Coconut Use: ಪೂಜೆ, ಹಬ್ಬ ಹರಿದಿನಗಳಲ್ಲಿ ಸಿಕ್ಕ ರಾಶಿ ತೆಂಗಿನಕಾಯಿಯನ್ನು ಹೀಗೆಲ್ಲಾ ಬಳಸಬಹುದು! - Vistara News

ಆಹಾರ/ಅಡುಗೆ

Coconut Use: ಪೂಜೆ, ಹಬ್ಬ ಹರಿದಿನಗಳಲ್ಲಿ ಸಿಕ್ಕ ರಾಶಿ ತೆಂಗಿನಕಾಯಿಯನ್ನು ಹೀಗೆಲ್ಲಾ ಬಳಸಬಹುದು!

ಈಗ ಸಾಲು ಸಾಲು ಹಬ್ಬಗಳು ರೆಡಿಯಾಗಿರುವಾಗ ಮುಂಚೆಯೇ, ಈಗೆ ಶೇಖರಣೆಯಾಗುವ ತೆಂಗಿನಕಾಯಿಯನ್ನು ಹೇಗೆ ಉಪಯೋಗಕರವಾಗಿ ಬಳಸಬಹುದು ಎಂಬುದನ್ನು ನೋಡೋಣ, ಬನ್ನಿ.

VISTARANEWS.COM


on

coconuts
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ ಏನೇ ಶುಭ ಕಾರ್ಯಗಳಿದರೂ ಅಲ್ಲಿ ತೆಂಗಿನಕಾಯಿಗೆ (Coconuts) ವಿಶೇಷ ಪ್ರಾಧಾನ್ಯತೆ. ಅದಕ್ಕೇ ತೆಂಗಿನಕಾಯಿಯನ್ನು ದೇವರ ಹಣ್ಣೆಂದು ಪರಿಗಣಿಸಲಾಗುತ್ತದೆ. ಕಲ್ಪವೃಕ್ಷ ನೀಡಿದ ಫಲವಿದು. ಸಮೃದ್ಧಿಯ ಸಂಕೇತ ಈ ತೆಂಗಿನಕಾಯಿ. ಸಂಪ್ರದಾಯ, ಆಚರಣೆಗಳಿಗೆ ತೆಂಗಿನಕಾಯಿಯ ಮಹತ್ವ ಇದ್ದಷ್ಟೇ ಇದರಿಂದ ಆರೋಗ್ಯಕ್ಕೂ, ಆಹಾರವಾಗಿಯೂ (health tips) ಅಷ್ಟೇ ಮಹತ್ವವಿದೆ. ಇದು ರುಚಿಯಷ್ಟೇ ಅಲ್ಲ, ಪೋಷಕಾಂಶಗಳಿಂದಲೂ ಸಮೃದ್ಧವಾಗಿರುವ ಒಂದು ಸಂಪೂರ್ಣ ಆಹಾರ.

ಆಗಾಗ ಹಬ್ಬ ಹರಿದಿನ, ಅಥವಾ ದೇವಸ್ಥಾನದ ಹಣ್ಣುಕಾಯಿ, ಪೂಜೆ ಪುನಸ್ಕಾರ ಎಂಬ ನಾನಾ ಕಾರಣಗಳಿಂದ ನಮ್ಮ ಮನೆಗಳಲ್ಲಿ ಕೆಲವೊಮ್ಮೆ ರಾಶಿ ಒಡೆದ ತೆಂಗಿನಕಾಯಿಗಳು ಶೇಖರಣೆಯಾಗಿ ಬಿಡುತ್ತದೆ. ಬಹಳಷ್ಟು ದಿನ ಇಟ್ಟರೆ ಹಾಳಾಗುತ್ತದೆ ಎಂದೋ, ಇಷ್ಟು ಪೋಷಕಾಂಶಗಳಿರುವ ತೆಂಗಿನಕಾಯಿಯನ್ನು ವ್ಯರ್ಥವಾಗಿ ಹಾಳು ಮಾಡಲು ಬಿಡಲು ಮನಸ್ಸಾಗದೆ, ಕೆಲವೊಮ್ಮೆ ಏನು ಮಾಡಬೇಕೆಂದೇ ತೋಚುವುದಿಲ್ಲ. ಅಕ್ಕಪಕ್ಕದ ಮನೆಯವರಿಗೆ ಕೊಟ್ಟೂ ಮನೆಯಲ್ಲಿ ಮಿಕ್ಕಿ, ಫ್ರಿಡ್ಜ್‌ನಲ್ಲೂ ಜಾಗ ಇಲ್ಲ ಎಂಬ ಪರಿಸ್ಥಿತಿ ಕೆಲವೊಮ್ಮೆ ಬರುತ್ತವೆ. ಈಗ ಸಾಲು ಸಾಲು ಹಬ್ಬಗಳು ರೆಡಿಯಾಗಿರುವಾಗ ಮುಂಚೆಯೇ, ಈಗೆ ಶೇಖರಣೆಯಾಗುವ ತೆಂಗಿನಕಾಯಿಯನ್ನು ಹೇಗೆ (food tips) ಉಪಯೋಗಕರವಾಗಿ ಬಳಸಬಹುದು (Coconut Use) ಎಂಬುದನ್ನು ನೋಡೋಣ, ಬನ್ನಿ.

1. ತೆಂಗಿನಕಾಯಿ ಚಟ್ನಿ: ದಕ್ಷಿಣ ಭಾರತೀಯರು ನಾವು. ಚಟ್ನಿಯಿಲ್ಲದೆ, ದೋಸೆಯೋ, ಇಡ್ಲಿಯೋ, ಊಟವೋ ಆದರೂ ಮುಂದುವರಿಯೋದು ಕಷ್ಟ. ಹಾಗಾಗಿ, ತೆಂಗಿನಕಾಯಿ ಇದ್ದರೆ ಚಟ್ನಿ ಮಾಡು ಎಂದು ಸಲಹೆ ನೀಡುವುದು ಖಂಡಿತವಾಗಿಯೂ ಹಾಸ್ಯಾಸ್ಪದವೇ. ಆದರೆ, ತೆಂಗಿನಕಾಯಿ ಹೆಚ್ಚಿದ್ದಾಗ ಚಟ್ನಿ ಮಾಡದೆ ಇರುವುದನ್ನೂ ತಪ್ಪಿಸಲಾರಿರಿ. ಕೊಬ್ಬರಿಯಾಗಿದ್ದರೆ, ಅಂದರೆ ಒಣಗಿದ್ದರೆ, ಅದರ ತುರಿಯನ್ನು ಹುರಿದು ಚಟ್ನಿ ಪುಡಿ ಮಾಡಿ ಬಹಳ ದಿನಗಳ ಕಾಲ ಕೆಡದೆ ಇಟ್ಟುಕೊಂಡು ನಿತ್ಯವೂ ಬಳಸುತ್ತಿರಬಹುದು.

