Viral Video: ಚಂದ್ರ ಮತ್ತು ದೆಹಲಿ; ಇವುಗಳಲ್ಲಿ ಯಾವುದು ದೂರದಲ್ಲಿದೆ? ಈ ಹುಡುಗನ ಉತ್ತರವನ್ನೊಮ್ಮೆ ಕೇಳಿ ಬಿಡಿ! - Vistara News

Latest

Viral Video: ಚಂದ್ರ ಮತ್ತು ದೆಹಲಿ; ಇವುಗಳಲ್ಲಿ ಯಾವುದು ದೂರದಲ್ಲಿದೆ? ಈ ಹುಡುಗನ ಉತ್ತರವನ್ನೊಮ್ಮೆ ಕೇಳಿ ಬಿಡಿ!

Viral Video: ಶಾಲೆಯ ಮೇಷ್ಟೊಬ್ಬರು ಪುಟ್ಟ ಬಾಲಕನ ಬಳಿ ಮಗು ನಮಗೆ ಚಂದ್ರ ದೂರದಲ್ಲಿದಾನಾ? ಅಥವಾ ದೆಹಲಿ ದೂರದಲ್ಲಿದೆಯೇ ಎಂದು ಪ್ರಶ್ನೆ ಕೇಳಿದಾಗ ಈ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ಬಾಲಕ ಚಂದ್ರನಿಗಿಂತ ದೆಹಲಿಯೇ ದೂರ ಎಂದು ಹೇಳುತ್ತಾನೆ. ಅದು ಹೇಗೆ ಸಾಧ್ಯ ಎಂದು ಮೇಷ್ಟ್ರು ಮರು ಪ್ರಶ್ನಿಸಿದಾಗ ಚಂದ್ರನನ್ನು ಇಲ್ಲೇ ನಿಂತು ನಾವು ನೋಡಬಹುದು ಸರ್, ಆದ್ರೆ ದೆಹಲಿಯನ್ನು ಇಲ್ಲಿಂದಲೇ ನಿಂತು ನೋಡಲು ಸಾಧ್ಯವಿಲ್ಲ ಅಲ್ವಾ ಸರ್ ಎಂದು ಉತ್ತರಿಸಿದ್ದಾನೆ. ಅವನ ಆ ಸ್ಮಾರ್ಟ್ ಉತ್ತರ ಕೇಳಿದರೆ ಎಂಥವರಿಗೂ ನಗು ಬರುವುದು ಖಂಡಿತ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವಾರು ವಿಡಿಯೊಗಳನ್ನು ಪೋಸ್ಟ್ ಮಾಡಲಾಗುತ್ತದೆ. ಅದರಲ್ಲಿ ಕೆಲವೊಂದು ನಮಗೆ ಬೇಸರವನ್ನುಂಟು ಮಾಡಿದರೆ, ಕೆಲವೊಂದು ವಿಡಿಯೊಗಳನ್ನು ನೋಡಿದರೆ ನಾವು ಬಿದ್ದು ಬಿದ್ದು ನಗುತ್ತೇವೆ. ಅದರಲ್ಲೂ ಮಕ್ಕಳು ಮಾತನಾಡುವ ವಿಡಿಯೊ, ಪ್ರಶ್ನೆಗಳಿಗೆ ಅವರು ಉತ್ತರಿಸುವ ರೀತಿ ತುಂಬಾ ತಮಾಷೆಯಾಗಿರುತ್ತದೆ. ಅದನ್ನು ಕೇಳಿದವರ ಮುಖದಲ್ಲಿ ನಗುವು ಮೂಡುವುದು ಖಂಡಿತ. ಇದೀಗ ಶಾಲಾ ಬಾಲಕನೊಬ್ಬನ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿ ಭಾರೀ ಸುದ್ದಿ ಮಾಡುತ್ತಿದೆ. ಮೇಷ್ಟ್ರು ಕೇಳಿದ ಪ್ರಶ್ನೆಗೆ ಆತನ ಉತ್ತರ ಕೇಳಿ ಜನರು ನಗುವಿನಲ್ಲಿ ಮುಳುಗಿದ್ದಾರೆ.

ಈ ವೈರಲ್ ವಿಡಿಯೊದಲ್ಲಿ ಶಾಲೆಯ ಮೇಷ್ಟ್ರು ಪುಟ್ಟ ಬಾಲಕನ ಬಳಿ ಮಗು ನಮಗೆ ಚಂದ್ರ ದೂರದಲ್ಲಿದಾನಾ? ಅಥವಾ ದೆಹಲಿ ದೂರದಲ್ಲಿದೆಯೇ? ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ಬಾಲಕ ಚಂದ್ರನಿಗಿಂತ ದೆಹಲಿಯೇ ದೂರ ಎಂದು ಹೇಳುತ್ತಾನೆ. ಅದು ಹೇಗೆ ಸಾಧ್ಯ ಎಂದು ಮೇಷ್ಟ್ರು ಮರು ಪ್ರಶ್ನಿಸಿದಾಗ ಚಂದ್ರನನ್ನು ಇಲ್ಲೇ ನಿಂತು ನಾವು ನೋಡಬಹುದು ಸರ್, ಆದ್ರೆ ದೆಹಲಿಯನ್ನು ಇಲ್ಲಿಂದಲೇ ನಿಂತು ನೋಡಲು ಸಾಧ್ಯವಿಲ್ಲ ಅಲ್ವಾ ಸರ್ ಎಂದು ಉತ್ತರಿಸಿದ್ದಾನೆ. ಅವನ ಆ ಸ್ಮಾರ್ಟ್ ಉತ್ತರ ಕೇಳಿದರೆ ಎಂತವರಿಗೂ ನಗು ಬರುವುದು ಖಂಡಿತ.

ಈ ವಿಡಿಯೊವನ್ನು ದೀಪಕ್ (Putkuuu) ಎಂಬವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್‌ನಲ್ಲಿ ಆಗಸ್ಟ್ 14ರಂದು ಹಂಚಿಕೊಂಡಿದ್ದಾರೆ ಈ ಪೋಸ್ಟ್ 18 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಏನ್ ಲಾಜಿಕ್ ಗುರು ನಿಂದೂ’ ಎಂದು ಆಶ್ಚರ್ಯದಿಂದ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ತುಂಬಾ ಬುದ್ದಿವಂತ, ಸರಿಯಾದ ಉತ್ತರವನ್ನೇ ನೀಡಿದ್ದಾನೆ’ ಎಂದು ಹೊಗಳಿದ್ದಾರೆ.

