Coconut Use: ಪೂಜೆ, ಹಬ್ಬ ಹರಿದಿನಗಳಲ್ಲಿ ಸಿಕ್ಕ ರಾಶಿ ತೆಂಗಿನಕಾಯಿಯನ್ನು ಹೀಗೆಲ್ಲಾ ಬಳಸಬಹುದು! Vistara News
Connect with us

ಆಹಾರ/ಅಡುಗೆ

Coconut Use: ಪೂಜೆ, ಹಬ್ಬ ಹರಿದಿನಗಳಲ್ಲಿ ಸಿಕ್ಕ ರಾಶಿ ತೆಂಗಿನಕಾಯಿಯನ್ನು ಹೀಗೆಲ್ಲಾ ಬಳಸಬಹುದು!

ಈಗ ಸಾಲು ಸಾಲು ಹಬ್ಬಗಳು ರೆಡಿಯಾಗಿರುವಾಗ ಮುಂಚೆಯೇ, ಈಗೆ ಶೇಖರಣೆಯಾಗುವ ತೆಂಗಿನಕಾಯಿಯನ್ನು ಹೇಗೆ ಉಪಯೋಗಕರವಾಗಿ ಬಳಸಬಹುದು ಎಂಬುದನ್ನು ನೋಡೋಣ, ಬನ್ನಿ.

VISTARANEWS.COM


on

coconuts
Koo

ಭಾರತದಲ್ಲಿ ಏನೇ ಶುಭ ಕಾರ್ಯಗಳಿದರೂ ಅಲ್ಲಿ ತೆಂಗಿನಕಾಯಿಗೆ (Coconuts) ವಿಶೇಷ ಪ್ರಾಧಾನ್ಯತೆ. ಅದಕ್ಕೇ ತೆಂಗಿನಕಾಯಿಯನ್ನು ದೇವರ ಹಣ್ಣೆಂದು ಪರಿಗಣಿಸಲಾಗುತ್ತದೆ. ಕಲ್ಪವೃಕ್ಷ ನೀಡಿದ ಫಲವಿದು. ಸಮೃದ್ಧಿಯ ಸಂಕೇತ ಈ ತೆಂಗಿನಕಾಯಿ. ಸಂಪ್ರದಾಯ, ಆಚರಣೆಗಳಿಗೆ ತೆಂಗಿನಕಾಯಿಯ ಮಹತ್ವ ಇದ್ದಷ್ಟೇ ಇದರಿಂದ ಆರೋಗ್ಯಕ್ಕೂ, ಆಹಾರವಾಗಿಯೂ (health tips) ಅಷ್ಟೇ ಮಹತ್ವವಿದೆ. ಇದು ರುಚಿಯಷ್ಟೇ ಅಲ್ಲ, ಪೋಷಕಾಂಶಗಳಿಂದಲೂ ಸಮೃದ್ಧವಾಗಿರುವ ಒಂದು ಸಂಪೂರ್ಣ ಆಹಾರ.

ಆಗಾಗ ಹಬ್ಬ ಹರಿದಿನ, ಅಥವಾ ದೇವಸ್ಥಾನದ ಹಣ್ಣುಕಾಯಿ, ಪೂಜೆ ಪುನಸ್ಕಾರ ಎಂಬ ನಾನಾ ಕಾರಣಗಳಿಂದ ನಮ್ಮ ಮನೆಗಳಲ್ಲಿ ಕೆಲವೊಮ್ಮೆ ರಾಶಿ ಒಡೆದ ತೆಂಗಿನಕಾಯಿಗಳು ಶೇಖರಣೆಯಾಗಿ ಬಿಡುತ್ತದೆ. ಬಹಳಷ್ಟು ದಿನ ಇಟ್ಟರೆ ಹಾಳಾಗುತ್ತದೆ ಎಂದೋ, ಇಷ್ಟು ಪೋಷಕಾಂಶಗಳಿರುವ ತೆಂಗಿನಕಾಯಿಯನ್ನು ವ್ಯರ್ಥವಾಗಿ ಹಾಳು ಮಾಡಲು ಬಿಡಲು ಮನಸ್ಸಾಗದೆ, ಕೆಲವೊಮ್ಮೆ ಏನು ಮಾಡಬೇಕೆಂದೇ ತೋಚುವುದಿಲ್ಲ. ಅಕ್ಕಪಕ್ಕದ ಮನೆಯವರಿಗೆ ಕೊಟ್ಟೂ ಮನೆಯಲ್ಲಿ ಮಿಕ್ಕಿ, ಫ್ರಿಡ್ಜ್‌ನಲ್ಲೂ ಜಾಗ ಇಲ್ಲ ಎಂಬ ಪರಿಸ್ಥಿತಿ ಕೆಲವೊಮ್ಮೆ ಬರುತ್ತವೆ. ಈಗ ಸಾಲು ಸಾಲು ಹಬ್ಬಗಳು ರೆಡಿಯಾಗಿರುವಾಗ ಮುಂಚೆಯೇ, ಈಗೆ ಶೇಖರಣೆಯಾಗುವ ತೆಂಗಿನಕಾಯಿಯನ್ನು ಹೇಗೆ (food tips) ಉಪಯೋಗಕರವಾಗಿ ಬಳಸಬಹುದು (Coconut Use) ಎಂಬುದನ್ನು ನೋಡೋಣ, ಬನ್ನಿ.

1. ತೆಂಗಿನಕಾಯಿ ಚಟ್ನಿ: ದಕ್ಷಿಣ ಭಾರತೀಯರು ನಾವು. ಚಟ್ನಿಯಿಲ್ಲದೆ, ದೋಸೆಯೋ, ಇಡ್ಲಿಯೋ, ಊಟವೋ ಆದರೂ ಮುಂದುವರಿಯೋದು ಕಷ್ಟ. ಹಾಗಾಗಿ, ತೆಂಗಿನಕಾಯಿ ಇದ್ದರೆ ಚಟ್ನಿ ಮಾಡು ಎಂದು ಸಲಹೆ ನೀಡುವುದು ಖಂಡಿತವಾಗಿಯೂ ಹಾಸ್ಯಾಸ್ಪದವೇ. ಆದರೆ, ತೆಂಗಿನಕಾಯಿ ಹೆಚ್ಚಿದ್ದಾಗ ಚಟ್ನಿ ಮಾಡದೆ ಇರುವುದನ್ನೂ ತಪ್ಪಿಸಲಾರಿರಿ. ಕೊಬ್ಬರಿಯಾಗಿದ್ದರೆ, ಅಂದರೆ ಒಣಗಿದ್ದರೆ, ಅದರ ತುರಿಯನ್ನು ಹುರಿದು ಚಟ್ನಿ ಪುಡಿ ಮಾಡಿ ಬಹಳ ದಿನಗಳ ಕಾಲ ಕೆಡದೆ ಇಟ್ಟುಕೊಂಡು ನಿತ್ಯವೂ ಬಳಸುತ್ತಿರಬಹುದು.

2. ಕೋಕೋನಟ್‌ ರೈಸ್‌ (ತೆಂಗಿನಕಾಯಿ ಅನ್ನ): ತೆಂಗಿನಕಾಯಿಯನ್ನು ತುರಿದು ಅದಕ್ಕೆ, ಕೊತ್ತಂಬರಿ, ಜೀರಿಗೆ, ಕರಿಬೇವು ಹಾಗೂ ಗೋಡಂಬಿ ಹಾಕಿ ಒಗ್ಗರಣೆ ಹಾಕಿ, ಅನ್ನದ ಜೊತೆಗೆ ಮಿಕ್ಸ್‌ ಮಾಡಿ ಕೋಕನೆಟ್‌ ರೈಸ್‌ ಮಾಡಿಯೂ ಬೆಳಗಿನ ಉಪಹಾರಕ್ಕೋ, ಮಧ್ಯಾಹ್ನದೂಟಕ್ಕೂ ಮಾಡಿ ತಿನ್ನಬಹುದು. ತೆಂಗಿನೆಣ್ನೆಯ ಒಗ್ಗರಣೆ ಇದಕ್ಕೆ ಇನ್ನೂ ರುಚಿ.

3. ತೆಂಗಿನಕಾಯಿ ಹಾಲು: ತೆಂಗಿನಕಾಯಿಯಿಂದ ಹಾಲು ತೆಗೆದಿಡಿ. ಈ ಹಾಲನ್ನು ಹಲವು ಅಡುಗೆಗಳಿಗೆ ಬಳಸಬಹುದು. ಸೂಪ್‌, ಕರಿಗಳು, ಸಿಹಿತಿನಿಸುಗಳು, ಡೈರಿ ಫ್ರೀ ವೇಗನ್‌ ತಿನಿಸುಗಳು, ಸ್ಮೂದಿಗಳು, ಪಾಯಸ ಇತ್ಯಾದಿಗಳನ್ನು ಮಾಡಲು ಬಳಸಬಹುದು.