2. ಕೋಕೋನಟ್‌ ರೈಸ್‌ (ತೆಂಗಿನಕಾಯಿ ಅನ್ನ): ತೆಂಗಿನಕಾಯಿಯನ್ನು ತುರಿದು ಅದಕ್ಕೆ, ಕೊತ್ತಂಬರಿ, ಜೀರಿಗೆ, ಕರಿಬೇವು ಹಾಗೂ ಗೋಡಂಬಿ ಹಾಕಿ ಒಗ್ಗರಣೆ ಹಾಕಿ, ಅನ್ನದ ಜೊತೆಗೆ ಮಿಕ್ಸ್‌ ಮಾಡಿ ಕೋಕನೆಟ್‌ ರೈಸ್‌ ಮಾಡಿಯೂ ಬೆಳಗಿನ ಉಪಹಾರಕ್ಕೋ, ಮಧ್ಯಾಹ್ನದೂಟಕ್ಕೂ ಮಾಡಿ ತಿನ್ನಬಹುದು. ತೆಂಗಿನೆಣ್ನೆಯ ಒಗ್ಗರಣೆ ಇದಕ್ಕೆ ಇನ್ನೂ ರುಚಿ.

3. ತೆಂಗಿನಕಾಯಿ ಹಾಲು: ತೆಂಗಿನಕಾಯಿಯಿಂದ ಹಾಲು ತೆಗೆದಿಡಿ. ಈ ಹಾಲನ್ನು ಹಲವು ಅಡುಗೆಗಳಿಗೆ ಬಳಸಬಹುದು. ಸೂಪ್‌, ಕರಿಗಳು, ಸಿಹಿತಿನಿಸುಗಳು, ಡೈರಿ ಫ್ರೀ ವೇಗನ್‌ ತಿನಿಸುಗಳು, ಸ್ಮೂದಿಗಳು, ಪಾಯಸ ಇತ್ಯಾದಿಗಳನ್ನು ಮಾಡಲು ಬಳಸಬಹುದು.

4. ತೆಂಗಿನಕಾಯಿ ಸಿಹಿತಿನಿಸುಗಳು: ತೆಂಗಿನಕಾಯಿ ಬರ್ಫಿ, ಮೋದಕ, ಖೀರು, ಲಡ್ಡು ಸೇರಿದಂತೆ ನಾನಾ ಬಗೆಯ ಸಿಹಿತಿನಿಸುಘಲನ್ನೂ ತೆಂಗಿನಕಾಯಿಯಿಂದ ಮಾಡಬಹುದು.

5. ತೆಂಗಿನಕಾಯಿ ಸಾಂಬಾರು/ಕರಿ: ತೆಂಗಿನಕಾಯಿ ಹಾಕಿ ಸಾಂಬಾರು ಪುರಿಯ ಜೊತೆ ಸೇರಿಸಿ ರುಬ್ಬಿ ಮಾಡಿದ ಸಾಂಬಾರು, ಕರಿಯನ್ನೂ ಮಾಡಬಹುದು. ಮಲೆನಾಡು, ಕರಾವಳಿ ಶೈಲಿಯ ಈ ಅಡುಗೆ ರುಚಿಯಲ್ಲಿ ಬಹಳ ಮುಂದು.

6. ಬೇಕ್‌ ಮಾಡಿ: ನೀವು ಬೇಕಿಂಗ್‌ ಪ್ರಿಯರಾಗಿದ್ದರೆ ತೆಂಗಿನಕಾಯಿ ಮಫಿನ್‌ಗಳು, ಕೇಕ್‌ಗಳು, ಕುಕ್ಕೀಸ್‌ಗಳು ಇತ್ಯಾದಿಗಳನ್ನೂ ಟ್ರೈ ಮಾಡಬಹುದು.

ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್‌ ಇಡ್ಲಿ ಮಾಡಲು ಪಂಚಸೂತ್ರಗಳು!

ಅಂದಹಾಗೆ, ತೆಂಗಿನಕಾಯಿಯಿಂದ ತೂಕ ಹೆಚ್ಚಾಗುತ್ತದೆ ಎಂದುಕೊಂಡು ಅದನ್ನು ದೂರವಿಟ್ಟಿದ್ದೀರಾ? ಹಾಗಾದರೆ ಒಮ್ಮೆ ನೀವು ಯೋಚಿಸಬೇಕು. 2006 ಜೂನ್‌ನಲ್ಲಿ ಸಿಲೋನ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ತೆಂಗಿನಕಾಯಿಯಲ್ಲಿರುವ ಕೊಬ್ಬಿನ ಅಂಶ ದೇಹ ಸೇರಿ ಅಲ್ಲಿ ಕೊಬ್ಬಾಗಿಯೇ ಶೇಖರಣೆಯಾಗುವುದಿಲ್ಲವಂತೆ. ಬದಲಾಗಿ, ಇದು ಹಸಿವನ್ನು ನಿಯಂತ್ರಿಸಿ ಆಗಾಗ ಏನಾದರೂ ತಿನ್ನಬೇಕು ಎಂಬ ಮನೋಕಾಮನೆಯನ್ನು ನಿಯಂತ್ರಿಸುತ್ತದಂತೆ. ತೆಂಗಿನಕಾಯಿಯಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಇರುವುದು ಹೌದಾದರೂ ಇದು ಎಚ್‌ಡಿಎಲ್‌ ಕೊಲೆಸ್ಟೆರಾಲ್‌ ಅಂದರೆ ಒಳ್ಳೆಯ ಕೊಬ್ಬಿಗೆ ಪ್ರೋತ್ಸಾಹ ನೀಡುತ್ತದೆ. ಆದರೆ, ಅತಿಯಾಗಿ ತೆಂಗಿನಕಾಯಿ ಸೇವನೆಯೂ ಒಳ್ಳೆಯದಲ್ಲ, ನಿಜ. ತೆಂಗಿನಕಾಯಿ ತತ್‌ಕ್ಷಣದ ಶಕ್ತಿವರ್ಧಕವೂ ಹೌದು. ಇದು ದೇಹದಲ್ಲಿ ಕೂಡಲೇ ಖನಿಜಗಳು ಹಾಗೂ ಪೋಷಕಾಂಶಗಳನ್ನು ನೀಡಿ ಶಕ್ತಿ ನೀಡುತ್ತದೆ. ಆಯುರ್ವೇದದ ಪ್ರಕಾರ ತೆಂಗಿನಕಾಯಿ ಒತ್ತಡ ನಿವಾರಕ. ಜೀರ್ಣಕ್ರಿಯೆಗೆ ಸಹಾಯಕ. ಅಷ್ಟೇ ಅಲ್ಲ, ದೇಹದ ಒಟ್ಟೂ ಆರೋಗ್ಯಕ್ಕೆ ಪೂರಕವಾದ ಆಹಾರ. ಹಾಗಾಗಿ ತೆಂಗಿನಕಾಯಿ ಬಳಸದೆ ವ್ಯರ್ಥಮಾಡಿ ಎಸೆಯದಿರಿ. ಆರೋಗ್ಯಕರವಾಗಿ ಬಳಸಿ.

