ್ಜಿಯ ಮೇಲೆಯೇ ಹೀನಾಯ ಕೃತ್ಯ ಎಸಗಿದ್ದಾನೆ. ತಾಯಿಯಿಲ್ಲದ ವೇಳೆ ಅಜ್ಜಿಯನ್ನು ತನ್ನ ಕಾಮದಾಹಕ್ಕೆ ಬಳಸಿಕೊಂಡಿದ್ದು ಅಲ್ಲದೇ, ಯಾರಿಗಾದರೂ ತಿಳಿಸಿದರೆ ಮತ್ತಷ್ಟು ತೊಂದರೆ ಕೊಡುವುದಾಗಿ ಅಜ್ಜಿಗೆ ಬೆದರಿಕೆಯೊಡ್ಡಿದ್ದ. ಈ ಕಾಮುಕ ಮೊಮ್ಮಗನಿಗೆ ಕೋರ್ಟ್ ಈಗ ಕಠಿಣ ಶಿಕ್ಷೆ ವಿಧಿಸಿದೆ.

VISTARANEWS.COM


on

Sexual Harassment
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಸಾಮಾನ್ಯವಾಗಿ ಈ ಪ್ರಕರಣದಲ್ಲಿ ಯುವತಿಯರು ಅಥವಾ ಬಾಲಕಿಯರು ಬಲಿಪಶುಗಳಾಗಿರುತ್ತಿದ್ದರು. ಇದೀಗ ಸಿಕ್ಕಿಂನಲ್ಲಿ 80 ವರ್ಷದ ಅಜ್ಜಿಯ ಮೇಲೆ 24 ವರ್ಷದ ಮೊಮ್ಮಗ ಅತ್ಯಾಚಾರ (Sexual Harassment) ಎಸಗಿದ ಪ್ರಕರಣದಲ್ಲಿ ಈತನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.

ಸಂತ್ರಸ್ತ ಅಜ್ಜಿ ತನ್ನ ಮಗಳು, ಅಳಿಯ, ಮತ್ತು ಮೊಮ್ಮಗನೊಂದಿಗೆ ವಾಸವಾಗಿದ್ದಳು. ಸಂತ್ರಸ್ತೆಯ ಮಗಳು ಪಶ್ಚಿಮ ಬಂಗಾಳ ಪ್ರವಾಸದಿಂದ ಹಿಂದಿರುಗಿದಾಗ ತಾಯಿ ಕಾಣೆಯಾಗಿರುವುದನ್ನು ನೋಡಿ ಆಕೆಯನ್ನು ಹುಡುಕಿದಾಗ ವೃದ್ಧ ತಾಯಿ ನೆರೆಹೊರೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದಳು. ಅಲ್ಲಿ ಅಜ್ಜಿ ಮಗಳ ಬಳಿ ಹಲ್ಲೆಯನ್ನು ಬಹಿರಂಗಪಡಿಸಿದಳು. ಮತ್ತು ಮೊಮ್ಮಗ ತನ್ನ ಮೇಲೆ ಅನೇಕ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ್ದಾನೆ ಮತ್ತು ಈ ವಿಚಾರ ಬಹಿರಂಗಪಡಿಸಿದರೆ ಮತ್ತಷ್ಟು ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಳು. ಅಲ್ಲದೇ ತನ್ನ ಸ್ವಂತ ಮೊಮ್ಮಗನ ಬಗ್ಗೆ ಪೊಲೀಸರಿಗೆ ದೂರು ನೀಡಲು ಆಕೆ ಹಿಂಜರಿದಿದ್ದಳು. ಆದರೆ ಆಕೆಯ ಮಗಳು ಮಾತ್ರ ತನ್ನ ಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ದೂರಿನಲ್ಲಿ ಅಜ್ಜಿ ಮೊಮ್ಮಗನಿಂದ ಪದೇ ಪದೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದು, ಆತ ತನ್ನ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ, ಬೆದರಿಕೆ ಹಾಕುತ್ತಿದ್ದ ಎಂಬುದನ್ನು ವಿವರಿಸಿದ್ದಳು. ಆದರೆ ಆಕೆಯ ಮೇಲೆ ಯಾವುದೇ ದೈಹಿಕ ಗಾಯ ಆಗಿರಲಿಲ್ಲ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ವರದಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿತ್ತು.

ಇದನ್ನೂ ಓದಿ:ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್‌ ಕಸಿದು ಓಡುತ್ತಾರೆ! ಪೋಲಿಸ್ರು ಏನ್‌ ಮಾಡ್ತಿದ್ದಾರೋ!

ಹಾಗಾಗಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (2) (ಎಫ್) (ಸಂಬಂಧಿಕರು, ಪೋಷಕರ ಮೇಲೆ ಅತ್ಯಾಚಾರ ಇತ್ಯಾದಿ), 376 (2) (ಎನ್) (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಫಾಸ್ಟ್ ಟ್ರ್ಯಾಕ್ ಸೆಷನ್ಸ್ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿ ಅಪರಾಧಿ ಮೊಮ್ಮಗನಿಗೆ ಜೀವಾವಧಿ ಶಿಕ್ಷೆ ಮತ್ತು ಪ್ರತಿ ಅತ್ಯಾಚಾರ ಅಪರಾಧಕ್ಕೆ 10,000 ರೂ.ಗಳ ದಂಡ ವಿಧಿಸಿತ್ತು, ಜೊತೆಗೆ ಕ್ರಿಮಿನಲ್ ಬೆದರಿಕೆಗಾಗಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 1,000 ರೂ. ಶಿಕ್ಷೆಗಳು ಏಕಕಾಲದಲ್ಲಿ ನಡೆಯಬೇಕೆಂದು ತೀರ್ಪು ನೀಡಿದೆ. ಅಪರಾಧಿ ಮೊಮ್ಮಗ ಈ ಬಗ್ಗೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರೂ ಹೈಕೋರ್ಟ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಮೇಲ್ಮನವಿಯನ್ನು ವಜಾಗೊಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

First Night Video: ಫಸ್ಟ್‌ ನೈಟ್‌ ವಿಡಿಯೊ ಹಂಚಿಕೊಂಡ ನವ ದಂಪತಿ! ಇನ್ನೇನು ಬಾಕಿ ಉಳಿದಿದೆ ಎಂದ ನೆಟ್ಟಿಗರು!

First Night Video: ಮೊದಲ ರಾತ್ರಿ ಈ ಪದ ಕೇಳುತ್ತಲೇ ಕೆಲವರ ಕೆನ್ನೆ ಕೆಂಪಾಗುತ್ತದೆ. ನಾಚಿಕೆಯಾಗುವುದು ಸಾಮಾನ್ಯ. ಆದರೆ ಈ ದಂಪತಿ ತಮ್ಮ ಮೊದಲ ರಾತ್ರಿಯ ವಿಡಿಯೊವನ್ನು ಯಾವುದೇ ನಾಚಿಕೆ ಇಲ್ಲದೇ ತೋರಿಸಿದ್ದಾರೆ. ತಾವು ಮಲಗುವ ಕೋಣೆ, ಹಾಸಿಗೆ ಇವೆಲ್ಲದರ ವಿಡಿಯೊ ತೋರಿಸುವುದರ ಜೊತೆಗೆ ವಧುವಿನ ಬಳಿ ಮೊದಲ ರಾತ್ರಿಯ ಅನುಭವದ ಬಗ್ಗೆ ವರನು ಪ್ರಶ್ನೆ ಕೇಳಿದ್ದಾನೆ. ನೆಟ್ಟಿಗರು ಮಾತ್ರ ಇವರಿಬ್ಬರ ವಿಡಿಯೊ ನೋಡಿ ಹೌಹಾರಿದ್ದಾರೆ!

VISTARANEWS.COM


on

First Night Video
Koo

ಹೊಸದಾಗಿ ಮದುವೆಯಾದ ದಂಪತಿಗೆ ತಮ್ಮ ಹೊಸ ಜೀವನ ಶುರುಮಾಡಲು ಮೊದಲ ರಾತ್ರಿಯನ್ನು ಏರ್ಪಡಿಸುವುದು ಸಂಪ್ರದಾಯ. ಈ ದಿನ ಅವರು ಮಲಗುವ ಕೋಣೆಯನ್ನು ಸುಗಂಧ ದ್ರವ್ಯಗಳಿಂದ, ಹೂಗಳು, ಹಣ್ಣುಗಳಿಂದ ಅಲಂಕರಿಸುವುದು ಸಹಜ. ಸಾಮಾನ್ಯವಾಗಿ ದಂಪತಿ ತಮ್ಮ ಮೊದಲ ರಾತ್ರಿಯ ಅನುಭವವನ್ನು ಹಂಚಿಕೊಳ್ಳಲು ಮುಜುಗರಪಡುತ್ತಾರೆ. ಕೆಲವರು ಸೂಚ್ಯವಾಗಿ ತಮ್ಮ ಅನುಭವವನ್ನು ಆತ್ಮೀಯರಲ್ಲಿ ಹಂಚಿಕೊಂಡಿರಬಹುದು. ಆದರೆ ಯಾರೂ ಆ ರಾತ್ರಿ ಕಳೆದ ಕ್ಷಣವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಿಲ್ಲ. ಅಂತಹದರಲ್ಲಿ ಇಲ್ಲಿ ಒಂದು ದಂಪತಿ ತಮ್ಮ ಮೊದಲ ರಾತ್ರಿಯ (First Night Video) ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ.

ಈ ವೈರಲ್ ಆಗಿರುವ ವೀಡಿಯೊದಲ್ಲಿ, ದಂಪತಿ ತಮ್ಮ ವಿವಾಹ ಸಮಾರಂಭದ ನಂತರದ ಕ್ಷಣಗಳ ಬಗ್ಗೆ ತಮ್ಮ ಅನುಭವವನ್ನು ಚರ್ಚಿಸುತ್ತಿರುವುದನ್ನು ತೋರಿಸುತ್ತದೆ. ದಂಪತಿ ಅವರ ಮಲಗುವ ಕೋಣೆಯ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಇದರಲ್ಲಿ ವರನು ವಧುವನ್ನು ಆಕೆಯ ‘ಮೊದಲ ರಾತ್ರಿಯ’ ಅನುಭವದ ಬಗ್ಗೆ ಕೇಳುತ್ತಾನೆ. ಆಕೆ ಅದು ಇನ್ನೂ ನಡೆದಿಲ್ಲ ಎಂದು ಉತ್ತರಿಸಿದ್ದಾಳೆ. ನಂತರ ದಂಪತಿ ತಮ್ಮ ಮಲಗುವ ಕೋಣೆಯ ಅಲಂಕಾರಗಳನ್ನು ಪ್ರದರ್ಶನ ಮಾಡಿದ್ದಾರೆ.

