Reationship: ನಿಮ್ಮ ಹುಡುಗನಲ್ಲಿ ಈ 10 ಗುಣಗಳಿದ್ದರೆ, ಕಣ್ಮುಚ್ಚಿ ಮದುವೆಯಾಗಿಬಿಡಿ! - Vistara News

ಲೈಫ್‌ಸ್ಟೈಲ್

Reationship: ನಿಮ್ಮ ಹುಡುಗನಲ್ಲಿ ಈ 10 ಗುಣಗಳಿದ್ದರೆ, ಕಣ್ಮುಚ್ಚಿ ಮದುವೆಯಾಗಿಬಿಡಿ!

ಪ್ರೀತಿಸಿದ ಹುಡುಗ ಬಾಳಿನುದ್ದಕ್ಕೂ ಜತೆಯಾಗಿ ಇರುತ್ತಾನಾ ಇಲ್ಲವಾ ಎಂಬುದು ಹುಡುಗಿಯರನ್ನು ಕಾಡುವ ಜಟಿಲ ಪ್ರಶ್ನೆ. ಅವನಲ್ಲಿ ಈ ಕೆಳಗಿನ ಹತ್ತು ಗುಣಗಳಿವೆಯಾ? ನೋಡಿ.

VISTARANEWS.COM


on

relationship
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರೀತಿಸಿಯಾಗಿದೆ. ಆದರೆ, ಬಹಳ ಸಾರಿ ಪ್ರೀತಿಯಲ್ಲಿದ್ದಾಗ ನಮ್ಮನ್ನು ಪ್ರೀತಿಸಿದವರ ನಿಜವಾದ ಗುಣಗಳು ಗೊತ್ತೇ ಆಗುವುದಿಲ್ಲ. ಪ್ರೀತಿಯಲ್ಲಿದ್ದಾಗ ಎಲ್ಲವೂ ಚಂದವೇ ಕಾಣಿಸುತ್ತದೆ. ಅಥವಾ ಸುಮ್ಮನೆ ಆಕರ್ಷಣೆಯನ್ನು ಪ್ರೀತಿಯೆಡೆಗೆ ಕೊಂಡೊಯ್ಯುವ ಹಂತದಲ್ಲಿದ್ದಾಗ, ಮುಂದುವರಿಯಲೋ ಬೇಡವೋ ಎಂಬ ಗೊಂದಲಗಳಿರುತ್ತದೆ. ಆದರೆ, ಜೀವನದಲ್ಲಿ ಜೊತೆಯಾಗಿರಬೇಕೆಂಬ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಹೊತ್ತಿಗೆ, ಯಾರೇ ಆಗಿರಲಿ, ತಮ್ಮ ಹುಡುಗನ ಕೆಲವು ಗುಣಗಳನ್ನಾದರೂ ಅರಿತಿರಬೇಕು. ನಿಮ್ಮ ಹುಡುಗ ಈ ಹತ್ತು ಗುಣಗಳನ್ನೇನಾದರೂ ಹೊಂದಿದ್ದಾನೆ ಅಂದರೆ, ಖಂಡಿತ ನೀವು ಆತನನ್ನು ಕಣ್ಮುಚ್ಚಿ ಮದುವೆಯಾಗಬಹುದು.

೧. ನಿಮ್ಮ ಹುಡುಗ ನೀವು ಬೆಳಗ್ಗೆ ಹಾಸಿಗೆಯಿಂದ ಕಣ್ಬಿಡುವ ಹೊತ್ತಿನಲ್ಲಿ ಕೈಲೊಂದು ಚಹಾ ಹಿಡಿದು ನಿಂತಿದ್ದರೆ ಎಷ್ಟು ಖುಷಿಯಾಗಬಹುದು ಅಲ್ಲವೇ! ಇಂಥದ್ದೊಂದು ಗಳಿಗೆ ಯಾರಿಗೆ ಬೇಡ ಹೇಳಿ. ನಿಮ್ಮ ಹುಡುಗ ಅಪರೂಪಕ್ಕೊಮ್ಮೆಯಾದರೂ ಹೀಗೆ ಮಾಡುವ ಮನಸ್ಸುಳ್ಳವನಾಗಿದ್ದರೆ ಕಣ್ಮುಚ್ಚಿ ಮದುವೆಯಾಗಬಹುದು.

೨. ನೀವು ಹೇಳದೆಯೂ, ನಿಮ್ಮ ಮುಖ ನೋಡಿಯೇ ನೀವ್ಯಾವುದೋ ವಿಚಾರಕ್ಕೆ ಬೇಸರ ಮಾಡಿಕೊಂಡಿದ್ದೀರಿ ಎಂದು ಅವನಿಗೆ ಅರ್ಥವಾದರೆ, ಹಾಗೂ ನಿಮ್ಮ ಮೇಲೆ ಕಾಳಜಿ ತೋರಿದರೆ ಆತನಿಗೆ ನಿಜವಾಗಿಯೂ ನಿಮ್ಮ ಮೇಲೆ ಪ್ರೀತಿ ಇದೆ ಎಂದರ್ಥ. ಅಂಥವನನ್ನು ಧಾರಾಳವಾಗಿ ಸ್ವಂತ ಮಾಡಿಕೊಳ್ಳಿ.

೩. ದೈಹಿಕವಾಗಿ ಪ್ರೀತಿಸುವುದು ಎಲ್ಲರೂ ಮಾಡಬಹುದಾದ ವಿಚಾರವೇ ಇರಬಹುದು. ಆದರೆ ನಿಮ್ಮ ಹುಡುಗ ಭಾವನಾತ್ಮಕ ಮನಸ್ಸಿನವನಾ ಗಮನಿಸಿ.

೪. ಇಬ್ಬರಿಗೂ ಒಂದೇ ದೃಷ್ಟಿಕೋನ ಇದೆಯಾ ಎಂಬುದನ್ನು ಯೋಚಿಸಿ. ಬದುಕಿನ ಬಗ್ಗೆ, ಕನಸುಗಳ ಬಗ್ಗೆ, ವಿಚಾರಗಳ ಬಗ್ಗೆ ಇಬ್ಬರ ದೃಷ್ಟಿಕೋನ ಒಂದೇ ಆಗಿದ್ದಲ್ಲಿ, ಅಥವಾ ಬಹುತೇಕ ಹೊಂದಿಕೆಯಾಗುತ್ತಿದ್ದಲ್ಲಿ ಬದುಕಿನಲ್ಲಿ ಒಬ್ಬರಿಗೊಬ್ಬರು ನಿರಾಸೆ ಮಾಡಿಕೊಳ್ಳುವುದಿಲ್ಲ.

೫. ಎಲ್ಲಿಗೆ ಹೋಗುತ್ತಿದ್ದರೂ ಆತನ ಜೊತೆಗೇ ನೀವು ಹೋಗಲು ಇಚ್ಛಿಸುತ್ತೀರೆಂದಾದಲ್ಲಿ, ಆತನ ಜೊತೆಗೆ ಎಂತಹ ಜಾಗಕ್ಕೆ ಹೋಗುವುದಾದರೂ ಕಂಫರ್ಟ್‌ ಫೀಲ್‌ ಅನುಭವಿಸುತ್ತೀರೆಂದಾದಲ್ಲಿ ಆತ ನಿಮ್ಮವನೇ.

೬. ನೀವು ನಿಮ್ಮ ಆಸಕ್ತಿಯ ವಿಚಾರಗಳನ್ನು, ನಿಮ್ಮ ಕನಸುಗಳನ್ನು, ನಿಮ್ಮ ಜೀವನದ ಗುರಿಗಳನ್ನು, ಮಹತ್ವಾಕಾಂಕ್ಷೆಗಳನ್ನು ನಿಮ್ಮ ಬೇಸರ ಹತಾಶೆಗಳನ್ನು ಆತನ ಜೊತೆಗೆ ನಿರಾಳವಾಗಿ ಹಂಚಿಕೊಳ್ಳುವ ವಾತಾವರಣ ನಿಮ್ಮಿಬ್ಬರ ನಡುವೆ ಇದ್ದರೆ, ಅದಕ್ಕೆ ಆತ ನಿಮಗೆ ಬೇಕಾದ ಸಮಯ ನೀಡುತ್ತಿದ್ದರೆ ಆತ ಒಳ್ಳೆಯ ಆಯ್ಕೆಯೇ.

ಇದನ್ನೂ ಓದಿ: ಪ್ರೀತಿಯಲ್ಲಿ ಬೀಳೋರಿಗೆ ೮ ಗುಟ್ಟುಗಳು!

೭. ಬದುಕಿನ ಗುರಿಗಳೇನೇ ಇರಲಿ. ಕೆಲಸ, ಗಡಿಬಿಡಿ, ಒತ್ತಡಗಳೇನೇ ಇರಲಿ. ಆತನ ಜೊತೆಗೆ ನೀವು ಬೇಕಾಬಿಟ್ಟಿ ಹೇಗೆ ಬೇಕೋ ಹಾಗೆ ವರ್ತಿಸಲು ಸಾಧ್ಯವಿದೆ ಎಂದಾದಲ್ಲಿ, ಮಕ್ಕಳಂತೆ ತುಂಟತನ ಮಾಡಿಕೊಂಡು ಕಾಲೆಳೆಯುತ್ತಾ ತಮಾಷೆ ಮಾಡಬಹುದಾದಲ್ಲಿ, ಅದನ್ನು ಆತ ಅಷ್ಟೇ ತಮಾಷೆಯಾಗಿಯೇ ತೆಗೆದುಕೊಳ್ಳುತ್ತಾನೆ ಎಂದಾದಲ್ಲಿ ನಿಮ್ಮ ನಡುವೆ ಆರೋಗ್ಯಕರ ಸಂಬಂಧ ಇದೆ ಎಂದರ್ಥ. ಇಂತಹ ಜೋಡಿ ನೀವಾಗಿದ್ದರೆ ಅದು ನಿಮ್ಮ ಅದೃಷ್ಟವೇ ಸರಿ.