4. ತೆಂಗಿನಕಾಯಿ ಸಿಹಿತಿನಿಸುಗಳು: ತೆಂಗಿನಕಾಯಿ ಬರ್ಫಿ, ಮೋದಕ, ಖೀರು, ಲಡ್ಡು ಸೇರಿದಂತೆ ನಾನಾ ಬಗೆಯ ಸಿಹಿತಿನಿಸುಘಲನ್ನೂ ತೆಂಗಿನಕಾಯಿಯಿಂದ ಮಾಡಬಹುದು.

5. ತೆಂಗಿನಕಾಯಿ ಸಾಂಬಾರು/ಕರಿ: ತೆಂಗಿನಕಾಯಿ ಹಾಕಿ ಸಾಂಬಾರು ಪುರಿಯ ಜೊತೆ ಸೇರಿಸಿ ರುಬ್ಬಿ ಮಾಡಿದ ಸಾಂಬಾರು, ಕರಿಯನ್ನೂ ಮಾಡಬಹುದು. ಮಲೆನಾಡು, ಕರಾವಳಿ ಶೈಲಿಯ ಈ ಅಡುಗೆ ರುಚಿಯಲ್ಲಿ ಬಹಳ ಮುಂದು.

6. ಬೇಕ್‌ ಮಾಡಿ: ನೀವು ಬೇಕಿಂಗ್‌ ಪ್ರಿಯರಾಗಿದ್ದರೆ ತೆಂಗಿನಕಾಯಿ ಮಫಿನ್‌ಗಳು, ಕೇಕ್‌ಗಳು, ಕುಕ್ಕೀಸ್‌ಗಳು ಇತ್ಯಾದಿಗಳನ್ನೂ ಟ್ರೈ ಮಾಡಬಹುದು.

ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್‌ ಇಡ್ಲಿ ಮಾಡಲು ಪಂಚಸೂತ್ರಗಳು!

ಅಂದಹಾಗೆ, ತೆಂಗಿನಕಾಯಿಯಿಂದ ತೂಕ ಹೆಚ್ಚಾಗುತ್ತದೆ ಎಂದುಕೊಂಡು ಅದನ್ನು ದೂರವಿಟ್ಟಿದ್ದೀರಾ? ಹಾಗಾದರೆ ಒಮ್ಮೆ ನೀವು ಯೋಚಿಸಬೇಕು. 2006 ಜೂನ್‌ನಲ್ಲಿ ಸಿಲೋನ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ತೆಂಗಿನಕಾಯಿಯಲ್ಲಿರುವ ಕೊಬ್ಬಿನ ಅಂಶ ದೇಹ ಸೇರಿ ಅಲ್ಲಿ ಕೊಬ್ಬಾಗಿಯೇ ಶೇಖರಣೆಯಾಗುವುದಿಲ್ಲವಂತೆ. ಬದಲಾಗಿ, ಇದು ಹಸಿವನ್ನು ನಿಯಂತ್ರಿಸಿ ಆಗಾಗ ಏನಾದರೂ ತಿನ್ನಬೇಕು ಎಂಬ ಮನೋಕಾಮನೆಯನ್ನು ನಿಯಂತ್ರಿಸುತ್ತದಂತೆ. ತೆಂಗಿನಕಾಯಿಯಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಇರುವುದು ಹೌದಾದರೂ ಇದು ಎಚ್‌ಡಿಎಲ್‌ ಕೊಲೆಸ್ಟೆರಾಲ್‌ ಅಂದರೆ ಒಳ್ಳೆಯ ಕೊಬ್ಬಿಗೆ ಪ್ರೋತ್ಸಾಹ ನೀಡುತ್ತದೆ. ಆದರೆ, ಅತಿಯಾಗಿ ತೆಂಗಿನಕಾಯಿ ಸೇವನೆಯೂ ಒಳ್ಳೆಯದಲ್ಲ, ನಿಜ. ತೆಂಗಿನಕಾಯಿ ತತ್‌ಕ್ಷಣದ ಶಕ್ತಿವರ್ಧಕವೂ ಹೌದು. ಇದು ದೇಹದಲ್ಲಿ ಕೂಡಲೇ ಖನಿಜಗಳು ಹಾಗೂ ಪೋಷಕಾಂಶಗಳನ್ನು ನೀಡಿ ಶಕ್ತಿ ನೀಡುತ್ತದೆ. ಆಯುರ್ವೇದದ ಪ್ರಕಾರ ತೆಂಗಿನಕಾಯಿ ಒತ್ತಡ ನಿವಾರಕ. ಜೀರ್ಣಕ್ರಿಯೆಗೆ ಸಹಾಯಕ. ಅಷ್ಟೇ ಅಲ್ಲ, ದೇಹದ ಒಟ್ಟೂ ಆರೋಗ್ಯಕ್ಕೆ ಪೂರಕವಾದ ಆಹಾರ. ಹಾಗಾಗಿ ತೆಂಗಿನಕಾಯಿ ಬಳಸದೆ ವ್ಯರ್ಥಮಾಡಿ ಎಸೆಯದಿರಿ. ಆರೋಗ್ಯಕರವಾಗಿ ಬಳಸಿ.

ಇದನ್ನೂ ಓದಿ: Ganesh Chaturthi: ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ಶುರು; ಏನು ಈ ಹಬ್ಬದ ಹಿನ್ನೆಲೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Pav Bhaji Recipe: ಆರೋಗ್ಯಕರ ರೀತಿಯಲ್ಲೇ ಪಾವ್‌ ಬಾಜಿಯನ್ನೂ ಮಾಡಿ ತಿನ್ನಬಹುದು ಗೊತ್ತೇ? ಇಲ್ಲಿವೆ ಟಿಪ್ಸ್!

ನಮ್ಮಿಷ್ಟದ ತಿನಿಸು ಪಾವ್‌ ಬಾಜಿಯನ್ನು ಆಗಾಗ ಗಿಲ್ಟ್‌ ರಹಿತವಾಗಿ ಆರೋಗ್ಯಕರ ರೀತಿಯಲ್ಲೇ ತಿನ್ನುತ್ತಾ, ಆರೋಗ್ಯದ ಕಾಳಜಿಯ ಜೊತೆಗೂ ರಾಜಿ ಮಾಡಿಕೊಳ್ಳದೆ ಖುಷಿಯಾಗಿರಲು ಮನೆಯಲ್ಲೇ ಅದನ್ನು ಮಾಡಿಕೊಳ್ಳುವ (pav bhaji recipe) ರೀತಿ ಇಲ್ಲಿದೆ.

VISTARANEWS.COM


on

Edited by

pav bhaji recipe
Koo

ಪಾವ್‌ಬಾಜಿ (pav bhaji) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೆಸರು ಕೇಳಿದೊಡನೆಯೇ ಬಾಯಲ್ಲಿ ನೀರೂರುತ್ತದೆ ಎಂಬುದು ನಿಜವೇ. ಕರಗಿ ನೀರಾಗುವ ಬೆಣ್ಣೆಯಲ್ಲಿ ಬಿಸಿ ಬಿಸಿ ಪಾವ್‌ ಜೊತೆಗೆ ಬಾಜಿಯನ್ನು ಸವಿಯುವ ಸುಖ ಯಾಕೆ ಬೇಡವೆನ್ನಲಿ ಎಂದು ಯಾರೇ ಆದರೂ ಹೇಳಿಯಾರು. ಯಾಕೆಂದರೆ, ಪಾವ್‌ಬಾಜಿ ಭಾರತದ ಅತ್ಯಂತ ಪ್ರಸಿದ್ಧ ಸ್ಟ್ರೀಟ್‌ಫುಡ್‌ಗಳಲ್ಲಿ ಒಂದು. ಆದರೆ, ಆರೋಗ್ಯದ ವಿಚಾರದಲ್ಲಿ ಮಾತ್ರ ಇದು ಯಾವಾಗಲೂ ಹಿಂದೆಯೇ. ಸುರಿಸುರಿದು ಹಾಕುವ ಬೆಣ್ಣೆ, ಮೈದಾದಿಂದ ಮಾಡಿದ ಪಾವ್‌ನಲ್ಲಿ ಹೊಟ್ಟೆ ತುಂಬಿಸಿಕೊಂಡ ಮೇಲೆ, ʻಅಯ್ಯೋ, ಆರೋಗ್ಯದ ಕಾಳಜಿಯನ್ನು ನನಗೇಕೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಆಹಾರದ ಮೇಲೆ ನನಗೇಕೆ ನಿಗಾ ಇಡಲು ಸಾಧ್ಯವಾಗುತ್ತಿಲ್ಲ, ತೂಕ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆಯಲ್ಲಾʼ ಎಂಬ ಗಿಲ್ಟ್‌ ಅನುಭವಿಸುವ ಪ್ರಸಂಗವೂ ಬರುತ್ತದೆ. ಇಂತಹ ನಮ್ಮಿಷ್ಟದ ತಿನಿಸು ಪಾವ್‌ ಬಾಜಿಯನ್ನು ಆಗಾಗ ಗಿಲ್ಟ್‌ ರಹಿತವಾಗಿ ಆರೋಗ್ಯಕರ ರೀತಿಯಲ್ಲೇ ತಿನ್ನುತ್ತಾ, ಆರೋಗ್ಯದ ಕಾಳಜಿಯ ಜೊತೆಗೂ ರಾಜಿ ಮಾಡಿಕೊಳ್ಳದೆ ಖುಷಿಯಾಗಿರಬಹುದು (pav bhaji recipe) ಎಂಬುದನ್ನು ನೋಡೋಣ ಬನ್ನಿ.