ಈ ವಿಡಿಯೊವನ್ನು ಸುನಂದಾ ರಾಯ್ ಅವರು ಇದನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೊ ನೆಟ್ಟಿಗರಿಂದ ಟೀಕೆಗೆ ಒಳಗಾಗಿದೆ. ಅನೇಕರು ಇವರ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಇವರು ತಮ್ಮ ಗಡಿಗಳನ್ನು ದಾಟಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಈ ಬಗ್ಗೆ ಅಪನಂಬಿಕೆಯನ್ನು ವ್ಯಕ್ತಪಡಿಸಿ, ಕೇವಲ ಹಣಕ್ಕಾಗಿ, ಜನರು ಈಗ ತಮ್ಮ ವೈಯಕ್ತಿಕ ಜೀವನವನ್ನು ಮಾರಾಟ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದರು.ಇನ್ನೊಬ್ಬರು, ಅವರು ಮದುವೆಯ ರಾತ್ರಿ ಹಾಸಿಗೆಯನ್ನು ತೋರಿಸುತ್ತಿದ್ದಾರೆ, ಆಗ ನೋಡಲು ಇನ್ನೇನು ಉಳಿದಿದೆ? ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!

ಇಂತಹ ನಾಚಿಕೆಗೇಡಿನ ಕೆಲಸಗಳು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಇಂತಹ ಘಟನೆಗಳನ್ನು ಒಂದಲ್ಲ ಒಂದು ಪೋಸ್ಟ್ ಆಗುತ್ತಿರುತ್ತದೆ. ಅದೇರೀತಿ ಈ ವರ್ಷದ ಜನವರಿಯಲ್ಲಿ ಅಮೆರಿಕದ ನ್ಯೂಯಾರ್ಕ್‍ನಲ್ಲಿ ದಂಪತಿ ಸಾರ್ವಜನಿಕ ಉದ್ಯಾನವನದಲ್ಲಿ ಲೈಂಗಿಕ ಕೃತ್ಯದಲ್ಲಿ ತೊಡಗಿರುವುದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ತೆರೆದ ಪ್ರದೇಶದಲ್ಲಿ ದಂಪತಿಯ ಕೃತ್ಯವನ್ನು ಹಲವಾರು ಜನರು ಟೀಕಿಸಿದ್ದರು.

Continue Reading

ವಿದೇಶ

Kamala Harris: ಅಮೆರಿಕ ಚುನಾವಣೆ; ಟ್ರಂಪ್‌ಗೆ ಪೈಪೋಟಿ ನೀಡಲು ಬೈಡನ್‌ಗಿಂತ ಕಮಲಾ ಹ್ಯಾರಿಸ್‌ ಸಮರ್ಥ ಎನ್ನುತ್ತವೆ ಸಮೀಕ್ಷೆ!

ಅಮೆರಿಕದಲ್ಲಿ ಈಗ ಅಧ್ಯಕ್ಷೀಯ ಚುನಾವಣೆಯ ರಂಗು ಏರಲಾರಂಭಿಸಿದೆ. ಅಧ್ಯಕ್ಷೀಯ ಚುನಾವಣೆ ಕಣ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಾರಿ ಅಧ್ಯಕ್ಷೀಯ ರೇಸ್‌ನಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಅವರು ಟ್ರಂಪ್ ಅವರನ್ನು ಸೋಲಿಸಬಹುದೇ ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಕುರಿತು ಸಮೀಕ್ಷೆಗಳು ಏನು ಹೇಳುತ್ತವೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Kamala Harris
Koo

ವಾಷಿಂಗ್ಟನ್: ಅಮೆರಿಕ (US) ಚುನಾವಣೆ (election) ಕಣ ರಂಗೇರಿದೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಕಮಲಾ ಹ್ಯಾರಿಸ್ ತಮ್ಮದೇ ಆದ ಛಾಪು ಬೀರಿ ಅಮೆರಿಕ ರಾಜಕೀಯ ವಲಯದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಸಾಕಷ್ಟು ಮಂದಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರು ಚುನಾವಣಾ ಕಣದಿಂದ ಹಿಂದೆ ಸರಿದರೆ ಕಮಲಾ ಹ್ಯಾರಿಸ್‌ ಅವರು ಬೈಡನ್‌ ಅವರ ಉತ್ತರಾಧಿಕಾರಿಯಾಗುತ್ತಾರೆ ಎಂದೇ ಉನ್ನತ ಡೆಮಾಕ್ರಟ್‌ ಮೂಲಗಳು ಹೇಳಿವೆ. ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಲು ಬೈಡೆನ್‌ ಅವರಿಗೆ ಉತ್ತಮ ಅವಕಾಶವಿದೆಯೇ? ಬೈಡೆನ್ ರೇಸ್‌ನಲ್ಲಿ ಉಳಿದುಕೊಳ್ಳುತ್ತಾರೆಯೇ ಎನ್ನುವ ಬಗ್ಗೆಯೂ ಪ್ರಶ್ನೆಗಳು ಉದ್ಭವವಾಗಿವೆ.