೮. ನೀವು ಆತನ ಭೇಟಿಯಾಗಿ ಒಂದೆರಡು ಗಂಟೆಯಷ್ಟೇ ಕಳೆದಿದ್ದರೂ ನೀವವನನ್ನು ಮಿಸ್‌ ಮಾಡಿಕೊಳ್ಳುತ್ತೀರೆಂದಾದಲ್ಲಿ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದೀರಿ ಎಂದರ್ಥ. ಹಾಗಾಗಿ ಇಂಥ ಸಂದರ್ಭ ಪ್ರೀತಿಗೆ ಮೋಸ ಮಾಡಬೇಡಿ.

೯. ಕುಟುಂಬವಾಗಿ ನಿರ್ವಹಣೆಯ ವಿಚಾರ ಬಂದಾಗ ಅಂತಿಮವಾಗಿ ಆಗಬೇಕಿದ್ದೇನು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿದೆಯಾ? ಆ ಬಗ್ಗೆ ಆತನ ಜೊತೆಗೆ ಮನಬಿಚ್ಚಿ ಮಾತಾಡಬಲ್ಲಿರಾ? ಹಾಗಿದ್ದಲ್ಲಿ ನಿಮ್ಮ ಜವಾಬ್ಧಾರಿಗಳ ಬಗ್ಗೆ ನಿಮಗೆ ಅರಿವಿದೆ ಹಾಗೂ ಅದಕ್ಕೆ ಆತನ ಸಹಾಯವೂ ಇದೆ ಎಂಬುದು ಅರಿವಾಗುತ್ತದೆ. ಇಬ್ಬರ ನಡುವೆ ಇಗೋ ಇಂತಹ ವಿಚಾರಕ್ಕೆ ಅಡ್ಡ ಬರದಿದ್ದರೆ ಅದು ಉತ್ತಮ ಸಂಬಂಧವಾದೀತು.

೧೦. ಆತನ ಜೊತೆಗೆ ಭವಿಷ್ಯದಲ್ಲಿ ಫ್ಯಾಮಿಲಿ, ಮಕ್ಕಳು ಎಂದೆಲ್ಲ ಕಲ್ಪನೆ ಮಾಡಿಕೊಳ್ಳಬಲ್ಲಿರಿ ಎಂದರೆ ಮುಂದುವರಿಯಿರಿ. ಹೀಗೆ ಕಲ್ಪಿಸಿಕೊಳ್ಳುವುದು ಎಂದರೆ, ನೀವು ನಿಜಕ್ಕೂ ಆತನ ಜೊತೆಗೆ ಮಾನಸಿಕವಾಗಿ ತುಂಬ ಹತ್ತಿರವಾಗಿದ್ದೀರಿ ಎಂದೇ ಅರ್ಥ. ಹಾಗಿದ್ದಲ್ಲಿ ಮಾತ್ರ ಆತನನ್ನು ನಿಮ್ಮ ಮಗುವಿನ ತಂದೆಯ ಸ್ಥಾನದಲ್ಲಿಟ್ಟು ನೋಡಲು ನಿಮ್ಮಿಂದ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಪ್ರೇಯಸಿಗಾಗಿ ಲಿಂಗವನ್ನೇ ಬದಲಿಸುತ್ತಿರುವ ಉತ್ತರ ಪ್ರದೇಶದ ಮಹಿಳೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Healthcare Tips For Women: 30 ವರ್ಷದ ಬಳಿಕ ಮಹಿಳೆಯರು ಮಾಡಿಸಿಕೊಳ್ಳಲೇಬೇಕಾದ ಆರೋಗ್ಯ ಪರೀಕ್ಷೆಗಳಿವು

ಇತ್ತೀಚಿನ ದಿನಗಳಲ್ಲಿ ಪೌಷ್ಟಿಕತೆ ಮತ್ತು ಫಿಟ್‌ನೆಸ್‌ ಬಗ್ಗೆ ನಗರ ಪ್ರದೇಶದ ಒಂದಿಷ್ಟು ಮಹಿಳೆಯರು ಗಮನ ನೀಡುತ್ತಿದ್ದಾರೆ. ಆದರೆ ಮಹಿಳೆಯರ ಸ್ವಾಸ್ಥ್ಯ ರಕ್ಷಣೆಗೆ ಇದಿಷ್ಟೇ ಸಾಲದು. ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಒಳ್ಳೆಯದು. ಯಾವುದವು? ಈ ಬಗ್ಗೆ (Healthcare tips for women) ಇಲ್ಲಿದೆ ಮಾಹಿತಿ.

VISTARANEWS.COM


on

Healthcare Tips For Women
Koo

ಕುಟುಂಬದ ಎಲ್ಲರ ದೇಖರೇಖಿ ಮಾಡುವ ಭರದಲ್ಲಿ, ವೃತ್ತಿಯ ಅಥವಾ ಉದ್ಯೋಗದ ಒತ್ತಡಗಳನ್ನು ಎದುರಿಸುವ ನಡುವಲ್ಲಿ, ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ಹೋಗುವುದು ಕಡಿಮೆ. ಆದರೆ ವೈಯಕ್ತಿಯ ಸ್ವಾಸ್ಥ್ಯ ಎನ್ನುವ ಕಲ್ಪನೆ ಇತ್ತೀಚೆಗೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಫಿಟ್‌ನೆಟ್‌ ಮತ್ತು ಸತ್ವಭರಿತ ಆಹಾರದ ಸೇವನೆಯತ್ತ ನಗರ ಪ್ರದೇಶಗಳ ಒಂದಿಷ್ಟು ಮಹಿಳೆಯರು ಮನಮಾಡಿದ್ದಾರೆ. ಇದಿಷ್ಟೇ ಅಲ್ಲ, 30ರ ವಯೋಮಾನದ ನಂತರ ಮಹಿಳೆಯರು (Healthcare tips for women) ತಮ್ಮ ದೇಹಾರೋಗ್ಯದ ಬಗ್ಗೆ ಹಲವು ರೀತಿಯಲ್ಲಿ ಗಮನ ನೀಡಬೇಕಾಗುತ್ತದೆ. ಇದಕ್ಕೆ ನೆರವಾಗುವಂಥ ಒಂದಿಷ್ಟು ವೈದ್ಯಕೀಯ ಪರೀಕ್ಷೆಗಳನ್ನೂ ಕಾಲಕಾಲಕ್ಕೆ ಮಾಡಿಸಬೇಕಾಗುತ್ತದೆ. ಯಾವುವು ಆ ಪರೀಕ್ಷೆಗಳು? ಅದರಿಂದ ಏನಾಗುತ್ತದೆ?

HPV and Pap test

ಎಚ್‌ಪಿವಿ ಮತ್ತು ಪ್ಯಾಪ್‌ ಟೆಸ್ಟ್‌

ಗರ್ಭ ಕೊರಳಿನ ಕ್ಯಾನ್ಸರ್‌ ಪತ್ತೆಗೆ ಅಗತ್ಯವಾದ ಪರೀಕ್ಷೆಗಳಿವು. 30 ವರ್ಷದ ನಂತರ ಮಹಿಳೆಯರು ಪ್ರತಿ ಐದು ವರ್ಷಗಳಿಗೊಮ್ಮೆ ಈ ಪರೀಕ್ಷೆಗಳನ್ನು ಮಾಡಿಸಬೇಕು. ಇದರಿಂದ ಗರ್ಭಕೊರಳಿನ ಕೋಶಗಳಲ್ಲಿ ಯಾವುದಾದರೂ ಅಸಾಮಾನ್ಯ ಬೆಳವಣಿಗೆಗಳಿದ್ದರೆ ಮುಂಚಿತವಾಗಿಯೇ ಪತ್ತೆಯಾಗುತ್ತದೆ. ಇಂಥ ಕ್ಯಾನ್ಸರ್‌ಕಾರಕ ಕೋಶಗಳ ಇರುವಿಕೆ ಪ್ರಾರಂಭದಲ್ಲೇ ಪತ್ತೆಯಾದರೆ ಚಿಕಿತ್ಸೆಯನ್ನೂ ಪರಿಣಾಮಕಾರಿಯಾಗಿ ನೀಡುವುದಕ್ಕೆ, ಪೂರ್ಣ ಗುಣವಾಗುವುದಕ್ಕೆ ಸಾಧ್ಯವಿದೆ. ಎಚ್‌ಪಿವಿ ಪರೀಕ್ಷೆಯಿಂದ ಕ್ಯಾನ್ಸರ್‌ಗೆ ಕಾರಣವಾಗುವ ಹ್ಯೂಮನ್‌ ಪ್ಯಾಪಿಲೋಮ ವೈರಸ್‌ನ ಇರುವಿಕೆ ಪತ್ತೆ ಮಾಡಬಹುದು.

