Health guide: ಇದ್ದಕ್ಕಿದ್ದಂತೆ ಸ್ತನದ ಗಾತ್ರ ಹೆಚ್ಚಾಗಲು ಇವೂ ಕಾರಣವಿರಬಹುದು! Vistara News
Connect with us

Latest

Health guide: ಇದ್ದಕ್ಕಿದ್ದಂತೆ ಸ್ತನದ ಗಾತ್ರ ಹೆಚ್ಚಾಗಲು ಇವೂ ಕಾರಣವಿರಬಹುದು!

ನಮ್ಮ ದಿನನಿತ್ಯದ ಚಟುವಟಿಕೆಗೂ, ಬದಲಾವಣೆಗಳಿಗೂ ಸ್ತನಗಳ ಗಾತ್ರವೃದ್ಧಿಗೂ ಸಂಬಂಧವಿದೆ. ಕೆಲವು ನಮ್ಮ ಬದುಕಿನ ಭಾಗವೇ ಆಗಿದ್ದು, ಸಹಜವೇ ಆಗಿದ್ದರೆ, ಇನ್ನೂ ಕೆಲವೊಮ್ಮೆ ಹೀಗಾಗಲು ಬೇರೆ ಆರೋಗ್ಯದ ಕಾರಣಗಳೂ ಇರಬಹುದು. ಅವು ಏನಿರಬಹುದು ಎಂಬುದು ತಿಳಿದಿದ್ದರೆ ಒಳ್ಳೆಯದು.

VISTARANEWS.COM


on

health guide
Koo

ಬಹಳಷ್ಟು ಮಂದಿ ಮಹಿಳೆಯರು ದಿಢೀರನೆ ಗಾತ್ರ ಹೆಚ್ಚಿಸಿಕೊಂಡ ಸ್ತನಗಳ ಬಗ್ಗೆ ಚಿಂತಿತರಾಗುತ್ತಾರೆ. ಅರೆ, ನಿನ್ನೆ ಮೊನೆಯವರೆಗೆ ಸರಿಯಾಗೇ ಇದ್ದೆನಲ್ಲ, ಇದು ಹೇಗಾಯಿತು ಅಂದುಕೊಳ್ಳುತ್ತೇವೆ. ಬಹಳಷ್ಟು ಸಾರಿ ಗೊತ್ತೇ ಆಗಿರುವುದಿಲ್ಲ ಕೂಡಾ. ಹೊಸ ಒಳ ಉಡುಪನ್ನು ಖರೀದಿಸ ಹೊರಟಾಗಲಷ್ಟೇ, ಇನ್ನೂ ತನ್ನದು ಹಳೆಯ ಸೈಜಿನಲ್ಲಿ ಇಲ್ಲ ಎಂಬ ಜ್ಞಾನೋದಯವಾಗುತ್ತದೆ. ಹಾಗಾದರೆ, ಇದು ಹೇಗಾಯ್ತು ಎಂದು ಇದಕ್ಕೆ ಕಾರಣಗಳನ್ನು ಹುಡುಕಹೋದರೆ ಉತ್ತರ ಅನೇಕ. ನಮ್ಮ ದಿನನಿತ್ಯದ ಚಟುವಟಿಕೆಗೂ, ಬದಲಾವಣೆಗಳಿಗೂ ಈ ಸ್ತನಗಳ ಗಾತ್ರವೃದ್ಧಿಗೂ ಸಂಬಂಧವಿದೆ. ಕೆಲವು ನಮ್ಮ ಬದುಕಿನ ಭಾಗವೇ ಆಗಿದ್ದು, ಸಹಜವೇ ಆಗಿದ್ದರೆ, ಇನ್ನೂ ಕೆಲವೊಮ್ಮೆ ಹೀಗಾಗಲು ಬೇರೆ ಕಾರಣವೂ ಆಗಿರಬಹುದು. ಹಾಗಾಗಿ, ಸ್ತನ ಇದ್ದಕ್ಕಿದ್ದಂತೆ ಗಾತ್ರ ಬದಲಾಯಿಸಿಕೊಳ್ಳಲು ಇವೆಲ್ಲ ಕಾರಣಗಳಿರಬಹುದು ಎಂದು ಸಾಧ್ಯಾಸಾಧ್ಯತೆಗಳ ಪಟ್ಟಿ ಇಲ್ಲಿ ಕೊಡಲಾಗಿದೆ. ಯಾಕೆಂದರೆ, ಇವುಗಳಲ್ಲಿ ಯಾವೊಂದು ಕಾರಣವೂ ಆಗಿರುವ ಸಂಭವವಿದೆ.