ಇದನ್ನೂ ಓದಿ: Ganesh Chaturthi: ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ಶುರು; ಏನು ಈ ಹಬ್ಬದ ಹಿನ್ನೆಲೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

ನಿತ್ಯವೂ ಮನೆಗಳಲ್ಲಿ ಅಡುಗೆಗೆ ಒಳ್ಳೆಯ ಎಣ್ಣೆಯನ್ನು ನಾವು ಬಳಕೆ ಮಾಡುತ್ತೇವೆ ಎಂದುಕೊಂಡರೂ, ಹೊರಗಿನಿಂದ ತರುವ ಕುರುಕಲು ತಿಂಡಿಗಳು, ಹೊರಗೆ ತಿನ್ನುವ ಆಹಾರ ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವುದು ಸುಲಭವಾಗಿ ಸಿಗುವ ಎಣ್ಣೆಗಳೇ ಆಗಿವೆ. ಹೀಗಾಗಿ, ಒಂದಲ್ಲ ಒಂದು ಬಗೆಯಲ್ಲಿ ಅನಾರೋಗ್ಯಕರ ಎಣ್ಣೆ ನಾವು ಬೇಡವೆಂದರೂ ನಮ್ಮ ಹೊಟ್ಟೆ ಸೇರುತ್ತವೆ. ಈ ಕುರಿತ (Cooking oils) ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Cooking Oils
Koo

ಎಣ್ಣೆಯ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿರುವ ಸತ್ಯವೇ ಆದರೂ, ಸಾಕಷ್ಟು ಆಹಾರಗಳಲ್ಲಿ ಇಂದು ವ್ಯಾಪಕವಾಗಿ ಎಣ್ಣೆಯ ಬಳಕೆಯಾಗುತ್ತದೆ. ಅದರಲ್ಲೂ ಕೆಲವು ಅಗ್ಗದ ಎಣ್ಣೆಗಳು ಇಂದು ಸಂಸ್ಕರಿಸಿದ ಆಹಾರಗಳ ಮೂಲಕ ನಮ್ಮ ಹೊಟ್ಟೆ ಸೇರುವುದು ನಮಗೆ ಗೊತ್ತೇ ಆಗುವುದಿಲ್ಲ. ನಿತ್ಯವೂ ಮನೆಗಳಲ್ಲಿ ಅಡುಗೆಗೆ ಒಳ್ಳೆಯ ಎಣ್ಣೆಯನ್ನು ನಾವು ಬಳಕೆ ಮಾಡುತ್ತೇವೆ ಎಂದು ನಾವು ಅಂದುಕೊಂಡರೂ, ಹೊರಗಿನಿಂದ ತರುವ ಕುರುಕಲು ತಿಂಡಿಗಳು, ಹೊರಗೆ ತಿನ್ನುವ ಆಹಾರಗಳು ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವುದು ಸುಲಭವಾಗಿ ಸಿಗು ಎಣ್ಣೆಗಳೇ ಆಗಿವೆ. ಹೀಗಾಗಿ, ಒಂದಲ್ಲ ಒಂದು ಬಗೆಯಲ್ಲಿ ಅನಾರೋಗ್ಯಕರ ಎಣ್ಣೆ ನಾವು ಬೇಡವೆಂದರೂ ನಮ್ಮ ಹೊಟ್ಟೆ ಸೇರುತ್ತವೆ. ಬನ್ನಿ, ಯಾವೆಲ್ಲ ಎಣ್ಣೆಗಳನ್ನು ನಾವು ನಮ್ಮ ಆಹಾರದಲ್ಲಿ ನಿತ್ಯವೂ ಬಳಸಬಾರದು (Cooking oils) ಎಂಬುದನ್ನು ನೋಡೋಣ.

Palm oil

ಪಾಮ್‌ ಎಣ್ಣೆ

ಇಂದು ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಸಂಸ್ಕರಿಸಿದ ಆಹಾರಗಳಲ್ಲಿ, ಪ್ಯಾಕೇಟ್‌ಗಳಲ್ಲಿ ಬಳಸುವ ಎಣ್ಣೆ ಬಹುಪಾಲು ಪಾಮ್‌ ಎಣ್ಣೆ ಎಂಬುದು ನಿಜವಾದರೂ, ಇದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುವ ಎಣ್ಣೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಕಡಿಮೆ ದರ ಹಾಗೂ ಸುಲಭವಾಗಿ ದೊರೆಯಬಲ್ಲ ಅಗ್ಗದ ಎಣ್ಣೆ ಇದಾಗಿರಿವುದರಿಂದ ಇದನ್ನು ಇಂದು ಆಹಾರ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ಇದರಲ್ಲಿ ಅತ್ಯಂತ ಹೆಚ್ಚು ಸ್ಯಾಚುರೇಟೆಡ್‌ ಫ್ಯಾಟ್‌ ಇರುವುದರಿಂದ ಇದು ಎಲ್‌ಡಿಎಲ್‌ ಕೊಲೆಸ್ಟೆರಾಲ್‌ ಮಟ್ಟವನ್ನು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಇದು ಅತ್ಯಂತ ಕೆಟ್ಟದ್ದು.