ಇದೇ ರೀತಿಯಲ್ಲಿ ಪುಟ್ಟ ಬಾಲಕರ ಬಳಿ ಪ್ರಶ್ನೆ ಕೇಳಿದಾಗ ಅದಕ್ಕೆ ಅವರು ತಮಾಷೆ ಉತ್ತರ ನೀಡುವಂತಹ ವಿಡಿಯೊಗಳು ಈ ಹಿಂದೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿವೆ. ಅದರಲ್ಲಿ ಹೆಚ್ಚು ಗಮನ ಸೆಳೆದ ವಿಡಿಯೊ ಅಂದರೆ ತೊದಲು ಮಾತನಾಡುವ ಪುಟ್ಟ ಮಗುವಿನ ಬಳಿ ಸಿಎಂ ಅಂದ್ರೆ ಯಾರು? ಎಂದು ಪ್ರಶ್ನೆ ಕೇಳಿದ ವಿಡಿಯೊ ತುಣುಕು. ಕನ್ನಡ ಮೀಮ್ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ಮಹಿಳೆ ಪುಟ್ಟ ಬಾಲಕನ ಬಳಿ ಸಿಎಂ ಅಂದ್ರೆ ಯಾರು ಎಂದು ಪ್ರಶ್ನೆ ಕೇಳುತ್ತಾರೆ.

ಇದನ್ನೂ ಓದಿ:ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ

ಆ ಹುಡುಗ ತಕ್ಷಣ ಸಿಎಂ ನನ್ನ ಅಮ್ಮ ಅಂತ ತೊದಲು ನುಡಿಯುತ್ತಾ ಹೇಳುತ್ತಾನೆ. ಈ ಮಗುವಿನ ಉತ್ತರ ಕೇಳಿ ಅಲ್ಲಿದ್ದವರೆಲ್ಲ ಜೋರಾಗಿ ನಗುವುದನ್ನು ತೋರಿಸುತ್ತದೆ. ಆ ಪುಟ್ಟ ಹುಡುಗನ ತಮಾಷೆಯ ಉತ್ತರದ ವಿಡಿಯೊ ಅಂದು ವೈರಲ್ ಆಗಿತ್ತು. ನೆಟ್ಟಿಗರ ಮನಗೆದ್ದ ಈ ವೈರಲ್ ವಿಡಿಯೊ 374 ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ ಹೆಚ್ಚಿನ ಸಂಖ್ಯೆಯ ಲೈಕ್ಸ್ ಮತ್ತು ಕಾಮೆಂಟ್ಸ್ ಕೂಡಾ ಪಡೆದುಕೊಂಡಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Matthew Perry Death Case: ಅಮೆರಿಕನ್ ನಟನ ಸಾವಿಗೆ ಕಾರಣವಾಗಿದ್ದು ಲಾಸ್‌ ಏಂಜಲೀಸ್‌ನ ಈ ʼಮಾದಕದ್ರವ್ಯಗಳ ರಾಣಿʼ!

“ಕೆಟಮೈನ್ ಕ್ವೀನ್ ಆಫ್ ಲಾಸ್ ಏಂಜಲೀಸ್” ಎಂದು ಕರೆಯಲ್ಪಡುವ ಉಭಯ ಬ್ರಿಟಿಷ್ ಮತ್ತು ಅಮೆರಿಕನ್ ಪ್ರಜೆ ಜಸ್ವೀನ್ ಕಳೆದ ವರ್ಷ ಮೃತಪಟ್ಟಿದ್ದ 54 ವರ್ಷದ ಅಮೆರಿಕನ್ ನಟ ಮ್ಯಾಥ್ಯೂ ಪೆರ್ರಿ ಸಾವಿಗೆ ಕಾರಣವಾಗುವ (Matthew Perry Death Case) ಕೆಟಮೈನ್‌ನ ಮಾರಕ ಡೋಸ್ ಅನ್ನು ಪೂರೈಸಿದ್ದಳು ಎಂದು ಆರೋಪಿಸಲಾಗಿದೆ.

VISTARANEWS.COM


on

By

Matthew Perry Death Case
Koo

ಕಳೆದ ವರ್ಷ ಮೃತಪಟ್ಟಿದ್ದ ಅಮೆರಿಕನ್ ನಟ (American actor) ಮ್ಯಾಥ್ಯೂ ಪೆರ್ರಿ (Matthew Perry Death case) ಸಾವಿನ ಹಿಂದೆ “ಕೆಟಮೈನ್ ಕ್ವೀನ್ ಆಫ್ ಲಾಸ್ ಏಂಜಲೀಸ್” (Ketamine Queen of Los Angeles) ಎಂದು ಕರೆಯಲ್ಪಡುವ ಜಸ್ವೀನ್ ಸಂಘಾ ಅವರ ಕೈವಾಡ ಇರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಮ್ಯಾಥ್ಯೂ ಪೆರ್ರಿ ಸಾವಿಗೆ ಕಾರಣವಾದ ಡ್ರಗ್ಸ್ ಅನ್ನು ಜಸ್ವೀನ್ ಸಂಘಾ ಪೂರೈಸಿರುವ ಆರೋಪವಿದೆ. 41 ವರ್ಷದ ಜಸ್ವೀನ್ ಸಂಘಾ ಎಂಬ ಮಹಿಳೆ ಸ್ನೇಹಿತನಾಗಿದ್ದ ನಟ ಮ್ಯಾಥ್ಯೂ ಪೆರ್ರಿ ಸಾವಿನ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಾರೆ. ವಿಚಾರಣೆಯನ್ನು ನಡೆಸಲಾಗುತ್ತಿದೆ.

“ಕೆಟಮೈನ್ ಕ್ವೀನ್ ಆಫ್ ಲಾಸ್ ಏಂಜಲೀಸ್” ಎಂದು ಕರೆಯಲ್ಪಡುವ ಉಭಯ ಬ್ರಿಟಿಷ್ ಮತ್ತು ಅಮೆರಿಕನ್ ಪ್ರಜೆ ಜಸ್ವೀನ್ ಕಳೆದ ವರ್ಷ ಮೃತಪಟ್ಟಿದ್ದ 54 ವರ್ಷದ ಅಮೆರಿಕನ್ ನಟ ಮ್ಯಾಥ್ಯೂ ಪೆರ್ರಿ ಸಾವಿಗೆ ಕಾರಣವಾಗುವ ಕೆಟಮೈನ್‌ನ ಮಾರಕ ಡೋಸ್ ಅನ್ನು ಪೂರೈಸಿದ್ದಳು ಎಂದು ಆರೋಪಿಸಲಾಗಿದೆ.