೧. ಋತುಚಕ್ರ: ಬಹಳಷ್ಟು ಮಂದಿ ಮಹಿಳೆಯರು ಇದನ್ನು ಗಮನಿಸಿದ್ದೀರಾ? ಋತುಚಕ್ರದ ಸಂದರ್ಭ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಗಳಾಗುತ್ತವೆ. ಮುಖ್ಯವಾಗಿ ಪ್ರೊಜೆಸ್ಟೆರಾನ್‌ ಹಾಗೂ ಇಸ್ಟ್ರೋಜನ್‌ ಹಾರ್ಮೋನಿನ ಮಟ್ಟ ಹಿಗ್ಗುತ್ತದೆ. ಈ ಸಂದರ್ಭ ಸ್ತನದ ಗಾತ್ರವೇನೂ ದೊಡ್ಡದಾಗುವುದಿಲ್ಲ. ಬದಲಾಗಿ ಈ ಸಂದರ್ಭ ಬಹಳ ಸೆನ್ಸಿಟಿವ್‌ ಆಗಿರುತ್ತದೆ. ಇನ್ನೇನು ಋತುಚಕ್ರ ಸಂಭವಿಸುವ ಒಂದೆರಡು ದಿನಗಳು ಮೊದಲು ಸ್ತನ ಗಾತ್ರದಲ್ಲಿ ಹಿರಿದಾದಂತೆ ಅನಿಸುತ್ತದೆ.

೨. ತಾಯ್ತನ: ಗರ್ಭಿಣಿಯಾದಾಗ ಮಹಿಳೆಯ ದೇಹದ ಹಾರ್ಮೋನಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ಮುಖ್ಯವಾಗಿ ಸ್ತನಗಳು ದೊಡ್ಡದಾಗುತ್ತವೆ. ಇದು ಪ್ರಕೃತಿ ಸಹಜ. ಸ್ತನದ ಒಳಗೆ ಹರಿಯುವ ರಕ್ತನಾಳಗಳ ಗಾತ್ರವೂ ಹಿಗ್ಗಿಕೊಂಡು ಸ್ತನ ದೊಡ್ಡದಾದಂತೆ ಅನಿಸುತ್ತದೆ. ಎಲ್ಲ ಮಹಿಳೆಯರೂ ತಾಯ್ತನಕ್ಕೆ ಪ್ರವೇಶ ಮಾಡುವಾಗ ಇಂತಹ ಬದಲಾವಣೆ ಸಹಜ.

೩. ತೂಕ ಹೆಚ್ಚಾಗುವುದು: ಸ್ತನದ ಗಾತ್ರ ಹಿಗ್ಗಲು ಮತ್ತೊಂದು ಪ್ರಮುಖ ಕಾರಣ ಎಂದರೆ ತೂಕ ಹೆಚ್ಚುವುದು. ಬಹಳಷ್ಟು ಹೆಣ್ಣುಮಕ್ಕಳ ತೂಕ ೩೦ ವರ್ಷ ವಯಸ್ಸಿನ ನಂತರ ಹೆಚ್ಚಾಗುತ್ತದೆ. ಪರಿಣಾಮವಾಗಿ ಸ್ತನದ ಗಾತ್ರವೂ ಹೆಚ್ಚಾಗುತ್ತದೆ.

೪. ಲೈಂಗಿಕತೆ: ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ಸ್ತನ ಗಾತ್ರದಲ್ಲಿ ಹಿಗ್ಗುತ್ತದೆ. ಸೆಕ್ಸ್‌ ಸಂದರ್ಭ ಏರಿಯೋಲಾಗಳು ಹಿಗ್ಗುವ ಕಾರಣ ಏರಿಯೋಲಾದ ಸುತ್ತಮುತ್ತಲ ಅಂಗಗಳು ಸಹಜವಾಗಿಯೇ ಹಿಗ್ಗುತ್ತವೆ.

ಇದನ್ನೂ ಓದಿ: Breast cancer | ಡಿಯೋಡರೆಂಟ್ ಬಳಕೆಯಿಂದ ಸ್ತನದ ಕ್ಯಾನ್ಸರ್‌ ಬರುತ್ತಾ?