Mammogram

ಮ್ಯಾಮೊಗ್ರಾಮ್‌

ಸ್ತನ ಕ್ಯಾನ್ಸರ್‌ನ ಪತ್ತೆಗೆ ಈ ಪರೀಕ್ಷೆಯನ್ನು ಮಾಡಲಾಗುತ್ತದೆ. 30ರ ನಂತರ ಸ್ತನ ಪರೀಕ್ಷೆಗಳನ್ನು ಮಾಡಿಕೊಳ್ಳುವುದು ಅಗತ್ಯ. 40ರ ನಂತರ ಎರಡು ವರ್ಷಕ್ಕೊಮ್ಮೆ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳುವುದು ಸೂಕ್ತ. ಈ ಪರೀಕ್ಷೆಯಲ್ಲಿ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್‌ ಕೋಶಗಳನ್ನು ಪತ್ತೆ ಮಾಡಬಹುದು. ಇದರಿಂದ ಚಿಕಿತ್ಸೆಯೂ ಪರಿಣಾಮಕಾರಿಯಾಗಿ, ಬದುಕುಳಿಯುವ ಪ್ರಮಾಣವೂ ಹೆಚ್ಚುತ್ತದೆ.

Bone Health In Winter

ಮೂಳೆ ಸಾಂದ್ರತೆ ಪರೀಕ್ಷೆ

ವಯಸ್ಸು ಹೆಚ್ಚುತ್ತಿದ್ದಂತೆ ಮಹಿಳೆಯರನ್ನು ಕಾಡುವ ಹಲವು ತೊಂದರೆಗಳ ಪೈಕಿ ಆಸ್ಟಿಯೊಪೊರೊಸಿಸ್‌ ಸಹ ಒಂದು. ಈ ಕಾಯಿಲೆಯಲ್ಲಿ, ಮೂಳೆಗಳು ಅಲ್ಲಲ್ಲಿ ಟೊಳ್ಳಾಗಿ ಮುರಿಯುವ ಸಾಧ್ಯತೆ ಉಂಟಾಗುತ್ತದೆ. ಮೂಳೆ ಸಾಂದ್ರತೆ ಪರೀಕ್ಷೆ ಅಥವಾ ಡೆಕ್ಸಾ ಸ್ಕ್ಯಾನ್‌ನಿಂದ ಮೂಳೆಗಳ ಸಾಂದ್ರತೆ ಎಲ್ಲಾದರೂ ಕಡಿಮೆಯಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು.

Drinks That Control Blood pressure

ಬಿಪಿ ಪರೀಕ್ಷೆ

ಒತ್ತಡದ ಜೀವನದಿಂದಾಗಿ ರಕ್ತದ ಏರೊತ್ತಡದ ಸಮಸ್ಯೆ 30ರ ನಂತರವೇ ಕಾಣಬರುತ್ತಿದೆ. ಇದರಿಂದ ಹೃದಯದ ತೊಂದರೆಗಳು, ಪಾರ್ಶ್ವವಾಯುವಿನಂಥ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಹಾಗಾಗಿ ಸಮಸ್ಯೆಯ ಆರಂಭವನ್ನು ಗುರುತಿಸಿದರೆ, ಅದನ್ನು ಹತೋಟಿಯಲ್ಲಿ ತರುವುದಕ್ಕೆ ಬೇಕಾದ ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಲು ಅನುಕೂಲ

Image Of Diabetes Control

ಮಧುಮೇಹ ಪರೀಕ್ಷೆ

ಸಕ್ಕರೆ ಕಾಯಿಲೆಯಂತೂ ಮಕ್ಕಳಾದಿಯಾಗಿ ಎಲ್ಲ ವಯೋಮಾನದ ಜನರನ್ನು ಬಾಧಿಸುತ್ತಿದೆ. 30ರ ನಂತರ ಮಹಿಳೆಯರು ಈ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಿದ್ದರೆ ಮಧುಮೇಹ-ಪೂರ್ವ ‍ಸ್ಥಿತಿಯಲ್ಲೇ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಡಯಾಬಿಟಿಸ್‌ ರಿವರ್ಸಲ್‌ ಎನ್ನುವುದು ಈಗಿನ ಹೊಸ ಸಾಧ್ಯತೆ.

ಕೊಲೆಸ್ಟ್ರಾಲ್‌ ತಪಾಸಣೆ

ಲಿಪಿಡ್‌ ಪರೀಕ್ಷೆ ಅಥವಾ ಕೊಲೆಸ್ಟ್ರಾಲ್‌ ಪರೀಕ್ಷೆಯೂ 30 ನಂತರ ಬೇಕಾಗುತ್ತದೆ. ದೇಹದ ಚಯಾಪಚಯ ಸರಿಯಾಗಿ ಇಲ್ಲದಿದ್ದಾಗ ಬಾಧಿಸಬಹುದಾದ ತೊಂದರೆಗಳಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಳವೂ ಒಂದು. ಇದನ್ನೂ ಪ್ರಾರಂಭದಲ್ಲಿ ಪತ್ತೆ ಮಾಡಿದರೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು, ವೈದ್ಯರ ಸಲಹೆಯ ಮೇಲೆಗೆ ಚಿಕಿತ್ಸೆಯನ್ನೂ ತೆಗೆದುಕೊಂಡರೆ ಹೃದಯವನ್ನು ಜೋಪಾನ ಮಾಡಿಕೊಳ್ಳಬಹುದು.

ಥೈರಾಯ್ಡ್‌ ಪರೀಕ್ಷೆ

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಾಣಬರುತ್ತಿರುವ ಸಮಸ್ಯೆಯಿದು. ಕೆಲವೊಮ್ಮ ಅಟೊಇಮ್ಯೂನ್‌ ಕಾಯಿಲೆಗಳೂ ಇದಕ್ಕೆ ಕಾರಣವಾಗಿರಬಹುದು. ಆದರೆ ಥೈರಾಯ್ಡ್‌ ಹೆಚ್ಚು-ಕಡಿಮೆ ಇಲ್ಲದಂತೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ೩೦ರ ನಂತರ ನೋಡಬೇಕಾಗುತ್ತದೆ. ತೂಕ ಏರಿಳಿತ, ಸುಸ್ತು, ಕೂದಲು ಉದುರುವುದು ಮುಂತಾದ ಲಕ್ಷಣಗಳಿದ್ದರೆ ವೈದ್ಯರ ಸಲಹೆಯ ಮೇರೆಗೆ ಈ ಪರೀಕ್ಷೆಯನ್ನು ಶೀಘ್ರವಾಗಿ ಮಾಡಿಸಬೇಕಾಗಬಹುದು. ಥೈರಾಯ್ಡ್‌ ಸಮಸ್ಯೆಯ ಲಕ್ಷಣಗಳು ಇಲ್ಲದಿದ್ದರೆ, 30ರ ನಂತರ ಪ್ರತಿ ಎರಡು ವರ್ಷಗಳಿಗೆ ನೋಡಿದರೆ ಸಾಕಾಗುತ್ತದೆ.

Cancer test

ಕೊಲೊರೆಕ್ಟಲ್‌ ಕ್ಯಾನ್ಸರ್‌ ಪರೀಕ್ಷೆ

ಇದು ಕರುಳು ಮತ್ತು ಗುದದ್ವಾರದ ನಡುವಿನ ಭಾಗದ ಪರೀಕ್ಷೆ. ಇದನ್ನು ಸಾಮಾನ್ಯವಾಗಿ 50ರ ನಂತರ ಮಾಡಿಸಲು ಸೂಚಿಸಲಾಗುತ್ತದೆ. ಆದರೆ ಕುಟುಂಬದಲ್ಲಿ ಇಂಥ ಪ್ರಕರಣಗಳಿದ್ದರೆ, ಮುಂಚಿತವಾಗಿಯೇ ಮಾಡಿಸುವುದು ಸೂಕ್ತ. ಕೊಲೊನೊಸ್ಕೊಪಿಯಂಥ ಪರೀಕ್ಷೆಗಳಲ್ಲಿ ಪ್ರಾರಂಭಿಕ ಹಂತದಲ್ಲೇ ಸಮಸ್ಯೆಗಳನ್ನು ಪತ್ತೆ ಮಾಡಬಹುದು.

ಇದನ್ನೂ ಓದಿ: Benefits of Bamboo Shoots: ಮೂಳೆಗಳ ನೋವು, ಮಲಬದ್ಧತೆ ನಿವಾರಣೆಗೆ ಎಳೆಯ ಬಿದಿರು ಸೇವನೆ ಮದ್ದು

Continue Reading

ಆರೋಗ್ಯ

Mangoes for Health: ದಿನಕ್ಕೆ ಎಷ್ಟು ಮಾವಿನ ಹಣ್ಣು ತಿಂದರೆ ಆರೋಗ್ಯಕ್ಕೆ ಒಳ್ಳೆಯದು?

ಮಾವಿನ ಹಣ್ಣು (Mangoes for Health) ಕೊಟ್ಟರೆ ಎಷ್ಟೂ ತಿನ್ನುತ್ತೇವೆ ಎನ್ನುವವರಿದ್ದಾರೆ. ಹಾಗಂತ ದಿನಕ್ಕೆ 10 ಮಾವಿನ ಹಣ್ಣು ತಿನ್ನಲಾದೀತೇ? ಹಾಗೆ ತಿಂದರೆ ಆರೋಗ್ಯದ ಗತಿ ಏನು? ಹಾಗಾದರೆ ಒಂದೇ ತಿನ್ನಬೇಕೆ? ಎರಡು ತಿಂದರೆ ಸಾಕೇ? ಮಾವಿನ ಹಣ್ಣು ಇಷ್ಟವೆಂದು ಕಷ್ಟ ಬೀಳುವಷ್ಟು ಸೇವಿಸಬಹುದೇ? ದಿನಕ್ಕೆ ಎಷ್ಟು ಮಾವಿನ ಹಣ್ಣು ತಿಂದರೆ ಸಾಕು ಮತ್ತು ಬೇಕು? ಅದನ್ನು ಹೇಗೆ ತಿಳಿಯುವುದು? ಈ ಲೇಖನ ಓದಿ.