Soybean oil

ಸೋಯಾಬೀನ್‌ ಎಣ್ಣೆ

ಕಡಿಮೆ ವಾಸನೆಯುಳ್ಳ ಹಾಗೂ ಅತ್ಯಂತ ಕಡಿಮೆ ಬೆಲೆಗೆ ವ್ಯಾಪಕವಾಗಿ ದೊರೆಯುವ ಸೋಯಾಬೀನ್‌ ಎಣ್ಣೆಯಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆ. ಒಮೆಗಾ 3 ಫ್ಯಾಟಿ ಆಸಿಡ್‌ನ ಅದೇ ಗುಣಗಳನ್ನು ಇದೂ ಹೊಂದಿರುವುದರಿಂದ ಹಾಗೂ ಉರಿಯೂತವನ್ನು ಹೆಚ್ಚಿಸುವ ಸಂಭವ ಇದರಲ್ಲಿ ಹೆಚ್ಚಿರುವುದರಿಂದ ಈ ಎಣ್ಣೆಯ ಬಳಕೆ ಅತಿಯಾಗಬಾರದು. ಒಮೆಗಾ 3 ಫ್ಯಾಟಿ ಆಸಿಡ್‌ನ ಮೂಲಗಳ ಜೊತೆಗೆ ಸಮತೋಲನದಲ್ಲಿ ಇದನ್ನು ಸೇಔಇಸುವುದು ಉತ್ತಮ. ಇದರ ಅತಿಯಾದ ಬಳಕೆ ಸಲ್ಲದು.

Cottonseed oil

ಹತ್ತಿಬೀಜದ ಎಣ್ಣೆ

ಹತ್ತಿಯನ್ನು ತೆಗೆದ ಮೇಳೆ ಅದರ ಬೀಜದಿಂದ ಮಾಡುವ ಎಣ್ಣೆಯಾದ ಕಾಟನ್‌ ಸೀಡ್‌ ಆಯಿಲ್‌ ಅಥವಾ ಹತ್ತಿಬೀಜದ ಎಣ್ಣೆ ಬಹಳಷ್ಟು ಸಂಸ್ಕರಿಸಿದ ಆಹಾರಗಳಲ್ಲಿ ವ್ಯಾಪಕವಾಗಿ ಇಂದು ಬಳಕೆಯಾಗುತ್ತಿದೆ. ಇದರಲ್ಲಿಯೂ ಒಮೆಗಾ 6 ಫ್ಯಾಟಿ ಆಸಿಡ್‌ ಹೇರಳವಾಗಿದೆ. ಹಾಗಾಗಿ ಇದನ್ನು ಅತಿಯಾಗಿ ಬಳಸುವುದರಿಂದ ಉರಿಯೂತ ಹಾಗೂ ಇತರ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

ವೆಜಿಟೆಬಲ್‌ ಆಯಿಲ್

ಈ ಸಾಮಾನ್ಯೀಕರಿಸಿದ ಹೆಸರಿಂದ ಬಹುತೇಕರು ಮೋಸಕ್ಕೆ ಒಳಗಾಗುವುದೇ ಹೆಚ್ಚು. ವೆಜಿಟೆಬಲ್‌ ಆಯಿಲ್‌ ಅಂದಾಕ್ಷಣ, ಆರೋಗ್ಯಕ್ಕೆ ಸಮಸ್ಯೆಯೇನಿಲ್ಲ ಎಂದು ಅಂದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದರೂ, ಈ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋಳ, ಸೋಯಾಬೀನ್‌ ಹಾಗೂ ಸೂರ್ಯಕಾಂತಿ ಎಣ್ಣೆ ಬಳಕೆಯಾಗುತ್ತದೆ. ತೀರಾ ಕೆಟ್ಟದ್ದೇನೂ ಅಲ್ಲದಿದ್ದರೂ, ರಿಫೈನ್ಡ್‌ ಎಣ್ಣೆ ಇದಾಗಿರುವುದರಿಂದ ಹಾಗೂ ಸಾಕಷ್ಟು ರಾಸಾಯನಿಕಗಳು ಈ ಸಂದರ್ಭ ಬಳಕೆಯಾಗಿರುವುದರಿಂದ, ಒಮೆಗಾ 6 ಫ್ಯಾಟಿ ಆಸಿಡ್‌ ಹೆಚ್ಚಿರುವುದರಿಂದ ಈ ಎಣ್ಣೆಯೂ ಹೆಚ್ಚು ಬಳಕೆ ಮಾಡುವುದು ಒಳ್ಳೆಯದಲ್ಲ. ನಿತ್ಯದ ಉಪಯೋಗಕ್ಕೆ ಈ ಎಣ್ಣೆ ಅಷ್ಟು ಯೋಗ್ಯವಲ್ಲ.

Hydrogenated oils

ಹೈಡ್ರೋಜಿನೇಟೆಡ್‌ ಆಯಿಲ್‌ಗಳು

ಹೈಡ್ರೋಜಿನೇಷನ್‌ ಎಂಬ ಪ್ರಕ್ರಿಯೆಗೆ ಒಳಪಡಿಸುವ ಎಣ್ಣೆಗಳು ಇದಾಗಿದ್ದು, ಇದರಲ್ಲಿ ದ್ರವರೂಪದ ಎಣ್ಣೆಯನ್ನು ಘನರೂಪಕ್ಕೆ ಪರಿವರ್ತಿಸಲಾಗುತ್ತದೆ. ಇಂತಹ ಎಣ್ಣೆಗಳಲ್ಲಿ ಟ್ರಾನ್ಸ್‌ ಫ್ಯಾಟ್‌ ಅಧಿಕವಾಗಿರುವುದಲ್ಲದೆ, ಎಲ್‌ಡಿಎಲ್‌ ಕೊಲೆಸ್ಟೆರಾಲ್‌ ಮಟ್ಟವನ್ನು ಇದು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

Continue Reading

ಆರೋಗ್ಯ

Blood Pressure: ರಕ್ತದೊತ್ತಡ ನಿಯಂತ್ರಿಸಲು ಈ ಆಹಾರಗಳು ಸೂಕ್ತ

Bood Pressure: ಅತ್ಯಂತ ಅಪಾಯಕಾರಿ ಕಾಯಿಲೆಯಾಗಿ ಪ್ರಸ್ತುತ ರಕ್ತದೊತ್ತಡ ಕಾಣಿಸುತ್ತಿದೆ. ಇದನ್ನು ನಿಯಂತ್ರಿಸಲು ಆಹಾರ ಕ್ರಮದೊಂದಿಗೆ ಜೀವನ ಶೈಲಿಯನ್ನೂ ಬದಲಾಯಿಸಬೇಕಿದೆ. ಯಾವ ಆಹಾರಗಳನ್ನು, ತರಕಾರಿಗಳನ್ನು ಸೇವಿಸಿದರೆ ರಕ್ತದೊತ್ತಡ ಕಡಿಮೆ ಮಾಡಬಹುದು? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Blood Pressure
Koo

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುತ್ತಿರುವ ಕಾಯಿಲೆ (Illness) ಮಧುಮೇಹ (diabetes) ಮತ್ತು ಅಧಿಕ ರಕ್ತದೊತ್ತಡ (Blood Pressure). ಇವೆರಡನ್ನೂ ನಿರ್ಲಕ್ಷಿಸಿದರೆ ಅಪಾಯ ಹೆಚ್ಚು. ಅದರಲ್ಲೂ ಅಧಿಕ ರಕ್ತದೊತ್ತಡವು (HIGH bp) ಸಾಮಾನ್ಯವಾಗಿ ನಾವು ಯೋಚಿಸುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಅನಿಯಂತ್ರಿತ ರಕ್ತದೊತ್ತಡವು ಅಪಧಮನಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.