೫. ಮಾತ್ರೆಗಳು: ಕೆಲವು ಮಾತ್ರೆಗಳು ಮುಖ್ಯವಾಗಿ ಕಾಂಟ್ರಾಸೆಪ್ಟಿವ್‌ ಮಾತ್ರೆಗಳಿಂದ ಸ್ತನವು ದೊಡ್ಡದಾಗುತ್ತವೆ.

೬. ಸ್ತನಗಡ್ಡೆಗಳು: ಸ್ತನದಲ್ಲಿ ಗಡ್ಡೆಗಳಾದಾಗ ಸ್ತನ ದೊಡ್ಡದಾಗುತ್ತದೆ. ಈ ಬಗ್ಗೆ ಆಗಾಗ ಗಮನ ಹರಿಸುವುದು ಒಳ್ಳೆಯದು. ಹಾಗಾಗಿ ಇಂತಹವುಗಳು ಗಮನಕ್ಕೆ ಬಂದರೆ ಹಾಗೂ ಅಸಹಜ ಬೆಳವಣಿಗೆಗಳು ಕಂಡುಬಂದಲ್ಲಿ ವೈದ್ಯರ ಪರೀಕ್ಷೆ, ಹಾಗೂ ಸಲಹೆ ಪಡೆಯುವುದು ಅತ್ಯಂತ ಅಗತ್ಯ.

೭. ವ್ಯಾಯಾಮದ ಕೊರತೆ: ಸರಿಯಾಗಿ ವ್ಯಾಯಾಮ ಮಾಡದೇ ಇದ್ದಾಗ ದೇಹದ ಅಂಗಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಮುಖ್ಯವಾಗಿ ನಾವು ತಿನ್ನುವ ಆಹಾರ ಕೊಬ್ಬಿನಿಂದ ಕೂಡಿದ್ದು, ಬಹಳ ಸಾರಿ ದೇಹದ ಕೆಲವು ಅಂಗಗಳ ಮೇಲೆ ಮಾತ್ರ ಹೆಚ್ಚು ಪರಿಣಾಮ ಬೀರುತ್ತದೆ. ಒಬ್ಬೊಬ್ಬರ ದೇಹ ಪ್ರಕೃತಿಯನ್ನು ಇದು ಅವಲಂಬಿಸಿರುತ್ತದೆ. ಅವುಗಳ ಪ್ರಕಾರ ಸ್ತನಗಳೂ ಮುಖ್ಯವಾದವು. ನಮ್ಮ ದೇಹದಲ್ಲಿ ಅತ್ಯಂತ ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳುವ ಕೆಲವು ಸೂಕ್ಷ್ಮ ಭಾಗಗಳಿವೆ. ಅವುಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಯಾಕೆಂದರೆ, ವ್ಯಾಯಾಮ ಕೊಂಚ ಏರಿಳಿತವಾದರೂ ಸಾಕು ಅವು ತೂಕ ಹೆಚ್ಚಿಸಿಕೊಳ್ಳುತ್ತವೆ. ಅದಕ್ಕಾಗಿ ದೇಹವನ್ನು ಸರಿಯಾದ ಆಕಾರದಲ್ಲಿ ಇಟ್ಟುಕೊಳ್ಳಲು ನಿಯಮಿತ ವ್ಯಾಯಾಮ ಅಗತ್ಯ ಎಂಬುದನ್ನು ಮನಗಾಣಬೇಕು.

ಇದನ್ನೂ ಓದಿ: Breastfeeding | ಚಳಿಗಾಲದಲ್ಲಿ ಹಾಲುಣಿಸುವುದೇ ತಾಯಂದಿರಿಗೆ ಸವಾಲು! ಪರಿಹಾರ ಏನು?

Latest

Viral Video : ತಪ್ಪು ಟರ್ಮಿನಲ್ ತಲುಪಿ, ಇದಕ್ಕೂ ಮೋದಿ ಕಾರಣ ಎಂದ ನೆಟ್ಟಿಗ! ವೈರಲ್ ಆಯ್ತು ವಿಡಿಯೊ

ತಮ್ಮ ವಿಮಾನ ಪ್ರಯಾಣದ ಇ-ಟಿಕೆಟ್ ನೋಡದ ವ್ಯಕ್ತಿಯೊಬ್ಬರು ತಪ್ಪಾದ ಟರ್ಮಿನಲ್ ತಲುಪಿ ಈ ವಿಚಾರದಲ್ಲಿಯೂ ಪ್ರಧಾನಿ ಅವರು ಗಮನಹರಿಸಬೇಕು ಎಂದು ವಿಡಿಯೊ ಹರಿಬಿಟ್ಟಿದ್ದಾರೆ. ಆ ವಿಡಿಯೊ ವೈರಲ್ (Viral Video) ಆಗಿದೆ.

