Benefits of Spinach Juice: ಪಾಲಕ್‌ ಜ್ಯೂಸ್‌ ಕುಡಿಯುವುದರ ಲಾಭಗಳಿವು - Vistara News

ಆರೋಗ್ಯ

Benefits of Spinach Juice: ಪಾಲಕ್‌ ಜ್ಯೂಸ್‌ ಕುಡಿಯುವುದರ ಲಾಭಗಳಿವು

ಬೆಳಗಿನ ಹೊತ್ತು ಹಸಿರು ಜ್ಯೂಸ್‌ಗಳನ್ನು ಕುಡಿಯುವುದು ಎಷ್ಟು ಜನಪ್ರಿಯವೋ ಆರೋಗ್ಯಕ್ಕೂ ಅಷ್ಟೇ ಹಿತ. ಸ್ಥೂಲವಾಗಿ ಹೇಳುವುದಾದರೆ, ಇದರ ಸಮೃದ್ಧ ಕಬ್ಬಿಣದಂಶವು ರಕ್ತಹೀನತೆಯ ನಿವಾರಣೆಗೆ ನೆರವಾಗುತ್ತದೆ. ಹಲವಾರು ಜೀವಸತ್ವಗಳು ಕೂದಲನ್ನು ಸೊಂಪಾಗಿ, ಸಮೃದ್ಧವಾಗಿಸುತ್ತವೆ. ಪಾಲಕ್‌ ಸೊಪ್ಪಿನ ರಸವನ್ನು ಕುಡಿಯುವುದರಲ್ಲಿ ಏನೇನು ಲಾಭಗಳು ಅಡಗಿವೆ? ಈ ಕುರಿತ ಮಾಹಿತಿಗಾಗಿ (Benefits of Spinach Juice) ಈ ಲೇಖನ ಓದಿ.

VISTARANEWS.COM


on

Spinach Juice
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಿನ ಹೊತ್ತಿಗೆ ಹಲವು ರೀತಿಯ ಹಸಿರು ಜ್ಯೂಸ್‌ಗಳನ್ನು ಕುಡಿಯುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ತಾಜಾ ಸೊಪ್ಪುಗಳು ದೊರೆತರೆ, ಅವುಗಳ ರಸ ಕುಡಿಯುವುದು ಆರೋಗ್ಯಕ್ಕೆ ಒಳಿತು ಮಾಡುವುದು ಸುಳ್ಳೇನಲ್ಲ. ಅಂಥದ್ದೇ ಹಸಿರು ಜ್ಯೂಸ್‌ಗಳ ಪೈಕಿ ಒಂದು ಪಾಲಕ್‌ ಸೊಪ್ಪಿನದ್ದು. ರುಚಿಗೆ ಬೇಕಿದ್ದರೆ ಶುಂಠಿ, ನಿಂಬೆ ರಸಗಳನ್ನೆಲ್ಲ ಬೆರೆಸಿಕೊಂಡರೆ ಹಸಿರು ಜ್ಯೂಸ್‌ಗಳು ಬಾಯಿಗೂ ರುಚಿ, ದೇಹಕ್ಕೂ ಹಿತ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಶಿಯಂನಂಥ ಅಗತ್ಯ ಖನಿಜಗಳು, ಎ, ಸಿ, ಇ ನಂಥ ಮಹತ್ವದ ಜೀವಸತ್ವಗಳನ್ನು ಒಳಗೊಂಡ ಈ ಸೊಪ್ಪಿನಲ್ಲಿ ನಾರು ಸಹ ಹೇರಳವಾಗಿದೆ. ಇನ್ನೂ ಏನೇನು ಲಾಭಗಳಿವೆ ಪಾಲಕ್‌ ಸೊಪ್ಪಿನ ರಸ ಕುಡಿಯುವುದರಲ್ಲಿ?

Benefits of Spinach Juice

ಸ್ಥೂಲವಾಗಿ ಹೇಳುವುದಾದರೆ, ಇದರ ಸಮೃದ್ಧ ಕಬ್ಬಿಣದಂಶವು ರಕ್ತಹೀನತೆಯ ನಿವಾರಣೆಗೆ ನೆರವಾಗುತ್ತದೆ. ಹಲವಾರು ಜೀವಸತ್ವಗಳು ಕೂದಲನ್ನು ಸೊಂಪಾಗಿ, ಸಮೃದ್ಧವಾಗಿಸುತ್ತವೆ. ಜೊತೆಗೆ, ತ್ವಚೆ ಮತ್ತು ಉಗುರಿನ ಆರೋಗ್ಯವನ್ನು ಹೆಚ್ಚಿಸುತ್ತವೆ. ರಕ್ತದಲ್ಲಿನ ಸಕ್ಕರೆಯಂಶವನ್ನು ನಿಯಂತ್ರಿಸಲು, ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಮತ್ತು ಪ್ರತಿರೋಧಕ ಶಕ್ತಿಯನ್ನು ಪ್ರಚೋದಿಸಲು ಸಾಧ್ಯವಾಗುತ್ತದೆ. ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ಹೆಚ್ಚಿಸಿ, ತೂಕ ಇಳಿಕೆಗೂ ನೆರವಾಗಬಹುದಾದ ಪೇಯವಿದು.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

International Yoga Day 2024: ಧ್ಯಾನ ಎಂದರೇನು? ಇದರಿಂದ ಏನೇನು ಪ್ರಯೋಜನ?

ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ 2024 ಒತ್ತಡ ನಿವಾರಣೆಗೆ ವ್ಯಾಪಕವಾಗಿ ವಿಶ್ವದೆಲ್ಲೆಡೆ ಚಿಕಿತ್ಸೆಯ ರೂಪದಲ್ಲಿ ಬಳಕೆಯಾಗುತ್ತಿರುವ ಕ್ರಮವೆಂದರೆ ಧ್ಯಾನ. ಕಣ್ಣು ಮುಚ್ಚಿ ಒಳ ಹೋಗುವ ಈ ಕ್ರಿಯೆಗೆ ಹೊರಗಿನಿಂದ ವಿಮುಖರಾಗುವುದು ಅಗತ್ಯವೇ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ- ಇತ್ಯಾದಿ ಪ್ರಶ್ನೆಗಳಿಗೆ ಸಮಾಧಾನವನ್ನು ಶೋಧಿಸುವ ಪ್ರಯತ್ನವಿದು. ಧ್ಯಾನವೆಂದರೆ ಆಳವಾದ ವಿಶ್ರಾಂತಿ ಮತ್ತು ಜಾಗೃತ ಸ್ಥಿತಿ- ಈ ಎರಡನ್ನೂ ಒಂದೇ ಸಮಯಕ್ಕೆ ಏಕತ್ರಗೊಳಿಸಿದ ಸ್ಥಿತಿ! ಈ ಕುರಿತ (International Yoga Day) ವಿವರ ಇಲ್ಲಿದೆ.