ಇಂದಿನ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ಅತಿಯಾದ ಒತ್ತಡ ಮತ್ತು ದೈಹಿಕ ನಿಷ್ಕ್ರಿಯತೆಯು ಅಧಿಕ ರಕ್ತದೊತ್ತಡಕ್ಕೆ ಮುಖ್ಯ ಕಾರಣವಾಗುತ್ತದೆ. ಆರೋಗ್ಯಕರ ರಕ್ತದೊತ್ತಡದ ಸಂಖ್ಯೆಯನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರದಿಂದ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಬಹುಮುಖ್ಯ. ಹಲವಾರು ಸರಳ ಬದಲಾವಣೆಗಳು ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೂ ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಏನು ತಿನ್ನಬೇಕು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.

ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುವ ತರಕಾರಿಗಳನ್ನು ನಮ್ಮ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ರಕ್ತದೊತ್ತಡದ ನಿಯಂತ್ರಿಸಿಕೊಳ್ಳಬಹುದು. ಅವುಗಳು ಯಾವುದು ಗೊತ್ತೇ?


ಬೀಟ್ರೂಟ್

ಅಧ್ಯಯನಗಳ ಪ್ರಕಾರ ಬೀಟ್ರೂಟ್ ನಲ್ಲಿರುವ ನೈಟ್ರೇಟ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೀಟ್ರೂಟ್ ರಸವನ್ನು ಕುಡಿಯುವುದು ಅಥವಾ ಸಲಾಡ್, ಸೂಪ್ ಅಥವಾ ಮೇಲೋಗರಗಳಿಗೆ ಸೇರಿಸುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ.


ಹಸಿರು ಸೊಪ್ಪು ತರಕಾರಿಗಳು

ಹಸಿರು ಸೊಪ್ಪು ತರಕಾರಿಗಳು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿವೆ. ಸೊಪ್ಪು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಪಾಲಕ್, ಹಸಿರು ಬಾಳೆ ಮತ್ತು ಸಾಸಿವೆ ಗ್ರೀನ್ಸ್ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.


ಬೆಳ್ಳುಳ್ಳಿ

ಆಂಟಿಫಂಗಲ್ ಮತ್ತು ಆ್ಯಂಟಿಬಯೋಟಿಕ್ ಗುಣಗಳಿರುವ ಬೆಳ್ಳುಳ್ಳಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಕೂಡ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.


ಸಿಹಿ ಆಲೂಗಡ್ಡೆ

ಫೈಬರ್, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಹೇರಳವಾಗಿರುವ ಸಿಹಿ ಆಲೂಗಡ್ಡೆ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಬ್ರೊಕೊಲಿ

ಬ್ರೊಕೊಲಿಯನ್ನು ಆಹಾರದಲ್ಲಿ ಸೇರಿಸುವುದು ಅಧಿಕ ಬಿಪಿಯನ್ನು ನಿಯಂತ್ರಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಕೋಸುಗಡ್ಡೆಯು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಪೊಟ್ಯಾಸಿಯಮ್, ವಿಟಮಿನ್ ಕೆ, ಪ್ರೋಟೀನ್ ಮತ್ತು ಫೈಬರ್‌ನಿಂದ ಕೂಡಿದೆ.


ಆಲೂಗಡ್ಡೆ

ಆಲೂಗಡ್ಡೆ ಪೊಟ್ಯಾಸಿಯಮ್‌ನ ರಕ್ತದೊತ್ತಡ ನಿಯಂತ್ರಿಸಲು ಉತ್ತಮ ಮಾರ್ಗವಾಗಿದೆ. ಆಲೂಗಡ್ಡೆಯನ್ನು ಆಹಾರದಲ್ಲಿ ಹಲವಾರು ವಿಧದಲ್ಲಿ ಸೇರಿಸಿ ರಕ್ತದೊತ್ತಡವನ್ನು ದೂರವಿಡಬಹುದು.


ಇದನ್ನೂ ಓದಿ: Mobile Side Effect: ಅತಿಯಾದ ಮೊಬೈಲ್ ಬಳಕೆ; ಮಕ್ಕಳು ಕಿವುಡರಾಗುತ್ತಿದ್ದಾರೆ!

ಕ್ಯಾರೆಟ್

ದೃಷ್ಟಿಯ ಸಮಸ್ಯೆಯನ್ನು ನಿವಾರಿಸುವ ಕ್ಯಾರೆಟ್ ಹಲವಾರು ಪ್ರಯೋಜನಕಾರಿ ಸಸ್ಯ-ಆಧಾರಿತ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ನಿಯಂತ್ರಿತ ರಕ್ತದೊತ್ತಡ ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಅಧಿಕ ರಕ್ತದೊತ್ತಡ ಹೊಂದಿದ್ದರೆ ಇದಕ್ಕೆ ಕೇವಲ ಆಹಾರ ಮಾತ್ರ ಸಹಾಯ ಮಾಡುವುದಿಲ್ಲ. ದೈಹಿಕವಾಗಿ ಸಕ್ರಿಯವಾಗಿರುವುದು ಕೂಡ ಅಷ್ಟೇ ಅಗತ್ಯವಾಗಿದೆ. ಉಪ್ಪು ಸೇವನೆ, ಕೆಫೀನ್ ಅನ್ನು ಕಡಿಮೆ ಮಾಡುವುದು ಮತ್ತು ಒತ್ತಡದ ಮಟ್ಟವನ್ನು ನಿರ್ವಹಿಸುವುದು ಕೂಡ ಅತ್ಯಗತ್ಯ. ದೀರ್ಘಕಾಲದ ಅಧಿಕ ರಕ್ತದೊತ್ತಡ ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ.