59 ವರ್ಷದ ಕಮಲಾ ಹ್ಯಾರಿಸ್ ಅವರು ಭಾರತ ಮೂಲದವರು. ಮಾಜಿ ಯುಎಸ್ ಸೆನೆಟರ್ ಮತ್ತು ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದವರು. ಅವರು ಪಕ್ಷದಿಂದ ನಾಮನಿರ್ದೇಶಿತರಾದರೆ, ಮುಂದಿನ ನವೆಂಬರ್ 5ರ ಚುನಾವಣೆಯಲ್ಲಿ ಅವರು ಮೇಲುಗೈ ಸಾಧಿಸಿದರೆ ಅಮೆರಿಕದ ಅಧ್ಯಕ್ಷರಾದ ಮೊದಲ ಮಹಿಳೆ ಎಂಬ ಐತಿಹಾಸಿಕ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಅವರು ಅಮೆರಿಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೊದಲ ಆಫ್ರಿಕನ್ ಅಮೆರಿಕನ್ ಮತ್ತು ಏಷ್ಯನ್ ವ್ಯಕ್ತಿಯಾಗಿದ್ದಾರೆ.

ಮೂರೂವರೆ ವರ್ಷಗಳ ಶ್ವೇತಭವನದ ಅಧಿಕಾರಾವಧಿಯು ಬೈಡನ್‌ಗೆ ಪ್ರಮುಖ ಯಶಸ್ಸನ್ನು ಉಂಟು ಮಾಡಿಲ್ಲ. ಕಳೆದ ವರ್ಷದಂತೆ ಶ್ವೇತಭವನದೊಳಗಿನ ಅನೇಕರು ಮತ್ತು ಬೈಡೆನ್ ಪ್ರಚಾರ ತಂಡದವರು ಖಾಸಗಿಯಾಗಿ ಹ್ಯಾರಿಸ್ ಪರ ಅಭಿಯಾನವನ್ನು ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಅಂದಿನಿಂದ ಪರಿಸ್ಥಿತಿ ಗಮನಾರ್ಹವಾಗಿ ಬದಲಾಯಿತು. ಹ್ಯಾರಿಸ್ ಅವರು ಗರ್ಭಪಾತದ ಹಕ್ಕುಗಳ ಕುರಿತು ಮಾತನಾಡಿದರು ಮತ್ತು ಯುವ ಮತದಾರರನ್ನು ಮೆಚ್ಚಿಸಲು ಪ್ರಾರಂಭಿಸಿದರು ಎನ್ನುತ್ತಾರೆ ಡೆಮಾಕ್ರಟಿಕ್ ನಾಯಕರು.


ಹ್ಯಾರಿಸ್‌ಗೆ ಒಲವು

ಇತ್ತೀಚಿನ ಕೆಲವು ಸಮೀಕ್ಷೆಗಳು ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ವಿರುದ್ಧ ಬೈಡನ್‌ಗಿಂತ ಹ್ಯಾರಿಸ್ ಪರವಾಗಿ ಒಲವು ತೋರಿಸಿದೆ. ಆದರೂ ಅವರು ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. ಜುಲೈ 2ರಂದು ಬಿಡುಗಡೆಯಾದ ಸಿಎನ್‌ಎನ್ ಸಮೀಕ್ಷೆಯಲ್ಲಿ ಮತದಾರರು ಬೈಡೆನ್‌ಗಿಂತ ಟ್ರಂಪ್‌ ಮೇಲೆ ಶೇಕಡಾ 49ರಷ್ಟು ಒಲವು ತೋರಿದ್ದಾರೆ. ಟ್ರಂಪ್ ವಿರುದ್ಧ ಹ್ಯಾರಿಸ್ ಶೇ. 47ರಷ್ಟು ಮತದಾರ ಒಲವನ್ನು ಗಳಿಸಿದ್ದಾರೆ. ಸ್ವತಂತ್ರರು ಟ್ರಂಪ್‌ಗಿಂತ ಹ್ಯಾರಿಸ್‌ಗೆ ಶೇ. 43ರಿಂದ 40ರಷ್ಟು ಬೆಂಬಲ ನೀಡಿದ್ದಾರೆ. ಎರಡೂ ಪಕ್ಷಗಳಿಂದ ತಟಸ್ಥ ಆಗಿರುವವರು ಶೇ. 39ರಷ್ಟು ಪ್ರಮಾಣದಲ್ಲಿ ಕಮಲಾ ಹ್ಯಾರಿಸ್‌ಗೆ ಆದ್ಯತೆ ನೀಡಿದ್ದಾರೆ.