VISTARANEWS.COM


on

Mangoes for Health
Koo

ಮಾವಿನ ಹಣ್ಣಿನ (Mangoes for Health) ಋತು ಪ್ರಾರಂಭವಾಗಿದೆ. ಆ ಹಣ್ಣಿನ ಜಾತಿ, ಬಣ್ಣ, ಆಕೃತಿ, ಗಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಅದರ ರುಚಿ ಮತ್ತು ಪರಿಮಳಕ್ಕೆ ಮನಸೋಲುವ ದೇಶ ನಮ್ಮದು. ಹಾಗಾಗಿ ಮಾವಿನ ಕಾಲವನ್ನು ದೊಡ್ಡ ಹಬ್ಬದಂತೆಯೇ ಸಂಭ್ರಮಿಸುತ್ತೇವೆ. ಮಿಡಿಯಾಗಿದ್ದಾಗ ಉಪ್ಪಿನಕಾಯಿ ಹಾಕುವುದರಿಂದ ಹಿಡಿದು, ಕಾಯಿ, ಹಣ್ಣುಗಳವರೆಗೆ ಸಿಹಿ-ಖಾರದ ಹಲವು ಅಡುಗೆಗಳನ್ನು ಮಾಡುತ್ತೇವೆ. ಇನ್ನು ಹಣ್ಣುಗಳನ್ನು ಹಾಗೆಯೇ ತಿನ್ನುವುದಕ್ಕೆ ದಾಕ್ಷಿಣ್ಯ ಮಾಡಿಕೊಳ್ಳುವವರು ಹುಡುಕಿದರೂ ಸಿಗಲಿಕ್ಕಿಲ್ಲ. ಈ ಹಣ್ಣಿನ ಘಮ-ರುಚಿಯ ಮೇಲೆ ಆಣೆ-ಭಾಷೆಗಳನ್ನು ಹಾಕುವವರೂ ಇರಬಹುದೆಂದರೆ ಇದರ ಜನಪ್ರಿಯತೆಯನ್ನು ಯಾರೂ ಊಹಿಸಬಹುದು. ವಿಷಯವೀಗ ಅದಲ್ಲ, ದಿನಕ್ಕೆ ಎಷ್ಟು ಮಾವಿನ ಹಣ್ಣು ತಿನ್ನಬಹುದು?
ಕೊಟ್ಟರೆ ಎಷ್ಟೂ ತಿನ್ನುತ್ತೇವೆ ಎನ್ನುವವರಿದ್ದಾರೆ. ಹಾಗಂತ ದಿನಕ್ಕೆ 10 ಮಾವಿನ ಹಣ್ಣು ತಿನ್ನಲಾದೀತೇ? ಹಾಗೆ ತಿಂದರೆ ಆರೋಗ್ಯದ ಗತಿ ಏನು? ಹಾಗಾದರೆ ಒಂದೇ ತಿನ್ನಬೇಕೆ? ಎರಡು ತಿಂದರೆ ಸಾಕೇ? ಅದರಲ್ಲೂ ಮಧುಮೇಹವಿದ್ದವರು ಮಾವಿನ ಹಣ್ಣಿನ ಪ್ರಿಯರಾಗಿದ್ದರೆ… ಅವರ ಕಷ್ಟ ಹೇಳಿ ಸುಖವಿಲ್ಲ. ಹಾಗಾದರೆ ಮಧುಮೇಹಿಗಳು ಮಾವು ತಿನ್ನಲೇಬಾರದೇ? ತಿಂದರೆ ಎಷ್ಟು?- ಇಂಥ ಹಲವು ಪ್ರಶ್ನೆಗಳು ಕಾಡಬಹುದು ಮಾವಿನ ಪ್ರಿಯರನ್ನು. ಈ ಪ್ರಶ್ನೆಗಳಿಗೆ ಉತ್ತರಿಸಲು ಈ ಲೇಖನದಲ್ಲಿ ಯತ್ನಿಸಲಾಗಿದೆ.

National Mango Day 2023

ಸತ್ವಗಳೇನಿವೆ?

ಒಂದು ಮಾವಿನ ಹಣ್ಣನ್ನು ಸಣ್ಣದು, ದೊಡ್ಡದು- ಹೀಗೆಲ್ಲ ವರ್ಣಿಸಿದರೆ ಗೊಂದಲ ಹೆಚ್ಚಾಗುತ್ತದೆ. ಹಾಗಾಗಿ ಒಂದು ಕಪ್‌ ಅಥವಾ 165 ಗ್ರಾಂ ಮಾವಿನ ಹಣ್ಣು ಎಷ್ಟು ಕ್ಯಾಲರಿಗಳನ್ನು ನಮಗೆ ನೀಡುತ್ತದೆ ಎಂಬುದನ್ನು ತಿಳಿಯೋಣ. 165 ಗ್ರಾಂ ತಾಜಾ ಮಾವಿನ ಹಣ್ಣಿನಲ್ಲಿ ಅಂದಾಜು 100 ಕ್ಯಾಲರಿ ದೊರೆಯುತ್ತದೆ. ಅದರಲ್ಲಿ 1.4 ಗ್ರಾಂ ಪ್ರೊಟೀನ್‌, 25 ಗ್ರಾಂ ಪಿಷ್ಟ, 2.8ಗ್ರಾಂ ನಾರು ಮತ್ತು 23 ಗ್ರಾಂ ಸಕ್ಕರೆ ಪ್ರಮುಖವಾದವು. ಅದಲ್ಲದೆ, ದೈನಂದಿನ ಅಗತ್ಯದ ಶೇ. 67ರಷ್ಟು ವಿಟಮಿನ್‌ ಸಿ ಇದಿಷ್ಟೇ ಮಾವಿನ ಹಣ್ಣಿನಿಂದ ದೊರೆಯುತ್ತದೆ. ಜೊತೆಗೆ, ಫೋಲೇಟ್‌, ತಾಮ್ರ, ಮೆಗ್ನೀಶಿಯಂ ಹಲವು ವಿಟಮಿನ್‌ಗಳು ಈ ಹಣ್ಣಿನಲ್ಲಿವೆ.

ಎಷ್ಟು ತಿನ್ನಬಹುದು?

ಎರಡು ಕಪ್‌ ಮಾವಿನ ಹಣ್ಣು ಅಥವಾ 330 ಗ್ರಾಂ ಮಾವಿನ ಹಣ್ಣನ್ನು (ಮಧ್ಯಮ ಗಾತ್ರದ ಎರಡು ಹಣ್ಣು ಎಂದಿಟ್ಟುಕೊಳ್ಳಿ) ಒಂದು ದಿನಕ್ಕೆ ಸೇವಿಸಿದರೆ ಸಾಕು ಎಂಬುದು ಆಹಾರ ತಜ್ಞರ ಲೆಕ್ಕಾಚಾರ. ಇಷ್ಟೊಂದು ರುಚಿಯಾದ ಹಣ್ಣನ್ನು ದಿನಕ್ಕೊಂದು ನಾಲ್ಕಾರು ತಿನ್ನುವಂತಿಲ್ಲವೇ ಎಂದು ಮರುಗಿದರೆ, ಊಹುಂ. ಇದರಲ್ಲಿರುವ ಸಕ್ಕರೆಯಂಶವೇ ಈ ಮಿತಿಯನ್ನು ಅನುಸರಿಸಲು ಕಾರಣ. ಜೊತೆಗೆ ನಾರು ಸಹ ಇರುವುದರಿಂದ, ಅತಿಯಾಗಿ ತಿಂದರೆ ಅತಿಸಾರ ಅಥವಾ ಡಯರಿಯ ಕಾಡುವುದರಲ್ಲಿ ಅನುಮಾನವಿಲ್ಲ. ಮಿತಿಮೀರಿ ತಿಂದರೆ ತೂಕ ಹೆಚ್ಚುವುದಂತೂ ನಿಶ್ಚಿತ. ಹಾಗಾಗಿ ಮಾವಿನ ಹಣ್ಣನ್ನು ದಿನವೂ ಸೇವಿಸಬಹುದು, ಆದರೆ ಮಿತವಾಗಿ.

Health Tips For diabetic patients

ಮಧುಮೇಹಿಗಳು…?