VISTARANEWS.COM


on

International Yoga Day 2024
Koo

ಧ್ಯಾನ ಎನ್ನುತ್ತಿದ್ದಂತೆ ನಾನಾ (International Yoga Day) ಬಗೆಯ ಚಿತ್ರಗಳು ಮನಸ್ಸಿಗೆ ಬರುತ್ತವೆ. ಯಾರೋ ತಪಸ್ಸು ಮಾಡುವುದು, ಗಡ್ಡ ಬಿಟ್ಟುಕೊಂಡು ವೃಕ್ಷಾಸನದಲ್ಲಿ ನಿಂತಿರುವುದು, ಚಿನ್ಮುದ್ರೆ ಹಿಡಿದು ಕಣ್ಣು ಮುಚ್ಚಿ ಕೂತವರು… ಅವರವರ ಭಾವಕ್ಕೆ ತಕ್ಕಂತೆ ಭಿತ್ತಿಗಳು ಮೂಡುತ್ತವೆ. ಧ್ಯಾನ ಅಥವಾ ಮೆಡಿಟೇಶನ್‌ ಮಾಡುವುದೆಂದರೆ ಕಣ್ಣು ಮುಚ್ಚಿಕೊಂಡು, ಒಳ ಮನದಲ್ಲಿ ಲೋಕದ ವ್ಯವಹಾರವನ್ನೆಲ್ಲ ಚಿಂತಿಸುವುದು ಹೆಚ್ಚಿನವರ ಕ್ರಮ! ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ ಒತ್ತಡ ನಿವಾರಣೆಗೆ ವ್ಯಾಪಕವಾಗಿ ವಿಶ್ವದೆಲ್ಲೆಡೆ ಚಿಕಿತ್ಸೆಯ ರೂಪದಲ್ಲಿ ಬಳಕೆಯಾಗುತ್ತಿರುವ ಕ್ರಮವಿದು. ಕಣ್ಣು ಮುಚ್ಚಿ ಒಳ ಹೋಗುವ ಈ ಕ್ರಿಯೆಗೆ ಹೊರಗಿನಿಂದ ವಿಮುಖರಾಗುವುದು ಅಗತ್ಯವೇ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ- ಇತ್ಯಾದಿ ಪ್ರಶ್ನೆಗಳಿಗೆ ಸಮಾಧಾನವನ್ನು ಶೋಧಿಸುವ ಪ್ರಯತ್ನವಿದು.

Why Yoga Day is celebrated internationally,
International Yoga Day

ಧ್ಯಾನವೆಂದರೆ ಏನು?

ಹಾಗೆಂದರೆ ಆಳವಾದ ವಿಶ್ರಾಂತಿ ಮತ್ತು ಜಾಗೃತ ಸ್ಥಿತಿ- ಈ ಎರಡನ್ನೂ ಒಂದೇ ಸಮಯಕ್ಕೆ ಏಕತ್ರಗೊಳಿಸಿದ ಸ್ಥಿತಿ! ಇದು ಋಷಿ-ಮುನಿಗಳಿಗೆ ಮಾತ್ರವೇ ಹೊಂದುವಂಥದ್ದು ಎಂಬ ತೀರ್ಮಾನಕ್ಕೆ ಈಗಲೇ ಬರಬೇಡಿ. ಸರಳವಾಗಿ ಹೇಳುವುದಾದರೆ, ಕುದಿಯುತ್ತಿರುವ ಮೈ-ಮನಗಳನ್ನು ಶಾಂತಗೊಳಿಸಿ, ನಮ್ಮೊಳಗಿನ ಉಲ್ಲಾಸವನ್ನು ಎಚ್ಚರಿಸುವ ಕ್ರಿಯೆಯಿದು. ಏನನ್ನೂ ಮಾಡದೆ, ಅಂದರೆ ಮೆದುಳಿಗೂ ಕೆಲಸ ನೀಡದೆ, ಎಲ್ಲವನ್ನೂ ಬಿಟ್ಟು ಆಳವಾದ ವಿಶ್ರಾಂತಿಗೆ ಜಾರುವುದು, ಆದರೆ ನಿದ್ದೆ ಮಾಡದೆ ಜಾಗೃತ ಅವಸ್ಥೆಯಲ್ಲೇ ಇರುವುದು ಈ ಕ್ರಮದ ಮುಖ್ಯವಾದ ಅಂಗ. ದೇಹಕ್ಕೆ ಆಹಾರ ನೀಡಿದಂತೆ ಮನಸ್ಸಿಗೂ ಗ್ರಾಸ ಬೇಡವೇ?

ಏಕೆ ಮಾಡಬೇಕು?