ಟ್ರಂಪ್ ಮತ್ತು ಬೈಡನ್ ನಡುವಿನ ಕಳೆದ ವಾರದ ದೂರದರ್ಶನದ ಚರ್ಚೆಯ ಅನಂತರ ರಾಯಿಟರ್ಸ್ ಸುದ್ದಿ ಸಂಸ್ಥೆ ನಡೆಸಿದ ಸಮೀಕ್ಷೆಯು ಹ್ಯಾರಿಸ್ ಮತ್ತು ಟ್ರಂಪ್ ಸ್ಪರ್ಧೆ ಬಹುತೇಕ ಸಮಬಲವಾಗಿದೆ ಎಂದು ಹೇಳಿದೆ. ಹ್ಯಾರಿಸ್ ಶೇ. 42 ಮತ್ತು ಟ್ರಂಪ್ ಶೇ. 43ರಷ್ಟು ಬೆಂಬಲ ಪಡೆಯುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಬೈಡೆನ್ ಅವರು ಈಗಾಗಲೇ ಟ್ರಂಪ್‌ಗಿಂತ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಕಮಲಾ ಹ್ಯಾರಿಸ್ ಅವರನ್ನು ಡೆಮೋಕ್ರಾಟ್ ಪಕ್ಷ ಮುನ್ನೆಲೆಗೆ ತರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: UK Election: ಬ್ರಿಟನ್‌ ಸಂಸತ್ತಿಗೆ 28 ಭಾರತೀಯ ಮೂಲದವರು ಆಯ್ಕೆ; ಈ ಪೈಕಿ 12 ಮಂದಿ ಸಿಖ್‌ ಸಮುದಾಯದವರು

Continue Reading

ಆರೋಗ್ಯ

Home remedies for Dengue: ಸರಳ ಮನೆ ಮದ್ದು ಬಳಸಿ; ಡೆಂಗ್ಯೂ ಅಪಾಯದಿಂದ ಪಾರಾಗಿ!

Home remedies for Dengue: ಡೆಂಗ್ಯೂ ಜ್ವರಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಆರೈಕೆ ಅಗತ್ಯ. ಡೆಂಗ್ಯೂ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳಿವೆ (Home Remedies). ಈ ಪರಿಹಾರಗಳು ಹೆಚ್ಚಿನ ಜ್ವರವನ್ನು ತಗ್ಗಿಸಬಹುದು ಮತ್ತು ರೋಗಲಕ್ಷಣಗಳಿಂದ ಸ್ವಲ್ಪ ವಿಶ್ರಾಂತಿ ನೀಡುವುದು. ಡೆಂಗ್ಯೂ ವ್ಯಾಪಿಸಿರುವ ಈ ಸಂದರ್ಭದಲ್ಲಿ ಸರಳ ಮನೆಮದ್ದುಗಳ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Home remedies for Dengue
Koo

ಬೆಂಗಳೂರು (bengaluru) (Home remedies for Dengue) ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂವಿನ (Dengue ) ಅಬ್ಬರ ಹೆಚ್ಚಾಗಿದೆ. ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಎಚ್ಚರ ತಪ್ಪಿದರೆ ಇದು ಪ್ರಾಣಾಪಾಯಕ್ಕೂ ಕಾರಣ ಆಗುತ್ತದೆ. ಆದರೆ ಕೆಲವು ಮನೆ ಮದ್ದಿನಿಂದ (Home Remedies) ಇದರಿಂದ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಿದೆ.

ಮಳೆಗಾಲದಲ್ಲಿ (rainy season) ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತವೆ. ಯಾಕೆಂದರೆ ನಿಂತ ನೀರು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿರುತ್ತದೆ. ವಿಪರೀತ ಜ್ವರ, ತಲೆನೋವು, ಕಣ್ಣುಗಳ ಹಿಂದೆ ನೋವು, ಆಯಾಸ, ಕೀಲು ನೋವು, ಚರ್ಮದ ದದ್ದು, ವಾಕರಿಕೆ ಮತ್ತು ವಾಂತಿ ಡೆಂಗ್ಯೂನ ಕೆಲವು ಪ್ರಮುಖ ಲಕ್ಷಣಗಳಾಗಿವೆ.

ಡೆಂಗ್ಯೂ ಜ್ವರಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಡೆಂಗ್ಯೂ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳಿವೆ. ಈ ಪರಿಹಾರಗಳು ಹೆಚ್ಚಿನ ಜ್ವರವನ್ನು ತಗ್ಗಿಸಬಹುದು ಮತ್ತು ರೋಗಲಕ್ಷಣಗಳಿಂದ ನಿಮಗೆ ಸ್ವಲ್ಪ ವಿಶ್ರಾಂತಿ ನೀಡಬಹುದು. ಡೆಂಗ್ಯೂ ಮತ್ತು ಅದರ ತೊಡಕುಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಹಾರಗಳು ಇಲ್ಲಿವೆ.