VISTARANEWS.COM


on

Edited by

Koo

ಮುಂಬೈ: ವಿಮಾನ ಪ್ರಯಾಣ ಮಾಡುವವರು ತಮ್ಮ ವಿಮಾನದ ಟರ್ಮಿನಲ್ ಸಂಖ್ಯೆ ತಿಳಿದುಕೊಳ್ಳುವುದು ಅತಿಮುಖ್ಯ. ಆದರೆ ಅದನ್ನೇ ತಿಳಿದುಕೊಳ್ಳದ ವ್ಯಕ್ತಿಯೊಬ್ಬರು ತಪ್ಪಾದ ಟರ್ಮಿನಲ್ ತಲುಪಿ, ಇದಕ್ಕೂ ಪ್ರಧಾನಿ ಮೋದಿ ಕಾರಣ ಎಂದು ದೂಷಿಸಿದ್ದಾರೆ! ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral Video: ನಡೆಯೋದನ್ನು ಕಲಿಯೋ ಎಂದರೆ ಡ್ಯಾನ್ಸ್ ಮಾಡಿ ತೋರಿಸಿದ ಪುಟಾಣಿ; ಈ ಮುದ್ದಾದ ವಿಡಿಯೋಗೆ ಮನಸೋಲದವರಿಲ್ಲ
ಉಜ್ವಲ್ ತ್ರಿವೇದಿ ಅವರು ಬುಧವಾರ ಮುಂಬೈನಿಂದ ಬೆಂಗಳೂರಿಗೆ ಆಕಾಶ ಏರ್‌ಲೈನ್‌ ವಿಮಾನದಲ್ಲಿ ಹೊರಟಿದ್ದರು. ತಾವು ವಿಮಾನದ ಟಿಕೆಟ್ ಬುಕ್ ಮಾಡಿದಾಗ ಟಿಕೆಟ್‌ನಲ್ಲಿ, ವಿಮಾನವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ ಎಂದು ತೋರಿಸಿತ್ತು. ಆದರೆ ಬುಧವಾರ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದಾಗ ವಿಮಾನವು ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ಬರುತ್ತದೆ ಎಂದು ತಿಳಿಸಲಾಯಿತು ಎನ್ನುವುದು ತ್ರಿವೇದಿ ಅವರ ದೂರು.

ಈ ವಿಚಾರದಲ್ಲಿ ಉಜ್ವಲ್ ಅವರು ವಿಡಿಯೊ ಮಾಡಿದ್ದು, “ಈ ಸಮಸ್ಯೆಗಳನ್ನು ಯಾರು ಪರಿಹರಿಸುತ್ತಾರೆ? ನಮ್ಮ ಪ್ರಧಾನಿ ಸಣ್ಣ ಸಣ್ಣ ವಿಷಯಗಳ ಕ್ರೆಡಿಟ್ ತೆಗೆದುಕೊಳ್ಳಲು ಬರುತ್ತಾರೆ. ಆದರೆ ಸಾಮಾನ್ಯ ಜನರಿಗೆ ಹೇಗೆ ಕಿರುಕುಳ ನೀಡಲಾಗುತ್ತಿದೆ ಎಂಬುದು ಅವರಿಗೆ ತಿಳಿದಿರಬೇಕು. ನಾನು ಆಕಾಶ ಏರ್ ಹೆಲ್ಪ್‌ಡೆಸ್ಕ್‌ಗೆ ಹೋದೆ. ಅಲ್ಲಿ ಟರ್ಮಿನಲ್ ಅನ್ನು ಏಕೆ ಬರೆಯಲಾಗಿಲ್ಲ ಎಂಬುದನ್ನು ವಿವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಟಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ನಿಲ್ದಾಣ ಎಂದು ಹೇಳಿದ ಮೇಲೆ ಒಬ್ಬ ವ್ಯಕ್ತಿಯು ದೇಶೀಯ ವಿಮಾನ ನಿಲ್ದಾಣಕ್ಕೆ ಏಕಾಗಿ ಹೋಗುತ್ತಾನೆ? ಬೆಳಗ್ಗೆ ವಿಮಾನವನ್ನು ಹತ್ತಲೆಂದು ಧಾವಿಸಿ ತಪ್ಪು ಟರ್ಮಿನಲ್ ತಲುಪುತ್ತಾನೆ ಅಂತಾದರೆ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿ.” ಎಂದು ಹೇಳಿದ್ದಾರೆ. ವಿಡಿಯೊದಲ್ಲಿ ಜಿ20 ಬಗ್ಗೆಯೂ ಅವರು ಮಾತನಾಡಿದ್ದಾರೆ.