ಬದುಕಿನ ಇನ್ನೊಂದು ಹೆಸರೇ ಒತ್ತಡ ಎನ್ನುವಂತಿರುವಾಗ, ಈ ಚಕ್ರವ್ಯೂಹದಿಂದ ಹೊರಬರುವುದು ಹೇಗೆ? ಹೊರಗಿನ ಗದ್ದಲದಲ್ಲಿ ಆಂತರ್ಯದ ದನಿಯನ್ನು ಕೇಳುವುದು ಹೇಗೆ? ನೂರೆಂಟು ಗೋಜಲುಗಳ ನಡುವೆ ನಮಗೆ ಬೇಕಾದ್ದಕ್ಕೆ ಗಮನ ಕೊಡುವುದು ಸಾಧ್ಯವೇ? ಯಶಸ್ಸಿನ ಹಿಂದೆ ಓಡುವಾಗ ನಮ್ಮ ಕೈಗೆ ದೊರೆಯುತ್ತಿರುವುದೇನು ಎಂಬ ಗಮನವಾದರೂ ಇದೆಯೇ ನಮಗೆ? ಹಾಳಾಗುತ್ತಿರುವ ಆರೋಗ್ಯವನ್ನು ಮಾತ್ರೆಗಳು ಮಾತ್ರವೇ ಸರಿ ಮಾಡಿಯಾವೇ? ಇವಕ್ಕೆಲ್ಲ ಉತ್ತರ ಹುಡುಕಬೇಕೆಂದರೆ ಮೊದಲು ಮನಸ್ಸು ಶಾಂತವಾಗಬೇಕು. ಉದ್ರಿಕ್ತ ಮನದಿಂದ ಉತ್ತರ ಹುಡುಕಲು ಸಾಧ್ಯವಿಲ್ಲ. ಮೊದಲು ಮನಸ್ಸಿಗೆ ಸಮಾಧಾನ ದೊರೆತ ಮೇಲಷ್ಟೇ ಪ್ರಶ್ನೆಗಳಿಗೆ ಸಮಾಧಾನ ದೊರೆಯುವುದಕ್ಕೆ ಸಾಧ್ಯ. ಈಗ ನೀವೆ ಹೇಳಿ, ಧ್ಯಾನವನ್ನು ಏಕೆ ಮಾಡಬೇಕು?

ಇದನ್ನೂ ಓದಿ: Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

ಲಾಭಗಳೇನು?

  • ಎಲ್ಲಕ್ಕಿಂತ ಮೊದಲು ನಮಗೆ ಅರಿವಿಗೆ ಬರುವ ಪ್ರಯೋಜನವೆಂದರೆ ಶರೀರದ ಚೈತನ್ಯ ಹೆಚ್ಚುವುದು. ನಮ್ಮ ಆಲೋಚನೆ, ಕ್ರಿಯೆ ಮತ್ತು ಉಸಿರಾಟಕ್ಕೂ ನಮ್ಮಲ್ಲಿ ಪ್ರವಹಿಸುವ ಚೈತನ್ಯಕ್ಕೂ ಗಾಢವಾದ ನಂಟಿದೆ. ಈ ಚೈತನ್ಯವೇ ನಮ್ಮಲ್ಲಿ ಧನಾತ್ಮಕ ಆಲೋಚನೆಗಳನ್ನು ಉಂಟು ಮಾಡುವುದು.
  • ಎರಡನೆಯ ಪ್ರಯೋಜನವೆಂದರೆ ನಮ್ಮ ಆರೋಗ್ಯದಲ್ಲಿನ ಸುಧಾರಣೆ. ಅಂದರೆ ರಕ್ತದೊತ್ತಡ, ಮಧುಮೇಹ, ಹೃದಯದ ತೊಂದರೆಗಳು, ಜೀರ್ಣಾಂಗದ ಸಮಸ್ಯೆಗಳು, ಚರ್ಮದ ತೊಂದರೆಗಳು ಮುಂತಾದ ಹಲವಾರು ಸಮಸ್ಯೆಗಳಿಗೆ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವುದು ಪ್ರಬಲ ಔಷಧಿಯಾಗಿ ಕೆಲಸ ಮಾಡುತ್ತದೆ.
  • ಮೂರನೆಯದಾಗಿ, ದೇಹ ಮತ್ತು ಮನಸ್ಸುಗಳ ವಿಕಾರಗಳನ್ನು ಮಟ್ಟ ಹಾಕಲು ಇದು ಅಗತ್ಯ. ಬೇಡದ ಆಲೋಚನೆಗಳನ್ನು ತಡೆಯುತ್ತಿದ್ದಂತೆ ನಿದ್ದೆ ಸುಲಲಿತವಾಗಿ ಬರುತ್ತದೆ. ನಿದ್ರಾಹೀನತೆಯಿಂದ ದಾಂಗುಡಿ ಇಡುವ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ದೂರ ಇರಿಸಬಹುದು.
  • ಇವೆಲ್ಲ ಕಣ್ಣಮುಂದೆ ಕಾಣುವಂಥ ಪ್ರಯೋಜನಗಳು. ಅದಲ್ಲದೆ, ಮಾನಸಿಕ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಳ, ವಿವೇಕ ಜಾಗ್ರತೆಯಾಗುವುದು, ಯೋಚನೆಯಲ್ಲಿ ಸ್ಪಷ್ಟತೆ, ಗೊಂದಲ ದೂರವಾಗುವುದು, ಒತ್ತಡ ನಿವಾರಣೆ, ಸಂವಹನದಲ್ಲಿ ಸ್ಪಷ್ಟತೆ, ಹೊಸ ಆಲೋಚನೆಗಳು ಹುಟ್ಟುವುದು, ಕಲಿಯುವಲ್ಲಿನ ಚುರುಕುತನ, ಆತ್ಮವಿಶ್ವಾಸ ವೃದ್ಧಿ, ನಿರುಮ್ಮಳತೆ- ಇವೆಲ್ಲ ನಮ್ಮ ಮಾನಸಿಕ ಸ್ಥಿತಿ ಸುಧಾರಿಸಿದ್ದರಿಂದ ಆಗುವ ನೇರ ಪ್ರಯೋಜನಗಳು. ಧ್ಯಾನಸ್ಥರಾಗಿ ಕೂರುವುದಕ್ಕೆ ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕೆ?
Continue Reading

ಆರೋಗ್ಯ

Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

ಅಸ್ತಮಾವನ್ನು ಹೆಚ್ಚು ಮಾಡುವ ಅಲರ್ಜಿಕ್‌ ವಸ್ತುಗಳಿಂದ ದೂರ ಇರುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಇದರಿಂದಲೇ ಅಸ್ತಮಾ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಂಟು ಮಾಡಬಹುದು. ಯಾವೆಲ್ಲಾ ವಸ್ತುಗಳಿಂದ ಅಸ್ತಮಾ ರೋಗಿಗಳು ದೂರವಿರಬೇಕು? ಈ ಕುರಿತ ಉಪಯುಕ್ತ (Allergic Asthma) ಮಾಹಿತಿ ಇಲ್ಲಿದೆ.