ಅಮೃತ ಬಳ್ಳಿ ರಸ

ಡೆಂಗ್ಯೂ ಜ್ವರಕ್ಕೆ ಅಮೃತ ಬಳ್ಳಿ ರಸ ಸುಪ್ರಸಿದ್ಧ ಪರಿಹಾರವಾಗಿದೆ. ಅಮೃತ ಬಳ್ಳಿಯ ರಸ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಲವಾದ ರೋಗ ನಿರೋಧಕ ಶಕ್ತಿಯು ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ಹೋರಾಡಲು, ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಒಂದು ಲೋಟ ನೀರಿನಲ್ಲಿ ಅಮೃತಬಳ್ಳಿ ಸಸ್ಯದ ಎರಡು ಸಣ್ಣ ಕಾಂಡಗಳನ್ನು ಕುದಿಸಬಹುದು. ಸ್ವಲ್ಪ ಬೆಚ್ಚಗಿರುವಾಗ ಈ ನೀರನ್ನು ಸೇವಿಸಿ. ನೀವು ಒಂದು ಕಪ್ ಬೇಯಿಸಿದ ನೀರಿಗೆ ಕೆಲವು ಹನಿ ಅಮೃತ ಬಳ್ಳಿಯ ರಸವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಬಹುದು. ಆದರೆ ಇದನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ.


ಪಪ್ಪಾಯ ಎಲೆಯ ರಸ

ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾಗುವುದರಿಂದ, ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಪಪ್ಪಾಯ ಎಲೆಯ ರಸವು ಉತ್ತಮ ಪರಿಹಾರವಾಗಿದೆ. ಪಪ್ಪಾಯ ಎಲೆಯ ರಸವು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಇದು ಡೆಂಗ್ಯೂ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಕೆಲವು ಪಪ್ಪಾಯ ಎಲೆಗಳನ್ನು ತೆಗೆದುಕೊಂಡು ಅದರಿಂದ ರಸವನ್ನು ಹೊರತೆಗೆಯಲು ಅವುಗಳನ್ನು ಪುಡಿಮಾಡಿ. ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಎರಡು ಬಾರಿ ಪಪ್ಪಾಯ ಎಲೆಯ ರಸವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು.


ತಾಜಾ ಪೇರಳೆ ರಸ

ಪೇರಳೆ ರಸವು ಬಹು ಪೋಷಕಾಂಶಗಳಿಂದ ತುಂಬಿರುತ್ತದೆ. ಇದರಲ್ಲಿ ವಿಟಮಿನ್ ಸಿಯು ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ನೀಡಲು ಆಹಾರದಲ್ಲಿ ತಾಜಾ ಪೇರಳೆ ರಸವನ್ನು ಸೇರಿಸಬಹುದು. ಪೇರಳೆ ರಸವು ನಿಮಗೆ ಇತರ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ. ದಿನಕ್ಕೆ ಎರಡು ಬಾರಿ ಒಂದು ಕಪ್ ಪೇರಳೆ ರಸವನ್ನು ಕುಡಿಯಬಹುದು ಅಥವಾ ಜ್ಯೂಸ್ ಬದಲಿಗೆ ತಾಜಾ ಪೇರಳೆ ಹಣ್ಣನ್ನು ಕೂಡ ತಿನ್ನಬಹುದು.


ಮೆಂತ್ಯ ಬೀಜಗಳು

ಮೆಂತ್ಯ ಬೀಜಗಳು ಡೆಂಗ್ಯೂ ಜ್ವರವನ್ನು ನಿಯಂತ್ರಿಸಲು ಸಹಾಯ ಮಾಡುವ ಬಹು ಪೋಷಕಾಂಶವಿರುವ ಔಷಧ ಕೆಲವು ಮೆಂತ್ಯ ಬೀಜಗಳನ್ನು ಒಂದು ಕಪ್ ಬಿಸಿ ನೀರಿನಲ್ಲಿ ನೆನೆಸಿಟ್ಟು ತಣ್ಣಗಾದ ಬಳಿಕ ದಿನಕ್ಕೆ ಎರಡು ಬಾರಿ ಕುಡಿಯಿರಿ. ಮೆಂತ್ಯ ನೀರಿನಲ್ಲಿ ವಿಟಮಿನ್ ಸಿ, ಕೆ ಮತ್ತು ಫೈಬರ್‌ ಸಮೃದ್ಧವಾಗಿರುವ ಕಾರಣ ಇತರ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಮೆಂತ್ಯ ನೀರು ಜ್ವರವನ್ನು ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಡೆಂಗ್ಯೂವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಬಲವಾದ ರೋಗನಿರೋಧಕ ಶಕ್ತಿಯು ಡೆಂಗ್ಯೂನ ಆರಂಭಿಕ ರೋಗಲಕ್ಷಣಗಳನ್ನು ಸಹ ತಡೆಯುತ್ತದೆ. ಸಿಟ್ರಸ್ ಹಣ್ಣುಗಳು, ಬೆಳ್ಳುಳ್ಳಿ, ಬಾದಾಮಿ, ಅರಿಶಿನ ಮತ್ತು ಇನ್ನೂ ಕೆಲವು ಆಹಾರ ಸಾಮಗ್ರಿಗಳಲ್ಲಿ ; ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳಿರುತ್ತವೆ. ಇವುಗಳನ್ನು ಆಹಾರದಲ್ಲಿ ಸೇರಿಸಿ ನಿಯಮಿತವಾಗಿ ಸೇವಿಸಿ.

ಇದನ್ನೂ ಓದಿ: Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

ಡೆಂಗ್ಯೂನ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷಿಸಿಕೊಳ್ಳಬೇಕು. ಈ ಪರಿಹಾರಗಳು ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮಾತ್ರ ಸಹಾಯ ಮಾಡುತ್ತದೆ. ಆದರೆ ಹೆಚ್ಚು ಕಾಲ ಮನೆಮದ್ದುಗಳನ್ನು ಅವಲಂಬಿಸಬೇಡಿ. ಕೂಡಲೇ ವೈದ್ಯರನ್ನು ಕಾಣಿರಿ.