1. ಪಾವ್‌ ಬಾಜಿಯನ್ನು ಮನೆಯಲ್ಲೇ ಮಾಡಿ. ಇದನ್ನು ಮನೆಯಲ್ಲಿ ಮಾಡುವುದರಿಂದ ರುಚಿಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಸಂಗ ಬರಲಾರದು. ಯಾಕೆಂದರೆ, ಅಂತಹ ಇದನ್ನು ಮಾಡುವುದು ಕಠಿಣವೇನಲ್ಲ. ಹೀಗೆ ಮನೆಯಲ್ಲೇ ಪಾವ್‌ಬಾಜಿಯನ್ನು ಮಾಡುವ ಸಂದರ್ಭ ಪಾವ್‌ಗೆ ಮಾತ್ರ ಸುರಿಸುರಿದು ಬೆಣ್ಣೆ ಹಾಕಬೇಡಿ. ಕೊಂಚ ಬೆಣ್ಣೆ ಹಾಕಿ. ಯಾಕೆಂದರೆ ಇದರಲ್ಲಿ ರಾಶಿಗಟ್ಟಲೆ ಸುರಿಯುವ ಬೆಣ್ಣೆಯಲ್ಲಿಯೇ ಅತ್ಯಂತ ಹೆಚ್ಚು ಕ್ಯಾಲರಿ ಹಾಗೂ ಕೊಬ್ಬು ನಿಮ್ಮ ಹೊಟ್ಟೆ ಸೇರಿ ತೂಕ ಹೆಚ್ಚಳವಾಗಲು ಕಾಣಿಕೆ ನೀಡುತ್ತದೆ. ಹಾಗಾಗಿ, ಮುಂದಿನ ಬಾರಿ ಪಾವ್‌ಬಾಜಿ ಮಾಡುವಾಗ ಬೆಣ್ಣೆಯ ಮೇಲೆ ನಿಯಂತ್ರಣ ಇರಲಿ.

2. ಬಾಜಿ ಮಾಡುವ ಸಂದರ್ಭ ಎಷ್ಟು ಸಾಧ್ಯವೋ ಅಷ್ಟು ತರಕಾರಿಗಳನ್ನು ಹಾಕಿ. ಇದು ತರಕಾರಿಗಳಿಂದ ಸಮೃದ್ಧವಾಗಿರಲಿ. ಬಗೆಬಗೆಯ ತರಕಾರಿಗಳು ಬಾಜಿಯ ರುಚಿ ಹೆಚ್ಚಿಸುತ್ತದೆ. ಕ್ಯಾರೆಟ್‌, ಬೀನ್ಸ್‌, ಬಟಾಣಿ, ಕ್ಯಾಪ್ಸಿಕಂ ಎಲ್ಲವೂ ಸಾಕಷ್ಟು ಪೋಷಕಾಂಶಗಳನ್ನು ಹೊತ್ತಿವೆ. ಕಡಿಮೆ ಆಲೂಗಡ್ಡೆ ಬಳಸಿ. ಆಲೂಗಡ್ಡೆಯ ಬದಲಾಗಿ ಸಿಹಿಗೆಣಸು ಇತ್ಯಾದಿಗಳನ್ನೂ ಟ್ರೈ ಮಾಡಬಹುದು.

3. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಪಾವ್‌ ಮೈದಾದಲ್ಲಿ ಮಾಡಲ್ಪಟ್ಟಿರುತ್ತದೆ. ಮೈದಾದಿಂದ ಆರೋಗ್ಯಕ್ಕೆ ಎಳ್ಳಷ್ಟೂ ಪ್ರಯೋಜನವಿಲ್ಲ, ಬದಲಾಗಿ ಹಾನಿಯೇ ಹೆಚ್ಚಿದೆ ಎಂಬುದನ್ನು ಪದೇ ಪದೇ ವಿವರಿಸಿ ಹೇಳಬೇಕಾಗಿಲ್ಲ. ಹೀಗಾಗಿ. ಸಾಮಾನ್ಯ ಜಾಗಗಳಿಂದ ಪಾವ್‌ ತರುವ ಬದಲು, ಆದಷ್ಟೂ ಗೋಧಿಯಿಂದ ಮಾಡಿದ ಪಾವ್‌ ಸಿಕ್ಕರೆ ಅವನ್ನು ಕೊಂಡು ತನ್ನಿ. ಆ ಮೂಲಕ ಕಿಂಚಿತ್‌ ನಿಮ್ಮ ಗಿಲ್ಟ್‌ ಅನ್ನು ನೀವು ಕಡಿಮೆ ಮಾಡಿಕೊಳ್ಳಬಹುದು.

4. ಅತಿಯಾದ ಉಪ್ಪು ಸೇರಿಸಬೇಡಿ. ಉಪ್ಪು ರುಚಿಗೆ ತಕ್ಕಷ್ಟು ಹಿತಮಿತವಾಗಿರಲಿ. ಹೆಚ್ಚು ಉಪ್ಪು ಒಳ್ಳೆಯದಲ್ಲ ಎಂಬುದೂ ನಿಮಗೆ ತಿಳಿದಿದೆ. ಹೀಗಾಗಿ, ಬೇಕಾದರೆ, ಆಮೇಲೆ ಉಪ್ಪು ಸೇರಿಸುವ ಅವಕಾಶ ಇದ್ದೇ ಇದೆ ಎಂಬ ಸತ್ಯವನ್ನು ನಂಬಿ. ನಿಂಬೆಹಣ್ಣು, ಹಸಿ ಈರುಳ್ಳಿ ಇವೆಲ್ಲ ಜೊತೆಗಿರುವಾಗ ಉಪ್ಪೂ ಕೂಡಾ ಹೆಚ್ಚು ಬೇಕಾಗುವುದಿಲ್ಲ.

5. ಪಾವ್‌ಬಾಜಿಯ ಜೊತೆಗೆ ಸಲಾಡ್‌ ಕೂಡಾ ಇಟ್ಟಿರಿ. ಅಂದರೆ, ಕತ್ತರಿಸಿದ ಈರುಳ್ಳಿ, ಕ್ಯಾರೆಟ್‌, ಸೌತೆಕಾಯಿ ಇತ್ಯಾದಿಗಳು ಜೊತೆಗೆ ಇಟ್ಟುಕೊಂಡಾಗ, ಅವುಗಳ ಮೂಲಕ ಆರೋಗ್ಯಕರ ಆಹಾರವೂ ಹೊಟ್ಟೆ ಸೇರುತ್ತದೆ. ಜೊತೆಗೆ ಸಲಾಡ್‌ ತಿನ್ನುವುದರಿಂದ ಹೊಟ್ಟೆ ಬೇಗ ತುಂಬಿದಂತಾಗಿ, ಹೆಚ್ಚು ಪಾವ್‌ ಹಾಕಿಸಿಕೊಳ್ಳುವುದೂ ತಪ್ಪುತ್ತದೆ. ಹೊಟ್ಟೆಯೂ ತುಂಬುತ್ತದೆ. ಹಾಗಾಗಿ, ಕೇವಲ ಪಾವ್‌ ತಿಂದು ಹೊಟ್ಟೆ ತುಂಬಿಸಿಕೊಂಡೆ ಎಂಬ ಗಿಲ್ಟ್‌ ಕೂಡಾ ದೂರಾಗುತ್ತದೆ.

ಇದನ್ನೂ ಓದಿ: National Nutrition Week 2023: ರಾತ್ರಿ ಊಟ ಬೇಗ ಮಾಡುವುದರಿಂದಲೂ ಆರೋಗ್ಯ ಹಾಳು?

Continue Reading

ಆಹಾರ/ಅಡುಗೆ

Food Habits: ಈ ಖ್ಯಾತ ಬಿಲಿಯನೇರ್‌ಗಳು ಹೊಟ್ಟೆಗೇನು ತಿನ್ನುತ್ತಾರೆ ಗೊತ್ತೇ?

ಈ ಖ್ಯಾತನಾಮ ಶ್ರೀಮಂತರೆಲ್ಲ ಹೊಟ್ಟೆಗೇನು ತಿನ್ನುತ್ತಾರೆ (Food Habits) ಎಂಬ ಕುತೂಹಲ ನಿಮಗಿದ್ದರೆ, ಅವರ ಈ ಆಹಾರ ಕ್ರಮದಿಂದ ಮಾತ್ರ ಸ್ಪೂರ್ತಿ ಪಡೆಯಬೇಡಿ!