VISTARANEWS.COM


on

Allergic Asthma
Koo

ಡಾ. ಸಚಿನ್ ಡಿ, ಸಲಹೆಗಾರ – ಇಂಟರ್ವೆನ್ಷನಲ್ ಪಲ್ಮನಾಲಜಿ ಕ್ರಿಟಿಕಲ್ ಕೇರ್ & ಸ್ಲೀಪ್ ಮೆಡಿಸಿನ್, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್

ಕೆಲವರನ್ನು ಬಿಟ್ಟೂ ಬಿಡದೆ ಕಾಡುವ ಕಾಯಿಲೆಗಳ ಪೈಕಿ ಈ ಅಸ್ತಮಾ ಕೂಡ ಒಂದು. ಅಸ್ತಮಾವನ್ನು ಹೆಚ್ಚು ಮಾಡುವ ಅಲರ್ಜಿಕ್‌ ವಸ್ತುಗಳಿಂದ ದೂರ ಇರುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಇದರಿಂದಲೇ ಅಸ್ತಮಾ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಂಟು ಮಾಡಬಹುದು. ಯಾವೆಲ್ಲಾ ವಸ್ತುಗಳಿಂದ ಅಸ್ತಮಾ ರೋಗಿಗಳು ದೂರವಿರಬೇಕು ಎಂಬುದರ ಬಗ್ಗೆ (Allergic Asthma) ಇಲ್ಲಿದೆ ಮಾಹಿತಿ.

Perfumes

ಸುಗಂಧ ದ್ರವ್ಯಗಳು

ಸಾಕಷ್ಟು ಜನರಿಗೆ ಪರ್ಫ್ಯೂಮ್‌ ಅಥವಾ ಸುಗಂಧ ದ್ರವ್ಯ ಹಾಕದೇ ಹೊರ ಹೋಗುವುದಿಲ್ಲ. ಆದರೆ, ಇದು ಅಸ್ತಮಾ ಇರುವವರಿಗೆ ಇನ್ನಷ್ಟು ಅಲರ್ಜಿ ಹೆಚ್ಚಿಸುವ ಸಾಧ್ಯತೆ ಇದೆ. ಪರ್ಫ್ಯೂಮ್‌, ಸುಗಂಧಭರಿತ ಲೋಷನ್‌ಗಳು ಮತ್ತು ಏರ್ ಫ್ರೆಶ್‌ನರ್‌ಗಳು ಕೆಲವು ವ್ಯಕ್ತಿಗಳಿಗೆ ಆಸ್ತಮಾ ರೋಗಲಕ್ಷಣಗಳನ್ನು ಪ್ರಚೋದಿಸಬಹುದು. ಈ ಕೃತಕ ಸುಗಂಧ ದ್ರವ್ಯಗಳು ಒಲಟೈಲ್‌ ಆರ್ಗಾನಿಕ್‌ ಕಾಂಪೋನೆಂಟ್ಸ್‌ (VOCs)ಗಳನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಶ್ವಾಸನಾಳವು ಕೆರಳಿ, ಕೆಮ್ಮು, ಉಬ್ಬಸ ಅಥವಾ ಉಸಿರಾಟದ ತೊಂದರೆ ಉಂಟು ಮಾಡಲಿದೆ.

ಗುಡುಗು ಸಹಿತ ಗಾಳಿಯಿಂದ ದೂರವಿರಿ

ಹೆಚ್ಚಿನ ಜನರು ಗುಡುಗು ಸಹಿತ ತಂಪಾದ ಗಾಳಿಯನ್ನು ಆನಂದಿಸಲು ಇಷ್ಟಪಡುತ್ತಾರೆ. ಆದರೆ ಇದು ಅಸ್ತಮಾ ರೋಗಿಗಳಿಗೆ ಸಮಸ್ಯೆ ಉಂಟು ಮಾಡಬಹುದು. ಚಂಡಮಾರುತದ ಸಮಯದಲ್ಲಿ ಹವಾಮಾನದಲ್ಲಿನ ಬದಲಾವಣೆಗಳು ವಾತಾವರಣದಲ್ಲಿನ ಸಣ್ಣ ಹಾಗೂ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ. ಜೊತೆಗೆ, ಗಾಳಿಯಲ್ಲಿನ ತೇವಾಂಶವು ಅಸ್ತಮಾ ಉಲ್ಬಣವನ್ನು ಪ್ರಚೋದಿಸಲಿದೆ. ಹೀಗಾಗಿ ಅಸ್ತಮಾ ರೋಗಿಗಳು ಈ ಗಾಳಿಗೆ ಒಡ್ಡಿಕೊಳ್ಳುವುದು ಒಳ್ಳೆಯದಲ್ಲ.

Outdoor Exercise

ವ್ಯಾಯಾಮದಲ್ಲೂ ಇರಲಿ ಮಿತಿ

ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಅತ್ಯಗತ್ಯ, ಆದರೆ ಆಸ್ತಮಾ ಹೊಂದಿರುವವರಿಗೆ ಕೆಲವು ವ್ಯಾಯಾಮಗಳು ಸಹ ಉಬ್ಬಸ ಬರುವಂತೆ ಮಾಡಬಹುದು ಎಚ್ಚರ. ಅಸ್ತಮಾ ರೋಗಿಗಳಿಗೆ ಅತಿಯಾಗಿ ಓಡುವುದು, ತೀವ್ರ ದೈಹಿಕ ಚಟುವಟಿಕೆಗಳು, ದೂಳು ಭರದ ಜಾಗದಲ್ಲಿ ದೈಹಿಕ ಚಟುವಟಿಕೆ ನಡೆಸುವುದು, ಉಸಿರುಗಟ್ಟಿಸುವ ವ್ಯಾಯಾಮಗಳು ನಿಶಿದ್ಧ. ಏಕೆಂದರೆ, ಈ ಎಲ್ಲಾ ದೈಹಿಕ ಚಟುವಟಿಕೆಗಳು ಉಸಿರಾಟದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ದೈಹಿಕ ಚಟುವಟಿಕೆ ಅವಶ್ಯಕತೆ ಇದ್ದಲ್ಲಿ ಮೊದಲು ಇನ್ಹೇಲರ್‌ ಬಳಸುವುದು ಉತ್ತಮ. ಇದಲ್ಲದೆ, ಸಾಮಾನ್ಯ ವ್ಯಾಯಾಮ, ದೈಹಿಕ ಚಟುವಟಿಕೆ ಮಾಡಬಹುದು.