Continue Reading

Latest

Murder Case: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!

Murder Case: ಅನೈತಿಕ ಸಂಬಂಧದಲ್ಲಿ ತೊಡಗಿ ಬದುಕಿನ ನೆಮ್ಮದಿಯನ್ನು ಕಳೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಕ್ಷಣದ ಖುಷಿಗಾಗಿ ಬದುಕಿಡೀ ಕಂಬಿ ಎಣಿಸುವ ಸ್ಥಿತಿಗೆ ತಲುಪುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.ಪ್ರಿಯಕರನಿಗಾಗಿ ಪತಿಯನ್ನೇ ಕತ್ತರಿಯಿಂದ ಪತ್ನಿಯೊಬ್ಬಳು ಕ್ರೂರವಾಗಿ ಕೊಲೆ ಮಾಡಿದ್ದಾಳೆ. ಶವವನ್ನು ಶೌಚಾಲಯದ ಚಾವಣಿಯ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾಳೆ. ಆದರೆ ಈಗ ಆಕೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Murder Case
Koo

ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧದ ಪ್ರಕರಣಗಳು ಮತ್ತು ಇದಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳು ಹೆಚ್ಚು ಸಂಭವಿಸುತ್ತಿವೆ. ಪರ ಪುರುಷರ ಸಂಗಕ್ಕೆ ಬೀಳುವ ಕೆಲವು ಮಹಿಳೆಯರು ತಮ್ಮ ಪತಿ ಹಾಗೂ ಹೆತ್ತ ಮಕ್ಕಳನ್ನು ಕೊಲ್ಲಲೂ ಹಿಂಜರಿಯುವುದಿಲ್ಲ. ಇದೀಗ ಅಂತಹದೊಂದು ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾದ ಎಟಿಎಸ್ ವೃತ್ತದ ಬಳಿ ಒಂದು ವಾರದ ಹಿಂದೆ ಕತ್ತರಿಯಿಂದ ಪತಿಯನ್ನು ಕ್ರೂರವಾಗಿ ಕೊಲೆ(Murder Case) ಮಾಡಿದ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಪೂಜಾ ಮತ್ತು ಪ್ರಹ್ಲಾದ್ ಕೊಲೆ ಮಾಡಿದ ಆರೋಪಿಗಳು. ಮಹೇಶ್ ಕೊಲೆಯಾದ ಬಲಿಪಶು. ಪೂಜಾ ಮತ್ತು ಪ್ರಹ್ಲಾದ್ ಒಂದೇ ಗ್ರಾಮದವರಾಗಿದ್ದು, ಇವರ ನಡುವೆ ಪ್ರೀತಿ ಮೂಡಿತ್ತು. ಆದರೆ ಮಹೇಶ್‍ನನ್ನು ಮದುವೆಯಾದ ಪೂಜಾ ಪತಿಯ ಜೊತೆ ಗ್ರೇಟರ್ ನೋಯ್ಡಾದ ಬಿರೋಂಡಾಕ್ಕೆ ಬಂದಿದ್ದಳು. ಅಲ್ಲಿ ಮಹೇಶ್ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ಸಮಯದಲ್ಲಿ, ಪೂಜಾ ತನ್ನ ಪ್ರಿಯಕರ ಪ್ರಹ್ಲಾದ್‍ಗೆ ಕೆಲಸ ಹುಡುಕಲು ಸಹಾಯ ಮಾಡುವ ನೆಪದಲ್ಲಿ ಗ್ರೇಟರ್ ನೋಯ್ಡಾಕ್ಕೆ ಕರೆದಳು. ಅಲ್ಲಿ ಪ್ರಹ್ಲಾದ್‍ಗೆ ಎನ್ಎಫ್ಎಲ್ ಸೊಸೈಟಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಏನೋ ಸಿಕ್ಕಿದೆ. ಆದರೆ ಆತ ಆಗಾಗ ಪೂಜಾಳನ್ನು ಭೇಟಿ ಮಾಡಲು ಪ್ರಾರಂಭಿಸಿದ. ಅಲ್ಲದೇ ಇವರ ನಡುವೆ ಅಕ್ರಮ ಸಂಬಂಧ ಮುಂದುವರಿಯಿತು ಎನ್ನಲಾಗಿದೆ.

ಆದರೆ ಜುಲೈ 1ರ ರಾತ್ರಿ ಮಹೇಶ್ ಇಲ್ಲದಿದ್ದಾಗ ಪ್ರಹ್ಲಾದ್ ಪೂಜಾಳ ಮನೆಗೆ ಭೇಟಿ ನೀಡಿದ್ದಾನೆ. ಆದರೆ, ಮಹೇಶ್ ಅನಿರೀಕ್ಷಿತವಾಗಿ ಮನೆಗೆ ಹಿಂದಿರುಗಿದಾಗ ಪ್ರಹ್ಲಾದ್ ಜೊತೆ ಪತ್ನಿ ಇರುವುದನ್ನು ಕಂಡು ಸಿಟ್ಟಾಗಿದ್ದಾನೆ. ಈ ವೇಳೆ ಪೂಜಾ ಮತ್ತು ಪ್ರಹ್ಲಾದ್ ಮಹೇಶ್ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ ಅವರು ಶವವನ್ನು ಶೌಚಾಲಯದ ಚಾವಣಿಯ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕೊಲೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಇದನ್ನೂ ಓದಿ: 1.92 ಲಕ್ಷ ರೂ. ಬೆಲೆಯ ʼಹುಕುಮ್‌ ಕಿ ರಾಣಿʼ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!