ಉಜ್ವಲ್ ಅವರು ಟಿಕೆಟ್ ಅನ್ನೂ ವಿಡಿಯೊದಲ್ಲಿ ತೋರಿಸಿದ್ದು, ನೆಟ್ಟಿಗರು ಆ ಟಿಕೆಟ್‌ನಲ್ಲಿದ್ದ ವಿಮಾನದ ನಂಬರ್ ಅನ್ನು ಗೂಗಲ್‌ನಲ್ಲಿ ಹುಡುಕಿ ಟರ್ಮಿನಲ್ ಮಾಹಿತಿ ತೆಗೆದಿದ್ದಾರೆ. ಉಜ್ವಲ್ ಅವರ ಇ-ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್‌ನಲ್ಲಿ ಟಿ1 ಟರ್ಮಿನಲ್ ಎಂದೇ ಬರೆದಿದೆ. ಅದನ್ನು ಸರಿಯಾಗಿ ನೋಡದೆಯೇ ವಿಮಾನ ನಿಲ್ದಾಣಕ್ಕೆ ಹೋಗಿದ್ದೀರಿ ಎಂದು ಜನರು ಉಜ್ವಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಇದಾದ ಕೆಲ ಸಮಯದ ನಂತರ ಉಜ್ವಲ್ ಅವರು ಮತ್ತೊಂದು ವಿಡಿಯೊ ಹಾಕಿದ್ದು, ಆಕಾಶ ಏರ್‌ಲೈನ್‌ ಹಾಗೂ ಅವರು ಟಿಕೆಟ್ ಬುಕ್ ಮಾಡಿದ್ದ GoIbibo ವೆಬ್ ಸೈಟ್ ತಮ್ಮ ಕ್ಷಮೆ ಯಾಚಿಸಿವೆ ಎಂದು ತಿಳಿಸಿದ್ದಾರೆ.

Continue Reading

Latest

Sindhuri Vs Roopa: ರೋಹಿಣಿ ಸಿಂಧೂರಿ- ಸಾ.ರಾ. ಮಹೇಶ್‌ ಕದನದಲ್ಲಿ ಪೋಲಾಯಿತು ಕೋಟ್ಯಂತರ ರೂ.!

ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ ಮಹೇಶ್‌ ನಡುವಿನ ಕದನದಿಂದಾಗಿ ಉಂಟಾಗಿರುವ ʼಬಟ್ಟೆ ಬ್ಯಾಗ್​ ಹಗರಣʼ ಕುರಿತು ವಿಸ್ತಾರ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ಕೋಟ್ಯಂತರ ಹಣ ಪೋಲಾಗಿರುವುದು ಕಂಡುಬಂದಿದೆ.

VISTARANEWS.COM


on

Edited by

rohini sindhuri
Koo

ಮೈಸೂರು: ಇಬ್ಬರು ಪ್ರತಿಷ್ಠಿತರ ನಡುವಿನ ಕದನದಿಂದಾಗಿ ಬರೋಬ್ಬರಿ 6.18 ಕೋಟಿ ರೂ.ಗಳಷ್ಟು ಸಾರ್ವಜನಿಕ ಹಣ ಪೋಲಾಗಿದೆ. ರೋಹಿಣಿ ಸಿಂಧೂರಿ- ರೂಪಾ ಕದನದಲ್ಲಿ ಇದು ಕೂಡ ಪ್ರಸ್ತಾಪವಾಗಿತ್ತು.

ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ ಮಹೇಶ್‌ ನಡುವಿನ ಕದನದಿಂದಾಗಿ ಉಂಟಾಗಿರುವ ʼಬಟ್ಟೆ ಬ್ಯಾಗ್​ ಹಗರಣʼ ಕುರಿತು ವಿಸ್ತಾರ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ.