Matthew Perry Death Case
Matthew Perry Death Case


ಸಂಘಾ ತನ್ನ ಮನೆಯಿಂದಲೇ ಡ್ರಗ್ ಸಾಮ್ರಾಜ್ಯವನ್ನು ನಡೆಸುತ್ತಿದ್ದಳು. ಅಲ್ಲಿ ಅವಳು ಮೆಥಾಂಫೆಟಮೈನ್‌, ಕೊಕೇನ್ ಮತ್ತು ಪ್ರಿಸ್ಕ್ರಿಪ್ಷನ್ ಡ್ರಗ್ಸ್ ಅನ್ನು ಸಂಗ್ರಹಿಸಿ, ಪ್ಯಾಕ್ ಮಾಡಿ ಮತ್ತು ಮಾರಾಟ ಮಾಡುತ್ತಿದ್ದಳು ಎನ್ನಲಾಗಿದೆ. ಆಕೆಯ ಮನೆಯ ಮೇಲೆ ದಾಳಿ ನಡೆಸಿದ ಫೆಡರಲ್ ಏಜೆಂಟ್‌ ಗಳಿಗೆ 79 ಬಾಟಲಿಗಳ ದ್ರವ ಕೆಟಮೈನ್ ಮತ್ತು ಸುಮಾರು 2,000 ಮೆಥ್ ಮಾತ್ರೆಗಳು ಸಿಕ್ಕಿವೆ. ಸಂಘಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎರಡು ಬೇರೆಬೇರೆ ಸಂದರ್ಭಗಳಲ್ಲಿ ಪೆರ್ರಿಗಾಗಿ ಕೆಟಮೈನ್‌ನ 50 ಬಾಟಲುಗಳನ್ನು ತನ್ನ ಸಹಾಯಕನ ಮೂಲಕ ನೀಡಿದ್ದಳು ಎಂದು ಆರೋಪಿಸಲಾಗಿದೆ.

ಅಕ್ಟೋಬರ್ 13ರಂದು ಪೆರ್ರಿಗೆ ಮೊದಲು ಕೆಟಮೈನ್ ಅನ್ನು ಪೂರೈಸಲಾಗಿತ್ತು. ಒಂದು ವಾರದ ಅನಂತರ ಮತ್ತೆ 25 ಬಾಟಲಿಗಳನ್ನು ಪೂರೈಕೆ ಮಾಡಲಾಗಿತ್ತು. ಪೆರ್ರಿ ಮೂರು ದಿನಗಳಲ್ಲಿ ಆರು ಡೋಸ್‌ ಪಡೆದಿದ್ದು, ಬಳಿಕ ಮೃತಪಟ್ಟಿದ್ದ. ಆತನ ಶವ ಒಳಾಂಗಣ ಪೂಲ್‌ನಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: Techie Missing: ಕಾಣೆಯಾದ ಟೆಕ್ಕಿ ಪತ್ತೆ, ಪ್ರಕರಣಕ್ಕೆ ಟ್ವಿಸ್ಟ್‌; ಜೈಲಿಗಾದ್ರೂ ಹಾಕಿ, ಆದ್ರೆ ಹೆಂಡತಿ ಹತ್ರ ಹೋಗಲ್ಲ ಎಂದು ರೋದನ!

ಪೆರ್ರಿಯ ಮರಣದ ಬಳಿಕ ಈಕೆ ತನ್ನ ಸಹಾಯಕನಿಗೆ ಪೆರ್ರಿಯ ನಡುವಿನ ಸಂದೇಶಗಳನ್ನು ಅಳಿಸಲು ಹೇಳಿದ್ದಳು. ಆದರೆ ಅದು ಆನ್‌ಲೈನ್ ಪಾವತಿಗಳನ್ನು ಕೇಳುತ್ತಿರುವುದನ್ನು ತೋರಿಸಿತ್ತು. ಕೆಲವು ದಿನಗಳ ಬಳಿಕ ಪೆರ್ರಿ ಸಾವಿಗೆ ಕೆಟಮೈನ್ ಕಾರಣ ಎನ್ನುವುದು ದೃಢ ಪಟ್ಟ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಆಕೆ ಒಂದು ವೇಳೆ ತಪ್ಪಿತಸ್ಥಳೆಂದು ದೃಢಪಟ್ಟರೆ ಕನಿಷ್ಠ 10 ವರ್ಷಗಳ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ಹಿಟ್ ಟಿವಿ ಸಿಟ್‌ಕಾಮ್ ಫ್ರೆಂಡ್ಸ್‌ನಲ್ಲಿ ವ್ಯಂಗ್ಯಾತ್ಮಕ ಚಾಂಡ್ಲರ್ ಬಿಂಗ್ ಪಾತ್ರದಲ್ಲಿ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದ ಪೆರ್ರಿ ಮಾದಕ ವ್ಯಸನ ಮತ್ತು ಖಿನ್ನತೆಗೆ ಒಳಗಾಗಿದ್ದರು.

Continue Reading

ಸಿನಿಮಾ

Kantara Awards: 16 ಕೋಟಿ ಖರ್ಚು, 400 ಕೋಟಿ ಆದಾಯ; ʼಕಾಂತಾರʼ ಕುರಿತ ವಿಶೇಷ ಸಂಗತಿಗಳು ಇಲ್ಲಿವೆ

ಕಾಂತಾರ (Kantara Awards) ಚಿತ್ರದ ಮೂಲಕ ರಿಷಬ್ ಶೆಟ್ಟಿ ಎಲ್ಲರ ಮನ ಗೆದ್ದಿದ್ದರು. ನಿರ್ದೇಶನ, ಬರವಣಿಗೆ, ನಿರ್ಮಾಣ ವಿನ್ಯಾಸ, ಛಾಯಾಗ್ರಹಣ, ಭೂತ ಕೋಲದ ಪ್ರದರ್ಶನ, ಸಾಹಸ ದೃಶ್ಯಗಳು, ಸಂಕಲನ, ಹಿನ್ನೆಲೆ ಸಂಗೀತ, ಅಭಿನಯಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನೂ ಪಡೆದಿತ್ತು. ಈಗ ರಾಷ್ಟ್ರ ಪ್ರಶಸ್ತಿ ಗೌರವಕ್ಕೂ ರಿಷಬ್‌ ಶೆಟ್ಟಿ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಚಿತ್ರದ ಕುರಿತ 10 ಪ್ರಮುಖ ಸಂಗತಿಗಳನ್ನು ಇಲ್ಲಿ ಕೊಡಲಾಗಿದೆ.

VISTARANEWS.COM


on

By

Kantara Awards
Koo

2022ರಲ್ಲಿ ತೆರೆ ಕಂಡ ರಿಷಬ್ ಶೆಟ್ಟಿ (Rishab Shetty) ಅಭಿನಯದ ‘ಕಾಂತಾರ’ (Kantara Awards) ಚಿತ್ರ ವಿಶ್ವ ಮಟ್ಟದಲ್ಲೇ ಪ್ರೇಕ್ಷಕರನ್ನು ಸೆಳೆದಿತ್ತು. ಕರಾವಳಿಯ ಸಂಸ್ಕೃತಿಯನ್ನು ಬಿಚ್ಚಿಟ್ಟ ಈ ಸಿನಿಮಾ 3ನೇ ಅತೀ ಹೆಚ್ಚು ಹಣ ಗಳಿಸಿದ ಕನ್ನಡದ ಚಲನಚಿತ್ರ (kannada film) ಎಂಬ ಖ್ಯಾತಿಗೆ ಪಾತ್ರವಾಯಿತು. ಇದೀಗ ಕಾಂತಾರ ಅತ್ಯುತ್ತಮ ಮನರಂಜನಾ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿದೆ. ಈ ಚಿತ್ರದ ನಾಯಕ ರಿಷಬ್‌ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ಎಲ್ಲರ ಮನ ಗೆದ್ದಿದ್ದರು. ನಿರ್ದೇಶನ, ಬರವಣಿಗೆ, ನಿರ್ಮಾಣ ವಿನ್ಯಾಸ, ಛಾಯಾಗ್ರಹಣ, ಭೂತ ಕೋಲದ ಪ್ರದರ್ಶನ, ಸಾಹಸ ದೃಶ್ಯಗಳು, ಸಂಕಲನ, ಹಿನ್ನೆಲೆ ಸಂಗೀತ ಮತ್ತು ಅಭಿನಯಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನೂ ಈ ಚಿತ್ರ ಪಡೆದಿತ್ತು.