ಅವರಿಗೆ ಈ ಹಣ್ಣು ನಿಷಿದ್ಧವಂತೂ ಅಲ್ಲ. ಆದರೆ ಸರಿಯಾದ ಪ್ರಮಾಣದ ಹಣ್ಣನ್ನು ಸರಿಯಾದ ರೀತಿಯಲ್ಲಿ ತಿನ್ನುವುದು ಮುಖ್ಯ. ಯಾವುದೇ ಆಹಾರವನ್ನು ತಿಂದರೂ ಸಕ್ಕರೆಯಂಶ ವ್ಯತ್ಯಾಸವಾಗುವುದು ಖಚಿತ. ಆದರೆ ಗ್ಲೈಸೆಮಿಕ್‌ ಸೂಚಿ ಕಡಿಮೆಯಿರುವ ಆಹಾರಗಳಿಂದ ಈ ಏರಿಳಿತವನ್ನು ಮಿತಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಲ್ಲೂ ಋತುಮಾನದ ಹಣ್ಣುಗಳು ಎಲ್ಲರ ಆರೋಗ್ಯಕ್ಕೂ ಅಗತ್ಯ.
ಊಟ, ತಿಂಡಿಯ ಜೊತೆಗೆ ಅಥವಾ ನಂತರ ಮಾವಿನ ಹಣ್ಣನ್ನು ಮಧುಮೇಹಿಗಳು ಸೇವಿಸದಿದ್ದರೆ ಒಳ್ಳೆಯದು. ಅವೆರಡರ ನಡುವಿನ ತಿಂಡಿಯಂತೆ ಇದನ್ನು ಅಲ್ಪಪ್ರಮಾಣದಲ್ಲಿ ಸೇವಿಸಿ ನೋಡಿ. ಉದಾ, ಮೊದಲಿಗೆ ಅರ್ಧ ಹಣ್ಣು ಸೇವಿಸಿ, ಎರಡು ತಾಸುಗಳ ನಂತರ ರಕ್ತದಲ್ಲಿನ ಸಕ್ಕರೆಯಂಶವನ್ನು ಅಳೆಯಿರಿ. ಇದು ಮಿತಿಯಲ್ಲಿ ಇದೆಯೆಂದಾದರೆ ಅರ್ಧ ಹಣ್ಣನ್ನು ನೀವು ಸೇವಿಸಬಹುದು. ಒಂದೊಮ್ಮೆ ಸಕ್ಕರೆಯಂಶ ಏರಿದೆಯೆಂದರೆ, ಹಣ್ಣಿನ ಪ್ರಮಾಣವನ್ನು ಕಡಿಮೆ ಮಾಡಿ. ಈ ಹಣ್ಣನ್ನು ಜ್ಯೂಸ್‌ ಅಥವಾ ಶೇಕ್‌ ಮಾಡಿ ಸೇವಿಸುವುದಕ್ಕಿಂತ ಹಣ್ಣನ್ನು ಹಾಗೆಯೇ ತಿನ್ನಿ. ಇದರಿಂದ ಹಣ್ಣಿನ ನಾರೂ ದೇಹ ಸೇರುತ್ತದೆ. ಉಳಿದ ಹಣ್ಣು, ತರಕಾರಿಗಳ ಜೊತೆಗೆ ಸಲಾಡ್‌ ಮಾಡಿ ಅದಕ್ಕೆ ಕೊಂಚ ಮಾವು ಸೇರಿಸಿದರೆ ಸಮಸ್ಯೆಯಾಗದು.

ಇದನ್ನೂ ಓದಿ: ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

Continue Reading

ಆಹಾರ/ಅಡುಗೆ

Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

ಹೆಚ್ಚು ತಲೆಬಿಸಿಯಿಲ್ಲದೆ, ಬಹುಬೇಗನೆ ಉಪಾಹಾರವೆಂಬ ಕೆಲಸವನ್ನು ಮುಗಿಸಿಕೊಂಡು ಆಫೀಸ್‌ ಹೊರಡಲು, ಮಕ್ಕಳಿಗೆ ಟಿಫನ್‌ ಕಟ್ಟಿಕೊಡಲು ಬ್ರೆಡ್‌ ಸರಳವಾಗಿ ದಕ್ಕುವ ಆಹಾರಗಳಲ್ಲಿ ಒಂದು. ಬಹುತೇಕರಿಗೆ ಇದು ನಿತ್ಯಾಹಾರವೂ ಹೌದು. ಆದರೆ, ಸಂಸ್ಕರಿಸಿದ ಆಹಾರವಾದ ಬ್ರೆಡ್‌ ನಿಜಕ್ಕೂ ಆರೋಗ್ಯಕರವೇ ಎಂಬ ಪ್ರಶ್ನೆಗೆ ಇಂದು ಎಲ್ಲರಿಗೂ ಉತ್ತರ ಗೊತ್ತೇ ಇದ್ದರೂ, ಬ್ರೆಡ್‌ ತಿನ್ನದೆ ಇರಲು ಸಾಧ್ಯವಿಲ್ಲ ಎಂಬ ಉತ್ತರವೂ ಸಿದ್ಧವಾಗಿರುತ್ತದೆ. ಈ ಬಗ್ಗೆ (Eating Bread) ಇಲ್ಲಿದೆ ಮಾಹಿತಿ.

VISTARANEWS.COM


on

Eating Bread
Koo

ಪಾಶ್ಚಾತ್ಯ ಬೆಳಗಿನ ಉಪಾಹಾರದ ಶೈಲಿ ಇದಾದರೂ, ಭಾರತೀಯ ಮನೆಗಳಲ್ಲೂ ಇಂದು ಬ್ರೆಡ್‌ ಸಾಮಾನ್ಯವಾಗಿದೆ. ಗಡಿಬಿಡಿಯಲ್ಲಿ ಆಫೀಸ್‌ ಹೊರಡುವಾಗ, ಅಡುಗೆ ಮಾಡಿಕೊಳ್ಳಲು ಸಮಯವಿಲ್ಲದಿರುವಾಗ, ಹೊಟ್ಟೆಗೇನೂ ರುಚಿಸದೆ ಇದ್ದಾಗ, ಮಕ್ಕಳಿಗೆ ರುಚಿರುಚಿಯಾದ ಸ್ಯಾಂಡ್‌ವಿಚ್‌ ಮಾಡಿಕೊಡಲು, ಹೀಗೆ ಬ್ರೆಡ್‌ ತಿನ್ನಲು ನಮಗೆ ನಾನಾ ಕಾರಣಗಳು. ಹೆಚ್ಚು ತಲೆಬಿಸಿಯಿಲ್ಲದೆ, ಬಹುಬೇಗನೆ ಉಪಹಾರವೆಂಬ ಕೆಲಸವನ್ನು ಮುಗಿಸಿಕೊಂಡು ಆಫೀಸ್‌ ಹೊರಡಲು, ಮಕ್ಕಳಿಗೆ ಟಿಫನ್‌ ಕಟ್ಟಿಕೊಡಲು ಬ್ರೆಡ್‌ ಸರಳವಾಗಿ ದಕ್ಕುವ ಆಹಾರಗಳಲ್ಲಿ ಒಂದು. ಬಹುತೇಕರಿಗೆ ಇದು ನಿತ್ಯಾಹಾರವೂ ಹೌದು. ಆದರೆ, ಸಂಸ್ಕರಿಸಿದ ಆಹಾರವಾದ ಬ್ರೆಡ್‌ ನಿಜಕ್ಕೂ ಆರೋಗ್ಯಕರವೇ ಎಂಬ ಪ್ರಶ್ನೆಗೆ ಇಂದು ಎಲ್ಲರಿಗೂ ಉತ್ತರ ಗೊತ್ತೇ ಇದ್ದರೂ, ಬ್ರೆಡ್‌ ತಿನ್ನದೆ ಇರಲು ಸಾಧ್ಯವಿಲ್ಲ ಎಂಬ ಉತ್ತರವೂ ಸಿದ್ಧವಾಗಿರುತ್ತದೆ. ಹಾಗಾದರೆ, ನಾವು ನಿತ್ಯವೂ ಬಳಸುವ ಬ್ರೆಡ್‌ನ ಬಗ್ಗೆ, ಅದರಲ್ಲಿ ಬಳಸಲಾದ ವಸ್ತುಗಳ ಬಗ್ಗೆ ನಾವು ಸ್ವಲ್ಪ ಹೆಚ್ಚು ಜಾಗೃತರಾಗಿದ್ದರೆ ನಮ್ಮ ಹೊಟ್ಟೆ ಸೇರಿದ ಬ್ರೆಡ್‌ನ ಗುಣಮಟ್ಟ ನಮಗೆ ತಿಳಿಯುತ್ತದೆ. ಹಾಗಾದರೆ ಬನ್ನಿ, ನೀವು ಬ್ರೆಡ್‌ ಖರೀದಿಸುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು (Eating Bread) ಎಂಬುದನ್ನು ನೋಡೋಣ.

Bread Foods You Should Never Refrigerate

ಬ್ರೆಡ್‌ ಕೊಳ್ಳುವಾಗ ಗಮನಿಸಿ

ಬ್ರೆಡ್‌ ಮಾಡುವ ಸಂದರ್ಭ ಸಕ್ಕರೆ ಹಾಕಿಯೇ ಇರುತ್ತಾರೆ ಎಂಬ ಸತ್ಯ ಈಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ನಿಜ. ಯಾಕೆಂದರೆ ಬ್ರೆಡ್‌ಗಾಗಿ ಬಳಸುವ ಈಸ್ಟ್‌ ಅನ್ನು ಆಕ್ಟಿವೇಟ್‌ ಮಾಡಲು ಸಕ್ಕರೆ ಬೇಕೇ ಬೇಕು. ಹಾಗಾಗಿ ನೀವು ಯಾವಾಗಲೂ ಬ್ರೆಡ್‌ ಖರೀದಿಸುವ ಮೊದಲು ಕೆಲವು ಅಂಶಗಳನ್ನು ನೆನಪಿಟ್ಟುಕೊಳ್ಳಲೇಬೇಕು. ಬ್ರೆಡ್‌ನ ಹಿಂಬದಿಯಲ್ಲಿ ಬರೆದ ಪಟ್ಟಿಯಲ್ಲಿ ಸಕ್ಕರೆ ಎಷ್ಟು ಬಳಸಿದ್ದಾರೆಂದು ಪರೀಕ್ಷಿಸಿ. ಒಂದಲ್ಲ ಒಂದು ವಿಧದಲ್ಲಿ ಕೆಲವೊಮ್ಮೆ ಬೇರೆ ಮೂಲಗಳ ಮೂಲಕವೂ ಸೇರಿಸಲ್ಪಟ್ಟಿರುತ್ತದೆ. ಕೇವಲ ಸಕ್ಕರೆಯಷ್ಟೇ ಅಲ್ಲ, ಎಲ್ಲ ಮೂಲಗಳ ಮೂಲಕ ಸಕ್ಕರೆ ಎಷ್ಟು ಸೇರಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಸಾಮಾನ್ಯವಾಗಿ ಫ್ಯಾಕ್ಟರಿಗಳಲ್ಲಿ ಮಾಡುವ ಬ್ರೆಡ್‌ನಲ್ಲಿ ಹೆಚ್ಚು ಸಕ್ಕರೆ ಇರುತ್ತದೆ. ಅಲ್ಲದೆ, ಕಬ್ಬಿನ ಹಾಲು, ಜೇನುತುಪ್ಪ ಅಥವಾ ಇನ್ನಾವುದೇ ಮೂಲಗಳ ಮೂಲಕವೂ ಸಕ್ಕರೆ ಸೇರಿರಬಹುದು.