ಭಾವನಾತ್ಮಕ ಒತ್ತಡಕ್ಕೆ ಒಳಗಾಗದಿರಿ

ಆಸ್ತಮಾ ಕೇವಲ ದೈಹಿಕ ಸ್ಥಿತಿಯಲ್ಲದೆ, ಭಾವನಾತ್ಮಕ ಒತ್ತಡಕ್ಕೂ ಸಂಬಂಧ ಹೊಂದಿದೆ. ಅತಿಯಾದ ಸಂಕಟ, ಮಾನಸಿಕವಾಗಿ ನೋವು ಅನುಭವಿಸುವುದು, ಕೆಲವು ವಿಚಾರಗಳ ಬಗ್ಗೆ ಆಳವಾಗಿ ಯೋಚಿಸುವುದರಿಂದಲೂ ಸಹ ಹೈಪರ್ವೆನ್ಟಿಲೇಷನ್‌ಗೆ ಕಾರಣವಾಗಬಹುದು, ಇದರಿಂದ ಅಸ್ತಮಾ ರೋಗವು ಇನ್ನಷ್ಟು ಹದಗೆಡಬಹುದು.

Preservative food

ಪ್ರಿಜರ್‌ವೇಟಿವ್‌ ಆಹಾರ ಬಳಕೆ ಉತ್ತಮವಲ್ಲ

ಇನ್ನು, ಆಹಾರವನ್ನು ದೀರ್ಘಕಾಲ ಸುರಕ್ಷಿತವಾಗಿ ಇಡುವ ಪ್ರಿಜರ್‌ವೇಟಿವ್‌ ಬಳಸಿರುವ ಆಹಾರ ಸೇವನೆಯೂ ಕೂಡ ಅಸ್ತಮಾ ರೋಗವನ್ನು ಕೆರಳಿಸಬಹುದು ಎನ್ನಲಾಗಿದೆ.
ಇನ್ನು, ಸಂಸ್ಕರಿತ ಆಹಾರಗಳು ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯಗಳಲ್ಲಿ ಸಾಮಾನ್ಯವಾಗಿ ಸಂರಕ್ಷಕಗಳಾಗಿ ಬಳಸಲಾಗುವ ಸಲ್ಫೈಟ್‌ಗಳು ಉಬ್ಬಸ ಮತ್ತು ಉಸಿರಾಟದ ತೊಂದರೆಯಂತಹ ಆಸ್ತಮಾ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಹೀಗಾಗಿ ಆಸ್ತಮಾ ಹೊಂದಿರುವ ವ್ಯಕ್ತಿಗಳು ಆಹಾರದ ಲೇಬಲ್‌ಗಳನ್ನು ಓದುವುದು ಮತ್ತು ಸಲ್ಫೈಟ್-ಒಳಗೊಂಡಿರುವ ಉತ್ಪನ್ನಗಳನ್ನು ತಪ್ಪಿಸುವುದು ಒಳ್ಳೆಯದು

ಇದನ್ನೂ ಓದಿ: Leg Cramps At Night: ರಾತ್ರಿ ಮಲಗಿದಾಗ ಕಾಡುವ ಕಾಲುನೋವಿಗೆ ಇದೆ ಪರಿಹಾರ!

ಕೆಲಸಗಳ ಆಯ್ಕೆಯಲ್ಲಿ ಇರಲಿ ಎಚ್ಚರ

ಇನ್ನು, ಕೆಲವರು ಅಸ್ತಮಾ ಹೊಂದಿರುವವರು ತಾವು ಮಾಡುವ ಕೆಲಸಗಳ ಬಗ್ಗೆಯೂ ಜಾಗೃತಿ ವಹಿಸುವುದು ಉತ್ತಮ. ಸಾಕುಪ್ರಾಣಿಗಳನ್ನು ಪೋಷಿಸುವ ಕೆಲಸ, ಕೃಷಿ, ಧೂಳು ಪ್ರದೂಷಣೆಗೆ ಒಡ್ಡುವ ಕೆಲಸಗಳು, ಹೊಗೆಯುಕ್ತ, ಹೆಚ್ಚು ಸುಂಗಂಧಭರಿತ ನಿರ್ಮಾಣದ ಕೆಲಸ ಸೇರಿದಂತೆ ನಿಮ್ಮ ಅಸ್ತಮಾವನ್ನು ಹೆಚ್ಚಿಸುವ ಕೆಲಸಗಳಿಂದ ದೂರವಿರಿ. ಕೆಲಸ ಜೀವನ ನಡೆಸಲು ಮುಖ್ಯವೆ ಆದರೂ, ಆರೋಗ್ಯ ದುಡಿಮೆಗಿಂತಲೂ ಮುಖ್ಯ ಎಂಬುದನ್ನು ಮರೆಯುವಂತಿಲ್ಲ.

Continue Reading

ಕರ್ನಾಟಕ

World Blood Donors Day: ವಿಶ್ವ ರಕ್ತದಾನಿಗಳ ದಿನ; ಜಾಗೃತಿ ಜಾಥಾಕ್ಕೆ ದಿನೇಶ್ ಗುಂಡೂರಾವ್‌ ಚಾಲನೆ

World Blood Donors Day: ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ‌ ಶುಕ್ರವಾರ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ರಕ್ತದಾನದ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

VISTARANEWS.COM


on

World Blood Donor Day Awareness Jatha in Bengaluru
Koo

ಬೆಂಗಳೂರು: ರಕ್ತದಾನ ಮಾಡುವ ಮೂಲಕ ಒಬ್ಬರ ಜೀವ ಉಳಿಸಬಹುದು. ರಕ್ತದಾನದಿಂದ (World Blood Donors Day) ಹಲವರ ಜೀವನದಲ್ಲಿ ಬದಲಾವಣೆ ತರಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ‌ ಶುಕ್ರವಾರ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ರಕ್ತದಾನದ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ, ಮಾತನಾಡಿದ ಸಚಿವರು, ದೇಶದಲ್ಲಿ ರಕ್ತಕ್ಕಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರಕ್ತದಾನಕ್ಕೆ ನಾವೆಲ್ಲರು ಮುಂದಾಗಬೇಕಿದೆ. ಹೆಚ್ಚು ರಕ್ತದಾನದ ಅಗತ್ಯತೆ ಇದೆ ಎಂದು ಹೇಳಿದರು.