Continue Reading

ಆಹಾರ/ಅಡುಗೆ

Tips To Prevent Curd: ಮೊಸರು ಹುಳಿಯಾಗದೇ ಇರಲು ಈ ಟಿಪ್ಸ್ ಪಾಲಿಸಿ

Tips To Prevent Curd: ಮೊಸರು ಬೇಗನೆ ಹುಳಿಯಾಗುತ್ತದೆ. ಆದರೆ ಸರಿಯಾಗಿ ಸಂಗ್ರಹಿಸಿದರೆ ಅನೇಕ ದಿನಗಳವರೆಗೆ ಮೊಸರು ಹುಳಿಯಾಗುವುದನ್ನು ತಪ್ಪಿಸಬಹುದು. ಅದಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ.

VISTARANEWS.COM


on

By

Tips To Prevent Curd
Koo

ಬೇಸಿಗೆಯ (summer) ಬಿಸಿಲಿನಿಂದ ಪಾರಾಗಲು ದೇಹವನ್ನು ತಂಪು ಮಾಡುವ ಯಾವುದಾದರೂ ಪಾನೀಯ ಸಿಕ್ಕರೆ ಸಾಕು ಎಂದು ಬಯಸುತ್ತೇವೆ. ಆದರೆ ಏನೇನೋ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ಮನೆಯಲ್ಲಿ ಸುಲಭವಾಗಿ ಮೊಸರು (curd) ಬೆರೆಸಿ ಮಜ್ಜಿಗೆ (buttermilk) ಮಾಡಿದರೆ ದೇಹಕ್ಕೂ ತಂಪು ಮತ್ತು ಆರೋಗ್ಯಕರವೂ ಆಗಿರುತ್ತದೆ. ಆದರೆ ಬೇಸಗೆಯಲ್ಲಿ ಒಂದೇ ಚಿಂತೆ ಆಹಾರ ಪದಾರ್ಥಗಳು ಬೇಗ ಕೆಡುತ್ತವೆ ಎಂಬುದು. ಅದರಲ್ಲೂ ಮೊಸರು ಬಹುಬೇಗನೆ ಹುಳಿಯಾಗುತ್ತದೆ. ಇದನ್ನು ತಡೆಯಲು ಕೆಲವು ಟಿಪ್ಸ್ ಗಳನ್ನು (Tips To Prevent Curd) ಪಾಲಿಸಿದರೆ ಸಾಕು.


ಬೇಸಿಗೆಯಲ್ಲಿ ವಾತಾವರಣದ ಉಷ್ಣತೆಯ ಹೆಚ್ಚಳದಿಂದಾಗಿ ತೇವಾಂಶವುಳ್ಳ ಸ್ಥಳಗಳಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತದೆ. ಇದರಿಂದ ಆಹಾರ ಪದಾರ್ಥಗಳ ಶೇಖರಣೆಯಲ್ಲಿ ಸ್ವಲ್ಪ ಅಜಾಗರೂಕತೆ ಉಂಟಾದರೂ ಆಹಾರವು ಬಹು ಬೇಗನೆ ಹಾಳಾಗುತ್ತದೆ. ಇದರಲ್ಲಿ ವಿಶೇಷವಾಗಿ ಡೈರಿ ಉತ್ಪನ್ನಗಳು.

ಮೊಸರು ಬೇಗನೆ ಹುಳಿಯಾಗುತ್ತದೆ. ಆದರೆ ಅದನ್ನು ಸರಿಯಾಗಿ ಸಂಗ್ರಹಿಸಿದರೆ ಅನೇಕ ದಿನಗಳವರೆಗೆ ಮೊಸರು ಹುಳಿಯಾಗುವುದನ್ನು ತಪ್ಪಿಸಬಹುದು. ಮಾರುಕಟ್ಟೆಯಲ್ಲಿ ಮೊಸರು ಸುಲಭವಾಗಿ ಸಿಗುತ್ತದೆಯಾದರೂ ಮನೆಯಲ್ಲಿ ತಯಾರಿಸಿದ ಮೊಸರಿಗೆ ಹೆಚ್ಚಿನವರು ಆದ್ಯತೆ ನೀಡುತ್ತಾರೆ. ಹೀಗಾಗಿ ಮನೆಯಲ್ಲಿ ತಯಾರಿಸಿದ ಮೊಸರನ್ನು ಹುಳಿಯಾಗದಂತೆ ರಕ್ಷಿಸಲು ಮತ್ತು ಸುದೀರ್ಘ ಕಾಲ ಅದು ಬಾಳಿಕೆ ಬರಲು ಅನುಸರಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.


ಸಣ್ಣ ಭಾಗ ಮೊಸರು ಸೇರಿಸಿ

ಮೊಸರು ಹುಳಿಯಾಗದಂತೆ ತಡೆಯಲು ಒಂದು ಸುಲಭ ಮತ್ತು ಸರಳವಾದ ಉಪಾಯವೆಂದರೆ ಹಾಲಿಗೆ ಸೇರಿಸುವ ಮೊದಲು ಅದರ ಸ್ವಲ್ಪ ಭಾಗವನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಬಿಸಿ ಹಾಲಿಗೆ ಮೊಸರು ಹಾಕಬಾರದು. ಹಾಲಿಗೆ ಮೊಸರು ಹಾಕಿದ ಬಳಿಕ ಚೆನ್ನಾಗಿ ಅದನ್ನು ಮಿಕ್ಸ್ ಮಾಡಿ. ಇದರಿಂದ ಹಾಲು ಶೀಘ್ರದಲ್ಲಿ ಮೊಸರಾಗುತ್ತದೆ ಮತ್ತು ಸುದೀರ್ಘ ಅವಧಿಯವರೆಗೆ ಬಾಳಿಕೆ ಬರುತ್ತದೆ.


ಮೊಸರು ಹುಳಿ ಕಡಿಮೆ ಮಾಡಿ

ಮನೆಯಲ್ಲಿ ತಯಾರಿಸಿದ ಮೊಸರಿನ ಹುಳಿಯನ್ನು ಕಡಿಮೆ ಮಾಡಲು ಇನ್ನೊಂದು ವಿಧಾನವೆಂದರೆ ಅದನ್ನು ಸರಿಯಾದ ವಿಧಾನದಲ್ಲಿ ಮಾಡುವುದು. ಮೊಸರಿನ ಮೇಲ್ಭಾಗ ಮತ್ತು ಅಂಚುಗಳಲ್ಲಿ ರೂಪುಗೊಳ್ಳುವ ದ್ರವವನ್ನು ತೆಗೆದುಹಾಕುವುದರಿಂದ ಹುಳಿ ಕಡಿಮೆಯಾಗುತ್ತದೆ. ಮೊಸರನ್ನು ರಾತ್ರಿಯಿಡೀ ಮಸ್ಲಿನ್ ಬಟ್ಟೆಯಲ್ಲಿ ಇಟ್ಟು ಜರಡಿಯಲ್ಲಿ ಸೋಸಿದರೆ ಆಮ್ಲೀಯತೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ಮೊಸರಿನಲ್ಲಿ ಹಾಲಿನ ಘನಾಂಶಗಳು ಹೆಚ್ಚುತ್ತವೆ ಮತ್ತು ದಪ್ಪವಾಗುತ್ತವೆ. ಈ ಪ್ರಕ್ರಿಯೆಯನ್ನು ಲ್ಯಾಬ್ನೆ, ಗ್ರೀಕ್ ಮೊಸರು ಅದ್ದು ಮಾಡಲು ಬಳಸಲಾಗುತ್ತದೆ. ಇದನ್ನು ಬ್ರೆಡ್ನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.