ರೋಹಿಣಿ ಸಿಂಧೂರಿ ಮೈಸೂರು ಡಿಸಿ ಆಗಿದ್ದಾಗ 14.71 ಲಕ್ಷ ಬಟ್ಟೆ ಬ್ಯಾಗ್​ಗಳನ್ನು ಖರೀದಿಸಿದ್ದರು. ಇದಕ್ಕಾಗಿ 6.18 ಕೋಟಿ ರೂ. ಪಾವತಿಸಿದ್ದರು. ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದರು. ಒಂದು ಬ್ಯಾಗ್​ಗೆ 8-10 ರೂ. ಆಗುತ್ತದೆ. ಆದರೆ ರೋಹಿಣಿ ಸಿಂಧೂರಿ 52 ರೂ. ನೀಡಿದ್ದಾರೆ. ಇದಕ್ಕೆ 5 ಕೋಟಿ ರೂ. ಕಿಕ್​ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದರು.

ಇದರಿಂದಾಗಿ ಒಂದೂವರೆ ವರ್ಷದಿಂದಲೂ ಬಟ್ಟೆ ಬ್ಯಾಗ್​ಗಳು ಇಟ್ಟಲ್ಲೇ ಕೊಳೆಯುತ್ತಿವೆ. ಚಿನ್ನಗಿರಿ ಕೊಪ್ಪಲು ಸಮುದಾಯ ಭವನದಲ್ಲಿ ಬ್ಯಾಗ್​ಗಳ ರಾಶಿ ಬಿದ್ದಿದ್ದು, ಬಂಡಲ್ ಕೂಡ ಓಪನ್ ಮಾಡದೆ ಜಿಲ್ಲಾಡಳಿತ ಅದನ್ನು ಹಾಗೇ ಬಿಟ್ಟಿದೆ. ಅಮೂಲ್ಯವಾದ ಸಾರ್ವಜನಿಕರ ಹಣ ಕಣ್ಣೆದುರೇ ಕಸವಾಗುತ್ತಿದೆ. ಈ ಪ್ರಕರಣದ ತನಿಖೆಗೆ ಸರ್ಕಾರ ಅನುಮತಿ ತಿರಸ್ಕರಿಸಿದೆ ಎಂದು ಈಗ ಐಪಿಎಸ್​ ಅಧಿಕಾರಿ ಡಿ. ರೂಪ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: Sindhuri Vs Roopa : ರೂಪಾ ಹೇಳಿದ, ರೋಹಿಣಿ ಸಿಂಧೂರಿ ಕಟ್ಟಿಸುತ್ತಿರುವ ಮನೆ ಹೇಗಿದೆ? ನೀವೇ ನೋಡಿ

Continue Reading

Latest

Shivaraj kumar: ಚಿತ್ರರಂಗಕ್ಕೆ ಬಂದು 37 ವರ್ಷ: ಅಭಿಮಾನಿಗಳಿಗೆ ಪತ್ರ ಬರೆದ ಶಿವಣ್ಣ

ಕನ್ನಡ ಚಿತ್ರೋದ್ಯಮಕ್ಕೆ ಬಂದು 37 ವರ್ಷಗಳು ಆಗಿರುವ ಹಿನ್ನೆಲೆಯಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಅಭಿಮಾನಿಗಳಿಗೆ ಧನ್ಯವಾದದ ಪತ್ರ ಬರೆದಿದ್ದಾರೆ.

VISTARANEWS.COM


on

Edited by

Shivaraj Kumar Birthday
Koo

ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ 37 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ನಟ ಶಿವರಾಜ್‌ ಕುಮಾರ್‌ ಅವರು ಅಭಿಮಾನಿಗಳಿಗೂ ಕನ್ನಡ ಚಿತ್ರರಸಿಕರಿಗೂ ಧನ್ಯವಾದ ತಿಳಿಸಿದ್ದಾರೆ.