ರಕ್ತದಾನದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವತ್ತ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಸ್ಟೇಟ್ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಅವರು ಹಮ್ಮಿಕೊಂಡಿದ್ದ ಈ ರೀತಿಯ ಜಾಥಾ ಕಾರ್ಯಕ್ರಮಗಳು ಉತ್ತಮವಾದವು ಎಂದು ತಿಳಿಸಿದರು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ.15ರಂದು ʼನಾರಿ ಸಮ್ಮಾನ್‌ʼ ಪ್ರಶಸ್ತಿ ಪ್ರದಾನ

ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 14ರಂದು ಜಗತ್ತಿನಾದ್ಯಂತ 2004ರಿಂದ ಆಚರಿಸಿಕೊಂಡು ಬರಲಾಗಿತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶ್ವರಕ್ತದಾನಿಗಳ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ಜಾಥಾ ಮೂಲಕ ಆಚರಿಸಿ, ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. ರಕ್ತವನ್ನು ಸಕಾಲದಲ್ಲಿ ಪೂರೈಕೆ ಮಾಡುವ ಮುಖಾಂತರ ಜೀವಗಳನ್ನು ಉಳಿಸಬಹುದು.‌ ಈ ನಿಟ್ಟಿನಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಗೌರವಿಸಿ ಇತರರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಹಾಗೂ ಕೆಎಸ್‌ಎಪಿಎಸ್‌ ಸಂಸ್ಥೆಯಿಂದ ಜಾಥಾ ಹಮ್ಮಿಕೊಳ್ಳಲಾಗಿತ್ತು.‌

“20 ವರ್ಷಗಳ ರಕ್ತದಾನದ ಸಂಭ್ರಮಾಚರಣೆ ಸಂದರ್ಭದಲ್ಲಿ ಧನ್ಯವಾದ ರಕ್ತದಾನಿಗಳೆ “Your Gift of Life is Priceless” ಎಂಬ ಘೋಷವಾಖ್ಯದೊಂದಿಗೆ ಈ ಬಾರಿಯ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತು.

ಇದನ್ನೂ ಓದಿ: Tata Motors: ಪಂಚ್. ಇವಿ, ನೆಕ್ಸಾನ್.ಇವಿಗೆ ಭಾರತ್-ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್

ಜಾಥಾದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸ್ವಯಂ ಸೇವಕರು ರಕ್ತದಾನ ಮಾಡುವ ಕುರಿತು ಪ್ರತಿಜ್ಞೆ ಸ್ವೀಕರಿದರು.

Continue Reading

ಆರೋಗ್ಯ

World Blood Donor Day: ರಕ್ತದಾನ ಯಾರು ಮಾಡಬಹುದು? ಯಾರು ಮಾಡಬಾರದು?

ವಿಶ್ವದೆಲ್ಲೆಡೆ ಕೋಟಿಗಟ್ಟಲೆ ಜನರ ಜೀವ ಉಳಿಸಿರುವುದು ರಕ್ತಪೂರಣವೆಂಬ ಪ್ರಕ್ರಿಯೆ. ಸಮಯಕ್ಕೆ ಸರಿಯಾಗಿ ರಕ್ತ ನೀಡಿ, ಜೀವ ಉಳಿಸಿದ ಘಟನೆಗಳು ಲೆಕ್ಕವಿಲ್ಲದಷ್ಟಿವೆ. ಹೀಗೆ ಜೀವಕಾರುಣ್ಯದಿಂದ ರಕ್ತದಾನ ಮಾಡುವ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಮತ್ತು ರಕ್ತದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದಕ್ಕೆ ಮೀಸಲಿರಿಸಿದ ದಿನ ಜೂನ್‌ 14. ಈ ದಿನದ ಕುರಿತು (World Blood Donor Day) ಇಲ್ಲಿದೆ ಮಾಹಿತಿ.

VISTARANEWS.COM


on

World Blood Donor Day
Koo

ರಕ್ತದಾನ ಮಹಾದಾನವೆಂಬ ಮಾತಿದೆ. ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿರುವ, ಅಪಘಾತಕ್ಕೆ ಈಡಾಗಿ ಬದುಕಿಗಾಗಿ ಹೋರಾಡುತ್ತಿರುವ ಬಹಳಷ್ಟು ಮಂದಿಗೆ ಸರಿಯಾದ ಸಮಯಕ್ಕೆ ರಕ್ತ ದೊರೆತರೆ ಪ್ರಾಣಾಪಾಯದಿಂದ ಪಾರಾಗುತ್ತಾರೆ. ಈ ಎಲ್ಲ ಸಂದರ್ಭಗಳಲ್ಲಿ ಜೀವ ಉಳಿಸುವ ಉದ್ದೇಶದಿಂದ ರಕ್ತದಾನ ಮಾಡುವಂಥವರು ಜಗತ್ತಿನಲ್ಲಿ ಕೋಟಿಗಟ್ಟಲೆ ಜನರಿದ್ದಾರೆ. ಇಂಥವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ, ಜೂನ್‌ ತಿಂಗಳ 14ನೇ ದಿನವನ್ನು ವಿಶ್ವ ರಕ್ತದಾನಿಗಳ ದಿನ (World Blood Donor Day) ಎಂದು ಗುರುತಿಸಲಾಗಿದೆ.
ಮೊದಲ ಬಾರಿಗೆ 1940ರಲ್ಲಿ, ರಿಚರ್ಡ್‌ ಲೋವರ್ ಎಂಬಾತ ಎರಡು ಶ್ವಾನಗಳ ನಡುವೆ ಯಶಸ್ವಿಯಾಗಿ ರಕ್ತಪೂರಣ ನಡೆಸಿದ. ಇದಕ್ಕೂ ಮೊದಲೇ ಈ ಪ್ರಯತ್ನವನ್ನು ನಡೆಸಲಾಗಿತ್ತು. ಆದರೆ 1940ರ ನಂತರ ರಕ್ತಪೂರಣವೆಂಬುದು ಅತಿ ಕಷ್ಟದ ಸಂಗತಿಯಾಗಿ ಉಳಿಯಲಿಲ್ಲ. ಜೂನ್‌ 14ರಂದು ವಿಶ್ವ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಮತ್ತು ರಕ್ತದಾನದ ಬಗ್ಗೆ ಅರಿವು ಮೂಡಿಸುವ ದಿನವನ್ನು ಆಚರಿಸಬೇಕೆಂದು, 2005ರಲ್ಲಿ ವಿಶ್ವ ಆರೋಗ್ಯ ಸಭೆ ತೀರ್ಮಾನಿಸಿತು.