ಸರಿಯಾದ ಸಮಯ

ಮೊಸರನ್ನು ಬೆಳಗ್ಗೆ ಫ್ರೀಜ್ ಮಾಡುವುದು ಸರಿಯಲ್ಲ. ಇದರಿಂದ ಅದು ಹೆಚ್ಚು ದಪ್ಪವಾಗುವುದಿಲ್ಲ ಮತ್ತು ನೀರು ಬಿಡುವುದಿಲ್ಲ. ರಾತ್ರಿಯಲ್ಲೇ ಮೊಸರನ್ನು ಫ್ರೀಜ್ ಮಾಡಿದರೆ ಉತ್ತಮ. ಬೆಳಗ್ಗೆ ಅದು ಹೆಪ್ಪುಗಟ್ಟಿದಾಗ ಅದನ್ನು ಕೆಲವು ಗಂಟೆಗಳ ಕಾಲ ರೆಫ್ರಿಜರೇಟರ್ ನಲ್ಲಿ ಇರಿಸಿ. ಇದರಿಂದ ಮೊಸರು ಹೆಚ್ಚು ಹುಳಿಯಾಗುವುದಿಲ್ಲ. ಮತ್ತು ತಿನ್ನಲು ರುಚಿಯಾಗಿರುತ್ತದೆ.

ಇದನ್ನೂ ಓದಿ: Top 10 Puddings: ಭಾರತದ ಫಿರ್ನಿ, ಖೀರು, ಸಿಹಿ ಪೊಂಗಲ್‌ಗೆ ವಿಶ್ವದ ಟಾಪ್‌ 10 ತಿಂಡಿ ಪಟ್ಟಿಯಲ್ಲಿ ಸ್ಥಾನ!

ತಂಪಾದ ಸ್ಥಳದಲ್ಲಿ ಸಂಗ್ರಹಿಸಿ

ಮೊಸರನ್ನು ಬಿಸಿ ಸ್ಥಳದಲ್ಲಿಟ್ಟರೆ ಅದು ಬೇಗನೆ ಹುಳಿಯಾಗಲು ಪ್ರಾರಂಭಿಸುತ್ತದೆ. ಮೊಸರನ್ನು ಯಾವಾಗಲೂ ಕೋಣೆಯ ಉಷ್ಣಾಂಶಕ್ಕಿಂತ ಸ್ವಲ್ಪ ತಂಪಾಗಿರುವ ಸ್ಥಳದಲ್ಲಿ ಅಥವಾ ರೆಫ್ರಿಜರೇಟರ್‌ನಲ್ಲಿ ಇರಿಸಿ. ಅದರಲ್ಲೂ ಮೊಸರಿನ ಪಾತ್ರೆಯನ್ನು ಮಣ್ಣಿನ ಮಡಕೆಯಲ್ಲಿ ಇರಿಸಿ ಅಥವಾ ಎಸಿ ಅಥವಾ ಕೂಲರ್ ಹೊಂದಿರುವ ಕೋಣೆಯಲ್ಲಿ ಇಟ್ಟರೆ ಅದು ಬಹುಬೇಗನೆ ಹಾಳಾಗುವುದಿಲ್ಲ.

Continue Reading

ಕರ್ನಾಟಕ

MTR: ಬೆಂಗಳೂರಿನಲ್ಲಿ ಎಂಟಿಆರ್ ಕರುನಾಡು ಸ್ವಾದ; 2 ದಿನಗಳ ಆಹಾರ ಉತ್ಸವದಲ್ಲಿ ಏನೇನಿವೆ?

MTR: ಎಂಟಿಆರ್ ಕರುನಾಡು ಸ್ವಾದ ಕರ್ನಾಟಕ ವಿಶಿಷ್ಟ ಆಹಾರ ಉತ್ಸವಕ್ಕೆ ಬೆಂಗಳೂರಿನ ಜಯಮಹಲ್ ಪ್ಯಾಲೇಸ್‌ನ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ಚಾಲನೆ ದೊರೆಯಿತು. 100 ವರ್ಷಗಳ ಸಂಭ್ರಮಾಚರಣೆಯೊಂದಿಗೆ ಎಂಟಿಆರ್ ತನ್ನ ‌ಜನಪ್ರಿಯ ಆಹಾರ ಉತ್ಸವದ 3ನೇ ಆವೃತ್ತಿಯಾದ ಎಂಟಿಆರ್‌ ಕರುನಾಡು ಸ್ವಾದ ಎರಡು ದಿನಗಳ ಕರ್ನಾಟಕ ವಿಶಿಷ್ಟ ಆಹಾರ ಉತ್ಸವವನ್ನು ಭಾರತದ ಮಾಜಿ ಸಾಲಿಸಿಟರ್ ಜನರಲ್, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಉದ್ಘಾಟಿಸಿದರು.

VISTARANEWS.COM


on

MTR Karunadu Svada food festival inauguration in Bengaluru
Koo

ಬೆಂಗಳೂರು: ಎಂಟಿಆರ್ ಕರುನಾಡು ಸ್ವಾದ ಕರ್ನಾಟಕ ವಿಶಿಷ್ಟ ಆಹಾರ ಉತ್ಸವಕ್ಕೆ ಬೆಂಗಳೂರಿನ ಜಯಮಹಲ್ ಪ್ಯಾಲೇಸ್‌ನ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ಚಾಲನೆ ದೊರೆಯಿತು. 100 ವರ್ಷಗಳ ಸಂಭ್ರಮಾಚರಣೆಯೊಂದಿಗೆ ಎಂಟಿಆರ್ (MTR) ತನ್ನ ‌ಜನಪ್ರಿಯ ಆಹಾರ ಉತ್ಸವದ 3ನೇ ಆವೃತ್ತಿಯಾದ ಎಂಟಿಆರ್‌ ಕರುನಾಡು ಸ್ವಾದ ಎರಡು ದಿನಗಳ ಕರ್ನಾಟಕ ವಿಶಿಷ್ಟ ಆಹಾರ ಉತ್ಸವವನ್ನು ಭಾರತದ ಮಾಜಿ ಸಾಲಿಸಿಟರ್ ಜನರಲ್, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಉದ್ಘಾಟಿಸಿದರು.