ತಮ್ಮ ಮೊದಲ ಚಿತ್ರ “ಆನಂದ್‌ ನೆನಪಿಸಿಕೊಂಡು ಅಭಿಮಾನಿಗಳಿಗೆ ಶಿವಣ್ಣ ಪತ್ರ ಬರೆದಿದ್ದಾರೆ. ʼʼನಮ್ಮ ಕನ್ನಡ ಚಿತ್ರರಂಗಕ್ಕೆ ನಾನು ಪಾದಾರ್ಪಣೆ ಮಾಡಿ ಇಂದಿಗೆ (19-02-2023) 37 ವರ್ಷ ಆಗಿದೆ. ಆನಂದ್‌ ಚಿತ್ರದ ಮೊದಲ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ! ಆನಂದ್‌ ಇಂದ ವೇದವರೆಗೂ ನೀವು ಕೊಟ್ಟ ಪ್ರೀತಿ ಬೆಲೆ ಕಟ್ಟಲಾಗದ್ದು. ನನ್ನನ್ನು ನೀವು ಕೇವಲ ಒಬ್ಬ ನಟನಾಗಿ, ಸ್ಟಾರ್‌ ಆಗಿ ಮಾತ್ರವಲ್ಲದೆ ನಿಮ್ಮ ಮನೆಮಗನಾಗಿ ಬೆಳೆಸಿದ್ದೀರಿ. ದೇವರ ಸ್ವರೂಪವಾಗಿರುವ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ, ಹಿರಿಯರಿಗೆ, ಕಿರಿಯರಿಗೆ, ಸಹೋದ್ಯೋಗಿಗಳಿಗೆ ಹಾಗೂ ನನ್ನ ಇಡೀ ಕುಟುಂಬಕ್ಕೆ ಅನಂತ ವಂದನೆಗಳುʼʼ ಎಂದು ಶಿವಣ್ಣ ಟ್ವೀಟ್‌ ಮಾಡಿದ್ದಾರೆ.

1962ರಲ್ಲಿ ಜನಿಸಿದ ಶಿವರಾಜ್‌ ಕುಮಾರ್‌ 1986ರಲ್ಲಿ ಅನಂದ್‌ ಚಿತ್ರದ ಮೂಲಕ ಸಿನಿಮಾ ನಟನೆಗೆ ಕಾಲಿಟ್ಟಿದ್ದರು. ಆನಂದ್‌ ಸೇರಿದಂತೆ ಅವರ ಮೂರೂ ಆರಂಭಿಕ ಚಿತ್ರಗಳು (ಆನಂದ್‌, ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಶತದಿನ ಪ್ರದರ್ಶನ ಕಂಡಿದ್ದವು. ಹೀಗಾಗಿ ಅವರು ಹ್ಯಾಟ್ರಿಕ್‌ ಸ್ಟಾರ್‌ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ʼವೇದʼ ಶಿವಣ್ಣನ 125ನೇ ಚಿತ್ರವಾಗಿದೆ.

ಇದನ್ನೂ ಓದಿ: Shivarajkumar: ಶಿವಣ್ಣ ಅಭಿನಯದ ‘ವೇದ’ ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್

Continue Reading

Latest

NIA Raid: 70 ಕಡೆಗಳಲ್ಲಿ ಎನ್‌ಐಎ ಏಕಕಾಲಕ್ಕೆ ದಾಳಿ

ಪಂಜಾಬ್‌, ಹರ್ಯಾಣ, ರಾಜಸ್ಥಾನ, ದೆಹಲಿ, ಚಂಡೀಗಢ, ಉತ್ತರಪ್ರದೇಶ, ಗುಜರಾತ್‌ ಜಾಗೂ ಮಧ್ಯಪ್ರದೇಶ ರಾಜ್ಯಗಳ ಸುಮಾರು 70 ಕಡೆಗಳಲ್ಲಿ ಎನ್‌ಐಎ ದಾಳಿ (NIA Raid) ನಡೆಸಿದೆ.