World Blood Donor Day 2024

ಯಾರು ಮಾಡಬಹುದು?

ವಿಶ್ವದೆಲ್ಲೆಡೆ ಲಕ್ಷಾಂತರ ಜನರ ಜೀವ ಉಳಿಸುತ್ತಿದೆ ಈ ರಕ್ತದಾನವೆಂಬ ಪ್ರಕ್ರಿಯೆ. ಹಾಗಾದರೆ ಯಾರೆಲ್ಲ ರಕ್ತವನ್ನು ದಾನ ಮಾಡಬಹುದು? ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 18 ವರ್ಷದಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಬಹುದು. ಇದಕ್ಕಾಗಿ ಮಹಿಳೆಯರಲ್ಲಿ 12 ಜಿ/ಡಿಎಲ್‌ ಮತ್ತು ಪುರುಷರಲ್ಲಿ 13 ಜಿ/ಡಿಎಲ್‌ ನಷ್ಟು ಪ್ರಮಾಣದಲ್ಲಿ ರಕ್ತದಲ್ಲಿ ಹಿಮೋಗ್ಲೋಬಿನ್‌ ಇರಬೇಕಾಗುತ್ತದೆ. ಸರಳವಾಗಿ ಹೇಳಬೇಕಾದರೆ, ರಕ್ತದಾನಿಗೆ ಹಿಮೋಗ್ಲೋಬಿನ್‌ ಕೊರತೆ ಇರಬಾರದು ಮತ್ತು 45 ಕೆ.ಜಿ. ತೂಕವಾದರೂ ಇರಬೇಕು.
ಜೊತೆಗೆ ನೆಗಡಿ, ಜ್ವರ, ಗಂಟಲುನೋವು, ಹೊಟ್ಟೆನೋವು ಮುಂತಾದ ಯಾವುದೇ ರೀತಿಯ ಸೋಂಕು ರೋಗಗಳು ಅಥವಾ ಆರೋಗ್ಯ ತೊಂದರೆಗಳು ಇರಬಾರದು. ಇತ್ತೀಚೆಗೆ ಟ್ಯಾಟೂ ಹಾಕಿಸಿಕೊಂಡಿದ್ದೀರಿ ಎಂದಾದರೆ, ಮುಂದಿನ ಆರು ತಿಂಗಳು ರಕ್ತದಾನ ಮಾಡುವಂತಿಲ್ಲ. ಉಳಿದಂತೆ, ರಕ್ತಹೀನತೆ ಇಲ್ಲದ ಮಹಿಳೆಯರು ರಕ್ತದಾನ ಮಾಡಬಹುದು. ಆದರೆ ಗರ್ಭಿಣಿಯರು ಮತ್ತು ಹಾಲುಣಿಸುವ ಅಮ್ಮಂದಿರು ರಕ್ತದಾನ ಮಾಡುವಂತಿಲ್ಲ. ಸಸ್ಯಾಹಾರಿಗಳು, ಮಾಂಸಾಹಾರಿಗಳು ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ರಕ್ತದಾನ ಮಾಡಬಹುದು. ಒಂದು ಬಾರಿ ರಕ್ತ ನೀಡಿದ ಮೇಲೆ, ಮುಂದಿನ 90 ದಿನಗಳು ಅಥವಾ ಮೂರು ತಿಂಗಳು ರಕ್ತ ನೀಡುವಂತಿಲ್ಲ. ಕಳೆದುಕೊಂಡಿದ್ದನ್ನು ಪುನರುತ್ಪತ್ತಿ ಮಾಡಲು ಶರೀರಕ್ಕೆ ಸಮಯ ನೀಡಬೇಡವೇ? ವರ್ಷಕ್ಕೊಮ್ಮೆ ಅಥವಾ ತಮ್ಮ ಜನ್ಮ ದಿನದಂದು ರಕ್ತದಾನ ಮಾಡುವವರು ಹಲವಾರು ಮಂದಿಯಿದ್ದಾರೆ. ರಕ್ತದ ಮಾದರಿ ಯಾವುದೇ ಇದ್ದರೂ, ಅವೆಲ್ಲವೂ ಆಪತ್ತಿನಲ್ಲಿ ಪ್ರಾಣ ಉಳಿಸುವಂಥವೇ. ಜೊತೆಗೆ ನಿಯಮಿತವಾಗಿ ರಕ್ತ ನೀಡುವುದರಿಂದ ದಾನಿಯ ಆರೋಗ್ಯವೂ ಚೆನ್ನಾಗಿರುತ್ತದೆ. ಇದರಿಂದ ಅವರಿಗೇನೂ ತೊಂದರೆಯಾಗದು.

ಎಷ್ಟು ತೆಗೆಯುತ್ತಾರೆ?