ಉಪ್ಪಿನ ಪ್ರಮಾಣ ಎಷ್ಟಿದೆ ನೋಡಿ

ಬ್ರೆಡ್‌ ಮಾಡುವ ಸಂದರ್ಭ ಅದಕ್ಕಾಗಿ ಬಳಸಿದ ಸಕ್ಕರೆಯಂತೆ ಉಪ್ಪಿನ ಪ್ರಮಾಣವೂ ಗಮನದಲ್ಲಿರಲಿ. ಬ್ರೆಡ್‌ ಮಾಡಲು ಬಳಸಿದ ವಸ್ತುಗಳ ಪಟ್ಟಿಯಲ್ಲಿ ಉಪ್ಪು ಎಷ್ಟು ಸೇರಿಸಲಾಗಿದೆ ಎಂದು ಪರೀಕ್ಷಿಸಿಕೊಳ್ಳಿ. ಬಹಳಷ್ಟು ಸಾರಿ ರುಚಿಯನ್ನು ಹೆಚ್ಚಿಸಲು, ಅಗತ್ಯಕ್ಕಿಂತಲೂ ಹೆಚ್ಚು ಉಪ್ಪನ್ನು ಫ್ಯಾಕ್ಟರಿಗಳು ಬಳಸುತ್ತವೆ. ಒಂದು ಅಂದಾಜಿನ ಪ್ರಕಾರ ಸಂಶೋಧನೆಯೊಂದು ಹೇಳಿದಂತೆ ಒಂದು ಬ್ರೆಡ್‌ ಸ್ಲೈಸ್‌ನಲ್ಲಿ 100ರಿಂದ 200 ಎಂಜಿ ಸೋಡಿಯಂಗಿಂತ ಹೆಚ್ಚಿರಬಾರದು. ಹಾಗಾಗಿ ಇದನ್ನು ಪರೀಕ್ಷೆ ಮಾಡಿಕೊಂಡೇ ಖರೀದಿಸಿ.

ಯಾವ ಪದಾರ್ಥ ಬಳಸಿದ್ದಾರೆ ನೋಡಿ

ಉಪ್ಪು ಹಾಗೂ ಸಕ್ಕರೆಯಷ್ಟೇ ಅಲ್ಲ, ನೀವು ಖರೀದಿಸಿದ ಬ್ರೆಡ್‌ನಲ್ಲಿ ಯಾವೆಲ್ಲ ಪದಾರ್ಥಗಳನ್ನು ಬಳಸಲಾಗಿದೆ ಎಂದು ನೋಡಿ. ಬಿಳಿಯಾದ ಮೈದಾದ ಬ್ರೆಡ್‌ನ ಬದಲು ಗೋಧಿಯ ಬ್ರೆಡ್‌ ಬಳಸಿ. ಬಹಳಷ್ಟು ಸಾರಿ ಗೋಧಿಯ ಬ್ರೆಡ್‌ನಲ್ಲೂ ಕಡಿಮೆ ಪ್ರಮಾಣದಲ್ಲಿ ಗೋಧಿ ಬಳಕೆಯಾಗಿರುತ್ತದೆ ಎಂಬ ಸತ್ಯವೂ ನಿಮಗೆ ಗೊತ್ತಿರಲಿ. ಹೀಗಾ ಗಿ ಶೇ.100ರಷ್ಟು ಗೋಧಿ ಅಥವಾ ಹೋಲ್‌ ವೀಟ್‌ ಬ್ರೆಡ್‌ ಎಂದು ಬರೆದಿರುವ ಬ್ರೆಡ್‌ ಖರೀದಿಸಿ. ಅಥವಾ ಮಲ್ಟಿಗ್ರೈನ್‌ ಬ್ರೆಡ್‌ ಖರೀದಿಸಿ.

Image Of Bread Health Benefits

ತಯಾರಿ ದಿನ ಗಮನಿಸಿ

ಬ್ರೆಡ್‌ ಖರೀದಿಸುವಾಗ ಎಲ್ಲಕ್ಕಿಂತ ಮೊದಲು ಪರೀಕ್ಷಿಸಬೇಕಾದ್ದು ಅದನ್ನು ತಯಾರಿಸಿದ ದಿನಾಂಕ ಹಾಗೂ ಎಷ್ಟು ದಿನ ಬಳಸಬಹುದೆಂಬ ದಿನಾಂಕ. ದಿನಾಂಕ ಮುಗಿದುಹೋದ ಬ್ರೆಡ್‌ನನ್ನು ಬಳಸಲೇಬೇಡಿ. ಹಾಳಾಗಿರದಂತೆ ಕಂಡರೂ ಬಳಸಬೇಡಿ. ಆದಷ್ಟೂ ತಾಜಾ ಬ್ರೆಡ್ಡನ್ನೇ ಖರೀದಿಸಿ. ಕೆಲವೊಮ್ಮೆ ಅಂಗಡಿಗಳಲ್ಲಿ ಇಟ್ಟಿರುವ ಬ್ರೆಡ್‌ ಅನ್ನು ಇಲಿಯೋ, ಕೀಟವೋ ಕಡಿದು ಸಣ್ಣ ತೂತುಗಳೂ ಆಗಿರುತ್ತವೆ. ಗಡಿಬಿಡಿಯಲ್ಲಿ ಖರೀದಿಸುವಾಗ ಇವು ಕಾಣುವುದಿಲ್ಲ. ಹೀಗಾಗಿ, ಬ್ರೆಡ್‌ನ ಪ್ಯಾಕ್‌ಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಖರೀದಿಸುವಾಗಲೇ ಖಚಿತಪಡಿಸಿಕೊಳ್ಳಿ.

ಕೃತಕ ಪ್ರಿಸರ್ವೇಟಿವ್‌ ಗಮನಿಸಿ

ಬ್ರೆಡ್‌ನಲ್ಲಿ ಬಳಸಲಾದ ಕೃತಕ ಪ್ರಿಸರ್ವೇಟಿವ್‌ಗಳನ್ನು ಗಮನಿಸಿ. ಆದಷ್ಟೂ ತಾಜಾ ಬ್ರೆಡ್ಡನ್ನೇ ಖರೀದಿಸಿ. ಹೆಚ್ಚು ದಿನ ಉಳಿಯಬಲ್ಲ ಬ್ರೆಡ್‌ಗಳಲ್ಲಿ ಖಂಡಿತವಾಗಿಯೂ ಪ್ರಿಸರ್ವೇಟಿವ್‌ಗಳಿರುತ್ತವೆ.

Dietary Fiber Bread Health Benefits Whole grain bread is rich in dietary fiber, which aids in digestion, helps maintain bowel regularity, and can contribute to a feeling of fullness, potentially aiding in weight management.

ನಾರಿನಂಶ ಮುಖ್ಯ

ಬ್ರೆಡ್‌ನಲ್ಲಿ ಎಷ್ಟು ನಾರಿನಂಶ ಇದೆ ಎಂದು ಪರೀಕ್ಷಿಸಿಕೊಳ್ಳಿ. ಸಾಮಾನ್ಯವಾಗಿ ಬ್ರೆಡ್‌ ಮಾಡಿದ ಮೇಲೆ ನಾರಿನಂಶವನ್ನು ಕಳೆದುಕೊಳ್ಳುತ್ತದೆ. ನಾರಿನಂಶ ಹೆಚ್ಚಿರುವ ಬ್ರೆಡ್‌ ಯಾವಾಗಲೂ ಉತ್ತಮ ಆಯ್ಕೆ.