VISTARANEWS.COM


on

Edited by

NIA Detains 3 PFI Members
Koo

ನವ ದೆಹಲಿ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಹಲವು ರಾಜ್ಯಗಳಲ್ಲಿ ಮಾಫಿಯಾ ತಂಡಗಳ ನೆಲೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಪಂಜಾಬ್‌, ಹರ್ಯಾಣ, ರಾಜಸ್ಥಾನ, ದೆಹಲಿ, ಚಂಡೀಗಢ, ಉತ್ತರಪ್ರದೇಶ, ಗುಜರಾತ್‌ ಜಾಗೂ ಮಧ್ಯಪ್ರದೇಶ ರಾಜ್ಯಗಳ ಸುಮಾರು 70 ಕಡೆಗಳಲ್ಲಿ ಎನ್‌ಐಎ ದಾಳಿ ನಡೆಸಿದೆ. ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿರುವ ಕ್ರಿಮಿನಲ್‌ ಸಂಘಸಂಸ್ಥೆಗಳ ಸದಸ್ಯರ ನೆಲೆಗಳ ಮೇಲೆ ಈ ದಾಳಿ ನಡೆದಿದೆ ಎಂದು ಗೊತ್ತಾಗಿದೆ. ಕೆಲವು ಕಡೆ ಪಿಎಫ್‌ಐ ಸದಸ್ಯರ ಮನೆಗಳ ಮೇಲೂ ದಾಳಿ ಮಾಡಲಾಗಿದೆ. ಇದು ಇಂಥ ನಾಲ್ಕನೇ ವ್ಯಾಪಕ ದಾಳಿಯಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: NIA Raid: ಕೊಯಮತ್ತೂರ್​ ಸ್ಫೋಟದ ತನಿಖೆ ಚುರುಕು; ಕರ್ನಾಟಕ ಸೇರಿ 3 ರಾಜ್ಯಗಳ 60 ಪ್ರದೇಶಗಳಲ್ಲಿ ಎನ್​ಐಎ ದಾಳಿ

Continue Reading
Advertisement
CM Basavaraja Bommai Science gallery
ಕರ್ನಾಟಕ27 seconds ago

Panchamasali Reservation : ಮಾ. 24ರಂದು ಪಂಚಮಸಾಲಿ ಸಮುದಾಯಕ್ಕೆ GOOD NEWS ಕೊಡ್ತಾರಂತೆ ಸಿಎಂ ಬೊಮ್ಮಾಯಿ

Donald Trump failed to disclose 17 gifts from India, including Narendra Modi Gift
ದೇಶ6 mins ago

Donald Trump Gifts: ಮೋದಿ ಕೊಟ್ಟಿದ್ದು ಸೇರಿ 2 ಕೋಟಿ ರೂ. ಮೌಲ್ಯದ ಉಡುಗೊರೆಗಳ ಮಾಹಿತಿ ನೀಡದ ಟ್ರಂಪ್‌

Actress Haripriya gave good news at last; Didn't say the name though!
ಸಿನಿಮಾ11 mins ago

Sandalwood Actor : ಕೊನೆಗೂ ಗುಡ್​ ನ್ಯೂಸ್ ಕೊಟ್ಟ ನಟಿ ಹರಿಪ್ರಿಯಾ; ಆದರೂ ಹೆಸರು ಹೇಳಲಿಲ್ಲ!

Man killed in attack with deadly weapons near Kaveripatnam
ಕರ್ನಾಟಕ22 mins ago

Murder Case: ಕಾವೇರಿಪಟ್ಟಣಂ ಬಳಿ ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನ ಕೊಲೆ

smartphone
ವಾಣಿಜ್ಯ29 mins ago

Smartphone Export : ಭಾರತದಿಂದ 2 ತಿಂಗಳಲ್ಲಿ ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು

vistara-top-10-news-siddaramaiah-constituency-confusion-continues-to-congress-first-list-on-wednesday-and-more-news
ಕರ್ನಾಟಕ35 mins ago

ವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಕೇಂದ್ರ ಸರ್ಕಾರಕ್ಕೆ 155 ಲಕ್ಷ ಕೋಟಿ ರೂ. ಸಾಲದವರೆಗಿನ ಪ್ರಮುಖ ಸುದ್ದಿಗಳಿವು

Jio True 5G service launched in 41 cities including KGF's robertsonpet
ಕರ್ನಾಟಕ43 mins ago

ಕೆಜಿಎಫ್‌ನ ರಾಬರ್ಟಸನ್ ಪೇಟೆ ಸೇರಿ 41 ನಗರಗಳಲ್ಲಿ Jio True 5G ಸೇವೆ ಶುರು

Had Kohli not appealed, he would not have applied for the post of head coach
ಕ್ರಿಕೆಟ್57 mins ago

Team India : ಕೊಹ್ಲಿ ಮನವಿ ಮಾಡದೇ ಹೋಗಿದ್ದರೆ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ​

Man Dips Leafy Vegetables In Chemical Solution, Here is a video
ದೇಶ1 hour ago

Viral Video: ನೀವು ತಿನ್ನುವ ‘ತಾಜಾ’ ತರಕಾರಿ ರಾಸಾಯನಿಕಯುಕ್ತ, ಹೇಗೆ ಅಂತೀರಾ? ಇಲ್ಲಿದೆ ವಿಡಿಯೊ

ಸಿನಿಮಾ1 hour ago

Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ16 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ7 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ8 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!