VISTARANEWS.COM


on

Edited by

warren buffet bill gates
Koo

ಬಿಲಿಯನೇರ್‌ (billionaire) ವಾರನ್‌ ಬಫೆಟ್‌ (warren buffet) ಅವರ ಜೀವನ ಸಾಧನೆ ಅನೇಕರಿಗೆ ಸ್ಪೂರ್ತಿದಾಯಕ ಕಥೆಯಾಗಿರಬಹುದು. ಇಲಾನ್‌ ಮಸ್ಕ್‌ (Elon Musk) ಅವರ ಐಷಾರಾಮಿ ಜೀವನಶೈಲಿ ನೋಡಿ ನೀವು ಹುಬ್ಬೇರಿಸಬಹುದು. ಬಿಲ್‌ ಗೇಟ್ಸ್‌ (Bill gates) ಎಂಬ ಹೆಸರು ಕೇಳಿದೊಡನೆ ರೋಮಾಂಚನವಾಗಬಹುದು. ಆದರೆ ಈ ಖ್ಯಾತನಾಮ ಶ್ರೀಮಂತರೆಲ್ಲ ಹೊಟ್ಟೆಗೇನು ತಿನ್ನುತ್ತಾರೆ (Food Habits) ಎಂಬ ಕುತೂಹಲ ನಿಮಗಿದ್ದರೆ, ಅವರ ಈ ಆಹಾರ ಕ್ರಮದಿಂದ ಮಾತ್ರ ಸ್ಪೂರ್ತಿ ಪಡೆಯಬೇಡಿ!

ಹೌದು. 93ರ ಹರೆಯದ ವಾರೆನ್‌ ಬಫೆಟ್‌ ಏನೆಲ್ಲ ತಿನ್ನುತ್ತಾರೆ ಎಂದು ನೀವು ತಿಳಿದರೆ ಹೌಹಾರುತ್ತೀರಿ. ಅದೂ ಈ ಇಳಿ ವಯಸ್ಸಿನಲ್ಲಿ! 2015ರಲ್ಲಿ ಫಾರ್ಚೂನ್‌ ಪ್ರಕಟಿಸಿದ ವಿಶೇಷ ವರದಿ, ವಾರನ್‌ ಬಫೆಟ್‌ ಅವರ ಆಹಾರ ಶೈಲಿಯ ಬಗೆಗೂ ಬೆಳಕು ಚೆಲ್ಲಿತ್ತು. ಅದರ ಪ್ರಕಾರ, ಬಫೆಟ್‌ ಅವರು ಪ್ರತಿ ನಿತ್ಯ ಐದು ಕ್ಯಾನ್ ಕೋಕ್‌ ಕುಡಿಯುತ್ತಾರಂತೆ! ಬಫೆಟ್‌ ಅವರು ಅತ್ಯಂತ ಖುಷಿಯ, ತನ್ನಿಚ್ಛೆಯ ಆಹಾರವನ್ನು ತಿನ್ನಲು ಇಷ್ಟಪಡುವವರಾಗಿದ್ದು, ಬದುಕಿದರೆ, ಬೇಕಾದಂತೆ ತಿಂದುಂಡು ಸಂತೋಷವಾಗಿ ಜೀವಿಸಬೇಕು ಎಂದವರು ಅಭಿಪ್ರಾಯಿಸಿದ್ದರು.

ಅದರ ಪ್ರಕಾರ, ಅವರು ದಿನಕ್ಕೆ ಐದು ಕ್ಯಾನ್‌ ಕೋಕ್‌ ಕುಡಿದರೆ, ವಾರದಲ್ಲಿ ಎರಡು ಬಾರಿ ಚಿಕನ್‌ ನಗ್ಗೆಟ್ಸ್‌ ತಿನ್ನುತ್ತಿದ್ದರಂತೆ. ಅಷ್ಟೇ ಅಲ್ಲ. ನಿತ್ಯವೂ ಊಟದ ನಂತರ ಐಸ್‌ ಕ್ರೀಂ ತಿನ್ನುವುದೂ ಕೂಡಾ ಅವರಿಗೆ ಬಲು ಪ್ರಿಯವಾದ ಅಭ್ಯಾಸವಂತೆ. ಹಗಲು ಹೊತ್ತಿನಲ್ಲಿ ಮೂರು ಕ್ಯಾನ್‌ ಕೋಕ್‌ ಕುಡಿದು ಮುಗಿಸಿದರೆ, ರಾತ್ರಿ ಎರಡು ಕ್ಯಾನ್‌ ಕೋಕ್‌ ಖಾಲಿ ಮಾಡುತ್ತಾರಂತೆ.

ನನ್ನ ದೇಹದ ಕಾಲು ಭಾಗ ಕೋಕಾಕೋಲಾದಿಂದ ಆವೃತವಾಗಿದೆ ಎಂದವರು ತನ್ನನ್ನೇ ತಾನು ತಮಾಷೆ ಮಾಡಿಕೊಂಡಿದ್ದರು. ಅವರ ಪ್ರತಿನಿತ್ಯದ ಕ್ಯಾಲರಿ ಶೇಕಡಾ 25 ಭಾಗ ಕೋಕ್‌ ಆವರಿಸಿದೆಯಂತೆ. ಕೋಕ್‌ ಇಲ್ಲದೆ ಅವರ ಜೀವನವೇ ಇಲ್ಲ ಎಂಬಷ್ಟು ಕೋಕ್‌ ದಾಸನಾಗಿದ್ದಾರಂತೆ ಬಫೆಟ್‌. ಅಷ್ಟರಮಟ್ಟಿಗೆ ಇವರು ಕೋಕಾಕೋಲಾ ಕಂಪನಿಯಲ್ಲಿ ತಾನು ಹೊಂದಿರುವ ಶೇಕಡಾ ಒಂಭತ್ತರಷ್ಟು ಶೇರುಗಳಿಗೆ ನ್ಯಾಯವನ್ನೂ ಸಲ್ಲಿಸುತ್ತಾರೆ!

ಕೇವಲ ಕೋಕ್‌ ಅಷ್ಟೇ ಅಲ್ಲ. ಸಾಕಷ್ಟು ಉಪ್ಪಿನಂಶವಿರುವ ಆಲೂಗಡ್ಡೆಯ ಸ್ಟಿಕ್‌ನಂತಹ ಕುರುಕಲು ಎಂದರೂ ಇವರಿಗೆ ಪಂಚಪ್ರಾಣವಂತೆ.

ಕಳೆದ ಎಪ್ರಿಲ್‌ನಲ್ಲಿ ಸಂದರ್ಶನವೊಂದರಲ್ಲೂ ಅವರು ಹೇಳಿದ್ದು ಇದನ್ನೇ. ʻನನ್ನ ಬಳಿ ಯಾರಾದರೂ ಬಂದು, ನೀವು ಬ್ರೊಕೋಲಿ ಹಾಗೂ ಇತರ ಆರೋಗ್ಯಕರ ಕೆಲವು ಆಹಾರಗಳನ್ನು ಶಿಸ್ತಾಗಿ ತಿನ್ನುತ್ತಿದ್ದರೆ ನೀವು ಹೆಚ್ಚು ಕಾಲ ಬದುಕಬಲ್ಲಿರಿ ಎಂದರೆ ನಾನು ಅವರಲ್ಲಿ, ನನ್ನ ಕೊನೆಯ ಆ ಹೆಚ್ಚುವರಿ ವರ್ಷಗಳನ್ನು ಬೇಕಾದರೆ ನೀವೇ ಇಟ್ಟುಕೊಳ್ಳಿ, ಆದರೆ, ನನ್ನಿಷ್ಟದ ತಿನಿಸುಗಳನ್ನು ನನಗೆ ತಿನ್ನಲು ಬಿಡಿ ಎಂದುಬಿಡುವೆʼ ಎಂದಿದ್ದರು.

ʻನಾನು ಆರು ವರ್ಷದವನಿದ್ದಾಗಲೇ, ನನಗೆ ಇಷ್ಟ ಬಂದ ಎಲ್ಲವನ್ನೂ ತಿನ್ನುತ್ತಿದ್ದೆ. ತಿನ್ನುವ ಈ ಕೆಲಸ ನನ್ನನ್ನು ಖುಷಿಪಡಿಸುತ್ತಿತ್ತು. ನನ್ನ ಪ್ರಕಾರ, ಜೀವನದಲ್ಲಿ ಸಂತೋಷವೆಂಬುದು ಬಹಳ ಮುಖ್ಯ. ದೀರ್ಘಾಯುಸ್ಸಿಗೆ ಈ ಸಂತೋಷವೂ ಬಹಳ ಮುಖ್ಯವಾಗುತ್ತದೆ. ಫಡ್ಜ್‌ ಸಂಡೇಸ್‌ ತಿನ್ನುವುದರಿಂದಲೋ, ಕೋಕ್‌ ಕುಡಿಯುವುದರಿಂದಲೋ ನನಗೆ ಆ ಸಂತೋಷ ಸಿಗುತ್ತದೆʼ ಎಂದವರು ತನ್ನ ಆಹಾರಶೈಲಿಯನ್ನು ಸಮರ್ಥಿಸಿಕೊಂಡಿದ್ದರು.