ಇದನ್ನೂ ಓದಿ: Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

Continue Reading

ಆರೋಗ್ಯ

ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

ನಮಗೆ ನಿಜಕ್ಕೂ ಒಆರ್‌ಎಸ್‌ (ORS) ಅಗತ್ಯ ಬೀಳುವುದು ಯಾವಾಗ? ಮಧುಮೇಹ ಇದ್ದವರೂ ಇದನ್ನು ಕುಡಿಯಬಹುದೇ? ಮಕ್ಕಳಿಗೂ ಸೂಕ್ತವೇ? ಒಆರ್‌ಎಸ್‌ ಪುಡಿ ಒಳ್ಳೆಯದೋ ಅಥವಾ ಜ್ಯೂಸ್‌ ರೀತಿಯಲ್ಲಿರುವ ಒಆರ್‌ಎಸ್‌ ಒಳ್ಳೆಯದೋ? ಈ ಕುರಿತು ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

drinking ors
Koo

ಬಿಸಿಲಿನ ಝಳ (ORS) ನೆತ್ತಿ ಸುಡುವಂತಿದೆ. ತಾಪಮಾನ 40 ಡಿಗ್ರಿ ಸೆ. ಆಚೀಚೆ ಬರುತ್ತಿದ್ದಂತೆ ನಿರ್ಜಲೀಕರಣಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳಲು ಹಲವು ಪ್ರಯತ್ನಗಳಲ್ಲಿ ಜನ ನಿರತರಾಗಿರುವುದು ಕಂಡುಬರುತ್ತದೆ. ಅವುಗಳಲ್ಲಿ ಪ್ರಮುಖ ಪೇಯವೆಂದರೆ ಒಆರ್‌ಎಸ್‌ ಅಥವಾ ಓರಲ್‌ ರಿಹೈಡ್ರೇಶನ್‌ ಸೊಲ್ಯೂಶನ್‌. ದೇಹಕ್ಕೆ ಅಗತ್ಯವಾದ ನೀರು, ಸಕ್ಕರೆ ಮತ್ತು ಲವಣಗಳನ್ನು ಹೊಂದಿರುವ ಈ ದ್ರಾವಣದ ಸೇವನೆಯಿಂದ ನಿರ್ಜಲೀಕರಣಕ್ಕೆ ತುತ್ತಾಗಿ ಪ್ರಾಣಾಪಾಯ ಆಗುವುದರಿಂದ ಪಾರಾಗಬಹುದು. ಆದರೆ ಇದನ್ನು ಯಾರು, ಎಷ್ಟು ಕುಡಿಯಬಹುದು? ಸೆಕೆಗೆ ತತ್ತರಿಸುತ್ತಿರುವ ಈ ದಿನಗಳಲ್ಲಿ ಒಆರ್‌ಎಸ್‌ನಂಥವು ಎಷ್ಟು ಬೇಕಿದ್ದರೂ ಹೊಟ್ಟೆ ಸೇರುತ್ತವೆ. ಆದರೆ ಇದನ್ನು ಎಷ್ಟು ಕುಡಿದರೆ ಸಾಕು ಮತ್ತು ಬೇಕು? ನಿರ್ಜಲೀಕರಣದಿಂದ ಕಳೆದುಕೊಂಡ ಖನಿಜಾಂಶಗಳನ್ನು ಮತ್ತು ನೀರನ್ನು ದೇಹಕ್ಕೆ ಮರಳಿ ಒದಗಿಸಿಕೊಡುವ ವ್ಯವಸ್ಥಿತವಾದ ಮಾರ್ಗವಿದು. ಬೇಸಿಗೆಯ ತೀವ್ರತೆ ವಿಪರೀತವಾದ ಮೇಲೆ ರಾಜಧಾನಿಯೊಂದರಲ್ಲೇ ಒಆರೆಸ್‌ ಮಾರಾಟ ಶೇ. ೬೦ರಷ್ಟು ಹೆಚ್ಚಿದೆ. ಅದರಲ್ಲೂ ವಾಂತಿ, ಡಯರಿಯಾ, ಸುಸ್ತು ಮತ್ತು ನಿರ್ಜಲೀಕರಣದ ಲಕ್ಷಣಗಳು ಕಾಣುತ್ತಿದ್ದಂತೆ ಒಂದು ಸ್ಯಾಶೆ ಒಆರೆಸ್‌ ನೀರಿಗೆ ಬೆರೆಸಿ ಕುಡಿದರೆ, ಜೀವಕ್ಕೆ ತಂಪಾಗುತ್ತದೆ ಎಂಬುದು ಬಹುತೇಕ ಮಂದಿಗೆ ಅನುಭವಕ್ಕೆ ಬಂದಿದೆ. ಆದರೆ ನಮಗೆ ನಿಜಕ್ಕೂ ಓಆರೆಸ್‌ ಅಗತ್ಯ ಬೀಳುವುದು ಯಾವಾಗ? ಮಧುಮೇಹ ಇದ್ದವರೂ ಇದನ್ನು ಕುಡಿಯಬಹುದೇ? ಮಕ್ಕಳಿಗೂ ಸೂಕ್ತವೇ? ಒಆರೆಸ್‌ ಪುಡಿ ಒಳ್ಳೆಯದೋ ಅಥವಾ ಜ್ಯೂಸ್‌ ರೀತಿಯಲ್ಲಿರುವ ಒಆರೆಸ್ಸೆಲ್‌ ಒಳ್ಳೆಯದೋ?

ors drink

ಏನಿದು ಒಆರ್‌ಎಸ್‌

ರಾಬರ್ಟ್‌ ಕ್ರೇನ್‌ ಎಂಬಾತ ಇದರ ಮಹತ್ವವನ್ನು ತಿಳಿಸಿಕೊಟ್ಟವ. 1960ರ ಸುಮಾರಿಗೆ ವಾಂತಿ, ಅತಿಸಾರದಿಂದ ಆಗುತ್ತಿದ್ದ ಪ್ರಾಣಾಪಾಯಗಳನ್ನು ತಡೆಯುವುದಕ್ಕೆ ಈ ದ್ರಾವಣದ ಸೇವನೆಯನ್ನು ಜಾರಿಗೆ ತರಲಾಗಿತ್ತು. ವಾಂತಿ-ಭೇದಿಯಿಂದ ಆಗುತ್ತಿದ್ದ ನಿರ್ಜಲೀಕರಣ ತಪ್ಪಿಸಲು ರಕ್ತನಾಳಕ್ಕೆ ಗ್ಲೂಕೋಸ್‌ ಕೊಡುವ ಪದ್ಧತಿ ಆಗ ಚಾಲ್ತಿಯಲ್ಲಿತ್ತು. ಆದರೆ ಎಲ್ಲ ಕಡೆಯೂ ಚಿಕಿತ್ಸೆಯನ್ನು ನೀಡಲಾಗುತ್ತಿರಲಿಲ್ಲ. ಆಗ ಒಆರೆಸ್‌ ಎಂಬ ಜೀವಜಲದ ಸೇವನೆ ವರದಾನವಾಗಿ ಪರಿಣಮಿಸಿತ್ತು. ಇದು ಗ್ಲೂಕೋಸ್‌, ಸೋಡಿಯಂ ಕ್ಲೋರೈಡ್‌, ಪೊಟಾಶಿಯಂ ಕ್ಲೋರೈಡ್‌ ಮತ್ತು ಸೋಡಿಯಂ ಸಿಟ್ರೇಟ್‌ಗಳ ಮಿಶ್ರಣವಾಗಿದೆ. ಜೊತೆಗೆ ಜಿಂಕ್‌ ಸಹ ಸೇರಿರುವುದರಿಂದ ವಾಂತಿ- ಅತಿಸಾರದ ಲಕ್ಷಣಗಳ ಉಪಶಮನಕ್ಕೆ ನೆರವಾಗುತ್ತದೆ.

ಯಾವಾಗ ಕುಡಿಯಬೇಕು?

ನಿರ್ಜಲೀಕರಣದ ಪ್ರಾರಂಭಿಕ ಲಕ್ಷಣಗಳು ಗೋಚರವಾಗುತ್ತಿದ್ದಂತೆ ಒಆರೆಸ್‌ ಸೇವನೆಯನ್ನು ಪ್ರಾರಂಭಿಸುವುದು ಸೂಕ್ತ. ಅಂದರೆ ತೀವ್ರ ಬಾಯಾರಿಕೆ. ತುಟಿಗಳೆಲ್ಲ ಒಣಗಿದಂತಾಗುವುದು, ಮೂತ್ರ ಕಡಿಮೆಯಾಗುವುದು, ಮೂತ್ರದ ಬಣ್ಣ ಗಾಢವಾಗುವುದು, ಸುಸ್ತು, ಆಯಾಸ, ತಲೆ ಸುತ್ತುವುದು, ತಲೆಯೊಳಗೆ ನೋವು… ಇಂಥ ಯಾವುದೇ ಅನುಭವಕ್ಕೆ ಬಂದರೂ ಒಆರೆಸ್‌ ಸೇವನೆಯನ್ನು ಆರಂಭಿಸಬಹುದು. ಬಿಸಿಲಿನ ತೀವ್ರತೆ ಸಿಕ್ಕಾಪಟ್ಟೆ ಇರುವ ದಿನಗಳಲ್ಲಿ, ಮನೆಯೊಳಗಿದ್ದರೂ ಸುಸ್ತು, ಆಯಾಸ, ಸಂಕಟ ಕಾಡುತ್ತಿರುವ ಹೊತ್ತಿನಲ್ಲಿ ಒಂದು ಲೋಟ ಒಆರೆಸ್‌ ನೀರು ಕುಡಿಯುವುದು ಜೀವವನ್ನು ತಂಪಾಗಿಸುತ್ತದೆ.

ಎಷ್ಟು ಕುಡಿಯಬೇಕು?