ಎಲ್ಲರಿಂದಲೂ ಭಾರಿ ಪ್ರಶಂಸೆಗೆ ಪಾತ್ರವಾಗಿದ್ದ ಈ ಚಿತ್ರದ ಕುರಿತ ಹತ್ತು ಪ್ರಮುಖ ಸಂಗತಿಗಳು ಇಂತಿವೆ:


ಸಣ್ಣ ಬಜೆಟ್ ಆದರೂ ದೊಡ್ಡ ಯಶಸ್ಸು

ಕಾಂತಾರವನ್ನು ಕೇವಲ 16 ಕೋಟಿ ರೂಪಾಯಿಗಳ ಸಾಧಾರಣ ಬಜೆಟ್‌ನಲ್ಲಿ ನಿರ್ಮಿಸಲಾಯಿತು. ಇದರ ಹೊರತಾಗಿಯೂ ಇದು ಗಮನಾರ್ಹ ಯಶಸ್ಸನ್ನು ಗಳಿಸಿತು. ವಿಶ್ವಾದ್ಯಂತ ಅಂದಾಜು 400 ಕೋಟಿ ರೂ. ಆದಾಯ ಗಳಿಸಿ ದಾಖಲೆ ನಿರ್ಮಿಸಿತ್ತು.

ನಿಗೂಢ ಕಾಡಿನ ಸುತ್ತ

‘ಕಾಂತಾರ’ ಎಂಬ ಪದದ ಅರ್ಥ “ಅತೀಂದ್ರಿಯ ಅರಣ್ಯ”. ಇದು ಚಲನಚಿತ್ರದ ಮುಖ್ಯ ಪರಿಕಲ್ಪನೆಯನ್ನು ಸೂಚಿಸುತ್ತದೆ. ನಿರ್ದೇಶಕ ರಿಷಬ್ ಶೆಟ್ಟಿ ಕಾಡಿನೊಂದಿಗಿನ ಮಾನವರ ನಂಟು ಮತ್ತು ಅದರ ಕುತೂಹಲಕಾರಿ ಸ್ವಭಾವವನ್ನು ಎತ್ತಿ ತೋರಿಸಿದ್ದರು.


ಬಹುಮುಖ ಪ್ರತಿಭೆಯ ರಿಷಬ್ ಶೆಟ್ಟಿ

ರಿಷಬ್‌ ಶೆಟ್ಟಿ ಅವರು ʼಕಾಂತಾರʼ ಚಿತ್ರವನ್ನು ನಿರ್ದೇಶಿಸಿದ್ದು ಮಾತ್ರವಲ್ಲದೆ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆದಿದ್ದರು.

ಜಾನಪದ ಸ್ಫೂರ್ತಿ

ಈ ಕಥೆಯು ಕೆರಾಡಿ ಎಂಬ ಗ್ರಾಮದ ಸಮುದಾಯದ ವಿಶಿಷ್ಟ ಸಂಪ್ರದಾಯದಿಂದ ಸ್ಫೂರ್ತಿ ಪಡೆದಿದೆ. ಇದು ಚಲನಚಿತ್ರವನ್ನು ಚಿತ್ರೀಕರಿಸಿದ ಸ್ಥಳವೂ ಆಗಿದೆ.


ಅನುರಣಿಸುವ ಕೂಗು

ಚಿತ್ರದ ಕೊನೆಯಲ್ಲಿ ಒಂದು ವಿಶಿಷ್ಟವಾದ ಮತ್ತು ಮತ್ತೆ ಮತ್ತೆ ನಮ್ಮನ್ನು ಕಾಡುವ ಕೂಗನ್ನು ಈ ಚಿತ್ರ ಒಳಗೊಂಡಿದೆ. ಕುತೂಹಲಕಾರಿಯಾಗಿ ಚಿತ್ರೀಕರಣದ ಕೊನೆಯಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದರು.

ವಿಮರ್ಶಕರ ಮೆಚ್ಚುಗೆ

ಕಾಂತಾರ ಚಿತ್ರವು ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಅದರ ಆಕರ್ಷಕ ಕಥೆ, ಕಲಾವಿದರ ಶಕ್ತಿಯುತ ಪ್ರದರ್ಶನಗಳು ಮತ್ತು ಉಸಿರು ಬಿಗಿ ಹಿಡಿಯುವಂತೆ ಮಾಡುವ ದೃಶ್ಯಗಳಿಗಾಗಿ ವೀಕ್ಷಕರ ಪ್ರಶಂಸೆಗೆ ಪಾತ್ರವಾಗಿತ್ತು.


ಭಾಷೆಯ ಗಡಿಯನ್ನು ಮೀರಿತ್ತು

ಇದು ಕನ್ನಡ ಭಾಷೆಯ ಚಲನಚಿತ್ರವಾಗಿದ್ದರೂ ಭಾಷೆಯ ಗಡಿಯನ್ನು ದಾಟಿ ಭಾರತದಾದ್ಯಂತ ವೀಕ್ಷಕರನ್ನು ಆಕರ್ಷಿಸಿತು. ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಿಗೆ ಡಬ್ ಆಗುವುದರ ಮೂಲಕ ಕೋಟ್ಯಂತರ ಜನರನ್ನು ತಲುಪಿತು.


ಸರಳ ಆದರೆ ಶಕ್ತಿಯುತ ಸಂದೇಶ

ಚಲನಚಿತ್ರವು ಮಾನವರು ಮತ್ತು ಪ್ರಕೃತಿಯ ನಡುವಿನ ಸಂಘರ್ಷ, ನಂಬಿಕೆ ಮತ್ತು ಸಂಪ್ರದಾಯದ ವಿಷಯಗಳನ್ನು ಬಿಂಬಿಸಿದೆ.

ಇದನ್ನೂ ಓದಿ: Rishab Shetty: ಅಣ್ಣಾವ್ರ ಅಪ್ಪಟ ಅಭಿಮಾನಿ ರಿಷಬ್‌ ಶೆಟ್ಟಿ ಸಿನಿ ಜರ್ನಿ ಹೀಗಿತ್ತು! ನಾಡಿಗೆ ಕೀರ್ತಿ ತಂದ ಕುಂದಾಪುರದ ಹುಡುಗ!