ಪ್ರಪಂಚದಲ್ಲಿ ಕೇವಲ ಬಫೆಟ್‌ ಒಬ್ಬರೇ ಈ ರೀತಿಯ ವಿಚಿತ್ರ ಆಹಾರಾಭ್ಯಾಸಗಳನ್ನು ಹೊಂದಿದವರಲ್ಲ. ಈ ಪಟ್ಟಿಗೆ ಹಲವರು ಸೇರುತ್ತಾರೆ. ವರ್ಜಿನ್‌ ಗ್ರೂಪ್‌ ಸಂಸ್ಥಾಪಕ ರಿಚರ್ಡ್‌ ಬ್ರಾನ್ಸನ್‌ ದಿನಕ್ಕೆ 20 ಕಪ್‌ ಚಹಾ ಕುಡಿಯುತ್ತಾರಂತೆ. ಜೆಫ್‌ ಬೆಝೋ ಅವರ ಬೆಳಗ್ಗಿನ ಉಪಹಾರದಲ್ಲಿ ಆಕ್ಟೋಪಸ್‌ ಜೊತೆಗೆ ಸದಾ ಆಲೂಗಡ್ಡೆಯ ಚಿಪ್ಸ್‌ ಇರುತ್ತದಂತೆ. ಖ್ಯಾತ ಹೂಡಿಕೆದಾರ ಮಾರ್ಕ್‌ ಕ್ಯೂಬನ್‌ ಬೆಳಗ್ಗಿನ ಉಪಹಾರಕ್ಕೆ ಸದಾ ಕುಕ್ಕೀಸ್‌ ತಿನ್ನುತ್ತಾರಂತೆ. ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಪ್ರತಿ ದಿನ ಮೂರರಿಂದ ನಾಲ್ಕು ಕ್ಯಾನ್‌ ಡಯಟ್‌ ಕೋಕ್‌ ಕುಡಿಯುತ್ತಾರಂತೆ. ಅಷ್ಟೇ ಅಲ್ಲ, ಅವರಿಗೆ ಚೀಸ್‌ ಬರ್ಗರ್‌ ಎಂದರೆ ಪಂಚಪ್ರಾಣವಂತೆ. ಎಲಾನ್‌ ಮಸ್ಕ್‌ ಅವರು ಪ್ರತಿದಿನ ಬೆಳಗ್ಗೆ ಡೋನಟ್‌ ಮಾತ್ರ ಉಪಹಾರವಾಗಿ ತಿನ್ನುತ್ತಾರೆ!

ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್‌ ಇಡ್ಲಿ ಮಾಡಲು ಪಂಚಸೂತ್ರಗಳು!

Continue Reading

ಆರೋಗ್ಯ

National Nutrition Week 2023: ರಾತ್ರಿ ಊಟ ಬೇಗ ಮಾಡುವುದರಿಂದಲೂ ಆರೋಗ್ಯ ಹಾಳು?

ಕೆಲವರು ರಾತ್ರಿ ಬೇಗ ಊಟ ಮಾಡುತ್ತಾರೆ. ಕೆಲವರು ಉಪವಾಸ (Nutrition Awareness) ಮಾಡುತ್ತಾರೆ. ಕೆಲವರು ತಡ ರಾತ್ರಿ ಊಟ ಮಾಡಿ ಮಲಗುತ್ತಾರೆ. ಯಾವುದು ಸರಿ? ಈ ಲೇಖನ ಓದಿ.

VISTARANEWS.COM


on

Edited by

National Nutrition Week 2023
Koo

ರಾತ್ರಿಯೂಟ ಬೇಕೆ-ಬೇಡವೇ? ಮಾಡಿದರೂ ಎಷ್ಟು ಪ್ರಮಾಣದಲ್ಲಿ? ಎಷ್ಟು ಹೊತ್ತಿಗೆ ಊಟ ಮಾಡಿದರೆ ಸರಿ ಅಥವಾ ತಪ್ಪು? ಇಂಥ ಹಲವಾರು ವಿಷಯಗಳ (dinner myths) ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ದಿನದ ಕೆಲಸವನ್ನೆಲ್ಲಾ ಮುಗಿಸಿ, ಮಲಗುವ ಮೊದಲು ದೇಹಕ್ಕೇನು ಬೇಕು (Nutrition Awareness) ಎಂಬ ಕೆಲವು ಮಾಹಿತಿಗಳಿವು.

ದಿನಕ್ಕೆ ಒಂದೆರಡೇ ಹೊತ್ತು ಉಣ್ಣುವವರು ಯೋಗಿಗಳೆನಿಸಿದರೆ, ಮೂರು ಹೊತ್ತು ಉಣ್ಣುವವರು ರೋಗಿಗಳು ಎನ್ನುತ್ತದೆ ಹಳೆಯ ಗಾದೆ. ಆದರೆ ಕಾಲ ಬದಲಾಗುತ್ತಿದ್ದಂತೆ ನಮ್ಮ ಅಗತ್ಯಗಳೂ ಬದಲಾಗುತ್ತಿವೆ. ಹಾಗಾಗಿ ಮೂರೂ ಹೊತ್ತು ತುತ್ತಿನ ಚೀಲ ತುಂಬಿಸುವುದು ಅನಿವಾರ್ಯ. ಬೆಳಗಿನ ತಿಂಡಿಗೆ ಇರುವ ನಿಯಮವು ರಾತ್ರಿಯೂಟಕ್ಕೆ ಅನ್ವಯಿಸುವುದಿಲ್ಲ. ಹಾಗೆ ನೋಡಿದರೆ ಒಂದೊಂದು ಹೊತ್ತಿನ ಆಹಾರಕ್ಕೂ ಒಂದೊಂದು ಕಲ್ಪನೆಗಳು (ಅಥವಾ ಮಿಥ್ಯೆಗಳು) ಥಳುಕು ಹಾಕಿಕೊಂಡಿವೆ. ಹಾಗಾದರೆ ರಾತ್ರಿಯೂಟಕ್ಕೆ (dinner myths) ಅಂಟಿಕೊಂಡಿರುವ ಮಿಥ್ಯೆಗಳೇನು?

dinner with family

ರಾತ್ರಿಯೂಟ ಬೇಗ ಮಾಡಬೇಕು

ಈ ಮಾತನ್ನು ಮಿಥ್ಯೆ ಎಂದರೆ ರಾತ್ರಿ ಹನ್ನೊಂದು ಗಂಟೆಗೆ ಊಟ ಮಾಡುವವರು ಪಾರ್ಟಿ ಮಾಡಿಯಾರು! ವಿಷಯ ಅದಲ್ಲ. ಆದರೆ ರಾತ್ರಿ ಬೇಗ ಊಟ ಮಾಡುವ ಆತುರದಲ್ಲಿ ಸಂಜೆ ಏಳರೊಳಗೆ ತಿನ್ನುವುದು ಸಮಸ್ಯೆಗೆ (dinner myths) ಮೂಲವಾಗಬಹುದು. ಸಾಮಾನ್ಯವಾಗಿ ಒಂದು ಹೊತ್ತಿನಿಂದ ಇನ್ನೊಂದು ಹೊತ್ತಿನ ಊಟಕ್ಕೆ ಅಥವಾ ತಿಂಡಿಗೆ ಮೂರರಿಂದ ನಾಲ್ಕು ತಾಸುಗಳ ಅಂತರ ಇರಬೇಕೆಂಬುದು ನಿಯಮ. ಅಂದರೆ, ಬೆಳಗ್ಗೆ ಎಂಟಕ್ಕೆ ತಿಂಡಿ ತಿಂದರೆ, ಮಧ್ಯಾಹ್ನ 12ರ ಸುಮಾರಿಗೆ ಊಟ, ಸಂಜೆ 4ರ ಆಜೂಬಾಜು ತಿಂಡಿ, ರಾತ್ರಿ ಎಂಟಕ್ಕೆ ಊಟ, 10ರ ಎಡ-ಬಲಕ್ಕೆ ನಿದ್ದೆ- ಇದು ಆದರ್ಶದ ಸ್ಥಿತಿ. ಇದನ್ನೆಷ್ಟು ಪಾಲಿಸಲಾಗುತ್ತದೆ ಎನ್ನುವ ಆಧಾರ ಮೇಲೆ ನಮ್ಮ ಊಟದ ಸಮಯ ಮಿತಿಗಳನ್ನು ನಿರ್ಧರಿಸಿಕೊಳ್ಳಬಹುದು. ಅಂದರೆ, ರಾತ್ರಿ 12ಕ್ಕೆ ಮಲಗುವವರು ನೀವಾಗಿದ್ದರೆ, 9ಕ್ಕಿಂತ ಮೊದಲೇ ಊಟ ಮಾಡಿದರೆ ನಡುರಾತ್ರಿಗೆ ಹಸಿವಾಗುವುದು ಖಚಿತ. ಹಾಗಾಗಿ ರಾತ್ರಿಯೂಟದ ಸಮಯವನ್ನು ನೀವು ಮಲಗುವ ಸಮಯಕ್ಕಿಂತ 2-3 ತಾಸು ಮೊದಲು ಮಾಡಿದರೆ ಸಾಕು.