ಇದು ಆ ವ್ಯಕ್ತಿಯ ದೇಹಸ್ಥಿತಿಯನ್ನು ಅವಲಂಬಿಸಿದೆ. ನಿರ್ಜಲೀಕರಣದ ಲಕ್ಷಣಗಳು ಸ್ವಲ್ಪ ಅಥವಾ ಮಧ್ಯಮ ಪ್ರಮಾಣದಲ್ಲಿದ್ದರೆ, ಸುಮಾರು 20-25 ಎಂ.ಎಲ್‌ನಷ್ಟು ಒಆರೆಸ್‌ ದ್ರಾವಣವನ್ನು ಒಮ್ಮೆ ಗುಟುಕರಿಸುವುದು. ಪ್ರತಿ 10-15 ನಿಮಿಷಗಳಿಗೆ ಇದನ್ನೇ ನಿಯಮಿತವಾಗಿ ಮುಂದುವರಿಸುವುದು. ದಾಹ ಕಡಿಮೆಯಾಗಿ, ಬಾಯಿ ಒಣಗುವುದು ನಿಂತು, ಮೂತ್ರ ಹೆಚ್ಚಾಗಿ, ಮೂತ್ರದ ಬಣ್ನ ತಿಳಿಯಾಗಿ, ಸುಸ್ತು ಕಡಿಮೆಯಾಗುವವರೆಗೂ ಇದನ್ನೇ ಮುಂದುವರಿಸಬೇಕು. ಅಗತ್ಯವಿದ್ದರೆ ಇದನ್ನು ದಿನವಿಡೀ ಮಾಡಬಹುದು. ಆದರೆ ನಿರ್ಜಲೀಕರಣ ತೀವ್ರವಾಗಿದ್ದರೆ ಒಆರೆಸ್‌ ಪ್ರಮಾಣ ಹೆಚ್ಚು ಬೇಕಾಗುತ್ತದೆ. ಇದಕ್ಕೆ ವೈದ್ಯರಲ್ಲಿ ಸಲಹೆ ಕೇಳುವುದು ಒಳಿತು.

ಯಾರೆಲ್ಲ ಕುಡಿಯಬಹುದು?

ಬೇಸಿಗೆಯ ಹೊಡೆತ ತೀವ್ರವಾಗಿರುವ ಈ ದಿನಗಳಲ್ಲಿ ಬಹುತೇಕ ಎಲ್ಲರೂ ಇದನ್ನು ಸೇವಿಸಬಹುದು. ಆದರೆ ಹೃದ್ರೋಗಿಗಳು, ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಅಗತ್ಯವಿದ್ದಾಗ ಮಧುಮೇಹಿಗಳು ಸಹ ಇದನ್ನು ಸೇವಿಸಬಹುದು. ಆದರೆ ನಿಯಮಿತವಾಗಿ ಸೇವಿಸುವ ಅಗತ್ಯವಿದ್ದರೆ ಸಕ್ಕರೆಯಂಶದ ಮೇಲೆ ಕಣ್ಣಿಡಬೇಕಾಗುತ್ತದೆ. ಹಾಗಾಗಿ ಅವರೂ ವೈದ್ಯರಲ್ಲಿ ಸಮಾಲೋಚನೆ ಮಾಡುವುದು ಕ್ಷೇಮ. ಇದರಿಂದ ಯಾವಾಗ, ಎಷ್ಟು ಕುಡಿಯಬಹುದು ಎಂಬುದು ಸ್ಪಷ್ಟವಾಗುತ್ತದೆ.

Boy Drinking Water from Glass

ಮಕ್ಕಳಿಗೆ ನೀಡಬಹುದೇ?

ಖಂಡಿತ. ಆರು ತಿಂಗಳ ನಂತರದ ಶಿಶುಗಳಿಗೂ ಒಆರೆಸ್‌ನಿಂದ ಅನುಕೂಲವಾಗುತ್ತದೆ. ಬಿಸಿಲ ದಿನಗಳಲ್ಲಿ, 6-24 ತಿಂಗಳ ಮಕ್ಕಳಿಗೆ, ದಿನಕ್ಕೆ 20 ಚಮಚ ಒಆರೆಸ್‌ ನೀಡಬಹುದು. 2-5 ವರ್ಷದ ಮಕ್ಕಳಿಗೆ 40 ಚಮಚ ಒಆರೆಸ್‌ ನೀಡಬಹುದು. 5 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಅವು ಕುಡಿದು ತಡೆಯುವಷ್ಟು ನೀಡಬಹುದು. ವಯಸ್ಕರಿಗಿಂತ ಮಕ್ಕಳೇ ಹೆಚ್ಚು ನಿರ್ಜಲೀಕರಣಕ್ಕೆ ತುತ್ತಾಗುವುದರಿಂದ ಒಆರೆಸ್‌ ದ್ರಾವಣ ಎಳೆಯರ ಪಾಲಿನ ಜೀವಜಲ.

ಯಾವುದು ಒಳ್ಳೆಯದು?

ವಾಂತಿ, ಅತಿಸಾರದಂಥ ತೊಂದರೆ ಇರುವಾಗ ಒಆರ್‌ಎಸ್‌ ಪುಡಿಯೇ ಸೂಕ್ತವಾದದ್ದು. ಅದರ ಮೇಲೆ ನಮೂದಿಸಿರುವ ಪ್ರಮಾಣವನ್ನು ತಪ್ಪದೆ ಪಾಲಿಸಬೇಕು. ಒಆರೆಸೆಲ್‌ನಲ್ಲಿ ಬಣ್ಣ ಮತ್ತು ಸುವಾಸನೆಯನ್ನು ಸೇರಿಸಿರುವ ಸಾಧ್ಯತೆ ಹೆಚ್ಚಿರುವುದರಿಂದ, ಚಿಕಿತ್ಸೆಗೆ ಪುಡಿಯೇ ಸೂಕ್ತ. ಹಾಗಲ್ಲದೆ ಬೇಸಿಗೆಯ ಹೊಡೆತ ತಡೆಯುವಾಗ, ಸಾಮಾನ್ಯ ಸುಸ್ತು, ಆಯಾಸಗಳ ಪರಿಹಾರಕ್ಕಾದರೆ ಯಾವುದನ್ನಾದರೂ ಬಳಸಬಹುದು.

ಇದನ್ನೂ ಓದಿ: Baking Soda: ಅಡುಗೆ ಸೋಡಾ ನಿಜಕ್ಕೂ ಆರೋಗ್ಯಕ್ಕೆ ಕೆಟ್ಟದ್ದಾ?

Continue Reading
Advertisement
Lok Sabha Election 2024 Two die of heart attack in Tumakuru and Kodagu
Lok Sabha Election 202422 mins ago

Lok Sabha Election 2024: ಹೃದಯಾಘಾತಕ್ಕೆ 3 ಬಲಿ; ಮೈಸೂರು, ತುಮಕೂರಿನಲ್ಲಿ ಮತ ಹಾಕಿದ್ದ, ಕೊಡಗಲ್ಲಿ ವೋಟ್‌ ಹಾಕಲು ನಿಂತಿದ್ದವ ಸಾವು!

Lok Sabha Election 2024 Anant Nag outrage against non-voters
ಸ್ಯಾಂಡಲ್ ವುಡ್29 mins ago

Lok Sabha Election 2024: ಮತ ಹಾಕದವರನ್ನು ಮತ ಪಟ್ಟಿಯಿಂದ ತೆಗೆದುಹಾಕಬೇಕು: ಅನಂತ್ ನಾಗ್ ಸಲಹೆಗೆ ಏನಂತೀರಿ?

Healthcare Tips For Women
ಆರೋಗ್ಯ32 mins ago

Healthcare Tips For Women: 30 ವರ್ಷದ ಬಳಿಕ ಮಹಿಳೆಯರು ಮಾಡಿಸಿಕೊಳ್ಳಲೇಬೇಕಾದ ಆರೋಗ್ಯ ಪರೀಕ್ಷೆಗಳಿವು

Lok Sabha Election 2024
ಬೆಂಗಳೂರು37 mins ago

Lok Sabha Election 2024: ಮೋದಿ ಮತ್ತೊಮ್ಮೆ ಎಂಬ ನುಡಿ ಸತ್ಯವಾಗಲಿದೆ: ಎಂಎಲ್‌ಸಿ ಟಿ.ಎ.ಶರವಣ

Lok sabha election 2024
Lok Sabha Election 202449 mins ago

Lok Sabha Election 2024 : ವೋಟ್‌ ಮಾಡಲು ಒಂದೂವರೆ ಲಕ್ಷ ರೂ. ಖರ್ಚು; ಲಂಡನ್‌ನಿಂದ ಮಂಡ್ಯಕ್ಕೆ ಬಂದ ಮಹಿಳೆ

IPL 2024
ಪ್ರಮುಖ ಸುದ್ದಿ53 mins ago

IPL 2024 : ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿದ ಅಫಘಾನಿಸ್ತಾನ ತಂಡದ ಆಟಗಾರ

Lok Sabha Election 2024 union minister pralhad joshi latest statement at hubballi
ಕರ್ನಾಟಕ54 mins ago

Lok Sabha Election 2024: ಕಾಂಗ್ರೆಸಿಗರಿಗೆ ಚೊಂಬು ಹಿಡಿದು ಅಭ್ಯಾಸವಾಗಿದೆ: ಜೋಶಿ ಗೇಲಿ

X Server Down
ದೇಶ54 mins ago

X Server Down: ದೇಶಾದ್ಯಂತ ಎಕ್ಸ್‌ ಜಾಲತಾಣದ ಸರ್ವರ್‌ ಡೌನ್;‌ ನಿಮ್ಮ ಖಾತೆ ಚೆಕ್‌ ಮಾಡಿಕೊಳ್ಳಿ

Lok Sabha Election 2024 Sri Vishwapriya Theertha Swamiji of Adamaru Mutt casts his vote for second time
Lok Sabha Election 202455 mins ago

Lok Sabha Election 2024: 2ನೇ ಬಾರಿಗೆ ಬಂದು ಮತದಾನ ಮಾಡಿದ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು!

Rekha kisses Richa Chadha baby bump at Heeramandi event
ಬಾಲಿವುಡ್1 hour ago

Richa Chadda:  ರಿಚಾ ಚಡ್ಡಾ ಬೇಬಿ ಬಂಪ್‌ಗೆ ಮುತ್ತಿಟ್ಟ ನಟಿ ರೇಖಾ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ6 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20246 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20247 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ13 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