ಸಾಂಸ್ಕೃತಿಕ ರತ್ನ

ʼಕಾಂತಾರʼ ಚಿತ್ರವನ್ನು ಕೇವಲ ವಾಣಿಜ್ಯ ಯಶಸ್ಸಿಗಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ ಹಿರಿಮೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ರತ್ನವೆಂದೇ ಪರಿಗಣಿಸಲಾಗಿದೆ. ಈಗ ಈ ಚಿತ್ರ ರಾಷ್ಟ್ರ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿರುವುದು ಕನ್ನಡ ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.

Continue Reading

ಸಿನಿಮಾ

KGF Chapter 2: ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಕೆಜಿಎಫ್‌ 2 ಚಿತ್ರದ 6 ವಿಶೇಷ ಸಂಗತಿಗಳಿವು!

ಅತಿ ಹೆಚ್ಚು ವೀಕ್ಷಣೆ ಪಡೆದ ಟೀಸರ್ ನಿಂದ ಹಿಡಿದು ಅತ್ಯಂತ ದುಬಾರಿ (KGF Chapter 2) ಚಿತ್ರವಾಗುವವರೆಗೆ ಕೆಜಿಎಫ್ ಚಾಪ್ಟರ್ 2 ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭಾರಿ ಚರ್ಚೆಯ ವಿಷಯವಾಯಿತು. ಎರಡು ನಿಮಿಷಗಳ ಟೀಸರ್‌ನಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿತ್ತು. ಕೆಜಿಎಫ್ ಚಾಪ್ಟರ್ 2 ಚಿತ್ರದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

VISTARANEWS.COM


on

By

KGF Chapter 2
Koo

ಕೆಜಿಎಫ್ ಚಾಪ್ಟರ್ 2 (KGF Chapter 2) ಟೀಸರ್ ಸೂಪರ್‌ಸ್ಟಾರ್ ಯಶ್ (super star yash) ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭಾರಿ ಚರ್ಚೆಯ ವಿಷಯವಾಯಿತು. ಎರಡು ನಿಮಿಷಗಳ ಟೀಸರ್‌ನಲ್ಲಿ (KGF Chapter 2 Teaser) ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿತ್ತು. ಕೆಜಿಎಫ್ ಚಾಪ್ಟರ್ 2 ಹೇಗಿರುತ್ತದೆ ಎಂಬುದರ ಕುರಿತು ಒಂದು ನೋಟವನ್ನು ಈ ಚಿತ್ರ ನೀಡಿತ್ತು. ರವೀನಾ ಟಂಡನ್ ಮತ್ತು ಸಂಜಯ್ ದತ್ ಅವರ ಅತ್ಯತ್ತಮ ಅಭಿನಯ ಟೀಸರ್‌ನಲ್ಲಿ ಎಲ್ಲರ ಗಮನ ಸೆಳೆದಿತ್ತು. 2019ರ ಕೆಜಿಎಫ್ ಚಾಪ್ಟರ್ 1 ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿತ್ತು. ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿರುವ ಈ ಆಕ್ಷನ್ ಚಿತ್ರವು ಕನ್ನಡ ಭಾಷೆಯ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಯಿತು. ಇದೀಗ ಕೆಜಿಎಫ್‌ ಚಾಪ್ಟರ್‌ 2 ಕನ್ನಡದ ಅತ್ಯುತ್ತಮ ಚಿತ್ರವಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

ಕೆಜಿಎಫ್ ಚಾಪ್ಟರ್ 2 ಕುರಿತ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ:


1. ಚಿತ್ರದ ಟೀಸರ್ ಮೊದಲ 24 ಗಂಟೆಗಳಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟೀಸರ್ ಆಗಿತ್ತು. ಇದು 72 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತ್ತು. ಮೊದಲ 24 ಗಂಟೆಗಳಲ್ಲಿ ವಿಶ್ವದ 5ನೇ ಅತಿ ಹೆಚ್ಚು ವೀಕ್ಷಿಸಿದ ʼವಿಡಿಯೋʼ ಆಗಿತ್ತು.

2. ಮೊದಲ ಭಾಗದಂತೆಯೇ ಕೆಜಿಎಫ್ ಚಾಪ್ಟರ್ 2 ನೂರು ಕೋಟಿ ರೂ. ಬಜೆಟ್‌ನ ಅತ್ಯಂತ ದುಬಾರಿ ಕನ್ನಡ ಚಿತ್ರವಾಗಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಚಿತ್ರ ಡಬ್ ಆಗಿತ್ತು.

3. ಕೆಜಿಎಫ್ ಚಾಪ್ಟರ್ 2 ಕಥಾವಸ್ತುವು ರಾಕಿ ಸಾಯುತ್ತಿರುವ ತನ್ನ ತಾಯಿಗೆ ತಾನು ಎಂದಿಗೂ ಬಡತನದಲ್ಲಿ ಸಾಯುವುದಿಲ್ಲ ಎಂದು ಬಾಲ್ಯದಲ್ಲಿ ಮಾಡಿದ ಒಂದು ವಾಗ್ದಾನದ ಸುತ್ತ ಸುತ್ತುತ್ತದೆ. ಟೀಸರ್ ಕೊನೆಯಲ್ಲಿ “ಆ ಭರವಸೆಯನ್ನು ಉಳಿಸಿಕೊಳ್ಳಲಾಗುವುದು” ಎಂದು ಸೂಚಿಸಿತ್ತು. ಈ ಮೂಲಕ ಚಿತ್ರದ ಕಥಾವಸ್ತುವಿನ ಬಗ್ಗೆ ಸಂಪೂರ್ಣ ಸುಳಿವು ನೀಡಿತ್ತು.

KGF Chapter 2
KGF Chapter 2


4. ಮೂವತ್ತು ವರ್ಷಗಳ ಕಥೆಯನ್ನು ಹೇಳುವ ಕೆಜಿಎಫ್‌ ಯಶ್ ಅವರು ಚಿನ್ನದ ವ್ಯವಹಾರವನ್ನು ಆಳಲು ಬಯಸುವುದು, ಅಧಿಕಾರಕ್ಕಾಗಿ ಹಸಿದ ರಾಜಕಾರಣಿಗಳು ಮತ್ತು ದರೋಡೆಕೋರರ ನಡುವಿನ ಕಥಾ ಹಂದರವನ್ನು ಒಳಗೊಂಡಿದೆ . ರಾಕಿ ತನ್ನ ಪ್ರೀತಿಗಾಗಿ, ಅಧಿಕಾರಕ್ಕಾಗಿ ಹಸಿದಿರುವವರಿಗೆ ಪಾಠ ಕಲಿಸುವ ಉದ್ದೇಶಕ್ಕಾಗಿ ಏನು ಮಾಡುತ್ತಾರೆ ಎಂಬುದಕ್ಕೆ ಚಿತ್ರವೂ ಉತ್ತರಿಸುತ್ತದೆ.