Dinner should also be light

ರಾತ್ರಿಯೂಟ ಲಘುವಾಗಿರಬೇಕು

ಇದನ್ನೂ ಮಿಥ್ಯೆ ಎಂದರೆ ವಿವಾದಕ್ಕೆ ಎಡೆಯಾದೀತು. ನಿಜ, ರಾತ್ರಿಯೂಟ ಹೊಟ್ಟೆಬಿರಿ ತಿನ್ನುವುದು ಸರಿಯಲ್ಲ. ಆದರೆ ರಾತ್ರಿಯೂಟ ಲಘುವಾಗಬೇಕೆಂಬ ಉದ್ದೇಶದಿಂದ ಕೇವಲ ಸೂಪ್‌, ಸಲಾಡ್‌ ತಿನ್ನುವವರೆಷ್ಟೋ ಮಂದಿ. ತೀರಾ ಕಡಿಮೆ ಉಣ್ಣುವುದು ಅಥವಾ ಕ್ಯಾಲರಿ ಕಡಿಮೆ ಇರುವಂಥ ಆಹಾರ ತಿನ್ನುವುದರಿಂದ ರಾತ್ರಿ ಹಸಿವಾಗಿ ನಿದ್ದೆ ಬಾರದೆ ಇರಬಹುದು. ಬೆಳಗ್ಗೆ ಏಳುವಷ್ಟರಲ್ಲಿ ಹಸಿವಾಗಿ ತಲೆನೋವು, ಸುಸ್ತು ಕಾಣಿಸಬಹುದು. ಇದರಿಂದ ಮಾರನೇ ದಿನದ ಕೆಲಸಗಳು ಏರುಪೇರಾಗಬಹುದು; ಅಥವಾ ರಾತ್ರಿಯ ಹಸಿವು ತಣಿಸಲು ಸಿಕ್ಕಿದ್ದೆಲ್ಲಾ ತಿನ್ನುವ ಅಗತ್ಯವೂ ಬರಬಹುದು. ಹೀಗಾಗಬಾರದೆಂದರೆ ರಾತ್ರಿ ಊಟವೂ ಹದವಾಗಿರಬೇಕು; ಹೆಚ್ಚೂ ಅಲ್ಲ- ಕಡಿಮೆಯೂ ಅಲ್ಲ. ಊಟ ಚಿಕ್ಕದಾದರೂ ಸಮತೋಲಿತವಾಗಿರಬೇಕು- ಕೇವಲ ಸಲಾಡ್‌ ಅಲ್ಲ.

ರಾತ್ರಿಯೂಟ ಮಾಡಿದರೆ ತೂಕ ಹೆಚ್ಚುತ್ತದೆ

ಅದರಲ್ಲೂ ಪಿಷ್ಟ ಹೆಚ್ಚಿರುವ ಆಹಾರವನ್ನು ಸೇವಿಸಿದರೆ ದೇಹ ಊದಿಕೊಳ್ಳುತ್ತದೆ ಎಂಬ ಕಲ್ಪನೆ ಢಾಳಾಗಿದೆ. ದಿನವಿಡೀ ದುಡಿದು ದಣಿದ ದೇಹಕ್ಕೆ ವಿಶ್ರಾಂತಿಯ ಹೊತ್ತಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವುದು ಅಗತ್ಯ. ಇಡೀ ದಿನದ ಕೆಲಸಗಳಿಗೆ ಇಂಧನ ಬೇಕೆಂಬ ಉದ್ದೇಶದಿಂದ ಬೆಳಗಿನ ತಿಂಡಿಯನ್ನು ತಿಂದಂತೆಯೇ, ರಾತ್ರಿಯೂ ಸರಿಯಾದ ಸತ್ವಗಳನ್ನು ಒದಗಿಸಬೇಕು. ದೇಹದಲ್ಲಿ ಹೆಚ್ಚಿನ ರಿಪೇರಿ ಕೆಲಸಗಳು ನಡೆಯುವುದು ರಾತ್ರಿಯ ಸಮಯದಲ್ಲಿ. ದೇಹದ ಹೆಚ್ಚಿನ ಕೆಲಸಗಳು ನಿಂತು, ದೊರೆಯುವ ಶಕ್ತಿಯನ್ನೆಲ್ಲಾ ರಿಪೇರಿ ಕೆಲಸಕ್ಕೆ ದೇಹ ಬಳಸಬಹುದು ಎನ್ನುವಾಗ ಊಟವನ್ನೇ ಮಾಡದಿದ್ದರೆ ಹೇಗೆ?

All food eaten at night is converted into fat

ರಾತ್ರಿ ತಿನ್ನುವ ಆಹಾರವೆಲ್ಲಾ ಕೊಬ್ಬಾಗಿ ಪರಿವರ್ತನೆಯಾಗುತ್ತದೆ

ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಾತ್ರಿಯೂಟ ಮಾಡುವ ವಾಡಿಕೆ ಒಳ್ಳೆಯದೆ. ಹಾಗೆಂದು ರಾತ್ರಿ ತಿಂದಿದ್ದೆಲ್ಲಾ ಕೊಬ್ಬಾಗಿ ಶೇಖರವಾಗುತ್ತದೆ ಎನ್ನುವುದಕ್ಕೆ ವೈಜ್ಞಾನಿಕವಾಗಿ ಹೆಚ್ಚಿನ ಆಧಾರಗಳು ಇದ್ದಂತಿಲ್ಲ. ಆದರೆ ರಾತ್ರಿಯ ಊಟವನ್ನು ಸರಿಯಾಗಿ ಮಾಡದೆ, ನಡುರಾತ್ರಿ ಹಸಿವಾಗಿ, ಅಡುಗೆಮನೆ ನುಗ್ಗಿ ಸಿಕ್ಕಿದ ಕುರುಕಲುಗಳನ್ನೆಲ್ಲಾ ತಿಂದರೆ ಕೊಬ್ಬು ಶೇಖರವಾಗುವುದು ಹೌದು. ಹಾಗಾಗಿ ರಾತ್ರಿಯ ಕಳ್ಳ ಹಸಿವೆಗೆ ಕಡಿವಾಣ ಹಾಕಲು, ಪ್ರೊಟೀನ್‌ ಜೊತೆಗೆ ತರಕಾರಿ, ಇಡಿ ಧಾನ್ಯಗಳಂಥ ಸಂಕೀರ್ಣ ಪಿಷ್ಟಗಳನ್ನು ರಾತ್ರಿಯೂಟಕ್ಕೆ ಸೇವಿಸಿ.

ರಾತ್ರಿಯೂಟ ಬಿಡುವುದು ಒಳ್ಳೆಯದೆ?

ಎಲ್ಲೊ ಒಂದು ಏಕಾದಶಿಗೆ ರಾತ್ರಿಯೂಟ ಬಿಟ್ಟರೆ ದೊಡ್ಡದಲ್ಲ; ದಿನವೂ ಏಕಾದಶಿಯಾದರೆ ಕಷ್ಟ! ರಕ್ತದೊತ್ತಡ, ಸಕ್ಕರೆಮಟ್ಟಗಳೆಲ್ಲಾ ಕ್ರಮೇಣ ಏರುಪೇರಾಗುತ್ತವೆ. ಜೀರ್ಣಾಂಗಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದೇಹದ ಚಯಾಪಚಯ ವ್ಯತ್ಯಾಸವಾಗಿ ಕೊಬ್ಬು ಶೇಖರಣೆ ಆದರೂ ಅಚ್ಚರಿಯಿಲ್ಲ. ಅದರಲ್ಲೂ ತೂಕ ಇಳಿಸುವ ಉದ್ದೇಶದಿಂದ ರಾತ್ರಿಯೂಟ ಬಿಟ್ಟರಂತೂ, ಫಲಿತಾಂಶ ವ್ಯತಿರಿಕ್ತವಾಗಬಹುದು. ಪೋಷಕಾಂಶಗಳ ಕೊರತೆಯೂ ಕಾಡಬಹುದು. ರಾತ್ರಿಯೂಟ ಬೇಕು- ಬೇಕೇಬೇಕು.

ಇದನ್ನೂ ಓದಿ: National Nutrition Week 2023 : ಸಿರಿ ಧಾನ್ಯಗಳ ಉತ್ತೇಜನಕ್ಕೇ ಮೀಸಲು ಐಐಎಂಆರ್‌ ಸಂಸ್ಥೆ

Continue Reading

ಆರೋಗ್ಯ

National Nutrition Week 2023: ಮಕ್ಕಳಿಗೆ ಸಿರಿಧಾನ್ಯದ ಆಹಾರ ಕೊಡಬಹುದೆ?