ರಕ್ತದಾನವೆಂದರೆ ದೇಹದಲ್ಲಿ ಇರುವ ರಕ್ತವೆಲ್ಲಾ ಅಥವಾ ಬಾಟಲಿಗಟ್ಟಲೆ ತೆಗೆಯುತ್ತಾರೆ ಎಂದು ತಿಳಿಯಬಾರದು. ಒಮ್ಮೆಗೆ 350 ಎಂ.ಎಲ್‌. ರಕ್ತ ತೆಗೆಯಲಾಗುತ್ತದೆ. ಕೆಲವರಿಗೆ ಸ್ವಲ್ಪ ಆಯಾಸ ಎನಿಸಬಹುದು. ಆದರೆ ಒಂದೆರಡು ಗಂಟೆಗಳಲ್ಲಿ ಸಾಮಾನ್ಯವಾಗಿ ದಾನಿಗಳೆಲ್ಲರೂ ಚೇತರಿಸಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಪೌಷ್ಟಿಕವಾದ ಸತ್ವಯುತ ಆಹಾರವನ್ನು ದಾನಿಗಳು ಸೇವಿಸಬೇಕು. ಚೆನ್ನಾಗಿ ನೀರು ಕುಡಿದು, ವಿಶ್ರಾಂತಿ ತೆಗೆದುಕೊಂಡರೆ ಅದಕ್ಕಿಂತ ಹೆಚ್ಚಿನದ್ದು ಬೇಕಾಗುವುದಿಲ್ಲ.

ಇದನ್ನೂ ಓದಿ: Junk Food Side Effects: ಗೇಮಿಂಗ್‌ ದಾಸರಾದ ಮಕ್ಕಳು ಜಂಕ್‌ ಫುಡ್‌ ವ್ಯಸನಿಗಳಾಗುವ ಸಂಭವ ಹೆಚ್ಚು!

ಔಷಧಿ ತೆಗೆದುಕೊಳ್ಳುವವರು?

ತಾವೇ ಔಷಧಿ ತೆಗೆದುಕೊಳ್ಳುವಂಥವರು ಇನ್ನೊಬ್ಬರಿಗೆ ರಕ್ತ ನೀಡಬಹುದೇ? ಯಾವ ಸಮಸ್ಯೆಗೆ ಔಷಧಿ ಎಂಬುದು ಮುಖ್ಯವಾಗುತ್ತದೆ. ಸೋಂಕು ರೋಗಗಳಿದ್ದರೆ, ಕ್ಯಾನ್ಸರ್‌ ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ ಅವರ ರಕ್ತವನ್ನು ತೆಗೆದುಕೊಳ್ಳಲಾಗುವುದಿಲ್ಲ. ಉಳಿದಂತೆ ಬಿಪಿ, ಥೈರಾಯ್ಡ್‌ನಂಥ ತೊಂದರೆಗೆ ಮಾತ್ರೆ ನುಂಗುತ್ತಿದ್ದರೆ ಅದೇನು ಸಮಸ್ಯೆ ಆಗಲಾರದು. ಆದರೆ ದಾನಿಗಳ ಆರೋಗ್ಯ ಸಂಪೂರ್ಣ ಸುಸ್ಥಿತಿಯಲ್ಲಿ ಇರಬೇಕಾದ್ದು ಕಡ್ಡಾಯ.

Continue Reading
Advertisement
Aamras
ದೇಶ3 mins ago

India’s Aamras : ಮಾವಿನಹಣ್ಣಿನ ಖಾದ್ಯಗಳ ಟಾಪ್‌ ಟೆನ್‌ ಪಟ್ಟಿಯಲ್ಲಿ ಭಾರತದ ಆಮ್‌ರಸ್‌ ವಿಶ್ವದಲ್ಲೇ ನಂಬರ್‌ ಒನ್!

International Yoga Day 2024
ಆರೋಗ್ಯ3 mins ago

International Yoga Day 2024: ಧ್ಯಾನ ಎಂದರೇನು? ಇದರಿಂದ ಏನೇನು ಪ್ರಯೋಜನ?

Dina Bhavishya
ಭವಿಷ್ಯ3 mins ago

Dina Bhavishya : ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ; ಈ ರಾಶಿಯವರು ಮೌನವಾಗಿರಿ

T20 World Cup 2024
ಕ್ರಿಕೆಟ್5 hours ago

T20 World Cup 2024: ಟಿ-20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್;‌ ಸೂಪರ್‌ 8ಕ್ಕೆ ಲಗ್ಗೆ ಇಟ್ಟ ಅಮೆರಿಕ

Toyota Technical Education Programme started at Bareilly Government Polytechnic by TKM
ದೇಶ6 hours ago

Toyota Kirloskar Motor: ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮದಡಿ ವಿದ್ಯಾರ್ಥಿ ವೇತನ

Truck Driver
ದೇಶ7 hours ago

ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಗೈದು ಕೊಂದ ಟ್ರಕ್‌ ಡ್ರೈವರ್;‌ ಭೀಕರ ವಿಡಿಯೊ ಇಲ್ಲಿದೆ

Do not split BBMP says Karave State President TA Narayana Gowda
ಕರ್ನಾಟಕ8 hours ago

BBMP: ಬಿಬಿಎಂಪಿ ವಿಭಜನೆ ಬೇಡ; ಇದು ಕನ್ನಡಿಗರಿಗೆ ಮಾರಕ: ನಾರಾಯಣ ಗೌಡ

ಕರ್ನಾಟಕ8 hours ago

Congress Guarantee: ಗ್ಯಾರಂಟಿ ಯೋಜನೆ ನಿಲ್ಲಲ್ಲ ನಿಲ್ಲಲ್ಲ ನಿಲ್ಲಲ್ಲ ಎಂದ ಸಿದ್ದರಾಮಯ್ಯ

Arundhati Roy
ದೇಶ8 hours ago

Arundhati Roy: ‘ಕಾಶ್ಮೀರ ಭಾರತದ್ದಲ್ಲ’ ಎಂದಿದ್ದ ಅರುಂಧತಿ ರಾಯ್‌ ವಿರುದ್ಧ ಉಗ್ರರ ನಿಗ್ರಹ ಕಾಯ್ದೆ ಅಡಿ ಕ್ರಮ!

Sunny Leone
ಸಿನಿಮಾ9 hours ago

Sunny Leone: ಸನ್ನಿ ಲಿಯೋನ್ ಬೇಕೇಬೇಕೆಂದು ವಿದ್ಯಾರ್ಥಿಗಳ ಪಟ್ಟು; ಕೇರಳ ವಿವಿಗೆ ಇಕ್ಕಟ್ಟು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ11 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು12 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು13 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ13 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