5. ಸೂರ್ಯವರ್ಧನ್ ಅವರ ಸಹೋದರನಾಗಿ ಕಾಣಿಸಿಕೊಂಡಿರುವ ಸಂಜಯ್ ದತ್ ಎಲ್ಲರ ಗಮನ ಸೆಳೆದಿದ್ದಾರೆ. ಸೂರ್ಯವರ್ಧನ್ ಅವರ ಪಾತ್ರವನ್ನು ರಮೇಶ್ ಇಂದಿರಾ ಅವರು ಕೆಜಿಎಫ್ ಅಧ್ಯಾಯ 1ರಲ್ಲಿ ನಿರ್ವಹಿಸಿದ್ದರು. ಅವರು ಕೋಲಾರ ಚಿನ್ನದ ಗಣಿಗಳ (ಕೆಜಿಎಫ್) ಆಡಳಿತಗಾರರಾಗಿದ್ದರು. ಸೂರ್ಯವರ್ಧನ್ ಅವರ ಮಗ ಗರುಡ ಮೊದಲ ಚಿತ್ರದಲ್ಲಿ ವಿಲನ್ ಆಗಿದ್ದರು ಮತ್ತು ಈಗ ಈ ದುಷ್ಟ ಖಳನಾಯಕನ ಪರಂಪರೆಯನ್ನು ಸಂಜಯ್ ದತ್ ತೆಗೆದುಕೊಳ್ಳುವುದನ್ನು ಕೆಜಿಎಫ್ 2ರಲ್ಲಿ ಕಾಣಬಹುದು. ಗರುಡನ ಪಾತ್ರವನ್ನು ಮಾಡಿರುವ ರಾಮಚಂದ್ರರಾಜು ಅವರು ಈ ಚಿತ್ರದಲ್ಲಿ ನಟಿಸುವ ಮೊದಲು ಯಶ್ ಅವರ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದರು!


ಇದನ್ನೂ ಓದಿ: Kannada New Movie: ತೆರೆಯ‌ ಮೇಲೆ‌ ಚಿತ್ರವಾಗಿ ಬರಲಿದೆ ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ; ಮೊದಲ ಹಾಡು ರಿಲೀಸ್‌

6. ಕೆಜಿಎಫ್ ಚಾಪ್ಟರ್ 2 ಒಂದು ಕಾಲ್ಪನಿಕ ಕಥೆಯಾಗಿದೆ. ಇದು ನಟ ಸಂಜಯ್ ದತ್ ಅವರು ನಟಿಸಿರುವ ದಕ್ಷಿಣ ಭಾರತೀಯ ಚೊಚ್ಚಲ ಚಿತ್ರವಾಗಿದೆ. ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

Latest

Shimla For Honeymoon: ಹನಿಮೂನ್‍ ಜೋಡಿಗಳ ರೊಮ್ಯಾನ್ಸ್‌ ಹೆಚ್ಚಿಸುತ್ತವೆ ಶಿಮ್ಲಾದ ಈ ತಾಣಗಳು!

Shimla For Honeymoon: ಹಿಮಾಲಯದ ಮಡಿಲಲ್ಲಿರುವ ಈ ಸುಂದರವಾದ ಹಿಮಾಚಲ ಪ್ರದೇಶವಾದ ಶಿಮ್ಲಾ ಗಿರಿಧಾಮವು ದಂಪತಿಗಳಿಗೆ ರೊಮ್ಯಾಂಟಿಕ್ ಆಗಿ ಕಾಲ ಕಳೆಯಲು ಸೂಕ್ತವಾಗಿದೆ. ಹಾಗಾಗಿ ಶಿಮ್ಲಾದಲ್ಲಿ ನೀವು ಹನಿಮೂನ್ ಮಾಡಿಕೊಳ್ಳಲು ಬಯಸಿದ್ದರೆ ಇದು ನಿಮಗೆ ಜೀವನದಲ್ಲಿ ಮರೆಯಲಾಗದ ಸುಮಧುರ ಅನುಭವಗಳನ್ನು ನೀಡುವುದು ಖಚಿತ. ಶಿಮ್ಲಾದಲ್ಲಿ ಭೇಟಿ ನೀಡಲೇಬೇಕಾದ ಕೆಲವು ಅದ್ಭುತ ಸ್ಥಳಗಳ ವಿವರ ಇಲ್ಲಿವೆ.

VISTARANEWS.COM


on

Shimla For Honeymoon
Koo


ಶಿಮ್ಲಾ : ಬೆಟ್ಟಗಳ ತವರೂರಾದ ಶಿಮ್ಲಾವು ತುಂಬಾ ರೋಮ್ಯಾಂಟಿಕ್ ತಾಣವಾಗಿದೆ. ಇದು ಶಾಂತಿ ಮತ್ತು ಸಾಹಸವನ್ನು ಬಯಸುವ ದಂಪತಿಗಳಿಗೆ ಪರಿಪೂರ್ಣ ಸ್ಥಳವಾಗಿದೆ. ಹಿಮಾಲಯದ ಮಡಿಲಲ್ಲಿರುವ ಈ ಸುಂದರವಾದ ಹಿಮಾಚಲ ಪ್ರದೇಶದ ಗಿರಿಧಾಮವು ದಂಪತಿಗಳಿಗೆ ರೊಮ್ಯಾಂಟಿಕ್ ಆಗಿ ಕಾಲ ಕಳೆಯಲು ಸೂಕ್ತವಾಗಿದೆ. ಹಾಗಾಗಿ ನೀವು ಶಿಮ್ಲಾದಲ್ಲಿ ಹನಿಮೂನ್ ಮಾಡಿಕೊಳ್ಳಲು ಬಯಸಿದ್ದರೆ ಇದು ನಿಮಗೆ ಜೀವನದಲ್ಲಿ ಮರೆಯಲಾಗದ ಸುಮಧುರ ಅನುಭವಗಳನ್ನು ನೀಡುತ್ತದೆ. ಹಾಗಾಗಿ ಶಿಮ್ಲಾದಲ್ಲಿ (Shimla For Honeymoon) ಅಂತಹ ಕೆಲವು ಭೇಟಿ ನೀಡಲೇಬೇಕಾದ ಸ್ಥಳಗಳ ವಿವರ ಇಲ್ಲಿವೆ.

Shimla For Honeymoon
Shimla For Honeymoon

ರಿಡ್ಜ್ :

ಶಿಮ್ಲಾದ ಅತ್ಯಂತ ಜನಪ್ರಿಯ ಸ್ಥಳವಾದ ರಿಡ್ಜ್ ವಾಕಿಂಗ್ ಮಾಡಲು ಸೂಕ್ತವಾಗಿದೆ. ಇಲ್ಲಿನ ಪ್ರದೇಶದಲ್ಲಿ ಉದ್ದಕ್ಕೂ ಸಂಗಾತಿಯ ಜೊತೆ ವಾಕ್ ಮಾಡುತ್ತಾ ಪ್ರಣಯಾನುಭೂತಿ ಪಡೆಯಬಹುದು! ಈ ಸ್ಥಳವು ಹಸಿರಿನಿಂದ ಆವೃತವಾಗಿದೆ ಮತ್ತು ಸುತ್ತಮುತ್ತಲಿನ ಪರ್ವತಗಳ ಸುಂದರ ನೋಟವನ್ನು ಸವಿಯಬಹುದು. ಪ್ರಕೃತಿಯ ಸೌಂದರ್ಯವನ್ನು ಆನಂದಿಸಲು ಬಯಸುವ ದಂಪತಿಗಳಿಗೆ ಇದು ಸೂಕ್ತವಾಗಿದೆ. ಹಿಮಾಲಯದ ಮೇಲೆ ವಿಸ್ಮಯಕಾರಿ ಸೂರ್ಯಾಸ್ತವನ್ನು ಫೋಟೊಶೂಟ್ ಮಾಡಲು ಈ ಸ್ಥಳ ಸೂಕ್ತವಾಗಿದೆ.