ಈಗ ಆರೋಪಿಗಳಾದ ಪೂಜಾ ಮತ್ತು ಪ್ರಹ್ಲಾದ್ ಅವರನ್ನು ಗ್ರೇಟರ್ ನೋಯ್ಡಾದ ಎಟಿಎಸ್ ವೃತ್ತದ ಬಳಿ ಪೊಲೀಸರು ಬಂಧಿಸಿದ್ದಾರೆ ಮತ್ತು ಕೊಲೆಗೆ ಬಳಸಿದ ಕತ್ತರಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನಿಬಂಧನೆಗಳ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಗ್ರೇಟರ್ ನೋಯ್ಡಾದ ಸ್ಥಳೀಯ ಬೀಟಾ 2 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading
Advertisement
PGET 2024 Online application for PGET can be submitted till July 10
ಶಿಕ್ಷಣ2 mins ago

PGET 2024 : ಪಿಜಿಇಟಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 10ರವರೆಗೆ ಅವಕಾಶ

Suryakumar Yadav
ಕ್ರೀಡೆ4 mins ago

Suryakumar Yadav: 8 ವರ್ಷಗಳ ಹಿಂದೆಯೇ ಅದ್ಭುತ ಕ್ಯಾಚ್​ ಹಿಡಿದೆ ಎಂದು ವಿವಾಹ ವಾರ್ಷಿಕೋತ್ಸವ ಆಚರಿಸಿದ ಸೂರ್ಯಕುಮಾರ್

Rahul Gandhi
ದೇಶ9 mins ago

Rahul Gandhi: ಹಿಂದುಗಳಿಗೆ ಅವಮಾನ ಖಂಡಿಸಿ ದೇಗುಲದ ಡೋರ್‌ಮ್ಯಾಟ್‌ಗೆ ರಾಹುಲ್‌ ಗಾಂಧಿ ಫೋಟೊ; ಇಲ್ಲಿದೆ Video

Manvita Kamath Honeymoon in baali
ಸ್ಯಾಂಡಲ್ ವುಡ್16 mins ago

Manvita Kamath: ಪತಿ ಅರುಣ್ ಜತೆ ಬಾಲಿಯಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿರುವ ಮಾನ್ವಿತಾ ಕಾಮತ್!

NEET UG 2024
ದೇಶ28 mins ago

NEET UG 2024: ನೀಟ್‌ ಅಕ್ರಮ ಮೇಲ್ನೋಟಕ್ಕೆ ಸಾಬೀತು ಎಂದ ಸುಪ್ರೀಂ; ಎನ್‌ಟಿಎ, ಸಿಬಿಐಗೆ ಖಡಕ್ ಸೂಚನೆ!

OPS News
ಕರ್ನಾಟಕ28 mins ago

OPS News: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಅರ್ಹರಿಗೆ ಒಪಿಎಸ್‌, ಪ್ರಸ್ತಾವನೆ ಸಲ್ಲಿಕೆಗೆ ಆದೇಶ

ಕ್ರೀಡೆ37 mins ago

Paris 2024 Olympics Athletics: ವಿಶ್ವ ರ್‍ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಜೆಸ್ವಿನ್‌, ಅಂಕಿತಾ ಧ್ಯಾನಿ

First Night Video
Latest41 mins ago

First Night Video: ಫಸ್ಟ್‌ ನೈಟ್‌ ವಿಡಿಯೊ ಹಂಚಿಕೊಂಡ ನವ ದಂಪತಿ! ಇನ್ನೇನು ಬಾಕಿ ಉಳಿದಿದೆ ಎಂದ ನೆಟ್ಟಿಗರು!

Ragging case in Bengaluru
ಬೆಂಗಳೂರು45 mins ago

Ragging Case : ಬೆಂಗಳೂರಲ್ಲಿ ನಿಲ್ಲದ ವ್ಹೀಲಿಂಗ್‌ ಆ್ಯಂಡ್‌ ರ‍್ಯಾಗಿಂಗ್‌ ಹಾವಳಿ; ಮಹಿಳೆ ಹಿಂದೆ ಬಿದ್ದ ಪೋಲಿ ಹುಡುಗರು

Supreme Court
ಪ್ರಮುಖ ಸುದ್ದಿ46 mins ago

Sandeshkhali case : ಸಿಬಿಐ ತನಿಖೆ ವಿರುದ್ಧದ ಅರ್ಜಿ ವಜಾ; ಸುಪ್ರೀಂ ಕೋರ್ಟ್‌‌ನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain Effect
ಮಳೆ1 hour ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು5 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ21 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ23 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ24 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

ಟ್ರೆಂಡಿಂಗ್‌