ಸಿರಿ ಧಾನ್ಯಗಳು (National Nutrition Week 2023) ಇಂದು ವ್ಯಾಪಕವಾಗಿ ಜನಪ್ರಿಯವಾಗುತ್ತಿವೆ. ಆರೋಗ್ಯಕರ ಜೀವನದಲ್ಲಿ ಸಿರಿ ಧಾನ್ಯಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಆದರೆ ಪುಟ್ಟ ಮಕ್ಕಳಿಗೆ ಸಿರಿ ಧಾನ್ಯ ಕೊಡಬಹುದೆ? ಇದರಿಂದ ಅಡ್ಡ ಪರಿಣಾಮ ಏನಾದರು ಇದೆಯೆ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Edited by

National Nutrition Week 2023
Koo

ಸಿರಿಧಾನ್ಯ ಆರೋಗ್ಯಕ್ಕೆ ಒಳ್ಳೆಯದು. ಹಿಂದಿನ ಕಾಲದಲ್ಲಿ ಸಿರಿಧಾನ್ಯಗಳ (National Nutrition Week 2023) ಬಳಕೆ ಅತ್ಯಂತ ಹೆಚ್ಚಾಗಿತ್ತು. ತದನಂತರದಲ್ಲಿ ಗೋಧಿ ಮತ್ತು ಅಕ್ಕಿಯ ಬಳಕೆ ಹೆಚ್ಚಾಯಿತು. ಆದರೆ ಇಂದಿಗೂ ಹೆಚ್ಚಿನ ಪೌಷ್ಟಿಕಾಂಶ ಬೇಕೆಂದರೆ ಸಿರಿಧಾನ್ಯ ಬಳಕೆ ಮಾಡಬೇಕು ಎನ್ನುತ್ತದೆ ಆಹಾರ ಶಾಸ್ತ್ರ. ಸಿರಿಧಾನ್ಯ ಬಳಕೆಯಿಂದ ಮಧುಮೇಹ ನಿಯಂತ್ರಣ ಮಾಡುವುದರಿಂದ ಹಿಡಿದು ದೇಹದ ತೂಕ ಇಳಿಸಿಕೊಳ್ಳುವವರೆಗೆ ಅನೇಕ ರೀತಿಯಲ್ಲಿ ಆರೋಗ್ಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅಂದ ಹಾಗೆ ಈ ಸಿರಿಧಾನ್ಯಗಳನ್ನು ಮಕ್ಕಳಿಗೆ ಕೊಡಬಹುದೇ ಎನ್ನುವ ಅನುಮಾನ ಎಲ್ಲರಲ್ಲೂ ಇರುತ್ತದೆ.

Start slowly

ನಿಧಾನವಾಗಿ ಆರಂಭಿಸಿ

ಶಿಶುಗಳಿಗೆ ಕನಿಷ್ಠ 6-8 ತಿಂಗಳುಗಳವರೆಗೆ ತಾಯಿಯ ಹಾಲನ್ನು ಕೊಡಬೇಕು. ನಂತರದ ದಿನಗಳಲ್ಲಿ ಅವರಿಗೆ ಸ್ವಲ್ಪಮಟ್ಟಿಗಿನ ಘನ ಆಹಾರವನ್ನು ಕೊಡಬಹುದು. ಆ ಸಮಯದಲ್ಲಿ ನೀವು ಅವರಿಗೆ ಸಿರಿಧಾನ್ಯ ಕೊಡುವ ಅಭ್ಯಾಸವನ್ನು ಆರಂಭಿಸಬಹುದು. ಸಿರಿಧಾನ್ಯ ಕೊಡಬಹುದು ಎಂದ ಮಾತ್ರಕ್ಕೆ ಒಮ್ಮೆಲೆ ಕೇವಲ ಸಿರಿಧಾನ್ಯಗಳನ್ನೇ ಕೊಡುವುದು ತಪ್ಪಾಗುತ್ತದೆ. ಮಕ್ಕಳಿಗೆ ಯಾವುದೇ ಆಹಾರವನ್ನಾದರೂ ನಿಧಾನವಾಗಿ ಅಭ್ಯಾಸ ಮಾಡಿಸಬೇಕು. ಮೊದಲು ಚಮಚದಷ್ಟು ಆಹಾರವನ್ನು ತಿನಿಸಿ, ನಂತರದ ದಿನಗಳಲ್ಲಿ ಅದನ್ನು ಜಾಸ್ತಿ ಮಾಡುತ್ತಾ ಹೋಗಬೇಕು. ಅದೇ ರೀತಿಯಲ್ಲಿ ಸಿರಿಧಾನ್ಯದ ಅಭ್ಯಾಸವನ್ನು ಕೂಡ ನಿಧಾನವಾಗಿ ಆರಂಭಿಸಿ.

Ask a doctor for advice

ವೈದ್ಯರ ಸಲಹೆ ಕೇಳಿ

ಸಿರಿಧಾನ್ಯ ಅಭ್ಯಾಸ ಮಾಡಿಸುವುದಕ್ಕೂ ಮೊದಲು ಒಮ್ಮೆ ನಿಮ್ಮ ವೈದ್ಯರನ್ನು ಕೇಳಿ ಮಾಹಿತಿ ಪಡೆದುಕೊಳ್ಳಿ. ಸಿರಿಧಾನ್ಯವು ಉತ್ತಮ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಆದರೆ ಕೆಲವೊಮ್ಮೆ ಮಕ್ಕಳಲ್ಲಿ ಅಯೋಡಿನ್‌ ಕೊರತೆಯಿದ್ದರೆ ಅಥವಾ ಥೈರಾಯ್ಡ್‌ನಂತಹ ಕಾಯಿಲೆಯಿದ್ದರೆ ಅಂತಹ ಮಕ್ಕಳಿಗೆ ಸಿರಿಧಾನ್ಯ ಕೊಡುವುದು ಸೂಕ್ತವಾಗಿರುವುದಿಲ್ಲ. ಹಾಗಾಗಿ ನೀವು ಸಿರಿಧಾನ್ಯದ ಅಭ್ಯಾಸ ಮಾಡಿಸುವುದಕ್ಕೂ ಮೊದಲು ವೈದ್ಯರಿಂದ ಸಲಹೆಯನ್ನು ತಪ್ಪದೇ ಪಡೆದುಕೊಳ್ಳಿ. ಸಿರಿಧಾನ್ಯ ಆರೋಗ್ಯಕ್ಕೆ ಅತ್ಯಂತ ಉತ್ತಮ ಆಹಾರವೇ ಆಗಿದ್ದರೂ ಕೆಲವೊಮ್ಮೆ ವೈದ್ಯರು ನಿರ್ದಿಷ್ಟ ಕಾರಣಗಳಿಂದಾಗಿ ಅದನ್ನು ಮಕ್ಕಳಿಗೆ ನೀಡುವುದು ಬೇಡ ಎನ್ನುವ ಸಾಧ್ಯತೆಯೂ ಇರುತ್ತದೆ.

Fruits

ಇದರ ಜತೆ ಹಣ್ಣುಗಳೂ ಇರಲಿ

ಸಿರಿಧಾನ್ಯ ಒಳ್ಳೆಯದು ಎನ್ನುವ ಮಾತ್ರಕ್ಕೆ ಶಿಶುಗಳಿಗೆ ಅಥವಾ ಬೆಳೆಯುವ ಮಕ್ಕಳಿಗೆ ಅದನ್ನೇ ಕೊಡುವುದು ಸೂಕ್ತವಲ್ಲ. ಕೆಲವು ಸಿರಿಧಾನ್ಯಗಳು ಅತ್ಯಂತ ಉಷ್ಣಾಂಶವನ್ನು ಹೊಂದಿರುತ್ತವೆ. ಅಂತವನ್ನು ಪ್ರತಿನಿತ್ಯ ಮಕ್ಕಳಿಗೆ ಕೊಡುವುದರಿಂದ ಮಕ್ಕಳಲ್ಲಿ ಬೇರೆ ರೀತಿಯ ಆರೋಗ್ಯ ಸಮಸ್ಯೆ ಉಂಟಾಗಬಹುದು. ಹಾಗಾಗಿ ನೀವು ಸಿರಿಧಾನ್ಯದ ಜತೆ ಬೇರೆ ಬೇರೆ ರೀತಿಯ ಹಣ್ಣುಗಳು, ತರಕಾರಿ, ಗೋಧಿ, ಅಕ್ಕಿಯ ಖಾದ್ಯಗಳನ್ನೂ ಕೊಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಗಂಜಿ ರೀತಿಯಲ್ಲಿ ಕೊಡಿ

ಚಿಕ್ಕ ಮಕ್ಕಳಿಗೆ ನೀವು ಸಿರಿಧಾನ್ಯವನ್ನು ಅಂಬಲಿ ಅಥವಾ ಗಂಜಿ ರೀತಿಯಲ್ಲಿ ಮಾಡಿ ತಿನ್ನಿಸಬಹುದು. ಮಕ್ಕಳು ಸ್ವಲ್ಪ ದೊಡ್ಡವರಾಗಿ ಘನ ಆಹಾರವನ್ನು ತಿನ್ನುವಂತವರಾದ ಮೇಲೆ ಅವರಿಗೆ ರಾಗಿ ರೊಟ್ಟಿ, ಸಿರಿಧಾನ್ಯಗಳ ದೋಸೆ ಹೀಗೆ ತರೇವಾರು ಖಾದ್ಯಗಳನ್ನು ಸಿರಿಧಾನ್ಯಗಳಿಂದ ಮಾಡಿಕೊಡಬಹುದು.