Shimla For Honeymoon
Shimla For Honeymoon

ಜಖು ದೇವಾಲಯ :

ಜಖು ಬೆಟ್ಟದ ಮೇಲಿರುವ ಜಖು ದೇವಾಲಯದ ದೇವರು ಇಲ್ಲಿಗೆ ಬರುವ ದಂಪತಿಗಳಿಗೆ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ. ಈ ದೇವಾಲಯದ ಚಾವಣಿಯ ಮೇಲೆ ನಿಂತಾಗ ಶಿಮ್ಲಾ ಪಟ್ಟಣ ಮತ್ತು ಸುತ್ತಮುತ್ತಲಿನ ಕಣಿವೆಗಳ ಭವ್ಯವಾದ ನೋಟವನ್ನು ನೋಡಬಹುದು. ಹಾಗೇ ಹಿಮಾಲಯದ ಶಾಂತಿಯುತವಾದ ಸೌಂದರ್ಯವು ನಿಮ್ಮ ಕಣ್ತುಂಬಿಕೊಳ್ಳಲು ಪೈನ್ ಕಾಡುಗಳ ಮೂಲಕ ಸಂಗಾತಿಯ ಕೈ ಹಿಡಿದು ಚಾರಣ ಮಾಡಿ.

Shimla For Honeymoon
Shimla For Honeymoon

ಮಾಲ್ ರಸ್ತೆ :

ಶಾಪಿಂಗ್ ಮತ್ತು ಆಹಾರ ಪ್ರಿಯರಿಗೆ ಮಾಲ್ ರಸ್ತೆ ಒಂದು ಉತ್ತಮ ಸ್ಥಳವಾಗಿದೆ. ಈ ರಸ್ತೆಯ ಬದಿಗಳಲ್ಲಿ ಸಣ್ಣ ಅಂಗಡಿಗಳಿವೆ. ಆಧುನಿಕ ಅನುಕೂಲದೊಂದಿಗೆ ಸ್ಥಳೀಯ ಪಾಕಪದ್ಧತಿಯ ರುಚಿಯನ್ನು ನೀಡುವ ಕೆಫೆಗಳು ಮತ್ತು ರೆಸ್ಟೋರೆಂಟ್‍ಗಳನ್ನು ಹೊಂದಿವೆ. ಕೈಗಳನ್ನು ಹಿಡಿದುಕೊಂಡು ಬೀದಿ ಆಹಾರಗಳನ್ನು ಸೇವಿಸಲು ಅಥವಾ ವಸ್ತುಗಳನ್ನು ಖರೀದಿಸಲು ಬಹಳ ಸಮಯ ಬೇಕಾಗುತ್ತದೆ. ಇದು ಶಿಮ್ಲಾದಲ್ಲಿ ನಿಮ್ಮ ಹನಿಮೂನ್ ಯಾವಾಗಲೂ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.

Shimla For Honeymoon
Shimla For Honeymoon

ಕುಫ್ರಿ :

ಈ ಸ್ಥಳವು ಹಿಮದಿಂದ ಆವೃತವಾದ ಶಿಖರಗಳು ಮತ್ತು ಆಹ್ಲಾದಕರ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಇದರಿಂದಾಗಿ ಸಾಹಸಗಳನ್ನು ಇಷ್ಟಪಡುವ ದಂಪತಿಗಳಿಗೆ ಹನಿಮೂನ್ ದಿನಗಳನ್ನು ಕಳೆಯಲು ಇದು ಸೂಕ್ತವಾಗಿದೆ. ಇಲ್ಲಿ ಕುದುರೆ ಸವಾರಿ, ಸ್ಕೀಯಿಂಗ್ ಅಥವಾ ಟೋಬೊಗನಿಂಗ್‍ನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು.

Shimla For Honeymoon
Shimla For Honeymoon

ಚೈಲ್ :

ದಟ್ಟವಾದ ಕಾಡುಗಳು ಮತ್ತು ಉರುಳುವ ಬೆಟ್ಟಗಳ ನಡುವೆ ಚೈಲ್ ಎಂಬ ಗಿರಿಧಾಮವಿದೆ. ಐತಿಹಾಸಿಕ ಹಿನ್ನಲೆಯಿರುವ ಚೈಲ್ ಅರಮನೆ, ಒಂದು ಕಾಲದಲ್ಲಿ ಪಟಿಯಾಲಾದ ಮಹಾರಾಜರಿಗೆ ಬೇಸಿಗೆಯ ವಿಶ್ರಾಂತಿ ತಾಣವಾಗಿತ್ತು ಮತ್ತು ಇದು ಅದರ ವಾಸ್ತುಶಿಲ್ಪದ ಸೌಂದರ್ಯಕ್ಕೆ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿ ದಂಪತಿಗಳು ಕೈಕೈ ಹಿಡಿದುಕೊಂಡು ವಾಕ್ ಮಾಡುತ್ತಾ ಜಂಜಾಟದ ಜೀವನದಲ್ಲೂ ಸುಖವನ್ನು ಪಡೆಯಬಹುದು ಎಂದೆನಿಸುತ್ತದೆ.

Shimla For Honeymoon

ಮಶೋಬ್ರಾ :

ಮಶೋಬ್ರಾ ಎನ್ನುವುದು ಸೇಬು ತೋಟಗಳು ಮತ್ತು ದೇವದಾರು ಕಾಡುಗಳಿಂದ ಸುತ್ತುವರಿದಿರುವ ಒಂದು ಸಣ್ಣ ಹಳ್ಳಿಯಾಗಿದೆ. ಇಲ್ಲಿ ನೀವು ಸುತ್ತಲಿನ ರಮಣೀಯ ಸೌಂದರ್ಯವನ್ನು ವೀಕ್ಷಿಸುವಾಗ ಪರ್ವತದಿಂದ ಬೀಸುವ ತಾಜಾ ಗಾಳಿಯಿಂದ ಸುತ್ತುವರಿದ ಹಾದಿಗಳಲ್ಲಿ ಪ್ರಣಯದ ಮಾತುಗಳನ್ನು ಆಡುತ್ತ ನಡೆಯಬಹುದು! ಪ್ರಕೃತಿಯ ಶಬ್ದವನ್ನು ಹೊರತುಪಡಿಸಿ ಬೇರೆ ಯಾವುದೇ ಗದ್ದಲವಿಲ್ಲದೆ ಅರಣ್ಯದ ಆಳದಲ್ಲಿ ಪಿಕ್ನಿಕ್ ಮಾಡುವಾಗ ಅತ್ಯಂತ ಸುಂದರ ಕ್ಷಣವನ್ನು ಅನುಭವಿಸಬಹುದು.