ಆಹಾರ ಉತ್ಸವದ ವಿಶೇಷತೆ

ಎಂಟಿಆರ್‌ನ ಪಾಕಶಾಲೆಯ ಸೆಂಟರ್‌ ಆಫ್‌ ಎಕ್ಸಿಲೆನ್ಸ್‌ (Centre of Excellence) ನೇತೃತ್ವದಲ್ಲಿ, 50 ಕ್ಕೂ ಹೆಚ್ಚು ಗೃಹ ಬಾಣಸಿಗರು ಉತ್ತರ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ, ಕಲ್ಯಾಣ ಕರ್ನಾಟಕ, ಉಡುಪಿ ಮತ್ತು ಹಳೇ ಮೈಸೂರು ಸೇರಿದಂತೆ ಕರ್ನಾಟಕದ ಆರು ಪ್ರದೇಶಗಳ 100ಕ್ಕೂ ಹೆಚ್ಚು ಖಾದ್ಯಗಳನ್ನು ಪ್ರದರ್ಶಿಸುತ್ತಿದ್ದಾರೆ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಇಂದು ಖರೀದಿಗೆ ಮುನ್ನ ದರದ ಜೊತೆಗೆ ಇದು ತಿಳಿದಿರಲಿ

ಉತ್ಸವದಲ್ಲಿ ವಿಶೇಷ ಪಾಕವಿಧಾನ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ಪುಸ್ತಕವು 100 ಕ್ಕೂ ಹೆಚ್ಚು ಪಾಕವಿಧಾನಗಳ ಸಂಗ್ರಹಣೆಯನ್ನು ಹೊಂದಿದೆ. ಇದರಿಂದ ವಿಶೇಷ ಭಕ್ಷ್ಯಗಳನ್ನು ಮನೆಯಲ್ಲಿಯೇ ತಯಾರಿಸಬಹುದಾಗಿದೆ.

ಈ ವೇಳೆ ಎಂಟಿಆರ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುನಯ್ ಭಾಸಿನ್ ಮಾತನಾಡಿ, “ಎಂಟಿಆರ್ ಕರುನಾಡು ಸ್ವಾದವು” ಕರ್ನಾಟಕದ ಆಹಾರ ಮತ್ತು ಸಂಸ್ಕೃತಿಯ ಮೇಲಿರುವ ಪ್ರೀತಿಯಿಂದ ಸೃಷ್ಟಿಯಾಗಿದೆ. ಇದು ಕರ್ನಾಟಕದ ವೈವಿಧ್ಯಮಯ ರುಚಿಗಳ ಆಚರಣೆಯಾಗಿದೆ ಮತ್ತು ರಾಜ್ಯದ ಪಾಕಶಾಲೆಯ ಪರಂಪರೆಯನ್ನು ಎತ್ತಿಹಿಡಿಯುವ ಬದ್ಧತೆಯಾಗಿದೆ. ಈ ಅಮೂಲ್ಯವಾದ ಭಕ್ಷ್ಯಗಳ ಮೂಲಕ ಕರುನಾಡು ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Job Alert: 313 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಡಿಪ್ಲೋಮಾ ಓದಿದವರು ಇಂದೇ ಅಪ್ಲೈ ಮಾಡಿ

ಆಹಾರ ಉತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ಮತ್ತು ಡೊಳ್ಳು ಕುಣಿತದಂತಹ ಕರ್ನಾಟಕದ ನೃತ್ಯ ಪ್ರಕಾರಗಳನ್ನು ಆಯೋಜಿಸಿರುವುದು ವಿಶೇಷವಾಗಿದೆ.

Continue Reading
Advertisement
viral news
ಕ್ರಿಕೆಟ್8 mins ago

Viral News: ಖಾಸಗಿ ಭಾಗಕ್ಕೆ ಚೆಂಡು ಬಡಿದು ಬಾಲಕ ಸಾವು

Sunita Williams
ವಿದೇಶ24 mins ago

Sunita Williams: 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸುನೀತಾ ವಿಲಿಯಮ್ಸ್‌ ಸಜ್ಜು

Namma Metro
ಬೆಂಗಳೂರು38 mins ago

Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

Prajwal Revanna Case Who leaked the pen drive Devaraje Gowda gives evidence to SIT
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸಂಗಿಲ್ಲ; ಕೋರ್ಟ್‌ ತಡೆಯಾಜ್ಞೆ

ICSE Results 202
ಶಿಕ್ಷಣ1 hour ago

CISCE Results 2024: ಸಿಐಎಸ್‌ಸಿಇಯ 10 & 12ನೇ ತರಗತಿಯ ಫಲಿತಾಂಶ ಪ್ರಕಟ; ಹೀಗೆ ಪರಿಶೀಲಿಸಿ

MS Dhoni
ಕ್ರಿಕೆಟ್1 hour ago

MS Dhoni: ಧೋನಿಯ ಕ್ಲೀನ್​ ಬೌಲ್ಡ್​ ಕಂಡು ಬೇಸರಗೊಂಡ ಅಭಿಮಾನಿಗಳು; ವಿಡಿಯೊ ವೈರಲ್​

Viral News
ವೈರಲ್ ನ್ಯೂಸ್2 hours ago

Viral News: ಅವಳಿ-ತ್ರಿವಳಿ ಅಲ್ಲ.. ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ

Kanyakumari Tour
ಪ್ರವಾಸ2 hours ago

Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

Cauvery Theatre bengaluru another single screen close
ಸಿನಿಮಾ2 hours ago

Cauvery Theatre: ಬೆಂಗಳೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ʻಕಾವೇರಿʼ ಥಿಯೇಟರ್! ಮುಂದೇನು?

Bomb Threat
ದೇಶ2 hours ago

Bomb Threat: ದೆಹಲಿ ಬಳಿಕ ಇದೀಗ ಅಹಮದಾಬಾದ್​ನ ಶಾಲೆಗಳಿಗೂ ಬಾಂಬ್​ ಬೆದರಿಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ9 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ19 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ20 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ20 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