Cereals

ಭಾರತದಲ್ಲಿ ಸಿಗುವ ಸಿರಿಧಾನ್ಯಗಳು

ವಿಶ್ವದಾದ್ಯಂತ ಒಟ್ಟು 60ಕ್ಕೂ ಅಧಿಕ ಜಾತಿಯ ಸಿರಿಧಾನ್ಯಗಳನ್ನು ಬೆಳೆದು ಆಹಾರದಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಪ್ರಮುಖವಾಗಿ ಎಂಟು ರೀತಿಯ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಅವುಗಳೆಂದರೆ ಜೋಳ, ರಾಗಿ, ನವಣೆ, ಅರ್ಕಾ, ಸಾಮೆ, ಸಜ್ಜೆ, ಬರಗು ಮತ್ತು ಊದಲು. ಈ ಸಿರಿಧಾನ್ಯಗಳನ್ನು ಪೂರ್ವಜರ ಕಾಲದಿಂದಲೂ ಭಾರತದಲ್ಲಿ ಬಳಸಲಾಗುತ್ತಿದೆ.

ಸಿರಿಧಾನ್ಯಗಳ ಉಪಯೋಗವೇನು?

Corn

ಜೋಳ

ಜೋಳವು ಹೆಚ್ಚು ಪ್ರೋಟೀನ್‌, ಫೈಬರ್‌, ರಂಜಕ, ಪೊಟ್ಯಾಶಿಯಂ, ಕ್ಯಾಲ್ಶಿಯಂ ಮತ್ತು ಕಬ್ಬಿಣಾಂಶವನ್ನು ಹೊಂದಿರುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ ಕೂಡ ಇರುತ್ತದೆ.

millet

ರಾಗಿ

ರಾಗಿಯು ಹೆಚ್ಚಾಗಿ ಕ್ಯಾಲ್ಶಿಯಂ ಮತ್ತು ಕಬ್ಬಿಣಾಂಶವನ್ನು ಹೊಂದಿರುತ್ತದೆ. ಇದನ್ನು ಗಂಜಿ ರೂಪದಲ್ಲಿ ಶಿಶುಗಳಿಗೆ ಮತ್ತು ತಾಯಂದಿರಿಗೆ ನೀಡುವುದು ಉತ್ತಮ.

ನವಣೆ

ಇದು ಅತ್ಯಧಿಕ ಖನಿಜಾಂಶ ಹೊಂದಿರುವ ಸಿರಿಧಾನ್ಯವಾಗಿದೆ. ಪ್ರೋಟೀನ್‌ ಕೂಡ ಸಮೃದ್ಧವಾಗಿರುವ ಇದು ಮೂತ್ರಪಿಂಡದ ಕಾರ್ಯವನ್ನು ಹೆಚ್ಚಿಸುತ್ತದೆ. ಹಾರ್ಮೋನ್‌ ಅಸಮತೋಲನವನ್ನು ಸರಿಪಡಿಸುವಲ್ಲೂ ಇದು ಸಹಾಯಕಾರಿ.

ಅರ್ಕಾ

ಇದರಲ್ಲಿ ಹೆಚ್ಚಿನ ನಾರಿನಾಂಶವಿರುತ್ತದೆ. ಇದು ಮಧುಮೇಹವಿರುವವರಿಗೆ ಸೂಕ್ತ ಆಹಾರ. ಇದನ್ನು ಕಿಚಡಿ ರೂಪದಲ್ಲಿ ಅಥವಾ ಪೊಂಗಲ್‌ ಮಾಡಿಕೊಂಡು ಸೇವಿಸಬಹುದು.

ಸಾಮೆ

ಅತ್ಯಧಿಕ ಕೊಬ್ಬಿನಾಂಶ ಹೊಂದಿರುವ ಸಿರಿಧಾನ್ಯ ಇದಾಗಿದೆ. ಪ್ರೋಟೀನ್‌ ಸಮೃದ್ಧವಾಗಿರುವ ಇದನ್ನು ದೋಸೆ ಮಾಡಿಕೊಂಡು ತಿನ್ನಬಹುದು.

ಸಜ್ಜೆ

ಪ್ರೋಟೀನ್‌ ಮತ್ತು ಶಕ್ತಿಯ ಅಂಶವನ್ನು ಹೊಂದಿರುವ ಇದು ಗೋಧಿಗಿಂತ ಆರು ಪಟ್ಟು ಹೆಚ್ಚು ಪೌಷ್ಟಿಕವಾಗಿದೆ. ಇದನ್ನು ರೊಟ್ಟಿ, ಗಂಜಿ ಮಾಡಬಹುದು.

ಬರಗು

ಪ್ರೋಟೀನ್‌ ಅಧಿಕವಿರುವ ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿರುತ್ತವೆ. ಈ ಸಿರಿಧಾನ್ಯದಿಂದಲೂ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಮಕ್ಕಳಿಗೆ ಕೊಡಬಹುದಾಗಿದೆ.

ಊದಲು

ಈ ಸಿರಿಧಾನ್ಯದಲ್ಲಿ ಫೈಬರ್‌ ಅಂಶ ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಈ ಸಿರಿಧಾನ್ಯ ಹೆಚ್ಚು ಬಳಕೆಯಲ್ಲಿ ಇಲ್ಲವಾದರೂ ಇದರಿಂದ ಹಲವು ರೀತಿಯ ಖಾದ್ಯಗಳನ್ನು ಮಾಡಿ, ಸೇವಿಸಬಹುದಾಗಿದೆ.

ಇದನ್ನೂ ಓದಿ: National Nutrition Week 2023: ಸತ್ವಯುತ ಆಹಾರಗಳನ್ನು ಎಷ್ಟು ಸುಲಭವಾಗಿ ಮಾಡಬಹುದು ನೋಡಿ!

Continue Reading
Advertisement
Ruturaj Gaikwad
ಕ್ರಿಕೆಟ್27 mins ago

ind vs aus : ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ

Cat eyed snake
ಕರ್ನಾಟಕ42 mins ago

Cat Eyed Snake : ಬೆಕ್ಕಿನ ಕಣ್ಣಿನ ಸುಂದರಿಯರನ್ನು ನೋಡೇ ಇರ್ತೀರಿ, ಬೆಕ್ಕಿನ ಕಣ್ಣಿನ ಹಾವು ನೋಡಿದ್ದೀರಾ?

Dakshin Bharat Utsav
ಕರ್ನಾಟಕ44 mins ago

Dakshin Bharat Utsav: ಪ್ರವಾಸೋದ್ಯಮ ಉತ್ತೇಜಿಸಲು ಖಾಸಗಿ ವಲಯಕ್ಕೆ 550 ಸ್ಮಾರಕ ದತ್ತು: ಸಚಿವ ಎಚ್‌.ಕೆ. ಪಾಟೀಲ್

savings
ದೇಶ51 mins ago

Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!

Mohammed Shami
ಕ್ರಿಕೆಟ್1 hour ago

Mohammed Shami : ಬೌಲಿಂಗ್​ನಲ್ಲಿ ಹೊಸ ಮಿಂಚು ಸೃಷ್ಟಿಸಿದ ಮೊಹಮ್ಮದ್ ಶಮಿ; ಏನಿದು ಸಾಧನೆ

Vijayanagara DC Diwakar MS Visit and inspection of hospital in Hagaribommanahalli
ವಿಜಯನಗರ1 hour ago

Vijayanagara News: ಹಗರಿಬೊಮ್ಮನಹಳ್ಳಿಯ ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ಡಿಸಿ ದಿವಾಕರ್‌ ದಿಢೀರ್‌ ಭೇಟಿ

Neegilu Kavya Abhiyan programme at gubbi
ತುಮಕೂರು1 hour ago

Tumkur News: ಗುಬ್ಬಿಯಲ್ಲಿ ನೇಗಿಲು ಕಾವ್ಯ ಅಭಿಯಾನಕ್ಕೆ ಸಾಹಿತಿ ಸಂತೋಷ್ ಮಡೆನೂರು ಚಾಲನೆ

T20 wordl cup venue
ಕ್ರಿಕೆಟ್1 hour ago

T20 World Cup : 2024 ಟಿ20 ವಿಶ್ವ ಕಪ್​ ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತವೆ ಎಂಬ ಮಾಹಿತಿ ಇಲ್ಲಿದೆ

sugar factory representatives and sugarcane growers meeting at DC office Karwar
ಉತ್ತರ ಕನ್ನಡ1 hour ago

Uttara Kannada News: ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿ: ಡಿಸಿ ಗಂಗೂಬಾಯಿ ಮಾನಕರ್

Vishwa Hindu Mahasabha Ganapati Utsav Committee Honorary President Sanjiva Achar spoke at the pressmeet
ಶಿವಮೊಗ್ಗ2 hours ago

Shivamogga News: ವಿಶ್ವ ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿಯಿಂದ ಸೆ.23ರಿಂದ ಸೊರಬದಲ್ಲಿ ಕಾರ್ಯಕ್ರಮ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ3 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ5 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ6 days ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ6 days ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ6 days ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ7 days ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

Dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದರೆ ನಷ್ಟ ಗ್ಯಾರಂಟಿ!

ಟ್ರೆಂಡಿಂಗ್‌