Shimla For Honeymoon
Shimla For Honeymoon

ನಲ್ದೆಹ್ರಾ :

ನಲ್ದೆಹ್ರಾ ಮತ್ತೊಂದು ಸುಂದರವಾದ ಗಿರಿಧಾಮವಾಗಿದ್ದು, ಇದು ಹಸಿರು ಮತ್ತು ಪ್ರಾಚೀನ ಪರಿಸರಕ್ಕೆ ಹೆಸರುವಾಸಿಯಾಗಿದೆ. ಸುಂದರವಾದ ಭೂದೃಶ್ಯಗಳಿಂದ ಸುತ್ತುವರಿದಿರುವ ಭಾರತದ ಅತ್ಯಂತ ಹಳೆಯ ಗಲ್ಫ್ ಕೋರ್ಸ್‌ಗಳಲ್ಲಿ ಒಂದಾಗಿದೆ. ನಲ್ದೆಹ್ರಾ ಗಲ್ಫ್ ಕೋರ್ಸ್‌ನಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ವಿಶ್ರಾಂತಿ ಪಡೆಯಿರಿ. ಅದರ ನಂತರ ಪರಸ್ಪರರು ಸೊಂಪಾದ ಹುಲ್ಲುಗಾವಲುಗಳ ಮೂಲಕ ಕುದುರೆ ಸವಾರಿ ಮಾಡಬಹುದು.

ಇದನ್ನೂ ಓದಿ:ಇತ್ತೀಚೆಗಷ್ಟೆ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯಾಧೀಶ ಇನ್ನಿಲ್ಲ!

ಒಟ್ಟಾರೆಯಾಗಿ ಶಿಮ್ಲಾ ಸುಂದರವಾದ ಪ್ರಕೃತಿ, ಸಾಹಸ, ಪ್ರಣಯ ಎಲ್ಲವನ್ನೂ ಹೊಂದಿದೆ. ಆದ್ದರಿಂದ ಇದು ಹನಿಮೂನ್‍ಗೆ ಸೂಕ್ತ ತಾಣವಾಗಿದೆ. ಸುಂದರವಾದ ಭೂದೃಶ್ಯಗಳ ನಡುವೆ ಲಘು ನಡಿಗೆ ಅಥವಾ ಕಾಡುಗಳಲ್ಲಿ ರೋಮಾಂಚಕ ಪಲಾಯನಗಳನ್ನು ನೀವು ಬಯಸುತ್ತೀರೋ ಶಿಮ್ಲಾ ಅವೆಲ್ಲಕ್ಕೂ ಸ್ಥಳಾವಕಾಶ ಕಲ್ಪಿಸುತ್ತದೆ. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಈ ಪ್ರಣಯದ ಪ್ರಯಾಣವನ್ನು ಕೈಗೊಳ್ಳಲು ಸಿದ್ಧರಾಗಿ.

Continue Reading
Advertisement
Saarthi AI
ವಿದೇಶ3 mins ago

Saarthi AI: ಬೆಂಗಳೂರು ಮೂಲದ ಸಾರಥಿ AI ಕಂಪನಿ CEOನ ಪಾಸ್‌ಪೋರ್ಟ್‌, ವೀಸಾ ಕಳವು

Paralympics 2024
ಕ್ರೀಡೆ34 mins ago

Paralympics 2024: ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗ್ಯಶ್ರೀ, ಸುಮಿತ್ ತ್ರಿವರ್ಣ ಧ್ವಜಧಾರಿಗಳು

Crop Damage
ಕರ್ನಾಟಕ48 mins ago

Crop Damage: ಮಳೆಯಿಂದ 81,589 ಹೆಕ್ಟೇರ್‌ನಲ್ಲಿ ಬೆಳೆಹಾನಿ; ಅಂತಿಮ ವರದಿ ಬಂದ ಕೂಡಲೇ ಪರಿಹಾರ ವಿತರಣೆ ಎಂದ ಸಿಎಂ

Yogi Adityanath
ದೇಶ1 hour ago

Yogi Adityanath: ಹೊಸ ಮೈಲಿಗಲ್ಲು ಸಾಧಿಸಿದ ಯೋಗಿ- ಉತ್ತರ ಪ್ರದೇಶದ ಸುದೀರ್ಘ ಅವಧಿಯ ಸಿಎಂ ಎಂಬ ಖ್ಯಾತಿ

Health Tips Kannada
ಆರೋಗ್ಯ1 hour ago

Health Tips Kannada: ಈ 5 ಅಭ್ಯಾಸಗಳು ನಿಮ್ಮ ಹಾರ್ಮೋನಿನ ಏರುಪೇರಿಗೆ ಕಾರಣವಾಗಿರಬಹುದು!

Matthew Perry Death Case
ವಿದೇಶ2 hours ago

Matthew Perry Death Case: ಅಮೆರಿಕನ್ ನಟನ ಸಾವಿಗೆ ಕಾರಣವಾಗಿದ್ದು ಲಾಸ್‌ ಏಂಜಲೀಸ್‌ನ ಈ ʼಮಾದಕದ್ರವ್ಯಗಳ ರಾಣಿʼ!

Ishan Kishan
ಕ್ರೀಡೆ2 hours ago

Ishan Kishan: ಬುಚ್ಚಿಬಾಬು ಟ್ರೋಫಿಯಲ್ಲಿ ಸಿಕ್ಸರ್​ಗಳ ಸುರಿಮಳೆಗೈದು ಶತಕ ಬಾರಿಸಿದ ಇಶಾನ್​ ಕಿಶನ್

ಕರ್ನಾಟಕ2 hours ago

Notorious Thief: ಸಿಟಿಯಲ್ಲಿ ಕದ್ದು ಕಾಡಿನಲ್ಲಿರುತ್ತಿದ್ದ ನಟೋರಿಯಸ್ ಕಳ್ಳ; 50ಕ್ಕೂ ಹೆಚ್ಚು ಕೇಸ್‌ಗಳ ಆರೋಪಿ ಅರೆಸ್ಟ್!

Kantara Awards
ಸಿನಿಮಾ2 hours ago

Kantara Awards: 16 ಕೋಟಿ ಖರ್ಚು, 400 ಕೋಟಿ ಆದಾಯ; ʼಕಾಂತಾರʼ ಕುರಿತ ವಿಶೇಷ ಸಂಗತಿಗಳು ಇಲ್ಲಿವೆ

Eye Makeup Care
ಫ್ಯಾಷನ್2 hours ago

Eye Makeup Care: ಐ ಶ್ಯಾಡೋ ಹಚ್ಚುವ ಮುನ್ನ 5 ಸಂಗತಿ ತಿಳಿದಿರಲಿ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